ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.46.0-wmf.26
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪುಟ:AAHVANA.pdf/೧೯
104
19985
316746
260954
2026-05-04T09:03:45Z
Anzx-ooo
3060
/* Validated */
316746
proofread-page
text/x-wiki
<noinclude><pagequality level="4" user="Anzx-ooo" />{{rh|center= '''ಆಹ್ವಾನ'''}}</noinclude>ಸಂವೇದನಾ ಜೀವಿಗಳಿಗಂತೂ ಭ್ರಮೆನಿರಸನವೇ ಆಗಿದೆ ಎನ್ನಬೇಕು. ಇಂತಹ ಅನುಭವದಿಂದ ಮನಸ್ಸು ಕಹಿಯಾಗುತ್ತದೆ; ಭಾವನೆಗಳು ಒರಟಾಗುತ್ತವೆ. ಶಂಕೆ ಸಂದೇಹಗಳು ಅವರೆದುರು ದಟ್ಟೈಸಿದ ಕಾರ್ಮೊಡಗಳಾಗುತ್ತವೆ. ಕಪ್ಪು ಇಬ್ಬನಿಯ ಪರದೆಯಾಚೆ ಇನ್ನೊಂದು ಜಗತ್ತನ್ನು ಕಾಣಲು ಅವರು ಅಸಮರ್ಥರಾಗುತ್ತಾರೆ. ಅಂಥದೊಂದು ಜಗತ್ತಿದೆ ಎಂದು ನಂಬಲು ಅವರು ನಿರಾಕರಿಸುತ್ತಾರೆ.
<p>{{gap}} ಈ ಬಗೆಯ ಮನೋವೃತ್ತಿ ಬಲಗೊಂಡು ಸರ್ವವ್ಯಾಪಿಯಾದರೆ ಮುಂದೆ ಏನಾಗಬಹುದು? ಇತಿಹಾಸ ಕಲಿಸುವ ಪಾಠವನ್ನು ಗಮನಿಸದೆ, ಛಿದ್ರ ಪ್ರವೃತ್ತಿಗಳ ವಿಕಟ ನರ್ತನವನ್ನು ತಡೆಯಲೆತ್ನಿಸದೆ, "ನಾನು ಮಾಡು ವಂಥದೇನೂ ಇಲ್ಲ" ಎಂದು ಪ್ರತಿಯೊಬ್ಬನೂ ನಿಷ್ಕ್ರಿಯನಾದರೆ ಈ ದೇಶದಲ್ಲಿ ಏನು ಸಂಭವಿಸಬಹುದು?
<p> {{gap}} ಆ ಚಿತ್ರ ಕಲ್ಪನೆಗೆ ನಿಲುಕದ್ದಲ್ಲ.<br>
{{gap}}{{gap}} __ಜಾತಿ ಮತಗಳ ತಿಕ್ಕಾಟ ಮುಂದುವರಿದರೆ ರಕ್ತದ ಕಾಲುವೆಗಳು ಹರಿಯುವುವು.<br>
{{gap}}{{gap}} __ಯುವ ಜನಾಂಗದಲ್ಲಿ ಕಂಡುಬರುವ ಅಶಾಂತಿ, ಅಶಿಸ್ತು ಪ್ರಕ್ಷುಬ್ಧ ಪರಿಸ್ಥಿತಿಯನ್ನು ಉಂಟುಮಾಡುವುವು.<br>
{{gap}}{{gap}} __ಭಾಷೆಯ ಮೇಲಣ ಅಂಧ ಪ್ರೇಮದಿಂದ ರಾಜ್ಯರಾಜ್ಯಗಳ ನಡುವೆ ಘರ್ಷಣೆಗಳಾಗುವುವು.<br />
{{gap}}{{gap}} __ನೀರಿನ ವ್ಯಾಜ್ಯ ಜಲಾಶಯಗಳ ನಾಶದಲ್ಲಿ ಪರ್ಯವಸಾನವಾಗುವುದು.<br>
{{gap}}{{gap}} __ 'ದಕ್ಷಿಣಸ್ಥಾನ' ಬೇಕೆನ್ನುವ ಪ್ರತ್ಯೇಕತೆಯ ಆಗ್ರಹಕ್ಕೆ ಮೇಲು ಕೈಯಾದರೆ, ರಾಷ್ಟ್ರದಲ್ಲಿ ಔತ್ತರೇಯರು ಮತ್ತು ದಾಕ್ಷಿಣಾತ್ಯರ ನಡುವೆ ಯಾದವೀ ಕಲಹವೇರ್ಪಡುವುದು.<br>
{{gap}}{{gap}} __ಈ ಗೊಂದಲಮಯ ಸನ್ನಿವೇಶದಲ್ಲಿ ವಿದೇಶೀಯ ಆಕ್ರಮಣಕಾರರ ಆಗಮನವಾಗುವುದು; ಭಾರತ ಮತ್ತೊಮ್ಮೆ ದಾಸ್ಯಕೂಪಕ್ಕೆ ತಳ್ಳಲ್ಪಡುವುದು.<br><noinclude>
{{rh|center= {{bar|2}}—}}
{{rh|center=0೭}}</noinclude>
l3vh5tj4vr9armzhpukwp9v2dsy5pq6
316748
316746
2026-05-04T09:04:47Z
Anzx-ooo
3060
316748
proofread-page
text/x-wiki
<noinclude><pagequality level="4" user="Anzx-ooo" />{{rh|center= '''ಆಹ್ವಾನ'''}}</noinclude>ಸಂವೇದನಾ ಜೀವಿಗಳಿಗಂತೂ ಭ್ರಮೆನಿರಸನವೇ ಆಗಿದೆ ಎನ್ನಬೇಕು. ಇಂತಹ ಅನುಭವದಿಂದ ಮನಸ್ಸು ಕಹಿಯಾಗುತ್ತದೆ; ಭಾವನೆಗಳು ಒರಟಾಗುತ್ತವೆ. ಶಂಕೆ ಸಂದೇಹಗಳು ಅವರೆದುರು ದಟ್ಟೈಸಿದ ಕಾರ್ಮೊಡಗಳಾಗುತ್ತವೆ. ಕಪ್ಪು ಇಬ್ಬನಿಯ ಪರದೆಯಾಚೆ ಇನ್ನೊಂದು ಜಗತ್ತನ್ನು ಕಾಣಲು ಅವರು ಅಸಮರ್ಥರಾಗುತ್ತಾರೆ. ಅಂಥದೊಂದು ಜಗತ್ತಿದೆ ಎಂದು ನಂಬಲು ಅವರು ನಿರಾಕರಿಸುತ್ತಾರೆ.
<p>{{gap}}ಈ ಬಗೆಯ ಮನೋವೃತ್ತಿ ಬಲಗೊಂಡು ಸರ್ವವ್ಯಾಪಿಯಾದರೆ ಮುಂದೆ ಏನಾಗಬಹುದು? ಇತಿಹಾಸ ಕಲಿಸುವ ಪಾಠವನ್ನು ಗಮನಿಸದೆ, ಛಿದ್ರ ಪ್ರವೃತ್ತಿಗಳ ವಿಕಟ ನರ್ತನವನ್ನು ತಡೆಯಲೆತ್ನಿಸದೆ, "ನಾನು ಮಾಡು ವಂಥದೇನೂ ಇಲ್ಲ" ಎಂದು ಪ್ರತಿಯೊಬ್ಬನೂ ನಿಷ್ಕ್ರಿಯನಾದರೆ ಈ ದೇಶದಲ್ಲಿ ಏನು ಸಂಭವಿಸಬಹುದು?
<p>{{gap}}ಆ ಚಿತ್ರ ಕಲ್ಪನೆಗೆ ನಿಲುಕದ್ದಲ್ಲ.<br>
{{gap}}__ಜಾತಿ ಮತಗಳ ತಿಕ್ಕಾಟ ಮುಂದುವರಿದರೆ ರಕ್ತದ ಕಾಲುವೆಗಳು ಹರಿಯುವುವು.<br>
{{gap}}__ಯುವ ಜನಾಂಗದಲ್ಲಿ ಕಂಡುಬರುವ ಅಶಾಂತಿ, ಅಶಿಸ್ತು ಪ್ರಕ್ಷುಬ್ಧ ಪರಿಸ್ಥಿತಿಯನ್ನು ಉಂಟುಮಾಡುವುವು.<br>
{{gap}}__ಭಾಷೆಯ ಮೇಲಣ ಅಂಧ ಪ್ರೇಮದಿಂದ ರಾಜ್ಯರಾಜ್ಯಗಳ ನಡುವೆ ಘರ್ಷಣೆಗಳಾಗುವುವು.<br />
{{gap}}__ನೀರಿನ ವ್ಯಾಜ್ಯ ಜಲಾಶಯಗಳ ನಾಶದಲ್ಲಿ ಪರ್ಯವಸಾನವಾಗುವುದು.<br>
{{gap}}__ 'ದಕ್ಷಿಣಸ್ಥಾನ' ಬೇಕೆನ್ನುವ ಪ್ರತ್ಯೇಕತೆಯ ಆಗ್ರಹಕ್ಕೆ ಮೇಲು ಕೈಯಾದರೆ, ರಾಷ್ಟ್ರದಲ್ಲಿ ಔತ್ತರೇಯರು ಮತ್ತು ದಾಕ್ಷಿಣಾತ್ಯರ ನಡುವೆ ಯಾದವೀ ಕಲಹವೇರ್ಪಡುವುದು.<br>
{{gap}}__ಈ ಗೊಂದಲಮಯ ಸನ್ನಿವೇಶದಲ್ಲಿ ವಿದೇಶೀಯ ಆಕ್ರಮಣಕಾರರ ಆಗಮನವಾಗುವುದು; ಭಾರತ ಮತ್ತೊಮ್ಮೆ ದಾಸ್ಯಕೂಪಕ್ಕೆ ತಳ್ಳಲ್ಪಡುವುದು.<br><noinclude>
{{rh|center= {{bar|2}}—}}
{{rh|center=0೭}}</noinclude>
khckc5ztpe2i9ibim6pisby7vvr4739
316751
316748
2026-05-04T09:06:24Z
Anzx-ooo
3060
316751
proofread-page
text/x-wiki
<noinclude><pagequality level="4" user="Anzx-ooo" />{{c|'''ಆಹ್ವಾನ'''}}</noinclude>ಸಂವೇದನಾ ಜೀವಿಗಳಿಗಂತೂ ಭ್ರಮೆನಿರಸನವೇ ಆಗಿದೆ ಎನ್ನಬೇಕು. ಇಂತಹ ಅನುಭವದಿಂದ ಮನಸ್ಸು ಕಹಿಯಾಗುತ್ತದೆ; ಭಾವನೆಗಳು ಒರಟಾಗುತ್ತವೆ. ಶಂಕೆ ಸಂದೇಹಗಳು ಅವರೆದುರು ದಟ್ಟೈಸಿದ ಕಾರ್ಮೊಡಗಳಾಗುತ್ತವೆ. ಕಪ್ಪು ಇಬ್ಬನಿಯ ಪರದೆಯಾಚೆ ಇನ್ನೊಂದು ಜಗತ್ತನ್ನು ಕಾಣಲು ಅವರು ಅಸಮರ್ಥರಾಗುತ್ತಾರೆ. ಅಂಥದೊಂದು ಜಗತ್ತಿದೆ ಎಂದು ನಂಬಲು ಅವರು ನಿರಾಕರಿಸುತ್ತಾರೆ.
<p>{{gap}}ಈ ಬಗೆಯ ಮನೋವೃತ್ತಿ ಬಲಗೊಂಡು ಸರ್ವವ್ಯಾಪಿಯಾದರೆ ಮುಂದೆ ಏನಾಗಬಹುದು? ಇತಿಹಾಸ ಕಲಿಸುವ ಪಾಠವನ್ನು ಗಮನಿಸದೆ, ಛಿದ್ರ ಪ್ರವೃತ್ತಿಗಳ ವಿಕಟ ನರ್ತನವನ್ನು ತಡೆಯಲೆತ್ನಿಸದೆ, "ನಾನು ಮಾಡು ವಂಥದೇನೂ ಇಲ್ಲ" ಎಂದು ಪ್ರತಿಯೊಬ್ಬನೂ ನಿಷ್ಕ್ರಿಯನಾದರೆ ಈ ದೇಶದಲ್ಲಿ ಏನು ಸಂಭವಿಸಬಹುದು?
<p>{{gap}}ಆ ಚಿತ್ರ ಕಲ್ಪನೆಗೆ ನಿಲುಕದ್ದಲ್ಲ.<br>
{{gap}}__ಜಾತಿ ಮತಗಳ ತಿಕ್ಕಾಟ ಮುಂದುವರಿದರೆ ರಕ್ತದ ಕಾಲುವೆಗಳು ಹರಿಯುವುವು.<br>
{{gap}}__ಯುವ ಜನಾಂಗದಲ್ಲಿ ಕಂಡುಬರುವ ಅಶಾಂತಿ, ಅಶಿಸ್ತು ಪ್ರಕ್ಷುಬ್ಧ ಪರಿಸ್ಥಿತಿಯನ್ನು ಉಂಟುಮಾಡುವುವು.<br>
{{gap}}__ಭಾಷೆಯ ಮೇಲಣ ಅಂಧ ಪ್ರೇಮದಿಂದ ರಾಜ್ಯರಾಜ್ಯಗಳ ನಡುವೆ ಘರ್ಷಣೆಗಳಾಗುವುವು.<br />
{{gap}}__ನೀರಿನ ವ್ಯಾಜ್ಯ ಜಲಾಶಯಗಳ ನಾಶದಲ್ಲಿ ಪರ್ಯವಸಾನವಾಗುವುದು.<br>
{{gap}}__ 'ದಕ್ಷಿಣಸ್ಥಾನ' ಬೇಕೆನ್ನುವ ಪ್ರತ್ಯೇಕತೆಯ ಆಗ್ರಹಕ್ಕೆ ಮೇಲು ಕೈಯಾದರೆ, ರಾಷ್ಟ್ರದಲ್ಲಿ ಔತ್ತರೇಯರು ಮತ್ತು ದಾಕ್ಷಿಣಾತ್ಯರ ನಡುವೆ ಯಾದವೀ ಕಲಹವೇರ್ಪಡುವುದು.<br>
{{gap}}__ಈ ಗೊಂದಲಮಯ ಸನ್ನಿವೇಶದಲ್ಲಿ ವಿದೇಶೀಯ ಆಕ್ರಮಣಕಾರರ ಆಗಮನವಾಗುವುದು; ಭಾರತ ಮತ್ತೊಮ್ಮೆ ದಾಸ್ಯಕೂಪಕ್ಕೆ ತಳ್ಳಲ್ಪಡುವುದು.<br><noinclude>
{{c|{{rule|2em}}}}
{{c|೧೭}}</noinclude>
dvv1p35yueumjrnmvbpem166tjofme4
ಪುಟ:AAHVANA.pdf/೨೦
104
19986
316757
260988
2026-05-04T09:08:52Z
Anzx-ooo
3060
/* Validated */
316757
proofread-page
text/x-wiki
<noinclude><pagequality level="4" user="Anzx-ooo" />{{c|'''ಆಹ್ವಾನ'''}}</noinclude>{{gap}}ಇದೊಂದು ದು:ಸ್ವಪ್ನ. ಆದರೆ, ಅನೈಕ್ಕದಿಂದ ಕಂಗೆಟ್ಟು ಗೃಹಛಿದ್ರ ದಿಂದ ಹೆಣ್ಣಾಗಿ, ವೈರಿಯ ಸ್ಪರ್ಶ ಮಾತ್ರಕ್ಕೇ ರಾಷ್ಟ್ರ ಕುಸಿದುಬೀಳುವ ಕೆಟ್ಟ ಕನಸು ಎಂದಿಗೂ ನಿಜವಾಗದೆಂದು ಎದೆ ತಟ್ಟಿ ಹೇಳುವ ಧೈರ್ಯ ಯಾరిగిదే?<br>
{{gap}}ಗತಕಾಲವನ್ನೂ ವರ್ತಮಾನಕಾಲವನ್ನೂ ಬಗೆಗಣ್ಣಿನಿಂದ ಪರಾಮರ್ಶಿಸಿದರೆ ಎಂತಹ ನಿರಸನಿಗಾದರೂ ಈ ಸತ್ಯ ಸಂಗತಿ ಮನವರಿಕೆಯಾಗಲೇಬೇಕು.<br />
{{c|'''೫'''}}
{{gap}}ಈ ದೇಶಕ್ಕೆ ಬಂದ ಆರ್ಯರು ದೇದೀಪ್ಯಮಾನ ಸೂರ್ಯನನ್ನು ಕಂಡಾಗಿ ನಿಬ್ಬೆರಗಾಗಿ, ಆ ಬೆಳಕಿನ ಗೋಲಕ್ಕೆ ಉದ್ದಂಡ ನಮಸ್ಕಾರ ಮಾಡಿದರು, ಪುಣ್ಯವಂತರು. ಎಷ್ಟೊಂದು ಸರಳವಾಗಿತ್ತು ಅವರ ಬದುಕು! ಈ ಶತಮಾನದ ಜನರನ್ನು ಕಾಡುವ ಯಾವ ಸಂಕಟಗಳೂ ಅವರಿಗಿರಲಿಲ್ಲ.<br>
{{gap}}"ಭಾರತ, ಆನಂದೋತ್ಸಾಹಗಳ ಭೂಮಿಯಾಗಿತ್ತು, ಜಟಿಲವಾದ ನಿಧಾನವಾಗಿ ರೂಪುಗೊಳ್ಳುತ್ತಿದ್ದ ಸಾಮಾಜಿಕ ವ್ಯವಸ್ಥೆయుల్లి, అల్లిನ ಜನಗಳೆಲ್ಲ ತಮ್ಮ ತಮ್ಮ ಸ್ಥಾನಗಳನ್ನು ಕಂಡುಕೊಂಡರು. ತಮ್ಮೊಳಗಿನ ಪರಸ್ಪರ ಸಂಬಂಧಗಳಲ್ಲಿ ಅವರು ತೋರುತ್ತಿದ್ದ ದಯಾಪೂರ್ಣತೆಯೂ ಉದಾತ್ತತೆಯೂ ಹಿರಿಯ ಮಟ್ಟದ್ದು. ಅದು, ಇತರ ಯಾವುದೇ ಪ್ರಾಚೀನ ರಾಷ್ಟ್ರದ ಉನ್ನತವಾಗಿತ್ತು."<br />
{{gap}}__ ಇದು ಭಾರತಾಧ್ಯಯನನ ಪ್ರಾದ್ಯಾಪಕ ಭಾಷ್ಹಾಮರ ಕೃತಿಯಿಂದ ಇನ್ನೊಂದು ಉಲ್ಲೇಖ.
{{gap}}ಆ ಭವ್ಯ ಎತ್ತರದಿಂದ ಲಜ್ಜಾಸ್ಪದವೆನಿಸುವ ಆಳಕ್ಕೆ ನಾವು ಇಳಿದಿರುವೆನಲ್ಲ?<noinclude>{{rule|2em}}
{{c|'''೧೮'''}}</noinclude>
59qhgmn2xz64zkbuk13w1omz9xmqq0i
ಪುಟ:AAHVANA.pdf/೨೧
104
19987
316759
260987
2026-05-04T09:10:04Z
Anzx-ooo
3060
/* Validated */
316759
proofread-page
text/x-wiki
<noinclude><pagequality level="4" user="Anzx-ooo" />{{ rh|center ='''ಆಹ್ವಾನ'''}}</noinclude>{{gap}}{{gap}} ನದಿಗೆ ಭಾಷೆಗಳ ಪ್ರದೇಶಗಳ ವ್ಯಾಮೋಹವಿಲ್ಲ, ಅವಳು ಎಲ್ಲಿಯೋ ಹುಟ್ಟಿ ಇನ್ನೆಲ್ಲಿಯೋ ಮನೆ ಸೇರುವ ಸುಹಾಸಿನಿ. ಯಾವ ರಾಜ್ಯದ ఎల్లే ಯಲ್ಲಾ ಆಕೆ ಸುಂಕ ತೆರುವವಳಲ್ಲ, ಆದರೆ ಇಲ್ಲಿ ಕೆಲವರು, "ನಮ್ಮಲ್ಲಿ ಹುಟ್ಟುವ ನದಿಯ ನೀರು ನಿಮಗೆ ಸಿಗಲಾರದು" ಎನ್ನುತ್ತಾರೆ. ಬೇರೆ ಕೆಲವರು, "ನಮ್ಮ ರಾಜ್ಯದಲ್ಲಿ ಹರಿಯುವ ನದಿಗೆ ಮೇಲ್ಬಡೆ ನೀವು ಅಣೆಕಟ್ಟು ಕಟ್ಟಬೇಡಿ" ಎನ್ನುತ್ತಾರೆ.<br>
{{gap}}{{gap}} ವಾಸ್ತವವಾಗಿ, ಉತ್ತರದ ಭಾಕಡಾ ನಂಗಲ್, ದಕ್ಷಿಣದ ತುಂಗಭದ್ರಾ -ಇವು ಸೀಮಿತ ಭಾಷಾ ಪ್ರದೇಶದ ವಾಪ್ತಿಯನ್ನೂ ದಾಟಿ ಹೆಚ್ಚು ವಿಸ್ತಾರವಾದ ನೆಲಕ್ಕೆ ನೀರುಣಿಸುವ, ಉದ್ಯಮಗಳಿಗೆ ವಿದ್ಯುತ್ತನ್ನೊದಗಿಸುವ, ಜಲಾಶಯಗಳು.
{{gap}}{{gap}} ಸ್ವಾತಂತ್ರೋದಯದ ಘಳಿಗೆಯಲ್ಲಿ ಕೈಗೊಂಡ ಪ್ರತಿಜ್ಞೆಗನುಸಾರವಾಗಿ ನಾವೆಲ್ಲ ಸಾಧಿಸಬಯಸುವ ಹೊಸ ಆರ್ಥಿಕ ವ್ಯವಸ್ಥೆಗೆ ಘನ ಕೈಗಾರಿಕೋದ್ಯಮಗಳು ತಳಹದಿ. ಅಂತಹ ಉದ್ಯಮಗಳಿಗೆ ವಿದ್ಯುತ್ತು ಬೇಕು. ಯಾವುದೇ ರಾಜ್ಯ, ನಾವು ಉತ್ಪಾದಿಸುವ ವಿದ್ಯುಚ್ಛಕ್ತಿ ನಮಗೆ ಮಾತ್ರ ಎನ್ನುವಂತಿಲ್ಲ. ಅಥವಾ, ನಮ್ಮ ಪ್ರದೇಶದ ಕಾರ್ಖಾನೆಯ ಉಕ್ಕು ನಮಗೋಸ್ವರ ಮಾತ್ರವೇ ಎನ್ನುವಂತೆಯೂ ಇಲ್ಲ.<br>
{{gap}}{{gap}} ಮಲೆನಾಡಿನಲ್ಲಿ ಒಂದುಕಡೆ ಮಣ್ಣು ಉಕ್ಕಾಯಿತು, ಕಾಡು ಊರಾಯಿತು. ಅದು ಭದ್ರಾವತಿ. 'ಆ ಅರಣ್ಯಪ್ರದೇಶದಲ್ಲೇಕೆ? ಬಯಲು ಸೀಮೆಯಲ್ಲೇ ಕಾರಖಾನೆಯನ್ನು ಸ್ಥಾಪಿಸಬಹುದಿತ್ತಲ್ಲ'__ ಎನ್ನಬಹುದು ಕೆಲವರು. ಕಬ್ಬಿಣದ ಅದಿರು ಸಿಗುವ ಕೆಮ್ಮಣ್ಣ ಗುಂಡಿ ಬಯಲು ಸೀಮೆಯಲ್ಲೇ ಇದ್ದಿದ್ದರೆ ಹಾಗೆ ಮಾಡಬಹುದಿತ್ತು! ಭದ್ರಾವತಿ ಕಾರಖಾನೆಯ ಉಕ್ಕಾದರೋ ಯಾವುದೇ ಒಂದು ಸೀಮೆಗಲ್ಲ, ದಕ್ಷಿಣ ಭಾರತಕ್ಕೆಲ್ಲ ಪೂರೈಕೆ ಯಾಗುತ್ತಿದೆ. ಅಲ್ಲಿ ಉತ್ಪಾದನೆಯಾಗುವ ವಿಶೇಷ ಉಕ್ಕು, ಇಡಿಯ ದೇಶದ ಸೊತ್ತು, ದೇಶದ ವಿವಿಧ ಭಾಗಗಳಲ್ಲಿರುವ ಜಮ್ಶೇದ್ ಪುರದ ತಾತಾ ಕಾರಖಾನೆ, ಭಿಲಾಯಿ-ರೂರ್ ಕೆಲಾ-ದುರ್ಗಾಪುರ ಕಾರಖಾನೆಗಳು, ನಾಳೆ<br><noinclude>{{ rh|center ='''________'''}}
{{ rh|center ='''೧೯'''}}</noinclude>
pckdbogmkt12sese0n9yxntscb9pvog
ಪುಟ:AAHVANA.pdf/೨೨
104
19988
316761
260986
2026-05-04T09:10:32Z
Anzx-ooo
3060
/* Validated */
316761
proofread-page
text/x-wiki
<noinclude><pagequality level="4" user="Anzx-ooo" />{{rh|center= '''ಆಹ್ವಾನ'''}}</noinclude>ಸ್ಥಾಪಿತವಾಗಲಿರುವ ಬೊಕಾರೊ ಕಾರಖಾನೆ-ಇವುಗಳೆಲ್ಲ ಇಡಿಯ ಭಾರತದ ಆಸ್ತಿಯೇ ಹೊರತು ಯಾವುದೇ ಒಂದು ಪ್ರದೇಶದ್ದಲ್ಲ.<br>
{{gap}}{{gap}} ದಾಂಡೇಲಿ [ದಂಡಕಾರಣ್ಯ], ಕಾಗದದ ಕಾರಖಾನೆಯೊಂದು ಸ್ಥಾಪಿತವಾಗಿರುವ ಊರು. ಕಾರವಾರದ ಕಾಡುಗಳ ಬಿದಿರು ಮೆಳೆಯ ಪಲ್ಪನ್ನು ಆ ಕಾರಖಾನೆ ಬಳಸುತ್ತಿದೆ. ఆ ಪಲ್ಪಿನಿಂದ ತಯಾರಾದ ಕಾಗದಕ್ಕೆ ಇಡೀ ದೇಶವೇ ಮಾರುಕಟ್ಟೆ, ಯಾವ ಭಾಷೆಯಲ್ಲಿ ಬೇಕಾದರೂ ಆ ಹಾಳೆಯ ಮೇಲೆ ಬರೆಯಬಹುದು.
{{gap}}{{gap}} ಮಾಂಗನೀಸೂ ಅಷ್ಟೆ, ಮದರಾಸೋ ಮಂಗಳೂರೋ ಕಾರವಾರವೋ ಮರ್ಮಗೋವವೋ ಯಾವ ಬಂದರದಿಂದಾದರೂ ಸರಿಯೇ, ಪರದೇಶಗಳಿಗೆ ಅದು ಪ್ರಯಾಣ ಬೆಳಸುತ್ತದೆ; ಈ ದೇಶಕ್ಕೆ ದುಡು ಗಳಿಸಿಕೊಡುತ್ತದೆ. ಒಡೆದು ಸಿದ್ಧಗೊಳಿಸುವಾಗ, ಧಕ್ಕೆಯಲ್ಲಿ ನಾವೆಗೆ ಸಾಗಿಸುವಾಗ, ಸ್ಪೃಶ್ಯರು ಅಸ್ಪೃಶ್ಯರು ಎಂಬ ಭೇದ ಆ ಆದಿರಿಗಿಲ್ಲ, ಅದರ ಸ್ಪರ್ಶಮಾತ್ರ ದಿಂದ, ದುಡಿಯುವವರೆಲ್ಲ-ಅವರು ರಜಪೂತರಿರಲಿ, ಸಿಕ್ಟರಿರಲಿ, ತಮಿಳರಿರಲಿ, ತೆಲುಗರಿರಲಿ-ಒಂದೇ ಬಣ್ಣಕ್ಕೆ ಮಾರ್ಪಡುತ್ತಾರೆ.<br />
{{gap}}{{gap}} 'ದುಡಿಮೆಯೇ ದೇವರು' ಎನ್ನುವ ಜನಕ್ಕೆ, ಭಾಷಾ ಕಲಹದ-ರಾಜ್ಯಗಳ ಜಗಳದ-ಮಹತ್ವವನ್ನು ಮನಗಾಣಿಸಿಕೊಡುವುದು ಕಷ್ಟದ ಕೆಲಸ.<br>
{{gap}}{{gap}} ಔದ್ಯೋಗೀಕರಣದ ಹಿನ್ನೆಲೆಯಲ್ಲಿ ನಮ್ಮ ನಗರಗಳು ರೂಪುಗೊಳ್ಳುತ್ತಿರುವ ಬಗೆಯನ್ನು ನೋಡೋಣ. ಉದಾಹರಣೆಗೆ: ಬೆಂಗಳೂರು, ಕಳೆದ ಎರಡು ದಶಕಗಳಲ್ಲಿ ಬೃಹತ್ ಪ್ರಮಾಣದ ಉದ್ಯಮಗಳು ಇಲ್ಲಿ ಸ್ಥಾಪಿಸಲ್ಪಟ್ಟಿವೆ. ಹಿಂದುಸ್ಥಾನ್ ವಿಮಾನ ಕಾರ್ಖಾನೆ, ಹಿಂದೂಸ್ಥಾನ್ ಮೆಶಿನ್ ಟೂಲ್ಸ್, ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್, ಭಾರತ್ ಇಲೆಕ್ಟ್ರಾನಿಕ್ಸ್ -ಹೀಗೆ ಹಲವು. ಇವೆಲ್ಲ ರಾಷ್ಟ್ರದ ಔದ್ಯೋಗಿಕ ಸಂಪತ್ತು. ಸ್ವಾಭಾವಿಕವಾಗಿಯೇ ದೇಶದ ವಿವಿಧ ಮೂಲೆಗಳ ಜನ ಇಲ್ಲಿ ನೆಲೆಸಿದ್ದಾರೆ.<br />
{{gap}}{{gap}} ಇದು ಇವರ ನಗರಗಳಿಗೂ ಅನ್ವಯಿಸುವ ಮಾತು, ಆದರೂ,<br />
{{gap}}{{gap}} 'ಇತರ ರಾಜ್ಯಗಳ-ಭಾಷೆಗಳ-ಜನ ಇಲ್ಲಿಗೆ ಬರಬಾರದು'ಎಂಬ ಆಕ್ಷೇಪ, ಆಕ್ರೋಶ ಕೇಳಿಸುವುದುಂಟು. ಇಂಗ್ಲೆಂಡು ಕಾಮನ್ವೆಲ್ತಿನ ಸದಸ್ಯರಾಷ್ಟ್ರ<noinclude>
{{rh|center= '''________'''}}
{{rh|center= '''೨೦'''}}</noinclude>
hyqnklay5u434t40lpawqdtdi9kcr7h
ಪುಟ:AAHVANA.pdf/೨೩
104
19989
316763
260999
2026-05-04T09:11:08Z
Anzx-ooo
3060
316763
proofread-page
text/x-wiki
<noinclude><pagequality level="4" user="~aanzx" />{{rh|center='''ಆಹ್ವಾನ'''}}</noinclude>ಎನ್ನುವ ಕಾರಣದಿಂದ ಅಲ್ಲಿಗೆ ಹೋಗಿ ನೆಲೆಸಲು ನಮಗೆ ಹಕ್ಕಿದೆ —ಎಂದು ಕೂಗಾಡುವ ನಾವು, ನಮ್ಮ ದೇಶವಾಸಿಗಳೇ ಒಂದು ಗೆರೆಯಾಚಿಗಿಂದ ಈಚೆಗೆ ಬಂದರೆ "ತೊಲಗಿ!" ಎನ್ನುವುದು ಸರಿಯೇ?
{{gap}}{{gap}} ಎರಡು ಸಾವಿರದ ಐದುನೂರು ವರ್ಷಗಳಿಗೆ ಹಿಂದಿನ ಜಾತಕ ಕಥೆಯೊಂದು, ಹುಟ್ಟಕುರುಡರು ಆನೆ ಕಂಡ ಬಗೆಯನ್ನು ಬಣ್ಣಿಸಿದೆ. ಮೈಮುಟ್ಟಿ, ಒಬ್ಬೊಬ್ಬನು ಒಂದೊಂದು ತೆರನಾಗಿ ಆನೆಯನ್ನು ಬಣ್ಣಿసి, 'ನಾನು ಸರಿ' 'ನಾನೇ ಸರಿ' ಎಂದು ಪರಸ್ಪರ ಹೊಡೆದಾಡಿ ನಗೆಗೀಡಾದರು. ಆ ಕುರುಡರ ಅವಸ್ಥೆಯಾಗಬೇಕೆ ನಮಗೆ?
{{gap}}{{gap}} ಅರ್ಧ ಶತಮಾನಕ್ಕೆ ಹಿಂದೆ ವಿವೇಕಾನಂದರು:
{{gap}}{{gap}} "ಏಕಮನಸ್ಯರಾಗಿರುವುದೇ ಸಮಾಜದ ರಹಸ್ಯ, ದ್ರಾವಿಡರು, ಆರ್ಯರು, ಬ್ರಾಹ್ಮಣರು, ಬ್ರಾಹ್ಮಣೇತರರು—ಎಂದೆಲ್ಲ ಕ್ಷುಲ್ಲಕ ವಿಷಯಗಳ ಬಗೆಗೆ ನೀವು ಇನ್ನೂ ಕಾದಾಡುತ್ತ ಜಗಳಾಡುತ್ತ ಹೋಗುವಿರಾದರೆ, ಭಾರತದ ಭವಿಷ್ಯತ್ತನ್ನು ರೂಪಿಸುವ ಸತ್ವ ಹಾಗೂ ಶಕ್ತಿಯ ಶೇಖರಣೆಯಿಂದ ನೀವು ಮತ್ತಷ್ಟು ದೂರಾಗುವಿರಿ."
{{gap}}{{gap}} ಪರತಂತ್ರ ಭಾರತದ ಜನಕೋಟಿಗೆ ನೀಡಲಾದ ಈ ವಿವೇಕವಾಣಿ ಎಚ್ಚರಿಕೆ-ಸ್ವತಂತ್ರ ಭಾರತದ ಪ್ರಜೆಗಳಿಗೆ ಮತ್ತಷ್ಟು ಮಹತ್ವದ್ದಾಗಿದೆ.
{{gap}}{{gap}} ನಮ್ಮ ರಾಷ್ಟ್ರವಿನ್ನೂ ಕ್ಷಾಮ -ಪ್ರವಾಹಗಳಿಂದ ಮುಕ್ತಿ ಪಡೆದಿಲ್ಲ. ಅಂತಹ ಪರಿಸ್ಥಿತಿ ಒದಗಿದಾಗಲೆಲ್ಲ ನಾವು ಕಾಣುವುದೇನನ್ನು? ಕ್ಲಾಮದಿಂದ ಇಲ್ಲವೆ ಪ್ರವಾಹದಿಂದ ಪೀಡಿತರಾದ ರಾಜ್ಯದ ಜನರಷ್ಟೇ ತಮ್ಮ ನೆರವಿಗೆ ಬರಬೇಕು: ನಿಧಿ-ಸಾಮಗ್ರಿಗಳನ್ನು ಸಂಗ್ರಹಿಸಬೇಕು. ಎಡವಿ ಬೆರಳಿಗೆ ಗಾಯವಾದರೆ ಅದು ಕಾಲಿನ ಜವಾಬ್ದಾರಿ. ಕೈ ಮಾಡಬೇಕಾದುದೇನೂ ಇಲ್ಲ!
{{gap}}{{gap}} ರಾಷ್ಟ್ರ ಜೀವನದಲ್ಲಿ ಇರುಳು ಕಳೆದು ಬೆಳಗಾಗುತ್ತಿರುವ ಈ ವೇಳೆ ಯಲ್ಲಿ, ವಿವಂಚನೆಗೆ ಗುರಿಮಾಡುವಂತಹ ಕ್ಷುದ್ರ ಪ್ರವೃತ್ತಿಗಳಿರುವಾಗಲೂ ಮನುಷ್ಯನಲ್ಲಿ ವಿಶ್ವಾಸ ಕಳೆದುಕೊಳ್ಳುವಷ್ಟು ನಾವು ಅಧೀರರಾಗಬಾರದು...<noinclude>{{rule|4em}}
{{rh|center ='''೨೧'''}}
'''A<sup>2</sup>]'''</noinclude>
26fetbpttf1hjqohv73u9q11ed3stvv
ಪುಟ:AAHVANA.pdf/೨೪
104
19990
316766
63767
2026-05-04T09:12:46Z
Anzx-ooo
3060
/* Validated */
316766
proofread-page
text/x-wiki
<noinclude><pagequality level="4" user="Anzx-ooo" />{{c|ಆಹ್ವಾನ}}</noinclude>ತಮ್ಮ ಎಂಭತ್ತನೆಯ ಹುಟ್ಟು ಹಬ್ಬದ ದಿವಸ ಕವಿ ರವೀಂದ್ರರು ನೀಡಿದ ಸಂದೇಶದಲ್ಲಿ,
"ಮನುಷ್ಯನಲ್ಲಿ ನಂಬುಗೆಯನ್ನು ಕಳೆದುಕೊಳ್ಳುವ ಮಹಾ ಪಾಪವನ್ನು ನಾನು ಮಾಡಲಾರೆ. ಅದರ బದಲು అವನ ಇತಿಹಾಸ ದಲ್ಲೊಂದು ಹೊಸ ಅಧಾಯ ಆರಂಭವಾಗುವುದನ್ನು ನಾನು ಇದಿರು ನೋಡುವೆ,"
__ಎಂಬ ಒಂದು ಮಾತಿದೆ.
ఆ ಕವಿವಾಣಿಗೆ ಪಾವಿತ್ರ್ಯವನ್ನು ಕಲ್ಪಿಸಿ ಅದಕ್ಕೆ అನುಸಾರವಾಗಿ ತಮ್ಮ ವಿಚಾರಗಳನ್ನೂ ಕೃತಿಗಳನ್ನೂ ಭಾರತೀಯರು ರೂಪಿಸಿಕೊಳ್ಳಬೇಕು.
ಹಾಗೆ ಮಾಡದೇ ಹೋದೆವೆಂದರೆ ಈಗ ಹರಿಯುತ್ತಿರುವ ಬೆಳಕು ನಿರರ್ಥಕವಾದೀತು; ಅದು ಬರಿಯ ಬೆಳಗಾದೀತು.
{{c|೬}}
ಸ್ವತಂತ್ರ ಭಾರತದ ಬೇರೆ ಬೇರೆ ಮುಖಗಳನ್ನು ಕುರಿತು ಈವರೆಗೆ ವಿವೇಚಿಸಿದ ನಾವು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಅನುಪಲ್ಲವಿಗೆ ಹಿಂದಿರುಗೋಣ.
ಏಳು ಮಹಾ ನದಿಗಳ, ಏಳು ಮಹಾ ಪರ್ವತಗಳ ಈ ಬೃಹತ್ ರಾಷ್ಟ್ರದ ವೈವಿಧ್ಯಮಯ ಬದುಕಿನ ಪ್ರತೀಕ__ಸಪ್ತವರ್ಣಗಳ ಇಂದ್ರಧನುಸ್ಸು.
ನಮ್ಮ ಇತಿಹಾಸ, ತತ್ತ್ವಜ್ಞಾನ, ಸಾಮಸಾಮಾಜಿಕ ಬೆಳವಣಿಗೆ, ಸಂಗೀತ_ನ್ರುತ್ಯ_ಶಿಲ್ಪ_ಚಿತ್ರಕಲೆಗಳು,. ಭಾರತೀಯ ಭಾಷೆಗಳ ಪ್ರಾಚಿನ ಹಾಗೂ ಆಧುನಿಕ ಸಾಹಿತ್ಯ ಸ್ರುಷ್ಟಿ ಇವೆಲ್ಲ ನಮ್ಮಲ್ಲಿನ ವಿವಿಧತೆಯೊಳಗಣ ಏಕತೆಗೆ,ಭಿನ್ನತೆಯೊಳಗಿನ ಸಮಾನತೆಗೆ, ಸಾಕ್ಷಿಗಳು....
.... ಫ್ರೆಂಚ್ ಸಾಹಿತ್ಯ_ತತ್ವಜ್ಞಾನಿ ರೊಮೆ ರೋಲಾ[ದಿವಂಗತರು] ತಮ್ಮದೊಂದು ಗ್ರಂಥವನ್ನು,<noinclude>{{c|__________<br />೨೨}}</noinclude>
n7b2sjq1nppvbytvql8fbt1vo0803zz
ಪುಟ:AAHVANA.pdf/೨೫
104
19991
316771
63768
2026-05-04T09:15:51Z
Anzx-ooo
3060
/* Validated */
316771
proofread-page
text/x-wiki
<noinclude><pagequality level="4" user="Anzx-ooo" />{{c|ಆಹ್ವಾನ}}</noinclude>"ಕೀರ್ತಿಯ ಹಾಗೂ ದಾಸ್ಯದ ಭೂಮಿಗೆ, ಅಶಾಶ್ವತ ಸಾಮ್ರಾಜ್ಯ ಗಳ ಹಾಗೂ ಚಿರಂತನವಾದ ಕೀರ್ತಿಮಯ ವಿಚಾರಗಳ ನಾಡಿಗೆ, ಕಾಲ ವನ್ನು ಪ್ರತಿಭಟಿಸುವ ಜನತೆಗೆ, ನವಕಲ್ಪಿತ ಭಾರತಕ್ಕೆ_"
__ಅರ್ಪಣೆ ಮಾಡಿದ್ದಾರೆ.
ಇಂತಹ ಪ್ರಮಾಣಪತ್ರವನ್ನು ಪಡೆದ ದೇಶ, ಮಹೋಜ್ವಲ ವಿಚಾರ ಗಳಿಗೂ ನೂತನ ಸಿದ್ದಾಂತಗಳಿಗೂ ಮಾತೃಕೆಯಾಗಿತ್ತು. ಅರಸೊತ್ತಿಗೆಗಳು ಎದ್ದುವು, ಬಿದ್ದುವು. ಹಳಬರ ಬದಲು ಹೊಸಬರು ಆಳಿದರು. ಆದರೂ, ಮಹಾ ದಾರ್ಶನಿಕರೂ ಕವಿಗಳೂ ತಮ್ಮ ಪ್ರವಚನಗಳಿಂದ ಗೀತಗಳಿಂದ ಭಾರ ತೀಯ ಚೇತನವನ್ನು ಚಿರಂತನಗೊಳಿಸಿದರು.
ಎಲ್ಲ ಧರ್ಮಗಳ ಸಾರವೂ ಒಂದೇ____ಎಂದು, ದಾರ್ಶನಿಕರಂತೆಯೇ
ಕವಿಗಳೂ ನುಡಿದುದುಂಟು.
<poem>
"ಧರ್ಮ ಧರ್ಮದಲ್ಲಿ ಭೇದವೆಲ್ಲಿಹುದು, ಹೇಳು ಮನವೇ
ಎಲ್ಲರೊಳು ಶ್ರದ್ಧೆ ಒಂದೇ ಎನಲು_"
_ಎಂದು ಹಾಡಿದ್ದನೆ ಕಾಶ್ಮೀರದ ಕವಿ ಹಬೀಬುಲ್ಲಾ.
ಅದೇ ಅಭಿಪ್ರಾಯವನ್ನು ಕನ್ನಡದ ಚಾರಣ ಕವಿ ಸರ್ವಜ್ಞ,
"ನಡೆವುದೊಂದೇ ಭೂಮಿ । ಕುಡಿವುದೊಂದೇ ನೀರು ।
ಸುಡುವಗ್ನಿಯೊಂದೆ ಇರುತಿರಲು ಕುಲಗೋತ್ರ ।
ನೋಡುವೆ ಎತ್ತಣದು ।ಸರ್ವಜ್ಞ।"
_ಎಂಬ ವಚನದಲ್ಲಿ ವ್ಯಕ್ತಪಡಿಸಿದ್ದಾನೆ.
</poem>
ಈ ಬಗೆಯ ವಿಚಾರಗಳನ್ನೂ ಭಾವನೆಗಳನ್ನೂ ಪ್ರಕಟಿಸಿದ ಕವಿತೆಗಳು ಭಾರತದ ಎಲ್ಲ ಭಾಷೆಗಳಲ್ಲೂ ದೊರೆಯುತ್ತದೆ.
ಕಾವ್ಯ ಮತ್ತು ಜೀವನ. ಪ್ರಾಚೀನ ಕಾಲದಿಂದ ಈವರೆಗೆ ನಾವು ಕಾಣುವ ಭಾರತೀಯ ಗ್ರಾಮದ ಚಿತ್ರ ಎಂಥದು? ಗ್ರಾಮ ದೇವತೆಯಾದ ಹನುಮಂತ, ಹಳ್ಳಿಯ ಬಾವಿ ಅಥವಾ ಕೆರೆ, ಗಡಿಗೆ ತಿರುಗಿಸುವ ಕುಂಬಾರ<noinclude>{{c|__________<br />೨೩}}</noinclude>
dgi3fn7b12eec1lggrhmpdopka2vp4x
316772
316771
2026-05-04T09:16:37Z
Anzx-ooo
3060
316772
proofread-page
text/x-wiki
<noinclude><pagequality level="4" user="Anzx-ooo" />{{c|ಆಹ್ವಾನ}}</noinclude>"ಕೀರ್ತಿಯ ಹಾಗೂ ದಾಸ್ಯದ ಭೂಮಿಗೆ, ಅಶಾಶ್ವತ ಸಾಮ್ರಾಜ್ಯ ಗಳ ಹಾಗೂ ಚಿರಂತನವಾದ ಕೀರ್ತಿಮಯ ವಿಚಾರಗಳ ನಾಡಿಗೆ, ಕಾಲ ವನ್ನು ಪ್ರತಿಭಟಿಸುವ ಜನತೆಗೆ, ನವಕಲ್ಪಿತ ಭಾರತಕ್ಕೆ_"
__ಅರ್ಪಣೆ ಮಾಡಿದ್ದಾರೆ.
ಇಂತಹ ಪ್ರಮಾಣಪತ್ರವನ್ನು ಪಡೆದ ದೇಶ, ಮಹೋಜ್ವಲ ವಿಚಾರ ಗಳಿಗೂ ನೂತನ ಸಿದ್ದಾಂತಗಳಿಗೂ ಮಾತೃಕೆಯಾಗಿತ್ತು. ಅರಸೊತ್ತಿಗೆಗಳು ಎದ್ದುವು, ಬಿದ್ದುವು. ಹಳಬರ ಬದಲು ಹೊಸಬರು ಆಳಿದರು. ಆದರೂ, ಮಹಾ ದಾರ್ಶನಿಕರೂ ಕವಿಗಳೂ ತಮ್ಮ ಪ್ರವಚನಗಳಿಂದ ಗೀತಗಳಿಂದ ಭಾರ ತೀಯ ಚೇತನವನ್ನು ಚಿರಂತನಗೊಳಿಸಿದರು.
ಎಲ್ಲ ಧರ್ಮಗಳ ಸಾರವೂ ಒಂದೇ____ಎಂದು, ದಾರ್ಶನಿಕರಂತೆಯೇ
ಕವಿಗಳೂ ನುಡಿದುದುಂಟು.
<poem>
"ಧರ್ಮ ಧರ್ಮದಲ್ಲಿ ಭೇದವೆಲ್ಲಿಹುದು, ಹೇಳು ಮನವೇ
ಎಲ್ಲರೊಳು ಶ್ರದ್ಧೆ ಒಂದೇ ಎನಲು_"
_ಎಂದು ಹಾಡಿದ್ದನೆ ಕಾಶ್ಮೀರದ ಕವಿ ಹಬೀಬುಲ್ಲಾ.
ಅದೇ ಅಭಿಪ್ರಾಯವನ್ನು ಕನ್ನಡದ ಚಾರಣ ಕವಿ ಸರ್ವಜ್ಞ,
"ನಡೆವುದೊಂದೇ ಭೂಮಿ । ಕುಡಿವುದೊಂದೇ ನೀರು ।
ಸುಡುವಗ್ನಿಯೊಂದೆ ಇರುತಿರಲು ಕುಲಗೋತ್ರ ।
ನೋಡುವೆ ಎತ್ತಣದು ।ಸರ್ವಜ್ಞ।"
_ಎಂಬ ವಚನದಲ್ಲಿ ವ್ಯಕ್ತಪಡಿಸಿದ್ದಾನೆ.
</poem>
ಈ ಬಗೆಯ ವಿಚಾರಗಳನ್ನೂ ಭಾವನೆಗಳನ್ನೂ ಪ್ರಕಟಿಸಿದ ಕವಿತೆಗಳು ಭಾರತದ ಎಲ್ಲ ಭಾಷೆಗಳಲ್ಲೂ ದೊರೆಯುತ್ತದೆ.
ಕಾವ್ಯ ಮತ್ತು ಜೀವನ. ಪ್ರಾಚೀನ ಕಾಲದಿಂದ ಈವರೆಗೆ ನಾವು ಕಾಣುವ ಭಾರತೀಯ ಗ್ರಾಮದ ಚಿತ್ರ ಎಂಥದು? ಗ್ರಾಮ ದೇವತೆಯಾದ ಹನುಮಂತ, ಹಳ್ಳಿಯ ಬಾವಿ ಅಥವಾ ಕೆರೆ, ಗಡಿಗೆ ತಿರುಗಿಸುವ ಕುಂಬಾರ<noinclude>{{c|__________<br />೨೩}}</noinclude>
5ounspcfn2ycrsfi9i4f0u629nnrg5n
ಪುಟ:AAHVANA.pdf/೨೬
104
19992
316775
63792
2026-05-04T09:18:18Z
Anzx-ooo
3060
/* Validated */
316775
proofread-page
text/x-wiki
<noinclude><pagequality level="4" user="Anzx-ooo" />{{c|ಆಹ್ವಾನ }}</noinclude>[ಈಗ ಹೆಚ್ಚೆಂದರೆ ಕಾಫಿ ಚಹಗಳ ಒಂದು ಅಂಗಡಿ]...... ಪ್ರಜಾಪ್ರಭುತ್ವ ಪದ್ಧತಿಯ ಚೌಕಟ್ಟಿನೊಳಗೆ ಗ್ರಾಮಪಂಚಾಯತಿ, ವಿಶಿಷ್ಟ ಅರ್ಥವನ್ನು ಪಡೆಯುತ್ತಿದೆಯಾದರೂ, ವಿದ್ಯುತ್ತಿನ ಪ್ರಭಾವದಿಂದ ಹಳ್ಳಿಗಳು ಹೊಸ ರೂಪ ತಳೆಯುತ್ತಿವೆಯಾದರೂ, ಎತ್ತಿನ ಬಂಡಿಯ ಯುಗದ ಬಸಿರಿನಿಂದ ಬೈಸಿಕಲ್ ಯುಗ ಮೂಡುತ್ತಿದೆಯಾದರೂ, ಈ ಪರಿವರ್ತನೆ ದೇಶದಾದ್ಯಂತ ఎల్ల ಹಳ್ಳಿ ಗಳಲ್ಲೂ ಆಗುತ್ತಿರುವುದು ಏಕಪ್ರಕಾರವಾಗಿ, ಪ್ರಾಂತಗಳ ಭಾಷೆಗಳ ವ್ಯತ್ಯಾಸ ಗಳನ್ನು ಪರಿಗಣಿಸದೆ.
ವಿವಿಧ ಭಾಷೆ, ಸಾಹಿತ್ಯ, ಲಲಿತಕಲೆಗಳ ಆಳವಾದ ಅಭ್ಯಾಸ ನಮಗೆ ತೋರಿಸಿಕೊಡುವುದೇನನ್ನು?
ಐತಿಹಾಸಿಕ ದ್ರುಷ್ಟಿಯಲ್ಲಿ ಸಂಸ್ಕ್ರುತ ನಿರ್ಜಿವ ಭಾಷೆ ಎನಿಸಿರಬಹುದು. ಆದರೆ ಅದೀಗ ಬೇರೆ ರೂಪಗಳಲ್ಲಿ ಜೀವಂತವಾಗಿ ಉಳಿದಿದೆ. ಭಾರತದ ಹತ್ತು ಹದಿನಾರು ಭಾಷೆಗಳ ಧಮನಿಗಳಲ್ಲಿ ಸಂಸ್ಕೃತದ ರಕ್ತ ಹರಿಯುತ್ತಿದೆ ಉತ್ತರದ ಭಾಷೆಗಳಿಗೂ ದ್ರಾವಿಡ ಮೂಲದ ಹೆಚ್ಚಿನ ಭಾಷೆಗಳಿಗೂ ಸಂಸ್ಕೃತದ ಪ್ರಭಾವದಿಂದಲೇ ಸಂಬಂಧ ಸಾಧ್ಯವಾಗಿದೆ.
ಉತ್ತರದಲ್ಲಿ ಕೆಲವು ಕಡೆ ಹಿಂದೂ ಮುಸಲ್ಮರಾದಿಯಾಗಿ ಎಲ್ಲರೂ ಆಡುವ ಭಾಷೆಯೊಂದಿದೆ: ಖಡೀ ಬೋಲಿ ಪರ್ಸಿಯನ್ ಭಾಷೆ. ಈ ದೇಶಕ್ಕೆ ಬಂದಾಗ, ಅದರ ಛಾಯೆಯ ಕೆಳಗೆ ಖಡೀ ಬೋಲಿ ಉರ್ದೂ ವಾಯಿತು: ಸಂಸ್ಕೃತದ ಛತ್ರದ ಕೆಳಗೆ ಅದು ಹಿಂದಂಯಾಯಿತು.
ಈಗ ಉರ್ದೂ-ಹಿಂದಿಗಳ ನಡುವಿನ ಅಂತರ ಕಡಮೆಯಾಗಲೆಂದು ಹಿಂದೂಸ್ಥಾನಿ ಪ್ರಚಾರವಾಗುತ್ತಿದೆ.
ಸಾಹಿತ್ಯ ಕ್ರುತಿ ಈ ದೇಶದ ಯಾವ ಭಾಷೆಯಲ್ಲೇ ಸೃಷ್ಟಿಯಾಗಲಿ ಭಾರತೀಯ ಸಾಹಿತ್ಯದ ಒಂದಂಶವೇ.
ಮಹಾಕಾವ್ಯಗಳಾದ "ರಾಮಾಯಣ", "ಮಹಾಭಾರತ'ಗಳು ಇಡೀ ದೇಶದ ಸಾರಸ್ವತ ಸಂಪತ್ತು ಹಿಂದಿಯ "ತುಳಸೀ ರಾಮಾಯಣ', ತಮಿಳಿನ "ಕಂಬ ರಾಮಾಯಣ', ಕನ್ನಡದ ಕುವೆಂಪು ಕೃತ "ಶ್ರೀ ರಾಮಾಯಣ, ದರ್ಶನಂ"_ ಇವೆಲ್ಲ ಪ್ರಾಚೀನ ಮಹಾಕಾವ್ಯವಾದ 'ರಾಮಾಯಣ'ದ ಭಾರ<noinclude>{{c|_______<br />೨೪}}</noinclude>
tio7kx2w7n08mwgmt04dm6whihxstjc
ಪುಟ:AAHVANA.pdf/೨೭
104
19993
316818
63806
2026-05-04T10:00:20Z
Ashwini Rai K
8475
/* Validated */
316818
proofread-page
text/x-wiki
<noinclude><pagequality level="4" user="Ashwini Rai K" /></noinclude>
ಆಹ್ವಾನ
ತೀಯತ್ವಕ್ಕೆ ಸಾಕ್ಷಿ. ಭಾಸ, ಶೂದ್ರಕ, ಕಾಳಿದಾಸ, ವಿಶಾಖದತ್ತ,
ಭವಭೂತಿಯರ ಕೃತಿಗಳೆಲ್ಲ ಭಾರತೀಯ ಸಾಹಿತ್ಯ.
{{gap}}ಬಂಗಾಳಿಯಲ್ಲಿ ಬರೆದರೂ ರವೀಂದ್ರರು ಭಾರತೀಯ ಕವಿಯೆಂದು [ವಿಶ್ವಕವಿಯೆ೦ದು] ವಂದ್ಯರಾದರು. ತಮಿಳಿನ ಸುಬ್ರಹ್ಮಣ್ಯ ಭಾರತಿ ರಾಷ್ಟ್ರ ಕವಿ ಎನ್ನಿಸಿಕೊಂಡರು. ಅವರ ಕಾವ್ಯ ಸೃಷ್ಟಿಗೆ ಪ್ರೇರಣೆಯಾದ ಉದಾತ್ತ ಭಾವನೆಗಳೇ ಮಲೆಯಾಳೀ ಭಾಷೆಯಲ್ಲಿ ಮಹಾಕವಿ ವಲ್ಲತ್ತೋಳರ ಕೃತಿಗಳಿಗೆ
ಕಾರಣವಾದುವು.<br />
{{gap}}ಪದ್ಯದಲ್ಲಿ ಎಂತೋ ಪದ್ಯದಲ್ಲಿ ಅಂತೆಯೇ. ದ್ವಿಜೇಂದ್ರ ಲಾಲ್ ರಾಯ ಬರೆದ ನಾಟಕಗಳು_“ಅಹಲ್ಯಾ”“ಮೇವಾಡ ಪತನ""ಷ ಜಹಾನ್” ಭಾರತದ ಅನೇಕ ಭಾಷೆಗಳಲ್ಲಿ ಅಭಿನಯಿಸಲ್ಪಟ್ಟು ಜನರ ಮೆಚ್ಚುಗೆ ಗಳಿಸಿವೆ. ಶರತ್ ಸಾಹಿತ್ಯ, ಸಮಗ್ರ ಭಾರತಕ್ಕೆ ವಂಗಭಾಷೆ ನೀಡಿರುವ ಕಾಣ್ಕೆ.<br />
{{gap}}ಸಂಗೀತ, ಲಲಿತ ಕಲೆಗಳನ್ನು ಪರಿಶೀಲಿಸೋಣ.<br />
{{gap}} ಹಿಂದೂಸ್ಥಾನೀ ಮತ್ತು ಕರ್ನಾಟಕ ಸಂಗೀತಗಳು ಎರಡೂ ಪರಿಪುಷ್ಟ ವಾಗಿ ಬೆಳೆದಿರುವ ವಿಭಿನ್ನ ಶಾಸ್ತ್ರೀಯ ಪದ್ಧತಿಗಳಾದರೂ, ಅವುಗಳಲ್ಲಿ ಸಾಮ್ಯ ವಿರುವ ರಾಗಗಳು ಹೇರಳವಾಗಿವೆ. ಜಾನಪದ ಗೀತೆಗಳಲ್ಲಿ ಲಾಲೀಪದದಿಂದ ಹಿಡಿದು ಶ್ರಮಗಾನದವರೆಗೆ ಅದು ಯಾವ ಭಾಷೆಯಲ್ಲಿಯೇ ಇರಲಿ ವಸ್ತು ಒಂದೇ.<br />
{{gap}} ಭಾರತೀಯ ಜಾನಪದ ನೃತ್ಯಗಳಲ್ಲಿ ವೈವಿಧ್ಯವಿದೆ. ಆದರೆ ಸುಗ್ಗಿಯ ಕುಣಿತವಿರಲಿ ಹಬ್ಬ ಹರಿದಿನಗಳ ನರ್ತನವಿರಲಿ ವಸ್ತು_ಪ್ರೇರಣೆ ಒಂದೇ. ಶಾಸ್ತ್ರೀಯ ನೃತ್ಯಗಳಿಗೆಲ್ಲ ಭರತನ ನಾಟ್ಯಶಾಸ್ತ್ರವೇ ಮೌಲಿಕ ಗ್ರಂಥ. ಕಥಕ್_ ಕಥಕ್ಕಳಿ- ಮಣಿಪುರಿ.....ಪ್ರತಿಯೊಂದು ಪ್ರಕಾರದ ಹಿಂದೆಯೂ ಶತಮಾನ ಗಳ ಶ್ರದ್ಧೆಯಿದೆ. ಭಾರತೀಯ ನೃತ್ಯವೆಂಬುದು ಇವೆಲ್ಲದರ ಮೊತ್ತ.<br />
{{gap}} ಶಿಲ್ಪಕಲೆ ಈ ದೇಶದಲ್ಲಿ ಹೊಸ ಹೊಸ ಪದ್ಧತಿಗಳನ್ನು ಮೈಗೂಡಿಸಿ ಕೊಂಡೇ ಬೆಳೆದಿದೆ. ಮಂದಿರ ಮಸೀದಿ, ಗೋರಿ, ಗುರುದ್ವಾರ ನಿರ್ಮಾಣ ವೈಖರಿ ಬೇರೆ ಬೇರೆ ಎಂದು ಕಂಡರೂ, ಎಲ್ಲದರಲ್ಲಾ ಸಮಾನ ಅಂಶಗಳಿವೆ.<br />
________
೨೫<noinclude></noinclude>
8hm00sgijku3m6fii8ae979wbr2l42i
316819
316818
2026-05-04T10:01:10Z
Ashwini Rai K
8475
316819
proofread-page
text/x-wiki
<noinclude><pagequality level="4" user="Ashwini Rai K" /></noinclude>
ಆಹ್ವಾನ
ತೀಯತ್ವಕ್ಕೆ ಸಾಕ್ಷಿ. ಭಾಸ, ಶೂದ್ರಕ, ಕಾಳಿದಾಸ, ವಿಶಾಖದತ್ತ,
ಭವಭೂತಿಯರ ಕೃತಿಗಳೆಲ್ಲ ಭಾರತೀಯ ಸಾಹಿತ್ಯ.
{{gap}}ಬಂಗಾಳಿಯಲ್ಲಿ ಬರೆದರೂ ರವೀಂದ್ರರು ಭಾರತೀಯ ಕವಿಯೆಂದು [ವಿಶ್ವಕವಿಯೆ೦ದು] ವಂದ್ಯರಾದರು. ತಮಿಳಿನ ಸುಬ್ರಹ್ಮಣ್ಯ ಭಾರತಿ ರಾಷ್ಟ್ರ ಕವಿ ಎನ್ನಿಸಿಕೊಂಡರು. ಅವರ ಕಾವ್ಯ ಸೃಷ್ಟಿಗೆ ಪ್ರೇರಣೆಯಾದ ಉದಾತ್ತ ಭಾವನೆಗಳೇ ಮಲೆಯಾಳೀ ಭಾಷೆಯಲ್ಲಿ ಮಹಾಕವಿ ವಲ್ಲತ್ತೋಳರ ಕೃತಿಗಳಿಗೆ
ಕಾರಣವಾದುವು.<br />
{{gap}}ಪದ್ಯದಲ್ಲಿ ಎಂತೋ ಪದ್ಯದಲ್ಲಿ ಅಂತೆಯೇ. ದ್ವಿಜೇಂದ್ರ ಲಾಲ್ ರಾಯ ಬರೆದ ನಾಟಕಗಳು_“ಅಹಲ್ಯಾ”“ಮೇವಾಡ ಪತನ""ಷ ಜಹಾನ್” ಭಾರತದ ಅನೇಕ ಭಾಷೆಗಳಲ್ಲಿ ಅಭಿನಯಿಸಲ್ಪಟ್ಟು ಜನರ ಮೆಚ್ಚುಗೆ ಗಳಿಸಿವೆ. ಶರತ್ ಸಾಹಿತ್ಯ, ಸಮಗ್ರ ಭಾರತಕ್ಕೆ ವಂಗಭಾಷೆ ನೀಡಿರುವ ಕಾಣ್ಕೆ.<br />
{{gap}}ಸಂಗೀತ, ಲಲಿತ ಕಲೆಗಳನ್ನು ಪರಿಶೀಲಿಸೋಣ.<br />
{{gap}} ಹಿಂದೂಸ್ಥಾನೀ ಮತ್ತು ಕರ್ನಾಟಕ ಸಂಗೀತಗಳು ಎರಡೂ ಪರಿಪುಷ್ಟ ವಾಗಿ ಬೆಳೆದಿರುವ ವಿಭಿನ್ನ ಶಾಸ್ತ್ರೀಯ ಪದ್ಧತಿಗಳಾದರೂ, ಅವುಗಳಲ್ಲಿ ಸಾಮ್ಯ ವಿರುವ ರಾಗಗಳು ಹೇರಳವಾಗಿವೆ. ಜಾನಪದ ಗೀತೆಗಳಲ್ಲಿ ಲಾಲೀಪದದಿಂದ ಹಿಡಿದು ಶ್ರಮಗಾನದವರೆಗೆ ಅದು ಯಾವ ಭಾಷೆಯಲ್ಲಿಯೇ ಇರಲಿ ವಸ್ತು ಒಂದೇ.<br />
{{gap}}ಭಾರತೀಯ ಜಾನಪದ ನೃತ್ಯಗಳಲ್ಲಿ ವೈವಿಧ್ಯವಿದೆ. ಆದರೆ ಸುಗ್ಗಿಯ ಕುಣಿತವಿರಲಿ ಹಬ್ಬ ಹರಿದಿನಗಳ ನರ್ತನವಿರಲಿ ವಸ್ತು_ಪ್ರೇರಣೆ ಒಂದೇ. ಶಾಸ್ತ್ರೀಯ ನೃತ್ಯಗಳಿಗೆಲ್ಲ ಭರತನ ನಾಟ್ಯಶಾಸ್ತ್ರವೇ ಮೌಲಿಕ ಗ್ರಂಥ. ಕಥಕ್_ ಕಥಕ್ಕಳಿ- ಮಣಿಪುರಿ.....ಪ್ರತಿಯೊಂದು ಪ್ರಕಾರದ ಹಿಂದೆಯೂ ಶತಮಾನ ಗಳ ಶ್ರದ್ಧೆಯಿದೆ. ಭಾರತೀಯ ನೃತ್ಯವೆಂಬುದು ಇವೆಲ್ಲದರ ಮೊತ್ತ.<br />
{{gap}} ಶಿಲ್ಪಕಲೆ ಈ ದೇಶದಲ್ಲಿ ಹೊಸ ಹೊಸ ಪದ್ಧತಿಗಳನ್ನು ಮೈಗೂಡಿಸಿ ಕೊಂಡೇ ಬೆಳೆದಿದೆ. ಮಂದಿರ ಮಸೀದಿ, ಗೋರಿ, ಗುರುದ್ವಾರ ನಿರ್ಮಾಣ ವೈಖರಿ ಬೇರೆ ಬೇರೆ ಎಂದು ಕಂಡರೂ, ಎಲ್ಲದರಲ್ಲಾ ಸಮಾನ ಅಂಶಗಳಿವೆ.<br />
________
೨೫<noinclude></noinclude>
56otbhy1ngzr6ii830opzd5d94gba6p
316820
316819
2026-05-04T10:01:35Z
Ashwini Rai K
8475
316820
proofread-page
text/x-wiki
<noinclude><pagequality level="4" user="Ashwini Rai K" /></noinclude>
ಆಹ್ವಾನ
ತೀಯತ್ವಕ್ಕೆ ಸಾಕ್ಷಿ. ಭಾಸ, ಶೂದ್ರಕ, ಕಾಳಿದಾಸ, ವಿಶಾಖದತ್ತ,
ಭವಭೂತಿಯರ ಕೃತಿಗಳೆಲ್ಲ ಭಾರತೀಯ ಸಾಹಿತ್ಯ.
{{gap}}ಬಂಗಾಳಿಯಲ್ಲಿ ಬರೆದರೂ ರವೀಂದ್ರರು ಭಾರತೀಯ ಕವಿಯೆಂದು [ವಿಶ್ವಕವಿಯೆ೦ದು] ವಂದ್ಯರಾದರು. ತಮಿಳಿನ ಸುಬ್ರಹ್ಮಣ್ಯ ಭಾರತಿ ರಾಷ್ಟ್ರ ಕವಿ ಎನ್ನಿಸಿಕೊಂಡರು. ಅವರ ಕಾವ್ಯ ಸೃಷ್ಟಿಗೆ ಪ್ರೇರಣೆಯಾದ ಉದಾತ್ತ ಭಾವನೆಗಳೇ ಮಲೆಯಾಳೀ ಭಾಷೆಯಲ್ಲಿ ಮಹಾಕವಿ ವಲ್ಲತ್ತೋಳರ ಕೃತಿಗಳಿಗೆ
ಕಾರಣವಾದುವು.<br />
{{gap}}ಪದ್ಯದಲ್ಲಿ ಎಂತೋ ಪದ್ಯದಲ್ಲಿ ಅಂತೆಯೇ. ದ್ವಿಜೇಂದ್ರ ಲಾಲ್ ರಾಯ ಬರೆದ ನಾಟಕಗಳು_“ಅಹಲ್ಯಾ”“ಮೇವಾಡ ಪತನ""ಷ ಜಹಾನ್” ಭಾರತದ ಅನೇಕ ಭಾಷೆಗಳಲ್ಲಿ ಅಭಿನಯಿಸಲ್ಪಟ್ಟು ಜನರ ಮೆಚ್ಚುಗೆ ಗಳಿಸಿವೆ. ಶರತ್ ಸಾಹಿತ್ಯ, ಸಮಗ್ರ ಭಾರತಕ್ಕೆ ವಂಗಭಾಷೆ ನೀಡಿರುವ ಕಾಣ್ಕೆ.<br />
{{gap}}ಸಂಗೀತ, ಲಲಿತ ಕಲೆಗಳನ್ನು ಪರಿಶೀಲಿಸೋಣ.<br />
{{gap}} ಹಿಂದೂಸ್ಥಾನೀ ಮತ್ತು ಕರ್ನಾಟಕ ಸಂಗೀತಗಳು ಎರಡೂ ಪರಿಪುಷ್ಟ ವಾಗಿ ಬೆಳೆದಿರುವ ವಿಭಿನ್ನ ಶಾಸ್ತ್ರೀಯ ಪದ್ಧತಿಗಳಾದರೂ, ಅವುಗಳಲ್ಲಿ ಸಾಮ್ಯ ವಿರುವ ರಾಗಗಳು ಹೇರಳವಾಗಿವೆ. ಜಾನಪದ ಗೀತೆಗಳಲ್ಲಿ ಲಾಲೀಪದದಿಂದ ಹಿಡಿದು ಶ್ರಮಗಾನದವರೆಗೆ ಅದು ಯಾವ ಭಾಷೆಯಲ್ಲಿಯೇ ಇರಲಿ ವಸ್ತು ಒಂದೇ.<br />
{{gap}}ಭಾರತೀಯ ಜಾನಪದ ನೃತ್ಯಗಳಲ್ಲಿ ವೈವಿಧ್ಯವಿದೆ. ಆದರೆ ಸುಗ್ಗಿಯ ಕುಣಿತವಿರಲಿ ಹಬ್ಬ ಹರಿದಿನಗಳ ನರ್ತನವಿರಲಿ ವಸ್ತು_ಪ್ರೇರಣೆ ಒಂದೇ. ಶಾಸ್ತ್ರೀಯ ನೃತ್ಯಗಳಿಗೆಲ್ಲ ಭರತನ ನಾಟ್ಯಶಾಸ್ತ್ರವೇ ಮೌಲಿಕ ಗ್ರಂಥ. ಕಥಕ್_ ಕಥಕ್ಕಳಿ- ಮಣಿಪುರಿ.....ಪ್ರತಿಯೊಂದು ಪ್ರಕಾರದ ಹಿಂದೆಯೂ ಶತಮಾನ ಗಳ ಶ್ರದ್ಧೆಯಿದೆ. ಭಾರತೀಯ ನೃತ್ಯವೆಂಬುದು ಇವೆಲ್ಲದರ ಮೊತ್ತ.<br />
{{gap}}ಶಿಲ್ಪಕಲೆ ಈ ದೇಶದಲ್ಲಿ ಹೊಸ ಹೊಸ ಪದ್ಧತಿಗಳನ್ನು ಮೈಗೂಡಿಸಿ ಕೊಂಡೇ ಬೆಳೆದಿದೆ. ಮಂದಿರ ಮಸೀದಿ, ಗೋರಿ, ಗುರುದ್ವಾರ ನಿರ್ಮಾಣ ವೈಖರಿ ಬೇರೆ ಬೇರೆ ಎಂದು ಕಂಡರೂ, ಎಲ್ಲದರಲ್ಲಾ ಸಮಾನ ಅಂಶಗಳಿವೆ.<br />
________
೨೫<noinclude></noinclude>
bjo1u8jtoxppzynuh2vbiv1umr546nr
ಪುಟ:AAHVANA.pdf/೨೮
104
19994
316822
63815
2026-05-04T10:03:33Z
Ashwini Rai K
8475
/* Validated */
316822
proofread-page
text/x-wiki
<noinclude><pagequality level="4" user="Ashwini Rai K" /></noinclude>
ಆಹ್ವಾನ
ಬುದ್ದ ಗೋಮಟೇಶ, ತ್ರಿಮೂರ್ತಿ_ಇವೆಲ್ಲ ಭಾರತೀಯ ಶಿಲ್ಪದ ಅಮೂಲ್ಯ ದಾಖಲೆಗಳಾಗಿವೆ.
{{gap}}ನಾಣ್ಣುಡಿಗಳಿಗೆ ಸಂಬಂಧಿಸಿಯೂ ಅಷ್ಟೇ. ಐದು ಸಹಸ್ರ ವರ್ಷ ಗಳ ಇತಿಹಾಸವಿರುವ ದೇಶದಲ್ಲಿ ಏಕಾರ್ಥದ ಗಾದೆಗಳು ಬೇರೆ ಬೇರೆ ಭಾಷೆ ಗಳಲ್ಲೂ ಅನೇಕವಿವೆ.
{{gap}}ಭಾರತೀಯ ಜನಜೀವನ, ಭಾಷೆ, ಸಾಹಿತ್ಯ, ಸಂಗೀತ ಮತ್ತಿತರ ಲಲಿತ ಕಲೆಗಳ ಸೂಕ್ಷ್ಮಾವಲೋಕನದಿಂದ ತಿಳಿದು ಬರುವುದು ಇಷ್ಟು :
{{gap}}ಪ್ರತಿಯೊಂದು ಕ್ಷೇತ್ರದಲ್ಲೂ ಬಿಡಿಬಿಡಿಯಾಗಿ ಕಾಣುವ ಬೇರೆಬೇರೆ
ಬಣ್ಣಗಳು ; ಒಟ್ಟಿನಲ್ಲಿ ಕಾಮನ ಬಿಲ್ಲು.
* * * * *
{{gap}}ಈವರೆಗಿನ ವಿವೇಚನೆ, “ಆಹ್ವಾನ” ನಾಟಕ ಮಾಲಿಕೆಯ ಆರು ಭಾಗಗಳನ್ನು ಕುರಿತದ್ದು.
''' ಉತ್ತೆರಾರ್ಧ'''
೧
{{gap}}“ಆಹ್ವಾನ” ನಾಟಕ ಮಾಲಿಕೆಯನ್ನು ನಾನು ಬರೆದುದು ೧೯೬೧ ರಲ್ಲಿ ; ಧಾರವಾಡದ ಆಕಾಶವಾಣಿ ಕೇಂದ್ರಕ್ಕೋಸ್ಕರ. ಆರು ಭಾಗಗಳಲ್ಲಿ ಅದು ಪ್ರಸಾರವಾಯಿತು. ಶ್ರೋತೃವರ್ಗದ ಅಪೇಕ್ಷೆಯಂತೆ ಆ ಕಾರ್ಯ ಕ್ರಮದ ಪುನಃ ಪ್ರಸಾರವೂ ನಡೆಯಿತು. ೧೯೬೨ ರಲ್ಲಿ ಬೆಂಗಳೂರು ನಿಲಯವೂ “ಆಹ್ವಾನ' ನಾಟಕಮಾಲಿಕೆಯನ್ನು ಬಿತ್ತರಿಸಿತು.
{{gap}}ಮುಖ್ಯವಾಗಿ ರೇಡಿಯೋ ಪ್ಪಸಾರಕ್ಕೆಂದೇ ಈ ಕೃತಿಯನ್ನು ರಚಿಸಿದೆ
ನಾದರೂ ರಂಗನಾಟಕವಾಗಿಯೂ ಅದನ್ನು ಅಭಿನಯಿಸುವ ಸಾಧ್ಯತೆಯನ್ನು
_______
೨೬<noinclude></noinclude>
p2nuql9w7l5ydfh0gww92sf56h9tq1r
316823
316822
2026-05-04T10:05:32Z
Ashwini Rai K
8475
316823
proofread-page
text/x-wiki
<noinclude><pagequality level="4" user="Ashwini Rai K" /></noinclude>
{{center|ಆಹ್ವಾನ}}
ಬುದ್ದ ಗೋಮಟೇಶ, ತ್ರಿಮೂರ್ತಿ_ಇವೆಲ್ಲ ಭಾರತೀಯ ಶಿಲ್ಪದ ಅಮೂಲ್ಯ ದಾಖಲೆಗಳಾಗಿವೆ.
{{gap}}ನಾಣ್ಣುಡಿಗಳಿಗೆ ಸಂಬಂಧಿಸಿಯೂ ಅಷ್ಟೇ. ಐದು ಸಹಸ್ರ ವರ್ಷ ಗಳ ಇತಿಹಾಸವಿರುವ ದೇಶದಲ್ಲಿ ಏಕಾರ್ಥದ ಗಾದೆಗಳು ಬೇರೆ ಬೇರೆ ಭಾಷೆ ಗಳಲ್ಲೂ ಅನೇಕವಿವೆ.
{{gap}}ಭಾರತೀಯ ಜನಜೀವನ, ಭಾಷೆ, ಸಾಹಿತ್ಯ, ಸಂಗೀತ ಮತ್ತಿತರ ಲಲಿತ ಕಲೆಗಳ ಸೂಕ್ಷ್ಮಾವಲೋಕನದಿಂದ ತಿಳಿದು ಬರುವುದು ಇಷ್ಟು :
{{gap}}ಪ್ರತಿಯೊಂದು ಕ್ಷೇತ್ರದಲ್ಲೂ ಬಿಡಿಬಿಡಿಯಾಗಿ ಕಾಣುವ ಬೇರೆಬೇರೆ
ಬಣ್ಣಗಳು ; ಒಟ್ಟಿನಲ್ಲಿ ಕಾಮನ ಬಿಲ್ಲು.
* * * * *
{{gap}}ಈವರೆಗಿನ ವಿವೇಚನೆ, “ಆಹ್ವಾನ” ನಾಟಕ ಮಾಲಿಕೆಯ ಆರು ಭಾಗಗಳನ್ನು ಕುರಿತದ್ದ
{{center|''' ಉತ್ತೆರಾರ್ಧ'''}}
{{center|೧}}
{{gap}}“ಆಹ್ವಾನ” ನಾಟಕ ಮಾಲಿಕೆಯನ್ನು ನಾನು ಬರೆದುದು ೧೯೬೧ ರಲ್ಲಿ ; ಧಾರವಾಡದ ಆಕಾಶವಾಣಿ ಕೇಂದ್ರಕ್ಕೋಸ್ಕರ. ಆರು ಭಾಗಗಳಲ್ಲಿ ಅದು ಪ್ರಸಾರವಾಯಿತು. ಶ್ರೋತೃವರ್ಗದ ಅಪೇಕ್ಷೆಯಂತೆ ಆ ಕಾರ್ಯ ಕ್ರಮದ ಪುನಃ ಪ್ರಸಾರವೂ ನಡೆಯಿತು. ೧೯೬೨ ರಲ್ಲಿ ಬೆಂಗಳೂರು ನಿಲಯವೂ “ಆಹ್ವಾನ' ನಾಟಕಮಾಲಿಕೆಯನ್ನು ಬಿತ್ತರಿಸಿತು.
{{gap}}ಮುಖ್ಯವಾಗಿ ರೇಡಿಯೋ ಪ್ಪಸಾರಕ್ಕೆಂದೇ ಈ ಕೃತಿಯನ್ನು ರಚಿಸಿದೆ
ನಾದರೂ ರಂಗನಾಟಕವಾಗಿಯೂ ಅದನ್ನು ಅಭಿನಯಿಸುವ ಸಾಧ್ಯತೆಯನ್ನು
_______
{{center|೨೬}}<noinclude></noinclude>
0y3hioeeiw3stu7vqvfw3krlf7m5h9f
ಪುಟ:AAHVANA.pdf/೩೪
104
20000
316773
261021
2026-05-04T09:17:00Z
Shreelatha.Halemane
7642
/* Validated */
316773
proofread-page
text/x-wiki
<noinclude><pagequality level="4" user="Shreelatha.Halemane" /></noinclude><br><br><br>
{{rh|center='''ಭಾರತ ಗಾಥಾ'''}}<br>
{{gap}}ರಂಗಸ್ಥಲವನ್ನು ಎರಡು ಭಾಗಗಳಾಗಿ ವಿ೦ಗಡಿಸಬೇಕು. ಮೂರನೆಯ ಒಂದು ಭಾಗ, (ಪ್ರೇಕ್ಷಕರ) ಎಡಕ್ಕೆ; ಮೂರನೆಯ ಎರೆಡು ಭಾಗ, ಬಲಕ್ಕೆ. ಎಡದಲ್ಲಿ ಇರಬೇಕಾದವರು ನಿರೂಪಕ ಹಾಗೂ ಇತಿಹಾಸಕಾರ. ಬಲದಲ್ಲಿ ಪಾತ್ರಗಳು. ಎಡ ಭಾಗದಲ್ಲಿ ರೂಪಕದುದ್ದಕ್ಕೂ ಶುಭ್ರ ಬೆಳಕಿರುತ್ತದೆ. ನಿರೂಪಿತ ಘಟನೆ ನಡೆಯುವಾಗಲಷ್ಟೇ ಬಲಭಾಗದಲ್ಲಿ ಬೆಳಕು. ಇಲ್ಲಿ ಬೆಳಕು ಮೊದಲು ಮಸಕಾಗಿದ್ದು ಕ್ರಮೇಣ ಶುಭ್ರಗೊಳ್ಳಬೇಕು. ಘಟನೆ [ಹಾಡುಗಾರಿಕೆ, ಶ್ಲೋಕ ಪಠನ, ಘೋಷಣೆ ಅಥವಾ ನಾಟಕದ ಭಾಗ] ಮುಗಿಯುತ್ತ ಬಂದಂತೆ ಬೆಳಕು ನಿಧಾನವಾಗಿ ಮತ್ತೆ ಮಸಕುಗೊಂಡು ರಂಗಸ್ಥಲದ ಆ ಭಾಗವನ್ನು ಕತ್ತಲು ಕವಿಯಬೇಕು.<br>
{{gap}}ಈ ರೂಪಕದಲ್ಲಿ ನಿರೂಪಕನೂ ಇತಿಹಾಸಕಾರನೂ ಪರಸ್ಪರ ಪೂರಕರು; ವಸ್ತು ಸ್ಥಿತಿಯ ನಿವೇದಕರು. ಘಟನೆಗಳು ನಡೆಯುವಾಗ ಯಾವ ಪ್ರತಿಕ್ರಿಯೆಯನ್ನೂ ಅವರು ವ್ಯಕ್ತಪಡಿಸುವ ಅಗತ್ಯವಿಲ್ಲ.
{{rh|center='''______'''}}
{{rh|center=''' ೩೩'''}}<noinclude></noinclude>
ecj2l8xequc1ya2us3n7kasqsxg5cfa
ಪುಟ:AAHVANA.pdf/೩೫
104
20001
316774
275954
2026-05-04T09:18:00Z
Shreelatha.Halemane
7642
/* Validated */
316774
proofread-page
text/x-wiki
<noinclude><pagequality level="4" user="Shreelatha.Halemane" /></noinclude>'''ಪ್ರಧಾನ ಮ೦ತ್ರಿ ಜವಾಹರಲಾಲರ ಮುನ್ನುಡಿ : '''<br>
<p>“ನಾವೊಂದು ನವಭಾರತವನ್ನು ನಿರ್ಮಿಸುತ್ತಿದ್ದೇವೆ: ನೂತನ ಜಗತ್ತನ್ನು ಕಟ್ಟುತ್ತಿದ್ದೇವೆ. ಅದಕ್ಕಾದರೋ ಐಕ್ಯವು ಅತ್ಯಂತ ಮಹತ್ವದ್ದಾಗಿದೆ. ಈ ಅಂಶವನ್ನು ಮನಗಾಣಬೇಕೆಂದು ಭಾರತದ ಜನತೆಗೆ ನಾನು ವಿನಂತಿ ಮಾಡುತ್ತಿದ್ದೇನೆ. ಜನತೆಯ ಮನಸ್ಸು ಮತ್ತು ಹೃದಯಗಳ ಏಕತೆಯನ್ನು ನಾವು ಬೆಳಸಬೇಕಾಗಿದೆ. ತನ್ಮೂಲಕ ಭಾವೈಕ್ಯವನ್ನು ಸಾಧಿಸಬೇಕಾಗಿದೆ. ಈ ದಿನ ಭಾರತದಲ್ಲಿ ಅತ್ಯಂತ ಮಹತ್ತರವಾದುದು, ಶಿಸ್ತಿನ ಹಾಗೂ ಕೂಡಿ
ಮನ್ನಡೆಯುವ ಏಕತೆ ಮಾತ್ರವಲ್ಲ-ಈಗ ಅತ್ಯಗತ್ಯವಾಗಿರುವುದು, ಜನತೆಯ
ಮನಸ್ಸುಗಳ ಹಾಗೂ ಹೃದಯಗಳ ಐಕ್ಯ ; ಮಾನಸಿಕ ಮತ್ತು ಚೇತನದ ಐಕ್ಯ
'''ಮೇಳಗಾನ:'''
{{c|<poem> "ವಂದೇ ಮಾತರಂ........
ಶ್ರೀಶಕೋಟಿಕಂಠ_ಕಲಕಲ ನಿನಾದ ಕರಾಳೆ
ದ್ವಿತ್ರೀಶಕೋಟ ಭುಜೈಧೃತ ಖರ ಕರವಾಲೆ
ಕೀ ಬೋಲೇ ಮಾ ತುಮಿ ಅಬಲೆ
ಬಹು ಬಲ ಧಾರಿಣೀಂ ನಮಾಮಿ ತಾರಿಣೀಂ
ರಿಪು ಬಲ ವಾರಿಣೀಂ ಮಾತರಂ ವಂದೇ ಮಾತರಂ........</poem>}}
'''ನಿರೂಪಕ:'''
<p> ಭಾರತಗಾಥಾ ! ಇದು, ಆರೇಳು ಸಾವಿರ ವರುಷಗಳ ಕಾಲಾವಧಿಯ ಮಹಾ ನಾಗರಿಕತೆಯೊಂದರ ಕಥೆ........ ಈ ಶತಮಾನದ ಆದಿಯಲ್ಲಿ ಜರ್ಮನಿಯ ವಿಖ್ಯಾತ ತತ್ವಜ್ಞಾನಿ ಕೌಂಟ್ ಹೆರ್ಮಾನ್ ಕೇಸರ್ ಲಿಂಗ್ ಭಾರತ ದರ್ಶನಕ್ಕೆಂದು ಬಂದು ರಾಮೇಶ್ವರದಲ್ಲಿಳಿದರು.
{{c|_____}}
{{c|೩೫}}<noinclude></noinclude>
1k7rdjr8fmypxrp3o9uu4v7ttu1w8no
ಪುಟ:AAHVANA.pdf/೩೬
104
20002
316776
275959
2026-05-04T09:18:56Z
Shreelatha.Halemane
7642
/* Validated */
316776
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{c|ಆಹ್ವಾನ}}
{{larger|'''ಕೇಸರ್ ಲಿಂಗ್:'''}}
"ಭರತಭೂಮಿಯ ಬಗೆಗೆ ಎಂತ ಅದ್ಭುತ ಮೊದಲ ಪರಿಚಯ.....ನಿಜವಾಗಿಯೂ ಇಡಿಯ ಹಿಂದೂದೇಶದ ಪ್ರಾತಿನಿಧಿಕ ರೂಪವನ್ನೇ ನಾನಿಲ್ಲಿ ಕಾಣುವಂತಿದೆ. ಪ್ರತಿಯೊಂದು ಬಣ್ಣವನ್ನು, ಪ್ರತಿಯೊಂದು ಉಡುಪನ್ನು, ನಸುಗಪ್ಪು ತಮಿಳರಿಂದ ಹಿಡಿದು ಕಾಶ್ಮೀರದ ಶ್ವೇತ ವರ್ಣೀಯರವರೆಗಿನ ಎಲ್ಲಾ ರೀತಿಗಳ ಜನರನ್ನು ನಾನು ನೋಡುತ್ತಿದ್ದೇನೆ. ಇಲ್ಲಿ, ಸ್ವಾಭಿಮಾನಿಗಳಾದ ರಜಪೂತರಿದ್ದಾರೆ; ತಲೆಗೂದಲು ಜಟೆಗಟ್ಟದ ಸನ್ಯಾಸಿಗಳಿದ್ದಾರೆ. ಅಸಂಖ್ಯ ಭಾಷೆಗಳ ಭಾಷಾ ಪ್ರಭೇದಗಳ ಕಲರವದಿಂದ ವಾತಾವರಣ ತುಂಬಿದೆ. ನೂರು ವಿಭಿನ್ನ ಪರಂಪರೆಗಳು ನೂರು ಬೇರೆ ಬೇರೆ ಮುಖಗಳಿಂದ ಮಾತಾಡುತ್ತಿವೆ. ಜಾತಿ ಜಾತಿಯೊಡನೆ, ಪೂರ್ವಗ್ರಹ ಪೂರ್ವಗ್ರಹ ದೊಡನೆ ಮೈಯೊರಸುತ್ತಿವೆ. ಜನರೊಳಗಿನ ಈ ತೆರನಾದ ವೈವಿಧ್ಯವನ್ನು ಹಿಂದೆಂದೂ ನಾನು ಕಂಡುದಿಲ್ಲ."
{{larger|'''ನಿರೂಪಕ :'''}}
ಇಂತಹ ವಿವಿಧತೆಯಲ್ಲೂ ತೋರಿಬರುವ ಏಕತೆಯೇ ಭಾರತದ ಹೆಗ್ಗಳಿಕೆ. ಈ ಭೂಖಂಡದಲ್ಲಿ ನಾಗರಿಕತೆಯ ಮೊದಲ ಕುರುಹು ಕಾಣಿಸಿಕೊಂಡ ಕಾಲದಿಂದ ಈವರೆಗೆ, ಜನಪದವನ್ನು ಬಿಗಿದಿರುವುದು ಇದೇ ಏಕತೆಯ ಸೂತ್ರ. ....ಉತ್ತರದಲ್ಲಿ ಹಿಮಾಚ್ಛಾದಿತ ಪರ್ವತಾವಳಿ,_ಉಳಿದ ಮೂರೂ ದಿಕ್ಕು ಗಳಲ್ಲಿ ವಿಸ್ತಾರವಾಗಿ ಮೈ ಚಾಚಿರುವ ಕಡಲು ; ತುಂಬಿ ಹರಿಯುವ ನದೀ ನದಗಳು ; ಕಣ್ಣು ತಣಿಸುವ ಹಸಿರು ಸಿರಿಯನ್ನು ಹೊತ್ತ ಫಲವತ್ತಾದ ನೆಲ_ಇಲ್ಲಿ, ಕ್ರಿಸ್ತಪೂರ್ವ ಮೂರು ಸಾವಿರ ವರ್ಷಗಳ ಸುಮಾರಿಗೆ ನಾಗರಿಕ ಜನ ವಾಸವಾಗಿದ್ದರು. ಸಿಂಧೂ ಕೊಳ್ಳದ ಆ ಉಚ್ಚ ಸಂಸ್ಕೃತಿಗೆ, ಹರಪ್ಪಾ_ಮೊಹೆಂಜೊದಾರೊಗಳು ಸಾಕ್ಷಿ, ಮುಂದೆ ಜಂಬೂ ದ್ವೀಪಕ್ಕೆ ನುಗ್ಗಿಬಂದ ಹೊಸ ನೀರೇ, ಆರ್ಯರ ಆಗಮನ. ಅವರ ಪ್ರಮುಖನೊಬ್ಬನಾದ ಅರಸು ಭರತನಿಂದ ಈ ದೇಶ ಭರತವರ್ಷವಾಯಿತು. ಅಗ್ನಿಪೂಜಕ ಆರ್ಯರ ಸಹಸ್ರಾರು ಸಂವತ್ಸರಗಳ ಸಾಂಸ್ಕೃತಿಕ ಬೆಳವಣಿಗೆಯ ಘನೀರೂಪವೇ ಋಗ್ವೇದ.
{{c|_______}}
{{c|೩೬}}<noinclude></noinclude>
bokxi4mk7smb15eu3flgbsi04a96k1u
ಪುಟ:AAHVANA.pdf/೮೩
104
20049
316797
150406
2026-05-04T09:28:32Z
Shreelatha.Halemane
7642
/* Proofread */
316797
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ಆಹ್ವಾನ}}
'''ಚಂದ್ರಗುಪ್ತ''' :
ವಂಚನೆ! [ವ್ಯಥೆ ನಟಿಸುತ್ತ] ವಂಚಿತನಾಗಿರುವವನು ನಾನು ಮಹಾಪ್ರಭು,
'''ಅಲೆಗ್ಸಾಂಡರ್''' :
[ಆಶ್ಚರ್ಯದಿಂದ]
ಏನು ? -
'''ಚಂದ್ರಗುಪ್ತ''' :
ಮಗಧ ಸಿಂಹಾಸನಕ್ಕೆ ನಾನು ಹಕ್ಕುದಾರ.
'''ಅಲೆಗ್ಸಾಂಡರ್''' :
ಒಹೊಹೋ! . . . . . . . . . . . . ಹುಂ, ಸರಿ, ರಾಜಾ ಚಂದ್ರಗುಪ್ತ, [ಧನಿ ಏರಿಸಿ] ನಿಮ್ಮ ಮಾತೇನಾದರೂ ಸುಳ್ಳಾಯಿತು ಅಂದರೆ--
'''ಚಂದ್ರಗುಪ್ತ''':
ಈ ಶಿರಸ್ಸನ್ನು ಚೆಂಡಾಡುವಿರಂತೆ.
'''ಅಲೆಗ್ಸಾಂಡರ್''' :
ಆಗಲಿ, ಮಗಧದ ಮೇಲೆ ಧಾಳಿ ನಡಸೋಣ.
'''ಪ್ರೊಫೆಸರ್''' : -
ಆ ದಂಡಯಾತ್ರೆ ನೆರವೇರಲಿಲ್ಲ. ಹುಟ್ಟೂರಿಗಾಗಿ ಹಂಬಲಿಸಿದ ಗ್ರೀಕ್ ಸೈನಿಕರು, ಇನ್ನು ಸಾಕು-ಎಂದರು. ಅಲೆಗ್ಸಾಂಡರ್ ಸ್ವದೇಶಕ್ಕೆ ಅಭಿಮುಖವಾಗಿ ನಿರ್ಗಮಿಸಿದ. ಬೇಗನೆ ಮರಳಿ ಬರುತ್ತೇನೆ-ಎಂದಿರಬೇಕು ಚಂದ್ರ ಗುಪ್ತನಿಗೆ!
'''ಗಂಗಾಶರಣ್'''
ಆಗ ಆ ಗ್ರೀಕ್ ವೀರನಿಗಿನ್ನೂ ಮೂವತ್ತೆರಡು ವರ್ಷ ವಯಸ್ಸು.
'''ಕಾವೇರಿ''' :
ಎಷ್ಟು ಚಿಕ್ಕ ಪ್ರಾಯ!<noinclude></noinclude>
kcw87qwtj87x5zk8d8b19hyasvk1pte
ಪುಟ:ಹಗಲಿರುಳು.djvu/೧
104
38599
316579
292939
2026-05-03T16:38:33Z
Vikashegde
1258
/* Without text */
316579
proofread-page
text/x-wiki
<noinclude><pagequality level="0" user="Vikashegde" /></noinclude><noinclude></noinclude>
ttvonnlzfeaaugborzg10bkrmnkhx32
ಪುಟ:ಹಗಲಿರುಳು.djvu/೨
104
38600
316578
292952
2026-05-03T16:38:10Z
Vikashegde
1258
/* Without text */
316578
proofread-page
text/x-wiki
<noinclude><pagequality level="0" user="Vikashegde" /></noinclude><noinclude></noinclude>
ttvonnlzfeaaugborzg10bkrmnkhx32
ಪುಟ:ಹಗಲಿರುಳು.djvu/೭
104
38605
316581
292957
2026-05-03T16:39:03Z
Vikashegde
1258
/* Without text */
316581
proofread-page
text/x-wiki
<noinclude><pagequality level="0" user="Vikashegde" /></noinclude><noinclude></noinclude>
ttvonnlzfeaaugborzg10bkrmnkhx32
ಪುಟ:ಹಗಲಿರುಳು.djvu/೯
104
38607
316582
292962
2026-05-03T16:39:28Z
Vikashegde
1258
/* Without text */
316582
proofread-page
text/x-wiki
<noinclude><pagequality level="0" user="Vikashegde" /></noinclude><noinclude></noinclude>
ttvonnlzfeaaugborzg10bkrmnkhx32
ಪುಟ:ಹಗಲಿರುಳು.djvu/೨೭
104
38625
316574
284870
2026-05-03T16:30:59Z
Vikashegde
1258
/* Validated */
316574
proofread-page
text/x-wiki
<noinclude><pagequality level="4" user="Vikashegde" /><small>{{rh|center=ಕನ್ನಡ ಕೋಗಿಲೆ, ಮೇ ೧೯೧೮|left=೧೮|right=}}</small></noinclude>ಳುತನವು ಲೋಕದಲ್ಲಿ ಬಲವಾಗಿದೆ. ಅವನ ಧ್ವಜವೆ, ಎಲ್ಲೆಲ್ಲಿಯೂ ಸ್ಥಾಪಿತವಾಗಿದೆ. ದಾರಿಹೋಕರಿಗೂ, ಅವನೆ ಒಂದು ಕೈದೀಪವಂತೆ. ಅದೆ ಆರ್ಯಮತಾಭಿಮಾನದ ಲಕ್ಷಣವಂತೆ. ನಮ್ಮ ನಕ್ಷತ್ರಸಮೂಹವು, ಮುತ್ತು ವಜ್ರಗಳಂತೆ ತಳತಳಿಸುತ್ತಿದ್ದರೂ, ಅದು ಅವರ ದಾರಿಯನ್ನು ಪ್ರಕಾಶಪಡಿಸುವುದಿಲ್ಲವಂತೆ. ರಾಣಿರಾತ್ರಿಯ, ಮೈದುನಿಕತ್ತಲೆಯ, ಹಿತಬೋಧೆಗಳೆಲ್ಲವನ್ನೂ, ನೀಚರು ನಿರಾಕರಿಸಿದರು. ಅದಂತಿರಲಿ, ನೀನು ಹೀಗೆ ಪ್ರಕಾಶಿಸುತ್ತ ಸರ್ವಸಮವಾಗಿ, ಲೋಕವನ್ನು ಬೆಳಗುತ್ತಿರುವೆಯಷ್ಟೆ! ಆದರೂ, ಅದೇ ನೋಡು! ಹಲವರು ಆ ಉರಿದೀಪಗಳನ್ನೆ ಹಿಡಿದುಕೊಂಡು ನಡೆಯುತ್ತಾರೆ. ಇದಕ್ಕಿಂತಲೂ ರಾಜದ್ರೋಹವಿನ್ನೇನು?
'''ನಕ್ಷತ್ರಪತಿ:'''- ಇರಲಿ, ಆದಿಯಲ್ಲಿ, ಯಾವ ಜನಾಂಗದಲ್ಲಿಯೂ, ಅಂಥ ಆಗ್ರಹವಿರುವುದು ಪ್ರಕೃತಿ. ಕಾಲಗಳೆದಂತೆ, ವಿಷಯಜ್ಞಾನವಾಗಿ ದಾರಿಗೆ ಬರಬೇಕು. ಒಬ್ಬ ವಿದ್ಯಾರ್ಥಿ ವಿದ್ಯಾಭ್ಯಾಸವೆಂಬ ಮದ್ದನ್ನು ಸಂಪೂರ್ಣವಾಗಿ ಸೇವಿಸಿದರೂ, ಅವನ ದುರ್ಗುಣರೋಗದ ಅಶಕ್ತಿ ವಾಸಿಯಾಗದು. ಅದು ಕಾಲಕ್ರಮದಿಂದಲೆ ಗುಣವಾಗಬೇಕು. ಮೊಳೆವಾಗಲೆ ಮೊಗ್ಗೆ ಹಣ್ಣೀವುದೆ?
{{gap}}ಮೊದಲು, ನಯಭಯಗಳಿಂದ, ಅವರಿಗೆ ತಿಳಿಸಬೇಕು. ಸಾಕಾಗದಿದ್ದರೆ ಅವರ ಒಳಗೊಳಗೆ ಭೇದದ ಬಿತ್ತನ್ನು ಬಿತ್ತಬೇಕು. ಅದೂ ಗುರಿಮುಟ್ಟದಿದ್ದರೆ 'ಹಾವು ಸಾಯಬಾರದು, ಕೋಲು ಮುರಿಯಬಾರದು' ಎಂಬಂತೆ ಶಿಕ್ಷೆಯ ಬಿಸಿಮುಟ್ಟಿಸಬೇಕು. ಕಡೆಗೆ, ಕುಣಿಯಲ್ಲಿ ಬಿದ್ದ ಆನೆಯಂತೆ ತಾವೇ ಪಳಗುವರು.
'''ಕವಿ''':- ನಿನ್ನ ಈ ದೀರ್ಘಾಲೋಚನೆ, ನಮಗೂ ಸಮ್ಮತವೆ. ನಾವಾದರೂ, ಈವರೆಗೆ ಸುಮ್ಮನಿರಲಿಲ್ಲ. ಆ ತೇಜಸ್ವಿಯ ಒಡನಾಡಿಯಾದ ಸದಾಗತಿಯನ್ನು ಕುರಿತು, ಬಹಳವಾಗಿ ಹೀಗೆ ಬೋಧಿಸಿದೆವು. "ಆರ್ಯನ ಅನುಚರನಾಗಿ, ಬೆವರುಬಿಚ್ಚಿಸಿಕೊಂಡು ಕೆಲಸಮಾಡುವುದು ಬಹಳ ಕಷ್ಟ. ನೋಡು, ನಿನ್ನ ಅಂದಿನ ಮೈಯ್ಯಸೂಡಿನ ಉಗುರುಬಿಸಿ ಇನ್ನೂ ಆರಲಿಲ್ಲ. ನಮ್ಮೊಡೆಯನೊಳಗಾದರೆ, ಎಷ್ಟು ತಂಪಾಗಿ ಬಾಳಬಹುದು! ಇದಕ್ಕೆ ನಾವೆ ದೃಷ್ಟಾಂತವು.<noinclude><small>* ಕವಿ= ಶುಕ್ರ, ಕವಿ.</small></noinclude>
h7wizo1rrcmuzidh2cmhp3nzw01aaz6
316575
316574
2026-05-03T16:31:42Z
Vikashegde
1258
316575
proofread-page
text/x-wiki
<noinclude><pagequality level="4" user="Vikashegde" /><small>{{rh|center=ಕನ್ನಡ ಕೋಗಿಲೆ, ಮೇ ೧೯೧೮|left=೧೮|right=}}</small></noinclude>ಳುತನವು ಲೋಕದಲ್ಲಿ ಬಲವಾಗಿದೆ. ಅವನ ಧ್ವಜವೆ, ಎಲ್ಲೆಲ್ಲಿಯೂ ಸ್ಥಾಪಿತವಾಗಿದೆ. ದಾರಿಹೋಕರಿಗೂ, ಅವನೆ ಒಂದು ಕೈದೀಪವಂತೆ. ಅದೆ ಆರ್ಯಮತಾಭಿಮಾನದ ಲಕ್ಷಣವಂತೆ. ನಮ್ಮ ನಕ್ಷತ್ರಸಮೂಹವು, ಮುತ್ತು ವಜ್ರಗಳಂತೆ ತಳತಳಿಸುತ್ತಿದ್ದರೂ, ಅದು ಅವರ ದಾರಿಯನ್ನು ಪ್ರಕಾಶಪಡಿಸುವುದಿಲ್ಲವಂತೆ. ರಾಣಿರಾತ್ರಿಯ, ಮೈದುನಿಕತ್ತಲೆಯ, ಹಿತಬೋಧೆಗಳೆಲ್ಲವನ್ನೂ, ನೀಚರು ನಿರಾಕರಿಸಿದರು. ಅದಂತಿರಲಿ, ನೀನು ಹೀಗೆ ಪ್ರಕಾಶಿಸುತ್ತ ಸರ್ವಸಮವಾಗಿ, ಲೋಕವನ್ನು ಬೆಳಗುತ್ತಿರುವೆಯಷ್ಟೆ! ಆದರೂ, ಅದೇ ನೋಡು! ಹಲವರು ಆ ಉರಿದೀಪಗಳನ್ನೆ ಹಿಡಿದುಕೊಂಡು ನಡೆಯುತ್ತಾರೆ. ಇದಕ್ಕಿಂತಲೂ ರಾಜದ್ರೋಹವಿನ್ನೇನು?
'''ನಕ್ಷತ್ರಪತಿ:'''- ಇರಲಿ, ಆದಿಯಲ್ಲಿ, ಯಾವ ಜನಾಂಗದಲ್ಲಿಯೂ, ಅಂಥ ಆಗ್ರಹವಿರುವುದು ಪ್ರಕೃತಿ. ಕಾಲಗಳೆದಂತೆ, ವಿಷಯಜ್ಞಾನವಾಗಿ ದಾರಿಗೆ ಬರಬೇಕು. ಒಬ್ಬ ವಿದ್ಯಾರ್ಥಿ ವಿದ್ಯಾಭ್ಯಾಸವೆಂಬ ಮದ್ದನ್ನು ಸಂಪೂರ್ಣವಾಗಿ ಸೇವಿಸಿದರೂ, ಅವನ ದುರ್ಗುಣರೋಗದ ಅಶಕ್ತಿ ವಾಸಿಯಾಗದು. ಅದು ಕಾಲಕ್ರಮದಿಂದಲೆ ಗುಣವಾಗಬೇಕು. ಮೊಳೆವಾಗಲೆ ಮೊಗ್ಗೆ ಹಣ್ಣೀವುದೆ?
{{gap}}ಮೊದಲು, ನಯಭಯಗಳಿಂದ, ಅವರಿಗೆ ತಿಳಿಸಬೇಕು. ಸಾಕಾಗದಿದ್ದರೆ ಅವರ ಒಳಗೊಳಗೆ ಭೇದದ ಬಿತ್ತನ್ನು ಬಿತ್ತಬೇಕು. ಅದೂ ಗುರಿಮುಟ್ಟದಿದ್ದರೆ 'ಹಾವು ಸಾಯಬಾರದು, ಕೋಲು ಮುರಿಯಬಾರದು' ಎಂಬಂತೆ ಶಿಕ್ಷೆಯ ಬಿಸಿಮುಟ್ಟಿಸಬೇಕು. ಕಡೆಗೆ, ಕುಣಿಯಲ್ಲಿ ಬಿದ್ದ ಆನೆಯಂತೆ ತಾವೇ ಪಳಗುವರು.
'''ಕವಿ''':- ನಿನ್ನ ಈ ದೀರ್ಘಾಲೋಚನೆ, ನಮಗೂ ಸಮ್ಮತವೆ. ನಾವಾದರೂ, ಈವರೆಗೆ ಸುಮ್ಮನಿರಲಿಲ್ಲ. ಆ ತೇಜಸ್ವಿಯ ಒಡನಾಡಿಯಾದ ಸದಾಗತಿಯನ್ನು ಕುರಿತು, ಬಹಳವಾಗಿ ಹೀಗೆ ಬೋಧಿಸಿದೆವು. "ಆರ್ಯನ ಅನುಚರನಾಗಿ, ಬೆವರುಬಿಚ್ಚಿಸಿಕೊಂಡು ಕೆಲಸಮಾಡುವುದು ಬಹಳ ಕಷ್ಟ. ನೋಡು, ನಿನ್ನ ಅಂದಿನ ಮೈಯ್ಯಸೂಡಿನ ಉಗುರುಬಿಸಿ ಇನ್ನೂ ಆರಲಿಲ್ಲ. ನಮ್ಮೊಡೆಯನೊಳಗಾದರೆ, ಎಷ್ಟು ತಂಪಾಗಿ ಬಾಳಬಹುದು! ಇದಕ್ಕೆ ನಾವೆ ದೃಷ್ಟಾಂತವು.<noinclude>
<small>* ಕವಿ= ಶುಕ್ರ, ಕವಿ.</small></noinclude>
0gkn9e9xe2zj6c2x72wurvjb6xbk745
ಪುಟ:ಹಗಲಿರುಳು.djvu/೨೮
104
38626
316577
284895
2026-05-03T16:37:12Z
Vikashegde
1258
/* Validated */
316577
proofread-page
text/x-wiki
<noinclude><pagequality level="4" user="Vikashegde" /><small>{{rh|left=|center=ಹಗಲಿರುಳು.|right=೧೯}}</small></noinclude>{{gap}}ಆ ಆರ್ಯನ ರೀತಿಯ ಗುಟ್ಟನ್ನು ಬಿಚ್ಚುವ ಮಾತು ಇನ್ನೊಂದು. ಈನಮ್ಮ ಶನೈಶ್ಚರನೆಂದರೆ, ನಿಮ್ಮ ಆರ್ಯನ ಪುತ್ರನೆಂಬುದು ಎಲ್ಲರಿಗೂ ತಿಳಿದ ಸಂಗತಿಯಷ್ಟೆ. ಇವನು, ಆ ತಂದೆಯ ಪೋಷಣೆಯಲ್ಲಿಯೇ ಇದ್ದು, ಬೇಸತ್ತು ಮಂದನಾಗಿದ್ದರೂ, ಕಡೆಗೆ, ಹೇಗೋ ಅಲ್ಲಿಂದ ಹೊರಟು ಇಲ್ಲಿಗೆ ಬಂದಂದಿನಿಂದ, ನಮ್ಮ ಈ ರಾಜಹಿತನಾಗಿ ಬಹಳ ಪ್ರಸಿದ್ಧನಾಗಿದ್ದಾನೆ. ಮಗನ ಮೋರೆಯನ್ನೆ ನೋಡದವನಿಗೆ ಮಂದಿಯಲ್ಲಿ ಮಮತೆಯೆ? ಇದು ಸುಳ್ಳೋ, ಬದ್ಧವೊ ಎಂಬುದನ್ನು ಇವನಲ್ಲಿ ಕೇಳಿ ತಿಳಿದುಕೊಳ್ಳಬಹುದು. ಬೇರು ಬಲ್ಲವರಿರುವಾಗ ಎಲೆ ಮೂಸುವುದೇಕೆ? ಹೆಚ್ಚೇನು, ಆ ತೇಜಸ್ವಿಗೆ ಟಿಕ್ಕಿನ ಹರಳಿನಂತೆ ಮೇಲಿಂದಮೇಲೆ ಕಣ್ಣುಗಟ್ಟುವ ಹೊಳಪಲ್ಲದೆ ಒಳಗಿಂದೊಳಗೆ ಹಾಗಿಲ್ಲ. ಆತನ ನಡತೆಯ ನಿರೀಕ್ಷಣೆಗಾಗಿ ಹಿಂದಕ್ಕೆ ತಿರುಗಿ ನೋಡು. ಅವನು ಹೋದಲ್ಲಿ ಕಪ್ಪು, ಬಂದಲ್ಲಿ ಕಪ್ಪು, ಅದರಿಂದಲೆ ಅವನಿಗೆ ಆದಿಯಿಂದಲೇ ಕೃಷ್ಣವರ್ತ್ಮನೆಂಬ ಹೆಸರು. ಅವನೊಡನೆಯೇ, ಇನ್ನೂ ಇದ್ದರೆ, ಬರಿಗಲ್ಲಿಗೆ ನಿರರ್ಥಕವಾಗಿ ಬೆಲೆಗೊಟ್ಟು ತಲೆಗೆಟ್ಟಂತಾಗುವುದು. ನಿನ್ನ ಹಿತಕ್ಕಾಗಿಯೆ ಇಷ್ಟೆಲ್ಲ ಹೇಳುತ್ತೇವೆಯಲ್ಲದೆ, ಇದರಿಂದ ನಮಗೇನೂ ಲಾಭವಿಲ್ಲ."
{{gap}}[ಇದು ಅವನ ಕಿವಿದುಂಬಿಸಿದ ಮಾತಿನ ಪಟ್ಟಿ. ಅವನ ಎಣಿಕೆಯೂ ಈಗ ಅತ್ತಿತ್ತ ಒಯ್ದಳೆಯಹತ್ತಿದೆ. ಆದರೇನು? ಲೋಕದ ಮನಸ್ಸು ಒಂದಿಷ್ಟೂ ಕದಲಲಿಲ್ಲ.]
'''ನಕ್ಷತ್ರಪತಿ''':- ನಿಮ್ಮ ಉಪಾಯವು ಬಹಳ ಅಚ್ಚುಗಟ್ಟಿನದು. 'ತಲೆಹೊಕ್ಕರೆ ತಾನೇ ಹೋಗಬಹುದು' ಎಂಬುದು ಹಲವುಕಡೆಗಳಲ್ಲಿ ಅನುಭವಕ್ಕೆ ಬಂದ ಸಂಗತಿ. ಸೆರೆಯಲ್ಲಿ ಹೊಕ್ಕ ನೀರು, ಹಡಗನ್ನೆ ಮುಳುಗಿಸಿ ತನ್ನ ಒಳ ಪರಿಸಿಬಿಡುವುದಲ್ಲವೆ? ಆದರೆ, ಈಗ ನಮ್ಮ ಗುಟ್ಟಿನ ಆಳವನ್ನು ಮಾತ್ರ ಅಂಥವರಿಗೆ ಕಾಣಿಸದೆ ಗಂಭೀರವಾಗಿರಬೇಕು. ಅಲ್ಲವಾದರೆ ಅಪಾಯವು ಆವರಿಸಿಬಿಡುವುದು, ನೋಡು, ನೀರು ಮಾತ್ರವೆ ಸೆರೆಗಳಲ್ಲಿ ಮೇಲೊ{{nop}}<noinclude>
<small>೧ ಮಂದ = ಶನಿ, ಮೂಢ. ೨ ಕೃಷ್ಣವರ್ತ್ಮ = ಅಗ್ನಿ, ದುರ್ಮಾರ್ಗಿ.</small></noinclude>
qwpryszpi35bui0ypyheniu6c4cq1jd
ಪುಟ:ಮನಮಂಥನ.pdf/೩೨
104
62479
316535
314341
2026-05-03T14:15:42Z
Shreesha Sharma
7840
/* Validated */
316535
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಆತಂಕ}}{{Right|೧೩}}
ತಾಯ್ತಂದೆಯರ, ಅಕ್ಕತಂಗಿಯರ, ಅಣ್ಣತಮ್ಮಂದಿರ ಆರೋಗ್ಯವನ್ನೂ
ಜಾಯಮಾನವನ್ನೂ ವಿಚಾರಿಸಿದೆ. ಬಾಲ್ಯದಿಂದಲೂ ಇದ್ದ ರೋಗಿಯ ಸ್ವಭಾವ,
ಅನುಭವಿಸಿದ್ದ ಬೇನೆಗಳು ಎಲ್ಲವನ್ನೂ ಗುರುತಿಸಿಕೊಂಡೆ. ದೇಹದ ವಿವಿಧ
ಅಂಗಗಳ ವಿವರ ಪರೀಕ್ಷೆಯನ್ನೂ ಶಾಸ್ರೋಕ್ತವಾಗಿ ಮಾಡಿ ಮುಗಿಸಿದೆ.
ಶ್ವಾಸಕೋಶಗಳಲ್ಲಿ ಆತಂಕವು ಮನೆಮಾಡಿಕೊಂಡಿತ್ತಾದ್ದರಿಂದ, ಜಾಗರೂಕತೆಯಿಂದ
ಅದನ್ನು ಪರೀಕ್ಷಿಸಿದೆ. ಮೂಗು ಕಿವಿ ಗಂಟಲುಗಳ ಪರೀಕ್ಷೆಯೂ ಆಯಿತು. ನನ್ನ
ವಿಚಾರದಲ್ಲಿ ವೈದ್ಯರಿಗೆ ಎಷ್ಟು ಶ್ರದ್ಧೆ ಎಂದು ರೋಗಿಗೆ ಖಂಡಿತವಾಗಿರಲೇಬೇಕು.
ದೇಹದಲ್ಲಿ ಯಾವ ಖಾಯಿಲೆಯು ಇರುವ ಸೂಚನೆಯೂ ನನಗೆ ದೊರಕಲಿಲ್ಲ.
ಮೊದಲೇ ಊಹಿಸಿದ್ದಂತೆ, ಇದು ಆತಂಕದ ಮಾನಸಿಕ ಬೇನೆ ಎನ್ನುವುದು
ಖಂಡಿತವಾಯಿತು.
{{gap}}ರೋಗಿಯ ಪೌಗಂಡ ವಯಸ್ಸಿನಲ್ಲಿ ಕಣ್ಣಿಗೆ ಕಂಡ ಸೆರಗೆಲ್ಲವೂ, ಅಪ್ಸರೆಯದೇ
ಎನ್ನುವ ಭ್ರಾಂತಿಯು ಮೂಡುವುದು ಸ್ವಾಭಾವಿಕ. ಉದಾತ್ತ ಧ್ಯೇಯಗಳೂ
ಅದೇ ವಯಸ್ಸಿನಲ್ಲಿ ತೀವ್ರವೂ ಆಗಿರುತ್ತವೆ. ಆ ಕಾರಣದಿಂದ ಮನಸ್ಸಿನಲ್ಲಿ ಮೂಡಿದ
ಆ ತೆರನ ಭ್ರಾಂತಿಗಳನ್ನು ಅವ ಹಠದಿಂದ ಮೆಟ್ಟುತ್ತಾನೆ. ತೋರ ಮನಸ್ಸಿನಿಂದಾಚೆಗೆ
ಅಂತಹ ಯೋಚನೆಗಳನ್ನು ದಬ್ಬಲು ಯತ್ನಿಸುತ್ತಾನೆ. ಆಗ ಅಂತಹ ಭ್ರಾಂತಿ
ರೂಪಿನ ಯೋಚನೆಗಳು ಆಳ ಮನಸ್ಸಿನ ಹಗೇವುಗಳಲ್ಲಿ ಶೇಖರವಾಗುತ್ತವೆ.
ತೋರಮನಸ್ಸು ನಿರ್ಮಲವೇನೋ ಆಗುತ್ತದೆ. ಯುವಕನಿಗೆ ನೆಮ್ಮದಿಯೂ
ತಾತ್ಕಾಲಿಕವಾಗಿ ದೊರಕುತ್ತದೆ.
{{gap}}ಕೊಠಡಿಯನ್ನು ಗುಡಿಸಿ, ಕಸವನ್ನೆಲ್ಲಾ ಹಾಸಿದ ಜಮಖಾನದ ತಳಕ್ಕೆ,
ಜವಾನನು ದಬ್ಬತ್ತಾನೆ. ಕೊಠಡಿಯು ಸ್ವಚ್ಛವಾಗಿದೆ ಎಂದು ಮನೆಯೊಡತಿಯು
ಹಿಗ್ಗುತ್ತಾಳೆ. ಅದೇ ರೀತಿಯಲ್ಲಿ ಪೌಗಂಡ ವಯಸ್ಸಿನವರ ಸಹಜ ಭ್ರಾಂತಿಯ
ಯೋಚನೆಗಳು, ಜಮಖಾನದ ಕೆಳಗಿನ ಕಸದಂತೆ, ಆಳ ಮನಸ್ಸಿನ ಹಗೇವುಗಳಲ್ಲಿ
ಭ್ರಾಂತಿಯ ಯೋಚನೆಗಳು ತುಂಬಲ್ಪಡುತ್ತವೆ.
{{gap}}ಜಮಖಾನದ ಕೆಳಗೆ ದೂಡಲ್ಪಟ್ಟ ಕಸವು, ಎಂದಾದರೊಮ್ಮೆ ಒಡತಿಯ
ಗಮನಕ್ಕೆ ಬರಬಹುದು. ಆದರೆ ಆಳ ಮನಸ್ಸಿನಲ್ಲಿ ಅದುಮಲ್ಪಟ್ಟ ಭ್ರಾಂತಿಯ
ಕಸವು, ಚಿತ್ರವಿಚಿತ್ರ ವೇಷಗಳನ್ನು ಧರಿಸಿ, ದೆವ್ವಗಳಂತೆ ರೋಗಿಯನ್ನು ಬೆದರಿಸುತ್ತಲೇ
ಇರುತ್ತವೆ. ಈ ಒಂದು ಕಾರಣದಿಂದಲೂ ಆತಂಕವೂ ಕಾತರವೂ ಹುಟ್ಟಿಕೊಳ್ಳುತ್ತದೆ.
ತನ್ನ ಆತಂಕದ ಮೂಲ ಕಾರಣವು ರೋಗಿಗೆ ನಿಜವಾಗಲೂ ತಿಳಿದಿರುವುದೇ
ಇಲ್ಲ. ಈ ತೆರನ ಯೋಚನೆಗಳು ಮನಸ್ಸಿನ ನೆಮ್ಮದಿಯನ್ನು ಕದಡುತ್ತವೆ ಎಂದಲ್ಲವೇ<noinclude></noinclude>
l7zcrcnp17693mi164pe67nnrecyv8h
ಪುಟ:ಮನಮಂಥನ.pdf/೩೫
104
62482
316536
313918
2026-05-03T14:16:16Z
Shreesha Sharma
7840
316536
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೧೬}}{{Right|ಮನಮಂಥನ}}
ಒತ್ತಡದಿಂದ ಸ್ವಯಂಕೃತವಾಗಿಯೋ ಕನಸಿನ ಮೂಲಕವೋ ನಿಷ್ಠೆಯು
ಸಡಿಲವಾದರೆ, " ಮಾಡಬಾರದುದನ್ನು ಮಾಡಿದೆ. ಅಂದ ಮೇಲೆ ಆಗಬಾರದುದು
ಆಗಿಬಿಡುತ್ತೆ' ಎನ್ನುವ ಮನೋಭಾವವುಂಟಾಗುತ್ತದೆ. ಹೀಗಾಯಿತಲ್ಲ ಎನ್ನುವ
ಆತಂಕ. ಮುಂದೆ ಆಗಬಾರದ್ದು ಆಗುತ್ತೆ ಎನ್ನುವ ಭಯ. ಇಂತಹ ಮನಃಸ್ಥಿತಿಯಲ್ಲಿ
ಆತಂಕ ಮತ್ತು ಭಯ ಇವೆರಡೂ ಒಂದಕ್ಕೊಂದು ಬೆಂಬಲವಾಗಿ, ಎರಡೂ
ಅಧಿಕವಾಗುತ್ತದೆ. ನಿನ್ನಲ್ಲಿ ಹೀಗಾಗಿದೆ.
{{gap}}'ಮನಸ್ಸಿನ ಆತಂಕವು ದೇಹಕ್ಕೆ ಹರಡಿ, ಶ್ವಾಸಕೋಶಗಳಲ್ಲಿ ಮನೆ ಮಾಡಿ
ಕೊಂಡಿದೆ. ಉಸಿರಾಟದ ಏರುಪೇರು, ಉಸಿರು ಸಿಕ್ಕಿಕೊಂಡಹಾಗಾಗುವುದು;
ನಿಂತೇಹೋಯಿತು, ಸತ್ತೇಹೋಗುತ್ತೇನೆ, ಎನ್ನುವ ಭಯ, ಇವೆಲ್ಲವೂ ನೀ ತಪ್ಪು
ಮಾಡಿದೆ ಎನ್ನುಕೊಳ್ಳುವುದರಿಂದ ಉಂಟಾದ ಅಪರಾಧಕ್ಕೆ-ನಿನ್ನ ಮನಸ್ಸೇ ವಿಧಿಸುವ
ಶಿಕ್ಷೆ. ಈ ಶಿಕ್ಷೆಯೂ ಮಾಯಾ ರೂಪಿನದೇ! ಏಕೆಂದರೆ ನಿನ್ನ ಉಸಿರಾಟದಲ್ಲಿ
ಯಾವ ತೆರನ ವ್ಯತ್ಯಾಸವು, ಪ್ರಾಣಕ್ಕೆ ಸಂಚು ತರಬಹುದಾದಂತಹ ವ್ಯತ್ಯಾಸವೂ,
ಕಂಡು ಬಂದೇ ಇಲ್ಲ. ತಪ್ಪು ಮಾಡಿದೆ ಎನ್ನುವ ಭಾವನೆಯೂ ಅಜ್ಞಾನ
ದೋಷದಿಂದ ಉಂಟಾದುದು; ಅರ್ಧಮರ್ಧ ಓದಿನಿಂದ ಉಂಟಾದುದು.
ಆದಕಾರಣ ಈ ಸಂಕಟದಿಂದ ಪಾರಾಗಬೇಕಾದರೆ, ಇದರ ವಿಷಯದ
ವೈದ್ಯವಿಜ್ಞಾನವನ್ನು ಆದಷ್ಟು ಪೂರ್ಣವಾಗಿ ಅರಿತುಕೊಳ್ಳಬೇಕು.'
{{gap}}ಎಂದು ಎಳೆಎಳೆಯಾಗಿ ಸುಲಭವಾಗಿ ಅರ್ಥವಾಗುವಂತೆ,ಉದಾಹರಣೆಗಳನ್ನು ಕೊಟ್ಟು, ಸರಳವಾಗಿ ವಿವರಿಸಿದೆ.
{{gap}}'ತುಂಬಾ ಥ್ಯಾಂಕ್ಸ್ ಸಾರ್' ಎಂದ. 'ಎಲ್ಲವೂ ಅರ್ಥವಾಯಿತು. ಇನ್ನು
ಮೇಲೆ ಉಸಿರು ನಿಂತು ಹೋದರೂ ಹೋಗಲೀ ಅಂತ, ಮಾಡುತ್ತಿದ್ದ ಕೆಲಸವನ್ನು
ಮುಂದುವರೆಸುತ್ತೇನೆ. ಪಾಪದ ಕೆಲಸವು ಆಗಿಹೋಯಿತು, ಮಾಡಬಾರದ್ದನ್ನು
ಮಾಡಿದೆ ಎಂದು ವೃಥಾ ಕೊರಗುವುದಿಲ್ಲ.' ಎಂದು ಭರವಸೆಯನ್ನು
ಕೊಟ್ಟ 'ನೀವು ಹೇಳಿದ್ದು ಅರ್ಥವಾಯಿತು, ಸಾರ್ ! ಆದರೆ ಮನಸ್ಸನ್ನು
ದೃಢಪಡಿಸಿ, ಮಾಡುತ್ತಿರುವ ಕೆಲಸವನ್ನು ಉಸಿರು ಸಿಕ್ಕಿಹಾಕಿಕೊಂಡರೂ,
ಮುಂದುವರೆಸುವಂತೆ ಸಹಾಯಮಾಡುವ ಔಷಧಿಗಳನ್ನೋ ಟಾನಿಕ್ಕನ್ನೋ
ಕೊಡುತ್ತೀರಾ' ಎಂದು ಕೇಳಿದ.
{{gap}}ಪ್ರಶ್ನೆಯು ನ್ಯಾಯವಾಗಿತ್ತು : ಸಮಂಜಸವಾಗಿತ್ತು. ಔಷಧಿಗಳು ಈವರೆಗೆ
ಯಾವುದೂ ಕಂಡುಬಂದಿಲ್ಲ, ಎಂದು ಇದ್ದ ಯಥಾರ್ಥವನ್ನು ಹೇಳಲು ಮನಸ್ಸು
ಹಿಂಜರಿಯಿತು. ಇಂತಹ ಸನ್ನಿವೇಶಗಳಲ್ಲಿ ನಿರುಪದ್ರವಿಯಾದ ಹಾಗೂ<noinclude></noinclude>
6mqrsrueixflyhfjuxyc3qf9hgnp4rj
ಪುಟ:ಮನಮಂಥನ.pdf/೪೩
104
62490
316513
315702
2026-05-03T14:04:43Z
Shreesha Sharma
7840
/* Validated */
316513
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೨೪}}{{Right|ಮನಮಂಥನ}}
ಬಾಳು' ಎಂದವರು ಖಡಾಖಂಡಿತವಾಗಿ ಹೇಳಿದ್ದರು. ಮೂರು ದಿನಗಳು
ಊಟ ಬಿಟ್ಟು ಶೀಲಾ ರಂಪ ಹೂಡಿದ್ದಳು. ಅವಳನ್ನ ಸಮಾಧಾನಪಡಿಸಲು
ನನ್ನನ್ನು ಕರೆಸಿದ್ದರು. ವಿಷಯವನ್ನು ಕೇಳಿ ತಿಳಿದುಕೊಂಡ ಮೇಲೆ ಖಾಜಿ
ನ್ಯಾಯವನ್ನು ಮಾಡಿದ್ದೆ. 'ಒಂದು ವರ್ಷ ಭರತನಾಟ್ಯವನ್ನು ಮನೆಯಲ್ಲಿ ಅಭ್ಯಾಸ
ಮಾಡಲಿ. ಹೆಣ್ಣಿನ ದೇಹಕ್ಕೆ ಭರತನಾಟ್ಯವು ಅತ್ಯುತ್ತಮವಾದ ಮತ್ತು ಪರಿಪೂರ್ಣವಾದ ವ್ಯಾಯಾಮ, ಆ ದೃಷ್ಟಿಯಿಂದ ಶೀಲಾ ನಾಟ್ಯಾಭ್ಯಾಸವನ್ನು ಮಾಡಲಿ. ಆನಂತರ ರಂಗಪ್ರವೇಶವನ್ನು ಬಹಿರಂಗವಾಗಿ ಮಾಡಬೇಕೇ, ಬೇಡವೇ, ಎನ್ನುವುದನ್ನು ನಿರ್ಧರಿಸೋಣ' ಎಂದು ಸಲಹೆಯನ್ನು ಮಾಡಿದ್ದೆ. ಶೀಲಾ ಒಪ್ಪಿದ್ದಳು.
ತಾಯ್ತಂದೆಯರೂ ಕೂಡ.
{{gap}}ಹಟಮಾರಿತನವು ಶೀಲಾಳಲ್ಲಿ ಅಷ್ಟು ದೃಢವಾಗಿದೆ ಎನ್ನುವುದು ಆಗಲೇ
ನನಗೆ ತಿಳಿದಿದ್ದು, ಹಟ ಹಿಡಿದು ವಾದಮಾಡಿದಾಗ ಅವಳ ಕೆನ್ನೆಗಳೆಲ್ಲಾ
ಕೆಂಪೇರಿದ್ದುವು. ತುಟಿಗಳು ಥರಥರ ನಡುಗುತ್ತಿದ್ದುವು. ಮೂಗಿನ ಹೊಳ್ಳೆಗಳು
ಕಂಪಿಸುತ್ತಿದ್ದುವು. ಅಗತ್ಯ ಬಿದ್ದರೆ, ಅವಕಾಶ ಸಿಕ್ಕರೆ ಕೈಮಾಡುವುದಕ್ಕೂ ಅವಳು
ಹಿಂತೆಗೆಯುವುದಿಲ್ಲ ಎಂದು ಅನಿಸಿತ್ತು. ಇವೆಲ್ಲವೂ ಶೀಲಾಳನ್ನು ಈಗ ಕಂಡಾಗ,
ಸ್ಮರಣೆಯಲ್ಲಿ ಮಿಂಚಿದುವು.
{{gap}}“ಅಜೀರ್ಣದಿಂದ, ಗಾಳಿ ಹೆಚ್ಚಾಗಿ ಹೊಟ್ಟೆಯಲ್ಲಿ ಉತ್ಪತ್ತಿಯಾಗಿದೆ. ಅದು
ಡೈಯಾಪಂ ಅನ್ನು ಒತ್ತಿ ಏರಿಸಿದ ಹಾಗಾಗಿ ಉಸಿರು ಹೊರಬರಲು ಅಡಚಣೆ
ಯಾದಂತೆ ಆಗಿದೆ. ಆದರೆ ಫೋನ್ ಮಾಡಿ ತುರ್ತು ಕರೆಸುವ ಪ್ರಸಂಗ ಇದಲ್ಲವಲ್ಲ!
ನನ್ನ ಯಾಕೆ ಸತಾಯಿಸಿದೆ, ಈ ಹೊತ್ತಿನಲ್ಲಿ' ಎಂದೆ. ಹೀಗನ್ನುವಾಗ ಅವಳ
ನಾಡಿಪರೀಕ್ಷೆಯನ್ನು ಮಾಡುತ್ತಿದ್ದೆ. ಕೆಟ್ಟ ಕನಸು ಕಂಡು, ಬೆದರಿ ಎದ್ದವರ ನಾಡಿ
ಬಡಿತದಂತೆ ಮಿಡಿಯುತ್ತಿತ್ತು.
{{gap}}'ಉಸಿರು ಇಳಿಯಲಿಲ್ಲ. ಏಕೆ? ಎಂದು ಹೆದರಿಕೆಯಾಯಿತು. ಏನಾದರೂ
ಬಂದಿದೆಯೇನೋ ಎಂದು ಅನಿಸಿತು. ಯಾವ ವಯಸ್ಸಿನಲ್ಲಾದರೂ ಹಾರ್ಟ್
ಅಟಾಕ್ ಬರಬಹುದು ಎಂದು ಮಾಸ ಪತ್ರಿಕೆಗಳಲ್ಲಿ ಓದಿದ್ದ ನೆನಪಾಯಿತು.
ಹೆದರಿಕೆಯೂ ಇನ್ನೂ ಹೆಚ್ಚಾಯಿತು. ಏನೇ ಆಗಲಿ, ನಿಮಗೆ ಹೇಳಿಬಿಡುವುದು
ವಾಸಿ ಅಂತ, ಕಾರ್ ಕಳಿಸಪ್ಪ ಎಂದು ಅಪ್ಪನಿಗೆ ಹೇಳಿದೆ.' ಎಂದಳು.
{{gap}}'ಈ ವಯಸ್ಸಿನಲ್ಲಿ ನಿನಗೆ ತಗಲುವ ಹಾರ್ಟ್ ಅಟಾಕ್, ಬೇರೆ ರೀತಿಯದು,
ಕಣೇ! ಸ್ವೀಟ್ಹಾರ್ಟ್ ಅಟಾಕ್ ಆಗಬಹುದು. ಆ ಅಟಾಕಿಗೆ ನನ್ನಲ್ಲಿ ಔಷಧಿ
ಇಲ್ಲ ಕಣಮ್ಮಾ !' ಎಂದು ನಿಧಾನವಾಗಿ ಗಂಭೀರವಾಗಿ ಹೇಳಿದೆನಾದರೂ,<noinclude></noinclude>
7n68p9iwdw5t3nyip3woy48th4nw4r4
ಪುಟ:ಮನಮಂಥನ.pdf/೪೪
104
62491
316514
314165
2026-05-03T14:05:24Z
Shreesha Sharma
7840
/* Validated */
316514
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಆತಂಕ}}{{Right|೨೫}}
ಯಾಕೆ ಇಷ್ಟು ಆತಂಕ ಪಡುತ್ತಿದ್ದಾಳೆ? ಬೆಲೂನ್ ಆಗಿದೆ ಶ್ವಾಸಕೋಶ ಅಂತ
ಯಾಕೆ ಅನ್ನುತ್ತಿದ್ದಾಳೆ ? ಇಷ್ಟು ತೀವ್ರವಾದ ಆತಂಕಕ್ಕೆ ಕಾರಣವೇನಿರಬಹುದು?
ಎಂದು ಯೋಚಿಸುತ್ತಿದ್ದೆ.
{{gap}}'ಊಟವಾದ ಮೇಲೆ ಏನು ಮಾಡಿದೆ ? ಓದುತ್ತಿದ್ದೆಯಾ ? ಮಲಗಿ
ಬಿಟ್ಟೆಯಾ ?' ಎಂದು ಕೇಳಿದೆ. 'ಪೇಪರ್ ಓದುತ್ತಾ ಆರಾಂ ಕುರ್ಚಿಯ ಮೇಲೆ
ಮಲಗಿದ್ದೆ. ಸ್ವಲ್ಪ ಝಂಪು ಬಂದಿದ್ದರೂ ಬಂದಿದ್ದಿರಬಹುದು. ಯಾಕೆ ನೀವು
ಕೇಳಿದ್ದೀರಿ ಎನ್ನುವುದೂ ಗೊತ್ತಾಯಿತು. ರೊಂಪು ಬಂದಿದ್ದಾಗ ಕೆಟ್ಟ ಕನಸು
ಬಿದ್ದಿದ್ದರೂ ಇರಬಹುದು. ಆದರೆ ಈಗ ನೆನಪಿಲ್ಲ ಉಸಿರು ಇಳಿಯದೆ
ಶ್ವಾಸಕೋಶಗಳು ಬೆಲೂನಿನಂತೆ ಉಬ್ಬುತ್ತಿವೆ ಎಂದು ಹಠಾತ್ತನೆ ತೋರಿತು.
ಆಗ ಎಚ್ಚರವಾಗಿಯೇ ಇದ್ದೆ. ತುಂಬಾ ಭಯವೂ ಆಯಿತು. 'ಅಮ್ಮಾ, ಅಮ್ಮಾ
ಎಂದು ಕರೆದೆ' ಎಂದಳು.
{{gap}}'ಅಷ್ಟೇ ಕಣೆ ಶೀಲಾ ! ಯಾವುದೋ ಕೆಟ್ಟ ಕನಸು ಬಿದ್ದರಬೇಕು. ದೆವ್ವದ
ಕತೆಯನ್ನೋ ಕಳ್ಳನ ಕತೆಯನ್ನೋ ಯಾರೋ ಹೇಳಿದ್ದಿರಬೇಕು. ಅದು ಕನಸಿನಲ್ಲಿ
ಚಿತ್ರವಿಚಿತ್ರವಾಗಿ ರೂಪು ತಾಳಿ ಗಾಬರಿ ಪಡೆಸಿರಬೇಕು. ಈಗ ಟ್ರಾಂಕ್ವಿಲೈಸರ್
ಮಾತ್ರೆಯೊಂದನ್ನು ಕೊಡುತ್ತೇನೆ, ಅದನ್ನು ನುಂಗು, ಸ್ವಲ್ಪ ವಿಶ್ರಾಂತಿಯನ್ನು
ತೆಗೆದುಕೋ, ರಾತ್ರಿ ಅರೆಹೊಟ್ಟೆ ಊಟಮಾಡು' ಎಂದು ಧೈರ್ಯವನ್ನು ಹೇಳಿ
ಹಿಂತಿರುಗಿದೆ. ವಿವರಣೆಯು ಸರಿ ಎಂದೇನೂ ನನಗೆ ಅನ್ನಿಸಿರಲಿಲ್ಲ. ಆದರೆ
ಬೇರೆ ಯಾವ ಕಾರಣವೂ ತೋಚಿರಲಿಲ್ಲ. ಮತ್ತೇನು ತಾನೆ ಮಾಡಲು ಸಾಧ್ಯ
{{gap}}ಇದಾದ ಮೇಲೆ ಶ್ವಾಸಕೋಶಗಳು ಬೆಲೂನ್ ಉಬ್ಬುವಂತಾಗುವುದು
ಆರು ದಿನಗಳಿಗೊಮ್ಮೆ ಮೂರು ದಿನಗಳಿಗೊಮ್ಮೆ ಬರಲಾರಂಭವಾಯಿತು.
ನಗುನಗುತ್ತಿದ್ದ ಸ್ವಲ್ಪ ಜುಲುಮಿನ ಶೀಲಾ, ಈಗೀಗ ಮೇಲೆ ಕಪ್ಪೆ ಬಿದ್ದು
ಅಂಜಿದವರಂತೆ, ಆತಂಕಮಯವಾಗಿದ್ದಳು.
{{gap}}'ಮನೋವೈದ್ಯರ ಸಲಹೆಯು ಅಗತ್ಯ. ಹೀಗೆಯೇ ಇದನ್ನು ಬಿಡಬಾರದು.
ಮುಂದೆ ಇತರ ಮಾನಸಿಕ ಬೇನೆಗಳು ಜತೆ ಬಂದು ತೊಡರಿಕೊಳ್ಳಬಹುದು'
ಎಂದು ಆಬ್ರಹಂನಿಗೂ ಅವನ ಹೆಂಡತಿಗೂ ಇನ್ನಿಲ್ಲದ ಹಾಗೆ ಹೇಳಿದೆ. ಹಲವಾರು
ನಿದರ್ಶನಗಳನ್ನೂ ಕೊಟ್ಟೆ. ದಂಪತಿಗಳು ಒಪ್ಪಲೇ ಇಲ್ಲ. 'ಬೇಗ ಮದುವೆಯನ್ನು
ಮಾಡಿ ಬಿಡ್ತೀನಿ. ಕೈಲೊಂದು ಸೊಂಟದಲ್ಲೊಂದು ಮಗುವಿದ್ದರೆ,
ಉಸಿರಿಳಿಯುವುದೂ ಏರುವುದೂ, ಕೋಶಗಳು ಬೆಲೂನ್ ಆಗುವುದೂ ಎಲ್ಲವೂ
ಮರೆತು ಹೋಗುತ್ತೆ' ಎಂದವರು ಖಡಾಖಂಡಿತವಾಗಿ ಹೇಳಿಬಿಟ್ಟರು.<noinclude></noinclude>
2lltl9f7qafnc1xx6go9wyfo7t6yblo
ಪುಟ:ಮನಮಂಥನ.pdf/೪೫
104
62492
316515
314166
2026-05-03T14:05:59Z
Shreesha Sharma
7840
/* Validated */
316515
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೨೬}}{{Right|ಮನಮಂಥನ}}
{{gap}}“ಶೀಲಾಳ ಆತಂಕವು ಅತ್ಯುಗ್ರವಾಗಿದೆ. ತೀವ್ರ ತಳಮಳದ ಹಂತಕ್ಕೆ ಏರಿದೆ.
ಹೀಗೆಯೇ ಬಿಟ್ಟರೆ 'ಡಿಪ್ರೆಷನ್' ತಗುಲಿಕೊಳ್ಳಬಹುದು. ಈ ಸ್ಥಿತಿಯಲ್ಲಿ
ಮದುವೆಯನ್ನು ಮಾಡಿದರೆ ಇವೆಲ್ಲಾ ಅತ್ಯುಲ್ಬಣವಾಗಲೂ ಬಹುದು. ತುಂಬಾ
ಹುಷಾರಾಗಿರಬೇಕು" ಎಂದು ಹೇಳಿದೆ. ಯಾಕೆ ಇವರು ಅಲಕ್ಷ್ಯ ಮಾಡುತ್ತಿದ್ದಾರೆ
ಎಂದು ಕಸಿವಿಸಿಯೂ ಆಯಿತು. ಕರ್ತವ್ಯವನ್ನು ನಾನು ಮಾಡಿದ್ದಾಯಿತು,
ಮಿಕ್ಕಿದ್ದು ಅವರವರ ಪೂರ್ವಜನ್ಮದ ಕರ್ಮ ಎಂದು ವೇದಾಂತವನ್ನಂದುಕೊಂಡೆ.
{{gap}}ಇದಾದ ಒಂದೆರಡು ವರ್ಷಗಳು, ಶೀಲಾ ಈ ರೀತಿ ನರಳುತ್ತಲೇ ಇದ್ದಳು.
ಇದೆಲ್ಲಾ ಸೈಕೋಜನಿಕ್ ಅಂತ ನನಗೂ ಅನ್ನಿಸುತ್ತೆ ; ಆದರೆ ಗಾಣಿಗಿತ್ತಿ ಅಯ್ಯೋ
ಎಂದ ಹಾಗೆ, ಹಾಗನ್ನಿಸುವುದರಿಂದ ಯಾವ ಗುಣವೂ ಆಗಿಲ್ಲ ; ಎಂದು
ಅನ್ನುತ್ತಿದ್ದಳು. ಮನೋವೈದ್ಯರನ್ನು ಕಾಣಲು ಅವಳಿಗೂ ಇಷ್ಟವಿರಲಿಲ್ಲ.
{{gap}}ಶ್ರೀಮಂತನಾದರೂ ಆಬ್ರಹಂನಿಗೆ ಅನುಕೂಲವಾದ ಅಳಿಯನನ್ನು ಷಿಕಾರಿ
ಮಾಡಲು ಎರಡು ವರ್ಷಗಳು ಹಿಡಿಯಿತು. ವೈಭವದ ಮದುವೆಯನ್ನು
ಅದ್ದೂರಿಯಿಂದ ಮಾಡಿದರು. ವಿವಾಹದ ಸಂಭ್ರಮಗಳಲ್ಲಿ ಶೀಲಾ
ಅನಾಸಕ್ತಿಯನ್ನೇನೂ ತೋರಿಸಲಿಲ್ಲ. ಆದರೆ ಅತ್ತೆಯ ಮನೆಗೆ ಹೋದಮೇಲೆ,
ಬಸಿರು ಬಾಣಂತನಗಳು ಆಗುವಾಗ ಮನಃಪಲ್ಲಟವು ಆಗುತ್ತೇನೋ ಎಂದು
ಶಂಕಿಸುತ್ತಲೇ ಇದ್ದೆ.
{{gap}}ಅತ್ತೆಯ ಮನೆಗೆ ಹೋಗಿ ಕೆಲವು ತಿಂಗಳುಗಳು ಸಂಸಾರವನ್ನು ನಡೆಸಿದಳು.
ಕೆಲವು ದಿನಗಳು ತೌರಿನ ವಾಸಕ್ಕೆಂದು ಬಂದಿದ್ದಾಗ, ಅತ್ತೆಯ ಮನೆಯಲ್ಲಿ
ಶ್ವಾಸಕೋಶಗಳು ಬೆಲೂನ್ ಆಗುವ ಘಟನೆಗಳು ಒಂದೆರಡು ಬಾರಿ, ಬಹಳ
ಹಗೂರಾಗಿ, ಆಗಿತ್ತು. ಆಮೇಲಾಮೇಲೆ ಕಡಿಮೆಯಾಗುತ್ತ ಬಂತು. ಈಗ ಎರಡು
ಮೂರು ತಿಂಗಳುಗಳಿಂದ ಹಾಗೆ ನರಳಿಯೇ ಇಲ್ಲ' ಎಂದು ಹೇಳಿದಳು.
ಕೈಲೊಂದು ಮಗುವಿದೆ. ಸೊಂಟದಲ್ಲೊಂದು ಮಗು ಇದೆ. ನೆಮ್ಮದಿಯಾಗಿಯೇ
ಇದಾಳೆ, ಶೀಲಾ.
{{gap}}ಅಂದರೆ ಆತಂಕದಿಂದಾದ ನರಳುವಿಕೆಯು, ಕೆಲವೊಮ್ಮೆ ತನ್ನಷ್ಟಕ್ಕೆ ತಾನೇ
ಸರಿಹೋಗುವುದೂ ಉಂಟು. ಆದರೆ ಇದು ವಿರಳವಾಗಿ ಆಗುತ್ತದೆ. ಈ ಆಸೆಯನ್ನು
ಇಟ್ಟುಕೊಂಡು ಮಾಡಬೇಕಾದ ಮನೋಚಿಕಿತ್ಸೆಯನ್ನು ಸಕಾಲದಲ್ಲಿ ಮಾಡಿಸದೇ
ಇದ್ದರೆ, ಮುಂದೆ ಬೇರೂರಿದ ಇತರ ಮಾನಸಿಕ ಬೇನೆಗಳು ಕಾಣಿಸಿಕೊಳ್ಳುತ್ತವೆ.
ಆಗ ಚಿಕಿತ್ಸೆಯೂ ಸುಲಭವಾಗಿರುವುದಿಲ್ಲ. ಆದಕಾರಣ ಮುಂಜಾಗ್ರತೆಯಾಗಿ
ಎಚ್ಚರವಹಿಸುವುದು ಜಾಣತನ<noinclude></noinclude>
owegj7qppq9zrop79jqee1b9le8xwv8
ಪುಟ:ಮನಮಂಥನ.pdf/೪೬
104
62493
316516
314173
2026-05-03T14:06:22Z
Shreesha Sharma
7840
/* Validated */
316516
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಆತಂಕ}}{{Right|೨೭}}
{{gap}}ಶೀಲಾಳ ಶ್ವಾಸಕೋಶಗಳು ಬೆಲೂನಿನಂತೆ ಉಬ್ಬಿ ಕಾಟವನ್ನು ಏಕೆ
ಕೊಡುತ್ತದೆ? ನಿಜವಾಗಿ ಶ್ವಾಸಕೋಶಗಳು ಬೆಲೂನ್ ಆಗಿರುವುದಿಲ್ಲ. ಆದರೂ
ಆದಂತೆ ಭ್ರಮೆಯನ್ನು ಹುಟ್ಟಿಸುವುದೇಕೆ? ಇಂದಿನ ವಿಜ್ಞಾನದ ಹಂತದಲ್ಲಿ, ಇದನ್ನು
ಖಂಡತವಾಗಿ ಹೇಳಲು ಸಾಧ್ಯವಿಲ್ಲ. ಸುಂದರವಾಗಿರುವ, ಹೀಗೆ ಇರಲೇಬೇಕು
ಎನಿಸುವ ಹಲವಾರು ಊಹೆಗಳಿಗೇನೂ ಕೊರತೆಯಿಲ್ಲ. ಕತೆ
ಬರೆಯಬಲ್ಲವರೆಲ್ಲರೂ ಊಹೆಯನ್ನು ಕಟ್ಟಬಲ್ಲರು. ದಿಟವಾದ ಕಾರಣವು
ದೇವರಿಗೇ ಗೊತ್ತು! ದೇವರನ್ನು ದೃಢವಾಗಿ ನಂಬಿದವರಲ್ಲಿ ಕೆಲವರಾದರೂ
ಆತಂಕದ ಬೇನೆಯಿಂದ ಸ್ವಾಭಾವಿಕವಾಗಿ ಪಾರಾಗುತ್ತಾರೆ. ಇಷ್ಟನ್ನು ಮಾತ್ರ
ಅನುಭವದಿಂದ ಹೇಳಬಹುದು.
'''೪. ಬಾವಿ ಕಟ್ಟೆಯ ಸೈತಾನ್'''
{{gap}}ಆಕೆಯ ಮುಖವನ್ನು ನೋಡಿದಾಗ ನನಗೆ ಗಾಬರಿಯಾಯಿತು. ದೆವ್ವವನ್ನು
ಕಣ್ಣಾರ ಕಂಡವರ ಕಣ್ಣುಗಳಂತೆ ಆಕೆಯ ಕಣ್ಣುಗಳು ಗೆಡ್ಡೆಗಣ್ಣಾಗಿದ್ದುವು.
ಪ್ರಯಾಸದಿಂದ ಆಕೆಯು ಉಸಿರನ್ನು ಎಳೆದುಕೊಳ್ಳುವಾಗ ವಕ್ರವಕ್ರವಾದ ಕರ್ಕಶ
ಶಬ್ದಗಳು ಹೊರಹೊಮ್ಮುತ್ತಿದ್ದುವು. ಸುಮಾರು ಐದೂಮುಕ್ಕಾಲು ಅಡಿ
ಎತ್ತರವಿರುವ, ಬುರುಕಿ ಹಾಕಿಕೊಂಡಿರುವ ಹೆಂಗಸು ಈ ರೀತಿ ಕರ್ಕಶ ಶಬ್ದಗಳನ್ನು
ಮಾಡಿದರೆ ಯಾರೂ ಹೆದರಬೇಕಾದದ್ದೇ. ಮಧ್ಯೆ ಮಧ್ಯೆ ಉಸಿರನ್ನು ಎಳೆದು
ಕೊಳ್ಳುವಾಗ, ತಟ್ಟಂತ ನಿಲ್ಲಸಿಬಿಟ್ಟು, ನಂತರ ನಾಯಿ ಕೆಮ್ಮಿನಂತೆ ಶಬ್ದ ಮಾಡುತ್ತ
ದೊಡ್ಡ ಉಸಿರನ್ನು ಪ್ರಯಾಸದಿಂದ ಎಳೆದುಕೊಳ್ಳುತ್ತಿದ್ದಳು. 'ಯಾಕಮ್ಮಾ, ಹೀಗೆ
ಉಸಿರಾಡುತ್ತಿ' ಎಂದು ಕೇಳಿದಾಗ 'ಯಾರೋ ಬಂದು ಕತ್ತನ್ನು ಅದುಮಿದ
ಹಾಗೆ ಆಗುತ್ತೆ. ಆದ್ದರಿಂದ ಹೀಗೆ' ಎಂದಳು. 'ಇಲ್ಲಿ ಯಾರೂ ಇಲ್ಲವಲ್ಲಮ್ಮ :
ಯಾರೂ ಬಂದಿಲ್ಲವಲ್ಲ' ಎಂದೆ. 'ಅದು ನನಗೂ ಗೊತ್ತು; ಆದರೆ ಹಾಗೆ
ಆಗುತ್ತೆ ; ಯಾವಾಗ ಆಗುತ್ತೆ ಎನ್ನುವುದು ತಿಳಿಯದು. ಆದ್ದರಿಂದ ಭಯವೂ
ಹೆಚ್ಚಾಗಿದೆ.' ಎಂದು ಆಕೆ ಹೇಳಿದಳು.
{{gap}}ಆತಂಕವು ಅತಿಯಾಗಿ ತೀವ್ರ ತಳಮಳದ ಹಂತವನ್ನು ಮುಟ್ಟಿದೆ ಎನ್ನುವುದು
ಸ್ಪಷ್ಟವಾಯಿತು. ಸಮಾಧಾನವನ್ನು ಮೆದು ಮಾತುಗಳಿಂದ ಮಾಡುತ್ತ 'ಈ
ಇಂಜಕ್ಷನ್ನಿನಿಂದ ಖಂಡಿತವಾಗಿ ಶಮನವಾಗುತ್ತೆ' ಎಂದು ಒತ್ತಾಯಪೂರ್ವಕವಾಗಿ
ಧೈರ್ಯ ಹೇಳುತ್ತಾ, ಚಿಕಿತ್ಸೆಯನ್ನು ನಡೆಸಿದೆ. ಇನ್ಸಕ್ಷನ್ ಕೊಟ್ಟ ಮೂರು ನಾಲ್ಕು
ನಿಮಿಷಗಳಲ್ಲಿ ಆಕೆಯ ಮುಖವು ನೋಡುವಂತಾಯಿತು. “ಉಸ್ಸಪ್ಪ ! ಈಗ
ಸರಾಗವಾಗಿ ಉಸಿರು ಬಿಡಬಹುದಪ್ಪಾ ! ಸದ್ಯಕ್ಕೆ ಬದುಕಿದೆ' ಎಂದು ನಿಟ್ಟುಸಿರನ್ನು<noinclude></noinclude>
ox0xlbulrzebcx7gruwuz1rlu3qd1nw
ಪುಟ:ಮನಮಂಥನ.pdf/೪೭
104
62494
316518
314175
2026-05-03T14:06:49Z
Shreesha Sharma
7840
/* Validated */
316518
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೨೮}}{{Right|ಮನಮಂಥನ}}
ದೀರ್ಘವಾಗಿ ಬಿಟ್ಟಳು.
{{gap}}ನಂತರ ವಿಚಾರಿಸಿದಾಗ ಕಳೆದ ಒಂದೆರಡು ವರ್ಷಗಳಿಂದಲೂ,
ಆಗಿಂದಾಗ್ಗೆ, ಈ ರೀತಿ ಕತ್ತು ಅದುಮಿದಂತಾಗುತ್ತಿತ್ತೆಂದೂ, ಆದರೆ ಒಂದೆರಡು
ತಿಂಗಳುಗಳಿಂದ ವಿಪರೀತಕ್ಕಿಟ್ಟುಕೊಂಡಿದೆಯೆಂದೂ, ಅವಳ ಗಂಡನಿಂದ
ಗೊತ್ತಾಯಿತು. ಹಲವಾರು ಹೆಣ್ಣು ವೈದ್ಯರುಗಳಿಂದ ಪೂರ್ಣ ಪರೀಕ್ಷೆಯನ್ನು
ಮಾಡಿಸಿಕೊಂಡಿದ್ದಳು. ಆ ವರದಿಗಳನ್ನೆಲ್ಲಾ ತಂದೂ ಇದ್ದಳು.
{{gap}}ದೇಹದ ಯಾವುದೊಂದು ಬೇನೆಯಿಂದಲೂ ಉಂಟಾದುದಲ್ಲ. ಈ ಆತಂಕ,
ಎನ್ನುವುದು ಸ್ಪಷ್ಟವಾಯಿತು. ಮನೋವೈದ್ಯರ ಬಳಿಗೆ ಹೋಗಿ ಸಲಹೆಯನ್ನು
ಪಡೆಯಿರಿ ಎಂದು ಆಕೆಯ ಮನೆ ವೈದ್ಯರು ಹೇಳಿದ್ದರು. ಆದರೆ ಮನೆಯವರು
ಯಾರೂ ಒಪ್ಪಲಿಲ್ಲ. 'ಹುಚ್ಚಾಸ್ಪತ್ರೆಗೆ ಹೋಗುವಂತಹ ಕಾಯಿಲೆ ನನಗೇನಿದೆ?
ಗಂಟಲಿನಲ್ಲಿ ಏನೋ ಇದೆ. ಇವರಾರಿಗೂ ಗೊತ್ತಾಗುತ್ತಿಲ್ಲ' ಎಂದು ಅವಳ
ನಂಬಿಕೆ.
{{gap}}'ಯಾವ ಇಂಜಕ್ಷನ್ ಕೊಟ್ಟಿರಿ ? ಎರಡು ನಿಮಿಷಗಳಲ್ಲಿ ಎಲ್ಲವೂ ಸರಿ
ಹೋಯಿತು, ಸದ್ಯಕ್ಕಾದರೂ' ಎಂದು ಕೇಳಿದಳು. ಇದರಿಂದ ಗುಣವಾಗುತ್ತೆ
ಎಂದು ಒತ್ತಿ ಹೇಳಿದುದರಿಂದ ಗುಣಕಂಡಿತ್ತೇ ವಿನಹಾ, ಚುಚ್ಚಿದ ಯಃಕಶ್ಚಿತ್
ಮದ್ದಿನಿಂದಲ್ಲ ಎನ್ನುವುದು ನನಗೆ ಗೊತ್ತು, ಆದರೆ ಅದನ್ನು ಹೇಳುವಂತಿಲ್ಲ.
ಆಕೆಯಲ್ಲಿ ಹುಟ್ಟಿದ ನಂಬಿಕೆಯನ್ನು ಬೆಳೆಸಿದರೆ ಅವಳಿಗೂ ಒಳ್ಳೆಯದು, ನನಗೂ
ಕ್ಷೇಮ. ಆದರೆ ಈ ಪ್ರಯೋಗ, ಫಲಿತಾಂಶಗಳಿಂದ, ಕತ್ತು ಹಿಸುಕಿದಂತಾಗುತ್ತಿದ್ದುದು
ಮನಸ್ಸಿನ ತೀವ್ರ ತಳಮಳದಿಂದಲೇ ಎನ್ನುವುದು ಖಂಡಿತವಾಯಿತು. ಹಾಗೂ
ನಾನು ಮಾತನಾಡಿದ ಧಾಟಿಯು ಆಕೆಯ ಮನಸ್ಸಿಗೆ ಆಪ್ಯಾಯಮಾನವಾಗಿದೆ,
ಅದರಿಂದ ಅವಳ ಮನಸ್ಸಿಗೆ ಸಮಾಧಾನವಾಗಿದೆ. ಆತಂಕವು
ತಾತ್ಕಾಲಿಕವಾಗಿಯಾದರೂ ಶಮನವಾಗಿದೆ ಎನ್ನುವುದೂ ಸ್ಪಷ್ಟವಾಯಿತು.
{{gap}}ಹಳ್ಳಿಯ ಕಡೆಯ ಹೆಣ್ಣು ಆಕೆ. ಕಟ್ಟುನಿಟ್ಟು ಘೋಷಾವನ್ನು ಆಚರಿಸುವ
ಶ್ರೀಮಂತ ಮುಸಲ್ಮಾನ್ ಮನೆಯಾಕೆ, ಹೊರಲೋಕದ ನಾಗರಿಕ ಪ್ರಪಂಚವು
ಆಕೆಯನ್ನು ಸೋಕಿರಲೇ ಇಲ್ಲ. ಅಂದ ಮೇಲೆ ನಾಗರಿಕರ ಆತಂಕಕ್ಕೆ ಕಾರಣವಾಗುವ
ವಿಷಯಗಳನ್ನು ವಿಚಾರಿಸುವ ಅಗತ್ಯವಿರಲಿಲ್ಲ. ಹಳೆಯ ಕಾಲದ ಮೂಢ
ನಂಬಿಕೆಗಳೇನಾದರೂ ಕಾಡುತ್ತಿರಬಹುದೇ ? ಎಂದು ಅನ್ನಿಸಿತು, ಹಳ್ಳಿಯ
ಕಡೆಯವರು ದೆವ್ವ ಪಿಶಾಚಿಗಳಲ್ಲಿ ಹೆಚ್ಚು ನಂಬುತ್ತಾರೆ. ಅಂತಹುದೇನಾದರೂ
ಈಕೆಯನ್ನು ಕಾಡುತ್ತಿದೆಯೇ ? ನೋಡೋಣ ಒಂದು ಪಟ್ಟು ; ಅಡೇಟಿನ<noinclude></noinclude>
5dd6pfn4fugmraaflppmk6n9s7n4ko1
ಪುಟ:ಮನಮಂಥನ.pdf/೪೮
104
62495
316519
314178
2026-05-03T14:07:34Z
Shreesha Sharma
7840
/* Validated */
316519
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಆತಂಕ}}{{Right|೨೯}}
ಮೇಲೆ ಗುಡೇಟು ಅಂತ ಆತಂಕದ ಕಾರಣವು ಸಿಗಬಹುದು, ಎಂದುಕೊಂಡೆ.
ನೇರವಾಗಿ ಪ್ರಶ್ನಿಸಿದೆ. 'ಯಾವುದಾದರೂ ಸೈತಾನನ ಕಾಟದಿಂದ ಹೀಗಾಗುತ್ತಿರಬಹುದೇ ? ಒಂದೆರಡು ವರ್ಷಗಳಿಂದ ಹೀಗಾಗುತ್ತಿದೆ ಎಂದಿರಿ. ಒಂದೆರಡು ವರ್ಷಗಳ ಹಿಂದೆ ಎಲ್ಲಿಗಾದರೂ ಹೋಗಿದ್ದಾಗ ಸೈತಾನ್ ಮೆಟ್ಟಿಕೊಂಡಿರಬಹುದೇ ? ಹೀಗೆ ಏಕೆ ಕೇಳ್ತಿನಿ ಅಂದರೆ, ನಿಮ್ಮ ಗಂಟಲಿನಲ್ಲಿ ಯಾವ ದೋಷವೂ ಇಲ್ಲ. ನರನಾಡಿ ಮಾಂಸಖಂಡ ಎಲ್ಲವೂ ಲಕ್ಷಣವಾಗಿವೆ. ಅದಕ್ಕೆ' ಎಂದು. ಆಕೆಯ ಅನಿರೀಕ್ಷಿತ ಉತ್ತರವು ನನಗೂ ಅಚ್ಚರಿಯನ್ನುಂಟುಮಾಡಿತು.
{{gap}}'ಇವರಿಗೆ ಎಷ್ಟೋ ಹೇಳಿದೆ. ಆ ಮನೆಗೆ ಹೋಗುವುದು ಬೇಡ ಅಂತ.
ಆದರೆ ಇವರು ಕೇಳಬೇಕಲ್ಲ ! ಒಳ್ಳೆಯವರಾದ, ತಿಳಿದ ನೆರೆ ಹೊರೆ, ನಮ್ಮವರೆಲ್ಲಾ
ಇರುವ ಬಡಾವಣೆ. ಮನೆಯೂ ಅನುಕೂಲವಾಗಿದೆ, ಬಾಡಿಗೆಯೂ
ದುಬಾರಿಯಾಗಿಲ್ಲ. ನಲ್ಲಿಯ ನೀರು ನಿಂತರೂ ಬಾವಿಯ ಸೌಕರ್ಯವಿದೆ.
ನಮ್ಮ ದುಕಾನಿಗೂ ಹತ್ತಿರವಿದೆ. ಅಲ್ಲಿಗೆ ಹೋಗೋಣ ಎಂದರು. ಅವರು
ಹೇಳಿದ್ದೇನೋ ದಿಟ. ಆಗಿದ್ದ ಹಳೆ ಮನೆಯಿಂದ ಮಧ್ಯಾಹ್ನದ ಊಟವನ್ನೂ
ದುಕಾನಿಗೆ ಡಬ್ಬಿಯಲ್ಲಿ ಕಳಿಸಬೇಕು. ಹತ್ತಿರ ಮನೆಯಿದ್ದರೆ, ಹೊತ್ತಿಗೆ ಸರಿಯಾಗಿ
ಮನೆಗೆ ಬಂದು ಬಿಸಿ ಬಿಸಿಯಾಗಿ ಉಣ್ಣಬಹುದು ಎಂದು ಮನಸ್ಸಿಗೆ ಹೊಳೆಯಿತು.
ಆದ್ದರಿಂದ ಹೂ, ಅಂತ ಒಪ್ಪಿ ಹೊಸ ಮನೆಗೆ ಹೋದೆವು. ಅಲ್ಲಿಗೆ ಹೋಗಿ
ನೆಲಸಿದ ಒಂದೆರಡು ವಾರಗಳಲ್ಲಿ ಕತ್ತನ್ನು ಯಾರೋ ಹಿಸುಕಿದಂತೆ, ಬಲವಾಗಿ
ಅದುಮಿದಂತೆ ಆಗಲು ಶುರುವಾಯಿತು' ಎಂದಾಕೆ ಲಕ್ಷಣವಾಗಿ ಹೇಳಿದಳು.
ಆದರೆ ಅತ್ಯಗತ್ಯವಾದ ವಿಷಯವನ್ನು ಮರೆಮಾಚಿದ್ದಳು. ಆದಕಾರಣ ತಿರುಗಿ
ಪ್ರಶ್ನಿಸಬೇಕಾಯಿತು. 'ಆಯ್ತಮ್ಮ ! ಆದರೆ ಆ ಮನೆಗೆ ಹೋಗುವುದು ಬೇಡ
ಅಂತ ಯಾಕೆ ಹೇಳಿದಿರಿ ?' ಎಂದು ಕೇಳಿದೆ. 'ಸಲ್ಮಾಳ ನಿಕಾಕ್ಕೆ ಹೋಗಿದ್ದಾಗ,
ಸಂಬಂಧಿಯೊಬ್ಬರು ಹೇಳಿದ್ದರು. ಆ ಮನೆಯಲ್ಲಿ ಹಿಂದೆ ಎಂದೋ ಮನೆಯಳಿಯ
ಬಾವಿಯಲ್ಲಿ ಬಿದ್ದು ತೀರಿಕೊಂಡಿದ್ದ ಅಂತ. ಅವನಿಗೆ ಹೂ ಸೈತಾನ್ ಬಡಿದಿತ್ತು
ಅಂತ, ಇನ್ನು ಯಾರೋ ಅಂದರು, ಆತ್ಮಹತ್ಯೆ ಏನಲ್ಲ ಅದು ಹೆಂಡತಿಯೇ,
ತನ್ನ ವಿಟನ ಸಹಾಯದಿಂದ ಗಂಡನನ್ನು ಬಾವಿಗೆ ತಳ್ಳಿದ್ದಳು ಅಂತ. ಅವನು
ಈಗ ಮನೆಗೆ ಬಂದವರನ್ನು ಸೈತಾನ್ ಆಗಿ ಕಾಡುತ್ತಾನೆ ಎಂದು ನಾನೇನೂ
ನಂಬುವುದಿಲ್ಲ. ಆದರೆ ಆ ಮನೆಗೆ ಹೋದಮೇಲೆ ಹೀಗಾಗುತ್ತಿರುವುದನ್ನು
ನೋಡಿದರೆ, ಹಾಗೂ ಆಗಿರಬಹುದೋ ಎಂದು ಅನುಮಾನ ಬರುತ್ತದೆ' ಎಂದಳು.<noinclude></noinclude>
6ovv0ai8xleq8tfnptztzn5zz20ufqo
ಪುಟ:ಮನಮಂಥನ.pdf/೪೯
104
62496
316520
314185
2026-05-03T14:08:02Z
Shreesha Sharma
7840
/* Validated */
316520
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೩೦}}{{Right|ಮನಮಂಥನ}}
{{gap}}ಆಗ ಆಕೆಯ ಗಂಡ ಮಧ್ಯೆ ಬಾಯಿ ಹಾಕಿದ. ನನ್ನ ಕಡೆಗೆ ತಿರುಗಿ,
{{gap}}'ನೀವೂ ಸರಿ ! ಇವಳ ಮಾತನ್ನು ಕೇಳಿ. ಆ ಮನೆಯಲ್ಲಿ ಹಾಗಾಯಿತು
ಎನ್ನುವುದು ನಲವತ್ತು ಐವತ್ತು ವರ್ಷಗಳ ಹಿಂದಿನ ಕತೆ. ಆ ಮೇಲೆ
ಆ ಮನೆಯಲ್ಲಿ ನನಗೆ ತಿಳಿದ ಹಾಗೆ ಮುವತ್ತು ನಲವತ್ತು ಹೆರಿಗೆಗಳಾಗಿವೆ.
ಅವರೆಲ್ಲರೂ ಆರೋಗ್ಯವಾಗಿಯೇ ಇದ್ದರು. ಈ ಸೈತಾನ್ ಅವರು ಯಾರನ್ನೂ
ಕಾಡಲಿಲ್ಲ. ಹಸಿಮೈಯಿನ ಆ ಪುಟ್ಟ ಬಾಣಂತಿಯರನ್ನೆಲ್ಲಾ ಬಿಟ್ಟು, ಈ ಮುದುಕೀನ
ಅಮರಿಕೊಳ್ಳುಕ್ಕೆ ಆ ಸೈತಾನ್ ಕಾದಿದ್ದನೇ?' ಎಂದು ಅವ ತಾನು ಮಾಡಿದುದನ್ನು
ಸಮರ್ಥಿಸಿಕೊಂಡ, ಚಾಲೂಕು ಗಂಡ; ಹಳ್ಳಿಯ ಮೊಂಡು ಹೆಣ್ಣನ್ನೂ
ಭಂಡತನದಿಂದ ನಿಭಾಯಿಸಿಕೊಳ್ಳಬಲ್ಲ ಎನಿಸಿತು.
{{gap}}ಅಂದಿನ ಚಿಕಿತ್ಸೆಯನ್ನು ಮುಗಿಸಿ 'ನೀನೊಬ್ಬನೇ ಆ ಮೇಲೆ ಬಂದು
ನನ್ನನ್ನು ಕಾಣು' ಎಂದು ಗಂಡನಿಗೆ ಹೇಳಿ, ಅವರನ್ನು ಕಳಿಸಿದ್ದಾಯಿತು.
.
{{gap}}ಆ ಮೇಲೆ ಗಂಡ ಬಂದಾಗ ಬಾವಿಕಟ್ಟೆಯ ಸೈತಾನನ ವಿವರಗಳನ್ನು
ಕೇಳಿದೆ. ಅವ ಅಂದ :- * ಬಾವಿಕಟ್ಟೆಯ ಮೇಲೆ ಆ ಸೈತಾನ್ ರಾತ್ರಿಯಲ್ಲಿ
ಕೂತಿದ್ದನಂತೆ. ಇವಳೊಂದು ರಾತ್ರಿ ಅಕಸ್ಮಾತ್ ಒಬ್ಬಳೇ ಅತ್ತ ಹೋದಾಗ,
ಕತ್ತಲು ಕತ್ತಲಾಗಿದ್ದರೂ ಡಿಖಾವಾಗಿ ಕಾಣಿಸಿತಂತೆ. ಘಟಸರ್ಪದಂತಿತ್ತಂತೆ, ಸೈತಾನನ
ತೋಳುಗಳು, ಅವನ್ನು ಬೀಸಿ, ಸೈತಾನ 'ಬಾ' ಎಂದು ಕರೆದನಂತೆ. ಇವಳು
ಬೆದರಿ ಬೆವರಿ ಮನೆಯೊಳಕ್ಕೆ ಓಡಿ ಬಂದುಬಿಟ್ಟಳಂತೆ, ಅಲ್ಲಾನ ಪ್ರಾರ್ಥನೆಯನ್ನೂ
ಮಾಡಲು ಕೂಡ ಆಗ ಮರೆತುಬಿಟ್ಟಿದ್ದಳಂತೆ, ಇಂತಹ ಕತೆಯನ್ನು ಬೆಳೆದವರು
ಯಾರಾದರೂ ನಂಬುತ್ತಾರೆಯೇ, ಡಾಕ್ಟರ್' ಎಂದು. ಒಂದೆರಡು ನಿಮಿಷಗಳೂ
ಅವನನ್ನು ದಿಟ್ಟಿಸಿ ನೋಡಿದೆ. 'ನಿನಗೆಷ್ಟು ಜನ ಹೆಂಡತಿಯರು?' ಎಂದು ಕೇಳಿದೆ.
ಆ ಜಾತಿಯ ಶ್ರೀಮಂತರನ್ನು ಕೇಳಬೇಕಾದ ಪ್ರಶ್ನೆ. ಇವಳೊಬ್ಬಳೇ, ಡಾಕ್ಟರ್,
ಮತ್ತು ಅಂತಹ ಹವ್ಯಾಸದ ಖುಷಿ ನನಗಿಲ್ಲ' ಎಂದ. ನಾ ಕೇಳಿದ ಪ್ರಶ್ನೆಯ
ಇಂಗಿತಕ್ಕೆ ಪರಿಪೂರ್ಣವಾದ ಉತ್ತರವನ್ನು ನೀಡಿಲ್ಲ ಎಂದವನಿಗೆ ಅನಿಸಿರಬೇಕು.
ಅದಕಾರಣ ಮುಂದುವರೆದು 'ಡಾಕ್ಟರೆ ! ಬಡವರ ಮನೆಯಲ್ಲಿ ಹುಟ್ಟಿ ಬೆಳೆದವ,
ನಾನು, ಯಾವ ಪುಣ್ಯವೋ, ಶ್ರೀಮಂತರ ಮನೆಯ ಈ ಹೆಣ್ಣನ್ನು ಮದುವೆ
ಮಾಡಿಸಿತು. ಆ ನಂತರ ಯಾವ ವ್ಯಾಪಾರಕ್ಕೆ ನಾನು ಕೈ ಹಾಕಿದರೂ, ಕೊಪ್ಪರಿಗೆ
ಹಣ ಲಾಭವಾಗಿ ಸಿಕ್ಕಲಾರಂಭಿಸಿತು. ಅವಳಲ್ಲಿ ತುಂಬಾ ವಿಶ್ವಾಸ ನನಗೆ ಅಷ್ಟೇ
ಅಲ್ಲ, ಗೌರವವೂ ಕೂಡ. ಇಷ್ಟು ಹಣ ನನ್ನ ಕೈ ಸೇರಿದೆ. ಆದರೆ ಮದುವೆಯಾಗಿ
ಬಂದಾಗಿನಿಂದ ಒಂದು ದಿನವಾದರೂ, ಈ ಒಡವೆ ಮಾಡಿಸಿ ಕೊಡಿ ಎಂದು<noinclude></noinclude>
c7e375e4w415d4vp0i4wtlf53xmrao2
ಪುಟ:ಮನಮಂಥನ.pdf/೫೦
104
62497
316521
314191
2026-05-03T14:08:28Z
Shreesha Sharma
7840
/* Validated */
316521
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಆತಂಕ}}{{Right|೩೧}}
ಕೇಳಿಲ್ಲ. ತನ್ನ ತೌರಿನ ಶ್ರೀಮಂತಿಕೆಯನ್ನು ನನ್ನೆದುರು ಬಡಾಯಿಸಿಲ್ಲ. ಆಕೆಯ
ವಿಷಯದಲ್ಲಿ ಕೃತಜ್ಞತೆಯೂ ಇದೆ' ಎಂದು ಹೃದಯಬಿಚ್ಚಿ ಮಾತನಾಡಿದ, ಹೆಂಡತಿಯ
ಆರೋಗ್ಯದ ಪರ ಅವನಿಗೂ ತುಂಬಾ ಆಸಕ್ತಿ ಇದೆ ಎನ್ನುವುದು ಖಚಿತವಾಯಿತು.
{{gap}}“ನಿನ್ನ ಜಾಣತನ, ವಿಚಾರಪರತೆ, ವ್ಯವಹಾರ ಕುಶಲತೆ, ಎಲ್ಲವೂ ಒತ್ತಟ್ಟಿಗಿರಲಿ.
ನಿನ್ನ ಹೆಂಡತಿ ಹೀಗೆ ನರಳಬಾರದು ಅಲ್ಲವೇ ? ಬೇಗ ಗುಣವಾಗಬೇಕು
ಅಲ್ಲವೇ ? ಈಗ ನಾನು ಹೇಳಿದ ಹಾಗೆ ಕೇಳು. ಡಾಕ್ಟರಿಗೂ ಮೂಢ ನಂಬಿಕೆಯೇ
ಅಂತ ನಗಬೇಡ.
{{gap}}ಆ ಮನೆಯನ್ನು ಆದಷ್ಟು ಬೇಗ ಖಾಲಿ ಮಾಡು. ಬೇರೆ ಮನೆಗೆ ಹೋಗು.
ಸೈತಾನನನ್ನು ಹೊಡೆದಟ್ಟುವ ಫಕೀರರಾರಾದರೂಇದ್ದರೆ ಅವರನ್ನು ಕರೆಸಿ ಪೂಜೆ
ಹಾಕಿಸು. ಇದೆಂತಹಾ ಮೂಢತನ ಎಂದು ಅಲ್ಲಗಳೆಯಬೇಡ. ನಿನ್ನ ನನ್ನ
ವಿದ್ಯೆಯ ಕಲಿಯುವಿಕೆಯಾಗಲೀ, ಪ್ರಪಂಚದ ಅರಿವಾಗಲೀ ನಿನ್ನ ಹೆಂಡತಿಗೆ
ಇಲ್ಲ. ಅವಳು ನೇರವಾಗಿ ಒಪ್ಪದಿದ್ದರೂ, ಆಳ ಮನಸ್ಸಿನಲ್ಲಿ ಈ ಭಯವು
ಬಲವಾಗಿದೆ. ಆ ಭಯವನ್ನು ನಿವಾರಿಸಿದರೆ, ಅರ್ಧದಷ್ಟಾದರೂ ನರಳುವಿಕೆಯಿಂದ
ಶಮನವಾಗುತ್ತದೆ' ಎಂದು ಹೇಳಿದೆ. ಅವನೂ ಒಪ್ಪಿದ. ತಿಂಗಳೊಂದರಲ್ಲಿ ಬೇರೆ
ಮನೆಗೆ ಹೋದೆ ಎಂದು ಹೇಳಿದ.
{{gap}}ಬೇರೆ ಮನೆಗೆ ಹೋದ ಮೇಲೂ ಕತ್ತು ಅದುಮುವ ಪ್ರಸಂಗಗಳು
ಸಂಪೂರ್ಣವಾಗಿ ನಿಲ್ಲಲಿಲ್ಲ. ಆದರೆ ವಾರಕ್ಕೆರಡು ಮೂರು ಬಾರಿ ಆಗುತ್ತಿದ್ದುದು,
ಈಗ ಎರಡು ಮೂರು ತಿಂಗಳುಗಳಿಗೊಮ್ಮೆ, ಅಲ್ಲದೆ ಆವೇಶಗಳ ತೀವ್ರತೆಯೂ
ಗಮನೀಯವಾಗಿ ಕಡಿಮೆಯಾಗಿದೆ.
{{gap}}ಆತಂಕಪಡುವ ಸ್ವಭಾವವನ್ನು ಆಕೆ ಹುಟ್ಟಿನಿಂದಲೂ ಹೊಂದಿದ್ದಳು. ಕಲಿಕೆ
ಯಾಗಲೀ, ಪ್ರಪಂಚದ ನಾಗರಿಕ ಸಂಪರ್ಕವಾಗಲಿ ಇಲ್ಲದುದರಿಂದ,
ಮೂಢನಂಬಿಕೆಗಳು ದೃಢವಾಗುತ್ತಿದ್ದುವು. ಅಂತಹ ಸೈತಾನ್ ನಂಬಿಕೆಯು ಎಂದೋ
ಮನಸ್ಸಿನಲ್ಲಿ ನೆಟ್ಟಿತ್ತು. ಅವಕಾಶ ದೊರೆತಾಗ ಚಿಗುರಿ, ಬೆಳೆಯಲಾರಂಭಿಸಿತು.
ತೀವ್ರ ತಳಮಳದ ಹಂತಕ್ಕೆ, ಆಕೆಯ ಆತಂಕವು ಏರಬೇಕಾದರೆ, ಅವ್ಯಕ್ತವಾದ
ಕಾರಣಗಳು ಇನ್ನೂ ಹಲವಾರು ಇರಲೇಬೇಕು. ಅವೆಲ್ಲವೂ ತಮ್ಮಷ್ಟಕ್ಕೆ ತಾವೇ,
ಕಾಲಾನುಕೂಲವಾದಾಗ ಶಮನಗೊಳ್ಳುತ್ತವೆ. ದೊಡ್ಡದಾಗಿ ಕಾಡುವ, ಭಯ
ಹುಟ್ಟಿಸುವ ಸೈತಾನನನ್ನು ಉಚ್ಚಾಟನೆ ಮಾಡಿದರೆ ಮಿಕ್ಕ ಚಿಕಿತ್ಸೆಯು ಸುಲಭ
ಸಾಧ್ಯ.<noinclude></noinclude>
hvcfcrm1oolztmyil35yedjzlurkwdu
ಪುಟ:ಮನಮಂಥನ.pdf/೫೧
104
62498
316522
314193
2026-05-03T14:09:06Z
Shreesha Sharma
7840
/* Validated */
316522
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೩೨}}{{Right|ಮನಮಂಥನ}}
'''೫. ಶ್ವಾಸಕ್ಕೆ ತಗಲುವ ಆತಂಕ'''
{{gap}}ಮನಸ್ಸಿನಲ್ಲುಂಟಾದ ಆತಂಕವು ಮನಸ್ಸನ್ನು ಹೇಗೆ ಕಾಡುತ್ತದೆಯೋ ಅದನ್ನು
ಸಾಮಾನ್ಯವಾಗಿ ಎಲ್ಲರೂ ಅನುಭವಿಸಿದ್ದಾರೆ. ಆತಂಕವು ಅತಿಯಾದಗ, ಅದನ್ನು
ಶಮನ ಮಾಡಲು, ಪ್ರಕೃತಿಯು ಒಂದು ಉಪಾಯವನ್ನು ಕಂಡುಹಿಡಿದಿದೆ.
ದೇಹದ ಅಂಗಗಳಲ್ಲಿ ಯಾವುದಾದರೂ ಒಂದನ್ನು ಆರಿಸಿ, ಆ ಅಂಗದ
ಕಾರ್ಯನಿರ್ವಹಣೆಯಲ್ಲಿ ಆತಂಕವು ಅವತರಿಸುವಂತೆ ಮಾಡುವುದೇ ಪ್ರಕೃತಿಯ
ಒಂದು ಉಪಾಯ. ಆಗ ಅಂಗದ ಕಾಟವು ಕಾಡುತ್ತದೆ. ಆದರೂ ಆ ಅಂಗವು,
ಅದರ ಕೆಲಸವು, ಕಣ್ಣಿಗೆ ಗೋಚರವಾಗಿರುತ್ತದೆ. ಅವ್ಯಕ್ತ ಕಾರಣಗಳಿಂದ ಉದ್ಭವಿಸಿದ
ಆತಂಕವು ಅಂಗಗಳಲ್ಲಿ ವ್ಯಕ್ತವಾದರೆ, ಆತಂಕದ ತೀಕ್ಷ್ಮತೆಯು ಕಡಿಮೆಯಾಗುತ್ತದೆ.
ಆದುದರಿಂದಲೇ ಪ್ರಕೃತಿಯ ಇದೊಂದು ಉಪಾಯ, ಆತಂಕಶಮನಕ್ಕೆ.
{{gap}}ಇಂತಹ ಆತಂಕಗಳು ಪೌಗಂಡ ವಯಸ್ಸಿನಲ್ಲಿ ಹೆಚ್ಚಾಗಿ ಕಾಣಬರುತ್ತವೆ.
ಆ ವಯಸ್ಸಿನಲ್ಲಿ ದೇಹ ಮತ್ತು ಮನಸ್ಸು, ಇವೆರಡೂ ತಾಯ್ತನ ಅಥವಾ ತಂದೆಯ
ಹೊಣೆಯನ್ನು ವಹಿಸಿಕೊಳ್ಳಲು, ತೀವ್ರ ಮಾರ್ಪಾಡುಗಳನ್ನು ಮಾಡಿಕೊಂಡು
ಅಣಿಯಾಗಬೇಕು. ಅಂತಹ ಸಂಧಿಕಾಲದಲ್ಲಿ, ಇಡೀ ವ್ಯಕ್ತಿಯ ಗಮನವು ಜೀವನದ
ಪೂರ್ಣ ಹೊಣೆಯತ್ತ ಸೆಳೆಯಲ್ಪಟ್ಟಿರುತ್ತದೆ. ಆತಂಕವು ಆಗ ಕಾಲು ಹಾಕಿಕೊಳ್ಳುವುದು
ಸುಲಭ.
{{gap}}ಉಮಾಕುಮಾರಿಗೆ, ತನ್ನ ಮನೆಯವರ ಅಜ್ಞಾನದಿಂದ, ಆತಂಕವು ಬಲ
ಗೊಂಡಿತು. ಶೀಲಾಳ ಆತಂಕವು ಶಮನವಾದ ರೀತಿಯನ್ನು ತಿಳಿದಾಯಿತು.
ಬಾವಿ ಕಟ್ಟೆಯ ಸೈತಾನ್ ಆಳಮನಸ್ಸಿನ ಹಗೇವುಗಳಲ್ಲಿ ಮನೆ ಮಾಡಕೊಂಡು
ಬೀಬಿಯ ಕತ್ತನ್ನು ಅದುಮಲಾರಂಭಿಸಿದ್ದನ್ನೂ ನೋಡಿದ್ದಾಯಿತು.
{{gap}}ಶ್ವಾಸಕಾರ್ಯದ ಮೇಲೆ ಆತಂಕವು ಎರಗಿ ಬೀಳುವುದೇಕೆ ? ಮತ್ತು
ಹೇಗೆ ?
{{gap}}ಮನುಷ್ಯನು ಸತ್ತಿದ್ದಾನೆಯೇ ಇಲ್ಲವೆ ಎಂಬುದನ್ನು ನಿರ್ಧರಿಸಲು
ಹೊಳೆಯುವ ಗಾಜನ್ನು ಮೂಗಿನ ಹೊಳ್ಳೆಗಳ ಬಳಿ ಇಡುತ್ತಿದ್ದರು. ಉಸಿರಾಡುತ್ತಿದ್ದರೆ,
ಆಗ ಉಸಿರಿನ ಆವಿಯು ಗಾಜಿನ ಮೇಲೆ ಮಂಜುಗಟ್ಟುತ್ತಿತ್ತು. ಅದು ಸ್ಪಷ್ಟವಾಗಿ
ಕಾಣಿಸುತ್ತಿತ್ತು. ತುಂಬಾ ಕ್ಷೀಣವಾಗಿರುವ ಕಾರಣ ಉಸಿರಾಡುತ್ತಿರುವುದು ಸ್ಪಷ್ಟವಾಗಿ
ಕಾಣಿಸದೇ ಇದ್ದರೂ, ಗಾಜಿಗೆ ಮಂಜು ಹಿಡಿದರೆ ಉಸಿರಾಡುತ್ತಿದೆ ಎಂದು
ಖಚಿತವಾಗುತ್ತಿತ್ತು. ಅಂದರೆ ಉಸಿರು ಕ್ಷೀಣವಾಗಿಯಾದರೂ ಆಡುತ್ತಿದ್ದರೆ
ಬದುಕಿದ್ದಾನೆ. ಇಲ್ಲದಿದ್ದರೆ ಸತ್ತ ಎಂದು ತೀರ್ಮಾನಿಸುತ್ತಿದ್ದರು. ಬಾಳು ಸಾವುಗಳನ್ನು<noinclude></noinclude>
jmd456glb9xudoxd86ln8raybhvaw6v
ಪುಟ:ಮನಮಂಥನ.pdf/೫೨
104
62499
316523
314201
2026-05-03T14:09:33Z
Shreesha Sharma
7840
/* Validated */
316523
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಆತಂಕ}}{{Right|೩೩}}
ಉಸಿರಾಟವು ನಿಷ್ಕರ್ಷಿಸುತ್ತಿತ್ತು. ಪ್ರಾಣ ಎಂದರೆ ಉಸಿರು ಎನ್ನುವಂತಾಯಿತು.
ಅಷ್ಟು ಮುಖ್ಯ ಉಸಿರಾಟ,
{{gap}}ತಾಯಿ ಗರ್ಭದಲ್ಲಿ ಸಂಪೂರ್ಣ ರಕ್ಷಣೆಯನ್ನು ಮಗುವು ಪಡೆದಿರುತ್ತದೆ.
ಸ್ವಂತ ಹೊಣೆಯ ಲವಲೇಶಾಂಶವೂ ಅದಕ್ಕಿರುವುದಿಲ್ಲ. ಆದರೂ ಅದರ ದೇಹದಲ್ಲಿ
ರಕ್ತ ಸಂಚಾರವಾಗುತ್ತಿರುತ್ತದೆ. ಮಾಂಸಖಂಡಗಳೂ, ಮೂಳೆಗಳೂ
ಬೆಳೆಯುತ್ತಿರುತ್ತವೆ. ಅಂದರೆ ಆಹಾರದ ಸರಬರಾಜೂ ಆಗುತ್ತಿರುತ್ತದೆ. ಆದರೆ
ಪ್ರಾಣಕ್ಕೆ ಅತಿ ಮುಖ್ಯವಾದ ಉಸಿರಾಟವು ಇರುವುದೇ ಇಲ್ಲ. ಗರ್ಭದಲ್ಲಿನ
ಮಗುವಿನ ಶ್ವಾಸಕೋಶಗಳು ಮೊಗ್ಗಿನಂತೆ ಮುದುರಿಕೊಂಡಿರುತ್ತವೆ. ತಾಯ
ಉಸಿರಾಟದಿಂದ, ಮಗುವು ಅಗತ್ಯ ವಸ್ತುಗಳನ್ನು ರಕ್ತದ ಮೂಲಕ ಪಡೆಯುತ್ತದೆ.
{{gap}}ಗರ್ಭದಿಂದ ಹೊರಗೆ ಬಂದ ಕ್ಷಣದಲ್ಲಿ ತಾಯ ಆಸರೆಯು ತಪ್ಪಿತು.
ಆಗ ಮಗುವು ಅಳುತ್ತದೆ. ಅಳುವಾಗ ಆ ತನಕ ಮುದುಡಿಕೊಂಡಿದ್ದ ಶ್ವಾಸಕೋಶಗಳು
ತೆರೆಯಲ್ಪಡುತ್ತವೆ. ಅತ್ತಾಗ ಎಳೆದುಕೊಂಡ ಉಸಿರು, ಶ್ವಾಸಕೋಶಗಳ ಮೂಲೆ
ಮೂಲೆಗಳನ್ನೂ ಬಿಡಿಸಿ ಅರಳಿಸಿ, ಮುಂದೆ ಶ್ವಾಸಕಾರ್ಯವನ್ನು ಅಣಿಯಾಗಿ
ಮಾಡುವಂತೆ ಸಿದ್ಧಪಡಿಸುತ್ತದೆ.
{{gap}}ಸಂಪೂರ್ಣವಾಗಿ ಸುರಕ್ಷಿತವಾದ ಗರ್ಭದಲ್ಲಿರುವಾಗ ಯಾವ ಆತಂಕವೂ
ಇರಲಗತ್ಯವಿಲ್ಲ. ಆದರೆ ಹೊರ ಪ್ರಪಂಚಕ್ಕೆ ಇಳಿದ ಕ್ಷಣ, ಶ್ವಾಸಕಾರ್ಯವು
ಆರಂಭವಾಯಿತು. ಉಸಿರಾಡುವ ಹೊಣೆಯು ನನ್ನ ಮೇಲೆ ಬಿತ್ತು, ಎಂದು
ಹುಟ್ಟಿದ ಮಗುವಿಗೆ ಆತಂಕವು ಉಂಟಾಗುತ್ತದೆ ಎನ್ನುವುದು ಊಹಾಪೋಹ.
ಏಕೆಂದರೆ ಆತಂಕವನ್ನು ಅನುಭವಿಸುವ ಹಂತಕ್ಕೆ ಅದರ ಮನಸ್ಸು ಅರಳಿರುವುದೇ
ಇಲ್ಲ. ಈ ಕಾರಣದಿಂದಲೇ ಜವಾಬ್ದಾರಿ, ಹೊಣೆ, ನಾನು, ನನ್ನದು ಎನ್ನುವ
ಕಲ್ಪನೆಯು ಹುಟ್ಟಿರುವುದಿಲ್ಲ.
{{gap}}ಆದರೆ ಅದರ ಮೆದುಳು ಬೆಳೆದಿರುತ್ತದೆ. ದೇಹದ ವಿಧವಿಧ ಅಂಗಗಳಿಗೆ
ನಿಕಟ ಸಂಪರ್ಕವನ್ನು ಅಣಿಮಾಡುವಷ್ಟು ಬೆಳೆದಿರುತ್ತದೆ. ಮೆದುಳು ಎಂದಾಗ
ಎರಡು ಮುಖ್ಯ ಭಾಗಗಳನ್ನು ಗಮನಿಸಬೇಕು. ಒಂದು : ಪುರಾತನವಾದ
ಮೆದುಳಿನ ಬುಡ. ದೇಹದ ಅಗತ್ಯ ಕಾರ್ಯಗಳನ್ನು ನಿಯಂತ್ರಿಸುವ ಮೆದುಳು
ಕೇಂದ್ರಗಳೆಲ್ಲವೂ ಇಲ್ಲಿಯೇ ಇರುವುದು. ಇನ್ನೊಂದು ; ಮೆದುಳಿನ ಕಾರ್ಟೆಕ್ಸ್
ವಿಚಾರ ಶಕ್ತಿಗೂ, ಸ್ಮರಣೆಗೂ ಮೀಸಲಾದುದು ಈ ಭಾಗ, ಮೆದುಳಿನ ಬುಡವು
ಹುಟ್ಟಿದ ಮಗುವಿನಲ್ಲಿ ಸಾಕಷ್ಟು ಬೆಳೆದಿರುತ್ತದೆ. ಆದರೆ ಮೆದುಳಿನ ಕಾರ್ಟೆಕ್ಸ್
ಭಾಗವು ಅಷ್ಟಾಗಿ ಬೆಳೆದಿರುವುದಿಲ್ಲ. ಮಗುವು ಬೆಳೆದಂತೆಲ್ಲ, ಅದರ ಜ್ಞಾನ<noinclude></noinclude>
g6atalw3vu8pmvmpbahxy1jswr2cj2f
ಪುಟ:ಮನಮಂಥನ.pdf/೫೩
104
62500
316524
314206
2026-05-03T14:09:51Z
Shreesha Sharma
7840
/* Validated */
316524
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೩೪}}{{Right|ಮನಮಂಥನ}}
ಭಂಡಾರವು ಹೆಚ್ಚಿದಂತೆಲ್ಲ, ಅದರ ಸ್ಮರಣ ಕೋಶವು ಹಿರಿದಾದಂತೆಲ್ಲ ಕಾರ್ಟೆಕ್ಸ್
ಕೂಡ ಹೊರವಾಗಿ ಬೆಳೆಯುತ್ತದೆ. ಬೆಳೆಯುವಾಗಲೂ ಕೂಡ ಮೆದುಳಿನ
ಬುಡದೊಂದಿಗೆ ನಿಕಟ ಸಂಪರ್ಕವನ್ನು ಬಲಪಡಿಸಿಕೊಂಡಿರುತ್ತದೆ. ಮೆದುಳಿನ
ಬುಡದಲ್ಲಿ ಶ್ವಾಸಕಾರ್ಯವನ್ನು ನಿಯಂತ್ರಿಸುವ ಮುಖ್ಯ ಕೇಂದ್ರಗಳಿರುವುವು.
ಮೆದುಳಿನ ಕಾರ್ಟೆಕ್ಸ್ ಭಾಗವು ವೃದ್ಧಿಯಾದಂತೆಲ್ಲ, ಆತಂಕವು ಉಂಟಾಗಬಹುದಾದ
ಸನ್ನಿವೇಶಗಳು ಸಂಭವಿಸಲೇಬೇಕು. ಅದೇ ಬಾಳು. ಹಾಗೆ ಆತಂಕವು ಮೂಡಿದಾಗ
ಶ್ವಾಸಕಾರ್ಯದ ಕೇಂದ್ರಗಳು ಆತಂಕಕ್ಕೆ ಅನುಗುಣವಾಗಿ ತಲ್ಲಣಿಸುತ್ತವೆ. ಅಂದರೆ
ಶ್ವಾಸಕೋಶದ ಕಾರ್ಯಗಳು ಏರುಪೇರಾದಂತೆ, ತಾಪತ್ರಯಪಡುತ್ತಿರುವಂತೆ
ಮನಸ್ಸಿಗೆ ಭಾಸವಾಗುತ್ತದೆ. ಶ್ವಾಸಕೋಶದ ಕೇಂದ್ರಗಳು ತಲ್ಲಣಿಸುವ ಬದಲು
ಕೆರಳಿದರೆ, ಆಗ ಶ್ವಾಸಕಾರ್ಯವು ದಿಟವಾಗಲೂ ಏರುಪೇರಾಗುತ್ತದೆ.
ಶ್ವಾಸಕೇಂದ್ರಗಳು ತಲ್ಲಣಿಸುವಾಗ, ದೀರ್ಘವಾಗಿ ನಿಟ್ಟುಸಿರು ಬಿಡುವುದು,
ಭಯಂಕರವಾಗಿ ಆಕಳಿಸುವುದು, ಬೇಗ ಬೇಗ ಉಸಿರನ್ನು ಮೇಲೆ ಮೇಲೆ
ಎಳೆದುಕೊಳ್ಳುವುದು, ಇವೆಲ್ಲವೂ ನಡೆಯುತ್ತವೆ. ಇವೆಲ್ಲವೂ ಆತಂಕದ ಸಾಮಾನ್ಯ
ಚಿಹ್ನೆಗಳು. ಎಲ್ಲರೂ ಕಂಡಿರುವ ವಿಷಯ. ಆದರೆ ಆತಂಕವು ಅತಿಯಾದರೆ,
ಆಗ ಉಸಿರಾಟದ ತುಸು ಏರುಪೇರುಗಳು ಗಮನಕ್ಕೆ ಬರುತ್ತವೆ. ಅಲ್ಲದೆ
ಭೂತಕನ್ನಡಿಯಲ್ಲಿ ನೋಡಿದಂತೆ, ಬೃಹತ್ ಪ್ರಮಾಣದಲ್ಲಿದ್ದಂತೆ ಭಾಸವಾಗುತ್ತವೆ.
ಭೂತಕನ್ನಡಿಯಲ್ಲಿ ಕಂಡಂತೆಯೇ ಹೊರತು ದಿಟವಾಗಲೂ ಬೃಹತ್
ಪ್ರಮಾಣದ್ದೇನೂ ಅಲ್ಲವೇ ಅಲ್ಲ. ಭೂತ ಕನ್ನಡಿಯ ಬೃಹತ್ ಏರುಪೇರು,
ಅಯ್ಯೋ! ಉಸಿರು ನಿಂತು ಹೋಗುವುದಲ್ಲ, ಶ್ವಾಸಕೋಶವು ಬೆಲೂನ್ ಆಯಿತಲ್ಲ,
ಪ್ರಾಣವಾಯುವು ಹಾರಿಹೋಗಿ ಬಿಡುತ್ತಲ್ಲ' ಎಂಬ ದೊಡ್ಡದಾದ ಭಯಪೂರಿತವಾದ
ಆತಂಕವಾಗುತ್ತದೆ. ಅತಿಯಾಗಿ ಕಳವಳಪಡಿಸಿ ಕಾಡುತ್ತದೆ. ಭಾರೀ ಪ್ರಮಾಣದ
ಈ ಆತಂಕದ ಮುಂದೆ, ಮನಸ್ಸಿನಲ್ಲಿ ಮೂಡಿದ್ದ ಬಾಳಿನಿಂದುಂಟಾದ ಮೊದಲ
ಆತಂಕವು ಅಲ್ಪವಾಗುತ್ತದೆ. ಗಮನಕ್ಕೆ ಬರುವುದೇ ಇಲ್ಲ. ಶ್ವಾಸಕಾರ್ಯದ
ಪ್ರಾಣರಂಗನ ಆತಂಕದ ಮುಂದೆ ಬಾಳಸಿಂಗನ ಚಿಲ್ಲರೆ ಆತಂಕಗಳು ಹೇಗೆ
ತಾನೆ ಮೆರೆಯಲು ಸಾಧ್ಯ ! ದೊಡ್ಡಗೌಡ ದೊಣ್ಣೆ ಹಿಡಿದು ಹೆದರಿಸುತ್ತಿರುವಾಗ,
ಚಿಕ್ಕೇಗೌಡನ ಕೀಟಳೆಯನ್ನು ಯಾರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ?
{{gap}}ಮಾಡಲು ಯಾವ ಕೆಲಸವೂ ಇರದಿದ್ದಾಗ, ಅಥವಾ ಕಾರಣಾಂತರದಿಂದ
ಕೆಲಸ ಮಾಡಲು ಬೇಸರ ತುಂಬಿದಾಗ, ದೇಹದ ಎಲ್ಲ ಕಾರ್ಯಗಳೂ
ಮಂದಗತಿಯಲ್ಲಿ ನಡೆಯುತ್ತವೆ. ಉಸಿರಾಡುವುದೂ ಹಗುರವಾಗಿ ಮಂದಗತಿಯಲ್ಲಿ<noinclude></noinclude>
leda538wcq8mxdfnev8kss9mwoiil97
ಪುಟ:ಮನಮಂಥನ.pdf/೫೪
104
62501
316525
314207
2026-05-03T14:10:17Z
Shreesha Sharma
7840
/* Validated */
316525
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಆತಂಕ}}{{Right|೩೫}}
ನಡೆಯುತ್ತದೆ. ಎಳೆದುಕೊಂಡ ಉಸಿರಿನಿಂದ, ಅಗತ್ಯವಾದಷ್ಟು ಆಕ್ಸಿಜನ್, ಆ
ಸ್ಥಿತಿಯಲ್ಲಿ ದೊರಕುವುದಿಲ್ಲ. ಶ್ವಾಸಕೇಂದ್ರಗಳು ಆಗ ಚುರುಕುಗೊಂಡು,
ಶ್ವಾಸಕಾರ್ಯವನ್ನು ತ್ವರಿತಗೊಳಿಸಲು ಆಜ್ಞೆಯೀಯುತ್ತವೆ. ದೀರ್ಘವಾದ
ಆಕಳಿಕೆಯೇ ಇದರ ಪರಿಣಾಮ.
{{gap}}ಹೇಳಿದ್ದನ್ನೇ ಅವಲಕ್ಷಣವಾಗಿ ಹೇಳುವ ಕಿಸುಬಾಯದಾಸ, ಕೇಳುಗನ
ಮನಸ್ಸಿನಲ್ಲಿ ಚಿಟ್ಟುಹಿಡಿಸುತ್ತಾನೆ. ನಾಗರಿಕತೆಯ ಕುರುಹು ಎಂದೆನ್ನಿಸಿಕೊಂಡ
ಸಮಾಜದ ಸಭ್ಯ ನಡವಳಿಕೆಯ ಕಾರಣದಿಂದ, ಚಿಟ್ಟು ಹಿಡಿಯುತ್ತಿದ್ದರೂ
ಕೇಳಿಸಿಕೊಳ್ಳಲೇಬೇಕು. ಅಂತಹ ಬೇಸರ ಮುತ್ತಿದ ಸಂದರ್ಭಗಳಲ್ಲಿಯೂ
ಕುಂಭಕರ್ಣ ಆಕಳಿಕೆಯು ತಾನಾಗಿತಾನೇ ವ್ಯಕ್ತವಾಗುತ್ತದೆ. ಮನಸ್ಸಿಗೆ
ಸಮಾಧಾನವನ್ನೂ ತರುತ್ತದೆ, ಒಂದು ಪ್ರಮಾಣದಲ್ಲಿ.
{{gap}}ಬೇಸರವು ಮನಸ್ಸಿನಲ್ಲಿ ತಾತ್ಕಾಲಿಕವಾಗಿರುವ ಪರಿಸ್ಥಿತಿ. ಮನಸ್ಸು ಹೇಗೂ
ಚಂಚಲ, ಅಲ್ಲವೇ ! ಅದೂ ಒಂದು ವರವೋ ಏನೋ ? ಬೇಸರವು
ಅತಿಯಾದಾಗ ಬೇರೆ ಯಾವುದಾದರೂ ವಿಷಯವು ಮನಸ್ಸನ್ನು ಸೆರೆಹಿಡಿಯುತ್ತದೆ.
ಅದೂ ತಾತ್ಕಾಲಿಕವೇ, ಮಕ್ಕಳ ಆಟದಲ್ಲಿದ್ದಂತೆ.
{{gap}}ಆದರೆ ಬಾಳಿನಲ್ಲಿ ಯಾವುದಾದರೂ ನಿರ್ಣಯವನ್ನು ಮಾಡಬೇಕಾದಾಗ,
ಆಗು ಹೋಗುಗಳು ಸಮ ಸಮ ಕಾಡುವಾಗ, ನಿರ್ಣಯವು ದುಸ್ಸಾಧ್ಯವಾಗುತ್ತದೆ.
ಆಗ ಆತಂಕವು ಸುಡಲಾರಂಭಿಸುತ್ತದೆ. ಆಗಲೂ ಆಕಳಿಕೆಯು ಅವತರಿಸುತ್ತದೆ.
ಆದರೆ ಈ ರೀತಿ ಉದ್ಭವಿಸಿದ ಆಕಳಿಕೆಯು ಭಯವನ್ನು ಮೂಡಿಸುತ್ತದೆ,
ಭವಿಷ್ಯದ ಭಯವನ್ನು ಭವಿಷ್ಯವು ಎಂದೂ ಮಾಯಾ ರೂಪಿನದು, ಮಾಯೆಯು
ಭಯವನ್ನು ಮೂಡಿಸುತ್ತದೆ. ಆಸೆಯನ್ನೂ ಚಿಗುರಿಸುತ್ತದೆ. ಆದರೆ ಆತಂಕವು
ಸುಡಲಾರಂಭಿಸಿದರೆ ಭಯವೇ ಕಾಣಿಸುವುದು.
{{gap}}ಆತಂಕ, ಭಯ, ಇವುಗಳ ಸಮ್ಮಿಶ್ರ ಕಾಟದಿಂದ, ಶ್ವಾಸಕಾರ್ಯದ
ಅವಾಂತರಗಳು ಹೇಗೆ ಮತ್ತು ಏಕೆ ಉಂಟಾದುವು ಎಂಬುದನ್ನು
ತುಸುಮಟ್ಟಿಗಾದರೂ ತಿಳಿದಂತಾಯಿತು.<noinclude></noinclude>
me2ychr7yc7evfwdjr7twe04lau2bwq
ಪುಟ:ಮನಮಂಥನ.pdf/೫೫
104
62502
316526
314212
2026-05-03T14:10:44Z
Shreesha Sharma
7840
/* Validated */
316526
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೩೬}}{{Right|ಮನಮಂಥನ}}
{{center|'''ಹೃದಯದ ಕಾರ್ಯದ ಅವ್ಯವಸ್ಥೆಗಳು'''}}
'''೧. ಕುಂಟಬಿಲ್ಲೆ ಆಡುವ ನಾಡಿ'''
{{gap}}ಶ್ವಾಸಕಾರ್ಯದ ಮೇಲೆ ಆತಂಕವು ಯಾವ ಯಾವ ರೀತಿಯಲ್ಲಿ
ಅವ್ಯವಸ್ಥೆಯನ್ನುಂಟುಮಾಡುವುದು ಎಂಬುದನ್ನು ತಿಳಿದೆವು. ಶ್ವಾಸಕಾರ್ಯದಷ್ಟೇ,
ಹೃದಯದ ಕಾರ್ಯವೂ ದೇಹದ ಜೀವಂತ ಆರೋಗ್ಯಕ್ಕೆ ಅತ್ಯಗತ್ಯ. ಆತಂಕವು
ಹೃದಯದ ಕಾರ್ಯದಲ್ಲಿಯೂ ಅವ್ಯವಸ್ಥೆಗಳನ್ನು ಹೂಡುತ್ತದೆ. ಸಾಮಾನ್ಯವಾಗಿ
ಕಾಣಬರುವ ಹಲವಾರು ತೆರನ ಹೃದಯದ ಏರುಪೇರು ಕಾರ್ಯವನ್ನು
ಪರಿಶೀಲಿಸೋಣ.
{{gap}}ದಷ್ಟ ಪುಷ್ಟ ಬುದ್ಧಿಜೀವಿ, ಅವ. ಸುಮಾರು ನಲವತ್ತರ ಬಲಿತ ಪ್ರಾಯ.
ಸಹೋದ್ಯೋಗಿ ಲಾಯರುಗಳಿಂದ ಮನ್ನಣೆಯನ್ನು ಗಳಿಸಿದ್ದವ. ಯಥೇಚ್ಚವಾದ
ಸಂಪಾದನೆಯೂ ಇತ್ತು. ಮಿತಿಮೀರಿ ದುಡಿಯುತ್ತಲೂ ಇದ್ದ. 'ದುಡಿಮೆಯಿಂದಲೇ
ಬಾಳು ಸಾರ್ಥಕ. ನಿಸ್ಪೃಹತೆಯಿಂದ ಎಷ್ಟು ದುಡಿದರೂ ದೇಹವು ದಣಿಯುವುದೇ
ಇಲ್ಲ. ಬೇನೆ ಬೀಳುವುದೂ ಇಲ್ಲ' ಎಂದವ ಹೆಮ್ಮೆಯಿಂದ, ಅವಕಾಶವು ಸಿಕ್ಕಿದಾಗಲೆಲ್ಲ
ಡಂಗೂರ ಹೊಡೆಯುತ್ತಿದ್ದ. ಅಂದಮೇಲೆ ಅತ್ಯಂತ ಸ್ವಾಭಿಮಾನಿ ಎಂದು ಹೇಳಬೇಕೆ
{{gap}}ಒಂದು ಸಂಜೆ ಆರರ ಸಮಯದಲ್ಲಿ ತನ್ನ ಕೊಠಡಿಯಲ್ಲಿ ಒಡೋಲಗವನ್ನು
ನಡೆಸುತ್ತಿದ್ದ. ಎದೆಯ ಎಡಭಾಗದಲ್ಲಿ ಚಳಕ್ ಅಂತ, ಅರೆ ಕ್ಷಣವೂ ಇರಲಾರದು,
ಅನ್ನಿಸಿತಂತೆ. ಮಾಸಿಕ ಡೈಜೆಸ್ಟ್ಗಳನ್ನು ಓದುವ ವಿದ್ಯಾವಂತ, ಹೃದಯಾಘಾತದ
ವಿವರಗಳು ತಿಳಿಯದೆ? ಬ್ಲಡ್ ಪ್ರೆಷರ್ ಎಂದರೆ ಗೊತ್ತಿಲ್ಲವೇ? ಮಿಂಚಿನಂತೆ
ಚಳಕ ಹೊಡೆದುದು ಹೃದಯ ಬೇನೆಯ ಮುನ್ಸೂಚನೆಯೇ ಇರಬೇಕು ಎಂದು
ಸಹಜವಾಗಿ ಊಹಿಸಿದ. ಆದಕಾರಣ 'ನನಗೆ ಮೈ ಸ್ವಸ್ಥವಿಲ್ಲ. ಮನೆಗೆ ಹೋಗಿ
ವಿಶ್ರಾಂತಿ ಪಡೆಯುತ್ತೇನೆ. ನಾಳೆ ಬೆಳಗ್ಗೆ ನೀವು ಬನ್ನಿ, ನಿಮ್ಮ ಮೊಕದ್ದಮೆಗಳನ್ನು
ಚರ್ಚಿಸೋಣ' ಎಂದು ಅಲ್ಲಿದ್ದ ಕಕ್ಷಿಗಾರರಿಗೆ ಹೇಳಿ ಒಡೋಲಗವನ್ನು ಬಂದು
ಮಾಡಿ, ಮನೆಗೆ ಹೋಗುವ ಮೊದಲು, ದಢ ದಢ ಡಾಕ್ಟರ ಬಳಿಗೆ ಓಡಿದ.
ನಲವತ್ತರ ಮಟ್ಟದ ಧಡಿಯ ಎದೆ ಚಳಕು ಎಂದರೆ ಸ್ವಾಭಾವಿಕವಾಗಿ ಬ್ಲಡ್
ಪ್ರೆಷರ್ ಎಷ್ಟಿದೆ ಎನ್ನುವುದನ್ನು ಡಾಕ್ಟರು ನೋಡಲೇಬೇಕು. ಡಾಕ್ಟರು
ನೋಡಬಯಸದೆ ಇದ್ದರೂ, ಓದಿದ ರೋಗಿ ಸುಮ್ಮನಿರುತ್ತಾನೆಯೇ? 'ಬ್ಲಡ್
ಪ್ರೆಷರನ್ನು ಡಾಕ್ಟರು ಪರೀಕ್ಷಿಸಿದರು. ಹೃದಯವನ್ನೂ ಬಲು ಎಚ್ಚರಿಕೆಯಿಂದ
ಪರೀಕ್ಷಿಸಿದರು. ಬ್ಲಡ್ ಪ್ರೆಷರ್ ಹೆಚ್ಚಾಗಿದೆಯೇ? 'ಎಷ್ಟು ಹೆಚ್ಚಾಗಿದೆ?' ಎಂದು
ಆಗ್ರಹಪೂರ್ವಕವಾಗಿ ರೋಗಿಯು ಕೇಳಿದ. 'ನೂರ ಅರವತ್ತು ; ತೊಂಭತ್ತು.<noinclude></noinclude>
7w0c9dkaepp6jieg5mtsadcvb33351d
ಪುಟ:ಮನಮಂಥನ.pdf/೫೬
104
62503
316527
314235
2026-05-03T14:11:06Z
Shreesha Sharma
7840
/* Validated */
316527
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಆತಂಕ}}{{Right|೩೭}}
ಅದೇನೂ ಹೆಚ್ಚಾಗಿಲ್ಲ. ನಿಮ್ಮ ವಯಸ್ಸು, ನಿಮ್ಮ ಕಾತರ ಇವುಗಳಿಗೆ ಸರಿಯಾಗಿದೆ.
ಹೃದಯವು ಫಸ್ಟ್ ಕ್ಲಾಸ್ ಆಗಿದೆ' ಎಂದರು ಡಾಕ್ಟರು. ಇನ್ನೂ ಏನನ್ನೋ
ಹೇಳಬೇಕು, ಅವರು, ಆದರೆ ಮಧ್ಯದಲ್ಲಿಯೇ ಬಾಯಿ ಹಾಕಿ, 'ನನ್ನ ವಯಸ್ಸಿಗೆ
ನೂರು ಮತ್ತು ನಲವತ್ತು ಪ್ರೆಷರ್ ಇರಬೇಕಲ್ಲವೇ ? ಇಪ್ಪತ್ತರಷ್ಟು ಹೆಚ್ಚಾಗಿದೆಯಲ್ಲವೇ'
ಎಂದು ರೋಗಿಯು ಕೇಳಿದ. 'ಹಾಗೇನಲ್ಲ, ಕೋಪವು ಉಕ್ಕಿದಾಗ ಬ್ಲಡ್
ಪ್ರೆಷರ್ ಏರಿರುತ್ತೆ. ಶಾಂತವಾದಾಗ ಇಳಿಯುತ್ತೆ. ೩೦-೪೦ ಮಿಲಿಮೀಟರುಗಳಷ್ಟು
ಏರುಪೇರಾಗುತ್ತದೆ. ಉದ್ವೇಗವು ತೋರಿದರೂ ಹಾಗೆಯೇ ಆಗುತ್ತೆ.
ಆತಂಕದಿಂದಲೂ ಹೀಗಾಗುತ್ತೆ. ನಿಮ್ಮ ಎದೆಯ ಕ್ಷಣಾಂಶದ ಚಳಕು, ಹೃದಯದ
ಅವ್ಯವಸ್ಥೆಯಿಂದಾಗಲೀ, ಬ್ಲಡ್ ಪ್ರೆಷರಿನ ಈ ಮಟ್ಟದಿಂದಾಗಲೀ, ಖಂಡಿತವಾಗಿ
ಆದುದಲ್ಲ.' ಎಂದು ಗಿಣಿಗೆ ಹೇಳಿದ ಹಾಗೆ ಡಾಕ್ಟರು ಹೇಳಿದರು. “ಈ ಮಾತ್ರೆಗಳನ್ನು
ತೆಗೆದುಕೊಳ್ಳಿ ಸುಖನಿದ್ರೆ ಬರುತ್ತದೆ. ಬೆಳಿಗ್ಗೆ ಹೊತ್ತಿಗೆ ಆರಾಮವಾಗಿರ್ತಿರಿ'
ಎಂದು ಎರಡು ಮಾತ್ರೆಗಳನ್ನು ಕೊಟ್ಟು ಕಳಿಸಿದರು.
{{gap}}ಗಿಣಿಗೆ ಹೇಳಿದ ಹಾಗೆ ಡಾಕ್ಟರು ಹೇಳಿದರು. ಮರುನುಡಿಯಲು ಮಾತ್ರ
ಕಲಿಯುವ ಗಿಣಿಗೆ ಎಷ್ಟು ಅರ್ಥವಾಗುತ್ತೋ ಅಷ್ಟೇ ರೋಗಿಯ ಮನಸ್ಸಿಗೂ
ನಾಟಿದ್ದು. ಮನೆಗೆ ಮಾತ್ರೆಗಳನ್ನು ಹಿಡಿದುಕೊಂಡು ಹಿಂತಿರುಗಿದ. ಅಷ್ಟು ಬೇಗ
ಸಂಜೆಯ ವೇಳೆಯಲ್ಲಿ ಗಂಡ ಮನೆಗೆ ಬಂದಿದ್ದನ್ನು ಹೆಂಡತಿಯು ಕಂಡಿರಲೇ
ಇಲ್ಲ. ಗಂಡನಿಗೆ ಏನಾಗಿರಬಹುದು ? ಯಾಕೆ ಬೇಗ ಬಂದರು ? ಎಂದು
ಆಕೆಗೂ ಕಾತರವಾಯಿತು. 'ಯಾಕಂದ್ರೆ ಇಷ್ಟು ಸುಸ್ತಾಗಿದ್ದೀರಿ ? ಏನಾಯ್ತು
ಅಂದ್ರೆ ?' ಎಂದು ಬಡಬಡ ಕೇಳಿದಳು. 'ಎಲ್ಲರಿಗೂ ಸ್ಪಷ್ಟವಾಗಿ ಕಾಣಿಸುವಷ್ಟು
ಬೇನೆ ಬಡಿದಿದೆಯೆ ?' ಎಂದುಕೊಂಡ, ರೋಗಿ. ನಿಟ್ಟುಸಿರುಬಿಟ್ಟ, 'ಯಾಕೋ
ಸ್ವಲ್ಪ ಸುಸ್ತಾಗಿತ್ತು, ಅದಕ್ಕೆ ಬೇಗ ಬಂದೆ' ಎಂದು ಕಿರುದನಿಯಲ್ಲಿ ಹೇಳಿ ತನ್ನ
ಕೊಠಡಿಗೆ ಹೋದ. ಬಟ್ಟೆ ಕಳಚಿ, ಹಾಸಿಗೆ ಹಿಡಿದ. 'ಸ್ವಲ್ಪ ಹೊತ್ತು ಮಲಗಿರುತ್ತೇನೆ,
ಆಮೇಲೆ ಎದ್ದು ಬಂದು ಊಟ ಮಾಡುತ್ತೇನೆ' ಎಂದ. ಒಂದರ್ಧ ಗಂಟೆಯಾದ
ಮೇಲೆ ಎದ್ದ. ಆ ರಾತ್ರಿ ಹಾಲನ್ನವನ್ನು ಮಾತ್ರ ಉಂಡ. 'ಇದೇನೂ ಅಂದ್ರೆ ?
ಬಟಾಣಿಕಾಳು ಉಸುಲಿ ಮಾಡಿದ್ದೇನೆ, ಈರುಳ್ಳಿ ಹುಳಿ ಮಾಡಿದ್ದೇನೆ, ಬಾಳಕ
ಕರೆದಿಟ್ಟಿದ್ದೇನೆ. ಎಲ್ಲಾ ಬಿಟ್ಟು ಹಾಲು, ಅನ್ನ ! ಏನಾಗಿದೆ ಅಂದ್ರೆ ?' ಎಂದು ಆಕೆ
ಅಳುಕ್ಕೆ ಶುರು ಮಾಡಿದಳು. 'ಏನೂ ಆಗಿಲ್ಲ ಕಣೇ ! ಸುಮ್ಮಸುಮ್ಮನೆ ನೀನ್ಯಾಕೆ
ಆಳ್ವ ? ಈಗಲೇನೇ ? ಎದೆಯಲ್ಲಿ ಏನೋ ಚಳಕ ಅಂದಿತು. ಡಾಕ್ಟರ್ ಹತ್ತಿರ
ಹೋಗಿದ್ದೆ. ಏನೂ ಇಲ್ಲ. ಚೆನ್ನಾಗಿದ್ದಿ ಅಂದರು. ಸ್ವಲ್ಪ ಬ್ಲಡ್ ಪ್ರೆಷರ್ ಏರಿತ್ತು.<noinclude></noinclude>
21dpab9wpkxnghu5cmb3unqdl5iqkkm
ಪುಟ:ಮನಮಂಥನ.pdf/೫೭
104
62504
316528
314236
2026-05-03T14:12:00Z
Shreesha Sharma
7840
/* Validated */
316528
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೩೮}}{{Right|ಮನಮಂಥನ}}
ಅವರೇನೂ ಹೇಳಲಿಲ್ಲ ಆದರೂ ಉಪ್ಪು ತಿನ್ನದೆ ಇದ್ದರೆ, ಬ್ಲಡ್ ಪ್ರೆಷರಿಗೆ
ಒಳ್ಳೆಯದು ಅಲ್ಲವೇ? ಅದಕ್ಕೇ ಇಷ್ಟೇ ಊಟ ಮಾಡಿ ಮಲಕ್ಕೋತೀನಿ' ಎಂದು
ಹೇಳಿ ಮಲಗಲು ಹೋದ.
{{gap}}ಬೆಳಿಗ್ಗೆ ಎದ್ದಾಗ ಲವಲವಿಕೆಯಾಗಿಯೇ ಇದ್ದ. ಪ್ರಾತರ್ವಿಧಿಗಳನ್ನು ಎಂದಿ
ನಂತೆ ಮುಗಿಸಿದ. ಬೆಳಗಿನ ತಿಂಡಿಗೆ ಆತುರವಾಗಿ ಕುಳಿತಾಗ 'ಈಗ ಹೇಗಿದ್ದೀರಿ
ಅಂದ್ರೆ!' ಎಂದು ಹೆಂಡತಿ ಕೇಳಿದಳು. ಆತನಕ, ಹಿಂದಿನ ಸಂಜೆಯ ಅಡಾಉಡಿ
ಯೆಲ್ಲವೂ ಮರೆತೇ ಹೋಗಿತ್ತು. ಹೆಂಡತಿಯ ಪ್ರಶ್ನೆಯು ಆ ನೆನಪನ್ನು ಕೆರಳಿಸಿತು.
ಈಗೇನೂ ಅಂತಹ ಸುಸ್ತಿಲ್ಲ, ಔಷಧಿಯಿಂದ ಗುಣವಾಗಿರಬೇಕು. ಕೆಲಸಕ್ಕೆ ಹೋಗಿ
ನೋಡ್ತೀನಿ, ಸುಸ್ತಾದರೆ ಮನೆಗೆ ಹಿಂತಿರುಗುತ್ತೀನಿ' ಎಂದು ಹೇಳಿದ. ತಿಂಡಿ
ತಿಂದು ಕಚೇರಿಗೆ ಹೋದ. ಹತ್ತು ಹದಿನೈದು ನಿಮಿಷಗಳಲ್ಲಿ ಮನೆಗೆ ಹಿಂತಿರುಗಿದ.
'ಯಾಕೋ ಒಂದು ತರಹ ಆಗ್ತಾ ಇದೆ, ಅನುಭವಸ್ಥ ಡಾಕ್ಟರ ಸಲಹೆಯನ್ನು
ಪಡೆಯೋಣ ಅನ್ನಿಸುತ್ತೆ. ನೀನು ನನ್ನ ಜತೆಯಲ್ಲಿ ಬಾ, ದಾರಿಯಲ್ಲಿ ಏನಾದರೂ
ಲಕ್ವಾಗಿಕ್ವಾ ಹೊಡೆದರೆ !' ಎಂದು ಹೇಳಿ ಅವಳನ್ನೂ ಕರೆದುಕೊಂಡು ಬೇರೆ
ಡಾಕ್ಟರ ಬಳಿಗೆ ಹೋದ.
{{gap}}ಈ ರೀತಿ ಆರಂಭವಾಯಿತು ಅವನ ಬೇರೆ ಅವನ ನರಳಾಟ, ಎಂದಿನಂತೆ
ಕೆಲವು ದಿನಗಳು ದುಡಿಯುತ್ತಿದ್ದ ಸಾಕಷ್ಟು ಚೂಟಿಯಾಗಿ ಕೆಲಸವನ್ನು ಮಾಡುತ್ತಿದ್ದ.
ಇನ್ನು ಕೆಲವು ವೇಳೆ ತಾನು ಹೆದರಿ ಒದ್ದಾಡುವುದರ ಜತೆಗೆ ಹೆಂಡತಿಯನ್ನೂ
ಹೆದರಿಸಿ ಕಂಗೆಡಿಸುತ್ತಿದ್ದ.
{{gap}}ಬ್ಲಡ್ ಪ್ರೆಷರ್ : ಇ.ಸಿ.ಜಿ. ಎಕ್ಸ್ರೆ ; ವಿಧವಿಧ ರಕ್ತ ಪರೀಕ್ಷೆಗಳು, ಎಲ್ಲವೂ
ಹಲವಾರು ಕಡೆ ವಿಫುಲವಾಗಿ ಆದುವು, ಅವನ ನರಳಾಟ ತಪ್ಪಲಿಲ್ಲ.
{{gap}}'ನೋಡಿ, ನೋಡಿ, ನಾಡಿ ಕುಂಟೆಬಿಲ್ಲೆಯನ್ನು ಆಡುತ್ತಿದೆ. ಅಯ್ಯಯ್ಯೋ
ನಿಂತೇ ಹೋಯಿತು ! ಎಷ್ಟು ಹೊತ್ತು ನಿಂತೇ ಹೋಗಿತ್ತು ? ಅಬ್ಬಾ ! ಕಣ್ಣು
ಯಾಕೋ ಮಂಜಾಗುತ್ತಿಲ್ಲ. ಮೆದುಳಿನಲ್ಲಿ ಎಲ್ಲಾದರೂ ಹೆಮೊರೇಜ್
ಆಗಿರಬಹುದೇ ? ಲಕ್ವಾ ಬಡಿಯದ ಹಾಗೆ ಏನು ಮಾಡಬೇಕು? ಸಂಪೂರ್ಣವಾಗಿ
ಉಪ್ಪು ಬಿಟ್ಟಿದ್ದೇನೆ. ಆದರೂ ಬ್ಲಡ್ ಪ್ರೆಷರ್ ಇಳಿದೇ ಇಲ್ಲವಲ್ಲ! ಯಾಕೆ ?'
{{gap}}ಇತ್ಯಾದಿ ದಿನದಿನದ ಪಲ್ಲವಿಯಾಯಿತು ; ಕಂಡ ಕಂಡ ಡಾಕ್ಟರ ಬಳಿಗೆ
ಹೋದಾಗಲೆಲ್ಲ. ಹೆಂಡತಿಯನಕ ಬಳಿಯಲ್ಲೇ ಸದಾ ಇರಬೇಕು. ಅವನು
ನರಳುವುದಂತಿರಲಿ, ಆಕೆಗೂ ನರಕಯಾತನೆ.
{{gap}}ದಿಳ್ಳಿಯ ಸುಪ್ರೀಂ ಕೋರ್ಟಿನಲ್ಲಿ ಲಾಯರಾಗಬೇಕು. ಅಷ್ಟಾದರೆ ಸಾಲದು<noinclude></noinclude>
01p6nn2pxfv6ydnz09m6iaqz38notka
ಪುಟ:ಮನಮಂಥನ.pdf/೫೮
104
62505
316529
314237
2026-05-03T14:12:41Z
Shreesha Sharma
7840
/* Validated */
316529
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಆತಂಕ}}{{Right|೩೯}}
ನ್ಯಾಯಾಧೀಶನಾಗಬೇಕು ಎನ್ನುವ ಹೆಬ್ಬಯಕೆ ಅವನಿಗೆ. ನನ್ನಂತಹ ಜಾಣನಿಗಲ್ಲದೆ,
ಮತ್ತೆ ಯಾರಿಗೆ ತಾನೇ ಆ ಯೋಗ್ಯತೆ ಇದೆ ? ಎಂದೆನ್ನುವ ಆಸೆ ಮತ್ತು
ದುರಭಿಮಾನ ಅವನಿಗಿತ್ತು. ತಾನಿದ್ದ ಊರಿನಲ್ಲಿ ಅವನೇ ಹುಲಿಯಾಗಿದ್ದ. ಅಲ್ಲಿ
ದೊರಕಿದ ಮನ್ನಣೆಯೇ ಅವನನ್ನು ದಿಳ್ಳಿಯತ್ತ ಬೆರಳುಮಾಡಿ ಅಟ್ಟಿತು. ಆರೆಂಟು
ತಿಂಗಳು ಅಲ್ಲಿಗೆ ಹೋಗಿ ಒಂದು ಕೈ ನೋಡಿದ, ಅವಲಕ್ಷಣ ಎನ್ನಿಸಿಕೊಂಡ.
ಮರಳಿ ತನ್ನೂರಿಗೆ ವಾಪಸು ಬಂದ. ಅಷ್ಟು ಕಾಲ ಊರು ಬಿಟ್ಟಿದ್ದರೂ, ತಿರುಗಿ
ತನ್ನ ಕೆಲಸವನ್ನು ಶುರುಮಾಡಿದಾಗ, ಯಾವ ಕೊರತೆಯೂ ಕಾಣಬರಲಿಲ್ಲ.
ಎಂದಿನಂತೆ ಸ್ವಲ್ಪ ಕಾಲದಲ್ಲೇ ಕಚೇರಿಯ ಒಡೋಲಗವು ನಡೆಯಹತ್ತಿತ್ತು.
{{gap}}ಆದರೆ ಆ ದಿಳ್ಳಿಯ ಆಸೆ ಪಾಶವನ್ನು ಬಿಗಿದೆಳೆಯುತ್ತಿತ್ತು. ಪುಟ್ಟ ಊರಿನಲ್ಲಿ
ದೊಡ್ಡವನಾಗಿರುವುದಷ್ಟೇ ನನ್ನ ಪಾಲಿನ ಪಂಚಾಮೃತ, ಎಂದು ಅವ ವಾಸ್ತವಿಕ
ಪರಿಸ್ಥಿತಿಯನ್ನು ಮನದಾಳದಲ್ಲಿ ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಆಸೆ, ವಾಸ್ತವಿಕ
ಪರಿಸ್ಥಿತಿ ; ಇವೆರಡರ ಹೋರಾಟದಲ್ಲಿ ಇವ ಖಚಿತ ನಿರ್ಣಯವನ್ನು ಮಾಡಲಾರದೆ,
ಆತಂಕದಿಂದ ನರಳುತ್ತಿದ್ದ. ಮನಸ್ಸು ಚಿಟಿಚಿಟಿಗುಡುತ್ತಿತ್ತು.
{{gap}}ಓದಿದ ಲೇಖನಗಳಿಂದ ಹೃದಯಾಘಾತದ ವಿವರಗಳನ್ನು ಅರ್ಧಂಬರ್ಧ
ತಿಳಿದು ಕೊಂಡಿದ್ದ. ಎದೆಯಲ್ಲಿ ಚಳಕ ಎಂದಾಗ, ಆತಂಕದಿಂದ ತುಂಬಿಕೊಂಡಿದ್ದ
ಮನಸ್ಸು ಅತಿ ಕೆಟ್ಟುದನ್ನೇ ಎತ್ತಿ ತೋರಿಸಿತು. ಹೃದಯಾಘಾತ, ಏರಿದ ಬ್ಲಡ್
ಪ್ರೆಷರ್, ಇವೇ ಸದಾಕಾಲ ಕಾಡುವ ಸದಾಶಿವನ ಧ್ಯಾನವಾಯಿತು. ನಾಡಿಯ
ಬಡಿತದಲ್ಲಿ ಸ್ವಲ್ಪ ವ್ಯತ್ಯಾಸವಾದರೂ, ಕುಂಟೆಬಿಲ್ಲೆ ಆಡುತ್ತಿದೆ ನಾಡಿ, ಸರಿಯಾಗಿ
ನಡೆಯುತ್ತಿಲ್ಲ ಎಂದು ನಾಡಿಯ ಮೇಲಿನ ಬೆರಳನ್ನು ತೆಗೆಯದೇ
ತವಕಪಡಲಾರಂಭಿಸುತ್ತಿದ್ದ. ಅವನು ತವಕಪಟ್ಟಷ್ಟು ನಾಡಿಯು ಏರುಪೇರಾಗುವುದು
ಹೆಚ್ಚುತ್ತಿತ್ತು. ಮುಂದೆ ಹೇಗಪ್ಪಾ ಬಾಳುವುದು, ಎನ್ನುವ ಭವಿಷ್ಯದ ಭಯವೂ
ಜತೆಜತೆಯಲ್ಲೇ ನೆರಳಿನಂತೆ ಬಂತು ಭೂತದಂತೆ ಹೆದರಿಸುತ್ತಿತ್ತು.
{{gap}}ಇವೆಲ್ಲ ವಿವರಗಳನ್ನೂ ಅವನಿಗೆ ಪುನಃ ಪುನಃ ಮಂದಟ್ಟು
ಮಾಡಿಕೊಡಲಾಯಿತು. 'ತೌರಿಗೆಂದು ಒಂದು ವಾರ ಹೆಂಡತಿಯನ್ನು ಕಳಿಸಿಕೊಡು;
ಒಬ್ಬನೇ ಇದ್ದರೆ ಧೈರ್ಯವೂ ಬರುತ್ತದೆ' ಎಂದು ಪುಸಲಾಯಿಸಿ ಒಪ್ಪಿಸಿ, ಆಕೆಗೆ
ಅಗತ್ಯವಾದ ವಿರಾಮವನ್ನೂ ಕೊಡಿಸಲಾಯಿತು. 'ನಾನಿದ್ದೇನಲ್ಲ ! ನಿನಗೆ ಇನ್ನಾತರ
ಭಯ' ಎಂದು ಧೈರ್ಯವನ್ನು ತುಂಬಿದ್ದಾಯಿತು. ಈ ಮಾತಿನ ದ್ವಂದ್ವಾರ್ಥ,
ಸದ್ಯ ಅವನಿಗೆ ಹೊಳೆಯಲಿಲ್ಲ. ಒಂದು ವಾರ ಒಬ್ಬನೇ ಇದ್ದ. ತಕ್ಕಮಟ್ಟಿಗೆ
ಚೆನ್ನಾಗಿಯೇ ಇದ್ದ.<noinclude></noinclude>
38j0nvp35bkhfszo8u0qni276eyenrz
ಪುಟ:ಮನಮಂಥನ.pdf/೫೯
104
62506
316530
314238
2026-05-03T14:13:06Z
Shreesha Sharma
7840
/* Validated */
316530
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೪೦}}{{Right|ಮನಮಂಥನ}}
ಹೆಂಡತಿಯು ಬಳಿಯಲ್ಲಿರದಿದ್ದರೂ, ನಾಡಿಯು ಕುಂಟೆಬಿಲ್ಲೆ ಆಡಿದರೂ,
ಪರವಾಗಿಲ್ಲ. ಯಾವ ಕೇಡೂ ಆಗುವುದಿಲ್ಲ ಎನ್ನುವ ವಿಶ್ವಾಸವು ಮೂಡತೊಡಗಿತು.
ಕ್ರಮೇಣ ಆತಂಕವೂ ಕಡಮೆಯಾಗಹತ್ತಿತು. ಆಗ ವಿಚಾರವನ್ನು ಮಾಡಲು
ಸಮರ್ಥನೂ ಆದ, ವಾಸ್ತವಿಕವಾದ ತನ್ನ ಸ್ಥಿತಿಗಳನ್ನು ಅರಿತುಕೊಂಡ. ದಿಳ್ಳಿಯ
ಆಸೆಗಳೆಲ್ಲ ಮಾಯಾ ಮೃಗಗಳು ಎಂಬುದನ್ನೂ ಸ್ಪಷ್ಟವಾಗಿ ಕಂಡ. ಈಗೀಗ
ಬ್ಲಡ್ ಪ್ರೆಷರ್' ಎಷ್ಟಿದೆ ಎಂದು ನೋಡಿಸುವುದಕ್ಕೂ ಹೋಗುತ್ತಿಲ್ಲ. ನಾಡಿಯ
ಮೇಲೆ ಬೆರಳನ್ನು ಇರಿಸಿರುವುದೂ ಇಲ್ಲ.
{{gap}}ಇಷ್ಟರ ಮಟ್ಟಿಗೆ ಗುಣವಾಗುವುದಕ್ಕೆ ಸುಮಾರು ಒಂದು ವರ್ಷ ಹಿಡಿಯಿತು.
ಈ ಅಂತರದಲ್ಲಿ ಆತಂಕಶಮನ ಮಾಡುವ ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ
ಕೊಡಲಾಯಿತು. ಮೇಲಿಂದ ಮೇಲೆ ಒತ್ತಿಒತ್ತಿ ಹೇಳಿ, ಅವನ ಮನಸ್ಸನ್ನು
ಹುರಿದುಂಬಿಸಲಾಯಿತು. ಹಾಗೂ ಕಾಲವೂ ಹಳೆಯದನ್ನು ಮರೆಸುತ್ತಾ, ಕಾಲ
ಕ್ರಮೇಣ ಗುಣವನ್ನು ಸಾಧಿಸಿತು.
{{gap}}Da'Costa's Syndrome, ಎಂದು ಕರೆಯಲ್ಪಡುವ ಈ ಬೇನೆಯು
ಮನಸ್ಸಿನ ತೀವ್ರ ಆತಂಕದಿಂದ ಹುಟ್ಟಿಕೊಳ್ಳುತ್ತದೆ. 'ಹೃದಯವೇ ನಿಂತು ಹೋಯಿತು;
ಜ್ಞಾನವು ತಪ್ಪುತ್ತದೆ.' ಇತ್ಯಾದಿ ತೀವ್ರ ಭಯದಿಂದ, ಕೈಕಾಲು ಕುಸಿದು, ಮುಖವೆಲ್ಲಾ
ಬಿಳುಪೇರಿ, ಬಿದ್ದೇಬಿಡುತ್ತಾರೆ, ಕೆಲವರು.
{{gap}}ಯುದ್ಧಗಳಲ್ಲಿ ಇಂತಹ ಬೇನೆಯು, ಹಲವಾರು ಯುವಕ ಸೈನಿಕರಿಗೆ
ಬಡಿಯುತ್ತದೆ. ನಾಳೆ ಬದುಕಿರುತ್ತೀವಿ ಎನ್ನುವ ವಿಶ್ವಾಸವಿರುವುದಿಲ್ಲ. ಯಾವ
ಕ್ಷಣದಲ್ಲಿ ಎಲ್ಲಿಂದಲೋ ಬಂದ ಗುಂಡು ಕೊಂದುಬಿಡಬಹುದು ಎನ್ನುವ
ಅನಿಶ್ಚಿತೆಯು ತೀವ್ರ ಆತಂಕವನ್ನು ಉಂಟುಮಾಡುತ್ತದೆ. ಆಗ ಹೃದಯದ
ಕಾರ್ಯವೂ ವ್ಯತ್ಯಾಸವಾಗುತ್ತದೆ. ಸೈನ್ಯದ ಡಾಕ್ಟರುಗಳು ಇಂತಹವರನ್ನು
ಪರೀಕ್ಷಿಸಿದಾಗ, ಸೈನ್ಯಕ್ಕೆ ಇನ್ನು ಮುಂದೆ ಇವ ನಾಲಾಯಕ್ಕು, ಎಂದು ಮನೆಗೆ
ಹಿಂದಿರುಗಿಸುತ್ತಾರೆ. ಹಾಗಾಗಿ ಯುದ್ಧ ಭೂಮಿಯಿಂದ ವಿನಾಯಿತಿಯನ್ನೂ
ಪಡೆಯುತ್ತಾನೆ. ಇಷ್ಟವಿಲ್ಲದೆ, ಕೇವಲ ಒತ್ತಾಯಕ್ಕಾಗಿ, ಹಾಗೂ ಹಣದ ಆಸೆಯಿಂದ,
ಸೈನಿಕರಾದವರಿಗೆ, ಸೈನ್ಯದಿಂದ ಮರ್ಯಾದೆಯನ್ನು ಉಳಿಸಿಕೊಂಡು ವಾಪಸಾಗಲು
Da' Costa's Syndrome ಉಪಯುಕ್ತವಾಗುತ್ತದೆ. ಆತಂಕವು ಅತಿಯಾದಾಗ,
ಆತಂಕದ ಮೂಲ ಕಾರಣಗಳನ್ನು ನಿವಾರಿಸಿಕೊಳ್ಳಲು ದೇಹದ ಮೂಲಭೂತ
ಜಾಣತನವು ಬಳಸುವ ಉಪಾಯ, ಈ ಬೇನೆ.
{{gap}}ಅತಿ ಪ್ರೀತಿಯಿಂದ ಸಾಕಿದ ತಂದೆಯೋ, ತಾಯಿಯೋ, ಪೂರ್ಣಾಯಸ್ಸಿನಲ್ಲಿ<noinclude></noinclude>
gbnydnowfysdrkz97kvilvqhrxplsu2
ಪುಟ:ಮನಮಂಥನ.pdf/೬೦
104
62507
316531
314239
2026-05-03T14:13:35Z
Shreesha Sharma
7840
/* Validated */
316531
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಆತಂಕ}}{{Right|೪೧}}
ಸತ್ತರೂ, ಮಗನು ಈ ಬೇನೆಯಿಂದ ನರಳುತ್ತಾನೆ. ವಿಚಾರಪರ ಮನಸ್ಸು,
ಹಿರಿಯರು ಸತ್ತಿದ್ದು, ಬಾಳ ನಿಯಮದಂತೆಯೇ, ಇದಕ್ಕೆ ದುಃಖಿಸುವುದು
ಹುಡುಗತನ, ಎಂದು ಹೇಳುತ್ತದೆ. ಇನ್ನೂ ದಿನ ನನ್ನ ಬಾಳಿಗೆ ಇದ್ದ ಹಿರಿಯ
ಮತ್ತು ದೃಢವಾದ ಬೆಂಬಲ ಇನ್ನಿಲ್ಲವಲ್ಲ ಎಂದು ಭಯವೂ, ಕೊರಗೂ,
ಉಂಟಾಗುತ್ತದೆ. ಈ ಜಂಝಾಟದಲ್ಲಿ, ಆತಂಕವು ಮುತ್ತಿಕೊಳ್ಳುತ್ತದೆ. ಹೀಗೆ
ನರಳುವವರಲ್ಲಿ ಸುಮಾರು ಜನರ ಮನಸ್ಸು ಪ್ರೌಢಸ್ಥಿತಿಗೆ ಬಂದಿರುವುದಿಲ್ಲ.
ವಯಸ್ಸು ಪಂಚಾಂಗದ ರೀತ್ಯಾ ಪ್ರೌಢವಾಗಿದ್ದರೂ, ಮನಸ್ಸು ಹುಡುಗು
ಹುಡುಗಾಗಿಯೇ ಇರುತ್ತದೆ. ಎಳೆಯ ಮಕ್ಕಳಂತೆ ಮುದ್ದುಗರೆಯುವ ಸ್ವಭಾವ
ಇವರದು.
{{gap}}ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಪರೀಕ್ಷೆಗಳನ್ನು ಅತಿ ಯಶಸ್ವಿಯಾಗಿ
ಪ್ಯಾಸು ಮಾಡಿ, ಹಿರಿಯ ಸ್ಪರ್ಧಾ ಪರೀಕ್ಷೆಗಳಿಗೆ ಕೂಡುತ್ತಾರಲ್ಲಾ; ಅವರಲ್ಲಿ
ಕೆಲವರು ಈ ಬೇನೆಗೆ ತುತ್ತಾಗುತ್ತಾರೆ. ಎಂದೂ ಸೋಲದೆ ಇದ್ದವರು ಸ್ಪರ್ಧಾ
ಪರೀಕ್ಷೆಯಲ್ಲಿ ಮುಗ್ಗರಿಸುತ್ತೇವೋ ಎನ್ನುವ ಕಾತರ, ಹಾಗಾದರೆ ಅವಮಾನ
ಎನ್ನುವ ಹುಡುಗು ಮನೋಭಾವ ; ಇವೆಲ್ಲವೂ ಪರೀಕ್ಷೆಗೆ ಮೊದಲೇ, ಬೇರೆಯಾಗಿ
ಕಾಡಿ, ಸ್ಪರ್ಧೆಯಿಂದ ಮಾನವಾಗಿ ವಾಪಸಾಗುವುದಕ್ಕೆ ಅನುಕೂಲ
ಮಾಡಿಕೊಡುತ್ತವೆ.
{{gap}}ಈ ಬೇನೆಯಿಂದ ನರಳುವವರು, ತಮ್ಮ ಮನಸ್ಸು ಅತಿ ದೃಢವಾದುದು;
ತಾವು ಬಲು ಧೈರ್ಯಶಾಲಿಗಳು, ಕೆಚ್ಚೆದೆಯವರು, ಎಂದು ಸಂಪೂರ್ಣವಾಗಿ
ನಂಬುತ್ತಾರೆ. ಹಸಿ ಇಟ್ಟಿಗೆಯ ವಾಲುತ್ತಿರುವ ಗೋಡೆಗೆ ಊರೆಗೋಲು
ಕೊಡುವಂತೆ, ಆತಂಕದಿಂದ ತುಂಬಿದ ಮನಸ್ಸು ತಾನು ದೃಢವಾಗಿದ್ದೇನೆ ಎನ್ನುವ
ಊರಗೋಲನ್ನು ಕೊಟ್ಟುಕೊಂಡು ಸ್ಥಿಮಿತವೂ ಸ್ಥಿರವೂ ಆಗಲೆತ್ನಿಸುತ್ತದೆ. ಇಂತಹ
ಊರೆಗೋಲನ್ನು ಕಳಚುವ ವೈದ್ಯನು, ತಾನೇ ಊರೆಗೋಲಾಗಬೇಕು. ಹಾಗಾಗಲು
ವೈದ್ಯನಿಗೆ ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವು ಪೂರ್ಣವಾಗಿರಬೇಕು.
{{gap}}ಆಧ್ಯಾತ್ಮಿಕ ಔನ್ನತ್ಯವನ್ನು ಪಡೆದವರು, ಸ್ವತಃ ವೈದ್ಯರಲ್ಲದಿದ್ದರೂ, ಇಂತಹ
ರೋಗಿಗಳನ್ನು ಕೆಲವೊಮ್ಮೆ ಗುಣಪಡಿಸುವುದು, ಈ ಕಾರಣದಿಂದಲೇ, ರೋಗಿಯ
ಆತಂಕದ ಮನಸ್ಸಿಗೆ, ಅವರೇ ಸುಲಭವಾಗಿ ಊರೆಗೋಲಾಗುತ್ತಾರೆ.
'''೨. ಕಾಲು ಕುಸಿದ ವಸ್ತಾದಿ'''
{{gap}}ಕಚೇರಿಯಲ್ಲಿ ಕೆಲಸ ಮಾಡುತ್ತ ಕುಳಿತಿದ್ದವ, ಹಠಾತ್ತನೆ ಕುರ್ಚಿಯಿಂದ<noinclude></noinclude>
32sjrcibd2n7cdk1tdkom1cv0oxe2xx
ಪುಟ:ಮನಮಂಥನ.pdf/೬೧
104
62508
316532
314240
2026-05-03T14:14:01Z
Shreesha Sharma
7840
/* Validated */
316532
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೪೨}}{{Right|ಮನಮಂಥನ}}
ಜಾರಿದ ನೆಲದ ಮೇಲಕ್ಕೆ ಬಿದ್ದ. ಬಿದ್ದುಕೊಂಡೇ ಇದ್ದ, ಒಂದೆರಡು
ನಿಮಿಷಗಳಾದರೂನೂ, 'ಲತೀಫನಿಗೆ ಏನೋ ಆಯಿತು. ಜ್ಞಾನತಪ್ಪಿ ಬಿದ್ದು
ಬಿಟ್ಟಿದ್ದಾನೆ' ಎಂದು ಜತೆಯವರು ಅವನ ಸುತ್ತ ಓಡಿಬಂದು ನಿಂತರು. ತಣ್ಣೀರನ್ನು
ಅವನ ತಲೆಗೆ ಒಬ್ಬರು ತಟ್ಟಿದರು. ಕಚೇರಿಯ ಬೀಗದ ಕೈ ಅನ್ನು ಅವನ ಕೈಗೆ
ಮತ್ತೊಬ್ಬರು. ಸಿಕ್ಕಿಸಿದರು. ಟೈ ಅನ್ನು ಸಡಿಲಿಸಿ, ಷರ್ಟಿನ ಗುಂಡಿಯನ್ನು ಬಿಚ್ಚಿದರು
ಮತ್ತೊಬ್ಬರು. ದೊಡ್ಡ ಕಚೇರಿಯಲ್ಲಿ ಡ್ಯೂಟಿ ಮೇಲಿದ್ದ ಡಾಕ್ಟರನ್ನು ಕರೆತರಲು
ಇನ್ನಿಬ್ಬರು ಓಡಿದರು. ಡಾಕ್ಟರು ಬಂದರು. ಗುಂಪನ್ನು ಚದುರಿಸಿದರು. ಒದ್ದೆ
ತಲೆಯಲ್ಲಿ ಬಿದ್ದಿದ್ದ ಲತೀಫನಿಗೆ ಇನ್ಸಕ್ಷನ್ ಕೊಟ್ಟರು, ಯಾರಿಗೂ ಕಾಣದಂತೆ
ಒಳಶುಂಠಿಯನ್ನು ಬಲವಾಗಿಟ್ಟರು. ಆಗ ಲತೀಫ್ ಎದ್ದು ಕುಳಿತ. "ಕೈಕಾಲುಗಳು
ಹಠಾತ್ತನೆ ಕುಸಿದುಬಿದ್ದುವು. ಏನು ಮಾಡುವುದಕ್ಕೂ ಆಗಲಿಲ್ಲ. ಸಹಾಯಕ್ಕೆ
ಯಾರನ್ನಾದರೂ ಕರೆಯೋಣ ಅಂದರೆ ಧ್ವನಿಯೇ ಹೊರಡಲಿಲ್ಲ, ಬಿದ್ದೇ ಬಿಟ್ಟೆ.
ನೀವೆಲ್ಲಾ ಮಾತನಾಡಿದ್ದೂ, ಮಾಡಿದ್ದೂ, ಎಲ್ಲವೂ ಚೆನ್ನಾಗಿ ತಿಳಿಯುತ್ತಿತ್ತು.
ಆದರೆ ಮಾತನಾಡಲು ಆಗಲಿಲ್ಲ.' ಎಂದು ತನಗಾದುದನ್ನು ವಿವರಿಸಿದ.
{{gap}}'ಈಗ ಸ್ವಸ್ಥವಾಗಿದ್ದೀನಿ. ಮಾಡುತ್ತಿದ್ದ ಕೆಲಸವನ್ನು ಮುಂದುವರೆಸುತ್ತೀನಿ'
ಎಂದು ಎದ್ದು ನಿಂತ. 'ಇವತ್ತು ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೋ.
ಮುಂದೆ ಹೀಗಾಗದಂತೆ ಡಾಕ್ಟರ ಬಳಿ ಚಿಕಿತ್ಸೆಯನ್ನು ಮಾಡಿಸಿಕೊ' ಎಂದು
ಜೊತೆಯವರು ಒತ್ತಾಯಪಡಿಸಿ, ಆಟೋರಿಕ್ಷಾವನ್ನು ತರಿಸಿ, ಅದರಲ್ಲಿ ಕೂಡಿಸಿ
ಕಳಿಸಿದರು.
{{gap}}ಅನಂತರ ಈ ರೀತಿಯ ಕೈಕಾಲು ಕುಸಿದು ಬೀಳುವ ಪ್ರಸಂಗಗಳು
ಲತೀಫನನ್ನು ಆಗೊಮ್ಮೆ ಈಗೊಮ್ಮೆ ಕಾಡಲಾರಂಭಿಸಿದುವು. ಹೊತ್ತುಗೊತ್ತು
ಅಂತ ಇಲ್ಲ; ಆ ಸ್ಥಳ, ಈ ಜಾಗ; ಎಂದೂ ಇಲ್ಲ. ಇವರಿದ್ದಾರೆ ಅವರಿಲ್ಲ ಎನ್ನುವ
ಅಡ್ಡಿಗಳೂ ಇಲ್ಲ. ಸುಳಿವು ಸೂಚನೆಯನ್ನು ಕೊಡದೆ ಭರಸಿಡಿಲು ಬಡಿದ ಹಾಗೆ
ಅವನಿಗೆ ಬಡಿಯುತ್ತಿತ್ತು, ಈ ಬೇನೆ. ಡಾಕ್ಟರ ಬಳಿಗೆ ಹೋದ.
{{gap}}ಆಮೂಲಾಗ್ರವಾಗಿ ಅವನ ದೇಹಾರೋಗ್ಯವನ್ನು ಪರೀಕ್ಷಿಸಲಾಯಿತು.
ಅದರಲ್ಲೂ ಹೃದಯವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಯಿತು. sudden collapse
ಆಗುವಂತೆ ಇವನ ಬ್ಲಡ್ಪ್ರೆಷರ್ ಸರಂತ ಏಕೆ ಇಳಿಯುತ್ತೆ? ಸ್ವಲ್ಪ ಕಾಲದಲ್ಲಿ
ತನ್ನಷ್ಟಕ್ಕೆ ತಾನೇ ಸರಿಹೋಗುತ್ತದಲ್ಲಾ? ಹೇಗೆ? ದೇಹದಲ್ಲಿ ದಿಟವಾದ ಬೇನೆ
ಇದ್ದಿದ್ದರೆ, ಅಷ್ಟು ಬೇಗ ಚೇತರಿಸಿಕೊಳ್ಳಲು ಸಾಧ್ಯವಿರುವುದಿಲ್ಲ.
{{gap}}ಲತೀಫ್ ಯಾರು ಅಂತ? ನಮ್ಮೂರಿನಲ್ಲಿ ಆಖಾಡಾದ ಉಸ್ತಾದ್<noinclude></noinclude>
9w4nh7vq1v8y5y39lfdyqvweytt29ia
ಪುಟ:ಮನಮಂಥನ.pdf/೬೨
104
62509
316533
315709
2026-05-03T14:14:21Z
Shreesha Sharma
7840
316533
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಆತಂಕ}}{{Right|೪೩}}
ಗೂಡೂಮಿಯ್ಯ ಇರಲಿಲ್ಲವೇ? ಮೂರು ಬಾರಿ ದಸರಾ ಕುಸ್ತಿಗಳಲ್ಲಿ ಚಿನ್ನದ
ಥೋಡಾ ಹಾಕಿಸಿಕೊಂಡಿದ್ದನಲ್ಲ, ಅವ. ಅವನ ಒಬ್ಬನೇ ಮಗ ಲತೀಫ್, ಆಖಾಡಾದ
ಲಾಲ್ಮಟ್ಟಿಯಲ್ಲಿ ಲತೀಫ್ ಕೂಡ ಪ್ರಾಯದಲ್ಲಿ ಕುಸ್ತಿ ಆಡುತ್ತಿದ್ದ. ಒಬ್ಬನೇ ಮಗನ
ಮೇಲೆ ಗೂಡೂಮಿಯ್ಯಾಗೆ ಅಸಾಧ್ಯ ಪ್ರೇಮ. ಕುಸ್ತಿಯ ಪಟ್ಟುಗಳನ್ನೆಲ್ಲಾ ಮಗನಿಗೆ
ತಾನೇ ಕಲಿಸುತ್ತಿದ್ದ. 'ಬೇಟಾ! ಲಡಕ್ ಹಾಕಿ ಥೋಡಾ ಗಿಟ್ಟಿಸಿದರೆ ಸಾಲದು.
ಓದಿ ವಿದ್ಯಾವಂತನಾಗಿ ಹುಜೂರ್ ಸರ್ಕಾರದಲ್ಲಿ ಬಡಾ ಚಾಕರಿ ಮಾಡಬೇಕು'
ಎಂದು, ಶಾಲೆಗೆ ಮಗನನ್ನು ಕರೆದುಕೊಂಡು ಹೋಗುವಾಗಲೆಲ್ಲ ಹೇಳುತ್ತಿದ್ದ.
ಮಧ್ಯಾಹ್ನದ ಊಟವನ್ನು ತಾನೇ ಶಾಲೆಗೆ ತೆಗೆದುಕೊಂಡು ಹೋಗಿ ಕೊಡುತ್ತಿದ್ದ.
ಸಂಜೆ ಶಾಲೆಯಿಂದ ಮಗನನ್ನು ಅವನೇ ಕರೆತರುತ್ತಿದ್ದ. ಬಾಲ್ಯದ ನಾಲ್ಕನೆಯ
ವರ್ಷದಿಂದಲೂ, ಲತೀಫ್ ಬೇಟಾ ಗೂಡೂಮಿಯ್ಯಾನ ಚಿಕ್ಕನೆರಳಾಗಿದ್ದ, ಅಲೀಫ್,
ಬೇ, ತೇ, ಶುರು ಮಾಡಿದ ಲತೀಫ್, ಓದಿನಲ್ಲಿ ಸಾಧಿಸಿದ ಪ್ರಗತಿಯನ್ನು
ಅಖಾಡಾದಲ್ಲಿ ಪಡೆಯಲಿಲ್ಲ.
{{gap}}ಬಿ.ಎ. ಪರೀಕ್ಷೆಯಲ್ಲಿ ಸೆಕೆಂಡ್ ಕ್ಲಾಸ್ ಅನ್ನು ಲತೀಫ್ ಗಿಟ್ಟಿಸಿದ.
ಗೂಡೂಮಿಯ್ಯಾನ ಸಂತೋಷವನ್ನು ಹೇಳತೀರದು. ಭಾರೀತುರಾಯಿ, ಅದಕ್ಕಿಂತ
ಭಾರೀ ಹಾರವನ್ನು, ಮಗನಿಗೆ ಹಾಕಿ, ಅಪ್ಪಿಕೊಂಡ. ಅದಾದ ಒಂದು ತಿಂಗಳಿನಲ್ಲಿ
ನಡೆದ ಭಾರೀ ಕುಸ್ತಿ ಪಂದ್ಯದಲ್ಲಿ ರಾಣಿಬೆನ್ನೂರಿನ ಸಣಕಲ್ ಸಿದ್ದಯ್ಯನಿಗೆ,
ಲತೀಫ್ ಸೋತಿದ್ದ. ತುಂಬಾ ಅವಮಾನವಾದಂತೆ ಲತೀಫ್ ಕೊರಗುತ್ತಿದ್ದ.
'ಜಾಂದೇ ಛೋಡೋ, ಬೇಟಾ ! ಬಿ. ಎ. ಪಡಕೋ, ಆಖಾಡಾಮೇ ಗಿರೇತೋ
ಕ್ಯಾ?' ಎಂದು ಲತೀಫ್ನನ್ನು ಗೂಡೂಮಿಯ್ಯ ಉತ್ತೇಜಿಸಿದ್ದ. ಅವನೊಬ್ಬನೆ
ಲತೀಫನಿಗೆ ದೃಢವಾದ ಬೆಂಬೊತ್ತು.
{{gap}}ಆ ಮೇಲೆಯೂ ಯಾವುದೊಂದು ಕೆಲಸವನ್ನು ಮಾಡಬೇಕಾದರೂ,
ಅಪ್ಪನ ಸಮ್ಮತ ಮತ್ತು ಸಲಹೆಯನ್ನು ಲತೀಫ್ ಪಡೆಯುತ್ತಲೇ ಇದ್ದ. ಇದು
ಕಟ್ಟುನಿಟ್ಟು ಅಭ್ಯಾಸವಾಗಿತ್ತು. ಉಡುಪುಗಳನ್ನು ಹೊಲಿಸುವಾಗಲೂ ಗೂಡೂಮಿಯ್ಯ
ಹೇಳಿದುದನ್ನೇ ಲತೀಫ್ ಒಪ್ಪುತ್ತಿದ್ದ. ಆಖಾಡಾದ ಅಭಿರುಚಿಗೆ ತಕ್ಕಂತೆ
ಗೂಡೂಮಿಯ್ಯಾ ಬಟ್ಟೆಯನ್ನು ಚುನಾಯಿಸಿದರೂ, ಹೂ ಅನ್ನುತ್ತಿದ್ದ ಲತೀಫ್.
ತಾನೊಪ್ಪದೇ ಇರಲಿ ಎಷ್ಟೇ ಬೇಸರವನ್ನು ತರಲಿ, ಅಪ್ಪನ ಮನಸ್ಸನ್ನು
ನೋಯಿಸಬಾರದು ಎಂದೇ ಲತೀಫನ ಗುರಿ. ಬಟ್ಟೆ ಬರೆ ; ಊಟ ತಿಂಡಿ ;
ಸಿನಿಮಾ ಷೋಕಿ; ನಿಕ್ಕಾ ತಲಕ್ ; ಎಲ್ಲದರಲ್ಲಿಯೂ ಲತೀಫ್, ಅಪ್ಪನ ಸಲಹೆಯನ್ನು
ಮೀರುತ್ತಿರಲಿಲ್ಲ. ಅಪ್ಪ ಎಂದರೆ ಅಷ್ಟು ಗೌರವ ; ಅಷ್ಟು ಆದರ.<noinclude></noinclude>
orkb3m9561m3x2ggln6fwe9r5v0y1n2
ಪುಟ:ಮನಮಂಥನ.pdf/೬೩
104
62510
316534
315708
2026-05-03T14:15:00Z
Shreesha Sharma
7840
316534
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೪೪}}{{Right|ಮನಮಂಥನ}}
ತನ್ನ ಕಾಲ ಮೇಲೆ ತಾನು ನಿಂತು, ಬಾಳನ್ನು ನಡೆಸುವುದು ಶ್ರೇಯಸ್ಕರ
ಎನ್ನುವುದು ಲತೀಫನಿಗೆ ತೋಚಲೇ ಇಲ್ಲ. ಅಪ್ಪ ಹಾಕಿದ ಆಲದ ಮರಕ್ಕೆ
ನೇಣುಬಿದ್ದಿದ್ದ.
{{gap}}ಎಲ್ಲಾ ಬಡಾ ಬಡಾ ಉಸ್ತಾದರಂತೆ, ಗೂಡೂಮಿಯ್ಯ ಕೂಡ ಐವತ್ತರ
ಪ್ರಾಯದಲ್ಲಿ ಹೃದಯದ ಬಳಲಿಕೆಗೆ ಬಲಿಯಾದ. ಒಂದೆರಡು ವರ್ಷಗಳು
ಅಪ್ಪನ ಸೇವೆಯನ್ನು, ಮುತುವರ್ಜಿಯಿಂದ ಮತ್ತು ಆದರದಿಂದ, ಲತೀಫ್
ಮನಸ್ಸಾಕ್ಷಿಯಾಗಿ ಮಾಡಿದ. ವಸಿಷ್ಠನಿಗೆ ರೋಗ ಬಂದಿದ್ದರೆ, ಅರುಂಧತಿಯು
ಕೂಡ ಅಷ್ಟು ಶ್ರದ್ಧೆಯಿಂದ ಸೇವೆ ಮಾಡುತ್ತಿರಲಿಲ್ಲವೇನೋ ? ಖುದಾಕಾ
ಫಜಲ್ ಒಂದು ಸಂಜೆ ಮುಗಿಯಿತು ನೆಟ್ಟ ಕಣ್ಣು ಬಿರಿಬಿರಿ ಬಿಟ್ಟು, ದೊಡ್ಡ
ಉಸಿರನ್ನು ಒಮ್ಮೆ ಘರಘರ ಎಳೆದುಕೊಂಡು, ಗೂಡೂಮಿಯ್ಯ ಅಲ್ಲಾನ ಬಳಿಗೆ
ಹೋಗಿಬಿಟ್ಟ. ಇದೆಲ್ಲವನ್ನೂ ಕಣ್ಣಾರೆ ಕಂಡ ಲತೀಫನಿಗೆ ಬಾಳಿನ ತಳಪಾಯವೇ
ಸಡಿಲಗೊಂಡು ಬಿದ್ದು ಹೋದಂತಾಯಿತು.
{{gap}}ಓದಿದ ವಿದ್ಯಾವಂತ ತರುಣ, ಲತೀಫ್. ಉಣ್ಣುಕ್ಕೆ ತಿನ್ನುಕ್ಕೆ ಬೇಕಾದಷ್ಟನ್ನು
ಅಪ್ಪ ಬಿಟ್ಟು ಹೋಗಿದ್ದ. ಉಡುಕ್ಕೆ ಮಡಗುವುದಕ್ಕೆ ಸಾಕಷ್ಟು ಸಂಬಳ ದೊರೆಯುತ್ತಿತ್ತು.ಅಂದಮೇಲೆ ಬಾಳಿ ಬದುಕಲು ಆರ್ಥಿಕ ತೊಂದರೆಗಳೊಂದೂ ಇರಲಿಲ್ಲ.ಎಲ್ಲರೂ ಒಂದು ದಿನ ಅಲ್ಲ ಇನ್ನೊಂದು ದಿನ ಸಾಯಲೇಬೇಕು ; ಅದಕ್ಕಾಗಿ
ಅತಿಯಾಗಿ ಕೊರಗುವುದು ಪೆಚ್ಚುತನ ಎಂದು ಲತೀಫನ ವಿಚಾರಪರ ಮನಸ್ಸು
ನುಡಿಯುತ್ತಿತ್ತು. ಅಂತಹ ತಂದೆಯು ತೀರಿಕೊಂಡನಲ್ಲಾ ಎನ್ನುವ ಕೊರಗು
ಭಾವನಾ ಮನಸ್ಸಿನಲ್ಲಿ ಕುಕ್ಕುತ್ತಿತ್ತು. ಜತೆ ಜತೆಯಾಗಿಯೇ 'ಇನ್ನುಮುಂದೆ ನನಗೆ
ಸೂಕ್ತ ಸಲಹೆಯನ್ನು ಕೊಡುವವರಾರು ? ಈಗ ನಾನು ತಬ್ಬಲಿ. ಒಬ್ಬನೇ ಆದೆ.
ಒಬ್ಬಂಟಿ ನಾನು' ಎನ್ನುವ ಯೋಚನೆಯೂ ಕಾಡಹತ್ತಿತು.
{{gap}}ಅಪ್ಪನ ನೆರಳಾಗಿ ಬೆಳೆದ ಲತೀಫನ ಮನಸ್ಸು, ವಯಸ್ಸಿಗೆ ತಕ್ಕಂತೆ ಬೆಳೆದು
ಅಣಿಗೊಂಡಿರಲಿಲ್ಲ. ಆದಕಾರಣ, ಒಬ್ಬಂಟಿ ನಾನು, ತಬ್ಬಲಿ' ಎನ್ನುವ
ಯೋಚನೆಯು ಬಂದಾಗ, ಆ ಯೋಚನೆಯು ಹೊರವಾಗಿ ಬೆಳೆಯುವಂತಾಯಿತು.
ಇನ್ನು ಮುಂದೆ ಹೇಗಪ್ಪಾ, ಎನ್ನುವ ಆತಂಕವೂ ಕಾಡಲಾರಂಭಿಸಿತು.
ಗೂಡೂಮಿಯ್ಯಾನ ಕೊನೆಯ ದಿನಗಳ ನರಳುವಿಕೆ ಮತ್ತು ಅಂತ್ಯವು, ಲತೀಫನ
ಕಣ್ಣಿಗೆ ಕಟ್ಟಿದಂತಾಗಿತ್ತು. ಅವನ ಮನಸ್ಸಿನಲ್ಲಿ ಅಷ್ಟೊತ್ತಿದ ಚಿತ್ರವಾಗಿತ್ತು.
{{gap}}ಮನಸ್ಸಿನ ಆತಂಕವು ಮಿತಿಮೀರಿದಾಗ, ಅಪ್ಪನ ಸಾವಿನ ಚಿತ್ರವೂ ಭೂತ
ಕನ್ನಡಿಯಲ್ಲಿ ಕಂಡಂತಾಯಿತು, ಭಯವಾಯಿತು. ಈ ಭಯವು ಏಕೆ ಎನ್ನುವುದು<noinclude></noinclude>
4gke8f1cwyqtav5uj5z9bt794ptrj9v
ಪುಟ:ಮನಮಂಥನ.pdf/೧೦೧
104
62548
316509
314775
2026-05-03T13:57:09Z
Shreesha Sharma
7840
/* Validated */
316509
proofread-page
text/x-wiki
<noinclude><pagequality level="4" user="Shreesha Sharma" /></noinclude>
{{Left|೮೨}}{{Right|ಮನಮಂಥನ}}
ಆತಂಕ ! ರೋಗಿ ಹೇಗಿದ್ದಾನೋ ? ಏನಾದನೋ ? ಅಂತ. ಕಾರಣ, ಮೇಲೆ
ಬಿದ್ದುಕೊಂಡು ಅವನೇ ಸಾಹುಕಾರರ ಮನೆಗೆ ಹೋದ. ಅಲ್ಲಿ ವೈದ್ಯ ಕಂಡುದೇನು?
ಹೊರ ಹಜಾರದಲ್ಲಿಯೇ ಧಾಂಡಿಗ ಮಗು ಕುಳಿತು ಇಡಲಿಗುಡ್ಡಗಳನ್ನೂ ಕಾಫಿ
ಚೊಂಬನ್ನೂ ಖಾಲಿ ಮಾಡುತ್ತಿದ್ದ. 'ಚೆನ್ನಾಗಿ ನಿದ್ರೆ ಬಂತು ಡಾಕ್ಟರೇ ! ಈಗ
ಚೆನ್ನಾಗಿದ್ದೀನಿ. ಅಸಾಧ್ಯ ಹಸಿವು ಅಷ್ಟೇ' ಎಂದ.
{{gap}}'ನಿನ್ನೆ ನಿಶಿರಾತ್ರಿಯಲ್ಲಿ ಹಾಗೆ ಯಾಕೆ ಆಡಿದೆ ? ಏನಾದರೂ ಕೆಟ್ಟ ಕನಸು
ಬಿದ್ದು ಹಾಗಾಗಿತ್ತೇ ? ಅಥವಾ ಎಲ್ಲಾದರೂ ಊಟಗೀಟ ; ತೀರ್ಥಪ್ರಸಾದ ಅತಿ
ಯಾಯಿತೋ ?' ಎಂದು ವೈದ್ಯರು ಕೇಳಿದರು. ಅವರ ಆತಂಕ ಈಗ ಕಡಮೆ
ಯಾಗಿತ್ತಲ್ಲಾ ! ಈಗ ಕುಹಕವಾಡಬಹುದಾಗಿತ್ತು. ರೇಗಿಸಿ ಕೆಣಕಲೂ
ಅನುಕೂಲವಿತ್ತು. ರಾತ್ರಿಯ ನಿದ್ರೆಗೆಡಿಸಿದವನ ಮೇಲೆ ಹೀಗಾದರೂ ಸೇಡು
ತೀರಿಸಿಕೊಳ್ಳಬೇಡವೇ ?
{{gap}}ಧಾಂಡಿಗ ಮಗು ಡಾಕ್ಟರನ್ನು ಒಂದು ತರಹ ನೋಡಿದ. ಬನ್ನಿ ನನ್ನ
ಕೊಠಡಿಗೆ, ಪರೀಕ್ಷೆ ಮಾಡೀರಂತೆ, ಎಂದು ಹೇಳಿ, ತಿಂಡಿ ತಿನ್ನುವುದನ್ನು ಅರ್ಧದಲ್ಲಿ
ನಿಲ್ಲಿಸಿ ಎದ್ದ. 'ಅಮ್ಮಾ, ತಿರುಗಿ ಬಂದು ತಿಂದು ಮುಗಿಸ್ತೀನಿ, ತಟ್ಟೆ ಮುಚ್ಚಿಡಮ್ಮಾ,
ಎಂದು ತಾಯಿಗೆ ಹೇಳಿ ಕೊಠಡಿಗೆ ಹೋದ. ಹಿಂಬಾಲಿಸಿದ ಡಾಕ್ಟರು
ಕೋಣೆಯನ್ನು ಸೇರಿದಮೇಲೆ ಬಾಗಿಲು ಮುಚ್ಚಿ ಅಗುಳಿಯನ್ನು ಹಾಕಿದ.
{{gap}}'ಯಾರ ಹತ್ತಿರವೂ ಹೇಳಬೇಡಿ, ಡಾಕ್ಟರೇ ! ಕಲ್ಕತ್ತಾದಿಂದ ಸ್ನೇಹಿತ
ನೊಬ್ಬನು ನಿನ್ನೆ ಸಂಜೆ ಭೇಟಿಯಾಗಿದ್ದ. ಬೆಳ್ಳಿಯ ವರಕು ಹಾಕಿದಂತಿದ್ದ ತಂಬಾಕಿನ
ಮಾತ್ರೆಗಳನ್ನು ಪುಟ್ಟ ಶೀಷೆಯಲ್ಲಿಟ್ಟುಕೊಂಡಿದ್ದ. ಅದನ್ನು ನನಗೆ ಕೊಟ್ಟು ನಾಳೆ
ನಾಡಿದ್ದರಲ್ಲಿ ಭೀಮಸಿಂಗ್ ಬರಾನೆ, ನಿನ್ನ ಬಳಿಗೆ, ಅವನಿಗೆ ಇದನ್ನು ಕೊಡು'
ಎಂದ, ಆಗಲಿ ಅಂತ ಇಸಕೊಂಡೆ. 'ಕಲ್ಕತ್ತಾದಿಂದ ಇದನ್ನು ಭೀಮಸಿಂಗ್ ಏಕೆ
ತರಿಸಿಕೊಳ್ಳುತ್ತಾನೆ ? ತಂಬಾಕು ಇಲ್ಲಿ ಸಿಗುಲ್ಲವೇ ?' ಎಂದು ಕೇಳಿದೆ. 'ಇದು
ಪರಮಾಯಿಷಿ ತಂಬಾಕು ಕಣೋ, ಒಂದನ್ನು ಎಲಡಿಕೆ ಜತೆಗೆ ಹಾಕಿಕೊಂಡರೆ
ಆಮೇಲೆ ನೋಡು ಅದರ ಮಜ! ನಾಲ್ವರು ಹೆಂಡಿರಿದ್ದರೆ ಸಂಸಾರ ಚೆನ್ನು
ಅನ್ನಿಸುತ್ತೆ' ಎಂದ. ಒಂದು ಮಾತ್ರೆ ಕಡಿಮೆಯಾದರೆ ಭೀಮಸಿಂಗ್ ಬೈಯಲ್ಲ
ಅಂತಂದುಕೊಂಡೆ. ಊಟವಾದ ಮೇಲೆ ಅಡಿಕೆ ಜತೆಗೆ ಇದನ್ನೂ ಬಾಯಿಗೆ
ಹಾಕಿಕೊಂಡೆ ಎಂತದೋ ವಾಸನೆ ಇತ್ತು ಕೆಟ್ಟುದೇನೂ ಅಲ್ಲ, ವಗಚು ವರಚಾಗಿತ್ತು.
ಒಂದು ತರಹ ರುಚಿಯಾಗಿಯೇ ಇತ್ತು ತಿಂದೆ, ನೋಡಿ, ಡಾಕ್ಟರೇ ! ಎರಡು
ವಿಳ್ಳೇದೆಲೆ ಜಗಿದೆ. ಅಷ್ಟರಲ್ಲಿ ಮೈ ಬೆವರುಕ್ಕೆ ಶುರುವಾಯಿತು. ಎದೆ<noinclude></noinclude>
31jl70t9ooehjxodp52l731v8dpiv10
ಪುಟ:ಮನಮಂಥನ.pdf/೧೦೨
104
62549
316510
314777
2026-05-03T14:02:31Z
Shreesha Sharma
7840
/* Validated */
316510
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಆತಂಕ}}{{Right|೮೩}}
ಹೊಡೆದುಕೊಳ್ಳುಕ್ಕೆ ಪ್ರಾರಂಭವಾಯಿತು. ಬುದ್ಧಿಯೇ ಸ್ಥಿಮಿತದಲ್ಲಿರಲಿಲ್ಲ. ಎಲ್ಲಾದರೂ ಓಡಿ ಹೋಗೋಣ ಅನ್ನಿಸಿತು. ಏಳುಕ್ಕೆ ಕಾಲೇ ಬರದು. 'ಇದು ಯಾಕೆ ಹೀಗಾಡ್ತಾ ಇದೀರೀ ಅಂದ್ರೆ' ಅಂತ ಅಳುಮುಖ ಮಾಡಿಕೊಂಡು ಕೊಠಡಿಯ ಬಾಗಿಲು
ಬಿಚ್ಚಿ ನನ್ನ ಹೆಂಡತಿ ಅಮ್ಮನ್ನ ಕರೆಯುಕ್ಕೆ ಹೋದಳು. ಬೇಡ ಕಣೆ ಇಲ್ಲೇ ಇರು
ಅಂತ ಹೇಳಬೇಕು ಅಂತ ಮನಸ್ಸು. ಆದರೆ ಮಾತು ಬರಲಿಲ್ಲ. ಅಮ್ಮ ಬಂದಳು,
ಯಾಕೆ ಹೀಗೆ ಮಗು ಎಂದು ಚೀರಿದಳು. ಕೂಡಲೇ ನಿಮಗೆ ಫೋನ್ ಮಾಡಿದಳು.
ನೀವು ಬಂದಿರಿ, ಇನ್ಸಕ್ಷನ್ ಕೊಟ್ಟಿರಿ ; ಸುತ್ತಲೂ ನಡೆಯುತ್ತಿದ್ದುದೆಲ್ಲಾ ಚೆನ್ನಾಗಿ
ಗೊತ್ತಾಗುತ್ತಿತ್ತು. ಆದರೆ ಬಾಯಿ ಬಿಟ್ಟು ಸರಿಯಾಗಿ ಮಾತನಾಡಲಾಗಲಿಲ್ಲ.
ಬೆಳಿಗ್ಗೆ ಎದ್ದ ಮೇಲೆ ಯಾವ ತಾಪತ್ರಯವೂ ಇಲ್ಲ,' ಎಂದು ಹಿಂದಿನ ರಾತ್ರಿಯ
ರಹಸ್ಯವನ್ನು ಬಯಲು ಮಾಡಿದ, ಗುಟ್ಟಾಗಿ.......
{{gap}}ಅವರಿವರ ಮಾತು ಕೇಳಿ, ಗೂಳಿಯ ತರಹ ಆಗ್ತಿನಿ ಎಂದು ಎಂತೆಂತದೊ
ಮಾತ್ರೆಗಳನ್ನು ಜಗಿದರೆ ಪರಿಣಾಮವು ತೀವ್ರ ಆತಂಕದಲ್ಲಿ ಮುಕ್ತಾಯವಾಗಬಹುದು.
{{gap}}ಉಬ್ಬಸದ ಕಾಯಿಲೆ ಇರುವವರು ಈಫಡಿನ್ ಇರುವ ಔಷಧದ
ಮಾತ್ರೆಗಳನ್ನು ಕೈಗಾವಲಾಗಿ ಇಟ್ಟುಕೊಂಡಿರುತ್ತಾರೆ. ನಿಶಿರಾತ್ರಿಯಲ್ಲಿ ಉಬ್ಬಸ
ಉಲ್ಬಣವಾದರೆ ಆಗ ಬಳಸಬಹುದು ಎಂದು. ಹೀಗೆ ಬಳಸಿ ಸಾಕಷ್ಟು ಸೌಖ್ಯವನ್ನು
ಪಡೆಯುತ್ತಾರೆ. ಆದರೆ ಒಮ್ಮೊಮ್ಮೆ ಒಂದೆರಡು ಗುಳಿಗೆಗಳನ್ನು ಸೇವಿಸಿದ ಮೇಲೆ
ಕೂಡ ಉಬ್ಬಸವು ಇಳಿಯಲಿಲ್ಲ. ಉಬ್ಬಸದ ಕಾಟವನ್ನು ತಡೆಯಲಾರದೆ, ರಾತ್ರಿಯ
ವೇಳೆ ವೈದ್ಯರ ಬಳಿಗೆ ಹೋಗಲಾರದೆ, ಮೇಲಿಂದ ಮೇಲೆ ಮಾತ್ರೆಗಳನ್ನು,
ಲೆಕ್ಕವಿಲ್ಲದೆ ಸೇವಿಸಿ ಬಿಡುತ್ತರೆ. ಆಗ ಉಬ್ಬಸವು ತುಸು ಕಡಿಮೆಯಾದರೂ,
ಅದಕ್ಕಿಂತಲೂ ಹೆಚ್ಚಾಗಿ ತೀವ್ರ ಆತಂಕವು ಕಾಡುತ್ತದೆ. ಎದೆ ಹೊಡೆದುಕೊಳ್ಳುತ್ತದೆ.
ನಿದ್ರೆ ಬರುವುದಿಲ್ಲ. ಏನಾಗಿಬಿಡುತ್ತೋ? ಏನೇನೋ ಆಗುತ್ತಿದೆಯಲ್ಲ ಎಂಬ
ಭಯವಾಗುತ್ತದೆ.
{{gap}}ಸ್ವಲ್ಪ ಕಾಲಾನಂತರ ಆತಂಕವು ಶಮನವಾಗುತ್ತದೆ. ಔಷಧಿಗಳ ಪ್ರಭಾವವು
ಕಡಿಮೆಯಾದಾಗ.
{{gap}}ಪರೀಕ್ಷೆಗೆ ಓದಬೇಕು ; ಹಾಗೂ ನಿದ್ರೆ ಝಕಾಯಿಸಿಕೊಂಡು ಬರುತ್ತದೆ.
ಇದನ್ನ ತಪ್ಪಿಸಬೇಕು ಎಂದು ವಿದ್ಯಾರ್ಥಿಗಳು, ಕೊಳಗ ಕೊಳಗ ಕಾಫಿಯನ್ನು
ಕುಡಿಯುತ್ತಾರೆ. ನಿದ್ರಾನಿವಾರಕ ಔಷಧಿಗಳನ್ನು ಪೆಪ್ಪಿಲ್ಸ್-ಸೇವಿಸುವುದೂ
ಉಂಟು. ಸಣ್ಣ ಪ್ರಮಾಣದಲ್ಲಿ ಕಾಫಿಯಾಗಲೀ, ಆಸ್ಫೋಟಮೀನ್ ಪೆಪ್ಪಿಲ್ಸ್
ಆಗಲಿ, ಸ್ವಲ್ಪ ಸಹಾಯವನ್ನು ಮಾಡಬಹುದು. ಆದರೆ ನಿದ್ರೆಯು ಸಹಜ ಪ್ರವೃತ್ತಿ.<noinclude></noinclude>
2tkaiah71x9ihd98gklj1ser9xh2b0e
ಪುಟ:ಮನಮಂಥನ.pdf/೧೦೩
104
62550
316511
315645
2026-05-03T14:03:40Z
Shreesha Sharma
7840
316511
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೮೪}}{{Right|ಮನಮಂಥನ}}
ಮನಸ್ಸಿನ ದೃಢತೆಯಿಂದ ಅದನ್ನು ಹತೋಟಿಯಲ್ಲಿಡಲಾಗದಿದ್ದರೆ, ಔಷಧಿಗಳೂ
ಸಹ ಬಳಸಲ್ಪಡುತ್ತವೆ. ಆಗ, ಒಂದು ಮಿತಿಯನ್ನು ಮೀರಿದಾಗ, ಆತಂಕದ
ಚಿಹ್ನೆಗಳು ಕಾಣಬರುತ್ತದೆ. ಅಂತಹ ಸ್ಥಿತಿಯಲ್ಲಿ ಕಣ್ಣಿಟ್ಟುಕೊಂಡು ಓದುವುದೂ
ಕಷ್ಟ ಓದಿದರೂ ತಲೆಗೆ ಹತ್ತುವುದೇ ಇಲ್ಲ. ಓದು ಹಾಳಾಗಿ ಹೋಗಲಿ, ತಿಳಿದಿದ್ದು
ಬರೆದರಾಯಿತು ಎಂದು ಮಲಗಿದರೆ, ನಿದ್ರೆಯೂ ಬರುವುದಿಲ್ಲ. ಕಣ್ಣು ರೆಪ್ಪೆಗಳನ್ನು
ಮುಚ್ಚಲೂ ಆಗುವುದಿಲ್ಲ.
{{gap}}ಬಲವಂತಕ್ಕೆ ಬಸಿರಾದವರು, ಮಗುವನ್ನು ಹೆರಲು ಇಷ್ಟಪಡದೆ, ಬಯಕೆಯು
ಮೂಡಿದ ಎರಡೋ ಮೂರನೆಯದೋ ತಿಂಗಳಿನಲ್ಲಿ ಮೈ ಇಳಿಸಿಕೊಳ್ಳಲು,
ಕೇರಿಯ ಬೂಬಿಯರು, ಅಜ್ಜಿಯರು ಹೇಳಿದುದನ್ನೆಲ್ಲಾ ಮಾಡುತ್ತಾರೆ. ದೋರೆ
ಪರಂಗಿಕಾಯಿಗಳು, ಎಂತೆಂತದೋ ಕಂಡೂ ಕೇಳದ ಗಿಡಮೂಲಿಕೆಗಳು,
ಅವರಿವರು ಗುಟ್ಟಾಗಿ ಕೊಟ್ಟ ರಸಮಿಶ್ರ ಮಾತ್ರೆಗಳು ; ಯಾವುದು ಸಿಕ್ಕಿದರೆ
ಅದನ್ನು ಮುಕ್ಕಿ ಬಿಡುತ್ತಾರೆ.
{{gap}}ಅನಪೇಕ್ಷಿತವಾಗಿ ಬಸಿರಾದೆವಲ್ಲಾ ಎಂಬುದೇ ಒಂದು ಕೊರಗು. ಇದನ್ನು
ಹೇಗಾದರೂ ಮಾಡಿ ದೊಡ್ಡವರಿಗೆ ತಿಳಿಯದಂತೆ ನಿವಾರಿಸಿಕೊಳ್ಳಬೇಕು ಎನ್ನುವ
ಆತಂಕ. ಇಂತಹ ಸಮಯದಲ್ಲಿ ಯಾವ ಮುದುಕಿ ಏನು ಹೇಳಿದರೂ ಕೇಳುವಂತೆ
ಮನಸ್ಸು ಅಸ್ಥಿರವಾಗಿರುತ್ತೆ. ಆಗ ವಿಷಮೂಲಿಕೆಗಳು, ರಸಮಾತ್ರೆಗಳು ಬಯಸಿದ
ಫಲವನ್ನು ನೀಡದೆ, ದೇಹದ ಸ್ವಾಸ್ಥ್ಯವನ್ನು ಕೆಡಿಸುತ್ತವೆ. ಆದರೊಂದಿಗೆ ಮನಸ್ಸಿನ
ಆತಂಕವೂ ಹೆಚ್ಚಿ ಭಯವೂ ಮೂಡುತ್ತದೆ. ಮೈ ಇಳಿಯುವುದು ಹಾಗಿರಲಿ,
ಮೈಯ್ಯ ಅಳಿದು ಹೋಗುವುದೂ ಉಂಟು. ಉಳಿದುಕೊಂಡವರ ಮನಸ್ಸು
ಆತಂಕಗ್ರಸ್ತವಾಗಿ ಮನೆಯಲ್ಲಿನ ನಡವಳಿಕೆಯು ವಿಚಿತ್ರವಾಗುವುದೂ ಉಂಟು.
'''ಚಟಗಳು'''
{{gap}}ಶ್ರೀಮಂತರು ಸಿಗರೇಟ್ ಸೇದುತ್ತಾರೆ, ಅದು ಶ್ರೀಮಂತಿಕೆಯ ಒಂದು
ಲಕ್ಷಣ; ಹೀಗಂದುಕೊಂಡು ತಾತ್ಕಾಲಿಕ ಶ್ರೀಮಂತಿಕೆಯನ್ನು ಅನುಭವಿಸಲು
ಬಡವನೂ ಮೊದಲಬಾರಿಗೆ ಸಿಗರೇಟ್ ಹಿಡಿಯುತ್ತಾನೆ. ಆಗ ಅವನಿಗೆ ಸುಖ
ತಟ್ಟುತ್ತದೆ ಎಂದು ಹೇಳಬರುವುದಿಲ್ಲ. ಕೆಟ್ಟಕೆಟ್ಟದಾಗಿ ಕೆಮ್ಮುವಂತಾದರೂ, ಮನಸ್ಸಿನಲ್ಲಿ ಅವನಿಗೆ ಏನನ್ನೋ ಸಾಧಿಸಿದ ಹಿಗ್ಗು ಇರುತ್ತದೆ. ಸ್ವಲ್ಪ ಅಭ್ಯಾಸವಾದ ಮೇಲೆ ತುಸು ಸುಖವನ್ನು ನೀಡುತ್ತದೆ. ಆ ಹೊತ್ತಿಗೆ ಅಭ್ಯಾಸವು ಒಂದು ಚಟವಾಗಿಬಿಡುತ್ತದೆ.ಬೇಸರ ಮೂಡಿದಾಗ ಸಿಗರೇಟ್ ಹಚ್ಚಿದರೆ ಬೇಸರವೂ ಹೊಗೆಯಾಗಿ<noinclude></noinclude>
1s6f6rvan46bd2n6mo3rluq8o5jyty4
ಪುಟ:ಮನಮಂಥನ.pdf/೧೦೪
104
62551
316512
315646
2026-05-03T14:03:40Z
Pragathi. BH
7585
/* Validated */
316512
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಆತಂಕ|right=೮೫}}
ಹೋಗುತ್ತದೆ. ಆನಂತರ ಚಟವು ದುಶ್ಚಟವಾಗುತ್ತದೆ. ಸೇದುವುದರಿಂದ ಸುಖವಾಗದೆ
ಇರಬಹುದು. ಆದರೆ ಸೇದದೇ ಇದ್ದರೆ ತುಂಬಾ ತಳಮಳವಾಗುತ್ತದೆ. ಸಿಗರೇಟನ್ನು
ಸಾಲ್ಸಾಲಾಗಿ ಸೇದುವವರಿಗೆ ಸುಖವೆಲ್ಲಿಂದ ಬಂತು ! ದುಶ್ಚಟದಿಂದಾಗುವ
ತಳಮಳವು ತಪ್ಪಿತು. ದುಶ್ಚಟದ ಈ ಹಂತದಲ್ಲಿ ಮೇಲಿಂದ ಮೇಲೆ ಸಿಗರೇಟ್
ಸೇದುವುದರಿಂದ, ನಿಕೋಟೀನ್ ವಸ್ತುವು ದೇಹಕ್ಕೆ ಹೆಚ್ಚು ಪ್ರಮಾಣದಲ್ಲಿ
ಸೇರುವುದರಿಂದ ಎದೆ ಡಬ ಡಬ ಹೊಡೆದುಕೊಳ್ಳುತ್ತದೆ. ತೀವ್ರ ಆತಂಕದ
ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಬೇಸರ, ಕಿರಿಕಿರಿ ಇವೆಲ್ಲವೂ ಆತಂಕಕ್ಕೆ ಸೋಪಾನಗಳಿದ್ದಂತೆ. ಕೆಲವು
ಚಟಗಳು ಇವನ್ನು ಕಡಿಮೆ ಮಾಡಬಹುದು. ಆದರೆ ದುಶ್ಚಟಗಳ ಹಂತಕ್ಕೆ
ಏರಿದಾಗ, ಆತಂಕವನ್ನೇ ಮೂಡಿಸುತ್ತವೆ.
'''ಪರೀಕ್ಷೆಯ ಆತಂಕ'''
ಎಷ್ಟು ಜಾಣ ಹುಡುಗ ಅಂತ, ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಕ್ಕೆ
ಪ್ರಥಮ ಬ್ಯಾಂಕ್ ಗಳಿಸಿದ್ದ. ತಂದೆಯನ್ನು ಕಳೆದುಕೊಂಡಿದ್ದ ಹುಡುಗ, ತಾಯ
ಕಣ್ಮಣಿಯಾಗಿ ಬೆಳೆದು ಓದುತ್ತಿದ್ದ. ಎರಡು ಬಾರಿ ಹುಡುಗನೇನಾದರೂ ಸೀನಿದರೆ,
ತತ್ಕ್ಷಣ ಅವನನ್ನು ಡಾಕ್ಟರ ಬಳಿಗೆ ತಾಯಿಯು ಕರೆದುಕೊಂಡು ಓಡುತ್ತಿದ್ದಳು.
ಜ್ವರವೇನಾದರೂ ಹುಡುಗನಿಗೆ ಬಂದರೆ, ಅವನ ಪಕ್ಕದಲ್ಲಿ ತಾಯಿ ಹಗಲು
ರಾತ್ರಿ ಠಿಕಾಣಿ ಹಾಕುತ್ತಿದ್ದಳು. ಡಾಕ್ಟರುಗಳು ಔಷಧಿಗಳು ಟಾನಿಕುಗಳು
ಬಾಲ್ಯದಿಂದಲೂ ಅವನಿಗೆ ಮಾಮೂಲು. ಅದು ಕಟ್ಟಳೆಯಂತೆ ದಿನವೂ ನಡೆದ
ಮೇಲೆ ಊಟ, ತಿಂಡಿ, ಬಟ್ಟೆ ಬರೆ, ಬಿಸಿಲುಗಾಲದಲ್ಲೂ, ಅವ ಸ್ವೆಟರ್
ಹಾಕಲೇಬೇಕು. ಛಳಿಗಾಲದಲ್ಲನಕ, ಅಂಗಿ ಮೇಲೆ ಅಂಗಿ, ಶಾನುಭೋಗನ
ತಂಗಿಯೂ ಇವನನ್ನು ನೋಡಿ ನಗುವಂತಿತ್ತು. ಇದೆಲ್ಲವೂ ಆದ ಮೇಲೆ ಪುಸ್ತಕ
ಓದು ; ಸ್ಕೂಲು, ಮನೆ ಪಾಠ ; ಇವುಗಳತ್ತ ಗಮನ, ತಾಯ ಮಡಿಲಿನಲ್ಲಿ
ಹೀಗೆ ಬೆಳೆದುಬಂದ ನಮ್ಮ ಹುಡುಗ, ಹದಿನೈದು ಚೈತ್ರಗಳು ಸಂದಿದ್ದರೂ,
ಬಚ್ಚಲಮನೆಗೆ ರಾತ್ರಿಯಲ್ಲಿ ಹೋಗಬೇಕಾದರೆ, ಬಾಗಿಲ ತನಕ ತಾಯಿಯು
ಬಂದಿರಬೇಕು. ಅಲ್ಲೇ ನಿಂತೂ ಇರಬೇಕು. 'ಇಲ್ಲದೆ ಇದ್ದರೆ ಗೊಗ್ಗಯ್ಯ ಬಂದು
ಕತ್ತಲಲ್ಲಿ ಹಿಡಿದುಕೊಂಡು ಬಿಟ್ಟರೆ ?' ಹೀಗಂತ ಹುಡುಗ ಬಾಯಿ ಬಿಟ್ಟು
ಹೇಳದೇ ಇದ್ದರೂ ಆಳ ಮನಸ್ಸಿನಲ್ಲಿದ್ದ ಅಧೈರ್ಯವನ್ನು ನಡವಳಿಕೆಯಲ್ಲಿ
ತೋರಿಸಿಕೊಳ್ಳುತ್ತಿದ್ದ.<noinclude></noinclude>
l95bqimjvfz2o8zj9sxuslkk0ntt3xr
ಪುಟ:ಮನಮಂಥನ.pdf/೧೦೫
104
62552
316517
315647
2026-05-03T14:06:28Z
Pragathi. BH
7585
/* Validated */
316517
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೮೬|right=ಮನಮಂಥನ}}
ಪಿ.ಯು.ಸಿ. ಪರೀಕ್ಷೆಗೆ ಕಟ್ಟಿದ್ದಾನೆ. ಚೂಟಿಯಾಗಿ ಓದುತ್ತಲೂ ಇದ್ದಾನೆ.
ಪರೀಕ್ಷೆಯು ಹತ್ತಿರ ಹತ್ತಿರಕ್ಕೆ ಬಂತು. 'ಜಾಣ ನೀನು, ರಾಂಕ್ ಬರದೇ ಇದ್ದರೂ
ಫಸ್ಟ್ ಕ್ಲಾಸ್ ಸಿಗಿದು ಹಾಕುತ್ತೀ' ಎಂದು ತಾಯಿಯೂ ದಿನಕ್ಕೆ ಹತ್ತು ಸರ್ತಿ
ಯಾದರೂ ಹೇಳುತ್ತಿದ್ದಾಳೆ. ನೆಂಟರಿಷ್ಟರೂ ಹುಡುಗನ ಜಾಣತನವನ್ನು ಹೊಗಳಿದ್ದೂ
ಹೊಗಳಿದ್ದೇ. ಮನೆಗೆ ಬಂದ ನೆರೆಹೊರೆಯವರು ಹುಡುಗನನ್ನು ತಾಯಿಯೆದುರಿಗೆ
ಅಟ್ಟಕ್ಕೇರಿಸುತ್ತಿದ್ದರು. ತಿಂಗಳಿಗೆ ಒಂದೆರಡು ಬಾರಿಯಾದರೂ ತಾಯಿಯು,
ಮಗನಿಗೆ ಬಡಿದಿರಬಹುದಾದ ದೃಷ್ಟಿಯನ್ನು ತೆಗೆಯಲೋಸುಗ, ಮುಖಕ್ಕೆ ಕಸಪರಿಕೆ
ನೀವಳಿಸಿ, ಮೂಲೆಯಲ್ಲಿಟ್ಟು ಚಟಪಟ ಸುಡುತ್ತಿದ್ದಳು.
ಪರೀಕ್ಷೆಗೆ ಇನ್ನು ಮೂರು ದಿನಗಳಿವೆ. ಪುಸ್ತಕಗಳನ್ನು ಎದುರಿಗಿಟ್ಟುಕೊಂಡು
ಓದುತ್ತಿದ್ದ ಹುಡುಗ ತಟ್ಟನೆ ಪುಸ್ತಕಗಳನ್ನು ದೂಡಿ, ಎರಡೂ ಕೈಗಳಲ್ಲಿ ತಲೆಯನ್ನು
ಭದ್ರವಾಗಿ ಹಿಡಿದುಕೊಂಡು, 'ಅಮ್ಮಾ ಅಮ್ಮಾ ತಲೆ ತುಂಬಾ ಸಿಡೀತಾ ಇದೇಮ್ಮಾ;
ಕಣ್ಣು ಮಂಜಾಗುತ್ತಾ ಇದೆ' ಎಂದು ಕೆಟ್ಟದಾಗಿ ಕಿರುಚಿಕೊಂಡ. ಅಮ್ಮ
ಗಾಬರಿಯಾದಳು. ಓಡಿಹೋಗಿ ಆಟೋರಿಕ್ಷಾ ತಂದಳು. ಡಾಕ್ಟರ ದವಾಖಾನೆಗೆ
ಕೆಟ್ಟೆನೋ ಬೆಂದೆನೋ ಅಂತ ಹೋದಳು. ಹುಡುಗನನ್ನು ಡಾಕ್ಟರು ಪರೀಕ್ಷೆ
ಮಾಡಿದರು. 'ಏನೂ ಆಗಿಲ್ಲವಮ್ಮಾ ರಾತ್ರಿಯೆಲ್ಲಾ ನಿದ್ರೆಗೆಟ್ಟು ಓದುತ್ತಾನೆ ಅಂತ
ಕಾಣುತ್ತೆ. strain ಆದ ಹಾಗಿದೆ ಈ ಇನ್ಸಕ್ಷನ್ ಕೊಡ್ತೀನಿ : ಈ ಮಾತ್ರೆಗಳನ್ನು
ತರಿಸಿಕೊಡಿ. ಇವತ್ತು ಹೆಚ್ಚು ಹೊತ್ತು ಓದುವುದು ಬೇಡ' ಎಂದು ಹೇಳಿ
ಚಿಕಿತ್ಸೆಯನ್ನು ನಡೆಸಿದರು. ಡಾಕ್ಟರನ್ನು ಕಂಡಾಗಲೇ ಹುಡುಗನಿಗೆ ಸ್ವಲ್ಪ ಧೈರ್ಯ
ಮೂಡಿತ್ತು. ಶೈಶವದಿಂದಲೂ ಕಂಡಿದ್ದ ಡಾಕ್ಟರು, ತುಂಬು ನಂಬಿಕೆಯೂ ಇತ್ತು.
ಕಾರಣ, ತಲೆ ಸಿಡಿತವು ದವಾಖಾನೆಗೆ ಹೋದ ಕೂಡಲೆ ಇಳಿಯತೊಡಗಿತ್ತು.
ಡಾಕ್ಟರು ಇದ್ದಕ್ಷನ್ನನ್ನು ಕೊಟ್ಟಾಗ ಆ ನೋವಿನಲ್ಲಿ ತಲೆ ಸಿಡಿತವು ಮಾಯವಾಗಿತ್ತು.
ಅದಕ್ಕಿಂತಲೂ ಮುಖ್ಯ ಎಂದರೆ, ಪಟ್ಟಾಗಿ ಕೂತು ಓದುವ ಹೊಣೆಯು
ಸಡಿಲಗೊಂಡಿತ್ತು. ಮನೆಗೆ ಹಿಂತಿರುಗಿದ. ಮಲಗಿ ನಿದ್ರೆ ಮಾಡಿದ, ಬೆಳಿಗ್ಗೆ
ಎದ್ದಾಗ ಬಲು ಲವಲವಿಕೆಯಾಗಿದ್ದ. ಅಚ್ಚುಕಟ್ಟಾಗಿ ಅಮ್ಮ ಕೊಟ್ಟ ಕಾಳುಪ್ಪಿಟ್ಟನ್ನು
ತಿಂದ, ನಂತರ ಪುಸ್ತಕಗಳನ್ನು ಎದುರಿಗಿಟ್ಟುಕೊಂಡು ಕುಳಿತ. ಪರೀಕ್ಷೆ-ಫಸ್ಟ್
ಕ್ಲಾಸ್-ಬ್ಯಾಂಕ್-ಅವರಿವರ ಹೊಗಳಿಕೆ-ಅಮ್ಮನ ಆಸೆ ಎಲ್ಲವೂ ಅರೆಕ್ಷಣ ಸ್ಮರಣೆಗೆ
ಬಂತು. ಹತ್ತು ಹದಿನೈದು ನಿಮಿಷ ಹಟ ಹಿಡಿದು ಕೂತುಕೊಂಡು ಓದಿದ.
ತಿರುಗಿ ತಲೆ ಸಿಡಿಯುಕ್ಕೆ ಆರಂಭವಾಯಿತು. 'ಅಮ್ಮಾ ಅಮ್ಮಾ' ಎಂದು ಕಿರುಚಿದ.
ಅಮ್ಮ ಬಂದಳು, ಮಗನ ಮುಖ ನೋಡಿದಳು. ಓಡಿಹೋಗಿ ಡಾಕ್ಟರನ್ನು
{{rh|center=|left=|right=}}<noinclude></noinclude>
90g0etvwhfboqqqoomlzmh9kc83npzx
316562
316517
2026-05-03T15:54:52Z
Pragathi. BH
7585
316562
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೮೬|right=ಮನಮಂಥನ}}
ಪಿ.ಯು.ಸಿ. ಪರೀಕ್ಷೆಗೆ ಕಟ್ಟಿದ್ದಾನೆ. ಚೂಟಿಯಾಗಿ ಓದುತ್ತಲೂ ಇದ್ದಾನೆ.
ಪರೀಕ್ಷೆಯು ಹತ್ತಿರ ಹತ್ತಿರಕ್ಕೆ ಬಂತು. 'ಜಾಣ ನೀನು, ರಾಂಕ್ ಬರದೇ ಇದ್ದರೂ
ಫಸ್ಟ್ ಕ್ಲಾಸ್ ಸಿಗಿದು ಹಾಕುತ್ತೀ' ಎಂದು ತಾಯಿಯೂ ದಿನಕ್ಕೆ ಹತ್ತು ಸರ್ತಿ
ಯಾದರೂ ಹೇಳುತ್ತಿದ್ದಾಳೆ. ನೆಂಟರಿಷ್ಟರೂ ಹುಡುಗನ ಜಾಣತನವನ್ನು ಹೊಗಳಿದ್ದೂ
ಹೊಗಳಿದ್ದೇ. ಮನೆಗೆ ಬಂದ ನೆರೆಹೊರೆಯವರು ಹುಡುಗನನ್ನು ತಾಯಿಯೆದುರಿಗೆ
ಅಟ್ಟಕ್ಕೇರಿಸುತ್ತಿದ್ದರು. ತಿಂಗಳಿಗೆ ಒಂದೆರಡು ಬಾರಿಯಾದರೂ ತಾಯಿಯು,
ಮಗನಿಗೆ ಬಡಿದಿರಬಹುದಾದ ದೃಷ್ಟಿಯನ್ನು ತೆಗೆಯಲೋಸುಗ, ಮುಖಕ್ಕೆ ಕಸಪರಿಕೆ
ನೀವಳಿಸಿ, ಮೂಲೆಯಲ್ಲಿಟ್ಟು ಚಟಪಟ ಸುಡುತ್ತಿದ್ದಳು.
{{gap}}ಪರೀಕ್ಷೆಗೆ ಇನ್ನು ಮೂರು ದಿನಗಳಿವೆ. ಪುಸ್ತಕಗಳನ್ನು ಎದುರಿಗಿಟ್ಟುಕೊಂಡು
ಓದುತ್ತಿದ್ದ ಹುಡುಗ ತಟ್ಟನೆ ಪುಸ್ತಕಗಳನ್ನು ದೂಡಿ, ಎರಡೂ ಕೈಗಳಲ್ಲಿ ತಲೆಯನ್ನು
ಭದ್ರವಾಗಿ ಹಿಡಿದುಕೊಂಡು, 'ಅಮ್ಮಾ ಅಮ್ಮಾ ತಲೆ ತುಂಬಾ ಸಿಡೀತಾ ಇದೇಮ್ಮಾ;
ಕಣ್ಣು ಮಂಜಾಗುತ್ತಾ ಇದೆ' ಎಂದು ಕೆಟ್ಟದಾಗಿ ಕಿರುಚಿಕೊಂಡ. ಅಮ್ಮ
ಗಾಬರಿಯಾದಳು. ಓಡಿಹೋಗಿ ಆಟೋರಿಕ್ಷಾ ತಂದಳು. ಡಾಕ್ಟರ ದವಾಖಾನೆಗೆ
ಕೆಟ್ಟೆನೋ ಬೆಂದೆನೋ ಅಂತ ಹೋದಳು. ಹುಡುಗನನ್ನು ಡಾಕ್ಟರು ಪರೀಕ್ಷೆ
ಮಾಡಿದರು. 'ಏನೂ ಆಗಿಲ್ಲವಮ್ಮಾ ರಾತ್ರಿಯೆಲ್ಲಾ ನಿದ್ರೆಗೆಟ್ಟು ಓದುತ್ತಾನೆ ಅಂತ
ಕಾಣುತ್ತೆ. strain ಆದ ಹಾಗಿದೆ ಈ ಇನ್ಸಕ್ಷನ್ ಕೊಡ್ತೀನಿ : ಈ ಮಾತ್ರೆಗಳನ್ನು
ತರಿಸಿಕೊಡಿ. ಇವತ್ತು ಹೆಚ್ಚು ಹೊತ್ತು ಓದುವುದು ಬೇಡ' ಎಂದು ಹೇಳಿ
ಚಿಕಿತ್ಸೆಯನ್ನು ನಡೆಸಿದರು. ಡಾಕ್ಟರನ್ನು ಕಂಡಾಗಲೇ ಹುಡುಗನಿಗೆ ಸ್ವಲ್ಪ ಧೈರ್ಯ
ಮೂಡಿತ್ತು. ಶೈಶವದಿಂದಲೂ ಕಂಡಿದ್ದ ಡಾಕ್ಟರು, ತುಂಬು ನಂಬಿಕೆಯೂ ಇತ್ತು.
ಕಾರಣ, ತಲೆ ಸಿಡಿತವು ದವಾಖಾನೆಗೆ ಹೋದ ಕೂಡಲೆ ಇಳಿಯತೊಡಗಿತ್ತು.
ಡಾಕ್ಟರು ಇದ್ದಕ್ಷನ್ನನ್ನು ಕೊಟ್ಟಾಗ ಆ ನೋವಿನಲ್ಲಿ ತಲೆ ಸಿಡಿತವು ಮಾಯವಾಗಿತ್ತು.
ಅದಕ್ಕಿಂತಲೂ ಮುಖ್ಯ ಎಂದರೆ, ಪಟ್ಟಾಗಿ ಕೂತು ಓದುವ ಹೊಣೆಯು
ಸಡಿಲಗೊಂಡಿತ್ತು. ಮನೆಗೆ ಹಿಂತಿರುಗಿದ. ಮಲಗಿ ನಿದ್ರೆ ಮಾಡಿದ, ಬೆಳಿಗ್ಗೆ
ಎದ್ದಾಗ ಬಲು ಲವಲವಿಕೆಯಾಗಿದ್ದ. ಅಚ್ಚುಕಟ್ಟಾಗಿ ಅಮ್ಮ ಕೊಟ್ಟ ಕಾಳುಪ್ಪಿಟ್ಟನ್ನು
ತಿಂದ, ನಂತರ ಪುಸ್ತಕಗಳನ್ನು ಎದುರಿಗಿಟ್ಟುಕೊಂಡು ಕುಳಿತ. ಪರೀಕ್ಷೆ-ಫಸ್ಟ್
ಕ್ಲಾಸ್-ಬ್ಯಾಂಕ್-ಅವರಿವರ ಹೊಗಳಿಕೆ-ಅಮ್ಮನ ಆಸೆ ಎಲ್ಲವೂ ಅರೆಕ್ಷಣ ಸ್ಮರಣೆಗೆ
ಬಂತು. ಹತ್ತು ಹದಿನೈದು ನಿಮಿಷ ಹಟ ಹಿಡಿದು ಕೂತುಕೊಂಡು ಓದಿದ.
ತಿರುಗಿ ತಲೆ ಸಿಡಿಯುಕ್ಕೆ ಆರಂಭವಾಯಿತು. 'ಅಮ್ಮಾ ಅಮ್ಮಾ' ಎಂದು ಕಿರುಚಿದ.
ಅಮ್ಮ ಬಂದಳು, ಮಗನ ಮುಖ ನೋಡಿದಳು. ಓಡಿಹೋಗಿ ಡಾಕ್ಟರನ್ನು
{{rh|center=|left=|right=}}<noinclude></noinclude>
5hepg2jwj88vxyhfkktymfp24bwu4rs
316563
316562
2026-05-03T15:55:16Z
Pragathi. BH
7585
316563
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೮೬|right=ಮನಮಂಥನ}}
ಪಿ.ಯು.ಸಿ. ಪರೀಕ್ಷೆಗೆ ಕಟ್ಟಿದ್ದಾನೆ. ಚೂಟಿಯಾಗಿ ಓದುತ್ತಲೂ ಇದ್ದಾನೆ.
ಪರೀಕ್ಷೆಯು ಹತ್ತಿರ ಹತ್ತಿರಕ್ಕೆ ಬಂತು. 'ಜಾಣ ನೀನು, ರಾಂಕ್ ಬರದೇ ಇದ್ದರೂ
ಫಸ್ಟ್ ಕ್ಲಾಸ್ ಸಿಗಿದು ಹಾಕುತ್ತೀ' ಎಂದು ತಾಯಿಯೂ ದಿನಕ್ಕೆ ಹತ್ತು ಸರ್ತಿ
ಯಾದರೂ ಹೇಳುತ್ತಿದ್ದಾಳೆ. ನೆಂಟರಿಷ್ಟರೂ ಹುಡುಗನ ಜಾಣತನವನ್ನು ಹೊಗಳಿದ್ದೂ
ಹೊಗಳಿದ್ದೇ. ಮನೆಗೆ ಬಂದ ನೆರೆಹೊರೆಯವರು ಹುಡುಗನನ್ನು ತಾಯಿಯೆದುರಿಗೆ
ಅಟ್ಟಕ್ಕೇರಿಸುತ್ತಿದ್ದರು. ತಿಂಗಳಿಗೆ ಒಂದೆರಡು ಬಾರಿಯಾದರೂ ತಾಯಿಯು,
ಮಗನಿಗೆ ಬಡಿದಿರಬಹುದಾದ ದೃಷ್ಟಿಯನ್ನು ತೆಗೆಯಲೋಸುಗ, ಮುಖಕ್ಕೆ ಕಸಪರಿಕೆ
ನೀವಳಿಸಿ, ಮೂಲೆಯಲ್ಲಿಟ್ಟು ಚಟಪಟ ಸುಡುತ್ತಿದ್ದಳು.
{{gap}}ಪರೀಕ್ಷೆಗೆ ಇನ್ನು ಮೂರು ದಿನಗಳಿವೆ. ಪುಸ್ತಕಗಳನ್ನು ಎದುರಿಗಿಟ್ಟುಕೊಂಡು
ಓದುತ್ತಿದ್ದ ಹುಡುಗ ತಟ್ಟನೆ ಪುಸ್ತಕಗಳನ್ನು ದೂಡಿ, ಎರಡೂ ಕೈಗಳಲ್ಲಿ ತಲೆಯನ್ನು
ಭದ್ರವಾಗಿ ಹಿಡಿದುಕೊಂಡು, 'ಅಮ್ಮಾ ಅಮ್ಮಾ ತಲೆ ತುಂಬಾ ಸಿಡೀತಾ ಇದೇಮ್ಮಾ;
ಕಣ್ಣು ಮಂಜಾಗುತ್ತಾ ಇದೆ' ಎಂದು ಕೆಟ್ಟದಾಗಿ ಕಿರುಚಿಕೊಂಡ. ಅಮ್ಮ
ಗಾಬರಿಯಾದಳು. ಓಡಿಹೋಗಿ ಆಟೋರಿಕ್ಷಾ ತಂದಳು. ಡಾಕ್ಟರ ದವಾಖಾನೆಗೆ
ಕೆಟ್ಟೆನೋ ಬೆಂದೆನೋ ಅಂತ ಹೋದಳು. ಹುಡುಗನನ್ನು ಡಾಕ್ಟರು ಪರೀಕ್ಷೆ
ಮಾಡಿದರು. 'ಏನೂ ಆಗಿಲ್ಲವಮ್ಮಾ ರಾತ್ರಿಯೆಲ್ಲಾ ನಿದ್ರೆಗೆಟ್ಟು ಓದುತ್ತಾನೆ ಅಂತ
ಕಾಣುತ್ತೆ. strain ಆದ ಹಾಗಿದೆ ಈ ಇನ್ಸಕ್ಷನ್ ಕೊಡ್ತೀನಿ : ಈ ಮಾತ್ರೆಗಳನ್ನು
ತರಿಸಿಕೊಡಿ. ಇವತ್ತು ಹೆಚ್ಚು ಹೊತ್ತು ಓದುವುದು ಬೇಡ' ಎಂದು ಹೇಳಿ
ಚಿಕಿತ್ಸೆಯನ್ನು ನಡೆಸಿದರು. ಡಾಕ್ಟರನ್ನು ಕಂಡಾಗಲೇ ಹುಡುಗನಿಗೆ ಸ್ವಲ್ಪ ಧೈರ್ಯ
ಮೂಡಿತ್ತು. ಶೈಶವದಿಂದಲೂ ಕಂಡಿದ್ದ ಡಾಕ್ಟರು, ತುಂಬು ನಂಬಿಕೆಯೂ ಇತ್ತು.
ಕಾರಣ, ತಲೆ ಸಿಡಿತವು ದವಾಖಾನೆಗೆ ಹೋದ ಕೂಡಲೆ ಇಳಿಯತೊಡಗಿತ್ತು.
ಡಾಕ್ಟರು ಇದ್ದಕ್ಷನ್ನನ್ನು ಕೊಟ್ಟಾಗ ಆ ನೋವಿನಲ್ಲಿ ತಲೆ ಸಿಡಿತವು ಮಾಯವಾಗಿತ್ತು.
ಅದಕ್ಕಿಂತಲೂ ಮುಖ್ಯ ಎಂದರೆ, ಪಟ್ಟಾಗಿ ಕೂತು ಓದುವ ಹೊಣೆಯು
ಸಡಿಲಗೊಂಡಿತ್ತು. ಮನೆಗೆ ಹಿಂತಿರುಗಿದ. ಮಲಗಿ ನಿದ್ರೆ ಮಾಡಿದ, ಬೆಳಿಗ್ಗೆ
ಎದ್ದಾಗ ಬಲು ಲವಲವಿಕೆಯಾಗಿದ್ದ. ಅಚ್ಚುಕಟ್ಟಾಗಿ ಅಮ್ಮ ಕೊಟ್ಟ ಕಾಳುಪ್ಪಿಟ್ಟನ್ನು
ತಿಂದ, ನಂತರ ಪುಸ್ತಕಗಳನ್ನು ಎದುರಿಗಿಟ್ಟುಕೊಂಡು ಕುಳಿತ. ಪರೀಕ್ಷೆ-ಫಸ್ಟ್
ಕ್ಲಾಸ್-ಬ್ಯಾಂಕ್-ಅವರಿವರ ಹೊಗಳಿಕೆ-ಅಮ್ಮನ ಆಸೆ ಎಲ್ಲವೂ ಅರೆಕ್ಷಣ ಸ್ಮರಣೆಗೆ
ಬಂತು. ಹತ್ತು ಹದಿನೈದು ನಿಮಿಷ ಹಟ ಹಿಡಿದು ಕೂತುಕೊಂಡು ಓದಿದ.
ತಿರುಗಿ ತಲೆ ಸಿಡಿಯುಕ್ಕೆ ಆರಂಭವಾಯಿತು. 'ಅಮ್ಮಾ ಅಮ್ಮಾ' ಎಂದು ಕಿರುಚಿದ.
ಅಮ್ಮ ಬಂದಳು, ಮಗನ ಮುಖ ನೋಡಿದಳು. ಓಡಿಹೋಗಿ ಡಾಕ್ಟರನ್ನ<noinclude></noinclude>
n4by1qdgrxfc0sxcz2xta2wn689scyj
ಪುಟ:ಮನಮಂಥನ.pdf/೧೦೬
104
62553
316537
315648
2026-05-03T14:17:35Z
Shreesha Sharma
7840
316537
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಆತಂಕ}}{{Right|೮೭}}
ಕರೆದುಕೊಂಡು ಬಂದಳು. ಡಾಕ್ಟರು ಪರೀಕ್ಷೆ ಮಾಡಿದಾಗ ನೂರು ಡಿಗ್ರಿ ಜ್ವರ
ಇತ್ತು. 'ಜ್ವರ ಬಂದಿದೆ, ಅದಕ್ಕೇ ತಲೆ ಸಿಡಿತವು ಮೊದಲು ಕಾಣಿಸಿಕೊಂಡಿದ್ದು,
ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲಿ' ಎಂದರು. ಯಥಾಪ್ರಕಾರ ಇದ್ದಕ್ಷನ್ ಚುಚ್ಚಿದರು.
ಎರಡೆರಡು ತರಹ ಔಷಧಿ ಮಾತ್ರೆಗಳನ್ನು ವಿಧಿಸಿದರು. ಪರೀಕ್ಷೆಯ ದಿನವೂ
ಮೈ ಸ್ವಲ್ಪ ಬೆಚ್ಚಗೇ ಇತ್ತು. ಈ ಸರ್ತಿ ಪರೀಕ್ಷೆಗೆ ಕೂಡುವುದು ಬೇಡ ; ಇನ್ನಾರು
ತಿಂಗಳಿಗೆ ಹೇಗೂ ಪರೀಕ್ಷೆ ಇದೆಯಲ್ಲಾ' ಎಂದು ಡಾಕ್ಟರು ಸಲಹೆ ಮಾಡಿದರು.
'ಖಂಡಿತವಾಗಿ ಹೋಗಲೇಬೇಕು' ಎಂದು ಹುಡುಗ ಹಟ ಹಿಡಿದ, ತಾಯಿಯ
ಮನಸ್ಸು ಹಾಗೂ ಇತ್ತು ಹೀಗೂ ಇತ್ತು. ಅನ್ಯಾಯವಾಗಿ ಒಂದು ವರ್ಷ
ಪೋಲಾಗುತ್ತೆ. ನಮ್ಮ ಬಡಸ್ಥಿತಿಯಲ್ಲಿ ದೊಡ್ಡ ಹೊರೆಯಾಗುತ್ತೆ, ಎಂದು ಒಂದು
ಕಡೆ, ಮಗ ಹಟ ಹಿಡಿದಾಗ ಆಕೆಯೂ ಹೂ ಅಂದಳು.
{{gap}}ಪರೀಕ್ಷೆಗೆ ಹೋದ, ಫಸ್ಟ್ ಕ್ಲಾಸ್ ಬಂತು. ಬ್ಯಾಂಕ್ ಬರಲಿಲ್ಲ. ಅಷ್ಟು
ಕಾಯಿಲೆ ಬಿದ್ದಿದ್ದರೂ ಫಸ್ಟ್ ಕ್ಲಾಸಿನಲ್ಲಿ ಪ್ಯಾಸ್ ಮಾಡಿದೆಯಲ್ಲೋ ? ಸ್ವಸ್ಥವಾಗಿದ್ದಿದ್ದರೆ
ಫಸ್ಟ್ ಬ್ಯಾಂಕ್ ಪಡೆಯುತ್ತಿದ್ದೆ' ಎಂದು ಮಗನ ಗಲ್ಲ ಹಿಡಿದು ತಾಯಿಯು
ಮುದ್ದುಗರೆದಳು. ಮಗನಿಗೆ ನೊಬೆಲ್ ಪ್ರೈಸ್ ಬಂದಷ್ಟು ಹಿಗ್ಗಾಯಿತು.
{{gap}}ಆಮೇಲೆ ಬಿ.ಎಸ್ಸಿ. ಪರೀಕ್ಷೆಗಳು. ಪ್ರತಿ ಪರೀಕ್ಷೆಯ ಮೊದಲೂ, ತಲೆ
ಸಿಡಿತ ಜ್ವರ ಬರಲಾರಂಭಿಸಿತು. ಒಮ್ಮೆ ಸೆಕೆಂಡ್ ಕ್ಲಾಸಿನಲ್ಲಿ ತೇರ್ಗಡೆಯಾದ,
ಇನ್ನೊಂದು ಪರೀಕ್ಷೆಯಲ್ಲಿ ನಪಾಸಾದ. ಹಾಗಾದ, ಅಂತ ಯಾರೂ ಅವನನ್ನು
ಹೀಯಾಳಿಸಲಿಲ್ಲ. ಕಡೆಗೂ ಪ್ಯಾಸ್ ಆದ. ಮುಂದೆ ಓದಬೇಕೋ, ಚಾಕರಿ
ಯಾವುದನ್ನಾದರೂ ಹಿಡಿಯಬೇಕೋ ಎಂದು ಸ್ವತಃ ನಿರ್ಧರಿಸಲಾರ. ಅಮ್ಮನ
ಮಡಿಲಲ್ಲಿ ಬೆಳೆದವ ; ತನ್ನ ಕಾಲ ಮೇಲೆ ನಿಲ್ಲುವುದನ್ನು ಕಲಿತೇ ಇಲ್ಲ. 'ಅಮ್ಮ,
ನೀ ಹೇಳಿದ ಹಾಗೆ' ಅಂತಾನೆಯೇ ಹೊರತು ; ಬೆಳೆದಿದ್ದೇನೆ,
ಪದವೀಧರನಾಗಿದ್ದೇನೆ, ಹೀಗೆ ಮಾಡ್ತೀನಿ, ಅಂತ ಯಾವ ಕೆಚ್ಚಿನ ಮಾತನ್ನೂ
ಆತ್ಮವಿಶ್ವಾಸದ ನುಡಿಯನ್ನೂ ಆಡಲಾರ.
{{gap}}ಪರೀಕ್ಷೆಗಳಲ್ಲಿ ಬ್ಯಾಂಕು ಗಳಿಸಬೇಕು ಎಂದು ಜಾಣ ವಿದ್ಯಾರ್ಥಿಗಳೆಲ್ಲರೂ
ಬಯಸುತ್ತಾರೆ. ಬ್ಯಾಂಕ್ ಗಿಟ್ಟಿಸಿದರೆ ಮುಂದಿನ ಭವಿಷ್ಯವು ಉತ್ತಮ ಮತ್ತು
ಸುಗಮ ಎನ್ನುವ ಕಾರಣದಿಂದ ಅಂತಹ ಹೆಬ್ಬಯಕೆಯು ಹುಟ್ಟುತ್ತದೆ. ಎಷ್ಟೋ
ಕಷ್ಟಪಟ್ಟು ಓದಿದರೂ, ಇತರ ವಿದ್ಯಾರ್ಥಿಗಳು ಇನ್ನೂ ಚೆನ್ನಾಗಿ ಓದಿದರೆ,
ಬ್ಯಾಂಕ್ ತಪ್ಪುತ್ತದೆ ಎಂದೂ ಅನುಮಾನ. ಹಾಗಾಗುವುದಾದರೆ ಎಷ್ಟು ಓದಿದರೂ
ಏನು ಪ್ರಯೋಜನ. 'ಲಕ್' ಇರಬೇಕು ಬ್ಯಾಂಕಿಗೆ ಎಂದು ತಮಗೆ ತಾವೇ<noinclude></noinclude>
g7f8md5kkiiedhdif8mhh9myti7ifgf
316564
316537
2026-05-03T15:57:49Z
Pragathi. BH
7585
/* Validated */
316564
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|ಆತಂಕ}}{{Right|೮೭}}
ಕರೆದುಕೊಂಡು ಬಂದಳು. ಡಾಕ್ಟರು ಪರೀಕ್ಷೆ ಮಾಡಿದಾಗ ನೂರು ಡಿಗ್ರಿ ಜ್ವರ
ಇತ್ತು. 'ಜ್ವರ ಬಂದಿದೆ, ಅದಕ್ಕೇ ತಲೆ ಸಿಡಿತವು ಮೊದಲು ಕಾಣಿಸಿಕೊಂಡಿದ್ದು,
ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲಿ' ಎಂದರು. ಯಥಾಪ್ರಕಾರ ಇದ್ದಕ್ಷನ್ ಚುಚ್ಚಿದರು.
ಎರಡೆರಡು ತರಹ ಔಷಧಿ ಮಾತ್ರೆಗಳನ್ನು ವಿಧಿಸಿದರು. ಪರೀಕ್ಷೆಯ ದಿನವೂ
ಮೈ ಸ್ವಲ್ಪ ಬೆಚ್ಚಗೇ ಇತ್ತು. ಈ ಸರ್ತಿ ಪರೀಕ್ಷೆಗೆ ಕೂಡುವುದು ಬೇಡ ; ಇನ್ನಾರು
ತಿಂಗಳಿಗೆ ಹೇಗೂ ಪರೀಕ್ಷೆ ಇದೆಯಲ್ಲಾ' ಎಂದು ಡಾಕ್ಟರು ಸಲಹೆ ಮಾಡಿದರು.
'ಖಂಡಿತವಾಗಿ ಹೋಗಲೇಬೇಕು' ಎಂದು ಹುಡುಗ ಹಟ ಹಿಡಿದ, ತಾಯಿಯ
ಮನಸ್ಸು ಹಾಗೂ ಇತ್ತು ಹೀಗೂ ಇತ್ತು. ಅನ್ಯಾಯವಾಗಿ ಒಂದು ವರ್ಷ
ಪೋಲಾಗುತ್ತೆ. ನಮ್ಮ ಬಡಸ್ಥಿತಿಯಲ್ಲಿ ದೊಡ್ಡ ಹೊರೆಯಾಗುತ್ತೆ, ಎಂದು ಒಂದು
ಕಡೆ, ಮಗ ಹಟ ಹಿಡಿದಾಗ ಆಕೆಯೂ ಹೂ ಅಂದಳು.
{{gap}}ಪರೀಕ್ಷೆಗೆ ಹೋದ, ಫಸ್ಟ್ ಕ್ಲಾಸ್ ಬಂತು. ಬ್ಯಾಂಕ್ ಬರಲಿಲ್ಲ. ಅಷ್ಟು
ಕಾಯಿಲೆ ಬಿದ್ದಿದ್ದರೂ ಫಸ್ಟ್ ಕ್ಲಾಸಿನಲ್ಲಿ ಪ್ಯಾಸ್ ಮಾಡಿದೆಯಲ್ಲೋ ? ಸ್ವಸ್ಥವಾಗಿದ್ದಿದ್ದರೆ
ಫಸ್ಟ್ ಬ್ಯಾಂಕ್ ಪಡೆಯುತ್ತಿದ್ದೆ' ಎಂದು ಮಗನ ಗಲ್ಲ ಹಿಡಿದು ತಾಯಿಯು
ಮುದ್ದುಗರೆದಳು. ಮಗನಿಗೆ ನೊಬೆಲ್ ಪ್ರೈಸ್ ಬಂದಷ್ಟು ಹಿಗ್ಗಾಯಿತು.
{{gap}}ಆಮೇಲೆ ಬಿ.ಎಸ್ಸಿ. ಪರೀಕ್ಷೆಗಳು. ಪ್ರತಿ ಪರೀಕ್ಷೆಯ ಮೊದಲೂ, ತಲೆ
ಸಿಡಿತ ಜ್ವರ ಬರಲಾರಂಭಿಸಿತು. ಒಮ್ಮೆ ಸೆಕೆಂಡ್ ಕ್ಲಾಸಿನಲ್ಲಿ ತೇರ್ಗಡೆಯಾದ,
ಇನ್ನೊಂದು ಪರೀಕ್ಷೆಯಲ್ಲಿ ನಪಾಸಾದ. ಹಾಗಾದ, ಅಂತ ಯಾರೂ ಅವನನ್ನು
ಹೀಯಾಳಿಸಲಿಲ್ಲ. ಕಡೆಗೂ ಪ್ಯಾಸ್ ಆದ. ಮುಂದೆ ಓದಬೇಕೋ, ಚಾಕರಿ
ಯಾವುದನ್ನಾದರೂ ಹಿಡಿಯಬೇಕೋ ಎಂದು ಸ್ವತಃ ನಿರ್ಧರಿಸಲಾರ. ಅಮ್ಮನ
ಮಡಿಲಲ್ಲಿ ಬೆಳೆದವ ; ತನ್ನ ಕಾಲ ಮೇಲೆ ನಿಲ್ಲುವುದನ್ನು ಕಲಿತೇ ಇಲ್ಲ. 'ಅಮ್ಮ,
ನೀ ಹೇಳಿದ ಹಾಗೆ' ಅಂತಾನೆಯೇ ಹೊರತು ; ಬೆಳೆದಿದ್ದೇನೆ,
ಪದವೀಧರನಾಗಿದ್ದೇನೆ, ಹೀಗೆ ಮಾಡ್ತೀನಿ, ಅಂತ ಯಾವ ಕೆಚ್ಚಿನ ಮಾತನ್ನೂ
ಆತ್ಮವಿಶ್ವಾಸದ ನುಡಿಯನ್ನೂ ಆಡಲಾರ.
{{gap}}ಪರೀಕ್ಷೆಗಳಲ್ಲಿ ಬ್ಯಾಂಕು ಗಳಿಸಬೇಕು ಎಂದು ಜಾಣ ವಿದ್ಯಾರ್ಥಿಗಳೆಲ್ಲರೂ
ಬಯಸುತ್ತಾರೆ. ಬ್ಯಾಂಕ್ ಗಿಟ್ಟಿಸಿದರೆ ಮುಂದಿನ ಭವಿಷ್ಯವು ಉತ್ತಮ ಮತ್ತು
ಸುಗಮ ಎನ್ನುವ ಕಾರಣದಿಂದ ಅಂತಹ ಹೆಬ್ಬಯಕೆಯು ಹುಟ್ಟುತ್ತದೆ. ಎಷ್ಟೋ
ಕಷ್ಟಪಟ್ಟು ಓದಿದರೂ, ಇತರ ವಿದ್ಯಾರ್ಥಿಗಳು ಇನ್ನೂ ಚೆನ್ನಾಗಿ ಓದಿದರೆ,
ಬ್ಯಾಂಕ್ ತಪ್ಪುತ್ತದೆ ಎಂದೂ ಅನುಮಾನ. ಹಾಗಾಗುವುದಾದರೆ ಎಷ್ಟು ಓದಿದರೂ
ಏನು ಪ್ರಯೋಜನ. 'ಲಕ್' ಇರಬೇಕು ಬ್ಯಾಂಕಿಗೆ ಎಂದು ತಮಗೆ ತಾವೇ<noinclude></noinclude>
1hktwb4xrvbp2cl00kqs78o53f9fbxn
ಪುಟ:ಮನಮಂಥನ.pdf/೧೦೭
104
62554
316538
315649
2026-05-03T14:18:24Z
Shreesha Sharma
7840
316538
proofread-page
text/x-wiki
<noinclude><pagequality level="3" user="Shreesha Sharma" /></noinclude>
{{Left|೮೮}}{{Right|ಮನಮಂಥನ}}
ಸಮಾಧಾನ ಹೇಳಿಕೊಳ್ಳುತ್ತಾರೆ. ಡೋಲಾಯಮಾನದ ಮನಸ್ಸಿನ ಈ ಸ್ಥಿತಿಯೇ
ಆತಂಕಕ್ಕೆ ಕಾರಣ. ಬ್ಯಾಂಕ್ ಗಿಟ್ಟಿಸಿದರೆ ಅಮ್ಮ ಮೆಚ್ಚುತ್ತಾಳೆ, ಹಿಗ್ಗುತ್ತಾಳೆ. ಏನೆಲ್ಲಾ
ಕಷ್ಟಪಡುತ್ತಿದ್ದಾಳೆ, ನನ್ನಸಲುವಾಗಿ, ಅವಳಿಗೆ ಸಂತೋಷವನ್ನುಂಟುಮಾಡಬೇಕು
ಎನ್ನುವ ತೀವ್ರ ಆಸೆಯು, ಇದ್ದ ಆತಂಕವನ್ನು ಕೆರಳಿಸುತ್ತದೆ.
{{gap}}ವಿದ್ಯಾರ್ಥಿಯ ಪೌಗಂಡ ವಯಸ್ಸಿನಲ್ಲಿ, ವ್ಯಕ್ತಿತ್ವವು (Personality)
ಪರಿಪೂರ್ಣವಾಗಿರುವುದಿಲ್ಲ (Maturity) ಜೀವನದ ವಾಸ್ತವಿಕ ಅನುಭವಗಳಿಂದ
ಹದಗೊಂಡಿರುವುದಿಲ್ಲ. ಇತರರಿಗಿಂತ ಎತ್ತರದಲ್ಲಿರಬೇಕು ಎನ್ನುವ ಧೈಯವೊಂದು
ಬಲವಾಗಿರುತ್ತದೆ. ಹಾಗಾಗಿ ವಾಸ್ತವಿಕ ಪ್ರಪಂಚದ ಆಗುಹೋಗುಗಳು ಸ್ಪಷ್ಟವಾಗಿ
ಕಾಣಿಸುವುದಿಲ್ಲ. ಪರೀಕ್ಷೆಗಳಲ್ಲಿ ಜಾಣ ಹುಡುಗರು ಮುಗ್ಗರಿಸುವುದೂ, ಮಂಕು
ಬಡ್ಡಿಗಳು ಫಸ್ಟ್ಕ್ಲಾಸ್ ಪಡೆಯುವುದೂ, ಅವರ ಗಮನಕ್ಕೆ ಬರುತ್ತದೆ. ಪ್ರೈವೇಟ್
ಟ್ಯೂಷನ್, ಜಾತಿ, ಕುಲ, ಲಂಚ ರುಷುವತ್ತು ; ಇತ್ಯಾದಿ ಸಬೂಬುಗಳನ್ನು
ಪರೀಕ್ಷೆಯ ಫಲಿತಾಂಶಗಳಿಗೆ ಲಗತ್ತಿಸಿರುತ್ತಾರೆ. ಆಗ ಅವರ ಮನಸ್ಸಿಗೆ ಸ್ವಲ್ಪ
ಸಮಾಧಾನವು ದೊರಕುತ್ತದೆ. ಈ ವಿಚಾರಸರಣಿಯು, ಸ್ವಂತ ಪ್ರಯತ್ನದಿಂದ
ಯಾವ ಮೆಹನತ್ತೂ ದೊರಕಲಾರದು ಎಂಬ ಜುಗುಪ್ಪೆಯನ್ನು ಉಂಟುಮಾಡುತ್ತದೆ.
ಇತ್ತ ಜುಗುಪ್ಪೆ ; ಅತ್ತ ಆಸೆ. ಇವೆರಡರ ಜಗ್ಗಾಟದಲ್ಲಿ ಆತಂಕ ಕಾಣಿಸಿಕೊಳ್ಳುತ್ತದೆ.
ಆತಂಕದಿಂದಲೂ ಪ್ರಯೋಜನವು ಉಂಟು, ಹೇಗೆ ಅನ್ನಿ.
{{gap}}ಆತಂಕದ ಫಲವಾಗಿ ದೇಹದಲ್ಲಿ ಬೇನೆಯು ಕಾಣಿಸಿಕೊಳ್ಳುತ್ತದೆ. ಬೇನೆಯ
ನೆಪದಿಂದ, ಪರೀಕ್ಷೆಯಲ್ಲಿ ಯಶಸ್ವಿಯಾಗುವ ಹೊಣೆಯು ಕಡಿಮೆಯಾಗುತ್ತದೆ.
ಮನೆಯ ಹಿರಿಯರ ಮನ್ನಣೆಯನ್ನು ಕಳೆದುಕೊಳ್ಳಬೇಕಾಗಿಲ್ಲ. ಹೀಗಾಗಿ ಮನಸ್ಸಿನಲ್ಲಿ
ಸಮಾಧಾನವೂ ಮೂಡುತ್ತದೆ.
{{gap}}ಮನಸ್ಸಿನಲ್ಲಿ ಆತಂಕವು ಮೂಡಿದರೆ, ದೇಹದಲ್ಲಿ ಜ್ವರ ಏಕೆ
ಕಾಣಿಸಿಕೊಳ್ಳಬೇಕು ? ಎಂದು ಅನುಮಾನ ಬರಬಹುದು. ಸಾಮಾನ್ಯವಾಗಿ
ಜ್ವರ ಬರಬೇಕಾದರೆ ಬ್ಯಾಕ್ಟಿರಿಯಾಗಳೋ ಅಥವಾ ವೈರಸ್ಗಳೋ ಹಾಗೂ
ಇತರ ಪೋಟೋಜೂ ಆಗಳೂ ಸೋಂಕಿರಬೇಕು. ಅವುಗಳ ಸೋಂಕಿರದಿದ್ದರೂ
ಜ್ವರ ಬರಬಹುದು. ದೇಹದ ಉಷ್ಣವನ್ನು ಒಂದು ಹಂತದಲ್ಲಿ ಸರಿಯಾಗಿರಿಸಲು,
ಕೆಲವು ನರಕೇಂದ್ರಗಳು ಹೊಣೆ ಹೊತ್ತಿರುತ್ತವೆ. ಈ ಕೇಂದ್ರಗಳು ಮೆದುಳಿನ
ಬುಡದಲ್ಲಿವೆ. (Thermotaxic centres), ಆತಂಕವು ತೀವ್ರವಾದಾಗ ಮೆದುಳಿನ
ತಲಾಮಸ್ ಮತ್ತು ಸ್ವಯಂಚಾಲಿತ ನರಗಳ ಮೂಲಕ (Autonomic nerves)
ಅದು ದೇಹಕ್ಕೆ ವಕ್ತಿಸುತ್ತದೆ. ಆಗ ಎದೆಯು ಡಬಡಬ ಮಾಡುತ್ತದೆ. ಉಸಿರಾಡುವುದು<noinclude></noinclude>
9ae6a7x2nkiue89pgwn8fbvl8e42ruc
316565
316538
2026-05-03T15:58:25Z
Pragathi. BH
7585
/* Validated */
316565
proofread-page
text/x-wiki
<noinclude><pagequality level="4" user="Pragathi. BH" /></noinclude>
{{Left|೮೮}}{{Right|ಮನಮಂಥನ}}
ಸಮಾಧಾನ ಹೇಳಿಕೊಳ್ಳುತ್ತಾರೆ. ಡೋಲಾಯಮಾನದ ಮನಸ್ಸಿನ ಈ ಸ್ಥಿತಿಯೇ
ಆತಂಕಕ್ಕೆ ಕಾರಣ. ಬ್ಯಾಂಕ್ ಗಿಟ್ಟಿಸಿದರೆ ಅಮ್ಮ ಮೆಚ್ಚುತ್ತಾಳೆ, ಹಿಗ್ಗುತ್ತಾಳೆ. ಏನೆಲ್ಲಾ
ಕಷ್ಟಪಡುತ್ತಿದ್ದಾಳೆ, ನನ್ನಸಲುವಾಗಿ, ಅವಳಿಗೆ ಸಂತೋಷವನ್ನುಂಟುಮಾಡಬೇಕು
ಎನ್ನುವ ತೀವ್ರ ಆಸೆಯು, ಇದ್ದ ಆತಂಕವನ್ನು ಕೆರಳಿಸುತ್ತದೆ.
{{gap}}ವಿದ್ಯಾರ್ಥಿಯ ಪೌಗಂಡ ವಯಸ್ಸಿನಲ್ಲಿ, ವ್ಯಕ್ತಿತ್ವವು (Personality)
ಪರಿಪೂರ್ಣವಾಗಿರುವುದಿಲ್ಲ (Maturity) ಜೀವನದ ವಾಸ್ತವಿಕ ಅನುಭವಗಳಿಂದ
ಹದಗೊಂಡಿರುವುದಿಲ್ಲ. ಇತರರಿಗಿಂತ ಎತ್ತರದಲ್ಲಿರಬೇಕು ಎನ್ನುವ ಧೈಯವೊಂದು
ಬಲವಾಗಿರುತ್ತದೆ. ಹಾಗಾಗಿ ವಾಸ್ತವಿಕ ಪ್ರಪಂಚದ ಆಗುಹೋಗುಗಳು ಸ್ಪಷ್ಟವಾಗಿ
ಕಾಣಿಸುವುದಿಲ್ಲ. ಪರೀಕ್ಷೆಗಳಲ್ಲಿ ಜಾಣ ಹುಡುಗರು ಮುಗ್ಗರಿಸುವುದೂ, ಮಂಕು
ಬಡ್ಡಿಗಳು ಫಸ್ಟ್ಕ್ಲಾಸ್ ಪಡೆಯುವುದೂ, ಅವರ ಗಮನಕ್ಕೆ ಬರುತ್ತದೆ. ಪ್ರೈವೇಟ್
ಟ್ಯೂಷನ್, ಜಾತಿ, ಕುಲ, ಲಂಚ ರುಷುವತ್ತು ; ಇತ್ಯಾದಿ ಸಬೂಬುಗಳನ್ನು
ಪರೀಕ್ಷೆಯ ಫಲಿತಾಂಶಗಳಿಗೆ ಲಗತ್ತಿಸಿರುತ್ತಾರೆ. ಆಗ ಅವರ ಮನಸ್ಸಿಗೆ ಸ್ವಲ್ಪ
ಸಮಾಧಾನವು ದೊರಕುತ್ತದೆ. ಈ ವಿಚಾರಸರಣಿಯು, ಸ್ವಂತ ಪ್ರಯತ್ನದಿಂದ
ಯಾವ ಮೆಹನತ್ತೂ ದೊರಕಲಾರದು ಎಂಬ ಜುಗುಪ್ಪೆಯನ್ನು ಉಂಟುಮಾಡುತ್ತದೆ.
ಇತ್ತ ಜುಗುಪ್ಪೆ ; ಅತ್ತ ಆಸೆ. ಇವೆರಡರ ಜಗ್ಗಾಟದಲ್ಲಿ ಆತಂಕ ಕಾಣಿಸಿಕೊಳ್ಳುತ್ತದೆ.
ಆತಂಕದಿಂದಲೂ ಪ್ರಯೋಜನವು ಉಂಟು, ಹೇಗೆ ಅನ್ನಿ.
{{gap}}ಆತಂಕದ ಫಲವಾಗಿ ದೇಹದಲ್ಲಿ ಬೇನೆಯು ಕಾಣಿಸಿಕೊಳ್ಳುತ್ತದೆ. ಬೇನೆಯ
ನೆಪದಿಂದ, ಪರೀಕ್ಷೆಯಲ್ಲಿ ಯಶಸ್ವಿಯಾಗುವ ಹೊಣೆಯು ಕಡಿಮೆಯಾಗುತ್ತದೆ.
ಮನೆಯ ಹಿರಿಯರ ಮನ್ನಣೆಯನ್ನು ಕಳೆದುಕೊಳ್ಳಬೇಕಾಗಿಲ್ಲ. ಹೀಗಾಗಿ ಮನಸ್ಸಿನಲ್ಲಿ
ಸಮಾಧಾನವೂ ಮೂಡುತ್ತದೆ.
{{gap}}ಮನಸ್ಸಿನಲ್ಲಿ ಆತಂಕವು ಮೂಡಿದರೆ, ದೇಹದಲ್ಲಿ ಜ್ವರ ಏಕೆ
ಕಾಣಿಸಿಕೊಳ್ಳಬೇಕು ? ಎಂದು ಅನುಮಾನ ಬರಬಹುದು. ಸಾಮಾನ್ಯವಾಗಿ
ಜ್ವರ ಬರಬೇಕಾದರೆ ಬ್ಯಾಕ್ಟಿರಿಯಾಗಳೋ ಅಥವಾ ವೈರಸ್ಗಳೋ ಹಾಗೂ
ಇತರ ಪೋಟೋಜೂ ಆಗಳೂ ಸೋಂಕಿರಬೇಕು. ಅವುಗಳ ಸೋಂಕಿರದಿದ್ದರೂ
ಜ್ವರ ಬರಬಹುದು. ದೇಹದ ಉಷ್ಣವನ್ನು ಒಂದು ಹಂತದಲ್ಲಿ ಸರಿಯಾಗಿರಿಸಲು,
ಕೆಲವು ನರಕೇಂದ್ರಗಳು ಹೊಣೆ ಹೊತ್ತಿರುತ್ತವೆ. ಈ ಕೇಂದ್ರಗಳು ಮೆದುಳಿನ
ಬುಡದಲ್ಲಿವೆ. (Thermotaxic centres), ಆತಂಕವು ತೀವ್ರವಾದಾಗ ಮೆದುಳಿನ
ತಲಾಮಸ್ ಮತ್ತು ಸ್ವಯಂಚಾಲಿತ ನರಗಳ ಮೂಲಕ (Autonomic nerves)
ಅದು ದೇಹಕ್ಕೆ ವಕ್ತಿಸುತ್ತದೆ. ಆಗ ಎದೆಯು ಡಬಡಬ ಮಾಡುತ್ತದೆ. ಉಸಿರಾಡುವುದು<noinclude></noinclude>
pinpl55msyp4fyd57g3w8t9a45jdmvv
ಪುಟ:ಮನಮಂಥನ.pdf/೧೦೮
104
62555
316539
315650
2026-05-03T14:19:19Z
Shreesha Sharma
7840
316539
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಆತಂಕ}}{{Right|೮೯}}
ಮೇಲೇಲಾಗುತ್ತದೆ, ಇತ್ಯಾದಿ. ಇದು ದೇಹದಲ್ಲಾಗುವ ಕಾರ್ಯಕ್ರಮ. ಕೆಲವೊಂದು
ವೇಳೆ, ಹಲವರಲ್ಲಿ, ಆತಂಕವು ತೀವ್ರವಾದಾಗ, ತಲಾಮಸ್ಸಿಗೆ ಹರಡಿದಾಗ, ಉಷ್ಣ
ಸಮತೋಲನ ಕೇಂದ್ರಗಳಿಗೂ ಪಸರಿಸುತ್ತದೆ. ಕೆರಳಿದ ಆ ಕೇಂದ್ರಗಳು ಉಷ್ಣವನ್ನು
ಉತ್ಪಾದಿಸುತ್ತವೆ, ಜ್ವರವು ಕಾಣಿಸಿಕೊಳ್ಳುತ್ತದೆ.
{{gap}}ಲಕ್ಷ ಜನ ಜ್ವರ ಬಂದವರಲ್ಲಿ, ಆತಂಕದಿಂದಾಗಿ ಜ್ವರ ಬರುವುದು ಒಬ್ಬಿಬ್ಬರಲ್ಲಿ
ಮಾತ್ರ ಅತಿ ವಿರಳವಾಗಿ ಹೀಗಾಗುವುದಾದರೂ, ಹೀಗಾಗಬಹುದು ಎಂಬುದನ್ನು
ಮರೆಯಬಾರದು.
'''ಸ್ಪರ್ಧೆಯ ದಿಗ್ಧಮೆ''' :
{{gap}}ಐ.ಎ.ಎಸ್. ಪರೀಕ್ಷೆಗೆ ಕೂತಿದ್ದ ನಮ್ಮ ಭೈರಪ್ಪ. ಜೂಆಲಜಿ ಆನರ್ಸ್ನಲ್ಲಿ
ಬ್ಯಾಂಕ್ ಪಡೆದಿದ್ದವ, ಇಂಗ್ಲೀಷಿನಲ್ಲಿ ಅಸಾಧಾರಣ ಪಾಂಡಿತ್ಯವಿತ್ತು. ಅಂತ
ವಿಶ್ವವಿದ್ಯಾಲಯಗಳ ಟೆನ್ನಿಸ್ ಚಾಂಪಿಯನ್ ಆಗಿದ್ದ ವಾಗಿ, ಇಷ್ಟರ ಜತೆಗೆ
ಅವರ ತಂದೆ ದೊಡ್ಡ ಶ್ರೀಮಂತ, ಅಂತಹವರ ಮಕ್ಕಳಿಗೆ ತಾನೇ ದೇವರು,
ಸ್ಪರ್ಧಾ ಪರೀಕ್ಷೆಗಳಲ್ಲಿ ಬ್ಯಾಂಕ್ ಕೊಡಿಸುವುದು !
{{gap}}ಪರೀಕ್ಷೆಗೆ ಇನ್ನು ಹದಿನೈದು ದಿನಗಳಿವೆ ಎನ್ನುವಾಗ ಭೈರಪ್ಪನಿಗೆ, ಎಲ್ಲ
ಸ್ಪರ್ಧಿಗಳಿಗೂ ಇರುವಂತೆ ಆತಂಕವು ಇತ್ತು, ಅಷ್ಟು ಇರಬೇಕಾದದ್ದೇ. ದಿಳ್ಳಿಯಲ್ಲಿ
ಓದುತ್ತಿದ್ದ, ಪರೀಕ್ಷೆಯನ್ನು ಅಲ್ಲೇ ಏರ್ಪಡಿಸಿಕೊಂಡಿದ್ದ. ಹಳೆಯ ಸ್ನೇಹಿತ
ರಾಜಾರಾಂ ಅವನ ರೂಂಮೇಟ್ ಆಗಿದ್ದ.
{{gap}}ಭೈರಪ್ಪನ ತಂದೆಗೆ ರಾಜಾರಾಂ ಒಂದು ತುರ್ತು ತಂತಿ ಕಳಿಸಿದ.
'ಈಗೊಂದೆರಡು ದಿನಗಳಿಂದ ಭೈರಪ್ಪ ಒಂದು ತುತ್ತು ಉಂಡಿಲ್ಲ. ಒಂದು ಕ್ಷಣ
ಮಲಗಿ ನಿದ್ರೆ ಮಾಡುವುದಿಲ್ಲ. ಸುಮ್ಮನೆ ಥರಪರಗುಟ್ಟುತ್ತಾನೆ. ತತ್ಕ್ಷಣ ಬನ್ನಿ'
ಅಂತ. ಸರ್ವಸಾಹಸ ಮಾಡಿ ಅವತ್ತೇ ದಿಳ್ಳಿಗೆ ವಿಮಾನದಲ್ಲಿ ಸೀಟು ಗಿಟ್ಟಿಸಿ
ಹೊರಟರು.
{{gap}}ಮಾರನೆಯ ದಿನ ಭೈರಪ್ಪನನ್ನು ಕರೆದುಕೊಂಡು ದೊಡ್ಡಾಸ್ಪತ್ರೆಗೆ ಹೋದರು.
ಅಲ್ಲಿ ಮೈಸೂರಿನ ಡಾಕ್ಟರು ಇರುವುದರಿಂದ ಏನೋ ನಿಧಿ ಸಿಕ್ಕಿದಂತಾಗಿತ್ತು,
ಭೈರಪ್ಪನ ತಂದೆಗೆ. ಭೈರಪ್ಪನಿಗೆ ತೀವ್ರ ತಳಮಳವಾಗಿದೆ ಎನ್ನುವುದು ಡಾಕ್ಟರಿಗೆ
ಸ್ಪಷ್ಟವಾಯಿತು. "ಯಾಕೆ ಹೀಗಾಗಿದೆ, ಹಠಾತ್ತಾನೆ ಹೀಗಾಯಿತೇ ? ಏನಾದರೂ
ಔಷಧಿ ಗಿವಧಿ ಸೇವಿಸುತ್ತಿದ್ದೆಯಾ ?' ಎಂದು ಅತ್ಯಾದರದಿಂದ, ಸಹಾನುಭೂತಿಯಿಂದ
ಡಾಕ್ಟರು ಕೇಳಿದರು. ಇಂತಹ ಪರಿಸ್ಥಿತಿಗಳಲ್ಲಿ ಕೇಳಿದ ಮಾತುಗಳಿಗಿಂತ ಆಡುವ<noinclude></noinclude>
r8dwrqb75p8a4zn62whrk6she9xcusr
316566
316539
2026-05-03T16:06:46Z
Pragathi. BH
7585
/* Validated */
316566
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|ಆತಂಕ}}{{Right|೮೯}}
ಮೇಲೇಲಾಗುತ್ತದೆ, ಇತ್ಯಾದಿ. ಇದು ದೇಹದಲ್ಲಾಗುವ ಕಾರ್ಯಕ್ರಮ. ಕೆಲವೊಂದು
ವೇಳೆ, ಹಲವರಲ್ಲಿ, ಆತಂಕವು ತೀವ್ರವಾದಾಗ, ತಲಾಮಸ್ಸಿಗೆ ಹರಡಿದಾಗ, ಉಷ್ಣ
ಸಮತೋಲನ ಕೇಂದ್ರಗಳಿಗೂ ಪಸರಿಸುತ್ತದೆ. ಕೆರಳಿದ ಆ ಕೇಂದ್ರಗಳು ಉಷ್ಣವನ್ನು
ಉತ್ಪಾದಿಸುತ್ತವೆ, ಜ್ವರವು ಕಾಣಿಸಿಕೊಳ್ಳುತ್ತದೆ.
{{gap}}ಲಕ್ಷ ಜನ ಜ್ವರ ಬಂದವರಲ್ಲಿ, ಆತಂಕದಿಂದಾಗಿ ಜ್ವರ ಬರುವುದು ಒಬ್ಬಿಬ್ಬರಲ್ಲಿ
ಮಾತ್ರ ಅತಿ ವಿರಳವಾಗಿ ಹೀಗಾಗುವುದಾದರೂ, ಹೀಗಾಗಬಹುದು ಎಂಬುದನ್ನು
ಮರೆಯಬಾರದು.
'''ಸ್ಪರ್ಧೆಯ ದಿಗ್ಭ್ರಮೆ:'''
{{gap}}ಐ.ಎ.ಎಸ್. ಪರೀಕ್ಷೆಗೆ ಕೂತಿದ್ದ ನಮ್ಮ ಭೈರಪ್ಪ. ಜೂಆಲಜಿ ಆನರ್ಸ್ನಲ್ಲಿ
ಬ್ಯಾಂಕ್ ಪಡೆದಿದ್ದವ, ಇಂಗ್ಲೀಷಿನಲ್ಲಿ ಅಸಾಧಾರಣ ಪಾಂಡಿತ್ಯವಿತ್ತು. ಅಂತ
ವಿಶ್ವವಿದ್ಯಾಲಯಗಳ ಟೆನ್ನಿಸ್ ಚಾಂಪಿಯನ್ ಆಗಿದ್ದ ವಾಗ್ಮಿ, ಇಷ್ಟರ ಜತೆಗೆ
ಅವರ ತಂದೆ ದೊಡ್ಡ ಶ್ರೀಮಂತ, ಅಂತಹವರ ಮಕ್ಕಳಿಗೆ ತಾನೇ ದೇವರು,
ಸ್ಪರ್ಧಾ ಪರೀಕ್ಷೆಗಳಲ್ಲಿ ಬ್ಯಾಂಕ್ ಕೊಡಿಸುವುದು !
{{gap}}ಪರೀಕ್ಷೆಗೆ ಇನ್ನು ಹದಿನೈದು ದಿನಗಳಿವೆ ಎನ್ನುವಾಗ ಭೈರಪ್ಪನಿಗೆ, ಎಲ್ಲ
ಸ್ಪರ್ಧಿಗಳಿಗೂ ಇರುವಂತೆ ಆತಂಕವು ಇತ್ತು, ಅಷ್ಟು ಇರಬೇಕಾದದ್ದೇ. ದಿಳ್ಳಿಯಲ್ಲಿ
ಓದುತ್ತಿದ್ದ, ಪರೀಕ್ಷೆಯನ್ನು ಅಲ್ಲೇ ಏರ್ಪಡಿಸಿಕೊಂಡಿದ್ದ. ಹಳೆಯ ಸ್ನೇಹಿತ
ರಾಜಾರಾಂ ಅವನ ರೂಂಮೇಟ್ ಆಗಿದ್ದ.
{{gap}}ಭೈರಪ್ಪನ ತಂದೆಗೆ ರಾಜಾರಾಂ ಒಂದು ತುರ್ತು ತಂತಿ ಕಳಿಸಿದ.
'ಈಗೊಂದೆರಡು ದಿನಗಳಿಂದ ಭೈರಪ್ಪ ಒಂದು ತುತ್ತು ಉಂಡಿಲ್ಲ. ಒಂದು ಕ್ಷಣ
ಮಲಗಿ ನಿದ್ರೆ ಮಾಡುವುದಿಲ್ಲ. ಸುಮ್ಮನೆ ಥರಪರಗುಟ್ಟುತ್ತಾನೆ. ತತ್ಕ್ಷಣ ಬನ್ನಿ'
ಅಂತ. ಸರ್ವಸಾಹಸ ಮಾಡಿ ಅವತ್ತೇ ದಿಳ್ಳಿಗೆ ವಿಮಾನದಲ್ಲಿ ಸೀಟು ಗಿಟ್ಟಿಸಿ
ಹೊರಟರು.
{{gap}}ಮಾರನೆಯ ದಿನ ಭೈರಪ್ಪನನ್ನು ಕರೆದುಕೊಂಡು ದೊಡ್ಡಾಸ್ಪತ್ರೆಗೆ ಹೋದರು.
ಅಲ್ಲಿ ಮೈಸೂರಿನ ಡಾಕ್ಟರು ಇರುವುದರಿಂದ ಏನೋ ನಿಧಿ ಸಿಕ್ಕಿದಂತಾಗಿತ್ತು,
ಭೈರಪ್ಪನ ತಂದೆಗೆ. ಭೈರಪ್ಪನಿಗೆ ತೀವ್ರ ತಳಮಳವಾಗಿದೆ ಎನ್ನುವುದು ಡಾಕ್ಟರಿಗೆ
ಸ್ಪಷ್ಟವಾಯಿತು. "ಯಾಕೆ ಹೀಗಾಗಿದೆ, ಹಠಾತ್ತಾನೆ ಹೀಗಾಯಿತೇ ? ಏನಾದರೂ
ಔಷಧಿ ಗಿವಧಿ ಸೇವಿಸುತ್ತಿದ್ದೆಯಾ ?' ಎಂದು ಅತ್ಯಾದರದಿಂದ, ಸಹಾನುಭೂತಿಯಿಂದ
ಡಾಕ್ಟರು ಕೇಳಿದರು. ಇಂತಹ ಪರಿಸ್ಥಿತಿಗಳಲ್ಲಿ ಕೇಳಿದ ಮಾತುಗಳಿಗಿಂತ ಆಡುವ<noinclude></noinclude>
q8dxqp7t8ryhub3ul379pghzm1ntlzo
ಪುಟ:ಮನಮಂಥನ.pdf/೧೦೯
104
62556
316540
315651
2026-05-03T14:20:32Z
Shreesha Sharma
7840
316540
proofread-page
text/x-wiki
<noinclude><pagequality level="3" user="Shreesha Sharma" /></noinclude>
{{Left|೯೦}}{{Right|ಮನಮಂಥನ}}
ರೀತಿಯು ಅತ್ಯಂತ ಫಲದಾಯಕ. ಭೈರಪ್ಪ ಹೇಳಿದ- 'ಈಗ ಎರಡು ಮೂರು
ದಿನಗಳಿಂದ ಎಲ್ಲವೂ ಮರೆತುಹೋಗುತ್ತಾ ಇದೆ. ಹತ್ತು ಸರ್ತಿ ಓದಿರ್ತಿನಿ,
ಬೆಳಿಗ್ಗೆ ತಿರುಗಿ ಆ ಪುಸ್ತಕವನ್ನು ತಿರುಗಿ ಹಾಕಿರ್ತಿನಿ. ಅರ್ಧ ಗಂಟೆಯ ಮೇಲೆ
ಜ್ಞಾಪಿಸಿಕೊಳ್ಳಲು ಹೋದರೆ, ಒಂದು ವಿಷಯವೂ ನೆನಪಿಗೆ ಬರುಲ್ಲ. ಇನ್ನು
ಪರೀಕ್ಷೆಗೆ ಕೂತೇನು ಪ್ರಯೋಜನ ? ಪುಸ್ತಕಗಳನ್ನು ನೋಡಿದರೆ ಹೇಗೆ ಹೇಗೋ
ಆಗುತ್ತೆ, ಮೈಯಲ್ಲೆಲ್ಲಾ ನಡುಕ ಹುಟ್ಟುತ್ತೆ ಹಾಳಾಗಿ ಹೋಗಲಿ, ಪರೀಕ್ಷೆ ಅಂತ
ಮಲಗಿದರೆ, ನಿದ್ರೇನೇ ಬರುಲ್ಲ. ಏನೋ ಆಗಿಹೋಗಿದೆ ಡಾಕ್ಟರೇ ! ಹುಚ್ಚು
ಹಿಡಿದಿದೆಯೇನೋ ಎಂದು ಗಾಬರಿಯಾಗ್ತಾ ಇದೆ' ಎಂದು ಹೇಳಿದ. ವಾರಣವಾಗಿ
ಆಗುತ್ತಿದ್ದುದನ್ನು ಲಕ್ಷಣವಾಗಿ ವಿವರಿಸಿದ.
{{gap}}ಮಗನ ಕಾತರದ ಮುಖವನ್ನು, ಎರಡು ದಿನದ ಗಡ್ಡ ಬೆಳೆದಿರುವುದನ್ನೂ
ಕಂಡು ಕಂಗಾಲಾಗಿದ್ದ ತಂದೆ. “ಐ.ಎ.ಎಸ್. ಪ್ಯಾಸಾಗಿ ನಿಂಗೇನಾಗಬೇಕು. ನಾಲ್ಕು
ಜನ ಐ.ಎ.ಎಸ್. ಗಳನ್ನ ನಮ್ಮ ದುಖಾನ್ನಲ್ಲಿ ನೌಕರಿಗೆ ಇಟ್ಟುಕೋಬಹುದು.
ಇದಕ್ಯಾಕೆ ನೀ ಒದ್ದಾಡ್ತೀ ! ತೆಗೀತು, ಬಿಡು, ಪರೀಕ್ಷೇನೂ ಬೇಡ, ಡಾಕ್ಟರ ಹತ್ತಿರ
ಔಷಧಿ ತಕ್ಕೊಂಡು, ಗುಣ ಆಗ್ತಿದ್ದಾಗೇ ಊರಿಗೆ ಹೋಗೋಣ' ಎಂದರು.
{{gap}}'ಯಾವ ಪರೀಕ್ಷೇಲೂ ಎಂದೂ ಜಾರಿಲ್ಲ. ಈಗ ಹೆದರಿಕೊಂಡು ಹೋಗು
ಅಂತ ಯಾಕಂತೀ, ಅಪ್ಪಾ ! ನಂಗೆ ಅವಮಾನ ಆಗುಲ್ವ! ಕೆಂಚಪ್ಪ ನಮ್ಮನ್ನೊಡಿ
ನಗುಲ್ವಾ' ಎಂದು ಅಳುದನಿಯಲ್ಲಿ ಭೈರಪ್ಪ ಅಂದ.
{{gap}}'ಕೆಂಚಪ್ಪ ಯಾರು ?' ಎಂದು ಡಾಕ್ಟರು ಕೇಳಿದರು.
{{gap}}'ಕೆಂಚಪ್ಪ ನಮ್ಮ ದಾಯಾದಿ, ಅವನ ಮಗ ಹೋದ ವರ್ಷ ಐ.ಎ.ಎಸ್.
ಪ್ಯಾಸ್ ಮಾಡಿದ. ಬಲು ಬಡಾಯಿ ಮಾತಾಡ್ತಾನೆ ಕೆಂಚಪ್ಪ. ಗಟ್ಟಿಕುಳ ಏನಲ್ಲ.
ಇವತ್ತಿಗಿದ್ದರೆ ನಾಳೆಗಿಲ್ಲ. ಆದರೆ ಅದೇನು ಬಡಾಯಿ ಅಂತ ; ನನ್ನ ಮಗ ಹಾಗೆ
ಹೀಗೆ ಅಂತ ಕೊಚ್ಚಿಕೋತಾನೆ. ಅವನ ಮಾತನ್ನ ಭೈರಪ್ಪ ಯಾಕೆ ಎತ್ತಿದನೋ
ನಾಕಾಣೆ' ಎಂದರು ತಂದೆ.
{{gap}}'ನೋಡು ಮಗಾ, ಐ.ಎ.ಎಸ್. ಆಗಲೇಬೇಕು ಅಂತ ನಿನ್ನ ಹಟ ಇದ್ದರೆ,
ಅದೂ ಆಗಲಿ. ಆದರೆ ಈಗ ಸ್ವಸ್ಥವಾಗಿಲ್ಲ ನೀನು ! ಮುಂದಿನ ವರ್ಷ ಪರೀಕ್ಷೆಗೆ
ಕೂತರಾಯಿತು. ಇನ್ನೂ ಎರಡು ಸಲ ಕೂರಬಹುದಲ್ಲ ನೀನು. ಈ ವರ್ಷಾನೇ
ಆಗಬೇಕು ಅಂತ ಏನು ಶಾಸ್ತ್ರ !' ಎಂದರು ತಂದೆ.
{{gap}}ಆಗ ಡಾಕ್ಟರು ಅಂದರು, ಭೈರಪ್ಪ, ನೀ ಓದಿದೋನು. ಸ್ಪರ್ಧಾಪರೀಕ್ಷೆಯ
ಆತಂಕವು ಅತಿಯಾಗಿದೆ, ದಿಗ್ಧಮೆ ಹಿಡಿಸಿದೆ. ಕೆಂಚಪ್ಪನ ಮಗ ನಿನ್ನ ಆತಂಕಕ್ಕೆ<noinclude></noinclude>
elffmup18yo6ohbmhcyo70uu1f8l82a
316567
316540
2026-05-03T16:07:21Z
Pragathi. BH
7585
/* Validated */
316567
proofread-page
text/x-wiki
<noinclude><pagequality level="4" user="Pragathi. BH" /></noinclude>
{{Left|೯೦}}{{Right|ಮನಮಂಥನ}}
ರೀತಿಯು ಅತ್ಯಂತ ಫಲದಾಯಕ. ಭೈರಪ್ಪ ಹೇಳಿದ- 'ಈಗ ಎರಡು ಮೂರು
ದಿನಗಳಿಂದ ಎಲ್ಲವೂ ಮರೆತುಹೋಗುತ್ತಾ ಇದೆ. ಹತ್ತು ಸರ್ತಿ ಓದಿರ್ತಿನಿ,
ಬೆಳಿಗ್ಗೆ ತಿರುಗಿ ಆ ಪುಸ್ತಕವನ್ನು ತಿರುಗಿ ಹಾಕಿರ್ತಿನಿ. ಅರ್ಧ ಗಂಟೆಯ ಮೇಲೆ
ಜ್ಞಾಪಿಸಿಕೊಳ್ಳಲು ಹೋದರೆ, ಒಂದು ವಿಷಯವೂ ನೆನಪಿಗೆ ಬರುಲ್ಲ. ಇನ್ನು
ಪರೀಕ್ಷೆಗೆ ಕೂತೇನು ಪ್ರಯೋಜನ ? ಪುಸ್ತಕಗಳನ್ನು ನೋಡಿದರೆ ಹೇಗೆ ಹೇಗೋ
ಆಗುತ್ತೆ, ಮೈಯಲ್ಲೆಲ್ಲಾ ನಡುಕ ಹುಟ್ಟುತ್ತೆ ಹಾಳಾಗಿ ಹೋಗಲಿ, ಪರೀಕ್ಷೆ ಅಂತ
ಮಲಗಿದರೆ, ನಿದ್ರೇನೇ ಬರುಲ್ಲ. ಏನೋ ಆಗಿಹೋಗಿದೆ ಡಾಕ್ಟರೇ ! ಹುಚ್ಚು
ಹಿಡಿದಿದೆಯೇನೋ ಎಂದು ಗಾಬರಿಯಾಗ್ತಾ ಇದೆ' ಎಂದು ಹೇಳಿದ. ವಾರಣವಾಗಿ
ಆಗುತ್ತಿದ್ದುದನ್ನು ಲಕ್ಷಣವಾಗಿ ವಿವರಿಸಿದ.
{{gap}}ಮಗನ ಕಾತರದ ಮುಖವನ್ನು, ಎರಡು ದಿನದ ಗಡ್ಡ ಬೆಳೆದಿರುವುದನ್ನೂ
ಕಂಡು ಕಂಗಾಲಾಗಿದ್ದ ತಂದೆ. “ಐ.ಎ.ಎಸ್. ಪ್ಯಾಸಾಗಿ ನಿಂಗೇನಾಗಬೇಕು. ನಾಲ್ಕು
ಜನ ಐ.ಎ.ಎಸ್. ಗಳನ್ನ ನಮ್ಮ ದುಖಾನ್ನಲ್ಲಿ ನೌಕರಿಗೆ ಇಟ್ಟುಕೋಬಹುದು.
ಇದಕ್ಯಾಕೆ ನೀ ಒದ್ದಾಡ್ತೀ ! ತೆಗೀತು, ಬಿಡು, ಪರೀಕ್ಷೇನೂ ಬೇಡ, ಡಾಕ್ಟರ ಹತ್ತಿರ
ಔಷಧಿ ತಕ್ಕೊಂಡು, ಗುಣ ಆಗ್ತಿದ್ದಾಗೇ ಊರಿಗೆ ಹೋಗೋಣ' ಎಂದರು.
{{gap}}'ಯಾವ ಪರೀಕ್ಷೇಲೂ ಎಂದೂ ಜಾರಿಲ್ಲ. ಈಗ ಹೆದರಿಕೊಂಡು ಹೋಗು
ಅಂತ ಯಾಕಂತೀ, ಅಪ್ಪಾ ! ನಂಗೆ ಅವಮಾನ ಆಗುಲ್ವ! ಕೆಂಚಪ್ಪ ನಮ್ಮನ್ನೊಡಿ
ನಗುಲ್ವಾ' ಎಂದು ಅಳುದನಿಯಲ್ಲಿ ಭೈರಪ್ಪ ಅಂದ.
{{gap}}'ಕೆಂಚಪ್ಪ ಯಾರು ?' ಎಂದು ಡಾಕ್ಟರು ಕೇಳಿದರು.
{{gap}}'ಕೆಂಚಪ್ಪ ನಮ್ಮ ದಾಯಾದಿ, ಅವನ ಮಗ ಹೋದ ವರ್ಷ ಐ.ಎ.ಎಸ್.
ಪ್ಯಾಸ್ ಮಾಡಿದ. ಬಲು ಬಡಾಯಿ ಮಾತಾಡ್ತಾನೆ ಕೆಂಚಪ್ಪ. ಗಟ್ಟಿಕುಳ ಏನಲ್ಲ.
ಇವತ್ತಿಗಿದ್ದರೆ ನಾಳೆಗಿಲ್ಲ. ಆದರೆ ಅದೇನು ಬಡಾಯಿ ಅಂತ ; ನನ್ನ ಮಗ ಹಾಗೆ
ಹೀಗೆ ಅಂತ ಕೊಚ್ಚಿಕೋತಾನೆ. ಅವನ ಮಾತನ್ನ ಭೈರಪ್ಪ ಯಾಕೆ ಎತ್ತಿದನೋ
ನಾಕಾಣೆ' ಎಂದರು ತಂದೆ.
{{gap}}'ನೋಡು ಮಗಾ, ಐ.ಎ.ಎಸ್. ಆಗಲೇಬೇಕು ಅಂತ ನಿನ್ನ ಹಟ ಇದ್ದರೆ,
ಅದೂ ಆಗಲಿ. ಆದರೆ ಈಗ ಸ್ವಸ್ಥವಾಗಿಲ್ಲ ನೀನು ! ಮುಂದಿನ ವರ್ಷ ಪರೀಕ್ಷೆಗೆ
ಕೂತರಾಯಿತು. ಇನ್ನೂ ಎರಡು ಸಲ ಕೂರಬಹುದಲ್ಲ ನೀನು. ಈ ವರ್ಷಾನೇ
ಆಗಬೇಕು ಅಂತ ಏನು ಶಾಸ್ತ್ರ !' ಎಂದರು ತಂದೆ.
{{gap}}ಆಗ ಡಾಕ್ಟರು ಅಂದರು, ಭೈರಪ್ಪ, ನೀ ಓದಿದೋನು. ಸ್ಪರ್ಧಾಪರೀಕ್ಷೆಯ
ಆತಂಕವು ಅತಿಯಾಗಿದೆ, ದಿಗ್ಧಮೆ ಹಿಡಿಸಿದೆ. ಕೆಂಚಪ್ಪನ ಮಗ ನಿನ್ನ ಆತಂಕಕ್ಕೆ<noinclude></noinclude>
e2isvvsn1iuwi8h26aaa9f1j50gdxsq
316568
316567
2026-05-03T16:11:59Z
Pragathi. BH
7585
316568
proofread-page
text/x-wiki
<noinclude><pagequality level="4" user="Pragathi. BH" /></noinclude>
{{Left|೯೦}}{{Right|ಮನಮಂಥನ}}
ರೀತಿಯು ಅತ್ಯಂತ ಫಲದಾಯಕ. ಭೈರಪ್ಪ ಹೇಳಿದ- 'ಈಗ ಎರಡು ಮೂರು
ದಿನಗಳಿಂದ ಎಲ್ಲವೂ ಮರೆತುಹೋಗುತ್ತಾ ಇದೆ. ಹತ್ತು ಸರ್ತಿ ಓದಿರ್ತಿನಿ,
ಬೆಳಿಗ್ಗೆ ತಿರುಗಿ ಆ ಪುಸ್ತಕವನ್ನು ತಿರುಗಿ ಹಾಕಿರ್ತಿನಿ. ಅರ್ಧ ಗಂಟೆಯ ಮೇಲೆ
ಜ್ಞಾಪಿಸಿಕೊಳ್ಳಲು ಹೋದರೆ, ಒಂದು ವಿಷಯವೂ ನೆನಪಿಗೆ ಬರುಲ್ಲ. ಇನ್ನು
ಪರೀಕ್ಷೆಗೆ ಕೂತೇನು ಪ್ರಯೋಜನ ? ಪುಸ್ತಕಗಳನ್ನು ನೋಡಿದರೆ ಹೇಗೆ ಹೇಗೋ
ಆಗುತ್ತೆ, ಮೈಯಲ್ಲೆಲ್ಲಾ ನಡುಕ ಹುಟ್ಟುತ್ತೆ ಹಾಳಾಗಿ ಹೋಗಲಿ, ಪರೀಕ್ಷೆ ಅಂತ
ಮಲಗಿದರೆ, ನಿದ್ರೇನೇ ಬರುಲ್ಲ. ಏನೋ ಆಗಿಹೋಗಿದೆ ಡಾಕ್ಟರೇ ! ಹುಚ್ಚು
ಹಿಡಿದಿದೆಯೇನೋ ಎಂದು ಗಾಬರಿಯಾಗ್ತಾ ಇದೆ' ಎಂದು ಹೇಳಿದ. ವಾರಣವಾಗಿ
ಆಗುತ್ತಿದ್ದುದನ್ನು ಲಕ್ಷಣವಾಗಿ ವಿವರಿಸಿದ.
{{gap}}ಮಗನ ಕಾತರದ ಮುಖವನ್ನು, ಎರಡು ದಿನದ ಗಡ್ಡ ಬೆಳೆದಿರುವುದನ್ನೂ
ಕಂಡು ಕಂಗಾಲಾಗಿದ್ದ ತಂದೆ. “ಐ.ಎ.ಎಸ್. ಪ್ಯಾಸಾಗಿ ನಿಂಗೇನಾಗಬೇಕು. ನಾಲ್ಕು
ಜನ ಐ.ಎ.ಎಸ್. ಗಳನ್ನ ನಮ್ಮ ದುಖಾನ್ನಲ್ಲಿ ನೌಕರಿಗೆ ಇಟ್ಟುಕೋಬಹುದು.
ಇದಕ್ಯಾಕೆ ನೀ ಒದ್ದಾಡ್ತೀ ! ತೆಗೀತು, ಬಿಡು, ಪರೀಕ್ಷೇನೂ ಬೇಡ, ಡಾಕ್ಟರ ಹತ್ತಿರ
ಔಷಧಿ ತಕ್ಕೊಂಡು, ಗುಣ ಆಗ್ತಿದ್ದಾಗೇ ಊರಿಗೆ ಹೋಗೋಣ' ಎಂದರು.
{{gap}}'ಯಾವ ಪರೀಕ್ಷೇಲೂ ಎಂದೂ ಜಾರಿಲ್ಲ. ಈಗ ಹೆದರಿಕೊಂಡು ಹೋಗು
ಅಂತ ಯಾಕಂತೀ, ಅಪ್ಪಾ ! ನಂಗೆ ಅವಮಾನ ಆಗುಲ್ವ! ಕೆಂಚಪ್ಪ ನಮ್ಮನ್ನೊಡಿ
ನಗುಲ್ವಾ' ಎಂದು ಅಳುದನಿಯಲ್ಲಿ ಭೈರಪ್ಪ ಅಂದ.
{{gap}}'ಕೆಂಚಪ್ಪ ಯಾರು ?' ಎಂದು ಡಾಕ್ಟರು ಕೇಳಿದರು.
{{gap}}'ಕೆಂಚಪ್ಪ ನಮ್ಮ ದಾಯಾದಿ, ಅವನ ಮಗ ಹೋದ ವರ್ಷ ಐ.ಎ.ಎಸ್.
ಪ್ಯಾಸ್ ಮಾಡಿದ. ಬಲು ಬಡಾಯಿ ಮಾತಾಡ್ತಾನೆ ಕೆಂಚಪ್ಪ. ಗಟ್ಟಿಕುಳ ಏನಲ್ಲ.
ಇವತ್ತಿಗಿದ್ದರೆ ನಾಳೆಗಿಲ್ಲ. ಆದರೆ ಅದೇನು ಬಡಾಯಿ ಅಂತ ; ನನ್ನ ಮಗ ಹಾಗೆ
ಹೀಗೆ ಅಂತ ಕೊಚ್ಚಿಕೋತಾನೆ. ಅವನ ಮಾತನ್ನ ಭೈರಪ್ಪ ಯಾಕೆ ಎತ್ತಿದನೋ
ನಾಕಾಣೆ' ಎಂದರು ತಂದೆ.
{{gap}}'ನೋಡು ಮಗಾ, ಐ.ಎ.ಎಸ್. ಆಗಲೇಬೇಕು ಅಂತ ನಿನ್ನ ಹಟ ಇದ್ದರೆ,
ಅದೂ ಆಗಲಿ. ಆದರೆ ಈಗ ಸ್ವಸ್ಥವಾಗಿಲ್ಲ ನೀನು ! ಮುಂದಿನ ವರ್ಷ ಪರೀಕ್ಷೆಗೆ
ಕೂತರಾಯಿತು. ಇನ್ನೂ ಎರಡು ಸಲ ಕೂರಬಹುದಲ್ಲ ನೀನು. ಈ ವರ್ಷಾನೇ
ಆಗಬೇಕು ಅಂತ ಏನು ಶಾಸ್ತ್ರ !' ಎಂದರು ತಂದೆ.
{{gap}}ಆಗ ಡಾಕ್ಟರು ಅಂದರು, ಭೈರಪ್ಪ, ನೀ ಓದಿದೋನು. ಸ್ಪರ್ಧಾಪರೀಕ್ಷೆಯ
ಆತಂಕವು ಅತಿಯಾಗಿದೆ, ದಿಗ್ಭ್ರಮೆ ಹಿಡಿಸಿದೆ. ಕೆಂಚಪ್ಪನ ಮಗ ನಿನ್ನ ಆತಂಕಕ್ಕೆ<noinclude></noinclude>
6ckjbxyn8zs0r4zvahc4bn8ubayz2y7
ಪುಟ:ಮನಮಂಥನ.pdf/೧೧೦
104
62557
316541
315652
2026-05-03T14:21:33Z
Shreesha Sharma
7840
316541
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಆತಂಕ}}{{Right|೯೧}}
ಹುಲ್ಲು ಹಾಕ್ತಿದ್ದಾನೆ. ಅದರಿಂದಲೇ Panic ದಿಗ್ಧಮೆ ಹಿಡಿದಂತಾಗಿದೆ.
ಐ.ಎ.ಎಸ್.ಗೆ ಕೂರಲೇಬೇಕು ಅಂತ ನಿನ್ನ ಹಟ ಇದ್ದರೆ, ಈ ಸರ್ತಿನೇ
ಕೂರಬೇಕು. ನಾ ಚಿಕಿತ್ಸೆ ಮಾಡಿಸ್ತೀನಿ. ಪರೀಕ್ಷೆಗೆ ಕೂರು. ನಿನ್ನ ಕೈಲಾದ್ದು
ಮಾಡು. ಮಸಲಾ ಜಯಬರಲಿಲ್ಲ ಅನ್ನು, ಮುಂದಿನ ಸಲ ಕೂತರಾಯಿತು.
ಆದರೆ ಈ ವರ್ಷ ನೀ ಕೂರದಿದ್ದರೆ ಮುಂದಿನ ಸರ್ತಿ ಕೂರಲು ಆಗುವುದೇ
ಇಲ್ಲ. ಈ ದಿಗ್ಧಮೆಯೂ ಹೊರವಾಗಿಬಿಡುತ್ತದೆ. ಭೂತವಾಗಿಬಿಡುತ್ತದೆ. ಈ
ಪರೀಕ್ಷೆಯ ಆಸೆಯನ್ನು ಬಿಟ್ಟುಬಿಡುತ್ತೇನೆ ಎಂದರೆ, ಅದೂ ಸಮ. ಚಿಕಿತ್ಸೆ
ಹೇಗಾಗಬೇಕು ಎನ್ನುವುದನ್ನು ಬರಸಿಕೊಡುತ್ತೇನೆ. ಊರಿಗೆ ಹೋಗಿ ಔಷಧಿ
ತಕ್ಕೋ, ಮುಂದೇನ್ಮಾಡಬೇಕು ಎನ್ನುವುದನ್ನು ಆಮೇಲೆ ಯೋಚಿಸಿದರಾಯಿತು'
ಎಂದು ಹೇಳಿದರು
{{gap}}'ಯಾಕೆ ಹಾಗಂತೀರಿ' ಎಂದು ಭೈರಪ್ಪ ಕುತೂಹಲದಿಂದ ಕೇಳಿದ.
ಅವನ ಕುತೂಹಲವನ್ನು ಕಂಡು ಡಾಕ್ಟರಿಗೆ ಸಂತೋಷವಾಯಿತು.
ದಿಗ್ಧಮೆಯು ಅತಿಯಾಗಿಲ್ಲ, ಹೇಳಿದ್ದನ್ನು ತಿಳಿದುಕೊಳ್ಳುವ ಸ್ಥಿತಿಯಲ್ಲಿದ್ದಾನೆ ಎಂದು
ದೃಢವಾಗಿತ್ತು. ಆದಕಾರಣ ಮನಸ್ಸಿನಲ್ಲಿರುವ ಆತಂಕವು ಸ್ಪರ್ಧಾ ಸನ್ನಿವೇಶಗಳಲ್ಲಿ,
ಹೇಗೆ ದಿಗ್ಧಮೆಯಾಗುತ್ತದೆ ? ಆಗ ಹೆದರಿದರೆ, ಹಿಂದೆಗೆದರೆ, ಮುಂದೆಂದೂ
ಧೈರ್ಯವು ಹೇಗೆ ಮೂಡುವುದಿಲ್ಲ. ಈಗ ಧೈರ್ಯವಾಗಿ ಎದುರಿಸಿದರೆ, ಆತಂಕದ
ದುಷ್ಪರಿಣಾಮವು ಶಾಶ್ವತವಾಗುವುದಿಲ್ಲ. Abreaction ಎಂದಿದನ್ನು ಕರೆಯುತ್ತಾರೆ
ಎಂದೆಲ್ಲವನ್ನೂ ವಿವರಿಸಿದರು
{{gap}}ಪ್ರಾಣಿ ಶಾಸ್ತ್ರದ ಪ್ರೌಢ ವಿದ್ಯಾರ್ಥಿ, ಭೈರಪ್ಪ. ಹವ್ಯಾಸಕ್ಕಾಗಿ ಮನಃಶಾಸ್ತ್ರವನ್ನೂ ಅಷ್ಟು ಇಷ್ಟು ಓದಿಕೊಂಡಿದ್ದ. ಡಾಕ್ಟರು ವಿವರಿಸಿದುದನ್ನು ಅರ್ಥ ಮಾಡಿಕೊಂಡ 'ಈ ಸರ್ತಿ ಪರೀಕ್ಷೆಗೆ ಕೂರುತ್ತೇನೆ, ಡಾಕ್ಟರೇ, ಸೊನ್ನೆ ನಂಬರು ಬಂದರೂ ಪರವಾಗಿಲ್ಲ. ಮಾಡಬೇಕದ ಚಿಕಿತ್ಸೆಯನ್ನು ನೀವು ಮಾಡಿ, ಇಷ್ಟರ ಮೇಲೆ
ದೇವರಿದ್ದಾನೆ. ಅಪ್ಪನ ಆಶೀರ್ವಾದ ಇದೆ' ಎಂದ ಭೈರಪ್ಪ, ದಿಗ್ಧಮೆಯು ಬಹಳಷ್ಟು
ಕರಗುತ್ತಿದ್ದುದು ಸ್ಪಷ್ಟವಾಗಿತ್ತು
{{gap}}ಭೈರಪ್ಪನಿಗೆ ಐವತ್ತೆರಡನೇ ಬ್ಯಾಂಕ್ ಬಂತು. ಆದರೆ ಆ ವರ್ಷ ಎಪ್ಪತ್ತೆಂಟು
ಮಂದಿಯನ್ನು ಚಾಕರಿಗೆ ಸೇರಿಸಿಕೊಂಡರು. ಶ್ರೀ ಭೈರಪ್ಪ ಎಂ.ಎಸ್ಸಿ., ಐ.ಎ.ಎಸ್.
ಎಂದು ಕಾಗದಗಳ ಮೇಲೆ ಅಷ್ಟೊತ್ತಿಸಿಕೊಂಡ.
{{gap}}ಪರೀಕ್ಷೆಗೆ ಕೂರುವ ಜಾಣ ಹುಡುಗರಲ್ಲಿ, ಕೆಲವರು ಆತಂಕದಿಂದಾಗಿ,
ದೇಹದ ಕಾಯಿಲೆಗಳಿಂದಲೂ ನರಳಬಹುದು. ಆತಂಕವು ಅತಿಯಾದಾಗ<noinclude></noinclude>
0iz3rcvgx1pn7z9fl28mcdhcv7wa2g7
316569
316541
2026-05-03T16:12:34Z
Pragathi. BH
7585
/* Validated */
316569
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|ಆತಂಕ}}{{Right|೯೧}}
ಹುಲ್ಲು ಹಾಕ್ತಿದ್ದಾನೆ. ಅದರಿಂದಲೇ Panic ದಿಗ್ಧಮೆ ಹಿಡಿದಂತಾಗಿದೆ.
ಐ.ಎ.ಎಸ್.ಗೆ ಕೂರಲೇಬೇಕು ಅಂತ ನಿನ್ನ ಹಟ ಇದ್ದರೆ, ಈ ಸರ್ತಿನೇ
ಕೂರಬೇಕು. ನಾ ಚಿಕಿತ್ಸೆ ಮಾಡಿಸ್ತೀನಿ. ಪರೀಕ್ಷೆಗೆ ಕೂರು. ನಿನ್ನ ಕೈಲಾದ್ದು
ಮಾಡು. ಮಸಲಾ ಜಯಬರಲಿಲ್ಲ ಅನ್ನು, ಮುಂದಿನ ಸಲ ಕೂತರಾಯಿತು.
ಆದರೆ ಈ ವರ್ಷ ನೀ ಕೂರದಿದ್ದರೆ ಮುಂದಿನ ಸರ್ತಿ ಕೂರಲು ಆಗುವುದೇ
ಇಲ್ಲ. ಈ ದಿಗ್ಧಮೆಯೂ ಹೊರವಾಗಿಬಿಡುತ್ತದೆ. ಭೂತವಾಗಿಬಿಡುತ್ತದೆ. ಈ
ಪರೀಕ್ಷೆಯ ಆಸೆಯನ್ನು ಬಿಟ್ಟುಬಿಡುತ್ತೇನೆ ಎಂದರೆ, ಅದೂ ಸಮ. ಚಿಕಿತ್ಸೆ
ಹೇಗಾಗಬೇಕು ಎನ್ನುವುದನ್ನು ಬರಸಿಕೊಡುತ್ತೇನೆ. ಊರಿಗೆ ಹೋಗಿ ಔಷಧಿ
ತಕ್ಕೋ, ಮುಂದೇನ್ಮಾಡಬೇಕು ಎನ್ನುವುದನ್ನು ಆಮೇಲೆ ಯೋಚಿಸಿದರಾಯಿತು'
ಎಂದು ಹೇಳಿದರು
{{gap}}'ಯಾಕೆ ಹಾಗಂತೀರಿ' ಎಂದು ಭೈರಪ್ಪ ಕುತೂಹಲದಿಂದ ಕೇಳಿದ.
ಅವನ ಕುತೂಹಲವನ್ನು ಕಂಡು ಡಾಕ್ಟರಿಗೆ ಸಂತೋಷವಾಯಿತು.
ದಿಗ್ಧಮೆಯು ಅತಿಯಾಗಿಲ್ಲ, ಹೇಳಿದ್ದನ್ನು ತಿಳಿದುಕೊಳ್ಳುವ ಸ್ಥಿತಿಯಲ್ಲಿದ್ದಾನೆ ಎಂದು
ದೃಢವಾಗಿತ್ತು. ಆದಕಾರಣ ಮನಸ್ಸಿನಲ್ಲಿರುವ ಆತಂಕವು ಸ್ಪರ್ಧಾ ಸನ್ನಿವೇಶಗಳಲ್ಲಿ,
ಹೇಗೆ ದಿಗ್ಧಮೆಯಾಗುತ್ತದೆ ? ಆಗ ಹೆದರಿದರೆ, ಹಿಂದೆಗೆದರೆ, ಮುಂದೆಂದೂ
ಧೈರ್ಯವು ಹೇಗೆ ಮೂಡುವುದಿಲ್ಲ. ಈಗ ಧೈರ್ಯವಾಗಿ ಎದುರಿಸಿದರೆ, ಆತಂಕದ
ದುಷ್ಪರಿಣಾಮವು ಶಾಶ್ವತವಾಗುವುದಿಲ್ಲ. Abreaction ಎಂದಿದನ್ನು ಕರೆಯುತ್ತಾರೆ
ಎಂದೆಲ್ಲವನ್ನೂ ವಿವರಿಸಿದರು
{{gap}}ಪ್ರಾಣಿ ಶಾಸ್ತ್ರದ ಪ್ರೌಢ ವಿದ್ಯಾರ್ಥಿ, ಭೈರಪ್ಪ. ಹವ್ಯಾಸಕ್ಕಾಗಿ ಮನಃಶಾಸ್ತ್ರವನ್ನೂ ಅಷ್ಟು ಇಷ್ಟು ಓದಿಕೊಂಡಿದ್ದ. ಡಾಕ್ಟರು ವಿವರಿಸಿದುದನ್ನು ಅರ್ಥ ಮಾಡಿಕೊಂಡ 'ಈ ಸರ್ತಿ ಪರೀಕ್ಷೆಗೆ ಕೂರುತ್ತೇನೆ, ಡಾಕ್ಟರೇ, ಸೊನ್ನೆ ನಂಬರು ಬಂದರೂ ಪರವಾಗಿಲ್ಲ. ಮಾಡಬೇಕದ ಚಿಕಿತ್ಸೆಯನ್ನು ನೀವು ಮಾಡಿ, ಇಷ್ಟರ ಮೇಲೆ
ದೇವರಿದ್ದಾನೆ. ಅಪ್ಪನ ಆಶೀರ್ವಾದ ಇದೆ' ಎಂದ ಭೈರಪ್ಪ, ದಿಗ್ಧಮೆಯು ಬಹಳಷ್ಟು
ಕರಗುತ್ತಿದ್ದುದು ಸ್ಪಷ್ಟವಾಗಿತ್ತು
{{gap}}ಭೈರಪ್ಪನಿಗೆ ಐವತ್ತೆರಡನೇ ಬ್ಯಾಂಕ್ ಬಂತು. ಆದರೆ ಆ ವರ್ಷ ಎಪ್ಪತ್ತೆಂಟು
ಮಂದಿಯನ್ನು ಚಾಕರಿಗೆ ಸೇರಿಸಿಕೊಂಡರು. ಶ್ರೀ ಭೈರಪ್ಪ ಎಂ.ಎಸ್ಸಿ., ಐ.ಎ.ಎಸ್.
ಎಂದು ಕಾಗದಗಳ ಮೇಲೆ ಅಷ್ಟೊತ್ತಿಸಿಕೊಂಡ.
{{gap}}ಪರೀಕ್ಷೆಗೆ ಕೂರುವ ಜಾಣ ಹುಡುಗರಲ್ಲಿ, ಕೆಲವರು ಆತಂಕದಿಂದಾಗಿ,
ದೇಹದ ಕಾಯಿಲೆಗಳಿಂದಲೂ ನರಳಬಹುದು. ಆತಂಕವು ಅತಿಯಾದಾಗ<noinclude></noinclude>
osfergsseupfpfr7skk0fctti12drf2
316570
316569
2026-05-03T16:21:58Z
Pragathi. BH
7585
316570
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|ಆತಂಕ}}{{Right|೯೧}}
ಹುಲ್ಲು ಹಾಕ್ತಿದ್ದಾನೆ. ಅದರಿಂದಲೇ Panic ದಿಗ್ಭ್ರಮೆ ಹಿಡಿದಂತಾಗಿದೆ.
ಐ.ಎ.ಎಸ್.ಗೆ ಕೂರಲೇಬೇಕು ಅಂತ ನಿನ್ನ ಹಟ ಇದ್ದರೆ, ಈ ಸರ್ತಿನೇ
ಕೂರಬೇಕು. ನಾ ಚಿಕಿತ್ಸೆ ಮಾಡಿಸ್ತೀನಿ. ಪರೀಕ್ಷೆಗೆ ಕೂರು. ನಿನ್ನ ಕೈಲಾದ್ದು
ಮಾಡು. ಮಸಲಾ ಜಯಬರಲಿಲ್ಲ ಅನ್ನು, ಮುಂದಿನ ಸಲ ಕೂತರಾಯಿತು.
ಆದರೆ ಈ ವರ್ಷ ನೀ ಕೂರದಿದ್ದರೆ ಮುಂದಿನ ಸರ್ತಿ ಕೂರಲು ಆಗುವುದೇ
ಇಲ್ಲ. ಈ ದಿಗ್ಭ್ರಮೆಯೂ ಹೊರವಾಗಿಬಿಡುತ್ತದೆ. ಭೂತವಾಗಿಬಿಡುತ್ತದೆ. ಈ
ಪರೀಕ್ಷೆಯ ಆಸೆಯನ್ನು ಬಿಟ್ಟುಬಿಡುತ್ತೇನೆ ಎಂದರೆ, ಅದೂ ಸಮ. ಚಿಕಿತ್ಸೆ
ಹೇಗಾಗಬೇಕು ಎನ್ನುವುದನ್ನು ಬರಸಿಕೊಡುತ್ತೇನೆ. ಊರಿಗೆ ಹೋಗಿ ಔಷಧಿ
ತಕ್ಕೋ, ಮುಂದೇನ್ಮಾಡಬೇಕು ಎನ್ನುವುದನ್ನು ಆಮೇಲೆ ಯೋಚಿಸಿದರಾಯಿತು'
ಎಂದು ಹೇಳಿದರು
{{gap}}'ಯಾಕೆ ಹಾಗಂತೀರಿ' ಎಂದು ಭೈರಪ್ಪ ಕುತೂಹಲದಿಂದ ಕೇಳಿದ.
ಅವನ ಕುತೂಹಲವನ್ನು ಕಂಡು ಡಾಕ್ಟರಿಗೆ ಸಂತೋಷವಾಯಿತು.
ದಿಗ್ಭ್ರಮೆಯು ಅತಿಯಾಗಿಲ್ಲ, ಹೇಳಿದ್ದನ್ನು ತಿಳಿದುಕೊಳ್ಳುವ ಸ್ಥಿತಿಯಲ್ಲಿದ್ದಾನೆ ಎಂದು
ದೃಢವಾಗಿತ್ತು. ಆದಕಾರಣ ಮನಸ್ಸಿನಲ್ಲಿರುವ ಆತಂಕವು ಸ್ಪರ್ಧಾ ಸನ್ನಿವೇಶಗಳಲ್ಲಿ,
ಹೇಗೆ ದಿಗ್ಧಮೆಯಾಗುತ್ತದೆ ? ಆಗ ಹೆದರಿದರೆ, ಹಿಂದೆಗೆದರೆ, ಮುಂದೆಂದೂ
ಧೈರ್ಯವು ಹೇಗೆ ಮೂಡುವುದಿಲ್ಲ. ಈಗ ಧೈರ್ಯವಾಗಿ ಎದುರಿಸಿದರೆ, ಆತಂಕದ
ದುಷ್ಪರಿಣಾಮವು ಶಾಶ್ವತವಾಗುವುದಿಲ್ಲ. Abreaction ಎಂದಿದನ್ನು ಕರೆಯುತ್ತಾರೆ
ಎಂದೆಲ್ಲವನ್ನೂ ವಿವರಿಸಿದರು
{{gap}}ಪ್ರಾಣಿ ಶಾಸ್ತ್ರದ ಪ್ರೌಢ ವಿದ್ಯಾರ್ಥಿ, ಭೈರಪ್ಪ. ಹವ್ಯಾಸಕ್ಕಾಗಿ ಮನಃಶಾಸ್ತ್ರವನ್ನೂ ಅಷ್ಟು ಇಷ್ಟು ಓದಿಕೊಂಡಿದ್ದ. ಡಾಕ್ಟರು ವಿವರಿಸಿದುದನ್ನು ಅರ್ಥ ಮಾಡಿಕೊಂಡ 'ಈ ಸರ್ತಿ ಪರೀಕ್ಷೆಗೆ ಕೂರುತ್ತೇನೆ, ಡಾಕ್ಟರೇ, ಸೊನ್ನೆ ನಂಬರು ಬಂದರೂ ಪರವಾಗಿಲ್ಲ. ಮಾಡಬೇಕದ ಚಿಕಿತ್ಸೆಯನ್ನು ನೀವು ಮಾಡಿ, ಇಷ್ಟರ ಮೇಲೆ
ದೇವರಿದ್ದಾನೆ. ಅಪ್ಪನ ಆಶೀರ್ವಾದ ಇದೆ' ಎಂದ ಭೈರಪ್ಪ, ದಿಗ್ಭ್ರಮೆಯು ಬಹಳಷ್ಟು
ಕರಗುತ್ತಿದ್ದುದು ಸ್ಪಷ್ಟವಾಗಿತ್ತು
{{gap}}ಭೈರಪ್ಪನಿಗೆ ಐವತ್ತೆರಡನೇ ರ್ಯಾಂಕ್ ಬಂತು. ಆದರೆ ಆ ವರ್ಷ ಎಪ್ಪತ್ತೆಂಟು
ಮಂದಿಯನ್ನು ಚಾಕರಿಗೆ ಸೇರಿಸಿಕೊಂಡರು. ಶ್ರೀ ಭೈರಪ್ಪ ಎಂ.ಎಸ್ಸಿ., ಐ.ಎ.ಎಸ್.
ಎಂದು ಕಾಗದಗಳ ಮೇಲೆ ಅಚ್ಚೊತ್ತಿಸಿಕೊಂಡ.
{{gap}}ಪರೀಕ್ಷೆಗೆ ಕೂರುವ ಜಾಣ ಹುಡುಗರಲ್ಲಿ, ಕೆಲವರು ಆತಂಕದಿಂದಾಗಿ,
ದೇಹದ ಕಾಯಿಲೆಗಳಿಂದಲೂ ನರಳಬಹುದು. ಆತಂಕವು ಅತಿಯಾದಾಗ<noinclude></noinclude>
izl8inxqz041uvstxcr99c56qhdle7p
ಪುಟ:ಮನಮಂಥನ.pdf/೧೧೧
104
62558
316542
315653
2026-05-03T14:22:40Z
Shreesha Sharma
7840
316542
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೯೨}}{{Right|ಮನಮಂಥನ}}
ದಿಗ್ಧಮೆಯೂ (Panic & Phobia) ಆಗಬಹುದು. ಸೂಕ್ಷ್ಮವಾಗಿ ದೇಹದ
ಚಿಹ್ನೆಗಳನ್ನು ಗಮನಿಸಿ, ಅವು ದೇಹದಿಂದ ಉಂಟಾದುವೇ, ಅಥವಾ ಆತಂಕದಿಂದ
ಉತ್ಪತ್ತಿಯಾಗಿದೆಯೇ ಎಂಬುದನ್ನು ಕಂಡುಹಿಡಿಯಬೇಕು. ಹಾಗಲ್ಲದೆ ಇದು
ಕೇವಲ ದೇಹದ ಬೇನೆ ಎಂದು ಚಿಕಿತ್ಸೆ ಮಾಡಿದರೆ, ಮನಸ್ಸಿನಲ್ಲಿರುವ ಪರೀಕ್ಷಾ
ಆತಂಕವು ಬೇರೂರುತ್ತದೆ. ಪರೀಕ್ಷೆಯನ್ನು ಮುಂದೆ ಯಾವಾಗ
ಎದುರಿಸಬೇಕಾದರೂ ಬೇರೂರಿದ ಆತಂಕದ ಭೂತವು ತಲೆಯೆತ್ತಿ ಕಾಡುತ್ತದೆ.
ದಿಗ್ಧಮೆಯ ಹಂತಕ್ಕೆ ಏರಿದ ಆತಂಕವಾದರೆ, ಅತ್ಯಗತ್ಯವಾಗಿ ಅದನ್ನು ಆ ಕೂಡಲೇ
ನಿವಾರಿಸಬೇಕು- Abreaction ಇಂದ, ಇಲ್ಲದಿದ್ದರೆ, ಅಲೆಯ ಮನೆಯ ದೆವ್ವದಂತೆ,
ಆತಂಕದ ಪಿಶಾಚಿಯು, ಪ್ರತಿ ಪರೀಕ್ಷಾ ಸಮಯದಲ್ಲೂ ಇಣಿಕುತ್ತದೆ. ಇಣಿಕಿ
ಕಾಡುತ್ತದೆ. ಬಾಳನ್ನು ಕೆಡಿಸುತ್ತದೆ.
{{gap}}ಆತಂಕದ ವಿರಾದ್ರೂಪಗಳಲ್ಲಿ ಪರೀಕ್ಷೆಯ ರಾಕ್ಷಸ ಮುಖವಾಡವು
ಭೀಕರವಾದುದು ದಿಗ್ಧಮೆಯಾಗುವಂತೆ ಭಯಾನಕವೂ ಆಗಬಹುದು.
{{gap}}ವಿದ್ಯಾರ್ಥಿಯರು, ಅವರ ತಾಯ್ತಂದೆಯರು, ಅಥವಾ ಪಾಲಿಸುವ ರಕ್ಷಕರು;
ಇವರೆಲ್ಲರೂ ಈ ವಿಷಯವನ್ನು ತಿಳಿದುಕೊಂಡಿರಬೇಕು.
{{gap}}ನುರಿತ ವೈದ್ಯರನಕ ಇದನ್ನು ದಿನದಿನವೂ ಮನಗಾಣುತ್ತಾರೆ. ತಿಳಿದುಕೊಳ್ಳದೇ
ಇರುವುದಕ್ಕಾಗಲೀ, ಒಮ್ಮೆ ತಿಳಿದ ಮೇಲೆ ಮರೆಯುವುದಕ್ಕಾಗಲೀ, ಸಾಧ್ಯವೇ
ಇಲ್ಲ.
'''ಮುಪ್ಪು – ಆತಂಕ'''
{{gap}}"ಅರವತ್ತಕ್ಕೆ ಅರುಳು ಮರುಳು' ಎಂಬ ಅನುಭಾವೀ ಗಾದೆಯಿದೆ.
ಉಷ್ಣವಲಯದ ನಮ್ಮ ದೇಶದಲ್ಲಿ, ಅರವತ್ತರ ಸುಮಾರಿಗೆ ಮೆದುಳಿನ ಚುರುಕು
ಸ್ವಲ್ಪ ಮಂದವಾಗುತ್ತದೆ. ಜ್ಞಾಪಕಕ್ಕೆ ಬೇಗ ಬರದೇ ಇರುವುದೂ, ಮಾಡಬೇಕಾದ
ಕೆಲಸದಲ್ಲಿ ಉತ್ಸಾಹವು ಕಡಿಮೆಯಾಗುವುದೂ, ಆ ವಯಸ್ಸಿನಲ್ಲಿ ಕಾಣಬರುತ್ತದೆ.
ಅಭ್ಯಾಸವಿರುವ ಕೆಲಸವನ್ನು ಮಾಡುವಾಗ ಕೂಡ ಮೊದಲಿದ್ದ ಚೂಟಿಯು
ಇರುವುದಿಲ್ಲ. 'ಅಯ್ಯಾ ! ನಿನ್ನ ಕಾಲ ಮುಗಿಯುತ್ತ ಬಂದಿದೆ' ಎಂದು ಪ್ರಕೃತಿಯು
ಕೊಡುವ ಎಚ್ಚರಿಕೆಗಳಿವು. ಎಚ್ಚರಿಕೆಯನ್ನು ಗಮನಿಸುವವರು ಮಾತ್ರ ವಿರಳ.
{{gap}}ನ್ಯಾಯಾಧೀಶ ಎ.ಬಿ.ಸಿ. ಭಟ್ಟರು ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದರು.
ವಾದಿಸಲು ತಮ್ಮೆದುರು ಬಂದ ಹೆಸರಾಂತ ಚೂಟಿ ಲಾಯರುಗಳಿಗೆ ಕೂಡ
ಉಪಾಯವಾಗಿ ಚಳ್ಳೇ ಹಣ್ಣು ತಿನ್ನಿಸುತ್ತಿದ್ದರು. ಭಟ್ಟರನ್ನು ಕಂಡರೆ ಲಾಯರುಗಳಿಗೆ<noinclude></noinclude>
54k8g06rf9f6vd5hs652bigp1w6slly
316571
316542
2026-05-03T16:22:12Z
Pragathi. BH
7585
/* Validated */
316571
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|೯೨}}{{Right|ಮನಮಂಥನ}}
ದಿಗ್ಧಮೆಯೂ (Panic & Phobia) ಆಗಬಹುದು. ಸೂಕ್ಷ್ಮವಾಗಿ ದೇಹದ
ಚಿಹ್ನೆಗಳನ್ನು ಗಮನಿಸಿ, ಅವು ದೇಹದಿಂದ ಉಂಟಾದುವೇ, ಅಥವಾ ಆತಂಕದಿಂದ
ಉತ್ಪತ್ತಿಯಾಗಿದೆಯೇ ಎಂಬುದನ್ನು ಕಂಡುಹಿಡಿಯಬೇಕು. ಹಾಗಲ್ಲದೆ ಇದು
ಕೇವಲ ದೇಹದ ಬೇನೆ ಎಂದು ಚಿಕಿತ್ಸೆ ಮಾಡಿದರೆ, ಮನಸ್ಸಿನಲ್ಲಿರುವ ಪರೀಕ್ಷಾ
ಆತಂಕವು ಬೇರೂರುತ್ತದೆ. ಪರೀಕ್ಷೆಯನ್ನು ಮುಂದೆ ಯಾವಾಗ
ಎದುರಿಸಬೇಕಾದರೂ ಬೇರೂರಿದ ಆತಂಕದ ಭೂತವು ತಲೆಯೆತ್ತಿ ಕಾಡುತ್ತದೆ.
ದಿಗ್ಧಮೆಯ ಹಂತಕ್ಕೆ ಏರಿದ ಆತಂಕವಾದರೆ, ಅತ್ಯಗತ್ಯವಾಗಿ ಅದನ್ನು ಆ ಕೂಡಲೇ
ನಿವಾರಿಸಬೇಕು- Abreaction ಇಂದ, ಇಲ್ಲದಿದ್ದರೆ, ಅಲೆಯ ಮನೆಯ ದೆವ್ವದಂತೆ,
ಆತಂಕದ ಪಿಶಾಚಿಯು, ಪ್ರತಿ ಪರೀಕ್ಷಾ ಸಮಯದಲ್ಲೂ ಇಣಿಕುತ್ತದೆ. ಇಣಿಕಿ
ಕಾಡುತ್ತದೆ. ಬಾಳನ್ನು ಕೆಡಿಸುತ್ತದೆ.
{{gap}}ಆತಂಕದ ವಿರಾದ್ರೂಪಗಳಲ್ಲಿ ಪರೀಕ್ಷೆಯ ರಾಕ್ಷಸ ಮುಖವಾಡವು
ಭೀಕರವಾದುದು ದಿಗ್ಧಮೆಯಾಗುವಂತೆ ಭಯಾನಕವೂ ಆಗಬಹುದು.
{{gap}}ವಿದ್ಯಾರ್ಥಿಯರು, ಅವರ ತಾಯ್ತಂದೆಯರು, ಅಥವಾ ಪಾಲಿಸುವ ರಕ್ಷಕರು;
ಇವರೆಲ್ಲರೂ ಈ ವಿಷಯವನ್ನು ತಿಳಿದುಕೊಂಡಿರಬೇಕು.
{{gap}}ನುರಿತ ವೈದ್ಯರನಕ ಇದನ್ನು ದಿನದಿನವೂ ಮನಗಾಣುತ್ತಾರೆ. ತಿಳಿದುಕೊಳ್ಳದೇ
ಇರುವುದಕ್ಕಾಗಲೀ, ಒಮ್ಮೆ ತಿಳಿದ ಮೇಲೆ ಮರೆಯುವುದಕ್ಕಾಗಲೀ, ಸಾಧ್ಯವೇ
ಇಲ್ಲ.
'''ಮುಪ್ಪು – ಆತಂಕ'''
{{gap}}"ಅರವತ್ತಕ್ಕೆ ಅರುಳು ಮರುಳು' ಎಂಬ ಅನುಭಾವೀ ಗಾದೆಯಿದೆ.
ಉಷ್ಣವಲಯದ ನಮ್ಮ ದೇಶದಲ್ಲಿ, ಅರವತ್ತರ ಸುಮಾರಿಗೆ ಮೆದುಳಿನ ಚುರುಕು
ಸ್ವಲ್ಪ ಮಂದವಾಗುತ್ತದೆ. ಜ್ಞಾಪಕಕ್ಕೆ ಬೇಗ ಬರದೇ ಇರುವುದೂ, ಮಾಡಬೇಕಾದ
ಕೆಲಸದಲ್ಲಿ ಉತ್ಸಾಹವು ಕಡಿಮೆಯಾಗುವುದೂ, ಆ ವಯಸ್ಸಿನಲ್ಲಿ ಕಾಣಬರುತ್ತದೆ.
ಅಭ್ಯಾಸವಿರುವ ಕೆಲಸವನ್ನು ಮಾಡುವಾಗ ಕೂಡ ಮೊದಲಿದ್ದ ಚೂಟಿಯು
ಇರುವುದಿಲ್ಲ. 'ಅಯ್ಯಾ ! ನಿನ್ನ ಕಾಲ ಮುಗಿಯುತ್ತ ಬಂದಿದೆ' ಎಂದು ಪ್ರಕೃತಿಯು
ಕೊಡುವ ಎಚ್ಚರಿಕೆಗಳಿವು. ಎಚ್ಚರಿಕೆಯನ್ನು ಗಮನಿಸುವವರು ಮಾತ್ರ ವಿರಳ.
{{gap}}ನ್ಯಾಯಾಧೀಶ ಎ.ಬಿ.ಸಿ. ಭಟ್ಟರು ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದರು.
ವಾದಿಸಲು ತಮ್ಮೆದುರು ಬಂದ ಹೆಸರಾಂತ ಚೂಟಿ ಲಾಯರುಗಳಿಗೆ ಕೂಡ
ಉಪಾಯವಾಗಿ ಚಳ್ಳೇ ಹಣ್ಣು ತಿನ್ನಿಸುತ್ತಿದ್ದರು. ಭಟ್ಟರನ್ನು ಕಂಡರೆ ಲಾಯರುಗಳಿಗೆ<noinclude></noinclude>
0f55t3g7ibsirqtr4bg74bkteogjnmf
316576
316571
2026-05-03T16:33:00Z
Pragathi. BH
7585
316576
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೯೨|right=ಮನಮಂಥನ}}
ದಿಗ್ಬ್ರಮೆಯೂ (Panic & Phobia) ಆಗಬಹುದು. ಸೂಕ್ಷ್ಮವಾಗಿ ದೇಹದ
ಚಿಹ್ನೆಗಳನ್ನು ಗಮನಿಸಿ, ಅವು ದೇಹದಿಂದ ಉಂಟಾದುವೇ, ಅಥವಾ ಆತಂಕದಿಂದ
ಉತ್ಪತ್ತಿಯಾಗಿದೆಯೇ ಎಂಬುದನ್ನು ಕಂಡುಹಿಡಿಯಬೇಕು. ಹಾಗಲ್ಲದೆ ಇದು
ಕೇವಲ ದೇಹದ ಬೇನೆ ಎಂದು ಚಿಕಿತ್ಸೆ ಮಾಡಿದರೆ, ಮನಸ್ಸಿನಲ್ಲಿರುವ ಪರೀಕ್ಷಾ
ಆತಂಕವು ಬೇರೂರುತ್ತದೆ. ಪರೀಕ್ಷೆಯನ್ನು ಮುಂದೆ ಯಾವಾಗ
ಎದುರಿಸಬೇಕಾದರೂ ಬೇರೂರಿದ ಆತಂಕದ ಭೂತವು ತಲೆಯೆತ್ತಿ ಕಾಡುತ್ತದೆ.
ದಿಗ್ಭ್ರಮೆಯು ಹಂತಕ್ಕೆ ಏರಿದ ಆತಂಕವಾದರೆ, ಅತ್ಯಗತ್ಯವಾಗಿ ಅದನ್ನು ಆ ಕೂಡಲೇ
ನಿವಾರಿಸಬೇಕು- Abreaction ಇಂದ, ಇಲ್ಲದಿದ್ದರೆ, ಅಲೆಯ ಮನೆಯ ದೆವ್ವದಂತೆ,
ಆತಂಕದ ಪಿಶಾಚಿಯು, ಪ್ರತಿ ಪರೀಕ್ಷಾ ಸಮಯದಲ್ಲೂ ಇಣಿಕುತ್ತದೆ. ಇಣಿಕಿ
ಕಾಡುತ್ತದೆ. ಬಾಳನ್ನು ಕೆಡಿಸುತ್ತದೆ.
{{gap}}ಆತಂಕದ ವಿರಾಡ್ರೂಪಗಳಲ್ಲಿ ಪರೀಕ್ಷೆಯ ರಾಕ್ಷಸ ಮುಖವಾಡವು
ಭೀಕರವಾದುದು ದಿಗ್ಭ್ರಮೆಯಾಗುವಂತೆ ಭಯಾನಕವೂ ಆಗಬಹುದು.
{{gap}}ವಿದ್ಯಾರ್ಥಿಯರು, ಅವರ ತಾಯ್ತಂದೆಯರು, ಅಥವಾ ಪಾಲಿಸುವ ರಕ್ಷಕರು;
ಇವರೆಲ್ಲರೂ ಈ ವಿಷಯವನ್ನು ತಿಳಿದುಕೊಂಡಿರಬೇಕು.
{{gap}}ನುರಿತ ವೈದ್ಯರನಕ ಇದನ್ನು ದಿನದಿನವೂ ಮನಗಾಣುತ್ತಾರೆ. ತಿಳಿದುಕೊಳ್ಳದೇ
ಇರುವುದಕ್ಕಾಗಲೀ, ಒಮ್ಮೆ ತಿಳಿದ ಮೇಲೆ ಮರೆಯುವುದಕ್ಕಾಗಲೀ, ಸಾಧ್ಯವೇ
ಇಲ್ಲ.
'''ಮುಪ್ಪು – ಆತಂಕ'''
{{gap}}"ಅರವತ್ತಕ್ಕೆ ಅರುಳು ಮರುಳು' ಎಂಬ ಅನುಭಾವೀ ಗಾದೆಯಿದೆ.
ಉಷ್ಣವಲಯದ ನಮ್ಮ ದೇಶದಲ್ಲಿ, ಅರವತ್ತರ ಸುಮಾರಿಗೆ ಮೆದುಳಿನ ಚುರುಕು
ಸ್ವಲ್ಪ ಮಂದವಾಗುತ್ತದೆ. ಜ್ಞಾಪಕಕ್ಕೆ ಬೇಗ ಬರದೇ ಇರುವುದೂ, ಮಾಡಬೇಕಾದ
ಕೆಲಸದಲ್ಲಿ ಉತ್ಸಾಹವು ಕಡಿಮೆಯಾಗುವುದೂ, ಆ ವಯಸ್ಸಿನಲ್ಲಿ ಕಾಣಬರುತ್ತದೆ.
ಅಭ್ಯಾಸವಿರುವ ಕೆಲಸವನ್ನು ಮಾಡುವಾಗ ಕೂಡ ಮೊದಲಿದ್ದ ಚೂಟಿಯು
ಇರುವುದಿಲ್ಲ. 'ಅಯ್ಯಾ ! ನಿನ್ನ ಕಾಲ ಮುಗಿಯುತ್ತ ಬಂದಿದೆ' ಎಂದು ಪ್ರಕೃತಿಯು
ಕೊಡುವ ಎಚ್ಚರಿಕೆಗಳಿವು. ಎಚ್ಚರಿಕೆಯನ್ನು ಗಮನಿಸುವವರು ಮಾತ್ರ ವಿರಳ.
{{gap}}ನ್ಯಾಯಾಧೀಶ ಎ.ಬಿ.ಸಿ. ಭಟ್ಟರು ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದರು.
ವಾದಿಸಲು ತಮ್ಮೆದುರು ಬಂದ ಹೆಸರಾಂತ ಚೂಟಿ ಲಾಯರುಗಳಿಗೆ ಕೂಡ
ಉಪಾಯವಾಗಿ ಚಳ್ಳೇ ಹಣ್ಣು ತಿನ್ನಿಸುತ್ತಿದ್ದರು. ಭಟ್ಟರನ್ನು ಕಂಡರೆ ಲಾಯರುಗಳಿಗೆ<noinclude></noinclude>
8hhwj1uuuf5mko9p9taerkshrefik6t
ಪುಟ:ಮನಮಂಥನ.pdf/೧೧೨
104
62559
316543
315654
2026-05-03T14:23:30Z
Shreesha Sharma
7840
316543
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಆತಂಕ}}{{Right|೯೩}}
ಬಲು ಗೌರವ ಮತ್ತು ಆದರ ಕೂಡ. ಕೆಲಸದಿಂದ ಒಂದು ದಿವಸ ನಿವೃತ್ತಿ
ಆಯಿತು. ಇಪ್ಪತ್ತಾರಕ್ಕೆ ಕೆಲಸಕ್ಕೆ ಸೇರಿದಾಗ, ದ್ವಿಜ ಎನ್ನುವುದು ಸಾರ್ಥಕವಾಗಲಿ
ಎಂದು ಇಪ್ಪತ್ತೊಂದು ನನ್ನ ವಯಸ್ಸು ಅಂತ ದಾಖಲೆ ಹಾಕಿಸಿದ್ದರು. ಆದರೂ
ವಿಶ್ರಾಂತಿ ವೇತನವನ್ನು ಎಂದಾದರೂ ಪಡೆಯಲೇ ಬೇಕಲ್ಲ ! ನಿವೃತ್ತರಾಗುವ
ವಯಸ್ಸಿನಲ್ಲಿ ದೇಹಶಕ್ತಿಯು ಇಳಿಮುಖವಾಗಿದ್ದರೂ ಆಳಿದಿರಲಿಲ್ಲ. ದೀರ್ಘ
ಕಾಲದ ಅನುಭವದಿಂದಾಗಿ ನ್ಯಾಯಶಾಸ್ತ್ರದ ತಿರುಳು ಕರಗತವಾಗಿತ್ತು. ಸಮಾಜದಲ್ಲಿ
ಪ್ರಸಿದ್ಧಿಯೂ ಇತ್ತು. ಚಿಕ್ಕ ಪುಟ್ಟ ಲಾಯರುಗಳು ನನ್ನನ್ನು ಬಳಸಿಕೊಳ್ಳಲೇಬೇಕು,
ಜಟಿಲ ಮೊಕದ್ದಮೆಗಳು ದೊರೆತಾಗ ; ಎಂದವರು ನಂಬಿದ್ದರು. ಆದಕಾರಣ
ನಿವೃತ್ತರಾದಮೇಲೆ ಖಾಸಗಿ ಪ್ರಾಕ್ಟಿಸಿಗೆಂದು ಲಕ್ಷಣವಾದ ಸುಸಜ್ಜಿತವಾದ
'ಚೇಂಬರ್' ಅನ್ನು ಗೊತ್ತು ಮಾಡಿಕೊಂಡರು. ಬಾರ್ ಅಸೋಸಿಯೇಷನ್ನಿಗೆ
ತಪ್ಪದೆ ಹೋಗಿ ಇತರ ಲಾಯರುಗಳ ಪರಿಚಯವನ್ನು ಮಾಡಿಕೊಳ್ಳಲಾರಂಭಿಸಿದರು.
{{gap}}'ಪ್ರಾಕ್ಟಿಸ್ ಶುರು ಮಾಡಿದರೆ ಸಾಕು, ಕಕ್ಷಿಗಾರರು ಬೊಂತೆ ಬೊಂತೆಯಾಗಿ
ಬಂದುಬಿಡುತ್ತಾರೆ; ಎಂದು ನಿರೀಕ್ಷಿಸಿದ್ದ ಭಟ್ಟರಿಗೆ ಕೆಲವು ತಿಂಗಳುಗಳಲ್ಲಿಯೇ
ಭ್ರಮನಿರಸನವಾಯಿತು. ಮೊದಲ ಎರಡು ಮೂರು ತಿಂಗಳು ಚೆಂಬರ್ಸಿನ
ತುಂಬಾ ಜನರಿರುತ್ತಿದ್ದರು. ಆದರೆ ಅವರಲ್ಲಿ ಸ್ನೇಹಿತರೇ ಹೆಚ್ಚು, ಕಕ್ಷಿಗಾರರು
ಕಡಿಮೆ. ಒಂದು ವರ್ಷ ಮುಗಿಯುವುದರೊಳಗೆ ಪುಟ್ಟ ಎರಡು ಮೊಕದ್ದಮೆಗಳು
ಮಾತ್ರ ಇದ್ದುವು. ಅವುಗಳ ಸಲುವಾಗಿ ಕೋರ್ಟಿಗೆ ಹೋಗಿ, ಒಮ್ಮೆ ತನಗೆ
ಕಿರಿಯರಾಗಿದ್ದವರೆದುರು ನಿಂತು ವಕಾಲತ್ತು ನಡೆಸುವುದು ಭಟ್ಟರಿಗೆ ಪ್ರಿಯವೇನೂ
ಆಗಿರಲಿಲ್ಲ. ದೊಡ್ಡ ದೊಡ್ಡ ಮೊಕದ್ದಮೆಯವರು ಇವರ ಬಳಿಗೆ ಬರಲೇ ಇಲ್ಲ.
ಕೈತೋರಿಸಿ ಅವಲಕ್ಷಣ ಎನಿಸಿಕೊಂಡೆನಲ್ಲಾ ! ತೆಪ್ಪಗೆ ಮನೆಯಲ್ಲೇ ಕೂತಿದ್ದಿದ್ದರೆ
ಮರ್ಯಾದೆಯಾದರೂ ಉಳಿಯುತ್ತಿತ್ತು ಎಂದವರಿಗೆ ಅನಿಸತೊಡಗಿತ್ತು. ಬೇಸರ
ಮೂಡಿತ್ತು. ಪ್ರಾಕ್ಟಿಸ್ ನಿಲ್ಲಿಸಿಬಿಡೋಣ, ಎಂದೊಮ್ಮೆ ಅಂದುಕೊಳ್ಳುವರು. ಇನ್ನೆರಡು
ವರ್ಷ ಹೀಗೆಯೇ ಮುಂದುವರಿದರೆ ಭವಿಷ್ಯವು ಉಜ್ವಲವಾಗಬಹುದು ಎಂದು
ಇನ್ನೊಮ್ಮೆ ಅಂದುಕೊಳ್ಳುವರು. ಈಗಾಗಲೇ ಮರವು ಜಾಸ್ತಿಯಾಗುತ್ತಾ ಇದೆ.
ಕಕ್ಷಿಗಾರರಿಗೂ ಇದರ ಸುಳಿವು ತಿಳಿದಿದೆಯೇನೋ ಎಂದು ಒಮ್ಮೆ ಬೆದರುವರು.
ಇದ್ದಕ್ಕಿದ್ದ ಹಾಗೆ ಚೇಂಬರ್ಸ್ ಮುಚ್ಚಿಬಿಟ್ಟರೆ, ಸರಿಸಾಟಿಯವರೆದುರಿಗೆ ಜಾರಿ
ಮಂಡಿ ತರಚಿ ಕೊಂಡಂತೆ ಆಗುವುದಿಲ್ಲವೇ ಎಂದು ಒಮ್ಮೆ ಜುಗುಪ್ಪೆಗೊಳ್ಳುವರು.
ಸರಿಯಾಗಿ ಯೋಚಿಸಿ ದೃಢ ತೀರ್ಮಾನವನ್ನು ನಿರ್ಧರಿಸಲು, ಮುಪ್ಪಿನ
ದೆಸೆಯಿಂದಲೇ ಸಾಧ್ಯವಿರಲಿಲ್ಲ. ಇದೇ ದೊಡ್ಡ ಆತಂಕವಾಗಿತ್ತು.<noinclude></noinclude>
5t4ckogu9tlartajdu1u5o8ysd4c2h7
316580
316543
2026-05-03T16:38:39Z
Pragathi. BH
7585
/* Validated */
316580
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಆತಂಕ|right=೯೩}}
ಬಲು ಗೌರವ ಮತ್ತು ಆದರ ಕೂಡ. ಕೆಲಸದಿಂದ ಒಂದು ದಿವಸ ನಿವೃತ್ತಿ
ಆಯಿತು. ಇಪ್ಪತ್ತಾರಕ್ಕೆ ಕೆಲಸಕ್ಕೆ ಸೇರಿದಾಗ, ದ್ವಿಜ ಎನ್ನುವುದು ಸಾರ್ಥಕವಾಗಲಿ
ಎಂದು ಇಪ್ಪತ್ತೊಂದು ನನ್ನ ವಯಸ್ಸು ಅಂತ ದಾಖಲೆ ಹಾಕಿಸಿದ್ದರು. ಆದರೂ
ವಿಶ್ರಾಂತಿ ವೇತನವನ್ನು ಎಂದಾದರೂ ಪಡೆಯಲೇ ಬೇಕಲ್ಲ ! ನಿವೃತ್ತರಾಗುವ
ವಯಸ್ಸಿನಲ್ಲಿ ದೇಹಶಕ್ತಿಯು ಇಳಿಮುಖವಾಗಿದ್ದರೂ ಆಳಿದಿರಲಿಲ್ಲ. ದೀರ್ಘ
ಕಾಲದ ಅನುಭವದಿಂದಾಗಿ ನ್ಯಾಯಶಾಸ್ತ್ರದ ತಿರುಳು ಕರಗತವಾಗಿತ್ತು. ಸಮಾಜದಲ್ಲಿ
ಪ್ರಸಿದ್ಧಿಯೂ ಇತ್ತು. ಚಿಕ್ಕ ಪುಟ್ಟ ಲಾಯರುಗಳು ನನ್ನನ್ನು ಬಳಸಿಕೊಳ್ಳಲೇಬೇಕು,
ಜಟಿಲ ಮೊಕದ್ದಮೆಗಳು ದೊರೆತಾಗ ; ಎಂದವರು ನಂಬಿದ್ದರು. ಆದಕಾರಣ
ನಿವೃತ್ತರಾದಮೇಲೆ ಖಾಸಗಿ ಪ್ರಾಕ್ಟಿಸಿಗೆಂದು ಲಕ್ಷಣವಾದ ಸುಸಜ್ಜಿತವಾದ
'ಚೇಂಬರ್' ಅನ್ನು ಗೊತ್ತು ಮಾಡಿಕೊಂಡರು. ಬಾರ್ ಅಸೋಸಿಯೇಷನ್ನಿಗೆ
ತಪ್ಪದೆ ಹೋಗಿ ಇತರ ಲಾಯರುಗಳ ಪರಿಚಯವನ್ನು ಮಾಡಿಕೊಳ್ಳಲಾರಂಭಿಸಿದರು.
{{gap}}'ಪ್ರಾಕ್ಟಿಸ್ ಶುರು ಮಾಡಿದರೆ ಸಾಕು, ಕಕ್ಷಿಗಾರರು ಬೊಂತೆ ಬೊಂತೆಯಾಗಿ
ಬಂದುಬಿಡುತ್ತಾರೆ; ಎಂದು ನಿರೀಕ್ಷಿಸಿದ್ದ ಭಟ್ಟರಿಗೆ ಕೆಲವು ತಿಂಗಳುಗಳಲ್ಲಿಯೇ
ಭ್ರಮನಿರಸನವಾಯಿತು. ಮೊದಲ ಎರಡು ಮೂರು ತಿಂಗಳು ಚೆಂಬರ್ಸಿನ
ತುಂಬಾ ಜನರಿರುತ್ತಿದ್ದರು. ಆದರೆ ಅವರಲ್ಲಿ ಸ್ನೇಹಿತರೇ ಹೆಚ್ಚು, ಕಕ್ಷಿಗಾರರು
ಕಡಿಮೆ. ಒಂದು ವರ್ಷ ಮುಗಿಯುವುದರೊಳಗೆ ಪುಟ್ಟ ಎರಡು ಮೊಕದ್ದಮೆಗಳು
ಮಾತ್ರ ಇದ್ದುವು. ಅವುಗಳ ಸಲುವಾಗಿ ಕೋರ್ಟಿಗೆ ಹೋಗಿ, ಒಮ್ಮೆ ತನಗೆ
ಕಿರಿಯರಾಗಿದ್ದವರೆದುರು ನಿಂತು ವಕಾಲತ್ತು ನಡೆಸುವುದು ಭಟ್ಟರಿಗೆ ಪ್ರಿಯವೇನೂ
ಆಗಿರಲಿಲ್ಲ. ದೊಡ್ಡ ದೊಡ್ಡ ಮೊಕದ್ದಮೆಯವರು ಇವರ ಬಳಿಗೆ ಬರಲೇ ಇಲ್ಲ.
ಕೈತೋರಿಸಿ ಅವಲಕ್ಷಣ ಎನಿಸಿಕೊಂಡೆನಲ್ಲಾ ! ತೆಪ್ಪಗೆ ಮನೆಯಲ್ಲೇ ಕೂತಿದ್ದಿದ್ದರೆ
ಮರ್ಯಾದೆಯಾದರೂ ಉಳಿಯುತ್ತಿತ್ತು ಎಂದವರಿಗೆ ಅನಿಸತೊಡಗಿತ್ತು. ಬೇಸರ
ಮೂಡಿತ್ತು. ಪ್ರಾಕ್ಟಿಸ್ ನಿಲ್ಲಿಸಿಬಿಡೋಣ, ಎಂದೊಮ್ಮೆ ಅಂದುಕೊಳ್ಳುವರು. ಇನ್ನೆರಡು
ವರ್ಷ ಹೀಗೆಯೇ ಮುಂದುವರಿದರೆ ಭವಿಷ್ಯವು ಉಜ್ವಲವಾಗಬಹುದು ಎಂದು
ಇನ್ನೊಮ್ಮೆ ಅಂದುಕೊಳ್ಳುವರು. ಈಗಾಗಲೇ ಮರವು ಜಾಸ್ತಿಯಾಗುತ್ತಾ ಇದೆ.
ಕಕ್ಷಿಗಾರರಿಗೂ ಇದರ ಸುಳಿವು ತಿಳಿದಿದೆಯೇನೋ ಎಂದು ಒಮ್ಮೆ ಬೆದರುವರು.
ಇದ್ದಕ್ಕಿದ್ದ ಹಾಗೆ ಚೇಂಬರ್ಸ್ ಮುಚ್ಚಿಬಿಟ್ಟರೆ, ಸರಿಸಾಟಿಯವರೆದುರಿಗೆ ಜಾರಿ
ಮಂಡಿ ತರಚಿ ಕೊಂಡಂತೆ ಆಗುವುದಿಲ್ಲವೇ ಎಂದು ಒಮ್ಮೆ ಜುಗುಪ್ಪೆಗೊಳ್ಳುವರು.
ಸರಿಯಾಗಿ ಯೋಚಿಸಿ ದೃಢ ತೀರ್ಮಾನವನ್ನು ನಿರ್ಧರಿಸಲು, ಮುಪ್ಪಿನ
ದೆಸೆಯಿಂದಲೇ ಸಾಧ್ಯವಿರಲಿಲ್ಲ. ಇದೇ ದೊಡ್ಡ ಆತಂಕವಾಗಿತ್ತು.<noinclude></noinclude>
589rno9p2l1cgtc1xkfisfx3kssf88d
316583
316580
2026-05-03T16:42:32Z
Pragathi. BH
7585
316583
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಆತಂಕ|right=೯೩}}
ಬಲು ಗೌರವ ಮತ್ತು ಆದರ ಕೂಡ. ಕೆಲಸದಿಂದ ಒಂದು ದಿವಸ ನಿವೃತ್ತಿ
ಆಯಿತು. ಇಪ್ಪತ್ತಾರಕ್ಕೆ ಕೆಲಸಕ್ಕೆ ಸೇರಿದಾಗ, ದ್ವಿಜ ಎನ್ನುವುದು ಸಾರ್ಥಕವಾಗಲಿ
ಎಂದು ಇಪ್ಪತ್ತೊಂದು ನನ್ನ ವಯಸ್ಸು ಅಂತ ದಾಖಲೆ ಹಾಕಿಸಿದ್ದರು. ಆದರೂ
ವಿಶ್ರಾಂತಿ ವೇತನವನ್ನು ಎಂದಾದರೂ ಪಡೆಯಲೇ ಬೇಕಲ್ಲ ! ನಿವೃತ್ತರಾಗುವ
ವಯಸ್ಸಿನಲ್ಲಿ ದೇಹಶಕ್ತಿಯು ಇಳಿಮುಖವಾಗಿದ್ದರೂ ಆಳಿದಿರಲಿಲ್ಲ. ದೀರ್ಘ
ಕಾಲದ ಅನುಭವದಿಂದಾಗಿ ನ್ಯಾಯಶಾಸ್ತ್ರದ ತಿರುಳು ಕರಗತವಾಗಿತ್ತು. ಸಮಾಜದಲ್ಲಿ
ಪ್ರಸಿದ್ಧಿಯೂ ಇತ್ತು. ಚಿಕ್ಕ ಪುಟ್ಟ ಲಾಯರುಗಳು ನನ್ನನ್ನು ಬಳಸಿಕೊಳ್ಳಲೇಬೇಕು,
ಜಟಿಲ ಮೊಕದ್ದಮೆಗಳು ದೊರೆತಾಗ ; ಎಂದವರು ನಂಬಿದ್ದರು. ಆದಕಾರಣ
ನಿವೃತ್ತರಾದಮೇಲೆ ಖಾಸಗಿ ಪ್ರಾಕ್ಟಿಸಿಗೆಂದು ಲಕ್ಷಣವಾದ ಸುಸಜ್ಜಿತವಾದ
'ಚೇಂಬರ್' ಅನ್ನು ಗೊತ್ತು ಮಾಡಿಕೊಂಡರು. ಬಾರ್ ಅಸೋಸಿಯೇಷನ್ನಿಗೆ
ತಪ್ಪದೆ ಹೋಗಿ ಇತರ ಲಾಯರುಗಳ ಪರಿಚಯವನ್ನು ಮಾಡಿಕೊಳ್ಳಲಾರಂಭಿಸಿದರು.
{{gap}}'ಪ್ರಾಕ್ಟಿಸ್ ಶುರು ಮಾಡಿದರೆ ಸಾಕು, ಕಕ್ಷಿಗಾರರು ಬೊಂತೆ ಬೊಂತೆಯಾಗಿ
ಬಂದುಬಿಡುತ್ತಾರೆ; ಎಂದು ನಿರೀಕ್ಷಿಸಿದ್ದ ಭಟ್ಟರಿಗೆ ಕೆಲವು ತಿಂಗಳುಗಳಲ್ಲಿಯೇ
ಭ್ರಮನಿರಸನವಾಯಿತು. ಮೊದಲ ಎರಡು ಮೂರು ತಿಂಗಳು ಚೆಂಬರ್ಸಿನ
ತುಂಬಾ ಜನರಿರುತ್ತಿದ್ದರು. ಆದರೆ ಅವರಲ್ಲಿ ಸ್ನೇಹಿತರೇ ಹೆಚ್ಚು, ಕಕ್ಷಿಗಾರರು
ಕಡಿಮೆ. ಒಂದು ವರ್ಷ ಮುಗಿಯುವುದರೊಳಗೆ ಪುಟ್ಟ ಎರಡು ಮೊಕದ್ದಮೆಗಳು
ಮಾತ್ರ ಇದ್ದುವು. ಅವುಗಳ ಸಲುವಾಗಿ ಕೋರ್ಟಿಗೆ ಹೋಗಿ, ಒಮ್ಮೆ ತನಗೆ
ಕಿರಿಯರಾಗಿದ್ದವರೆದುರು ನಿಂತು ವಕಾಲತ್ತು ನಡೆಸುವುದು ಭಟ್ಟರಿಗೆ ಪ್ರಿಯವೇನೂ
ಆಗಿರಲಿಲ್ಲ. ದೊಡ್ಡ ದೊಡ್ಡ ಮೊಕದ್ದಮೆಯವರು ಇವರ ಬಳಿಗೆ ಬರಲೇ ಇಲ್ಲ.
ಕೈತೋರಿಸಿ ಅವಲಕ್ಷಣ ಎನಿಸಿಕೊಂಡೆನಲ್ಲಾ ! ತೆಪ್ಪಗೆ ಮನೆಯಲ್ಲೇ ಕೂತಿದ್ದಿದ್ದರೆ
ಮರ್ಯಾದೆಯಾದರೂ ಉಳಿಯುತ್ತಿತ್ತು ಎಂದವರಿಗೆ ಅನಿಸತೊಡಗಿತ್ತು. ಬೇಸರ
ಮೂಡಿತ್ತು. ಪ್ರಾಕ್ಟಿಸ್ ನಿಲ್ಲಿಸಿಬಿಡೋಣ, ಎಂದೊಮ್ಮೆ ಅಂದುಕೊಳ್ಳುವರು. ಇನ್ನೆರಡು
ವರ್ಷ ಹೀಗೆಯೇ ಮುಂದುವರಿದರೆ ಭವಿಷ್ಯವು ಉಜ್ವಲವಾಗಬಹುದು ಎಂದು
ಇನ್ನೊಮ್ಮೆ ಅಂದುಕೊಳ್ಳುವರು. ಈಗಾಗಲೇ ಮರವು ಜಾಸ್ತಿಯಾಗುತ್ತಾ ಇದೆ.
ಕಕ್ಷಿಗಾರರಿಗೂ ಇದರ ಸುಳಿವು ತಿಳಿದಿದೆಯೇನೋ ಎಂದು ಒಮ್ಮೆ ಬೆದರುವರು.
ಇದ್ದಕ್ಕಿದ್ದ ಹಾಗೆ ಚೇಂಬರ್ಸ್ ಮುಚ್ಚಿಬಿಟ್ಟರೆ, ಸರಿಸಾಟಿಯವರೆದುರಿಗೆ ಜಾರಿ
ಮಂಡಿ ತರಚಿ ಕೊಂಡಂತೆ ಆಗುವುದಿಲ್ಲವೇ ಎಂದು ಒಮ್ಮೆ ಜುಗುಪ್ಸೆಗೊಳ್ಳುವರು.
ಸರಿಯಾಗಿ ಯೋಚಿಸಿ ದೃಢ ತೀರ್ಮಾನವನ್ನು ನಿರ್ಧರಿಸಲು, ಮುಪ್ಪಿನ
ದೆಸೆಯಿಂದಲೇ ಸಾಧ್ಯವಿರಲಿಲ್ಲ. ಇದೇ ದೊಡ್ಡ ಆತಂಕವಾಗಿತ್ತು.<noinclude></noinclude>
f9pm4pa37qdyvafcx5exqc6cxja7lmg
ಪುಟ:ಮನಮಂಥನ.pdf/೧೧೩
104
62560
316544
315655
2026-05-03T14:24:11Z
Shreesha Sharma
7840
316544
proofread-page
text/x-wiki
<noinclude><pagequality level="3" user="Shreesha Sharma" /></noinclude>
{{Left|೯೪}}{{Right|ಮನಮಂಥನ}}
{{gap}}ಇಂತಹ ಮನಃಸ್ಥಿತಿ ಇದ್ದಾಗ ಮನೆಯಲ್ಲೂ ಒಂದು ಆಘಾತವು ಕಾದಿತ್ತು.
ಮನೆಯಾಕೆಯು ಎಂದಿನಿಂದಲೂ ಹಟವಾಣಿ ಮತ್ತು ಕಟುವಾಣಿ. ಆದರೆ ದೊಡ್ಡ
ಅಧಿಕಾರದಲ್ಲಿ ಗಂಡ ಇದ್ದಾಗ ತಾನು ಮೆರೆಯಲು ಹಿತವಾಗಿತ್ತು ; ಅನುಕೂಲವೂ
ಆಗಿತ್ತು. ಮನೆಯ ಮೂಲೆಯಲ್ಲಿ ಗಂಡ ಕುಳಿತಾಗ, ಆಳುಕಾಳುಗಳ ಸಂಖ್ಯೆ
ಕಡಿಮೆಯಾಯಿತು. ಆಕೆಗೂ ಋಷಿಪಂಚಮಿಯ ವಯಸ್ಸು, ಮನಸ್ಸು ಎರಂಬಿರಿ
ಆಗತೊಡಗಿತ್ತು. ಸಂಸ್ಕೃತಿಯ ಯಾವ ಸೋಂಕೂ ಇಲ್ಲದ, ಕೆಟ್ಟು ಬದುಕಿದವರ
ಮನೆಯ ಹೆಣ್ಣು ಹುಟ್ಟಿದಂದಿನಿಂದಲೂ ಬುದ್ಧಿಯು ಅಸಾಧ್ಯ ಮಂದ, ಮೆರೆಯಲು
ಗಂಡನ ಮನೆಯಲ್ಲಿ ಅವಕಾಶವು ದೊರೆತಾಗ, ಅರ್ಧರಾತ್ರಿಯಲ್ಲಿ ಅಂಗಳದಲ್ಲಿ
ಕೊಡೆ ಹಿಡಿಸಲು ತೊಡಗಿದಳು. ಮನೆಗೆ ಬಂದ ಗಂಡನ ಸ್ನೇಹಿತರು, ಈಕೆಯ
ನಡೆ ನುಡಿಗಳನ್ನು ಕಂಡು ತಡೆಯಲಾರದೆ ನಕ್ಕರೆ, ನಾನು ಆಡಿದ್ದನ್ನು ಕೇಳಿ,
ಮಾಡಿದ್ದನ್ನು ನೋಡಿ, ಮೆಹನತ್ತಿನ ಮೆಚ್ಚಿಗೆಯನ್ನು ನಗೆಯ ಮೂಲಕ
ಸೂಚಿಸುತ್ತಿದ್ದಾರೆ ಎಂದಂದುಕೊಳ್ಳುವ, ಮಂಕುಬುಡ್ಡಿ ಆಕೆ. ಆದರೂ ಗಂಡನ
ಅಧಿಕಾರದ ದೆಸೆಯಿಂದ ಇದೆಲ್ಲವೂ ಮರೆಮಾಚಿತ್ತು.
{{gap}}ಗಂಡನು ರಿಟೈರ್ ಆಗುವ ವೇಳೆಗೆ ಹಿರಿಯ ಮಗನಿಗೆ ಮದುವೆಯಾಗಿತ್ತು.
ಓದಿದ ಸೊಸೆ ಮನೆಗೆ ಬಂದಳು. ಮನೆಯಾಕೆಯ ಮೊಂಡುತನದ ಮದವೆಲ್ಲಾ
ಸೊಸೆಯ ಮೇಲೆ ಎರಗಿತು. ಮುಖವನ್ನು ಸಿಂಡರಿಸಿಕೊಳ್ಳದೆ ಸೊಸೆಯೊಡನೆ
ಮಾತಾಡುತ್ತಿರಲಿಲ್ಲ. ಪಾತ್ರೆ ತೊಳೆಯುವ ಕೂಲಿ ಹೆಣ್ಣಿಗೆ ಕೂಡ ಹೆಚ್ಚು ಮರ್ಯಾದೆ
ಸಿಗುತ್ತಿತ್ತು ; ಆದರೆ ಸೊಸೆಗೆ ಸಿಗುತ್ತಿರಲಿಲ್ಲ. ಕೆಲಕಾಲ ಸೊಸೆಯು ಈ ಗೋಳನ್ನು
ಅನುಭವಿಸಿದಳು. ನಂತರ 'ನನಗ್ಯಾಕೆ ಈ ಪೀಡೆ?” ಎಂದನಿಸಿತು. ಇದ್ದ
ಸಂಗತಿಯನ್ನು ಗಂಡನಿಗೆ ಹೇಳಿದಳು. ಅಮ್ಮನಿಗೆ ಅವನು ಹಲವಾರು ತೆರನ
ಜಾಣತನದ ಸಲಹೆಗಳನ್ನಿತ್ತ. ಮೊಂಡುತನದ ಹೆಣ್ಣಿಗೆ ಇದನ್ನು ತಿಳಿಯಲು
ಸಾಧ್ಯವೇ ? ತಿಳಿದುಕೊಂಡಮೇಲಲ್ಲವೇ ನಡತೆಯನ್ನು ಮುಂದೆ ತಿದ್ದಿಕೊಳ್ಳಲು
ಸಾಧ್ಯ. ಎರಡೂ ಇಲ್ಲ, ಮಗನಿಗೂ ಬೇಸರ ಬಂತು. ಬೇರೆ ಸಂಸಾರವನ್ನು
ಹೂಡುವುದು ಲೇಸು ಎಂದು ಮಗ ಸೊಸೆ ನಿರ್ಧರಿಸಿದರು. ಭಟ್ಟರ ಬಳಿಗೆ
ಮಗ ಒಂದು ಸಂಜೆ ಬಂದ. 'ಅಪ್ಪಾ ! ಅಮ್ಮನೊಂದಿಗೆ ಒಗ್ಗಿಕೊಂಡುಹೋಗಲು
ನಾನೂ ಮತ್ತು ನನ್ನ ಹೆಂಡತಿಯೂ ಶತಪ್ರಯತ್ನ ಮಾಡಿದೆವು, ಸಾರ್ಥಕವಾಗಲಿಲ್ಲ.
ಈಚೀಚೆಗನಕ ಅಮ್ಮನ ಹಲ್ಕ ನಡವಳಿಕೆಯು ಮಿತಿಮೀರುತ್ತಿದೆ, ಹಿರಿಯರೆದುರಿಗೆ
ದನಿ ಎತ್ತಬಾರದು ಎಂದು ನಾವಿಬ್ಬರೂ ಈ ತನಕ ಎಲ್ಲವನ್ನೂ ಸಹಿಸಿಕೊಂಡೆವು.
ಈ ಜನ್ಮದಲ್ಲಿ ಅಮ್ಮನಿಗೆ ಬುದ್ಧಿ ಬರುವುದಿಲ್ಲ ಎಂಬುದು ನಿಮಗೂ ತಿಳಿದಿದೆ.<noinclude></noinclude>
1h7ynhjnqvcm980a9ynqfvti0o306hi
316585
316544
2026-05-03T17:00:59Z
Pragathi. BH
7585
/* Validated */
316585
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೯೪|right=ಮನಮಂಥನ}}
{{gap}}ಇಂತಹ ಮನಃಸ್ಥಿತಿ ಇದ್ದಾಗ ಮನೆಯಲ್ಲೂ ಒಂದು ಆಘಾತವು ಕಾದಿತ್ತು.
ಮನೆಯಾಕೆಯು ಎಂದಿನಿಂದಲೂ ಹಟವಾಣಿ ಮತ್ತು ಕಟುವಾಣಿ. ಆದರೆ ದೊಡ್ಡ
ಅಧಿಕಾರದಲ್ಲಿ ಗಂಡ ಇದ್ದಾಗ ತಾನು ಮೆರೆಯಲು ಹಿತವಾಗಿತ್ತು ; ಅನುಕೂಲವೂ
ಆಗಿತ್ತು. ಮನೆಯ ಮೂಲೆಯಲ್ಲಿ ಗಂಡ ಕುಳಿತಾಗ, ಆಳುಕಾಳುಗಳ ಸಂಖ್ಯೆ
ಕಡಿಮೆಯಾಯಿತು. ಆಕೆಗೂ ಋಷಿಪಂಚಮಿಯ ವಯಸ್ಸು, ಮನಸ್ಸು ಎರ್ರಂಬಿರ್ರಿ
ಆಗತೊಡಗಿತ್ತು. ಸಂಸ್ಕೃತಿಯ ಯಾವ ಸೋಂಕೂ ಇಲ್ಲದ, ಕೆಟ್ಟು ಬದುಕಿದವರ
ಮನೆಯ ಹೆಣ್ಣು ಹುಟ್ಟಿದಂದಿನಿಂದಲೂ ಬುದ್ಧಿಯು ಅಸಾಧ್ಯ ಮಂದ, ಮೆರೆಯಲು
ಗಂಡನ ಮನೆಯಲ್ಲಿ ಅವಕಾಶವು ದೊರೆತಾಗ, ಅರ್ಧರಾತ್ರಿಯಲ್ಲಿ ಅಂಗಳದಲ್ಲಿ
ಕೊಡೆ ಹಿಡಿಸಲು ತೊಡಗಿದಳು. ಮನೆಗೆ ಬಂದ ಗಂಡನ ಸ್ನೇಹಿತರು, ಈಕೆಯ
ನಡೆ ನುಡಿಗಳನ್ನು ಕಂಡು ತಡೆಯಲಾರದೆ ನಕ್ಕರೆ, ನಾನು ಆಡಿದ್ದನ್ನು ಕೇಳಿ,
ಮಾಡಿದ್ದನ್ನು ನೋಡಿ, ಮೆಹನತ್ತಿನ ಮೆಚ್ಚಿಗೆಯನ್ನು ನಗೆಯ ಮೂಲಕ
ಸೂಚಿಸುತ್ತಿದ್ದಾರೆ ಎಂದಂದುಕೊಳ್ಳುವ, ಮಂಕುಬುಡ್ಡಿ ಆಕೆ. ಆದರೂ ಗಂಡನ
ಅಧಿಕಾರದ ದೆಸೆಯಿಂದ ಇದೆಲ್ಲವೂ ಮರೆಮಾಚಿತ್ತು.
{{gap}}ಗಂಡನು ರಿಟೈರ್ ಆಗುವ ವೇಳೆಗೆ ಹಿರಿಯ ಮಗನಿಗೆ ಮದುವೆಯಾಗಿತ್ತು.
ಓದಿದ ಸೊಸೆ ಮನೆಗೆ ಬಂದಳು. ಮನೆಯಾಕೆಯ ಮೊಂಡುತನದ ಮದವೆಲ್ಲಾ
ಸೊಸೆಯ ಮೇಲೆ ಎರಗಿತು. ಮುಖವನ್ನು ಸಿಂಡರಿಸಿಕೊಳ್ಳದೆ ಸೊಸೆಯೊಡನೆ
ಮಾತಾಡುತ್ತಿರಲಿಲ್ಲ. ಪಾತ್ರೆ ತೊಳೆಯುವ ಕೂಲಿ ಹೆಣ್ಣಿಗೆ ಕೂಡ ಹೆಚ್ಚು ಮರ್ಯಾದೆ
ಸಿಗುತ್ತಿತ್ತು ; ಆದರೆ ಸೊಸೆಗೆ ಸಿಗುತ್ತಿರಲಿಲ್ಲ. ಕೆಲಕಾಲ ಸೊಸೆಯು ಈ ಗೋಳನ್ನು
ಅನುಭವಿಸಿದಳು. ನಂತರ 'ನನಗ್ಯಾಕೆ ಈ ಪೀಡೆ?” ಎಂದನಿಸಿತು. ಇದ್ದ
ಸಂಗತಿಯನ್ನು ಗಂಡನಿಗೆ ಹೇಳಿದಳು. ಅಮ್ಮನಿಗೆ ಅವನು ಹಲವಾರು ತೆರನ
ಜಾಣತನದ ಸಲಹೆಗಳನ್ನಿತ್ತ. ಮೊಂಡುತನದ ಹೆಣ್ಣಿಗೆ ಇದನ್ನು ತಿಳಿಯಲು
ಸಾಧ್ಯವೇ ? ತಿಳಿದುಕೊಂಡಮೇಲಲ್ಲವೇ ನಡತೆಯನ್ನು ಮುಂದೆ ತಿದ್ದಿಕೊಳ್ಳಲು
ಸಾಧ್ಯ. ಎರಡೂ ಇಲ್ಲ, ಮಗನಿಗೂ ಬೇಸರ ಬಂತು. ಬೇರೆ ಸಂಸಾರವನ್ನು
ಹೂಡುವುದು ಲೇಸು ಎಂದು ಮಗ ಸೊಸೆ ನಿರ್ಧರಿಸಿದರು. ಭಟ್ಟರ ಬಳಿಗೆ
ಮಗ ಒಂದು ಸಂಜೆ ಬಂದ. 'ಅಪ್ಪಾ ! ಅಮ್ಮನೊಂದಿಗೆ ಒಗ್ಗಿಕೊಂಡುಹೋಗಲು
ನಾನೂ ಮತ್ತು ನನ್ನ ಹೆಂಡತಿಯೂ ಶತಪ್ರಯತ್ನ ಮಾಡಿದೆವು, ಸಾರ್ಥಕವಾಗಲಿಲ್ಲ.
ಈಚೀಚೆಗನಕ ಅಮ್ಮನ ಹಲ್ಕ ನಡವಳಿಕೆಯು ಮಿತಿಮೀರುತ್ತಿದೆ, ಹಿರಿಯರೆದುರಿಗೆ
ದನಿ ಎತ್ತಬಾರದು ಎಂದು ನಾವಿಬ್ಬರೂ ಈ ತನಕ ಎಲ್ಲವನ್ನೂ ಸಹಿಸಿಕೊಂಡೆವು.
ಈ ಜನ್ಮದಲ್ಲಿ ಅಮ್ಮನಿಗೆ ಬುದ್ಧಿ ಬರುವುದಿಲ್ಲ ಎಂಬುದು ನಿಮಗೂ ತಿಳಿದಿದೆ.<noinclude></noinclude>
0mbr6q40cplo5e88nlm2k5is8dnydmd
ಪುಟ:ಮನಮಂಥನ.pdf/೧೧೪
104
62561
316545
315689
2026-05-03T14:24:32Z
Shreesha Sharma
7840
316545
proofread-page
text/x-wiki
<noinclude><pagequality level="4" user="Pragathi. BH" /></noinclude>ಆತಂಕ
{{Right|೯೫}}
ಆದುದರಿಂದ ಬೇರೆ ಸಂಸಾರವನ್ನು ನಾವು ಹೂಡಬೇಕು ಎಂದುಕೊಂಡಿದ್ದೇವೆ.
ಇದರಿಂದ ನಿಮ್ಮ ಮನಸ್ಸಿಗೆ ಬೇಜಾರಾಗಬಹುದು. ನಿಮ್ಮನ್ನು ಒಂದು ಮಾತು
ಕೇಳಿ, ನೀವು ಹ್ಞೂ ಅಂದರೆ ಮುಂದಿನ ಏರ್ಪಾಡು ಮಾಡುತ್ತೇವೆ. ಒಳ್ಳೆಯ
ಮನಸ್ಸಿನಿಂದ ಆಶೀರ್ವಾದ ಮಾಡಿ ಕಳಿಸಿಕೊಟ್ಟರೆ ಹೋಗಬಯಸುತ್ತೇವೆ' ಎಂದು
ಹೇಳಿ ಕಾಲು ಮುಟ್ಟಿ ನಮಸ್ಕಾರವನ್ನು ಮಾಡಿದ.
{{gap}}'ನೀವು ಸುಖವಾಗಿ ಬಾಳುವುದು ನನ್ನ ಹಂಬಲ. ಹಿತವಾಗಿ ಬಾಳಲು
ನಿಮಗೊಂದು ಮನೆಯನ್ನು ಕೊಡಲು ನನಗೆ ಸಾಧ್ಯವಾಗಿಲ್ಲ. ಹೊಟ್ಟೆಗಿಲ್ಲದ
ದೇವರು, ಪೂಜಾರಿಗೆ ಏನು ವರ ಕೊಟ್ಟಾನು ? ನನಗೆ ಹಿತವೀವ ಮನೆಯಿಲ್ಲದಾಗ,
ನಿಮಗೆ ಅದನ್ನು ನೀಡಲು ಹೇಗೆ ಸಾಧ್ಯ ! ಆದ್ದರಿಂದ ಯಾವ ಅಳುಕನ್ನೂ
ಪಡದೆ, ನಿಮ್ಮ ಪಾಡಿಗೆ ನೀವು ಹೋಗಿ, ಸುಖವಾಗಿ ಬಾಳಿ, ದೇವರು ಕೊಟ್ಟ
ಬುದ್ಧಿಯನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದರೆ, ಈ ಸಲಹೆಯನ್ನು ನಾನೇ
ಮೊದಲು ಮೊದಲಲ್ಲೇ ಮಾಡಬೇಕಾಗಿತ್ತು, ತಪ್ಪಿದೆ, ಹೋಗಿ ಬನ್ನಿ, ಮನೆಯಲ್ಲಿರುವ
ಸಾಮಾನುಗಳಲ್ಲಿ ಯಾವುದು ನಿಮಗೆ ಬೇಕೆನಿಸುತ್ತೋ ಅವನ್ನು ನಿಸ್ಸಂಕೋಚವಾಗಿ
ತೆಗೆದುಕೊಂಡು ಹೋಗಿ' ಎಂದು ಭಟ್ಟರು ಸಾಧ್ಯವಾದಷ್ಟು ನಿರ್ವಿಕಾರದ ದನಿಯಲ್ಲಿ
ಹೇಳಿದರು.
{{gap}}ಒಂದು ಮಧ್ಯಾಹ್ನ ಮನೆಯ ಮುಂದೆ ಲಾರಿ ಬಂದು ನಿಂತಿತು. ತಮ್ಮ
ಟ್ರಂಕು ಪೆಟ್ಟಿಗೆಗಳನ್ನು, ಮತ್ತಿತರ ಸಾಮಾನುಗಳನ್ನೂ ಮಗ ಸೊಸೆಯರು ತೆಗೆದಿಟ್ಟರು.
ಕೂಲಿಯವರು ಲಾರಿಗೆ ಏರಿಸಿದರು. ಲಾರಿಯೂ ಹೊರಟಿತು. ಅದರ ಹಿಂದೆಯೇ
ಕಾರಿನಲ್ಲಿ ಮಗ ಸೊಸೆಯರು ಹೊರಟರು. ಅವರು ಅತ್ತ ಹೋದ ಮೇಲೆ,
ಮನೆಯಾಕೆಯು ದೊಡ್ಡ ಈ ಮನೆಯ ಅನುಕೂಲಗಳೂ ಬಾಡಿಗೆ ಮನೆಯಲ್ಲಿ
ಎಲ್ಲಿ ದೊರಕುತ್ತೆ ? ತುದಿಗಾಲಿನ ಮೇಲೆ ನಿಂತಿದ್ದಳು, ಮಿಟಿಕಲಾಡಿ, ಬೇರೆ
ಸಂಸಾರ ಹೂಡುಕ್ಕೆ, ನನ್ನ ಮಂಕು ಮಗನೋ ಅವಳು ಹೇಳಿದ ಹಾಗೆ
ಕುಣೀತಾನೇ. ಅಲ್ಲಿ ಹೋಗಿ ಒದ್ದಾಡಲಿ, ಅಲ್ಲಿ ನರಳಿ ಅನುಭವಿಸಲಿ' ಎಂದು
ಲೊಟಕಿದಳು. ತಮ್ಮದು ಎಂದುಕೊಂಡಿದ್ದ ಮನೆಯನ್ನು ನಿರ್ವಾಹವಿಲ್ಲದೆ ಬಿಟ್ಟು
ಹೋಗುತ್ತಿರುವ ಮಗ ಸೊಸೆಯರು, ಎಲ್ಲಾದರೂ ಸುಖವಾಗಿರಲಿ ಎಂದನ್ನುವ
ಔದಾರ್ಯ ಮನೆಯಾಕೆಗೆ ಬರಲಿಲ್ಲ. ಒದ್ದಾಡಲಿ, ನರಳಲಿ ಎಂದೇ ಅಂದಳು.
{{gap}}ಹೀಗೆ ಲೊಟಕಿದಾಗ ಮನೆಯಾಕೆಯನ್ನು ಒದ್ದುಬಿಡಲೇ ಎನ್ನುವಷ್ಟು
ಕೋಪ ಭಟ್ಟರಲ್ಲಿ ಉಕ್ಕಿತು. ಒದ್ದರೆ ದೊರಕುವ ಪ್ರತಿಫಲವೇನು ? ಒದ್ದ ಕಾಲಿಗೆ
ನೋವು. ಇನ್ನು ಯಾವ ಪರಿಣಾಮವೂ ಸಾಧ್ಯವಿಲ್ಲ. ಕೊಠಡಿಗೆ ಹಿಂತಿರುಗಿ<noinclude></noinclude>
8bf4ry2dfddneme2r0wt5cukecnxnlh
ಪುಟ:ಮನಮಂಥನ.pdf/೧೧೫
104
62562
316586
315657
2026-05-03T17:01:19Z
Pragathi. BH
7585
/* Validated */
316586
proofread-page
text/x-wiki
<noinclude><pagequality level="4" user="Pragathi. BH" /></noinclude>
ಮನಮಂಥನ
ಬಾಗಿಲು ಜಡಿದು ಕುಳಿತರು. ಸಂಸಾರದ ಅನುಭವವು ಸಾಕಷ್ಟು ಇತ್ತು. ವಯಸ್ಸ
ಆಗಿ ಬುದ್ಧಿಯೂ ಅಲ್ಪಸ್ವಲ್ಪ ಬಂದಿತ್ತು. ಇವೆಲ್ಲವೂ ಸಾಮಾನ್ಯ ಘಟನೆಗಳು.
ಎಷ್ಟೋ ಮನೆಗಳಲ್ಲಿ ಪರಿಸ್ಥಿತಿಯು ಇನ್ನೂ ಕುಲಗೆಟ್ಟು ಹೋಗಿರುತ್ತದೆ. ಅದಕ್ಕಿಂತ
ಇದೇ ಮೇಲು ಎನ್ನುವುದೂ ತಿಳಿದಿತ್ತು. ಆದರೂ ಏಕೋ ಏನೋ ಯಾವುದೋ
ಒಂದು ಗಂಟಲಿನಲ್ಲಿ ಸಿಕ್ಕಿಕೊಂಡು ಒತ್ತತೊಡಗಿತು. ಕಣ್ಣುಗಳು ಮಂಜಾದುವು.
ಇದ್ದೊಬ್ಬ ಮಗನಿಗೆ ಆಸರೆ ಕೊಡಲು ಮನೆಯಿಲ್ಲವಾಯಿತೇ ಎಂದು ಕೊರಗಿದರು
ಮುದುಕ ಭಟ್ಟರು.
ಕೆಲಸದ ಸಲುವಾದ ಆತಂಕವು ಭಟ್ಟರನ್ನು ಮೊದಲೇ ಮುತ್ತಿತ್ತು. ಆಸೆ,
ಅವಮಾನದ ಭಯ, ಸ್ವಾಭಿಮಾನಕ್ಕೆ ಧಕ್ಕೆ, ಇವೆಲ್ಲವೂ ಅವರ ಮನಸ್ಸನ್ನು
ಜಗ್ಗಾಡುತ್ತಿದ್ದುವು. ಸಂಸಾರದಲ್ಲಿ ಈ ತೆರನ ಆಘಾತವಾದಾಗ ಆತಂಕವು ತಳಮಳದ
ಹಂತಕ್ಕೇರಿತು. ಮುಪ್ಪಿನ ವಯಸ್ಸಾದುದರಿಂದ ಮೆದುಳಿನ ಚಟುವಟಿಕೆಗಳೂ
ಮಂದವಾಗಹತ್ತಿದ್ದುವು. ಅಂದರೆ ವಿವೇಚನಾ ಶಕ್ತಿಯೂ ದುರ್ಬಲಗೊಂಡಿತ್ತು.
ಆದುದರಿಂದ ಯೋಚಿಸಿ ತಳಮಳವನ್ನು ತಡೆಗಟ್ಟಲು ಸಾಧ್ಯವಿರಲಿಲ್ಲ. ಹೀಗಾಗಿ
ಆಡಲೂ ಆರ, ಅನುಭವಿಸಲೂ ಆರ, ಸರಿಪಡಿಸಲು ವಿಚಾರಶಕ್ತಿಯೂ ಕ್ಷಯಿಸುತ್ತಿತ್ತು.
ಆ ವಯಸ್ಸಿಗೆ ಸ್ವಲ್ಪಹೆಚ್ಚಾದ ಬ್ಲಡ್ಪ್ರೆಷರ್ ಇತ್ತು. ಮನಸ್ಸಿನ ತಳಮಳದಿಂದ
ಅದೂ ಹೆಚ್ಚಿತು. ಮೆಲ್ಲ ಮೆಲ್ಲಗೆ Senile cerebral degeneration
ಪ್ರಾರಂಭವಾಯಿತು. ಫಲಿತಾಂಶ : ಕೆಲವು ತಿಂಗಳುಗಳಲ್ಲಿ ಅವರ ವರ್ತನೆಯು
ವಿಚಿತ್ರವಾಗತೊಡಗಿತು.
ಅಸಂಬದ್ಧವಾಗಿ ಮಾತನಾಡುವುದು, ವಿನಾಕಾರಣ ರೇಗುವುದು,
ಸುಮ್ಮಸುಮ್ಮನೆ ನಗುವುದು, ಇತ್ಯಾದಿಗಳಿಗೆ ಶುರುವಾಯಿತು. ಕಡೆಗೊಮ್ಮೆ ಕಾಫಿ
ತಂದು ಕೊಟ್ಟ ಹೆಂಡತಿಯನ್ನು ಹೊಡೆಯಹೋದರು. ದೂರದ ನೆಂಟನು
ಬಂದಾಗ ಅವನನ್ನು ಬಡಿಯ ಹೋದರು. ಕಡೆಗೆ ಮಾನಸಿಕ ಆಸ್ಪತ್ರೆಗೆ ಸೇರಿಸದೆ
ಗತ್ಯಂತರವಿಲ್ಲದ ಹಾಗಾಯಿತು. ಅಲ್ಲಿ ಕೆಲವು ವಾರಗಳಿದ್ದರು. ದಯಾಮಯ
ದೇವರು ಆಮೇಲೆ ಅವರ ಕಣ್ಣು ಮುಚ್ಚಿಸಿದ.
ಅರವತ್ತರ ಸುಮಾರಿನ ಮುಪ್ಪ ಅಡರಿದಾಗ, ಬಾಳಿನಿಂದ ಪಡೆದ ಅನುಭವವು
ಸಾಕಷ್ಟು ಇರುತ್ತದೆ. ಇದರ ಫಲವಾಗಿ ಯುವಕರಿಗಿಂತಲೂ ಹೆಚ್ಚು
ಪರಿಣಾಮಕಾರಿಯಾಗಿ ಕೆಲಸಗಳನ್ನು ಮಾಡಬಲ್ಲ, ಯುವಕರ
ದೇಹದಾರ್ಡ್ಯವಿರದಿದ್ದರೂನೂ, ಈ ಕಾರಣದಿಂದ ಅವ ಕಾರ್ಯಕ್ಷೇತ್ರದಿಂದ
ನಿಷ್ಕಮಿಸಲು ಬಡ ಪೆಟ್ಟಗೆ ಒಪ್ಪುವುದಿಲ್ಲ. ಅಧಿಕಾರಕ್ಕೆ ಅಂಟಿಕೊಳ್ಳುವ ಪ್ರವೃತ್ತಿಯು<noinclude></noinclude>
hwy2he85hq9xfta4wi4g2xjqdawxg1j
316587
316586
2026-05-03T17:09:17Z
Pragathi. BH
7585
316587
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೯೬|right=ಮನಮಂಥನ}}
ಬಾಗಿಲು ಜಡಿದು ಕುಳಿತರು. ಸಂಸಾರದ ಅನುಭವವು ಸಾಕಷ್ಟು ಇತ್ತು. ವಯಸ್ಸೂ
ಆಗಿ ಬುದ್ಧಿಯೂ ಅಲ್ಪಸ್ವಲ್ಪ ಬಂದಿತ್ತು. ಇವೆಲ್ಲವೂ ಸಾಮಾನ್ಯ ಘಟನೆಗಳು.
ಎಷ್ಟೋ ಮನೆಗಳಲ್ಲಿ ಪರಿಸ್ಥಿತಿಯು ಇನ್ನೂ ಕುಲಗೆಟ್ಟು ಹೋಗಿರುತ್ತದೆ. ಅದಕ್ಕಿಂತ
ಇದೇ ಮೇಲು ಎನ್ನುವುದೂ ತಿಳಿದಿತ್ತು. ಆದರೂ ಏಕೋ ಏನೋ ಯಾವುದೋ
ಒಂದು ಗಂಟಲಿನಲ್ಲಿ ಸಿಕ್ಕಿಕೊಂಡು ಒತ್ತತೊಡಗಿತು. ಕಣ್ಣುಗಳು ಮಂಜಾದುವು.
ಇದ್ದೊಬ್ಬ ಮಗನಿಗೆ ಆಸರೆ ಕೊಡಲು ಮನೆಯಿಲ್ಲವಾಯಿತೇ ಎಂದು ಕೊರಗಿದರು
ಮುದುಕ ಭಟ್ಟರು.
ಕೆಲಸದ ಸಲುವಾದ ಆತಂಕವು ಭಟ್ಟರನ್ನು ಮೊದಲೇ ಮುತ್ತಿತ್ತು. ಆಸೆ,
ಅವಮಾನದ ಭಯ, ಸ್ವಾಭಿಮಾನಕ್ಕೆ ಧಕ್ಕೆ, ಇವೆಲ್ಲವೂ ಅವರ ಮನಸ್ಸನ್ನು
ಜಗ್ಗಾಡುತ್ತಿದ್ದುವು. ಸಂಸಾರದಲ್ಲಿ ಈ ತೆರನ ಆಘಾತವಾದಾಗ ಆತಂಕವು ತಳಮಳದ
ಹಂತಕ್ಕೇರಿತು. ಮುಪ್ಪಿನ ವಯಸ್ಸಾದುದರಿಂದ ಮೆದುಳಿನ ಚಟುವಟಿಕೆಗಳೂ
ಮಂದವಾಗಹತ್ತಿದ್ದುವು. ಅಂದರೆ ವಿವೇಚನಾ ಶಕ್ತಿಯೂ ದುರ್ಬಲಗೊಂಡಿತ್ತು.
ಆದುದರಿಂದ ಯೋಚಿಸಿ ತಳಮಳವನ್ನು ತಡೆಗಟ್ಟಲು ಸಾಧ್ಯವಿರಲಿಲ್ಲ. ಹೀಗಾಗಿ
ಆಡಲೂ ಆರ, ಅನುಭವಿಸಲೂ ಆರ, ಸರಿಪಡಿಸಲು ವಿಚಾರಶಕ್ತಿಯೂ ಕ್ಷಯಿಸುತ್ತಿತ್ತು.
ಆ ವಯಸ್ಸಿಗೆ ಸ್ವಲ್ಪಹೆಚ್ಚಾದ ಬ್ಲಡ್ಪ್ರೆಷರ್ ಇತ್ತು. ಮನಸ್ಸಿನ ತಳಮಳದಿಂದ
ಅದೂ ಹೆಚ್ಚಿತು. ಮೆಲ್ಲ ಮೆಲ್ಲಗೆ Senile cerebral degeneration
ಪ್ರಾರಂಭವಾಯಿತು. ಫಲಿತಾಂಶ : ಕೆಲವು ತಿಂಗಳುಗಳಲ್ಲಿ ಅವರ ವರ್ತನೆಯು
ವಿಚಿತ್ರವಾಗತೊಡಗಿತು.
ಅಸಂಬದ್ಧವಾಗಿ ಮಾತನಾಡುವುದು, ವಿನಾಕಾರಣ ರೇಗುವುದು,
ಸುಮ್ಮಸುಮ್ಮನೆ ನಗುವುದು, ಇತ್ಯಾದಿಗಳಿಗೆ ಶುರುವಾಯಿತು. ಕಡೆಗೊಮ್ಮೆ ಕಾಫಿ
ತಂದು ಕೊಟ್ಟ ಹೆಂಡತಿಯನ್ನು ಹೊಡೆಯಹೋದರು. ದೂರದ ನೆಂಟನು
ಬಂದಾಗ ಅವನನ್ನು ಬಡಿಯ ಹೋದರು. ಕಡೆಗೆ ಮಾನಸಿಕ ಆಸ್ಪತ್ರೆಗೆ ಸೇರಿಸದೆ
ಗತ್ಯಂತರವಿಲ್ಲದ ಹಾಗಾಯಿತು. ಅಲ್ಲಿ ಕೆಲವು ವಾರಗಳಿದ್ದರು. ದಯಾಮಯ
ದೇವರು ಆಮೇಲೆ ಅವರ ಕಣ್ಣು ಮುಚ್ಚಿಸಿದ.
ಅರವತ್ತರ ಸುಮಾರಿನ ಮುಪ್ಪ ಅಡರಿದಾಗ, ಬಾಳಿನಿಂದ ಪಡೆದ ಅನುಭವವು
ಸಾಕಷ್ಟು ಇರುತ್ತದೆ. ಇದರ ಫಲವಾಗಿ ಯುವಕರಿಗಿಂತಲೂ ಹೆಚ್ಚು
ಪರಿಣಾಮಕಾರಿಯಾಗಿ ಕೆಲಸಗಳನ್ನು ಮಾಡಬಲ್ಲ, ಯುವಕರ
ದೇಹದಾರ್ಡ್ಯವಿರದಿದ್ದರೂನೂ, ಈ ಕಾರಣದಿಂದ ಅವ ಕಾರ್ಯಕ್ಷೇತ್ರದಿಂದ
ನಿಷ್ಕಮಿಸಲು ಬಡ ಪೆಟ್ಟಗೆ ಒಪ್ಪುವುದಿಲ್ಲ. ಅಧಿಕಾರಕ್ಕೆ ಅಂಟಿಕೊಳ್ಳುವ ಪ್ರವೃತ್ತಿಯು<noinclude></noinclude>
sbpgzzs0psehckvwymhnekxas4fdozi
ಪುಟ:ಮನಮಂಥನ.pdf/೧೧೬
104
62563
316588
315658
2026-05-03T17:09:30Z
Pragathi. BH
7585
/* Validated */
316588
proofread-page
text/x-wiki
<noinclude><pagequality level="4" user="Pragathi. BH" /></noinclude>ಆತಂಕ
ಅತಿಯಾಗುತ್ತದೆ. ಇನ್ನೂ ಹೆಚ್ಚಾಗಿ ಸಂಪಾದಿಸಿ ಶೇಖರಿಸಬೇಕು ಎನ್ನುವ ಯುವಕ
ಕೆಚ್ಚು ಇರುವುದಿಲ್ಲ. ಅದರ ಬದಲು ಇದ್ದುದನ್ನು ಭದ್ರಮಾಡಬೇಕು. ಸುಭದ್ರವಾದ
ವಿಧಾನಗಳಿಂದ ಇದ್ದುದನ್ನು ಬೆಳೆಸುವುದಾದರೆ ಆಗಲಿ ಎನ್ನುವ ಹುಚ್ಚು ಹೆಚ್ಚಾಗುತ್ತದೆ.
ಆದಕಾರಣ ಕೆಲಸದಲ್ಲಿ ಮಗ್ನನಾಗಲು ಪ್ರಯತ್ನಿಸುತ್ತಾನೆ. ಬಹುಪಾಲು ಆ ಯತ್ನದಲ್ಲಿ
ಜಯಗಳಿಸುತ್ತಾನೆ. ಒಂದೆರಡು ವರ್ಷಗಳು ಕಳೆಯುವುದರೊಳಗೆ, ಹೆಚ್ಚುಹೆಚ್ಚಾಗಿ
ಪೆಚ್ಚು ಪೆಚ್ಚು ತಪ್ಪುಗಳನ್ನು ಮಾಡುತ್ತಿರುವುದನ್ನು ಗಮನಿಸುತ್ತಾನೆ. ಇತರರಿಗೆ
ಎಲ್ಲಿ ಇದು ಗೊತ್ತಾಗುವುದೋ ಎಂಬ ಆತಂಕವು ಕೊರೆಯಲಾರಂಭಿಸುತ್ತದೆ.
ಇಂತಹ ಸ್ಥಿತಿಯಲ್ಲಿರುವ ಮುದುಕನಿಗೆ ಸಂಸಾರದಲ್ಲಿ ಆಘಾತವಾದರೂ ಆಯಿತು;
ಸಮಾಜದಲ್ಲಿ ಮಾನ ಹೋಗುವ ಸಂದರ್ಭಗಳು ಒದಗಿದರೂ ಆಯಿತು ;
ಅಥವಾ ತಾನು ಶೇಖರಿಸಿದ್ದುದು, ಷೇರುಪೇಟೆಯಲ್ಲಿ ಕರಗಿಹೋದರೂ ಆಯಿತು;
ಆಗ ಆತಂಕವು ಉಲ್ಬಣಗೊಂಡು ಧೃತಿಗೆಡುತ್ತಾನೆ. ಇತರ ವಿಧದ ಮಾನಸಿಕ
ಬೇನೆಗಳು ಆತಂಕದ ಬೆನ್ನು ಹತ್ತಿ ಮನಸ್ಸನ್ನು ಹರಿದಿಡುತ್ತವೆ. ಅರುಳೂ ಮರುಳು,
ಹುಚ್ಚು ಬೆಪ್ಪು ಶಿವಲೀಲೆಗಳಾಗುವುದು ಈ ರೀತಿಯಲ್ಲಿ.
ಮುಪ್ಪಿನಲ್ಲಿ ತೀವ್ರಾತಂಕವು ಉಂಟಾಗುವುದು ವಿರಳವೇನಲ್ಲ. ತಾನು
ಬಯಸಿದಂತೆ ತನ್ನ ಮಕ್ಕಳು ಮರಿಗಳೂ ಬಾಳಬೇಕು ಎಂದು ಎಲ್ಲರೂ
ಆಸೆಪಡುವುದು ಸ್ವಾಭಾವಿಕ. ಬಯಸಿದಂತೆ ಬಾಳುವುದು ಸುಲಭ ಸಾಧ್ಯವಿದ್ದರೆ,
ಭೂಲೋಕ ಎಂದು ಏಕೆ ಕರೆಯುತ್ತಿದ್ದರು ; ಸ್ವರ್ಗ ಎಂದೇ ಅನ್ನುತ್ತಿದ್ದರು.
ಕೇಳಿದುದನ್ನು ನೀಡುವ ಕಲ್ಪವೃಕ್ಷವು ಅಲ್ಲಿ ತಾನೆ ಇದೆ ಎಂದು ಪುರಾಣಗಳು
ಹೇಳುವುದು ! ಅಂದರೆ ಬಹಳಷ್ಟು ಮಂದಿ ಮುದುಕರು ಆತಂಕಕ್ಕೆ ಬಲಿಯಾಗಲೇ
ಬೇಕು. ಮೊದಮೊದಲ ಹಂತದಲ್ಲೇ ಅಂತಹವರು ಆಧ್ಯಾತ್ಮಿಕ ವಿಷಯಗಳಲ್ಲಿ
ಆಸಕ್ತರಾದರೆ, ಯಾವುದು ಆತಂಕಕ್ಕೆ ಒಳಗಾಗಿರುವುದು ಎಂಬುದರ
ವಿಶ್ಲೇಷಣೆಯನ್ನು ಮಾಡತೊಡಗಿದರೆ, ಆತಂಕವು ಕಡಿಮೆಯಾಗುತ್ತದೆ. ನೆಮ್ಮದಿಯೂ
ಉಂಟಾಗುತ್ತದೆ. ಮುಪ್ಪಿನ ಆತಂಕಗಳಿಗೆ ಆಧ್ಯಾತ್ಮಿಕ ಅರಿವಿನ ಪ್ರಯತ್ನವು ಅತ್ಯುತ್ತಮ
ಮಾನಸಿಕ ಚಿಕಿತ್ಸೆ. ಇಂತಹ ಆಧ್ಯಾತ್ಮಿಕ ಅರಿವು ಪೂರ್ಣ ಜ್ಞಾನಾರ್ಜನೆಯಿಂದ,
ಕುಶಲಮತಿಗಳಲ್ಲಿ, ವಿಚಾರಪರರಲ್ಲಿ ಸಾಧ್ಯ. ಯಾವ ಸಮಾಜದಲ್ಲಿಯಾಗಲೀ
ವಿಚಾರಪರರು ಅಲ್ಪಸಂಖ್ಯಾತರು. ಉಳಿದ ಬಹುಸಂಖ್ಯಾತರಿಗೆ ಪೂರ್ಣ ನಂಬುಗೆ
ಮತ್ತು ಭಕ್ತಿ ಇವುಗಳೇ ಉತ್ತಮ ಮಾರ್ಗವಾಗಬಹುದು. ಆತ್ಮಕ್ಕಿಂತ ಅಧಿಯಾದ,
ಆಧ್ಯಾತ್ಮಿಕದ ಕೂಟಸ್ಥವಾದ ಯಾವುದಾದರೂ ದೇವರಲ್ಲಿ ಸಂಪೂರ್ಣ
ಶರಣಾಗತನಾದರೆ, ಆತಂಕದಿಂದ ವಿಮುಕ್ತನಾಗಬಹುದು. ದೇವರ ಮೇಲೆ ಹೊಣೆ<noinclude></noinclude>
lkt71ryzu0sx4rv8b1a2yyhmc88yok1
316589
316588
2026-05-03T17:50:24Z
Pragathi. BH
7585
316589
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಆತಂಕ|right=೯೭}}
ಅತಿಯಾಗುತ್ತದೆ. ಇನ್ನೂ ಹೆಚ್ಚಾಗಿ ಸಂಪಾದಿಸಿ ಶೇಖರಿಸಬೇಕು ಎನ್ನುವ ಯುವಕ
ಕೆಚ್ಚು ಇರುವುದಿಲ್ಲ. ಅದರ ಬದಲು ಇದ್ದುದನ್ನು ಭದ್ರಮಾಡಬೇಕು. ಸುಭದ್ರವಾದ
ವಿಧಾನಗಳಿಂದ ಇದ್ದುದನ್ನು ಬೆಳೆಸುವುದಾದರೆ ಆಗಲಿ ಎನ್ನುವ ಹುಚ್ಚು ಹೆಚ್ಚಾಗುತ್ತದೆ.
ಆದಕಾರಣ ಕೆಲಸದಲ್ಲಿ ಮಗ್ನನಾಗಲು ಪ್ರಯತ್ನಿಸುತ್ತಾನೆ. ಬಹುಪಾಲು ಆ ಯತ್ನದಲ್ಲಿ
ಜಯಗಳಿಸುತ್ತಾನೆ. ಒಂದೆರಡು ವರ್ಷಗಳು ಕಳೆಯುವುದರೊಳಗೆ, ಹೆಚ್ಚುಹೆಚ್ಚಾಗಿ
ಪೆಚ್ಚು ಪೆಚ್ಚು ತಪ್ಪುಗಳನ್ನು ಮಾಡುತ್ತಿರುವುದನ್ನು ಗಮನಿಸುತ್ತಾನೆ. ಇತರರಿಗೆ
ಎಲ್ಲಿ ಇದು ಗೊತ್ತಾಗುವುದೋ ಎಂಬ ಆತಂಕವು ಕೊರೆಯಲಾರಂಭಿಸುತ್ತದೆ.
ಇಂತಹ ಸ್ಥಿತಿಯಲ್ಲಿರುವ ಮುದುಕನಿಗೆ ಸಂಸಾರದಲ್ಲಿ ಆಘಾತವಾದರೂ ಆಯಿತು;
ಸಮಾಜದಲ್ಲಿ ಮಾನ ಹೋಗುವ ಸಂದರ್ಭಗಳು ಒದಗಿದರೂ ಆಯಿತು ;
ಅಥವಾ ತಾನು ಶೇಖರಿಸಿದ್ದುದು, ಷೇರುಪೇಟೆಯಲ್ಲಿ ಕರಗಿಹೋದರೂ ಆಯಿತು;
ಆಗ ಆತಂಕವು ಉಲ್ಬಣಗೊಂಡು ಧೃತಿಗೆಡುತ್ತಾನೆ. ಇತರ ವಿಧದ ಮಾನಸಿಕ
ಬೇನೆಗಳು ಆತಂಕದ ಬೆನ್ನು ಹತ್ತಿ ಮನಸ್ಸನ್ನು ಹರಿದಿಡುತ್ತವೆ. ಅರುಳೂ ಮರುಳು,
ಹುಚ್ಚು ಬೆಪ್ಪು ಶಿವಲೀಲೆಗಳಾಗುವುದು ಈ ರೀತಿಯಲ್ಲಿ.
ಮುಪ್ಪಿನಲ್ಲಿ ತೀವ್ರಾತಂಕವು ಉಂಟಾಗುವುದು ವಿರಳವೇನಲ್ಲ. ತಾನು
ಬಯಸಿದಂತೆ ತನ್ನ ಮಕ್ಕಳು ಮರಿಗಳೂ ಬಾಳಬೇಕು ಎಂದು ಎಲ್ಲರೂ
ಆಸೆಪಡುವುದು ಸ್ವಾಭಾವಿಕ. ಬಯಸಿದಂತೆ ಬಾಳುವುದು ಸುಲಭ ಸಾಧ್ಯವಿದ್ದರೆ,
ಭೂಲೋಕ ಎಂದು ಏಕೆ ಕರೆಯುತ್ತಿದ್ದರು ; ಸ್ವರ್ಗ ಎಂದೇ ಅನ್ನುತ್ತಿದ್ದರು.
ಕೇಳಿದುದನ್ನು ನೀಡುವ ಕಲ್ಪವೃಕ್ಷವು ಅಲ್ಲಿ ತಾನೆ ಇದೆ ಎಂದು ಪುರಾಣಗಳು
ಹೇಳುವುದು ! ಅಂದರೆ ಬಹಳಷ್ಟು ಮಂದಿ ಮುದುಕರು ಆತಂಕಕ್ಕೆ ಬಲಿಯಾಗಲೇ
ಬೇಕು. ಮೊದಮೊದಲ ಹಂತದಲ್ಲೇ ಅಂತಹವರು ಆಧ್ಯಾತ್ಮಿಕ ವಿಷಯಗಳಲ್ಲಿ
ಆಸಕ್ತರಾದರೆ, ಯಾವುದು ಆತಂಕಕ್ಕೆ ಒಳಗಾಗಿರುವುದು ಎಂಬುದರ
ವಿಶ್ಲೇಷಣೆಯನ್ನು ಮಾಡತೊಡಗಿದರೆ, ಆತಂಕವು ಕಡಿಮೆಯಾಗುತ್ತದೆ. ನೆಮ್ಮದಿಯೂ
ಉಂಟಾಗುತ್ತದೆ. ಮುಪ್ಪಿನ ಆತಂಕಗಳಿಗೆ ಆಧ್ಯಾತ್ಮಿಕ ಅರಿವಿನ ಪ್ರಯತ್ನವು ಅತ್ಯುತ್ತಮ
ಮಾನಸಿಕ ಚಿಕಿತ್ಸೆ. ಇಂತಹ ಆಧ್ಯಾತ್ಮಿಕ ಅರಿವು ಪೂರ್ಣ ಜ್ಞಾನಾರ್ಜನೆಯಿಂದ,
ಕುಶಲಮತಿಗಳಲ್ಲಿ, ವಿಚಾರಪರರಲ್ಲಿ ಸಾಧ್ಯ. ಯಾವ ಸಮಾಜದಲ್ಲಿಯಾಗಲೀ
ವಿಚಾರಪರರು ಅಲ್ಪಸಂಖ್ಯಾತರು. ಉಳಿದ ಬಹುಸಂಖ್ಯಾತರಿಗೆ ಪೂರ್ಣ ನಂಬುಗೆ
ಮತ್ತು ಭಕ್ತಿ ಇವುಗಳೇ ಉತ್ತಮ ಮಾರ್ಗವಾಗಬಹುದು. ಆತ್ಮಕ್ಕಿಂತ ಅಧಿಯಾದ,
ಆಧ್ಯಾತ್ಮಿಕದ ಕೂಟಸ್ಥವಾದ ಯಾವುದಾದರೂ ದೇವರಲ್ಲಿ ಸಂಪೂರ್ಣ
ಶರಣಾಗತನಾದರೆ, ಆತಂಕದಿಂದ ವಿಮುಕ್ತನಾಗಬಹುದು. ದೇವರ ಮೇಲೆ ಹೊಣೆ<noinclude></noinclude>
o6org5wkrcxbw8ivcyoez589iv8tchn
ಪುಟ:ಮನಮಂಥನ.pdf/೧೧೭
104
62564
316590
315659
2026-05-03T17:50:51Z
Pragathi. BH
7585
/* Validated */
316590
proofread-page
text/x-wiki
<noinclude><pagequality level="4" user="Pragathi. BH" /></noinclude>
ಮನಮಂಥನ
ಹಾಕಿದರೆ ದೇವರು ಆತಂಕವನ್ನು ಪಡಬೇಕು; ವ್ಯಕ್ತಿಯ ಹೊಣೆಯೇನೂ
ಉಳಿದಿರುವುದಿಲ್ಲ. ಆಗ, ಆತಂಕದ ಸೋಂಕೂ ಇರಲು ಸಾಧ್ಯವಿಲ್ಲ, ಅಂತಹವರಲ್ಲಿ.
ಅಥವಾ, ಇತರ ವಿಚಾರಪರರು ಮೌಡ್ಯವೆಂದು ಹೀಯಾಳಿಸುವ, ಮೂಢನಂಬಿಕೆ
ಎಂದು ಅವಹೇಳನ ಮಾಡುವ, ವ್ರತ, ಪೂಜೆ, ಇತ್ಯಾದಿ ಕರ್ಮಗಳಲ್ಲಿ
ಮಗ್ನರಾದರೂ, ಆತಂಕವು ಕಡಿಮೆಯಾಗುತ್ತದೆ. ಮುಪ್ಪಿನಲ್ಲಿ ಭ್ರಮನಿರಸನವು
ಆಗುತ್ತದೆ. ಒಬ್ಬಂಟಿಯಾದೆವು ಎನ್ನುವ ಗಂಭೀರ ಭಾವನೆಯು ಉಂಟಾಗುತ್ತದೆ.
ಶಿಥಿಲವಾಗುತ್ತಿರುವ ದೇಹವು ಕಾಡಲಾರಂಭಿಸುತ್ತದೆ, ಹಲವಾರು ವಿಧಾನಗಳಲ್ಲಿ;
ನಾನಾ ರೋಗದ ರೂಪದಲ್ಲಿ. ಆಗ ಆಧ್ಯಾತ್ಮಿಕ ಅಭ್ಯಾಸವು, ಸಂಭವಿಸಿದುದನ್ನೆಲ್ಲ
ಸಮಾಧಾನದಿಂದ ಅನುಭವಿಸುವಂತೆ ಭದ್ರವಾದ ಊರೆಗೋಲಾಗುತ್ತದೆ.
ಆತಂಕಕ್ಕಾಗಲೀ, ಭವಿಷ್ಯ ಭಯಕ್ಕಾಗಲೀ ಅಂತಹವರು ಬಲಿಯಾಗುವುದಿಲ್ಲ.
ಹೀಗಾದರೆ ಮತ್ತೊಂದು ಅನಿರೀಕ್ಷಿತ ಫಲವೂ ದೊರಕುತ್ತದೆ. ಬಾಳಿಗೊಂದು
ಅರ್ಥವನ್ನೂ ನೀಡುತ್ತದೆ. ಸ್ಪರ್ಧಾ ಜೀವನದಿಂದ ದೂರವಾದಾಗ, ಆ
ಕಾರಣದಿಂದಲೇ ಎಂದರೂ ತಪ್ಪಲ್ಲ, ಸಮಾಜದ ಬಹುಮಂದಿಯಿಂದ ವಿಶ್ವಾಸವೂ
ಗೌರವವೂ ದೊರಕುತ್ತದೆ. ಸಂಪಾದನೆ ಇರದಿದ್ದರೂ ಮನೆಯ ಕಿರಿಯರಿಂದ
ಆದರವೂ ಮರ್ಯಾದೆಯೂ ಲಭಿಸುತ್ತದೆ. ಎಲ್ಲರಿಗೂ ಆಪ್ಯಾಯಮಾನವಾದ
ಮನ್ನಣೆಯೂ ಸುತ್ತಮುತ್ತಲಿನ ಜನರಿಂದ ಸಿಗುತ್ತದೆ. ಬಾಳು ನಿರರ್ಥಕವಾಯಿತು
ಎನ್ನುವ ಮುಪ್ಪಿಗರ ಮನಸ್ಸಿನ ಬೇಸರವು ಮಾಯವಾಗಿ, ಬಾಳು ಸಾರ್ಥಕವಾಯಿತು;
ಬಂದು ಕೇಳಿದವರಿಗೆ ಅನುಭವದಿಂದ ಕಲಿತುದುದನ್ನು ಸರಳವಾಗಿ ಕಲಿಸುವುದು;
ಆ ಮೂಲಕ ಕಿರಿಯರ ಬಾಳನ್ನು ಹಸನಾಗಿಸುವುದು ಬಾಳಿಗೆ ಅರ್ಥ ಮೂಡಿಸುವ
ಹಿರಿಯ ಕೆಲಸ ಎನಿಸುತ್ತದೆ.
ಮುಪ್ಪು ಎಂದಾಗ ಜಾತಕದ ರೀತಿಯಾಗಿ ಲೆಕ್ಕಮಾಡಿದ ಅರವತ್ತು ವರ್ಷ
ವಯಸ್ಸು ಎಂದೇನೂ ಅಲ್ಲ, ಉಷ್ಣವಲಯದಲ್ಲಿ ಸರಾಸರಿ ಅರವತ್ತಕ್ಕೆ ಹಾಗಾಗುತ್ತದೆ.
ಆದರೆ ಎಷ್ಟೋ ಜನರು ಪಂಚಾಂಗದ ಪ್ರಕಾರ ನಲವತ್ತೇ ವಯಸ್ಸಾಗಿದ್ದರೂ
ಮುಪ್ಪಿಗರಂತೆ ಅರುಳು ಮರುಳು ಆಗಿರುತ್ತಾರೆ. ತದ್ವಿರುದ್ಧ ಕೆಲವು ಜನ ಎಪ್ಪತ್ತು,
ಎಂಭತ್ತು ವಯಸ್ಸಾಗಿದ್ದರೂ, ನಲವತ್ತರ ಮಾನಸಿಕ ಚಾಕಚಕ್ಯತೆಯನ್ನು
ಉಳಿಸಿಕೊಂಡಿರುತ್ತಾರೆ. ದೇಹವು ಅನುಸರಿಸುವ ಕಾಲಮಾನಕ್ಕೂ, ಮನಸ್ಸು
ನಡೆದುಕೊಳ್ಳುವ ಕಾಲಗತಿಗೂ, ಯಾವ ನೇರ ಸಂಬಂಧವೂ ಇರುವುದಿಲ್ಲ.
ಇರಬೇಕಾಗಿಯೂ ಇಲ್ಲ. ಮೂವತ್ತರ ಯುವಕ ಶೃಂಗಾರ ಶತಕವನ್ನು ದೂರ
ಎಸೆದು, ವೈರಾಗ್ಯ ಶತಕವನ್ನು ಜಪಿಸತೊಡಗಬಹುದು. ಎಪ್ಪತ್ತರ ಮುದುಕ ಬಿಳಿ<noinclude></noinclude>
r7obpeu2af0cs6sqndk83soaln7u8yk
ಪುಟ:ಮನಮಂಥನ.pdf/೧೧೮
104
62565
316591
315680
2026-05-03T17:54:01Z
Pragathi. BH
7585
316591
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಆತಂಕ|right=೯೯}}
ಕೂದಲಿಗೆ ಕರೀ ಬಣ್ಣವನ್ನು ಹಚ್ಚಿಕೊಂಡು, ಯುವಕನಂತೆ ಶೃಂಗಾರ ಮಾಡಿಕೊಂಡು,
ಮದನಮಸ್ತಿ ಲೇಹವನ್ನು ತಿನ್ನುತ್ತಾ ವಾಲಾಡಬಹುದು.
ಮುಪ್ಪಿಗರಿಗೆ ಆತಂಕವು ಸ್ವಾಭಾವಿಕವಾದುದು; ಅರುಳು ಮರುಳು
ಸಹಜವಾದುದು ಎಂದಾಗ, ಪಂಚಾಂಗದ ವಯಸ್ಸಿನ ಲೆಕ್ಕದಿಂದಲ್ಲ. ವೈಯಕ್ತಿಕವಾದ
ದೇಹದ ವಯಸ್ಸು ; ಹಾಗೂ ಮಾನಸಿಕ ವಯಸ್ಸು ಇವನ್ನು ಗಮನಿಸಬೇಕು.
ಮುದುಕಿಯರನ್ನು ಆತಂಕವು ಕಾಡುವಾಗ, ವಿಚಿತ್ರ ನಡತೆಗಳು ಕಾಣಬರುತ್ತವೆ.
ಸಾಕಷ್ಟು ಬೇಸರ, ಮತ್ತು ದುಃಖವನ್ನು ಸಂಸಾರದಲ್ಲಿ ಇತರರಿಗೆ ಉಂಟು
ಮಾಡುತ್ತದೆ.
'ನಮಸ್ಕಾರ ಮಾಡೇ, ಡಾಕ್ಟರಿಗೆ' ಎಂದಳು ಹಿರಿಯ ಮುತ್ತೈದೆ. ಧ್ವನಿಯು
ಮೆದುವಾಗಿದ್ದರೂ ಸಿಡುಕಿನ ಛಾಯೆಯಿತ್ತು. ಇಪ್ಪತ್ತಮೂರು ಇಪ್ಪತ್ತನಾಲ್ಕರ
ಪದವೀಧರೆ ಹೆಣ್ಣು ತಲೆ ತಗ್ಗಿಸಿಕೊಂಡು ಡಾಕ್ಟರ ಪಾದಗಳತ್ತ ಕೈ ಚಾಚಿ
ನಮಸ್ಕರಿಸಿದಳು. 'ನನ್ನ ಸೊಸೆ, ಡಾಕ್ಟರೇ ! ಯೆಂಟನ ಹೆಂಡತಿ' ಎಂದು
ಡಾಕ್ಟರಿಗೆ ಪರಿಚಯವನ್ನು ಮಾಡಿಸಿದಳು. ಮುತ್ತೈದೆ. 'ಹೌದೇನೇ, ತಾಯಿ,
ನಮ್ಮ ಮನೆಗೆ ಭಾಗ್ಯಲಕ್ಷ್ಮಿಯಾಗಿ ಬಂದೆಯಮ್ಮ ತುಂಬಾ ಸಂತೋಷವಾಯಿತಮ್ಮ
ನಿನ್ನ ನೋಡಿ; ಮುತ್ತೈದೆ ಸಾವಿತ್ರಿಯಾಗಿ, ಒಂದೆರಡು ಮಕ್ಕಳ ತಾಯಾಗಿ
ಬಹುಕಾಲ ಹಿತವಾಗಿ ಬಾಳಮ್ಮ' ಎಂದು ಡಾಕ್ಟರು ಆದರದಿಂದ ಆಶೀರ್ವದಿಸಿದರು.
ಸೊಸೆಯ ಮುಖದಲ್ಲಿ ಸಂತಸದ ಬೆಳದಿಂಗಳು ಹರಡಿತು. ಅತ್ತೆಗೂ ಇದು
ಕಾಣಿಸಿತು.
'ಯಾರು ಯಾರೋ ಹೇಳಿದರು ಅಂತ ಈ ಹೆಣ್ಣನ್ನು ತಂದುಕೊಂಡೆ,
ಡಾಕ್ಟರೇ ! ಆದರೆ ಈಗ ಅನುಮಾನ ಬರುತ್ತಾ ಇದೆ. ನಮ್ಮ ಯೆಂಟುವಿಗೆ
ಅನ್ಯಾಯ ಮಾಡಿದೆನೇನೋ ಅಂತ. ಇವಳ ಹೆಗ್ಗತ್ತಿನಮೇಲೆ ಬಿಳಿ ಮಚ್ಚೆ ಇದ್ದ
ಹಾಗಿದೆ ; ಸ್ವಲ್ಪ ಪರೀಕ್ಷೆಮಾಡಿ ನೋಡಿ,' ಎಂದಳು ಅತ್ತೆಮ್ಮ
'ಚೆನ್ನಾಗಿ ಪರೀಕ್ಷೆ ಮಾಡಿನೋಡಿ, ಡಾಕ್ಟರೇ, ಈ ಮನೆಗೆ ಕಾಲಿಟ್ಟ ಮೂರು
ತಿಂಗಳುಗಳಿಂದ ಇದೇ ಮಾತನ್ನು ಅತ್ತೆಮ್ಮ, ಕಂಡವರೆದುರಿಗೆಲ್ಲಾ ದಿನಕ್ಕೆ ಎಂಟು
ಹತ್ತು ಬಾರಿಯಾದರೂ ಲೊಟಕುತ್ತಲೇ ಇದ್ದಾರೆ. ಕಂಡ ಹೆಂಗಸರಿಗೆಲ್ಲಾ ಕತ್ತು
ಬಗ್ಗಿಸಿ ತೋರಿಸಿ, ತೋರಿಸಿ, ನನಗೂ ತಲೆ ಚಿಟ್ಟು ಹಿಡಿದು ಹೋಗಿದೆ. ನೀವು
ನೋಡಿ ಹೇಳಿದ ಮೇಲಾದರೂ ತೆಪ್ಪಗಿರುತ್ತಾರೇನೋ ಎಂಬ ಆಸೆ. ಮದುವೆಗೆ
ಮುಂಚೆಯೇ ಬೇಕಾದ ಪರೀಕ್ಷೆಗಳನ್ನೆಲ್ಲಾ ಮಾಡಿಸಿ, ಮಾಡಿಕೋಬಾರದಾಗಿತ್ತೆ?
ಈಗ ಯಾಕೆ ಹೀಗೆ ಮುಕ್ಕಬೇಕು, ನನ್ನ' ಎಂದು ಸೊಸೆಯೂ ಸಿಡುಕಿನಿಂದಲೇ
ನುಡಿದಳು.<noinclude></noinclude>
7itpn1ui3hkkx8x7qn4sdj4h21uz8an
ಪುಟ:ಮನಮಂಥನ.pdf/೧೩೮
104
62585
316493
315718
2026-05-03T13:41:32Z
Shreesha Sharma
7840
/* Validated */
316493
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಪ್ಯಾರನಾಯ್ಡ್ ಅವಸ್ಥೆಗಳು}}{{Right|೧೧೯}}
ಅರವತ್ತರ ಸುಮಾರಿಗೆ ಅರುಳು ಮರುಳು ಬಡಿಯಬಹುದು. ೮೦ ರ ಮುದುಕನಿಗೆ
ಮನಸ್ಸು ಚುರುಕಾಗಿಯೇ ಇರಬಹುದು. ಅಲ್ಲದೆ ದೇಹದ ವಿವಿಧ ಭಾಗಗಳೂ
ಬೇರೆ ಬೇರೆ ಪ್ರಮಾಣದಲ್ಲಿ ಮುಪ್ಪಾಗುತ್ತವೆ. ಮೆದುಳಿನ ವಿವಿಧ ಭಾಗಗಳು
ಕೂಡ ಬೇರೆ ಬೇರೆ ಪ್ರಮಾಣದಲ್ಲಿ ಮುಪ್ಪಾಗುತ್ತವೆ.
ಯೋಚನೆಗೆ ಮೀಸಲಾದ, ಸ್ಮರಣೆಗೆ ಸಂಬಂಧಪಟ್ಟ, ಮೆದುಳಿನ ಭಾಗಗಳು
ಪುಟ್ಟಣ್ಣನಲ್ಲಿ ಮುಪ್ಪಿನಿಂದ ತುಂಬಾ ಶಿಥಿಲವಾಗಿದ್ದುವು. ಹೀಗೆ ಶಿಥಿಲವಾಗಲು
ರಕ್ತದ ಒತ್ತಡವು ಮೆದುಳಿನಲ್ಲಿ ಅತಿಯಾಗಿ, ರಕ್ತನಾಳಗಳು ಸೆಳೆದುಕೊಂಡು, ರಕ್ತ
ಸಂಚಾರಕ್ಕೆ ಅಡಚಣೆಯಾಗುವುದು ಒಂದು ಕಾರಣ. ಮೆದುಳಿಗೆ ತಾಕುವ ಇತರ
ಕಾಯಿಲೆಗಳೂ ಕಾರಣಗಳಾಗಬಹುದು. ಮೆದುಳಿನಲ್ಲಿ ಬೆಳೆಯುವ ಕೆಲವು
ಗಡ್ಡೆಗಳೂ, ಮೊದಮೊದಲ ಹಂತದಲ್ಲಿ ಈ ತೆರನ ನಡವಳಿಕೆಗೆ ಕಾರಣವಾಗ
ಬಹುದು.
ಪುಟ್ಟಣ್ಣನ ಮೆದುಳಿನಲ್ಲಿ ಸಾಮಾನ್ಯವಾದ ಮುಪ್ಪಿನಿಂದಾದ ಶಿಥಿಲತೆಯು
ಉಂಟಾಗಿತ್ತು. ಆಗ ಮಹಾ ಭ್ರಮೆಯೊಂದು, ಸಂಶಯದ ಪಿಶಾಚಿಯಾಗಿ ಅವತರಿಸಿ
ಕಾಡತೊಡಗಿತ್ತು. ಹೊಟ್ಟೆಗೆ ಸಾಕಷ್ಟು ಇರದ ಶ್ಯಾನುಭೋಗನು ಮೂವತ್ತು ಲಕ್ಷ
ರೂಪಾಯಿಗಳನ್ನು ಲಂಚವಾಗಿ ಕೊಟ್ಟ ಎನ್ನುವುದನ್ನೂ ನಂಬುವಷ್ಟು ಮೆದುಳಿನ
ಒಂದು ಭಾಗವು ಶಿಥಿಲವಾಗಿತ್ತು. ಆದುದರಿಂದ ವಿವೇಚನಾ ಶಕ್ತಿಯು ಸಾಕಷ್ಟು
ನಾಶವಾಗಿತ್ತು.
ಪುಟ್ಟಣ್ಣನ ಸಂಶಯ ಪಿಶಾಚಿಯು ಒಂದು ಭ್ರಮೆಯೇ ! ಬ್ರಹ್ಮಯ್ಯನ
ನಕ್ಷತ್ರಿಕನೂ, ಕಲ್ಲಪ್ಪನ ಕರ್ಣಪಿಶಾಚಿಗಳೂ, ಯಾವ ರೀತಿಯಲ್ಲಿ ನರಳಿಸಿದವೋ
ಅದೇ ರೀತಿಯಲ್ಲಿ ಪುಟ್ಟಣ್ಣನ ಸಂಶಯ ಪಿಶಾಚಿಯೂ ಕಾಡುತ್ತಿತ್ತು. ಆದರೆ
ಮೊದಲೆರಡರಲ್ಲಿ ಮಾನಸಿಕ ಅವ್ಯವಸ್ಥೆಯಿಂದ ಹಾಗಾಗಿತ್ತು. ಪುಟ್ಟಣ್ಣನಲ್ಲಿ ಮೆದುಳಿನ
ಶಿಥಿಲತೆಯಿಂದ ಆಗಿತ್ತು. ಒಂದೇ ತೆರನ ಅಂತಿಮ ಪರಿಣಾಮವು ವಿಭಿನ್ನವಾದ,
ವಿಧವಿಧವಾದ ಕಾರಣಗಳಿಂದ ಉಂಟಾಗುವುದು ಸಾಮಾನ್ಯ.
'''ಪ್ಯಾರನಾಯ್ಡ್ ಭ್ರಮೆಗಳು'''
ಪ್ಯಾರನಾಯ್ಡ್ ಅವಸ್ಥೆಯನ್ನು ಅನುಭವಿಸುತ್ತಿರುವವರಿಗೆ, 'ಇದು ಕೇವಲ
ಭ್ರಮೆಯಯ್ಯಾ ! ವಾಸ್ತವಿಕವಾಗಿ ಸುಳ್ಳು' ಎಂದು ಹೇಳಿದ ಮಾತ್ರಕ್ಕೆ ಅವರ
ನರಳುವಿಕೆಯು ತಪ್ಪುವುದಿಲ್ಲ. ಭ್ರಮೆಗಳು ಹೇಗೆ ಹುಟ್ಟಿದುವು, ಯಾಕೆ ಹುಟ್ಟಿದುವು,
ಎಂಬುದನ್ನು ತಿಳಿದುಕೊಂಡರೆ ನಂತರ ಅವುಗಳ ಉಚ್ಚಾಟನೆಯನ್ನು ಮಾಡಲು<noinclude></noinclude>
iiql4hgghgd9t1vqdc1bpiqm4rss8e1
ಪುಟ:ಮನಮಂಥನ.pdf/೧೩೯
104
62586
316494
315719
2026-05-03T13:41:59Z
Shreesha Sharma
7840
/* Validated */
316494
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೨೦}}{{Right|ಮನಮಂಥನ}}
ಸಾಧ್ಯವಾಗಬಹುದು. ಇಂದಿನ ವೈಜ್ಞಾನಿಕ ಹಂತದಲ್ಲಿ, ಕಾರಣಗಳು
ಸ್ಪಷ್ಟವಾಗಿಲ್ಲವಾದರೂ, ಹೀಗಿರಬಹುದು ಎಂದು ಊಹಿಸಲು ಸಾಕಷ್ಟು ಸಾಕ್ಷ್ಯಗಳಿವೆ.
ಆದಿಮಾನವನು ಯೋಚನೆಯನ್ನು ಮಾಡಲು ಆರಂಭಿಸಿದಾಗ
ಊಹಿಸುವುದನ್ನೂ ಪ್ರಾರಂಭಿಸಿದ. ತಾನು ಕಂಡುದೊಂದು ವಿಷಯವನ್ನು
ವಿಶ್ಲೇಷಿಸಿ, ಈ ಕಾರಣಗಳಿಂದ ಆಗಿರಬಹುದು ಎಂದು ತೀರ್ಮಾನಿಸುವುದು
ಒಂದು ಊಹೆಯೇ ! ಊಹಿಸಿದುದು ಸರಿ ಎನ್ನುವುದನ್ನು ಪ್ರಯೋಗಗಳನ್ನು
ನಡೆಸಿ ಖಚಿತಮಾಡಬೇಕು. ಇದೇ ವಿಜ್ಞಾನದ ಸಾಮಾನ್ಯ ಕಾರ್ಯಕ್ರಮ. ಅನಂತರ
ಮೊದಲಿನ ಊಹೆಯು ಸಿದ್ಧಾಂತವೆನಿಸಿಕೊಳ್ಳುತ್ತದೆ. ಪ್ರಗತಿಯನ್ನು ಮನಸ್ಸು
ಸಾಧಿಸಿದಂತೆಲ್ಲ, ವೈಜ್ಞಾನಿಕ ಪ್ರಯೋಗಗಳು ಸೂಕ್ಷ್ಮವೂ ಮಹತ್ತರವೂ ಆಗುತ್ತವೆ.
ಆನಂತರ ಊಹಿಸುವ ಪ್ರವೃತ್ತಿಯೂ ಹರಿತವಾಗುತ್ತದೆ. ಅದಕ್ಕೆ ಅವಕಾಶವೂ
ವಿಫುಲವಾಗುತ್ತದೆ. ಈ ಎಲ್ಲ ಹಂತಗಳಲ್ಲಿಯೂ ಏಕಸೂತ್ತವಾಗಿರುವುದು,
ಸ್ಫೂರ್ತಿಯ ಊಹೆ, ಅನುಮಾನಿಸುವುದು.
ಇದೇ ಮಾನವ ವರ್ಗದ, ಸಂಘ ಜೀವನದ ನಾಗರಿಕತೆಯನ್ನು,
ನಾಂದಿಯನ್ನು, ನಮ್ಮದೇಶದಲ್ಲಿನ ವೇದಗಳ ಕಾಲದ ಋಷಿಗಳು ನುಡಿದರು
ಎಂದನ್ನಬಹುದು. ಸಕಾಲದಲ್ಲಿ ಮಳೆಯು ಬಿದ್ದರೆ ಸಾಕಷ್ಟು ಬೆಳೆಯು ಲಭಿಸುವುದು
ಎಂಬುದನ್ನು ಪ್ರತ್ಯಕ್ಷವಾಗಿ ಕಂಡರು. ಹೆಪ್ಪುಗೂಡಿದಂತಿದ್ದ ಕಾರ್ಮೋಡಗಳು
ನೈರುತ್ಯದಲ್ಲಿ ಕಾಣಿಸಿದರೆ, ಖಂಡಿತವಾಗಿ ಮಳೆ ಬೀಳುತ್ತದೆ ಎಂಬುದನ್ನು
ಅನುಭವದಿಂದ ಅರಿತಿದ್ದರು. ಅಂದಿನ ಸನಾತನ ಸಮಾಜದಲ್ಲಿ ಕಂಡ ವಿಷಯವನ್ನು
ವಿಚಾರದ ಒರೆಗೆ ಹಚ್ಚುವ ಪ್ರವೃತ್ತಿಯು ಕೆಲವು ಮನನಿಗರಿಗೆ ಮಾತ್ರ ಮೀಸಲಾಗಿತ್ತು.
ಅವರೇ ಋಷಿಗಳು. ಇಂದೂ ಹಾಗೆಯೇ ಅನ್ನಿ, ಮನನಿಗ ಅಲ್ಪಸಂಖ್ಯಾತರಿಂದಲೇ
ಮಾನವ ಕುಲದ ಪ್ರಗತಿಯ ನಾಂದಿಯು ಹಾಡಲ್ಪಡುವುದು.
ತಾವು ಕಂಡುದನ್ನು ವಿಚಾರಮಾಡಿ, ಹೀಗಾಗಿರಬಹುದು ಎಂದು
ಅನುಮಾನಿಸಿದರು. ಸಮಾಜದ ಸಾಮಾನ್ಯರಿಗೆ, ವಿಚಾರಮಾಡುವ ಯೋಗ್ಯತೆ
ಇಲ್ಲದವರಿಗೆ, ಈ ವಿಷಯವನ್ನು ತಿಳಿಸುವ ಬಗೆ ಎಂತು? ಕತೆ ಎಂದರೆ
ಸಾಮಾನ್ಯರಿಗೆ ಬಲು ಪ್ರಿಯ, ಕತೆಯ ಪ್ರಕಾರವನ್ನು ಋಷಿಗಳು ಬಳಸಿಕೊಂಡರು.
ಕತೆ ಹೇಳಿದರು.
ಕತೆಯ ಹರವನ್ನೂ, ಅದರ ಹಿಂದೆ ಅಡಗಿರುವ ಅನುಭವಾಂಶಗಳ
ಸತ್ಯತೆಯನ್ನೂ ಇಂದು ಸುಲಭವಾಗಿ ಗುರುತಿಸಬಹುದು. ಆದರೆ ಇಂದು ಕೂಡ
ವೈಜ್ಞಾನಿಕರು ನಕ್ಷತ್ರಗಳ ವಿಷಯದಲ್ಲಾಗಲೀ ನಭೋಮಂಡಲದಲ್ಲಿರುವ ಇತರ<noinclude></noinclude>
8016yxfhx6i2oh35xta0mcuqdo2vigb
ಪುಟ:ಮನಮಂಥನ.pdf/೧೪೦
104
62587
316495
315720
2026-05-03T13:42:46Z
Shreesha Sharma
7840
/* Validated */
316495
proofread-page
text/x-wiki
<noinclude><pagequality level="4" user="Shreesha Sharma" /></noinclude>{{Right|೧೨೧}}{{Left|ಪ್ಯಾರನಾಯ್ಡ್ ಅವಸ್ಥೆಗಳು}}
ಶಕ್ತಿ ಸಮೂಹಗಳನ್ನಾಗಲೀ ನಿಖರವಾಗಿ ಅರಿತಿಲ್ಲ. ದೊರೆತ ಹಲ ಕೆಲವು
ಸಾಕ್ಷ್ಯಗಳಿಂದ ಅವುಗಳ ಸ್ವರೂಪವು ಹೀಗೆ ಹೀಗೆ ಇರಬಹುದು ಎಂದು
ಊಹಿಸುತ್ತಾರೆ. ಹೀಗೂ ಇರಬಹುದೋ ಎಂದು ಅನುಮಾನಿಸುತ್ತಾರೆ.
ಪೂರ್ಣವಾಗಿ ನಿರ್ಧಾರವಾಗುವನಕ, ವೈಜ್ಞಾನಿಕನು ತಾನು ಅನುಮಾನಿಸಿದುದರ
ಬೆಂಬೊತ್ತುತ್ತಲೇ ಇರುತ್ತಾನೆ. ಆದಕಾರಣ, ಪ್ರತ್ಯಕ್ಷ ಪ್ರಮಾಣದಂತೆ ಅನುಮಾನ
ಪ್ರಮಾಣವನ್ನೂ, ಅರಿವಿಗೆ ಆಧಾರ ಎಂದು ಹಿರಿಯ ಮನನಿಗರು ಅಂದಿರುವುದು.
ಅಂದರೆ, ಊಹಿಸುವ, ಅನುಮಾನಿಸುವ ಪ್ರವೃತ್ತಿಯು ಮಾನವ
ಸಹಜವಾದುದು ; ಅಗತ್ಯವೂ ಆದುದು ಎಂದಂತಾಯಿತು. ಊಹಿಸುವ ಪ್ರವೃತ್ತಿಯು
ವಿಜ್ಞಾನದಲ್ಲಿ ಅಗತ್ಯವಾದಂತೆ, ಮಾನವನ ನಡವಳಿಕೆಯಲ್ಲಿಯೂ ಕಂಡುಬರುತ್ತದೆ.
ಉದಾಹರಣೆಗೆ :-
ಯಾವುದಾದರೂ ಒಂದು ಸಭೆಗೆ ಸ್ವಲ್ಪ ತಡವಾಗಿ ಹೋದರೆ, ಎಲ್ಲರೂ
ನನ್ನನ್ನೇ ನೋಡುತ್ತಾರೆ' ಎಂಬ ಅನುಮಾನವು ಬಹಳ ಜನರಲ್ಲಿ ಉಂಟಾಗುತ್ತದೆ.
ಮೂಲೆಯಲ್ಲಿ ಹೋಗಿ ಮರೆಯಾಗಿ ಕೂರಲೆತ್ನಿಸುತ್ತಾರೆ. ಇನ್ನು ಕೆಲವರಲ್ಲಿ
ಇಂತಹ ಅನುಮಾನವು ಅವರಿಗೆ ಸುಖ ಕೊಡುತ್ತದೆ. ನಾನು ದೊಡ್ಡ ಮನುಷ್ಯ,
ಗಣ್ಯ, ಆದ್ದರಿಂದ ಎಲ್ಲರೂ ಗೌರವದಿಂದ, ಅಸೂಯೆಯಿಂದ ನೋಡುತ್ತಾರೆ
ಎಂದು ಊಹಿಸುತ್ತಾರೆ. ಅಂತಹ ಪ್ರವೃತ್ತಿ ಇದ್ದವರು ಠೀಕಾಗಿ ನಡೆದು ಮುಂದಿನ
ಸಾಲುಗಳಲ್ಲಿ ಸ್ಥಾನವನ್ನು ಹಿಡಿಯಹೋಗುತ್ತಾರೆ.
ಹತ್ತೂ ಜನರು ಮಾತನಾಡುತ್ತಿರುವ ಮದುವೆಯ ಮಂಟಪಕ್ಕೆ ಹೋದಾಗ;
ಅವರೆಲ್ಲರೂ ಮಾತನಾಡುವುದನ್ನು ನಿಲ್ಲಿಸಿದರೆ, ನನ್ನ ವಿಷಯವನ್ನೇ
ಮಾತನಾಡುತ್ತಿದ್ದಿರಬೇಕು ; ಎಂದು ಊಹಿಸುವುದೂ ಸುಮಾರು ಜನರ ಲಕ್ಷಣ.
ವೇಳೆಯಾದುದರಿಂದ ಮುಖಕ್ಷೌರವನ್ನು ಎಂದಿನಂತೆ ಮಾಡಿಕೊಳ್ಳದೇ
ಕಾಲೇಜಿಗೆ ಹೋದ ಅಧ್ಯಾಪಕನು 'ವಿದ್ಯಾರ್ಥಿಗಳೆಲ್ಲರೂ ನನ್ನ ಮುಖವನ್ನು
ನೋಡಿ ಒಳಗೊಳಗೇ ನಗುತ್ತಾರೆ' ಎಂದಂದುಕೊಳ್ಳುವುದೂ ಸಾಮಾನ್ಯ.
ಇಂತಹ ಊಹೆಗಳೆಲ್ಲವೂ ಕ್ಷಣಿಕವಾದುವು. ಸ್ವಲ್ಪ ಸಮಯದಲ್ಲಿ
ಮಾಯವಾಗುತ್ತದೆ. ಹಾಗೂ ಊಹೆಯು ತಲೆದೋರಿದಾಗಲೂ, ಇದು ನನ್ನ
ಮನಸ್ಸಿನ ಭ್ರಮೆಯಾಗಿದೆ ಎನ್ನುವ ಅರಿವು ಇದ್ದೇ ಇರುತ್ತದೆ.
ಪ್ಯಾರನಾಯ್ಡ್ ರೋಗಿಗಳಲ್ಲಿ ಇಂತಹ ಊಹೆಗಳು ಕ್ಷಣಿಕವಾಗಿರದೆ
ಭದ್ರವಾಗಿ ಬೇರೂರಿ ಬೆಳೆಯುತ್ತವೆ. ದೃಢವಾದ ಇಂತಹ ಅನುಮಾನಗಳು, ತಕ್ಕ
ಪ್ರತಿಕ್ರಿಯೆಯನ್ನು ನಡೆಸುವಂತೆ ಮನಸ್ಸನ್ನು ಒತ್ತಾಯಪಡಿಸುತ್ತವೆ. ಪೋಲೀಸಿನವರು<noinclude></noinclude>
5ibov3ewj7355bv5dlwr1jqfi4ydcxu
ಪುಟ:ಮನಮಂಥನ.pdf/೧೪೧
104
62588
316496
315721
2026-05-03T13:43:21Z
Shreesha Sharma
7840
/* Validated */
316496
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೨೨}}{{Right|ಮನಮಂಥನ}}
ಕಿರುಕುಳವನ್ನು ಕೊಡುತ್ತಾರೆ ಎಂದು ಅರ್ಜಿಗಳನ್ನು ಪುಂಖಾನುಪುಂಖವಾಗಿ
ಬರೆಯುವಂತೆ ಮಾಡುತ್ತವೆ. ಬಾಗಿಲು ಕಿಟಕಿಗಳನ್ನು ಭದ್ರಮಾಡಿ, ಕಿಂಡಿಯಲ್ಲಿ
ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡುವಂತೆ ಮಾಡುತ್ತದೆ. ಅಸಾಮಾನ್ಯವಾದ ಇಂತಹ
ನಡವಳಿಕೆಯು ಕಾಣಬಂದಾಗ, ಪ್ಯಾರನಾಯ್ಡ್ ಅವಸ್ಥೆಯು ಬಂದಿದೆ ಎನ್ನುತ್ತಾರೆ.
ಮಾನವ ಸಹಜವಾದ ಊಹಾ ಪ್ರವೃತ್ತಿಯು, ಕಲ್ಲಪ್ಪನಲ್ಲಾಗಲೀ,
ಬ್ರಹ್ಮಯ್ಯನಲ್ಲಾಗಲೀ ರೋಗದ ಮಟ್ಟಕ್ಕೆ ಏಕೆ ಏರಿತು ?
ಇಂತಹವರ ಮನಸ್ಸಿನಲ್ಲಿ ಅಲ್ಲೋಲಕಲ್ಲೋಲವು ಆಗುತ್ತಿರುತ್ತದೆ. ಯಾಕೆ,
ಏನು ಎಂಬುದು ಅವರಿಗೆ ತಿಳಿದಿರುವುದಿಲ್ಲ ; ಇವೆಲ್ಲವೂ ಆಳಮನಸ್ಸಿನ ಬುಡವನ್ನೇ
ಅಳ್ಳಾಡಿಸುತ್ತವೆ, ತೋರಮನಸ್ಸಿಗೆ ಕಾರಣಗಳು ತಿಳಿಯುವುದಿಲ್ಲ. ವಿಚಾರವನ್ನು
ಮಾಡುವ, ಯೋಚನೆಯನ್ನು ಗೈಯುವ ಮೆದುಳಿನ ಭಾಗವು, The cortex
ಸಾಕಷ್ಟು ಆರೋಗ್ಯವಾಗಿಯೇ ಇರುತ್ತದೆ. ಆದುದರಿಂದ ಅವರುಗಳು, ಪ್ಯಾರನಾಯ್ಡ್
ಭ್ರಮೆಗೆ ತಕ್ಕಂತೆ ಕೆಲಸ ಮಾಡುವಾಗ, ಉದಾ : ಅರ್ಜಿಗಳನ್ನು ಗುಜರಾಯಿಸುವಾಗ,
ನಂಬುವಂತಹ ಕಾರಣಗಳನ್ನು ವೈನವಾಗಿತ್ತು, ಸಮಂಜಸವಾದ ಲಕ್ಷಣವಾದ
ಅರ್ಜಿಗಳನ್ನು ಬರೆಯುತ್ತಾರೆ. ಇಷ್ಟು ವಿಚಾರಪೂರಿತವಾಗಿ ಬರೆಯಬಲ್ಲವರಿಗೆ
ಮನಸ್ಸು ಅಚ್ಚುಕಟ್ಟಾಗಿರದೆ ಇರಲು ಸಾಧ್ಯವೇ ? ಎಂದು ಇವರನ್ನು ಕಂಡವರು
ಅಚ್ಚರಿಪಡಬೇಕಾಗುತ್ತದೆ.
ಆಳ ಮನಸ್ಸಿನ ತೀವ್ರ ಅಲ್ಲೋಲಕಲ್ಲೋಲದಿಂದಾಗಿ, ಮುಂದೆ ಇತರ
ಮಾನಸಿಕ ಬೇನೆಗಳೂ ಉಂಟಾಗಬಹುದು. ಪ್ಯಾರನಾಯ್ಡ್ ಪ್ರತಿಕ್ರಿಯೆಗಳು,
ಅಂತಹ ಬೇನೆಗಳಿಗೆ ಮುನ್ಸೂಚಿಯಾಗುತ್ತವೆ. ಪಟೇಲ್ ಪುಟ್ಟಣ್ಣನಲ್ಲಿ ಆದಂತೆ
ಮೆದುಳಿನ ಶಿಥಿಲತೆಯನ್ನೂ ಕಾಣಿಸಬಹುದು.
ಇಂತಹ ರೋಗಿಗಳು, ತಮ್ಮ ನರಳುವಿಕೆಯನ್ನು ಇತರರಿಗೆ ತಿಳಿಯದೆ
ಇರುವಂತೆ ಸಾಧಿಸುತ್ತಾರೆ. ಸ್ವಲ್ಪ ಕಾಲ, ವಿಚಾರ ಮಾಡುವ ಮನಸ್ಸು
ಅಣಿಯಾಗಿರುವುದರಿಂದ ಇದು ಸಾಧ್ಯ. ಆದರೆ ವಿಚಿತ್ರ ವರ್ತನೆಯು
ವಿಪರೀತವಾದಾಗ, ಮುಚ್ಚಿಡುವುದು ಅಸಾಧ್ಯ. ಹಾಗಾದಾಗ ಚಿಕಿತ್ಸೆಯೂ ಕಠಿಣ,
ಸಫಲವಾಗಲಾರದು. ಆದುದರಿಂದ ಅಂತಹವರನ್ನು, ಅವರ ಮನೆಯವರು,
ನಿಕಟ ಸಂಬಂಧವನ್ನು ಹೊಂದಿದ ಗೆಳೆಯರು, ವಿಚಿತ್ರ ವರ್ತನೆಯು
ವಿಪರೀತವಾಗತೊಡಗಿದ ಮೊದ ಮೊದಲ ಹಂತದಲ್ಲಿ ಗುರುತಿಸಿ ಸೂಕ್ತ
ಚಿಕಿತ್ಸೆಯನ್ನು ಮನಃಶಾಸ್ತ್ರಜ್ಞರಿಂದ, ಸಕಾಲದಲ್ಲಿ ಮಾಡಿಸಿದರೆ ಗುಣಪಡಿಸಲು
ಸಾಧ್ಯ.<noinclude></noinclude>
jf21oh5ogz3vbn6drft3ryaf8ue3qqj
ಪುಟ:ಮನಮಂಥನ.pdf/೧೪೨
104
62589
316497
315722
2026-05-03T13:44:20Z
Shreesha Sharma
7840
/* Validated */
316497
proofread-page
text/x-wiki
<noinclude><pagequality level="4" user="Shreesha Sharma" /></noinclude>
{{center|೩. ಹಿಸ್ಟಿರಿಯಾ ಪ್ರದರ್ಶನಗಳು}}
'''ಕನಕದಲ್ಲಿಯ ಗಂಟಲ ಬೇನೆ'''
*ಉಕು, ಉಕ್ರೂ, ಕ್ರೋ' ಎಂದು ನಿಮಿಷಕ್ಕೆ ಇಪ್ಪತ್ತು ಬಾರಿ ಕರ್ಕಶ
ಸದ್ದನ್ನು ಹೂಡುತ್ತಾ ಅತಿ ಪ್ರಯಾಸದಿಂದ ಉಸಿರನ್ನು ಎಳೆದು ಬಿಡುತ್ತಿದ್ದ
ರೋಗಿಯನ್ನು, ಇಬ್ಬರು ಹಿರಿಯ ಮುತ್ತೈದೆಯರು ಮತ್ತೊಬ್ಬ ಗಂಡಸು,
ಹಿಡಿದುಕೊಂಡು ನಡೆಸುತ್ತಾ, ಕರೆತಂದರು. ರೋಗಿಗೆ ಸುಮಾರು ಮೂವತ್ತರ
ಪ್ರಾಯ. ತಕ್ಕ ಮಟ್ಟಿಗೆ ಮಜಭೂತಾಗಿ ಬೆಳೆದ ರೋಗಿಯ ಮುಖದಲ್ಲಿ ಕಾತರದ
ಕಳೆಯಿತ್ತು.
ಈ ರೀತಿ ಉಸಿರು ಕಟ್ಟಿಕೊಂಡು, ಕರ್ಕಶ ಶಬ್ದ ಮಾಡುತ್ತಾ ಹೊರಬರ
ಬೇಕಾದರೆ, ಗಂಟಲಿನಲ್ಲಿ ಯಾವುದಾದರೂ ಅಡಚಣೆಯಿರಬೇಕು. ಒಳಕ್ಕೆ ಉಸಿರು
ಸುಲಭವಾಗಿ ಹೋಗಿ, ಹೊರಕ್ಕೆ ಬರುವಾಗ ಅಡಚಣೆಯಾದರೆ ಸಿರ್ ಗುರ್
ಅಂತ ಬೆಕ್ಕುಗಳು ಕಾದಾಡಿದ ಸದ್ದು ಕೇಳಿಸುತ್ತದೆ. ಉಬ್ಬಸ ರೋಗದಲ್ಲಿ
ಹೀಗಾಗುವುದು ಸಾಮಾನ್ಯ ಒಳಕ್ಕೆಳೆದುಕೊಳ್ಳಬೇಕಾದರೆ, ತೊಂದರೆಯಾದರೆ
ಆಗ ಡಿಫೀರಿಯಾ ಅಥವಾ ಬೇರೆ ಯಾವುದಾದರೂ ವಸ್ತುವು ಗಂಟಲಿನಲ್ಲಿ
ಅಥವಾ ಶ್ವಾಸಮಾರ್ಗಗಳಲ್ಲಿ ಸಿಕ್ಕಿಕೊಂಡು ಕಾಟ ಕೊಡುತ್ತಿದೆ, ಎಂದು
ನಿರ್ಧರಿಸಬೇಕು. ಇಂತಹ ಅವಸ್ಥೆಯು ತೀವ್ರ ಅಪಾಯಕಾರಿಯಾದುದು. ತುರ್ತಾಗಿ
ಪರೀಕ್ಷೆಮಾಡಿ ನೋಡಬೇಕು. ಆದುದರಿಂದ ರೋಗಿಯನ್ನು ತತ್ಕ್ಷಣ ಒಳಕ್ಕೆ
ಕರೆದುಕೊಂಡು ಹೋಗಿ ಗಂಟಲು ಮತ್ತು ಶ್ವಾಸನಾಳಗಳನ್ನು ಪರೀಕ್ಷೆ ಮಾಡಿದೆ.
ಯಾವ ಅಡಚಣೆಯೂ ಇರಲಿಲ್ಲ. ರೋಗಿಯ ಮುಖವನ್ನೂ, ಆಕೆಯ 'ಕ್ರೂ
ಉಕ್ರೂ ಕ್ರೋ' ಪ್ರದರ್ಶನವನ್ನು ನೋಡಿದಾಗಲೇ ಇದು ಹಿಸ್ಟೀರಿಯಾ ತರಹದ್ದು
ಎಂದು ತಿಳಿದಿತ್ತು. ಆದರೂ ವಿವರವಾಗಿ ಪರೀಕ್ಷೆಯನ್ನು ಮಾಡಿದರೆ, ರೋಗಿಯ
ಮನಸ್ಸಿಗೆ ತೃಪ್ತಿಯಾಗುತ್ತದೆ. ಹಾಗೂ ಆಕೆಯ ಜತೆ ಬಂದಿದ್ದವರಿಗೆ
ಸಮಾಧಾನವಾಗುತ್ತದೆ. ಆದುದರಿಂದಲೇ ಪರೀಕ್ಷೆಯನ್ನು ನಡೆಸಿದ್ದುದು. ಹೀಗೆ
ಪರೀಕ್ಷೆಯನ್ನು ಮಾಡುವುದು, ಚಿಕಿತ್ಸೆಯ ಒಂದು ಹಿರಿಯ ಅಂಶವು ಕೂಡ.
ಆಕೆಯ ಜತೆಯಲ್ಲಿ ಬಂದಿದ್ದ ಮುತ್ತೈದೆಯರು ತುಂಬ ಕಾತರರಾಗಿದ್ದರು.<noinclude></noinclude>
oew415w4qkalzo6edqlv573gbe0yuce
ಪುಟ:ಮನಮಂಥನ.pdf/೧೪೩
104
62590
316498
315723
2026-05-03T13:45:01Z
Shreesha Sharma
7840
/* Validated */
316498
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೨೪}}{{Right|ಮನಮಂಥನ}}
ಪರೀಕ್ಷೆಯಾದನಂತರ, 'ಏನೂ ಗಾಬರಿಯಿಲ್ಲವೇ, ಡಾಕ್ಟರೇ ! ಪ್ರಾಣಕ್ಕೇನೂ
ಅಪಾಯವಿಲ್ಲವೇ ?' ಎಂದು ಕೇಳಿದರು. 'ಅಂತಹುದೇನೂ ಇಲ್ಲಮ್ಮಾ ! ಜೀವಕ್ಕೆ
ಏನೂ ಅಪಾಯವಿಲ್ಲ' ಎಂದು ಭರವಸೆಯನ್ನು ಇತ್ತಾಗ ಅವರಿಗೂ
ಸಮಾಧಾನವಾದಂತೆ ಕಂಡಿತು. ಜೊತೆಯಲ್ಲಿ ಬಂದಿದ್ದ ಗಂಡಸು ಅಷ್ಟು
ಕಾತರನಾಗಿರದಿದ್ದರೂ, ತುಸು ಬೇಸರಪಟ್ಟವನಂತೆ ಕಾಣುತ್ತಿದ್ದ. ಆದುದರಿಂದ
ಅವನೇ ಈಕೆಯ ಗಂಡನಿರಬೇಕು ಎಂದುಕೊಂಡೆ. ಆಮೇಲೆ ಒಬ್ಬರೇ ಬನ್ನಿ
ನಿಮ್ಮ ಹತ್ತಿರ ಮಾತನಾಡಬೇಕು ಎಂದು ಗುಟ್ಟಾಗಿ ಅವನಿಗೆ ಹೇಳಿದೆ.
'ಉಕ್ಕೂ, ಕ್ಯೂ, ಕ್ರೋ,' ಹೀಗೆ ಬಿಕ್ಕುತ್ತಿದ್ದಾಕೆಯು ಮೂರು ಮಕ್ಕಳ ತಾಯಿ.
ಕನಕವಲ್ಲಿಯು ಇಂಟರ್ಮೀಡಿಯೇಟ್ ಪರೀಕ್ಷೆಯನ್ನು ಪಾಸು ಮಾಡಿದ್ದಳು.
ಆದರೆ ಹೈಸ್ಕೂಲಿನಲ್ಲಿದ್ದಾಗಲೇ ತಂದೆ ತಾಯಿಯರು ಹೇಳಿದಂತೆ ಕೇಳಿ
ಪುರೋಹಿತನ ಮಗನನ್ನು ಮದುವೆಯಾಗಿದ್ದಳು. ಓದುವುದಕ್ಕೆ ಇಷ್ಟವಿದ್ದರೆ ಓದಲಿ
ಎಂದು ಪುರೋಹಿತ ಗಂಡ ಒಪ್ಪಿಗೆಯನ್ನಿತ್ತಿದ್ದ. ಆದರೆ ಇಂಟರ್ ಮೀಡಿಯಟ್
ಪರೀಕ್ಷೆಗೆ ಕೂರುವ ಹೊತ್ತಿಗೆ, ಕನಕವಲ್ಲಿಯ ಮಾವನವರು ತೀರಿಕೊಂಡಿದ್ದರು.
ಅವರು ಬಿಟ್ಟು ಹೋದ ಆಸ್ತಿಯೆಲ್ಲಾ ದರ್ಭೆ ಸಮಿತ್ತು. ಬೇರೆ ಮಾರ್ಗವಿಲ್ಲದೆ
ಮಗ ತಂದೆಯ ಕಸುಬನ್ನು ಮುಂದುವರೆಸತೊಡಗಿದ. ಸಣ್ಣದೊಂದು
ಅಂಗಡಿಯನ್ನಿಟ್ಟುಕೊಂಡು ವ್ಯಾಪಾರವನ್ನು ಮಾಡಬೇಕು ಎಂದು ಮಗನ ಆಸೆ
ಇತ್ತು. ತಂದೆಯ ಮನಸ್ಸನ್ನು ಈ ರೀತಿ ಒಲಿಸಲು ಅವ ಪ್ರಯತ್ನಪಡುತ್ತಿದ್ದ.
ತಿಳಿದ ಸಾಹುಕಾರರಿಗೆ ಹೇಳಿ ಅಂಗಡಿಯನ್ನು ತೆರೆಯಲು ಸೌಕರ್ಯವನ್ನು
ಮಾಡಿಸಿಕೊಡುವುದಾಗಿ ತಂದೆ ಹೇಳಿದ್ದರು. ಆದರೆ ಕಾರ್ಯಗತ ಮಾಡುವ
ಮೊದಲೇ ಆತ ತೀರಿಕೊಂಡಿದ್ದರು. ಕನಕವಲ್ಲಿಯ ಗಂಡನಿಗೆ ದರ್ಭೆ ಸಮಿತ್ತುಗಳು
ಭದ್ರವಾದುವು. ದೊಡ್ಡ ಪಟ್ಟಣದಲ್ಲಿ ಪೌರೋಹಿತ್ಯದಿಂದ ಬಾಳುವುದು ಸ್ವಲ್ಪ
ಕಷ್ಟವೆ. ಹಾಗಾಗಿ ಮೂರು ಮಕ್ಕಳಾದ ಮೇಲೆ, ಕೆಲಸಕ್ಕೆ ಸೇರಿಕೊಂಡು ನಾನೂ
ಸಂಪಾದಿಸುತ್ತೇನೆ ಎಂದು ಕನಕವಲ್ಲಿಯು ಹೇಳಿದಾಗ ಗಂಡನೂ ಒಪ್ಪಿದ್ದ.
ಸಂಪಾದಿಸಲು ಶುರು ಮಾಡಿದ ಮೇಲೆ, ಕನಕವಲ್ಲಿಯ ಸಂಸಾರವು
ತುಸು ಹಗುರವಾಯಿತು. ಅದರ ಜೊತೆಗೆ ಸಮಾಜದಲ್ಲಿ ಇತರ ಹೆಣ್ಣುಗಳು
ಮಜವಾಗಿ ಬಾಳುವುದನ್ನು ಕಣ್ಣಾರೆ ಹತ್ತಿರದಿಂದ ಕಾಣುವಂತೆಯೂ ಆಯಿತು.
ಅವರಂತೆಯೇ ತಾನೂ ಸಂಪಾದಿಸುತ್ತಿದ್ದರೂ, ಲಕ್ಷಣವಾಗಿದ್ದರೂ, ಪೌರೋಹಿತ್ಯದ
ಗಡ್ಡದ ಗಂಡನೊಡನೆ ಸಂಪ್ರದಾಯಸ್ಥ ಬಾಳನ್ನು ನಡೆಸಬೇಕಾಯಿತಲ್ಲ ಎನ್ನುವ
ಕೊರಗೂ ಉಂಟಾಗಿತ್ತು. ಕೆಟ್ಟದೆನಿಸಿದರೂ ಕ್ರಾಂತಿಕಾರಿಯಾದ ತೀರ್ಮಾನವನ್ನು<noinclude></noinclude>
9s7jb10rkrlzn7ho773dwzed7lx8tc6
ಪುಟ:ಮನಮಂಥನ.pdf/೧೪೪
104
62591
316499
315724
2026-05-03T13:45:51Z
Shreesha Sharma
7840
/* Validated */
316499
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೨೫}}
ಕೈಗೊಂಡು ಹೊಸಬನೊಂದಿಗೆ ಹೊಸ ಬಾಳನ್ನು ಪ್ರಾರಂಭಿಸುವ ಎಂದರೆ
ಸೊಂಟಕ್ಕೆ ಕಟ್ಟುಬಿದ್ದ ಮೂರು ಮಕ್ಕಳು ! ಮನಸ್ಸಿನಲ್ಲಿ ಆಸೆಯು ಹೆಡೆಯಾಡಿಸಿದರೆ,
ಮಕ್ಕಳು ಹೆಡೆಯನ್ನು ಮರ್ದಿಸುತ್ತಿದ್ದುವು. ಹೀಗಾಗಿ ಮನಸ್ಸಿನಲ್ಲಿಯಾದರೂ
ಉಹಾ ಜೀವನವನ್ನು ಮಾಡಲಾರದೆ, ಆಕೆಯು ಯಾಂತ್ರಿಕವಾಗಿ ಸಂಸಾರವನ್ನು
ನಿರ್ವಹಿಸುತ್ತಿದ್ದಳು.
ಆಸೆ ನಿರಾಸೆಗಳನ್ನು ತೋರ ಮನಸ್ಸಿನಿಂದ ದೂಡದೆ ಇದ್ದರೆ ದಿನದಿನದ
ಕೆಲಸವನ್ನು ಆದಷ್ಟು ಅಣಿಯಾಗಿ ಮಾಡಲಾಗುವುದಿಲ್ಲ. ಆದಕಾರಣ ಪ್ರಕೃತಿಯು
ಮನಸ್ಸಿಗೆ ಒಂದು ಉಪಾಯವನ್ನು ಕಲಿಸಿದೆ ; ಆಸೆ ನಿರಾಸೆ ಇತ್ಯಾದಿಗಳನ್ನು
ತೋರಮನಸ್ಸಿನಿಂದ ಆಳ ಮನಸ್ಸಿಗೆ ದೂಡಿಬಿಡುವುದೇ, ಈ ಉಪಾಯ.
ಕಸವನ್ನೆಲ್ಲಾ ಕಾಣುವ ಸ್ಥಳಗಳಿಂದ ಗುಡಿಸಿ, ನಂತರ ಕಾಣಿಸದೆ ಇರುವಂತಹ,
ಜಮಖಾನದ ಕೆಳಕ್ಕೆ ದೂಡಿಬಿಡುವುದಿಲ್ಲವೇ, ಹಾಗೆಯೇ. ಅಪ್ರಿಯವಾದುದನ್ನೂ
ಸಾಧಿಸಲಾಗದ ಆಸೆ ಆಕಾಂಕ್ಷೆಗಳನ್ನೂ ತೋರ ಮನಸ್ಸಿನಿಂದ, ಆಳ ಮನಸ್ಸಿನ
ಹಗೇವುಗಳಿಗೆ ಸಾಗಿಸಿ ಬಿಡುವುದು, ಮನಸ್ಸಿನ ಅಗತ್ಯವಾದ ಒಂದು ಕೆಲಸ.
ಆಳಮನಸ್ಸಿಗೆ ದೂಡಲ್ಪಟ್ಟ ಆಸೆ ಅಪ್ರಿಯಗಳು, ಹಗೇವುಗಳಲ್ಲಿ ಸ್ತಬ್ಧವಾಗಿದ್ದರೆ
ಬಲು ಚೆನ್ನು, ಬಹಳ ಪಾಲು ಹಾಗೆಯೇ ಇರುತ್ತವೆ. ಆದರೆ ಕೆಲವು ವೇಳೆ
ಅವುಗಳು ಪ್ರಬಲವಾಗಿದ್ದುದಾದರೆ, ತೋರಮನಸ್ಸಿಗೆ ಬರಲು ಆಗದೆ
ಇರುವುದರಿಂದ ಇಚ್ಛಾಚಾಲಿತ ನರಗಳ ಮೂಲಕ ದೇಹದ ಯಾವುದಾದರೂ
ಒಂದು ಅಂಗಕ್ಕೆ ವಕ್ಷಿಸುತ್ತದೆ, ಶನಿಯಂತೆ. ಕನಕವಲ್ಲಿಯಲ್ಲಿ ಗಂಟಲಿಗೆ ಹೀಗೆ
ಆಳ ಮನಸ್ಸಿನ ಶನಿಗಳು ವಕ್ರಿಸಿದುವು. 'ಉಕೂ, ಕೂ, ಕೋ' ಮಾಡಲಾರಂಭಿಸಿದಳು
ಕನಕವಲ್ಲಿ. ಆಳ ಮನಸ್ಸಿನ ಆಟಾಟೋಪವೇ ಇವುಗಳೆಲ್ಲಾ, ತೋರಮನಸ್ಸು ಈ
ವ್ಯವಹಾರದಲ್ಲಿ ಯಾವ ಪಾತ್ರವನ್ನೂ ವಹಿಸುವುದಿಲ್ಲ. ಅಂದರೆ ಹೀಗೇಕೆ ಆಗುತ್ತಿದೆ
ಎನ್ನುವುದು ಕನಕವಲ್ಲಿಗೆ ತಿಳಿಯುವುದೇ ಇಲ್ಲ. ವಕ್ರವಕ್ರವಾಗಿ ಹೀಗೆ ಆಡಿದರೆ,
ಕಂಡ ಜನ ನಗುತ್ತಾರೆ ಎನ್ನುವ ಶಂಕೆಯೂ ಇರುವುದಿಲ್ಲ. ನಾಚಿಕೆಯೂ ಇರುವುದಿಲ್ಲ.
ಇಂತಹ ನಡವಳಿಕೆಯು ಅವಳಿಗೆ ಅನಿವಾರ್ಯವಾಗಿರುತ್ತದೆ. ಹೀಗಾಡುವುದರಿಂದ
ಆಳ ಮನಸ್ಸಿನಲ್ಲಿ ತುಸು ನೆಮ್ಮದಿಯೂ ಆಗುತ್ತದೆ.
ಹೀಗಾಡುವುದರಿಂದ, ಇವಳಿಗೆ ಯಾವುದೇ ಆಪತ್ತು ಬರಬಹುದು, ಎಂದು
ಸುತ್ತಲೂ ಇರುವ ನೆಂಟರು, ಇಷ್ಟರು, ಸ್ನೇಹಿತರು, ಕಾತರಗೊಳ್ಳುತ್ತಾರೆ. ಕನಕವಲ್ಲಿಗೆ
ಸಹಾನುಭೂತಿಯನ್ನು ತೋರುತ್ತಾರೆ. ಎಲ್ಲರ ಗಮನವೂ ನರಳುತ್ತಿರುವ
ಕನಕವಲ್ಲಿಯುತ್ತ ಹರಿಯುತ್ತದೆ. ಹೀಗಾದಾಗ ಕನಕವಲ್ಲಿಯ ಆಳ ಮನಸ್ಸಿನಲ್ಲಿ<noinclude></noinclude>
jg799hk3xczf4zh0z8tc0wb0q3gq1hf
ಪುಟ:ಮನಮಂಥನ.pdf/೧೪೫
104
62592
316500
315725
2026-05-03T13:46:47Z
Shreesha Sharma
7840
/* Validated */
316500
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೨೬}}{{Right|ಮನಮಂಥನ}}
'ನನ್ನನ್ನು ಕಂಡರೆ ಇವರಿಗೆಲ್ಲಾ ಮಮತೆ. ನನಗಾಗಿ ಇವರೆಲ್ಲರೂ ಆತಂಕ
ಪಡುತ್ತಾರೆ, ಎಲ್ಲರಿಗೂ ಬೇಕಾದವಳು ನಾನು' ಎನ್ನುವ ಅಹಂಕಾರವನ್ನು ಸಂತೋಷ
ಪಡಿಸುವ ಭಾವನೆಯು ಆಕೆಯಲ್ಲಿ ಉಂಟಾಗುತ್ತದೆ. ಅದರಿಂದ ಸಮಾಧಾನವೂ
ಆಗುತ್ತದೆ.
ಈ ಕಾರಣದಿಂದಾಗಿ ಈ ಬೇನೆಯ ಪ್ರದರ್ಶನವು ಅತಿ ಘೋರವಾಗಿ
ಕಂಡರೂ ಅತಿ ಕ್ರೂರವಾಗಿ ಇತರರಿಗೆ ಕಾಣಿಸಿದರೂ, ರೋಗಿಗೆ
ಉಪಾಯಕಾರಿಯಾಗುವುದಿಲ್ಲ. ಹಾಗೂ ಅತ್ಯಗತ್ಯವೂ ಆಗಿರುತ್ತದೆ. ಆದುದರಿಂದಲೇ
ಇಂತಹ ಬೇನೆಯು ಬಡ ಪೆಟ್ಟಿಗೆ ವಾಸಿಯಾಗುವುದಿಲ್ಲ. ಬೇನೆಯ ಕಾಟವು
ಹೆಚ್ಚು ಕಡಿಮೆಯಾದರೂ, ರೋಗಶೇಷವು ಬಲು ಕಾಲ ಉಳಿದಿರುತ್ತದೆ. ಆದರೆ
ಬಾಳು ನಡೆಸುವುದಕ್ಕೆ ಕಂಟಕವಾಗುವುದಿಲ್ಲ.
ಗಂಟಲ ಡಾಕ್ಟರ ಬಳಿಗೆ ಕನಕವಲ್ಲಿಯು ಹೋದಳು. ಹಿಸ್ಟಿರಿಯಾ
ಪ್ರದರ್ಶನವಿದು ಎಂದು ತಿಳಿದಾಯಿತು. ಆದರೆ ಅಹೋ ರಾತ್ರಿ 'ಉಕ್ಕೂ, ಕ್ರೂ
ಕೋ,' ಮಾಡುತ್ತ ಇದ್ದರೆ ; ಸುಸ್ತಾಗುವುದಿಲ್ಲವೇ? ಇದನ್ನು ಮನೆಯವರಾದರೂ
ತಡೆದುಕೊಳ್ಳುವುದು ಹೇಗೆ? ಉಪಶಮನವನ್ನಾದರೂ ಮಾಡಬೇಕು ; ಡಾಕ್ಟರು,
ರೋಗ ನಿರ್ಮೂಲನವನ್ನು ಸಾಧಿಸಲಾಗದಿದ್ದರೂನೂ.
ಆದಕಾರಣ ಡಾಕ್ಟರು ಅಂದರು :- 'ಗಂಟಲಿನ ಒಂದು ನರ ಕೆರಳಿದೆ.
ಅದರಿಂದ ಹೀಗೆ ಆಗುತ್ತದೆ. ಆ ನರವನ್ನು ಸುಡುತ್ತೇನೆ. ತತ್ಕ್ಷಣ, 'ಉಕ್ಕೂ
ನಿಲ್ಲುತ್ತದೆ. ನಿನ್ನ ಬೇನೆಯು ಜಟ್ಟಂತ ವಾಸಿಯಾಗುತ್ತದೆ' ಎಂದು ಒತ್ತಿ ಒತ್ತಿ
ಹೇಳಿದರು. ಕನಕವಲ್ಲಿಯ ಮನಸ್ಸಿನಲ್ಲಿ ವಾಸಿಯಾಗುತ್ತೆ : ತತ್ಕ್ಷಣ ವಾಸಿಯಾಗುತ್ತೆ,
ಎನ್ನುವ ನಂಬಿಕೆಯು ನಾಟಲಿ, ಎಂದು.
ಆನಂತರ ಕೆಂಪಗೆ ಭಯಂಕರವಾಗಿ ಕಾಣುತ್ತಿದ್ದ ಇಲೆಕ್ಟಿಕ್ ಗುಳವನ್ನು,
ಚೆನ್ನಾಗಿ ಕನಕವಲ್ಲಿಗೆ ಕಾಣಿಸುವಂತೆ, ಅಣಿ ಮಾಡಿಕೊಂಡು, ಗಂಟಲ
ಒಳಭಾಗವೊಂದಕ್ಕೆ ತಾಕಿಸಿದರು, ಡಾಕ್ಟರು.
ಸಾಮಾನ್ಯವಾಗಿ ಗಂಟಲು ಬಲು ಸೂಕ್ಷ್ಮ ಬೆರಳೂ ಮುಟ್ಟಿದರೂ
ವಾಂತಿಯಾಗುವ ಹಾಗಾಗುತ್ತದೆ. ವಾಕರಿಕೆಯು ಬರುತ್ತದೆ. ಆದರೆ ಕನಕವಲ್ಲಿಯು
ಕಿಮಕ್ ಕಮಕ್ ಅನ್ನಲಿಲ್ಲ, ಸಾಕಷ್ಟು ಸುಟ್ಟು ಬರೆ ಹಾಕಿದಂತಾದರೂ, ತೆಪ್ಪಗೇ
ಇದ್ದಳು.
ಹಿಸ್ಟಿರಿಯಾ ಪ್ರದರ್ಶನದಲ್ಲಿ ಅನಿಸ್ತಿಟಿಕ್ ಆಗುವುದು ಒಂದು ಸಾಮಾನ್ಯವಾದ<noinclude></noinclude>
21mcx5gnsqb07tvmozcxkth7i4mpf3s
ಪುಟ:ಮನಮಂಥನ.pdf/೧೪೬
104
62593
316501
315726
2026-05-03T13:47:54Z
Shreesha Sharma
7840
/* Validated */
316501
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೨೭}}
ಚಿಹ್ನೆ. ಆ ಭಾಗದಲ್ಲಿರುವ ನರಗಳು ರೋಂವು ಹಿಡಿದಂತೆಯೋ ಸತ್ತಂತೆಯೇ
ಆಗಿರುತ್ತದೆ. ಆದ್ದರಿಂದ ಚಿಟಿಕೆ ಹಾಕಲಿ, ಬರೆ ಹಾಕಲಿ, ಚುಚ್ಚಲಿ, ಕತ್ತರಿಸಲಿ,
ರೋಗಿಯು ತೆಪ್ಪಗಿರುತ್ತಾಳೆ. ಒಂದು ಹಂತದ ತನಕ ಹೀಗೆ ಇರುತ್ತದೆ. ನಂತರ
ಯಾತನೆಯು ಕಾಣಬರುತ್ತದೆ. ಆಗ ಕನಕವಲ್ಲಿಯು ಉರಿ ಉರಿ ಎಂದಳು.
ಚಿಕಿತ್ಸೆಯನ್ನು ನಿಲ್ಲಿಸಲಾಯಿತು. 'ಉಕ್ಕೂ ಕ್ರೂ, ಕ್ರೋ,' ಈ ಗಲಾಟೆಯಲ್ಲಿ
ನಿಂತು ಹೋಗಿತ್ತು. 'ಈಗ ಗುಣವಾದ ಹಾಗಿದೆ. ಉಸಿರು ಸರಾಗವಾಗಿ ಆಡುತ್ತಿದೆ.
ಆದರೆ ಗಂಟಲಿನಲ್ಲಿ ಸ್ವಲ್ಪ ರಣವಾದಂತಿದೆ' ಎಂದಳು ಕನಕವಲ್ಲಿ.
ತಿರುಗಿ 'ಉಕೂ, ಶೂ, ಕ್ರೋ' ಮರುಕಳಿಸಲಿಲ್ಲ.
ಆದರೆ ಮೂರನೆಯ ದಿನದಿಂದ, ತೋಳಿನ ನರ ಸೆಳೆಯುತ್ತದೆ,
ಎತ್ತಎತ್ತಲೋ ಎಳೆಯುತ್ತದೆ ಎಂದು ಕನಕವಲ್ಲಿಯು ನರಳಲಾರಂಭಿಸಿದಳು.
ಭುಜವನ್ನು ಕಂಡೂ ಕಾಣದ ಹಾಗೆ ಕುಣಿಸಲು ಆರಂಭಿಸಿದಳು. ಇದೂ
ಹಿಸ್ಟಿರಿಯಾದ ಇನ್ನೊಂದು ತರಹ ಪ್ರದರ್ಶನ !
ಆದರೆ ಈ ಪ್ರದರ್ಶನದಿಂದ ರೋಗಿಗೇನೂ ಸುಸ್ತು ಬಡಿಯುವುದಿಲ್ಲ.
ಮನೆಯವರಿಗೆ ಕಾಟವನ್ನು ಕೊಡುವುದಿಲ್ಲ. ಹಾಗೂ ದೊಡ್ಡದಾದ ಘೋರವಾದ
ಆ ಬೇನೆಯನ್ನು ವಾಸಿಮಾಡಿದ ವೈದ್ಯರು ಈ ಅಲ್ಪ ಬೇನೆಯನ್ನೂ ಸರಿಪಡಿಸುತ್ತಾರೆ
ಎನ್ನುವ ನಂಬಿಕೆಯೂ ಕನಕವಲ್ಲಿಯಲ್ಲಿ ಉಂಟಾಗಿತ್ತು. ಇಂತಹ ಬೇನೆಗಳಲ್ಲಿ
ವೈದ್ಯರಲ್ಲಿರುವ ಪೂರ್ಣ ನಂಬಿಕೆಯೇ ಗುಣಪಡಿಸುವ ಅಂಶಗಳಲ್ಲಿ
ಮುಖ್ಯವಾದುದೊಂದು.
ಹಿಸ್ಟಿರಿಯಾ ಪ್ರದರ್ಶನವು ಉಗ್ರವಾಗಿ ಕಂಡು ಬಂದವರಲ್ಲಿ, ನಿಶ್ಲೇಷವಾಗಿ,
ಬೇನೆಯು ನಿವಾರಣೆಯಾಗುತ್ತದೆ ಎಂದು ಹೇಳಬರುವುದಿಲ್ಲ. ಏಕೆಂದರೆ, ಅವರ
ಹುಟ್ಟು ಗುಣ; ಬಾಳಿನ ಪ್ರಸಂಗಗಳು; ಸಂಸಾರ ಮತ್ತು ಸಾಮಾಜಿಕ ಪರಿಸರ;
ಇವುಗಳನ್ನು ರೋಗಿಗೆ ಅನುಕೂಲವಾಗಿರುವಂತೆ ಮಾಡಲು ಅಸಾಧ್ಯ. ಆದರೆ
ಸಾಮಾನ್ಯ ಬಾಳು ನಡೆಸುವುದಕ್ಕೆ ಕಂಟಕವಾಗದಂತೆ ಘೋರ ಪ್ರದರ್ಶನವನ್ನು
ಸೌಮ್ಯ ಪ್ರದರ್ಶನವನ್ನಾಗಿ ರೂಪಾಂತರಿಸಬಹುದು. ರೋಗಿಯ ಮತ್ತು ಆಕೆಯ
ಮನೆಯವರ ದೃಷ್ಟಿಯಿಂದ, ಈ ಫಲಿತಾಂಶವು ಪರಿಣಾಮಕಾರಿಯಾದುದು.
ಕನಕವಲ್ಲಿಯು ಈಗಲೂ ಅಂದರೆ ಏಳೆಂಟು ವರ್ಷಗಳಾದ ಮೇಲೆ,
ಒಮ್ಮೊಮ್ಮೆ ಭುಜವನ್ನು ಕುಣಿಸುತ್ತಾಳೆ. ಒಮ್ಮೊಮ್ಮೆ ಮೊಣಕೈಯನ್ನು ಛಂಗಿಸುತ್ತಾಳೆ.
ಆದರೆ ಚಾಕರಿಗೆ ತಪ್ಪದೆ ಹೋಗುತ್ತಿದ್ದಾಳೆ. ಮಕ್ಕಳ ತಾಯಾಗಿ ಸಂಸಾರವನ್ನೂ
ಮಾಡಿಕೊಂಡಿದ್ದಾಳೆ. ಸಮಾಜದಲ್ಲೂ ಸರಸವಾಗಿರುತ್ತಾಳೆ. ಹೊರನೋಟಕ್ಕೆ<noinclude></noinclude>
1sdlmxnoyaiwxl6ki0ixt9rbzxvgbv3
ಪುಟ:ಮನಮಂಥನ.pdf/೧೪೭
104
62594
316502
315727
2026-05-03T13:48:53Z
Shreesha Sharma
7840
/* Validated */
316502
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೨೮}}{{Right|ಮನಮಂಥನ}}
ಈಕೆಗೆ ಹಿಸ್ಟಿರಿಯಾ ಚಿಹ್ನೆಗಳಿವೆ ಎಂದು ತಿಳಿಯುವುದೇ ಇಲ್ಲ.
ಆದರೆ ತಿಳಿದವರಿಗೆ ಅವಳ ಮುಖದಲ್ಲಿರುವ ಕಾತರವು ಆಗಿಂದಾಗ್ಗೆ
ಸ್ಪಷ್ಟವಾಗಿ ಕಾಣುತ್ತದೆ. ಹಿಸ್ಟಿರಿಯಾ ಪ್ರದರ್ಶನವು ಉಲ್ಬಣಗೊಳ್ಳದಂತೆ, ಆಗಿಂದಾಗ್ಗೆ,
ಆಕೆಗೆ ವೈದ್ಯರು ಭರವಸೆಯನ್ನು ಕೊಡುತ್ತಲಿರಬೇಕು. ಉಪಶಮನಕ್ಕೆಂದು ಆಕೆಯು
ವೈದ್ಯರ ಬಳಿಗೆ ಹೋದಾಗಲೆಲ್ಲ ಯಾವುದಾದರೂ ನಿರುಪದ್ರವಿಯಾದ ಔಷಧಿಯನ್ನು
ಪಡೆದು, ಅದರಿಂದ ಗುಣವನ್ನೂ ಕಾಣುತ್ತಾಳೆ.
'''ಮಾತು ನಿಂತ ಮುದ್ದುಗುವರಿ'''
ತುಂಬಾ ಪ್ರಯಾಸಪಡುತ್ತಾ ಇದ್ದಳು. ಎರಡು ಮಾತುಗಳನ್ನಾಡುವುದಕ್ಕೆ
ಆದರೂ ಆಕೆಯು ಆಡಿದ ಮಾತು ಇತರರಿಗೆ ಕೇಳಿಸುತ್ತಲೇ ಇರಲಿಲ್ಲ. ಪ್ರಯಾಸ
ಪಡುವುದು ಎಂದರೆ ಅಂತಿಂತಹ ಪ್ರಯಾಸವಲ್ಲ ! ತಲೆಯನ್ನು ಹಿಂದಕ್ಕೆ ಬಾಗಿಸಿ,
ಕತ್ತನ್ನು ಉದ್ದಮಾಡಿ, ಮುಖದ ಮಾಂಸಖಂಡಗಳನ್ನೆಲ್ಲ ಸೆಟೆಸುತ್ತಿದ್ದಳು ;
ಧ್ವನಿಯನ್ನು ಮೂಡಿಸುವುದಕ್ಕೆ ಮಾತುಗಳನ್ನು ಬಿಡಿಸುವುದಕ್ಕೆ, ಬಾಯಿಯನ್ನು
ನರಸಿಂಹ ದೇವರ ತರಹ ದೊಡ್ಡದಾಗಿ ಬಿರಿಸಿ, ಹಲ್ಲುಗಳೆಲ್ಲವೂ ಬಿರಿಬಿರಿ
ಕಾಣುವಂತೆ ಮಾಡಿಕೊಂಡು, ನಾಲಿಗೆಯನ್ನು ಚಾಚಿ ಹೊರಳಿಸುತ್ತಿದ್ದಳು. ಆದರೂ
ಮಾತು ಹೊರಡುತ್ತಲೇ ಇರಲಿಲ್ಲ. ನೋಡುವುದಕ್ಕೆ ಆಕೆಯ ಮುಖ
ಭಯಂಕರವಾಗಿತ್ತು.
'ನಿನ್ನ ಹೆಸರೇನಮ್ಮಾ ? ನೀನೇ ಹೇಳು ; ನಿಮ್ಮಮ್ಮ ಹೇಳುವುದು ಬೇಡ'
ಎಂದು ನಾನು ಕೇಳಿದಾಗ ಹೆಸರನ್ನು ಉಚ್ಚರಿಸಹೋದ ರೋಗಿಯು ಈ
ತೆರನ ಪ್ರದರ್ಶನವನ್ನು ನೀಡಿದಳು.
ಭರ್ಜರಿಯಾಗಿ ಬೆಳೆದ ಹೆಣ್ಣು ; ಸುಮಾರು ೨೦-೨೨ರ ಪ್ರಾಯ, ಸ್ವಲ್ಪ
ಕುಳ್ಳು ಹುಡುಗಿ, ತುಸು ಮಾಸಲು ಕಪ್ಪು ಬಣ್ಣ, ಅಮ್ಮನ ಎಡಗೈಯನ್ನು ತನ್ನೆರಡೂ
ಕೈಗಳಿಂದ ಭದ್ರವಾಗಿ ಹಿಡಿದುಕೊಂಡು, ಸೆಟೆದು ಕುಳಿತಿದ್ದಳು. ದುಂಡು ಮುಖದಲ್ಲಿ
ಕಾತರವು ಎದ್ದು ಕಾಣುತ್ತಿತ್ತು.
'ನನ್ನ ಮಗೂಗೆ ಗಂಟಲು ಸರಿಹೋಗುತ್ಯೇ ಡಾಕ್ಟರೇ ! ಐದು
ದಿನಗಳಾಯಿತು, ಅವಳ ಗಂಟಲು ಈ ರೀತಿ ಸೇದಿಕೊಂಡು, ಎಷ್ಟೋ ಕಷ್ಟಪಡ್ತಾಳೆ,
ಆದರೆ ಒಂದು ಮಾತನ್ನೂ ಆಡಲು ಸಾಧ್ಯವಾಗುಲ್ಲ. ಒಂದು ತುತ್ತು ನುಂಗುವುದಕ್ಕೆ
ತುಂಬಾ ಕಷ್ಟಪಡುತ್ತಾಳೆ. ಎರಡು ಗುಟುಕು ನೀರು ಕುಡಿದರೇನೆ, ಒಂದು ತುತ್ತು
ಒಳಕ್ಕೆ ಇಳಿಯುವುದು,' ಎಂದು ಹೇಳಿ ರೋಗಿಯ ತಾಯಿಯು ಗುಳುಗುಳು<noinclude></noinclude>
nspouhb474x9uqetavumgjyw3lhto4e
ಪುಟ:ಮನಮಂಥನ.pdf/೧೪೮
104
62595
316503
315728
2026-05-03T13:49:44Z
Shreesha Sharma
7840
/* Validated */
316503
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೨೯}}
ಅಂತ ಅಳುಕ್ಕೆ ಶುರು ಮಾಡಿದಳು. ತಾಯಿಯ ಕಡೆಗೆ ನೋಡುತ್ತಾ ಕೈ ಬಾಯಿ
ಸನ್ನೆ ಮಾಡಿದಳೇ ವಿನಹಾ ರೋಗಿಯು 'ಅಳಬೇಡ ಅಮ್ಮಾ' ಅನ್ನಲಿಲ್ಲ.
“ನಿನ್ನ ಹೆಸರು ಹೇಳುಕ್ಕೆ ಆಗುಲ್ಲವೇನೇ ಗುಂಡೂ ! ಎಷ್ಟು ಹೊತ್ತು
ಅಂತ ಡಾಕ್ಟರು ಕಾದಿರುವುದಕ್ಕೆ ಆಗುತ್ತೆ ? ನಿಂಗಾಗೋದನ್ನು ಬೇಗ ಹೇಳಿದರೆ,
ವಾಸಿ ಮಾಡುವುದಕ್ಕೆ ಆಗುತ್ತೆ. ಐದು ದಿನಗಳಿಂದ ನಮ್ಮ ಪ್ರಾಣಾ ತೆಗೀತಾ
ಇದೀಯಲ್ಲೇ ?' ಎಂದು ಗುಂಡಮ್ಮನ ತಂದೆ, ಕೋಪ ಮಿಶ್ರಿತ ಬೇಸರದ
ದನಿಯಲ್ಲಿ ಗುಡುಗಿದರು.
'ಆಗೋ ಹಾಗಿದ್ದರೆ, ಮರಿ ಮಾತಾಡ್ತಿರಲಿಲ್ಲವೇ ? ಅಲವತ್ತುಕೊಂಡರೆ,
ಪಾಪ, ಅದೇನು ಮಾಡುತ್ತೆ. ಅದೇ ಕಾಯಿಲೆ ಅದಕ್ಕೆ' ಎಂದು ತಾಯಿ ಗಂಡನ
ಮೇಲೆ ತಿರುಗಿಬಿದ್ದಳು.
ಈ ಮರಿ, ಈ ಗುಂಡಮ್ಮ, ಐದು ದಿನಗಳಿಂದಲೂ ಹೀಗೆ ನರಳುತ್ತಿದ್ದಳು.
ತುಟಿಗಳನ್ನು ಬಿರಿಬಿರಿ ಬಿರಿಸುತ್ತಾಳೆ ; ಹಲ್ಲುಗಳೆಲ್ಲವೂ ಬಿಗಿಯಾಗಿ ಗದಿ ಹಾಕಿ
ಕೊಂಡಿರುವುದು ಕಾಣಿಸುತ್ತೆ, ಕತ್ತಿನ ಮಾಂಸಖಂಡಗಳೆಲ್ಲವೂ ಬಿಗಿಯಾಗಿ
ಸೆಟೆದಿರುತ್ತವೆ. ಮುಖದ ಅದರಲ್ಲೂ ಬಾಯಿನ ಮಾಂಸಖಂಡಗಳೆಲ್ಲವೂ ಬಿಗಿದು
ಕೊಂಡಿವೆ. ಯಾವ ಯಾವ ಮಾಂಸಖಂಡಗಳನ್ನು ಮಾತನಾಡಲು ಬಳಸುತ್ತೇವೆ,
ಎಂದು ಗುಂಡಮ್ಮ ತಿಳಿದುಕೊಂಡಿದ್ದಾಳೋ ಅವೆಲ್ಲವೂ ಸೆಟೆದಿವೆ. ಬಾಯಿನಲ್ಲಿರುವ
ನಾಲಿಗೆ, ಶ್ವಾಸನಾಳಗಳು, ಇವನ್ನು ಪ್ರದರ್ಶಿಸುವಂತಿಲ್ಲ. ಇವುಗಳಿಂದಲೇ ಮಾತಿನ
ಉಚ್ಚಾರಣೆಯಾಗುವುದು. ಆದರೆ ಗುಂಡಮ್ಮನಿಗೆ ಇದು ಗೊತ್ತಿಲ್ಲ.
ಹಿಸ್ಟಿರಿಯಾದ ಒಂದು ಪ್ರದರ್ಶನ ಇದು, ಎಂದು ಸುಲಭವಾಗಿ ತಿಳಿಯಿತು.
ಮಾನಸಿಕ ಕಾರಣಗಳಿಂದ ನಿರ್ಧ್ವನಿಯಾಗುವುದು ಹಿಸ್ಟಿರಿಯಾದ ಒಂದು ರೂಪ.
ಮನಸ್ಸಿನಲ್ಲಿ ಹುದುಗಿಕೊಂಡು ಕಾಡುತ್ತಿರುವ ತಾಪತ್ರಯಗಳು ಇಚ್ಚಾಚಾಲಿತ
ನರಗಳ ಮೂಲಕ ಗುಂಡಮ್ಮನ ಗಂಟಲಿನಲ್ಲಿ ಶನಿ ವಕ್ರಿಸಿದಂತೆ ವಹಿಸಿತ್ತು.
ಗಂಟಲಿಗೆ, ಅದರ ಸಂಬಂಧಪಟ್ಟ ಭಾಗಗಳಿಗೆ ಚಿಕಿತ್ಸೆಯನ್ನು ಮಾಡಿದಂತೆ
ನಟಿಸಿದರೆ, ರೋಗಿಯ ಮನಸ್ಸಿಗೂ ಒಂದು ರೀತಿಯ ಸಮಾಧಾನವಾಗುತ್ತದೆ.
ರೋಗಿಯ ಸಂಬಂಧಿಗಳಿಗನಕ ತುಂಬಾ ಸಮಾಧಾನವಾಗುತ್ತದೆ.
ಆದುದರಿಂದ ಗಂಟಲನ್ನು ಪರೀಕ್ಷಿಸಲು, ಗದಿ ಹಾಕಿಕೊಂಡಿರುವ ಹಲ್ಲುಗಳ
ಮಧ್ಯೆ, ಟಂಗ್ ಡಿಪ್ರೆಸರ್ ಅನ್ನು ಬಲವಂತದಿಂದ ತೂರಿಸಿ, ನಾಲಿಗೆಯನ್ನು
ಅದುಮಲು ಪ್ರಯತ್ನಿಸಿದೆ. ಒಂದೆರಡು ಕ್ಷಣ ರಾಕ್ಷಸ ಶಕ್ತಿಯನ್ನು ಬಳಸಿ ಒತ್ತಿದ
ಮೇಲೆ, ಬಾಯಿ ತೆರೆಯಿತು, ಗಂಟಲು ಕಾಣಿಸಿತು. ಆದರೆ ಅರೆಕ್ಷಣದಲ್ಲಿ ಟಪ್<noinclude></noinclude>
4fsibvwnu9jdovzfombvvgbrgwlj73g
ಪುಟ:ಮನಮಂಥನ.pdf/೧೪೯
104
62596
316504
315729
2026-05-03T13:51:16Z
Shreesha Sharma
7840
/* Validated */
316504
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೨೦}}{{Right|ಮನಮಂಥನ}}
ಅಂತ ಬಾಯಿಯು ಮುಚ್ಚಿಕೊಂಡಿತು. ಟಂಗ್ ಡಿಪ್ರೆಸರನ್ನು ಬಲವಾಗಿ ಕಚ್ಚಿಕೊಂಡು
ಮುಚ್ಚಿಕೊಂಡಿತು. ಟಂಗ್ ಡಿಪ್ರೆಸರನ್ನು ಹೊರಕ್ಕೆ ಕೀಳಲು ಶತ ಪ್ರಯತ್ನವನ್ನು
ಮಾಡಬೇಕಾಯಿತು.
ಪಶುವೈದ್ಯರಂತೆ ನಡೆಸಿದ ಈ ರಾಕ್ಷಸ ಪ್ರಯೋಗವನ್ನು ಕಣ್ಣಾರೆ ಕಂಡ
ತಾಯಿಯು, ಆ ತನಕ ತಾನೂ ಬಾಯಿ ಬಾಯಿ ಬಿಡುತ್ತಿದ್ದಳು. ಮಗಳ ಬಾಯಿ
ನಿಂದ ಟಂಗ್ ಡಿಪ್ರೆಸ ಹೊರಕ್ಕೆ ಬಂದಮೇಲೆ,
'ಅಯ್ಯೋ ಮರಿ ! ತುಂಬಾ ನೋವಾಯಿತೇನೇ ? ನರಗಿರ ಏನಾದರೂ
ಹೊರಳೇನೆ ?' ಎಂದು ಬಲು ಮುದ್ದಿನ ದನಿಯಲ್ಲಿ ಕೇಳಿದಳು. 'ಹೂ' 'ಹೂ'
ಅನ್ನುವಂತೆ ತಲೆಯನ್ನು ಮೇಲಕ್ಕೂ ಕೆಳಕ್ಕೂ ಆಡಿಸಿದಳು. ಧ್ವನಿ ಮಾತ್ರ ಹೊರಡಲೇ
ಇಲ್ಲ.
'ಮುಂದಿನ ವಾರ ಹೆಣ್ಣು ನೋಡುಕ್ಕೆ ಅಂತ ಬತ್ತಾರೆ. ಏನಾದರೂ
ಮಾಡಿ ಬೇಗ ವಾಸಿಮಾಡಿ, ನಾಲೈದು ವರ್ಷಗಳಿಂದ ಅದೆಷ್ಟು ಒದ್ದಾಡ್ತಾ
ಇದೀನಿ, ಅಂತ ; ಇವಳ ಮದುವೆ ಮಾಡಿ, ಸೆರೆ ಬಿಡಿಸೋಣ ಅಂತ ; ಆ ಕಷ್ಟ
ಪರಮಾತ್ಮನಿಗೇ ಗೊತ್ತು ! ಈ ಸರ್ತಿ ಬರುವವರು ಪ್ರಾಯಶಃ ಒಪ್ಪಬಹುದು
ಅಂತ ಕಾಣಿಸುತ್ತೆ. ಇಂತಹ ಹೊತ್ತಿಗೆ ಇವಳಿಗೆ ಈ ಬೇನೆ ಬಡಿಯಬೇಕೇ ?
ಮದುವೆಯಾದ ಮೇಲೆ, ಗಂಡನ ಮನೆಗೆ ಹೋದಾಗ ಬಡಿದಿದ್ದರೆ ಯಾರು
ಬೇಡ ಅಂತಿದ್ದರು ?' ಎಂದು ತಂದೆ ಗೊಣಗಿದರು.
'ಕತ್ತಿನಲ್ಲಿ ಈ ನರ ಇದೆ ನೋಡು, ಗುಂಡಮ್ಮ ; ಇದು ಹೊರಳಿದೆ. ಈಗ
ಅದನ್ನು ಸರಿಯಾದ ಸ್ಥಾನಕ್ಕೆ ನೀವಿ ಇದ್ದೀನಿ. ಆಮೇಲೆ ಸುಲಭವಾಗಿ
ಮಾತನಾಡಬಹುದು' ಎಂದು ಅವಳ ಕತ್ತಿನ ಒಂದು ಪಾರ್ಶ್ವವನ್ನು ನೋವಾಗುವಂತೆ
ಬಿಗಿಯಾಗಿ ಹಿಡಿದು 'ಎಲ್ಲಿ ಈಗ ನಾಲಿಗೆಯನ್ನು ಹೊರಕ್ಕೆ ಆದಷ್ಟು ಚಾಚು'
ಎಂದೆ. ನಾಲಿಗೆಯು ಬಾಯಿಯಿಂದ ಹೊರಕ್ಕೆ ಸ್ವಲ್ಪ ಬಂತು. 'ಓಹೋ ಪರವಾಗಿಲ್ಲ'
ಎನಿಸಿತು. ಕತ್ತಿನಲ್ಲಿ ಆದ ನೋವಿನಿಂದ, ಬೇನೆಯು ಹತೋಟಿಗೆ ಬಂದು,
ನಾಲಿಗೆಯನ್ನು ಚಾಚುವಂತಾದುದು ; ರೋಗವು ಅತಿ ಉಲ್ಬಣ ಸ್ಥಿತಿಗೆ ಬಂದಿಲ್ಲ
ಎನ್ನುವುದರ ಕುರುಹಾಗಿತ್ತು. ಆದುದರಿಂದ ಪರವಾಗಿಲ್ಲ ಎನ್ನಿಸಿತು.
'ಗುಂಡಮ್ಮ, ಕತ್ತಿನ ನರ ಸರಿಹೋಗಿದೆ. ಆದರೆ ತಿರುಗಿ ಹೊರಳಬಹುದು.
ಅದಾಗದಂತೆ, ನಾಲಿಗೆಯನ್ನು ಸ್ವಲ್ಪ ಎಳೆಯಬೇಕು. ಸ್ವಲ್ಪ ನೋವಾಗುತ್ತೆ ಆದರೆ
ಹೆದರಬೇಡ. ಈ ಘೋರ ಕಾಯಿಲೆಯನ್ನು ಅನುಭವಿಸಿದ್ದ. ಈ ಯಾತನೆಯ
ಮುಂದೆ ಅವೇನೂ ಲೆಕ್ಕಕ್ಕೆ ಬರುವುದಿಲ್ಲ ಎಂದು ಒಮ್ಮೆ ಹೆದರಿಸಿ, ಅದೇ<noinclude></noinclude>
hndig3tnijuph4tbkcuviuxh1firntl
ಪುಟ:ಮನಮಂಥನ.pdf/೧೫೦
104
62597
316505
315730
2026-05-03T13:52:17Z
Shreesha Sharma
7840
/* Validated */
316505
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೩೧}}
ಕ್ಷಣದಲ್ಲಿ ಧೈರ್ಯವನ್ನು ತುಂಬಿ, ಅವಳ ನಾಲಿಗೆಯನ್ನು ಹಿಡಿದು ಬಲವಾಗಿ
ಎಳೆದೆ 'ನೋಡು ಗುಂಡಮ್ಮ ನಾಲಿಗೆಯ ಬುಡದಲ್ಲೇ ನರವು ಇರುವುದು.
ಸ್ವಸ್ಥಾನಕ್ಕೆ ಆ ನರವು ಹೋಗಿ ಭದ್ರವಾಗಿ ಕೂತುಕೊಳ್ಳಬೇಕಾದರೆ, ಈ ಚಿಕಿತ್ಸೆಯು
ಅಗತ್ಯ' ಎಂದು ಹೇಳುತ್ತಾ ಎಳೆದೆ.
'ಅಯ್ಯೋ ಅಯ್ಯೋ' ಎನ್ನುವ ಎರಡು ಮಾತುಗಳೂ ಅವಳ ಕೊರಲಿನಿಂದ
ಹೊರಬಿದ್ದುವು. ಅಸ್ಪಷ್ಟವಾಗಿದ್ದರೂ, ನನ್ನ ಕಿವಿಗೆ ಸಂಗೀತದಂತಿತ್ತು. ನಾಲಿಗೆಯ
ಹಿಡಿತವನ್ನು ಮೆಲ್ಲಗೆ ಬಿಡಿಸಿ, 'ಈಗ ದೊಡ್ಡದಾಗಿ ಉಸಿರು ಬಿಡಮ್ಮಾ, ಆಮೇಲೆ
ಮಾತನಾಡುಕ್ಕೆ ಆಗುತ್ತೆ' ಎಂದೆ.
ಹಾಗೆಯೇ ಮಾಡಲೆತ್ನಿಸಿದಳು. ಆದರೆ ದೊಡ್ಡ ಉಸಿರನ್ನು ತೆಗೆದುಕೊಳ್ಳಲಿಲ್ಲ.
ಒಂದೆರಡು ಬಾರಿ ಒತ್ತಾಯಪಡಿಸಿದನಂತರ, ತಿರುಗಿ ನಾಲಿಗೆಯನ್ನು ಎಳೆಯ
ಬೇಕಾಗುತ್ತದೆ ಎಂದು ಹೆದರಿಸಿದ ನಂತರ, ದೊಡ್ಡದಾಗಿ ಉಸಿರಾಡಿದಳು.
ನಂತರ 'ಅಮ್ಮಾ ಬಾಯಾರಿಕೆ, ನೀರು, ಸ್ವಲ್ಪ ನೀರು' ಎಂದಳು. ಕಷ್ಟಪಟ್ಟುಕೊಂಡು,
ಮುಖವನ್ನು ವಿಕಾರಮಾಡಿಕೊಂಡು, ಹೇಳಿದ್ದಳು. ಆದರೆ ಮಾತು ಮೂಡಿತ್ತು.
ಎರಡು ಮೂರು ದಿನಗಳು, ದಿನಕ್ಕೆ ಒಂದೆರಡು ಬಾರಿ ಹೀಗೆ ಪ್ರಯೋಗವನ್ನು
ನಡೆಸಿದ ನಂತರ, ಗುಂಡಮ್ಮನು ಮಾತನಾಡುವಂತಾದಳು.
ಮೂರು ಮಕ್ಕಳು, ಹುಟ್ಟಿದ ಕೂಡಲೇ ಸತ್ತುಹೋಗಿದ್ದುವು. ನಾಲ್ಕನೆಯ
ಹೆರಿಗೆಯಲ್ಲಿ ಗುಂಡಮ್ಮ ಹುಟ್ಟಿದ್ದು. ಇದಾದರೂ ಗುಂಡುಕಲ್ಲಿನ ಹಾಗೆ ಬೆಳೆಯಲಿ'
ಎಂಬ ಆಸೆಯಿಂದ, ಗುಂಡಮ್ಮ ಎಂದು ನಾಮಕರಣ ಮಾಡಿದ್ದರು. ಗುಂಡಮ್ಮ
ತಾಯ ಮಡಿಲಿನಲ್ಲೇ ಹೆಚ್ಚಾಗಿ ಬೆಳೆದವಳೂ ತೊಟ್ಟಿಲಿನಲ್ಲಿ ಮಲಗಿಸಿದರೆ ರಚ್ಚೆ
ಮಾಡುತ್ತಿದ್ದಳು. ಶಾಲೆಗೆ ಹೋಗುವ ವಯಸ್ಸಿನಲ್ಲಿ, ಅಂತಹ ಜಾಣತನವನ್ನೇನೂ
ತೋರಿಸಿರಲಿಲ್ಲ. ಮುದ್ದು ಮುದ್ದಾಗಿ ಬೆಳೆದವಳು ; ಮೊದ್ದು ಮೊದ್ದಾಗಿಯೇ
ವಯಸ್ಸಿಗೆ ಬಂದಮೇಲೆಯೂ ತಾಯ ಸೆರಗನ್ನು ಹಿಡಿದುಕೊಂಡೇ
ಮುದ್ದುಗರೆಯುತ್ತಿದ್ದಳು. ಓದಿನಲ್ಲಿ ಚಾಲೂಕನ್ನು ತೋರಿಸದೇ ಇದ್ದರೂ
ಮನೆಗೆಲಸದಲ್ಲಿ ಅಮ್ಮನ ಜತೆಗೂ ನಗುನಗುತ ದುಡಿಯುತ್ತಿದ್ದಳು. ಆದರೆ
ಅಮ್ಮನೇನಾದರೂ ಒಂದೆರಡು ದಿನ ಜಡ್ಡು ಬಿದ್ದರೆ, ಮನೆಗೆಲಸವನ್ನು ಒಬ್ಬಳೇ
ಮಾಡಲು ಅಸಮರ್ಥಳಾಗುತ್ತಿದ್ದಳು. ಮದುವೆಯ ವಯಸ್ಸು ಬಂತು. ಭಾವಿ
ವರಗಳನ್ನು ಕರೆದು ತರಲು ಆರಂಭವಾಯಿತು. ಆಗ ಗುಂಡಮ್ಮ ಸಿಡುಕುತನವನ್ನು
ಕೆಲವೊಮ್ಮೆ, ಅತಿ ನಾಚಿಕೆಯನ್ನು ಮತ್ತೊಮ್ಮೆ ; ಉತ್ಸಾಹವನ್ನೂ ಒಂದೊಂದು
ಸರ್ತಿ ; ತೋರತೊಡಗಿದಳು. ಅಪ್ಪನು ಗದರಿಸಿಕೊಂಡರೆ, ಮೊಂಡು ಬಿದ್ದು<noinclude></noinclude>
qfytwxa3oyn67gea2d834dz3baj6u7z
ಪುಟ:ಮನಮಂಥನ.pdf/೧೫೧
104
62598
316506
315732
2026-05-03T13:53:06Z
Shreesha Sharma
7840
/* Validated */
316506
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೩೨}}{{Right|ಮನಮಂಥನ}}
ಮೂಲೆ ಹಿಡಿಯುವುದು. ಅಮ್ಮನು ಗದರಿಸಿದರೆ ಅಳುವುದು ; ಹೀಗಾಗುತ್ತಿತ್ತು.
ಕಡೆಗೆ ಹಿಸ್ಟಿರಿಯಾದ ನಿರ್ಧನಿ ಪ್ರದರ್ಶನವೂ ಕಾಣಬಂದಿತ್ತು.
ಇದೆಲ್ಲವೂ ಆಕೆಯ ತಂದೆಯು ಒಪ್ಪಿಸಿದ ವರದಿ ; ಅವರನ್ನು ವಿವರವಾಗಿ
ಪ್ರಶ್ನಿಸಿದಾಗ,
ವಯಸ್ಸು ಪಂಚಾಂಗ ಮತ್ತು ಜಾತಕದ ಪ್ರಕಾರ ೨೩ ಆಗಿದ್ದರೂ,
ಗುಂಡಮ್ಮನ ಮನಸ್ಸು ೧೦-೧೨ ವರ್ಷದ ಹುಡುಗಿಯ ಮನಸ್ಸಿನಂತೆಯೇ
ಇತ್ತು. ಬಾಲ್ಯದ ಮುಗ್ಧತೆಯಿಲ್ಲ ; ಬೆಳೆದವರ ದೃಢತೆಯೂ ಇಲ್ಲ. ಮನಸ್ಸು
ಬೆಳೆಯುವುದು ; ಪರಿಸರದಿಂದ ಕಲಿತು ಪ್ರವೃದ್ಧವಾಗುವುದು ; ಒಂದು ರೀತಿಯಲ್ಲಿ
ನಿಂತುಹೋಗಿತ್ತು. Immature Personality-Inadequate Personality ಎಂದು
ಕರೆಯುತ್ತಾರೆ, ಇಂತಹವರನ್ನು ಇಂತಹವರಲ್ಲಿ ಮಾನಸಿಕ ಪಲ್ಲಟಗಳು ಆಗುವುದು
ಹೆಚ್ಚು.
ಗುಂಡಮ್ಮನಿಗೆ ಇಂತಹ ಅಪೂರ್ಣ, ಅಪ್ರಬುದ್ಧ ವ್ಯಕ್ತಿತ್ವವಿತ್ತು. ಮದುವೆಯಾಗಿ
ಗಂಡನ ಮನೆಗೆ ಹೋಗಬೇಕು ಎನ್ನುವ ಆಸೆಯೂ ಇತ್ತು. ಪ್ರಕೃತಿ ಸಹಜವಾದ,
ದೇಹದ ಅಗತ್ಯಗಳ ಪೂರೈಕೆಗಾಗಿ, ಅವಳ ID, ಪುರಾತನ ಮನಸ್ಸು
ಹಾತೊರೆಯುತ್ತಿತ್ತು. ಆದರೆ ವಿಚಾರಮಾಡುವ ಮನಸ್ಸು, ವಯಸ್ಸಿಗೆ ತಕ್ಕಂತೆ
ಬೆಳೆಯದೆ ಇರುವ ಕಾರಣದಿಂದ ಅಮ್ಮನ ಸೆರಗನ್ನು ಹಿಡಿದುಕೊಂಡೇ ಇರುವುದು
ಚೆನ್ನು ಎನ್ನುತ್ತಿತ್ತು. ದ್ವಂದ್ವ ಕಾದಾಟದಲ್ಲಿ, ಮನಸ್ಸು ಹಿಸ್ಟಿರಿಯಾ ಪ್ರದರ್ಶನವನ್ನು
ಆರಂಭಿಸಿತು. ಗದರಿಸುತ್ತಿದ್ದ ಅಪ್ಪನ ಆದರವನ್ನು ಈ ಪ್ರದರ್ಶನವು ಸಾಧಿಸುತ್ತದೆ
ಎಂದು ಗುಂಡಮ್ಮನ ಹುಡುಗು ಮನಸ್ಸು ಹೇಳುತ್ತಿತ್ತು. ಇದು
ನಗೆಪಾಟಲಾಗಬಹುದು ಎನ್ನುವ ಯೋಚನೆಯು ಹುಡುಗು ಮನಸ್ಸಿಗೆ ಬರುವುದೇ
ಇಲ್ಲ.
ಗುಂಡಮ್ಮನಿಗೆ ಮದುವೆಯೂ ಆಯಿತು. ಮೂರು ಮಕ್ಕಳೂ ಆಗಿವೆ.
ಮದುವೆಯಾದ ಗಂಡನು ಹೊಟ್ಟೆಗೆ ಬಟ್ಟೆಗೆ ಸಾಕಾದಷ್ಟು ಸಂಪಾದಿಸುತ್ತಾನೆ.
ಅವನಿಗೂ ಅಪ್ರಬುದ್ಧ ವ್ಯಕ್ತಿತ್ವ. ಹಾಗಾಗಿ ಗಂಡಹೆಂಡಿರಿಬ್ಬರೂ ಸಾಕಷ್ಟು
ಜಗಳವಾಡುತ್ತಾರೆ. ದಾಂಧಲೆ ಎಬ್ಬಿಸುತ್ತಾರೆ, ರಂಪ ಮಾಡುತ್ತಾರೆ. ಉಂಡು
ಮಲಗುವತನಕ.
ಹಿಸ್ಟಿರಿಯಾ ಪ್ರದರ್ಶವು ತುಸು ಹೆಚ್ಚು ತುಸು ಕಡಿಮೆ ಪ್ರಮಾಣದಲ್ಲಿ,
ಗುಂಡಮ್ಮನಲ್ಲಿ ಆಗುತ್ತಲೇ ಇವೆ. ಆದರೆ ಸಂಸಾರವನ್ನು ನಡೆಸಿಕೊಂಡು
ಹೋಗುವುದಕ್ಕೆ ಅಡಚಣೆಯಾಗುವಂತಹ ಉಲ್ಬಣಸ್ಥಿತಿಗೆ ಹತ್ತಿಲ್ಲ. ಸಮಾಜದ<noinclude></noinclude>
lo5p95kgyjblpwtthjoxdqg4hd43w1v
ಪುಟ:ಮನಮಂಥನ.pdf/೧೫೨
104
62599
316507
315735
2026-05-03T13:54:37Z
Shreesha Sharma
7840
/* Validated */
316507
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೩೩}}
ದೃಷ್ಟಿಯಲ್ಲಿ ಗುಂಡಮ್ಮನದು ವೈನವಾದ ಸಂಸಾರವೇ. ಅಷ್ಟಾದರೆ ಸಾಲದೆ ?
'''ಜ್ಞಾನ ತಪ್ಪಿದ ಇರುದಯ ಮೇರಿ'''
{{gap}}'ತತ್ಕ್ಷಣ ಬರಬೇಕು, ಡಾಕ್ಟರೇ !” ಎಂದು ಏದುಬ್ಬಸಪಡುತ್ತ ಬಂದಿದ್ದವ
ಅವಸರ ಪಡಿಸಿದ.
{{gap}}“ಏನಾಗಿದೆ ? ಯಾರಿಗೆ ? ವಿವರಗಳನ್ನು ಸ್ವಲ್ಪ ತಿಳಿಸಿದರೆ, ಸೂಕ್ತವಾದ
ಔಷಧಿಗಳನ್ನೂ ಇತರ ಸಲಕರಣೆಗಳನ್ನೂ ಸಿದ್ಧಪಡಿಸಿಕೊಂಡು ಬರಬಹುದು.
ಬರೀ ಸ್ಟೆತಾಸ್ಕೋಪು ಹಿಡಿದುಕೊಂಡು ಬಂದರೆ, ಏನು ಪ್ರಯೋಜನ ?
ಗಾಬರಿಯಾಗಬೇಡ ; ಸ್ವಲ್ಪ ಸುಧಾರಿಸಿಕೋ, ಏನಾಯ್ತು ಹೇಳು, ಖಂಡಿತ
ಬತ್ತೀನಿ' ಎಂದು ಹೇಳಿದೆ. ಅವನೇನೂ ಕುಳಿತು ಸುಧಾರಿಸಿಕೊಳ್ಳಲಿಲ್ಲ. ನಿಂತಲ್ಲೇ
ಮೇಲುಸಿರು ಎಳೆಯುತ್ತಲೇ 'ಮಾತಾಡ್ತಾ ಕೂತಿದ್ದೀವಿ, ಇದ್ದಕ್ಕಿದ್ದ ಹಾಗೆಯೇ,
ಜ್ಞಾನತಪ್ಪಿ ಬಿದ್ದು ಬಿಟ್ಟಳು, ನಮ್ಮ ಅಕ್ಕ ; ಬೇಗ ಬನ್ನಿ ಡಾಕ್ಟರೇ ! ಇಷ್ಟು ಹೊತ್ತಿಗೆ
ಅವಳ ಪ್ರಾಣವೇ ಹೋಗಿಬಿಟ್ಟಿರುತ್ತೇನೋ ?' ಎಂದ.
{{gap}}'ಎಷ್ಟು ವಯಸ್ಸು ನಿಮ್ಮಕ್ಕಂಗೆ' ಎಂದೆ.
{{gap}}'ನನಗಿಂತ ಐದಾರು ವರ್ಷ ದೊಡ್ಡಳು. ಮೂವತ್ತಾಗಿರಬಹುದು.
ನನಗೆ ಅವಳೊಬ್ಬಳೇ ಅಕ್ಕ. ಇನ್ನಾರೂ ನನಗಿಲ್ಲ' ಎಂದು ಹೇಳಿ ಅಳತೊಡಗಿದ.
{{gap}}ಅವನ ಸೈಕಲ್ಲನ್ನು ನಮ್ಮ ಮನೆಯಲ್ಲೇ ಬಿಟ್ಟ. ಕಾರಿನಲ್ಲಿ ನನ್ನ ಜೊತೆ
ಕುಳಿತ. ಅವನ ಮನೆಗೆ ಹೋದೆವು.
{{gap}}ಮಂಚದ ಮೇಲೆ ರೋಗಿಯನ್ನು ಮಲಗಿಸಿದ್ದರು. ದೃಢ ಆರೋಗ್ಯದಿಂದಿದ್ದ
ಮೂವತ್ತರ ಪ್ರಾಯದಾಕೆ. ಮೂರು ಮಕ್ಕಳೂ ಮಂಚದ ಸುತ್ತಾ ಅಳುಮುಖ
ಮಾಡಿಕೊಂಡು ಕುಳಿತಿದ್ದರು. ನನ್ನನ್ನು ಕಂಡಕೂಡಲೆ, ರೋಗಿಯ ಕಾಲುಗಳನ್ನು
ತಿಕ್ಕುತ್ತಾ ಮಂಚದ ತುದಿಯಲ್ಲಿ ಕೂತಿದ್ದ ಗಂಡ ಎದ್ದು 'ಅರ್ಧ ಗಂಟೆಯ ಹಿಂದೆ
ತಟ್ಟಂತ ಜ್ಞಾನ ತಪ್ಪಿತು, ಡಾಕ್ಟರೇ ! ಚೆನ್ನಾಗಿಯೇ ಮಾತನಾಡುತ್ತಿದ್ದಳು. ಯಾವ
ಕಾಯಿಲೆಯೂ ಇರಲಿಲ್ಲ. ಹೀಗೇಕಾಯಿತೋ, ದೇವರಿಗೇ ಗೊತ್ತು. ಸ್ವಲ್ಪ ಕಾಫಿಯನ್ನು
ಕುಡಿಸಿದರೆ ಚೇತರಿಸಿಕೊಳ್ಳುತ್ತಾಳೇನೋ ಅಂತ, ಸ್ಟಾಂಗ್ಕಾಫಿ ಮಾಡಿ ತಂದೆ.
ಗದುಗು ಹಾಕಿಕೊಂಡಿರುವ ಬಾಯಿನಂಚಿನಲ್ಲಿ ಒಂದು ಚಮಚ ಕಾಫಿ ಹಾಕಿದೆ.
ಕಟವಾಯಿನಲ್ಲಿ ಅದು ಹೊರಕ್ಕೆ ಬಂತು. ಎಷ್ಟು ಕೂಗಿದರೂ ಮಾತಿಲ್ಲ. ಏನಾದರೂ
ಮಾಡಿ ಬದುಕಿಸಿ, ಡಾಕ್ಟರೇ!' ಎಂದು ಕೇಳಿದ.
{{gap}}'ಅಂಗಳದಲ್ಲಿ ಮಾತಾಡುತ್ತಾ ನಾವೆಲ್ಲಾ ಕುಳಿತಿದ್ದೆವು. ಅಲ್ಲೇ ಜ್ಞಾನ ತಪ್ಪಿ<noinclude></noinclude>
2moiesy61161ap795uv7r1aann8bw26
ಪುಟ:ಮನಮಂಥನ.pdf/೧೫೩
104
62600
316508
315738
2026-05-03T13:56:00Z
Shreesha Sharma
7840
/* Validated */
316508
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೩೪}}{{Right|ಮನಮಂಥನ}}
ಬಿದ್ದದ್ದು, ಎಲ್ಲರೂ ಕೂಡಿ, ಎತ್ತಿಕೊಂಡು ಬಂದು ಮಂಚದ ಮೇಲೆ ಮಲಗಿಸಿದೆವು.'
ಎಂದ ನನ್ನ ಕರೆದಿದ್ದ ತಮ್ಮ ಹೇಳಿದ.
{{gap}}ರೋಗಿಯ ಕೈಕಾಲುಗಳೆಲ್ಲವೂ ಸೆಟೆದುಕೊಂಡು ಅಸ್ತಾವಸ್ಥೆಯಾಗಿ
ಬಿದ್ದಿದ್ದುವು. ದಿಟವಾಗಿ ಜ್ಞಾನವು ತಪ್ಪಿದ್ದರೆ, ಮಾಂಸಖಂಡವು
ಸೆಟೆದುಕೊಂಡಿರುವುದು ವಿರಳ. ನಾಡಿಯು ಸರಿಯಾಗಿ ಬಡಿಯುತ್ತಿತ್ತು. ಕಣ್ಣುಗಳು
ಮುಚ್ಚಿಕೊಂಡಿದ್ದುವು. ಆದರೆ ರೆಪ್ಪೆಗಳು ಥರಥರಿಸುತ್ತಿದ್ದುವು. ಕಟವಾಯಿನಿಂದ
ಹರಿದು ಬಂದಿದ್ದ ಕಾಫಿಯು ಗಲ್ಲದ ಮೇಲೆ ಹೆಪ್ಪುಗಟ್ಟಿದಂತಿತ್ತು. ಅದನ್ನು ಗಂಡ
ಒರೆಸುವುದಕ್ಕೆ ಮುಂಚೆಯೇ ನಾನು ಬಂದಿದ್ದಿರಬೇಕು.
{{gap}}ಹಿಸ್ಟಿರಿಯಾ ಪ್ರದರ್ಶನವಿದು ಎಂಬುದು ಸ್ಪಷ್ಟವಾಗಿತ್ತು. 'ಏನಾಗುತ್ತಾ
ಇದೆಯಮ್ಮಾ ತಲೆ ತಿರುಗ್ತಾ ಇದೆಯೇ ?' ಎಂದು ಕೇಳುತ್ತಾ, ಮುಚ್ಚಿಕೊಂಡಿದ್ದ
ಕಣ್ಣು ರೆಪ್ಪೆಗಳನ್ನು ಬಿಡಿಸತೊಡಗಿದೆ. ಭದ್ರವಾಗಿ ರೆಪ್ಪೆಗಳನ್ನು ಆಕೆ ಮುಚ್ಚಿ
ಕೊಂಡಿದ್ದಳು. ಬಲಪ್ರಯೋಗವನ್ನು ಮಾಡಿ, ನೋವಾದರೂ ಚಿಂತೆಯಿಲ್ಲ ಎಂದು
ಜುಲುಮಿನಿಂದ ರೆಪ್ಪೆಗಳನ್ನು ಬಿಡಿಸಿದೆ. ಮೇಲು ರೆಪ್ಪೆಯನ್ನು ಎತ್ತಿದೆ. ಆಗ
ಆಕೆಯ ಕಣ್ಣುಗಳ ಕಪ್ಪು ಗುಡ್ಡೆಗಳು ನನ್ನನ್ನು ನೋಡಲೇಬೇಕಾಯಿತು. ನೋಡಿದಳು.
ಡಾಕ್ಟರು ಎಂಬುದನ್ನು ಗುರುತಿಸಿದಳು. ಆಕೆಯ ರೆಪ್ಪೆಗಳಿಂದ ಬೆರಳುಗಳನ್ನು
ತೆಗೆದೆ. ಕಣ್ಣು ಕಣ್ಣು ಬಿಟ್ಟು ಪಿಳ ಪಿಳ ನೋಡಿದಳು. ಎದ್ದು ಕುಳಿತು ಸೆರಗನ್ನು
ಸರಿಮಾಡಿಕೊಂಡಳು.
{{gap}}'ಏನಾಯ್ತು ? ನನಗೆ. ತಲೆಯೆಲ್ಲಾ ಯಾಕೆ ಒದ್ದೆಯಾಗಿದೆ ?' ಎಂದು
ಕೇಳಿದಳು.
{{gap}}'ಅಂಗಳದಲ್ಲಿ ಮಾತನಾಡುತ್ತಾ ಇದ್ದುದು ಜ್ಞಾಪಕವಿಲ್ಲವೇ, ಅಕ್ಕ ! ಜ್ಞಾನ
ತಪ್ಪಿ ಹಠಾತ್ತನೆ ಬಿದ್ದು ಬಿಟ್ಟೆ. ನೆತ್ತಿಗೆ ತಣ್ಣೀರು ತಟ್ಟಿ ಇಲ್ಲಿಗೆ ಎತ್ತಿಕೊಂಡು ಬಂದು
ಮಲಗಿಸಿದೆವು' ಎಂದು ತಮ್ಮ ಆತುರ ಆತುರವಾಗಿ ಹೇಳಿದ.
{{gap}}'ಈಗ ಸರಿಯಾಗಿದ್ದಾರಲ್ಲಾ ! ಇನ್ನೇನೂ ಗಾಬರಿ ಇಲ್ಲವಲ್ಲ. ಒಂದೊಂದು
ಸರ್ತಿ ಪಿತ್ತ ಹೆಚ್ಚಾದರೆ, ಹೀಗೆ ಜ್ಞಾನ ತಪ್ಪಿದಂತಾಗುತ್ತೆ. ಬಿಸಿಬಿಸಿ ಕಾಫಿಯನ್ನು
ಕುಡಿಸಿರಿ. ಊಟವಾಗಿದೆ ತಾನೆ ? ನಾನೂ ಮನೆಗೆ ಹಿಂತಿರುಗಿ ಊಟವನ್ನು
ಮುಗಿಸುತ್ತೇನೆ' ಎಂದು ಹೇಳಿ ಹೊರಕ್ಕೆ ಬಂದೆ.
{{gap}}ಕಾಫಿಯನ್ನು ಆಕೆ ಕುಡಿದಳು. ಬಾಗಿಲು ತನಕ ಆಕೆಯೂ, ಗಂಡ, ಮಕ್ಕಳೂ
ಬಂದು ನನ್ನನ್ನೂ ಆಕೆಯ ತಮ್ಮನನ್ನೂ ಬೀಳ್ಕೊಟ್ಟರು. ನಮ್ಮ ಮನೆಯಲ್ಲಿ
ಬಿಟ್ಟಿದ್ದ ಸೈಕಲ್ಲನ್ನು ಅವ ಹಿಂತಿರುಗಿ ತೆಗೆದುಕೊಂಡು ಹೋಗಬೇಕಾಗಿದ್ದುದರಿಂದ,<noinclude></noinclude>
6izn1uumu9cxahy1qsltyr03gvii0cc
ಪುಟ:ಮನಮಂಥನ.pdf/೧೫೪
104
62601
316546
315739
2026-05-03T14:25:40Z
Shreesha Sharma
7840
/* Validated */
316546
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೩೫}}
ಅವನೂ ನನ್ನ ಜೊತೆಯಲ್ಲಿ ಹಿಂತಿರುಗುವವನಿದ್ದ.
{{gap}}ಕಾರಿನಲ್ಲಿ ಹಿಂತಿರುಗುವಾಗ, ಆ ಮಾತು ಈ ಮಾತು ಆಡುತ್ತಾ,
ವಿವರಗಳನ್ನು ತಮ್ಮನಿಂದ ತಿಳಿದುಕೊಂಡೆ. ತಮ್ಮನಿಗೆ ನಾಲ್ಕು ವರ್ಷ
ವಯಸ್ಸಾಗಿದ್ದಾಗ, ತಾಯಿಯು ತೀರಿಕೊಂಡಿದ್ದಳು. ಅಂದಿನಿಂದ ಇರುದಯ
ಮೇರಿಯು ತಮ್ಮನನ್ನು ಸಾಕುತ್ತಿದ್ದಳು. ಮದುವೆಯಾಗಿ ಗಂಡನ ಮನೆಗೆ ಆಕೆಯು
ಪಟ್ಟಣಕ್ಕೆ ಬಂದಳು. ಪಟ್ಟಣದಲ್ಲಿ ಓದುವುದಕ್ಕೆ ಹೆಚ್ಚು ಸೌಕರ್ಯವಿರುತ್ತೆ ಎಂದು,
ಎರಡನೆಯ ಮದುವೆಯನ್ನು ಮಾಡಿಕೊಂಡಿದ್ದ ತಂದೆಯು ಸಂತೋಷದಿಂದ
ಮೊದಲ ಹೆಂಡತಿಯ ಮಗನನ್ನು ಕಳುಹಿಸಿಕೊಟ್ಟಿದ್ದ. ಪಟ್ಟಣದಲ್ಲಿ ಅಕ್ಕನ
ಮನೆಯಲ್ಲಿರಬೇಕಾದಾಗ, ಭಾವನು ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಾನೋ
ಎನ್ನುವ ಕಾತರವು ತಮ್ಮನಿಗೆ ಇರುತ್ತೆ. ಆದರೆ ಭಾವನು ಕೂಡ ಬಲು ಆದರದಿಂದ
ಇವನನ್ನು ನಡೆಸಿಕೊಂಡನಂತೆ. ದಂಪತಿಗಳು ಬಹಳ ಅನ್ನೋನ್ಯವಾಗಿದ್ದ ಸಂಸಾರ.
ಶ್ರೀಮಂತರಲ್ಲದಿದ್ದರೂ, ಬಡತನದ ಬೇಗೆಯು ಅವರನ್ನು ತಟ್ಟಿರಲಿಲ್ಲ. ದೇವರು
ದಿಂಡರು ಎಂದರೆ ತುಂಬಾ ಭಕ್ತಿ. ಮನೆಯವರೆಲ್ಲರೂ ಪ್ರತಿ ಭಾನುವಾರವೂ
ಇಗರ್ಜಿಗೆ ತಪ್ಪದೆ ಹೋಗಿ ಪ್ರಾರ್ಥನೆ ಸಲ್ಲಿಸಿ ಬರುತ್ತಿದ್ದರು. ಈ ಮಾತು
ಹೇಳಿದಾಗ ತಮ್ಮನು ತುಸು ಉದ್ಯೋಗಿಯಾದ.
{{gap}}'ನಾನೂ ತಪ್ಪದೆ ಇಗರ್ಜಿಗೆ ಹೋಗಿ ಬರುತ್ತೇನೆ, ಡಾಕ್ಟರೇ ! ಅಕ್ಕನಿಗೆ
ಸಂತೋಷವಾಗಲಿ ಅಂತ, ಆದರೆ ಜಾತಿ ಮತ ಎನ್ನುವ ಅತಿ ಮಡಿವಂತಿಕೆ
ನನಗೆ ಹಿಡಿಸುಲ್ಲ' ಎಂದು ಹೇಳಿದ.
{{gap}}ಇವನ್ಯಾಕೆ ಉದ್ವೇಗಗೊಂಡ ಎಂದು ನನ್ನ ಕುತೂಹಲವು ಕೆರಳಿತು. ಆದ
ಕಾರಣ 'ಹಾಗೇಕೆ ಅಂತೀ' ಎಂದೆ. 'ನಿನ್ನ ಅಭಿಪ್ರಾಯವೇ ನನ್ನದೂನೂ ಈ
ವಿಷಯದಲ್ಲಿ. ಆದರೆ ನೀನು ಸಂಪ್ರದಾಯಸ್ಥರ ಮನೆಯಲ್ಲಿ ಬೆಳೆದವ. ಹೀಗನ್ನ
ಬೇಕಾದರೆ ಏನಾದರೂ ಕಾರಣವಿರಬೇಕು' ಎಂದು ಕುಮ್ಮಕ್ಕು ಕೊಟ್ಟೆ, ಅವನ
ಬಾಯಿ ಬಿಡಿಸಲು. ಸ್ವಲ್ಪಕಾಲ ಎಳ್ಳಂಬಳಸೆ ಮಾಡಿದ ಮೇಲೆ ಅವನು ವಿಷಯವನ್ನು
ತಿಳಿಸಿದ.
{{gap}}ಇವ ಆಡಿಟರ್ ಪರೀಕ್ಷೆಗೆ ಓದುತ್ತಿದ್ದ. ಜೊತೆಯಲ್ಲಿ ಓದುತ್ತಿದ್ದ ತರುಣಿ
ಯೊಬ್ಬಳಲ್ಲಿ ಇವ ಅನುರಕ್ತನಾಗಿದ್ದ. ಇವನನ್ನು ಕಂಡರೆ ಆಕೆಯೂ ಬಾಯಿ
ಬಿಡುತ್ತಿದ್ದಳು. ಇವನನ್ನು ಮದುವೆಯಾಗುವುದಕ್ಕೆ ಅವಳೂ ಸಮ್ಮತಿಸಿದ್ದಳು.
ಆದರೆ ಅವಳು ಅನಾಥಾಲಯದಲ್ಲಿ ಬೆಳೆದ ಹುಡುಗಿ, ಜಾಣ ವಿದ್ಯಾರ್ಥಿನಿ.
ಆದುದರಿಂದ ವಿದ್ಯಾರ್ಥಿವೇತನವನ್ನು ತಪ್ಪದೆ ಪಡೆದು ಓದನ್ನು ಮುಂದುವರಿಸಿದ್ದಳು.<noinclude></noinclude>
cvl8a3stmt5hu0tfr73kgb42wgevwg6
ಪುಟ:ಮನಮಂಥನ.pdf/೧೫೫
104
62602
316610
314009
2026-05-04T02:40:09Z
Shreelatha.Halemane
7642
/* Proofread */
316610
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೧೩೬}}{{Right|ಮನಮಂಥನ}}
ಆದರೆ ಅವಳು ಕ್ರಿಶ್ಚಿಯನ್ ಹುಡುಗಿಯಲ್ಲ. ರೋಮನ್ ಕ್ಯಾಥೋಲಿಕ್ ಅಲ್ಲ.
ತಂದೆ ತಾಯಿಯರ ಜಾತಿ ಯಾವುದು ಎಂದು ತಿಳಿಯದೆ ಇದ್ದಿದ್ದರೂ, ಹಿಂದೂ
ಅನಾಥಾಲಯದಲ್ಲಿ ಶೈಶವದಿಂದ ಬೆಳೆದಿದ್ದಳು. ಹಿಂದೂ ಎಂದು ನಂಬಿಕೊಂಡಿದ್ದಳು.
{{gap}}ಈ ವಿಷಯದಲ್ಲಿ ಅಕ್ಕ ಮತ್ತು ಭಾವನ ಜೊತೆಯಲ್ಲಿ ಹಲವಾರು ತಿಂಗಳು
ಗಳಿಂದಲೂ ಇವನು ವಾಗ್ವಾದ ಮಾಡುತ್ತಿದ್ದ. ಈ ಮಧ್ಯಾಹ್ನ ವಾಗ್ವಾದದ ಬಿಸಿ
ಏರಿತ್ತು. 'ಏನೇ ಹೇಳಿ ನೀವು, ನಾನು ಖಂಡಿತ ಅವಳನ್ನೇ ಮದುವೆಯಾಗುವುದು.
ಮನೆ ಬಿಟ್ಟು ಈಗಲೇ ಹೋಗು ಅಂದರೆ ಹೋಗುತ್ತೀನಿ. ಜಾತಿ ಮತ ಇವುಗಳಲ್ಲಿ
ನನಗೆ ನಂಬಿಕೆ ಇಲ್ಲ.' ಎಂದು ಖಡಾ ಖಂಡಿತವಾಗಿ ಹೇಳಿದ್ದ. 'ಎಳೆಯ ಮಗು
ವಾಗಿದ್ದಾಗಿನಿಂದಲೂ ನಿನ್ನ ಸಾಕಿದ್ದೆನಲ್ಲಾ ! ತಾಯಿಯಿಲ್ಲದ ತಬ್ಬಲಿ ಅಂತ
ಎಷ್ಟೆಲ್ಲಾ ಆದರಿಸಿದೆ. ಇಷ್ಟೆಲ್ಲಾ ಪ್ರೀತಿಯನ್ನು ತೋರಿಸಿದ್ದಕ್ಕೆ ಇದೇ ನಿನ್ನ ಕಡೆಯ
ಮಾತೇನೋ?' ಎಂದು ಇರುದಯ ಮೇರಿ ಉದ್ವೇಗದಿಂದ ನುಡಿದಿದ್ದಳು.
ಹಠಾತ್ತನೆ ಜ್ಞಾನ ತಪ್ಪಿ ಬಿದ್ದು ಬಿಟ್ಟಿದ್ದಳು.
{{gap}}ಹೊಟ್ಟೆಯಲ್ಲಿ ಹುಟ್ಟಿದ ಮಗನಿಗಿಂತ ಹೆಚ್ಚು ಆದರದಿಂದ ಇರುದಯ
ಮೇರಿ ತಮ್ಮನನ್ನು ಸಲಹಿದ್ದಳು. ತಾನು ಹೇಳಿದಂತೆ ಕೇಳುತ್ತಾನೆ. ತಾನು ನಿಶ್ಚಯಿಸಿದ
ಹುಡುಗಿಯನ್ನು ಮರು ಮಾತಾಡದೆ ಒಪ್ಪಿ ಮದುವೆಯಾಗುತ್ತಾನೆ. ತಾನು
ಮೆರೆಯಬಹುದು ಎಂದೆಲ್ಲಾ ಇರುದಯ ಮೇರಿ ಮನಸ್ಸಿನಲ್ಲಿ ಮಂಡಿಗೆಯನ್ನು
ಮೆಲ್ಲುತ್ತಿದ್ದಳು. ಇನ್ನೊಂದು ಜಾತಿಯ ಹುಡುಗಿಯನ್ನು ಮದುವೆಯಾಗಿ, ಬೇರೆ
ಹೋಗಿ ಸಂಸಾರ ಮಾಡುತ್ತಾನೆ ಎಂದಾಗ ಅವಳ ಮನಸ್ಸಿಗೆ ತೀವ್ರ ಆಘಾತ
ವಾಯಿತು.
{{gap}}ಆಗ ಹಿಸ್ಟಿರಿಯಾ ಪ್ರದರ್ಶನವು, ಜ್ಞಾನ ತಪ್ಪಿರುವಂತೆ, ನಾಟಕ ನಡೆಸಿತು.
'ಹಿಸ್ಟಿರಿಕಲ್ ಫಿಟ್' ಬಡಿಯಿತು. ಹೀಗೆಲ್ಲಾ ನಾಟಕವಾಡಿ ಫಿಟ್ ಬಂದಂತೆ
ಆಗಬೇಕು ಎಂದು ಇರುದಯ ಮೇರಿ ಖಂಡಿತವಾಗಿ ಯೋಚಿಸಿರಲಿಲ್ಲ. ಅವಳ
ಅರಿವಿಲ್ಲದೇ, ಆಳಮನಸ್ಸಿನಲ್ಲಿ ಹೂಡಿದ ಯೋಜನೆ ಇದು, ಫಿಟ್ ಬಡಿದಾಗ
ತಮ್ಮನೇನೋ ಅಕ್ಕನ ವಿಷಯದಲ್ಲಿ ತುಂಬಾ ಕಾತರವನ್ನು ತೋರಿಸಿದ. ಆದರೆ
ಅದೇ ರೀತಿ ಬಾಳಿನುದ್ದಕ್ಕೂ ಇರಲು ಸಾಧ್ಯವೇ ? ಇದೆಲ್ಲಾ ವಿಚಾರಗಳನ್ನು
ಹಿಸ್ಟಿರಿಯಾ ರೋಗಿಗಳು ಮಾಡಲು ಸಾಧ್ಯವಿರುವುದಿಲ್ಲ.
'''ರಾಮಾಂಜನಿಯ ತೋಳು'''
{{gap}}ಸುಮಾರು ೨೦ ವರ್ಷಗಳಾಗಿರಬಹುದು, ನಮ್ಮ ರಾಮಾಂಜನಿಗೆ, ಕಳೆದ<noinclude></noinclude>
hjfe6lxmt6iogrx6x5y0kykx44f8xi0
316629
316610
2026-05-04T03:00:16Z
Shreesha Sharma
7840
/* Validated */
316629
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೩೬}}{{Right|ಮನಮಂಥನ}}
ಆದರೆ ಅವಳು ಕ್ರಿಶ್ಚಿಯನ್ ಹುಡುಗಿಯಲ್ಲ. ರೋಮನ್ ಕ್ಯಾಥೋಲಿಕ್ ಅಲ್ಲ.
ತಂದೆ ತಾಯಿಯರ ಜಾತಿ ಯಾವುದು ಎಂದು ತಿಳಿಯದೆ ಇದ್ದಿದ್ದರೂ, ಹಿಂದೂ
ಅನಾಥಾಲಯದಲ್ಲಿ ಶೈಶವದಿಂದ ಬೆಳೆದಿದ್ದಳು. ಹಿಂದೂ ಎಂದು ನಂಬಿಕೊಂಡಿದ್ದಳು.
{{gap}}ಈ ವಿಷಯದಲ್ಲಿ ಅಕ್ಕ ಮತ್ತು ಭಾವನ ಜೊತೆಯಲ್ಲಿ ಹಲವಾರು ತಿಂಗಳು
ಗಳಿಂದಲೂ ಇವನು ವಾಗ್ವಾದ ಮಾಡುತ್ತಿದ್ದ. ಈ ಮಧ್ಯಾಹ್ನ ವಾಗ್ವಾದದ ಬಿಸಿ
ಏರಿತ್ತು. 'ಏನೇ ಹೇಳಿ ನೀವು, ನಾನು ಖಂಡಿತ ಅವಳನ್ನೇ ಮದುವೆಯಾಗುವುದು.
ಮನೆ ಬಿಟ್ಟು ಈಗಲೇ ಹೋಗು ಅಂದರೆ ಹೋಗುತ್ತೀನಿ. ಜಾತಿ ಮತ ಇವುಗಳಲ್ಲಿ
ನನಗೆ ನಂಬಿಕೆ ಇಲ್ಲ.' ಎಂದು ಖಡಾ ಖಂಡಿತವಾಗಿ ಹೇಳಿದ್ದ. 'ಎಳೆಯ ಮಗು
ವಾಗಿದ್ದಾಗಿನಿಂದಲೂ ನಿನ್ನ ಸಾಕಿದ್ದೆನಲ್ಲಾ ! ತಾಯಿಯಿಲ್ಲದ ತಬ್ಬಲಿ ಅಂತ
ಎಷ್ಟೆಲ್ಲಾ ಆದರಿಸಿದೆ. ಇಷ್ಟೆಲ್ಲಾ ಪ್ರೀತಿಯನ್ನು ತೋರಿಸಿದ್ದಕ್ಕೆ ಇದೇ ನಿನ್ನ ಕಡೆಯ
ಮಾತೇನೋ?' ಎಂದು ಇರುದಯ ಮೇರಿ ಉದ್ವೇಗದಿಂದ ನುಡಿದಿದ್ದಳು.
ಹಠಾತ್ತನೆ ಜ್ಞಾನ ತಪ್ಪಿ ಬಿದ್ದು ಬಿಟ್ಟಿದ್ದಳು.
{{gap}}ಹೊಟ್ಟೆಯಲ್ಲಿ ಹುಟ್ಟಿದ ಮಗನಿಗಿಂತ ಹೆಚ್ಚು ಆದರದಿಂದ ಇರುದಯ
ಮೇರಿ ತಮ್ಮನನ್ನು ಸಲಹಿದ್ದಳು. ತಾನು ಹೇಳಿದಂತೆ ಕೇಳುತ್ತಾನೆ. ತಾನು ನಿಶ್ಚಯಿಸಿದ
ಹುಡುಗಿಯನ್ನು ಮರು ಮಾತಾಡದೆ ಒಪ್ಪಿ ಮದುವೆಯಾಗುತ್ತಾನೆ. ತಾನು
ಮೆರೆಯಬಹುದು ಎಂದೆಲ್ಲಾ ಇರುದಯ ಮೇರಿ ಮನಸ್ಸಿನಲ್ಲಿ ಮಂಡಿಗೆಯನ್ನು
ಮೆಲ್ಲುತ್ತಿದ್ದಳು. ಇನ್ನೊಂದು ಜಾತಿಯ ಹುಡುಗಿಯನ್ನು ಮದುವೆಯಾಗಿ, ಬೇರೆ
ಹೋಗಿ ಸಂಸಾರ ಮಾಡುತ್ತಾನೆ ಎಂದಾಗ ಅವಳ ಮನಸ್ಸಿಗೆ ತೀವ್ರ ಆಘಾತ
ವಾಯಿತು.
{{gap}}ಆಗ ಹಿಸ್ಟಿರಿಯಾ ಪ್ರದರ್ಶನವು, ಜ್ಞಾನ ತಪ್ಪಿರುವಂತೆ, ನಾಟಕ ನಡೆಸಿತು.
'ಹಿಸ್ಟಿರಿಕಲ್ ಫಿಟ್' ಬಡಿಯಿತು. ಹೀಗೆಲ್ಲಾ ನಾಟಕವಾಡಿ ಫಿಟ್ ಬಂದಂತೆ
ಆಗಬೇಕು ಎಂದು ಇರುದಯ ಮೇರಿ ಖಂಡಿತವಾಗಿ ಯೋಚಿಸಿರಲಿಲ್ಲ. ಅವಳ
ಅರಿವಿಲ್ಲದೇ, ಆಳಮನಸ್ಸಿನಲ್ಲಿ ಹೂಡಿದ ಯೋಜನೆ ಇದು, ಫಿಟ್ ಬಡಿದಾಗ
ತಮ್ಮನೇನೋ ಅಕ್ಕನ ವಿಷಯದಲ್ಲಿ ತುಂಬಾ ಕಾತರವನ್ನು ತೋರಿಸಿದ. ಆದರೆ
ಅದೇ ರೀತಿ ಬಾಳಿನುದ್ದಕ್ಕೂ ಇರಲು ಸಾಧ್ಯವೇ ? ಇದೆಲ್ಲಾ ವಿಚಾರಗಳನ್ನು
ಹಿಸ್ಟಿರಿಯಾ ರೋಗಿಗಳು ಮಾಡಲು ಸಾಧ್ಯವಿರುವುದಿಲ್ಲ.
'''ರಾಮಾಂಜನಿಯ ತೋಳು'''
{{gap}}ಸುಮಾರು ೨೦ ವರ್ಷಗಳಾಗಿರಬಹುದು, ನಮ್ಮ ರಾಮಾಂಜನಿಗೆ, ಕಳೆದ<noinclude></noinclude>
ry85h3k8agyr2ib4iwzunc9v0jqvvwf
ಪುಟ:ಮನಮಂಥನ.pdf/೧೫೬
104
62603
316560
314291
2026-05-03T14:38:50Z
Shreesha Sharma
7840
316560
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೩೭}}
ಎಂಟು ಹತ್ತು ವರ್ಷಗಳಿಂದ ನಮ್ಮ ಬಡಾವಣೆಯಲ್ಲಿ ಅಂಚೆಪೇದೆಯಾಗಿದ್ದಾನೆ.
ಸ್ವಲ್ಪ ಮಂಕು ಅಂತಲೇ ಹೇಳಬೇಕು. ಆದುದರಿಂದಲೇ ಏನೋ ಗಾಣದ ಎತ್ತಿ
ನಂತೆ ದುಡಿಯುತ್ತಿದ್ದ. ನೆಗಡಿ, ಕೆಮ್ಮು, ತಲೆನೋವು, ಮೂಗು ನೋವು, ಅಂತ
ಆಗಿಂದಾಗ್ಗೆ ಚಿಕಿತ್ಸೆಗೆ ಬರುತ್ತಿದ್ದ. ಹೆಚ್ಚು ಮಾತನಾಡುವ ಸ್ವಭಾವದವನಲ್ಲ. ಹು
ಉಷ್ಣುಗಳಿಂದಲೇ ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ಕೊಡುತ್ತಿದ್ದ.
{{gap}}ಒಂದು ಬೆಳಿಗ್ಗೆ ಸಂಪಿಗೆ ಮರದ ಮನೆಗೆ ಕಾಗದವನ್ನು ವಿಲೇವಾರಿ
ಮಾಡಲು ಹೋಗಿದ್ದನಂತೆ. ಆ ಮನೆಯವರು ಹೊಸ ನಾಯಿಯೊಂದನ್ನು
ತಂದಿಟ್ಟುಕೊಂಡಿದ್ದರಂತೆ. ಇವನನ್ನು ಕಂಡು, ಕಟ್ಟಿ ಹಾಕಿದ್ದ ನಾಯಿಯು
ಬೊಗಳಿತಂತೆ. ಧಡೂತಿ ನಾಯಿಯ ಭರ್ಜರಿ ಬೊಗಳುವಿಕೆಗೆ, ರಾಮಾಂಜನಿಯು
ಬೆಬ್ಬರ ಬೆದರಿದನಂತೆ. ಕಾಂಪೌಂಡಿನಿಂದ ರಸ್ತೆಗೆ ಹಿಂದೇಟು ನೆಗೆದನಂತೆ.
{{gap}}ರಸ್ತೆಯಲ್ಲಿ ಆ ವೇಳೆಗೆ ಸರಿಯಾಗಿ ಲಾರಿಯೊಂದು ಬರುತ್ತಿತ್ತಂತೆ.
ಸೇಂದಿಯನ್ನು ತುಂಬಿಕೊಂಡು ಬರುತ್ತಿದ್ದ ಲಾರಿ. ಅಂದಮೇಲೆ ಅದರ ವಜನ್
ಕೇಳಬೇಕೆ? ಸೇಂದಿಯನ್ನು ತುಂಬಿಕೊಂಡು, ಡ್ರೈವರ್ ಲಾರಿಯನ್ನು
ಚಲಾಯಿಸುತ್ತಿದ್ದ. ಅಂದಮೇಲೆ ಲಾರಿಯ ವೇಗವನ್ನು ಕೇಳಬೇಕೇ ?
{{gap}}ಹಠಾತ್ತನೆ ಹಿಮ್ಮೆಟ್ಟಿ ರಸ್ತೆಗೆ ಬಿದ್ದಿದ್ದ ರಾಮಾಂಜನಿಯ ಎಡ ತೋಳಿಗೆ
ಲಾರಿಯ ಬಲಗಡೆಯ ಮಡ್ಗಾರ್ಡ್ ಗುಮ್ಮಿತು. ಅವನ ಪುಣ್ಯ. ಇಲ್ಲದೆ
ಇದ್ದಿದ್ದರೆ ಲಾರಿಯ ಚಕ್ರದ ಕೆಳಗೆ ಸಿಕ್ಕಿಹಾಕಿಕೊಂಡು ರಾಮಾಂಜನಿಯು
ಅಪ್ಪಚ್ಚಿಯಾಗಬೇಕಾಗಿತ್ತು. ಎಡತೋಳಿಗೆ ಮೂಗುಪೆಟ್ಟು ಬಲವಾಗಿ ಬಿದ್ದಿತ್ತು.
{{gap}}ಅದೇ ಲಾರಿಯಲ್ಲಿ, ಡ್ರೈವರು ರಾಮಾಂಜನಿಯನ್ನು ಆಸ್ಪತ್ರೆಗೆ ಕರೆದುಕೊಂಡು
ಹೋದ. ಅಲ್ಲಿದ್ದ ಡಾಕ್ಟರು ಸಂಪೂರ್ಣವಾಗಿ ಪರೀಕ್ಷೆಯನ್ನು ಮಾಡಿ, ಎಕ್ಸ್ರೇಗಳನ್ನು
ತೆಗೆಸಿನೋಡಿ, 'ಅಂತಹುದೇನೂ ಪೆಟ್ಟು ಬಿದ್ದಿಲ್ಲ. ಮೂರು ನಾಲ್ಕು ದಿನಗಳಲ್ಲಿ
ವಾಸಿಯಾಗುತ್ತೆ' ಎಂದು ಭರವಸೆಯನ್ನು ಕೊಟ್ಟರು. ಸೂಕ್ತ ಚಿಕಿತ್ಸೆಯನ್ನು
ಮಾಡಿದರು. ಅಪಘಾತದ ಸುದ್ದಿಯನ್ನು ಕೇಳಿದ ಲಾರಿಯ ಮಾಲಿಕರು, ಆಸ್ಪತ್ರೆಗೆ
ಧಾವಿಸಿ ಬಂದು ರಾಮಾಂಜನಿಯನ್ನು ವಿಚಾರಿಸಿದರು. ಮುಂದೆ
ಅನಾನುಕೂಲವಾಗದಿರಲಿ ಎಂದು ಪೋಲಿಸ್ ಠಾಣೆಗೆ ಹೋಗಿ ವರದಿಯನ್ನು
ಒಪ್ಪಿಸಿದರು.
{{gap}}'ಪೊಲೀಸ್ ಮೊಕದ್ದಮೆಯಾಗುತ್ತದೆ. ಆದಕಾರಣ ವಿವರಗಳೆಲ್ಲವೂ
ತೃಪ್ತಿಕರವಾಗಿರಬೇಕು, ಡಾಕ್ಟರೆ' ಎಂದು ವಾರ್ಡಿನ ಡಾಕ್ಟರಿಗೆ ಎಚ್ಚರಿಕೆಯನ್ನು
ಕೊಟ್ಟರು.<noinclude></noinclude>
bmalfqzj6mzd9nh35zmsfcpk82hyuuy
316611
316560
2026-05-04T02:40:57Z
Shreelatha.Halemane
7642
/* Validated */
316611
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೩೭}}
ಎಂಟು ಹತ್ತು ವರ್ಷಗಳಿಂದ ನಮ್ಮ ಬಡಾವಣೆಯಲ್ಲಿ ಅಂಚೆಪೇದೆಯಾಗಿದ್ದಾನೆ.
ಸ್ವಲ್ಪ ಮಂಕು ಅಂತಲೇ ಹೇಳಬೇಕು. ಆದುದರಿಂದಲೇ ಏನೋ ಗಾಣದ ಎತ್ತಿ
ನಂತೆ ದುಡಿಯುತ್ತಿದ್ದ. ನೆಗಡಿ, ಕೆಮ್ಮು, ತಲೆನೋವು, ಮೂಗು ನೋವು, ಅಂತ
ಆಗಿಂದಾಗ್ಗೆ ಚಿಕಿತ್ಸೆಗೆ ಬರುತ್ತಿದ್ದ. ಹೆಚ್ಚು ಮಾತನಾಡುವ ಸ್ವಭಾವದವನಲ್ಲ. ಹುಂ
ಉಹುಂಗಳಿಂದಲೇ ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ಕೊಡುತ್ತಿದ್ದ.
{{gap}}ಒಂದು ಬೆಳಿಗ್ಗೆ ಸಂಪಿಗೆ ಮರದ ಮನೆಗೆ ಕಾಗದವನ್ನು ವಿಲೇವಾರಿ
ಮಾಡಲು ಹೋಗಿದ್ದನಂತೆ. ಆ ಮನೆಯವರು ಹೊಸ ನಾಯಿಯೊಂದನ್ನು
ತಂದಿಟ್ಟುಕೊಂಡಿದ್ದರಂತೆ. ಇವನನ್ನು ಕಂಡು, ಕಟ್ಟಿ ಹಾಕಿದ್ದ ನಾಯಿಯು
ಬೊಗಳಿತಂತೆ. ಧಡೂತಿ ನಾಯಿಯ ಭರ್ಜರಿ ಬೊಗಳುವಿಕೆಗೆ, ರಾಮಾಂಜನಿಯು
ಬೆಬ್ಬರ ಬೆದರಿದನಂತೆ. ಕಾಂಪೌಂಡಿನಿಂದ ರಸ್ತೆಗೆ ಹಿಂದೇಟು ನೆಗೆದನಂತೆ.
{{gap}}ರಸ್ತೆಯಲ್ಲಿ ಆ ವೇಳೆಗೆ ಸರಿಯಾಗಿ ಲಾರಿಯೊಂದು ಬರುತ್ತಿತ್ತಂತೆ.
ಸೇಂದಿಯನ್ನು ತುಂಬಿಕೊಂಡು ಬರುತ್ತಿದ್ದ ಲಾರಿ. ಅಂದಮೇಲೆ ಅದರ ವಜನ್
ಕೇಳಬೇಕೆ? ಸೇಂದಿಯನ್ನು ತುಂಬಿಕೊಂಡು, ಡ್ರೈವರ್ ಲಾರಿಯನ್ನು
ಚಲಾಯಿಸುತ್ತಿದ್ದ. ಅಂದಮೇಲೆ ಲಾರಿಯ ವೇಗವನ್ನು ಕೇಳಬೇಕೇ ?
{{gap}}ಹಠಾತ್ತನೆ ಹಿಮ್ಮೆಟ್ಟಿ ರಸ್ತೆಗೆ ಬಿದ್ದಿದ್ದ ರಾಮಾಂಜನಿಯ ಎಡ ತೋಳಿಗೆ
ಲಾರಿಯ ಬಲಗಡೆಯ ಮಡ್ಗಾರ್ಡ್ ಗುಮ್ಮಿತು. ಅವನ ಪುಣ್ಯ. ಇಲ್ಲದೆ
ಇದ್ದಿದ್ದರೆ ಲಾರಿಯ ಚಕ್ರದ ಕೆಳಗೆ ಸಿಕ್ಕಿಹಾಕಿಕೊಂಡು ರಾಮಾಂಜನಿಯು
ಅಪ್ಪಚ್ಚಿಯಾಗಬೇಕಾಗಿತ್ತು. ಎಡತೋಳಿಗೆ ಮೂಗುಪೆಟ್ಟು ಬಲವಾಗಿ ಬಿದ್ದಿತ್ತು.
{{gap}}ಅದೇ ಲಾರಿಯಲ್ಲಿ, ಡ್ರೈವರು ರಾಮಾಂಜನಿಯನ್ನು ಆಸ್ಪತ್ರೆಗೆ ಕರೆದುಕೊಂಡು
ಹೋದ. ಅಲ್ಲಿದ್ದ ಡಾಕ್ಟರು ಸಂಪೂರ್ಣವಾಗಿ ಪರೀಕ್ಷೆಯನ್ನು ಮಾಡಿ, ಎಕ್ಸ್ರೇಗಳನ್ನು
ತೆಗೆಸಿನೋಡಿ, 'ಅಂತಹುದೇನೂ ಪೆಟ್ಟು ಬಿದ್ದಿಲ್ಲ. ಮೂರು ನಾಲ್ಕು ದಿನಗಳಲ್ಲಿ
ವಾಸಿಯಾಗುತ್ತೆ' ಎಂದು ಭರವಸೆಯನ್ನು ಕೊಟ್ಟರು. ಸೂಕ್ತ ಚಿಕಿತ್ಸೆಯನ್ನು
ಮಾಡಿದರು. ಅಪಘಾತದ ಸುದ್ದಿಯನ್ನು ಕೇಳಿದ ಲಾರಿಯ ಮಾಲಿಕರು, ಆಸ್ಪತ್ರೆಗೆ
ಧಾವಿಸಿ ಬಂದು ರಾಮಾಂಜನಿಯನ್ನು ವಿಚಾರಿಸಿದರು. ಮುಂದೆ
ಅನಾನುಕೂಲವಾಗದಿರಲಿ ಎಂದು ಪೋಲಿಸ್ ಠಾಣೆಗೆ ಹೋಗಿ ವರದಿಯನ್ನು
ಒಪ್ಪಿಸಿದರು.
{{gap}}'ಪೊಲೀಸ್ ಮೊಕದ್ದಮೆಯಾಗುತ್ತದೆ. ಆದಕಾರಣ ವಿವರಗಳೆಲ್ಲವೂ
ತೃಪ್ತಿಕರವಾಗಿರಬೇಕು, ಡಾಕ್ಟರೆ' ಎಂದು ವಾರ್ಡಿನ ಡಾಕ್ಟರಿಗೆ ಎಚ್ಚರಿಕೆಯನ್ನು
ಕೊಟ್ಟರು.<noinclude></noinclude>
9tr385p6wxtgys012ozutx9i0qmzcip
ಪುಟ:ಮನಮಂಥನ.pdf/೧೫೭
104
62604
316612
314011
2026-05-04T02:42:21Z
Shreelatha.Halemane
7642
/* Proofread */
316612
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೧೩೮}}{{Right|ಮನಮಂಥನ}}
{{gap}}ವಾರ್ಡಿನ ಡಾಕ್ಟರು, ಅಗತ್ಯವಾದುದೆಲ್ಲವನ್ನೂ ಮಾಡಿದ್ದರು. ಆದರೆ
ನ್ಯಾಯಾಸ್ಥಾನದಲ್ಲಿ ಎಂತೆಂತಹ ಪ್ರಶ್ನೆಗಳನ್ನು ಕೇಳುತ್ತಾರೋ ಏನೋ ! ನನಗ್ಯಾಕೆ
ಇದರ ಜವಾಬ್ದಾರಿ ಎಂದುಕೊಂಡು, ಆಸ್ಪತ್ರೆಯ ಹಿರಿಯ ವೈದ್ಯರು
ಮೂವರನ್ನು ಕರಸಿ, ಅವರ ಸಲಹೆಗಳನ್ನು ಗುರ್ತು ಮಾಡಿಸಿದರು, ರೋಗಿಯ
ವರದಿಯಲ್ಲಿ.
{{gap}}ಮೂರು ನಾಲ್ಕು ದಿನಗಳಲ್ಲಿ ವಾಸಿಯಾಗುತ್ತೆ ಎಂದು ಡಾಕ್ಟರು ಮೊದಲು
ಹೇಳಿದಾಗ, ರಾಮಾಂಜನಿಗೆ ಸಂತೋಷವಾಗಿತ್ತು. ಘೋರವಾಗಬಹುದಾಗಿದ್ದ
ಆಘಾತವು ಇಷ್ಟರಲ್ಲೇ ಪರ್ಯವಸಾನವಾಯಿತಲ್ಲ ಎನ್ನುವ ಸಮಾಧಾನ. ಆದರೆ
ಮೂರು ನಾಲ್ಕು ಜನ ಡಾಕ್ಟರುಗಳು ಬಂದು, ಮೇಲಿಂದ ಮೇಲೆ ಪರೀಕ್ಷೆಯನ್ನು
ಮಾಡಿ, ಸ್ವಹಸ್ತದಲ್ಲಿ ವರದಿಯ ಹಾಳೆಗಳನ್ನು ತುಂಬಿದ್ದನ್ನು ನೋಡಿದ, ಇಷ್ಟೆಲ್ಲಾ
ತಪಾಸು ಮಾಡಬೇಕಾದರೆ, ನನಗೇನೋ ಆಗಿದೆ, ಅಥವಾ ಮುಂದೆ ಆಗಬಹುದು
ಎನ್ನುವ ಅನುಮಾನವು ಮೂಡಿತು.
{{gap}}ರಾಮಾಂಜನಿಯ ಹೇಳಿಕೆಯನ್ನು ಬರೆದುಕೊಳ್ಳಲು ಪೋಲೀಸಿನವರು
ಬಂದರು. ಆದುದನ್ನು ಸರಿಯಾಗಿ ಹೇಳು, ಸಾಕಷ್ಟು ಪರಿಹಾರ ಧನವನ್ನು
ಲಾರಿಯ ಮಾಲೀಕರಿಂದ ಗಿಟ್ಟಿಸಬಹುದು. ಅವರು ತಾನೇ ತಮ್ಮ ಕೈಯಿಂದ
ಕೊಡುತ್ತಾರೆಯೇ? ಇನ್ಸೂರೆನ್ಸ್ ಕಂಪನಿ ಪೀಕುತ್ತೆ. ಪೀಕಲಿ ಕಣೋ,' ಎಂದು
ಲಘುವಾಗಿ ಹೇಳಿದ್ದರು.
{{gap}}ಐದಾರು ದಿನಗಳಾದವು. ಎಡತೋಳನ್ನೆತ್ತಲು ರಾಮಾಂಜನಿಗೆ
ಸಾಧ್ಯವಾಗಲಿಲ್ಲ. ಎರಡು ವಾರಗಳಾದರೂ ಗುಣಮುಖವಾಗಲಿಲ್ಲ. ಬದಲು
ನೋವು ಕಾಣಿಸಿಕೊಂಡಿತು. ಹೆಚ್ಚಾಗುತ್ತಲೂ ಹೋಯಿತು. ಡಾಕ್ಟರು ಎಷ್ಟು
ಭರವಸೆಯನ್ನು ಕೊಟ್ಟು ತೋಳನ್ನೆತ್ತು ಎಂದು ಹುರಿದುಂಬಿಸಿದರೂ,
ರಾಮಾಂಜನಿಯು ತೋಳನ್ನು ಎತ್ತಲು ಸಾಧ್ಯವಾಗಲೇ ಇಲ್ಲ.
{{gap}}ನ್ಯಾಯಾಸ್ಥಾನದಲ್ಲಿ ಮೊಕದ್ದಮೆಯು ಮೂರು ವರ್ಷಗಳ ಕಾಲ ನಡೆಯಿತು.
ಕಡೆಗೆ ಎಂಟುನೂರು ರೂಪಾಯಿಗಳ ಪರಿಹಾರ ಧನವು ದೊರಕಿತು, ಆದರೆ
ಬಿದ್ದ ತೋಳು ಪುನಃ ಸ್ವಸ್ಥವಾಗಲೇ ಇಲ್ಲ.
{{gap}}ನನಗೆ ಸಂಭವಿಸಿದ ಅಪಘಾತವು ಅಷ್ಟೇನೂ ಘೋರವಾದುದಲ್ಲ ಎಂದು
ರಾಮಾಂಜನಿಗೆ ಆಸ್ಪತ್ರೆಗೆ ಹೋಗಿ, ಮೊದಲ ಪರೀಕ್ಷೆಯಾದ ನಂತರ,
ಸಮಾಧಾನವಾಗಿತ್ತು. ಆದರೆ ಮೇಲಿಂದ ಮೇಲೆ ಹಲವಾರು ಡಾಕ್ಟರುಗಳು
ಬಂದು ವಿಧ ವಿಧ ಪರೀಕ್ಷೆಗಳನ್ನು ಮಾಡಿದಾಗ, ನನಗೇನೋ ಆಗಬಾರದ್ದು<noinclude></noinclude>
13uqvlhb49t7pm2o6w9mswf1ek4zzt1
316630
316612
2026-05-04T03:00:37Z
Shreesha Sharma
7840
/* Validated */
316630
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೩೮}}{{Right|ಮನಮಂಥನ}}
{{gap}}ವಾರ್ಡಿನ ಡಾಕ್ಟರು, ಅಗತ್ಯವಾದುದೆಲ್ಲವನ್ನೂ ಮಾಡಿದ್ದರು. ಆದರೆ
ನ್ಯಾಯಾಸ್ಥಾನದಲ್ಲಿ ಎಂತೆಂತಹ ಪ್ರಶ್ನೆಗಳನ್ನು ಕೇಳುತ್ತಾರೋ ಏನೋ ! ನನಗ್ಯಾಕೆ
ಇದರ ಜವಾಬ್ದಾರಿ ಎಂದುಕೊಂಡು, ಆಸ್ಪತ್ರೆಯ ಹಿರಿಯ ವೈದ್ಯರು
ಮೂವರನ್ನು ಕರಸಿ, ಅವರ ಸಲಹೆಗಳನ್ನು ಗುರ್ತು ಮಾಡಿಸಿದರು, ರೋಗಿಯ
ವರದಿಯಲ್ಲಿ.
{{gap}}ಮೂರು ನಾಲ್ಕು ದಿನಗಳಲ್ಲಿ ವಾಸಿಯಾಗುತ್ತೆ ಎಂದು ಡಾಕ್ಟರು ಮೊದಲು
ಹೇಳಿದಾಗ, ರಾಮಾಂಜನಿಗೆ ಸಂತೋಷವಾಗಿತ್ತು. ಘೋರವಾಗಬಹುದಾಗಿದ್ದ
ಆಘಾತವು ಇಷ್ಟರಲ್ಲೇ ಪರ್ಯವಸಾನವಾಯಿತಲ್ಲ ಎನ್ನುವ ಸಮಾಧಾನ. ಆದರೆ
ಮೂರು ನಾಲ್ಕು ಜನ ಡಾಕ್ಟರುಗಳು ಬಂದು, ಮೇಲಿಂದ ಮೇಲೆ ಪರೀಕ್ಷೆಯನ್ನು
ಮಾಡಿ, ಸ್ವಹಸ್ತದಲ್ಲಿ ವರದಿಯ ಹಾಳೆಗಳನ್ನು ತುಂಬಿದ್ದನ್ನು ನೋಡಿದ, ಇಷ್ಟೆಲ್ಲಾ
ತಪಾಸು ಮಾಡಬೇಕಾದರೆ, ನನಗೇನೋ ಆಗಿದೆ, ಅಥವಾ ಮುಂದೆ ಆಗಬಹುದು
ಎನ್ನುವ ಅನುಮಾನವು ಮೂಡಿತು.
{{gap}}ರಾಮಾಂಜನಿಯ ಹೇಳಿಕೆಯನ್ನು ಬರೆದುಕೊಳ್ಳಲು ಪೋಲೀಸಿನವರು
ಬಂದರು. ಆದುದನ್ನು ಸರಿಯಾಗಿ ಹೇಳು, ಸಾಕಷ್ಟು ಪರಿಹಾರ ಧನವನ್ನು
ಲಾರಿಯ ಮಾಲೀಕರಿಂದ ಗಿಟ್ಟಿಸಬಹುದು. ಅವರು ತಾನೇ ತಮ್ಮ ಕೈಯಿಂದ
ಕೊಡುತ್ತಾರೆಯೇ? ಇನ್ಸೂರೆನ್ಸ್ ಕಂಪನಿ ಪೀಕುತ್ತೆ. ಪೀಕಲಿ ಕಣೋ,' ಎಂದು
ಲಘುವಾಗಿ ಹೇಳಿದ್ದರು.
{{gap}}ಐದಾರು ದಿನಗಳಾದವು. ಎಡತೋಳನ್ನೆತ್ತಲು ರಾಮಾಂಜನಿಗೆ
ಸಾಧ್ಯವಾಗಲಿಲ್ಲ. ಎರಡು ವಾರಗಳಾದರೂ ಗುಣಮುಖವಾಗಲಿಲ್ಲ. ಬದಲು
ನೋವು ಕಾಣಿಸಿಕೊಂಡಿತು. ಹೆಚ್ಚಾಗುತ್ತಲೂ ಹೋಯಿತು. ಡಾಕ್ಟರು ಎಷ್ಟು
ಭರವಸೆಯನ್ನು ಕೊಟ್ಟು ತೋಳನ್ನೆತ್ತು ಎಂದು ಹುರಿದುಂಬಿಸಿದರೂ,
ರಾಮಾಂಜನಿಯು ತೋಳನ್ನು ಎತ್ತಲು ಸಾಧ್ಯವಾಗಲೇ ಇಲ್ಲ.
{{gap}}ನ್ಯಾಯಾಸ್ಥಾನದಲ್ಲಿ ಮೊಕದ್ದಮೆಯು ಮೂರು ವರ್ಷಗಳ ಕಾಲ ನಡೆಯಿತು.
ಕಡೆಗೆ ಎಂಟುನೂರು ರೂಪಾಯಿಗಳ ಪರಿಹಾರ ಧನವು ದೊರಕಿತು, ಆದರೆ
ಬಿದ್ದ ತೋಳು ಪುನಃ ಸ್ವಸ್ಥವಾಗಲೇ ಇಲ್ಲ.
{{gap}}ನನಗೆ ಸಂಭವಿಸಿದ ಅಪಘಾತವು ಅಷ್ಟೇನೂ ಘೋರವಾದುದಲ್ಲ ಎಂದು
ರಾಮಾಂಜನಿಗೆ ಆಸ್ಪತ್ರೆಗೆ ಹೋಗಿ, ಮೊದಲ ಪರೀಕ್ಷೆಯಾದ ನಂತರ,
ಸಮಾಧಾನವಾಗಿತ್ತು. ಆದರೆ ಮೇಲಿಂದ ಮೇಲೆ ಹಲವಾರು ಡಾಕ್ಟರುಗಳು
ಬಂದು ವಿಧ ವಿಧ ಪರೀಕ್ಷೆಗಳನ್ನು ಮಾಡಿದಾಗ, ನನಗೇನೋ ಆಗಬಾರದ್ದು<noinclude></noinclude>
rwyedyaituultji6fs8c494byrgz8lp
ಪುಟ:ಮನಮಂಥನ.pdf/೧೫೮
104
62605
316613
314012
2026-05-04T02:43:34Z
Shreelatha.Halemane
7642
/* Proofread */
316613
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೩೯}}
ಆಗುತ್ತೆ ಎನ್ನುವ ಸಂಶಯವು ಮೂಡಿತ್ತು. ಅದು ದೃಢವಾಗುತ್ತಲೂ ಇತ್ತು.
ಪರಿಹಾರ ಧನವು ದೊರಕುತ್ತದೆ. ಅಪಘಾತದ ನೆಪದಿಂದಾಗಿ ಲಾಭವನ್ನು
ಪಡೆಯಬಹುದು, ಎಂಬುದು ತಿಳಿಯಿತು. ವಿಚಾರ ಮಾಡುವ ಯೋಗ್ಯತೆಯು
ಇರಲಿಲ್ಲ. ತೋಳು ಸರಿಹೋಗಿ ಕೆಲಸಕ್ಕೆ ಹಿಂತಿರುಗಿದರೆ ಇನ್ನೂ ಹೆಚ್ಚು
ಸಂಪಾದಿಸಬಹುದು ಎನ್ನುವ ವಿವೇಚನೆಯು ಬರಲಿಲ್ಲ. ಆಗ ಹಿಸ್ಟಿರಿಯಾ
ತೆರನ ಪ್ರದರ್ಶನವು ಭದ್ರವಾಯಿತು. ಬಲವಾಗಿ ಬೇರೂರಿದ ಈ ಪ್ರವೃತ್ತಿಯು
ಸ್ಥಿತವಾಯಿತು. ಪರಿಹಾರ ಧನವು ದೊರೆತರೂ, ಸ್ಥಿರವಾಗಿದ್ದುದರಿಂದ ಹಿಸ್ಟಿರಿಯಾ
ಪ್ರದರ್ಶನವು ಮುಂದುವರೆಯಿತು.
{{gap}}ಇದೇ ರೀತಿಯಲ್ಲಿ ಅಪಘಾತಗಳಾದಾಗ, ತಲೆಗೆ ಅಲ್ಪ ಸ್ವಲ್ಪ ಪೆಟ್ಟು ಬಿದ್ದರೂ,
ಅದೇ ಕಾರಣದಿಂದಾಗಿ ಸದಾಕಾಲ ಕಾಡುವ ತೀವ್ರವಾದ ತಲೆ ಶೂಲೆಯು
ಉಂಟಾಗಬಹುದು. ಅದರಂತೆಯೇ ದೃಷ್ಟಿ ದೋಷವೂ ಪ್ರಾರಂಭವಾಗಬಹುದು.
ಕಿವುಡೂ ಕಾಣಿಸಿಕೊಳ್ಳಬಹುದು. ಇತರರ ಕಣ್ಣಿಗೆ ಬಡಿಯುವಂತೆ ಕಾಣಿಸುವ
ನ್ಯೂನತೆಗಳನ್ನೇ ಹಿಸ್ಟಿರಿಯಾ ಪ್ರದರ್ಶನದಲ್ಲಿ ಕಾಣುತ್ತೇವೆ.
{{gap}}ಅಪಘಾತದ ಹಿಸ್ಟಿರಿಯಾ ಪ್ರದರ್ಶನಕ್ಕೆ ಇತಿಮಿತಿಯೇ ಇಲ್ಲ. ಇವುಗಳಲ್ಲಿ
ಮುಖ್ಯವಾದ ಅಂಶಗಳೆಂದರೆ ೧. ಹಿಸ್ಟಿರಿಯಾ ಪ್ರವೃತ್ತಿಯು ಹುಟ್ಟು ಜಾಯಮಾನ
ವಾಗಿರುವುದು. ೨. ಅದಕ್ಕಿಂತಲೂ ಪರಿಣಾಮಕಾರಿಯಾದ ಅಂಶವೆಂದರೆ ಪರಿಸರದ
ಪ್ರಭಾವ-Envirormental Factors. ೩. ಯಾವುದಾದರೂ ಒಂದು ರೀತಿಯ
ಪ್ರಯೋಜನವನ್ನಾಗಲೀ ಲಾಭವನ್ನಾಗಲೀ ಪಡೆಯುವುದು. ಮೂಲವಾದ
ಈ ಮೂರೂ ಕಾರಣಗಳಿಂದ Traumatic Hysteria, ಅಪಘಾತದ ಹಿಸ್ಟಿರಿಯಾ
ಉಂಟಾಗುತ್ತದೆ.
{{gap}}ಆದರೆ ಇನ್ನು ಕೆಲವರಲ್ಲಿ ದೊರಕಬಹುದಾದ ಲಾಭದ ಅರಿವು
ತೋರಮನಸ್ಸಿನಲ್ಲಿ ಸ್ಪಷ್ಟವಾಗಿರುತ್ತದೆ. ಅವರುಗಳೂ ನ್ಯೂನತೆಯ ಪ್ರದರ್ಶನವನ್ನು
ಮಾಡುತ್ತಾರೆ. ಆದರೆ ಸ್ವಂತ ಇಚ್ಛೆಯಿಂದ, ಯೋಚನೆ ಮಾಡಿ, ಯೋಜನೆಯನ್ನು
ಹೂಡುತ್ತಾರೆ. Malingerers, ನಟಿಸುವವರು, ಎಂಬ ಗುಂಪು ಇವರದು.
ಸೈನ್ಯದ ಹಾಜರಾತಿಯಿಂದ ತಪ್ಪಿಸಿಕೊಳ್ಳುವವರಲ್ಲಿ ಇಂತಹವರು
ಬಹುಸಂಖ್ಯೆಯಲ್ಲಿರುತ್ತಾರೆ.
{{gap}}ಮಗುವಿಗೆ ಹುಟ್ಟಿದ ಹಬ್ಬವನ್ನು ಮಾಡಬೇಕು, ಎಂದು ಆಫೀಸಿನಲ್ಲಿ
ರಜವನ್ನು ಕೇಳಿದರೆ, ಕೊಡುತ್ತಾರೆಯೇ? ಅದರ ಬದಲು ತಲೆನೋವು, ಹೊಟ್ಟೆ
ಮುರಿತ ಎಂದು ರಜೆ ಬೇಡಿದರೆ ಸುಲಭವಾಗಿ ದೊರೆಯುತ್ತದೆ. ಲಘುವಾದ<noinclude></noinclude>
gmh2dv9fqepb37ok33lhrr3xm20yc6f
316631
316613
2026-05-04T03:00:50Z
Shreesha Sharma
7840
/* Validated */
316631
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೩೯}}
ಆಗುತ್ತೆ ಎನ್ನುವ ಸಂಶಯವು ಮೂಡಿತ್ತು. ಅದು ದೃಢವಾಗುತ್ತಲೂ ಇತ್ತು.
ಪರಿಹಾರ ಧನವು ದೊರಕುತ್ತದೆ. ಅಪಘಾತದ ನೆಪದಿಂದಾಗಿ ಲಾಭವನ್ನು
ಪಡೆಯಬಹುದು, ಎಂಬುದು ತಿಳಿಯಿತು. ವಿಚಾರ ಮಾಡುವ ಯೋಗ್ಯತೆಯು
ಇರಲಿಲ್ಲ. ತೋಳು ಸರಿಹೋಗಿ ಕೆಲಸಕ್ಕೆ ಹಿಂತಿರುಗಿದರೆ ಇನ್ನೂ ಹೆಚ್ಚು
ಸಂಪಾದಿಸಬಹುದು ಎನ್ನುವ ವಿವೇಚನೆಯು ಬರಲಿಲ್ಲ. ಆಗ ಹಿಸ್ಟಿರಿಯಾ
ತೆರನ ಪ್ರದರ್ಶನವು ಭದ್ರವಾಯಿತು. ಬಲವಾಗಿ ಬೇರೂರಿದ ಈ ಪ್ರವೃತ್ತಿಯು
ಸ್ಥಿತವಾಯಿತು. ಪರಿಹಾರ ಧನವು ದೊರೆತರೂ, ಸ್ಥಿರವಾಗಿದ್ದುದರಿಂದ ಹಿಸ್ಟಿರಿಯಾ
ಪ್ರದರ್ಶನವು ಮುಂದುವರೆಯಿತು.
{{gap}}ಇದೇ ರೀತಿಯಲ್ಲಿ ಅಪಘಾತಗಳಾದಾಗ, ತಲೆಗೆ ಅಲ್ಪ ಸ್ವಲ್ಪ ಪೆಟ್ಟು ಬಿದ್ದರೂ,
ಅದೇ ಕಾರಣದಿಂದಾಗಿ ಸದಾಕಾಲ ಕಾಡುವ ತೀವ್ರವಾದ ತಲೆ ಶೂಲೆಯು
ಉಂಟಾಗಬಹುದು. ಅದರಂತೆಯೇ ದೃಷ್ಟಿ ದೋಷವೂ ಪ್ರಾರಂಭವಾಗಬಹುದು.
ಕಿವುಡೂ ಕಾಣಿಸಿಕೊಳ್ಳಬಹುದು. ಇತರರ ಕಣ್ಣಿಗೆ ಬಡಿಯುವಂತೆ ಕಾಣಿಸುವ
ನ್ಯೂನತೆಗಳನ್ನೇ ಹಿಸ್ಟಿರಿಯಾ ಪ್ರದರ್ಶನದಲ್ಲಿ ಕಾಣುತ್ತೇವೆ.
{{gap}}ಅಪಘಾತದ ಹಿಸ್ಟಿರಿಯಾ ಪ್ರದರ್ಶನಕ್ಕೆ ಇತಿಮಿತಿಯೇ ಇಲ್ಲ. ಇವುಗಳಲ್ಲಿ
ಮುಖ್ಯವಾದ ಅಂಶಗಳೆಂದರೆ ೧. ಹಿಸ್ಟಿರಿಯಾ ಪ್ರವೃತ್ತಿಯು ಹುಟ್ಟು ಜಾಯಮಾನ
ವಾಗಿರುವುದು. ೨. ಅದಕ್ಕಿಂತಲೂ ಪರಿಣಾಮಕಾರಿಯಾದ ಅಂಶವೆಂದರೆ ಪರಿಸರದ
ಪ್ರಭಾವ-Envirormental Factors. ೩. ಯಾವುದಾದರೂ ಒಂದು ರೀತಿಯ
ಪ್ರಯೋಜನವನ್ನಾಗಲೀ ಲಾಭವನ್ನಾಗಲೀ ಪಡೆಯುವುದು. ಮೂಲವಾದ
ಈ ಮೂರೂ ಕಾರಣಗಳಿಂದ Traumatic Hysteria, ಅಪಘಾತದ ಹಿಸ್ಟಿರಿಯಾ
ಉಂಟಾಗುತ್ತದೆ.
{{gap}}ಆದರೆ ಇನ್ನು ಕೆಲವರಲ್ಲಿ ದೊರಕಬಹುದಾದ ಲಾಭದ ಅರಿವು
ತೋರಮನಸ್ಸಿನಲ್ಲಿ ಸ್ಪಷ್ಟವಾಗಿರುತ್ತದೆ. ಅವರುಗಳೂ ನ್ಯೂನತೆಯ ಪ್ರದರ್ಶನವನ್ನು
ಮಾಡುತ್ತಾರೆ. ಆದರೆ ಸ್ವಂತ ಇಚ್ಛೆಯಿಂದ, ಯೋಚನೆ ಮಾಡಿ, ಯೋಜನೆಯನ್ನು
ಹೂಡುತ್ತಾರೆ. Malingerers, ನಟಿಸುವವರು, ಎಂಬ ಗುಂಪು ಇವರದು.
ಸೈನ್ಯದ ಹಾಜರಾತಿಯಿಂದ ತಪ್ಪಿಸಿಕೊಳ್ಳುವವರಲ್ಲಿ ಇಂತಹವರು
ಬಹುಸಂಖ್ಯೆಯಲ್ಲಿರುತ್ತಾರೆ.
{{gap}}ಮಗುವಿಗೆ ಹುಟ್ಟಿದ ಹಬ್ಬವನ್ನು ಮಾಡಬೇಕು, ಎಂದು ಆಫೀಸಿನಲ್ಲಿ
ರಜವನ್ನು ಕೇಳಿದರೆ, ಕೊಡುತ್ತಾರೆಯೇ? ಅದರ ಬದಲು ತಲೆನೋವು, ಹೊಟ್ಟೆ
ಮುರಿತ ಎಂದು ರಜೆ ಬೇಡಿದರೆ ಸುಲಭವಾಗಿ ದೊರೆಯುತ್ತದೆ. ಲಘುವಾದ<noinclude></noinclude>
8itcp6jzu0kgwpoube7csws5q0h1l83
ಪುಟ:ಮನಮಂಥನ.pdf/೧೫೯
104
62606
316614
314013
2026-05-04T02:44:32Z
Shreelatha.Halemane
7642
/* Proofread */
316614
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೧೪೦}}{{Right|ಮನಮಂಥನ}}
ಈ ಸಾಮಾನ್ಯ ವರ್ತನೆಯ ಉಲ್ಬಣಿಸಿದ ಘೋರ ರೂಪಾಂತರವೇ ನಟನೆ,
Malingering.
ಅಪಘಾತದ ಹಿಸ್ಟಿರಿಯಾವನ್ನು ನಟನೆಯ ಪ್ರದರ್ಶನಗಳಿಂದ ಬೇರ್ಪಡಿಸ
ಬೇಕಾದರೆ, ಬಹಳ ಶ್ರಮವನ್ನು ವಹಿಸಬೇಕು. ಕಣ್ಣಲ್ಲಿ ಕಣ್ಣಿಟ್ಟುಕೊಂಡು ಪರೀಕ್ಷಿಸಬೇಕು.
ತುಂಬಾ ಅನುಭವವನ್ನು ಪಡೆದ ನುರಿತ ವೈದ್ಯರ ಕಣ್ಣಿಗೂ ಹಲವು Malingerers
ಮಣ್ಣೆರಚುತ್ತಾರೆ.
'''ಮುದ್ದುಕೃಷ್ಣನ ರಚ್ಚೆ'''
ಮುದ್ದು ಮುದ್ದಾಗಿತ್ತು. ಮೂರು ವರ್ಷದ ಗಂಡು ಮಗು. ದುಂಡುದುಂಡಾಗಿ
ಬೆಳೆದಿದ್ದ ಮಗು, ಸುಂದರವಾಗಿದ್ದ ಮಗು, ಕಂಡವರಿಗೆ ಕೆನ್ನೆ ಚಿವುಟೋಣ
ಎನ್ನಿಸುತ್ತಿತ್ತು. ಹುಟ್ಟಿದಾಗಲೇ ದುಂಡುದುಂಡಾಗಿದ್ದುದರಿಂದ ಅದರ ಅಜ್ಜಿ 'ಮುದ್ದು
ಕೃಷ್ಣ' ಎಂದು ನಾಮಕರಣವನ್ನು ಹಠಹಿಡಿದು ಮಾಡಿಸಿದಳು. ಅಜ್ಜಿಯ ತದ್ರೂಪ
ಮಗು. 'ಮುಂದೆ ಬೇಕಾದರೆ ಇನ್ನು ಯಾವುದಾದರೂ ಹೆಸರಿಟ್ಟುಕೊಳ್ಳಿ. ನಾನನ್ಯ
ಮುದ್ದು ಕೃಷ್ಣ ಅಂತಲೇ ಕರೆಯುವುದು' ಎಂದು ಅಜ್ಜಿಯ ವಾದ. ಕಡೆಗೆ ಅದೇ
ಹೆಸರು ಶಾಶ್ವತವಾಯಿತು.
ಒಂದು ವರ್ಷದ ಮಗುವು ಓಡಾಡುವುದಕ್ಕೆ ಪ್ರಾರಂಭಿಸಿತು. ಅದರ
ಕಾಲಿನಲ್ಲಿ ಭಗವಂತ ಚಕ್ರವನ್ನು ಇಟ್ಟಿದ್ದನೋ ಏನೋ, ಮನೆಯಲ್ಲೆಲ್ಲಾ ಎಡಬಿಡದೆ
ಸುತ್ತಾಡುತ್ತಿತ್ತು. ಅರೆಕ್ಷಣ ಒಂದು ಕಡೆ ನಿಲ್ಲದು. ಅರಿಶಿನ ಕುಂಕುಮಕ್ಕೆಂದು,
ಪಕ್ಕದ ಮನೆಗೆ ಮಗುವನ್ನೆತ್ತಿಕೊಂಡು ಅಮ್ಮ ಹೋದರೆ, ಅಲ್ಲಿ ತೆಪ್ಪಗಿತ್ತು ಅಂತೀರಾ!
ಹೊಸ ಸ್ಥಳ, ಹೊಸ ಮುಖ ಅಂತ ಸಂಕೋಚವೇನಾದರೂ ಇತ್ತು ಅಂತೀರಾ?
ಉನ್ನೂ ಅಡೆತಡೆಯಿಲ್ಲದೆ ಆ ಮನೆಯಲ್ಲೆಲ್ಲಾ ಮುದ್ದು ಕೃಷ್ಣ ಅಡ್ಡಾಡುತ್ತಿದ್ದ.
ಕಂಡದ್ದಕ್ಕೆ ಕೈ ಹಾಕುವುದು, ಸಿಕ್ಕಿದ್ದನ್ನು ಹಿಡಿಯುವುದು, ಪಾದರಸದಂತೆ
ಹರಿದಾಡುವುದು. “ಎಷ್ಟು ಚೂಟಿಯಾಗಿದೆಯೇ, ಮಗು.' ಅಂತ ಹೆಣ್ಣುಗಳೆಲ್ಲಾ
ಎತ್ತಿಕೊಂಡು ಮುದ್ದಿಡುತ್ತಿದ್ದರು.
ಹದಿನೆಂಟು ತಿಂಗಳು ವಯಸ್ಸಾದಾಗ, ಮಗುವಿನ ಕೈಯಲ್ಲಿದ್ದ ಚಾಕುವನ್ನು
ಅಮ್ಮ ಒಂದು ಮಧ್ಯಾಹ್ನ ಕಿತ್ತುಕೊಂಡಳು. 'ಇದೆಲ್ಲಿ ಸಿಕ್ಕು ಇದರ ಕೈಗೆ, ಕಣ್ಣು
ಮೂಗನ್ನು ಊನ ಮಾಡಿಕೊಂಡು ಬಿಡುತ್ತಲ್ಲಾ, ಅರಿಯದ ಮಗು' ಎಂದು
ಗಾಬರಿಯಾದ ತಾಯಿ ಚಾಕುವನ್ನು ಕಂಡಕೂಡಲೇ ಜಟ್ಟಂತ ಕಿತ್ತುಕೊಂಡುಬಿಟ್ಟಳು.
ಹಠಹಿಡಿದು ಮಗು ಅಳುವುದಕ್ಕೆ ಶುರು ಮಾಡಿತು. ಎಷ್ಟು ಸಮಾಧಾನ ಮಾಡಿದರೂ<noinclude></noinclude>
f2vfa547pwks1kk7ph91jgp9ih38k3b
316632
316614
2026-05-04T03:01:26Z
Shreesha Sharma
7840
/* Validated */
316632
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೪೦}}{{Right|ಮನಮಂಥನ}}
ಈ ಸಾಮಾನ್ಯ ವರ್ತನೆಯ ಉಲ್ಬಣಿಸಿದ ಘೋರ ರೂಪಾಂತರವೇ ನಟನೆ,
Malingering.
{{gap}}ಅಪಘಾತದ ಹಿಸ್ಟಿರಿಯಾವನ್ನು ನಟನೆಯ ಪ್ರದರ್ಶನಗಳಿಂದ ಬೇರ್ಪಡಿಸ
ಬೇಕಾದರೆ, ಬಹಳ ಶ್ರಮವನ್ನು ವಹಿಸಬೇಕು. ಕಣ್ಣಲ್ಲಿ ಕಣ್ಣಿಟ್ಟುಕೊಂಡು ಪರೀಕ್ಷಿಸಬೇಕು.
ತುಂಬಾ ಅನುಭವವನ್ನು ಪಡೆದ ನುರಿತ ವೈದ್ಯರ ಕಣ್ಣಿಗೂ ಹಲವು Malingerers
ಮಣ್ಣೆರಚುತ್ತಾರೆ.
'''ಮುದ್ದುಕೃಷ್ಣನ ರಚ್ಚೆ'''
{{gap}}ಮುದ್ದು ಮುದ್ದಾಗಿತ್ತು. ಮೂರು ವರ್ಷದ ಗಂಡು ಮಗು. ದುಂಡುದುಂಡಾಗಿ
ಬೆಳೆದಿದ್ದ ಮಗು, ಸುಂದರವಾಗಿದ್ದ ಮಗು, ಕಂಡವರಿಗೆ ಕೆನ್ನೆ ಚಿವುಟೋಣ
ಎನ್ನಿಸುತ್ತಿತ್ತು. ಹುಟ್ಟಿದಾಗಲೇ ದುಂಡುದುಂಡಾಗಿದ್ದುದರಿಂದ ಅದರ ಅಜ್ಜಿ 'ಮುದ್ದು
ಕೃಷ್ಣ' ಎಂದು ನಾಮಕರಣವನ್ನು ಹಠಹಿಡಿದು ಮಾಡಿಸಿದಳು. ಅಜ್ಜಿಯ ತದ್ರೂಪ
ಮಗು. 'ಮುಂದೆ ಬೇಕಾದರೆ ಇನ್ನು ಯಾವುದಾದರೂ ಹೆಸರಿಟ್ಟುಕೊಳ್ಳಿ. ನಾನನ್ಯ
ಮುದ್ದು ಕೃಷ್ಣ ಅಂತಲೇ ಕರೆಯುವುದು' ಎಂದು ಅಜ್ಜಿಯ ವಾದ. ಕಡೆಗೆ ಅದೇ
ಹೆಸರು ಶಾಶ್ವತವಾಯಿತು.
{{gap}}ಒಂದು ವರ್ಷದ ಮಗುವು ಓಡಾಡುವುದಕ್ಕೆ ಪ್ರಾರಂಭಿಸಿತು. ಅದರ
ಕಾಲಿನಲ್ಲಿ ಭಗವಂತ ಚಕ್ರವನ್ನು ಇಟ್ಟಿದ್ದನೋ ಏನೋ, ಮನೆಯಲ್ಲೆಲ್ಲಾ ಎಡಬಿಡದೆ
ಸುತ್ತಾಡುತ್ತಿತ್ತು. ಅರೆಕ್ಷಣ ಒಂದು ಕಡೆ ನಿಲ್ಲದು. ಅರಿಶಿನ ಕುಂಕುಮಕ್ಕೆಂದು,
ಪಕ್ಕದ ಮನೆಗೆ ಮಗುವನ್ನೆತ್ತಿಕೊಂಡು ಅಮ್ಮ ಹೋದರೆ, ಅಲ್ಲಿ ತೆಪ್ಪಗಿತ್ತು ಅಂತೀರಾ!
ಹೊಸ ಸ್ಥಳ, ಹೊಸ ಮುಖ ಅಂತ ಸಂಕೋಚವೇನಾದರೂ ಇತ್ತು ಅಂತೀರಾ?
ಉನ್ನೂ ಅಡೆತಡೆಯಿಲ್ಲದೆ ಆ ಮನೆಯಲ್ಲೆಲ್ಲಾ ಮುದ್ದು ಕೃಷ್ಣ ಅಡ್ಡಾಡುತ್ತಿದ್ದ.
ಕಂಡದ್ದಕ್ಕೆ ಕೈ ಹಾಕುವುದು, ಸಿಕ್ಕಿದ್ದನ್ನು ಹಿಡಿಯುವುದು, ಪಾದರಸದಂತೆ
ಹರಿದಾಡುವುದು. “ಎಷ್ಟು ಚೂಟಿಯಾಗಿದೆಯೇ, ಮಗು.' ಅಂತ ಹೆಣ್ಣುಗಳೆಲ್ಲಾ
ಎತ್ತಿಕೊಂಡು ಮುದ್ದಿಡುತ್ತಿದ್ದರು.
{{gap}}ಹದಿನೆಂಟು ತಿಂಗಳು ವಯಸ್ಸಾದಾಗ, ಮಗುವಿನ ಕೈಯಲ್ಲಿದ್ದ ಚಾಕುವನ್ನು
ಅಮ್ಮ ಒಂದು ಮಧ್ಯಾಹ್ನ ಕಿತ್ತುಕೊಂಡಳು. 'ಇದೆಲ್ಲಿ ಸಿಕ್ಕು ಇದರ ಕೈಗೆ, ಕಣ್ಣು
ಮೂಗನ್ನು ಊನ ಮಾಡಿಕೊಂಡು ಬಿಡುತ್ತಲ್ಲಾ, ಅರಿಯದ ಮಗು' ಎಂದು
ಗಾಬರಿಯಾದ ತಾಯಿ ಚಾಕುವನ್ನು ಕಂಡಕೂಡಲೇ ಜಟ್ಟಂತ ಕಿತ್ತುಕೊಂಡುಬಿಟ್ಟಳು.
ಹಠಹಿಡಿದು ಮಗು ಅಳುವುದಕ್ಕೆ ಶುರು ಮಾಡಿತು. ಎಷ್ಟು ಸಮಾಧಾನ ಮಾಡಿದರೂ<noinclude></noinclude>
07s9q41fnbumsbmbkbx71i958mhp04t
ಪುಟ:ಮನಮಂಥನ.pdf/೧೬೦
104
62607
316615
314014
2026-05-04T02:45:28Z
Shreelatha.Halemane
7642
/* Proofread */
316615
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೪೧}}
ರಜ್ಜೆಯನ್ನು ಮಗು ನಿಲ್ಲಿಸಲಿಲ್ಲ. ಚಂಡಿ ಹಿಡಿದು ಮಗು ಗಟ್ಟಿಯಾಗಿ ಅಳತೊಡಗಿತು.
ಆರೆಕ್ಷಣದಲ್ಲಿ ಉಸಿರು ಸಿಕ್ಕಿಕೊಂಡಿತು. ಕೆಲವು ಸೆಕೆಂಡುಗಳು, ಒಳಕ್ಕೆ ಉಸಿರು
ಹೋಗಲೇ ಇಲ್ಲ. ಮುಖವು ನೀಲಿಗಟ್ಟಿತು. ಕೈ ಕಾಲುಗಳು ಒಂದೆರಡು ಬಾರಿ
ಚಿಮ್ಮಿದುವು, ಅಮ್ಮ, ಅಜ್ಜಿ, ಎಲ್ಲರೂ 'ಅಯ್ಯಯ್ಯೋ' ಅಂತ ಅಳುವುದಕ್ಕೆ ಶುರು
ಮಾಡಿದರು. ಮುದ್ದು ಕೃಷ್ಣನ ಆಟ ಮುಗಿಯಿತೇನೋ ಎಂದವರ ಭಯ.
ಒಂದೆರಡು ನಿಮಿಷಗಳಲ್ಲಿ, ಮನೆಯಲ್ಲಿ ಕೆಲಸಮಾಡುತ್ತಿದ್ದಾಕೆಯು ಇದನ್ನು ಕಂಡು
ಚಿಟಿಕಿ ಹಾಕಿದಳು. ದೊಡ್ಡ ಉಸಿರನ್ನು ಮುದ್ದು ಕೃಷ್ಣ ಎಳೆದುಕೊಂಡ. ನಂತರ
ಸರಾಗವಾಗಿ ಉಸಿರಾಡಲು ಆರಂಭಿಸಿದ. ನೀಲಿಯಾಗಿದ್ದ ಮುಖವು ಕೆಂಚಗಾಯ್ತು.
ಹಾಗೆಯೇ ನಿದ್ರೆ ಹೋದ. ಹದಿನೈದು ಇಪ್ಪತ್ತು ನಿಮಿಷಗಳಾದ ಮೇಲೆ ಮಗು
ಎಚ್ಚರಗೊಂಡಿತು. ಯಥಾಪ್ರಕಾರ ಸರಿದಾಡಲು ಪ್ರಾರಂಭಿಸಿತು. ಚಾಕು ಎಲ್ಲಿ
ಎಂದು ತಿರುಗಿ ಕೇಳಲಿಲ್ಲ. ಮರೆತೇ ಬಿಟ್ಟಿತ್ತು.
ಮೂರು ನಾಲ್ಕು ವರ್ಷಗಳಾಗುವ ತನಕ, ಚಂಡಿಹಿಡಿದು ಅತ್ತಾಗಲೆಲ್ಲ,
ಮುದ್ದು ಕೃಷ್ಣನಿಗೆ, ಹೀಗೆಯೇ ಆಗುತ್ತಿತ್ತು. ಮೊದಮೊದಲು ವಾರಕ್ಕೊಂದೆರಡು
ಬಾರಿ ಹೀಗಾಗುತ್ತಿತ್ತು. ವಯಸ್ಸು ಹೆಚ್ಚಿದಂತೆಲ್ಲ ತಿಂಗಳಿಗೊಮ್ಮೆ ಮೂರು
ತಿಂಗಳಿಗೊಮ್ಮೆ ಆಗತೊಡಗಿತು. ನಾಲ್ಕನೆಯ ಹುಟ್ಟಿದ ಹಬ್ಬದ ಹೊತ್ತಿಗೆ
ಹೀಗಾಗುವುದು ನಿಂತುಹೋಯಿತು.
Tantrums ಎಂದು ಕರೆಯಲ್ಪಡುವ ಈ ಪ್ರವೃತ್ತಿಯು ಕೆಲವು ಮಕ್ಕಳಲ್ಲಿ
ಕಾಣಬರುತ್ತದೆ.
ಮೆದುಳು ಮತ್ತು ನರಮಂಡಲವು ಮಕ್ಕಳಲ್ಲಿ ಸಂಪೂರ್ಣವಾಗಿ
ವ್ಯವಸ್ಥೆಯಾಗದೆ ಇರುವುದರಿಂದ, ರೇಗಿ ಚಂಡಿ ಹಿಡಿದಾಗ ಒಂದೆರಡು ಕ್ಷಣ
ಉಸಿರು ನಿಂತು ಹೋಗುತ್ತದೆ. ಮಗುವಿನ ಮುಖವು ಆಗ ನೀಲಿಗಟ್ಟುತ್ತದೆ.
ಕೆಲವೊಮ್ಮೆ ಜ್ಞಾನವೂ ತಪ್ಪಿ ಹೋಗುತ್ತದೆ. ಕೆಲವು ನಿಮಿಷಗಳಲ್ಲಿ ಉಸಿರಾಡುವುದು
ಸರಿಹೋಗುತ್ತದೆ. ನೋಡುತ್ತಿರುವವರಿಗೆ ಆ ಕೆಲವು ನಿಮಿಷಗಳು ಯುಗಗಳಂತೆ
ಭಾಸವಾಗುತ್ತದೆ.
ಕೆಲವು ಎಳೆಯ ಮಕ್ಕಳಲ್ಲಿ ಮಾತ್ರ ಹೀಗಾಗುತ್ತದೆ. ಬೆಳಯುತ್ತ ಬೆಳೆಯುತ್ತ
ಕಡಿಮೆಯಾಗುವ, ಕೊನೆಗೆ ನಿಂತು ಹೋಗುವ, ಈ ಬೇನೆಗೆ ತಾತ್ಕಾಲಿಕ ಶಮನವು
ಮಾತ್ರ ಸಾಕು, ದೀರ್ಘಕಾಲದ ಯಾವ ಚಿಕಿತ್ಸೆಯ ಅಗತ್ಯವೂ ಇರುವುದಿಲ್ಲ.
ಮಗುವಿನ ಮನಸ್ಸು ಚಂಚಲ ಸ್ವಭಾವದ್ದು. ಕ್ಷಣಕ್ಷಣಕ್ಕೂ ಬದಲಾಯಿಸುತ್ತಿರುತ್ತದೆ.
ಆದರೆ ಆ ಕ್ಷಣದಲ್ಲಿದ್ದ ಗೀಳು ಬಲವಾಗಿರುತ್ತದೆ. ಆ ಗೀಳು ಮಗುವನ್ನು ಪಟ್ಟು<noinclude></noinclude>
6jc1bu9x0yay4cseqs5k9owapdl5g0x
316633
316615
2026-05-04T03:01:59Z
Shreesha Sharma
7840
/* Validated */
316633
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೪೧}}
ರಜ್ಜೆಯನ್ನು ಮಗು ನಿಲ್ಲಿಸಲಿಲ್ಲ. ಚಂಡಿ ಹಿಡಿದು ಮಗು ಗಟ್ಟಿಯಾಗಿ ಅಳತೊಡಗಿತು.
ಆರೆಕ್ಷಣದಲ್ಲಿ ಉಸಿರು ಸಿಕ್ಕಿಕೊಂಡಿತು. ಕೆಲವು ಸೆಕೆಂಡುಗಳು, ಒಳಕ್ಕೆ ಉಸಿರು
ಹೋಗಲೇ ಇಲ್ಲ. ಮುಖವು ನೀಲಿಗಟ್ಟಿತು. ಕೈ ಕಾಲುಗಳು ಒಂದೆರಡು ಬಾರಿ
ಚಿಮ್ಮಿದುವು, ಅಮ್ಮ, ಅಜ್ಜಿ, ಎಲ್ಲರೂ 'ಅಯ್ಯಯ್ಯೋ' ಅಂತ ಅಳುವುದಕ್ಕೆ ಶುರು
ಮಾಡಿದರು. ಮುದ್ದು ಕೃಷ್ಣನ ಆಟ ಮುಗಿಯಿತೇನೋ ಎಂದವರ ಭಯ.
ಒಂದೆರಡು ನಿಮಿಷಗಳಲ್ಲಿ, ಮನೆಯಲ್ಲಿ ಕೆಲಸಮಾಡುತ್ತಿದ್ದಾಕೆಯು ಇದನ್ನು ಕಂಡು
ಚಿಟಿಕಿ ಹಾಕಿದಳು. ದೊಡ್ಡ ಉಸಿರನ್ನು ಮುದ್ದು ಕೃಷ್ಣ ಎಳೆದುಕೊಂಡ. ನಂತರ
ಸರಾಗವಾಗಿ ಉಸಿರಾಡಲು ಆರಂಭಿಸಿದ. ನೀಲಿಯಾಗಿದ್ದ ಮುಖವು ಕೆಂಚಗಾಯ್ತು.
ಹಾಗೆಯೇ ನಿದ್ರೆ ಹೋದ. ಹದಿನೈದು ಇಪ್ಪತ್ತು ನಿಮಿಷಗಳಾದ ಮೇಲೆ ಮಗು
ಎಚ್ಚರಗೊಂಡಿತು. ಯಥಾಪ್ರಕಾರ ಸರಿದಾಡಲು ಪ್ರಾರಂಭಿಸಿತು. ಚಾಕು ಎಲ್ಲಿ
ಎಂದು ತಿರುಗಿ ಕೇಳಲಿಲ್ಲ. ಮರೆತೇ ಬಿಟ್ಟಿತ್ತು.
{{gap}}ಮೂರು ನಾಲ್ಕು ವರ್ಷಗಳಾಗುವ ತನಕ, ಚಂಡಿಹಿಡಿದು ಅತ್ತಾಗಲೆಲ್ಲ,
ಮುದ್ದು ಕೃಷ್ಣನಿಗೆ, ಹೀಗೆಯೇ ಆಗುತ್ತಿತ್ತು. ಮೊದಮೊದಲು ವಾರಕ್ಕೊಂದೆರಡು
ಬಾರಿ ಹೀಗಾಗುತ್ತಿತ್ತು. ವಯಸ್ಸು ಹೆಚ್ಚಿದಂತೆಲ್ಲ ತಿಂಗಳಿಗೊಮ್ಮೆ ಮೂರು
ತಿಂಗಳಿಗೊಮ್ಮೆ ಆಗತೊಡಗಿತು. ನಾಲ್ಕನೆಯ ಹುಟ್ಟಿದ ಹಬ್ಬದ ಹೊತ್ತಿಗೆ
ಹೀಗಾಗುವುದು ನಿಂತುಹೋಯಿತು.
{{gap}}Tantrums ಎಂದು ಕರೆಯಲ್ಪಡುವ ಈ ಪ್ರವೃತ್ತಿಯು ಕೆಲವು ಮಕ್ಕಳಲ್ಲಿ
ಕಾಣಬರುತ್ತದೆ.
{{gap}}ಮೆದುಳು ಮತ್ತು ನರಮಂಡಲವು ಮಕ್ಕಳಲ್ಲಿ ಸಂಪೂರ್ಣವಾಗಿ
ವ್ಯವಸ್ಥೆಯಾಗದೆ ಇರುವುದರಿಂದ, ರೇಗಿ ಚಂಡಿ ಹಿಡಿದಾಗ ಒಂದೆರಡು ಕ್ಷಣ
ಉಸಿರು ನಿಂತು ಹೋಗುತ್ತದೆ. ಮಗುವಿನ ಮುಖವು ಆಗ ನೀಲಿಗಟ್ಟುತ್ತದೆ.
ಕೆಲವೊಮ್ಮೆ ಜ್ಞಾನವೂ ತಪ್ಪಿ ಹೋಗುತ್ತದೆ. ಕೆಲವು ನಿಮಿಷಗಳಲ್ಲಿ ಉಸಿರಾಡುವುದು
ಸರಿಹೋಗುತ್ತದೆ. ನೋಡುತ್ತಿರುವವರಿಗೆ ಆ ಕೆಲವು ನಿಮಿಷಗಳು ಯುಗಗಳಂತೆ
ಭಾಸವಾಗುತ್ತದೆ.
{{gap}}ಕೆಲವು ಎಳೆಯ ಮಕ್ಕಳಲ್ಲಿ ಮಾತ್ರ ಹೀಗಾಗುತ್ತದೆ. ಬೆಳಯುತ್ತ ಬೆಳೆಯುತ್ತ
ಕಡಿಮೆಯಾಗುವ, ಕೊನೆಗೆ ನಿಂತು ಹೋಗುವ, ಈ ಬೇನೆಗೆ ತಾತ್ಕಾಲಿಕ ಶಮನವು
ಮಾತ್ರ ಸಾಕು, ದೀರ್ಘಕಾಲದ ಯಾವ ಚಿಕಿತ್ಸೆಯ ಅಗತ್ಯವೂ ಇರುವುದಿಲ್ಲ.
ಮಗುವಿನ ಮನಸ್ಸು ಚಂಚಲ ಸ್ವಭಾವದ್ದು. ಕ್ಷಣಕ್ಷಣಕ್ಕೂ ಬದಲಾಯಿಸುತ್ತಿರುತ್ತದೆ.
ಆದರೆ ಆ ಕ್ಷಣದಲ್ಲಿದ್ದ ಗೀಳು ಬಲವಾಗಿರುತ್ತದೆ. ಆ ಗೀಳು ಮಗುವನ್ನು ಪಟ್ಟು<noinclude></noinclude>
fb5ljhx6u01543e0pcqudeojo9pzor1
ಪುಟ:ಮನಮಂಥನ.pdf/೧೬೧
104
62608
316616
314135
2026-05-04T02:46:23Z
Shreelatha.Halemane
7642
/* Proofread */
316616
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೧೪೨}}{{Right|ಮನಮಂಥನ}}
ಹಿಡಿದಿರುತ್ತದೆ. ಆದುದರಿಂದ ಮಗುವೂ ಪಟ್ಟು ಹಿಡಿಯುತ್ತದೆ.
ಇದೇ ತೆರನ ನಡವಳಿಕೆಯು ವಯಸ್ಕರಲ್ಲಿ ಕಂಡು ಬಂದರೆ, ಆಗ ಅದು
ಹಿಸ್ಟಿರಿಯಾ ಬೇನೆಯಾಗುತ್ತದೆ. ವಯಸ್ಸಾದ ಮೇಲೆ, ಮೆದುಳು ಮತ್ತು ನರ
ಮಂಡಲಗಳು ದೃಢವಾದ ಮೇಲೆ, ಲೋಕಾನುಭವದಿಂದ ಪಕ್ವವಾದ ಮೇಲೆ
ಕೂಡ, ಚಂಡಿ ಹಿಡಿದು ರೇಗಿ ರಚ್ಚೆ ಮಾಡಿದರೆ, 'ಇದೇನು, ಇವ ಹಿಸ್ಟರಿಕಲ್
ಆಗಿ ಆಡ್ತಾನೆ' ಎಂದು ಅನ್ನುವುದಿಲ್ಲವೇ?
ಸಾಮಾನ್ಯ ನಡವಳಿಕೆಯಲ್ಲೂ, ಅತಿಯಾಗಿ ಉತ್ಪಮಾಡುವ ಪ್ರವೃತ್ತಿಯು
ಕೆಲವರಲ್ಲಿ ಕಾಣಬರುತ್ತದೆ. 'ರಂಗಜ್ಜಿ ಕರಿದ ಕೋಡುಬಳೆಯು ಎಷ್ಟು ರುಚಿಯಾಗಿತ್ತು
ಅಂತೀ ; ಎಷ್ಟು ಗರಿಗರಿಯಾಗಿತ್ತು ಅಂತ' ಎಂದು ಹೇಳುವಾಗ ಕೋಡು
ಬಳೆಯನ್ನು ಕೈಯಲ್ಲಿ ಹಿಡಿದು, ಜೊಲ್ಲು ಸುರಿಸುತ್ತ, ಮೆಲ್ಲುವಂತೆಯೇ, ಹಾವ
ಭಾವ ವಿಲಾಸಗಳಿಂದ ಕೆಲವರು ನಾಟಕ ಮಡುವುದನ್ನು ನೋಡಿಲ್ಲವೇ? ಇಂತಹ
ವಿಪರೀತ ನಡವಳಿಕೆಯು ಸರ್ವೇಸಾಮಾನ್ಯವಲ್ಲದಿದ್ದರೂ, ಬೇನೆಯೇನೂ ಅಲ್ಲ.
ಒಂದು ಹಂತವನ್ನು ಇದು ಮೀರಿದರೆ ಸಾಮಾನ್ಯ ಜೀವನಕ್ಕೆ ಕಂಟಕವನ್ನುಂಟು
ಮಾಡುವಂತಾದಾಗ 'ಹಿಸ್ಟಿರಿಯಾ' ಆಗುತ್ತದೆ.
ಕೆಲವರು ಹಾಸಿಗೆಯನ್ನು ಹಾಸಿಕೊಳ್ಳುವುದನ್ನು ನೋಡಿದರೆ
ಮೋಜೆನಿಸುತ್ತದೆ. ಮೊದಲು ಚಾಪೆಯನ್ನು ನೆಲದ ಮೇಲೆ ಹಾಸುತ್ತಾರೆ. ನಂತರ
ಅದರ ಮೇಲೆ ಮಲಗಿ ಉದ್ದ ಸರಿಯಾಗುತ್ತದೆಯೇ ಎಂದು ನೋಡುತ್ತಾರೆ.
ಹಾಸಿಗೆಯ ಸುರುಳಿಯನ್ನು ಬಿಚ್ಚಿ, ಚಾಪೆಯ ಮೇಲೆ ಹರಡುತ್ತಾರೆ. ಅದರ
ಮೇಲೆ ಮತ್ತೊಮ್ಮೆ ಮಲಗಿ ಪರೀಕ್ಷಿಸುತ್ತಾರೆ. ನಂತರ ಎದ್ದು, ಬೆಡ್ಷಿಟನ್ನು
ಹಾಸುತ್ತಾರೆ. ಸುಕ್ಕು ಬರದಂತೆ ಅದನ್ನು ವೈನ ಮಾಡುತ್ತಾರೆ. ಆ ಮೇಲೆ
ದಿಂಬಿನ ಎತ್ತರವು ಸರಿಯಾಗಿದೆಯೇ ಎನ್ನುವುದನ್ನು ಪರೀಕ್ಷಿಸುತ್ತಾರೆ. ನಂತರ
ಬ್ಲಾಂಕೆಟ್ಟನ್ನು ಅಣಿಯಾಗಿ ಮಡಿಸಿ ಕಾಲದಸಿಯಲ್ಲಿಡುತ್ತಾರೆ.
'ಬಿದ್ದುಗೊಂಡು ಮಲಗುವುದಕ್ಕೆ, ಅದೂ ಆಯಾಸವಾಗಿರುವಾಗ, ಕಣ್ಣು
ಎಳೆದುಕೊಂಡು ಹೋಗುತ್ತಿರುವಾಗ, ಇದೆಲ್ಲಾ ಕರ್ಮ ಯಾಕೋ?' ಎಂದು
ರೂಂ ಮೇಟ್ ಹೇಳಿದರೆ, ರೇಗಿ ಹೊಡೆಯುವುದಕ್ಕೆ ಬರುತ್ತಾರೆ.
ಇದು ಕೂಡ ತುಸು ವಿಪರೀತವಾದ ನಡವಳಿಕೆಯೇ. ಕೆಲವು ಪ್ರೌಢರಲ್ಲಿ
ಕಾಣಬರುವ ಈ ಮಾಮೂಲು, ಬೇನೆಯೂ ಅಲ್ಲ, ರೋಗವೂ ಅಲ್ಲ. ಒಂದು
ರೀತಿಯ ಅಪ್ರಬುದ್ಧ ಮಗುತನ ಅನ್ನಬಹುದು. ಆದರೆ ವಿಪರೀತ ನಡವಳಿಕೆಯು
ಉಲ್ಬಣಗೊಂಡರೆ, ಅದರ ಜತೆಗೆ ಸಾಮಾಜಿಕ ಪರಿಸರವೂ ಕ್ರೂರವಾದರೆ ಅನಿರೀಕ್ಷಿತ<noinclude></noinclude>
2lle94txq8tngnlfxv5wgrdlabh6lrs
316634
316616
2026-05-04T03:02:35Z
Shreesha Sharma
7840
/* Validated */
316634
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೪೨}}{{Right|ಮನಮಂಥನ}}
ಹಿಡಿದಿರುತ್ತದೆ. ಆದುದರಿಂದ ಮಗುವೂ ಪಟ್ಟು ಹಿಡಿಯುತ್ತದೆ.
{{gap}}ಇದೇ ತೆರನ ನಡವಳಿಕೆಯು ವಯಸ್ಕರಲ್ಲಿ ಕಂಡು ಬಂದರೆ, ಆಗ ಅದು
ಹಿಸ್ಟಿರಿಯಾ ಬೇನೆಯಾಗುತ್ತದೆ. ವಯಸ್ಸಾದ ಮೇಲೆ, ಮೆದುಳು ಮತ್ತು ನರ
ಮಂಡಲಗಳು ದೃಢವಾದ ಮೇಲೆ, ಲೋಕಾನುಭವದಿಂದ ಪಕ್ವವಾದ ಮೇಲೆ
ಕೂಡ, ಚಂಡಿ ಹಿಡಿದು ರೇಗಿ ರಚ್ಚೆ ಮಾಡಿದರೆ, 'ಇದೇನು, ಇವ ಹಿಸ್ಟರಿಕಲ್
ಆಗಿ ಆಡ್ತಾನೆ' ಎಂದು ಅನ್ನುವುದಿಲ್ಲವೇ?
{{gap}}ಸಾಮಾನ್ಯ ನಡವಳಿಕೆಯಲ್ಲೂ, ಅತಿಯಾಗಿ ಉತ್ಪಮಾಡುವ ಪ್ರವೃತ್ತಿಯು
ಕೆಲವರಲ್ಲಿ ಕಾಣಬರುತ್ತದೆ. 'ರಂಗಜ್ಜಿ ಕರಿದ ಕೋಡುಬಳೆಯು ಎಷ್ಟು ರುಚಿಯಾಗಿತ್ತು
ಅಂತೀ ; ಎಷ್ಟು ಗರಿಗರಿಯಾಗಿತ್ತು ಅಂತ' ಎಂದು ಹೇಳುವಾಗ ಕೋಡು
ಬಳೆಯನ್ನು ಕೈಯಲ್ಲಿ ಹಿಡಿದು, ಜೊಲ್ಲು ಸುರಿಸುತ್ತ, ಮೆಲ್ಲುವಂತೆಯೇ, ಹಾವ
ಭಾವ ವಿಲಾಸಗಳಿಂದ ಕೆಲವರು ನಾಟಕ ಮಡುವುದನ್ನು ನೋಡಿಲ್ಲವೇ? ಇಂತಹ
ವಿಪರೀತ ನಡವಳಿಕೆಯು ಸರ್ವೇಸಾಮಾನ್ಯವಲ್ಲದಿದ್ದರೂ, ಬೇನೆಯೇನೂ ಅಲ್ಲ.
ಒಂದು ಹಂತವನ್ನು ಇದು ಮೀರಿದರೆ ಸಾಮಾನ್ಯ ಜೀವನಕ್ಕೆ ಕಂಟಕವನ್ನುಂಟು
ಮಾಡುವಂತಾದಾಗ 'ಹಿಸ್ಟಿರಿಯಾ' ಆಗುತ್ತದೆ.
{{gap}}ಕೆಲವರು ಹಾಸಿಗೆಯನ್ನು ಹಾಸಿಕೊಳ್ಳುವುದನ್ನು ನೋಡಿದರೆ
ಮೋಜೆನಿಸುತ್ತದೆ. ಮೊದಲು ಚಾಪೆಯನ್ನು ನೆಲದ ಮೇಲೆ ಹಾಸುತ್ತಾರೆ. ನಂತರ
ಅದರ ಮೇಲೆ ಮಲಗಿ ಉದ್ದ ಸರಿಯಾಗುತ್ತದೆಯೇ ಎಂದು ನೋಡುತ್ತಾರೆ.
ಹಾಸಿಗೆಯ ಸುರುಳಿಯನ್ನು ಬಿಚ್ಚಿ, ಚಾಪೆಯ ಮೇಲೆ ಹರಡುತ್ತಾರೆ. ಅದರ
ಮೇಲೆ ಮತ್ತೊಮ್ಮೆ ಮಲಗಿ ಪರೀಕ್ಷಿಸುತ್ತಾರೆ. ನಂತರ ಎದ್ದು, ಬೆಡ್ಷಿಟನ್ನು
ಹಾಸುತ್ತಾರೆ. ಸುಕ್ಕು ಬರದಂತೆ ಅದನ್ನು ವೈನ ಮಾಡುತ್ತಾರೆ. ಆ ಮೇಲೆ
ದಿಂಬಿನ ಎತ್ತರವು ಸರಿಯಾಗಿದೆಯೇ ಎನ್ನುವುದನ್ನು ಪರೀಕ್ಷಿಸುತ್ತಾರೆ. ನಂತರ
ಬ್ಲಾಂಕೆಟ್ಟನ್ನು ಅಣಿಯಾಗಿ ಮಡಿಸಿ ಕಾಲದಸಿಯಲ್ಲಿಡುತ್ತಾರೆ.
{{gap}}'ಬಿದ್ದುಗೊಂಡು ಮಲಗುವುದಕ್ಕೆ, ಅದೂ ಆಯಾಸವಾಗಿರುವಾಗ, ಕಣ್ಣು
ಎಳೆದುಕೊಂಡು ಹೋಗುತ್ತಿರುವಾಗ, ಇದೆಲ್ಲಾ ಕರ್ಮ ಯಾಕೋ?' ಎಂದು
ರೂಂ ಮೇಟ್ ಹೇಳಿದರೆ, ರೇಗಿ ಹೊಡೆಯುವುದಕ್ಕೆ ಬರುತ್ತಾರೆ.
{{gap}}ಇದು ಕೂಡ ತುಸು ವಿಪರೀತವಾದ ನಡವಳಿಕೆಯೇ. ಕೆಲವು ಪ್ರೌಢರಲ್ಲಿ
ಕಾಣಬರುವ ಈ ಮಾಮೂಲು, ಬೇನೆಯೂ ಅಲ್ಲ, ರೋಗವೂ ಅಲ್ಲ. ಒಂದು
ರೀತಿಯ ಅಪ್ರಬುದ್ಧ ಮಗುತನ ಅನ್ನಬಹುದು. ಆದರೆ ವಿಪರೀತ ನಡವಳಿಕೆಯು
ಉಲ್ಬಣಗೊಂಡರೆ, ಅದರ ಜತೆಗೆ ಸಾಮಾಜಿಕ ಪರಿಸರವೂ ಕ್ರೂರವಾದರೆ ಅನಿರೀಕ್ಷಿತ<noinclude></noinclude>
r81u71rggm23fft29df4lx8qzhi3fii
ಪುಟ:ಮನಮಂಥನ.pdf/೧೬೨
104
62609
316617
314136
2026-05-04T02:47:22Z
Shreelatha.Halemane
7642
/* Proofread */
316617
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೪೩}}
ಆಘಾತಗಳು, ಮನಸ್ಸಿಗಾಗಲೀ, ಮೈಯ್ಯಗಾಗಲೀ ಸಂಭವಿಸಿದರೆ, ಆಗ ಹಿಸ್ಟಿರಿಯಾದ
ವಿವಿಧ ರೂಪಾಂತರ ಪ್ರದರ್ಶನಗಳಲ್ಲಿ ಪರ್ಯವಸಾನವಾಗಬಹುದು. ಅಥವಾ
ಇತರ ಮಾನಸಿಕ ಬೇನೆಗಳೂ ಕಾಣಬರಬಹುದು
.
ಮುದ್ದು ಕೃಷ್ಣನ ರಚ್ಚೆಯು, ಮೆದುಳು ಸಂಪೂರ್ಣ ಅಭಿವೃದ್ಧಿಯಾಗದೆ
ಇರುವ ಆ ವಯಸ್ಸಿನಲ್ಲಿ ಸಹಜವಾದುದು. ಪ್ರೌಢರಾದಮೇಲೂ ಇದೇ
ನಡವಳಿಕೆಯು ಮತ್ತೂ ಉಗ್ರವಾಗಿ ಕಾಣಿಸಿಕೊಂಡರೆ, ಹಿಸ್ಟಿರಿಯಾ ಪ್ರದರ್ಶನದಲ್ಲಿ
ಅಂತ್ಯವಾಗಬಹುದು. ವ್ಯಾವಹಾರಿಕವಾದ ಪಂಚಾಂಗದ ವಯಸ್ಸಿನಂತೆಯೇ
ಮೆದುಳೂ ಅಭಿವೃದ್ಧಿಯಾಗುತ್ತದೆ ಎಂದೇನೂ ಇಲ್ಲ. ಇದನ್ನು ಆಗಲೇ ತಿಳಿದಿದ್ದೇವೆ.
ಹಿಸ್ಟಿರಿಯಾ ಬಡಿದವರ ಮನಸ್ಸು immature ಆಗಿರುತ್ತದೆ.
ಈ ತೆರನ ಜನರು ರಾಗಭಾವಗಳನ್ನು ಅತಿಯಾಗಿ ಪ್ರದರ್ಶಿಸುತ್ತಾರೆ.
ಕೆಲವು ದಿನಗಳಿಂದ ಕಾಣದೆ ಇದ್ದ ಸ್ನೇಹಿತನನ್ನು ನೋಡಿದರೆ, ಬಾಚಿ ಬಿಗಿಯಾಗಿ
ತಬ್ಬಿಕೊಂಡು ತಮ್ಮ ವಿಶ್ವಾಸದ ಪ್ರದರ್ಶನವನ್ನು ಸಂಕೋಚವಿಲ್ಲದೆ ಮಾಡುತ್ತಾರೆ.
ಆದರೆ ರಾಗಭಾವಗಳು ಗಾಢವಾಗಿರುವುದಿಲ್ಲ. 'ಏನಮ್ಮಾ ಲೋ' ಎಂದು
ಎಲ್ಲರೆದುರಿಗೂ ಬಾಚಿ ತಬ್ಬಿಕೊಂಡು ಆನಂದಭಾಷ್ಪಗಳನ್ನು ತೊಟ್ಟಿಕ್ಕಿಸಿದವರು ;
ಅದೇ ಸ್ನೇಹಿತನ ಕಾಲು ಮುರಿದಿದೆ, ಆಸ್ಪತ್ರೆಯಲ್ಲಿದ್ದಾನೆ ಎಂದು ಕೆಲವು
ಕಾಲಾನಂತರ ಹೇಳಿದರೆ 'ಹಾಗಾ' ಎಂದಂದು ತಮ್ಮ ಪಾಡಿಗೆ ತಾವಿರುತ್ತಾರೆ.
ಇತರ ಮಾನಸಿಕ ಉಪದ್ರವಗಳಲ್ಲಿರುವಂತೆ ಹಿಸ್ಟಿರಿಯಾ ಬೇನೆಯಲ್ಲಿಯೂ,
ರೋಗಿಯು ಮಾನಸಿಕವಾಗಿ 'ತಾನು' 'ತನ್ನದು' ಎಂಬ ಸ್ವಾರ್ಥ ಭಾವನೆಯನ್ನು
ಉಗ್ರವಾಗಿ ಹೊಂದಿರುತ್ತಾನೆ. ಸ್ವಾರ್ಥಿ ಪ್ರವೃತ್ತಿಯು ವಿಚಿತ್ರ ರೂಪುಗಳನ್ನು
ಧರಿಸುತ್ತದೆ. ತನ್ನ ಕುರ್ಚಿಯಲ್ಲಿ ಇತರರು ಯಾರೂ ಕೂರಬಾರದು ; ತನ್ನ
ಗೆಳತಿಯನ್ನು ಇತರ ಹೆಣ್ಣುಗಳು ಕೂಡ ಮಾತನಾಡಿಸಬಾರದು ; ತನಗೆ ಬಿದ್ದ
ಪೆಟ್ಟಿ ಅತಿ ಭಯಂಕರವಾದುದು ; ತನ್ನನ್ನು ಕುಟುಕಿದ ಚೇಳಿಗೆ ಎರಡಂಗುಲದ
ಕೊಂಡಿಯಿತ್ತು ; ಇತ್ಯಾದಿ ಇತ್ಯಾದಿ 'ತನ್ನ' ತನವನ್ನೇ ಮುಂದು ಮಾಡುತ್ತಾನೆ.
ಕನಕವಲ್ಲಿಯ ಉಕ್ಕೂ ಕ್ರೂ ಕ್ರೋ'ದಲ್ಲಿಂಯೂ, ಗುಂಡಮ್ಮನ
ನಿರ್ಧ್ವನಿಯಲ್ಲಿಯೂ, ಇರುದಯ ಮೇರಿಯು ಜ್ಞಾನ ತಪ್ಪಿದುದರಲ್ಲಿಯೂ ; ಈ
ಎಲ್ಲಾ ಹಿಸ್ಟಿರಿಯಾ ಪ್ರದರ್ಶನಗಳಲ್ಲಿ ಮುದ್ದುಕೃಷ್ಣನ ರಚ್ಚೆಯ ಕುರುಹನ್ನು
ಕಾಣಬಹುದು. ಕಾಲಕ್ಕೆ ಅನುಗುಣವಾಗಿ, ಮೆದುಳು ಮತ್ತು ಮನಸ್ಸು
ಅಭಿವೃದ್ಧಿಯಾಗದೆ ಇರುವುದು ; 'ತನ್ನ ತನವನ್ನೇ ವಿಪರೀತವಾಗಿ ಬೆಳೆಸಿಕೊಂಡು,
'ತನ್ನತನದ' ಕೊಟೆಯನ್ನು ತನ್ನ ಸುತ್ತಲೂ ನಿರ್ಭೇದ್ಯವಾಗಿ ಕಟ್ಟಿಕೊಳ್ಳುವುದು ;<noinclude></noinclude>
k3frhun1i0nosfmyaidus5zjyc3i4gk
316635
316617
2026-05-04T03:03:01Z
Shreesha Sharma
7840
/* Validated */
316635
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೪೩}}
ಆಘಾತಗಳು, ಮನಸ್ಸಿಗಾಗಲೀ, ಮೈಯ್ಯಗಾಗಲೀ ಸಂಭವಿಸಿದರೆ, ಆಗ ಹಿಸ್ಟಿರಿಯಾದ
ವಿವಿಧ ರೂಪಾಂತರ ಪ್ರದರ್ಶನಗಳಲ್ಲಿ ಪರ್ಯವಸಾನವಾಗಬಹುದು. ಅಥವಾ
ಇತರ ಮಾನಸಿಕ ಬೇನೆಗಳೂ ಕಾಣಬರಬಹುದು
.
{{gap}}ಮುದ್ದು ಕೃಷ್ಣನ ರಚ್ಚೆಯು, ಮೆದುಳು ಸಂಪೂರ್ಣ ಅಭಿವೃದ್ಧಿಯಾಗದೆ
ಇರುವ ಆ ವಯಸ್ಸಿನಲ್ಲಿ ಸಹಜವಾದುದು. ಪ್ರೌಢರಾದಮೇಲೂ ಇದೇ
ನಡವಳಿಕೆಯು ಮತ್ತೂ ಉಗ್ರವಾಗಿ ಕಾಣಿಸಿಕೊಂಡರೆ, ಹಿಸ್ಟಿರಿಯಾ ಪ್ರದರ್ಶನದಲ್ಲಿ
ಅಂತ್ಯವಾಗಬಹುದು. ವ್ಯಾವಹಾರಿಕವಾದ ಪಂಚಾಂಗದ ವಯಸ್ಸಿನಂತೆಯೇ
ಮೆದುಳೂ ಅಭಿವೃದ್ಧಿಯಾಗುತ್ತದೆ ಎಂದೇನೂ ಇಲ್ಲ. ಇದನ್ನು ಆಗಲೇ ತಿಳಿದಿದ್ದೇವೆ.
ಹಿಸ್ಟಿರಿಯಾ ಬಡಿದವರ ಮನಸ್ಸು immature ಆಗಿರುತ್ತದೆ.
{{gap}}ಈ ತೆರನ ಜನರು ರಾಗಭಾವಗಳನ್ನು ಅತಿಯಾಗಿ ಪ್ರದರ್ಶಿಸುತ್ತಾರೆ.
ಕೆಲವು ದಿನಗಳಿಂದ ಕಾಣದೆ ಇದ್ದ ಸ್ನೇಹಿತನನ್ನು ನೋಡಿದರೆ, ಬಾಚಿ ಬಿಗಿಯಾಗಿ
ತಬ್ಬಿಕೊಂಡು ತಮ್ಮ ವಿಶ್ವಾಸದ ಪ್ರದರ್ಶನವನ್ನು ಸಂಕೋಚವಿಲ್ಲದೆ ಮಾಡುತ್ತಾರೆ.
ಆದರೆ ರಾಗಭಾವಗಳು ಗಾಢವಾಗಿರುವುದಿಲ್ಲ. 'ಏನಮ್ಮಾ ಲೋ' ಎಂದು
ಎಲ್ಲರೆದುರಿಗೂ ಬಾಚಿ ತಬ್ಬಿಕೊಂಡು ಆನಂದಭಾಷ್ಪಗಳನ್ನು ತೊಟ್ಟಿಕ್ಕಿಸಿದವರು ;
ಅದೇ ಸ್ನೇಹಿತನ ಕಾಲು ಮುರಿದಿದೆ, ಆಸ್ಪತ್ರೆಯಲ್ಲಿದ್ದಾನೆ ಎಂದು ಕೆಲವು
ಕಾಲಾನಂತರ ಹೇಳಿದರೆ 'ಹಾಗಾ' ಎಂದಂದು ತಮ್ಮ ಪಾಡಿಗೆ ತಾವಿರುತ್ತಾರೆ.
{{gap}}ಇತರ ಮಾನಸಿಕ ಉಪದ್ರವಗಳಲ್ಲಿರುವಂತೆ ಹಿಸ್ಟಿರಿಯಾ ಬೇನೆಯಲ್ಲಿಯೂ,
ರೋಗಿಯು ಮಾನಸಿಕವಾಗಿ 'ತಾನು' 'ತನ್ನದು' ಎಂಬ ಸ್ವಾರ್ಥ ಭಾವನೆಯನ್ನು
ಉಗ್ರವಾಗಿ ಹೊಂದಿರುತ್ತಾನೆ. ಸ್ವಾರ್ಥಿ ಪ್ರವೃತ್ತಿಯು ವಿಚಿತ್ರ ರೂಪುಗಳನ್ನು
ಧರಿಸುತ್ತದೆ. ತನ್ನ ಕುರ್ಚಿಯಲ್ಲಿ ಇತರರು ಯಾರೂ ಕೂರಬಾರದು ; ತನ್ನ
ಗೆಳತಿಯನ್ನು ಇತರ ಹೆಣ್ಣುಗಳು ಕೂಡ ಮಾತನಾಡಿಸಬಾರದು ; ತನಗೆ ಬಿದ್ದ
ಪೆಟ್ಟಿ ಅತಿ ಭಯಂಕರವಾದುದು ; ತನ್ನನ್ನು ಕುಟುಕಿದ ಚೇಳಿಗೆ ಎರಡಂಗುಲದ
ಕೊಂಡಿಯಿತ್ತು ; ಇತ್ಯಾದಿ ಇತ್ಯಾದಿ 'ತನ್ನ' ತನವನ್ನೇ ಮುಂದು ಮಾಡುತ್ತಾನೆ.
{{gap}}ಕನಕವಲ್ಲಿಯ ಉಕ್ಕೂ ಕ್ರೂ ಕ್ರೋ'ದಲ್ಲಿಂಯೂ, ಗುಂಡಮ್ಮನ
ನಿರ್ಧ್ವನಿಯಲ್ಲಿಯೂ, ಇರುದಯ ಮೇರಿಯು ಜ್ಞಾನ ತಪ್ಪಿದುದರಲ್ಲಿಯೂ ; ಈ
ಎಲ್ಲಾ ಹಿಸ್ಟಿರಿಯಾ ಪ್ರದರ್ಶನಗಳಲ್ಲಿ ಮುದ್ದುಕೃಷ್ಣನ ರಚ್ಚೆಯ ಕುರುಹನ್ನು
ಕಾಣಬಹುದು. ಕಾಲಕ್ಕೆ ಅನುಗುಣವಾಗಿ, ಮೆದುಳು ಮತ್ತು ಮನಸ್ಸು
ಅಭಿವೃದ್ಧಿಯಾಗದೆ ಇರುವುದು ; 'ತನ್ನ ತನವನ್ನೇ ವಿಪರೀತವಾಗಿ ಬೆಳೆಸಿಕೊಂಡು,
'ತನ್ನತನದ' ಕೊಟೆಯನ್ನು ತನ್ನ ಸುತ್ತಲೂ ನಿರ್ಭೇದ್ಯವಾಗಿ ಕಟ್ಟಿಕೊಳ್ಳುವುದು ;<noinclude></noinclude>
hebezso4g649251xho8fn85an28rppx
ಪುಟ:ಮನಮಂಥನ.pdf/೧೬೩
104
62610
316618
314137
2026-05-04T02:48:29Z
Shreelatha.Halemane
7642
/* Proofread */
316618
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೧೪೪}}{{Right|ಮನಮಂಥನ}}
ರಾಗಭಾವಗಳಲ್ಲಿ ಆಳವಿಲ್ಲದೆ ಇರುವುದು ; ಇವೆಲ್ಲವೂ ಹಿಸ್ಟಿರಿಯಾ ಪ್ರದರ್ಶನದ
ಮುಖ್ಯವಾದ, ಹಾಗೂ ಮೂಲಭೂತವಾದ ಕಾರಣಗಳು.
'''ಅಜ್ಜನ ಅವಾಂತರ'''
ಅರವತ್ತೈದು ವರ್ಷಗಳಾಗಿದ್ದುವು ; ನಮ್ಮ ಮೂಡಲಗಿರಿ ಅಜ್ಜಯ್ಯನಿಗೆ
ಕೂದಲು ನರೆತಿದ್ದರೂ ಹೊರವಾಗಿತ್ತು. ಒಂದೆರಡು ಹಲ್ಲುಗಳೇನೋ ಬಿದ್ದಿದ್ದುವು;
ಆದರೆ ಎಲಡಿಕೆಯನ್ನು ಜಗಿಯುತ್ತಿದ್ದ. ಬೈಸಾರೆ ಬೇಗನೆದ್ದು ತೋಟದ ಕಡೆಗೆ
ಹೋಗಿ ಸುತ್ತಾಡಿಕೊಂಡು ಬರುತ್ತಿದ್ದ. ಹಟ ಅಂದರೆ ಹಟದ ಸ್ವಭಾವ ಅವನದು;
ಆ ವಯಸ್ಸಿನಲ್ಲಿ ಕೂಡ ತೆಂಗಿನ ಮರವನ್ನು ಹತ್ತಿ ಕಾಯಿಗಳನ್ನು ಇಳಿಸುತ್ತಿದ್ದ.
ಅಷ್ಟು ಧೃಡಕಾಯನೂ ಆರೋಗ್ಯವಂತನೂ ಆಗಿದ್ದ.
ಗ್ರಾಮದಲ್ಲಿರುವ ಯಾವ ಮನೆಯಲ್ಲಾಗಲೀ, ಯಾರಿಗಾದರೂ ಸಮಸ್ಯೆ
ಉಂಟಾದರೆ, ಅವರೆಲ್ಲರೂ ಅಜ್ಜಯ್ಯನ ಬಳಿಗೆ ಬಂದು ಸಲಹೆಯನ್ನು
ಪಡೆಯುತ್ತಿದ್ದರು. ಅಜ್ಜಯ್ಯನ ಅನುಭವವೂ, ವಾಸ್ತವಿಕ ಜಾಣತನವೂ
ಅಧಿಕವಾಗಿದ್ದುದರಿಂದ, ಕೊಟ್ಟ ಸಲಹೆಯನ್ನು ಇತರರು ಅನುಸರಿಸುತ್ತಿದ್ದರು.
ವಯಸ್ಸು ಅರವತ್ತನ್ನು ಮೀರಿದ್ದರೂ ಅರುಳು-ಮರುಳಿನ ಛಾಯೆಯೂ ಇರಲಿಲ್ಲ.
ಇತರರನ್ನು ಮರುಳು ಮಾಡುವ ಚಾಲೂಕು ಸಾಕಷ್ಟಿತ್ತು.
ವರ್ಷಾವಧಿ ಹಬ್ಬದ ಹಿಂದಿನ ದಿನ ತೆಂಗಿನಕಾಯಿಗಳನ್ನು ಇಳಿಸಲು
ತಾನೇ ಮರ ಹತ್ತಿದ. ಅವತ್ತೇನು ಗ್ರಹಚಾರವೋ ಕಾಲು ಜಾರಿತು. ಮೂರಾಳು
ಎತ್ತರದಿಂದ ದುಡುಂ ಅಂತ ಬಿದ್ದ. ನೆಲದ ಮೇಲಿದ್ದ ಬೆಣಚುಕಲ್ಲು, ಹಣೆಯ
ಮೇಲಂಚಿಗೆ ತಾಕಿತು. ಧಾರಾಕಾರವಾಗಿ ರಕ್ತ ಹರಿಯಿತು. ಬಿದ್ದ ಶಬ್ದವನ್ನು ಕೇಳಿ
ತೋಟದ ಆಳುಗಳು ಓಡೋಡಿ ಬಂದರು. ಜ್ಞಾನ ತಪ್ಪಿದ್ದ ಅಜ್ಜಯ್ಯನ ತಲೆಗೆ
ಬಿಗಿಯಾಗಿ ಪಟ್ಟಿ ಕಟ್ಟಿ, ಮನೆಗೆ ಎತ್ತಿಕೊಂಡು ಬಂದು ಮಲಗಿಸಿದರು.
ಡಾಕ್ಟರನ್ನು ಕರೆಸಿದರು. ಆತ ಬಂದು ಪರೀಕ್ಷಿಸಿದಾಗ, ಹಣೆಯ
ಮೇಲ್ಬಾಗದಲ್ಲಿ ತಲೆಯ ಚಿಪ್ಪು ಒಡೆದಿದೆ ಎಂದು ತಿಳಿಯಿತು. ಸೂಕ್ತ ಚಿಕಿತ್ಸೆಯನ್ನು
ನಡೆಸಿದರು. ಪ್ರಜ್ಞೆಯು ಹಿಂತಿರುಗಲು ಮೂರು ದಿನಗಳಾದುವು. ಒಂದೆರಡು
ವಾರಗಳಲ್ಲಿ ಗಾಯವೂ ಮಾಯವಾಯಿತು. ಹಳ್ಳ ಬಿದ್ದ ಗಾಯದ ಕಲೆಯೊಂದನ್ನು
ಬಿಟ್ಟರೆ, ಅಜ್ಜಯ್ಯನ ಆರೋಗ್ಯ ಸ್ಥಿತಿಯು ಹಿಂದಿದ್ದಂತೆಯೇ ಸರಿಯಾಗಿತ್ತು.
ಎರಡು ಮೂರು ತಿಂಗಳುಗಳಾದ ಮೇಲೆ ಅಜ್ಜಯ್ಯನ ನಡವಳಿಕೆಯಲ್ಲಿ
ತುಸು ಬದಲಾವಣೆಗಳು ಕಂಡುಬಂದುವು. ಎಂದಿನಂತೆ ಬೆಳಗಾಗುತ್ತಲೂ,<noinclude></noinclude>
jptyq91a1xwxwm81w4e1co806kb3s3m
316636
316618
2026-05-04T03:03:49Z
Shreesha Sharma
7840
/* Validated */
316636
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೪೪}}{{Right|ಮನಮಂಥನ}}
ರಾಗಭಾವಗಳಲ್ಲಿ ಆಳವಿಲ್ಲದೆ ಇರುವುದು ; ಇವೆಲ್ಲವೂ ಹಿಸ್ಟಿರಿಯಾ ಪ್ರದರ್ಶನದ
ಮುಖ್ಯವಾದ, ಹಾಗೂ ಮೂಲಭೂತವಾದ ಕಾರಣಗಳು.
'''ಅಜ್ಜನ ಅವಾಂತರ'''
{{gap}}ಅರವತ್ತೈದು ವರ್ಷಗಳಾಗಿದ್ದುವು ; ನಮ್ಮ ಮೂಡಲಗಿರಿ ಅಜ್ಜಯ್ಯನಿಗೆ
ಕೂದಲು ನರೆತಿದ್ದರೂ ಹೊರವಾಗಿತ್ತು. ಒಂದೆರಡು ಹಲ್ಲುಗಳೇನೋ ಬಿದ್ದಿದ್ದುವು;
ಆದರೆ ಎಲಡಿಕೆಯನ್ನು ಜಗಿಯುತ್ತಿದ್ದ. ಬೈಸಾರೆ ಬೇಗನೆದ್ದು ತೋಟದ ಕಡೆಗೆ
ಹೋಗಿ ಸುತ್ತಾಡಿಕೊಂಡು ಬರುತ್ತಿದ್ದ. ಹಟ ಅಂದರೆ ಹಟದ ಸ್ವಭಾವ ಅವನದು;
ಆ ವಯಸ್ಸಿನಲ್ಲಿ ಕೂಡ ತೆಂಗಿನ ಮರವನ್ನು ಹತ್ತಿ ಕಾಯಿಗಳನ್ನು ಇಳಿಸುತ್ತಿದ್ದ.
ಅಷ್ಟು ಧೃಡಕಾಯನೂ ಆರೋಗ್ಯವಂತನೂ ಆಗಿದ್ದ.
{{gap}}ಗ್ರಾಮದಲ್ಲಿರುವ ಯಾವ ಮನೆಯಲ್ಲಾಗಲೀ, ಯಾರಿಗಾದರೂ ಸಮಸ್ಯೆ
ಉಂಟಾದರೆ, ಅವರೆಲ್ಲರೂ ಅಜ್ಜಯ್ಯನ ಬಳಿಗೆ ಬಂದು ಸಲಹೆಯನ್ನು
ಪಡೆಯುತ್ತಿದ್ದರು. ಅಜ್ಜಯ್ಯನ ಅನುಭವವೂ, ವಾಸ್ತವಿಕ ಜಾಣತನವೂ
ಅಧಿಕವಾಗಿದ್ದುದರಿಂದ, ಕೊಟ್ಟ ಸಲಹೆಯನ್ನು ಇತರರು ಅನುಸರಿಸುತ್ತಿದ್ದರು.
ವಯಸ್ಸು ಅರವತ್ತನ್ನು ಮೀರಿದ್ದರೂ ಅರುಳು-ಮರುಳಿನ ಛಾಯೆಯೂ ಇರಲಿಲ್ಲ.
ಇತರರನ್ನು ಮರುಳು ಮಾಡುವ ಚಾಲೂಕು ಸಾಕಷ್ಟಿತ್ತು.
{{gap}}ವರ್ಷಾವಧಿ ಹಬ್ಬದ ಹಿಂದಿನ ದಿನ ತೆಂಗಿನಕಾಯಿಗಳನ್ನು ಇಳಿಸಲು
ತಾನೇ ಮರ ಹತ್ತಿದ. ಅವತ್ತೇನು ಗ್ರಹಚಾರವೋ ಕಾಲು ಜಾರಿತು. ಮೂರಾಳು
ಎತ್ತರದಿಂದ ದುಡುಂ ಅಂತ ಬಿದ್ದ. ನೆಲದ ಮೇಲಿದ್ದ ಬೆಣಚುಕಲ್ಲು, ಹಣೆಯ
ಮೇಲಂಚಿಗೆ ತಾಕಿತು. ಧಾರಾಕಾರವಾಗಿ ರಕ್ತ ಹರಿಯಿತು. ಬಿದ್ದ ಶಬ್ದವನ್ನು ಕೇಳಿ
ತೋಟದ ಆಳುಗಳು ಓಡೋಡಿ ಬಂದರು. ಜ್ಞಾನ ತಪ್ಪಿದ್ದ ಅಜ್ಜಯ್ಯನ ತಲೆಗೆ
ಬಿಗಿಯಾಗಿ ಪಟ್ಟಿ ಕಟ್ಟಿ, ಮನೆಗೆ ಎತ್ತಿಕೊಂಡು ಬಂದು ಮಲಗಿಸಿದರು.
{{gap}}ಡಾಕ್ಟರನ್ನು ಕರೆಸಿದರು. ಆತ ಬಂದು ಪರೀಕ್ಷಿಸಿದಾಗ, ಹಣೆಯ
ಮೇಲ್ಬಾಗದಲ್ಲಿ ತಲೆಯ ಚಿಪ್ಪು ಒಡೆದಿದೆ ಎಂದು ತಿಳಿಯಿತು. ಸೂಕ್ತ ಚಿಕಿತ್ಸೆಯನ್ನು
ನಡೆಸಿದರು. ಪ್ರಜ್ಞೆಯು ಹಿಂತಿರುಗಲು ಮೂರು ದಿನಗಳಾದುವು. ಒಂದೆರಡು
ವಾರಗಳಲ್ಲಿ ಗಾಯವೂ ಮಾಯವಾಯಿತು. ಹಳ್ಳ ಬಿದ್ದ ಗಾಯದ ಕಲೆಯೊಂದನ್ನು
ಬಿಟ್ಟರೆ, ಅಜ್ಜಯ್ಯನ ಆರೋಗ್ಯ ಸ್ಥಿತಿಯು ಹಿಂದಿದ್ದಂತೆಯೇ ಸರಿಯಾಗಿತ್ತು.
{{gap}}ಎರಡು ಮೂರು ತಿಂಗಳುಗಳಾದ ಮೇಲೆ ಅಜ್ಜಯ್ಯನ ನಡವಳಿಕೆಯಲ್ಲಿ
ತುಸು ಬದಲಾವಣೆಗಳು ಕಂಡುಬಂದುವು. ಎಂದಿನಂತೆ ಬೆಳಗಾಗುತ್ತಲೂ,<noinclude></noinclude>
ttvamzi2mpx72ryeyis5328onkarn3u
ಪುಟ:ಮನಮಂಥನ.pdf/೧೬೪
104
62611
316619
314138
2026-05-04T02:49:17Z
Shreelatha.Halemane
7642
/* Proofread */
316619
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೪೫}}
ದೈನಂದಿನ ಪ್ರಾತರ್ವಿಧಿ ಮುಗಿಸಿ, ಊಟದ ಹಜಾರಕ್ಕೆ ತಿಂಡಿಯನ್ನು ತಿನ್ನಲು
ಬರುತ್ತಿರಲಿಲ್ಲ. ಇದ್ದಲ್ಲಿಂದಲೇ ಮನೆಯವರನ್ನು ಕೂಗಿ 'ಇಷ್ಟು ಹೊತ್ತಾದರೂ,
ಮುದುಕನಿಗೆ ಒಂದಿಷ್ಟು ತಿಂಡಿಯನ್ನು ಕೊಡಬಾರದೇನೇ' ಎಂದು ಸೊಸೆಯರನ್ನು
ಗದರಿಸುತ್ತ, ಹಾಗೂ ಮಕ್ಕಳಂತೆ ಗೋಗರೆಯುತ್ತಲೂ ಇದ್ದ. ಸ್ನಾನಕ್ಕೆ ಹೋದಾಗ,
ಕೊಳದಪ್ಪಲೆಯಲ್ಲಿ ಸಾಕಷ್ಟು ಬಿಸಿನೀರನ್ನು ತುಂಬಿಟ್ಟಿಲ್ಲ ಎಂದು ಹತ್ತು ಹದಿನೈದು
ನಿಮಿಷಗಳು ರಂಪ ಮಾಡುತ್ತಿದ್ದ. ಅಜ್ಜಯ್ಯನನ್ನು ಸಮಾಧಾನಕ್ಕೆ ತರಲು ಬೆಳೆದ
ಮಕ್ಕಳಿಗೆ ಸಾಕು ಸಾಕಾಗಿ ಹೋಗುತ್ತಿತ್ತು. ಯೋಗಕ್ಷೇಮವನ್ನು ವಿಚಾರಿಸಲು
ಗ್ರಾಮದ ಹಿರಿಯರು ಬಂದರೆ, ಆಮಾತು ಈಮಾತು ಆಡುತ್ತಾ, ಹತ್ತು ವರ್ಷಗಳ
ಹಿಂದೆ ತಾ ಮೈಸೂರಿಗೆ ಹೋದುದನ್ನು, ದಸರಾ ಪೋಲೀಸಿನವರನ್ನು
ಬೆದರಿಸಿದುದನ್ನೂ ಬಣ್ಣಿಸತೊಡಗಿ, ಬೊಗಳೆ ಕೊಚ್ಚಲಾರಂಭಿಸಿದ. ಗಂಭೀರವಾಗಿ
ಮಾತನಾಡುತ್ತಿದ್ದವ ಈಗ ಅಭಿನಯಗಳೊಂದಿಗೆ ನಾಟಕೀಯವಾಗಿ ಆಡಲು
ಪ್ರಾರಂಭಿಸಿದ.
ಮಾಮೂಲಾಗಿ ಹಜಾಮತ್ತು ಮಾಡುವ ಕ್ಷೌರಿಕನು ಎಂದಿನಂತೆ ಬಂದ.
ಅಜ್ಜಯ್ಯನಿಗೂ ಅವನಿಗೂ ಮೂವತ್ತು ವರ್ಷದ ಪರಿಚಯ. ಆ ದಿನ ಅಜ್ಜಯ್ಯನಿಗೆ
ಕ್ಷೌರವನ್ನು ಮಾಡುವಾಗ, ಅಜ್ಜಯ್ಯ ಅಳ್ಳಾಡಿದುದರಿಂದ, ಕೆನ್ನೆಯ ಮೇಲೆ ಸ್ವಲ್ಪ
ಚುರುಕ್ ಎನಿಸಿತು. ಐದಾರು ತೊಟ್ಟು ರಕ್ತವೂ ಬಿತ್ತು. ಅಷ್ಟಕ್ಕೆ ಅಜ್ಜಯ್ಯ ಎಷ್ಟು
ಅವಾಂತರ ಎಬ್ಬಿಸಿದ ಅಂತ ! ಯಾರದಾದರೂ ಖಿನಿ ಆಗಿದ್ದರೂ ಅಷ್ಟು
ಗಲಭೆ ಮಾಡುತ್ತಿರಲಿಲ್ಲ. ಮನೆಯ ಸೂರು ಮುರಿದು ಬೀಳುವ ಹಾಗೆ ಬೊಬ್ಬೆ
ಇಟ್ಟ, ಕ್ಷೌರಿಕನ ಮುಖದಿಂದ ನೀರು ಇಳಿಸಿಬಿಟ್ಟ. ಆದರೆ ಇದೇ ಅಜ್ಜಯ್ಯ
ಕೇವಲ ಒಂದು ವರ್ಷದ ಹಿಂದೆ ಕಬ್ಬನ್ನು ಕತ್ತರಿಸುತ್ತಿದ್ದ, ಹೆಬ್ಬೆರಳಿಗೆ ಭಾರಿ
ಪೆಟ್ಟಾಗಿತ್ತು. ಸುತ್ತಲೂ ಇದ್ದ ಮನೆಯವರೆಲ್ಲಾ ಅಯ್ಯಯ್ಯೋ ಎಂದು ಬೊಬ್ಬಿರಿದರು.
ಆದರೆ ಅಜ್ಜಯ್ಯ ಏನು ಮಾಡಿದ್ದ ಗೊತ್ತೆ ? ಒದ್ದೆ ಬಟ್ಟೆಯನ್ನು ಬಿಗಿಯಾಗಿ
ಬೆರಳಿಗೆ ಕಟ್ಟಿ, ಕಬ್ಬು ಹೆಚ್ಚುವುದನ್ನು ಮುಂದುವರೆಸಿದ್ದ. ಅಂತಹ ಧೈರ್ಯಶಾಲಿ,
ಇವತ್ತು ಕೆನ್ನೆಯಲ್ಲಿ ತುಸು ಚುರುಕ್ ಆದರೆ ಏನೆಲ್ಲಾ ಅವಾಂತರವನ್ನೆಬ್ಬಿಸಿದ.
ಹಾಗಿದ್ದ ಅಜ್ಜಯ್ಯ ಈಗ ನಾಟಕೀಯವಾಗಿ ಮಾತನಾಡುತ್ತ ; ಮಕ್ಕಳಂತೆ
ಹಟಹಿಡಿದು ರಂಪ ಮಾಡುತ್ತ ; ಕೆಲವೊಮ್ಮೆ ಎಳೆಯ ಮಕ್ಕಳಂತೆ ಗೋಗರೆಯುತ್ತ;
ತಾನು, ತಾನು ಮಾಡಿದ್ದು ಅತಿಶಯ ; ಇತ್ಯಾದಿ ಬೊಗಳೆ ಕೊಚ್ಚುತ್ತಾ ;
ಕಂಡವರೆದುರು ನಗೆಪಾಟಲು ಆಗಲು ಕಾರಣವೇನು ? ಇಂತಹ ಪರಿವರ್ತನೆಯು
ಹೇಗೆ ಆಯಿತು?<noinclude></noinclude>
of99w0f8fy6wtij0w0fypencbo3mtmy
316637
316619
2026-05-04T03:04:10Z
Shreesha Sharma
7840
/* Validated */
316637
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೪೫}}
ದೈನಂದಿನ ಪ್ರಾತರ್ವಿಧಿ ಮುಗಿಸಿ, ಊಟದ ಹಜಾರಕ್ಕೆ ತಿಂಡಿಯನ್ನು ತಿನ್ನಲು
ಬರುತ್ತಿರಲಿಲ್ಲ. ಇದ್ದಲ್ಲಿಂದಲೇ ಮನೆಯವರನ್ನು ಕೂಗಿ 'ಇಷ್ಟು ಹೊತ್ತಾದರೂ,
ಮುದುಕನಿಗೆ ಒಂದಿಷ್ಟು ತಿಂಡಿಯನ್ನು ಕೊಡಬಾರದೇನೇ' ಎಂದು ಸೊಸೆಯರನ್ನು
ಗದರಿಸುತ್ತ, ಹಾಗೂ ಮಕ್ಕಳಂತೆ ಗೋಗರೆಯುತ್ತಲೂ ಇದ್ದ. ಸ್ನಾನಕ್ಕೆ ಹೋದಾಗ,
ಕೊಳದಪ್ಪಲೆಯಲ್ಲಿ ಸಾಕಷ್ಟು ಬಿಸಿನೀರನ್ನು ತುಂಬಿಟ್ಟಿಲ್ಲ ಎಂದು ಹತ್ತು ಹದಿನೈದು
ನಿಮಿಷಗಳು ರಂಪ ಮಾಡುತ್ತಿದ್ದ. ಅಜ್ಜಯ್ಯನನ್ನು ಸಮಾಧಾನಕ್ಕೆ ತರಲು ಬೆಳೆದ
ಮಕ್ಕಳಿಗೆ ಸಾಕು ಸಾಕಾಗಿ ಹೋಗುತ್ತಿತ್ತು. ಯೋಗಕ್ಷೇಮವನ್ನು ವಿಚಾರಿಸಲು
ಗ್ರಾಮದ ಹಿರಿಯರು ಬಂದರೆ, ಆಮಾತು ಈಮಾತು ಆಡುತ್ತಾ, ಹತ್ತು ವರ್ಷಗಳ
ಹಿಂದೆ ತಾ ಮೈಸೂರಿಗೆ ಹೋದುದನ್ನು, ದಸರಾ ಪೋಲೀಸಿನವರನ್ನು
ಬೆದರಿಸಿದುದನ್ನೂ ಬಣ್ಣಿಸತೊಡಗಿ, ಬೊಗಳೆ ಕೊಚ್ಚಲಾರಂಭಿಸಿದ. ಗಂಭೀರವಾಗಿ
ಮಾತನಾಡುತ್ತಿದ್ದವ ಈಗ ಅಭಿನಯಗಳೊಂದಿಗೆ ನಾಟಕೀಯವಾಗಿ ಆಡಲು
ಪ್ರಾರಂಭಿಸಿದ.
{{gap}}ಮಾಮೂಲಾಗಿ ಹಜಾಮತ್ತು ಮಾಡುವ ಕ್ಷೌರಿಕನು ಎಂದಿನಂತೆ ಬಂದ.
ಅಜ್ಜಯ್ಯನಿಗೂ ಅವನಿಗೂ ಮೂವತ್ತು ವರ್ಷದ ಪರಿಚಯ. ಆ ದಿನ ಅಜ್ಜಯ್ಯನಿಗೆ
ಕ್ಷೌರವನ್ನು ಮಾಡುವಾಗ, ಅಜ್ಜಯ್ಯ ಅಳ್ಳಾಡಿದುದರಿಂದ, ಕೆನ್ನೆಯ ಮೇಲೆ ಸ್ವಲ್ಪ
ಚುರುಕ್ ಎನಿಸಿತು. ಐದಾರು ತೊಟ್ಟು ರಕ್ತವೂ ಬಿತ್ತು. ಅಷ್ಟಕ್ಕೆ ಅಜ್ಜಯ್ಯ ಎಷ್ಟು
ಅವಾಂತರ ಎಬ್ಬಿಸಿದ ಅಂತ ! ಯಾರದಾದರೂ ಖಿನಿ ಆಗಿದ್ದರೂ ಅಷ್ಟು
ಗಲಭೆ ಮಾಡುತ್ತಿರಲಿಲ್ಲ. ಮನೆಯ ಸೂರು ಮುರಿದು ಬೀಳುವ ಹಾಗೆ ಬೊಬ್ಬೆ
ಇಟ್ಟ, ಕ್ಷೌರಿಕನ ಮುಖದಿಂದ ನೀರು ಇಳಿಸಿಬಿಟ್ಟ. ಆದರೆ ಇದೇ ಅಜ್ಜಯ್ಯ
ಕೇವಲ ಒಂದು ವರ್ಷದ ಹಿಂದೆ ಕಬ್ಬನ್ನು ಕತ್ತರಿಸುತ್ತಿದ್ದ, ಹೆಬ್ಬೆರಳಿಗೆ ಭಾರಿ
ಪೆಟ್ಟಾಗಿತ್ತು. ಸುತ್ತಲೂ ಇದ್ದ ಮನೆಯವರೆಲ್ಲಾ ಅಯ್ಯಯ್ಯೋ ಎಂದು ಬೊಬ್ಬಿರಿದರು.
ಆದರೆ ಅಜ್ಜಯ್ಯ ಏನು ಮಾಡಿದ್ದ ಗೊತ್ತೆ ? ಒದ್ದೆ ಬಟ್ಟೆಯನ್ನು ಬಿಗಿಯಾಗಿ
ಬೆರಳಿಗೆ ಕಟ್ಟಿ, ಕಬ್ಬು ಹೆಚ್ಚುವುದನ್ನು ಮುಂದುವರೆಸಿದ್ದ. ಅಂತಹ ಧೈರ್ಯಶಾಲಿ,
ಇವತ್ತು ಕೆನ್ನೆಯಲ್ಲಿ ತುಸು ಚುರುಕ್ ಆದರೆ ಏನೆಲ್ಲಾ ಅವಾಂತರವನ್ನೆಬ್ಬಿಸಿದ.
{{gap}}ಹಾಗಿದ್ದ ಅಜ್ಜಯ್ಯ ಈಗ ನಾಟಕೀಯವಾಗಿ ಮಾತನಾಡುತ್ತ ; ಮಕ್ಕಳಂತೆ
ಹಟಹಿಡಿದು ರಂಪ ಮಾಡುತ್ತ ; ಕೆಲವೊಮ್ಮೆ ಎಳೆಯ ಮಕ್ಕಳಂತೆ ಗೋಗರೆಯುತ್ತ;
ತಾನು, ತಾನು ಮಾಡಿದ್ದು ಅತಿಶಯ ; ಇತ್ಯಾದಿ ಬೊಗಳೆ ಕೊಚ್ಚುತ್ತಾ ;
ಕಂಡವರೆದುರು ನಗೆಪಾಟಲು ಆಗಲು ಕಾರಣವೇನು ? ಇಂತಹ ಪರಿವರ್ತನೆಯು
ಹೇಗೆ ಆಯಿತು?<noinclude></noinclude>
3a3uudj8d8611w8n7ayba1rw5vqnxjk
ಪುಟ:ಮನಮಂಥನ.pdf/೧೬೫
104
62612
316628
314139
2026-05-04T02:58:41Z
Shreelatha.Halemane
7642
/* Proofread */
316628
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೧೪೯}}{{Right|ಮನಮಂಥನ}}
ತೆಂಗಿನಮರದಿಂದ ಬಿದ್ದಾಗ, ತಲೆಯ ಚಿಪ್ಪು ಒಡೆದು, ಮೆದುಳಿನ
ಮುಂಭಾಗಕ್ಕೆ ಘಾಸಿ ಮಾಡಿತ್ತು. ಅದೊಂದು ಅರೆಕ್ಷಣ. ಅನಂತರ ಚಿಪ್ಪ ಮಿಡಿದೆದ್ದು
ಸ್ವಸ್ಥಾನವನ್ನು ಪಡೆದಿತ್ತು. ಆದರೂ ಆ ವೇಳೆಗೆ ಮೆದುಳಿನಲ್ಲಿ ಗಾಯವಾಗಿತ್ತು.
ಹಣೆಯ ಮೇಲೆ ಆಗಿದ್ದ ಗಾಯವು ಕೆಲವು ದಿನಗಳಲ್ಲಿ ವಾಸಿಯಾಯಿತು.
ಆದರೆ ಮೆದುಳಿನಲ್ಲಿ ಹರಿದು ಹೋಗಿದ್ದ ಭಾಗವು ವಾಸಿಯಾಗಲು ಸ್ವಲ್ಪ
ಹೆಚ್ಚು ಕಾಲವಾಯಿತು. ಹೀಗಾಗುವಾಗ, ಚರ್ಮದಲ್ಲಿ ಆದಂತೆಯೇ ಮೆದುಳಿನಲ್ಲೂ
Scar Tissue ಬೆಳೆಯಿತು. Scar ಅಥವಾ ಗಾಯದ ಕಲೆಯು, ಹಣೆಯ ಮೇಲೆ
ಮೊದಲಿನಂತಿದ್ದ ಚರ್ಮದಂತಿರುವುದಿಲ್ಲ ; ಮೆದುಳಿನಲ್ಲಿಯೂ ಹಾಗೆಯೇ,
ಚರ್ಮದ Scar ಬೆವರುವುದಿಲ್ಲ. ಚರ್ಮದಂತೆ ಅದು ಇಂದ್ರಿಯ ಕೆಲಸಗಳನ್ನು
ಮಾಡಲು ಸಾಧ್ಯವಿಲ್ಲ. ಅದೊಂದು ನಿರ್ಜೀವವಾದ ರಕ್ಷಾಕವಚ ಮಾತ್ರ ಮೆದುಳಿನಲ್ಲಿ
ಮೂಡಿದ Scar ಕೂಡ, ರಕ್ಷೆಯೇ ಹೊರತು, ಆ ಭಾಗದ ಮೆದುಳೂ ಮೊದಲು
ಮಾಡುತ್ತಿದ್ದಂತೆ, ಕಾರ್ಯ ಮಾಡಲಾರದು. ಇಂತಹ ಪರಿಸ್ಥಿತಿಗಳಲ್ಲಿ ಮೆದುಳಿನ
ಒಂದು ಭಾಗವು ಬೇನೆಯಾಗಿದೆ ಎಂದು ಹೇಳಲಾಗದು ; ಆದರೆ ಅದು ತನ್ನ
ಸಾಮಾನ್ಯ ಕಾರ್ಯಗಳನ್ನು ಮಾಡಲು ಯೋಗ್ಯವಾಗಿರುವುದಿಲ್ಲ.
ಹೀಗಾದವರಲ್ಲಿ ಆನಂತರ ಹಿಸ್ಟಿರಿಕಲ್ ನಡವಳಿಕೆಯನ್ನು ಕಾಣುತ್ತೇವೆ.
ಅಂತಹವರು ಹಿಸ್ಟಿರಿಕಲ್ ಪ್ರದರ್ಶನವನ್ನು ಪುಸ್ತಕದಲ್ಲಿ ವಿವರಿಸಿದಂತೆ ನಡೆಸುತ್ತಾರೆ.
ಗಾಯಗಳೊಂದೇ ಅಲ್ಲ ; ಮೆದುಳಿಗೆ ಇತರ ರೋಗಗಳೂ ತಗಲಬಹುದು.
ರಕ್ತದ ಒತ್ತಡವು ಅಧಿಕವಾಗಿ (High Blood Pressure) ಮೆದುಳಿನ ರಕ್ತನಾಳಗಳು
ಕಠಿಣವಾಗಿ; ಸಾಕಷ್ಟು ಮತ್ತು ಅಗತ್ಯವಾದಷ್ಟು ರಕ್ತವು ಮೆದುಳಿಗೆ
ಸರಬರಾಜಾಗುವುದಿಲ್ಲ. ಆಗ ಕೂಡ ಮೆದುಳಿನ ಕಾರ್ಯಕ್ಕೆ ಅಡಚಣೆಯುಂಟಾಗಿ,
ವಯಸ್ಕರು ಮಕ್ಕಳಂತಾಗಲು ಸಾಧ್ಯ.
ಇದರಂತೆಯೇ ಮೆದುಳಿನಲ್ಲಿ ಬೆಳೆಯುವ ಕೆಲವು ಗಡ್ಡೆಗಳೂ ಮೆದುಳಿನ
ಸಾಮಾನ್ಯ ಕಾರ್ಯಕ್ಕೆ ಅಡಚಣೆಯನ್ನುಂಟುಮಾಡುತ್ತವೆ. ಮೊದಮೊದಲ ಹಂತದಲ್ಲಿ
ಹಿಸ್ಟಿರಿಯಾ ಪ್ರದರ್ಶನದಂತೆ ಇರಲು ಸಾಧ್ಯ.
ಅಂದರೆ ಮುದುಕರಲ್ಲಿ ಕೂಡ ಹಿಸ್ಟಿರಿಯಾದ ಪ್ರದರ್ಶನವನ್ನು ಕಾಣಬಹುದು
ಎಂದಂತಾಯಿತು. ಮುದುಕರಾಗುವ ವೇಳೆಗೆ, ಮೆದುಳು ಮತ್ತು ಮನಸ್ಸ
ಸಂಪೂರ್ಣವಾಗಿ ಅಭಿವೃದ್ಧಿಯಾಗಿರುತ್ತದೆ. ಅಂದಮೇಲೆ ಮಕ್ಕಳಲ್ಲಿ ಕಾಣಬರುವ
ಚಿಹ್ನೆಗಳು ಮುದುಕರಲ್ಲಿ ಹೇಗೆ ಸಾಧ್ಯ ಎಂದು ಕೇಳಬಹುದು. ತಲೆಗೆ ತಗುಲಿದ
ಆಘಾತದಿಂದ ಮೆದುಳು ಅಸ್ತವ್ಯಸ್ತವಾಗುತ್ತದೆ. ತತ್ಕಾರಣ ಮನಸ್ಸ<noinclude></noinclude>
bqicish8gzukhey5c3uj5x3br9lpqn9
316638
316628
2026-05-04T03:04:57Z
Shreesha Sharma
7840
/* Validated */
316638
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೪೯}}{{Right|ಮನಮಂಥನ}}
{{gap}}ತೆಂಗಿನಮರದಿಂದ ಬಿದ್ದಾಗ, ತಲೆಯ ಚಿಪ್ಪು ಒಡೆದು, ಮೆದುಳಿನ
ಮುಂಭಾಗಕ್ಕೆ ಘಾಸಿ ಮಾಡಿತ್ತು. ಅದೊಂದು ಅರೆಕ್ಷಣ. ಅನಂತರ ಚಿಪ್ಪ ಮಿಡಿದೆದ್ದು
ಸ್ವಸ್ಥಾನವನ್ನು ಪಡೆದಿತ್ತು. ಆದರೂ ಆ ವೇಳೆಗೆ ಮೆದುಳಿನಲ್ಲಿ ಗಾಯವಾಗಿತ್ತು.
ಹಣೆಯ ಮೇಲೆ ಆಗಿದ್ದ ಗಾಯವು ಕೆಲವು ದಿನಗಳಲ್ಲಿ ವಾಸಿಯಾಯಿತು.
{{gap}}ಆದರೆ ಮೆದುಳಿನಲ್ಲಿ ಹರಿದು ಹೋಗಿದ್ದ ಭಾಗವು ವಾಸಿಯಾಗಲು ಸ್ವಲ್ಪ
ಹೆಚ್ಚು ಕಾಲವಾಯಿತು. ಹೀಗಾಗುವಾಗ, ಚರ್ಮದಲ್ಲಿ ಆದಂತೆಯೇ ಮೆದುಳಿನಲ್ಲೂ
Scar Tissue ಬೆಳೆಯಿತು. Scar ಅಥವಾ ಗಾಯದ ಕಲೆಯು, ಹಣೆಯ ಮೇಲೆ
ಮೊದಲಿನಂತಿದ್ದ ಚರ್ಮದಂತಿರುವುದಿಲ್ಲ ; ಮೆದುಳಿನಲ್ಲಿಯೂ ಹಾಗೆಯೇ,
ಚರ್ಮದ Scar ಬೆವರುವುದಿಲ್ಲ. ಚರ್ಮದಂತೆ ಅದು ಇಂದ್ರಿಯ ಕೆಲಸಗಳನ್ನು
ಮಾಡಲು ಸಾಧ್ಯವಿಲ್ಲ. ಅದೊಂದು ನಿರ್ಜೀವವಾದ ರಕ್ಷಾಕವಚ ಮಾತ್ರ ಮೆದುಳಿನಲ್ಲಿ
ಮೂಡಿದ Scar ಕೂಡ, ರಕ್ಷೆಯೇ ಹೊರತು, ಆ ಭಾಗದ ಮೆದುಳೂ ಮೊದಲು
ಮಾಡುತ್ತಿದ್ದಂತೆ, ಕಾರ್ಯ ಮಾಡಲಾರದು. ಇಂತಹ ಪರಿಸ್ಥಿತಿಗಳಲ್ಲಿ ಮೆದುಳಿನ
ಒಂದು ಭಾಗವು ಬೇನೆಯಾಗಿದೆ ಎಂದು ಹೇಳಲಾಗದು ; ಆದರೆ ಅದು ತನ್ನ
ಸಾಮಾನ್ಯ ಕಾರ್ಯಗಳನ್ನು ಮಾಡಲು ಯೋಗ್ಯವಾಗಿರುವುದಿಲ್ಲ.
{{gap}}ಹೀಗಾದವರಲ್ಲಿ ಆನಂತರ ಹಿಸ್ಟಿರಿಕಲ್ ನಡವಳಿಕೆಯನ್ನು ಕಾಣುತ್ತೇವೆ.
ಅಂತಹವರು ಹಿಸ್ಟಿರಿಕಲ್ ಪ್ರದರ್ಶನವನ್ನು ಪುಸ್ತಕದಲ್ಲಿ ವಿವರಿಸಿದಂತೆ ನಡೆಸುತ್ತಾರೆ.
{{gap}}ಗಾಯಗಳೊಂದೇ ಅಲ್ಲ ; ಮೆದುಳಿಗೆ ಇತರ ರೋಗಗಳೂ ತಗಲಬಹುದು.
ರಕ್ತದ ಒತ್ತಡವು ಅಧಿಕವಾಗಿ (High Blood Pressure) ಮೆದುಳಿನ ರಕ್ತನಾಳಗಳು
ಕಠಿಣವಾಗಿ; ಸಾಕಷ್ಟು ಮತ್ತು ಅಗತ್ಯವಾದಷ್ಟು ರಕ್ತವು ಮೆದುಳಿಗೆ
ಸರಬರಾಜಾಗುವುದಿಲ್ಲ. ಆಗ ಕೂಡ ಮೆದುಳಿನ ಕಾರ್ಯಕ್ಕೆ ಅಡಚಣೆಯುಂಟಾಗಿ,
ವಯಸ್ಕರು ಮಕ್ಕಳಂತಾಗಲು ಸಾಧ್ಯ.
{{gap}}ಇದರಂತೆಯೇ ಮೆದುಳಿನಲ್ಲಿ ಬೆಳೆಯುವ ಕೆಲವು ಗಡ್ಡೆಗಳೂ ಮೆದುಳಿನ
ಸಾಮಾನ್ಯ ಕಾರ್ಯಕ್ಕೆ ಅಡಚಣೆಯನ್ನುಂಟುಮಾಡುತ್ತವೆ. ಮೊದಮೊದಲ ಹಂತದಲ್ಲಿ
ಹಿಸ್ಟಿರಿಯಾ ಪ್ರದರ್ಶನದಂತೆ ಇರಲು ಸಾಧ್ಯ.
{{gap}}ಅಂದರೆ ಮುದುಕರಲ್ಲಿ ಕೂಡ ಹಿಸ್ಟಿರಿಯಾದ ಪ್ರದರ್ಶನವನ್ನು ಕಾಣಬಹುದು
ಎಂದಂತಾಯಿತು. ಮುದುಕರಾಗುವ ವೇಳೆಗೆ, ಮೆದುಳು ಮತ್ತು ಮನಸ್ಸ
ಸಂಪೂರ್ಣವಾಗಿ ಅಭಿವೃದ್ಧಿಯಾಗಿರುತ್ತದೆ. ಅಂದಮೇಲೆ ಮಕ್ಕಳಲ್ಲಿ ಕಾಣಬರುವ
ಚಿಹ್ನೆಗಳು ಮುದುಕರಲ್ಲಿ ಹೇಗೆ ಸಾಧ್ಯ ಎಂದು ಕೇಳಬಹುದು. ತಲೆಗೆ ತಗುಲಿದ
ಆಘಾತದಿಂದ ಮೆದುಳು ಅಸ್ತವ್ಯಸ್ತವಾಗುತ್ತದೆ. ತತ್ಕಾರಣ ಮನಸ್ಸ<noinclude></noinclude>
nz9db4bg8hemvg05bpgrm3r5m0pjxvh
ಪುಟ:ಮನಮಂಥನ.pdf/೧೬೬
104
62613
316627
314140
2026-05-04T02:57:30Z
Shreelatha.Halemane
7642
/* Proofread */
316627
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೪೭}}
ಅವ್ಯವಸ್ಥಿತವಾಗುತ್ತದೆ. ತಲೆಗೆ ತಗುಲಿದ ಆಘಾತವು ಹೊರಗಿನ ವಸ್ತುಗಳಿಂದ
ಆಗುತ್ತದೆ. ದೇಹದ ಒಳಗಿರುವ ಅಂಗಗಳಲ್ಲಿ ದೋಷವು ಕಂಡುಬಂದರೂ,
ಅವುಗಳಲ್ಲಿ ಕೆಲವು ಮೆದುಳಿಗೆ ಆಘಾತವನ್ನುಂಟುಮಾಡುತ್ತವೆ. ರೋಗಾಣುಗಳಿಂದ
ಉಂಟಾಗುವ ಮೆನಿಂಜೈಟಿಸ್, ಎನ್ಕೆಫಲೈಟಿಸ್, ಇಂತಹ ಬೇನೆಗಳು ಮೆದುಳಿನ
ವ್ಯವಸ್ಥೆಯನ್ನು ಕೆಡಿಸುತ್ತವೆ. ಮೆದುಳಿಗೆ ಸರಬರಾಜಾಗುವ ರಕ್ತದ ಪ್ರಮಾಣವು
ಕಡಿಮೆಯಾದರೂ ಮನಸ್ಸು ಅವ್ಯವಸ್ಥಿತವಾಗುತ್ತದೆ. ಈಗಾಗಲೇ ತಿಳಿಸಿದಂತೆ
ಮೆದುಳಿನಲ್ಲಿ ಬೆಳೆಯುವ ಗಡ್ಡೆಗಳೂ ಇದೇ ಫಲಿತಾಂಶವನ್ನು ನೀಡುತ್ತವೆ. ಈ
ಎಲ್ಲ ಕಾರಣಗಳಿಂದ ಮುದುಕರ ಮೆದುಳು ಮಕ್ಕಳ ಅಪೂರ್ಣ ಮೆದುಳಿನಂತೆ
ಆಗಿಬಿಡುತ್ತದೆ.
ಸುಮಾರು ಐವತ್ತರ ಪ್ರಾಯದವನೊಬ್ಬ 'ಅಸಾಧ್ಯವಾದ ತಲೆನೋವು
ಬಡಿಯುತ್ತದೆ, ನನಗೆ. ಇಂತಹ ತಲೆಯನೋವು ಬಂದಿದ್ದರೆ ಯಾವ ಬ್ರಹ್ಮಾದಿ
ಮಗನೂ ಬದುಕುತ್ತಿರಲಿಲ್ಲ. ಮನೋಧೈರ್ಯವಿರುವುದರಿಂದ ನಾನು
ತಡೆದುಕೊಂಡಿದ್ದೇನೆ. ಎಂತಹ ಡಾಕ್ಟರುಗಳೋ ನೀವು.' ಎಂದು ರೇಗಿ
ಅಲವತ್ತುಕೊಳ್ಳುತ್ತಿದ್ದ. ಎರಡು ಮೂರು ದೊಡ್ಡ ಆಸ್ಪತ್ರೆಗಳಲ್ಲಿ ಅತಿಸೂಕ್ಷ್ಮವಾದ
ಪರೀಕ್ಷೆಯನ್ನು ಮಾಡಿದ್ದರು. ತಲೆನೋವನ್ನು ತರುವ ಯಾವ ಕಾರಣವೂ
ಸ್ಪಷ್ಟವಾಗಲಿಲ್ಲ. ನಾಟಕೀಯವಾಗಿ ಅವ ತನ್ನ ನೋವನ್ನು ವರ್ಣಿಸುತ್ತಿದ್ದುದರಿಂದ;
ತಾನು ಅನುಭವಿಸುತ್ತಿರುವ ತಲೆ ನೋವು ಇನ್ನಾರಿಗೂ ಬಂದಿರಲಿಕ್ಕಿಲ್ಲ ಎಂದು
ಅವ ಬೊಗಳೆ ಕೊಚ್ಚುತ್ತಿದ್ದುದರಿಂದ ; ಹಾಗೂ ನಡೆಸಿದ ಪರೀಕ್ಷೆಗಳಿಂದ ಯಾವ
ಬೇನೆಯ ಸುಳಿವೂ ಸಿಗದುದರಿಂದ ; ಇವನ ಅಟಾಟೋಪವೆಲ್ಲವೂ ಪ್ರಾಯಶಃ
ಹಿಸ್ಟಿರಿಕಲ್ ಇರಬಹುದು ಎಂದು ಪರೀಕ್ಷಿಸಿದ ತಜ್ಞರೆಲ್ಲರೂ ಸಂಶಯಪಟ್ಟರು.
ತಿಂಗಳಿಗೊಮ್ಮೆ ಹೊಸ ತಜ್ಞರ ಬಳಿ ಪರೀಕ್ಷೆಯನ್ನು ಮಾಡಿಸಿಕೊಳ್ಳುತ್ತಲೇ
ಇದ್ದ. ಯಾವ ಪ್ರಯೋಜನವೂ ದೊರಕಲಿಲ್ಲ. ಮಿಕ್ಕಂತೆ, ಈ ಕಾಲಾವಧಿಯಲ್ಲಿ
ಉಣ್ಣುಕೊಂಡು, ತಿಂದುಕೊಂಡು, ಅವ ಆರೋಗ್ಯವಾಗಿಯೇ ಇದ್ದ. ಅವನ
ದೇಹದ ತೂಕವು ಕಡಿಮೆಯಾಗಲಿಲ್ಲ. ಕೆಲಸವನ್ನು ಗೊಣಗುತ್ತಾದರೂ ಮಾಡುತ್ತಿದ್ದ.
ಆರೇಳು ತಿಂಗಳುಗಳಾದ ಮೇಲೆ ಯಥಾ ಪ್ರಕಾರ ಮಾಡಿದ ಪರೀಕ್ಷೆಯಿಂದ
ಮೆದುಳಿನ ಮುಂಭಾಗದಲ್ಲಿ ಸಣ್ಣ ಗಡ್ಡೆ ಬೆಳೆಯುತ್ತಿರಬಹುದು ಎಂದು ಅನುಮಾನವು
ಮೂಡಿತು. ಅದನ್ನು ಖಚಿತಪಡಿಸುವುದಕ್ಕಾಗಿ ಇತರ ವಿಶೇಷ ಪರೀಕ್ಷೆಗಳನ್ನು
ಮಾಡಲಾಯಿತು. ಅನುಮಾನವು ಖಚಿತವಾಯಿತು. ಶಸ್ತ್ರ ಚಿಕಿತ್ಸೆಯನ್ನು ಮಾಡಿದಾಗ
ಸಣ್ಣಗಡ್ಡೆಯೊಂದು ಇತ್ತು. ಅದನ್ನು ಸಂಪೂರ್ಣವಾಗಿ
ತೆಗೆದುಹಾಕಲು ಸಾಧ್ಯವೂ<noinclude></noinclude>
jc5tywa0banqigrl5zza620bm1w1knn
316639
316627
2026-05-04T03:05:28Z
Shreesha Sharma
7840
/* Validated */
316639
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೪೭}}
ಅವ್ಯವಸ್ಥಿತವಾಗುತ್ತದೆ. ತಲೆಗೆ ತಗುಲಿದ ಆಘಾತವು ಹೊರಗಿನ ವಸ್ತುಗಳಿಂದ
ಆಗುತ್ತದೆ. ದೇಹದ ಒಳಗಿರುವ ಅಂಗಗಳಲ್ಲಿ ದೋಷವು ಕಂಡುಬಂದರೂ,
ಅವುಗಳಲ್ಲಿ ಕೆಲವು ಮೆದುಳಿಗೆ ಆಘಾತವನ್ನುಂಟುಮಾಡುತ್ತವೆ. ರೋಗಾಣುಗಳಿಂದ
ಉಂಟಾಗುವ ಮೆನಿಂಜೈಟಿಸ್, ಎನ್ಕೆಫಲೈಟಿಸ್, ಇಂತಹ ಬೇನೆಗಳು ಮೆದುಳಿನ
ವ್ಯವಸ್ಥೆಯನ್ನು ಕೆಡಿಸುತ್ತವೆ. ಮೆದುಳಿಗೆ ಸರಬರಾಜಾಗುವ ರಕ್ತದ ಪ್ರಮಾಣವು
ಕಡಿಮೆಯಾದರೂ ಮನಸ್ಸು ಅವ್ಯವಸ್ಥಿತವಾಗುತ್ತದೆ. ಈಗಾಗಲೇ ತಿಳಿಸಿದಂತೆ
ಮೆದುಳಿನಲ್ಲಿ ಬೆಳೆಯುವ ಗಡ್ಡೆಗಳೂ ಇದೇ ಫಲಿತಾಂಶವನ್ನು ನೀಡುತ್ತವೆ. ಈ
ಎಲ್ಲ ಕಾರಣಗಳಿಂದ ಮುದುಕರ ಮೆದುಳು ಮಕ್ಕಳ ಅಪೂರ್ಣ ಮೆದುಳಿನಂತೆ
ಆಗಿಬಿಡುತ್ತದೆ.
{{gap}}ಸುಮಾರು ಐವತ್ತರ ಪ್ರಾಯದವನೊಬ್ಬ 'ಅಸಾಧ್ಯವಾದ ತಲೆನೋವು
ಬಡಿಯುತ್ತದೆ, ನನಗೆ. ಇಂತಹ ತಲೆಯನೋವು ಬಂದಿದ್ದರೆ ಯಾವ ಬ್ರಹ್ಮಾದಿ
ಮಗನೂ ಬದುಕುತ್ತಿರಲಿಲ್ಲ. ಮನೋಧೈರ್ಯವಿರುವುದರಿಂದ ನಾನು
ತಡೆದುಕೊಂಡಿದ್ದೇನೆ. ಎಂತಹ ಡಾಕ್ಟರುಗಳೋ ನೀವು.' ಎಂದು ರೇಗಿ
ಅಲವತ್ತುಕೊಳ್ಳುತ್ತಿದ್ದ. ಎರಡು ಮೂರು ದೊಡ್ಡ ಆಸ್ಪತ್ರೆಗಳಲ್ಲಿ ಅತಿಸೂಕ್ಷ್ಮವಾದ
ಪರೀಕ್ಷೆಯನ್ನು ಮಾಡಿದ್ದರು. ತಲೆನೋವನ್ನು ತರುವ ಯಾವ ಕಾರಣವೂ
ಸ್ಪಷ್ಟವಾಗಲಿಲ್ಲ. ನಾಟಕೀಯವಾಗಿ ಅವ ತನ್ನ ನೋವನ್ನು ವರ್ಣಿಸುತ್ತಿದ್ದುದರಿಂದ;
ತಾನು ಅನುಭವಿಸುತ್ತಿರುವ ತಲೆ ನೋವು ಇನ್ನಾರಿಗೂ ಬಂದಿರಲಿಕ್ಕಿಲ್ಲ ಎಂದು
ಅವ ಬೊಗಳೆ ಕೊಚ್ಚುತ್ತಿದ್ದುದರಿಂದ ; ಹಾಗೂ ನಡೆಸಿದ ಪರೀಕ್ಷೆಗಳಿಂದ ಯಾವ
ಬೇನೆಯ ಸುಳಿವೂ ಸಿಗದುದರಿಂದ ; ಇವನ ಅಟಾಟೋಪವೆಲ್ಲವೂ ಪ್ರಾಯಶಃ
ಹಿಸ್ಟಿರಿಕಲ್ ಇರಬಹುದು ಎಂದು ಪರೀಕ್ಷಿಸಿದ ತಜ್ಞರೆಲ್ಲರೂ ಸಂಶಯಪಟ್ಟರು.
{{gap}}ತಿಂಗಳಿಗೊಮ್ಮೆ ಹೊಸ ತಜ್ಞರ ಬಳಿ ಪರೀಕ್ಷೆಯನ್ನು ಮಾಡಿಸಿಕೊಳ್ಳುತ್ತಲೇ
ಇದ್ದ. ಯಾವ ಪ್ರಯೋಜನವೂ ದೊರಕಲಿಲ್ಲ. ಮಿಕ್ಕಂತೆ, ಈ ಕಾಲಾವಧಿಯಲ್ಲಿ
ಉಣ್ಣುಕೊಂಡು, ತಿಂದುಕೊಂಡು, ಅವ ಆರೋಗ್ಯವಾಗಿಯೇ ಇದ್ದ. ಅವನ
ದೇಹದ ತೂಕವು ಕಡಿಮೆಯಾಗಲಿಲ್ಲ. ಕೆಲಸವನ್ನು ಗೊಣಗುತ್ತಾದರೂ ಮಾಡುತ್ತಿದ್ದ.
{{gap}}ಆರೇಳು ತಿಂಗಳುಗಳಾದ ಮೇಲೆ ಯಥಾ ಪ್ರಕಾರ ಮಾಡಿದ ಪರೀಕ್ಷೆಯಿಂದ
ಮೆದುಳಿನ ಮುಂಭಾಗದಲ್ಲಿ ಸಣ್ಣ ಗಡ್ಡೆ ಬೆಳೆಯುತ್ತಿರಬಹುದು ಎಂದು ಅನುಮಾನವು
ಮೂಡಿತು. ಅದನ್ನು ಖಚಿತಪಡಿಸುವುದಕ್ಕಾಗಿ ಇತರ ವಿಶೇಷ ಪರೀಕ್ಷೆಗಳನ್ನು
ಮಾಡಲಾಯಿತು. ಅನುಮಾನವು ಖಚಿತವಾಯಿತು. ಶಸ್ತ್ರ ಚಿಕಿತ್ಸೆಯನ್ನು ಮಾಡಿದಾಗ
ಸಣ್ಣಗಡ್ಡೆಯೊಂದು ಇತ್ತು. ಅದನ್ನು ಸಂಪೂರ್ಣವಾಗಿ
ತೆಗೆದುಹಾಕಲು ಸಾಧ್ಯವೂ<noinclude></noinclude>
85s8cifojt6wvu7b10etzonyf9vnr5u
ಪುಟ:ಮನಮಂಥನ.pdf/೧೬೭
104
62614
316626
314141
2026-05-04T02:56:28Z
Shreelatha.Halemane
7642
/* Proofread */
316626
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೧೪೮}}{{Right|ಮನಮಂಥನ}}
ಆಗಿತ್ತು. ಆದಕಾರಣ ಶಸ್ತ್ರಚಿಕಿತ್ಸೆಯು ಸಂಪೂರ್ಣ ಯಶಸ್ವಿಯಾಯಿತು. ಅದಾದಮೇಲೆ
'ತಲೆನೋವು' ಅಂತ ಅವ ನರಳಲೇ ಇಲ್ಲ.
ಗಡ್ಡೆಯು ಬೆಳೆಯತೊಡಗಿದ್ದಾಗ, ಅತಿ ಪುಟ್ಟದಾಗಿದ್ದುದರಿಂದ, ಸುತ್ತಲೂ
ಆರೋಗ್ಯದಿಂದಿದ್ದ ಮೆದುಳಿನ ಭಾಗವು ಮುಚ್ಚಿಕೊಂಡಿದ್ದುದರಿಂದ ತಜ್ಞರ
ಪರೀಕ್ಷೆಯಲ್ಲೂ ಪತ್ತೆಯಾಗಲಿಲ್ಲ. ಆ ಕಾಲದಲ್ಲಿ ಅನುಭವಿಸುತ್ತಿದ್ದ ರೋಗಿಯು
ಹಿಸ್ಟಿರಿಯಾ ಪ್ರದರ್ಶನವನ್ನು ಮಾಡುತ್ತಿದ್ದ. ಗಡ್ಡೆಯು ಮೆದುಳನ್ನು ತುಸು ಒತ್ತುತ್ತಲೇ
ಇದ್ದಿರಬೇಕು.
ಒಂದು ಪ್ರಮಾಣಕ್ಕೆ ಗಡ್ಡೆಯು ಬೆಳೆದಾಗ ಪತ್ತೆಯಾಯಿತು. ಅದನ್ನು
ತೆಗೆದುಹಾಕಿದ ಮೇಲೆ, ತಲೆನೋವು ತಿರುಗಿ ಬರದೇ ಇದ್ದುದರಿಂದ, ಆ ಗಡ್ಡೆಯೇ
ತಲೆನೋವಿಗೂ, ಹಿಸ್ಟಿರಿಯಾದಂತಹ ಪ್ರದರ್ಶನಕ್ಕೂ ಕಾರಣ ಎಂದು
ಖಂಡಿತವಾಯಿತು.
ಹಿಸ್ಟಿರಿಯಾ ಪ್ರದರ್ಶನವನ್ನು ಎಳೆಯರಲ್ಲಿಯೂ ಕಾಣಬಹುದು : ಪೌಗಂಡ
ವಯಸ್ಸಿನ ಯುವಕ-ಯುವತಿಯರಲ್ಲೂ ಕಾಣಬಹುದು. ಮದುಕರಲ್ಲಿಯೂ
ನೋಡಬಹುದು. ಹೆಂಗಸರಲ್ಲಿ ಈ ಪ್ರದರ್ಶನವು ಸ್ವಲ್ಪಮಟ್ಟಿಗೆ ಅಧಿಕವಾಗಿರುತ್ತದೆ.
ಆದರೆ ಗಂಡಸರಲ್ಲಿಯೂ ಕಂಡುಬರುತ್ತದೆ.
ಬಡವರು ಬಲ್ಲಿದರು ಎನ್ನುವ ವ್ಯತ್ಯಾಸವನ್ನು ಹಿಸ್ಟಿರಿಯಾವು
ಗಮನಿಸುವುದಿಲ್ಲ. ಮಂಕರು, ಹಿಂದುಳಿದವರು, ಗುಡ್ಡಗಾಡಿನವರು, ಜಾಣರು,
ಮುಂದುವರಿದವರು, ನಾಗರಿಕರು, ಇವರೆಲ್ಲರಲ್ಲಿಯೂ ಹಿಸ್ಟಿರಿಯಾ ಪ್ರದರ್ಶನವನ್ನು
ಕಾಣಬಹುದು. ಆದರೆ ಚುರುಕು ಬುದ್ಧಿಯವರಲ್ಲಿ, ಸುಸಂಸ್ಕೃತರಲ್ಲಿ, ಈ ಬೇನೆಯು
ತುಂಬಾ ಕಡಿಮೆಯಾಗಿರುತ್ತದೆ.
ಇತರ ಮಾನಸಿಕ ಅವ್ಯವಸ್ಥೆಗಳೊಂದಿಗೂ, ಹಿಸ್ಟಿರಿಯಾವು
ಜತೆಯಾಗಬಹುದು. ಅದರಲ್ಲೂ ಆತಂಕದಿಂದ 'Anxiety Syndrome'
ನರಳುವವರಿಗೆ ಹಿಸ್ಟಿರಿಯಾವೂ ಮೇಲು ಹೊದಿಕೆಯಾಗಬಹುದು. ಸಾಮಾನ್ಯವಾಗಿ
ಆಗಿಯೂ ಆಗುತ್ತದೆ. ಒಂದೇ ರೋಗಿಯಲ್ಲಿ, ಆತಂಕ ಮತ್ತು ಹಿಸ್ಟಿರಿಯಾಗಳು
ಈಗ ಇದು, ಆಗ ಇನ್ನೊಂದು, ಹೀಗೆ ಕಣ್ಣುಮುಚ್ಚಾಲೆಯಾಡುತ್ತ ಕಾಡುವುದು
ಸಾಮಾನ್ಯ.
'''ಹಿಸ್ಟಿರಿಯಾದ ಚಿಕಿತ್ಸೆ'''
*ಉಕ್ಯೂ ಕ್ಯೂ ಕ್ಯೂ' ಎಂದು ಅವಲಕ್ಷಣವಾಗಿ ಕರ್ಕಶಿಸುತ್ತಿದ್ದ ಕನಕವಲ್ಲಿಯು<noinclude></noinclude>
1fb4qkvo5hf8qanlygmvi6kds6pveuy
316640
316626
2026-05-04T03:06:20Z
Shreesha Sharma
7840
/* Validated */
316640
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೪೮}}{{Right|ಮನಮಂಥನ}}
ಆಗಿತ್ತು. ಆದಕಾರಣ ಶಸ್ತ್ರಚಿಕಿತ್ಸೆಯು ಸಂಪೂರ್ಣ ಯಶಸ್ವಿಯಾಯಿತು. ಅದಾದಮೇಲೆ
'ತಲೆನೋವು' ಅಂತ ಅವ ನರಳಲೇ ಇಲ್ಲ.
{{gap}}ಗಡ್ಡೆಯು ಬೆಳೆಯತೊಡಗಿದ್ದಾಗ, ಅತಿ ಪುಟ್ಟದಾಗಿದ್ದುದರಿಂದ, ಸುತ್ತಲೂ
ಆರೋಗ್ಯದಿಂದಿದ್ದ ಮೆದುಳಿನ ಭಾಗವು ಮುಚ್ಚಿಕೊಂಡಿದ್ದುದರಿಂದ ತಜ್ಞರ
ಪರೀಕ್ಷೆಯಲ್ಲೂ ಪತ್ತೆಯಾಗಲಿಲ್ಲ. ಆ ಕಾಲದಲ್ಲಿ ಅನುಭವಿಸುತ್ತಿದ್ದ ರೋಗಿಯು
ಹಿಸ್ಟಿರಿಯಾ ಪ್ರದರ್ಶನವನ್ನು ಮಾಡುತ್ತಿದ್ದ. ಗಡ್ಡೆಯು ಮೆದುಳನ್ನು ತುಸು ಒತ್ತುತ್ತಲೇ
ಇದ್ದಿರಬೇಕು.
{{gap}}ಒಂದು ಪ್ರಮಾಣಕ್ಕೆ ಗಡ್ಡೆಯು ಬೆಳೆದಾಗ ಪತ್ತೆಯಾಯಿತು. ಅದನ್ನು
ತೆಗೆದುಹಾಕಿದ ಮೇಲೆ, ತಲೆನೋವು ತಿರುಗಿ ಬರದೇ ಇದ್ದುದರಿಂದ, ಆ ಗಡ್ಡೆಯೇ
ತಲೆನೋವಿಗೂ, ಹಿಸ್ಟಿರಿಯಾದಂತಹ ಪ್ರದರ್ಶನಕ್ಕೂ ಕಾರಣ ಎಂದು
ಖಂಡಿತವಾಯಿತು.
{{gap}}ಹಿಸ್ಟಿರಿಯಾ ಪ್ರದರ್ಶನವನ್ನು ಎಳೆಯರಲ್ಲಿಯೂ ಕಾಣಬಹುದು : ಪೌಗಂಡ
ವಯಸ್ಸಿನ ಯುವಕ-ಯುವತಿಯರಲ್ಲೂ ಕಾಣಬಹುದು. ಮದುಕರಲ್ಲಿಯೂ
ನೋಡಬಹುದು. ಹೆಂಗಸರಲ್ಲಿ ಈ ಪ್ರದರ್ಶನವು ಸ್ವಲ್ಪಮಟ್ಟಿಗೆ ಅಧಿಕವಾಗಿರುತ್ತದೆ.
ಆದರೆ ಗಂಡಸರಲ್ಲಿಯೂ ಕಂಡುಬರುತ್ತದೆ.
{{gap}}ಬಡವರು ಬಲ್ಲಿದರು ಎನ್ನುವ ವ್ಯತ್ಯಾಸವನ್ನು ಹಿಸ್ಟಿರಿಯಾವು
ಗಮನಿಸುವುದಿಲ್ಲ. ಮಂಕರು, ಹಿಂದುಳಿದವರು, ಗುಡ್ಡಗಾಡಿನವರು, ಜಾಣರು,
ಮುಂದುವರಿದವರು, ನಾಗರಿಕರು, ಇವರೆಲ್ಲರಲ್ಲಿಯೂ ಹಿಸ್ಟಿರಿಯಾ ಪ್ರದರ್ಶನವನ್ನು
ಕಾಣಬಹುದು. ಆದರೆ ಚುರುಕು ಬುದ್ಧಿಯವರಲ್ಲಿ, ಸುಸಂಸ್ಕೃತರಲ್ಲಿ, ಈ ಬೇನೆಯು
ತುಂಬಾ ಕಡಿಮೆಯಾಗಿರುತ್ತದೆ.
{{gap}}ಇತರ ಮಾನಸಿಕ ಅವ್ಯವಸ್ಥೆಗಳೊಂದಿಗೂ, ಹಿಸ್ಟಿರಿಯಾವು
ಜತೆಯಾಗಬಹುದು. ಅದರಲ್ಲೂ ಆತಂಕದಿಂದ 'Anxiety Syndrome'
ನರಳುವವರಿಗೆ ಹಿಸ್ಟಿರಿಯಾವೂ ಮೇಲು ಹೊದಿಕೆಯಾಗಬಹುದು. ಸಾಮಾನ್ಯವಾಗಿ
ಆಗಿಯೂ ಆಗುತ್ತದೆ. ಒಂದೇ ರೋಗಿಯಲ್ಲಿ, ಆತಂಕ ಮತ್ತು ಹಿಸ್ಟಿರಿಯಾಗಳು
ಈಗ ಇದು, ಆಗ ಇನ್ನೊಂದು, ಹೀಗೆ ಕಣ್ಣುಮುಚ್ಚಾಲೆಯಾಡುತ್ತ ಕಾಡುವುದು
ಸಾಮಾನ್ಯ.
'''ಹಿಸ್ಟಿರಿಯಾದ ಚಿಕಿತ್ಸೆ'''
{{gap}}'ಉಕ್ಯೂ ಕ್ಯೂ ಕ್ಯೂ' ಎಂದು ಅವಲಕ್ಷಣವಾಗಿ ಕರ್ಕಶಿಸುತ್ತಿದ್ದ ಕನಕವಲ್ಲಿಯು<noinclude></noinclude>
eg614o143ymncuy6o45ez1jw9q70btg
ಪುಟ:ಮನಮಂಥನ.pdf/೧೬೮
104
62615
316625
314142
2026-05-04T02:55:23Z
Shreelatha.Halemane
7642
/* Proofread */
316625
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೪೯}}
ಸೂಕ್ತ ಚಿಕಿತ್ಸೆಯಾದ ನಂತರ, ಉಕ್ಕೂ, 'ವನ್ನು ನಿಲ್ಲಿಸಿದಳು. ಆದರೆ,
ಕತ್ತಿನಲ್ಲಿ ಈ ನರವು ಮಿಡಿಯುತ್ತದೆ, ಹಸ್ತದ ಮಣಿಕಟ್ಟಿನ ನರವು ಬಡಿಯುತ್ತದೆ,
ಎಂದು ಒದ್ದಾಡುತ್ತಲೇ ಇದ್ದಳು. 'ಉಕ್ಕೂ ' ಸ್ಥಿತಿಯಲ್ಲಿ ಮನೆಗೆಲಸ
ಯಾವುದನ್ನೂ ಮಾಡಲಾಗದೆ ಬಿದ್ದಲ್ಲೇ ಒದ್ದಾಡುತ್ತ ಮನೆಯವರನ್ನೆಲ್ಲಾ
ಗೋಳುಹುಯ್ದುಕೊಳ್ಳುತ್ತಿದ್ದಳು. ಆದರೆ ಈಗ 'ಇಲ್ಲಿ ಮಿಡಿತ, ಅಲ್ಲಿ ಸೆರೆತ'
ಅಂತ ಗೊಣಗುತ್ತಿದ್ದರೂ, ಎಂತದೋ ಮುಜುಗರವಾಗುತ್ತಿದೆ ಎಂದು
ಹೇಳುತ್ತಿದ್ದರೂ, ರೋಗಶೇಷಗಳು ಸ್ವಲ್ಪ ಉಳಿದಿದ್ದರೂ, ಮನೆಗೆಲಸವನ್ನು
ಮಾಡುತ್ತಿದ್ದಾಳೆ. ಕಚೇರಿಯ ಕೆಲಸವನ್ನೂ ನಿಭಾಯಿಸುತ್ತಿದ್ದಾಳೆ. ಮಕ್ಕಳನ್ನೂ
ಸರಿಯಾಗಿ ನೋಡಿಕೊಂಡು, ಒಳ್ಳೆಯ ತಾಯಿಯಾಗಿದ್ದಾಳೆ. ರೋಗಶೇಷವು
ಉಳಿದಿದ್ದರೂ, ಸಾಮಾನ್ಯ ಜೀವನವು ಅಡಚಣೆಯಿಲ್ಲದೆ ಸಾಗುತ್ತಿದೆ.
ಗುಂಡಮ್ಮನ ನಿರ್ಧ್ವನಿಯು ಚಿಕಿತ್ಸೆಯಿಂದ ನಿವಾರಿಸಲ್ಪಟ್ಟಿತು. ಆಕೆಯು
ಸರಾಗವಾಗಿ ಮಾತನಾಡುತ್ತಾಳೆ. ಧ್ವನಿಯೇನೋ ಸ್ವಲ್ಪ ಬದಲಾಯಿಸಿದೆ ; ತುಸು
ಕರ್ಕಶವಾಗಿದೆ. ಮಾತನಾಡುವಾಗ ಈಗಲೂ ಒಮ್ಮೊಮ್ಮೆ ನರಸಿಂಹ ದೇವರ
ಬಾಯಿನ ತರಹ, ತನ್ನ ಬಾಯನ್ನು ಕಷ್ಟಪಟ್ಟು ಹಿಗ್ಗಿಸುತ್ತಾಳೆ. ಆದರೆ ಧ್ವನಿಯು
ಸುಲಭವಾಗಿ ಹೊರಡುತ್ತದೆ. ಹೆಣ್ಣನ್ನು ನೋಡಲು ಬಂದಿದ್ದವ, ಹೆಣ್ಣಿನ ಮನೆಯ
ಅಚ್ಚುಕಟ್ಟು ಮತ್ತು ಅಂತಸ್ತನ್ನೂ ನೋಡಿ, ಮದುವೆಗೆ ಒಪ್ಪಿದ. ಈಗ ವಾರಣವಾಗಿ
ಸಂಸಾರವನ್ನು ಮಾಡಿಕೊಂಡು, ಗುಂಡಮ್ಮ ಗಂಡನೊಂದಿಗೆ ತಂದೆಯ
ಮನೆಯಲ್ಲಿಯೇ ಇದ್ದಾಳೆ ; ಸುಖವಾಗಿ
ಇರುದಯ ಮೇರಿಗೆ ಈಗ ಭವಳಿ ಬಂದು ಜ್ಞಾನ ತಪ್ಪುವುದಿಲ್ಲ. ಮೆಚ್ಚಿದ
ತರುಣಿಯನ್ನು ತಮ್ಮನು ಮದುವೆಯಾಗಲು, ನಿರ್ವಾಹವಿಲ್ಲದೆ, ವಾಸ್ತವಿಕ
ಸ್ಥಿತಿಯನ್ನು ಮನಗಂಡು, ಒಪ್ಪಿದಳು. 'ನಾಲೈದು ಬಾರಿ ಆ ಹುಡುಗಿಯೊಂದಿಗೆ
ಮಾತನಾಡಿದೆ. ಕ್ರಿಶ್ಚಿಯನ್ನೋ, ಹಿಂದುವೋ, ತುರುಕರ ಹುಡುಗಿಯೋ,
ಯಾರಾದರೇನು ? ತುಂಬಾ ಜಾಣೆ, ಶೀಲವಂತೆ, ಗುಣಸಂಪನ್ನೆ ; ದೊಡ್ಡವರು,
ಹಿರಿಯರು, ಎಂದರೆ ಎಷ್ಟು ಮರ್ಯಾದೆಯಿಂದ ನಡೆದುಕೊಳ್ಳುತ್ತಾಳೆ. ಅಂತ'
ಎಂದು ಹಲವಾರು ಬಾರಿ ತನ್ನವರೊಂದಿಗೆ ಹೆಮ್ಮೆಯಿಂದ ಹೇಳಲಾರಂಭಿಸಿದ್ದಳು.
'ಕ್ರಿಶ್ಚಿಯನ್ನಾಗಿ ಆ ತರುಣಿಯನ್ನು ಮಾತಾಂತರ ಮಾಡಿಸಿ, ನಂತರ ಮದುವೆ
ಮಾಡಿಸಬೇಕು' ಎಂಬ ಆಸೆಯೇನೋ ಇರುದಯ ಮೇರಿಯಲ್ಲಿ
ಹೆಡೆಯಾಡಿಸುತ್ತಿತ್ತು. ಆದರೆ ಆ ಹುಡುಗಿಯು ಈ ಆಸೆಗೆ ತುಂಡುಹಾಕಿತ್ತು.
'ಸಿಎಲ್ ಮ್ಯಾರೇಜ್ ಆಗುವುದಾದರೆ ನಾನು ಒಪ್ಪುತ್ತೇನೆ. ಮತಾಂತರವನ್ನು ನಾ<noinclude></noinclude>
dt1zbmov5nrh3xtdlrsbasht5bv2t6z
316641
316625
2026-05-04T03:06:49Z
Shreesha Sharma
7840
/* Validated */
316641
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೪೯}}
ಸೂಕ್ತ ಚಿಕಿತ್ಸೆಯಾದ ನಂತರ, ಉಕ್ಕೂ, 'ವನ್ನು ನಿಲ್ಲಿಸಿದಳು. ಆದರೆ,
ಕತ್ತಿನಲ್ಲಿ ಈ ನರವು ಮಿಡಿಯುತ್ತದೆ, ಹಸ್ತದ ಮಣಿಕಟ್ಟಿನ ನರವು ಬಡಿಯುತ್ತದೆ,
ಎಂದು ಒದ್ದಾಡುತ್ತಲೇ ಇದ್ದಳು. 'ಉಕ್ಕೂ ' ಸ್ಥಿತಿಯಲ್ಲಿ ಮನೆಗೆಲಸ
ಯಾವುದನ್ನೂ ಮಾಡಲಾಗದೆ ಬಿದ್ದಲ್ಲೇ ಒದ್ದಾಡುತ್ತ ಮನೆಯವರನ್ನೆಲ್ಲಾ
ಗೋಳುಹುಯ್ದುಕೊಳ್ಳುತ್ತಿದ್ದಳು. ಆದರೆ ಈಗ 'ಇಲ್ಲಿ ಮಿಡಿತ, ಅಲ್ಲಿ ಸೆರೆತ'
ಅಂತ ಗೊಣಗುತ್ತಿದ್ದರೂ, ಎಂತದೋ ಮುಜುಗರವಾಗುತ್ತಿದೆ ಎಂದು
ಹೇಳುತ್ತಿದ್ದರೂ, ರೋಗಶೇಷಗಳು ಸ್ವಲ್ಪ ಉಳಿದಿದ್ದರೂ, ಮನೆಗೆಲಸವನ್ನು
ಮಾಡುತ್ತಿದ್ದಾಳೆ. ಕಚೇರಿಯ ಕೆಲಸವನ್ನೂ ನಿಭಾಯಿಸುತ್ತಿದ್ದಾಳೆ. ಮಕ್ಕಳನ್ನೂ
ಸರಿಯಾಗಿ ನೋಡಿಕೊಂಡು, ಒಳ್ಳೆಯ ತಾಯಿಯಾಗಿದ್ದಾಳೆ. ರೋಗಶೇಷವು
ಉಳಿದಿದ್ದರೂ, ಸಾಮಾನ್ಯ ಜೀವನವು ಅಡಚಣೆಯಿಲ್ಲದೆ ಸಾಗುತ್ತಿದೆ.
{{gap}}ಗುಂಡಮ್ಮನ ನಿರ್ಧ್ವನಿಯು ಚಿಕಿತ್ಸೆಯಿಂದ ನಿವಾರಿಸಲ್ಪಟ್ಟಿತು. ಆಕೆಯು
ಸರಾಗವಾಗಿ ಮಾತನಾಡುತ್ತಾಳೆ. ಧ್ವನಿಯೇನೋ ಸ್ವಲ್ಪ ಬದಲಾಯಿಸಿದೆ ; ತುಸು
ಕರ್ಕಶವಾಗಿದೆ. ಮಾತನಾಡುವಾಗ ಈಗಲೂ ಒಮ್ಮೊಮ್ಮೆ ನರಸಿಂಹ ದೇವರ
ಬಾಯಿನ ತರಹ, ತನ್ನ ಬಾಯನ್ನು ಕಷ್ಟಪಟ್ಟು ಹಿಗ್ಗಿಸುತ್ತಾಳೆ. ಆದರೆ ಧ್ವನಿಯು
ಸುಲಭವಾಗಿ ಹೊರಡುತ್ತದೆ. ಹೆಣ್ಣನ್ನು ನೋಡಲು ಬಂದಿದ್ದವ, ಹೆಣ್ಣಿನ ಮನೆಯ
ಅಚ್ಚುಕಟ್ಟು ಮತ್ತು ಅಂತಸ್ತನ್ನೂ ನೋಡಿ, ಮದುವೆಗೆ ಒಪ್ಪಿದ. ಈಗ ವಾರಣವಾಗಿ
ಸಂಸಾರವನ್ನು ಮಾಡಿಕೊಂಡು, ಗುಂಡಮ್ಮ ಗಂಡನೊಂದಿಗೆ ತಂದೆಯ
ಮನೆಯಲ್ಲಿಯೇ ಇದ್ದಾಳೆ ; ಸುಖವಾಗಿ
{{gap}}ಇರುದಯ ಮೇರಿಗೆ ಈಗ ಭವಳಿ ಬಂದು ಜ್ಞಾನ ತಪ್ಪುವುದಿಲ್ಲ. ಮೆಚ್ಚಿದ
ತರುಣಿಯನ್ನು ತಮ್ಮನು ಮದುವೆಯಾಗಲು, ನಿರ್ವಾಹವಿಲ್ಲದೆ, ವಾಸ್ತವಿಕ
ಸ್ಥಿತಿಯನ್ನು ಮನಗಂಡು, ಒಪ್ಪಿದಳು. 'ನಾಲೈದು ಬಾರಿ ಆ ಹುಡುಗಿಯೊಂದಿಗೆ
ಮಾತನಾಡಿದೆ. ಕ್ರಿಶ್ಚಿಯನ್ನೋ, ಹಿಂದುವೋ, ತುರುಕರ ಹುಡುಗಿಯೋ,
ಯಾರಾದರೇನು ? ತುಂಬಾ ಜಾಣೆ, ಶೀಲವಂತೆ, ಗುಣಸಂಪನ್ನೆ ; ದೊಡ್ಡವರು,
ಹಿರಿಯರು, ಎಂದರೆ ಎಷ್ಟು ಮರ್ಯಾದೆಯಿಂದ ನಡೆದುಕೊಳ್ಳುತ್ತಾಳೆ. ಅಂತ'
ಎಂದು ಹಲವಾರು ಬಾರಿ ತನ್ನವರೊಂದಿಗೆ ಹೆಮ್ಮೆಯಿಂದ ಹೇಳಲಾರಂಭಿಸಿದ್ದಳು.
{{gap}}'ಕ್ರಿಶ್ಚಿಯನ್ನಾಗಿ ಆ ತರುಣಿಯನ್ನು ಮಾತಾಂತರ ಮಾಡಿಸಿ, ನಂತರ ಮದುವೆ
ಮಾಡಿಸಬೇಕು' ಎಂಬ ಆಸೆಯೇನೋ ಇರುದಯ ಮೇರಿಯಲ್ಲಿ
ಹೆಡೆಯಾಡಿಸುತ್ತಿತ್ತು. ಆದರೆ ಆ ಹುಡುಗಿಯು ಈ ಆಸೆಗೆ ತುಂಡುಹಾಕಿತ್ತು.
'ಸಿಎಲ್ ಮ್ಯಾರೇಜ್ ಆಗುವುದಾದರೆ ನಾನು ಒಪ್ಪುತ್ತೇನೆ. ಮತಾಂತರವನ್ನು ನಾ<noinclude></noinclude>
6saaatgw1qmudawwxzuy71j8q0la5s8
ಪುಟ:ಮನಮಂಥನ.pdf/೧೬೯
104
62616
316624
314143
2026-05-04T02:54:21Z
Shreelatha.Halemane
7642
/* Proofread */
316624
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೧೫೦}}{{Right|ಮನಮಂಥನ}}
ಮಾಡಿಕೊಂಡು, ಅಥವಾ ಆರ್ಯ ಸಮಾಜಕ್ಕೆ ನಿಮ್ಮ ತಮ್ಮನನ್ನು ಸೇರಿಸಿ,
ನಂತರ ಮದುವೆಯಾಗುವುದು ಕ್ರಿಮಿನಲ್ ಮ್ಯಾರೇಜ್ ಎಂದು ನನಗನಿಸುತ್ತೆ
ಆದ್ದರಿಂದ ಒಳ್ಳೆಯ ಮನಸ್ಸಿನಿಂದ ಆಶೀರ್ವಾದಮಾಡಿ, ನಮ್ಮ ಪಾಡಿಗೆ ನಾವು
ಮದುವೆಯಾಗುತ್ತೇವೆ' ಎಂದು ಆ ತರುಣಿ ವಿನಯವಾಗಿಯಾದರೂ ದೃಢ
ನುಡಿಯಿಂದ ಹೇಳಿದ್ದಳು. ಸಿಎಲ್ ಮ್ಯಾರೇಜ್ ಆಯಿತು ; ಇರುದಯಮೇರಿ
ಮತ್ತು ಅವಳ ಗಂಡ, ಇವರೇ ಸಾಕ್ಷೀ ಪುಸ್ತಕಕ್ಕೆ ರುಜು ಹಾಕಿದರು. ಹೆಂಡತಿಯೊಡನೆ
ತಮ್ಮ, ಇರುದಯ ಮೇರಿಯ ಮನೆಗೆ ಬಂದಾಗಲೆಲ್ಲ, ಮೇರಿಯ ಮಕ್ಕಳು,
ಸೋದರತ್ತೆಯ ಜತೆಗೆ ಜೋತುಬೀಳುತ್ತಿದ್ದುವು. ಇದನ್ನು ಕಂಡು ಇರುದಯಮೇರಿಗೆ
ತುಂಬಾ ಸಂತಸವಾಗುತ್ತಿತ್ತು. ತಮ್ಮನಿಗನಕ ಅಪಾರ ಹಿಗ್ಗು.
ಸ್ವಲ್ಪ ಕಾಲಾವಕಾಶವು ದೊರಕಿದರೆ, ಪರಿಸ್ಥಿತಿಯೂ ಸಹಾಯಕವಾಗಿದ್ದರೆ;
ಮನಸ್ಸು ತನಗೆ ತಾನೇ ಹೊಸಪರಿಸ್ಥಿತಿಗೆ ಸುಲಭವಾಗಿ ಒಗ್ಗಿ ಹೋಗುತ್ತದೆ.
ರಾಮಾಂಜನೀಯ ತೋಳು, ಹಿಂದಿನಂತೆ ಸ್ವಸ್ಥವಾಗುವ ಭರವಸೆಯೇನೂ
ಇಲ್ಲ. ಮೊಕದ್ದಮೆಯ ಸಲುವಾಗಿ ಬಂದ ಪೋಲೀಸಿನವರು, ಪರಿಹಾರಧನದ
ಮಾತನ್ನೆತ್ತದೆ ಇದ್ದಿದ್ದರೆ ; ಮೊಕದ್ದಮೆಯ ಭೀತಿಯಿಂದಲೇ ಹಲವಾರು ತಜ್ಞ
ವೈದ್ಯರು ಮೇಲಿಂದ ಮೇಲೆ ವಿಧ ವಿಧ ಪರೀಕ್ಷೆಗಳನ್ನು ಮಾಡದೆ ಇದ್ದಿದ್ದರೆ ;
ಅವನ ಹಿಸ್ಟರಿಕಲ್ ಪ್ರದರ್ಶನದ ಪ್ರವೃತ್ತಿಯು ಬೇರೂರಿ ಬೆಳೆಯುತ್ತಿರಲಿಲ್ಲ. ಆಗ
ಅವನು ತೋಳು ಸರಿಯಾಗದೆ ಇದ್ದಿದ್ದರೂ ಯಾವುದಾದರೂ ಕೆಲಸವನ್ನು
ಮಾಡಿಕೊಂಡು ಬಾಳುತ್ತಿದ್ದ. ಈಗ ಹಿಸ್ಟಿರಿಕಲ್ ಪ್ರವೃತ್ತಿಯು ಬಲವಾಗಿರುವಾಗ
ಈ ಪ್ರದರ್ಶನವೇ ಅವನಿಗೆ ಅತಿಪ್ರಿಯ. ಈ ಪ್ರದರ್ಶನವನ್ನು ಮಾಡುತ್ತಾ, ತೋಳನ್ನು
ಮೆರೆಸುತ್ತಾ ಭಿಕ್ಷೆ ಎತ್ತುವುದು ಅಪಮಾನಕರವಲ್ಲ ಎಂದವನಿಗೆ ಅನಿಸುತ್ತದೆ.
ಮನಸ್ಸಿನಲ್ಲಿ ದೃಢವಾದ ಈ ಪ್ರವೃತ್ತಿಯು ಬೆಳೆಯದೆ, ಹೋಗಿದ್ದಿದ್ದರೆ, ಅವನ
ತೋಳು ಸ್ವಸ್ಥವಾಗುತ್ತಿತ್ತು. ಅಂಚೆ ಪೇದೆಯ ಚಾಕರಿಯನ್ನು ಎಂದಿನಂತೆ
ಮಾಡಲೂಬಹುದಿತ್ತು.
ಅಜ್ಜಯ್ಯನ ಅವಾಂತರವನ್ನು ಸರಿಪಡಿಸಲು ಸಾಧ್ಯವಿಲ್ಲ. ಏಕೆಂದರೆ, ಅವನ
ಮೆದುಳಿಗೆ ನಿವಾರಿಸಲಾಗದಂತಹ ಸ್ಥಿತಿಯೊದಗಿದೆ. ಮೆದುಳಿನ ಬದಲು Scar
ರೂಪುಗೊಂಡಿದೆ. ಆಪರೇಷನ್ ಮಾಡಿ ಈ Scartissueವನ್ನು ತೆಗೆಯಬಹುದು.
ಆದರೆ ಅವನ ಬ್ಲಡ್ ಪ್ರೆಷರ್ ಅಧಿಕವಾಗಿತ್ತು. ಅಲ್ಲದೆ ಬೀಡಿ ಸೇದಿ ಸೇದಿ,
ಅವನ ಶ್ವಾಸಕೋಶಗಳು ಸಮರ್ಪಕವಾಗಿರಲಿಲ್ಲ. ಅಷ್ಟೇ ಅಲ್ಲದೆ ಅವನೂ ಮತ್ತು
ಮನೆಯವರೂ ಶಸ್ತ್ರ ಚಿಕಿತ್ಸೆಗೆ ಒಪ್ಪಲಿಲ್ಲ. ಅಂದಮೇಲೆ ಆತನ ನಡವಳಿಕೆಯಲ್ಲಿ<noinclude></noinclude>
9gyjbrrc4l29x5x6064609qnop0m00n
316642
316624
2026-05-04T03:07:12Z
Shreesha Sharma
7840
/* Validated */
316642
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೫೦}}{{Right|ಮನಮಂಥನ}}
ಮಾಡಿಕೊಂಡು, ಅಥವಾ ಆರ್ಯ ಸಮಾಜಕ್ಕೆ ನಿಮ್ಮ ತಮ್ಮನನ್ನು ಸೇರಿಸಿ,
ನಂತರ ಮದುವೆಯಾಗುವುದು ಕ್ರಿಮಿನಲ್ ಮ್ಯಾರೇಜ್ ಎಂದು ನನಗನಿಸುತ್ತೆ
ಆದ್ದರಿಂದ ಒಳ್ಳೆಯ ಮನಸ್ಸಿನಿಂದ ಆಶೀರ್ವಾದಮಾಡಿ, ನಮ್ಮ ಪಾಡಿಗೆ ನಾವು
ಮದುವೆಯಾಗುತ್ತೇವೆ' ಎಂದು ಆ ತರುಣಿ ವಿನಯವಾಗಿಯಾದರೂ ದೃಢ
ನುಡಿಯಿಂದ ಹೇಳಿದ್ದಳು. ಸಿಎಲ್ ಮ್ಯಾರೇಜ್ ಆಯಿತು ; ಇರುದಯಮೇರಿ
ಮತ್ತು ಅವಳ ಗಂಡ, ಇವರೇ ಸಾಕ್ಷೀ ಪುಸ್ತಕಕ್ಕೆ ರುಜು ಹಾಕಿದರು. ಹೆಂಡತಿಯೊಡನೆ
ತಮ್ಮ, ಇರುದಯ ಮೇರಿಯ ಮನೆಗೆ ಬಂದಾಗಲೆಲ್ಲ, ಮೇರಿಯ ಮಕ್ಕಳು,
ಸೋದರತ್ತೆಯ ಜತೆಗೆ ಜೋತುಬೀಳುತ್ತಿದ್ದುವು. ಇದನ್ನು ಕಂಡು ಇರುದಯಮೇರಿಗೆ
ತುಂಬಾ ಸಂತಸವಾಗುತ್ತಿತ್ತು. ತಮ್ಮನಿಗನಕ ಅಪಾರ ಹಿಗ್ಗು.
{{gap}}ಸ್ವಲ್ಪ ಕಾಲಾವಕಾಶವು ದೊರಕಿದರೆ, ಪರಿಸ್ಥಿತಿಯೂ ಸಹಾಯಕವಾಗಿದ್ದರೆ;
ಮನಸ್ಸು ತನಗೆ ತಾನೇ ಹೊಸಪರಿಸ್ಥಿತಿಗೆ ಸುಲಭವಾಗಿ ಒಗ್ಗಿ ಹೋಗುತ್ತದೆ.
{{gap}}ರಾಮಾಂಜನೀಯ ತೋಳು, ಹಿಂದಿನಂತೆ ಸ್ವಸ್ಥವಾಗುವ ಭರವಸೆಯೇನೂ
ಇಲ್ಲ. ಮೊಕದ್ದಮೆಯ ಸಲುವಾಗಿ ಬಂದ ಪೋಲೀಸಿನವರು, ಪರಿಹಾರಧನದ
ಮಾತನ್ನೆತ್ತದೆ ಇದ್ದಿದ್ದರೆ ; ಮೊಕದ್ದಮೆಯ ಭೀತಿಯಿಂದಲೇ ಹಲವಾರು ತಜ್ಞ
ವೈದ್ಯರು ಮೇಲಿಂದ ಮೇಲೆ ವಿಧ ವಿಧ ಪರೀಕ್ಷೆಗಳನ್ನು ಮಾಡದೆ ಇದ್ದಿದ್ದರೆ ;
ಅವನ ಹಿಸ್ಟರಿಕಲ್ ಪ್ರದರ್ಶನದ ಪ್ರವೃತ್ತಿಯು ಬೇರೂರಿ ಬೆಳೆಯುತ್ತಿರಲಿಲ್ಲ. ಆಗ
ಅವನು ತೋಳು ಸರಿಯಾಗದೆ ಇದ್ದಿದ್ದರೂ ಯಾವುದಾದರೂ ಕೆಲಸವನ್ನು
ಮಾಡಿಕೊಂಡು ಬಾಳುತ್ತಿದ್ದ. ಈಗ ಹಿಸ್ಟಿರಿಕಲ್ ಪ್ರವೃತ್ತಿಯು ಬಲವಾಗಿರುವಾಗ
ಈ ಪ್ರದರ್ಶನವೇ ಅವನಿಗೆ ಅತಿಪ್ರಿಯ. ಈ ಪ್ರದರ್ಶನವನ್ನು ಮಾಡುತ್ತಾ, ತೋಳನ್ನು
ಮೆರೆಸುತ್ತಾ ಭಿಕ್ಷೆ ಎತ್ತುವುದು ಅಪಮಾನಕರವಲ್ಲ ಎಂದವನಿಗೆ ಅನಿಸುತ್ತದೆ.
ಮನಸ್ಸಿನಲ್ಲಿ ದೃಢವಾದ ಈ ಪ್ರವೃತ್ತಿಯು ಬೆಳೆಯದೆ, ಹೋಗಿದ್ದಿದ್ದರೆ, ಅವನ
ತೋಳು ಸ್ವಸ್ಥವಾಗುತ್ತಿತ್ತು. ಅಂಚೆ ಪೇದೆಯ ಚಾಕರಿಯನ್ನು ಎಂದಿನಂತೆ
ಮಾಡಲೂಬಹುದಿತ್ತು.
{{gap}}ಅಜ್ಜಯ್ಯನ ಅವಾಂತರವನ್ನು ಸರಿಪಡಿಸಲು ಸಾಧ್ಯವಿಲ್ಲ. ಏಕೆಂದರೆ, ಅವನ
ಮೆದುಳಿಗೆ ನಿವಾರಿಸಲಾಗದಂತಹ ಸ್ಥಿತಿಯೊದಗಿದೆ. ಮೆದುಳಿನ ಬದಲು Scar
ರೂಪುಗೊಂಡಿದೆ. ಆಪರೇಷನ್ ಮಾಡಿ ಈ Scartissueವನ್ನು ತೆಗೆಯಬಹುದು.
ಆದರೆ ಅವನ ಬ್ಲಡ್ ಪ್ರೆಷರ್ ಅಧಿಕವಾಗಿತ್ತು. ಅಲ್ಲದೆ ಬೀಡಿ ಸೇದಿ ಸೇದಿ,
ಅವನ ಶ್ವಾಸಕೋಶಗಳು ಸಮರ್ಪಕವಾಗಿರಲಿಲ್ಲ. ಅಷ್ಟೇ ಅಲ್ಲದೆ ಅವನೂ ಮತ್ತು
ಮನೆಯವರೂ ಶಸ್ತ್ರ ಚಿಕಿತ್ಸೆಗೆ ಒಪ್ಪಲಿಲ್ಲ. ಅಂದಮೇಲೆ ಆತನ ನಡವಳಿಕೆಯಲ್ಲಿ<noinclude></noinclude>
owlyc5eodj1gl66up4vmr431tdmm7nh
ಪುಟ:ಮನಮಂಥನ.pdf/೧೭೦
104
62617
316623
314144
2026-05-04T02:53:38Z
Shreelatha.Halemane
7642
/* Proofread */
316623
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೫೧}}
ಯಾವ ಉತ್ತಮ ಪರಿವರ್ತನೆಯನ್ನೂ ನಿರೀಕ್ಷಿಸಲಾಗದು.
ಹಿಸ್ಟಿರಿಯಾ ಪ್ರದರ್ಶನವು ಬೇನೆಯಾಗಿ ಪರಿಣಮಿಸಿದ ಮೇಲೆ,
ಉಪಶಮನವನ್ನು ಮಾಡಬಹುದೇ ಹೊರತು, ಸಂಪೂರ್ಣವಾಗಿ
ಗುಣಪಡಿಸಲಾಗುವುದಿಲ್ಲ. 'ಹೀನ ಸುಳಿ ಬೋಳಿಸಿದರೆ ಹೋಗುತ್ತೆ' ಎನ್ನುವ
ಗಾದೆಯು ಹಿಸ್ಟಿರಿಕಲ್ ಪ್ರವೃತ್ತಿಗೆ ಮತ್ತು ಪ್ರದರ್ಶನಕ್ಕೆ ಶತಾಂಶ ಅನ್ವಯಿಸುತ್ತದೆ.
ಉಪಶಮನವನ್ನು ಮಾಡಿದರೆ ಅದರ ಘೋರ ರೂಪವು ಹೋಗಿ, ಸೌಮ್ಯಸ್ಥಿತಿಗೆ
ಇಳಿಯುತ್ತದೆ. ಸೌಮ್ಯ ಸ್ಥಿತಿಯ ಹಿಸ್ಟಿರಿಯಾ ಇದ್ದರೂ ಕೂಡ, ವೈನವಾಗಿ,
ಬಾಳನ್ನು ನಡೆಸಬಹುದು. ಮನೆಯವರಿಗೆ ಮತ್ತಿತರರಿಗೆ ಗೋಳಾಗದಂತೆ
ಸಂಸಾರವನ್ನು ಮಾಡಬಹುದು.
ಚಿಕಿತ್ಸೆಯ ವಿಧಾನಗಳಲ್ಲಿ 'Suggestion' ಸೂಚನೆಯನ್ನು ಕೊಡುವುದು
ಎಂಬುದು ಮುಖ್ಯವಾದ ಮತ್ತು ಮೊದಲನೆಯದಾದುದು. ಎಲ್ಲ ತೆರನ ಮಾನಸಿಕ
ಬೇನೆಗಳಿಗೂ ಇದು ಅನ್ವಯಿಸುತ್ತದೆ.
'ಖಂಡಿತವಾಗಿ ನಿನ್ನ ಬೇನೆಯು ವಾಸಿಯಾಗುತ್ತದೆ. ನಿನ್ನನ್ನು ಕಾಡುತ್ತಿರುವ
ರೋಗದ ಗೋಳುಗಳು ಸ್ವಲ್ಪ ಕಾಲದಲ್ಲೇ ನಿವಾರಣೆಯಾಗುತ್ತವೆ.'
ಎಂದು ವೈದ್ಯನು ನಿರ್ಧಾರದ ಧ್ವನಿಯಲ್ಲಿ ಹೇಳಿದರೆ, ರೋಗಿಯಮನಸ್ಸಿಗೆ
ಅದು ಹಿಡಿಸುತ್ತದೆ. ನಿರ್ಧಾರದ ಧ್ವನಿಯು ವೈದ್ಯನಿಂದ ಹೊರಡಬೇಕಾದರೆ,
'ಇದರಿಂದ ಪೂರ್ಣವಾಗಿ ಗುಣವಾಗುತ್ತದೆ' ಎಂಬ ನಂಬಿಕೆಯು ಅವನಲ್ಲಿ
ಭದ್ರವಾಗಿರಬೇಕು. 'ಆತ್ಮವಿಶ್ವಾಸ' ಎಂದು ಈ ಮಾನಸಿಕ ಪ್ರೌಢಿಮೆಯನ್ನು ನಮ್ಮ
ಹಿರಿಯರು ಹೆಸರಿಸಿದ್ದರು. ಆತ್ಮವಿಶ್ವಾಸವು ವೈದ್ಯರಲ್ಲಿ ಹೊರವಾಗಿದ್ದಾಗ, ರೋಗಿಯ
ಮನಸ್ಸಿನ ಮೇಲೆ ಸತ್ಪರಿಣಾಮವನ್ನು ಅದು ಬೀರುತ್ತದೆ. ರೋಗಿಗೆ ಗುಣವೂ
ಆಗುತ್ತದೆ.
ದೃಢ ನಂಬಿಕೆಯಿಂದ, ಪೂರ್ಣ ಆತ್ಮವಿಶ್ವಾಸದಿಂದ ನುಡಿದ ಮಾತು,
ನುರಿತ, ಕಲಿತ, ವೈದ್ಯಶಾಸ್ತ್ರಜ್ಞದಿಂದಲೇ ನಡೆಯಬೇಕು ಎಂದೇನೂ ಇಲ್ಲ.
Suggestion ಅಂತಹವರಿಂದಲೇ ಆಗಬೇಕಾಗಿಲ್ಲ.
ಯಾವುದಾದರೂ ದೇವರ, ಒಂದು ರೂಪವನ್ನು, ದೃಢವಾದ
ನಂಬಿಕೆಯಿಂದ ಉಪಾಸನೆಯನ್ನು ನಿತ್ಯ ಮಾಡುವವರು, ಈ ತೆರನ Suggestion
ಇನ ಸತ್ಪರಿಣಾಮವನ್ನು ಉಂಟುಮಾಡಬಲ್ಲರು. ನಮ್ಮ ಸಮಾಜದಲ್ಲಿ ಹಲವಾರು
ಮಾನಸಿಕ ಪಲ್ಲಟಗಳನ್ನು ಮಂತ್ರಗಳಿಂದ ಗುಣಪಡಿಸುವುದನ್ನು ಕಂಡಿದ್ದೇವೆ.
ಆತ್ಮವಿಶ್ವಾಸವಿರುವ ಉಪಾಸಕನು, ರೋಗಿಯ ಮನಸ್ಸಿನ ಮೇಲೆ ಪರಿಣಾಮವನ್ನು<noinclude></noinclude>
bbob6mlmdl77eampkmoov23nkqwanaz
316643
316623
2026-05-04T03:07:49Z
Shreesha Sharma
7840
/* Validated */
316643
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೫೧}}
ಯಾವ ಉತ್ತಮ ಪರಿವರ್ತನೆಯನ್ನೂ ನಿರೀಕ್ಷಿಸಲಾಗದು.
{{gap}}ಹಿಸ್ಟಿರಿಯಾ ಪ್ರದರ್ಶನವು ಬೇನೆಯಾಗಿ ಪರಿಣಮಿಸಿದ ಮೇಲೆ,
ಉಪಶಮನವನ್ನು ಮಾಡಬಹುದೇ ಹೊರತು, ಸಂಪೂರ್ಣವಾಗಿ
ಗುಣಪಡಿಸಲಾಗುವುದಿಲ್ಲ. 'ಹೀನ ಸುಳಿ ಬೋಳಿಸಿದರೆ ಹೋಗುತ್ತೆ' ಎನ್ನುವ
ಗಾದೆಯು ಹಿಸ್ಟಿರಿಕಲ್ ಪ್ರವೃತ್ತಿಗೆ ಮತ್ತು ಪ್ರದರ್ಶನಕ್ಕೆ ಶತಾಂಶ ಅನ್ವಯಿಸುತ್ತದೆ.
ಉಪಶಮನವನ್ನು ಮಾಡಿದರೆ ಅದರ ಘೋರ ರೂಪವು ಹೋಗಿ, ಸೌಮ್ಯಸ್ಥಿತಿಗೆ
ಇಳಿಯುತ್ತದೆ. ಸೌಮ್ಯ ಸ್ಥಿತಿಯ ಹಿಸ್ಟಿರಿಯಾ ಇದ್ದರೂ ಕೂಡ, ವೈನವಾಗಿ,
ಬಾಳನ್ನು ನಡೆಸಬಹುದು. ಮನೆಯವರಿಗೆ ಮತ್ತಿತರರಿಗೆ ಗೋಳಾಗದಂತೆ
ಸಂಸಾರವನ್ನು ಮಾಡಬಹುದು.
{{gap}}ಚಿಕಿತ್ಸೆಯ ವಿಧಾನಗಳಲ್ಲಿ 'Suggestion' ಸೂಚನೆಯನ್ನು ಕೊಡುವುದು
ಎಂಬುದು ಮುಖ್ಯವಾದ ಮತ್ತು ಮೊದಲನೆಯದಾದುದು. ಎಲ್ಲ ತೆರನ ಮಾನಸಿಕ
ಬೇನೆಗಳಿಗೂ ಇದು ಅನ್ವಯಿಸುತ್ತದೆ.
{{gap}}'ಖಂಡಿತವಾಗಿ ನಿನ್ನ ಬೇನೆಯು ವಾಸಿಯಾಗುತ್ತದೆ. ನಿನ್ನನ್ನು ಕಾಡುತ್ತಿರುವ
ರೋಗದ ಗೋಳುಗಳು ಸ್ವಲ್ಪ ಕಾಲದಲ್ಲೇ ನಿವಾರಣೆಯಾಗುತ್ತವೆ.'
{{gap}}ಎಂದು ವೈದ್ಯನು ನಿರ್ಧಾರದ ಧ್ವನಿಯಲ್ಲಿ ಹೇಳಿದರೆ, ರೋಗಿಯಮನಸ್ಸಿಗೆ
ಅದು ಹಿಡಿಸುತ್ತದೆ. ನಿರ್ಧಾರದ ಧ್ವನಿಯು ವೈದ್ಯನಿಂದ ಹೊರಡಬೇಕಾದರೆ,
'ಇದರಿಂದ ಪೂರ್ಣವಾಗಿ ಗುಣವಾಗುತ್ತದೆ' ಎಂಬ ನಂಬಿಕೆಯು ಅವನಲ್ಲಿ
ಭದ್ರವಾಗಿರಬೇಕು. 'ಆತ್ಮವಿಶ್ವಾಸ' ಎಂದು ಈ ಮಾನಸಿಕ ಪ್ರೌಢಿಮೆಯನ್ನು ನಮ್ಮ
ಹಿರಿಯರು ಹೆಸರಿಸಿದ್ದರು. ಆತ್ಮವಿಶ್ವಾಸವು ವೈದ್ಯರಲ್ಲಿ ಹೊರವಾಗಿದ್ದಾಗ, ರೋಗಿಯ
ಮನಸ್ಸಿನ ಮೇಲೆ ಸತ್ಪರಿಣಾಮವನ್ನು ಅದು ಬೀರುತ್ತದೆ. ರೋಗಿಗೆ ಗುಣವೂ
ಆಗುತ್ತದೆ.
{{gap}}ದೃಢ ನಂಬಿಕೆಯಿಂದ, ಪೂರ್ಣ ಆತ್ಮವಿಶ್ವಾಸದಿಂದ ನುಡಿದ ಮಾತು,
ನುರಿತ, ಕಲಿತ, ವೈದ್ಯಶಾಸ್ತ್ರಜ್ಞದಿಂದಲೇ ನಡೆಯಬೇಕು ಎಂದೇನೂ ಇಲ್ಲ.
Suggestion ಅಂತಹವರಿಂದಲೇ ಆಗಬೇಕಾಗಿಲ್ಲ.
{{gap}}ಯಾವುದಾದರೂ ದೇವರ, ಒಂದು ರೂಪವನ್ನು, ದೃಢವಾದ
ನಂಬಿಕೆಯಿಂದ ಉಪಾಸನೆಯನ್ನು ನಿತ್ಯ ಮಾಡುವವರು, ಈ ತೆರನ Suggestion
ಇನ ಸತ್ಪರಿಣಾಮವನ್ನು ಉಂಟುಮಾಡಬಲ್ಲರು. ನಮ್ಮ ಸಮಾಜದಲ್ಲಿ ಹಲವಾರು
ಮಾನಸಿಕ ಪಲ್ಲಟಗಳನ್ನು ಮಂತ್ರಗಳಿಂದ ಗುಣಪಡಿಸುವುದನ್ನು ಕಂಡಿದ್ದೇವೆ.
ಆತ್ಮವಿಶ್ವಾಸವಿರುವ ಉಪಾಸಕನು, ರೋಗಿಯ ಮನಸ್ಸಿನ ಮೇಲೆ ಪರಿಣಾಮವನ್ನು<noinclude></noinclude>
srkwu541691p6z0u2vt84ak8a67fm9h
ಪುಟ:ಮನಮಂಥನ.pdf/೧೭೧
104
62618
316622
314145
2026-05-04T02:52:28Z
Shreelatha.Halemane
7642
/* Proofread */
316622
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೧೫೨}}{{Right|ಮನಮಂಥನ}}
ಹೂಡುತ್ತಾನೆ ; Suggestion ಮೂಲಕ ಎನ್ನಬಹುದು. ಇಂತಹ 'Telepathy'
or 'Teletherapy' ಹೇಗೆ ಸಾಧ್ಯ? ಹೇಗಾಗುತ್ತದೆ? ಎನ್ನುವುದು ಇಂದಿನ
ಹಂತದ ವಿಜ್ಞಾನಕ್ಕೆ ಇನ್ನೂ ತಿಳಿದುಬಂದಿಲ್ಲ.
ಪ್ರಸಿದ್ಧಿಯನ್ನು ಬಹುಕಾಲದಿಂದಲೂ ಪಡೆದ ದೇವಮಂದಿರಕ್ಕೆ ಯಾತ್ರೆ
ಹೋಗಿ, ದೇವರ ಸೇವೆಯನ್ನು ಮಾಡಿದರೆ ಗುಣವಾಗುತ್ತದೆ ಎಂದು ರೋಗಿಯು
ನಂಬಿದ್ದರೆ, ಯಾತ್ರೆಗಳೂ ಗುಣಪಡಿಸಬಲ್ಲವು, ಇದೂ ಒಂದು ತೆರನ ಅವ್ಯಕ್ತವಾದ
Suggestion ಎಂದೆಂದೋ ಯಾರಾರಿಂದಲೋ ಕೇಳಿದ್ದ ಸುದ್ದಿಗಳು, ರೋಗಿಯ
ಮನಸ್ಸಿನ ಹಂದರಗಳಲ್ಲಿ ಪ್ರತಿಷ್ಠಿತವಾಗಿರುತ್ತವೆ ; ಜೀವಂತವೂ ಆಗಿರುತ್ತವೆ.
ಇಂತಹ ಸ್ಮರಣೆಗಳೂ, ಯಾತ್ರೆಗೊಳ್ಳುವ ರೋಗಿಯ ಮನಸ್ಸಿನ ಮೇಲೆ
ಪ್ರಭಾವವನ್ನು ಬೀರುತ್ತವೆ. ಆಗ “Memory Suggestion' ಆಗುತ್ತದೆ. ವೈದ್ಯನ
Suggestion ಅಂತೆಯೇ ಗುಣಪಡಿಸುತ್ತದೆ. ಇಂತಹ ಯಾತ್ರಾರ್ಥಿ ರೋಗಿಗಳಲ್ಲಿ
ಹಲವರು 'ನಮಗೇನೂ ಇದರಲ್ಲಿ ನಂಬಿಕೆಯಿಲ್ಲ. ಆದರೆ ನೆಂಟರಿಷ್ಟರ
ಪ್ರೀತ್ಯರ್ಥವಾಗಿ ಯಾತ್ರೆ ಮಾಡುತ್ತೇವೆ' ಎಂದನ್ನುತ್ತಾರೆ. ಅವರ ತೋರ ಮನಸ್ಸು,
Conscious Mind ಹೀಗನಿಸುತ್ತದೆ. ತೋರ ಮನಸ್ಸು ಅಹಂಕಾರದಿಂದ
ತುಂಬಿರುತ್ತದೆ. ವಿಚಾರಮಾಡಿ ನಿರ್ಧರಿಸುವ ಶಕ್ತಿ ನನಗಿದೆ ಎನ್ನುವ ಅಹಂಕಾರ!
ವಿಚಾರಮಾಡುವ ಮನಸ್ಸು ಎತ್ತರದ ಕಂಬದ ಮೇಲಿರುವ ನಾವಿಕರ ದೀಪದಂತೆ.
ಎತ್ತರದಿಂದ ಅದು ಬಲು ದೂರ ಸಮುದ್ರದ ಮೇಲೆ ತನ್ನ ದಾರಿದೀಪವನ್ನು
ಹರಡುತ್ತದೆ. ಆದರೆ ಅದರ ಬುಡದಲ್ಲಿ, ಕತ್ತಲೋ ಕತ್ತಲು ! ವಿಚಾರವನ್ನು
ಮಾಡುವ ಮನಸ್ಸಿನ ಅಂಶವು, ತನ್ನ ಬುಡದ ಸುತ್ತಲೂ ಗಾಢಾಂಧಕಾರದ
ಮನಸ್ಸಿದೆ ಅದರ ಮೇಲೆ ಪ್ರತಿಷ್ಠಿತವಾಗಿದ್ದೇನೆ, ಎನ್ನುವುದನ್ನು ಅರಿಯುವುದಿಲ್ಲ.
ಅದೇ ಅಹಂ-ಕಾರದ ಮಾಯಾ ಗೌಸು. 'ನನಗೇನೂ ಇಂತಹ ಯಾತ್ರೆಗಳಲ್ಲಿ
ಯಾವ ತಿಲಾಂಶ ನಂಬಿಕೆಯೂ ಇಲ್ಲ' ಎಂದು ಘೋಷಿಸುತ್ತಾನೋ ಅವನ
ಗಾಡಾಂಧಕಾರದ ಮನಸ್ಸು – “Personal and Total unconsciousn
ಯಾತ್ರೆಯಿಂದ ಪ್ರಯೋಜನವಾದರೂ ಆದೀತು ಎಂದು ಸೂಚಿಸುತ್ತದೆ, ಅವ್ಯಕ್ತವಾಗಿ
ಇದು ಕೂಡ ಒಂದು ತೆರನ “Auto-Suggestion” ಅಚ್ಚರಿಯನ್ನುಂಟು
ಮಾಡುವಂತೆ, ಹಲವಾರು ಮಾನಸಿಕ ರೋಗಿಗಳು, ತೀರ್ಥಯಾತ್ರೆಯ ನಂತರ,
ಗುಣಮುಖರಾಗುವುದಕ್ಕೆ, Auto-Suggestion ಮುಖ್ಯ ಪಾತ್ರವನ್ನು ವಹಿಸುತ್ತದೆ.
ನಮ್ಮ ದೇಶದಲ್ಲಿ ನಮ್ಮ ಸಮಾಜದಲ್ಲಿ ; ದೈವೀ ಉಪಾಸಕರ ಸಂಖ್ಯೆಗೆ
ಮಿತಿ ಇದೆಯೇ? ತೀರ್ಥಯಾತ್ರಾ ಸ್ಥಳಗಳಿಗೆ ಕೊರತೆಯೇ? ಇಂತಹವುಗಳಲ್ಲಿ<noinclude></noinclude>
6i4smgen3y1cb0lqabjmrg26ykr4ti7
316644
316622
2026-05-04T03:08:12Z
Shreesha Sharma
7840
/* Validated */
316644
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೫೨}}{{Right|ಮನಮಂಥನ}}
ಹೂಡುತ್ತಾನೆ ; Suggestion ಮೂಲಕ ಎನ್ನಬಹುದು. ಇಂತಹ 'Telepathy'
or 'Teletherapy' ಹೇಗೆ ಸಾಧ್ಯ? ಹೇಗಾಗುತ್ತದೆ? ಎನ್ನುವುದು ಇಂದಿನ
ಹಂತದ ವಿಜ್ಞಾನಕ್ಕೆ ಇನ್ನೂ ತಿಳಿದುಬಂದಿಲ್ಲ.
{{gap}}ಪ್ರಸಿದ್ಧಿಯನ್ನು ಬಹುಕಾಲದಿಂದಲೂ ಪಡೆದ ದೇವಮಂದಿರಕ್ಕೆ ಯಾತ್ರೆ
ಹೋಗಿ, ದೇವರ ಸೇವೆಯನ್ನು ಮಾಡಿದರೆ ಗುಣವಾಗುತ್ತದೆ ಎಂದು ರೋಗಿಯು
ನಂಬಿದ್ದರೆ, ಯಾತ್ರೆಗಳೂ ಗುಣಪಡಿಸಬಲ್ಲವು, ಇದೂ ಒಂದು ತೆರನ ಅವ್ಯಕ್ತವಾದ
Suggestion ಎಂದೆಂದೋ ಯಾರಾರಿಂದಲೋ ಕೇಳಿದ್ದ ಸುದ್ದಿಗಳು, ರೋಗಿಯ
ಮನಸ್ಸಿನ ಹಂದರಗಳಲ್ಲಿ ಪ್ರತಿಷ್ಠಿತವಾಗಿರುತ್ತವೆ ; ಜೀವಂತವೂ ಆಗಿರುತ್ತವೆ.
{{gap}}ಇಂತಹ ಸ್ಮರಣೆಗಳೂ, ಯಾತ್ರೆಗೊಳ್ಳುವ ರೋಗಿಯ ಮನಸ್ಸಿನ ಮೇಲೆ
ಪ್ರಭಾವವನ್ನು ಬೀರುತ್ತವೆ. ಆಗ “Memory Suggestion' ಆಗುತ್ತದೆ. ವೈದ್ಯನ
Suggestion ಅಂತೆಯೇ ಗುಣಪಡಿಸುತ್ತದೆ. ಇಂತಹ ಯಾತ್ರಾರ್ಥಿ ರೋಗಿಗಳಲ್ಲಿ
ಹಲವರು 'ನಮಗೇನೂ ಇದರಲ್ಲಿ ನಂಬಿಕೆಯಿಲ್ಲ. ಆದರೆ ನೆಂಟರಿಷ್ಟರ
ಪ್ರೀತ್ಯರ್ಥವಾಗಿ ಯಾತ್ರೆ ಮಾಡುತ್ತೇವೆ' ಎಂದನ್ನುತ್ತಾರೆ. ಅವರ ತೋರ ಮನಸ್ಸು,
Conscious Mind ಹೀಗನಿಸುತ್ತದೆ. ತೋರ ಮನಸ್ಸು ಅಹಂಕಾರದಿಂದ
ತುಂಬಿರುತ್ತದೆ. ವಿಚಾರಮಾಡಿ ನಿರ್ಧರಿಸುವ ಶಕ್ತಿ ನನಗಿದೆ ಎನ್ನುವ ಅಹಂಕಾರ!
ವಿಚಾರಮಾಡುವ ಮನಸ್ಸು ಎತ್ತರದ ಕಂಬದ ಮೇಲಿರುವ ನಾವಿಕರ ದೀಪದಂತೆ.
ಎತ್ತರದಿಂದ ಅದು ಬಲು ದೂರ ಸಮುದ್ರದ ಮೇಲೆ ತನ್ನ ದಾರಿದೀಪವನ್ನು
ಹರಡುತ್ತದೆ. ಆದರೆ ಅದರ ಬುಡದಲ್ಲಿ, ಕತ್ತಲೋ ಕತ್ತಲು ! ವಿಚಾರವನ್ನು
ಮಾಡುವ ಮನಸ್ಸಿನ ಅಂಶವು, ತನ್ನ ಬುಡದ ಸುತ್ತಲೂ ಗಾಢಾಂಧಕಾರದ
ಮನಸ್ಸಿದೆ ಅದರ ಮೇಲೆ ಪ್ರತಿಷ್ಠಿತವಾಗಿದ್ದೇನೆ, ಎನ್ನುವುದನ್ನು ಅರಿಯುವುದಿಲ್ಲ.
ಅದೇ ಅಹಂ-ಕಾರದ ಮಾಯಾ ಗೌಸು. 'ನನಗೇನೂ ಇಂತಹ ಯಾತ್ರೆಗಳಲ್ಲಿ
ಯಾವ ತಿಲಾಂಶ ನಂಬಿಕೆಯೂ ಇಲ್ಲ' ಎಂದು ಘೋಷಿಸುತ್ತಾನೋ ಅವನ
ಗಾಡಾಂಧಕಾರದ ಮನಸ್ಸು – “Personal and Total unconsciousn
ಯಾತ್ರೆಯಿಂದ ಪ್ರಯೋಜನವಾದರೂ ಆದೀತು ಎಂದು ಸೂಚಿಸುತ್ತದೆ, ಅವ್ಯಕ್ತವಾಗಿ
ಇದು ಕೂಡ ಒಂದು ತೆರನ “Auto-Suggestion” ಅಚ್ಚರಿಯನ್ನುಂಟು
ಮಾಡುವಂತೆ, ಹಲವಾರು ಮಾನಸಿಕ ರೋಗಿಗಳು, ತೀರ್ಥಯಾತ್ರೆಯ ನಂತರ,
ಗುಣಮುಖರಾಗುವುದಕ್ಕೆ, Auto-Suggestion ಮುಖ್ಯ ಪಾತ್ರವನ್ನು ವಹಿಸುತ್ತದೆ.
{{gap}}ನಮ್ಮ ದೇಶದಲ್ಲಿ ನಮ್ಮ ಸಮಾಜದಲ್ಲಿ ; ದೈವೀ ಉಪಾಸಕರ ಸಂಖ್ಯೆಗೆ
ಮಿತಿ ಇದೆಯೇ? ತೀರ್ಥಯಾತ್ರಾ ಸ್ಥಳಗಳಿಗೆ ಕೊರತೆಯೇ? ಇಂತಹವುಗಳಲ್ಲಿ<noinclude></noinclude>
avha9hhuztl1x7fnmj45kh8vk62qmlh
ಪುಟ:ಮನಮಂಥನ.pdf/೧೭೨
104
62619
316621
314146
2026-05-04T02:51:33Z
Shreelatha.Halemane
7642
/* Proofread */
316621
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೫೩}}
ನಂಬಿಕೆ ಇದ್ದವರು ಕಡಿಮೆಯೇ? ಶಾಸ್ರೋಕ್ತವಾದ ವೈಜ್ಞಾನಿಕ Suggestion
ಅನ್ನು, ನಮ್ಮಲ್ಲಿ ಪ್ರಚಲಿತವಾಗಿರುವ ವಿಧವಿಧ ವಿಧಾನಗಳನ್ನು ಬಳಸಿಕೊಳ್ಳುವುದರಲ್ಲಿ
ತಪ್ಪೇನೂ ಇಲ್ಲ. ಹಾಗೂ ಬಳಸಿಕೊಳ್ಳದೇ ಇರುವುದು, ವೈಜ್ಞಾನಿಕ ದೃಷ್ಟಿಯಿಂದ
ಮಹಾಪರಾಧ ಎಂದೂ ಅನ್ನಬಹುದು.
ಆದರೆ ಸಾಂಪ್ರದಾಯಿಕವಾದ ಈ ವಿಧಾನಗಳಿಂದ ದುಷ್ಪರಿಣಾಮವೊಂದು
ಸಾಧ್ಯ. ಇದ್ದ ಮಾರಿ ಹೋಗಿ, ಇನ್ನೊಂದು ಹೆಮ್ಮಾರಿ ತಗುಲಿಕೊಳ್ಳಬಹುದು.
ದೈವೀ ಉಪಾಸಕನಿಗೆ ಶರಣು ಬಿದ್ದವರು, ತಮ್ಮ ಮನಸ್ಸಿನಲ್ಲಿ ನೆಮ್ಮದಿಯನ್ನು
ತುಸುಮಟ್ಟಿಗೆ ಪಡೆಯಬಹುದು ; ಪಡೆಯುತ್ತಾರೆ. ಆದರೆ ದೈವೀ ಉಪಾಸಕನು
ಅವರ ಮನಸ್ಸನ್ನು ದೆವ್ವ ಹಿಡಿದಂತೆ ಹಿಡಿಯುತ್ತಾನೆ. ದೈವೀ ಉಪಾಸಕನಿಗೆ
ಈ ರೀತಿ ಮಾನಸಿಕವಾಗಿ ಗಂಟು ಬೀಳುವುದು, ನಿತ್ಯ ಜೀವನದಲ್ಲಿ ಅಪಾರ
ತೊಂದರೆಯನ್ನು ಉಂಟುಮಾಡುತ್ತದೆ. ಸಮಾಜದಲ್ಲಿ ರೂಢಿತವಾದ ಇಂತಹ
ವಿಧಾನಗಳನ್ನು ಅನುಸರಿಸ ಹೋಗುವಾಗ ಈ ದುಷ್ಪರಿಣಾಮದ ಅರಿವೂ
ಇರಬೇಕು. ಕೊಕ್ಕಾಟದಂತಾಗುವ ಈ ಪರಿಣಾಮವನ್ನು ಮರೆಯಬಾರದು.
ಮನೆಯಲ್ಲಿರುವ ನೆಂಟರಿಷ್ಟರು ಅದರ ಮತ್ತು ಅನುಕಂಪಗಳನ್ನು
ತೋರಿಸುವುದರಿಂದ ರೋಗಿಗೆ ಹಾಯ್ ಎನಿಸುತ್ತದೆ. ಕೆಲವರಿಗಾದರೂ ನನ್ನನ್ನು
ಕಂಡರೆ ಪ್ರೀತಿ, ಅವರಿಗೆ ನಾನು ಅಗತ್ಯ ಎನ್ನುವ ಭಾವನೆಯು ಹಿತಕರವಾಗಿರುತ್ತದೆ.
ಹಿಸ್ಟಿರಿಯಾ ಪ್ರದರ್ಶನದ ಮೂಲ ಪ್ರೇರಕಗಳಲ್ಲೊಂದು, ಮನೆಯವರ ಮತ್ತಿತರರ
ಸಹಾನುಭೂತಿ ಮತ್ತು ಅನುಕಂಪವನ್ನು ಪಡೆಯುವುದೇ ಆಗಿರುತ್ತದೆ.
ನಮ್ಮ ಸಮಾಜದಲ್ಲಿ ಅನುಕಂಪವೂ ಸೌಹಾರ್ದವೂ ಮನಸ್ಸಿನಲ್ಲಿದ್ದರೂ
ಸಾಕಷ್ಟು ಸ್ಪಷ್ಟಪಡಿಸುವುದಿಲ್ಲ. 'ನಾವು ಹಿರಿಯರು, ಮನೆಗೆ ದೊಡ್ಡವರು ; ನಾವು
ಹೇಳಿದಂತೆ, ಚಾಚೂ ತಪ್ಪದೆ ಕಿರಿಯರು ಕೇಳಿಕೊಂಡು ಬಿದ್ದಿರಬೇಕು. ಅವರ
ಯೋಗಕ್ಷೇಮದ ಹೊಣೆಯು ನಮ್ಮದೇ ಅಲ್ಲವೇ ?' ಎಂದು ಮನೆಯ ಹಿರಿಯರು
ಕಿರಿಯರಿಗೆ ಅನ್ನುವುದು ಸಾಮಾನ್ಯ. ಕಿರಿಯರು ಎನ್ನಿಸಿಕೊಂಡವರಿಗೆ ಪ್ರೌಢ
ವಯಸ್ಸಾಗಿರುತ್ತದೆ. ಪ್ರತ್ಯೇಕವಾದ ವ್ಯಕ್ತಿತ್ವವೂ ಇರುತ್ತದೆ. ಅವರುಗಳ ವ್ಯಕ್ತಿತ್ವಕ್ಕೆ
ಧಕ್ಕೆ ತಗಲುತ್ತದೆ. ಹಿಸ್ಟಿರಿಯಾ ಅಥವಾ ಇತರ ಮಾನಸಿಕ ಪಲ್ಲಟಗಳು
ಉಂಟಾಗುತ್ತವೆ. ರುಚಿಯಾದ ಊಟವನ್ನು ಸಾಕಷ್ಟು ಬಡಿಸಬಹುದು. ಆದರೆ
ಮುಖವನ್ನು ಸಿಂಡರಿಸಿಕೊಂಡು, ನಾಯಿಯ ತಟ್ಟೆಗೆ ಅನ್ನವನ್ನೆರಚುವಂತೆ,
ಬಡಿಸಿದರೆ, ತಿನ್ನುವವರಿಗೆ ಬೇಸರವೂ ಜುಗುಪ್ಪೆಯೂ ಬರುತ್ತದೆ. ಊಟವೇ
ಬೇಡ, ಎದ್ದು ಬಿಟ್ಟರೆ ಸಾಕು ಎನಿಸುತ್ತದೆ.<noinclude></noinclude>
rdgc247bfwd76mtfjm9jdjdlyed609q
316645
316621
2026-05-04T03:08:37Z
Shreesha Sharma
7840
/* Validated */
316645
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೫೩}}
ನಂಬಿಕೆ ಇದ್ದವರು ಕಡಿಮೆಯೇ? ಶಾಸ್ರೋಕ್ತವಾದ ವೈಜ್ಞಾನಿಕ Suggestion
ಅನ್ನು, ನಮ್ಮಲ್ಲಿ ಪ್ರಚಲಿತವಾಗಿರುವ ವಿಧವಿಧ ವಿಧಾನಗಳನ್ನು ಬಳಸಿಕೊಳ್ಳುವುದರಲ್ಲಿ
ತಪ್ಪೇನೂ ಇಲ್ಲ. ಹಾಗೂ ಬಳಸಿಕೊಳ್ಳದೇ ಇರುವುದು, ವೈಜ್ಞಾನಿಕ ದೃಷ್ಟಿಯಿಂದ
ಮಹಾಪರಾಧ ಎಂದೂ ಅನ್ನಬಹುದು.
{{gap}}ಆದರೆ ಸಾಂಪ್ರದಾಯಿಕವಾದ ಈ ವಿಧಾನಗಳಿಂದ ದುಷ್ಪರಿಣಾಮವೊಂದು
ಸಾಧ್ಯ. ಇದ್ದ ಮಾರಿ ಹೋಗಿ, ಇನ್ನೊಂದು ಹೆಮ್ಮಾರಿ ತಗುಲಿಕೊಳ್ಳಬಹುದು.
ದೈವೀ ಉಪಾಸಕನಿಗೆ ಶರಣು ಬಿದ್ದವರು, ತಮ್ಮ ಮನಸ್ಸಿನಲ್ಲಿ ನೆಮ್ಮದಿಯನ್ನು
ತುಸುಮಟ್ಟಿಗೆ ಪಡೆಯಬಹುದು ; ಪಡೆಯುತ್ತಾರೆ. ಆದರೆ ದೈವೀ ಉಪಾಸಕನು
ಅವರ ಮನಸ್ಸನ್ನು ದೆವ್ವ ಹಿಡಿದಂತೆ ಹಿಡಿಯುತ್ತಾನೆ. ದೈವೀ ಉಪಾಸಕನಿಗೆ
ಈ ರೀತಿ ಮಾನಸಿಕವಾಗಿ ಗಂಟು ಬೀಳುವುದು, ನಿತ್ಯ ಜೀವನದಲ್ಲಿ ಅಪಾರ
ತೊಂದರೆಯನ್ನು ಉಂಟುಮಾಡುತ್ತದೆ. ಸಮಾಜದಲ್ಲಿ ರೂಢಿತವಾದ ಇಂತಹ
ವಿಧಾನಗಳನ್ನು ಅನುಸರಿಸ ಹೋಗುವಾಗ ಈ ದುಷ್ಪರಿಣಾಮದ ಅರಿವೂ
ಇರಬೇಕು. ಕೊಕ್ಕಾಟದಂತಾಗುವ ಈ ಪರಿಣಾಮವನ್ನು ಮರೆಯಬಾರದು.
{{gap}}ಮನೆಯಲ್ಲಿರುವ ನೆಂಟರಿಷ್ಟರು ಅದರ ಮತ್ತು ಅನುಕಂಪಗಳನ್ನು
ತೋರಿಸುವುದರಿಂದ ರೋಗಿಗೆ ಹಾಯ್ ಎನಿಸುತ್ತದೆ. ಕೆಲವರಿಗಾದರೂ ನನ್ನನ್ನು
ಕಂಡರೆ ಪ್ರೀತಿ, ಅವರಿಗೆ ನಾನು ಅಗತ್ಯ ಎನ್ನುವ ಭಾವನೆಯು ಹಿತಕರವಾಗಿರುತ್ತದೆ.
ಹಿಸ್ಟಿರಿಯಾ ಪ್ರದರ್ಶನದ ಮೂಲ ಪ್ರೇರಕಗಳಲ್ಲೊಂದು, ಮನೆಯವರ ಮತ್ತಿತರರ
ಸಹಾನುಭೂತಿ ಮತ್ತು ಅನುಕಂಪವನ್ನು ಪಡೆಯುವುದೇ ಆಗಿರುತ್ತದೆ.
{{gap}}ನಮ್ಮ ಸಮಾಜದಲ್ಲಿ ಅನುಕಂಪವೂ ಸೌಹಾರ್ದವೂ ಮನಸ್ಸಿನಲ್ಲಿದ್ದರೂ
ಸಾಕಷ್ಟು ಸ್ಪಷ್ಟಪಡಿಸುವುದಿಲ್ಲ. 'ನಾವು ಹಿರಿಯರು, ಮನೆಗೆ ದೊಡ್ಡವರು ; ನಾವು
ಹೇಳಿದಂತೆ, ಚಾಚೂ ತಪ್ಪದೆ ಕಿರಿಯರು ಕೇಳಿಕೊಂಡು ಬಿದ್ದಿರಬೇಕು. ಅವರ
ಯೋಗಕ್ಷೇಮದ ಹೊಣೆಯು ನಮ್ಮದೇ ಅಲ್ಲವೇ ?' ಎಂದು ಮನೆಯ ಹಿರಿಯರು
ಕಿರಿಯರಿಗೆ ಅನ್ನುವುದು ಸಾಮಾನ್ಯ. ಕಿರಿಯರು ಎನ್ನಿಸಿಕೊಂಡವರಿಗೆ ಪ್ರೌಢ
ವಯಸ್ಸಾಗಿರುತ್ತದೆ. ಪ್ರತ್ಯೇಕವಾದ ವ್ಯಕ್ತಿತ್ವವೂ ಇರುತ್ತದೆ. ಅವರುಗಳ ವ್ಯಕ್ತಿತ್ವಕ್ಕೆ
ಧಕ್ಕೆ ತಗಲುತ್ತದೆ. ಹಿಸ್ಟಿರಿಯಾ ಅಥವಾ ಇತರ ಮಾನಸಿಕ ಪಲ್ಲಟಗಳು
ಉಂಟಾಗುತ್ತವೆ. ರುಚಿಯಾದ ಊಟವನ್ನು ಸಾಕಷ್ಟು ಬಡಿಸಬಹುದು. ಆದರೆ
ಮುಖವನ್ನು ಸಿಂಡರಿಸಿಕೊಂಡು, ನಾಯಿಯ ತಟ್ಟೆಗೆ ಅನ್ನವನ್ನೆರಚುವಂತೆ,
ಬಡಿಸಿದರೆ, ತಿನ್ನುವವರಿಗೆ ಬೇಸರವೂ ಜುಗುಪ್ಪೆಯೂ ಬರುತ್ತದೆ. ಊಟವೇ
ಬೇಡ, ಎದ್ದು ಬಿಟ್ಟರೆ ಸಾಕು ಎನಿಸುತ್ತದೆ.<noinclude></noinclude>
odtj25zi8pwigol9omd20wt7qgf8ej3
ಪುಟ:ಮನಮಂಥನ.pdf/೧೭೩
104
62620
316620
314147
2026-05-04T02:50:30Z
Shreelatha.Halemane
7642
/* Proofread */
316620
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೧೫೪}}{{Right|ಮನಮಂಥನ}}
'ಮೂರು ಮಿಳ್ಳೆ ತುಪ್ಪವನ್ನು ಹೆಚ್ಚಾಗಿ ಹಾಕಿ, ಅವರೇಕಾಯಿ ಹುಳಿಯನ್ನು
ಅನ್ನದ ಜತೆಗೆ ಬಡಿಸಿದರೆ, ಸೊಸೆ ಮಹರಾಯ್ತಿ ಅರ್ಧ ತಿಂದು ಎದ್ದು
ಬಿಡುತ್ತಾಳಲ್ಲೀ' ಎಂದು ಪಕ್ಕದ ಮನೆಯಾಕೆಗೆ ಚಾಡಿ ಹೇಳುವ ಅತ್ತೆಯು,
ತಾನು ಬಡಿಸಿದ ರೀತಿಯನ್ನು ವಿವರಿಸುವುದಿಲ್ಲ. ನೈಜವಾದ, ಹೃದಯದಿಂದ
ಹರಿದು ಬಂದ ಪ್ರೇಮ ಆದರಗಳು ನಮ್ಮ ಸಮಾಜದ ಇಂದಿನ ಸಂಸಾರಗಳಲ್ಲಿ
ಸ್ವಲ್ಪ ವಿರಳ. ಹೀಗನ್ನುವಾಗ ನನ್ನ ಅನುಭವವು, ರೋಗಿಗಳಿರುವ ಸಂಸಾರಗಳಿಗೆ
ಮಿತಿಗೊಂಡಿದೆ, ಎಂಬುದನ್ನು ಮರೆತಿಲ್ಲ.
ಬೂಟಾಟಿಕೆಯ ಉಪಚಾರದಿಂದ ಎಳ್ಳಷ್ಟೂ ಪ್ರಯೋಜನವಿಲ್ಲ.
ಎದೆಯಾಳದಿಂದ ಎರಡು ಒಳ್ಳೆಯ ಮಾತುಗಳನ್ನಾಡಿದರೆ ಎಷ್ಟೋ
ಪ್ರಯೋಜನವಾಗುತ್ತದೆ ; ಎಂಬುದನ್ನು ಎಲ್ಲರೂ ಅರಿಯಬೇಕು.
ಮಾನಸಿಕವಾದ ಬೇನೆಯಿದು ಎಂದು ವೈದ್ಯರು ಮನೆಯ ಹಿರಿಯರಿಗೆ
ಹೇಳಿದಾಗ, ಅವರುಗಳು ಬಹುಪಾಲು ಅಪಾರ್ಥ ಮಾಡಿಕೊಂಡು, ರೋಗಿಯ
ದೇಹಾರೋಗ್ಯವು ಚೆನ್ನಾಗಿಯೇ ಇದೆ. ಆದರೆ ಮನಸ್ಸಿನಲ್ಲಿ ವೈರತ್ವವನ್ನಿರಿಸಿಕೊಂಡು,
ಬೇಕು ಬೇಕೂ ಅಂತ ರೋಗದ ಸೋಗು ಹಾಕುತ್ತಿದ್ದಾಳೆ ಎಂದುಕೊಳ್ಳುತ್ತಾರೆ.
ನಟನೆಯನ್ನು ಹೂಡಿದವರಿಗೆ ಶಿಕ್ಷೆಯನ್ನು ಕೊಡಬೇಕು ; ಆಗ ಅವರಿಗೆ
ಗುಣವಾಗುತ್ತದೆ ಎಂದವರ ಮೂಢ ಅಭಿಪ್ರಾಯ.
ಹಿಸ್ಟಿರಿಯಾ ಪ್ರದರ್ಶನ ರೋಗಿಗಳು ಖಂಡಿತವಾಗಿಯೂ ಬೇಕು ಬೇಕೂಂತ
ನಟಿಸುವುದಿಲ್ಲ. ಆಳ ಮನಸ್ಸಿನಲ್ಲಿ ನಡೆಯುವ ವಿಚಿತ್ರಗಳು, ಅವರ ಮನಸ್ಸಿಗೆ
ಕಂಡುಬರುವುದೇ ಇಲ್ಲ. ಅವರ ನರಳುವಿಕೆಯಾಗಲೀ, ಸಂಕಟಪಡುವುದಾಗಲೀ
ಎಳ್ಳಷ್ಟೂ ಸುಳ್ಳಲ್ಲ. ಅಂತಹವರನ್ನು, ದಿಟವಾಗಿ ನರಕಯಾತನೆಯನ್ನು
ಅನುಭವಿಸುತ್ತಿರುವವರನ್ನು, ಶಿಕ್ಷೆಗೆ ಗುರಿಪಡಿಸಿದರೆ, ಅಂಕೆಗೆ ಒಳಪಡಿಸಿದರೆ,
ತೋರಮನನ್ನೂ ಮೊಂಡು ಬೀಳುತ್ತದೆ. ನನ್ನಿಂದ ನನ್ನ ನಡವಳಿಕೆಯ ಮೇಲೆ
ಹತೋಟಿ ತಪ್ಪಿಹೋಗಿದೆಯೋ ಎನ್ನುವ ಅಪಾರ ಭಯವೂ ಮುಚ್ಚಿಕೊಳ್ಳುತ್ತದೆ.
ಅನಂತರ ಹಿಸ್ಟಿರಿಯಾ ಪ್ರದರ್ಶನವು ಬೇರೂರಿ ಬೆಳೆಯಲಾರಂಭಿಸುತ್ತದೆ.
ಆಕಸ್ಮಿಕವಾಗಿ 'ಈ ರೋಗಿಗೆ ಮಾನಸಿಕ ಬೇನೆ, ದೇಹದಲ್ಲಿ ಯಾವ
ಕುಂದೂ ಇಲ್ಲ' ಎಂದು ಡಾಕ್ಟರು ಹೇಳುವುದು ಯಥಾರ್ಥವೇ, ಆದರೆ ಅದನ್ನು
ಬಲು ಸುಲಭವಾಗಿ ಮನೆಯ ಹಿರಿಯ ಮಂದಿ ಅಪಾರ್ಥಮಾಡಿಕೊಳ್ಳುತ್ತಾರೆ.
ಒಂದು ದೃಷ್ಟಿಯಿಂದ ಡಾಕ್ಟರು ಅಂದುದು, ದಿಟವಾಗಿ 'ಶಾಪ'ವಾಗುತ್ತದೆ.
'ನೀವು ಹೇಳಿದ್ದೆಲ್ಲಾ ತಿಳೀತು, ಡಾಕ್ಟರ್ ಸಾಹೇಬ್ರಾ ; ನಮ್ಮ ಸೊಸೀನ<noinclude></noinclude>
py5bbb8xbg2w1o7z0k62twim78vi6h2
316646
316620
2026-05-04T03:09:32Z
Shreesha Sharma
7840
/* Validated */
316646
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೫೪}}{{Right|ಮನಮಂಥನ}}
{{gap}}'ಮೂರು ಮಿಳ್ಳೆ ತುಪ್ಪವನ್ನು ಹೆಚ್ಚಾಗಿ ಹಾಕಿ, ಅವರೇಕಾಯಿ ಹುಳಿಯನ್ನು
ಅನ್ನದ ಜತೆಗೆ ಬಡಿಸಿದರೆ, ಸೊಸೆ ಮಹರಾಯ್ತಿ ಅರ್ಧ ತಿಂದು ಎದ್ದು
ಬಿಡುತ್ತಾಳಲ್ಲೀ' ಎಂದು ಪಕ್ಕದ ಮನೆಯಾಕೆಗೆ ಚಾಡಿ ಹೇಳುವ ಅತ್ತೆಯು,
ತಾನು ಬಡಿಸಿದ ರೀತಿಯನ್ನು ವಿವರಿಸುವುದಿಲ್ಲ. ನೈಜವಾದ, ಹೃದಯದಿಂದ
ಹರಿದು ಬಂದ ಪ್ರೇಮ ಆದರಗಳು ನಮ್ಮ ಸಮಾಜದ ಇಂದಿನ ಸಂಸಾರಗಳಲ್ಲಿ
ಸ್ವಲ್ಪ ವಿರಳ. ಹೀಗನ್ನುವಾಗ ನನ್ನ ಅನುಭವವು, ರೋಗಿಗಳಿರುವ ಸಂಸಾರಗಳಿಗೆ
ಮಿತಿಗೊಂಡಿದೆ, ಎಂಬುದನ್ನು ಮರೆತಿಲ್ಲ.
{{gap}}ಬೂಟಾಟಿಕೆಯ ಉಪಚಾರದಿಂದ ಎಳ್ಳಷ್ಟೂ ಪ್ರಯೋಜನವಿಲ್ಲ.
ಎದೆಯಾಳದಿಂದ ಎರಡು ಒಳ್ಳೆಯ ಮಾತುಗಳನ್ನಾಡಿದರೆ ಎಷ್ಟೋ
ಪ್ರಯೋಜನವಾಗುತ್ತದೆ ; ಎಂಬುದನ್ನು ಎಲ್ಲರೂ ಅರಿಯಬೇಕು.
{{gap}}ಮಾನಸಿಕವಾದ ಬೇನೆಯಿದು ಎಂದು ವೈದ್ಯರು ಮನೆಯ ಹಿರಿಯರಿಗೆ
ಹೇಳಿದಾಗ, ಅವರುಗಳು ಬಹುಪಾಲು ಅಪಾರ್ಥ ಮಾಡಿಕೊಂಡು, ರೋಗಿಯ
ದೇಹಾರೋಗ್ಯವು ಚೆನ್ನಾಗಿಯೇ ಇದೆ. ಆದರೆ ಮನಸ್ಸಿನಲ್ಲಿ ವೈರತ್ವವನ್ನಿರಿಸಿಕೊಂಡು,
ಬೇಕು ಬೇಕೂ ಅಂತ ರೋಗದ ಸೋಗು ಹಾಕುತ್ತಿದ್ದಾಳೆ ಎಂದುಕೊಳ್ಳುತ್ತಾರೆ.
ನಟನೆಯನ್ನು ಹೂಡಿದವರಿಗೆ ಶಿಕ್ಷೆಯನ್ನು ಕೊಡಬೇಕು ; ಆಗ ಅವರಿಗೆ
ಗುಣವಾಗುತ್ತದೆ ಎಂದವರ ಮೂಢ ಅಭಿಪ್ರಾಯ.
{{gap}}ಹಿಸ್ಟಿರಿಯಾ ಪ್ರದರ್ಶನ ರೋಗಿಗಳು ಖಂಡಿತವಾಗಿಯೂ ಬೇಕು ಬೇಕೂಂತ
ನಟಿಸುವುದಿಲ್ಲ. ಆಳ ಮನಸ್ಸಿನಲ್ಲಿ ನಡೆಯುವ ವಿಚಿತ್ರಗಳು, ಅವರ ಮನಸ್ಸಿಗೆ
ಕಂಡುಬರುವುದೇ ಇಲ್ಲ. ಅವರ ನರಳುವಿಕೆಯಾಗಲೀ, ಸಂಕಟಪಡುವುದಾಗಲೀ
ಎಳ್ಳಷ್ಟೂ ಸುಳ್ಳಲ್ಲ. ಅಂತಹವರನ್ನು, ದಿಟವಾಗಿ ನರಕಯಾತನೆಯನ್ನು
ಅನುಭವಿಸುತ್ತಿರುವವರನ್ನು, ಶಿಕ್ಷೆಗೆ ಗುರಿಪಡಿಸಿದರೆ, ಅಂಕೆಗೆ ಒಳಪಡಿಸಿದರೆ,
ತೋರಮನನ್ನೂ ಮೊಂಡು ಬೀಳುತ್ತದೆ. ನನ್ನಿಂದ ನನ್ನ ನಡವಳಿಕೆಯ ಮೇಲೆ
ಹತೋಟಿ ತಪ್ಪಿಹೋಗಿದೆಯೋ ಎನ್ನುವ ಅಪಾರ ಭಯವೂ ಮುಚ್ಚಿಕೊಳ್ಳುತ್ತದೆ.
ಅನಂತರ ಹಿಸ್ಟಿರಿಯಾ ಪ್ರದರ್ಶನವು ಬೇರೂರಿ ಬೆಳೆಯಲಾರಂಭಿಸುತ್ತದೆ.
{{gap}}ಆಕಸ್ಮಿಕವಾಗಿ 'ಈ ರೋಗಿಗೆ ಮಾನಸಿಕ ಬೇನೆ, ದೇಹದಲ್ಲಿ ಯಾವ
ಕುಂದೂ ಇಲ್ಲ' ಎಂದು ಡಾಕ್ಟರು ಹೇಳುವುದು ಯಥಾರ್ಥವೇ, ಆದರೆ ಅದನ್ನು
ಬಲು ಸುಲಭವಾಗಿ ಮನೆಯ ಹಿರಿಯ ಮಂದಿ ಅಪಾರ್ಥಮಾಡಿಕೊಳ್ಳುತ್ತಾರೆ.
ಒಂದು ದೃಷ್ಟಿಯಿಂದ ಡಾಕ್ಟರು ಅಂದುದು, ದಿಟವಾಗಿ 'ಶಾಪ'ವಾಗುತ್ತದೆ.
{{gap}}'ನೀವು ಹೇಳಿದ್ದೆಲ್ಲಾ ತಿಳೀತು, ಡಾಕ್ಟರ್ ಸಾಹೇಬ್ರಾ ; ನಮ್ಮ ಸೊಸೀನ<noinclude></noinclude>
nlho3vvnuvluc2eks18qxjue4c624rb
ಪುಟ:ಮನಮಂಥನ.pdf/೨೦೨
104
62649
316547
315694
2026-05-03T14:26:03Z
Shreesha Sharma
7840
/* Validated */
316547
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು}}{{Right|೧೮೩}}
ತೀರಿಕೊಂಡನಂತರ, ಮಗನನ್ನು ತಾಯಿಯು ಮುದ್ದಿಸುವುದು ವಿಪರೀತವಾಯಿತು.
ತನ್ನ ಮಗ ಮಾಡಿದುದೇ ಸರಿ, ಅವನಷ್ಟು ಜಾಣ ಇನ್ನು ಯಾರಿದ್ದಾರೆ ಎನ್ನುವ
ಮನೋಭಾವ ತಾಯಿಯದು. ವಿಚಿತ್ರವಾಗಿ ನಡೆದುಕೊಂಡರೂ, ವಿನಾಕಾರಣ
ಸಿಡುಕಿದರೂ ತಾಯಿಯು ಯಾಕಪ್ಪ ಹೀಗಾಡುತ್ತಿ ಎಂದು ಕೇಳದೆ ಕೇವಲ
ಮುದ್ದುಗರೆಯುವುದರಲ್ಲಿ ಮಗ್ನಳಾಗಿದ್ದಳು. ಊಟಕ್ಕೆ ಕುಳಿತಿದ್ದಾಗ ಒಮ್ಮೆ
ಸಂಡಿಗೆಯನ್ನು ತಾಯಿ ಬಡಿಸಿದಳು. ಸಂಡಿಗೆ ಅಂದರೆ ರಾಮಣ್ಣನಿಗೆ
ಮೊದಲಿನಿಂದಲೂ ಪ್ರಾಣ. ಆದರೆ ಅವತ್ತು ಒಂದು ಸಂಡಿಗೆಯನ್ನು
ತೆಗೆದುಕೊಂಡು 'ನೋಡಮ್ಮಾ, ಇದನ್ನು ಸ್ಯಾಟಲೈಟ್ ತರಹ ಹೋಗುವಂತೆ
ಬೀಸುತ್ತೀನಿ' ಎಂದು ಸೂರಿನತ್ತ ರೊಯ್ಯಂತ ಬೀಸಿದ. ಮುದುಕಿಗೆ ಸ್ಯಾಟಲೈಟ್
ಅಂದರೇನು ಎನ್ನುವುದು ತಿಳಿಯದು. ಸಂಡಿಗೆಯು ಕರಕಲಾಯಿತೇನೋ, ಅದಕ್ಕೇ
ಹಾಗೆ ರೇಗಿರಬೇಕು ಎಂದು ಸಮಾಧಾನ ಮಾಡಿಕೊಂಡಳು. ಮಗನಿಗೆ ಏನಾದರೂ
ಆಗಿರಬಹುದೋ ಎನ್ನುವ ಯೋಚನೆಯೇ ಆಕೆಗೆ ಬರಲಿಲ್ಲ. ನೌಕರರ ವಿಲಾಸೀ
ನಾಟಕ ಸಂಸ್ಥೆಯು, ಮಾನ್ಯ ಮಂತ್ರಿಗಳ ಸಮ್ಮುಖದಲ್ಲಿ ನಾಟಕವೊಂದನ್ನು
ಆಡಿದರು. ರಾಮಣ್ಣನು ಯಾವ ಪಾತ್ರವನ್ನೂ ವಹಿಸಿರಲಿಲ್ಲ. ವಂದನಾರ್ಪಣೆಯನ್ನು
ಮಾಡುವ ಕೆಲಸ ಅವನದು. ವಂದನಾರ್ಪಣೆಯನ್ನು ಮಾಡತೊಡಗಿದಾಗ
ಲಕ್ಷಣವಾಗಿಯೇ ಆರಂಭಿಸಿದ. ಆದರೆ ಮೂರು ನಾಲ್ಕು ನಿಮಿಷಗಳಲ್ಲಿ ಏನನ್ನೋ
ಆಡಲಾರಂಭಿಸಿದ. ಐದು ನಿಮಿಷವಾಯಿತು, ಹತ್ತು ನಿಮಿಷವಾಯಿತು, ನಿಲ್ಲಿಸಲೇ
ಒಲ್ಲ. ದೊಡ್ಡ ಪರದೆಯನ್ನು ಇಳಿಬಿಟ್ಟು ರಾಮಣ್ಣನನ್ನು ಪಕ್ಕಕ್ಕೆ ಎಳೆದುಕೊಂಡು
ಹೋಗಬೇಕಾಯಿತು. ಸಹೋದ್ಯೋಗಿ ಪ್ರೊಬೇಷನರು 'ರಾಮಣ್ಣ, ಒಂದು ವಾರ
ರಜ ತೆಗೆದುಕೊಂಡು ವೈದ್ಯರ ಸಲಹೆಯನ್ನು ಪಡೆಯುವುದು ಒಳ್ಳೆಯದು'
ಎಂದು ಮನೆಗೆ ಕರೆದುಕೊಂಡುಹೋಗಿ ಬಿಡುವಾಗ ಸಲಹೆ ಮಾಡಿದ, ಮನೆಯೊಳಕ್ಕೆ
ರಾಮಣ್ಣನೊಡನೆ ಹೋಗಿ ಅವನ ತಾಯಿಗೂ ಇದೇ ಮಾತನ್ನು
ಒತ್ತಾಯಪೂರ್ವಕವಾಗಿ ಹೇಳಿದ.
{{gap}}ತಾಯಿಗೆ ಗಾಬರಿಯಾಯಿತು. ತಾರು ಕೊಟ್ಟು ಹಿರಿಯ ಮಗಳು,
ಅಳಿಯನನ್ನು ಕರೆಸಿದಳು. ಮಾರನೆಯ ಸಂಜೆಯ ವೇಳೆಗೆ ಅವರು “ಏನಾಯಿತೋ'
ಎಂದು ಗಾಬರಿಯಾಗಿ ಬಂದಿಳಿದರು. ಅಳುತ್ತಾ ತಾಯಿಯು ಮಗಳಿಗೆ ರಾಮಣ್ಣನ
ವಿಚಿತ್ರ ನಡವಳಿಕೆಯನ್ನೂ ಅವನ ಸ್ನೇಹಿತ ಹಿಂದಿನ ರಾತ್ರಿ ಹೇಳಿದುದನ್ನೂ
ಅಡಿಗೆಯ ಮನೆಯ ಬಾಗಿಲು ಮುಚ್ಚಿಕೊಂಡು ಗುಟ್ಟಿನಲ್ಲಿ ಹೇಳಿದಳು. ಹಿರಿಯಕ್ಕನು
ಹೊರಕ್ಕೆ ಬಂದಮೇಲೆ ರಾಮಣ್ಣನನ್ನು ಮಾತನಾಡಿಸಿದಳು, ಯೋಗಕ್ಷೇಮದ<noinclude></noinclude>
oy7zt0s6plhahlmb6nrx1rab51sac2c
ಪುಟ:ಮನಮಂಥನ.pdf/೨೦೩
104
62650
316548
315534
2026-05-03T14:26:33Z
Shreesha Sharma
7840
/* Validated */
316548
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೮೪}}{{Right|ಮನಮಂಥನ}}
.
ಮಾತುಗಳನ್ನೂ ರಾಮಣ್ಣ ಸರಿಯಾಗಿ ಆಡಿದ. 'ಮಕ್ಕಳನ್ನು ಯಾಕೆ ಕರೆದುಕೊಂಡು
ಬರಲಿಲ್ಲ' ಎಂದು ಮೂರು ಮಕ್ಕಳ ಹೆಸರುಗಳನ್ನೂ, ಹೇಳಿ ವಿಚಾರಿಸಿದ.
ಭಾವನ ಜತೆಗೆ ನೀನ್ಯಾಕೆ ಬಂದೆ, ಇಲ್ಲೇನು ಕೆಲಸವಿತ್ತು ಈಗ ಎಂದು ಕೇಳಲಿಲ್ಲ.
'ನೀನು ಹೇಗಿದೀಪ್ಪಾ, ಹೊಸ ಕಾರುಬಾರು ಏನಾದರೂ ಮಾಡ್ತಿದ್ದೀಯಾ' ಎಂದು
ಹಿರಿಯಕ್ಕ ಕೇಳಿದಳು. * ಈಗ ಪೆಯಿಂಟಿಂಗ್ ಹಾಬಿಯನ್ನು ಹಿಡಿದಿದ್ದೀನಿ'
ಎಂದ ರಾಮಣ್ಣ. 'ಹೌದೇನೋ, ಹಾಗಾದರೆ ಏನು ಮಾಡಿದ್ದೀಯೋ ಅದನ್ನು
ತಂದು ತೋರಿಸು.' ಎಂದಳು. ಕೊಠಡಿಯೊಳಕ್ಕೆ ಹೋಗಿ ದೊಡ್ಡ ಸುರಳಿಯನ್ನು
ರಾಮಣ್ಣ ತಂದು ಅಕ್ಕನ ಕೈಲಿಟ್ಟ 'ಚಾಮುಂಡಿಬೆಟ್ಟದ ಚಿತ್ರ ಬಿಡಿಸಿದೀನಿ ನೋಡು'
ಎಂದ. ಅಕ್ಕ ಹಾಳೆಯನ್ನು ಬಿಡಿಸಿ ನೋಡಿದಳು ದೊಡ್ಡ ಹಾಳೆಯ ಮಧ್ಯದಲ್ಲಿ
ಕೆಂಪು ಶಾಯಿಯಲ್ಲಿ ಮೂರು ಚಿತ್ರಗಳನ್ನು ಸಣ್ಣದಾಗಿ ಮಾಡಿದ್ದ. ಅಷ್ಟೇ ! ಆ
ವೇಳೆಗೆ ಸರಿಯಾಗಿ ಭಾವ ಅಲ್ಲಿಗೆ ಬಂದ. ಬುಳುಬುಳು ಅಳಲು ಶುರುಮಾಡಿದ್ದ
ಹೆಂಡತಿಯನ್ನು ಸನ್ನೆಮಾಡಿ, ಅಡಿಗೆಮನೆಗೆ ಕಳಿಸಿದ. ಚಿತ್ರದ ವಿಷಯವನ್ನು
ಚರ್ಚಿಸಲು ಅವ ರಾಮಣ್ಣನೊಡನೆ ಕುಳಿತ.
{{gap}}'ಚಾಮುಂಡಿಬೆಟ್ಟದ ಚಿತ್ರವನ್ನೇನೋ ಬರೆದಿದ್ದಿ. ಆದರೆ ದೇವಸ್ಥಾನವೇ
ಇಲ್ಲವಲ್ಲೋ' ಎಂದ ಭಾವ. 'ಇಲ್ಲೇ ಅದರ ಗೋಪುರವನ್ನ ಬರೆದಿದ್ದೇನೆ.
ಮಂಜು ಬೀಳುತ್ತಿರಬಹುದು, ನಿಮಗೆ ಕಾಣಿಸಲಿಲ್ಲ' ಎಂದ ರಾಮಣ್ಣ. ಇದೇ
ತೆರನ ಮಾತು ಮುಂದುವರೆಯಿತು ರಾತ್ರಿ ಊಟ ಮಾಡುವ ತನಕ.
{{gap}}ಬೆಳಗಾಗುತ್ತಲೂ ಭಾವ ಮನೋವೈದ್ಯರಲ್ಲಿಗೆ ಹೋದರು. ರಾಮಣ್ಣನ
ಬೇನೆಯನ್ನು ವಿವರಿಸಿದರು. ವೈದ್ಯರೂ ಭಾವನ ಜತೆಗೆ ರಾಮಣ್ಣನ ಮನೆಗೆ
ಬಂದು, ಮಾತನಾಡಿದರು. ಹಿಂತಿರುಗುವಾಗ ಭಾವನನ್ನೂ ಕರೆದುಕೊಂಡು
ಹೋದರು. ವಿಷಯವನ್ನು ವಿವರಿಸಿದರು.
{{gap}}'ರಾಮಣ್ಣನ ವ್ಯಕ್ತಿತ್ವವು ಇನ್ನೂ ದೃಢಗೊಂಡಿಲ್ಲ. ಇನ್ನೂ ಹುಡುಗು ಹುಡುಗು
ಪ್ರವೃತ್ತಿಯಿದೆ. ತುಂಬಾ ಜಾಣ. ಪ್ರೊಬೇಷನರ್ ಪರೀಕ್ಷೆಗೆ ಕೂತಾಗ
ಹೈಪೋಮೇನಿಯಾ ಶುರುವಾಗಿತ್ತು. ಆದುದರಿಂದಲೇ ಅವ ಏನೇನೆಲ್ಲಾ
ಚಟುವಟಿಕೆಗಳಲ್ಲಿ ಮಗ್ನನಾಗುತ್ತಿದ್ದ. ಇತರರು ಹಾಗೆ ದುಡಿದಿದ್ದರೆ, ಸುಸ್ತುಬಡಿದು
ಹೋಗುತ್ತಿದ್ದರು. ಆದರೆ ಇವ ದಣಿಯುತ್ತಿರಲಿಲ್ಲ ಈ ಬೇನೆಯ ಕಾರಣದಿಂದ.
ತುಂಬಾ ಚೂಟಿಯಿಂದ, ಬಹಳ ಶ್ರಮವಹಿಸಿ, ಅವಿಶ್ರಾಂತವಾಗಿ ಕೆಲಸ
ಮಾಡುವವರಲ್ಲಿ, ಬಹು ಮಂದಿ ಹೈಪೋಮೇನಿಯಾ ಪ್ರವೃತ್ತಿಯವರೇ. ಆದರೆ
ಅದೇ ಹಂತದಲ್ಲಿ ಅದು ಉಳಿಯುತ್ತದೆ. ಹಾಗಾಗಿ ಅವರುಗಳು ಬಾಳಿನ ಉದ್ದಕ್ಕೂ<noinclude></noinclude>
fy07rz9hcex22j0h5t3f1jmhhwne6br
ಪುಟ:ಮನಮಂಥನ.pdf/೨೦೪
104
62651
316549
315535
2026-05-03T14:27:05Z
Shreesha Sharma
7840
/* Validated */
316549
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು}}{{Right|೧೮೫೫}}
ಅತಿಯಾಗಿ ದುಡಿಯುತ್ತಾರೆ. ಸ್ಪಷ್ಟವಾಗಿಯೂ ಇರುತ್ತಾರೆ. ಸಮಾಜದಲ್ಲಿ
ಹಿರಿಮೆಯನ್ನೂ ಮನ್ನಣೆಯನ್ನೂ ಗಳಿಸುತ್ತಾರೆ. ಆದರೆ ಇವರಲ್ಲಿ ವ್ಯಕ್ತಿತ್ವವು
Personality ದೃಢವಾಗಿ ಬೆಳೆದಿರುತ್ತದೆ. ಆದಕಾರಣ ಹೈಪೋಮೇನಿಯಾ
ಪ್ರವೃತ್ತಿಯು, ಬೇನೆಯ ಹಂತಕ್ಕೆ ಏರುವುದಿಲ್ಲ.
{{gap}}ರಾಮಣ್ಣನು ಬಾಲ್ಯದಿಂದಲೂ ಮುದ್ದುಮುದ್ದಾಡಿಸಿಕೊಂಡು ಬೆಳೆದವನು,
ತುಂಬಾ ಚೂಟಿಯ ಹುಡುಗನಾದುದರಿಂದ ಪರೀಕ್ಷೆಗಳಲ್ಲಿ ಉತ್ತಮ ವರ್ಗದಲ್ಲಿ
ಉತ್ತೀರ್ಣನಾಗುತ್ತಿದ್ದ. ಇದರಿಂದ ಮನೆಯವರ ಮುದ್ದು ಹೆಚ್ಚಾಯಿತು. ನನ್ನ
ಬಿಟ್ಟರೆ ಇನ್ನು ಯಾರೂ ಇಲ್ಲ ಎನ್ನುವ ಬಾಲ್ಯತನದ ಮಮಕಾರವು ಬೆಳೆಯಿತು.
ಇತರರು ಅಸೂಯೆ ಪಡುವಂತಹ ಪ್ರೊಬೇಷನರ್ಗಿರಿಯು ಲಭಿಸಿದಾಗ, ಬಾಲ್ಯತನದ
ಮಮಕಾರಕ್ಕೆ ಇಂಬು ಕೊಟ್ಟಂತಾಯಿತು. ಹೈಪೋಮೇನಿಯಾ ಪ್ರವೃತ್ತಿ ಇದ್ದ
ರಾಮಣ್ಣ, ಎಲ್ಲ ಚಟುವಟಿಕೆಗಳಲ್ಲೂ ಕೈಹಾಕತೊಡಗಿದ.
{{gap}}ಆದರೆ ಅವನ ವ್ಯಕ್ತಿತ್ವವು ಬಾಳ ಘರ್ಷಣೆಗಳಿಂದ ದೃಢವಾಗಿರಲಿಲ್ಲ. ಕಷ್ಟ,
ಸಂಕಟ, ಜವಾಬ್ದಾರಿ ಹೊಣೆ, ಅವಮಾನ, ಅನ್ಯಾಯ ಇವುಗಳು ತರುಣರಿಗೆ
ಸಾಕಷ್ಟು ಬರೆ ಹಾಕದೆ ಇದ್ದರೆ, ಅವರುಗಳ ವ್ಯಕ್ತಿತ್ವವು ದೃಢವಾಗುವುದಿಲ್ಲ.
ಮೃದುವಾಗಿಯೇ ಇರುತ್ತದೆ. ರಾಮಣ್ಣನ ಪರಿಸ್ಥಿತಿಯೂ ಇಂತಹುದೇನೇ.
{{gap}}ಆದಕಾರಣವೇ, ಅವ ಹೈಪೋಮೇನಿಯಾದ ಹಂತದಿಂದ ಮೇನಿಯಾ
ಹಂತಕ್ಕೆ ಏರಿದ್ದಾನೆ. ಆರೇಳು ತಿಂಗಳುಗಳ ಹಿಂದೆಯೇ, ಅವನ ನಡವಳಿಕೆಯು
ವಿಚಿತ್ರವಾದಾಗ, ಅವನ ಸ್ನೇಹಿತರು ಹಾಗೂ ಮನೆಯವರು ಗಮನಿಸಿದರು.
ಆದರೆ ಸೂಕ್ತವಾದ ಪರಿಹಾರ ಕ್ರಮವನ್ನು ಕೈಗೊಳ್ಳಲಿಲ್ಲ.
{{gap}}ಆ ಸ್ಥಿತಿಯಲ್ಲಿ ಸೂಕ್ತ ಚಿಕಿತ್ಸೆಯನ್ನು ಕೈಗೊಂಡಿದ್ದರೆ, ಮೇನಿಯಾ ಹಂತ
ಕ್ಕೇರುವುದನ್ನು ಬಹಳ ಸುಲಭವಾಗಿ ತಪ್ಪಿಸಬಹುದಾಗಿತ್ತು. ರಾಮಣ್ಣನನ್ನು ಕಂಡರೆ
ಸ್ನೇಹಿತರಿಗೆ ತುಂಬಾ ವಿಶ್ವಾಸ. ಅವನಿಗೆಂದು ಏನನ್ನಾದರೂ ಮಾಡಲು ಅವರು
ಸಿದ್ದ. ಆದರೆ ಈ ಬೇನೆಯ ವಿವರಗಳು ಅವರಿಗೆ ತಿಳಿಯದು. ತಿಳಿದಿದ್ದರೆ
ಅವರೇ ಚಿಕಿತ್ಸೆಯನ್ನು ಮಾಡುತ್ತಿದ್ದರು.
{{gap}}ನಿಮ್ಮ ಅತ್ತೆಯು ಹಳೆಯ ಕಾಲದ, ಏನನ್ನೂ ಅರಿಯದ ಹೆಂಗಸು.
ಇದ್ದೊಬ್ಬ ಚೂಟಿ ಮಗ ಮಾಡಿದ್ದೇ ಸರಿ ಎಂದು ನಂಬಿ ಬಾಳನ್ನು
ನಡಸುತ್ತಿರುವವಳು. ಈ ವಿಷಯಗಳು ಆಕೆಗಾದರೂ ತಿಳಿದಿದ್ದರೆ, ರಾಮಣ್ಣ ಈ
ಸ್ಥಿತಿಗೆ ಬರುತ್ತಿರಲಿಲ್ಲ. ಈಗಲೂ ರಾಮಣ್ಣನ ಬೇನೆಯು ಕೆಟ್ಟಮಟ್ಟಕ್ಕೆ ಇಳಿದಿಲ್ಲ.
ಕೆಲವು ತಿಂಗಳು ಚಿಕಿತ್ಸೆ ಮಾಡಿದರೆ, ಒಂದಾರು ತಿಂಗಳು ಅನ್ನಿ, ಅಷ್ಟರಲ್ಲಿ<noinclude></noinclude>
13kkolb6wvg9aqcjmenxn81qqq952vv
ಪುಟ:ಮನಮಂಥನ.pdf/೨೦೫
104
62652
316550
315536
2026-05-03T14:27:55Z
Shreesha Sharma
7840
/* Validated */
316550
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೮೬}}{{Right|ಮನಮಂಥನ}}
ಪೂರ್ಣವಾಗಿ ಗುಣಹೊಂದುತ್ತಾನೆ. ಇದನ್ನು ಧೈರ್ಯವಾಗಿ ಖಂಡಿತವಾಗಿ
ಹೇಳುತ್ತೇನೆ. ಓದಿದವರು, ಲೋಕಾನುಭವವುಳ್ಳವರು ನೀವು. ಏನಾದರೂ ಮಾಡಿ,
ರಾಮಣ್ಣನನ್ನು ನಮ್ಮ ಆಸ್ಪತ್ರೆಯಲ್ಲಿ ಕೆಲವು ವಾರಗಳಿರುವಂತೆ ಏರ್ಪಾಡು
ಮಾಡಬೇಕು. ನಿಮ್ಮ ಅತ್ತೆಯನ್ನು ಒಪ್ಪಿಸಬೇಕು. ಆಕೆ ಏನಾದರೂ ಮೊಂಡು
ಹಿಡಿದುಕೊಂಡು, ಮಾನಸಿಕ ಆರೋಗ್ಯದ ಆಸ್ಪತ್ರೆಗೆ ಸೇರಿಸುವುದಿಲ್ಲ ಎಂದು
ಹಳೆಯ ಕಂದಾಚಾರದ ಮೂಢ ಭಾವನೆಯಿಂದ ಹಠವನ್ನು ಹಿಡಿದರೆ, ರಾಮಣ್ಣನ
ಭವಿಷ್ಯವು ಅನಿಶ್ಚಿತವಾಗುತ್ತದೆ.
{{gap}}ಈಗ ಕೆಲವು ಔಷಧಿಗಳನ್ನು ವಿಧಾಯಿಸುತ್ತೇನೆ. ಒಂದೆರಡು ದಿನಗಳು
ಮನೆಯಲ್ಲಿ ರಾಮಣ್ಣ ಅವನ್ನು ಸೇವಿಸಲಿ, ಉದ್ವೇಗವು ಸ್ವಲ್ಪ ಕಡಿಮೆಯಾಗುತ್ತದೆ.
ಆ ವೇಳೆಗೆ ಅವರ ತಾಯಿಯೂ ಒಪ್ಪವಂತೆ ಮಾಡಿ, ಆಸ್ಪತ್ರೆಗೆ ಬಂದು ಸೇರಿಕೊಳ್ಳಲು
ಎಲ್ಲ ವ್ಯವಸ್ಥೆಯನ್ನೂ ಮಾಡುತ್ತೇನೆ. ಕೆಲವೇ ವಾರಗಳಲ್ಲಿ ಭಗವಂತನ ಕೃಪೆಯಿಂದ
ಸ್ವಾಸ್ಥ್ಯವನ್ನು ಪಡೆದ ರಾಮಣ್ಣನನ್ನು ಮನೆಗೆ ಕಳುಹಿಸಿಕೊಡುತ್ತೇನೆ.
{{gap}}ಇನ್ನೊಂದು ಮುಖ್ಯ ವಿಷಯ, ಮರೆತಿದ್ದೆ. ಅದನ್ನೂ ಹೇಳುತ್ತೇನೆ.
ಇನ್ಸೂರೆನ್ಸ್ ಕಚೇರಿಯ ಮುಖ್ಯಾಧಿಕಾರಿಗಳು ನನಗೆ ನಿಕಟ ಸ್ನೇಹಿತರು. ತುಂಬಾ
ವಿಶಾಲ ಮನಸ್ಸಿನವರು, ಆತ. ನನ್ನ ಮಾತಿನಲ್ಲಿ ಅವರಿಗೆ ಗೌರವವಿದೆ. ಕೃತಜ್ಞತಾ
ಭಾವನೆಯನ್ನೂ ನನ್ನ ವಿಷಯದಲ್ಲಿ ಹೊಂದಿದ್ದಾರೆ. ಅವರಿಗೆ ಹೇಳುತ್ತೇನೆ,
'ರಾಮಣ್ಣನಿಗೆ ಆರು ತಿಂಗಳು ರಜೆ ಕೊಡಿ ಎಂದು. ಆ ಅವಧಿಯಲ್ಲಿ ರಾಮಣ್ಣನನ್ನ
ಸ್ವಸ್ಥಪಡಿಸುವ ಹೊಣೆ ನನ್ನದು. ಅನಂತರ ಅವ ಆ ಕಚೇರಿಯಲ್ಲಿ, ಆಫೀಸರಾಗಿ
ಕೆಲಸವನ್ನು ಮಾಡಿಯೇ ಮಾಡುತ್ತಾನೆ. ಅರಿಯದ ಅವರೂ ಇವರೂ ಹೇಳಿದುದನ್ನು
ಕೇಳಿಕೊಂಡು, ಮಂತ್ರ ಮಾಟ ಮಾಡಿಸಹೋಗದೆ, ಸೂಕ್ತ ಚಿಕಿತ್ಸೆಯನ್ನು ಮಾಡಿಸಿ;
ದೇವರು ಒಳ್ಳೆಯದನ್ನು ಕರುಣಿಸುತ್ತಾನೆ.'
{{gap}}ಎದೆಯಾಳದಿಂದ ಈ ರೀತಿ ಮನೋವೈದ್ಯರು ನುಡಿದುದು, ಭಾವನ
ಮೇಲೆ ತುಂಬಾ ಪರಿಣಾಮವನ್ನುಂಟುಮಾಡಿತು. ಹೆಂಡತಿಯ ಸಹಾಯವನ್ನು
ಗಳಿಸಿ ಅತ್ತೆಯ ಒಪ್ಪಿಗೆಯನ್ನು ಪಡೆದು, ರಾಮಣ್ಣನನ್ನು ಆರೆಂಟು ವಾರ ಆಸ್ಪತ್ರೆಯಲ್ಲಿ
ಇರಿಸಲಾಯಿತು. ಶ್ರದ್ಧೆಯಿಂದ ಮನೋವೈದ್ಯರು ನಡೆಸಿದ ಚಿಕಿತ್ಸೆಯು ಘೋರವಾಗಿ
ಕಂಡರೂ ರಾಮಣ್ಣನ್ನು ಗುಣಪಡಿಸಿತು.
{{gap}}ಈಗವ, ಇನ್ಸೂರೆನ್ಸ್ ಕಚೇರಿಯ ಮುಖ್ಯಸ್ಥನಾಗಿದ್ದಾನೆ. ಇಪ್ಪತ್ತು ವರ್ಷಗಳ
ಸಫಲ ಸೇವೆಯನ್ನು ಸಲ್ಲಿಸಿ, ಆ ಪದವಿಯನ್ನು ಪಡೆದಿದ್ದಾನೆ.<noinclude></noinclude>
48xs9xkklolu73v6135jfz51ym8afsl
ಪುಟ:ಮನಮಂಥನ.pdf/೨೦೬
104
62653
316551
315537
2026-05-03T14:28:51Z
Shreesha Sharma
7840
/* Validated */
316551
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು}}{{Right|೧೮೭}}
ಆದುದರಿಂದ, ಹೈಪೊಮೇನಿಯಾದ ವಿವರಗಳು ಸಮಾಜದಲ್ಲಿರುವವರಿಗೆ
ತಿಳಿದಿರಬೇಕು. ಅವರ ನೆಂಟರಿಷ್ಟರಿಗೆ ಈ ತೆರನ ಮಾನಸಿಕ ಉದ್ರೇಕವಾದಾಗ,
ಮೊದಮೊದಲ ಹಂತದಲ್ಲಿ ಗುರುತಿಸಲು ಆಗ ಸಾಧ್ಯವಾಗುತ್ತದೆ. ಹೈಪೋಮೇನಿ
ಯಾವು, ಮೇನಿಯಾ ಆಗದಂತೆ ಚಿಕಿತ್ಸೆಯನ್ನು ಮಾಡಲು ಸಾಧ್ಯ.
'''ನಿಂಗನ ಮೇನಿಯಾ'''
{{gap}}ಸ್ನೇಹಿತರೊಂದಿಗೆ ಸಾಹುಕಾರ್ ಲಕ್ಕಣ್ಣನವರು ಹಜಾರದಲ್ಲಿ ಮಾತನಾಡುತ್ತ
ಕುಳಿತಿದ್ದರು. ಹದಿನೈದು ವರ್ಷದ ಅವರ ಮಗ ನಿಂಗ, ಹೊರಗೆ ಹೋಗಿದ್ದವನು
ಮನೆಗೆ ಬಂದ. ಹಜಾರದಲ್ಲಿ ಎಲ್ಲರೂ ಕುಳಿತಿರುವುದನ್ನು ಕಂಡು ತಾನೂ ಅಲ್ಲಿ
ಕುಳಿತ. ಜಮೀನಿನ ವಿಚಾರದಲ್ಲಿ ಹೀಗೆ ಮಾಡಿದರೆ ಚೆನ್ನ ಎಂದು ಲಕ್ಕಣ್ಣನವರು
ಸ್ನೇಹಿತರಿಗೆ ಹೇಳಿದರು. ಆ ಸ್ನೇಹಿತರು ಉತ್ತರ ಕೊಡುವುದಕ್ಕೆ ಮುಂಚೆಯೇ
ನಿಂಗ ಏನನ್ನೋ ಹೇಳಲು ಶುರು ಮಾಡಿದ. ಲಕ್ಕಣ್ಣನವರಿಗೆ ರೇಗಿತು. ನಿಂಗೇನು
ಬುದ್ಧಿಗಿದ್ದಿ ಇಲ್ವೇನೋ, ಮಗಾ ! ದೊಡ್ಡವರು ಮಾತಾಡ್ತಿರುವಾಗ, ಚಿಕ್ಕವರು
ಬಾಯಿ ಹಾಕಬಾರದು ಅಂತ ಎಷ್ಟು ಸಲ ಹೇಳಿಲ್ಲ. ಎದ್ದು ಹೋಗು' ಎಂದು
ಸಿಟ್ಟಿನಿಂದ ಗದರಿಸಿದರು. ಮುಖವನ್ನು ಚಿಕ್ಕದು ಮಾಡಿಕೊಂಡು ನಿಂಗ
ಮನೆಯೊಳಕ್ಕೆ ಬಿರಬಿರನೆ ಹೊರಟುಹೋದ.
{{gap}}ಮಧ್ಯಾಹ್ನದ ಊಟಕ್ಕೆ ಮನೆಯವರೆಲ್ಲರೂ ಕುಳಿತಿದ್ದರು. ಅನ್ನವನ್ನು
ಬಡಿಸಾಗಿತ್ತು. ಎಸರನ್ನು ಬಡಿಸಲು ಸ್ವಲ್ಪ ತಡವಾಗಿತ್ತು. ಲಕ್ಕಣ್ಣನವರೂ ಊಟಕ್ಕೆ
ಕುಳಿತಿದ್ದರು. ಅವರಿದ್ದಾಗ ಮಕ್ಕಳು ಹೆಂಗಸರು ಮಾತಾಡುವುದು ಅಪರೂಪ.
ಸಾಹುಕಾರರು ಮಾತನಾಡಿಸಿದರೆ, ಉತ್ತರಿಸುವರೇ ವಿನಾ ಮಿಕ್ಕಂತೆ, ಸಾಮಾನ್ಯವಾಗಿ
ಮಾತೆತ್ತುತ್ತಿರಲಿಲ್ಲ. ಆದರೆ ಆ ಮಧ್ಯಾಹ್ನ ನಿಂಗ “ಎಸರು ತಾಮ್' 'ಎಸರು ತಾ'
ಎಂದು ಎರಡು ಮೂರು ಸಲ ಗಟ್ಟಿಯಾಗಿ ಕೂಗಿದ. ಇದೇನು ಇವತ್ತು, ನಿಂಗ
ಹೀಗಾಡ್ತಾನೆ ; ಅಪ್ಪ ಇರುವುದನ್ನೂ ಗಮನಿಸಿದಂತಿಲ್ಲ' ಎಂದು ಮನೆಯವರೆಲ್ಲರೂ
ನಿಂಗನನ್ನೇ ದಿಟ್ಟಿಸಿ ನೋಡತೊಡಗಿದರು. ದೊಡ್ಡವರೆದುರಿಗೆ ಯಾವಾಗಲೂ
ತೋರಿಸುತ್ತಿದ್ದ ಗೌರವ, ಮರ್ಯಾದೆ, ಮತ್ತು ತುಸು ಭಯ, ಇವೆಲ್ಲವೂ ನಿಂಗನಿಂದ
ಈಗ ಮರೆಯಲ್ಪಟ್ಟಂತಿತ್ತು.
{{gap}}ಸಂಜೆ ಮುಂದೆ ಅಕ್ಕನ ಜತೆಯಲ್ಲಿ ಪಗಡೆಯಾಡುತ್ತ ನಿಂಗ ಕುಳಿತಿದ್ದ.
ಅಕ್ಕ ಆಡಿದ ಒಂದು ಮಾತಿಗೆ ಹತ್ತು ಮಾತುಗಳನ್ನು ಬಡ ಬಡ ಅಂತ
ಆಡತೊಡಗಿದ. “ನಿಂಗೇನು ಬಂತೋ, ನಿಂಗ ; ಆಡಿದ ಮಾತಿಗೆ ಯೋಚಿಸಿ<noinclude></noinclude>
80nucf3tvbb3r09wt07osxpfq16i1y8
ಪುಟ:ಮನಮಂಥನ.pdf/೨೦೭
104
62654
316552
315538
2026-05-03T14:29:51Z
Shreesha Sharma
7840
/* Validated */
316552
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೮೮}}{{Right|ಮನಮಂಥನ}}
ಉತ್ತರವನ್ನು ಕೊಡುತ್ತಿದ್ದೆ. ಈಗೀಗ ಸರಸರಾಂತ ಎಷ್ಟು ಮಾತಾಡ್ತೀಯಪ್ಪಾ !'
ಎಂದು ಅಕ್ಕ ಅಚ್ಚರಿಯಿಂದ ನುಡಿದಳು. ಕಿರಿಯ ತಮ್ಮನ ಮುಖವನ್ನು ದಿಟ್ಟಿಸಿ
ನೋಡಿದಳು. ತಮ್ಮನ ಮುಖದಲ್ಲಿ ಎಂತದೋ ಉದ್ವೇಗವಿದ್ದುದನ್ನು ಕಂಡಳು.
ಎಷ್ಟು ಕಳೆಯಾಗಿದ್ದಾನೆ ಎಂದುಕೊಂಡಳು.
{{gap}}ಕಾಲೇಜಿನಲ್ಲಿ ಆಟದ ಮೈದಾನದಲ್ಲಿ ಸ್ನೇಹಿತರೊಂದಿಗೆ ಹರಟೆ ಕೊಚ್ಚುತ್ತಿದ್ದ.
ಕ್ರಿಕೆಟ್ ಟೆಸ್ಟಿನ ಮಾತು ಬಂತು. ಇನ್ನೊಬ್ಬರಿಗೆ ಮಾತನಾಡಲು ಅವಕಾಶವನ್ನು
ಕೊಡದೆ, ಯಾವುಯಾವುದೋ ಟೆಸ್ಟುಗಳ ವಿವರಗಳನ್ನು ನಿಂಗ ವರದಿ
ಮಾಡಗೊಡಗಿದ. ಅಡೆತಡೆಯಿಲ್ಲದೆ ಬಡಬಡಿಸಿದ. 'ಚೂಟಿಯಾಗೇನೋ
ಮಾತಾಡ್ತಿಪ್ಪ, ಮಾತಿಗೆ ಮಾತು ಪೋಣಿಸುತ್ತೀ. ಆದರೆ ಏನು ಹೇಳಬೇಕು
ಅಂತಿದೆ, ಅದು ತಿಳಿಯವಲ್ಲದಲ್ಲಾ, ಕ್ರಿಕೆಟ್ ಆಟದಲ್ಲಿ ಧ್ಯಾನ್ಸಿಂಗ್ ಎಲ್ಲಿ
ನುಸುಳಿಕೊಂಡು ಬಂದ ?' ಎಂದು ಜತೆಯಲ್ಲಿದ್ದವ ಹೇಳಿದ.
{{gap}}ಹಿಂದೆಂದೂ ನಿಂಗ ಹೀಗಾಡುತ್ತಿರಲಿಲ್ಲ. ಕಳೆದ ೪-೬ ವಾರಗಳಿಂದ
ಅವನ ನಡವಳಿಕೆಯಲ್ಲಿ ವ್ಯತ್ಯಾಸವು ಎದ್ದು ಕಾಣುತ್ತಿತ್ತು. ಮುಖವು ಸದಾ ಹಿಂಡಿ
ಕೊಂಡಂತೆಯೇ ಇರುತ್ತಿತ್ತು. ಹುಬ್ಬುಗಂಟಿಕ್ಕಿಕೊಂಡಿರುತ್ತಿತ್ತು. ಇತ್ತಿಂದೀಚೆಗೆ,
ಕಾರಣವಿರಲಿ ಇಲ್ಲದಿರಲಿ, ಸಿಡುಕಲಾರಂಭಿಸಿದ್ದ. ಮಾತುಗಳ ಅವಸರವನ್ನು
ನೋಡಿದರೆ, ಅವನ ತಲೆಯಲ್ಲಿ ಯೋಚನೆಗಳು ಅತಿ ರಭಸದಿಂದ ಮೂಡುತ್ತಿವೆ.
ಅವಕ್ಕೆ ಶಬ್ದಗಳ ರೂಪು ಕೊಡಲು ಅವ ತುಂಬಾ ಆತುರ ಪಡುತ್ತಿದ್ದಾನೆ,
ಎನಿಸುತ್ತಿತ್ತು. ಮಾತು ಮಾತಿಗೆ ಸಂಬಂಧವಿದ್ದಂತೆ ಕಂಡರೂ, ಒಟ್ಟು ಮಾತಿನ
ಅರ್ಥವೇನು ಎಂಬುದು ಸ್ಪಷ್ಟವಾಗುತ್ತಿರಲಿಲ್ಲ. ತಾನಾಡುತ್ತಿರುವುದು ಇತರರಿಗೆ
ಅರ್ಥವಾಗುತ್ತಿಲ್ಲ ಎನ್ನುವುದು ಅವನಿಗೆ ತಿಳಿದೇ ಇರಲಿಲ್ಲ. ಅಂದರೆ ವಾಸ್ತವಿಕ
ಪರಿಸ್ಥಿತಿಯ ಅರಿವೇ ಅವನಿಗಿದ್ದಂತೆ ಕಾಣಿಸುತ್ತಿರಲಿಲ್ಲ. ಊಹಾಲೋಕದಲ್ಲೇ
ವಿಹರಿಸುತ್ತಿದ್ದಂತೆ ಅನಿಸುತ್ತಿತ್ತು.
{{gap}}ವಾಸ್ತವಿಕ ಪರಿಸ್ಥಿತಿಯ ಅರಿವು ಮಾಯವಾಗಿ, ಮಾನಸಿಕ ವಿಕಲ್ಪವಾಗುವಾಗ,
ಕಾಣಬರುವ ಚಿಹ್ನೆಗಳನ್ನು ನಿಂಗನ ನಡವಳಿಕೆಯು ಸ್ಪಷ್ಟವಾಗಿ ತೋರಿಸುತ್ತಿತ್ತು.
೧. ದೈನಂದಿನ ನಡವಳಿಕೆಯಲ್ಲಿ ತೀವ್ರ ಬದಲಾವಣೆಯಾಗುವುದು. ೨. ಮುಂಗೋಪ
ಮತ್ತು ಸಿಡುಕು ಹೆಚ್ಚಾಗುವುದು. (Irritable.) ೩. ಬಾಲ್ಯದಿಂದಲೂ
ರೂಢಿಸಿಕೊಂಡು ಬಂದ, ಮನಸ್ಸಿನ ಮೇಲಿನ ಹತೋಟಿಯು ಸಡಿಲಗೊಳ್ಳುವುದು:
(Lack of Inhibition), ೪, ಅಲೆಅಲೆಯಾಗಿ ಚಿಮ್ಮುವ ಯೋಚನೆಗಳು, (Flight<noinclude></noinclude>
5jyq1dstp3mot3taou2y9nep5at0lem
ಪುಟ:ಮನಮಂಥನ.pdf/೨೦೮
104
62655
316559
315539
2026-05-03T14:37:39Z
Shreesha Sharma
7840
/* Validated */
316559
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು}}{{Right|೧೮೯}}
ofIdeas). ೫. ಉದ್ದೇಶವೇ ಇಲ್ಲದೆ, ಮಾತನಾಡುವುದು ; ಆಡಿದ್ದನ್ನೇ ಪುನಃ
ಪುನಃ ಆಡುವುದು (Unproductive and Repetitive Talk).
{{gap}}ಈ ಚಿಹ್ನೆಗಳೆಲ್ಲವೂ 'ಮ್ಯಾನಿಕ್ ಡಿಪ್ರೆಸಿವ್ ಸೈಕೋಸಿಸ್ ಎನ್ನುವ ಬೇನೆಯ
ಮೊದಮೊದಲ ಸೂಚನೆಗಳು, ಸೂಕ್ತ ಚಿಕಿತ್ಸೆಯನ್ನು ಈ ಹಂತದಲ್ಲಿ ನೀಡದಿದ್ದರೆ,
ಬೇನೆಯು ಉಗ್ರವಾಗುತ್ತದೆ. Acute Mania ಉಂಟಾಗುತ್ತದೆ.
{{gap}}ಇಂತಹ ಸ್ಥಿತಿಯಲ್ಲಿರುವ ರೋಗಿಯನ್ನು ಹೆದರಿಸಿ ಬೆದರಿಸಿ ಬುದ್ಧಿ
ಕಲಿಸುತ್ತೇವೆ ; ಶಿಕ್ಷೆಯನ್ನು ವಿಧಿಸಿ ಸರಿಪಡಿಸುತ್ತೇವೆ ; ದಂಡಂ ದಶಗುಣಂ
ಭವೇತ್ ಅಲ್ಲವೇ ? ಎಂದು ಅಜ್ಞಾನದಿಂದ ಮನೆಯವರು ನಡೆದುಕೊಂಡರೆ,
ರೋಗಿಯ ಮನಸ್ಸು ಮುದುರಿಕೊಂಡಂತಾಗಿ, ಮೊಂಡು ಹಾಕಿಕೊಳ್ಳುತ್ತದೆ.
{{gap}}ಹರಿದಾಡುತ್ತಿರುವ ಸಾವಿರಕಾಲನ್ನು ಒಂದು ಹಂಚಿಕಡ್ಡಿಯಿಂದ ತಟ್ಟಂತ
ಚುಚ್ಚಿದರೆ, ಸುರುಳಿ ಸುತ್ತಿಕೊಂಡು ಬಿಡುತ್ತೆ, ಅದು. ಮುಂದಕ್ಕೂ ಹೋಗುವುದಿಲ್ಲ,
ಹಿಂದಕ್ಕೂ ಬರುವುದಿಲ್ಲ. ಅಪಾಯವು ಒದಗಬಹುದು ಎನಿಸಿದಾಗ ಸ್ವಸಂರಕ್ಷಣೆಗೆ
ಹಾಗದು ಸುರುಳಿ ಸುತ್ತಿಕೊಂಡು ಸತ್ತಂತೆ ಇದ್ದು ಬಿಡುತ್ತೆ.
{{gap}}ಮನಸ್ಪೂ ಹಾಗೆಯೇ, ಒಂದು ದೃಷ್ಟಿಯಲ್ಲಿ, ರೋಗಿಯ ಆಳಮನಸ್ಸಿನಲ್ಲಿ
ಭಯಂಕರವಾದ ವಿಪ್ಲವವು ಆಗುತ್ತಿರುತ್ತದೆ. ಬುದ್ಧಿಯ ಬುಡವನ್ನು ಅದು ಅಲ್ಲಾಡಿಸಿ
ಸಡಿಲಿಸುತ್ತಿರುತ್ತದೆ. ಯಾಕೆ ಹೀಗಾಗುತ್ತಿದೆ ಎನ್ನುವುದು ರೋಗಿಗೆ ತಿಳಿಯುವುದಿಲ್ಲ.
ಆದಕಾರಣ ಇದಕ್ಕೇನು ಮಾಡಬೇಕು ಎನ್ನುವುದು ತಿಳಿದಿರುವುದಿಲ್ಲ. ಆಳಮನಸ್ಸಿನ
ಭಾರೀ ವಿಪ್ಲವದಿಂದ ರೋಗಿಯು ತುಂಬಾ ಧೃತಿಗೆಟ್ಟಿರುತ್ತಾನೆ. ಅವನಿಗೆ ಆಗ
ನೆರೆಹೊರೆಯವರ, ಮನೆಯವರ, ಸಹಾನುಭೂತಿಯೂ, ಆದರದ ಅನುಕಂಪವೂ
ಅತ್ಯಗತ್ಯ. ಬದಲು ಬೈದು ಶಿಕ್ಷಿಸತೊಡಗಿದರೆ, ಚುಚ್ಚಲ್ಪಟ್ಟ ಸಾವಿರಕಾಲಿನಂತೆ,
ತೋರುಮನಸ್ಸು ಮುದುಡಿಕೊಳ್ಳುತ್ತದೆ. ಮುಂದೂ ಹೋಗಲಾರದು, ಹಿಂದಕ್ಕೂ
ಸರಿಯಲಾರದು. ಇದ್ದಲ್ಲೇ ಇದ್ದು, ತನ್ನಲ್ಲೇ ತಾನು ಎಂಬಂತಾಗಿ, ಹೊರಗಿರುವ
ಪರಿಸರವನ್ನು ಮರೆಯತೊಡಗುತ್ತದೆ. ವಾಸ್ತವಿಕತೆಯ ಅರಿವು ಆಗ
ನಾಶವಾದಂತೆಯೇ. ತನ್ನ ಊಹಾಲೋಕದಲ್ಲಿ, ಭ್ರಮಾ ಪ್ರಪಂಚದಲ್ಲಿ ತಾನೇ
ತಾನಾಗಿ ವಿಹರಿಸತೊಡಗುತ್ತಾನೆ. ಹೆಚ್ಚು ಬೆಪ್ಪು ಶಿವಲೀಲೆಗಳು ಹೀಗೆಯೇ
ಅವತರಿಸುವುದು.
{{gap}}ಮನ ಮಥನವಾಗುವಾಗ, ಮೊಸರು ಕಡೆದು ಬೆಣ್ಣೆಯನ್ನು ತೆಗೆಯುವ
ಸಾಮತಿಯನ್ನು ಬಳಸಿದ್ದೆವು. ಒಬ್ಬೆಷನಲ್ ಬೇನೆಗಳಲ್ಲಿ, ಕಡೆಯುವ ಹಗ್ಗದ,<noinclude></noinclude>
1vlzg81p9gr13xxxvkrujbsbovl1yg3
ಪುಟ:ಮನಮಂಥನ.pdf/೨೦೯
104
62656
316558
315540
2026-05-03T14:35:54Z
Shreesha Sharma
7840
/* Validated */
316558
proofread-page
text/x-wiki
<noinclude><pagequality level="4" user="Shreesha Sharma" /></noinclude>
{{Left|೧೯೦}}{{Right|ಮನಮಂಥನ}}
ಒಂದು ಕಡೆಯಲ್ಲಿ ಕೆಲವು ಎಳೆಗಳು ಕಿತ್ತುಹೋಗಿರುತ್ತವೆ ಎಂದೆವು. ಅದೇ
ಸಾಮತಿಯನ್ನು ಬಳಸಿಕೊಂಡು, ಮ್ಯಾನಿಕ್ ಡಿಪ್ರೆಸಿವ್ ಸೈಕೋಸಿಸ್ನಲ್ಲಿ,
ಮೊಸರಿರುವ ಮಡಕೆಯೇ ಬಿರುಕು ಬಿಟ್ಟಿರುತ್ತದೆ ಎನ್ನಬಹುದು. ವಾಸ್ತವಿಕ
ಪರಿಸ್ಥಿತಿಯ ಅರಿವು ಮನಸ್ಸಿನ ಮಡಕೆಯಿದ್ದಂತೆ. ಅದರಲ್ಲಿರುವ ಮೊಸರು
ಎಂದರೆ ಆಜನ್ಮ ಬಳುವಳಿಯಾಗಿ ಬಂದ ಅನುಭವ ಮತ್ತು ಒತ್ತಡಗಳು ಈ
ಜನ್ಮದಲ್ಲಿ ಕಲಿತುಕೊಂಡದು, ಮತ್ತು ಸ್ಮರಣೆಗಳು ; ಇದನ್ನು ಮಥಿಸಿ ನಿರ್ಣಯಗಳು
ಎಂಬ ಬೆಣ್ಣೆಯನ್ನು ತೆಗೆಯಬೇಕು.
{{gap}}ಮಡಕೆಯು ಬಿರುಕು ಬಿಟ್ಟಿರುವಂತಹ ಭಯಂಕರ ಸ್ಥಿತಿಯಲ್ಲಿ, ಇಷ್ಟರು,
ನೆಂಟರು, ಬೇಕಾದವರು ಎನಿಸಿಕೊಂಡವರು ಬೆದರಿಸಿದರೆ, ಶಿಕ್ಷೆಯನ್ನು ಹೂಡಿದರೆ
ಅಂಜಿದವರ ಮೇಲೆ ಕಪ್ಪೆಯನ್ನು ಎಸೆದಂತಾಗುತ್ತದೆ.
{{gap}}ಮಡಕೆಯ ಬಿರುಕನ್ನು ಸುಫರ್ದು ಮಾಡಬೇಕಾದರೆ, ಸಹಾನುಭೂತಿ
ಮತ್ತು ಅದರಗಳು ಅತ್ಯಗತ್ಯ. ಆದರವನ್ನು ಮನೆಯವರು ತೋರಿಸಬೇಕು ;
ಪ್ರದರ್ಶಿಸಬೇಕು. ರೋಗಿಗೆ ಇದು ತಿಳಿಯಿತು, ತಕ್ಕ ಪ್ರತಿಕ್ರಿಯೆಯನ್ನು ಅವ
ತತ್ಕ್ಷಣ ಹೂಡಲೇಬೇಕು ಎಂದು ಆಸೆ ಪಡಬಾರದು. ತನ್ನವರ ಆದರದ
ಪ್ರದರ್ಶನವು ರೋಗಿಯ ಮೇಲೆ ಪರಿಣಾಮವನ್ನು ಕಿಂಚಿತ್ತಾದರೂ ಬೀರಿಯೇ
ಬೀರುತ್ತದೆ. ಆದರೆ ಬಿರುಕು ಸರಿಹೋಗಲು ಕಾಲಾವಧಿಯು ಬೇಕು. ತಾಳ್ಮೆಯು
ಅತ್ಯಗತ್ಯ. ಹೀಗನ್ನುವುದು ವೈದ್ಯರಿಗೆ ಸುಲಭ, ರೋಗಿಯ ಮನೆಯವರು ತುಂಬಾ
ಕಾತರರಾಗಿರುತ್ತಾರೆ. ರೋಗಿಯ ನಡವಳಿಕೆಯಿಂದಾಗಿ, ಬೇಸರವೂ ಬಂದಿರುತ್ತದೆ.
ಬಹು ಪಾಲು ಅವರುಗಳ ನಿದ್ರೆ ಮತ್ತು ಆಹಾರಗಳಲ್ಲಿ ಖೋತಾ ಆಗಿರುತ್ತದೆ.
ಅಂತಹವರಿಗೆ ತಾಳ್ಮೆಯನ್ನು ವಹಿಸುವುದು ಸುಲಭವಲ್ಲ. ಎಷ್ಟೇ ಒಲವಿನ
ಮಗನಾದರೂ, ಹೀಗಿರುವ ಬದಲು ಸತ್ತರೆ ಚೆನ್ನ ಎಂದು ಉದ್ವೇಗದಿಂದ
ಅನ್ನುವಂತಾಗುತ್ತದೆ. ಆದರೆ ಕೆಲವು ತಿಂಗಳುಗಳಲ್ಲಿ ಖಂಡಿತವಾಗಿಯೂ
ಗುಣವಾಗುತ್ತದೆ ಎಂಬುವುದು ತಿಳಿದಿದ್ದರೆ, ಆಗ ತಾಳ್ಮೆಯನ್ನು ವಹಿಸಿ,
ಸಹಾನುಭೂತಿಯನ್ನು ಮತ್ತು ಆದರವನ್ನೂ ಪ್ರದರ್ಶಿಸಲು ಸುಲಭವಾಗುತ್ತದೆ.
{{gap}}ಆದಕಾರಣ, ಸಮಾಜದಲ್ಲಿ ಈ ತೆರನ ಜ್ಞಾನ ಪ್ರಚಾರವು ಅತ್ಯಂತ ಅವಶ್ಯಕ.
'''ಕುಮುದಳ ಡಿಪ್ರೆಷನ್'''
{{gap}}ಇಪ್ಪತ್ತಾರು ವರ್ಷಗಳಾಗಿತ್ತು ಕುಮುದಳಿಗೆ. ಆರೇಳು ವರ್ಷಗಳ ಹಿಂದೆಯೇ
ಅವಳ ವಿದ್ಯಾಭ್ಯಾಸವನ್ನು ನಿಲ್ಲಿಸಿದ್ದರು. 'ಬಿ. ಎ. ಅಂತ ಅನ್ನಿಸಿಕೊಂಡರೆ ಎಂ.ಎ.<noinclude></noinclude>
g24zxlm143oz9ohjyxrqkki2ssrrd2x
ಪುಟ:ಮನಮಂಥನ.pdf/೨೧೦
104
62657
316557
315541
2026-05-03T14:34:59Z
Shreesha Sharma
7840
/* Validated */
316557
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು}}{{Right|೧೯೧}}
ಆದ ಗಂಡನೇ ಸಿಗಬೇಕು. ಕೇವಲ ಪಿ. ಯು. ಸಿ. ಆಗಿದ್ದರೆ ಯಾರಾದರೂ
ಮದುವೆಯನ್ನು ಮಾಡಿಕೊಳ್ಳಬಹುದು' ಎಂದು ತಾಯ್ತಂದೆಯರ ನಂಬಿಕೆ.
ಆದಕಾರಣ ಆಕೆ ಮನೆಯಲ್ಲಿ ಕೂತಿದ್ದಾಳೆ. ಬೆಳೆದ ಹೆಣ್ಣು, ಹೊರಗಡೆ ತುಂಬಾ
ಅಡ್ಡಾಡಬಾರದು.
{{gap}}ಎರಡು ವರ್ಷಗಳ ಹಿಂದೆ ಇರಬೇಕು ; ನಿದ್ರೆಯು ಸರಿಯಾಗಿ ಬರುವುದಿಲ್ಲ.
ಎಂದು ಅವಳು ಹೇಳತೊಡಗಿದ್ದು, 'ಕೆಟ್ಟ ಕೆಟ್ಟ ಕತೆ ಪುಸ್ತಕಗಳನ್ನು ಸದಾ ಓದುವ
ಚಾಳಿಯನ್ನು ಬಿಟ್ಟು, ಮೈಬಗ್ಗಿಸಿ ಮನೆ ಕೆಲಸವನ್ನು ಮಾಡಿದರೆ, ನಿದ್ರೆಯೂ
ಬರುತ್ತೆ, ಮುಂದೆ ಗಂಡನ ಮನೆಯಲ್ಲಿ ಒಳ್ಳೆಯ ಹೆಸರನ್ನೂ ಪಡೆಯಬಹುದು
ಎಂದು ಅಮ್ಮ ಅಲವತ್ತುಕೊಂಡಳು. ನಿದ್ರೆ ಬರುಲ್ಲ ಅಂತ ಆನಂತರ ಕುಮುದ
ಹೇಳಲಿಲ್ಲ. ರಾತ್ರಿಯೆಲ್ಲಾ ಕಂಬಳಿಯ ಮುಸುಕು ಹಾಕಿಕೊಂಡು ಜಾಗರಣೆ
ಮಾಡುತ್ತಿದ್ದಳು. ಮಧ್ಯಾಹ್ನದ ಹೊತ್ತಿನಲ್ಲಿ ಪುಸ್ತಕವನ್ನು ಹಿಡಿದು ಮೂಲೆಯಲ್ಲಿ
ಕೂರಲಾರಂಭಿಸಿದಳು. ಅರ್ಧ ಗಂಟೆಯಾದರೂ ಪುಸ್ತಕದ ಹಾಳೆಯನ್ನು ಮುಂದಕ್ಕೆ
ಮಗುಚುತ್ತಿರಲಿಲ್ಲ. 'ಬಟ್ಟೆಯನ್ನಾದರೂ ಒಗೆಯಬಾರದೇನೇ' ಎಂದು ಅಮ್ಮ
ರೇಗಿದಾಗ, ಹುಬ್ಬು ಗಂಟಿಕ್ಕಿಕೊಂಡು ಬಟ್ಟೆ ಒಗೆಯುವುದಕ್ಕೆ ಹೋಗುತ್ತಿದ್ದಳು.
ಬಟ್ಟೆಗಳಿಗೆ ಸೋಪು ಹಚ್ಚಲು ಅರ್ಧ ಗಂಟೆ ತೆಗೆದುಕೊಳ್ಳುತ್ತಿದ್ದಳು. ಇದನ್ನು
ಕಂಡ ಅಮ್ಮ ನಿನಗೆ ಕೆಲಸ ಹೇಳುವುದೂ ಒಂದೇ, ಸೂಳೆ ಕೈಲಿ ಜೋಳ
ಕುಟ್ಟಿಸುವುದೂ ಒಂದೇ ; ಬಾ ಈ ಕಡೆಗೆ ನಾನೇ ಬೇಗ ಮುಗಿಸ್ತೀನಿ, ಮುಂದೆ
ಹ್ಯಾಗೆ ಬಾಳೀಯೆ ನೀನು' ಎಂದು ಸಿಡುಕುತ್ತಿದ್ದಳು. ಹಲವಾರು ಬಾರಿ ಹೀಗಾದ
ಮೇಲೆ, ಒಮ್ಮೆ ಪಾತ್ರೆಗಳನ್ನು ನಿಧಾನವಾಗಿ ಕುಮುದ ಗಲಬರಿಸುತ್ತಿದ್ದಾಗ, ಅಮ್ಮ
ಯಥಾ ಪ್ರಕಾರ ಟೀಕಿಸಿದಳು. ಕುಮುದ ರೇಗಿದಳು. ಕೈಲಿದ್ದ ಪಾತ್ರೆಯನ್ನು
ಅಮ್ಮನ ಮುಖಕ್ಕೆ ಎಸೆದು, ತನ್ನ ಕೊಠಡಿಗೆ ಹೋಗಿ ಬಾಗಿಲು ಮುಚ್ಚಿಕೊಂಡಳು.
ಅವತ್ತಿನಿಂದ ಹುಬ್ಬುಗಂಟು ಅವಳ ಮೇಲೆ ಶಾಶ್ವತವಾಯಿತು. ಸಂಜೆಯ ಹೊತ್ತಿಗೆ
ಅಪ್ಪ ಮನೆಗೆ ಹಿಂದಿರುಗಿದರು. ವಿಷಯವನ್ನೆಲ್ಲಾ ಹೆಂಡತಿಯಿಂದ ತಿಳಿದುಕೊಂಡರು.
ಕುಮುದನ ಕೊಠಡಿಯ ಬಳಿಗೆ ಹೋಗಿ ತುಂಬಾ ಆದರದ ಮಾತುಗಳಿಂದ ;
'ಬಾಗಿಲು ತೆಗಿ ಕುಮುದ ; ನಿಮ್ಮಮ್ಮನ ಜಾಯಮಾನ ಗೊತ್ತಿಲ್ಲವೇ ಲೊಟಕದೇ
ಇದ್ದರೆ ಉಂಡನ್ನ ಅವಳಿಗೆ ಮೈ ಹತ್ತುಲ್ಲ. ಎಲ್ಲಿ ಬಾಗಿಲು ತೆಗೆ' ಎಂದರು.
ಕೊಠಡಿಯ ಬಾಗಿಲನ್ನು ಕುಮುದ ತೆಗೆದಳು. ಹೋಗಿ ಮಂಚದ ಮೇಲೆ
ಬಿಮ್ಮಂತ ಕೂತಳು. ಧುಮುಗುಡುತ್ತಿತ್ತು ಅವಳ ಮುಖ. ಹತ್ತು ಹದಿನೈದು
ನಿಮಿಷಗಳು ಅಪ್ಪ ತುಂಬಾ ಪ್ರಯತ್ನಪಟ್ಟರು. 'ಏಳಮ್ಮಾ ! ನನ್ನ ಜತೇಲಿ ಕೂತು<noinclude></noinclude>
lro3bojsev3crnulc1dtdn78i8e445h
ಪುಟ:ಮನಮಂಥನ.pdf/೨೧೧
104
62658
316556
315542
2026-05-03T14:34:01Z
Shreesha Sharma
7840
/* Validated */
316556
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೯೨}}{{Right|ಮನಮಂಥನ}}
ಏನಾದರೂ ತಿನ್ನುವೆಯಂತೆ, ಬೆಳೆಯುವ ಹುಡುಗಿಯರು ಹೀಗೆ ಉಪವಾಸ
ಇರಬಾರದು' ಅಂತ ಇನ್ನಿಲ್ಲದ ಹಾಗೆ ಹೇಳಿದರು. ಕಲ್ಲಿನ ಪ್ರತಿಮೆಯಾದರೂ
ಉತ್ತರವನ್ನು ಕೊಡುತ್ತಿತ್ತೇನೋ, ಆದರೆ ಕುಮುದ ಜಪ್ಪಯ್ಯ ಅನ್ನಲಿಲ್ಲ ; ಬೆಳಗಿನಿಂದ
ದುಡಿದು ಬಂದಿದ್ದರು ತಂದೆ. ಅವರಿಗೂ ಅತಿ ಬೇಜಾರಾಯಿತು. ಮಗಳ ಕೆನ್ನೆಗೆ
ಒಂದೇಟನ್ನು ಬಲವಾಗಿ ಬಿಗಿದು 'ಎಲ್ಲಾದರೂ ಹಾಳಾಗಿ ಹೋಗು' ಎಂದು
ಬೈದು ತಮ್ಮ ಕೊಠಡಿಗೆ ಹೋದರು ; ಸಿಡಿಮಿಡಿ ಗುಟ್ಟುತ್ತಾ.
{{gap}}ದೆವ್ವ ಹಿಡಿದವಳಂತೆ ಕುಮುದ ಕೂತಲ್ಲೇ ಕೂತಿದ್ದಳು. ಆಳಲಿಲ್ಲ,
ಮಾತಾಡಲಿಲ್ಲ. ಎರಡು ದಿನಗಳಾದುವು ಒಂದು ತುತ್ತು ಅನ್ನ ತಿನ್ನಿಸುವುದಕ್ಕೆ,
ಅಮ್ಮನ ಸಲಹೆಯ ಮೇರೆ ಅಪ್ಪ ಹೋಗಿ ಮಂತ್ರವಾದಿಯನ್ನು ಕರೆದುಕೊಂಡು
ಬಂದರು. ಘೋರವಾದ ಪೂಜೆಯನ್ನು ಉಗ್ರವಾಗಿ ಮಂತ್ರವಾದಿಯು ಹಾಕಿದ.
'ದೆವ್ವವನ್ನು ಬಿಡಿಸಿದ್ದೇನೆ. ಇದೇ ಕೇರಿಯಲ್ಲಿ ಸತ್ತಿದ್ದ ಬಾಣಂತಿಯ ದೆವ್ವ ಬಂದು
ಮೆಟ್ಟಿಕೊಂಡಿತ್ತು. ಬಡಿದು ಬಿಡಿಸಿ, ತಿರುಗಿ ಬರದ ಹಾಗೆ ದಿಗ್ಧಂಧನವನ್ನು
ಹಾಕಿದ್ದೀನಿ.' ಎಂದು ಹೇಳಿ ಜೋಳಿಗೆಯನ್ನು ಭರ್ತಿ ಮಾಡಿಕೊಂಡು ಅವ
ಹೊರಟುಹೋದ.
{{gap}}ಆಮೇಲೆ ನಾಲೈದು ದಿನ ಎಲ್ಲರ ಜತೆ ಕುಮುದ ಊಟ ಮಾಡಿದಳು.
ತಿಂಡಿ ತಿಂದಳು, ಕಾಫಿ ಕುಡಿದಳು. ಆದರೆ ಒಂದು ಮಾತಿಲ್ಲ. ಒಂದು ನಗುವಿಲ್ಲ.
ಬೆಪ್ಪು ಬಡಿದವಳಂತಿದ್ದಳು. ಮಾತನಾಡಿಸಲು ತಾಯ್ತಂದೆಯರಿಗೆ ಭಯ. ಏನು
ಮಾತಾಡಿದರೆ ತಿರುಗಿ ಕೆರಳುತ್ತಾಳೋ ಎನ್ನುವ ಭಯ. ಎರಡು ಮೂರು
ವರ್ಷಗಳಾದರೂ ಕುಮುದಳ ನಡವಳಿಕೆಯಲ್ಲಿ ಯಾವ ರೀತಿಯ
ಬದಲಾವಣೆಯೂ ಆಗಲಿಲ್ಲ.
{{gap}}ಈ ಅವಧಿಯಲ್ಲಿ ಬೇಗ ಮದುವೆಯನ್ನು ಮಾಡಿದರೆ ಅವಳಿಗೆ
ಗುಣವಾಗುತ್ತದೆ ಎಂದು ಯೋಚಿಸಿ ವರಾನ್ವೇಷಣೆಯನ್ನು ಜರೂರಾಗಿ
ಮಾಡತೊಡಗಿದರು. ಆರೆಂಟು ವರಗಳೂ ಬಂದು ಹೆಣ್ಣನ್ನು ನೋಡಿಕೊಂಡು
ಹೋಗಿದ್ದರು. ಬಂದವರೆದುರಿಗೆ ಕುಮುದ ಮನೆಯವರ ಮಾನವನ್ನು ತೆಗೆಯಲಿಲ್ಲ.
ಆದರೆ ವಯಸ್ಸಿಗೆ ಬಂದ ಹೆಣ್ಣಿನ ಚಾಲೂಕನ್ನು ಬೀರಲಿಲ್ಲ. ವರದಕ್ಷಿಣೆಯ
ಮೊತ್ತ ಹುಡುಗಿಯ ವಯಸ್ಸು, ರೂಪ, ವಿದ್ಯೆ, ಇತ್ಯಾದಿ ಹಲವಾರು ಕಾರಣಗಳಿಂದ
ಯಾವ ಗಂಡೂ ಒಪ್ಪಿಕೊಳ್ಳಲಿಲ್ಲ.
{{gap}}ವಿನಾಕಾರಣ ಸಿಡುಕುವುದು ಹೆಚ್ಚಾಯಿತು. ಗಂಟೆಗಳ ಕಾಲ ಕೂತಲ್ಲೇ
ಕೂತು ಏನನ್ನೋ ಗಾಢವಾಗಿ ಯೋಚಿಸುತ್ತಿರುವಂತಿರುವುದು, ಹತ್ತು ಬಾರಿ<noinclude></noinclude>
iia8yl1t3ounx94crczn47zw597isye
ಪುಟ:ಮನಮಂಥನ.pdf/೨೧೨
104
62659
316555
315543
2026-05-03T14:32:58Z
Shreesha Sharma
7840
/* Validated */
316555
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು}}{{Right|೧೯೩}}
ಮಾತನಾಡಿಸಿದರೆ ಒಮ್ಮೆ ಉತ್ತರಿಸುವುದು ; ಮುಖವನ್ನೆತ್ತಿ ನೋಡುವುದನಕ
ಮರೆತೇಹೋಗಿತ್ತು. ಬಗ್ಗಿಸಿದ ತಲೆಯನ್ನು ಎತ್ತುತ್ತಲಿರಲಿಲ್ಲ.
{{gap}}ಕೆಲವು ವಾರಗಳೂ ಎದ್ದರೆ ನಿಂತರೆ ಏನಾಕರಣ ಬುಳುಬುಳು ಅಳುವುದಕ್ಕೆ
ತೊಡಗಿದಳು. “ಯಾಕಮ್ಮಾ ಆಸ್ತಿ' ಎಂದು ಕೇಳುವುದಕ್ಕೆ ಅಮ್ಮನಿಗೆ ಭಯ.
ಇನ್ನು ಯಾವ ತರಹ ಕೆರಳುತ್ತಾಳೋ ಎಂದು. ಊಟವನ್ನು ಮಾಡುತ್ತಿದ್ದಳು ;
ಆದರೆ ಇದು ಇನ್ನಷ್ಟು ಬೇಕು ಎಂದು ಕೇಳುತ್ತಿರಲಿಲ್ಲ.
{{gap}}ಕಡೆಗೊಮ್ಮೆ ಕಂಕಣಬಲ ಕೂಡಿಬಂತು. ಕುಮುದಳನ್ನು ನೋಡಲು ಬಂದ
ಗಂಡಿಗೆ ಮೂವತ್ತಾರು ಮುಗಿದಿತ್ತು. ಅವನೂ ಒಪ್ಪಿಕೊಂಡ. ಮದುವೆಯೂ
ಆಯಿತು. ಯಥಾಪ್ರಕಾರದ ಅತ್ತೆ. ಸೌಭಾಗ್ಯವನ್ನು ಬೇಗ ಕಳೆದುಕೊಂಡು ತೌರಿಗೆ
ವಾಪಸಾದ ಅತ್ತಿಗೆಯೊಬ್ಬಳು. ಇವರಿಬ್ಬರೇ ಮನೆಯ ಮಿಕ್ಕ ಮಂದಿ. ಅತ್ತೆಯ
ಮನೆಯಲ್ಲಿ ಕುಮುದ ಮೂಗಿಯಂತೆಯೇ ಇದ್ದಳು. ಗಾದೆ ಹೇಳಿದಂತೆ ಮೂಗಿ
ಬಸಿರಾದಳು. ಒಂಭತ್ತು ತಿಂಗಳು ಮುಗಿದ ಮೇಲೆ, ಹೆಚ್ಚು ತ್ರಾಸಿಲ್ಲದೆ ಹೆತ್ತಳು.
ಹೆರಿಗೆಗಾಗಲೀ ಬಾಣಂತನಕ್ಕಾಗಲೀ ತೌರಿಗೆ ಹೋಗಲು ಅವಳು ಒಪ್ಪಲಿಲ್ಲ.
ಗಂಡನಿಗೂ ಕಳಿಸಿಕೊಡಲು ಇಷ್ಟವಿರಲಿಲ್ಲ. ಹತ್ತು ದಿನಗಳನ್ನು ಆಸ್ಪತ್ರೆಯಲ್ಲಿ
ಕಳೆದುಕೊಂಡು ಮನೆಗೆ ಗಂಡುಮಗುವಿನೊಡನೆ ಹಿಂತಿರುಗಿದಳು. ಮನೆಗೆ
ಬಂದನಂತರ ಬಾಣಂತಿಯ ವರ್ತನೆಯು ವಿಚಿತ್ರವಾಯಿತು. ಇದ್ದಕ್ಕಿದ್ದ ಹಾಗೆ
ನಗುವುದು ; ಒಮ್ಮೊಮ್ಮೆ ಅಳುವುದು ; ಕೆಲವೊಮ್ಮೆ ಅಳುತ್ತಿದ್ದ ಮಗುವನ್ನು
ದಿಟ್ಟಿಸಿ ನೋಡುತ್ತಿದ್ದಳೇ ವಿನಾ, ತೊಟ್ಟಿಲಿನಿಂದ ಎತ್ತಿಕೊಂಡು ಆಡಿಸುತ್ತಿರಲಿಲ್ಲ,
ಅಥವಾ ನಂಬಿಸುತ್ತಲೂ ಇರಲಿಲ್ಲ.
{{gap}}'ಇವಳೀಗೆಲ್ಲೋ ಬಾಣಂತಿ ಸನ್ನಿ ಬಡಿದಿದೆ ಕಣೋ, ಇವಳ ಹತ್ತಿರ
ಮಗುವನ್ನು ಬಿಡುವುದು ಒಳ್ಳೆಯದಲ್ಲ. ಇದಕ್ಕೆ ಔಷಧಿಯನ್ನು ಪಟ್ಟಾಗಿ ಕೊಡಿಸೋ'
ಎಂದು ಮಗನಿಗೆ ತಾಯಿ ಹೇಳಲಾರಂಭಿಸಿದಳು. ವೈದ್ಯರ ಬಳಿಗೆ ಹೋಗಿ
ಮಗ ವಿಚಾರಿಸಿಕೊಂಡು ಬಂದ. ಮಾನಸಿಕ ಆಸ್ಪತ್ರೆಯಲ್ಲಿ ಕೆಲವು ದಿನ ಇರುವುದು
ಒಳ್ಳೆಯದು ಎಂದು ಹೇಳಿದರು. ಆದರೆ ಆಸ್ಪತ್ರೆಗೆ ಹೋಗುವುದಕ್ಕೆ ಕುಮುದ
ಒಪ್ಪಲಿಲ್ಲ.
{{gap}}ಒಂದು ಬೆಳಿಗ್ಗೆ ಹಾಲನ್ನು ಕೊಡಲು ಬಾಣಂತಿಯ ಬಳಿಗೆ ಅತ್ತಿಗೆ
ಹೋದಳು. 'ಕುಡಿಯಮ್ಮಾ ಕುಮುದ ಬಿಸಿಯಾಗಿದೆ' ಎಂದು ಹೇಳಿ ಬಟ್ಟಲನ್ನು
ನೀಡಿದಳು. ಬಟ್ಟಲನ್ನು ಕುಮುದ ಇಸುಕೊಂಡಳು. ಅತ್ತಿಗೆಯನ್ನು ದುರುದುರ
ನೋಡತೊಡಗಿದಳು. ಏನು ಬಂತೋ ಆವೇಶ ! ಅತ್ತಿಗೆಯ ಎದೆಯತ್ತ ಹಾಲಿನ<noinclude></noinclude>
ov12cuso5m8z0s4zdreslzq8589z9cn
ಪುಟ:ಮನಮಂಥನ.pdf/೨೧೩
104
62660
316553
315544
2026-05-03T14:30:51Z
Shreesha Sharma
7840
/* Validated */
316553
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೯೪}}{{Right|ಮನಮಂಥನ}}
ಬಟ್ಟಲನ್ನು ಗುರಿ ಹಿಡಿದು, ಇದ್ದ ಹಾಲನ್ನೆಲ್ಲಾ ಸರಂತ ಎಸೆದಳು. ಅತ್ತಿಗೆಯ
ಎದೆಯೆಲ್ಲಾ ಹಾಲುಮಯವಾಯಿತು. ಕುಮುದ ಗಹಗಹಿಸಿ ನಗಲಾರಂಭಿಸಿದಳು.
*ಈಗ ಅತ್ತಿಗೆ ಹಾಲು ಸುರಿಸುತ್ತಾ ಇದಾಳೆ' ಎಂದು ನಗಲಾರಂಭಿಸಿದಳು.
{{gap}}ಮಾರನೆಯ ದಿನ ಜುಲುಮು ಮಾಡಿ ಆಸ್ಪತ್ರೆಗೆ ಸೇರಿಸಿದರು. ಮೂರುನಾಲ್ಕು
ವಾರಗಳಲ್ಲಿ ಗುಣವಾಗಿ, ಮನೆಗೆ ಹಿಂತಿರುಗಿದಳು, ಅನ್ನಿ,
{{gap}}ತಂದೆಯ ಮನೆಯಲ್ಲಿ ಯಾವ ಕೆಲಸವೂ ಇಲ್ಲದೆ ಬೆಳೆದ ಹೆಣ್ಣು ಕೂರುವಾಗ
ಡಿಪ್ರೆಷನ್ ಆರಂಭವಾಗಿತ್ತು. ಜತೆ ವಾರಿಗೆಯವರೆಲ್ಲ ಗಂಡನ ಮನೆಗೆ ಹೋಗಿ
ಮಕ್ಕಳ ತಾಯಾದುದನ್ನು ಕಂಡಿದ್ದಳು. ತನಗೆ ಆ ಭಾಗ್ಯವಿಲ್ಲವಲ್ಲ, ಎಂದು
ಖಿನ್ನಳಾಗಿದ್ದಳು. ಅಂಕೆ ಶಿಕ್ಷೆಯನ್ನು ಅಮ್ಮ ಇಡ ಹೋದಾಗ, ತಳಮಳಗೊಂಡಿದ್ದ
ಮನಸ್ಸು ಮುದುಡಿಕೊಂಡಿತು. ಎಂದೂ ಬರಿ ಮಾತನ್ನು ಆಡದಿದ್ದ ಅಪ್ಪ ರೇಗಿ
ಕೆನ್ನೆಗೆ ಹೊಡೆದಾಗ, ಅವಳ ಮನಸ್ಸು ಇನ್ನೂ ಬಿಗಿಯಾಗಿ ಮುದುಡಿತು. ಮಂತ್ರ
ವಾದಿಯ ಆಟಾಟೋಪದ ಪೂಜೆಯು ಒಂದು ತೆರನ “shock' ಕೊಟ್ಟಿತು.
ಆ ಭಯದಿಂದ ಇದ್ದ ಭಯವು ತುಸುಕಾಲ ಕಡಿಮೆಯಾಯಿತು.
{{gap}}ಮದುವೆಯಾಗಿ ಗಂಡನ ಮನೆಗೆ ಹೋದಮೇಲೆ, ಡಿಪ್ರೆಷನ್ ಇದ್ದೇ
ಇತ್ತು. ಹೆರಿಗೆಯಾದ ಕಾಲದಲ್ಲಿ ಸುಸ್ತಾಗಿದ್ದುದರಿಂದ, ಬಾಣಂತಿ ಸನ್ನಿ
ಎನಿಸಿಕೊಳ್ಳಬಹುದಾದ ಪ್ಯೂರ್ಪರಲ್ ಮೇನಿಯಾ, ಆರಂಭವಾಯಿತು.
{{gap}}ಆಸ್ಪತ್ರೆಯಲ್ಲಿ, ಮೇನಿಯಾವನ್ನು ಐದಾರು ದಿನಗಳಲ್ಲಿ ವಾಸಿಪಡಿಸಿದರು.
ನಂತರ ಹಿನ್ನೆಲೆಯಲ್ಲಿ ಕೆಲವು ವರ್ಷಗಳಿಂದ ಕಾಡುತ್ತಿದ್ದ ಡಿಪ್ರೆಷನ್ ಅವಸ್ಥೆಯನ್ನೂ
ಪತ್ತೆ ಹಚ್ಚಿದರು. ಮೂರು ನಾಲ್ಕು ವಾರ, ಆ ಬೇನೆಗೆ ಸೂಕ್ತ ಚಿಕಿತ್ಸೆಯನ್ನು
ಮಾಡಿದರು. ಮನೆಗೆ ಹಿಂದಿರುಗಿದಳು. ಈಗ ಅವಳ ನಡವಳಿಕೆಯಲ್ಲಿ ತುಂಬಾ
ಬದಲಾವಣೆಯಾಗಿತ್ತು. ನಗುನಗುತ ಎಲ್ಲರಂತೆ ತಾನೇ ಮಾತಿಗೆ ಆರಂಭಿಸುವಳು.
ಮಗುವಿನ ಹೊಣೆಯಲ್ಲಾ ಅವಳದೇನೆ ಈಗ. 'ಮಾನಸಿಕ ಆಸ್ಪತ್ರೆಗೆ ಹೋಗಿಬಂದರೆ
ಇಷ್ಟು ಚೆನ್ನಾಗಿ ಗುಣವಾಗುತ್ತೇನೋ, ಮಗು, ನಿನ್ನ ಅಕ್ಕ ಕೂಡ ಕೆಲವು ದಿನಗಳಿಂದ
ಸಿಡುಕುತ್ತಿದ್ದಾಳೆ, ಅವಳನ್ನೂ ಆಸ್ಪತ್ರೆಗೆ ಸೇರಿಸೋಣವೇ' ಎಂದು ಮಗನನ್ನು
ತಾಯಿ ಕೇಳಿಯೇಬಿಟ್ಟಳು. 'ಕುಮುದನಿಗನಕ ಬಾಣಂತಿ ಸನ್ನಿ ಬಡಿದಿತ್ತು, ಅವಳು
ಹೋಗಿ ಬಂದುದು ಸರಿ, ನನಗೇನು ಬಸಿರೇ ಬಾಣಂತನವೇ ? ನಾನ್ಯಾಕೆ
ಆಸ್ಪತ್ರೆಗೆ ಹೋಗಬೇಕು' ಎಂದು ಮನೆಯ ಮಗಳು, ಅಮ್ಮ ಮತ್ತು ತಮ್ಮನ
ಮೇಲೆ ಹೌಹಾರಿದಳು. ತನ್ನ ಅರಿವು ಇಲ್ಲದೆಯೇ ಆಕೆ, ಸಿಡುಕಿನ ಕಾರಣವನ್ನು
ಹೊರಗೆಡವಿದ್ದಳು.<noinclude></noinclude>
3rnt55thdfeu0p6srayltnd8fjrpwft
ಪುಟ:ಮನಮಂಥನ.pdf/೨೧೪
104
62661
316554
315545
2026-05-03T14:31:56Z
Shreesha Sharma
7840
/* Validated */
316554
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು}}{{Right|೧೯೫}}
'''ಬೇಜಾರು ತುಂಬಿದ ಭಾಮಾ'''
{{gap}}'ಬೇಜಾರು ; ಏನು ಮಾಡಲಿ, ಕೆಲಸ ಬಿಡಲೇ? ಬಿಟ್ಟರೆ ಹೇಗೆ? ಆಗ
ಮಾತ್ರ ಆತಂಕವೆಲ್ಲ ಮಾಯವಾಗುತ್ತದೆಯೆ? ತಲೆ ಚಿಟ್ಟು ಬೇಜಾರು ! ನಾನು
ಸದೃಹಿಣಿ ಆಗಬಲ್ಲೆನೆ? ಅವರ ಸಂಬಳದಲ್ಲೇ ನೆಮ್ಮದಿಯಾಗಿರಬಲ್ಲೆನೆ? ಹೇಗೆ
ಮಾಡುವುದು? ಮಾನಸಿಕ ತಳಮಳಕ್ಕೆ ಕಾರಣವೇನು? ಎಲ್ಲಿಗೆ ಹೋಗುವುದು?
ಕುಳಿತಿದ್ದರೆ ಕುಳಿತೇ ಇರುವ ಅನ್ನಿಸುತ್ತದೆಯಲ್ಲ ! ನಿದ್ದೆ ಬಂದಹಾಗಾಗುತ್ತದೆ.
ಆದರೆ ಈಗ ಮಲಗಲು ಸಾಧ್ಯವೇ? ಹಾಗೂ ಸಾಧ್ಯವಿದ್ದಾಗ ಮಲಗಿದರೆ ನಿದ್ದೆ
ಬರುವುದಿಲ್ಲ. ಈ ಮಾನಸಿಕ ತಳಮಳ ನನ್ನನ್ನು ಚಿತ್ರವಧೆ ಮಾಡುತ್ತಿದೆ. ಇದಕ್ಕೆಲ್ಲಾ
ನನ್ನ Weak-mind ಕಾರಣವೇ? ನಾನಷ್ಟು ಹೇಡಿಯೇ? ಎಲ್ಲಿಗೆ ಓಡಿಹೋಗಲಿ?
ಮಗುವಿನ ಗತಿಯೇನು? ದೇವರೇ ಕಾಪಾಡಬೇಕು. ಗೆಲುವು ಎನ್ನುವುದು ನನ್ನ
ಜೀವನದಲ್ಲಿ ಮೂಡುವುದೇ ಇಲ್ಲವೇ? ನನ್ನ ಡಾಕ್ಟರ್, ಸಲಹೆ ಕೊಡಲಾರರೇ?
ನೋಡೋಣ. ತಾಳಿದವನು ಬಾಳಿಯಾನು. ಶ್ರೀನಿವಾಸ ಹಯಗ್ರೀವ ಕಾಪಾಡು.
ಹೇಗೋ April ಓಡಿ ಬಂದು ಬಿಡಲಿ, ಏನಾದರೂ ಸರಿಯೇ ಕೆಲಸ ಬಿಡುವೆನು.
ಅಲ್ಲಿಯ ತನಕ ಹೇಗಾದರೂ ಉತ್ಸಾಹ ಹುಟ್ಟಿಸಿಕೊಳ್ಳಬೇಕಲ್ಲ. ಡಾಕ್ಟರ್ ಏನಾದರೂ
ಮಾಡಿ ನನ್ನ ಈ ಮಾನಸಿಕ ಸಾವನ್ನು ಹೋಗಲಾಡಿಸಿ. ಇಲ್ಲದಿದ್ದರೆ ಚಿರಂತನ
ಸಾವಾದರೂ ಬರಲಿ. ಈ ತುಂಡು ಸಾವು ಸಾಧ್ಯವಿಲ್ಲ. ಎಲ್ಲರಿಗೂ ಬೇಜಾರು ;
ನನಗೂ ಇಷ್ಟವಿಲ್ಲ. ಇದು ಬಹಳವಾಗಿ ಸೋಮಾರಿತನವೇ ಆಗಿದ್ದಲ್ಲಿ ನನ್ನನ್ನು
ಇಷ್ಟು ಕಾಡುತ್ತಿರಲಿಲ್ಲ. ಈ ಒತ್ತಡ ಸಂಜೆಯ ಹೊತ್ತಿಗೆ ಕಡಿಮೆಯಾಗುತ್ತದೆ.
ಆದರೆ ಬೆಳಿಗ್ಗೆ ನನ್ನ ಕೈಲಿ ತಡೆಯಲು ಸಾಧ್ಯವಿಲ್ಲ. ಈ ನಿರುತ್ಸಾಹ ನನ್ನನ್ನು
ಸಂಪೂರ್ಣ ನಿತ್ರಾಣಳನ್ನಾಗಿ ಮಾಡಿಬಿಡುತ್ತಿದೆ.
{{gap}}ಸ್ವಲ್ಪಾನೂ ಬುದ್ಧಿ ಇಲ್ಲವೇ, ಅಷ್ಟು ಪೆದ್ದೇ? ಇಷ್ಟೆಲ್ಲಾ ಹೇಗೆ ಓದಿದೆ.
ಹೇಗಾದರಾಗಲಿ ಹೇಳಿಬಿಡೋದು. ಹೋದರೆ ಹೋಯಿತು. ಚೆನ್ನಾಗಿರುವುದಿಲ್ಲ.
ತಪ್ಪೇನಿಲ್ಲ. ಅದು ಇಷ್ಟಕ್ಕೆಲ್ಲಾ ಕಾರಣವೇ? ಮರೆತುಬಿಡು. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿತಂದೆ ತಾಯಿಗಳ ಪ್ರೀತಿ ಅವಶ್ಯಕ. ಅವರು ತಾನೇ ಏನು ಮಾಡಲು ಸಾಧ್ಯ
ಪಾಪ ನನ್ನಂತಹ ಹೇಡಿ ಜತೆಗೆ ಹೇಗೆ ಹೆಣಗಬೇಕು?'
{{gap}}ಭಾಮಾ ಬರೆದು ತಂದ ಕಾಗದಗಳಿಂದ ಮೇಲೆ ಕಾಣಿಸಿರುವುದನ್ನು
ಉದಹರಿಸಿದ್ದೇನೆ. ಎಂ.ಎ., ಬಿ.ಇಡಿ., ಮಾಡಿ ಕಾಲೇಜಿನಲ್ಲಿ ಅಧ್ಯಾಪಕಿಯಾಗಿದ್ದಾಳೆ.<noinclude></noinclude>
cnmi81huszmomfax9hbcsq3qqem92oy
ಪುಟ:ಮನಮಂಥನ.pdf/೨೧೫
104
62662
316647
315546
2026-05-04T03:10:50Z
Shreesha Sharma
7840
/* Validated */
316647
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೯೬}}{{Right|ಮನಮಂಥನ}}
ಮುತ್ತಿನ ಮಣಿಯಂತಹ ಇಬ್ಬರು ಮಕ್ಕಳು, ಸಭ್ಯಸ್ಥ ಗಂಡ, ದಂಪತಿಗಳಿಬ್ಬರೂ
ದುಡಿದರೆ ಸಂಸಾರವನ್ನು ಸುಖವಾಗಿ ನಿಭಾಯಿಸಬಹುದು. ಆದಕಾರಣ ಇಬ್ಬರೂ
ದುಡಿಯುತ್ತಿದ್ದರು.
{{gap}}ಕಳೆದ ಒಂದೆರಡು ವರ್ಷಗಳಿಂದ ಎಂತದೋ ಬೇಜಾರು, ಯಾವುದೋ
ಭಯಂಕರ ನಿರುತ್ಸಾಹ ಅವಳನ್ನು ಮುತ್ತಿಕೊಂಡಿತ್ತು. ವಾರವಾರಕ್ಕೆ ಹೆಚ್ಚುತ್ತ
ಹೋಯಿತು. ಕಲ್ಲುಗುಂಡಿನ ಹಾಗಿದ್ದೀನಿ, ನನಗೆ ಏನು ಆಗುತ್ತೆ ಎಂದರೆ
ನಾಚಿಕೆಗೇಡು ಅಂತ ತನ್ನ ತಳಮಳವನ್ನು ಇತರರಿಗೆ ಅಂದರೆ ಗಂಡನಿಗೂ
ಕೂಡ ತಿಳಿಸಲಿಲ್ಲ. ಆದರೆ ಈಗ ಕೆಲವು ವಾರಗಳಿಂದ ಕೆಲಸಕ್ಕೆ ರಾಜೀನಾಮೆ
ಕೊಡಬೇಕು, ಪಾಠ ಕಲಿಸಲು ಸಾಧ್ಯವೇ ಇಲ್ಲ, ಎನ್ನುವ ತೀವ್ರ ಸ್ಥಿತಿಗೆ ಇಳಿದಿದ್ದಳು.
ತಿಂಗಳಿಗೆ ಬರುತ್ತಿದ್ದ ನಾಲ್ಕುನೂರು ಚಿಲ್ಲರೆ ವರಮಾನವನ್ನು ಕಳೆದುಕೊಂಡರೆ
ಸಂಸಾರವನ್ನು ನಡೆಸುವುದು ಹೇಗೆ ಎನ್ನುವ ವ್ಯವಹಾರಿಕ ಅರಿವು ಸ್ಪಷ್ಟವಾಗಿಯೇ
ಇತ್ತು. ಚಾಕರಿಗೆ ರಾಜೀನಾಮೆ ಕೊಡುತ್ತೇನೆ ಎಂದು ಗಂಡನಿಗೆ ಒಮ್ಮೆ ಹೇಳಿದಳು.
'ಸುಸ್ತಾಗಿದ್ದರೆ ಎರಡು ದಿನ ರಜ ತೆಗೆದುಕೋ, ಅಥವಾ ಡಾಕ್ಟರ ಬಳಿಗೆ ಹೋಗಿ
ಮದ್ದು ತೆಗೆದುಕೋ, ರಾಜೀನಾಮೆಯನ್ನು ಕೊಡುವಂತಹುದು ಏನಾಗಿದೆ' ಎಂದು
ಅವ ಅಭಿಪ್ರಾಯ ಕೊಟ್ಟಿದ್ದ. ನ್ಯಾಯವೇ ಅನ್ನಿಸಿತು, ಭಾಮಾಳಿಗೆ. ಪರೀಕ್ಷೆಗಳ
ಸಮಯ, ರಜ ತೆಗೆದುಕೊಳ್ಳುವಂತಿಲ್ಲ. ಆದಕಾರಣ ಡಾಕ್ಟರ ಸಲಹೆಯನ್ನು
ಪಡೆಯಹೋಗಿದ್ದಳು.
{{gap}}ತುಂಬಾ ಕಾತರ ತುಂಬಿದ ಮುಖ, ಕೆಟ್ಟ ಕನಸನ್ನು ಕಂಡು ಎದ್ದವರ
ಹಾಗೆ ಬೆದರಿದ್ದಳು. ಹೇಳಿದ್ದನ್ನೇ ಹೇಳುತ್ತಿದ್ದಳು. ಒಂದು ಪಂಜೆಯನ್ನೂ ಪೂರ್ಣ
ಮಾಡಿ ಮುಗಿಸುತ್ತಿರಲಿಲ್ಲ. ಅರ್ಧ ಹೇಳಿದ ಕೂಡಲೇ ಬೇರೆ ಇನ್ನಾವುದನ್ನೋ
ಹೇಳಲಾರಂಭಿಸುತ್ತಿದ್ದಳು. 'ನಿನಗಾಗುವುದನ್ನೆಲ್ಲಾ ವಿವರವಾಗಿ ಬರೆದುಕೊಂಡು
ಬಾಮ್ಮಾ ಅದನ್ನು ಓದಿದ ಮೇಲೆ ಅಗತ್ಯವಾದ ಪರೀಕ್ಷೆಗಳನ್ನು ಮಾಡಿದರಾಯಿತು'
ಎಂದರು, ಡಾಕ್ಟರು. ಮೂರು ನಾಲ್ಕು ಹಾಳೆಗಳನ್ನು ಬರೆದು ತುಂಬಿ ಭಾಮಾ
ತಂದಳು. ಅವುಗಳಿಂದಲೇ ಮೊದಲ ಪ್ಯಾರಾವನ್ನು ಸಂಗ್ರಹಿಸಲಾಗಿದೆ.
{{gap}}ಭಾಮಾಗೆ ಡಿಪ್ರೆಷನ್ ಪ್ರಾರಂಭವಾಗಿತ್ತು. ನಿಖರವಾಗಿ ಈ ಕಾರಣಗಳಿಂದ
ಅಥವಾ ಸಂಭವಿಸಿದ ಘಟನೆಗಳಿಂದ, ಅವಳಿಗೆ ಈ ಸ್ಥಿತಿಯು ಒದಗಿತು ಎಂದು
ಹೇಳಬರುವಂತಿರಲಿಲ್ಲ. ಮಧ್ಯಮ ವರ್ಗದ ಸಾಮಾನ್ಯ ಸಂಸಾರ. ಮೂವತ್ತೈದು
ಮೂವತ್ತಾರರ ಹೆಂಗಸು, ಲೋಕಾನುಭವವಿದ್ದ ಜಾಣ ಹೆಂಗಸು.
{{gap}}ಯಾವುದೋ ಒಂದು ತಪ್ಪು ಮಾಡಿದ್ದೇನೆ ಎನ್ನುವ ಅಪರಾಧ ಮನೋ<noinclude></noinclude>
5f4hthwb993cxnfcvpijb9wsdeqg0lr
ಪುಟ:ಮನಮಂಥನ.pdf/೨೧೬
104
62663
316648
315547
2026-05-04T03:11:57Z
Shreesha Sharma
7840
/* Validated */
316648
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು}}{{Right|೧೯೭}}
ಭಾವವು ಇದೆ ಎಂಬುದು ಕಾಗದದ ಒಕ್ಕಣೆಯಿಂದ ತಿಳಿದು ಬಂದಿತು.
ಅದರಿಂದಲೇ ಈ ಡಿಪ್ರೆಷನ್ ಶುರುವಾಯಿತು ಎಂದು ಹೇಳಲು ಬರುವಂತಿಲ್ಲ.
ಡಿಪ್ರೆಷನ್ ಪ್ರಾರಂಭವಾದ ಮೇಲೆ, ತಳಮಳದ ಮನಸ್ಸು ಯಾವುದಾದರೂ
ಒಂದು ಕುಂಟು ನೆಪವನ್ನು ಹಿಡಿದುಕೊಂಡು, ಅದರಿಂದ ನನಗೆ ಹೀಗಾಯಿತು
ಎಂದು ಆತಂಕಪಡಲು ಶುರು ಮಾಡುತ್ತದೆ. ಆದಕಾರಣ ಅಪರಾಧ ಮನೋಭಾವದ
ಕಾರಣಗಳನ್ನು ಪತ್ತೆ ಹಚ್ಚಲು ವೈದ್ಯರು ತೊಡಗುವುದಿಲ್ಲ.
{{gap}}ಭಾಮಾಳ ಮನಸ್ಸು ಮೂಲತಃ ಭದ್ರವಾಗಿದೆ, ದೃಢವೂ ಆಗಿದೆ, ಎನ್ನುವುದು
ಕಾಗದಗಳ ಸಮಂಜಸೆಯಿಂದಲೇ ವ್ಯಕ್ತವಾಗಿತ್ತು. ಮನೆಯ ದೇವರಲ್ಲಿ ತುಂಬಾ
ನಂಬಿಕೆಯನ್ನು ಹೊಂದಿರುವವಳು ಎನ್ನುವುದೂ ಸ್ಪಷ್ಟವಾಗಿತ್ತು. ಆಕೆಯ ಡಿಪ್ರೆಷನ್
ಎಲ್ಲಾ ತುಂಬಾ ಲಘುವಾದುದು ; ಬೇರೂರಿ ಬೆಳೆದಿಲ್ಲ ಎನ್ನುವುದೂ
ಖಚಿತವಾಗಿತ್ತು.
{{gap}}ಆದಕಾರಣ ಡಿಪೊಷನನ್ನು ನಿವಾರಿಸಿ ಉತ್ಸಾಹವನ್ನು ಬರಿಸುವ ಔಷಧಿಗಳನ್ನು
ಸಾಕಷ್ಟು ಪ್ರಮಾಣದಲ್ಲಿ ಬಳಸಲಾಯಿತು. ಹಲವಾರು ವಾರಗಳಿಂದ ಸರಿಯಾಗಿ
ನಿದ್ರೆ ಮಾಡದೆ, ಸಾಕಷ್ಟು ಉಣ್ಣದೆ ದೇಹವು ಬಳಲಿರುತ್ತದೆ. ಆದಕಾರಣ
ಜೀರ್ಣಕಾರಿಯಾದ ಔಷಧಿಗಳನ್ನು ಮತ್ತು ರಕ್ತವೃದ್ಧಿಯಾಗುವ ಮದ್ದುಗಳನ್ನು
ಕೊಡಲಾಯಿತು.
{{gap}}ಹಾಗೂ ಮೂರು ನಾಲ್ಕು ದಿನಗಳು, ಮನಸ್ಸು ಎಂದರೇನು? ಅದರ
ತಳಮಳಕ್ಕೆ ಕಾರಣಗಳ್ಯಾವುವು? ಅತಿ ಉತ್ಸಾಹವಾಗಲೀ ನಿರುತ್ಸಾಹವಾಗಲೀ
ಹೇಗೆ ಉಂಟಾಗುತ್ತದೆ? ಇವನ್ನು ಯಾವ ರೀತಿಯಲ್ಲಿ ರೋಗಿಯು
ನಿವಾರಿಸಿಕೊಳ್ಳಬಹುದು ; ಔಷಧಿಗಳು ಯಾವ ರೀತಿಯಲ್ಲಿ ರೋಗಿಗೆ ಸಹಾಯ
ಮಾಡುತ್ತವೆ; ಇವನ್ನೆಲ್ಲಾ ಕೂಲಂಕಷವಾಗಿ ವಿವರಿಸಲಾಯಿತು. ಪ್ರೌಢ
ಓದುವಿಕೆಯನ್ನು ಸಾಧಿಸಿದ್ದಾಕೆ ಹೇಳಿದುದನ್ನು ಕೇಳಿ ತಿಳಿದುಕೊಂಡಳು.
ಅರ್ಥವಾಗದೆ ಇದ್ದುದನ್ನು ನಾಚಿಕೆ ಪಡದೆ ಕೇಳಿ ತಿಳಿದುಕೊಂಡಳು.
{{gap}}ಜತೆಗೆ, ಮನೆ ದೇವರು ಹಯಗ್ರೀವನಿಗೆ ಕಾಣಿಕೆಯನ್ನು ಕಟ್ಟಿಟ್ಟಳು
ನಂಬಿಕೆಯಿಂದ.
{{gap}}ಒಂದು ವಾರದ ನಂತರ, ನಗುನಗುತ, ಮಗುವನ್ನು ಕರೆದುಕೊಂಡು
ಬಂದಳು. ಶನಿಕಾಟವೆಲ್ಲಾ ಪರಿಹಾರವಾಯಿತು, ಈಗ ಎಂದಿನಂತೆ ನಿಜ
ಮನುಷ್ಯಳಾಗಿದ್ದೀನಿ. ಎರಡು ಮೂರು ವರ್ಷಗಳ ಹಿಂದೆಯೇ ಚಿಕಿತ್ಸೆಗೆಂದು
ಬರಬೇಕಾಗಿತ್ತು. ಔಷಧಿಗಳ ನೆರವಿಲ್ಲದೆ ಗುಣವಾಗುತ್ತಿತ್ತೇನೋ, ಆಗಲೇ ಇದನ್ನೆಲ್ಲಾ<noinclude></noinclude>
n60r5rfe3knestqgx6qee12f8iho0uj
ಪುಟ:ಮನಮಂಥನ.pdf/೨೧೭
104
62664
316649
315548
2026-05-04T03:13:08Z
Shreesha Sharma
7840
/* Validated */
316649
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೧೯೮}}{{Right|ಮನಮಂಥನ}}
ತಿಳಿದುಕೊಂಡಿದ್ದರೆ ? ಎಂದು ಉದ್ಗಾರ ತೆಗೆದಳು.
{{gap}}ಎಲ್ಲದಕ್ಕೂ ಕಾಲ ಬರಬೇಕಲ್ಲ ಎಂದು ವೇದಾಂತವನ್ನೂ ಡಾಕ್ಟರಿಗೆ
ಬೋಧಿಸಿದಳು, ವಂದಿಸಿ ಹೋಗುವ ಮುನ್ನ
{{gap}}ಮಧ್ಯ ವಯಸ್ಸಿನಲ್ಲಿ ಬರುವ ಲಘು ಡಿಪ್ರೆಷನ್ನಿಗೆ ಚಿಕಿತ್ಸೆಯು ಅತ್ಯಂತ
ಫಲದಾಯಕವಾಗುತ್ತದೆ, ಎನ್ನುವುದು ಭಾಮಾಳ ಉದಾಹರಣೆಯಿಂದ ಎಲ್ಲರಿಗೂ
ಸ್ಪಷ್ಟವಾಗಬೇಕು.
'''ಮಂದ ಬುದ್ಧಿಯ ಮಾಚಯ್ಯ'''
{{gap}}ಮೂವತ್ತರ ಪ್ರಾಯದ ಮಾಚಯ್ಯ ಇನ್ನೂ ಒಂಟಿಯಾಗಿಯೇ ಇದ್ದ.
ತಂಗಿಯ ಮದುವೆಯಾದ ಮೇಲೆ ತಾನು ಮದುವೆಯಾಗಬೇಕೆಂಬ ಇಚ್ಛೆ
ತಂದೆಗೆ ಲಕ್ವಾ ಬಡಿದು ಮೂಲೆ ಹಿಡಿಯುವಂತಾದರೆ, ತಂಗಿಯ ಮದುವೆಯ
ಜವಾಬ್ದಾರಿಯು ದೊಡ್ಡ ಮಗನದೇ, ಕಂಪನಿಯೊಂದರಲ್ಲಿ ಐದು ಆರು ನೂರು
ಸಂಬಳ ಬರುವ ಚಾಕರಿಯಲ್ಲಿದ್ದ. ಆರ್ಥಿಕವಾಗಿ ಶ್ರೀಮಂತನಲ್ಲದಿದ್ದರೂ ಸುಖವಾಗಿ
ಉಂಡು ತಿಂದು ಇರಲು ಬೇಕಾದಷ್ಟಿತ್ತು. ಮದುವೆ, ಇತ್ಯಾದಿ ವಿಶೇಷ ಖರ್ಚಿಗೆ
ಅಪ್ಪನ ಆಸ್ತಿಯು ನೆರವಾಗುತ್ತಿತ್ತು.
{{gap}}ಕಂಪನಿಯ ಕೆಲಸದ ಮೇಲೆ ಒಂದೆರಡು ವರ್ಷಗಳು ಅವ ಮಲೆನಾಡಿನ
ಗ್ರಾಮ ಒಂದರಲ್ಲಿ ಇರಬೇಕಾಯಿತು. ಸಹೃದಯ ಸ್ನೇಹಿತರು ಅಲ್ಲಿ ಸಿಗಲಿಲ್ಲ.
ಅಲ್ಲಿ ವಾಸಿಸುತ್ತಿದ್ದವರೊಂದಿಗೆ ಇವ ಜತೆಯಾಗಲು ಮನಸ್ಸಾಗಲಿಲ್ಲ. ಕಾರಣ,
ಏಕಾಂಗಿಯಾಗಿಯೇ ಇರಬೇಕಾಯಿತು. ಸಂಜೆಯ ವೇಳೆಗೆ ತುಂಬಾ ಬೇಜಾರು
ಬರುತ್ತಿತ್ತು. ಬೆಳಿಗ್ಗೆ ಹಗಲು, ಗ್ರಾಮಗಳಲ್ಲಿ ಸುತ್ತಬೇಕಾಗಿದ್ದುದರಿಂದ, ಕೆಲಸದ
ಒತ್ತಡವೂ ಇರುತ್ತಿದ್ದುದರಿಂದ, ಹೇಗೋ ಕಾಲ ಸರಿದುಹೋಗುತ್ತಿತ್ತು. ಆದರೆ
ಮುಸಾಫರಖಾನೆಗೆ ಸಂಜೆ ವೇಳೆಗೆ ಬಂದಾಗ ತುಂಬಾ ಬೇಜಾರಾಗುತ್ತಿತ್ತು
ಎಂದು ಹೇಳಿದ.
{{gap}}ಷಹರಿನ ಕೇಂದ್ರ ಕಚೇರಿಯಲ್ಲಿ ಈಗ ಎರಡು ವರ್ಷಗಳಿಂದಲೂ ಕೆಲಸವನ್ನು
ಮಾಡುತ್ತಿದ್ದಾನೆ. ಮಲೆನಾಡಿನಲ್ಲಿ ಅನುಭವಿಸುತ್ತಿದ್ದ ಬೇಸರವು ಷಹರಿನಲ್ಲಿ
ನ್ಯಾಯವಾಗಿ ಮಾಯವಾಗಬೇಕು. ಆದರೆ ಹಾಗಾಗಲಿಲ್ಲ, ತಿಂಗಳಿಗೊಂದೆರಡು
ಸಿನಿಮಾ ನೋಡಿದರೆ ಸಾಕಪ್ಪಾ ಎನಿಸುತ್ತಿತ್ತು. ಸ್ವಭಾವತಃ ಏಕಾಂತಪ್ರಿಯ, ಹಾಗಾಗಿ
ಗಾಢಮೈತ್ರಿ ಇದ್ದ ಸ್ನೇಹಿತರು ಇಬ್ಬರೊ ಮೂವರೊ; ಅವರೂ ಅವರವರ
ವ್ಯಾಪಾರ ವ್ಯವಹಾರಗಳಲ್ಲಿ ನಿರತರಾಗಿದ್ದುದರಿಂದ ಮಾಚಯ್ಯನ ವಿರಾಮದ<noinclude></noinclude>
fc5kqcjywzl3mrrs7ww8wf4mzs4knox
ಪುಟ:ಮನಮಂಥನ.pdf/೨೧೮
104
62665
316650
315549
2026-05-04T03:14:14Z
Shreesha Sharma
7840
/* Validated */
316650
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು}}{{Right|೧೯೯}}
ವೇಳೆಗೆ ಅವರು ಸಿಗುತ್ತಿರಲಿಲ್ಲ.
{{gap}}ಕಳೆದ ಒಂದು ವರ್ಷದಿಂದ ಮಾಚಯ್ಯನಿಗೆ ಸ್ವಸಾಮರ್ಥ್ಯದಲ್ಲಿ ತುಂಬಾ
ಅಪನಂಬಿಕೆಯುಂಟಾಗುತ್ತ ಬಂದಿತು. ಮನಸ್ಸಿನ ಮೇಲೆ ಹತೋಟಿಯು
ತಪ್ಪುತ್ತಿದೆಯೇನೋ ಎಂದು ಭಯವಾಗತೊಡಗಿತು. ಬುದ್ಧಿಯು
ಮಂದವಾಗುತ್ತಿದೆಯೋ ಎನ್ನುವ ಶಂಕೆಯು ಬಲವಾಗತೊಡಗಿತು.
{{gap}}ಕಚೇರಿಯಲ್ಲಿದ್ದ ನಾಲ್ಕು ಜನ ವಾರಿಗೆ ಅಧಿಕಾರಿಗಳನ್ನು, ಸಾಹೇಬರು
ಕರೆಸಿ 'ನಿಮ್ಮ ನಿಮ್ಮ ಶಾಖೆಯಲ್ಲಿ ಈ ರೀತಿ ಕೆಲಸ ಮಾಡಿಸಬೇಕು. ಇಷ್ಟು
ಪ್ರಗತಿಯನ್ನು ತೋರಿಸಬೇಕು' ಎಂದು ಹೇಳುವರು. ನಂತರ ಕೆಲವು ಪ್ರಶ್ನೆಗಳನ್ನು
ಕೇಳುವರು. ವಾರಿಗೆ ಅಧಿಕಾರಿಗಳು ಚೂಟಿಯ ಮತ್ತು ಸಮಂಜಸವಾದ
ಉತ್ತರವನ್ನು ಕೊಡುತ್ತಿದ್ದರು. ಆದರೆ ಈಚೀಚೆಗೆ ಮಾಚಯ್ಯನಿಗೆ ಸಾಹೇಬರು
ಹೇಳಿದುದು ಅರ್ಥವಾಗುತ್ತಿರಲಿಲ್ಲ. ಮೊದಲಿನಿಂದಲೂ ಅವನಿಗೆ ತಿಳಿದಿದ್ದ
ವಿಷಯವನ್ನೇ ಸಾಹೇಬರು ಹೇಳುತ್ತಿದ್ದುದು. ಮೊದಮೊದಲು ಮಾಚಯ್ಯನೂ
ಬಲು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಿದ್ದ. ಆದರೆ ಈಗ ಅರ್ಥವಾಗುತ್ತಿರಲಿಲ್ಲ.
ಕಿವಿಗೊಟ್ಟು, ಕಷ್ಟಪಟ್ಟುಕೊಂಡು, ಹೇಳಿದುದನ್ನು ಕೇಳಿಸಿಕೊಂಡರೂ, ತಲೆಯೇ
ಓಡುತ್ತಿರಲಿಲ್ಲ, ಅರ್ಥವಾಗುತ್ತಿರಲಿಲ್ಲ. 'ಇನ್ನೂ ತಿಳಿಯುವುದಿಲ್ಲವೇ, ಮಾಚಯ್ಯ'
ಎಂದು ಸಾಹೇಬರು ಕೆಲವು ಬಾರಿ ರೇಗಿ ಬೈದದ್ದೂ ಉಂಟು. ಹೀಗಾದಾಗಲೆಲ್ಲ
ಮಾಚಯ್ಯನ ಖಿನ್ನತೆಯು ಹೆಚ್ಚಾಗುತ್ತಿತ್ತು. ಆತ್ಮವಿಶ್ವಾಸವು ಕರಗಿ ಹೋಗುತ್ತಿತ್ತು.
{{gap}}ಕಚೇರಿಯದೇ ಆಗಲಿ, ಸ್ನೇಹಿತರಿಗೇ ಆಗಲಿ, ಕಾಗದವನ್ನು ಬರೆಯಕೂತರೆ,
ಯೋಚನೆಗಳೇನೋ ಸರಸರ ಅಂತ ಬರುತ್ತಿದ್ದುವು. ಆದರೆ ಅವನ್ನು ಕಾಗದದ
ಮೇಲೆ ಇಳಿಸುವ ಮೊದಲೇ, ಒಂದು ಯೋಚನೆಯು ಮಾಯವಾಗಿ ಇನ್ನೊಂದು
ಮೂಡುತ್ತಿತ್ತು. ಅದನ್ನು ಬರೆಯ ಹೋದರೆ ಅದರ ಪಾಡೂ ಹಾಗೆಯೇ.
ನಾಲೈದು ನಿಮಿಷಗಳಲ್ಲಿ ಬರೆದು ಮುಗಿಸುತ್ತಿದ್ದ ಕಾಗದಕ್ಕೆ ಈಗ ಅವ ೧೫-
೨೦ ನಿಮಿಷಗಳನ್ನುತೆಗೆದುಕೊಳ್ಳುತ್ತಿದ್ದ. ಕಾಗದವನ್ನು ಮುಗಿಸಿ, ಲಕ್ಕೋಟೆಯಲ್ಲಿಟ್ಟು
ಅಂಟಿಸಿ, ಸ್ಟಾಂಪು ಹಚ್ಚಿ, ಅಂಚೆಗೆ ಹಾಕಿ ಬಂದಮೇಲೆ, ಅಗತ್ಯವಾಗಿದ್ದ ಮೂರು
ನಾಲ್ಕು ವಿಷಯಗಳನ್ನು ಬರೆಯಲೇ ಇಲ್ಲವಲ್ಲಾ ಎಂದು ಜ್ಞಾಪಿಸಿಕೊಂಡು,
ಮರುಗುತ್ತಿದ್ದ.
{{gap}}ದಿಳ್ಳಿಗೆ ಜರೂರಾಗಿ ಕಳುಹಿಸಬೇಕಾದ ಕೆಲವು ಕಾಗದ ಪತ್ರಗಳನ್ನು,
ಮಾಚಯ್ಯನ ವಶಕ್ಕೆ ಸಾಹೇಬರು ಕೊಟ್ಟರು. ಇವುಗಳ ಪ್ರತಿಯನ್ನು
ತೆಗೆದಿಟ್ಟುಕೊಂಡು, ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ರಿಜಿಸ್ಟರ್ಡ್ ಪೋಸ್ಟ್<noinclude></noinclude>
42awgdm17ji2bapkzkjyztpp9ivq2rv
ಪುಟ:ಮನಮಂಥನ.pdf/೨೧೯
104
62666
316651
315550
2026-05-04T03:15:11Z
Shreesha Sharma
7840
/* Validated */
316651
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೨೦೦}}{{Right|ಮನಮಂಥನ}}
ಮೂಲಕ ಕಳಿಸಬೇಕು ಎಂದು ಹೇಳಿದ್ದರು. ಜವಾಬ್ದಾರಿಯ ಇಂತಹ ಕೆಲಸವನ್ನು
ಮಾಚಯ್ಯ ಹಿಂದೆ ಎಷ್ಟೋ ಬಾರಿ ಅಣಿಯಾಗಿ ಮಾಡಿದ್ದ. ಆದರೆ ಈ ಸರ್ತಿ
ಏನಾಯಿತೋ? ಸಂಜೆ ನಾಲ್ಕರ ವೇಳೆಗೆ ಸಾಹೇಬರು ಬಂದು, ಅಂಚೆಗೆ
ಅವನ್ನು ಕಳಿಸಿದೆಯಾ ಎಂದು ಕೇಳಿದಾಗ, ಅವು ಮಾಚಯ್ಯನ ಮೇಜು ಮೇಲೇ
ಇದ್ದವು. ಎಲ್ಲರೆದುರಿಗೂ ಸಾಹೇಬರು ಮಾಚಯ್ಯನನ್ನು ಸಿಕ್ಕಾಪಟ್ಟೆ ಬೈದರು.
ಮಾಚಯ್ಯನಿಗೆ ತುಂಬಾ ಅವಮಾನವಾಗಿತ್ತು ; ಮುಖ ಇಳಿದುಹೋಯಿತು ;
ಯಾಕೆ ಹೀಗೆ ಮಾಡಿದೆ, ಏಕೆ ಮರತೆ ಎನ್ನುವುದು ಅವನಿಗೆ ತಿಳಿದಿದ್ದರೆ,
ಸಮಂಜಸವಾದ ನೆಪವನ್ನಾದರೂ ಹೂಡುತ್ತಿದ್ದ. ಈಗ ಮಂಕು ಹಿಡಿದವನಂತೆ
ಸಾಹೇಬರೆದುರು ನಿಂತಿದ್ದ. ಬಾಯಿ ತೆರೆಯಲೇ ಇಲ್ಲ.
{{gap}}ಅಂದು ಮನೆಗೆ ಹಿಂತಿರುಗಿದಾಗ, ಕೆಲಸದಿಂದ ನನ್ನನ್ನು ತೆಗೆದುಹಾಕಬಹುದು
ಎಂದು ಖಿನ್ನನಾಗಿದ್ದ.
{{gap}}ಮನೆಗೆ ಬಂದು ಕೊಠಡಿಯಲ್ಲಿ ಒಬ್ಬನೇ ಕುಳಿತಾಗ, ಬಿಕ್ಕಿಬಿಕ್ಕಿ ಅಳತೊಡಗಿದ.
ಅಳುವನ್ನು ತಡೆದುಕೊಳ್ಳಲು ಎಷ್ಟೆಷ್ಟೋ ಪ್ರಯತ್ನಪಟ್ಟಿದ್ದ. ಆದರೆ ಅಳುವು ಉಕ್ಕುತ್ತಲೇ
ಇತ್ತು. ಎಂಟು ಹತ್ತು ನಿಮಿಷಗಳಾದ ಮೇಲೆ, ಸ್ನೇಹಿತನು ಬಂದು ಬಾಗಿಲು
ತಟ್ಟಿದಾಗ, ಅಳುವು ನಿಂತಿತು. ಎದ್ದು ಹೋಗಿ ಬಾಗಿಲನ್ನು ತೆಗೆದ. ಕೆಂಪೇರಿದ್ದ
ಹಾಗೂ ದುಗುಡದಿಂದ ಮುದುಡಿದ್ದ ಇವನ ಮುಖವನ್ನು ಕಂಡು, 'ಏನಾಯ್ಕ,
ಮಾಚಯ್ಯ, ನಿನಗೆ' ಎಂದು ಸ್ನೇಹಿತನು ಕೇಳಿದ. ಒಳಗೆ ಬಂದು ಸ್ನೇಹಿತನೊಂದಿಗೆ
ಕೂರುವ ವೇಳೆಗೆ ತಿರುಗಿ ಬುಳುಬುಳು ಆಳಲಾರಂಭಿಸಿದ. ಸುಮಾರು ಅರ್ಧ
ಗಂಟೆಯಾದನಂತರ, ಸ್ನೇಹಿತನಿಗೆ ಮಾಚಯ್ಯನ ತಾಪತ್ರಯದ ವಿವರಗಳು
ತಿಳಿದುವು. 'ಹೆಗಲ ಮೇಲೆ ಕೋವಿ ಹಾಕಿಕೊಂಡು ಕಾಡಿನಲ್ಲಿ ಒಬ್ಬನೇ ಹುಲಿ
ಷಿಕಾರಿಗೆ ಹೋಗುವ ಗಂಡು ನೀನು; ಇದಕ್ಕೆಲ್ಲಾ ಅಳಬೇಕೇನೋ? ಅಲ್ಪ ಸ್ವಲ್ಪ
Nervous Breakdown ಆಗಿರಬೇಕು. ನಾಳೆ ಬೆಳಿಗ್ಗೆ ನನ್ನ ಜತೆಯಲ್ಲಿ ಬಾ.
ಡಾಕ್ಟರ ಸಲಹೆ ಪಡೆಯೋಣ' ಎಂದು ಸ್ನೇಹಿತ ಹೇಳಿದ. ಅವನನ್ನು ಬೀಳ್ಕೊಡುವ
ವೇಳೆಗೆ ಮಾಚಯ್ಯ ಸ್ವಲ್ಪ ಸಮಾಧಾನದಿಂದಿದ್ದ.
{{gap}}ಮಾರನೆಯ ದಿನ ಮನೋವೈದ್ಯರ ಬಳಿಗೆ ಮಾಚಯ್ಯನನ್ನು ಸ್ನೇಹಿತ
ಕರೆದುಕೊಂಡು ಹೋದ. ಅಳುವನ್ನೂ ದುಗುಡವನ್ನೂ ಮಾಚಯ್ಯನಲ್ಲಿ ಕಂಡಮೇಲೆ,
ಈ ವಿಷಯಗಳನ್ನು ತಕ್ಕಮಟ್ಟಿಗೆ ತಿಳಿದುಕೊಂಡಿದ್ದ ಸ್ನೇಹಿತ, ಮನೋವೈದ್ಯರಲ್ಲಿಗೆ
ಹೋಗುವುದು ಸೂಕ್ತ ಎಂದು ನಿರ್ಧರಿಸಿದ್ದ.<noinclude></noinclude>
ipspvbn3zjhy7k1hwcirb874pbgw2fd
ಪುಟ:ಮನಮಂಥನ.pdf/೨೨೦
104
62667
316652
315551
2026-05-04T03:16:24Z
Shreesha Sharma
7840
/* Validated */
316652
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು}}{{Right|೨೦೧}}
ಮನೋವೈದ್ಯರು ಪರೀಕ್ಷಿಸಿದ ನಂತರ ಹೇಳಿದರು :
{{gap}}'ಒಂಟಿಯಾಗಿ ಕೆಲವು ತಿಂಗಳುಗಳು ಇದ್ದಾಗಲೇ ನಿಮಗೆ ಲಘು ಡಿಪ್ರೆಷನ್
ಪ್ರಾರಂಭವಾಗಿತ್ತು. ನಿಮ್ಮ ತಾಯಿಯವರಿಗೆ ಆಗಿಂದಾಗ್ಗೆ ಭೂತದ ಕಾಟ
ಬಡಿಯುತ್ತಿತ್ತು ಎಂದಿರಿ. ಪ್ರಾಯಶಃ ಮನಃಸ್ವಾಸ್ಥ್ಯವು ಆಗಾಗ್ಗೆ ಕೆಡುತ್ತಿದ್ದಿರಬೇಕು.
ಅಂತಹುವನ್ನು ಭೂತಚೇಷ್ಟೆ ಎಂದು ಹಿಂದಿನ ಕಾಲದವರು ಹೇಳುತ್ತಿದ್ದರು.
ಡಿಪ್ರೆಷನ್ ಶುರುವಾದಾಗ, ಮನಸ್ಸು ವಿಹ್ವಲವಾಗುತ್ತದೆ. ಸ್ಮರಣಶಕ್ತಿಯು
ಅಸ್ತವ್ಯಸ್ತವಾಗುತ್ತದೆ. ಒಂದೊಂದು ಬಾರಿ ತಪ್ಪು ಮಾಡಿದಾಗಲೂ, ಮುಂದೇನಪ್ಪ
ಗತಿ ಎನ್ನುವ ಭಯವು ಹೆಚ್ಚಾಗುತ್ತ ಹೋಗುತ್ತದೆ. ಭಯದಿಂದ ಆತಂಕ ;
ಆತಂಕದಿಂದ ಭಯ ; ಎರಡೂ ಕೂಡಿಕೊಂಡು ನಿರುತ್ಸಾಹವು ಬೆಳೆಯುತ್ತದೆ.
ಎಲ್ಲರೆದುರಿಗೂ ಅವಮಾನವಾದರೆ ನಿರುತ್ಸಾಹ, ಮತ್ತು ಆತಂಕಗಳು
ಅತಿಯಾಗುತ್ತವೆ.
{{gap}}ಆದರೆ ನಿಮ್ಮಲ್ಲಿ ಡಿಪ್ರೆಷನ್ ಬಹಳ ಲಘುಸ್ವರೂಪದ್ದು. ಖಂಡಿತವಾಗಿ
ಇದನ್ನು ಕೆಲವು ವಾರಗಳಲ್ಲಿ ಗುಣಪಡಿಸಬಹುದು. 'ಇವತ್ತಿನಿಂದಲೇ ಚಿಕಿತ್ಸೆಯನ್ನು
ಆರಂಭಿಸೋಣ' ಎಂದು.
{{gap}}'ಕೆಲಸಕ್ಕೆ ರಜ ತೆಗೆದುಕೊಂಡು, ಚಿಕಿತ್ಸೆ ಮಾಡಿಸಿಕೊಂಡರೆ ಒಳ್ಳೆಯದಲ್ಲವೆ?'
ಎಂದು ಸ್ನೇಹಿತ ಕೇಳಿದ.
{{gap}}'ಒಬ್ಬರೇ ಮನೆಯಲ್ಲಿರುವುದಕ್ಕಿಂತ, ಕೆಲಸದ ಮೇಲಿರುವುದು ವಾಸಿ,
ಅಥವಾ ಊರಿಗೆ ಹೋಗಿ ಎಲ್ಲರ ಜತೆಯಲ್ಲೂ ಮನೆಯಲ್ಲಿದ್ದುಕೊಂಡು ಚಿಕಿತ್ಸೆಯನ್ನು
ಮಾಡಿಸಿಕೊಳ್ಳುತ್ತೇನೆ ಎನ್ನುವುದಾದರೆ ಹಾಗೂ ಮಾಡಬಹುದು.
ಮಾಡಬೇಕಾದುದನ್ನು ವಿಶದವಾಗಿ ಬರೆದುಕೊಡುತ್ತೇನೆ” ಎಂದರು ವೈದ್ಯರು.
{{gap}}'ನಮ್ಮನೆ ಇರುವುದು ಹಳ್ಳಿಯೊಂದರಲ್ಲಿ, ವೈದ್ಯರ ನೆರವಿಗೆ ಆರು ಮೈಲಿ
ಹೋಗಬೇಕು. ಈ ಅವಸ್ಥೆಯಲ್ಲಿ ನಾನಿರುವುದನ್ನು, ನಮ್ಮನೆಯವರು ನೋಡುವುದು
ಬೇಡ. ಇಲ್ಲೇ ಇದ್ದು ಕೆಲಸಕ್ಕೆ ಹೋಗುತ್ತಾ ಚಿಕಿತ್ಸೆಯನ್ನು ಪಡೆಯುತ್ತೇನೆ' ಎಂದು
ಮಾಚಯ್ಯ ಹೇಳಿದ.
{{gap}}ಒಂದು ವಾರದೊಳಗೆ ಮಾಚಯ್ಯ ಗೆಲುಮುಖನಾದ. 'ಮುಕ್ಕಾಲುಪಾಲು
ನನ್ನ ತಳಮಳವೆಲ್ಲಾ ಹೋಯಿತು, ಸಾರ್ ! ಈಗ ಅಷ್ಟಾಗಿ ಮರೆಯುವುದಿಲ್ಲ.
ಆತಂಕವೂ ಮನಸ್ಸಿನಲ್ಲಿಲ್ಲ, ಕೆಲಸ ಮಾಡುವಾಗ ಇತ್ತಿಂದೀಚೆಗೆ ಇದ್ದ, “ಯಾವ
ತಪ್ಪು ಮಾಡಿಬಿಡುತ್ತೇನೋ ಎನ್ನುವ ಭಯವೂ ಮುತ್ತುವುದಿಲ್ಲ. ಹಸಿವೂ ಸರಿಯಾಗಿ
ಆಗುತ್ತಿದೆ. ನಿದ್ರೆಯೂ ಬರುತ್ತಿದೆ' ಎಂದು ವರದಿ ಒಪ್ಪಿಸಿದ.<noinclude></noinclude>
n3g54hmunhc249nebkqs2yq2l3cd72d
ಪುಟ:ಮನಮಂಥನ.pdf/೨೨೧
104
62668
316653
314384
2026-05-04T03:16:52Z
Shreesha Sharma
7840
316653
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೨೦೨}}{{Right|ಮನಮಂಥನ}}
{{gap}}ಡಿಪ್ರೆಷನ್ ಅವಸ್ಥೆಯಲ್ಲಿ ಚಿಹ್ನೆಗಳು ಘೋರವಾಗಿ ಕಂಡರೂ, ಬಲು
ಬೇಗ ಸೂಕ್ತ ಚಿಕಿತ್ಸೆಯಿಂದ ಗುಣವಾಗುತ್ತದೆ ಎಂಬುದು ತಿಳಿದಿದ್ದರೆ, ಇವೆಲ್ಲಾ
ಲಘು ಡಿಪ್ರೆಷನ್ನಲ್ಲಿ ಕಾಣಬರುತ್ತವೆ ಎಂದು ತಿಳಿದಿದ್ದರೆ, ಭವಿಷ್ಯದ ಭಯವೂ
ಕಡಿಮೆಯಾಗುತ್ತದೆ. ಆತಂಕವು ಕರಗುತ್ತದೆ. ಡಿಪ್ರೆಷನ್ನಿನ ನಿರುತ್ಸಾಹವೂ ಹೋಗಿ,ಉತ್ಸಾಹವು ಬಲುಬೇಗ ಮೂಡುವಂತಾಗುತ್ತದೆ.<noinclude></noinclude>
8l85s9k7gyi6dtnvvgushkzdk91q3ph
ಪುಟ:ಮನಮಂಥನ.pdf/೨೨೨
104
62669
316654
315552
2026-05-04T03:18:42Z
Shreesha Sharma
7840
/* Validated */
316654
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|'''೬. ಜೋಫ್ರೆನಿಯಾಗಳು'''}}
'''ಸೀತುವಿನ ಸ್ಕಿಜೋ'''
{{gap}}ಸೀತಾರಾಮ ಜಾಣ ಹುಡುಗ, ಬಾಲ್ಯದಿಂದಲೂ ಹಿರಿಯರು ಹೇಳಿದ
ಹಾಗೆ ನಡೆದುಕೊಳ್ಳುತ್ತಿದ್ದ. ತುಂಬಾ ತಂಟೆ ತಕರಾರು ಮಾಡಿ, ತಾಯ್ತಂದೆಯರನ್ನು,
ತುಂಟ ಮಕ್ಕಳಂತೆ ಗೋಳು ಹುಯ್ದುಕೊಳ್ಳುತ್ತಿರಲಿಲ್ಲ. ಅಂದರೆ ಪೆದ್ದು ಅಂತಲ್ಲ.
ಪ್ರತಿ ಪರೀಕ್ಷೆಯಲ್ಲೂ ನೂರಕ್ಕೆ ಎಪ್ಪತ್ತು ಎಂಭತ್ತು ಮಾರ್ಕುಗಳನ್ನು ಸುಲಭವಾಗಿ
ಪಡೆಯುತ್ತಿದ್ದ. ಸ್ವಲ್ಪ ಸಂಕೋಚಪ್ರವೃತ್ತಿಯಾದುದರಿಂದ, ತಾನೇ ಮೇಲು
ಬಿದ್ದುಕೊಂಡು ಯಾವುದಕ್ಕೂ ತಲೆಹಾಕುತ್ತಿರಲಿಲ್ಲ. ಅಷ್ಟಾಗಿ ಹೆಚ್ಚು ಸ್ನೇಹಿತರೂ
ಅವನಿಗಿರಲಿಲ್ಲ. ಜತೆ ಹುಡುಗರೊಂದಿಗೆ ಆಟಗಳನ್ನು ಆಡುತ್ತಿದ್ದ. ಆದರೆ
ಅವರೊಡನೆ ಗಾಢ ಸ್ನೇಹವನ್ನಾಗಲೀ ತುಂಬಾ ಸಲಿಗೆಯನ್ನಾಗಲೀ ಬೆಳೆಸಿಕೊಳ್ಳಲಿಲ್ಲ.
{{gap}}ಹೈಸ್ಕೂಲಿನಲ್ಲಿ ಓದುವುದಕ್ಕೆ ಸೇರಿದಾಗ ಅವನಿಗಿನ್ನೂ ಹನ್ನೆರಡೇ ವಯಸ್ಸು.
ಲೈಬ್ರೆರಿಯಿಂದ ಪುಸ್ತಕಗಳನ್ನು ತಂದು ಓದುತ್ತಿದ್ದ ಹುಡುಗರಲ್ಲಿ ಸೀತುವು ಅಗ್ರಗಣ್ಯ.
'ಓದುವುದರಲ್ಲಿ ತುಂಬಾ ಆಸಕ್ತಿ ಇರುವ ಹುಡುಗ ಅಂದರೆ ನೀನಪ್ಪಾ ; ಚೆನ್ನಾಗಿ
ಓದಿಕೊಂಡು ಯಶಸ್ವಿಯಾಗು' ಎಂದು ಲೈಬ್ರೇರಿಯನ್ ಅವನನ್ನು ಹೊಗಳಿದ್ದರು.
ಆದರೆ ಒಂದು ವಿಚಿತ್ರ ಸ್ವಭಾವವು ಎದ್ದು ಕಾಣುತ್ತಿತ್ತು. ಕ್ಲಾಸಿನ ಹುಡುಗರೆಲ್ಲ
ಬಿಳಿಯದು ಅಥವಾ ಕಪ್ಪು ಬಣ್ಣದ ಟೋಪಿಯನ್ನು ಹಾಕಿಕೊಳ್ಳುತ್ತಿದ್ದರು. ಇವ
ಹಳದಿ ಟೋಪಿಯನ್ನು ಹೊಲಿಸಿ ಹಾಕಿಕೊಂಡಿದ್ದ. ಜತೆ ಹುಡುಗರು ಎಷ್ಟು
ಗೇಲಿ ಎಬ್ಬಿಸಿದರೂ ಸೀತು ತೆಪ್ಪಗಿರುತ್ತಿದ್ದ. ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಓದುವ
ವರ್ಷದ ಮೊದಲಲ್ಲಿ ಕೈಗಡಿಯಾರವನ್ನು ತಂದೆ ತಂದುಕೊಟ್ಟರು. 'ಇದು ಬೇಡ,
ಅಪ್ಪಾ ! ಜೇಬು ಗಡಿಯಾರವನ್ನು ತಂದರೆ ತುಂಬಾ ಚೆನ್ನ' ಎಂದು ಹೇಳಿ, ಹಠ
ಹಿಡಿದು ಜೇಬು ಗಡಿಯಾರವನ್ನು ತರಿಸಿಕೊಂಡ. ಹೈಸ್ಕೂಲಿನಲ್ಲೆಲ್ಲಾ ಜೇಬು
ಗಡಿಯಾರವಿದ್ದವರು ಇಬ್ಬರು ; ಸಂಸ್ಕೃತದ ಮಾಸ್ತರೊಬ್ಬರು ; ನಮ್ಮ ಸೀತು
ಇನ್ನೊಬ್ಬ. ಜತೆ ಹುಡುಗರ ಗೇಲಿಗೆ ಇದೂ ಒಂದು ವಸ್ತುವಾಗಿತ್ತು.
{{gap}}ಶಾಲೆಯಲ್ಲಿದ್ದ ಹುಡುಗರೆಲ್ಲರೂ ತಲೆಯ ಕ್ರಾಪ್ ಮಾಡಿಸಿಕೊಂಡಿದ್ದರು.
ಇವ ಮಾತ್ರ ಪಿಳ್ಳುಜುಟ್ಟಿನ ಗಂಟನ್ನು ಕಟ್ಟಿಕೊಳ್ಳುತ್ತಿದ್ದ. ವೈದಿಕರ ಮನೆಯವನು<noinclude></noinclude>
bwzyeozfkrc76tmi94c43r78io1yzso
ಪುಟ:ಮನಮಂಥನ.pdf/೨೨೩
104
62670
316594
315554
2026-05-03T18:02:51Z
Pragathi. BH
7585
/* Validated */
316594
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೨೦೪|right=ಮನಮಂಥನ}}
ಅಂತ ಹಾಗೆ ಮಾಡಿರಲಿಲ್ಲ. ಮನೆಯಲ್ಲಿ ಗಂಡಸರಾರೂ ಸಂಧ್ಯಾವಂದನೆಯನ್ನು
ಮಾಡುತ್ತಿರಲಿಲ್ಲ. ಸ್ವಂತ ಖುಷಿಯಿಂದ ಸೀತು ಹಾಗೆ ಮಾಡಿಕೊಂಡಿದ್ದ.
ಸಾಯಂಕಾಲದ ವೇಳೆಯಲ್ಲಿ ವಾಕಿಂಗ್ ಹೋದ ಅನ್ನಿ, ಒಬ್ಬನೇ ಹೋಗುತ್ತಿದ್ದ.
ದೊಡ್ಡ ಮರದಡಿಯಲ್ಲಿ ಒಂಟಿಯಾಗಿ ಅರ್ಧಗಂಟೆ ಮುಕ್ಕಾಲು ಗಂಟೆ ಕೂರುತ್ತಿದ್ದ.
ಹಾಗೆ ಕೂತು ಪದ್ಯ ಬರೆದ ಅಂತಲೇ ! ಉಹೂ ಸುಮ್ಮನೆ ಕುಳಿತಿರುತ್ತಿದ್ದ.
ಯಾವ ಗಾಢವಾದ ಆಲೋಚನೆಯಿತ್ತೋ, ಭಗವಂತ ಒಬ್ಬ ಬಲ್ಲ. ಬೇಜಾರಿಲ್ಲದೆ
ಸೀತು ಕೂತಿರುತ್ತಿದ್ದ.
ಇಂತಹ ವಿಚಿತ್ರ ವರ್ತನೆಗಳನ್ನು ಬಿಟ್ಟರೆ, ಮಿಕ್ಕಂತೆ, ಸೀತು ಚೂಟಿಯಾಗಿದ್ದ.
ಮನೆಯವರ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದ. ಮಾಸ್ತರಗಳಿಗೆ ಪ್ರಿಯಶಿಷ್ಯನಾಗಿದ್ದ.
ಮಿತಭಾಷಿಯಾಗಿದ್ದರೂ ಸರಸಭಾಷಿ.
ಬೇರೆ ಊರಿನಲ್ಲಿ ಕಾಲೇಜು ಸೇರಬೇಕಾಯಿತು; ಎಸ್.ಎಸ್.ಎಲ್.ಸಿ.
ಆದಮೇಲೆ. ಕಾಲೇಜು ಹಾಸ್ಟೆಲಿನಲ್ಲಿ ಸ್ಥಳವೂ ದೊರಕಿತು. ಕಾಲೇಜು
ಹಾಸ್ಟೆಲಿನಲ್ಲಿದ್ದರೂ ಏಕಾಂಗಿಯಾಗಿರುವ ಪ್ರವೃತ್ತಿಯನ್ನು ಬದಲಾಯಿಸಲಿಲ್ಲ.
ಅವನಿಗೆ ಸಿಕ್ಕ ರೂಂಮೇಟ್ ಆದರೋ ತುಂಬಾ ನಗು ಸರಸಿ. ಆದರೂ
ಇವನನ್ನು ಒಲಿಸಿಕೊಳ್ಳುವುದಕ್ಕಾಗಲೀ, ಮಾತಿಗೆ ಎಳೆಯುವುದಕ್ಕಾಗಲೀ, ಅವನಿಗೆ
ಸಾಧ್ಯವಾಗಲಿಲ್ಲ. ಹೀಗೆ ಅವ ಪ್ರಯತ್ನವನ್ನು ಮಾಡಿದಾಗ, ಸೀತು ಮುಖವನ್ನು
ಸಿಂಡರಿಸಿ ಕೊಂಡಿದ್ದ. 'ಮುಟ್ಟಿದರೆ ಮುನೀ ಕಣೋ ನೀನು' ಎಂದು ಹೇಳೀ
ರೂಂಮೇಟ್ ಅಲಕ್ಕಾದ.
ಎರಡನೆಯ ವರ್ಷದ ಬಿ.ಎ. ಅಲ್ಲಿ ಸೀತು ಓದುತ್ತಿದ್ದ. ಕ್ಲಾಸಿಗೆ ಹೋಗುವುದಕ್ಕೆ
ಮುಂಚೆ, ತೆಗೆದುಕೊಂಡು ಹೋಗಬೇಕಾದ ಪುಸ್ತಕಗಳನ್ನು ಎತ್ತಿಟ್ಟುಕೊಳ್ಳುವಾಗ
ತುಂಬಾ ನಿಧಾನಿಸಲು ಆರಂಭಿದ. ಇವತ್ತು ಕ್ಷೌರವನ್ನು ಮಾಡಿಕೊಳ್ಳಲೋ,
ನಾಳಿನ ತನಕ ತಡೆಯುತ್ತದೆಯೋ ಎಂಬುದನ್ನು ನಿರ್ಧರಿಸಲು ಕಷ್ಟಪಡತೊಡಗಿದ.
'ಇಷ್ಟು ಸಣ್ಣ ವಿಷಯಕ್ಕೆಲ್ಲಾ ಯಾಕೆ ತೊಂಚಾವಂಚ ಪಡುತ್ತೀಯೋ' ಎಂದು
ರೂಂಮೇಟ್ ಹೇಳಿದುದು ಯಾವ ಪ್ರಯೋಜನವನ್ನೂ ಮಾಡಲಿಲ್ಲ.
ಅಂತರ ವಿಶ್ವವಿದ್ಯಾಲಯಗಳ ಟೆನ್ನಿಸ್ ಚಾಂಪಿಯನ್ಷಿಪ್ಪನ್ನು ರೂಂಮೇಟ್
ಗಳಿಸಿದ. ಕಾಲೇಜಿನ ವಿದ್ಯಾರ್ಥಿಗಳು ಅದೆಷ್ಟೋ ಸಂಭ್ರಮಪಟ್ಟರು. ಹಾಸ್ಟೆಲಿನ
ವಿದ್ಯಾರ್ಥಿಗಳನಕ ಕುಣಿದು ಕುಪ್ಪಳಿಸಿ ಹಬ್ಬ ಮಾಡಿದರು. ಆದರೆ ಸ್ವಂತ
ರೂಂಮೇಟ್ ಆಗಿದ್ದ ಸೀತು ಯಾವ ಸಡಗರವನ್ನಾಗಲೀ, ಸಂತೋಷವನ್ನಾಗಲೀ
ವ್ಯಕ್ತಪಡಿಸಲಿಲ್ಲ. ನಿರ್ಲಿಪ್ತನಂತೆ ನಡೆದುಕೊಂಡ.<noinclude></noinclude>
q5h46lo5j2a5evfjejgucuxlny72mjp
316595
316594
2026-05-03T18:03:30Z
Pragathi. BH
7585
316595
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೨೦೪|right=ಮನಮಂಥನ}}
ಅಂತ ಹಾಗೆ ಮಾಡಿರಲಿಲ್ಲ. ಮನೆಯಲ್ಲಿ ಗಂಡಸರಾರೂ ಸಂಧ್ಯಾವಂದನೆಯನ್ನು
ಮಾಡುತ್ತಿರಲಿಲ್ಲ. ಸ್ವಂತ ಖುಷಿಯಿಂದ ಸೀತು ಹಾಗೆ ಮಾಡಿಕೊಂಡಿದ್ದ.
ಸಾಯಂಕಾಲದ ವೇಳೆಯಲ್ಲಿ ವಾಕಿಂಗ್ ಹೋದ ಅನ್ನಿ, ಒಬ್ಬನೇ ಹೋಗುತ್ತಿದ್ದ.
ದೊಡ್ಡ ಮರದಡಿಯಲ್ಲಿ ಒಂಟಿಯಾಗಿ ಅರ್ಧಗಂಟೆ ಮುಕ್ಕಾಲು ಗಂಟೆ ಕೂರುತ್ತಿದ್ದ.
ಹಾಗೆ ಕೂತು ಪದ್ಯ ಬರೆದ ಅಂತಲೇ ! ಉಹೂ ಸುಮ್ಮನೆ ಕುಳಿತಿರುತ್ತಿದ್ದ.
ಯಾವ ಗಾಢವಾದ ಆಲೋಚನೆಯಿತ್ತೋ, ಭಗವಂತ ಒಬ್ಬ ಬಲ್ಲ. ಬೇಜಾರಿಲ್ಲದೆ
ಸೀತು ಕೂತಿರುತ್ತಿದ್ದ.
{{gap}}ಇಂತಹ ವಿಚಿತ್ರ ವರ್ತನೆಗಳನ್ನು ಬಿಟ್ಟರೆ, ಮಿಕ್ಕಂತೆ, ಸೀತು ಚೂಟಿಯಾಗಿದ್ದ.
ಮನೆಯವರ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದ. ಮಾಸ್ತರಗಳಿಗೆ ಪ್ರಿಯಶಿಷ್ಯನಾಗಿದ್ದ.
ಮಿತಭಾಷಿಯಾಗಿದ್ದರೂ ಸರಸಭಾಷಿ.
{{gap}}ಬೇರೆ ಊರಿನಲ್ಲಿ ಕಾಲೇಜು ಸೇರಬೇಕಾಯಿತು; ಎಸ್.ಎಸ್.ಎಲ್.ಸಿ.
ಆದಮೇಲೆ. ಕಾಲೇಜು ಹಾಸ್ಟೆಲಿನಲ್ಲಿ ಸ್ಥಳವೂ ದೊರಕಿತು. ಕಾಲೇಜು
ಹಾಸ್ಟೆಲಿನಲ್ಲಿದ್ದರೂ ಏಕಾಂಗಿಯಾಗಿರುವ ಪ್ರವೃತ್ತಿಯನ್ನು ಬದಲಾಯಿಸಲಿಲ್ಲ.
ಅವನಿಗೆ ಸಿಕ್ಕ ರೂಂಮೇಟ್ ಆದರೋ ತುಂಬಾ ನಗು ಸರಸಿ. ಆದರೂ
ಇವನನ್ನು ಒಲಿಸಿಕೊಳ್ಳುವುದಕ್ಕಾಗಲೀ, ಮಾತಿಗೆ ಎಳೆಯುವುದಕ್ಕಾಗಲೀ, ಅವನಿಗೆ
ಸಾಧ್ಯವಾಗಲಿಲ್ಲ. ಹೀಗೆ ಅವ ಪ್ರಯತ್ನವನ್ನು ಮಾಡಿದಾಗ, ಸೀತು ಮುಖವನ್ನು
ಸಿಂಡರಿಸಿ ಕೊಂಡಿದ್ದ. 'ಮುಟ್ಟಿದರೆ ಮುನೀ ಕಣೋ ನೀನು' ಎಂದು ಹೇಳೀ
ರೂಂಮೇಟ್ ಅಲಕ್ಕಾದ.
{{gap}}ಎರಡನೆಯ ವರ್ಷದ ಬಿ.ಎ. ಅಲ್ಲಿ ಸೀತು ಓದುತ್ತಿದ್ದ. ಕ್ಲಾಸಿಗೆ ಹೋಗುವುದಕ್ಕೆ
ಮುಂಚೆ, ತೆಗೆದುಕೊಂಡು ಹೋಗಬೇಕಾದ ಪುಸ್ತಕಗಳನ್ನು ಎತ್ತಿಟ್ಟುಕೊಳ್ಳುವಾಗ
ತುಂಬಾ ನಿಧಾನಿಸಲು ಆರಂಭಿದ. ಇವತ್ತು ಕ್ಷೌರವನ್ನು ಮಾಡಿಕೊಳ್ಳಲೋ,
ನಾಳಿನ ತನಕ ತಡೆಯುತ್ತದೆಯೋ ಎಂಬುದನ್ನು ನಿರ್ಧರಿಸಲು ಕಷ್ಟಪಡತೊಡಗಿದ.
'ಇಷ್ಟು ಸಣ್ಣ ವಿಷಯಕ್ಕೆಲ್ಲಾ ಯಾಕೆ ತೊಂಚಾವಂಚ ಪಡುತ್ತೀಯೋ' ಎಂದು
ರೂಂಮೇಟ್ ಹೇಳಿದುದು ಯಾವ ಪ್ರಯೋಜನವನ್ನೂ ಮಾಡಲಿಲ್ಲ.
{{gap}}ಅಂತರ ವಿಶ್ವವಿದ್ಯಾಲಯಗಳ ಟೆನ್ನಿಸ್ ಚಾಂಪಿಯನ್ಷಿಪ್ಪನ್ನು ರೂಂಮೇಟ್
ಗಳಿಸಿದ. ಕಾಲೇಜಿನ ವಿದ್ಯಾರ್ಥಿಗಳು ಅದೆಷ್ಟೋ ಸಂಭ್ರಮಪಟ್ಟರು. ಹಾಸ್ಟೆಲಿನ
ವಿದ್ಯಾರ್ಥಿಗಳನಕ ಕುಣಿದು ಕುಪ್ಪಳಿಸಿ ಹಬ್ಬ ಮಾಡಿದರು. ಆದರೆ ಸ್ವಂತ
ರೂಂಮೇಟ್ ಆಗಿದ್ದ ಸೀತು ಯಾವ ಸಡಗರವನ್ನಾಗಲೀ, ಸಂತೋಷವನ್ನಾಗಲೀ
ವ್ಯಕ್ತಪಡಿಸಲಿಲ್ಲ. ನಿರ್ಲಿಪ್ತನಂತೆ ನಡೆದುಕೊಂಡ.<noinclude></noinclude>
8e7rzpctk4vjel6pbnn0oq6j9k8xmag
ಪುಟ:ಮನಮಂಥನ.pdf/೨೨೪
104
62671
316596
315555
2026-05-03T18:05:24Z
Pragathi. BH
7585
/* Validated */
316596
proofread-page
text/x-wiki
<noinclude><pagequality level="4" user="Pragathi. BH" /></noinclude>ಸ್ಕಿಜೋಫೊನಿಯಾಗಳು
೨೦೫
ಮೇಜಿನ ಮೇಲೆ ಪುಸ್ತಕವನ್ನಿಟ್ಟುಕೊಂಡು ಓದುವುದಕ್ಕೆಂದು ಸೀತು
ಕುಳಿತುಕೊಳ್ಳುತ್ತಿದ್ದ. ಆದರೆ ಅರ್ಧ ಗಂಟೆಯಾದರೂ ಹಾಳೆಯನ್ನು
ಮಗುಚುತ್ತಿರಲಿಲ್ಲ. "ಯಾಕೋ? ಓದಿದ್ದು ಅರ್ಥವಾಗಲಿಲ್ಲವೇನೋ? ಬೇಕಾದರೆ
ಹೇಳಿಕೊಡ್ತೀನಿ' ಎಂದು ರೂಂಮೇಟ್ ಹೇಳಿದರೆ ; ಅವನನ್ನು ದುರುಗುಟ್ಟಿಕೊಂಡು
ಸೀತು ನೋಡಿದ. ಉತ್ತರವೀಯಲಿಲ್ಲ.
'ದುರುಗುಟ್ಟಿಕೊಂಡು ಹುಚ್ಚನ ತರಹ ನೋಡ್ತಾನೆ; ಈ ಪೀಡೆಯ ಸಹವಾಸ
ನನಗೇಕೆ' ಎಂದು ರೂಂಮೇಟ್ ಮಾತನಾಡಿಸುವುದನ್ನು ಬಿಟ್ಟುಬಿಟ್ಟ, ಹಾಸ್ಟೆಲಿನ
ಇತರ ಹುಡುಗರ ಹತ್ತಿರ ಇದನ್ನೆಲ್ಲಾ ಅವ ಹೇಳಿದ. ರೂಂ ಬದಲಾಯಿಸಿಕೊಂಡು
ಬಿಡೋ, ಅವಕಾಶ ದೊರೆತಾಗ ಎಂದು ಸ್ನೇಹಿತರು ಹೇಳಿದರೇ ಹೊರತು,
ಸೀತುವನ್ನು ವಿಚಾರಿಸಲು ಯಾರೂ ಮುಂದಾಗಲಿಲ್ಲ.
ಪರೀಕ್ಷೆಯು ಆರಂಭವಾಯಿತು. ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆಲ್ಲ
ಆತಂಕವು ಇದ್ದೇ ಇರುತ್ತದೆ. ಆದರೆ ಸೀತುವಿಗೆ ಆತಂಕವಿದ್ದಂತೆ ಕಾಣಲೇ ಇಲ್ಲ.
ಎಲ್ಲರಂತೆಯೇ ಪರೀಕ್ಷೆಗೆ ಹೋಗಿ ಕೂರುತ್ತಿದ್ದ. ಮೂರು ತಾಸುಗಳ ಕಾಲ
ಕೂತಿರುತ್ತಿದ್ದ. ನಂತರ ಎಲ್ಲರಂತೆಯೇ ಎದ್ದು ಬರುತ್ತಿದ್ದ. ಆದರೆ ಉತ್ತರವನ್ನು
ಒಂದು ಹಾಳೆಯಷ್ಟಾದರೂ ಬರೆದಿರುತ್ತಿರಲಿಲ್ಲ. ಪರೀಕ್ಷೆಯಲ್ಲಿ ಉಸ್ತುವಾರಿ
ನೋಡಿಕೊಳ್ಳತ್ತಿದ್ದ ಮಾಸ್ತರು, 'ಯಾಕಪ್ಪಾ ! ಸೀತಾರಾಮ ! ಓದುತ್ತಿಲ್ಲವೇ
ಖಾಲಿ ಉತ್ತರದ ಪುಸ್ತಕವನ್ನು ಕೊಡುತ್ತಿದ್ದೀಯಲ್ಲಾ' ಎಂದು ಕೇಳಿದಾಗ, ಅವರ
ಮುಖವನ್ನು ನೋಡುತ್ತಾ ಯಾವ ರಾಗಭಾವಗಳನ್ನೂ ಕಾಣಿಸದೆ, ಪ್ರತ್ಯುತ್ತರವನ್ನೂ
ಕೊಡದೆ ಹೊರಟು ಹೋಗಿದ್ದ. ಇವನಿಗೇನೋ ಆಗಿದೆ ; ತಲೆ ಕೆಟ್ಟಿರಬಹುದು;
ಅಥವಾ ದುರ್ವ್ಯಸನಗಳು ಅಧಿಕವಾಗಿರಬಹುದು' ಎಂದು ವಾಸ್ತರು
ಅಂದುಕೊಂಡರೇ ವಿನಹಾ ಮತ್ತೆ ಯಾವ ಗಮನವನ್ನೂ ಕೊಡಲಿಲ್ಲ.
ಬೇಸಿಗೆ ರಜಕ್ಕೆ ಮನೆಗೆ ಹಿಂದಿರುಗಿದಾಗ, ಸೀತುವಿನಲ್ಲಿ ಆಗಿದ್ದ
ಬದಲಾವಣೆಯನ್ನು ತಾಯ್ತಂದೆಯರು ಗಮನಿಸಿದರು. ತಮ್ಮತಮ್ಮಲ್ಲೇ
ಮಾತನಾಡಿಕೊಂಡರು. 'ತುಂಬಾ ಓದಿ ದಣಿದಿದ್ದಾನೆ. ಹಾಸ್ಟೆಲಿನಲ್ಲಿ ಸರಿಯಾದ
ಊಟ ಸಿಗುತ್ತಿತ್ತೋ ಇಲ್ಲವೋ? ಆರೈಕೆಯನ್ನು ಮಾಡಿದರೆ ಸರಿಹೋಗಬಹುದು'
ಎಂದಂದುಕೊಂಡರು. ಊಟಕ್ಕೆ ಏಳಪ್ಪಾ ಅಂತ ಅಮ್ಮ ಕರೆದರೆ, ಪುಸ್ತಕ ಓದಬೇಕು;
ಆಮೇಲೆ ಊಟಕ್ಕೆ ಬಡ್ತೀನಿ ಎನ್ನುತ್ತಿದ್ದ. ಪುಸ್ತಕವನ್ನು ಹಿಡಿಯುತ್ತಿರಲಿಲ್ಲ. ಊಟಕ್ಕೂ
ಬರುತ್ತಿರಲಿಲ್ಲ. ಯಾಕಪ್ಪಾ ಹೀಗ್ಯಾಡ್ತೀ ಎಂದು ಒಂದೆರಡು ಸರ್ತಿ ಅಮ್ಮ ಒತ್ತಿ
ಕೇಳಿದಾಗ ಸಿಡುಕುತ್ತಾ ಮನೆಯಿಂದಾಚೆಗೆ ಹೋಗುತ್ತಿದ್ದ. 'ಕೆಟ್ಟ ಕೆಟ್ಟ ಸಿನಿಮಾಗಳನ್ನು<noinclude></noinclude>
ebqrcda5s474y2gon4w0yvyocuh89tq
316597
316596
2026-05-03T18:09:50Z
Pragathi. BH
7585
316597
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಸ್ಕೀಜೋಫ್ರೆನಿಯಾಗಳು|right=೨೦೫}}
{{gap}}ಮೇಜಿನ ಮೇಲೆ ಪುಸ್ತಕವನ್ನಿಟ್ಟುಕೊಂಡು ಓದುವುದಕ್ಕೆಂದು ಸೀತು
ಕುಳಿತುಕೊಳ್ಳುತ್ತಿದ್ದ. ಆದರೆ ಅರ್ಧ ಗಂಟೆಯಾದರೂ ಹಾಳೆಯನ್ನು
ಮಗುಚುತ್ತಿರಲಿಲ್ಲ. "ಯಾಕೋ? ಓದಿದ್ದು ಅರ್ಥವಾಗಲಿಲ್ಲವೇನೋ? ಬೇಕಾದರೆ
ಹೇಳಿಕೊಡ್ತೀನಿ' ಎಂದು ರೂಂಮೇಟ್ ಹೇಳಿದರೆ ; ಅವನನ್ನು ದುರುಗುಟ್ಟಿಕೊಂಡು
ಸೀತು ನೋಡಿದ. ಉತ್ತರವೀಯಲಿಲ್ಲ.
{{gap}}'ದುರುಗುಟ್ಟಿಕೊಂಡು ಹುಚ್ಚನ ತರಹ ನೋಡ್ತಾನೆ; ಈ ಪೀಡೆಯ ಸಹವಾಸ
ನನಗೇಕೆ' ಎಂದು ರೂಂಮೇಟ್ ಮಾತನಾಡಿಸುವುದನ್ನು ಬಿಟ್ಟುಬಿಟ್ಟ, ಹಾಸ್ಟೆಲಿನ
ಇತರ ಹುಡುಗರ ಹತ್ತಿರ ಇದನ್ನೆಲ್ಲಾ ಅವ ಹೇಳಿದ. ರೂಂ ಬದಲಾಯಿಸಿಕೊಂಡು
ಬಿಡೋ, ಅವಕಾಶ ದೊರೆತಾಗ ಎಂದು ಸ್ನೇಹಿತರು ಹೇಳಿದರೇ ಹೊರತು,
ಸೀತುವನ್ನು ವಿಚಾರಿಸಲು ಯಾರೂ ಮುಂದಾಗಲಿಲ್ಲ.
{{gap}}ಪರೀಕ್ಷೆಯು ಆರಂಭವಾಯಿತು. ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆಲ್ಲ
ಆತಂಕವು ಇದ್ದೇ ಇರುತ್ತದೆ. ಆದರೆ ಸೀತುವಿಗೆ ಆತಂಕವಿದ್ದಂತೆ ಕಾಣಲೇ ಇಲ್ಲ.
ಎಲ್ಲರಂತೆಯೇ ಪರೀಕ್ಷೆಗೆ ಹೋಗಿ ಕೂರುತ್ತಿದ್ದ. ಮೂರು ತಾಸುಗಳ ಕಾಲ
ಕೂತಿರುತ್ತಿದ್ದ. ನಂತರ ಎಲ್ಲರಂತೆಯೇ ಎದ್ದು ಬರುತ್ತಿದ್ದ. ಆದರೆ ಉತ್ತರವನ್ನು
ಒಂದು ಹಾಳೆಯಷ್ಟಾದರೂ ಬರೆದಿರುತ್ತಿರಲಿಲ್ಲ. ಪರೀಕ್ಷೆಯಲ್ಲಿ ಉಸ್ತುವಾರಿ
ನೋಡಿಕೊಳ್ಳತ್ತಿದ್ದ ಮಾಸ್ತರು, 'ಯಾಕಪ್ಪಾ ! ಸೀತಾರಾಮ ! ಓದುತ್ತಿಲ್ಲವೇ
ಖಾಲಿ ಉತ್ತರದ ಪುಸ್ತಕವನ್ನು ಕೊಡುತ್ತಿದ್ದೀಯಲ್ಲಾ' ಎಂದು ಕೇಳಿದಾಗ, ಅವರ
ಮುಖವನ್ನು ನೋಡುತ್ತಾ ಯಾವ ರಾಗಭಾವಗಳನ್ನೂ ಕಾಣಿಸದೆ, ಪ್ರತ್ಯುತ್ತರವನ್ನೂ
ಕೊಡದೆ ಹೊರಟು ಹೋಗಿದ್ದ. ಇವನಿಗೇನೋ ಆಗಿದೆ ; ತಲೆ ಕೆಟ್ಟಿರಬಹುದು;
ಅಥವಾ ದುರ್ವ್ಯಸನಗಳು ಅಧಿಕವಾಗಿರಬಹುದು' ಎಂದು ವಾಸ್ತರು
ಅಂದುಕೊಂಡರೇ ವಿನಹಾ ಮತ್ತೆ ಯಾವ ಗಮನವನ್ನೂ ಕೊಡಲಿಲ್ಲ.
{{gap}}ಬೇಸಿಗೆ ರಜಕ್ಕೆ ಮನೆಗೆ ಹಿಂದಿರುಗಿದಾಗ, ಸೀತುವಿನಲ್ಲಿ ಆಗಿದ್ದ
ಬದಲಾವಣೆಯನ್ನು ತಾಯ್ತಂದೆಯರು ಗಮನಿಸಿದರು. ತಮ್ಮತಮ್ಮಲ್ಲೇ
ಮಾತನಾಡಿಕೊಂಡರು. 'ತುಂಬಾ ಓದಿ ದಣಿದಿದ್ದಾನೆ. ಹಾಸ್ಟೆಲಿನಲ್ಲಿ ಸರಿಯಾದ
ಊಟ ಸಿಗುತ್ತಿತ್ತೋ ಇಲ್ಲವೋ? ಆರೈಕೆಯನ್ನು ಮಾಡಿದರೆ ಸರಿಹೋಗಬಹುದು'
ಎಂದಂದುಕೊಂಡರು. ಊಟಕ್ಕೆ ಏಳಪ್ಪಾ ಅಂತ ಅಮ್ಮ ಕರೆದರೆ, ಪುಸ್ತಕ ಓದಬೇಕು;
ಆಮೇಲೆ ಊಟಕ್ಕೆ ಬರ್ತೀನಿ ಎನ್ನುತ್ತಿದ್ದ. ಪುಸ್ತಕವನ್ನು ಹಿಡಿಯುತ್ತಿರಲಿಲ್ಲ. ಊಟಕ್ಕೂ
ಬರುತ್ತಿರಲಿಲ್ಲ. ಯಾಕಪ್ಪಾ ಹೀಗ್ಯಾಡ್ತೀ ಎಂದು ಒಂದೆರಡು ಸರ್ತಿ ಅಮ್ಮ ಒತ್ತಿ
ಕೇಳಿದಾಗ ಸಿಡುಕುತ್ತಾ ಮನೆಯಿಂದಾಚೆಗೆ ಹೋಗುತ್ತಿದ್ದ. 'ಕೆಟ್ಟ ಕೆಟ್ಟ ಸಿನಿಮಾಗಳನ್ನು<noinclude></noinclude>
3bfrr1sn4gctrehnit9krb4u90e4jit
ಪುಟ:ಮನಮಂಥನ.pdf/೨೨೫
104
62672
316598
315556
2026-05-03T18:13:22Z
Pragathi. BH
7585
/* Validated */
316598
proofread-page
text/x-wiki
<noinclude><pagequality level="4" user="Pragathi. BH" /></noinclude>
{{rh|center=|left=೨೦೬|right=ಮನಮಂಥನ}}
ನೋಡುತ್ತವೆ ; ಈ ಕಾಲದ ಕಾಲೇಜು ಹುಡುಗರು; ಮೀಸೆ ಬಂದ ವಯಸ್ಸು;
ಏನೇನು ಕೆಟ್ಟ ಅಭ್ಯಾಸ ಮಾಡಿಕೊಂಡಿದ್ದಾನೋ? ದೇಹಾರೋಗ್ಯವನ್ನು ಕೆಟ್ಟ
ಕೆಟ್ಟದಾಗಿ ಕೆಡಿಸಿಕೊಂಡಿದ್ದಾನೋ ಏನೋ' ಎಂದು ತಂದೆಯು ರೇಗಿ
ನುಡಿದರು.
{{gap}}ಇವನ ವಿಚಿತ್ರ ವರ್ತನೆ, ಸರಿಹೋದರೆ, ಇವನ ಮದುವೆಯನ್ನು ನಂಜನ
ಗೂಡಿನಲ್ಲಿ ನಂಜುಂಡೇಶ್ವರನ ಸನ್ನಿಧಿಯಲ್ಲಿ ಮಾಡುತ್ತೇವೆ ಎಂದು ತಾಯಿ
ಮುಡುಪು ಕಟ್ಟಿಟ್ಟಳು. ಇದೊಂದೇ ಮುಂಜಾಗ್ರತಾ ಹಾಗೂ ಚಿಕಿತ್ಸಾ ಕ್ರಮ,
ಅವರು ಕೈಗೊಂಡುದು.
{{gap}}ಊರಿನ ದೊಡ್ಡರಸ್ತೆಯ ತುದಿಯಲ್ಲಿ ಎಳನೀರನ್ನು ಮಾರಲು ಒಕ್ಕಲು
ಮಗ ಕುಳಿತಿದ್ದ. ಅಲ್ಲಿ ಜನರ ಓಡಾಟವು ಹೆಚ್ಚು ಮೂರು ದಿಕ್ಕುಗಳಲ್ಲಿರುವ
ಮೂರು ಊರುಗಳಿಗೆ ಹೋಗುವ ದಾರಿಗಳು ಅಲ್ಲಿಂದಲೇ ಕವಲೊಡೆಯುತ್ತಿದ್ದುವು.
ಮಧ್ಯಾಹ್ನ ಹನ್ನೊಂದರ ಸಮಯ, ಅದರ ಬಳಿ ಸೀತು ನಡೆದು ಹೋಗುತ್ತಿದ್ದ.
ಒಂಟಿಯಾಗಿದ್ದ. 'ಎಳನೀರು ಬೇಕಾ ಸೋಮೀ' ಎಂದು ಒಕ್ಕಲು ಮಗ ಕೇಳಿದ.
'ನನ್ನ ಯಾಕೋ ಕೇಳಿ : ನಿನಗೇನು ಕೊಬ್ಬೋ' ಎಂದು ಸೀತು ವಿನಾಕಾರಣ
ರೇಗಿದ. ಅಷ್ಟೇ ಅಲ್ಲ. ಒಕ್ಕಲು ಮಗನನ್ನು ಹೊಡೆಯಹೋದ. ಹತ್ತಿರದಲ್ಲಿ ಎಳ
ನೀರನ್ನು ಕೊಚ್ಚುವ ಮಚ್ಚಿತ್ತು. ಅದನ್ನು ತೆಗೆದುಕೊಂಡು ಹೊಡೆಯಹೋದ.
ಒಕ್ಕಲು ಮಗ ಸರಂತ ಮರದ ಹಿಂದಕ್ಕೆ ನುಣುಚಿಕೊಂಡ. ಸೀತು ಹೊಡೆದ
ಏಟು ಮರಕ್ಕೆ ಬಿತ್ತು. ಹಾದಿಯಲ್ಲಿ ಹೋಗುತ್ತಿದ್ದ ಗಾಡಿಯವರೂ ಇತರರೂ
ಅಲ್ಲಿ ಗುಂಪು ನೆರೆದರು, ಒಕ್ಕಲು ಮಗನಿಗೆ ನೆರವಾಗಿ, ಸೀತುವನ್ನು
ಹಿಡಿಯಹೋದರು. ಅವನಿನ್ನೂ ಹೊಡೆದಾಡುವುದಕ್ಕೆ ಹಾತೊರೆಯುತ್ತಿದ್ದ. ಎಲ್ಲರೂ
ಒಟ್ಟುಗೂಡಿ ಸೀತುವನ್ನು ಹಿಡಿದು ಕೈಕಾಲು ಕಟ್ಟಿ ಹಾಕಿದರು. ನಾಲ್ಕು ಬಿಗಿದರು.
'ಇವನಿಗೆಲ್ಲೋ ಹುಚ್ಚು ಹಿಡಿದಿದೆ. ಯಾರ ಮನೆಯವನೋ. ಇಂತಹವರನ್ನೆಲ್ಲಾ
ಆಸ್ಪತ್ರೆಗೆ ಸೇರಿಸದೆ, ಹೀಗೆ ಬೇಕಾಬಿಟ್ಟಿ ಬಿಟ್ಟರೆ, ಯಾರಿಗಾದರೂ ಅಪಾಯ
ಆಗೇ ಆಗುತ್ತೆ' ಎಂದು ಮಂದಿ ಮಾತನಾಡಿಕೊಂಡರು. ಈ ಗಲಾಟೆಯಲ್ಲಿ
ಸೀತುವಿಗೆ ಆಗಿದ್ದ ಪೆಟ್ಟು ಮತ್ತು ಗಾಯಗಳನ್ನು ಯಾರೂ ಗಮನಿಸಲೇ ಇಲ್ಲ.
ಅದೇ ರಸ್ತೆಯಲ್ಲಿ ಆ ವೇಳೆಗೆ ಸೀತುವಿನ ತಂದೆಯು ಕಚೇರಿಗೆ
ಹೋಗುತ್ತಿದ್ದರು. ಜನ ಕೂಡಿದ್ದನ್ನು ಕಂಡು ಏನಾಗಿದೆಯೋ ಎಂದು ನೋಡಲು
ಅಲ್ಲಿಗೆ ಹೋದರು, ಸೀತುವನ್ನು ಕಂಡರು. ಅವನ ಅವಸ್ಥೆಯನ್ನು ಕಂಡು
ಅವರ ಕರುಳು ಹಿಂಡಿದಂತಾಯಿತು. ಪರಿಚಯಸ್ಥರ ನೆರವಿನಿಂದ ರೇಗಾಡುತ್ತಿದ್ದ<noinclude></noinclude>
gcw6mkqi6bdma612u1ogdg1clraxgj0
ಪುಟ:ಮನಮಂಥನ.pdf/೨೨೬
104
62673
316599
315557
2026-05-03T18:17:08Z
Pragathi. BH
7585
/* Validated */
316599
proofread-page
text/x-wiki
<noinclude><pagequality level="4" user="Pragathi. BH" /></noinclude>ಸ್ಕೀಜೋಫ್ರೆನಿಯಾಗಳು
ಸೀತುವನ್ನು ಹೇಗೋ ಮಾಡಿ ಮನೆಗೆ ಕರೆದು ತಂದರು. ವೈದ್ಯರಿಗೆ ಹೇಳಿ
ಕಳಿಸಿದರು.
{{gap}}ಉಲ್ಬಣಿಸಿದ್ದ ಸೀತುವಿನ ಉದ್ರೇಕ ಸ್ಥಿತಿಯನ್ನು ಇಳಿಸಲು, ತಾತ್ಕಾಲಿಕವಾದ
ಉಪಶಮನದ ಚಿಕಿತ್ಸೆಯನ್ನು ವೈದ್ಯರು ನಡೆಸಿದರು. ನಂತರ ಮಾರನೆಯ ದಿನ
ರೋಗಿಯನ್ನು ಪರೀಕ್ಷಿಸಿ 'ಅವನಿಗೆ ಮನಸ್ಸು ಪಲ್ಲಟವಾಗಿದೆ. ಮಾನಸಿಕ ಆಸ್ಪತ್ರೆಯಲ್ಲಿ
ಸಲಹೆಯನ್ನೂ ಚಿಕಿತ್ಸೆಯನ್ನೂ ಪಡೆಯುವುದು ಅಗತ್ಯ ಇಲ್ಲದೆ ಇದ್ದರೆ ಏನಾದರೂ
ಆಘಾತವಾಗಬಹುದು. ತತ್ಕ್ಷಣ ಕರೆದುಕೊಂಡು ಹೋಗಿ' ಎಂದು ಡಾಕ್ಟರು
ಒತ್ತಾಯಪೂರ್ವಕವಾಗಿ ಹೇಳಿದರು.
{{gap}}'ಮನೆಯ ಹಿಂದಿನ ಹುಣಿಸೆಯ ಮರದಲ್ಲಿ ಬ್ರಹ್ಮರಾಕ್ಷಸ ಸೇರಿಕೊಂಡಿದೆ.
ಅದು ನಮ್ಮ ಸೀತುವನ್ನು ಹಿಡಿದಿದೆ. ಮಂತ್ರವಾದಿಗಳು ಈ ಪಿಶಾಚಿಯನ್ನು
ಬಿಡಿಸುತ್ತಾರೆ. ನಮ್ಮ ಸೀತು ಸರಿಹೋಗುತ್ತಾನೆ, ನಮ್ಮಪ್ಪನ ಕಾಲದಿಂದ
ಆ ಮರದಲ್ಲಿ ಬ್ರಹ್ಮ ರಾಕ್ಷಸ ಸೇರಿಕೊಂಡಿದೆ ಎಂದು ಎಲ್ಲರೂ ಅನ್ನುತ್ತಿದ್ದರು.
ಹುಚ್ಚಾಸ್ಪತ್ರೆಗೆ ಸೇರಿಸುವುದು ಬೇಡ ಅಂದ್ರೆ ಮನೆತನದ ಹೆಸರೇ ಕೆಟ್ಟುಹೋಗುತ್ತದೆ
ಅಂದ್ರೆ<br />
{{gap}}ಎಂದು ತಾಯಿ ಇನ್ನಿಲ್ಲದ ಹಾಗೆ ಹೇಳಿ ಅತ್ತೂ ಕರೆದೂ ರಂಪ ಮಾಡಿದರು.
{{gap}}'ನೀನೋ? ನಿಮ್ಮಪ್ಪನ ಕಾಲದ ನಂಬಿಕೆಗಳೋ? ಹಾಳಾಗಿ ಹೋಗಲಿ.
ಮಗನೇ ಕೆಟ್ಟುಹೋದಮೇಲೆ ಮನೆತನದ ಹೆಸರು ಇದ್ದರೇನು? ಹೋದರೇನು?
ಕೈಲಾದುದನ್ನೆಲ್ಲಾ ಮಾಡಿ ಅವನನ್ನು ಗುಣಪಡಿಸಲೇಬೇಕು' ಎಂದು ಹಠ ಹಿಡಿದು,
ಸೀತುವನ್ನು ಮಾನಸಿಕ ರೋಗಗಳ ಆಸ್ಪತ್ರೆಗೆ, ತಂದೆ ಕರೆದುಕೊಂಡು ಹೋಗಿ
ಸೇರಿಸಿದರು.
{{gap}}ಮಾನಸಿಕ ಆಸ್ಪತ್ರೆಯಲ್ಲಿ ಸೀತುವಿಗೆ ಸಂಬಂಧಿಸಿದಂತೆ, ತಂದೆಯಿಂದ
ದೊರಕಬಹುದಾದ ವಿವರಗಳನ್ನೆಲ್ಲವನ್ನೂ ಬರೆದುಕೊಂಡರು. ಹುಟ್ಟಿದಾಗಿನಿಂದ
ಸೀತುವಿನ ಆರೋಗ್ಯದ ಬಗ್ಗೆ ಮಾಹಿತಿಗಳನ್ನು ಪಡೆದು ಗುರುತು ಹಾಕಿದರು.
ಮನೆಯವರ ವಿಷಯಗಳನ್ನೂ ಎಳ್ಳಂಬಳಸೆ ಪ್ರಶ್ನೆಗಳಿಂದ ತಿಳಿದುಕೊಂಡರು.
ಸೀತುವಿನ ರೂಂಮೇಟಿನ ವಿಳಾಸವನ್ನು ಕಾಲೇಜಿನ ಪ್ರಿನ್ಸಿಪಾಲರ ಮೂಲಕ
ಪತ್ತೆ ಹಚ್ಚಿ, ಅವನಿಂದ ದೊರೆತ ವಿವರಗಳನ್ನೂ ಪಡೆದರು. ಒಂದೆರಡು ವಾರಗಳ
ಕಾಲ ಸೀತುವಿನ ಮನಃಸ್ಥಿತಿಯನ್ನು ಅತಿ ಸೂಕ್ಷ್ಮವಾಗಿ ಪರಿಶೀಲಿಸಿದರು.
{{gap}}ಇದನ್ನೆಲ್ಲಾ ಮಾಡುವಾಗ ಉಪಶಮನದ ಚಿಕಿತ್ಸೆಯನ್ನೂ ಶ್ರದ್ಧೆಯಿಂದ
ನಡಸುತ್ತಿದ್ದರು.<noinclude></noinclude>
7k4qgkm9n6yhq2b8zrnejuz7lnlj7gp
ಪುಟ:ಮನಮಂಥನ.pdf/೨೨೭
104
62674
316600
315558
2026-05-03T18:17:21Z
Pragathi. BH
7585
/* Validated */
316600
proofread-page
text/x-wiki
<noinclude><pagequality level="4" user="Pragathi. BH" /></noinclude>೨೦೮
ಮನಮಂಥನ
ಮಗನನ್ನು ನೋಡಲು ತಿಂಗಳೊಪ್ಪತ್ತು ಆದ ನಂತರ, ತಂದೆಯು ಆಸ್ಪತ್ರೆಗೆ
ಹೋದಾಗ, ವೈದ್ಯರು ಅವರೊಂದಿಗೆ ಕೂತು ಬೇನೆಯ ಸ್ವರೂಪವನ್ನು
ವಿವರಿಸಿದರು.
'ನಿಮ್ಮ ಹುಡುಗನ ಪ್ರಕೃತಿಯು ಒಂಟಿತನವನ್ನು ಬಯಸುವಂತಹುದು.
ಬಾಲ್ಯದಲ್ಲಿ ಸಮವಯಸ್ಕರೊಂದಿಗೆ ನಲಿದಾಡುವ ಸ್ವಾಭಾವಿಕ ಪ್ರವೃತ್ತಿಯೂ
ಅವನಲ್ಲಿ ಕಡಿಮೆಯಾಗಿತ್ತು. ಮನೆಯ ಯಜಮಾನರು, ನೀವು, ಶಿಸ್ತು ಶಿಕ್ಷೆ
ಇವುಗಳಿಂದಲೇ ಹುಡುಗರು ಬೆಳೆದು ಬಾಳಲು ಸಮರ್ಥರಾಗುವುದು ಎಂದು
ನಂಬಿದ್ದೀರಿ. ಮನೆಯವರೆಲ್ಲರೂ ನಿಮ್ಮನ್ನು ಕಂಡರೆ ಭಯಪಡುತ್ತಾರೆ. ಸೀತುವು
ಕೂಡ ಹೆದರಿಕೆಯಿಂದಲೇ ನಿಮ್ಮನ್ನು ನೋಡುತ್ತಿದ್ದ, ಬಾಲ್ಯದಿಂದಲೂ, ನಿಮ್ಮ
ಮನೆಯಾಕೆಯು ಹಳೆಯ ಕಾಲದ ಸಾಂಪ್ರದಾಯಸ್ಥರು. ಓದುಬರಹಗಳಲ್ಲಿ
ಆಕೆಗೆ ಅಭ್ಯಾಸವಿಲ್ಲ. ಆಕೆಯೂ ನೀವೂ ಮಾತಿಗೆ ಮಾತು ಆಡಿ ವಿರಸವಾದಾಗ,
ಸೀತುವು ಹೆದರಿ ಹೆದರಿ ಮುದುಡಿಕೊಳ್ಳುತ್ತಿದ್ದ. ಹಾಗಾದಾಗಲೆ ಅವ, ಹೆದರಿಸುವ
ಹೊರ ಪರಿಸ್ಥಿತಿಯನ್ನು ಮರೆಯಲು, ತನ್ನ ಮನಸ್ಸಿನೊಳಗೆ ತಾನೇ
ಕಲ್ಪಿಸಿಕೊಳ್ಳಬಹುದಾದ, ಹೆದರಿಕೆಯು ಇರದ, ಊಹಾಲೋಕದಲ್ಲಿ
ಮಗ್ನನಾಗತೊಡಗುತ್ತಿದ್ದ. ಒಂಟಿತನವನ್ನು ಬಯಸುವ ಪ್ರವೃತ್ತಿಯೂ ಇತ್ತು.
ಹೀಗಾಗಿ ತನ್ನ ಸೃಷ್ಟಿಯಾದ ಮನಸ್ಸಿನ ಊಹಾಪ್ರಪಂಚದಲ್ಲಿ ಹೆಚ್ಚು ಹೆಚ್ಚು ಕಾಲ
ಕಳೆಯುವುದನ್ನು ರೂಢಿಮಾಡಿಕೊಂಡಿದ್ದ. ಮನಸ್ಸಿನೊಳಗಿನ ಪ್ರಪಂಚ, ಹೊರಗಿನ
ಪ್ರಪಂಚ, ಹೀಗೆ ಎರಡು ಪ್ರಪಂಚಗಳಲ್ಲಿ ಅವನು ಜೀವಿಸುತ್ತಿದ್ದ. ಹೈಸ್ಕೂಲಿನಲ್ಲಿ
ಓದು ಮುಗಿಸುವ ತನಕ, ಮನೆಯಲ್ಲೇ ಇದ್ದುದರಿಂದ ಕೂಡ, ಈ ಎರಡೂ
ಪ್ರಪಂಚಗಳಲ್ಲಿ ಅವ ನೆಮ್ಮದಿಯಿಂದ ಇರಲು ಸಾಧ್ಯವಾಗಿತ್ತು.
ಕಾಲೇಜಿಗೆ ಸೇರಿದಾಗ, ಮನೆಯನ್ನು ಬಿಟ್ಟು, ಹಾಸ್ಟೆಲಿನಲ್ಲಿ
ವಾಸಿಸಬೇಕಾಯಿತು. ಮನೆಯಲ್ಲಿದ್ದ ರಕ್ಷಣೆಯು ತಪ್ಪಿತು ; ಇನ್ನೆಲ್ಲ ಜವಾಬ್ದಾರಿಯೂ
ನನ್ನದು ಎನ್ನುವುದು ಅವನ ಅನುಭವಕ್ಕೆ ಕಠಿಣವಾಗಿತ್ತು. ಜತೆಗೆ ಪೌಗಂಡ
ವಯಸ್ಸು, ದೇಹದ ಅಗತ್ಯಗಳ ಆಸೆ ಆಕಾಂಕ್ಷೆಗಳು, ಅವನ ಅರಿವಿಗೆ
ಕಾಣಿಸಿಕೊಳ್ಳದೆಯೇ, ಅವ್ಯಕ್ತವಾಗಿ ಒತ್ತಡವೀಯಲಾರಂಭಿಸಿದ್ದುವು. ಅಂತಹ
ಅಪೇಕ್ಷೆಗಳನ್ನು, ID Compulsions ಎನ್ನುತ್ತಾರೆ. ಇವೆಲ್ಲವನ್ನೂ ಹೊರಪ್ರಪಂಚದ
ಬಾಳಿನಿಂದ ಈಡೇರಿಸಿಕೊಳ್ಳಬೇಕು. ನಾಚಿಕೆ ಮತ್ತು ಸಂಕೋಚದ ಪ್ರವೃತ್ತಿಯಿದ್ದ
ಸೀತುವಿಗೆ ಹೊರಪ್ರಪಂಚದಲ್ಲಿ ಮೆರೆದಾಡಲು ಸಾಧ್ಯವಿರಲಿಲ್ಲ. ಒಳಮನಸ್ಸಿನ
ಊಹಾಲೋಕದಲ್ಲಿ ಅವನ್ನೆಲ್ಲಾ ಸಾಂತ್ವನಗೊಳಿಸಬೇಕಾಯಿತು. ಈ ಜಂಝಾಟದಲ್ಲಿ,<noinclude></noinclude>
hrcva0jvoxfssd0d7r0w9r4137869xl
316601
316600
2026-05-03T18:20:12Z
Pragathi. BH
7585
316601
proofread-page
text/x-wiki
<noinclude><pagequality level="4" user="Pragathi. BH" /></noinclude>
{{rh|center=|left=೨೦೮|right=ಮನಮಂಥನ}}
{{gap}}ಮಗನನ್ನು ನೋಡಲು ತಿಂಗಳೊಪ್ಪತ್ತು ಆದ ನಂತರ, ತಂದೆಯು ಆಸ್ಪತ್ರೆಗೆ
ಹೋದಾಗ, ವೈದ್ಯರು ಅವರೊಂದಿಗೆ ಕೂತು ಬೇನೆಯ ಸ್ವರೂಪವನ್ನು
ವಿವರಿಸಿದರು.
'ನಿಮ್ಮ ಹುಡುಗನ ಪ್ರಕೃತಿಯು ಒಂಟಿತನವನ್ನು ಬಯಸುವಂತಹುದು.
ಬಾಲ್ಯದಲ್ಲಿ ಸಮವಯಸ್ಕರೊಂದಿಗೆ ನಲಿದಾಡುವ ಸ್ವಾಭಾವಿಕ ಪ್ರವೃತ್ತಿಯೂ
ಅವನಲ್ಲಿ ಕಡಿಮೆಯಾಗಿತ್ತು. ಮನೆಯ ಯಜಮಾನರು, ನೀವು, ಶಿಸ್ತು ಶಿಕ್ಷೆ
ಇವುಗಳಿಂದಲೇ ಹುಡುಗರು ಬೆಳೆದು ಬಾಳಲು ಸಮರ್ಥರಾಗುವುದು ಎಂದು
ನಂಬಿದ್ದೀರಿ. ಮನೆಯವರೆಲ್ಲರೂ ನಿಮ್ಮನ್ನು ಕಂಡರೆ ಭಯಪಡುತ್ತಾರೆ. ಸೀತುವು
ಕೂಡ ಹೆದರಿಕೆಯಿಂದಲೇ ನಿಮ್ಮನ್ನು ನೋಡುತ್ತಿದ್ದ, ಬಾಲ್ಯದಿಂದಲೂ, ನಿಮ್ಮ
ಮನೆಯಾಕೆಯು ಹಳೆಯ ಕಾಲದ ಸಾಂಪ್ರದಾಯಸ್ಥರು. ಓದುಬರಹಗಳಲ್ಲಿ
ಆಕೆಗೆ ಅಭ್ಯಾಸವಿಲ್ಲ. ಆಕೆಯೂ ನೀವೂ ಮಾತಿಗೆ ಮಾತು ಆಡಿ ವಿರಸವಾದಾಗ,
ಸೀತುವು ಹೆದರಿ ಹೆದರಿ ಮುದುಡಿಕೊಳ್ಳುತ್ತಿದ್ದ. ಹಾಗಾದಾಗಲೆ ಅವ, ಹೆದರಿಸುವ
ಹೊರ ಪರಿಸ್ಥಿತಿಯನ್ನು ಮರೆಯಲು, ತನ್ನ ಮನಸ್ಸಿನೊಳಗೆ ತಾನೇ
ಕಲ್ಪಿಸಿಕೊಳ್ಳಬಹುದಾದ, ಹೆದರಿಕೆಯು ಇರದ, ಊಹಾಲೋಕದಲ್ಲಿ
ಮಗ್ನನಾಗತೊಡಗುತ್ತಿದ್ದ. ಒಂಟಿತನವನ್ನು ಬಯಸುವ ಪ್ರವೃತ್ತಿಯೂ ಇತ್ತು.
ಹೀಗಾಗಿ ತನ್ನ ಸೃಷ್ಟಿಯಾದ ಮನಸ್ಸಿನ ಊಹಾಪ್ರಪಂಚದಲ್ಲಿ ಹೆಚ್ಚು ಹೆಚ್ಚು ಕಾಲ
ಕಳೆಯುವುದನ್ನು ರೂಢಿಮಾಡಿಕೊಂಡಿದ್ದ. ಮನಸ್ಸಿನೊಳಗಿನ ಪ್ರಪಂಚ, ಹೊರಗಿನ
ಪ್ರಪಂಚ, ಹೀಗೆ ಎರಡು ಪ್ರಪಂಚಗಳಲ್ಲಿ ಅವನು ಜೀವಿಸುತ್ತಿದ್ದ. ಹೈಸ್ಕೂಲಿನಲ್ಲಿ
ಓದು ಮುಗಿಸುವ ತನಕ, ಮನೆಯಲ್ಲೇ ಇದ್ದುದರಿಂದ ಕೂಡ, ಈ ಎರಡೂ
ಪ್ರಪಂಚಗಳಲ್ಲಿ ಅವ ನೆಮ್ಮದಿಯಿಂದ ಇರಲು ಸಾಧ್ಯವಾಗಿತ್ತು.
{{gap}}ಕಾಲೇಜಿಗೆ ಸೇರಿದಾಗ, ಮನೆಯನ್ನು ಬಿಟ್ಟು, ಹಾಸ್ಟೆಲಿನಲ್ಲಿ
ವಾಸಿಸಬೇಕಾಯಿತು. ಮನೆಯಲ್ಲಿದ್ದ ರಕ್ಷಣೆಯು ತಪ್ಪಿತು ; ಇನ್ನೆಲ್ಲ ಜವಾಬ್ದಾರಿಯೂ
ನನ್ನದು ಎನ್ನುವುದು ಅವನ ಅನುಭವಕ್ಕೆ ಕಠಿಣವಾಗಿತ್ತು. ಜತೆಗೆ ಪೌಗಂಡ
ವಯಸ್ಸು, ದೇಹದ ಅಗತ್ಯಗಳ ಆಸೆ ಆಕಾಂಕ್ಷೆಗಳು, ಅವನ ಅರಿವಿಗೆ
ಕಾಣಿಸಿಕೊಳ್ಳದೆಯೇ, ಅವ್ಯಕ್ತವಾಗಿ ಒತ್ತಡವೀಯಲಾರಂಭಿಸಿದ್ದುವು. ಅಂತಹ
ಅಪೇಕ್ಷೆಗಳನ್ನು, ID Compulsions ಎನ್ನುತ್ತಾರೆ. ಇವೆಲ್ಲವನ್ನೂ ಹೊರಪ್ರಪಂಚದ
ಬಾಳಿನಿಂದ ಈಡೇರಿಸಿಕೊಳ್ಳಬೇಕು. ನಾಚಿಕೆ ಮತ್ತು ಸಂಕೋಚದ ಪ್ರವೃತ್ತಿಯಿದ್ದ
ಸೀತುವಿಗೆ ಹೊರಪ್ರಪಂಚದಲ್ಲಿ ಮೆರೆದಾಡಲು ಸಾಧ್ಯವಿರಲಿಲ್ಲ. ಒಳಮನಸ್ಸಿನ
ಊಹಾಲೋಕದಲ್ಲಿ ಅವನ್ನೆಲ್ಲಾ ಸಾಂತ್ವನಗೊಳಿಸಬೇಕಾಯಿತು. ಈ ಜಂಝಾಟದಲ್ಲಿ,<noinclude></noinclude>
daksk6ahmjyndal0p3f1swplv78udpc
ಪುಟ:ಮನಮಂಥನ.pdf/೨೨೮
104
62675
316602
315559
2026-05-03T18:26:31Z
Pragathi. BH
7585
/* Validated */
316602
proofread-page
text/x-wiki
<noinclude><pagequality level="4" user="Pragathi. BH" /></noinclude>
{{rh|center=|left=ಸ್ಕೀಜೋಫ್ರೆನಿಯಾಗಳು|right=೨೦೯}}
ಎರಡೂ ಪ್ರಪಂಚಗಳ ಮಧ್ಯೆ ಸಾಮರಸ್ಯವನ್ನು ಮಾಡಿಕೊಳ್ಳುವ, ಮಾನವ
ಪ್ರಯತ್ನವು ಮುರಿದುಬಿತ್ತು. ಎರಡೂ ಪ್ರಪಂಚಗಳ ಮಧ್ಯೆ ಬಿರುಕು ಒಡೆಯಿತು.
ಬಿರುಕು ದೊಡ್ಡದಾಯಿತು. ಒಳಪ್ರಪಂಚದಲ್ಲೇ ಅವ ಸುಖಪಡುವಂತಾದ.
ಹೊರಪ್ರಪಂಚ ಮಧ್ಯೆ ಬಿರುಕು ಬಿಡುವುದನ್ನು ;ಸ್ಕೀಜೋ ಅಂದರೆ ಛಿದ್ರವಾದ;
ಫ್ರೆನಿಯಾ, ಅಂದರೆ ಮನಸ್ಸು ; ಎಂದು ಮನೋವಿಜ್ಞಾನಿಗಳು ಕರೆಯುತ್ತಾರೆ.
ಸ್ಕೀಜೋಫ್ರೆನಿಯಾಗಳಲ್ಲಿ ಹಲವಾರು ಮಾದರಿಗಳಿವೆ. ಇವೆಲ್ಲಾ
ವಿಭಿನ್ನವಾದುವೇನೋ ಎಂದನಿಸುತ್ತದೆ. ಆದರೆ ಮೂಲತಃ ಒಂದೇ ಆದುದರಿಂದ
ಆ ಹೆಸರನ್ನು ಬಳಸುತ್ತಾರೆ. ಹಾಗೂ ವಿಭಿನ್ನವಾದ ಮಾದರಿಗಳಿರುವುದರಿಂದ,
ಸ್ಕೀಜೋಫ್ರೆನಿಯಾಗಳು ಎಂದು ಬಹುವಚನಗಳನ್ನು ಬಳಸುತ್ತಾರೆ.
{{gap}}ಈ ಬೇನೆಯು ಉಲ್ಬಣವಾಗಿ, ಸ್ಕೀಜೋಫ್ರೆನಿಯಾ ಎಂದು ಸ್ಪಷ್ಟವಾಗುವ
ಮೊದಲು, ಹಲವಾರು ಮುನ್ಸೂಚನೆಗಳು, ಕೆಲವು ವರ್ಷಗಳಿಂದಲೂ ಕಾಣಬರತ್ತವೆ.
ಆಗ ಅವನ್ನು ಗಮನಿಸಿ, ತಕ್ಕ ಚಿಕಿತ್ಸೆಯನ್ನು ತಾಳ್ಮೆಯಿಂದ ನಡೆಸಿದರೆ, ಬೇನೆಯು
ಮೂಡುವುದನ್ನು ಯಶಸ್ವಿಯಾಗಿ ತಡೆಹಿಡಿಯಬಹುದು. ಅಂತಹ ಮುನ್ಸೂಚನೆಗಳು
ಹೀಗಿವೆ :
{{gap}}೧. ಮೊದಮೊದಲು ಆಲೋಚಿಸುವ ರೀತಿಯಲ್ಲಿ ಕುಂದುಗಳು
ಕಾಣಬರುತ್ತವೆ. ಇದನ್ನು ನೀವು ಗಮನಿಸಲು ಆಗಲಿಲ್ಲ. ಏಕೆಂದರೆ ಅವ
ಸ್ವಾಭಾವಿಕವಾಗಿ ಮಿತಭಾಷಿ, ಅದರಲ್ಲೂ ನಿಮ್ಮೊಂದಿಗೆ ಧೈರ್ಯದಿಂದ, ಮನಸ್ಸು
ಬಿಚ್ಚಿ ಎಂದೂ ಮಾತನಾಡಿರಲಿಲ್ಲ. ಮಾತನಾಡುವ ಪ್ರಯತ್ನವನ್ನು ಅವನೂ
ಮಾಡಿರಲಿಲ್ಲ ; ನೀವೂ ಮಾಡಿರಲಿಲ್ಲ. ಮಾತನಾಡಬೇಕಾದಾಗ ಇಬ್ಬರೂ
ಮುಂದಾಗಬೇಕು ; ಒಬ್ಬರಿಂದಲೇ ಸಾಧ್ಯವಿಲ್ಲ. ಮಾತನಾಡಿದ್ದಿದ್ದರೆ, ಸೀತುವಿನ
ಆಲೋಚನೆಗಳು ಸಮಂಜಸವಾಗಿಲ್ಲ. ಎಲ್ಲೋ ಕುಂದು ಇದೆ ಎಂದು ತಿಳಿಯುತ್ತಿತ್ತು;
ನಿಮಗೆ.
{{gap}}೨. ಅವನ ಭಾವನೆಗಳಲ್ಲಿ ಕುಂದು ಕಾಣಿಸಿತು. ತನ್ನ ರೂಂಮೇಟ್
ಛಾಂಪಿಯನ್ ಆದಾಗ, ಎಲ್ಲರಿಗಿಂತಲೂ ಸೀತು ಸಡಗರಪಡಬೇಕಾಗಿತ್ತು. ಆದರೆ
ನಿರ್ಲಿಪ್ತನಾಗಿದ್ದ. Callous ಆಗಿದ್ದ.
{{gap}}ಭಾವನೆಗಳು ಎಂದರೇನು ? ನಮ್ಮವನೊಬ್ಬ ಸುಖಪಡುವಾಗ-ನಮಗೇ
ಆ ಸುಖದ ಅನುಭವವಾದಂತೆ, ನಮಗೂ ಸುಖ ತಟ್ಟುತ್ತದೆ. ಆಗ ನಮ್ಮವನು
ಎಂಬುದರ ನಿಜವಾದ ಅರ್ಥವು ಸ್ಪಷ್ಟವಾಗುತ್ತದೆ. 'ನಾನು' ಎಂಬುವುದು, ನನ್ನಿಂದ
ಹೊರಹೊರಟು, ನಮ್ಮವನು, ಎನ್ನಿಸಿಕೊಳ್ಳುವವನನ್ನೂ ತನ್ನಲ್ಲಿ ಅಳವಡಿಸಿ<noinclude></noinclude>
rhc4kijq8hloqiysf2bbqu6ox2o9a3q
ಪುಟ:ಮನಮಂಥನ.pdf/೨೨೯
104
62676
316603
315560
2026-05-03T18:30:25Z
Pragathi. BH
7585
/* Validated */
316603
proofread-page
text/x-wiki
<noinclude><pagequality level="4" user="Pragathi. BH" /></noinclude>
{{rh|center=|left=೨೧೦|right=ಮನಮಂಥನ}}
ಕೊಳ್ಳುತ್ತದೆ. 'ನಾನು' ಎನ್ನುವ ಕಲ್ಪನೆಯು ಆಗ ತುಸು ವಿಶಾಲವಾಗುತ್ತದೆ. ಈ
ಪ್ರವೃತ್ತಿಯು ಬೆಳೆಯುತ್ತ ಹೋದರೆ, 'ನಾನು' ಎನ್ನುವ ಕಲ್ಪನೆಯಲ್ಲಿ ವಿಶಾಲ
ಬ್ರಹ್ಮಾಂಡವೂ ಅಡಗಲು ಸಾಧ್ಯ. ಭಾವನೆಗಳ ಸಾಮರ್ಥ್ಯ ಅಷ್ಟು ಪ್ರಬಲ ;
ಆಧ್ಯಾತ್ಮಿಕ, ಹೆರರ ನೋವಿಗೆ ಕರಗುವಂತಾದರೆ, ಭಾವನೆಗಳು ಔನ್ನತ್ಯದತ್ತ
ಏರುತ್ತಿದೆ ಎನ್ನಬಹುದು. ಮನಸ್ಸಿನ ಹೊರ ಮತ್ತು ಒಳಪ್ರಪಂಚಗಳ ಮಧ್ಯೆ
ಸುರಕ್ಷಿತವಾದ ಸೇತುವೆಯನ್ನು ಕಟ್ಟಿದರೆ, ಸಾಮರಸ್ಯವನ್ನು ಮನಸ್ಸಿನಿಂದಲೇ
ಮನಸ್ಸಿನಲ್ಲಿಯೇ ಏರ್ಪಡಿಸಿದರೆ, ಆಗ ಭಾವನೆಗಳು ಪ್ರಗಲ್ಬವಾಗುತ್ತವೆ.
ವಿಶಾಲವಾಗುತ್ತವೆ.
{{gap}}ಸೀತುವಿನ ನತದೃಷ್ಟ ಬಾಳಿನಲ್ಲಿ ಮನಸ್ಸಿನ ಹೊರ ಮತ್ತು ಒಳಪ್ರಪಂಚಗಳ
ಮಧ್ಯೆ ಸೇತುವೆಯ ಬದಲು ಬಿರುಕು ಉಂಟಾಯಿತು. ಹೀಗಾಗುವುದಕ್ಕೆ ಅವನ
ನತದೃಷ್ಟತನವೂ, ನಿಮ್ಮ ನತದೃಷ್ಟತನದೊಂದಿಗೆ ಕೂಡಿಕೊಂಡಿತು. ಅವನ
ಭಾವನೆಗಳು 'ಅವನ' ಸುತ್ತ ಮುತ್ತಿಕೊಂಡವು ಅವ Callous to the external
world ಆದ.
{{gap}}೩. ಮಾನಸಿಕ ಚಟಿತನವು ತುಸು ಮೊಂಡಾಗುತ್ತ ಬಂತು. ಯಾವ
ನಿರ್ಧಾರವನ್ನು ಮಾಡಬೇಕಾದರೂ ತುಂಬಾ ಅನುಮಾನಪಡುವಂತಾಗಿದ್ದ. ಇವತ್ತು
ಕ್ಷೌರ ಮಾಡಿಕೊಳ್ಳಲೋ ಎಂದುಕೊಂಡು, ಸಾಮಾನುಗಳನ್ನು ಅಣಿ
ಮಾಡತೊಡಗುತ್ತಿದ್ದ ಮರುಕ್ಷಣದಲ್ಲೇ ಕ್ಷೌರದ ಅಗತ್ಯವು ಇವತ್ತು ಇಲ್ಲ ಎಂದು
ತಿರುಗಿ ಅವನ್ನು ಪೆಟ್ಟಿಗೆಗೆ ಸೇರಿಸುತ್ತಿದ್ದ.
{{gap}}೪. ಭ್ರಮೆಯೂ ಒಂದಲ್ಲ ಒಂದು ರೀತಿಯಲ್ಲಿ ಅವನನ್ನು ಕಾಡುತ್ತಿದ್ದಿರಬೇಕು.
ವಿವರವಾಗಿ ನಿಶಾಪರೀಕ್ಷೆಯನ್ನು ಮಾಡಿದಾಗ ಯಾರೋ ಬಂದು ನನ್ನ ಕಿವಿಯಲ್ಲಿ
ಗುನುಗುತ್ತಲೇ ಇರುತ್ತಾರೆ. ಏನು ಎಂದು ಸ್ಪಷ್ಟವಾಗಿ ಹೇಳುವುದೂ ಇಲ್ಲ.
ಎದುರಿಗೆ ಬರುವುದೂ ಇಲ್ಲ' ಎಂದು ಹೇಳಿದ. ಮೂರು ವರ್ಷಗಳಿಂದಲೂ
ಈ ಕಾಟವನ್ನು ಅನುಭವಿಸುತ್ತಿದ್ದೇನೆ ಎಂದು ಹೇಳಿದ.
{{gap}}ಮೊದಮೊದಲು ಈ ಚಿಹ್ನೆಗಳನ್ನು ಗಮನಿಸಿದ್ದರೆ, ಆಗಲೇ ಸೂಕ್ತ
ಚಿಕಿತ್ಸೆಯನ್ನು ಪ್ರಾರಂಭಿಸಬಹುದಾಗಿತ್ತು. ಬೇನೆಯು ಬೇರೂರಿ ಈ ಉಲ್ಬಣ
ಸ್ಥಿತಿಗೆ ಏರುತ್ತಿರಲಿಲ್ಲ. ಸುಲಭವಾಗಿ ಗುಣವೂ ಆಗುತ್ತಿತ್ತು.
{{gap}}ತೆರದೆದೆಯಿಂದ ಮನೋವೈದ್ಯರು ರೋಗಿಯ ತಂದೆಗೆ ಎಲ್ಲ
ವಿಷಯಗಳನ್ನೂ ಸ್ಪಷ್ಟಪಡಿಸಿದರು. 'ಸಂಸಾರದಲ್ಲಿನ ನಿಮ್ಮ ಮತ್ತು ನಿಮ್ಮಾಕೆಯ
ನಡವಳಿಕೆಯನ್ನು ಟೀಕಿಸಿದೆ, ಅಧಿಕಪ್ರಸಂಗಿತನ ಮಾಡಿದೆ' ಎಂದು ಬೈದುಕೊಳ್ಳಬೇಡಿ.<noinclude></noinclude>
jtzy8vu3adx0guaa7emmsxhgibd5iuv
ಪುಟ:ಮನಮಂಥನ.pdf/೨೩೦
104
62677
316604
315561
2026-05-03T18:30:44Z
Pragathi. BH
7585
/* Validated */
316604
proofread-page
text/x-wiki
<noinclude><pagequality level="4" user="Pragathi. BH" /></noinclude>ಸ್ಟೀಜೋಪೊನಿಯಾಗಳು
ಎಂದು ಕ್ಷಮಾಪಣೆಯನ್ನು ಕೇಳಿಕೊಂಡರು.
ತಂದೆಯು ತುಂಬಾ ಚೂಟಿವಂತ. ಬಡತನದ ಬೇಗೆಯಲ್ಲಿ ಬಾಲ್ಯವನ್ನು
ಕಳೆದಿದ್ದವ, ಹಲ್ಲು ಕಚ್ಚಿಕೊಂಡು ಸ್ವಸಾಮರ್ಥ್ಯದಿಂದ, ಹಾಗೂ ಭಗವಂತನ
ಕೃಪೆಯಿಂದ, ತಾನಿದ್ದ ಪರಿಸರದಲ್ಲಿ ಗೌರವ ಸ್ಥಾನವನ್ನು ಪಡೆದುಕೊಂಡಿದ್ದ.
ತನ್ನ ಮಗನ ಬೇನೆಗೆ ತನ್ನ ಕರಾಚೂರಿನ ನವಳಿಕೆಯೇ ಕಾರಣ ಎಂದು
ಡಾಕ್ಟರು ಅಂದಾಗ, ಅವನ ಸ್ವಾಭಿಮಾನಕ್ಕೆ ಧಕ್ಕೆ ತಗುಲಿತು. ಅದರ ಜತೆಗೂ
ಮಗನಿಗೆ ಗುಣವಾಗಬೇಕು, ಡಾಕ್ಟರಿಗೂ ನನ್ನ ಮೇಲೆ ದ್ವೇಷವೇನೂ ಇಲ್ಲ.
ಅಂದಮೇಲೆ ಯಾಕೆ ನಾನು ಸಂಸಾರದಲ್ಲಿ ಹಾಗೆ ನಡೆದುಕೊಂಡೆ. ಏಕೆ ಸೀತುವಿನ
ವಿಚಿತ್ರ ವರ್ತನೆಯನ್ನು ಗಮನಿಸಲಿಲ್ಲ. ಎಂಬುದನ್ನು ಹೇಳಿದರೆ, ತನ್ನ ಪ್ರತಿಷ್ಠೆಯೂ
ಉಳಿಯಿತು, ಮಗನಿಗೆ ನೆರವೂ ಆಯಿತು ; ಹಾಗೂ ಜ್ಞಾನಾರ್ಜನೆಯೂ
ಆದಂತಾಯಿತು, ಎಂದುಕೊಂಡ. ಆದುದರಿಂದ ತಂದೆಯು ನುಡಿದ :
'ಈಗ ಇದನ್ನೆಲ್ಲಾ ಹೇಳುತ್ತಿದ್ದಿರಿ ಡಾಕ್ಟರೇ ! ಇವೆಲ್ಲಾ ಸರಿ ! ಆದರೆ
ನಾವೇನೂ ವೈದ್ಯರುಗಳಲ್ಲ. ಇವೆಲ್ಲಾ ಹೇಗೆ ತಿಳಿಯಬೇಕು ?
ಪರೀಕ್ಷೆಗಳಲ್ಲಿ ಸೀತು ತುಂಬಾ ಯಶಸ್ವಿಯಾಗಿ ಪ್ಯಾಸಾಗುತ್ತಿದ್ದ. ಮನಸ್ಸು
ಪಲ್ಲಟವಾದರೆ ಓದುವುದಕ್ಕೆ ಸಾಧ್ಯವೇ ? ಮನೆಯಲ್ಲಿ ಅವನ ನಡವಳಿಕೆಯು
ಲಕ್ಷಣವಾಗಿಯೇ ಇತ್ತು. ನಾವು ಹೇಳಿದುದನ್ನು ಸುಲಭವಾಗಿ ಅರ್ಥಮಾಡಿ
ಕೊಳ್ಳುತ್ತಿದ್ದ, ಸೂಕ್ತವಾದ ಪ್ರತಿಕ್ರಿಯೆಯನ್ನೂ ಮಾಡುತ್ತಿದ್ದ. ಸ್ಮರಣಶಕ್ತಿಯು ಅವನಲ್ಲಿ
ಚೆನ್ನಾಗಿಯೇ ಇತ್ತು. ಯಾವತ್ತೋ ನಡೆದುದನ್ನು ಅಚ್ಚುಕಟ್ಟಾಗಿ ಜ್ಞಾಪಿಸಿಕೊಳ್ಳುತ್ತಿದ್ದ.
ಮನಸ್ಸು ವಿಕಲ್ಪವಾದರೆ ಇದು ಸಾಧ್ಯವೇ ಡಾಕ್ಟರೇ ! ನನ್ನೊಡನೆ ಅಪರೂಪಕ್ಕೆ
ಮಾತನಾಡುತ್ತಿದ್ದ. ಒಪ್ಪಿಕೊಳ್ಳುತ್ತೇನೆ. ಆದರೆ ಮಾತನಾಡಿದಾಗಲೆಲ್ಲ ಜಾಣತನದ
ಉತ್ತರಗಳನ್ನು ಸಲೀಸಾಗಿ ಕೊಡುತ್ತಿದ್ದ. ಮನಸ್ಸು ಛಿದ್ರವಾಗಿದ್ದರೆ ಹಾಗೆ ಉತ್ತರಿಸಲು
ಹೇಗೆ ಸಾಧ್ಯ ? ಕಳೆದ ಸರ್ತಿ ಬೇಸಿಗೆ ರಜಕ್ಕೆಂದು ಬಂದಿದ್ದಾಗ, ಕೆಟ್ಟುಹೋಗಿದ್ದ
ಹೊಲಿಯುವ ಯಂತ್ರವನ್ನು ಅವನೇ ರಿಪೇರಿ ಮಾಡಿದ. ಆ ಮೊದಲು
ಕಂಪೆನಿಯವರು ಎರಡು ಬಾರಿ ಬಂದು ರಿಪೇರಿ ಮಾಡಿದ್ದರು. ಆದರೂ ಅದು
ಸರಿಯಾಗಿ ನಡೆಯುತ್ತಿರಲಿಲ್ಲ. ಇವ ಅದನ್ನು ಲಕ್ಷಣವಾಗಿ ರಿಪೇರಿ ಮಾಡಿದ.
ಇಂಜನಿಯರ್ ಏನೂ ಇವ ಓದುತ್ತಿಲ್ಲ. ಅದನ್ನೆಲ್ಲಾ ಕಲಿಯಲು, ಬುದ್ಧಿ ಕೆಟ್ಟಿದ್ದರೆ
ಇದನ್ನೆಲ್ಲಾ ಮಾಡುಕ್ಕೆ ಆಗುತ್ತಿತ್ತೇ ಅಂದಮೇಲೆ ನಾವು ಹೇಗೆ ಎಚ್ಚರವನ್ನು
ವಹಿಸಲಾಗುತ್ತಿತ್ತು ?
ನಿಮ್ಮ ಪರೀಕ್ಷಾ ವಿಧಾನಗಳಲ್ಲಿ ಏನಾದರೂ ತಪ್ಪಿರಬಹುದೋ ? ಎಂದು<noinclude></noinclude>
8sb5ip6u8n8nk8v4ux3o0bvzf0sbh56
316605
316604
2026-05-03T18:33:10Z
Pragathi. BH
7585
316605
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಸ್ಟೀಜೋಫ್ರೆನಿಯಾಗಳು|right=೨೧೧}}
ಎಂದು ಕ್ಷಮಾಪಣೆಯನ್ನು ಕೇಳಿಕೊಂಡರು.
{{gap}}ತಂದೆಯು ತುಂಬಾ ಚೂಟಿವಂತ. ಬಡತನದ ಬೇಗೆಯಲ್ಲಿ ಬಾಲ್ಯವನ್ನು
ಕಳೆದಿದ್ದವ, ಹಲ್ಲು ಕಚ್ಚಿಕೊಂಡು ಸ್ವಸಾಮರ್ಥ್ಯದಿಂದ, ಹಾಗೂ ಭಗವಂತನ
ಕೃಪೆಯಿಂದ, ತಾನಿದ್ದ ಪರಿಸರದಲ್ಲಿ ಗೌರವ ಸ್ಥಾನವನ್ನು ಪಡೆದುಕೊಂಡಿದ್ದ.
ತನ್ನ ಮಗನ ಬೇನೆಗೆ ತನ್ನ ಕರಾಚೂರಿನ ನವಳಿಕೆಯೇ ಕಾರಣ ಎಂದು
ಡಾಕ್ಟರು ಅಂದಾಗ, ಅವನ ಸ್ವಾಭಿಮಾನಕ್ಕೆ ಧಕ್ಕೆ ತಗುಲಿತು. ಅದರ ಜತೆಗೂ
ಮಗನಿಗೆ ಗುಣವಾಗಬೇಕು, ಡಾಕ್ಟರಿಗೂ ನನ್ನ ಮೇಲೆ ದ್ವೇಷವೇನೂ ಇಲ್ಲ.
ಅಂದಮೇಲೆ ಯಾಕೆ ನಾನು ಸಂಸಾರದಲ್ಲಿ ಹಾಗೆ ನಡೆದುಕೊಂಡೆ. ಏಕೆ ಸೀತುವಿನ
ವಿಚಿತ್ರ ವರ್ತನೆಯನ್ನು ಗಮನಿಸಲಿಲ್ಲ. ಎಂಬುದನ್ನು ಹೇಳಿದರೆ, ತನ್ನ ಪ್ರತಿಷ್ಠೆಯೂ
ಉಳಿಯಿತು, ಮಗನಿಗೆ ನೆರವೂ ಆಯಿತು ; ಹಾಗೂ ಜ್ಞಾನಾರ್ಜನೆಯೂ
ಆದಂತಾಯಿತು, ಎಂದುಕೊಂಡ. ಆದುದರಿಂದ ತಂದೆಯು ನುಡಿದ :
{{gap}}'ಈಗ ಇದನ್ನೆಲ್ಲಾ ಹೇಳುತ್ತಿದ್ದಿರಿ ಡಾಕ್ಟರೇ ! ಇವೆಲ್ಲಾ ಸರಿ ! ಆದರೆ
ನಾವೇನೂ ವೈದ್ಯರುಗಳಲ್ಲ. ಇವೆಲ್ಲಾ ಹೇಗೆ ತಿಳಿಯಬೇಕು ?
{{gap}}ಪರೀಕ್ಷೆಗಳಲ್ಲಿ ಸೀತು ತುಂಬಾ ಯಶಸ್ವಿಯಾಗಿ ಪ್ಯಾಸಾಗುತ್ತಿದ್ದ. ಮನಸ್ಸು
ಪಲ್ಲಟವಾದರೆ ಓದುವುದಕ್ಕೆ ಸಾಧ್ಯವೇ ? ಮನೆಯಲ್ಲಿ ಅವನ ನಡವಳಿಕೆಯು
ಲಕ್ಷಣವಾಗಿಯೇ ಇತ್ತು. ನಾವು ಹೇಳಿದುದನ್ನು ಸುಲಭವಾಗಿ ಅರ್ಥಮಾಡಿ
ಕೊಳ್ಳುತ್ತಿದ್ದ, ಸೂಕ್ತವಾದ ಪ್ರತಿಕ್ರಿಯೆಯನ್ನೂ ಮಾಡುತ್ತಿದ್ದ. ಸ್ಮರಣಶಕ್ತಿಯು ಅವನಲ್ಲಿ
ಚೆನ್ನಾಗಿಯೇ ಇತ್ತು. ಯಾವತ್ತೋ ನಡೆದುದನ್ನು ಅಚ್ಚುಕಟ್ಟಾಗಿ ಜ್ಞಾಪಿಸಿಕೊಳ್ಳುತ್ತಿದ್ದ.
ಮನಸ್ಸು ವಿಕಲ್ಪವಾದರೆ ಇದು ಸಾಧ್ಯವೇ ಡಾಕ್ಟರೇ ! ನನ್ನೊಡನೆ ಅಪರೂಪಕ್ಕೆ
ಮಾತನಾಡುತ್ತಿದ್ದ. ಒಪ್ಪಿಕೊಳ್ಳುತ್ತೇನೆ. ಆದರೆ ಮಾತನಾಡಿದಾಗಲೆಲ್ಲ ಜಾಣತನದ
ಉತ್ತರಗಳನ್ನು ಸಲೀಸಾಗಿ ಕೊಡುತ್ತಿದ್ದ. ಮನಸ್ಸು ಛಿದ್ರವಾಗಿದ್ದರೆ ಹಾಗೆ ಉತ್ತರಿಸಲು
ಹೇಗೆ ಸಾಧ್ಯ ? ಕಳೆದ ಸರ್ತಿ ಬೇಸಿಗೆ ರಜಕ್ಕೆಂದು ಬಂದಿದ್ದಾಗ, ಕೆಟ್ಟುಹೋಗಿದ್ದ
ಹೊಲಿಯುವ ಯಂತ್ರವನ್ನು ಅವನೇ ರಿಪೇರಿ ಮಾಡಿದ. ಆ ಮೊದಲು
ಕಂಪೆನಿಯವರು ಎರಡು ಬಾರಿ ಬಂದು ರಿಪೇರಿ ಮಾಡಿದ್ದರು. ಆದರೂ ಅದು
ಸರಿಯಾಗಿ ನಡೆಯುತ್ತಿರಲಿಲ್ಲ. ಇವ ಅದನ್ನು ಲಕ್ಷಣವಾಗಿ ರಿಪೇರಿ ಮಾಡಿದ.
ಇಂಜನಿಯರ್ ಏನೂ ಇವ ಓದುತ್ತಿಲ್ಲ. ಅದನ್ನೆಲ್ಲಾ ಕಲಿಯಲು, ಬುದ್ಧಿ ಕೆಟ್ಟಿದ್ದರೆ
ಇದನ್ನೆಲ್ಲಾ ಮಾಡುಕ್ಕೆ ಆಗುತ್ತಿತ್ತೇ ಅಂದಮೇಲೆ ನಾವು ಹೇಗೆ ಎಚ್ಚರವನ್ನು
ವಹಿಸಲಾಗುತ್ತಿತ್ತು ?
{{gap}}ನಿಮ್ಮ ಪರೀಕ್ಷಾ ವಿಧಾನಗಳಲ್ಲಿ ಏನಾದರೂ ತಪ್ಪಿರಬಹುದೋ ? ಎಂದು<noinclude></noinclude>
7w8tat1j9c2pgfy9wmv7ubgooa0w5my
ಪುಟ:ಮನಮಂಥನ.pdf/೨೩೧
104
62678
316606
315562
2026-05-04T02:06:22Z
Pragathi. BH
7585
/* Validated */
316606
proofread-page
text/x-wiki
<noinclude><pagequality level="4" user="Pragathi. BH" /></noinclude>
{{rh|center=|left=೨೧೨|right=ಮನಮಂಥನ}}
ನನಗೆ ಸಂಶಯವಿರುತ್ತಿದೆ. ಹೀಗಂದೆ ಎಂದು ಏನೂ ತಿಳಿದುಕೊಳ್ಳಬೇಡಿ. ನಿಮ್ಮಲ್ಲಿ
ಪೂರ್ಣ ನಂಬಿಕೆಯು ನನಗಿದೆ' ಎಂದರು.
{{gap}}ಸ್ಪಷ್ಟವಾಗಿ ಹೀಗೆ ತಂದೆಯು ನುಡಿದುದರಿಂದ ವೈದ್ಯರಿಗೆ ಸಂತೋಷವೇ
ಆಯಿತು. ತಾವು ಹೇಳಿದುದು ಅರ್ಥವಾಗಿದೆ. ನ್ಯಾಯವೆಂದು ಕಂಡುಬಂದ
ಸಂದೇಹಗಳನ್ನು ಅವ ಹೇಳಿಕೊಳ್ಳುತ್ತಿದ್ದಾನೆ ಎನ್ನುವುದೂ ಗೊತ್ತಾಯಿತು.
ಅವರಂದರು ; 'ನೀವು ಹೇಳಿದ್ದೆಲ್ಲಾ ದಿಟವೇ, ರಾಯರೇ ! ಸೀತುವಿನ ಮನಸ್ಸು
ಜಾಣತನದ ಕಾರ್ಯಗಳನ್ನು ಮಾಡುವ ಸಾಮರ್ಥ್ಯವನ್ನು ಮೊದಲೂ ಪಡೆದಿತ್ತು.
ಈಗಲೂ ಪಡೆದಿದೆ. ರೂಢಿಸಿ ಕಲಿತುಕೊಂಡ ಕೈ ಚಳಕವಾಗಲೀ, ಜ್ಞಾಪಕ
ಶಕ್ತಿಯಾಗಲೀ ಅಚ್ಚಳಿಯದೇ ಉಳಿದುಕೊಂಡಿದೆ.
{{gap}}ಆದರೆ ಹೊರಪ್ರಪಂಚದ ನಡವಳಿಕೆಗಳಲ್ಲಿ, ಯಾವುದಾದರೂ ನಿರ್ಧಾರ
ಮಾಡಿ ಕಾರ್ಯ ನಡೆಸಬೇಕು. ಇದನ್ನು ಸಾಧಿಸುವ ಮನಸ್ಸಿನ ಭಾಗವು, ಒಳ
ಮತ್ತು ಹೊರಪ್ರಪಂಚಗಳ ಮಧ್ಯೆ ಸಾಮರಸ್ಯವಿದ್ದರೆ ಮಾತ್ರ ಯಶಸ್ವಿಯಾಗಿ
ಕೆಲಸವನ್ನು ಮಾಡಬಲ್ಲದು, ಅಲ್ಲೇ ಬಿರುಕುಂಟಾಗಿತ್ತು. ಹಾಗಾಗಿ ಯಾವ
ನಿರ್ಧಾರವನ್ನು ಮಾಡಬೇಕಾದರೂ, ಅವನು ತೊಳಲಾಡುವಂತಾಯಿತು. ಹೀಗಾಗಿ
ಅವ ಮಂದ ಬುದ್ಧಿಯವನಂತೆ ಕೆಲವೊಮ್ಮೆ ಕಾಣಿಸುತ್ತಿದ್ದ. ಆದರೆ ನಿಜವಾಗಲೂ
ಚೂಟಿತನವು ಕಳೆದುಹೋಗಿರಲಿಲ್ಲ.
{{gap}}ಇದೇ ಕಾರಣದಿಂದ ಭಾವನಾ ಪ್ರದರ್ಶನದಲ್ಲೂ ಅವನು ವಿಚಿತ್ರವಾಗಿದ್ದ.
ಹೊರಪ್ರಪಂಚದ ಅರಿವು ಆದಾಗ, ಅದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ಭಾವನೆಗಳಲ್ಲಿ
ಹೂಡಲೇಬೇಕು. ಮನಸ್ಸಿನ ಆ ಭಾಗವು ಒಡೆದು ಹೋಳಾದುದರಿಂದ, ನಿರೀಕ್ಷಿತ
ಪ್ರತಿಕ್ರಿಯೆಯನ್ನು ಅವ ತೋರಿಸಲು ಆಗುತ್ತಿರಲಿಲ್ಲ. ಆದಕಾರಣ, Callous,
ನಿರ್ಲಿಪ್ತನಂತೆ, ನಡೆದುಕೊಳ್ಳುತ್ತಿದ್ದ.<br />
{{gap}}ಈಗ ಎಲ್ಲವೂ ಅರ್ಥವಾಯಿತೇ? ಜಾಣತನವೂ ಸ್ಮರಣಶಕ್ತಿಯೂ ಇದ್ದು,
ಸ್ಕೀಜೋಫ್ರೆನಿಯಾದ ಮುನ್ಸೂಚನೆಗಳೂ ಕಾಣಬರುತ್ತವೆ.
{{gap}}'ನಾಲ್ಕು ವಾರಗಳ ಚಿಕಿತ್ಸೆಯಿಂದ ಸೀತುವಿನಲ್ಲಿ ತುಂಬಾ ಗುಣ ಉಂಟಾಗಿದೆ.
ಇಷ್ಟು ಬೇಗ ಇಷ್ಟರಮಟ್ಟಿಗೆ ಗುಣ ಹೊಂದುತ್ತಾನೆ ಎಂದು ನಾನು ನಿರೀಕ್ಷಿಸಿರಲಿಲ್ಲ.
ಇನ್ನೊಂದು ಎರಡು ವಾರಗಳಲ್ಲಿ ಮನೆಗೆ ಹಿಂತಿರುಗಿ ಕಳಿಸುತ್ತೇನೆ, ಕಾಲೇಜು
ವಿದ್ಯಾಭ್ಯಾಸವನ್ನು ಮುಂದುವರಿಸಲಿ. ಎಲ್ಲರಂತೆ ಅವನೂ ಬಾಳಲು ಸಾಧ್ಯ ;
ಸ್ವಲ್ಪ ಎಚ್ಚರಿಕೆಯನ್ನು ವಹಿಸಿದರೆ ಸಾಕು.'
ಎಂದು ವೈದ್ಯರು ಹೇಳಿದರು. ಸೀತುವನ್ನು ವಾರ್ಡಿನಲ್ಲಿ ನೋಡಹೋದರು,<noinclude></noinclude>
fmf9erpyho9puefivpz2a2hksusukcg
ಪುಟ:ಮನಮಂಥನ.pdf/೨೩೨
104
62679
316607
315563
2026-05-04T02:15:57Z
Pragathi. BH
7585
/* Validated */
316607
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಸ್ಕೀಜೋಫ್ರೆನಿಯಾಗಳು|right=೨೧೩}}
ತಂದೆ, ಕಣ್ಣೆದುರಿಗೆ ಕಂಡ ಮಗನ ಮುಖಚರ್ಯೆಯೇ ಬದಲಾಗಿಬಿಟ್ಟಿತ್ತು.
ಸಿಂಡರಿಸಿಕೊಂಡಂತೆ ಇರುತ್ತಿದ್ದ ಮುಖ ಈಗ ಸರಳವಾಗಿತ್ತು, ಒಂದೆರಡು
ಮಾತುಗಳಲ್ಲಿಯೇ ತಂದೆಯು ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟರೂ,
ಸಮಂಜಸವಾಗಿ, ಮುಖವನ್ನು ಕೆಳಗೆ ಮಾಡದೆ, ಸೀತು ಮಾತನಾಡಿದ
'''ಸಕ್ಯೂಬಾಯಿಯ ಕೆಟಟೋನಿಯ'''
{{gap}}'ಗಂಟಲು ನೋವು ಅಂತ ಹೇಳಿದಳು, ಡಾಕ್ಟರೇ, ಊರಿನಲ್ಲಿರುವ ಡಾಕ್ಟರ
ಹತ್ತಿರಕ್ಕೆ ಕರೆದುಕೊಂಡು ಹೋದೆ. ದವಡೆಯ ಮೂಲೆಯಲ್ಲಿ ಹದ್ದಗಳಲೆ
ಉಬ್ಬಿಕೊಂಡಿದೆ. ಸೀತದ ಗೆಡ್ಡೆ ಇರಬೇಕು. ಎಂದು ಹೇಳಿ ಎರಡು ದಿನ ಇನ್ಜಕ್ಷನ್
ಕೊಟ್ಟರು. ಸ್ವಲ್ಪ ವಾಸಿಯಾದ್ದಾಗೆ ಆಯಿತು. ಆದರೆ ಮೊದಲಿನಂತೆ ಹುಷಾರಾಗಲಿಲ್ಲ.
ನಾಳೆಯ ಬೆಳಗ್ಗೆ ಊರಿನಿಂದ ಕರೆದುಕೊಂಡ ಬರ್ತ್ತೀನಿ, ಗಂಟಲು ಸರಿಯಾಗಿದೆಯೇ
ಅಂತ ಪರೀಕ್ಷೆ ಮಾಡಿ ಹೇಳಿ' ಎಂದು ಸಾವಂದಪ್ಪ ಹೇಳಿದ.
{{gap}}'ರೋಗಿಯನ್ನು ಪರೀಕ್ಷೆ ಮಾಡುವುದಕ್ಕೆ ಇಷ್ಟೆಲ್ಲಾ ಹೇಳಬೇಕೇ ! ಸಾವಂದಪ್ಪ,
ಯಾವಾಗ ಬೇಕಾದರೂ ಕರೆದುಕೊಂಡು ಬಾ. ಆದರೆ ಅದಕ್ಕೆ ಮೊದಲು,
ನಿಮ್ಮೂರ ಡಾಕ್ಟರ ಕೈಲಿ, ಇನ್ನೊಮ್ಮೆ ಪರೀಕ್ಷೆಮಾಡಿಸು. ಡಿಫ್ತೀರಿಯಾ ತರಹ
ಏನಾದರೂ ಕೆಟ್ಟ ಬೇನೆ ಬಂದಿದ್ದರೆ, ಬಸ್ಸಿನಲ್ಲಿ ಊರಿಂದ ಊರಿಗೆ ಪ್ರಯಾಣ
ಮಾಡಿಸೋದು ತುಂಬಾ ತಪ್ಪು. ಅವರ ಅನುಮತಿ ಪಡೆದು ಕರೆದುಕೊಂಡುಬಾ'
ಎಂದೆ.
{{gap}}ನಾಲ್ಕು ದಿನಗಳಾದ ಮೇಲೆ ಮಗಳನ್ನು ಕರೆದುಕೊಂಡು ಸಾವಂದಪ್ಪ
ಒಂದು ಬೆಳಿಗ್ಗೆ ಬಂದ. 'ಇಲ್ಲಿ ಕೂತುಕೊ ಸಕ್ಕೂ' ಎಂದು ಹೇಳಿ ಮಗಳನ್ನು
ಎದುರು ಕುರ್ಚಿಯಲ್ಲಿ ಕೂರಿಸಿದ.
{{gap}}ಹದಿನೈದು ಹದಿನಾರು ವರ್ಷಗಳ ಹುಡುಗಿ, ದೃಢಕಾಯವಿಲ್ಲದಿದ್ದರೂ
ಸಣಕಲ ಕಡ್ಡಿ ಏನಲ್ಲ. ತಲೆಯನ್ನು ತಗ್ಗಿಸಿಕೊಂಡು ಕೂತಿದ್ದಳು. 'ಶಾಲೆಗೆ ಹೋಗ್ತಾ
ಇದೀಯಮ್ಮಾ, ಸಕ್ಕೂ' ಎಂದು ಕೇಳಿದೆ. ಮೂರನೇ ಸ್ಟಾಂಡರ್ನಲ್ಲಿ ಓದುತ್ತಾ
ಇದ್ದಾಳೆ ಎಂದು ಸಾವಂದಪ್ಪ ಉತ್ತರಿಸಿದ. ತಲೆಯೆತ್ತಿ ಸಕ್ಕು ಅರೆಕ್ಷಣ ನನ್ನ
ಮುಖವನ್ನು ನೋಡಿದಳು. ಉತ್ತರವನ್ನು ತಂದೆ ಕೊಟ್ಟ ಮೇಲೆ, ತಲೆ ತಗ್ಗಿಸಿದಳು.
ತಂದೆಯೆದುರಿಗೆ ಯಾವ ಪ್ರಶ್ನೆಯನ್ನು ಮಗಳಿಗೆ ಹಾಕಿದರೂ, ತಂದೆಯೇ
ಉತ್ತರವನ್ನು ಕೊಡುತ್ತಾನೆ, ಮಗಳಿಗೆ ಅವಕಾಶವಿರುವುದಿಲ್ಲ ಎನ್ನುವುದು ತಿಳಿಯಿತು.
ಆ ಮೇಲೆ ಪ್ರಶ್ನೆಗಳನ್ನು ಕೇಳಿದರಾಯಿತು. ದೇಹಾರೋಗ್ಯವನ್ನು ಸ್ಕೂಲವಾಗಿ<noinclude></noinclude>
24g0mblu2qkm5smmtc1fvzrpmpwr4gr
316608
316607
2026-05-04T02:17:43Z
Pragathi. BH
7585
316608
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಸ್ಕೀಜೋಫ್ರೆನಿಯಾಗಳು|right=೨೧೩}}
ತಂದೆ, ಕಣ್ಣೆದುರಿಗೆ ಕಂಡ ಮಗನ ಮುಖಚರ್ಯೆಯೇ ಬದಲಾಗಿಬಿಟ್ಟಿತ್ತು.
ಸಿಂಡರಿಸಿಕೊಂಡಂತೆ ಇರುತ್ತಿದ್ದ ಮುಖ ಈಗ ಸರಳವಾಗಿತ್ತು, ಒಂದೆರಡು
ಮಾತುಗಳಲ್ಲಿಯೇ ತಂದೆಯು ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟರೂ,
ಸಮಂಜಸವಾಗಿ, ಮುಖವನ್ನು ಕೆಳಗೆ ಮಾಡದೆ, ಸೀತು ಮಾತನಾಡಿದ
'''ಸಕ್ಯೂಬಾಯಿಯ ಕೆಟಟೋನಿಯ'''
{{gap}}'ಗಂಟಲು ನೋವು ಅಂತ ಹೇಳಿದಳು, ಡಾಕ್ಟರೇ, ಊರಿನಲ್ಲಿರುವ ಡಾಕ್ಟರ
ಹತ್ತಿರಕ್ಕೆ ಕರೆದುಕೊಂಡು ಹೋದೆ. ದವಡೆಯ ಮೂಲೆಯಲ್ಲಿ ಹದ್ದಗಳಲೆ
ಉಬ್ಬಿಕೊಂಡಿದೆ. ಸೀತದ ಗೆಡ್ಡೆ ಇರಬೇಕು. ಎಂದು ಹೇಳಿ ಎರಡು ದಿನ ಇನ್ಜಕ್ಷನ್
ಕೊಟ್ಟರು. ಸ್ವಲ್ಪ ವಾಸಿಯಾದ್ದಾಗೆ ಆಯಿತು. ಆದರೆ ಮೊದಲಿನಂತೆ ಹುಷಾರಾಗಲಿಲ್ಲ.
ನಾಳೆಯ ಬೆಳಗ್ಗೆ ಊರಿನಿಂದ ಕರೆದುಕೊಂಡ ಬರ್ತ್ತೀನಿ, ಗಂಟಲು ಸರಿಯಾಗಿದೆಯೇ
ಅಂತ ಪರೀಕ್ಷೆ ಮಾಡಿ ಹೇಳಿ' ಎಂದು ಸಾವಂದಪ್ಪ ಹೇಳಿದ.
{{gap}}'ರೋಗಿಯನ್ನು ಪರೀಕ್ಷೆ ಮಾಡುವುದಕ್ಕೆ ಇಷ್ಟೆಲ್ಲಾ ಹೇಳಬೇಕೇ ! ಸಾವಂದಪ್ಪ,
ಯಾವಾಗ ಬೇಕಾದರೂ ಕರೆದುಕೊಂಡು ಬಾ. ಆದರೆ ಅದಕ್ಕೆ ಮೊದಲು,
ನಿಮ್ಮೂರ ಡಾಕ್ಟರ ಕೈಲಿ, ಇನ್ನೊಮ್ಮೆ ಪರೀಕ್ಷೆಮಾಡಿಸು. ಡಿಫ್ತೀರಿಯಾ ತರಹ
ಏನಾದರೂ ಕೆಟ್ಟ ಬೇನೆ ಬಂದಿದ್ದರೆ, ಬಸ್ಸಿನಲ್ಲಿ ಊರಿಂದ ಊರಿಗೆ ಪ್ರಯಾಣ
ಮಾಡಿಸೋದು ತುಂಬಾ ತಪ್ಪು. ಅವರ ಅನುಮತಿ ಪಡೆದು ಕರೆದುಕೊಂಡುಬಾ'
ಎಂದೆ.
{{gap}}ನಾಲ್ಕು ದಿನಗಳಾದ ಮೇಲೆ ಮಗಳನ್ನು ಕರೆದುಕೊಂಡು ಸಾವಂದಪ್ಪ
ಒಂದು ಬೆಳಿಗ್ಗೆ ಬಂದ. 'ಇಲ್ಲಿ ಕೂತುಕೊ ಸಕ್ಕೂ' ಎಂದು ಹೇಳಿ ಮಗಳನ್ನು
ಎದುರು ಕುರ್ಚಿಯಲ್ಲಿ ಕೂರಿಸಿದ.
{{gap}}ಹದಿನೈದು ಹದಿನಾರು ವರ್ಷಗಳ ಹುಡುಗಿ, ದೃಢಕಾಯವಿಲ್ಲದಿದ್ದರೂ
ಸಣಕಲ ಕಡ್ಡಿ ಏನಲ್ಲ. ತಲೆಯನ್ನು ತಗ್ಗಿಸಿಕೊಂಡು ಕೂತಿದ್ದಳು. 'ಶಾಲೆಗೆ ಹೋಗ್ತಾ
ಇದೀಯಮ್ಮಾ, ಸಕ್ಕೂ' ಎಂದು ಕೇಳಿದೆ. ಮೂರನೇ ಸ್ಟಾಂಡರ್ನಲ್ಲಿ ಓದುತ್ತಾ
ಇದ್ದಾಳೆ ಎಂದು ಸಾವಂದಪ್ಪ ಉತ್ತರಿಸಿದ. ತಲೆಯೆತ್ತಿ ಸಕ್ಕು ಅರೆಕ್ಷಣ ನನ್ನ
ಮುಖವನ್ನು ನೋಡಿದಳು. ಉತ್ತರವನ್ನು ತಂದೆ ಕೊಟ್ಟ ಮೇಲೆ, ತಲೆ ತಗ್ಗಿಸಿದಳು.
ತಂದೆಯೆದುರಿಗೆ ಯಾವ ಪ್ರಶ್ನೆಯನ್ನು ಮಗಳಿಗೆ ಹಾಕಿದರೂ, ತಂದೆಯೇ
ಉತ್ತರವನ್ನು ಕೊಡುತ್ತಾನೆ, ಮಗಳಿಗೆ ಅವಕಾಶವಿರುವುದಿಲ್ಲ ಎನ್ನುವುದು ತಿಳಿಯಿತು.
ಆ ಮೇಲೆ ಪ್ರಶ್ನೆಗಳನ್ನು ಕೇಳಿದರಾಯಿತು. ದೇಹಾರೋಗ್ಯವನ್ನು ಸ್ಥೂಲವಾಗಿ<noinclude></noinclude>
cdep5u1ltbfsn1co8l6yflwxafncy50
ಪುಟ:ಮನಮಂಥನ.pdf/೨೩೩
104
62680
316609
315564
2026-05-04T02:27:10Z
Pragathi. BH
7585
/* Validated */
316609
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೨೧೪|right=ಮನಮಂಥನ}}
ಪರೀಕ್ಷಿಸೋಣ ಎಂದುಕೊಂಡು, 'ನಾಲಿಗೆ ತೋರಿಸು, ಸಕ್ಕೂ' ಎಂದೆ. 'ಗಂಟಲನ್ನೂ
ಹಾಗೆಯೇ ತೋರಿಸಮ್ಮಾ' ಎಂದ, ಸಾವಂದಪ್ಪ.
{{gap}}ತಲೆ ಎತ್ತಿದಳು ಸಕ್ಕೂಬಾಯಿ, ಬಾಯಿನಿಂದ ಹೊರಕ್ಕೆ ನಾಲಿಗೆಯನ್ನು
ಸ್ವಲ್ಪ ಚಾಚಿದಳು. ನಾಲಿಗೆಯ ತುದಿ ಹೊರಗೆ ಇತ್ತು. ಬಾಯಿಯನ್ನು
ಮುಚ್ಚಿಕೊಂಡಳು. ಇಷ್ಟು ಮಾಡುವುದಕ್ಕೆ ಕತ್ತನ್ನು ನನ್ನ ಕಡೆಗೆ ಚಾಚಿದ್ದಳು. ಅದೇ
ಸ್ಥಿತಿಯಲ್ಲಿ ಒಂದೆರಡು ನಿಮಿಷಗಳು ಇದ್ದಳು. ಆಗ ಸಕ್ಕೂವಿನ ಮುಖ,
ಮುಖವಾಡವನ್ನು ಧರಿಸಿದ ಮುಖದಂತಿತ್ತು. ಜೀವಕಳೆಯು ಗೆಲುವಾಗಿರಲಿಲ್ಲ.
'ಗಂಟಲು ತೋರಿಸು ಸಕ್ಕು' ಎಂದ ಸಾವಂದಪ್ಪ.
{{gap}}ನೋಡುತ್ತಲೇ ಇದೀನಿ, ನನ್ನ ಕಡೆಗೆ ಚಾಚಿದ್ದ ಕತ್ತನ್ನು ಬಲಗಡೆಗೆ
ತಿರುಗಿಸಿದಳು. ನಿಲುವು ಗೌರಿ ಬೊಂಬೆಗಳು ತಲೆ ತಿರುಗಿಸಿದಂತೆ, ಸಕ್ಕು,
ತಲೆಯನ್ನು ತಿರುಗಿಸಿದಳು. ಅಷ್ಟು ಸ್ಪಷ್ಟವಾಗಿ ಯಾಂತ್ರಿಕವಾಗಿತ್ತು. ಹಾಗೆ
ತಿರುಗಿಸಿದಾಗ, ಕೆಳದವಡೆಯನ್ನೂ ಮುಂದಕ್ಕೆ ಝಾಡಿಸಿದಳು. ಮೇಲು ರೆಪ್ಪೆಗಳು
ಅರ್ಧ ಕಣ್ಣನ್ನು ಮುಚ್ಚಿದ್ದುವು. ಅದೇ ಭಂಗಿಯಲ್ಲಿ ಮೂರು ನಾಲ್ಕು ನಿಮಿಷ
ಇದ್ದಳು.
{{gap}}'ಗಂಟಲು ತೋರಿಸಮ್ಮಾ ಸಕ್ಕು' ಎಂದು ಸಾವಂದಪ್ಪ ತಿರುಗಿ ಹೇಳಿದ.
ನನ್ನ ಕಡೆಗೆ ಮುಖವನ್ನು ತಿರುಗಿಸಿ ಬಾಯಿ ತೆರೆದಳು. ಟಾರ್ಚ್ ಬೆಳಕನ್ನು
ಗಂಟಲೊಳಕ್ಕೆ ಹರಿಸಿ ಪರೀಕ್ಷೆಯನ್ನು ಮಾಡಿದೆ. ಸಾವಂದಪ್ಪನ ಮನಸ್ಸಿಗಾದರೂ,
ಡಾಕ್ಟರು ತುಂಬಾ ಶ್ರದ್ಧೆಯಿಂದ ಮಾಡಿದರು, ಎನ್ನುವ ಸಮಾಧಾನವಾಗಲಿ
ಅಂತ.
{{gap}}ಏಕೆಂದರೆ, ಸಕ್ಕೂವಿನ ಮುಖಭಂಗಿಗಳನ್ನು ಕಂಡಾಗ, ಅವಳ ಚಾಕ
ಚಕ್ಯತೆಯನ್ನೂ ವಿದ್ಯಾಭ್ಯಾಸದ ಮಟ್ಟವನ್ನೂ ತಿಳಿದಾಗ ; ಈಕೆಗೆ ಕೆಟಟೋನಿಕ್
ಸ್ಕೀಜೋಫ್ರೆನಿಯಾ ಇರಬೇಕು ಎನ್ನುವುದು ಸುಮಾರು ಸ್ಪಷ್ಟವಾಗಿತ್ತು.<br />
{{gap}}ಅನಂತರ ರೋಗಿಯ ವಿವರಗಳನ್ನು ಸಾವಂದಪ್ಪನಿಂದ ಪಡೆಯಲಾಯಿತು.
{{gap}}ಸಕ್ಯೂಬಾಯಿಯ ತಾಯಿಗೆ ಹತ್ತೆಂಟು ವರ್ಷಗಳಿಂದಲೂ ಮಾನಸಿಕ
ಅಸ್ಪತ್ರೆಯಲ್ಲಿ, 'ಷಾಕ್ ಟ್ರೀಟ್ಮೆಂಟ್' ಅನ್ನು ಆಗಿಂದಾಗ್ಗೆ ಕೊಡಿಸಿದ್ದರು. ಮಾನಸಿಕ
ಆಸ್ಪತ್ರೆಗೆ ಹೋಗುವುದಕ್ಕೆ ಮೊದಲು ಸಕ್ಕೂಬಾಯಿಯ ತಾಯಿಯು ಇದ್ದುದರಲ್ಲಿ
ಸ್ವಸ್ಥವಾಗಿಯೇ ಇದ್ದಳು. ಆದರೂ ಸಂಸಾರದಲ್ಲಿ ಚಾಲೂಕಾಗಿರಲಿಲ್ಲ. ಆದರೆ
ಆಸ್ಪತ್ರೆಗೆ ಹೋಗಲೇಬೇಕು ಎನ್ನುವಂತೆ ಎಂದೂ ನಡೆದುಕೊಂಡಿರಲಿಲ್ಲವಂತೆ.
ಸಕ್ಕೂವಿನ ಹೆರಿಗೆಯಾದ ಮೇಲೆ ಒಂದೆರಡು ತಿಂಗಳು 'ಭೂತಚೇಷ್ಟೆ' ಆಗಿತ್ತು.<noinclude></noinclude>
bcpf9zlg6u3yuxdt75wn8siswz40g2q
ಪುಟ:ಮನಮಂಥನ.pdf/೨೩೪
104
62681
316655
315565
2026-05-04T03:20:16Z
Shreesha Sharma
7840
/* Validated */
316655
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಸ್ಕಿಜೋಫೊನಿಯಾಗಳು}}{{Right|೨೧೫}}
ಪೂಜೆ ಹಾಕಿಸಿದ ನಂತರ ಅದು ಬಿಟ್ಟುಹೋಯಿತು. ಅದಾದ ಎರಡು ವರ್ಷಗಳಾದ
ಮೇಲೆ, ಮತ್ತೊಂದು ಸರ್ತಿ ಬಸಿರಾಗಿ ಮೈ ಇಳಿದ ಮೇಲೆ, ಆಸ್ಪತ್ರೆಗೆ ಹೋಗುವುದು
ಅನಿವಾರ್ಯವಾಯಿತು. ಮಾನ ಮಯ್ಯಾದೆಯ ಮೇಲೆ ಗಮನವಿರಲಿಲ್ಲವಾದ
ಕಾರಣ, ಆಸ್ಪತ್ರೆಗೆ ಸೇರಿಸಲೇಬೇಕಾಯಿತು. ಈಗ ಸ್ವಸ್ಥವಾಗಿದ್ದಾಳೆ. ಆದರೆ ಮನೆಯ
ಯಾವ ಹೊಣೆಯೂ ಅವಳ ಮೇಲಿಲ್ಲ. ಸಾವಂದಪ್ಪನ ದೊಡ್ಡ ಅಕ್ಕ ಸಂಸಾರದ
ಎಲ್ಲಾ ಹೊಣೆಯನ್ನೂ ಹೊತ್ತಿದ್ದಾಳೆ.
{{gap}}ಸಕ್ಕೂಬಾಯಿಗೆ ದೊಡ್ಡ ಅಣ್ಣ ಒಬ್ಬನಿದ್ದಾನೆ. ಮೂರು ವರ್ಷ ದೊಡ್ಡವನು.
ಅವನೂ ಶಾಲೆಗೆ ಹೋಗುತ್ತಾನೆ. ಸಕ್ಕೂಬಾಯಿಯ ಕ್ಲಾಸಿನಲ್ಲೇ ಓದುತ್ತಿದ್ದಾನೆ.
ಮನೆಪಾಠವನ್ನು ಇಡಿಸಿದ್ದಾರೆ. ಆದರೆ ತಂದೆಯು ಹೇಳಿದಂತೆ 'ಅವನಿಗೆ ಪಾಠ
ಹಿಡಿಸುಲ್ಲ ಅಂತ ಕಾಣುತ್ತೆ' ಇತರ ಕೆಲಸಗಳನ್ನು ಹೇಳಿದರೆ, ಸರಿಯಾಗಿ
ಮಾಡುತ್ತಾನೆ. ಅಂದರೆ ಅಂಗಡಿಗೆ ಹೋಗಿ ಬೆಂಕಿಪೊಟ್ಟಣವನ್ನು ತಾ ಅಂದರೆ
ತರುತ್ತಾನೆ. ಅಂಚೆ ಕಚೇರಿಗೆ ಹೋಗಿ ಕವರ್ ತಾ ಎಂದರೆ ತರುತ್ತಾನೆ. ಸಿನಿಮಾಕ್ಕೂ
ಒಬ್ಬನೇ ಹೋಗಿ ಬರುತ್ತಾನೆ. ಊಟ ತಿಂಡಿಗಳನ್ನು ಹಾಕಿದಾಗ ತಿನ್ನುತ್ತಾನೆ.
ಯಾವ ಗಲಾಟೆಯನ್ನೂ ಮಾಡುವುದಿಲ್ಲ. ತುಂಬಾ ಒಳ್ಳೆಯ ಹುಡುಗ, ಯಾವ
ಕೆಟ್ಟ ಅಭ್ಯಾಸವೂ ಇಲ್ಲ. ಅಷ್ಟಾಗಿ ಸ್ನೇಹಿತರೂ ಹೆಚ್ಚಿಲ್ಲ.
{{gap}}ಮನೆಯ ಈ ವಿವರಗಳನ್ನು ಕೇಳಿದ ಮೇಲೆ, ಕೆಟಟೋನಿಕ್
ಪೊನಿಯಾ ಸಕ್ಯೂಬಾಯಿಗೆ ಆಗಿದೆ ಎನ್ನಲು ಅಭ್ಯಂತರವೇ ಇರಲಿಲ್ಲ.
{{gap}}ತಾಯಿಯನ್ನು ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದರು. ಅಂದರೆ
ಸಾವಂದಪ್ಪನಿಗೆ ಈ ಬೇನೆಯ ಸ್ವರೂಪವು ತಿಳಿದಿದ್ದಿರಬೇಕು. ಮಕ್ಕಳಲ್ಲಿ ಮಂದ
ಬುದ್ಧಿ, ವಿಚಿತ್ರವರ್ತನೆ, ಇವುಗಳನ್ನು ಕಂಡಾಗ, ಮಾನಸಿಕ ಆಸ್ಪತ್ರೆಗೆ ಮೊದಲೇ
ಏಕೆ ಕರೆದುಕೊಂಡು ಹೋಗಲಿಲ್ಲ ?
{{gap}}ಸಾವಂದಪ್ಪನೊಬ್ಬನನ್ನೇ ನಂತರ ಬರಹೇಳಿ, 'ಮಕ್ಕಳನ್ನು ಮನೋವೈದ್ಯರಿಗೆ
ಯಾಕೆ ತೋರಿಸಲಿಲ್ಲವಪ್ಪಾ ? ಈ ಅನುಮಾನವು ನಿನಗೂ ಬಂದಿರಬೇಕು'
ಎಂದು ಕೇಳಿದೆ.
{{gap}}'ನನ್ನ ಹೆಂಡತಿಗೆ ಎರಡು ಮೂರು ವರ್ಷಗಳು ಚಿಕಿತ್ಸೆ ನಡೆಸಿದೆ, ಡಾಕ್ಟರೇ!
ಈಗೆಷ್ಟೋ ಗುಣ ಹೊಂದಿದ್ದಾಳೆ. ಆದರೆ ಮಂಕು ಬಡಿದಂತೆ ಇರುತ್ತಾಳೆ,
ಕೆಲವೊಮ್ಮೆ, ಮತ್ತೆ ಕೆಲವು ದಿನಗಳು ಸ್ವಲ್ಪ ವಾಸಿ, ಯಾವುದಾದರೂ ಮನೆ
ಕೆಲಸವನ್ನು ಹೇಳಿದರೆ ಮಾಡುತ್ತಾಳೆ. ಆದರೆ ನಿಜಮನುಷ್ಯರಂತೆ ಎಂದೂ
ಆಡಿಲ್ಲ. ನುಡಿದಿಲ್ಲ. ಅಂದ ಮೇಲೆ ಮಕ್ಕಳನ್ನು ಅಲ್ಲಿಗೆ ಕರೆದುಕೊಂಡುಹೋಗಲು<noinclude></noinclude>
abaigrqsis3xx0ojl3npfrq7bilieyp
ಪುಟ:ಮನಮಂಥನ.pdf/೨೩೫
104
62682
316656
315566
2026-05-04T03:21:19Z
Shreesha Sharma
7840
/* Validated */
316656
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೨೧೬}}{{Right|ಮನಮಂಥನ}}
ಉತ್ಸಾಹವಿರಲಿಲ್ಲ.
{{gap}}“ಅವಳಿಗೂ ಷಾಕ್ ಟೀಟ್ಮೆಂಟ್ ಕೊಡಿಸಬೇಕು ಎಂದು ನೀವು ಹೇಳಿದರೆ,
ಮನೋವೈದ್ಯರ ಬಳಿಗೆ ಅಗತ್ಯವಾಗಿ ಕರೆದುಕೊಂಡು ಹೋಗುತ್ತೀನಿ' ಎಂದ.
{{gap}}ಸಾವಂದಪ್ಪನ ಬಾಳಿನಲ್ಲಿ ಇಷ್ಟೆಲ್ಲಾ ಕಷ್ಟ ದುಃಖಗಳು ಸಂಭವಿಸಿವೆ ಎಂದು
ಯಾರೂ ಹೇಳುವಂತಿರಲಿಲ್ಲ. ನಗುನಗುತ್ತಲೇ ಇರುತ್ತಿದ್ದ. ತನ್ನ ವ್ಯಾಪಾರವನ್ನು
ಮಾಡಿಕೊಂಡೇ ಇದ್ದ, ಎಂದರೆ ಏನು ? ಇವನೇನು ಸ್ಥಿತಪ್ರಜ್ಞನೆ ? ಹೆಂಡತಿಗೆ
ಮೊದಲಿನಿಂದಲೂ ಸ್ಕಿಜೋಫ್ರೆನಿಯಾ ಆದರೆ ಪ್ರಾಯದ ಬಾಳಿನಲ್ಲಿ ಹೆಂಡತಿಯ
ಆ ಬೇನೆಯು ಗಂಡನಿಗೆ ಪತ್ತೆಯಾಗಲೇ ಇಲ್ಲ. ಹೆಂಗಸರ ನಡವಳಿಕೆಯಲ್ಲಿ
ಇವೆಲ್ಲಾ ಸಾಮಾನ್ಯ ಎಂದುಕೊಂಡಿದ್ದ. ಮಕ್ಕಳಾದ ಮೇಲೆ, ಮಾನಸಿಕ ಆಸ್ಪತ್ರೆಗೆ
ಹೋಗುವುದು ಅನಿವಾರ್ಯವಾದಾಗ, ನನ್ನ ಹೆಂಡತಿಗೆ ಮನೋರೋಗವಿದೆ,
ಎಂದು ಅವನಿಗೆ ತಿಳಿಯಬಂತು. ಆದರೆ ಆ ವೇಳೆಗೆ ಅವ ಒಗ್ಗಿ ಹೋಗಿದ್ದ ಆ
ವಿಚಿತ್ರ ನಡವಳಿಕೆಗಳಿಗೆ. ವ್ಯಾಪಾರಸ್ಥ ; ಹೊರ ಊರುಗಳಿಗೆ ವಾರಕ್ಕೆ ನಾಲೈದು
ದಿನಗಳು ಹೋಗಿ ಬರಬೇಕಾಗಿತ್ತು. ಕಾರಣ ಮನೆಯ ಕಾರ್ಪಣ್ಯಗಳನ್ನು ಅಷ್ಟಾಗಿ
ಹಚ್ಚಿಕೊಳ್ಳಬೇಕಾಗಿರಲಿಲ್ಲ. ಅವನೇ ಅಂದ 'ಬೇಕಾದರೆ, ಡಾಕ್ಟರೇ, ನನ್ನ ದೊಡ್ಡಕ್ಕನನ್ನು
ಕರೆದುಕೊಂಡು ಬತ್ತೀನಿ. ಸಕ್ಕೂಬಾಯಿ ಮನೆಯಲ್ಲಿ ಹೇಗೆ ಆಡುತ್ತಾಳೆ, ನಡೆದು
ಕೊಳ್ಳುತ್ತಾಳೆ, ಎಲ್ಲವನ್ನೂ ಆಕೆ ಚೆನ್ನಾಗಿ ಬಲ್ಲಳು” ಎಂದ. ಹಾಗೇ ಮಾಡಪ್ಪ
ಎಂದೆ. ತಾತ್ಕಾಲಿಕವಾಗಿ ಉಪಶಮನದ ಚಿಕಿತ್ಸೆಯನ್ನು ನಡೆಸಿದೆ.
{{gap}}ಸಾವಂದಪ್ಪನ ದೊಡ್ಡ ಅಕ್ಕ ಬಂದಳು. ಸುಮಾರು ಅರವತ್ತರ ಪ್ರಾಯ.
ಭಾರೀ ಬಂಗಾರದ ಬಳೆಗಳನ್ನು ಹಾಕಿಕೊಂಡಿದ್ದಳು. ಶ್ರೀಮಂತರಂತೆ
ಕಾಣಿಸುತ್ತಿದ್ದಳು. ಸಕ್ಕೂಬಾಯಿಯ ವಿವರಗಳನ್ನು ಕೇಳಿದೆ. ಅದನ್ನು ಹೇಳುಕ್ಕೇ
ಬಂದೆ. ಸಾವಂದಪ್ಪ ಹೇಳಿದ, ನೀವು ಮಾತಾಡಬೇಕು ಅಂದಿರಂತೆ. ಹೇಳೋದೇನಿದೆ,
ಡಾಕ್ಟರೇ ! ಇವಳಮ್ಮನಿಗೂ ಹುಚ್ಚು, ಇವಳಿಗೂ ಹುಚ್ಚು, ಇವಳ ಅಣ್ಣನಿಗೂ
ಹುಚ್ಚು, ಹುಚ್ಚಾಸ್ಪತ್ರೆಗೆ ಸೇರಿಸಪ್ಪಾ ! ಇನ್ನು ಬೇರೆ ಕಾಯಿಲೆ ಯಾವುದೂ ಇಲ್ಲ
ಅಂತ ಹೇಳಿದೆ. ನನ್ನ ತಮ್ಮನಿಗೆ ಏನೋ ಆಸೆ. ಮಗಳಿಗೆ ಗಂಟಲು ನೋವು,
ಅದು ಸರಿಹೋದರೆ, ಚೆನ್ನಾಗುತ್ತಾಳೆ ಅಂತ' ಎಂದಳು.
{{gap}}ತಮ್ಮನ ಹೆಂಡತಿ, ಮಕ್ಕಳ ಮೇಲೆ, ದೊಡ್ಡ ಅತ್ತಿಗೆಗೆ ಅಷ್ಟೇನೂ ಆದರವು
ಇರಬೇಕಾಗಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಕಾರಣ, ಆಕೆಯು
ಹೇಳಿದ್ದನ್ನು ಸಮರ್ಥಪಡಿಸಲು, ಮಿಕ್ಕ ಪ್ರಶ್ನೆಗಳನ್ನು ಎಳ್ಳಂಬಳಸೆಯಾಗಿ ಕೇಳಿದೆ.<noinclude></noinclude>
saonagyngjdpzx4rn7gdxdazl39gyxr
ಪುಟ:ಮನಮಂಥನ.pdf/೨೩೬
104
62683
316657
315567
2026-05-04T03:22:37Z
Shreesha Sharma
7840
/* Validated */
316657
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಸ್ಕಿಜೋಫೊನಿಯಾಗಳು}}{{Right|೨೧೭}}
{{gap}}ಕೆಲವು ದಿನಗಳು, ಎರಡು ತಾಸು, ಸಕ್ಕೂಬಾಯಿಯು ಕೆಟ್ಟ ಕೆಟ್ಟದಾಗಿ
ಅರಚಿಕೊಳ್ಳುತ್ತಿದ್ದಳೆಂದು ತಿಳಿದುಬಂದಿತು. ತನ್ನ ಪಾಡಿಗೆ ತಾನು ಏನೇನೋ
ಅಸಂಬದ್ಧವಾಗಿ ಮಾತನಾಡುವುದು, ಹೀಗೆಲ್ಲಾ ಆಗಿಂದಾಗ್ಗೆ ಮಾಡುತ್ತಿದ್ದಳಂತೆ.
{{gap}}'ಏನು ಮಾಡೋದು, ಡಾಕ್ಟರೇ? ಒಬ್ಬಳೇ ಮಗಳೂ ನನಗೆ, ಅವಳನ್ನು
ನನ್ನ ತಮ್ಮನಿಗೆ ಕೊಟ್ಟು ಮದುವೆ ಮಾಡಿದರೆ, ಮನೆ ಆಸ್ತಿ ಮನೆಯಲ್ಲೇ ಉಳಿಯುತ್ತ
ಅಂತ ಅಂದುಕೊಂಡೆ. ಮಗಳು ಹಾಗಾದಳು ಅಂದರೆ, ಅವಳ ಮಕ್ಕಳೂ
ಹೀಗಾಗ ಬೇಕೇ, ಎಲ್ಲಾ ನಮ್ಮ ಖರ್ಮ'
{{gap}}ಎಂದು ಕೊನೆಗೆ ಹೇಳಿದಳು.
{{gap}}ಸ್ಕಿಜೋಫೊನಿಯಾ ಪ್ರವೃತ್ತಿ ಇದ್ದವರಲ್ಲಿ, ತಮ್ಮ ತಮ್ಮಲ್ಲೇ ಮದುವೆ ಮಾಡಿದರೆ,
ಅಂತಹ ಪ್ರವೃತ್ತಿಯು ಮಕ್ಕಳಲ್ಲಿ ಹೆಚ್ಚಾಗಿ ಕಾಣಬರುತ್ತದೆ. ಮದುವೆಯನ್ನು
ಮಾಡಬೇಕಾದಾಗ, ಈ ವಿಷಯವನ್ನು ಜನರು ನೆನಪಿನಲ್ಲಿಟ್ಟುಕೊಳ್ಳ ಬೇಕು.
ಸಂಶಯವು ಉಂಟಾದರೆ, ಮನೋವೈದ್ಯರ ಸಲಹೆಯನ್ನು ಪಡೆಯಬೇಕು.
ಸಂಸಾರ ಗುಟ್ಟು ಎಂದು ಪೆಚ್ಚುಪೆಚ್ಚಾಗಿ ಮುಚ್ಚಿಟ್ಟುಕೊಂಡರೆ ಜೀವಾವಧಿ
ನರಳಬೇಕಾಗಬಹುದು. ಸಂಸಾರ ಗುಟ್ಟು ಎಂದು ಗಾದೆಯನ್ನು ಕಟ್ಟಿದ
ಅನುಭಾವಿಗಳು ರೋಗ ರಟ್ಟು ಎಂದೂ ಹೇಳಿದರು. ಜೋಪೊನಿಯಾ ಒಂದು
ರೋಗ, ಅದನ್ನು ರಟ್ಟು ಮಾಡಬೇಕು, ಎಂದರೆ ಡಂಗೂರ ಸಾರಬೇಕು ಅಂತಲ್ಲ.
ಮನೋವೈದ್ಯರ ಬಳಿಗೆ ಹೋಗಿ, ಇದ್ದುದನ್ನು ಮರೆಮಾಚದೆ ಹೇಳಬೇಕು.
ಆಗ ಬೇನೆಯ ದುಷ್ಪರಿಣಾಮಗಳನ್ನು ಸಾಕಷ್ಟು ಹತೋಟಿಯಲ್ಲಿಡಬಹುದು.
ಸಂಪೂರ್ಣವಾಗಿ ವಾಸಿ ಮಾಡುತ್ತೇವೆ. ಎಂದು ಮನೋವೈದ್ಯರು ಹೇಳುವುದಿಲ್ಲ.
ಆದರೂ ಸಾಕಷ್ಟು ನೆಮ್ಮದಿಯಿಂದ ಬಾಳನ್ನು ಸಾಗಿಸುವಂತೆ ಮಾಡಲು ಸಾಧ್ಯ.
'''ರಘುಪತಿಯ ರಜ'''
{{gap}}'ಕೆಲಸಕ್ಕೆ ಸೇರಿ, ಬಹಳ ವರ್ಷಗಳೂ ಕೆಲಸಕ್ಕೆ ಸರಿಯಾಗಿ ಹೋಗುತ್ತಿದ್ದೆ.
ನಂತರ ಒಂದೊಂದು ದಿನ ರಜ ಹಾಕುತ್ತಿದ್ದೆ. ಬರಬರುತ್ತಾ ಎರಡು ದಿನಗಳು
ನಂತರ ಮೂರು ದಿನ ರಜ ಹಾಕುವುದು ಪ್ರಾರಂಭವಾಯಿತು. ಬೆಳಗ್ಗೆ ಏಳುವುದಕ್ಕೆ
ಮುಜುಗರವಾಗುತ್ತಿತ್ತು, ಅಷ್ಟೆ.
{{gap}}ನಂತರ ಮದುವೆಯಾಯಿತು. ಮದುವೆಯಾದ ಮೇಲೆ ಹೆಂಡತಿಯೊಬ್ಬಳು
ಜತೆಗೆ ಬರುತ್ತಾಳೆ. ಹೇಗೆ ನೋಡಿಕೊಳ್ಳುವುದು ಎಂಬ ಭಯ ಕಾಡುತ್ತಿತ್ತು.<noinclude></noinclude>
g75ecnu5le9ihj5goratnwgr1bdxmvi
ಪುಟ:ಮನಮಂಥನ.pdf/೨೩೭
104
62684
316658
315568
2026-05-04T03:26:01Z
Shreesha Sharma
7840
/* Validated */
316658
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೨೧೮}}{{Right|ಮನಮಂಥನ}}
ಮದುವೆಯಾದ ಮೇಲೆ ತಂದೆತಾಯಿಗಳಿಗೂ ನನಗೂ ಸ್ವಲ್ಪ ದೂರವಾಗಿ
ಮನಸ್ಸಿನಲ್ಲಿ ಬಾಧೆಯುಂಟಾಗುತ್ತಿತ್ತು. ಮದುವೆಯಾದ ಮೇಲೆ ರಜಾ ಹಾಕುವುದು
ಜಾಸ್ತಿಯಾಯಿತು. ಒಟ್ಟೋಟ್ಟಿಗೆ ನಾಲೈದು ದಿನಗಳು ಹೋಗುತ್ತಿರಲಿಲ್ಲ.
{{gap}}PresentIllness ಹೀಗೆ ರಜಾ ಹಾಕುವುದು ಆಗಾಗ್ಗೆ ಜಾಸ್ತಿಯಾದುದರಿಂದ
ಮನಸ್ಸಿನಲ್ಲಿ ನೆಮ್ಮದಿಯಿರಲಿಲ್ಲ.. ರಜ ತೆಗೆದುಕೊಂಡಾಗ ಬೇರೇನೂ ಕೆಲಸ
ಮಾಡುತ್ತಿರಲಿಲ್ಲ. ಮನೆಯಲ್ಲಿ ಸುಮ್ಮನೆ ಮಲಗಿಕೊಂಡಿರುವುದು. ಏನೇನೋ
ಯೋಚನೆಗಳನ್ನು ಮೆಲಕು ಹಾಕುವುದು. ಇಷ್ಟೇ ಕೆಲಸ ರಜ ತೆಗೆದುಕೊಳ್ಳುವುದು
ಜಾಸ್ತಿಯಾಗಿ, ಮನಸ್ಸಿನಲ್ಲಿ ಅದೇ ಯೋಚನೆ ಬಾಧಿಸತೊಡಗಿತು. ಕೂತರೆ
ನಿಂತರೆ ಅದೇ ಯೋಚನೆಯಾಯಿತು. ಹೀಗಾಗಿ ಕೆಲಸದ ಮೇಲೆ ಇದ್ದಾಗಲೂ
ಅದೇ ಯೋಚನೆಯಾಗಿ ಕೆಲಸದ ಮೇಲೆ Concentrate ಮಾಡುವುದು
ಆಗುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ಮನಸ್ಸಿನಲ್ಲಿ ಅದೇ ಭಾವನೆ ಉತ್ಕಟವಾಗಿ
ಮುಖಭಾವದಲ್ಲಿ ಬದಲಾವಣೆಯಾಗುತ್ತಿತ್ತೋ ಏನೋ? ಎಲ್ಲರೂ ನನ್ನನ್ನು
ನೋಡಿ ನಗಲು ಪ್ರಾರಂಭಿಸಿದರು. ಹೀಗೇ ಸ್ವಲ್ಪ ದಿನ ನಡೆಯಿತು. ನನಗೆ ಇದಕ್ಕೆ
ಪರಿಹಾರ ಕಾಣದಾಯಿತು. ಅಷ್ಟು ಹೊತ್ತಿಗೆ ನನ್ನನ್ನು ನೋಡಿ ಎಲ್ಲರೂ ನಗುತ್ತಾರೆ
ಎಂಬ ಭಾವನೆ ಬೆಳೆದುಬಿಟ್ಟಿತು. ಮನಸ್ಸಿನಲ್ಲಿ ಅದನ್ನೇ ಮೆಲುಕು ಹಾಕುತ್ತಿದ್ದಾಗ
ಎಲ್ಲ ನೋಡಿ ಆಡಿಕೊಳ್ಳುತ್ತಿದ್ದರು .
{{gap}}ಫ್ಯಾಕ್ಟರಿಗೆ ಹೋಗುವುದು ತೀರ ಕಮ್ಮಿಯಾಗಿದೆ. ತಿಂಗಳಿಗೆ ಐದಾರು
ದಿನಗಳೋ, ಎಂಟು ಹತ್ತು ದಿನಗಳು ಮಾತ್ರ ಹೋಗುತ್ತಿರುತ್ತೇನೆ. ಈಗ ಏಳುವುದಕ್ಕೆ
ಮತ್ತು Factory ಗೆ ಹೋಗಲು ಮನಸ್ಸೇ ಇಲ್ಲ. ಕೆಲಸಕ್ಕೆ ಹೋಗದೆ ಇರುವುದರಿಂದ
ಆಗುವ ತೊಂದರೆಗಳು ನನ್ನ ಮೇಲೆ ಪರಿಣಾಮವನ್ನುಂಟುಮಾಡುತ್ತಿಲ್ಲ. ಕೆಲಸ
ಹೋಗುತ್ತದೆ. ನಂತರ ಸಂಸಾರದ ಗತಿಯೇನು ? ಎಂಬ ಭಾವನೆಯೂ ನನಗೆ
ಬರುತ್ತಿಲ್ಲ . . .
{{gap}}ಜೀವನದಲ್ಲಿ ಉತ್ಸಾಹವಾಗಲೀ ಹೆಂಡತಿ ಮಕ್ಕಳು ಎಂಬ ಪ್ರೀತಿ
ವಿಶ್ವಾಸವಾಗಲೀ ಇಲ್ಲ. ಯಾವಾಗಲೂ ನಿರುತ್ಸಾಹ ಒಂಟಿತನ ಬೇಜಾರು
ಕಾಡುತ್ತಿರುತ್ತವೆ.
{{gap}}ಮೇಲಿಂದ ಮೇಲೆ ರಜ ತೆಗೆದುಕೊಂಡು, ಚಾಕರಿಯನ್ನು ಊನ
ಮಾಡಿಕೊಳ್ಳುತ್ತಿದ್ದ ರಘುಪತಿಯು ತನಗಾಗುವುದನ್ನು ವಿವರಿಸಿ ಬರೆದು ತಂದ
ವರದಿಯಿಂದ, ಮೇಲೆ ಹೇಳಿರುವುದನ್ನು ಬಳಸಿಕೊಂಡಿದ್ದೇನೆ.
{{gap}}ಒಂಭತ್ತು ಮಕ್ಕಳಿದ್ದ ತುಂಬಿದ ಮನೆಯಲ್ಲಿ ರಘುಪತಿ ಹಿರಿಯ ಮಗ<noinclude></noinclude>
fz56g8iykedzafj1wrzygmasnbxr5yp
ಪುಟ:ಮನಮಂಥನ.pdf/೨೩೮
104
62685
316659
315569
2026-05-04T03:26:53Z
Shreesha Sharma
7840
/* Validated */
316659
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಸ್ಕಿಜೋಫೊನಿಯಾಗಳು}}{{Right|೨೧೯}}
ತಂದೆಯು ದೃಢಕಾಯ, ತಾಯಿಯು ಏಕಾಂತ ಸ್ವಭಾವದಾಕೆ, ರೋಗಿಷ್ಠೆ, ಎರಡು
ಮೂರು ಬಾರಿ ಕರೆಂಟ್ ಟೀಟ್ಮೆಂಟನ್ನು ತೆಗೆದುಕೊಂಡಿದ್ದಳು. ಮೊದಲಿ
ನಿಂದಲೂ ವಿದ್ಯಾಭ್ಯಾಸದಲ್ಲಿ ರಘುಪತಿಗೆ ಆಸ್ಥೆಯಿರಲಿಲ್ಲ. ಉಪಾಧ್ಯಾಯರನ್ನು
ಕಂಡರನಕ ನಡುಗುತ್ತಿದ್ದ. ಕತ್ತಲು ಕಳ್ಳಕಾಕರು ದೆವ್ವ ಭೂತಗಳೆಂದರೆ ತುಂಬ
ಹೆದರಿಕೆ, ಸರಿಯಾದ ಬಟ್ಟೆಬರೆಗಳಾಗಲೀ ದುಡ್ಡುಕಾಸಾಗಲೀ ಇರುತ್ತಿರಲಿಲ್ಲ
ವಾದ್ದರಿಂದ ತಾನು ಎಲ್ಲರಿಗಿಂತ ಕೀಳು ಎಂಬ ಭಾವನೆ ಬೆಳೆದು ಬೇರೆಯವರ
ಜತೆಯಲ್ಲಿ ಸ್ನೇಹವನ್ನಾಗಲೀ ಕೂಡಿ ಮಾತನಾಡುವುದನ್ನಾಗಲೀ, ಮಾಡುತ್ತಿರಲಿಲ್ಲ.
ಮೊದಲಿನಿಂದ ಈ ತನಕ ಸ್ನೇಹಿತರೇ ನನಗಿಲ್ಲ ಎಂದವನ ಹೇಳಿಕೆ. ಕಾಲೇಜಿನಲ್ಲಿ
ಓದುವಾಗಲೂ ಒಂಟಿತನದಿಂದ ಬೇಸರ ಪಡುತ್ತಿದ್ದ. ಕೊನೆಯ ಪರೀಕ್ಷೆಯಲ್ಲಿ
ನಪಾಸಾದ, ಮುಂದೆ ಓದಲು ಸಾಧ್ಯವಾಗಲಿಲ್ಲ. ಏಳು ಎಂಟು ವರ್ಷ ಕೆಲಸ
ದೊರಕದೆ ತುಂಬಾ ಒದ್ದಾಡಿದ. ನಂತರ ಫ್ಯಾಕ್ಟರಿಯೊಂದರಲ್ಲಿ ಕೆಲಸ ದೊರೆಯಿತು.
ಒಂದೆರಡು ವರ್ಷಗಳು ನೆಮ್ಮದಿಯಿಂದಿದ್ದ. ಅನಂತರ ಶುರುವಾಯಿತು; ರಜಹಾಕುವ
ಗೀಳು. ಇಂತಹ ಗೀಳಿನಿಂದ ಮುಂದೆ ಆಗುವ ದುಷ್ಪರಿಣಾಮಗಳು ರಘುಪತಿಗೆ
ಗೊತ್ತು. ಆದರೆ ಭವಿಷ್ಯದ ಭಯವು ಅವನನ್ನು ನರಳುಸುತ್ತಿರಲಿಲ್ಲ. ಏನು
ಬೇಕಾದರೂ ಆಗಲಿ ; ಹೇಗೆ ಬೇಕಾದರೂ ನಡೆಯಲಿ, ಎನ್ನುವ ಉಗ್ರ
ಉದಾಸೀನತೆಯು ಅವನಿಗೆ ಬಡಿದಿತ್ತು.
{{gap}}ಮೂರು ಮಕ್ಕಳು ಮತ್ತು ಹೆಂಡತಿ ಇರುವ ಸಂಸಾರ, ತನ್ನ ಹೆಂಡತಿ,
ತನ್ನ ಮಕ್ಕಳು. ಆದರೆ ಅವರಲ್ಲಿ ಪ್ರೀತಿಯಾಗಲೀ ವಿಶ್ವಾಸವಾಗಲೀ ಹುಟ್ಟಲಿಲ್ಲ,
ಬೆಳೆಯಲಿಲ್ಲ. ಸಂಸಾರದ ಹೊಣೆಯ ಅರಿವು ರಘುಪತಿಗಿದೆ. ಆದರೆ ಹೊಣೆಯನ್ನು
ಹೊರಲು ಉದಾಸೀನತೆಯು Callousness -ಅಡ್ಡ ಬರುತ್ತಿದೆ.
{{gap}}ಒಬ್ಬನೇ ಬಿದ್ದುಕೊಂಡು, ತನ್ನ ಯೋಚನೆಗಳಲ್ಲಿ ತಾನೇ ಮಗ್ನನಾಗಿರುವುದು
ಅವನಿಗೆ ಸುಲಭವಾಗಿದೆ. ಮನಸ್ಸಿನಲ್ಲಿ ಭಾರವಾಗಿದ್ದುದನ್ನು ಗೆಳೆಯರೊಂದಿಗೆ
ಹೇಳಿಕೊಂಡರೆ ಮನಸ್ಸು ಹಗುರವಾಗುತ್ತದೆ. ಅಂತಹ ಅನುಕೂಲವು
ರಘುಪತಿಗಿರಲಿಲ್ಲ. ನಾನು ಎಲ್ಲರಿಗಿಂತಲೂ ಕೀಳು ; ನನ್ನನ್ನು ಕಂಡರೆ ಎಲ್ಲರೂ
ನಗುತ್ತಾರೆ, ಎನ್ನುವ ಭಾವನೆಯು ಮೂಡಿ, ಅವ ಇತರರೊಂದಿಗೆ ಬೆರೆಯಲಿಲ್ಲ.
ಊಹಾ ಲೋಕದಲ್ಲಿ ಹೆಚ್ಚು ಮಗ್ನನಾಗತೊಡಗಿದ. ಒಂಟಿತನದ ಭಾವನೆಯೂ
ವೃದ್ಧಿಯಾಗತೊಡಗಿತು.
{{gap}}ಮಾನವನಿಗೆ ಸಹಜವಾದ ಭಾವನೆಗಳು ಬಾಳಿನ ಹಿತವನ್ನು ಸಾಧಿಸುತ್ತವೆ.
ಮಗುವನ್ನು ತಾಯ್ತಂದೆಯರು ಪ್ರೀತಿಸುವುದರಿಂದ, ಮಗುವಿಗೆ ಎಷ್ಟು<noinclude></noinclude>
bwirn5tz5ifeqmbrjhrbaktkox3ra32
ಪುಟ:ಮನಮಂಥನ.pdf/೨೩೯
104
62686
316660
314389
2026-05-04T03:27:16Z
Shreesha Sharma
7840
316660
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೨೨೦}}{{Right|ಮನಮಂಥನ}}
ಪ್ರಯೋಜನವಾಗುತ್ತದೆಯೋ, ಅಷ್ಟೂ ಸುಖವು ತಾಯ್ತಂದೆಯರಿಗೂ ದೊರಕುತ್ತದೆ.
ಸೋದರ ಸೋದರಿಯರ ಪ್ರೇಮವೂ ಅವರುಗಳೆಲ್ಲರ ಬಾಳಿಗೆ ಹಿತಕೊಡುತ್ತವೆ.
ಗಂಡನ ಕಷ್ಟಕ್ಕೆ ಹೆಂಡತಿಯು ಅಯ್ಯೋ ಎಂದರೆ ; ಗಂಡನಿಗಾದ ಅವಮಾನವು
ತನ್ನದು ಎಂದು ನಡೆದುಕೊಂಡರೆ ; ಗಂಡ ಹೆಂಡರ ಪ್ರೇಮವೂ ಬಲಿಯುತ್ತದೆ.
ಸಂಸಾರವೂ ಸುಖಮಯವಾಗುತ್ತದೆ. ಸಮಾಜದಲ್ಲಿ ಏನು ಅನ್ಯಾಯವಾದರೂ,
ಮನೆಗೆ ಬಂದಾಗ ಹೆಂಡತಿಯ ನೆರವು ಮತ್ತು ಸಹಾನುಭೂತಿಯು ದೊರಕುತ್ತದೆ
ಎಂದು ಗಂಡಸು ಆಸೆಪಡುತ್ತಾನೆ. ಹೆಂಡತಿಯೂ ಹಾಗೆಯೇ ! ಒಬ್ಬರಿಗೊಬ್ಬರು
ನೆರವಾದರೆ ಇಬ್ಬರಿಗೂ ಸುಖ, ಸಂಸಾರವು ಚೆಂದ. ದೈಹಿಕ ಸಂಬಂಧವಿಲ್ಲದಿದ್ದರೂ,
ರಕ್ತ ಸಂಬಂಧವಿರದಿದ್ದರೂ ; ಮಾನವರ ನಡುವೆ ಆತ್ಮೀಯತೆಯು ಬೆಳೆದಾಗ,
ಒಲವೂ ಮೂಡುತ್ತದೆ. ಪವಿತ್ರ ಸ್ನೇಹದ ತಳಹದಿಯೇ ಇದು. ಇವೆಲ್ಲಾ
ನಿದರ್ಶನಗಳಲ್ಲಿಯೂ, ಬಾಳಿನಲ್ಲಿ ಹಿತವನ್ನು ಪಡೆಯಬೇಕಾದರೆ, ತೃಪ್ತಿಯನ್ನು
ಹೊಂದಬೇಕಾದರೆ ಭಾವನೆಗಳು ಅತಿ ಮುಖ್ಯವಾದ ಪಾತ್ರವನ್ನು ವಹಿಸುವುದನ್ನು
ಕಾಣಬಹುದು.
{{gap}}ಆದರೆ ಪ್ರೀತಿ, ಅನುಕಂಪ, ಸಹಾನುಭೂತಿ, ಇತ್ಯಾದಿ ಭಾವನಾ ಅನುಭವಗಳನ್ನು, ಪ್ರದರ್ಶಿಸಬೇಕಾದರೆ, ಯೋಚನೆಗಳನ್ನೂ ಮನಸ್ಸು ಮಾಡಬೇಕು.
ಸಹಜವಾಗಿ ಯೋಚನೆಗಳು ತಾವಾಗಿಯೇ ಮೂಡಿ ಆದರವನ್ನು ಕಾಣಿಸಬಹುದು.
ಅಥವಾ ಪ್ರಯತ್ನಪಟ್ಟು ಬುದ್ಧಿಯನ್ನು ಉಪಯೋಗಿಸಿ ಹಾಗೆ ಮಾಡಬಹುದು.
ಭಾವನೆಗಳೂ, ಬುದ್ಧಿಯ ಚಾಕಚಕ್ಯತೆಯೂ ಪರಸ್ಪರವಾಗಿದ್ದರೆ ಬಾಳು
ಹಸನಾಗುತ್ತದೆ.
{{gap}}ಆದರೆ ರಘುಪತಿಯಲ್ಲಿ ಭಾವನೆಗಳು ಮರೆಯಾಗಹತ್ತಿದುವು. ಮಾಯವೂ
ಆದುವು. ಹೀಗಾಗುತ್ತಿದೆ ; ಇದು ಸರಿಯಲ್ಲ ; ಎಂದು ರಘುಪತಿಗೆ ತಿಳಿಯಿತು.
ಆದರೆ ದುಃಖವಾಗಲಿಲ್ಲ. ತಪ್ಪು ಮಾಡಿದೆ ಎನ್ನುವ ಭಾವನೆಯೂ ಬರಲಿಲ್ಲ.
ಇವೆಲ್ಲದಕ್ಕೂ ಉದಾಸೀನನಾಗಿದ್ದ.
{{gap}}ಅಂದರೆ ಅವನ ಮನಸ್ಸಿನಲ್ಲಿ, ಭಾವನೆಗಳನ್ನು ಕಾಣಿಸುವ ಭಾಗಕ್ಕೂ ;
ಯೋಚಿಸುವ ಭಾಗಕ್ಕೂ, ಮಧ್ಯೆ ಇರಬೇಕಾದ ಸಂಪರ್ಕವು ಮುರಿದು ಬಿದ್ದಿತ್ತು.
ಆದುದರಿಂದಲೇ ಅವ ಉದಾಸೀನನಾಗಿದ್ದ. ಮನಸ್ಸಿನ ಮುಖ್ಯವಾದ ಎರಡು
ಭಾಗಗಳಿಗೂ ಸಂಪರ್ಕವು ಹರಿದುದರಿಂದ, ಮನಸ್ಸು ಛಿದ್ರವಾಯಿತು ;
ಹೋಳಾಯಿತು ; ಎನ್ನಬಹುದು. ಈ ತೆರನ ಮಾನಸಿಕ ಅವ್ಯವಸ್ಥೆಗಳನ್ನು
ಸ್ಕಿಜೋಫ್ರೆನಿಯಾ ಎಂದು ಹೆಸರಿಸುತ್ತಾರೆ.<noinclude></noinclude>
622n5q8cef2kb9y9fw25i4cbu2pv4sx
316698
316660
2026-05-04T07:09:15Z
Shreelatha.Halemane
7642
/* Validated */
316698
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೨೨೦}}{{Right|ಮನಮಂಥನ}}
ಪ್ರಯೋಜನವಾಗುತ್ತದೆಯೋ, ಅಷ್ಟೂ ಸುಖವು ತಾಯ್ತಂದೆಯರಿಗೂ ದೊರಕುತ್ತದೆ.
ಸೋದರ ಸೋದರಿಯರ ಪ್ರೇಮವೂ ಅವರುಗಳೆಲ್ಲರ ಬಾಳಿಗೆ ಹಿತಕೊಡುತ್ತವೆ.
ಗಂಡನ ಕಷ್ಟಕ್ಕೆ ಹೆಂಡತಿಯು ಅಯ್ಯೋ ಎಂದರೆ ; ಗಂಡನಿಗಾದ ಅವಮಾನವು
ತನ್ನದು ಎಂದು ನಡೆದುಕೊಂಡರೆ ; ಗಂಡ ಹೆಂಡರ ಪ್ರೇಮವೂ ಬಲಿಯುತ್ತದೆ.
ಸಂಸಾರವೂ ಸುಖಮಯವಾಗುತ್ತದೆ. ಸಮಾಜದಲ್ಲಿ ಏನು ಅನ್ಯಾಯವಾದರೂ,
ಮನೆಗೆ ಬಂದಾಗ ಹೆಂಡತಿಯ ನೆರವು ಮತ್ತು ಸಹಾನುಭೂತಿಯು ದೊರಕುತ್ತದೆ
ಎಂದು ಗಂಡಸು ಆಸೆಪಡುತ್ತಾನೆ. ಹೆಂಡತಿಯೂ ಹಾಗೆಯೇ ! ಒಬ್ಬರಿಗೊಬ್ಬರು
ನೆರವಾದರೆ ಇಬ್ಬರಿಗೂ ಸುಖ, ಸಂಸಾರವು ಚೆಂದ. ದೈಹಿಕ ಸಂಬಂಧವಿಲ್ಲದಿದ್ದರೂ,
ರಕ್ತ ಸಂಬಂಧವಿರದಿದ್ದರೂ ; ಮಾನವರ ನಡುವೆ ಆತ್ಮೀಯತೆಯು ಬೆಳೆದಾಗ,
ಒಲವೂ ಮೂಡುತ್ತದೆ. ಪವಿತ್ರ ಸ್ನೇಹದ ತಳಹದಿಯೇ ಇದು. ಇವೆಲ್ಲಾ
ನಿದರ್ಶನಗಳಲ್ಲಿಯೂ, ಬಾಳಿನಲ್ಲಿ ಹಿತವನ್ನು ಪಡೆಯಬೇಕಾದರೆ, ತೃಪ್ತಿಯನ್ನು
ಹೊಂದಬೇಕಾದರೆ ಭಾವನೆಗಳು ಅತಿ ಮುಖ್ಯವಾದ ಪಾತ್ರವನ್ನು ವಹಿಸುವುದನ್ನು
ಕಾಣಬಹುದು.
{{gap}}ಆದರೆ ಪ್ರೀತಿ, ಅನುಕಂಪ, ಸಹಾನುಭೂತಿ, ಇತ್ಯಾದಿ ಭಾವನಾ ಅನುಭವಗಳನ್ನು, ಪ್ರದರ್ಶಿಸಬೇಕಾದರೆ, ಯೋಚನೆಗಳನ್ನೂ ಮನಸ್ಸು ಮಾಡಬೇಕು.
ಸಹಜವಾಗಿ ಯೋಚನೆಗಳು ತಾವಾಗಿಯೇ ಮೂಡಿ ಆದರವನ್ನು ಕಾಣಿಸಬಹುದು.
ಅಥವಾ ಪ್ರಯತ್ನಪಟ್ಟು ಬುದ್ಧಿಯನ್ನು ಉಪಯೋಗಿಸಿ ಹಾಗೆ ಮಾಡಬಹುದು.
ಭಾವನೆಗಳೂ, ಬುದ್ಧಿಯ ಚಾಕಚಕ್ಯತೆಯೂ ಪರಸ್ಪರವಾಗಿದ್ದರೆ ಬಾಳು
ಹಸನಾಗುತ್ತದೆ.
{{gap}}ಆದರೆ ರಘುಪತಿಯಲ್ಲಿ ಭಾವನೆಗಳು ಮರೆಯಾಗಹತ್ತಿದುವು. ಮಾಯವೂ
ಆದುವು. ಹೀಗಾಗುತ್ತಿದೆ ; ಇದು ಸರಿಯಲ್ಲ ; ಎಂದು ರಘುಪತಿಗೆ ತಿಳಿಯಿತು.
ಆದರೆ ದುಃಖವಾಗಲಿಲ್ಲ. ತಪ್ಪು ಮಾಡಿದೆ ಎನ್ನುವ ಭಾವನೆಯೂ ಬರಲಿಲ್ಲ.
ಇವೆಲ್ಲದಕ್ಕೂ ಉದಾಸೀನನಾಗಿದ್ದ.
{{gap}}ಅಂದರೆ ಅವನ ಮನಸ್ಸಿನಲ್ಲಿ, ಭಾವನೆಗಳನ್ನು ಕಾಣಿಸುವ ಭಾಗಕ್ಕೂ ;
ಯೋಚಿಸುವ ಭಾಗಕ್ಕೂ, ಮಧ್ಯೆ ಇರಬೇಕಾದ ಸಂಪರ್ಕವು ಮುರಿದು ಬಿದ್ದಿತ್ತು.
ಆದುದರಿಂದಲೇ ಅವ ಉದಾಸೀನನಾಗಿದ್ದ. ಮನಸ್ಸಿನ ಮುಖ್ಯವಾದ ಎರಡು
ಭಾಗಗಳಿಗೂ ಸಂಪರ್ಕವು ಹರಿದುದರಿಂದ, ಮನಸ್ಸು ಛಿದ್ರವಾಯಿತು ;
ಹೋಳಾಯಿತು ; ಎನ್ನಬಹುದು. ಈ ತೆರನ ಮಾನಸಿಕ ಅವ್ಯವಸ್ಥೆಗಳನ್ನು
ಸ್ಕಿಜೋಫ್ರೆನಿಯಾ ಎಂದು ಹೆಸರಿಸುತ್ತಾರೆ.<noinclude></noinclude>
fmsx07q4ynbxxsg6cmzqyli2vmhh80y
ಪುಟ:ಮನಮಂಥನ.pdf/೨೪೦
104
62687
316699
315570
2026-05-04T07:10:52Z
Shreelatha.Halemane
7642
316699
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|ಸ್ಕಿಜೋಫೊನಿಯಾಗಳು}}{{Right|೨೨೧}}
{{gap}}ಹೀಗೆ ಮನಸ್ಸು ಛಿದ್ರವಾದಾಗ, ಆಳ ಮನಸ್ಸಿನಲ್ಲಿ ಹುದುಗಿಕೊಂಡಿದ್ದ
ID-compulsions ವನ್ಯ ಮೃಗಗಳ ನಡತೆಯು ರಘುಪತಿಯನ್ನು ಜಗ್ಗಿಸಿ
ಆಡಿಸಬಹುದು. ಆಗ ಮಾನವ ಸಹಜವಾದ ಆಸೆ, ಆಕಾಂಕ್ಷಿ ; ಸುರಕ್ಷಿತವಾಗಿರಬೇಕು,
ಸಮಾಜದಲ್ಲಿ ಮನ್ನಣೆಯನ್ನು ಪಡೆಯಬೇಕು ಎಂಬುವೆಲ್ಲಾ ನಶಿಸಿಹೋಗುತ್ತಾ
ಇರುತ್ತವೆ. ಇದರ ಲಕ್ಷಣವೇ ಮಹತ್ ಉದಾಸೀನತೆ, ರಘುಪತಿಯು ಮಹಾ
ಉದಾಸೀನನಾಗಿದ್ದು ಈ ಕಾರಣದಿಂದ
{{gap}}ರೋಗದ ಚಿಹ್ನೆಗಳನ್ನೆಲ್ಲಾ ಬರೆದು ರಘುಪತಿಯು ತಂದುಕೊಟ್ಟ
ಯೋಚನೆಗಳನ್ನು ಸಮಂಜಸವಾಗಿ ಬರೆದಿಟ್ಟ ರೀತಿಯನ್ನು ನೋಡಿದರೆ,
ಯೋಚನೆಗಳನ್ನು ಹೊರಪಡಿಸುವಾಗ ಯಾವ ತಪ್ಪ ಇಲ್ಲ ಎನ್ನುವುದು
ಸ್ಪಷ್ಟವಾಯಿತು. ಹೊರಪಡಿಸುವುದು ಸಮಂಜಸವಾಗಿದ್ದರೂ, ಅವ
ಯೋಚನೆಗಳನ್ನು ಮಾಡುವಾಗ ತೀವ್ರವಾಗಿ ಎಡವುತ್ತಿದ್ದ ಎನ್ನುವುದೂ ಸ್ಪಷ್ಟವಾಗಿತ್ತು.
ಭಾವನೆಗಳು ನಶಿಸುತ್ತಿದ್ದುದರಿಂದ ಯೋಚಿಸುವಾಗ ಎಡವುತ್ತಿದ್ದಹಾಗೆ ಹೊರಬಂದ
ಯೋಚನೆಗಳನ್ನು ಮಾತುಗಳಲ್ಲಿ ಮೂಡಿಸುವಾಗ, ಸಮಂಜಸವಾಗಿಯೇ
ಮಾಡುತ್ತಿದ್ದ. ಇವನ ಮನಸ್ಸು ಸರಿಯಾಗಿ ಕೆಲಸ ಮಾಡುತ್ತಿದೆ ; ಇವನಿಗೇನೂ
ಬೇನೆ ಇರಲಾರದು ; ಎಂದು ಅನ್ನುವಂತಿದ್ದ.
{{gap}}ರಘುಪತಿಯು ಕೆಲಸದ ಮೇಲಿದ್ದಾಗಲೂ ಕೂಡ, 'ನನ್ನನ್ನು ನೋಡಿ
ಜನರು ನಗುತ್ತಾರೆ, ನನ್ನ ಹಿಂದೆ ಮೂದಲಿಸುತ್ತಿದ್ದಾರೆ' ಎನ್ನುವ ಯೋಚನೆಗಳು,
ಒದ್ದುಕೊಂಡು ಬಂದು, ಕೆಲಸದ ಮೇಲಿರಬೇಕಾಗಿದ್ದ ಗಮನವನ್ನು ತಪ್ಪಿಸಿದುವು.
ರಘುಪತಿಯ ಈ ಅವಸ್ಥೆಯನ್ನು Thought-disorder ಎಂದು ಕರೆಯುತ್ತಾರೆ,
ಸ್ಕಿಜೋಫೆನ್ರಿಯಗಳ ಒಂದು ಪ್ರಮುಖವಾದ ಚಿಹ್ನೆ ಇದು.
{{gap}}'ಇಷ್ಟು ದುರ್ಬಲವೇನೋ, ನಿನ್ನ ಮನಸ್ಸು, ರಘುಪತಿ ; ಸಾಹಸಪಟ್ಟು
ಮನಸ್ಸಿನ ಯೋಚನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕಪ್ಪಾ' ಎಂದು
ಬುದ್ಧಿಯನ್ನು ಹೇಳುವುದು, ಶುದ್ಧ ಮೌಡ್ಯತನ, ಅದು ಸಾಧ್ಯವಾಗಿದ್ದರೆ ಅವ
ಡಾಕ್ಟರ ಬಳಿಗೆ ಏಕೆ ಬರುತ್ತಿದ್ದ? ಮನಸ್ಸು ಹತೋಟಿಯಲ್ಲಿರದೆ, ಸೂತ್ರವನ್ನು
ಹರಿದುಕೊಂಡ, ಹಾಗೂ ಬಾಲಂಗೋಚಿ ಇಲ್ಲದ ಗಾಳಿಪಟದಂತೆ, ತಿಪ್ಪರಲಾಗ
ಹಾಕಿ ಬೆದರಿಸುತ್ತಿರುವಾಗ, ಅವನನ್ನು ಧೈರ್ಯ ತಂದುಕೋಪ್ಪಾ ಎನ್ನುವುದು
ಶುದ್ಧ ಅನ್ಯಾಯ, ಹೀಗಂದರೆ ರಘುಪತಿಯು ಸಿಡುಕಿ ರೇಗುವುದು ಸಹಜ.
ಯೋಚಿಸಿ, ದೃಢ ನಿರ್ಧಾರ ಮಾಡುವ ಶಕ್ತಿಯು ಕಳೆದು ಹೋಗುವುದು
ಜೋಫ್ರೆನಿಯಾಗಳ ಮುಖ್ಯ ಲಕ್ಷಣ.<noinclude></noinclude>
dhx5scbonz5mknod99fckjuvzw3ycwa
ಪುಟ:ಮನಮಂಥನ.pdf/೨೪೧
104
62688
316668
315571
2026-05-04T03:35:34Z
Shreesha Sharma
7840
/* Validated */
316668
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೨೨೨}}{{Right|ಮನಮಂಥನ}}
{{gap}}ಈ ಬೇನೆಯಿಂದ ರಘುಪತಿಯು ಹದಿನೈದು ಹದಿನಾರು ವರ್ಷಗಳಿಂದಲೂ
ನರಳುತ್ತಿದ್ದಾನೆ. ಈ ಅವಧಿಯಲ್ಲಿ ಕೆಲವು ದಿನಗಳನ್ನು ಕಾಲೇಜಿನಲ್ಲಿ ಕಳೆದ.
ಪರೀಕ್ಷೆಯಲ್ಲಿ ಉತ್ತೀರ್ಣನಾಗಲಿಲ್ಲ. ನಂತರ ಚಾಕರಿಗಾಗಿ ಕೆಲವು ಕಾಲ ಒದ್ದಾಡಿದ.
ಕೆಲಸ ಸಿಕ್ಕಿತು, ಒಂದೆರಡು ವರ್ಷಗಳು ನೆಮ್ಮದಿಯಿಂದ ಕೆಲಸ
ಮಾಡಿಕೊಂಡಿದ್ದಂತೆಯೇ ಇದ್ದ. ಮದುವೆಗೂ ಒಪ್ಪಿದ. ತಂದೆತಾಯಿಗಳೊಡನಿದ್ದ
ಸಂಬಂಧವು ಸಡಿಲಗೊಂಡಿತು. ತದನಂತರ ಸ್ಕಿಜೋ ಪ್ರವೃತ್ತಿಯು ಹೆಚ್ಚಾಯಿತು.
ರಜೆ ತೆಗೆದುಕೊಳ್ಳುವುದೂ ಅತಿಯಾಯಿತು. ಭಾವನೆಗಳೂ ಕ್ಷಯಿಸುತ್ತ ಹೋದುವು.
ಕಡೆಯ ಈ ಹಂತವನ್ನು ಮುಟ್ಟುವ ತನಕ, ರಘುಪತಿಗೆ ಈ ಬೇನೆ ಇದೆ,
ಅಥವಾ ಇರಬಹುದು ಎಂಬುದೂ ತಿಳಿಯುತ್ತಿರಲಿಲ್ಲ ; ವೈದ್ಯರ ಸೂಕ್ಷ್ಮ ಪರೀಕ್ಷೆಗೆ
ಒಳಪಡದೇ ಇದ್ದರೂ ಅಂದರೆ ಬೇನೆಯು ಇದ್ದರೂ ಅವ ಎಲ್ಲರಂತೆಯೇ
ಇದ್ದ ಹೊರ ನೋಟಕ್ಕೆ: ಎನ್ನಬಹುದು. ವರ್ಷಾನುಗಟ್ಟಲೆ ಇರುವ ಈ ಬೇನೆಯು,
ಸ್ವಲ್ಪಸ್ವಲ್ಪವಾಗಿಯಾದರೂ, ಖಂಡಿತವಾಗಿ, ವ್ಯಕ್ತಿತ್ವವನ್ನು ನಾಶಪಡಿಸುತ್ತ ಹೋಗುತ್ತದೆ.
ಸಂಸಾರದಲ್ಲಿ ಅಥವಾ ಸಮಾಜದಲ್ಲಿ ವ್ಯಕ್ತಿಯ ವರ್ತನೆಯಿಂದ ಧಕ್ಕೆ
ಆಗುವಂತಾದಾಗ, ಮನೋವೈದ್ಯರ ನೆರವನ್ನು ಪಡೆಯುವಂತಾಗುತ್ತದೆ. ಅಂತಹ
ಹಂತದಲ್ಲೂ ಚಿಕಿತ್ಸೆಯು ಸಾಕಷ್ಟು ಯಶಸ್ವಿಯಾಗುತ್ತದೆ.
{{gap}}ರಘುಪತಿಯು ಚಿಕಿತ್ಸೆಯನ್ನು ಪಡೆದ ; ಉತ್ತಮ ರೀತಿಯ ಚಿಕಿತ್ಸೆ. ಕೆಲವು
ತಿಂಗಳುಗಳಲ್ಲಿ ಗುಣಮುಖನಾದ. ಈಗ ತಿರುಗಿ ಕೆಲಸಕ್ಕೆ ಹೋಗುತ್ತಿದ್ದಾನೆ.
ರಜ ತೆಗೆದುಕೊಳ್ಳುವ ಗೀಳು ಬಿಟ್ಟುಹೋಗಿದೆ. ಕೆಲಸದಲ್ಲಿ ಜಾಣತನವನ್ನು
ತೋರಿಸುತ್ತಿಲ್ಲ, ದಿಟ. ಆದರೆ ಹೇಳಿದ್ದನ್ನು ಶ್ರದ್ಧೆಯಿಂದ ಮಾಡುತ್ತಿದ್ದಾನೆ. ತಾನಾಗಿ
ಸ್ವಂತ ಬುದ್ಧಿಯನ್ನು ಉಪಯೋಗಿಸಲಾರ. ಆದರೂ ಮಾಡಿದ ಕೆಲಸದಲ್ಲಿ
ತುಂಬಾ ತಪ್ಪುಗಳಿರುವುದಿಲ್ಲ. ಹೆಂಡತಿ ಮಕ್ಕಳು ಎಂದರೆ, ಎಲ್ಲರಂತೆ ಸಂಭ್ರಮ
ಪಡುತ್ತಿಲ್ಲ. ಒಂದು ರೀತಿಯಲ್ಲಿ ಉದಾಸೀನನೇ ಆಗಿದ್ದಾನೆ. ಹಾಗಿದ್ದರೂ ನಾಲ್ಕನೆಯ
ಮಗುವೂ ಆಗಿದೆ. 'ಒಳ್ಳೆಯ ಮಾತುಗಳನ್ನಾಡದಿದ್ದರೂ ಪರವಾಗಿಲ್ಲ.
ಮೊದಲಿದ್ದಂತೆ, ಜೋಭದ್ರೆ ಬಡಿದವರಂತೆ ಬಿದ್ದುಕೊಂಡಿರುವುದರ ಬದಲು,
ಎಲ್ಲ ಗಂಡಸರಂತೆ ಈಗ ಚಾಕರಿಗೆ ಹೋಗಿ ಬರುತ್ತಾರೆ, ಸಂಬಳ ತರುತ್ತಾರೆ.
ಅಷ್ಟೇ ಸಾಕು' ಎಂದು ಹೆಂಡತಿಯೂ ಒಗ್ಗಿಕೊಂಡು ನೆಮ್ಮದಿಯಿಂದಲೇ ಇದ್ದಾಳೆ.
'''ಬ್ಯಾಂಕುಗಳ ರಾಮಭದ್ರ'''
{{gap}}ಪ್ರತಿಯೊಂದು ಪರೀಕ್ಷೆಯಲ್ಲೂ ಮೊದಲ ಮೂರು ಬ್ಯಾಂಕುಗಳಲ್ಲಿ ಒಂದನ್ನು<noinclude></noinclude>
9l3ei1e59nyrbzulbss550ncm726x04
ಪುಟ:ಮನಮಂಥನ.pdf/೨೪೨
104
62689
316670
315572
2026-05-04T03:37:20Z
Shreesha Sharma
7840
/* Validated */
316670
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಸ್ಟೀಜೋಪೊನಿಯಾಗಳು}}{{Right|೨೨೩}}
ರಾಮಭದ್ರ ಗಳಿಸುತ್ತಿದ್ದ. ಹೀಗಾಗಿ ಬಿ.ಎಸ್ಸಿ. ಆನರ್ಸ್ನಲ್ಲಿ ಎರಡನೆ ಬ್ಯಾಂಕು
ಪಡೆದಾಗ ಅವನ ತಾಯ್ತಂದೆಯರು ಕೂಡ ಹಿಗ್ಗಲಿಲ್ಲ. ಅಷ್ಟು ಸರ್ವೆಸಾಮಾನ್ಯವಾಗಿ
ಹೋಗಿತ್ತು ರಾಮಭದ್ರನ ಬ್ಯಾಂಕು ಗಿಟ್ಟಿಸುವುದು. ಬ್ಯಾಂಕ್ ಬರದೇ ಇದ್ದಿದ್ದರೆ,
ಪ್ರಾಯಶಃ ತಾಯ್ತಂದೆಯರು ಆಶ್ಚರ್ಯಪಟ್ಟು ಕುಗ್ಗುತ್ತಿದ್ದರೇನೋ?
{{gap}}ಪರೀಕ್ಷೆಯ ಫಲಿತಾಂಶಗಳು ಹೊರಬಿದ್ದ ೨-೩ ವಾರಗಳೊಳಗೆ
ಅಮೆರಿಕಾದ ವಿಶ್ವವಿದ್ಯಾಲಯದಿಂದ ರಾಮಭದ್ರನಿಗೆ ಕಾಗದವೊಂದು ಬಂದಿತು.
ಡಾಕ್ಟರೇಟ್ ಪರೀಕ್ಷೆಗೆ ಓದುವುದಾದರೆ ವಿದ್ಯಾರ್ಥಿವೇತನವನ್ನು ಕೊಡುವುದಾಗಿ
ಆಮಂತ್ರಣವಿತ್ತು. ಅದನ್ನು ಸ್ವೀಕರಿಸುವುದಾಗಿ ರಾಮಭದ್ರ ಉತ್ತರವನ್ನು ಬರೆದು
ಹಾಕಿದ.
{{gap}}ಪರೀಕ್ಷೆಯ ಫಲಿತಾಂಶಗಳು ಹೊರಬಿದ್ದ ಕೂಡಲೇ, 'ಮುಂದೆ ದಿಳ್ಳಿ
ಪರೀಕ್ಷೆಗೆ ಕೂತುಕೊಳ್ಳುತ್ತೀಯಾ ? ಅಥವಾ ಎಂ.ಎಸ್ಸಿ. ಪರೀಕ್ಷೆಗೆ ಓದುತ್ತೀಯಾ'
ಎಂದು ತಾಯಿ ಕೇಳಿದಳು. ದಿಳ್ಳಿ ಪರೀಕ್ಷೆಗೆ ಕೂತು ಐ.ಎ.ಎಸ್. ಮಾಡಿ ದೊಡ್ಡ
ಆಫೀಸರ್ ಆದರೆ ಸಂಭ್ರಮದ ಮದುವೆಯನ್ನು ಅದ್ದೂರಿಯಾಗಿ ಮಾಡಿಸಬಹುದು
ಎಂದಾಕೆಯ ಆಸೆ. ಹಾಗೂ ಇನ್ನೂ ಓದು ಓದು ಅಂತ ಮುಂದುವರೆಯುತ್ತಲೇ
ಇದ್ದರೆ, ದೊಡ್ಡ ಚಾಕರಿ ಸಿಗುವುದು ಯಾವಾಗ ? ಆತನಕ ತಾನು ಬದುಕಿರುತ್ತೇನೆ
ಎನ್ನುವ ನಂಬಿಕೆ ಎಲ್ಲಿದೆ ? 'ಮುಂದೇನು ಮಾಡಬೇಕು ಎನ್ನುವುದನ್ನು ಈಗಲೇ
ಯಾಕೆ ತೀರ್ಮಾನಿಸಬೇಕು' ಎಂದು ಮಗ ಉತ್ತರಿಸಿದ. ತಾಯಿ ಮಕ್ಕಳ ಮಧ್ಯೆ
ಇರುವ ಆದರದ ಧ್ವನಿಯಲ್ಲಲ್ಲ. ರೈಲ್ವೆ ಸ್ಟೇಷನ್ನಿನಲ್ಲಿ ಅಪರಿಚಿತರು ಟೈಂ ಎಷ್ಟು
ಎಂದು ಕೇಳಿದರೆ, ಇಷ್ಟು ಅಂತ ಕೈಗಡಿಯಾರವನ್ನು ನೋಡಿಕೊಂಡು
ಉತ್ತರಿಸುವವನ ಧ್ವನಿಯಲ್ಲಿ, ರಾಮು ನುಡಿದಿದ್ದ. ಮಾತನ್ನು ಮುಂದುವರಿಸಲಿಲ್ಲ.
ತಾಯಿಯೂ ತೆಪ್ಪಗಾಗಿದ್ದಳು.
{{gap}}ಆ ರಾತ್ರಿ ತಾಯಿಯು, 'ಏನೂ ಅಂದ್ರೆ, ಮುಂದೇನು ಮಾಡಬೇಕು
ಅಂತಿದಾನೆ, ರಾಮು ; ನೀವೊಂದು ಮಾತು ಕೇಳಬಾರದೇ ? ಬೆಳಗ್ಗೆ ನಾನು
ಕೇಳಿದೆ. ಹೀಗಂತ ಉತ್ತರ ಕೊಟ್ಟ, ನೀವು ಕೇಳಿದರೆ ಸರಿಯಾಗಿ ಉತ್ತರ
ಕೊಟ್ಟಾನು. ಅವನಿಗೆ ಅಸಡ್ಡೆ, ನನ್ನ ಕಂಡರೆ ; ಓದು ಬರಹ ಕಾಣದ ಮುದುಕಿ
ಅಂತ", ಎಂದು ಗಂಡನಿಗೆ ಹೇಳಿದಳು.
{{gap}}'ರಾಮುವಿನ ಸ್ವಭಾವ ನಿನಗೆ ತಿಳಿದಿದೆ. ನಮ್ಮಿಬ್ಬರ ಹತ್ತಿರ,
ಹುಡುಗತನದಿಂದಲೂ, ಮುಖ ಕೊಟ್ಟು ನಗುನಗುತ ಮಾತನಾಡಿದ್ದಿಲ್ಲ ಎಂದೂನು,
ಅಗತ್ಯ ಬಿದ್ದಾಗ ಅವಶ್ಯಕವಾದ ಎರಡು ಮಾತಾಡ್ತಾನೆ. ಅಷ್ಟೇ, ಯಾವ ಪರೀಕ್ಷೆಯಲ್ಲಿ<noinclude></noinclude>
qgs631h654t5ejm7sui4dbv57w8wyxl
ಪುಟ:ಮನಮಂಥನ.pdf/೨೪೩
104
62690
316669
315573
2026-05-04T03:36:26Z
Shreesha Sharma
7840
/* Validated */
316669
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೨೨೪}}{{Right|ಮನಮಂಥನ}}
ಸೆಕೆಂಡ್ ಕ್ಲಾಸ್ಗಿಂತ ಹೆಚ್ಚಿನದನ್ನು ನಾನು ಪಡೆಯಲೇ ಇಲ್ಲ. ಕೇವಲ ಹೈಸ್ಕೂಲ್
ಮಾಸ್ತರು, ನಾನೀಗ ಅವನಾದರೋ ಬಲು ಜಾಣ, ಬ್ಯಾಂಕ್ ಪಡೆಯದೆ ಯಾವ
ಪರೀಕ್ಷೆಯಲ್ಲೂ ಸೋತಿಲ್ಲ. ಅವನ ಹತ್ತಿರ ಮಾತನಾಡುಕ್ಕೆ ನನಗೆ ಸ್ವಲ್ಪ ಭಯ.
ತಾಯಿ ಅಂದರೆ ಅಸಡ್ಡೆ ಇರುಲ್ಲ ಮಕ್ಕಳಿಗೆ ನೀನೇ ಇನ್ನೊಂದು ಸರ್ತಿ ಕೇಳು'
ಎಂದರು ತಂದೆ.
{{gap}}ಮಗನದು ಬಾಲ್ಯದಿಂದಲೂ ಸಂಕೋಚ ಪ್ರವೃತ್ತಿ. ತಾನಾಯಿತು, ತನ್ನ
ಪುಸ್ತಕಗಳಾಯಿತು. ಬರುತ್ತಿದ್ದ ವಿದ್ಯಾರ್ಥಿವೇತನದ ಕಾರಣದಿಂದ, ತಂದೆಯ
ಬಳಿ ಫೀಜು, ಪುಸ್ತಕ, ಅಂತ ಏನೂ ಬೇಡಬೇಕಾಗಿರಲಿಲ್ಲ. ಅಪ್ಪಿತಪ್ಪಿ, ಅಪ್ಪ
ಮೇಲು ಬಿದ್ದುಕೊಂಡು ಮಾತನಾಡಿಸಿದರೆ, ಹೂ; ಉಹೂ; ಇರಬಹುದು ;
ಗೊತ್ತಿಲ್ಲ ; ಇವೇ ಮಗನಿಂದ ಬರುತ್ತಿದ್ದ ಉತ್ತರ. ಸದರದಿಂದ ಯಾರೊಡನೆಯೂ
ಮಗ ನಡೆದುಕೊಳ್ಳುತ್ತಿರಲಿಲ್ಲ ಎನ್ನುವುದನ್ನು ಮನೆಗೆ ಬಂದ ನೆಂಟರಿಷ್ಟರೂ
ಗಮನಿಸಿದ್ದರು. ಆ ವಿಷಯವನ್ನು ಆಡಿಕೊಂಡೂ ಇದ್ದರು. ಬ್ಯಾಂಕ್ ಪಡೆದು
ಪತ್ರಿಕೆಗಳಲ್ಲಿ ಫೋಟೋ ಹಾಕಿಸಿಕೊಳ್ಳುವ ಹುಡುಗನೊಡನೆ, ನಮ್ಮ ಹುಡುಗ
ಇವ, ಎಂದು ಮಾತನಾಡಲು ನೆಂಟರಿಗೆಲ್ಲಾ ಬಲು ಆಸೆ. ಆದರೆ ರಾಮಭದ್ರ
ಸಹಕರಿಸುತ್ತಿರಲಿಲ್ಲ. ತನ್ನ ಪಾಡಿಗೆ ತಾನು ಅಲಕ್ ಆಗಿರುವುದರಲ್ಲಿ ಅವನಿಗೆ
ಖುಷಿ ಇದ್ದಿತು.
{{gap}}'ನಿಮ್ಮ ಮಗ ಅಮೆರಿಕಾಕ್ಕೆ ಹೋಗುತ್ತಾನಂತೆ' ಎಂದು ಮಾಸ್ತರೊಬ್ಬರು,
ರಾಮಭದ್ರನ ತಂದೆಯವರನ್ನು ಕೇಳಿದರು. ಅವರಿಗೇನು ಉತ್ತರ ಹೇಳುವುದು;
ಯಾವ ವಿಷಯವೂ ಗೊತ್ತಿರಲಿಲ್ಲ. 'ಹೋಗಬೇಕು ಅಂತಿದಾನೆ ಇನ್ನೂ
ವ್ಯವಸ್ಥೆಯಾಗಿಲ್ಲ' ಎಂದು ತೇಲಿಸಿ ಹೇಳಿದರು. ಮನೆಗೆ ಬಂದು ರಾತ್ರಿ ಮಗನನ್ನು
ಕರೆದು ಹೀಗಂತ ಹೇಳಿದರು. ಸಮಾಚಾರ ಏನು, ಎಂದು ಕೇಳಿದರು. ಏನು
ಮಾಡುತ್ತಿದೀಯೋ ಅದನ್ನು ಹೇಳಬಾರದೇಪ್ಪಾ ಎಂದೂ ಕೇಳಿದರು. 'ಏನು
ಮಹಾ ಸುದ್ದಿ ಅಂತ ಹೇಳಬೇಕು. ಇನ್ನೂ ನಾಲ್ಕು ದಿನಗಳಿವೆ, ಹೊರಡುಕ್ಕೆ.
ಆಮೇಲೆ ಹೇಳಿದರಾಯಿತು ಅಂತ ಸುಮ್ಮನಿದ್ದೆ' ಎಂದು ರಾಮಭದ್ರ ಉತ್ತರಿಸಿದ.
ಊರು ಬಿಟ್ಟು, ಮನೆಯವರನ್ನು ಬೀಳ್ಕೊಟ್ಟು ಪರದೇಶಕ್ಕೆ ಕೆಲವು ವರ್ಷಗಳ
ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದಾನೆ. ತಂದೆ ತಾಯಿಯರನ್ನು ಬಿಟ್ಟು ಹೋಗಬೇಕಲ್ಲಾ
ಎಂಬ ಆತಂಕವಾಗಲೀ, ಇನ್ನೆಂದೋ ಇವರನ್ನು ಕಾಣುವುದು ಎನ್ನುವ
ಕೊರಗಾಗಲೀ ಅವನಲ್ಲಿ ಕಾಣಬರಲಿಲ್ಲ. ಅಮೆರಿಕಾಕ್ಕೆ ಹೋದ.
{{gap}}ನಾಲ್ಕು ವರ್ಷಗಳು ಅಲ್ಲಿದ್ದ. ಡಾಕ್ಟರೇಟ್ ಪ್ರಶಸ್ತಿಯನ್ನು ಸುಲಭವಾಗಿ<noinclude></noinclude>
dkmyd0zqyrwwsd8sokmsrhi364ko3mo
ಪುಟ:ಮನಮಂಥನ.pdf/೨೪೪
104
62691
316667
315574
2026-05-04T03:34:29Z
Shreesha Sharma
7840
/* Validated */
316667
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಸ್ಕಿಜೋಫೊನಿಯಾಗಳು}}{{Right|೨೨೫}}
ಗಳಿಸಿದ. ಆ ಅವಧಿಯಲ್ಲಿ ಎರಡು ಮೂರು ತಿಂಗಳಿಗೊಂದರಂತೆ ಪತ್ರವನ್ನು
ಬರೆದಿದ್ದ. ಮೂರು ಪಂಕ್ತಿಗಳಿದ್ದ ಕೇವಲ ಯೋಗಕ್ಷೇಮದ ಪತ್ರಗಳು. ಕ್ರಿಸ್ಮಸ್
ಹಬ್ಬದ ವೇಳೆಯಲ್ಲಿ ಒಂದು ವರ್ಷ ಮಾತ್ರ ಕೆನಡಾಕ್ಕೆ ಒಂದು ವಾರ ಪ್ರವಾಸವನ್ನು
ಮಾಡುತ್ತೇನೆ, ಎಂದು ಬರೆದಿದ್ದ. ವರ್ಣಚಿತ್ರದ ಎರಡು ಕಾರ್ಡುಗಳನ್ನು
ಕಳುಹಿಸಿಯೂ ಇದ್ದ.
{{gap}}ಹಿಂತಿರುಗಿದ ಹುಟ್ಟಿದೂರಿಗೆ ; ಡಾಕ್ಟರ್ ರಾಮಭದ್ರನ್. ಮಗ ಉದ್ದಾಮ
ಪಂಡಿತನಾಗಿ ಹಿಂತಿರುಗಿದ. ಇನ್ನು ಮದುವೆಯನ್ನು ಮಾಡಬಹುದು ಎಂದು
ಅಮ್ಮನಿಗೆ ಸಡಗರ. ಮಗನೊಡನೆ ಆ ಮಾತನ್ನೆತ್ತಿದಾಗ 'ಮಾಡಿಕೊಳ್ಳುವ ಕಾಲಕ್ಕೆ
ನಾನೇ ಹೇಳ್ತಿನಿ. ನೀನು ಆ ವಿಷಯವನ್ನು ಎತ್ತಬೇಡ, ಅಮ್ಮಾ' ಎಂದಿದ್ದ.
ಅಮ್ಮಾ ಅಂತ ಮಗ ಅಂದನಲ್ಲಾ ಅಂತಲೇ ಅಮ್ಮನಿಗೆ ಸಂತೋಷ. ಯಾವು
ಯಾವುದೋ ಕೆಲಸಕ್ಕೆ, ಅರ್ಜಿಗಳನ್ನು ಹಾಕತೊಡಗಿದ ರಾಮಭದ್ರ ಕೊಠಡಿಯಲ್ಲಿ
ಕುಳಿತು ಕಾಗದ ಬರೆಯುವುದು, ಅಂಚೆಗೆ ಹಾಕಿ ಬರುವುದು, ಇವೆಲ್ಲಕ್ಕೂ ದಿನಕ್ಕೆ
ಒಂದು ತಾಸು ಹಿಡಿಯುತ್ತಿತ್ತು. ಮಿಕ್ಕೆಲ್ಲಾ ಹೊತ್ತೂ ಕೊಠಡಿಯನ್ನು ಬಿಟ್ಟು
ಹೊರಕ್ಕೆ ಬರುತ್ತಿರಲಿಲ್ಲ. ಬಾಗಿಲು ಹಾಕಿಕೊಂಡು ಒಳಗೇ ಇರಲು ಪ್ರಾರಂಭಿಸಿದ.
ಊಟಕ್ಕೆ ಕರೆದರೆ, ಬಾಗಿಲು ತೆಗೆದುಕೊಂಡು ಬರುತ್ತಿದ್ದ. ಉಂಡು
ಹಿಂತಿರುಗುತ್ತಿದ್ದನೇ ವಿನಾ ತಾಯ್ತಂದೆಯರೊಡನೆ ಅಥವಾ ತಂಗಿ,
ತಮ್ಮಂದಿರೊಡನೆ ಮಾತಿಗೆ ಕೂರುತ್ತಿರಲಿಲ್ಲ. ಬಾರೋ ಕೂತುಕೋ ಎಂದು
ಯಾರಾದರೂ ಸಲಿಗೆಯಿಂದ ಕರೆದರೆ ಸಿಡುಕುತ್ತಾ ಕೊಠಡಿಗೆ ಹೋಗಿಬಿಡುತ್ತಿದ್ದ.
{{gap}}ಒಂದು ಸಂಜೆ ಐದರ ವೇಳೆಗೆ 'ನಾನು ಊರಿಗೆ ಹೋಗುತ್ತೇನೆ' ಎಂದು
ತಾಯಿಗೆ ಹೇಳಿ ಹೊರಟುಹೋಗಿದ್ದ. ಎಲ್ಲಿಗೆ ಏತಕ್ಕೆ ಎಂದೇನೂ ಹೇಳಲಿಲ್ಲ.
ಕೇಳುವ ಧೈರ್ಯವೂ ತಾಯಿಗಿರಲಿಲ್ಲ. ಪ್ರಯಾಣ ಮಾಡ ಹೊರಡುವಾಗ
ಹಾಗೆ ಕೇಳಬಾರದು, ಅದು ಅಪಶಕುನ, ಅಂತ ತಾಯಿಗೆ ಗೊತ್ತು.
{{gap}}'ನಿಮ್ಮಗ ನಮ್ಮೂರಿನಲ್ಲಿ ಕೆಲಸದಲ್ಲಿದ್ದಾನೆ. ಇಲ್ಲಿಗೆ ಬರುತ್ತಾರೆ ಅಂತ
ಕಾಗದ ಬರೆಯಬಾರದಾಗಿತ್ತೆ ?' ಎಂದು ಹೊರ ಊರಿನಲ್ಲಿ ಇಂಜನಿಯರಾಗಿದ್ದ,
ಸ್ನೇಹಿತರೊಬ್ಬರು ಕಾಗದ ಬರೆದಾಗ, ಮಗ ಅಲ್ಲಿದ್ದಾನೆ ಎಂಬುದು ತಿಳಿದಿದ್ದು.
'ಹೋಗಲಿ ' ಎಲ್ಲಿಯಾದರೂ ಕೆಲಸ ಮಾಡಿಕೊಂಡು ಸುಖವಾಗಿರಲಿ, ನಮಗೆ
ಹೇಳದಿದ್ದರೆ ಏನಾಯಿತು ? ಎಂದು ತಾಯ್ತಂದೆಯರು ಸಮಾಧಾನ ಮಾಡಿ
ಕೊಂಡರು.
{{gap}}ಆದರೆ ಆರು ತಿಂಗಳುಗಳಲ್ಲಿ ಒಂದು ಬೆಳಗ್ಗೆ ರಾಮಭದ್ರ ಮನೆಗೆ
ಹಿಂತಿರುಗಿದ. ಆ ಕೆಲಸವನ್ನು ಬಿಟ್ಟೆ' ಎಂದು ಮಾತ್ರ ಹೇಳಿದ. ಯಥಾಪ್ರಕಾರ<noinclude></noinclude>
sn85pe3gmtaadlaav4ech3mqe8gfqdx
ಪುಟ:ಮನಮಂಥನ.pdf/೨೪೫
104
62692
316666
315575
2026-05-04T03:33:32Z
Shreesha Sharma
7840
316666
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೨೨೬}}{{Right|ಮನಮಂಥನ}}
ಕೊಠಡಿ ಹಿಡಿದ. ದಿನಕ್ಕೆ ಇಪ್ಪತ್ತು, ಇಪ್ಪತ್ತೂರು ತಾಸು, ಒಂದೇ ಕೊಠಡಿಯಲ್ಲಿ
ಇರಬೇಕಾದರೆ, ಅದೂ ೨೫-೨೬ರ ಪ್ರಪಂಚವನ್ನು ನೋಡಿ ಬಂದ ಯುವಕ;
ಏನೋ ಎಲ್ಲೊ ಹಳಿ ತಪ್ಪಿದೆ ಎನ್ನುವ ಅನುಮಾನವು ಮನೆಯ ಹಿರಿಯರಿಗೆ
ಬಂದಿರಬೇಕು. 'ಯಾಕಪ್ಪಾ ! ಹೀಗೆ ಶೋಂಭೇರಿಯಾಗಿದೆ, ಮನೋವೈದ್ಯರನ್ನು
ಕಾಣೋಣ' ಎಂದು ತಂದೆ ಒಮ್ಮೆ ಹೇಳಿದರು. 'ಮನೋವೈದ್ಯರನ್ನು ಕಾಣುವುದಕ್ಕೆ
ನನಗೇನು ಹುಚ್ಚೇ ! ನನ್ನ ಪಾಡಿಗೆ ನನ್ನನ್ನು ಬಿಡಿ. ನನ್ನ ಜವಾಬ್ದಾರೀ ನನಗೇ
ಇರಲಿ' ಎಂದು ರಾಮಭದ್ರ ಖಂಡತುಂಡಾಗಿ ಹೇಳಿದ. ಅದೆಷ್ಟು ಕೋಪ
ಬಂದಿತ್ತೋ? ಥರ ಥರ ನಡುಗುತ್ತಿದ್ದ. ಮಾತುಗಳನ್ನಾಡುವಾಗ ತಡೆದು ಹಿಡಿದು
ಆಡಿದ್ದ. ಮುಖವೆಲ್ಲಾ ಕೆಂಪೇರಿತ್ತು. ತಂದೆಯು ಮಾತನ್ನು ಮುಂದುವರಿಸಲಿಲ್ಲ.
{{gap}}ಎರಡು ಮೂರು ವರ್ಷಗಳಲ್ಲಿ ನಾಲ್ಕು ಕಡೆ ಕೆಲಸಕ್ಕೆ ಸೇರಿಕೊಂಡು,
ಕೆಲವೇ ತಿಂಗಳುಗಳಲ್ಲಿ ರಾಜೀನಾಮೆ ಕೊಟ್ಟು ಹಿಂತಿರುಗುತ್ತಿದ್ದ. ಅತ್ಯುತ್ತಮ
ಸರ್ಟಿಫಿಕೇಟ್ಗಳಿದ್ದುವು. ಪ್ರಕಟಿಸಿದ್ದ ರೀಸರ್ಚ್ ಪೇಪರುಗಳು ಪ್ರಸಿದ್ಧವಾಗಿದ್ದುವು.
ಇಂತಹವನಿಗೆ ಕೆಲಸ ಸಿಗುವುದು ಸುಲಭವಾಗಿತ್ತು. ಸೇರಿಕೊಂಡ ಒಂದೆರಡು
ತಿಂಗಳುಗಳು ಎಲ್ಲರಿಂದಲೂ ಹೊಗಳಿಸಿಕೊಳ್ಳುತ್ತಿದ್ದ ; ಪಾಂಡಿತ್ಯಕ್ಕಾಗಿ. ಆದರೆ
ಯಾರೊಡನೆಯೂ ಸ್ನೇಹವನ್ನು ಮಾಡಿಕೊಳ್ಳುತ್ತಿರಲಿಲ್ಲ. ರಾಜೀನಾಮೆಯನ್ನು
ಕೊಟ್ಟು ಹಿಂತಿರುಗುವಾಗ, ಯಾಕೆ ಇವ ರಾಜೀನಾಮೆಯನ್ನು ಕೊಡುತ್ತಿದ್ದಾನೆ
ಎನ್ನುವುದು ಆ ಸಂಸ್ಥೆಯವರಿಗೆ ತಿಳಿಯುತ್ತಿರಲಿಲ್ಲ, 'ಅನಾನುಕೂಲಗಳು
ಯಾವುದಾದರೂ ಇದ್ದರೆ, ನೀವು ಹೇಳಿದ್ದರೆ, ಅವನ್ನು ಸರಿಪಡಿಸುತ್ತಿದ್ದೆವು :
ಕೆಲಸಕ್ಕೆ ಹಿಂತಿರುಗಿ ಬನ್ನಿ' ಎಂದು ಒಮ್ಮೆ ಕಾಗದವೂ ಬಂದಿತ್ತು. ರಾಮಭದ್ರ
ಉತ್ತರಿಸಲೇ ಇಲ್ಲ.
{{gap}}ಕೊಠಡಿಯಿಂದ ಹೊರಕ್ಕೆ ಒಮ್ಮೆ ಬಂದಾಗ, ಅಕ್ಕಿ ಆರಿಸುತ್ತಾ ಅಮ್ಮ
ಕುಳಿತಿದ್ದರು. ತಲೆಯೆತ್ತಿ ಮಗನ ಮುಖವನ್ನು ನೋಡಿದರು. ಹೀಗಾದನಲ್ಲ
ಎಂದು ಕೊರಗು ಇತ್ತೇ ವಿನಾ ಬಾಯಿ ಬಿಚ್ಚಲು ಧೈರ್ಯವಿರಲಿಲ್ಲ. ಕಾರಣ,
ತಲೆ ತಗ್ಗಿಸಿ ಅಕ್ಕಿ ಆರಿಸುವುದನ್ನು ಮುಂದುವರಿಸಿದರು. ಬಚ್ಚಲಮನೆಯ ಕಡೆಗೆ
ಹೋಗುತ್ತಿದ್ದ ರಾಮಭದ್ರ ಅಮ್ಮನ ಬಳಿ ಅರೆಕ್ಷಣ ನಿಂತು 'ಪಿಸುಪಿಸು ಯಾಕೆ
ಗೊಣಗುತ್ತೀ ! ಕೇಳಿಸುವ ಹಾಗೆ ಏನು ಹೇಳಬೇಕೋ ಅದನ್ನು ಹೇಳಬಾರದೇ?'
ಎಂದು ರೇಗುತ್ತಾ ಹೇಳಿದ. ನಾನೇನೂ ಗೊಣಗುತ್ತಲೇ ಇಲ್ಲವಲ್ಲೋ ಎಂದು
ಅಮ್ಮ ತಲೆಎತ್ತಿ ಹೇಳುವ ವೇಳೆಗೆ, ರಾಮಭದ್ರ ಬಚ್ಚಲುಮನೆಯೊಳಗಿದ್ದ.
{{gap}}ತನ್ನ ಬಟ್ಟೆಗಳನ್ನು ತಾನೇ ಒಗೆದು ಮಡಿಮಾಡಿಕೊಳ್ಳುವ ಅಭ್ಯಾಸವನ್ನು<noinclude></noinclude>
ihzxhtyw65q2fsqm4bufywjemy10i1u
ಪುಟ:ಮನಮಂಥನ.pdf/೨೪೬
104
62693
316665
315576
2026-05-04T03:32:39Z
Shreesha Sharma
7840
/* Validated */
316665
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಸ್ಕಿಜೋಫೊನಿಯಾಗಳು}}{{Right|೨೨೭}}
ಬಾಲ್ಯದಿಂದಲೂ ರಾಮಭದ್ರ ಕಲಿತುಕೊಂಡಿದ್ದ. ಅಮೆರಿಕಾದಿಂದ ಹಿಂತಿರುಗಿದ
ಮೇಲೆ ಕೂಡ ಅದೇ ಅಭ್ಯಾಸವನ್ನು ಮುಂದುವರಿಸಿದ್ದ. 'ನೀನು ಯಾಕೆ ಒಗೆದು
ಕೋತೀಯೋ, ಎಲ್ಲರ ಬಟ್ಟೆಗಳ ಜತೆಗೆ ನಿನ್ನದೂ ಎರಡು ಬಟ್ಟೆಗಳನ್ನು ಕಸಕಿ
ಹಾಕಲು ನನಗೇನೂ ಕಷ್ಟವಿಲ್ಲ' ಎಂದು ತಾಯಿ ಹೇಳಿದರು. ಆದರೆ ಅವ
ಒಪ್ಪಲಿಲ್ಲ. ಹೀಗಿದ್ದವನು ಈ ಮೂರು ನಾಲ್ಕು ವರ್ಷಗಳಿಂದ ಮೂರು ದಿನಕ್ಕೊಮ್ಮೆ
ನಾಲ್ಕು ದಿನಗಳಿಗೊಮ್ಮೆ ಬಟ್ಟೆಗಳನ್ನು ಮಡಿಮಾಡತೊಡಗಿದ. ಮೈಲಿಗೆ ಬಟ್ಟೆಗಳನ್ನು
ಎಂದೂ ಹಾಕಿಕೊಳ್ಳದೇ ಇದ್ದವನು ಇತ್ತಿಂದೀಚೆಗೆ ಕೊಳೆಯಾದ ಬಟ್ಟೆಗಳಲ್ಲಿರುತ್ತಿದ್ದ.
ಶುಭ್ರವಾದ ಮತ್ತು ಮಡಿಯಾದ ಬಟ್ಟೆ ಎಂದು ಶಿಸ್ತು ಮಾಡುತ್ತಿದ್ದವ ಈಗ
ಉದಾಸೀನನಾಗಹತ್ತಿದ.
{{gap}}ಒಂದು ದಿನ ಕಾಲೇಜಿನ ಪ್ರೊಫೆಸರು, ರಾಮಭದ್ರನ ಮನೆಗೆ ಬಂದರು.
ಅವರ ಚಿಕ್ಕ ಹುಡುಗನಿಗೆ ಅರಿಸಿನಕಾಮಾಲೆಯಾಗಿತ್ತು. ಈ ಬೇನೆಗೆ ಮೂರು
ದಿವಸಗಳು ಹಸಿರು ಔಷಧಿಯನ್ನು ರಾಮಭದ್ರನ ತಾಯಿಯು ಕೊಡುತ್ತಾರೆ
ಎನ್ನುವುದು ಪಟ್ಟಣಕ್ಕೆಲ್ಲಾ ಗೊತ್ತಿತ್ತು. ಆದ್ದರಿಂದ ಪ್ರೊಫೆಸರು ಮಗನನ್ನು
ಕರೆದುಕೊಂಡು ಬಂದಿದ್ದರು. ಹಳೆಯ ಪ್ರೊಫೆಸರ ಧ್ವನಿಯನ್ನು ಕೇಳಿಯೋ
ಏನೋ, ಕೊಠಡಿಯಿಂದ ಹೊರಕ್ಕೆ ರಾಮಭದ್ರನ್ ಬಂದ. ಪ್ರೊಫೆಸರಿಗೆ ವಂದಿಸಿದ,
'ಈಗ ಎಲ್ಲಿ ಕೆಲಸ ಮಾಡುತ್ತಿದ್ದೀ ; ಎಷ್ಟು ದಿನಗಳಾಯಿತು ಊರಿಗೆ ಬಂದು ?'
ಎಂದು ಕ್ಷೇಮ ಸಮಾಚಾರವನ್ನು ಕೇಳಿದರು. ಅದಕ್ಕೆ ಉತ್ತರವನ್ನು ರಾಮಭದ್ರ
ಕೊಡಲಿಲ್ಲ 'ರಿಟೈರ್ ಆಯಿತೇ ಸಾರ್ ? ಈಗೇನ್ಮಾಡ್ತಾ ಇದ್ದೀರಿ' ಎಂದು
ಕೇಳಿದ. 'ಎರಡು ವರ್ಷಗಳ ಹಿಂದೆ ರಿಟೈರ್ ಆಯ್ತಪ್ಪಾ ! ಈಗ ಪತ್ರಿಕೆಗಳನ್ನು
ಓದುವುದು, ಪಾರಾಯಣ ಮಾಡೋದು ; ಹೇಗಾದರೂ ಹೊತ್ತು ಕಳೀಬೇಕಲ್ಲ'
ಎಂದರು.
{{gap}}ಆಮೇಲೆ ಪತ್ರಿಕೆಗಳಲ್ಲಿ ಬಂದ ರಾಜಕೀಯ ಮತ್ತು ಸಾಮಾಜಿಕ
ವಿಷಯಗಳನ್ನು ಕುರಿತು ರಾಮಭದ್ರನ್ ಒಂದೈದು ಹತ್ತು ನಿಮಿಷಗಳು ಟೀಕೆಯನ್ನು
ಮಾಡಿದ. ಪ್ರೊಫೆಸರು ಮೂಗಿನ ಮೇಲೆ ಬೆರಳನ್ನಿಟ್ಟುಕೊಂಡರು. ಅಷ್ಟು ಹೊತ್ತಿಗೆ
ಹಸಿರು ಔಷಧಿಯನ್ನು ಕೊಟ್ಟಾಗಿತ್ತು. ಹಿಂತಿರುಗುವಾಗ ಪ್ರೊಫೆಸರು 'ನಿಮ್ಮ
ಮಗ ಅದೆಷ್ಟು ಸೂಕ್ಷ್ಮಗ್ರಾಹಿಯಮ್ಮ ! ಗಣಿತದ ವಿದ್ಯಾರ್ಥಿ, ಅದರಲ್ಲಿ ಪಾಂಡಿತ್ಯ
ಇರುವುದು ಸಹಜ ; ಆದರೆ ರಾಜಕೀಯ ವಿಷಯಗಳನ್ನು ಎಷ್ಟು ಸಮಂಜಸವಾಗಿ,
ಎಳೆಯೆಳೆಯಾಗಿ ವಿಶ್ಲೇಷಿಸಿ ಮಾತನಾಡುತ್ತಾನಮ್ಮಾ ; ತುಂಬಾ ಪ್ರಚಂಡ' ಎಂದು
ರಾಮಭದ್ರನ ತಾಯಿಗೆ ಹೇಳಿದರು.<noinclude></noinclude>
sk0vpqxu4vhd86x90gqxkqdhqlk9hag
ಪುಟ:ಮನಮಂಥನ.pdf/೨೪೭
104
62694
316664
315584
2026-05-04T03:31:51Z
Shreesha Sharma
7840
/* Validated */
316664
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೨೨೮}}{{Right|ಮನಮಂಥನ}}
{{gap}}'ಪ್ರೊಫೆಸರು ಬಂದಿದ್ದರು, ಹೀಗಂದರು, ರಾಮನ ತುಂಬಾ ಪ್ರಚಂಡ
ಅಂತ ಹೊಗಳಿದರು' ಎಂದು ತಾಯಿ ರಾತ್ರಿ ಊಟವಾದ ಮೇಲೆ ಗಂಡನಿಗೆ
ಹೇಳಿದಳು. ನಿಟ್ಟುಸಿರು ಬಿಡುತ್ತಾ, ತಂದೆ ನಿನ್ನ ಮಗನ ಪ್ರಚಂಡ ಜಾಣತನವನ್ನು
ಎಲ್ಲರೂ ಹೊಗಳುತ್ತಾರೆ, ದಿಟ. ಆದರೆ ಒಂದು ಕೆಲಸದಲ್ಲಿ ನಿಲ್ಲುಲ್ಲ. ಎಲ್ಲರಂತೆ
ನಗುನಗುತ್ತಾ ಮಾತನಾಡುಲ್ಲ. ಅಪ್ಪ ಅಮ್ಮ ಅಂದರೆ ಸ್ವಲ್ಪವಾದರೂ
ವಿಶ್ವಾಸವಿರಬೇಡವೇ ? ಇವನ ಜಾಣತನ ಕಟ್ಟಿಕೊಂಡು ಏನು ಮಾಡೋದು ?
ಬ್ಯಾಂಕೂ ಬೇಕಾಗಿತ್ತಿಲ್ಲ ; ಫಸ್ಟ್ ಕ್ಲಾಸೂ ಬೇಡ. ಎಲ್ಲರ ಹಾಗೆ ಹೇಗೋ ಪ್ಯಾಸು
ಮಾಡಿಕೊಂಡು, ಒಂದು ಚಾಕರೀನ ಹಿಡಿದಿದ್ದರೆ, ಎಷ್ಟು ಚೆನ್ನಾಗಿರುತ್ತಿತ್ತು ?
ನಲವತ್ತರ ಹತ್ತಿರ ಹತ್ತಿರ ವಯಸ್ಸು ಬಂತು. ಒಂಟಿ ಗುಂಡುಗೋವಿಯಾಗಿಯೇ
ಇದ್ದಾನೆ. ಜತೆಯವರೆಲ್ಲಾ ಸ್ವಂತ ಮನೆ ಮಾಡಿಕೊಂಡು ಮೂರು ನಾಲ್ಕು
ಮಕ್ಕಳನ್ನು ಪಡೆದಿದ್ದಾರೆ. ಹೀಗೆ ಶೋಂಭೇರಿಯಾಗಿ ಬಿದ್ದಿರುವ ಬದಲು,
ಅಪಾಪೋಲಿಯಾಗಿ ತಿರುಗ್ತಾ ಇದ್ದರೂ ಚೆನ್ನಾಗಿರುತ್ತಿತ್ತು' ಎಂದು ತಮ್ಮ ಮನದಾಳದ
ಅಳಲನ್ನು ತೋಡಿಕೊಂಡರು.
{{gap}}ಮನೋವೈದ್ಯರ ಬಳಿಗೆ ರಾಮಭದ್ರನನ್ನು ಕರೆದುಕೊಂಡು ಹೋಗಲು
ಸಾಧ್ಯವಾಗಲೇ ಇಲ್ಲ. ತಂದೆಯು ಹೋಗಿ ಅವರ ಸಲಹೆಯನ್ನು ಕೇಳಿದಾಗ,
'ಜುಲುಂ ಮಾಡಿ ಅವನನ್ನು ಎಳೆದುಕೊಂಡು ಬರಬೇಡಿ. ಹಾಗೆ ಮಾಡಿದರೆ
ನನ್ನ ಮೇಲೆ ಅವನಿಗೆ ವೈರ ಹುಟ್ಟುತ್ತದೆ, ಅಂತರಂಗದಲ್ಲಾಗುವುದನ್ನು ಅವ
ಮುಚ್ಚಿಟ್ಟುಕೊಳ್ಳುತ್ತಾನೆ. ಅಂದ ಮೇಲೆ ಚಿಕಿತ್ಸೆಯು ನಿರರ್ಥಕವಾಗುತ್ತದೆ. ಅವನನ್ನು
ಎದುರು ಹಾಕಿಕೊಳ್ಳಬೇಡಿ ; ಅಂಕೆಶಿಕ್ಷೆಯಲ್ಲಿಡಹೋಗಬೇಡಿ. ಅವನೇ ಏನಾದರೂ
ವೈದ್ಯ ಸಲಹೆಯನ್ನು ಅಪೇಕ್ಷಿಸಿದರೆ, ತತ್ಕ್ಷಣ ಹೇಳಿ ಕಳುಹಿಸಿ, ಅಲ್ಲಿಯ ತನಕ
ಆದರ, ಸಹಾನುಭೂತಿ, ಮತ್ತು ಅನುಕಂಪವನ್ನು ತೋರಿಸಿ. ನಿಮಗೆ ಬೇಸರ
ಬರುವಂತೆ, ಅವಮಾನವಾಗುವಂತೆ, ಅವ ಕೆಲವೊಮ್ಮೆ ನಡೆದುಕೊಳ್ಳಬಹುದು.
ಬೇಕಾಗಿ ಹಾಗೆ ಅವ ಮಾಡುವುದಿಲ್ಲ. ಅವನ ಮನಸ್ಸು ಛಿದ್ರವಾಗಿ ಅವನನ್ನು
ಜಗ್ಗಾಡಿಸುತ್ತಿದೆ. ಮನಸ್ಸಿನ ಮೇಲಿನ ಹತೋಟಿಯು ಎಂದೋ ತಪ್ಪಿಹೋಗಿದೆ.
ವಾಸ್ತವಿಕತೆಯ ಅರಿವೇ ನಾಶವಾಗಿದೆ. ಮನಸ್ಸಿನಲ್ಲಿ ಕಾಡಬರುವ ಭ್ರಮೆಗಳೇಸತ್ಯ
ಎಂದವನಿಗನ್ನಿಸುತ್ತಿದೆ. ನರಕಯಾತನೆ ಎಂದರೆ, ಅವನು ಅನುಭವಿಸುತ್ತಿರುವುದು'
ಎಂದು ಹೇಳಿ ಕಳುಹಿಸಿದರು.
{{gap}}ದಿನದಿನಕ್ಕೆ ರಾಮಭದ್ರನ್ನ ಜೋ ಹೆಚ್ಚುತ್ತ ಹೋಯಿತು. ಒಂದೆರಡು<noinclude></noinclude>
f6vudy5518zmdug8swmfpfff51o5knb
ಪುಟ:ಮನಮಂಥನ.pdf/೨೫೨
104
62699
316661
315580
2026-05-04T03:28:31Z
Shreesha Sharma
7840
/* Validated */
316661
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಸ್ಕಿಜೋಫೊನಿಯಾಗಳು}}{{Right|೨೩೩}}
ಅನುಮಾನವು ಮೂಡುತ್ತದೆ. ಶೋಕಿಸುವಂತಹ ಸಂದರ್ಭಗಳಲ್ಲಿ, ಮತ್ತೆ
ರೇಗಬೇಕಾದ ಸನ್ನಿವೇಶಗಳಲ್ಲಿ, ಯಾವ ರಾಗ ಪ್ರದರ್ಶನವನ್ನೂ ಮಾಡದೆ
ಇದ್ದರೆ, ಇವನಿಗೆ Feelings ಇಲ್ಲವೇ ? ಎಂದೆನಿಸುತ್ತದೆ. ಮಗುವಿಗೆ ಸಕತ್
ಕಾಯಿಲೆಯಾದಾಗ, ನೆಂಟನಲ್ಲದ ನಾನು ಅವನ ವೈಯಕ್ತಿಕ ಜೀವನದ ಬಗ್ಗೆ
ಪ್ರಶ್ನೆಯನ್ನು ಕೇಳಿದಾಗ ; ಎರಡೂ ಸಂದರ್ಭಗಳಲ್ಲಿ ಅವ, ರಾಗರಹಿತನಾಗಿದ್ದ.
ಹೀಗಾಗುವುದು ಜೋ ಬೇನೆಗಳಲ್ಲಿ.
{{gap}}ನಾನು ಕೇಳಿದ ಪ್ರಶ್ನೆಗೆ ಸಮಂಜಸವಾದ ಉತ್ತರವೆಂದರೆ ; 'ಇಲ್ಲ ಸಾರ್
ಇನ್ನು ಮೇಲೆ 'ಪಾರ್ಟಿ'ಗಳ ಬೆಡಗಿಗೆ ಬೀಳುವುದಿಲ್ಲ. ಖರ್ಚನ್ನು
ದುಂದಾಗಿಸುವುದಿಲ್ಲ' ಎನ್ನುವುದು. ಪ್ರಶ್ನೆಗೆ ಸರಿಯಾದ ಉತ್ತರವನ್ನು ಕೊಡಬೇಕು
ಎಂದು ಅವನು ಯೋಚಿಸಲಿಲ್ಲ. ಪಾರ್ಟಿ ಎನ್ನುವ ಪದವನ್ನು ಹಿಡಿದುಕೊಂಡಿದ್ದ,
ನನಗೂ ಆಹ್ವಾನವನ್ನು ಕೊಟ್ಟಿದ್ದ. ಯೋಚನಾಸರಣೆಯಲ್ಲಿ ಅವ ತಪ್ಪಿದ್ದ. ಆದರೆ
ಹಳಿ ತಪ್ಪಿದ ಯೋಚನೆಯನ್ನು ಮಾತುಗಳಲ್ಲಿ ಮೂಡಿಸುವಾಗ ಲಕ್ಷಣವಾಗಿ
ನುಡಿದಿದ್ದ. ಪಾರ್ಟಿಗೆ ಬಾ ಎಂದಿದ್ದ. ಇದೂ ಜೋವಿನ ಒಂದು ಚಿಹ್ನೆ.
{{gap}}ಇವನ ತಂದೆಗೆ ಒಂದು ಕಾಗದವನ್ನು ಬರೆದು ; ನಿಮ್ಮ ಮಗ ಪಿತಾಂಬರ್ಗೆ
ಹೀಗೆ ಸ್ಕಿಜೋ ಬೇನೆಯು ತಗುಲಿದಂತಿದೆ. ಇಲ್ಲಿಗೆ ಬಂದು, ಮನೋವೈದ್ಯರಲ್ಲಿಗೆ
ಕರೆದುಕೊಂಡು ಹೋಗಿ ಪರಣಾಮಕಾರಿ ಚಿಕಿತ್ಸೆಯನ್ನು ನಡೆಸಿ : ಎಂದು
ಹೇಳಲೇ ? ಎನ್ನಿಸಿತು. ಇದು ಕರ್ತವ್ಯ ಎಂದೂ ಅನಿಸಿತು.
{{gap}}ಆದರೆ ಅವನ ತಂದೆಯ ಪರಿಚಯವು ಸಾಕಷ್ಟು ಇರಲಿಲ್ಲ. ಆ ರೀತಿ
ಕಾಗದ ಬರೆದರೆ, ಆತ ಬಂದು 'ನನ್ನ ಮಗನಿಗೇನಾಗಿದೆ. ಹುಚ್ಚು ಅಂತ
ಹೇಳುವ ನೀನು ಹುಚ್ಚ ಎಂದು ದಬಾಯಿಸಬಹುದು. ಪಾರ್ಟಿಗಳನ್ನು
ಏರ್ಪಡಿಸಿದರೆ, ಜೋ ಅನ್ನುತ್ತಾರೆಯೇ ಎಂದು ಮೂದಲಿಸಬಹುದು.
ಸುಮ್ಮಸುಮ್ಮನೆ ಈ ಗೋಜಿಗೆ ಏಕೆ ಕೈಹಾಕಲಿ ಅಂತ ತೆಪ್ಪಗಾದೆ.
{{gap}}ಒಂದೆರಡು ತಿಂಗಳುಗಳಲ್ಲಿ ಪಿತಾಂಬರನ ಅಜ್ಜಿಯು, ಮಗನನ್ನು ಚಿಕಿತ್ಸೆಗೆ
ಕರೆತಂದಳು. 'ನನ್ನ ಮಗ, ಮದ್ರಾಸಿನಿಂದ ನಾಲ್ಕು ದಿನಗಳ ಹಿಂದೆ ಬಂದ.
ಎರಡು ದಿನಗಳಿಂದ ಎದೆಯು ನೋವುತ್ತೆ, ತುಂಬಾ ಸುಸ್ತಾಗುತ್ತದೆ ಎಂದು
ಹೇಳಿದ. ಡಾಕ್ಟರ ಬಳಿಗೆ ಹೋಗೋಣ ಅಂದೆ. ವಿಶ್ರಾಂತಿ ತೆಗೆದುಕೊಂಡರೆ
ಸರಿಹೋಗುತ್ತೆ ಅಂತ ಹಠ ಹಿಡಿದ. ಅದಕ್ಕೆ ಈ ತನಕ ಬರಲಿಲ್ಲ. ಆದರೆ ನಿನ್ನೆ
ರಾತ್ರಿಯೆಲ್ಲಾ ನರಳುತ್ತಿದ್ದ. ಜುಲುಂ ಮಾಡಿ ಈಗ ಕರತಂದೆ' ಎಂದು ಪೀತಾಂಬರನ<noinclude></noinclude>
73ew5itjd2ahv4sn478mfrg90vbgf5j
ಪುಟ:ಮನಮಂಥನ.pdf/೨೫೩
104
62700
316662
315579
2026-05-04T03:29:31Z
Shreesha Sharma
7840
/* Validated */
316662
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೨೩೪}}{{Right|ಮನಮಂಥನ}}
ಅಜ್ಜಿ ಹೇಳಿದಳು. ವಯಸ್ಸಾದ ತಂದೆಗೆ ಎದೆ ನೋವು ಅಂದರೆ ಹೃದಯಕ್ಕೆ ಧಕ್ಕೆ
ಆಗಿರಬಹುದು ಎಂದು ಯಾರಾದರೂ ಕಾತರಗೊಳ್ಳುತ್ತಾರೆ. ರೋಗಿಯೊಡನೆ
ಡಾಕ್ಟರ ಬಳಿಗೆ ಹೋಗುತ್ತಾರೆ. ಆದರೆ ಈಗ ಪೀತಾಂಬರ್ ಬಂದಿರಲಿಲ್ಲ.
{{gap}}ರೋಗಿಯನ್ನು ಪರೀಕ್ಷೆಮಾಡಿದೆ. ಈ ಷಹರಿನ ಶಾಖೆಯಲ್ಲಿ ತುಂಬಾ
ನಷ್ಟವಾಗಿದೆಯೆಂದೂ ಪೀತಾಂಬರ್, ಬಹಳ ದುರ್ವ್ಯಸನಿಯಾಗಿದ್ದಾನೆಂದೂ,
ತಿಳಿದು, ಸ್ಥಿತಿಗತಿಗಳನ್ನು ಅರಿತು, ಸರಿಪಡಿಸಲು ಅವ ಬಂದಿದ್ದ. ಇಲ್ಲಿ ಆಗಿದ್ದ
ನಷ್ಟದ ಪ್ರಮಾಣವು ಬಹಳವಾಗಿತ್ತು. ಅಲ್ಲದೆ ಮಗ ಕೇಳಿದ ಪ್ರಶ್ನೆಗೆ ಸರಿಯಾಗಿ
ಉತ್ತರವನ್ನು ಕೊಡಲಿಲ್ಲ, ಬದಲು ಸಿಡುಕುವುದು, ಅಸಂಬದ್ಧವಾಗಿ
ಮಾತನಾಡುವುದು ತಂದೆ ಎಂದು ಗೌರವವನ್ನೂ ಕೊಡದಿರುವುದು : ಇವೆಲ್ಲವೂ
ಆಗಿತ್ತು. ತಂದೆಯ ಮನನ್ನೂ ಕೊರಗಿನಿಂದ ತಳಮಳಗೊಂಡಿತ್ತು. ಎದೆಯ
ನೋವಾಗಿ ದೇಹಕ್ಕೆ ವಕ್ರಿಸಿತ್ತು.
{{gap}}ರೋಗಿಯನ್ನು ಒಳಕ್ಕೆ ಕರೆದುಕೊಂಡು ಹೋಗಿ ಏಕಾಂತದಲ್ಲಿ ತಿಳಿದುದನ್ನು
ಹೇಳಿದೆ :
{{gap}}ಪೀತಾಂಬರ್ಗೆ ಸ್ಕಿಜೋ ಬೇನೆ ಬಂದಿದೆ. ಆದುದರಿಂದ ಅವ ಹೀಗೆಲ್ಲಾ
ದುರ್ವ್ಯಯ ಮಾಡುತ್ತಿದ್ದಾನೆ. ದುಶ್ಚಟಗಳಿಗೆ ಬಲಿಯಾಗಿದ್ದಾನೆ. ಹೆಂಡತಿ, ಮಕ್ಕಳು,
ತಂದೆ, ತಾಯಿ, ಅಜ್ಜಿ, ನೆಂಟರು, ಇವರುಗಳಲ್ಲಿ ಕೂಡ ಪ್ರೀತಿಯೇ ಇಲ್ಲದಂತಾಗಿದೆ.
ಅವನನ್ನು ಬೈದು ಬುದ್ಧಿ ಹೇಳಹೋದರೆ ಜೋ ಉಲ್ಬಣಿಸುತ್ತದೆಯೇ ಹೊರತು,
ಅವನು ಸರಿಯಾಗುವುದಿಲ್ಲ. ತತ್ಕ್ಷಣವೇ ಉಪಾಯ ಮಾಡಿ, ಆದರದಿಂದ
ಮಾತನಾಡಿಸಿ, ಮನೋವೈದ್ಯರಲ್ಲಿಗೆ ಹೋಗಿ ಸೂಕ್ತ ಚಿಕಿತ್ಸೆಯನ್ನು ಮಾಡಿದರೆ
ಬಹಳಷ್ಟು ಗುಣ ಹೊಂದುತ್ತಾನೆ.
{{gap}}ಆಗ ನಿಮ್ಮ ಎದೆಯ ನೋವೂ ಮಾಯವಾಗುತ್ತದೆ. ನಿಮ್ಮ ಹೃದಯವು
ಆರೋಗ್ಯವಾಗಿದೆ. ನಿಮ್ಮ ಮನಸ್ಸಿನಲ್ಲಿ ತುಂಬಿ ತುಳುಕಾಡುತ್ತಿರುವ ಭೀಕರ
ಕೊರಗೇ ಎದೆಯ ನೋವಿಗೆ ಮತ್ತು ಸುಸ್ತಿಗೆ ಕಾರಣ ಎಂದು.
{{gap}}ಪೀತಾಂಬರನ ತಂದೆಯು ಲೋಕಾನುಭವವನ್ನು ಪಡೆದಿದ್ದವ. ಹೇಳಿದುದನ್ನು
ಅರ್ಥ ಮಾಡಿಕೊಂಡ. ಇವನ ಸೋದರಮಾವಂದಿರಿಬ್ಬರು ಹೀಗೇ ಆಡುತ್ತಿದ್ದರು.
ಕೊನೆಗೆ ಮಾನಸಿಕ ಆಸ್ಪತ್ರೆಗೆ ಸೇರಿಸಬೇಕಾಯಿತು. ಆದರೆ ಆಗ ಅವರುಗಳಿಗೆ
ನಲವತ್ತು ಐವತ್ತು ವಯಸ್ಸಾಗಿತ್ತು. ಪೀತಾಂಬರನೂ ಅವರ ಹಾಗೆಯೇ
ಆಗಿಬಿಡುತ್ತಾನೇನೋ ಎನ್ನುವ ಅನುಮಾನ ಮೊದಲಿನಿಂದಲೂ ನನಗಿತ್ತು. ನೀವು
ಹೇಳಿದಂತೆ ಮನೋವೈದ್ಯರನ್ನು ಭೇಟಿಯಾಗುತ್ತೇನೆ' ಎಂದು ಹೇಳಿದ.<noinclude></noinclude>
kuk2wzz35wfnes10u0741fpjyo1xut7
ಪುಟ:ಮನಮಂಥನ.pdf/೨೫೫
104
62702
316663
315577
2026-05-04T03:30:44Z
Shreesha Sharma
7840
/* Validated */
316663
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೨೩೬}}{{Right|ಮನಮಂಥನ}}
'''ನಿಲೂಫರ್ ಇನ ಇಂಜಿನಿಯರಿಂಗ್ ಓದು'''
{{gap}}ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಸಮೀಯುಲ್ಲಾ ನನ್ನ ಸಹಪಾಠಿಯಾಗಿದ್ದ,
ಬಡಮನೆತನದಲ್ಲಿ ಹುಟ್ಟಿದ್ದ ಜಾಣ ವಿದ್ಯಾರ್ಥಿ, ನಮ್ಮ ತರಗತಿಯಲ್ಲಿ ಇದ್ದ
ವಿದ್ಯಾರ್ಥಿಗಳು ಬಹುತೇಕ ಮಧ್ಯಮ ವರ್ಗದವರು. ಅವನೂ ನಾನೂ ಇಬ್ಬರೇ
ಕಡುಬಡವರು. ನಮ್ಮಿಬ್ಬರಿಗೆ ಮಾತ್ರ ಗಡಿಯಾರವಿರಲಿಲ್ಲ ; ಫೌಂಟನ್ಪೆನ್ನೂ
ಇರಲಿಲ್ಲ. ಕಾರಣ, ನಮ್ಮಿಬ್ಬರಲ್ಲಿಯೂ ತುಂಬಾ ಗೆಳೆತನವು ಕುದುರಿಕೊಂಡಿತು.
{{gap}}ಎಂಟ್ರೆನ್ಸ್ ಪರೀಕ್ಷೆಯಾದ ಮೇಲೆ ಅವ ಇಂಜನಿಯರಿಂಗ್ ಕಾಲೇಜನ್ನು
ಸೇರಿದ ; ವಿದ್ಯಾರ್ಥಿವೇತನವು ದೊರಕಿದುದರಿಂದ, ಸೈನ್ಸ್ ಕಾಲೇಜಿಗೆ ನಾನು
ದಾಖಲಾದೆ ; ಫೀಜು ಕಡಿಮೆ ಇದ್ದುದರಿಂದ, ಅನಂತರ ನಾವು ಒಬ್ಬರನ್ನೊಬ್ಬರು
ಕಾಣುವುದು ಸ್ವಾಭಾವಿಕವಾಗಿ ವಿರಳವಾಯ್ತು.
{{gap}}ಹದಿನೈದು ಇಪ್ಪತ್ತು ವರ್ಷಗಳಾದ ಮೇಲೆ ಅವನನ್ನು ಸಿನಿಮಾ ಬಳಿ
ಆಕಸ್ಮಿಕವಾಗಿ ಭೇಟಿಯಾದೆ. ಸುಮಾರು ಧಡಿಯನಾಗಿದ್ದ ; ಬೇಗ ಗುರುತು
ಸಿಗಲಿಲ್ಲ. ಇವ ಸಮೀಯುಲ್ಲಾನೇ, ಎಂದು ಶಂಕಿಸುತ್ತಿದ್ದೆ. ಅಷ್ಟರಲ್ಲಿ ಅವನೇ
ಒಂದು ತೋಳ ಮೇಲೆ ಕೈಹಾಕಿ 'ಯಾಕೋ ಹಾಗೆ ನೋಡೀ ಗುರುತು
ಸಿಗಲಿಲ್ಲವೇನೋ' ಅಂದ. ಧ್ವನಿಯನ್ನು ಕೇಳಿದ ಮೇಲೆ ಅವನೇ ಎನ್ನುವುದು
ಖಚಿತವಾಯಿತು. ಬಾಲ್ಯದ ಗೆಳೆಯ ಸಿಕ್ಕಿದ ಅಂತ ಹಿಗ್ಗೂ ಆಯಿತು. ಪರಸ್ಪರ
ಯೋಗಕ್ಷೇಮದ ವಿಚಾರಣೆಯೂ ಆಯಿತು. ಮರಾಮತ್ತು ಇಲಾಖೆಯಲ್ಲಿ ದೊಡ್ಡ
ಕೆಲಸದಲ್ಲಿದ್ದಾನೆ ಎಂದು ತಿಳಿಯಿತು. ನಾನು ವೈದ್ಯನಾಗಿರುವುದು ಅವನಿಗೆ
ಮೋಜೆನಿಸಿತು. ಪಿಳ್ಳುಜುಟ್ಟು ಬಿಟ್ಟುಕೊಂಡು, ಹೆಣವನ್ನು ಕಂಡರೆ ಜನಿವಾರವನ್ನು
ತೀಡುತ್ತಿದ್ದ ನೀನು, ಡಾಕ್ಟರಾದೆಯೇನೋ, ಹೆಣ ಕುಯ್ದೆಯೇನೋ ? ಹೆಣ
ಹಾಕ್ತಿಯೇನೋ ಎಂದೆಲ್ಲಾ ಮೊದಲಿನಂತೆ ಗಹಗಹಿಸಿ ಕುಹಕವಾಡಿದ.
{{gap}}ಮುಂದಿನ ಭಾನುವಾರ ಸಂಜೆ ಅವರ ಮನೆಗೆ ಚಹಾಕ್ಕೆ ಬರುವುದಾಗಿ ಒಪ್ಪಿದೆ.
{{gap}}ಸಮೀಯುಲ್ಲಾ ಅಷ್ಟು ಇಷ್ಟು ಸಾಂಪ್ರದಾಯಕ ಮುಸಲ್ಮಾನ. ಮನೆಯಲ್ಲಿ
ಘೋಷಾವನ್ನು ಕಟ್ಟುನಿಟ್ಟಾಗಿ ಆಚರಿಸುವವ. ಆದರೆ ಮಗಳು ಇಂಜಿನಿಯರಿಂಗ್
ಕಾಲೇಜಿನಲ್ಲಿ ಓದುತ್ತಿದ್ದಳು. ಚಹಾಕ್ಕೆಂದು ಅವನ ಮನೆಗೆ ಹೋದಾಗ ಅವಳೇ
ಬಾಗಿಲು ತೆಗೆದು ಸ್ವಾಗತಿಸಿದ್ದು, ನೀವು ಬರೀರಿ ಅಂತ ದಾದಾ ಹೇಳಿದ್ದರು.
ಸಚಿವರು ತುರ್ತಾಗಿ ಮಧ್ಯಾಹ್ನ ಹೇಳಿಕಳಿಸಿದ್ದರಿಂದ ಹೋಗಿದ್ದಾರೆ. ಇನ್ನೇನು
ಬಂದುಬಿಡುತ್ತಾರೆ' ಎಂದಳು. ಅಷ್ಟು ಹೊತ್ತಿಗೆ ಸರಿಯಾಗಿ ಸರಂತ ಬಂದು<noinclude></noinclude>
e3z9knhhm8tc22pbfffgd5jg3azgcfu
ಪುಟ:ಮನಮಂಥನ.pdf/೨೫೬
104
62703
316672
314407
2026-05-04T06:37:04Z
Shreesha Sharma
7840
/* Proofread */
316672
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಸ್ಕಿಜೋಫೊನಿಯಾಗಳು}}{{Right|೨೩೭}}
ನಿಂತ ಮೋಟಾರು, ಜಟ್ಟಂತ ನಿಂತಿತು. ಇಳಿದು ಓಡೋಡಿ ಬಂದ ಸಮೀಯುಲ್ಲಾ
'ತುಂಬಾ ಹೊತ್ತಾಯಿತೇನೋ ನೀ ಬಂದು, ಬೇಸರವಾಗಲಿಲ್ಲವಾ, ಹಾಳು
ಕೆಲಸ, ರಜ ಇದ್ದರೂ ಹೋಗಲೇಬೇಕು' ಎಂದ. 'ಇಲ್ಲ ಕಣೋ, ಈಗ ತಾನೇ
ಬಂದೆ, ಈ ಹೆಣ್ಣುಮಗಳು ಬಾಗಿಲು ತೆಗೆದಳು. ಎರಡು ಮಾತನಾಡಿದಳು.
ಅಷ್ಟರಲ್ಲೇ ನೀ ಬಂದೆ' ಎಂದೆ.
ಇವಳು ನನ್ನ ದೊಡ್ಡ ಮಗಳು ಕಣೋ, ನಿಲೂಫರ್ ಅಂತ.
ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಮುಂದೆ ಆರಿಟೆಕ್ಟ್ ಆಗಬೇಕು
ಅಂತ ಹಂಬಲ ಅವಳಿಗೆ' ಎಂದು ಅವಳನ್ನು ಪರಿಚಯ ಮಾಡಿಸಿದ. 'ನನ್ನ
ಹಳೆಯ ಅಪ್ತಗೆಳೆಯ ಕಣೆ, ಮಾಮೂ ಅಂತ ಅವನನ್ನು ಕರಿ ; ಮಸಲಾ
ನಾನಿಲ್ಲದೇ ಹೋದರೆ, ಏನಾದರೂ ಬೇಕಾದರೆ, ಇವನ ಹತ್ತಿರ ಹೋಗು. ತನ್ನ
ಸ್ವಂತಮಗಳಿಗಿಂತ ಹೆಚ್ಚು ಮಮತೆಯಿಂದ ನಿನ್ನನ್ನು ನೋಡಿಕೊಳ್ಳುತ್ತಾನೆ' ಎಂದು
ನನ್ನ ಪರಿಚಯವನ್ನು ಆಕೆಗೆ ಮಾಡಿಸಿಕೊಟ್ಟ ಸಮೀಯುಲ್ಲನಿಗೆ ತುಂಬು ಹೃದಯ.
ಹೃದಯದಲ್ಲಿದ್ದುದನ್ನು ನಿಷ್ಕಪಟದಿಂದ ನುಡಿಯುತ್ತಾನೆ. ಅವನಂದುದನ್ನು ಕೇಳಿ
ನನಗೂ ಗಂಟಲು ಒತ್ತಿಕೊಂಡು ಬಂದಿತ್ತು. ವಾತ್ಸಲ್ಯವು ತುಂಬಿದ್ದ ಕಣ್ಣುಗಳಿಂದ
ನಿಲೂಫರ್ ನನ್ನನ್ನು ನೋಡಿ, 'ಆದಾಬ್ ಮಾಮೂ' ಎಂದಂದಳು. ಕಿರುನಗೆಯನ್ನು
ಹೂಡಿದಳು. 'ಆರ್ಕಿಟೆಕ್ಟ್ ಆಗಬೇಕಾದರೆ ವಿಜ್ಞಾನದ ಕಲಿಕೆಯೊಂದೇ ಸಾಲದು.
ಸೌಂದರ್ಯವನ್ನು ಗುರುತಿಸಿ ಅದನ್ನು ಕಲ್ಲುಮಣ್ಣಿನಲ್ಲಿ ಸೆರೆಹಿಡಿಯಬೇಕು,
ಆದ್ದರಿಂದಲೇ ಈ ವಿದ್ಯೆಯಲ್ಲಿ ಹೆಂಗಸರು ಪ್ರವರ್ಧಮಾನಕ್ಕೆ ಸುಲಭವಾಗಿ
ಬರಬೇಕು. ಒಳ್ಳೆಯ ಕೆಲಸ ಮಾಡಿದೆ. ಮಗಳ ಇಚ್ಛೆಯಂತೆ ಓದನ್ನು
ಮುಂದುವರೆಸಿದೆಯಲ್ಲಾ. ಸಂಪ್ರದಾಯಕ್ಕೆ ಶರಣಾಗಿ ಮದುವೆ ಮಾಡಿ ಮೂಲೆಯಲ್ಲಿ
ಕೂರಿಸಲಿಲ್ಲವಲ್ಲ' ಎಂದು ನಾನೂ ಹೊಗಳಿದೆ.
ಒಳ ಅಂಗಳಕ್ಕೆ ಕರೆದುಕೊಂದು ಹೋದ. “ನಿನ್ನ ವಿಷಯದಲ್ಲಿ ಘೋಷಾ
ಎಲ್ಲಿ ಬಂತೋ' ಎಂದು ಹೇಳುತ್ತಾ ಹೆಂಡತಿಯನ್ನು ಕರೆದು ಪರಿಚಯ ಮಾಡಿ
ಕೊಟ್ಟ. ಇನ್ನಿಬ್ಬರು ಮಕ್ಕಳನ್ನೂ ಕರೆದು ಆದಾಬ್ ಮಾಡಿಸಿದ. ಅವೂ ೧೫-
೧೦ರ ಹೆಣ್ಣು ಮಕ್ಕಳು.
ಆತ್ಮೀಯವಾಗಿ ಅವನೊಡನೆ ಆ ಸಂಜೆಯನ್ನು ಕಳೆದು, ಆ ಮಕ್ಕಳೊಂದಿಗೆ
ಆಟವಾಡಿ, ನಕ್ಕುನಲಿಸಿ ನಂತರ ಹಿಂತಿರುಗಿದೆ.
ಸಮೀಯುಲ್ಲಾಗೆ ವರ್ಗವಾಯಿತು ಎನ್ನುವುದನ್ನು ಪತ್ರಿಕೆಗಳಲ್ಲಿ ಕಂಡೆ.
ತಿರುಗಿ ಎಂದು ಅವನನ್ನು ಕಾಣುವುದೋ ಎಂದು ಅನ್ನಿಸಿತು. ಸ್ವಲ್ಪ ಬೇಸರವೂ<noinclude></noinclude>
mx8h1jxao137c3ebyc5ygz958e0k0vo
316700
316672
2026-05-04T07:12:24Z
Shreelatha.Halemane
7642
/* Validated */
316700
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಸ್ಕಿಜೋಫ್ರೆನಿಯಾಗಳು}}{{Right|೨೩೭}}
ನಿಂತ ಮೋಟಾರು, ಜಟ್ಟಂತ ನಿಂತಿತು. ಇಳಿದು ಓಡೋಡಿ ಬಂದ ಸಮೀಯುಲ್ಲಾ
'ತುಂಬಾ ಹೊತ್ತಾಯಿತೇನೋ ನೀ ಬಂದು, ಬೇಸರವಾಗಲಿಲ್ಲವಾ, ಹಾಳು
ಕೆಲಸ, ರಜ ಇದ್ದರೂ ಹೋಗಲೇಬೇಕು' ಎಂದ. 'ಇಲ್ಲ ಕಣೋ, ಈಗ ತಾನೇ
ಬಂದೆ, ಈ ಹೆಣ್ಣುಮಗಳು ಬಾಗಿಲು ತೆಗೆದಳು. ಎರಡು ಮಾತನಾಡಿದಳು.
ಅಷ್ಟರಲ್ಲೇ ನೀ ಬಂದೆ' ಎಂದೆ.
{{gap}}ಇವಳು ನನ್ನ ದೊಡ್ಡ ಮಗಳು ಕಣೋ, ನಿಲೂಫರ್ ಅಂತ.
ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಮುಂದೆ ಆರಿಟೆಕ್ಟ್ ಆಗಬೇಕು
ಅಂತ ಹಂಬಲ ಅವಳಿಗೆ' ಎಂದು ಅವಳನ್ನು ಪರಿಚಯ ಮಾಡಿಸಿದ. 'ನನ್ನ
ಹಳೆಯ ಅಪ್ತಗೆಳೆಯ ಕಣೆ, ಮಾಮೂ ಅಂತ ಅವನನ್ನು ಕರಿ ; ಮಸಲಾ
ನಾನಿಲ್ಲದೇ ಹೋದರೆ, ಏನಾದರೂ ಬೇಕಾದರೆ, ಇವನ ಹತ್ತಿರ ಹೋಗು. ತನ್ನ
ಸ್ವಂತಮಗಳಿಗಿಂತ ಹೆಚ್ಚು ಮಮತೆಯಿಂದ ನಿನ್ನನ್ನು ನೋಡಿಕೊಳ್ಳುತ್ತಾನೆ' ಎಂದು
ನನ್ನ ಪರಿಚಯವನ್ನು ಆಕೆಗೆ ಮಾಡಿಸಿಕೊಟ್ಟ ಸಮೀಯುಲ್ಲನಿಗೆ ತುಂಬು ಹೃದಯ.
ಹೃದಯದಲ್ಲಿದ್ದುದನ್ನು ನಿಷ್ಕಪಟದಿಂದ ನುಡಿಯುತ್ತಾನೆ. ಅವನಂದುದನ್ನು ಕೇಳಿ
ನನಗೂ ಗಂಟಲು ಒತ್ತಿಕೊಂಡು ಬಂದಿತ್ತು. ವಾತ್ಸಲ್ಯವು ತುಂಬಿದ್ದ ಕಣ್ಣುಗಳಿಂದ
ನಿಲೂಫರ್ ನನ್ನನ್ನು ನೋಡಿ, 'ಆದಾಬ್ ಮಾಮೂ' ಎಂದಂದಳು. ಕಿರುನಗೆಯನ್ನು
ಹೂಡಿದಳು. 'ಆರ್ಕಿಟೆಕ್ಟ್ ಆಗಬೇಕಾದರೆ ವಿಜ್ಞಾನದ ಕಲಿಕೆಯೊಂದೇ ಸಾಲದು.
ಸೌಂದರ್ಯವನ್ನು ಗುರುತಿಸಿ ಅದನ್ನು ಕಲ್ಲುಮಣ್ಣಿನಲ್ಲಿ ಸೆರೆಹಿಡಿಯಬೇಕು,
ಆದ್ದರಿಂದಲೇ ಈ ವಿದ್ಯೆಯಲ್ಲಿ ಹೆಂಗಸರು ಪ್ರವರ್ಧಮಾನಕ್ಕೆ ಸುಲಭವಾಗಿ
ಬರಬೇಕು. ಒಳ್ಳೆಯ ಕೆಲಸ ಮಾಡಿದೆ. ಮಗಳ ಇಚ್ಛೆಯಂತೆ ಓದನ್ನು
ಮುಂದುವರೆಸಿದೆಯಲ್ಲಾ. ಸಂಪ್ರದಾಯಕ್ಕೆ ಶರಣಾಗಿ ಮದುವೆ ಮಾಡಿ ಮೂಲೆಯಲ್ಲಿ
ಕೂರಿಸಲಿಲ್ಲವಲ್ಲ' ಎಂದು ನಾನೂ ಹೊಗಳಿದೆ.
{{gap}}ಒಳ ಅಂಗಳಕ್ಕೆ ಕರೆದುಕೊಂದು ಹೋದ. “ನಿನ್ನ ವಿಷಯದಲ್ಲಿ ಘೋಷಾ
ಎಲ್ಲಿ ಬಂತೋ' ಎಂದು ಹೇಳುತ್ತಾ ಹೆಂಡತಿಯನ್ನು ಕರೆದು ಪರಿಚಯ ಮಾಡಿ
ಕೊಟ್ಟ. ಇನ್ನಿಬ್ಬರು ಮಕ್ಕಳನ್ನೂ ಕರೆದು ಆದಾಬ್ ಮಾಡಿಸಿದ. ಅವೂ ೧೫-
೧೦ರ ಹೆಣ್ಣು ಮಕ್ಕಳು.
{{gap}}ಆತ್ಮೀಯವಾಗಿ ಅವನೊಡನೆ ಆ ಸಂಜೆಯನ್ನು ಕಳೆದು, ಆ ಮಕ್ಕಳೊಂದಿಗೆ
ಆಟವಾಡಿ, ನಕ್ಕುನಲಿಸಿ ನಂತರ ಹಿಂತಿರುಗಿದೆ.
{{gap}}ಸಮೀಯುಲ್ಲಾಗೆ ವರ್ಗವಾಯಿತು ಎನ್ನುವುದನ್ನು ಪತ್ರಿಕೆಗಳಲ್ಲಿ ಕಂಡೆ.
ತಿರುಗಿ ಎಂದು ಅವನನ್ನು ಕಾಣುವುದೋ ಎಂದು ಅನ್ನಿಸಿತು. ಸ್ವಲ್ಪ ಬೇಸರವೂ<noinclude></noinclude>
d584jtldttfz4cvsyfx4gqmb411154w
ಪುಟ:ಮನಮಂಥನ.pdf/೨೫೭
104
62704
316673
314408
2026-05-04T06:37:51Z
Shreesha Sharma
7840
/* Proofread */
316673
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೨೩೮}}{{Right|ಮನಮಂಥನ}}
ಆಯಿತು. ಕೆಲಸದ ನೆಪದಿಂದಾಗಿ ಅವನನ್ನು ಪುನಃ ಭೇಟಿಯಾಗಿರಲಿಲ್ಲ. ಮುಂದಿನ
ಭಾನುವಾರ ಅಂತ ಮುಂದಕ್ಕೆ ಹಾಕುತ್ತ ಬಂದಿದ್ದೆ. ಆದರೆ ಎರಡೇ ತಿಂಗಳುಗಳಲ್ಲಿ
ವರ್ಗವಾಗಿತ್ತು.
ತಿರುಗಿ ಸಮೀಯುಲ್ಲಾನ ಕಂಡಿದ್ದು, ಅವನೇ ನನ್ನ ದವಾಖಾನೆಗೆ ಬಂದಾಗ:
ಎರಡು ವರ್ಷಗಳಾದ ಮೇಲೆ, 'ಯಾವಾಗ ಬಂದೆ? ಇಲ್ಲಿಗೆ ಪುನಃ
ವರ್ಗವಾಗಿದೆಯೆ ? ಏನು ಸಮಾಚಾರ?' ಎಂದು ವಿಚಾರಿಸಿದೆ. 'ನಿನ್ನ ಹತ್ತಿರ
ಮಾತನಾಡುವುದು ತುಂಬಾ ಇದೆ. ಮನೆಗೆ ಬಂದು ಮಾತನಾಡುತ್ತೇನೆ, ಯಾವಾಗ
ವಿರಾಮ ಹೇಳು' ಎಂದ. 'ಮಧ್ಯಾಹ್ನ ಒಂದರ ವೇಳೆಗೆ ಊಟಕ್ಕೆ ಹೋಗುತ್ತೇನೆ,
ಆ ವೇಳೆಗೆ ನೀನೂ ಬಾ, ಜತೆಯಲ್ಲಿ ಊಟ ಮಾಡು. ಆಗ ಏನು ಬೇಕಾದರೂ
ಮಾತನಾಡು. ನಿನ್ನ ಆರ್ಕಿಟೆಕ್ಟ್ ಮಗಳಿಗೆ ವಿರಾಮವಿದ್ದರೆ ಅವಳನ್ನೂ ಕರೆದು
ಕೊಂಡು ಬಾ ತುಂಬಾ ಚೂಟಿ ಹುಡುಗಿ, ಅವಳ ಹತ್ತಿರ ಮಾತನಾಡಿದರೆ
ಹಾಯ್ ಎನಿಸುತ್ತೆ' ಎಂದೆ.
'ಅವಳ ವಿಷಯವನ್ನು ಮಾತನಾಡುವುದಕ್ಕೆ ಬರೋದು, ಆದ್ದರಿಂದ
ನಾನೊಬ್ಬನೇ ಬರೀನಿ. ಆಮೇಲೆ ನೀನು ಅವಳನ್ನು ನೋಡಬೇಕಾಗುತ್ತೆಯೇನೋ'
ಎಂದ ಸಮೀಯುಲ್ಲಾ. ಸಾಮಾನ್ಯವಾಗಿ ಗಹಗಹಿಸುತ್ತಿದ್ದ ಅವ ಈಗ
ಖಿನ್ನನಾದಂತಿತ್ತು. ಯಾವುದೋ ಆತಂಕದಿಂದ ನರಳುತ್ತಿದ್ದಂತಿತ್ತು. ಏನಾಗಿದೆಯೋ
ಪಾಪ, ಎಂದಂದುಕೊಂಡೆ ಅವ ಹೊರಟು ಹೋಗುವಾಗ,
ಊಟಕ್ಕೆ ಕುಳಿತಾಗ ಹೇಳಿದ : 'ಏನು ಮಾಡಬೇಕೋ ಒಂದೂ
ತಿಳಿಯುವುದಿಲ್ಲ. ನಿನ್ನ ಸಲಹೆ ಕೇಳಿ ನಂತರ ನಿರ್ಧರಿಸೋಣ ಅಂತ ಬಂದೆ,
ಊಟ ಮುಗಿದ ಮೇಲೆ ಹೇಳೀನಿ. ಇಲ್ಲದೆ ಈಗ ಹೇಳಿದರೆ, ಬಡಿಸಿದ ಊಟವು
ರುಚಿ ಬರದೇ ಇರಬಹುದು,' ಎಂದು. 'ಅಂತದೇನೂ ಆಗುಲ್ಲ, ಊಟ
ಮಾಡುವಾಗಲೇ ಹೇಳು, ಮನಸ್ಸಿನ ಭಾರವಾದರೂ ಕಡಿಮೆಯಾಗುತ್ತೆ' ಅಂದೆ.
ಮಾತನಾಡಲಾರಂಭಿಸಿದ, ಮಧ್ಯೆಮಧ್ಯೆ ತುತ್ತು ಉಣ್ಣುತ್ತಾ :
'ನಿಲೂಫರ್ ಅನ್ನು ನೋಡಿದ್ದೆಯಲ್ಲಪ್ಪಾ ! ಇಂಜಿನಿಯರಿಂಗ್ ಕಾಲೇಜು
ಸೇರಿದ್ದಳು. ಹೆಚ್ಚು ಮಾತನಾಡದಿದ್ದರೂ, ಆಡಿದಾಗ ವಿನಯದಿಂದ ವೈನವಾಗಿ,
ನುಡಿಯುತ್ತಿದ್ದಳು. ಓದಿನಲ್ಲಿ ಯಶಸ್ವಿಯಾಗಿದ್ದಳು. ಓದಿಸುವುದು ಬೇಡ, ಮದುವೆ
ಮಾಡಿಬಿಡೋಣ ಅಂತ ಅವಳಮ್ಮ ಹೇಳಿದರೂ ನಾನು ಕೇಳಲಿಲ್ಲ. ಕಾಲೇಜಿಗೆ
ಸೇರಿಸಿದೆ. ನನಗೆ ವರ್ಗವಾದಾಗ ನಿಲೂಫರನ್ನು ನಮ್ಮವರೇ ನಡೆಸುತ್ತಿರುವ
ಉತ್ತಮ ಮಟ್ಟದ ಹಾಸ್ಟೆಲಿನಲ್ಲಿ ಸೇರಿಸಿದೆ. ಆಗಲೂ ನನ್ನ ಹೆಂಡತಿ, ಬೆಳೆದ<noinclude></noinclude>
r1zbk5nidpd5go834s4fzpbpi38tqa9
316701
316673
2026-05-04T07:13:03Z
Shreelatha.Halemane
7642
/* Validated */
316701
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೨೩೮}}{{Right|ಮನಮಂಥನ}}
ಆಯಿತು. ಕೆಲಸದ ನೆಪದಿಂದಾಗಿ ಅವನನ್ನು ಪುನಃ ಭೇಟಿಯಾಗಿರಲಿಲ್ಲ. ಮುಂದಿನ
ಭಾನುವಾರ ಅಂತ ಮುಂದಕ್ಕೆ ಹಾಕುತ್ತ ಬಂದಿದ್ದೆ. ಆದರೆ ಎರಡೇ ತಿಂಗಳುಗಳಲ್ಲಿ
ವರ್ಗವಾಗಿತ್ತು.
{{gap}}ತಿರುಗಿ ಸಮೀಯುಲ್ಲಾನ ಕಂಡಿದ್ದು, ಅವನೇ ನನ್ನ ದವಾಖಾನೆಗೆ ಬಂದಾಗ:
ಎರಡು ವರ್ಷಗಳಾದ ಮೇಲೆ, 'ಯಾವಾಗ ಬಂದೆ? ಇಲ್ಲಿಗೆ ಪುನಃ
ವರ್ಗವಾಗಿದೆಯೆ ? ಏನು ಸಮಾಚಾರ?' ಎಂದು ವಿಚಾರಿಸಿದೆ. 'ನಿನ್ನ ಹತ್ತಿರ
ಮಾತನಾಡುವುದು ತುಂಬಾ ಇದೆ. ಮನೆಗೆ ಬಂದು ಮಾತನಾಡುತ್ತೇನೆ, ಯಾವಾಗ
ವಿರಾಮ ಹೇಳು' ಎಂದ. 'ಮಧ್ಯಾಹ್ನ ಒಂದರ ವೇಳೆಗೆ ಊಟಕ್ಕೆ ಹೋಗುತ್ತೇನೆ,
ಆ ವೇಳೆಗೆ ನೀನೂ ಬಾ, ಜತೆಯಲ್ಲಿ ಊಟ ಮಾಡು. ಆಗ ಏನು ಬೇಕಾದರೂ
ಮಾತನಾಡು. ನಿನ್ನ ಆರ್ಕಿಟೆಕ್ಟ್ ಮಗಳಿಗೆ ವಿರಾಮವಿದ್ದರೆ ಅವಳನ್ನೂ ಕರೆದು
ಕೊಂಡು ಬಾ ತುಂಬಾ ಚೂಟಿ ಹುಡುಗಿ, ಅವಳ ಹತ್ತಿರ ಮಾತನಾಡಿದರೆ
ಹಾಯ್ ಎನಿಸುತ್ತೆ' ಎಂದೆ.
{{gap}}'ಅವಳ ವಿಷಯವನ್ನು ಮಾತನಾಡುವುದಕ್ಕೆ ಬರೋದು, ಆದ್ದರಿಂದ
ನಾನೊಬ್ಬನೇ ಬರೀನಿ. ಆಮೇಲೆ ನೀನು ಅವಳನ್ನು ನೋಡಬೇಕಾಗುತ್ತೆಯೇನೋ'
ಎಂದ ಸಮೀಯುಲ್ಲಾ. ಸಾಮಾನ್ಯವಾಗಿ ಗಹಗಹಿಸುತ್ತಿದ್ದ ಅವ ಈಗ
ಖಿನ್ನನಾದಂತಿತ್ತು. ಯಾವುದೋ ಆತಂಕದಿಂದ ನರಳುತ್ತಿದ್ದಂತಿತ್ತು. ಏನಾಗಿದೆಯೋ
ಪಾಪ, ಎಂದಂದುಕೊಂಡೆ ಅವ ಹೊರಟು ಹೋಗುವಾಗ,
{{gap}}ಊಟಕ್ಕೆ ಕುಳಿತಾಗ ಹೇಳಿದ : 'ಏನು ಮಾಡಬೇಕೋ ಒಂದೂ
ತಿಳಿಯುವುದಿಲ್ಲ. ನಿನ್ನ ಸಲಹೆ ಕೇಳಿ ನಂತರ ನಿರ್ಧರಿಸೋಣ ಅಂತ ಬಂದೆ,
ಊಟ ಮುಗಿದ ಮೇಲೆ ಹೇಳೀನಿ. ಇಲ್ಲದೆ ಈಗ ಹೇಳಿದರೆ, ಬಡಿಸಿದ ಊಟವು
ರುಚಿ ಬರದೇ ಇರಬಹುದು,' ಎಂದು. 'ಅಂತದೇನೂ ಆಗುಲ್ಲ, ಊಟ
ಮಾಡುವಾಗಲೇ ಹೇಳು, ಮನಸ್ಸಿನ ಭಾರವಾದರೂ ಕಡಿಮೆಯಾಗುತ್ತೆ' ಅಂದೆ.
ಮಾತನಾಡಲಾರಂಭಿಸಿದ, ಮಧ್ಯೆಮಧ್ಯೆ ತುತ್ತು ಉಣ್ಣುತ್ತಾ :
{{gap}}'ನಿಲೂಫರ್ ಅನ್ನು ನೋಡಿದ್ದೆಯಲ್ಲಪ್ಪಾ ! ಇಂಜಿನಿಯರಿಂಗ್ ಕಾಲೇಜು
ಸೇರಿದ್ದಳು. ಹೆಚ್ಚು ಮಾತನಾಡದಿದ್ದರೂ, ಆಡಿದಾಗ ವಿನಯದಿಂದ ವೈನವಾಗಿ,
ನುಡಿಯುತ್ತಿದ್ದಳು. ಓದಿನಲ್ಲಿ ಯಶಸ್ವಿಯಾಗಿದ್ದಳು. ಓದಿಸುವುದು ಬೇಡ, ಮದುವೆ
ಮಾಡಿಬಿಡೋಣ ಅಂತ ಅವಳಮ್ಮ ಹೇಳಿದರೂ ನಾನು ಕೇಳಲಿಲ್ಲ. ಕಾಲೇಜಿಗೆ
ಸೇರಿಸಿದೆ. ನನಗೆ ವರ್ಗವಾದಾಗ ನಿಲೂಫರನ್ನು ನಮ್ಮವರೇ ನಡೆಸುತ್ತಿರುವ
ಉತ್ತಮ ಮಟ್ಟದ ಹಾಸ್ಟೆಲಿನಲ್ಲಿ ಸೇರಿಸಿದೆ. ಆಗಲೂ ನನ್ನ ಹೆಂಡತಿ, ಬೆಳೆದ<noinclude></noinclude>
m8a37uzsgi5j106wz4x9vg50a8n8j5u
ಪುಟ:ಮನಮಂಥನ.pdf/೨೫೮
104
62705
316674
314409
2026-05-04T06:38:40Z
Shreesha Sharma
7840
/* Proofread */
316674
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಸ್ಕಿಜೋಫೊನಿಯಾಗಳು}}{{Right|೨೩೯}}
ಹುಡುಗಿಯನ್ನ ಎಲ್ಲೆಲ್ಲೋ ಬಿಟ್ಟು ಓದಿಸುವುದು ಸರಿಯಲ್ಲ, ಓದಿ ಏನು ಉದ್ಧಾರ
ಆಗಬೇಕು. ನಮ್ಮೊಂದಿಗೆ ಕರೆದುಕೊಂಡು ಹೋಗೋಣ. ಓದಿದ್ದು ಸಾಕು'
ಎಂದು ಬಹಳ ಹೇಳಿದಳು. ನಾನೊಪ್ಪಲಿಲ್ಲ. 'ಹೀಗೆ ಏರ್ಪಾಡು ಮಾಡಿದ್ದೀನಿ,
ನಿನ್ನ ಮುಂದಿನ ವ್ಯಾಸಂಗಕ್ಕೆ, ಇಷ್ಟವಿಲ್ಲದಿದ್ದರೆ ಹೇಳು, ಓದು ಸಾಕು ಎನಿಸಿದರೆ
ನಮ್ಮೊಡನೆ ಬಂದುಬಿಡು. ಒಂದು ವರ್ಷದ ಓದು ಹಾಳಾಯಿತು ಅಂತ ಏನೂ
ಅಂದುಕೊಳ್ಳಬೇಡ' ಎಂದು ಅವಳಿಗೆ ಹೇಳಿದೆ. ನೀವು ಹೇಳಿದಂತೆ ಆಗಲಿ
ಎಂದಳೇ ವಿನಃ, ನನ್ನಿಷ್ಟ ಹೀಗೆ, ನನ್ನ ಕಷ್ಟ ಹಾಗೆ ಎಂದೇನನ್ನೂ ಹೇಳಲಿಲ್ಲ.
ಹಾಸ್ಟಲಲ್ಲಿ ಬಿಟ್ಟು ಹೋದೆ. ಹಾಸ್ಟೆಲ್ ವಾರ್ಡ್ನ್ನಿಂದ ಮೂರು ತಿಂಗಳಾದ
ಮೇಲೆ ಕಾಗದ ಬಂತು.' 'ಒಂದು ವಾರದಿಂದ ನಿಲೂಫರ್ ಕಾಲೇಜಿಗೆ ಹೋಗುತ್ತಿಲ್ಲ.
ಡಾಕ್ಟರ್ ಅನ್ನು ಕರೆಸಲೇ, ಮೈ ಜಡ್ಡಾಗಿದೆಯೇ ಅಂದರೆ, ಏನೂ ಬೇಡ,
ಒಂದೂ ಇಲ್ಲ ಎಂದು ಸಿಡುಕುತ್ತಾಳೆ. ಊಟವನ್ನು ಸರಿಯಾಗಿ ಮಾಡುತ್ತಿಲ್ಲ.
ನೀವು ಬಂದು ಕರೆದುಕೊಂಡು ಹೋಗಿ, ಸರಿಯಾದ ಶುಶೂಷೆಯನ್ನು
ಮಾಡುವುದಕ್ಕೆ ನಮಗೆ ಸಾಧ್ಯವಿಲ್ಲ. ನಲವತ್ತು ಜನ ಹುಡುಗಿಯರಿದ್ದಾರೆ.
ನಾನೊಬ್ಬಳೇ ನೋಡಿಕೊಳ್ಳಬೇಕು' ಎಂದು ಬರೆದಿದ್ದಳು.
ನಮಗೆಲ್ಲಾ ಗಾಬರಿಯಾಯಿತು. ನಿಂತಕಾಲಲ್ಲೇ ಇಲ್ಲಿಗೆ ಬಂದು ಹಾಸ್ಟೆಲಿಗೆ
ಹೋದೆ. ನನ್ನನ್ನು ಕಂಡಾಗ 'ದಾದಾ ಚೆನ್ನಾಗಿದಿಯಾ? ಯಾವಾಗ ಬಂದೆ.'
ಎಂದು ಕೇಳಲಿಲ್ಲ, ಸುಮ್ಮನೆ ನನ್ನ ಮುಖವನ್ನು ನೋಡುತ್ತಿದ್ದಳು. 'ಚೆನ್ನಾಗಿದೀಯಾ?
ಕಾಲೇಜಿಗೆ ಹೋಗಲಿಲ್ಲವಂತೆ, ಏನು ಕಾಯಿಲೆಯಾಗಿದೆ ; ಅಥವಾ ಕಾಲೇಜಿನಲ್ಲಿ
ಯಾರಾದರೂ ಕೀಟಲೆ ಮಾಡಿದರೇ?' ಎಂದು ಕೇಳಿದೆ. ಬೆಪ್ಪು ಬಡಿದಂತಿದ್ದ
ಅವಳ ಮುಖವನ್ನು ನೋಡಿ ನನಗೆ ಗಾಬರಿಯಾಗಿತ್ತು. ದೆವ್ವಭೂತವನ್ನು ಕಂಡು
ಹೆದರಿದವರಂತಿದ್ದಳು. ಯಾವ ಉತ್ತರವನ್ನೂ ಕೊಡಲಿಲ್ಲ. ಅವಳನ್ನು ಮನೆಗೆ
ಕರೆದುಕೊಂಡು ಹೋದೆ. ತೌರಿಗೆ ಬಂದ ಮೇಲೆ ಕೂಡ ಗೆಲುವಾಗಲಿಲ್ಲ.
“ಯಾವುದೋ ಭೂತ ಹಿಡಿದುಕೊಂಡಿದೆ. ಎಲ್ಲೆಲ್ಲೋ ಹಸಿ ಮೈಯ್ಯನ
ಹುಡುಗಿಯನ್ನು ಬಿಟ್ಟು ಬಂದರೆ ಇನ್ನೇನಾಗುತ್ತೆ' ಅಂತ ನನ್ನ ಹೆಂಡತಿ ರೇಗಿದಳು.
ಭೂತ ಬಿಡಿಸುವುದಕ್ಕೆ ಮೌಲ್ವಿಯನ್ನು ಕರೆಸಿ ಏರ್ಪಾಡು ಮಾಡಿದಳು. ಭೂತ
ಬಿಡಿಸುವ ಕ್ರಮವನ್ನು ಯಾರು ನೋಡಿದರೂ ಹೆದರಬೇಕು, ಆದರೆ ನಿಲೂಫರ್
ಉದಾಸೀನಳಾಗಿಯೇ ಇದ್ದಳು. ಬೇವಿನಸೊಪ್ಪಿನ ಬರಲಿಂದ ಬಾರಿಸಿದಾಗಲೂ
ಸ್ವಲ್ಪಹೊತ್ತು ಸುಮ್ಮಗಿದ್ದಳು. ನಂತರ ರೇಗಾಡಿದಳು, ಯಾವುದಕ್ಕೂ ಭಯ
ಬಿದ್ದಂತೆ ಕಾಣಿಸಲಿಲ್ಲ. ಆಮೇಲೆ ಒಂದೆರಡು ವಾರ ಎಲ್ಲರೊಂದಿಗೂ ಒಂದೆರಡು<noinclude></noinclude>
e38poka932gemb9o43qfcb91v549v4a
316702
316674
2026-05-04T07:14:52Z
Shreelatha.Halemane
7642
/* Validated */
316702
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಸ್ಕಿಜೋಫ್ರೆನಿಯಾಗಳು}}{{Right|೨೩೯}}
ಹುಡುಗಿಯನ್ನ ಎಲ್ಲೆಲ್ಲೋ ಬಿಟ್ಟು ಓದಿಸುವುದು ಸರಿಯಲ್ಲ, ಓದಿ ಏನು ಉದ್ಧಾರ
ಆಗಬೇಕು. ನಮ್ಮೊಂದಿಗೆ ಕರೆದುಕೊಂಡು ಹೋಗೋಣ. ಓದಿದ್ದು ಸಾಕು'
ಎಂದು ಬಹಳ ಹೇಳಿದಳು. ನಾನೊಪ್ಪಲಿಲ್ಲ. 'ಹೀಗೆ ಏರ್ಪಾಡು ಮಾಡಿದ್ದೀನಿ,
ನಿನ್ನ ಮುಂದಿನ ವ್ಯಾಸಂಗಕ್ಕೆ, ಇಷ್ಟವಿಲ್ಲದಿದ್ದರೆ ಹೇಳು, ಓದು ಸಾಕು ಎನಿಸಿದರೆ
ನಮ್ಮೊಡನೆ ಬಂದುಬಿಡು. ಒಂದು ವರ್ಷದ ಓದು ಹಾಳಾಯಿತು ಅಂತ ಏನೂ
ಅಂದುಕೊಳ್ಳಬೇಡ' ಎಂದು ಅವಳಿಗೆ ಹೇಳಿದೆ. ನೀವು ಹೇಳಿದಂತೆ ಆಗಲಿ
ಎಂದಳೇ ವಿನಃ, ನನ್ನಿಷ್ಟ ಹೀಗೆ, ನನ್ನ ಕಷ್ಟ ಹಾಗೆ ಎಂದೇನನ್ನೂ ಹೇಳಲಿಲ್ಲ.
ಹಾಸ್ಟಲಲ್ಲಿ ಬಿಟ್ಟು ಹೋದೆ. ಹಾಸ್ಟೆಲ್ ವಾರ್ಡ್ನ್ನಿಂದ ಮೂರು ತಿಂಗಳಾದ
ಮೇಲೆ ಕಾಗದ ಬಂತು.' 'ಒಂದು ವಾರದಿಂದ ನಿಲೂಫರ್ ಕಾಲೇಜಿಗೆ ಹೋಗುತ್ತಿಲ್ಲ.
ಡಾಕ್ಟರ್ ಅನ್ನು ಕರೆಸಲೇ, ಮೈ ಜಡ್ಡಾಗಿದೆಯೇ ಅಂದರೆ, ಏನೂ ಬೇಡ,
ಒಂದೂ ಇಲ್ಲ ಎಂದು ಸಿಡುಕುತ್ತಾಳೆ. ಊಟವನ್ನು ಸರಿಯಾಗಿ ಮಾಡುತ್ತಿಲ್ಲ.
ನೀವು ಬಂದು ಕರೆದುಕೊಂಡು ಹೋಗಿ, ಸರಿಯಾದ ಶುಶೂಷೆಯನ್ನು
ಮಾಡುವುದಕ್ಕೆ ನಮಗೆ ಸಾಧ್ಯವಿಲ್ಲ. ನಲವತ್ತು ಜನ ಹುಡುಗಿಯರಿದ್ದಾರೆ.
ನಾನೊಬ್ಬಳೇ ನೋಡಿಕೊಳ್ಳಬೇಕು' ಎಂದು ಬರೆದಿದ್ದಳು.
{{gap}}ನಮಗೆಲ್ಲಾ ಗಾಬರಿಯಾಯಿತು. ನಿಂತಕಾಲಲ್ಲೇ ಇಲ್ಲಿಗೆ ಬಂದು ಹಾಸ್ಟೆಲಿಗೆ
ಹೋದೆ. ನನ್ನನ್ನು ಕಂಡಾಗ 'ದಾದಾ ಚೆನ್ನಾಗಿದಿಯಾ? ಯಾವಾಗ ಬಂದೆ.'
ಎಂದು ಕೇಳಲಿಲ್ಲ, ಸುಮ್ಮನೆ ನನ್ನ ಮುಖವನ್ನು ನೋಡುತ್ತಿದ್ದಳು. 'ಚೆನ್ನಾಗಿದೀಯಾ?
ಕಾಲೇಜಿಗೆ ಹೋಗಲಿಲ್ಲವಂತೆ, ಏನು ಕಾಯಿಲೆಯಾಗಿದೆ ; ಅಥವಾ ಕಾಲೇಜಿನಲ್ಲಿ
ಯಾರಾದರೂ ಕೀಟಲೆ ಮಾಡಿದರೇ?' ಎಂದು ಕೇಳಿದೆ. ಬೆಪ್ಪು ಬಡಿದಂತಿದ್ದ
ಅವಳ ಮುಖವನ್ನು ನೋಡಿ ನನಗೆ ಗಾಬರಿಯಾಗಿತ್ತು. ದೆವ್ವಭೂತವನ್ನು ಕಂಡು
ಹೆದರಿದವರಂತಿದ್ದಳು. ಯಾವ ಉತ್ತರವನ್ನೂ ಕೊಡಲಿಲ್ಲ. ಅವಳನ್ನು ಮನೆಗೆ
ಕರೆದುಕೊಂಡು ಹೋದೆ. ತೌರಿಗೆ ಬಂದ ಮೇಲೆ ಕೂಡ ಗೆಲುವಾಗಲಿಲ್ಲ.
“ಯಾವುದೋ ಭೂತ ಹಿಡಿದುಕೊಂಡಿದೆ. ಎಲ್ಲೆಲ್ಲೋ ಹಸಿ ಮೈಯ್ಯನ
ಹುಡುಗಿಯನ್ನು ಬಿಟ್ಟು ಬಂದರೆ ಇನ್ನೇನಾಗುತ್ತೆ' ಅಂತ ನನ್ನ ಹೆಂಡತಿ ರೇಗಿದಳು.
ಭೂತ ಬಿಡಿಸುವುದಕ್ಕೆ ಮೌಲ್ವಿಯನ್ನು ಕರೆಸಿ ಏರ್ಪಾಡು ಮಾಡಿದಳು. ಭೂತ
ಬಿಡಿಸುವ ಕ್ರಮವನ್ನು ಯಾರು ನೋಡಿದರೂ ಹೆದರಬೇಕು, ಆದರೆ ನಿಲೂಫರ್
ಉದಾಸೀನಳಾಗಿಯೇ ಇದ್ದಳು. ಬೇವಿನಸೊಪ್ಪಿನ ಬರಲಿಂದ ಬಾರಿಸಿದಾಗಲೂ
ಸ್ವಲ್ಪಹೊತ್ತು ಸುಮ್ಮಗಿದ್ದಳು. ನಂತರ ರೇಗಾಡಿದಳು, ಯಾವುದಕ್ಕೂ ಭಯ
ಬಿದ್ದಂತೆ ಕಾಣಿಸಲಿಲ್ಲ. ಆಮೇಲೆ ಒಂದೆರಡು ವಾರ ಎಲ್ಲರೊಂದಿಗೂ ಒಂದೆರಡು<noinclude></noinclude>
fu2v0ocxlziei81zkgoq66rl7wks23f
ಪುಟ:ಮನಮಂಥನ.pdf/೨೫೯
104
62706
316675
314414
2026-05-04T06:39:24Z
Shreesha Sharma
7840
/* Proofread */
316675
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೨೪೦}}{{Right|ಮನಮಂಥನ}}
ಮಾತುಗಳನ್ನಾಡುತ್ತಿದ್ದಳು. ಅಷ್ಟೇ ವಿನಹಾ ಸದರವನ್ನಾಗಲೀ ವಿಶ್ವಾಸವನ್ನಾಗಲೀ
ತೋರಿಸುತ್ತಿರಲಿಲ್ಲ. 'ಕಾಲೇಜಿನಲ್ಲಿ ಯಾವ ಪಾಠ ಕಲಿಸಿದರು ? ಮನಸ್ಸಿಗೆ
ಸುಲಭವಾಗಿ ಹಿಡಿಸುವಂತೆ ಕಲಿಸಿದರೆ' ಎಂದು ಮೇಲೆ ಮೇಲೆ ಕೇಳಿದೆ.
ಒಂದೊಂದು ಸರ್ತಿ ಗೆಲುವಾಗಿ ಉತ್ತರಿಸುತ್ತಿದ್ದಳು. ಗಣಿತ ಕಲಿಸುತ್ತಿದ್ದವರು
ಬಲು ಸ್ವಾರಸ್ಯವಾಗಿ ಪಾಠ ಕಲಿಸುತ್ತಿದ್ದರು ಎಂದೊಮ್ಮೆ ಅಂದಳು. ಒತ್ತಾಯ
ಮಾಡಿ ಕೇಳಿದಾಗ ಸಿಡುಕುತ್ತಾ ಎದ್ದು ಹೋಗಿ ಬಿಡುತ್ತಿದ್ದಳು. ಇಂತಹ ವಯಸ್ಸಿನಲ್ಲಿ
ಈ ರೀತಿಯ ಬೇನೆಗಳಿಗೆ, ಮದುವೆಯೇ ಶಾಶ್ವತವಾದ ಮದ್ದು ಎಂದು ನನ್ನ
ಹೆಂಡತಿ ನಂಬಿದ್ದಾಳೆ. ಮಗಳಿಗೆ ಮದುವೆ ಮಾಡಿ ಎಂದು ಹಟ ಹಿಡಿದಿದ್ದಾಳೆ.
ಅವಳ ಈಗಿನ ಸ್ಥಿತಿಯಲ್ಲಿ ಮದುವೆ ಮಾಡುವುದು ಸರಿಯೇ, ಅಥವಾ
ಅವಳ ಮನಃಸ್ಥಿತಿ ಸರಿಹೋದ ಮೇಲೆ, ಅವಳ ಅಭಿಪ್ರಾಯವನ್ನು ಕೇಳಿ ಮದುವೆ
ಮಾಡುವುದೋ ಅಥವಾ ಪುನಃ ಓದನ್ನು ಮುಂದುವರೆಸುವುದೋ ಎನ್ನುವುದನ್ನು
ನಿರ್ಧರಿಸಬೇಕೇ ? ಒಂದೂ ತೋಚುಲ್ಲಪ್ಪ ನನಗೆ ಕಳೆದ ಎರಡು ವರ್ಷಗಳಿಂದ
ಮನೆಯಲ್ಲಿ ಬಿದ್ದಿರುತ್ತಾಳೆ. ಯಾರ ಜತೆಯೂ ಸೇರುವುದಿಲ್ಲ. ಯಾರಾದರೂ
ತಿಳಿದವರು ಬಂದರೆ, ಅವರೆದುರಿಗೆ ಸ್ವಲ್ಪ ಹೊತ್ತು ಕೂತಿರುತ್ತಾಳೆ. ಒಂದೆರಡು
ಮಾತೂ ಆಡುತ್ತಾಳೆ. ಅವರು ಆ ಕಡೆ ಹೋದರೆ, ಅಮ್ಮನ ಮೇಲೋ, ತಂಗಿಯ
ಮೇಲೋ ಸಿಕ್ಕಾಪಟ್ಟೆ ಸಿಡುಕಿ, ಅನ್ನಬಾರದ್ದನ್ನೆಲ್ಲಾ ಅನ್ನುತ್ತಾಳೆ. ಇವಳಿಗೇನು
ಹುಚ್ಚೇ ಹಿಡಿದಿದೆಯೋ ಅನಿಸುತ್ತೆ ಆಗ. ಮಿಕ್ಕಂತೆ ಸರಿಯಾಗಿರುತ್ತಾಳೆ. ಆದರೆ
ನನಗನ್ನಿಸುತ್ತಪ್ಪ ; ಯಾರ ಮೇಲೂ ಅವಳಿಗೆ ಪ್ರೀತಿ ಇದ್ದಂತಿಲ್ಲ. ಯಾರನ್ನು
ಕಂಡರೂ, ಯಾವುದನ್ನು ಕಂಡರೂ ಅಸಾಧ್ಯ ಉದಾಸೀನ, ಏನಾದರೂ
ಮಾತನಾಡಿದರೆ, ನಾವು ಹೇಳಿದುದರ ಮೇಲೆ ಅವಳ ಗಮನವು ಕ್ಷಣ ಮಾತ್ರವೂ
ಇರುವುದಿಲ್ಲ ಅನಿಸುತ್ತೆ. ಯಾತರಮೇಲೂ ಅವಳ ಗಮನವು ಸ್ವಲ್ಪಕಾಲ
ನಿಲ್ಲುವುದಿಲ್ಲವೇನೋ, ಯಾವುದರಲ್ಲಿಯೂ ಆಸಕ್ತಿಯೇ ಇಲ್ಲವೇನೋ ಅನಿಸುತ್ತೆ.
ಒಂದೊಂದು ಸರ್ತಿ ಮನೆಗೆಲಸವನ್ನು ಮಾಡುತ್ತಾ ಅಮ್ಮನಿಗೆ ನೆರವಾಗುತ್ತಾಳೆ.
ಮತ್ತೆ ಕೆಲವು ಸರ್ತಿ ಸುಸ್ತಾಗಿದೆ ನಿಲೂಫ, ಸ್ವಲ್ಪ ತರಕಾರಿ ಹೆಚ್ಚಿಡ್ತೀಯಾ
ಅಂತ ಅಮ್ಮ ಅಂದರೆ, ಕೇಳಿಸದೇ ಇದ್ದವಳಂತೆ ಏನನ್ನೂ ಓದುತ್ತಾ ಕುಳಿತೇ
ಇರುತ್ತಾಳೆ.
ನಿನ್ನ ಮಗಳಿಗೆ ಹೀಗಾಗಿದ್ದರೆ ನೀನೇನು ಮಾಡ್ತಾ ಇದ್ದಿ, ಹೇಳು. ಆದರೆ
ಒಂದು ವಿಷಯವನ್ನು ಗಣನೆಗೆ ತೆಗೆದುಕೊಂಡು ಸಲಹೆ ಕೊಡು. ನಿಮ್ಮಲ್ಲಿ
ಮದುವೆಯಾದರೆ, ಅದು ಶಾಶ್ವತವಾದ ಬಂಧನವಾಗುತ್ತೆ. ಆದರೆ ನಮ್ಮಲ್ಲಿ<noinclude></noinclude>
91wnhdbc4bm1s981s2gc2oa3eh91xok
316703
316675
2026-05-04T07:15:20Z
Shreelatha.Halemane
7642
/* Validated */
316703
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೨೪೦}}{{Right|ಮನಮಂಥನ}}
ಮಾತುಗಳನ್ನಾಡುತ್ತಿದ್ದಳು. ಅಷ್ಟೇ ವಿನಹಾ ಸದರವನ್ನಾಗಲೀ ವಿಶ್ವಾಸವನ್ನಾಗಲೀ
ತೋರಿಸುತ್ತಿರಲಿಲ್ಲ. 'ಕಾಲೇಜಿನಲ್ಲಿ ಯಾವ ಪಾಠ ಕಲಿಸಿದರು ? ಮನಸ್ಸಿಗೆ
ಸುಲಭವಾಗಿ ಹಿಡಿಸುವಂತೆ ಕಲಿಸಿದರೆ' ಎಂದು ಮೇಲೆ ಮೇಲೆ ಕೇಳಿದೆ.
ಒಂದೊಂದು ಸರ್ತಿ ಗೆಲುವಾಗಿ ಉತ್ತರಿಸುತ್ತಿದ್ದಳು. ಗಣಿತ ಕಲಿಸುತ್ತಿದ್ದವರು
ಬಲು ಸ್ವಾರಸ್ಯವಾಗಿ ಪಾಠ ಕಲಿಸುತ್ತಿದ್ದರು ಎಂದೊಮ್ಮೆ ಅಂದಳು. ಒತ್ತಾಯ
ಮಾಡಿ ಕೇಳಿದಾಗ ಸಿಡುಕುತ್ತಾ ಎದ್ದು ಹೋಗಿ ಬಿಡುತ್ತಿದ್ದಳು. ಇಂತಹ ವಯಸ್ಸಿನಲ್ಲಿ
ಈ ರೀತಿಯ ಬೇನೆಗಳಿಗೆ, ಮದುವೆಯೇ ಶಾಶ್ವತವಾದ ಮದ್ದು ಎಂದು ನನ್ನ
ಹೆಂಡತಿ ನಂಬಿದ್ದಾಳೆ. ಮಗಳಿಗೆ ಮದುವೆ ಮಾಡಿ ಎಂದು ಹಟ ಹಿಡಿದಿದ್ದಾಳೆ.
{{gap}}ಅವಳ ಈಗಿನ ಸ್ಥಿತಿಯಲ್ಲಿ ಮದುವೆ ಮಾಡುವುದು ಸರಿಯೇ, ಅಥವಾ
ಅವಳ ಮನಃಸ್ಥಿತಿ ಸರಿಹೋದ ಮೇಲೆ, ಅವಳ ಅಭಿಪ್ರಾಯವನ್ನು ಕೇಳಿ ಮದುವೆ
ಮಾಡುವುದೋ ಅಥವಾ ಪುನಃ ಓದನ್ನು ಮುಂದುವರೆಸುವುದೋ ಎನ್ನುವುದನ್ನು
ನಿರ್ಧರಿಸಬೇಕೇ ? ಒಂದೂ ತೋಚುಲ್ಲಪ್ಪ ನನಗೆ ಕಳೆದ ಎರಡು ವರ್ಷಗಳಿಂದ
ಮನೆಯಲ್ಲಿ ಬಿದ್ದಿರುತ್ತಾಳೆ. ಯಾರ ಜತೆಯೂ ಸೇರುವುದಿಲ್ಲ. ಯಾರಾದರೂ
ತಿಳಿದವರು ಬಂದರೆ, ಅವರೆದುರಿಗೆ ಸ್ವಲ್ಪ ಹೊತ್ತು ಕೂತಿರುತ್ತಾಳೆ. ಒಂದೆರಡು
ಮಾತೂ ಆಡುತ್ತಾಳೆ. ಅವರು ಆ ಕಡೆ ಹೋದರೆ, ಅಮ್ಮನ ಮೇಲೋ, ತಂಗಿಯ
ಮೇಲೋ ಸಿಕ್ಕಾಪಟ್ಟೆ ಸಿಡುಕಿ, ಅನ್ನಬಾರದ್ದನ್ನೆಲ್ಲಾ ಅನ್ನುತ್ತಾಳೆ. ಇವಳಿಗೇನು
ಹುಚ್ಚೇ ಹಿಡಿದಿದೆಯೋ ಅನಿಸುತ್ತೆ ಆಗ. ಮಿಕ್ಕಂತೆ ಸರಿಯಾಗಿರುತ್ತಾಳೆ. ಆದರೆ
ನನಗನ್ನಿಸುತ್ತಪ್ಪ ; ಯಾರ ಮೇಲೂ ಅವಳಿಗೆ ಪ್ರೀತಿ ಇದ್ದಂತಿಲ್ಲ. ಯಾರನ್ನು
ಕಂಡರೂ, ಯಾವುದನ್ನು ಕಂಡರೂ ಅಸಾಧ್ಯ ಉದಾಸೀನ, ಏನಾದರೂ
ಮಾತನಾಡಿದರೆ, ನಾವು ಹೇಳಿದುದರ ಮೇಲೆ ಅವಳ ಗಮನವು ಕ್ಷಣ ಮಾತ್ರವೂ
ಇರುವುದಿಲ್ಲ ಅನಿಸುತ್ತೆ. ಯಾತರಮೇಲೂ ಅವಳ ಗಮನವು ಸ್ವಲ್ಪಕಾಲ
ನಿಲ್ಲುವುದಿಲ್ಲವೇನೋ, ಯಾವುದರಲ್ಲಿಯೂ ಆಸಕ್ತಿಯೇ ಇಲ್ಲವೇನೋ ಅನಿಸುತ್ತೆ.
ಒಂದೊಂದು ಸರ್ತಿ ಮನೆಗೆಲಸವನ್ನು ಮಾಡುತ್ತಾ ಅಮ್ಮನಿಗೆ ನೆರವಾಗುತ್ತಾಳೆ.
ಮತ್ತೆ ಕೆಲವು ಸರ್ತಿ ಸುಸ್ತಾಗಿದೆ ನಿಲೂಫ, ಸ್ವಲ್ಪ ತರಕಾರಿ ಹೆಚ್ಚಿಡ್ತೀಯಾ
ಅಂತ ಅಮ್ಮ ಅಂದರೆ, ಕೇಳಿಸದೇ ಇದ್ದವಳಂತೆ ಏನನ್ನೂ ಓದುತ್ತಾ ಕುಳಿತೇ
ಇರುತ್ತಾಳೆ.
{{gap}}ನಿನ್ನ ಮಗಳಿಗೆ ಹೀಗಾಗಿದ್ದರೆ ನೀನೇನು ಮಾಡ್ತಾ ಇದ್ದಿ, ಹೇಳು. ಆದರೆ
ಒಂದು ವಿಷಯವನ್ನು ಗಣನೆಗೆ ತೆಗೆದುಕೊಂಡು ಸಲಹೆ ಕೊಡು. ನಿಮ್ಮಲ್ಲಿ
ಮದುವೆಯಾದರೆ, ಅದು ಶಾಶ್ವತವಾದ ಬಂಧನವಾಗುತ್ತೆ. ಆದರೆ ನಮ್ಮಲ್ಲಿ<noinclude></noinclude>
dykq1dfc12zszy0ofiu9lvao6xxu0qn
ಪುಟ:ಮನಮಂಥನ.pdf/೨೬೦
104
62707
316676
314413
2026-05-04T06:40:07Z
Shreesha Sharma
7840
/* Proofread */
316676
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಸ್ಕಿಜೋಫೊನಿಯಾಗಳು}}{{Right|೨೪೧}}
ಮದುವೆಯು ಶಾಶ್ವತವಾಗಿರಲೇ ಬೇಕಾಗಿಲ್ಲ. ಏರುಪೇರಾದರೆ ತಲಕ್
ಮಾಡಿಕೊಳ್ಳಬಹುದು. ಇದನ್ನು ನೆನಪಿನಲ್ಲಿಟ್ಟುಕೊಂಡು ನಿರ್ಧಾರವನ್ನು ಹೇಳು'
ಎಂದ ಸಮೀಯುಲ್ಲಾ.
ಹುಟ್ಟುಜಾಣತನವಿದ್ದವ, ಅಭ್ಯಾಸದಿಂದ ವಿಶ್ಲೇಷಿಸುವ ಮನಸ್ಸನ್ನು ಹರಿತ
ಮಾಡಿಕೊಂಡಿದ್ದ. ಲೋಕಾನುಭವವೂ ಇತ್ತು. ಕಂಡುದನ್ನು ಸೂಕ್ಷ್ಮವಾಗಿ
ಗ್ರಹಿಸುತ್ತಿದ್ದ, ಸ್ಕಿಜೋಫ್ರೆನಿಯಾದಿಂದ ನರಳುವವರ ಮುಖ್ಯ ಚಿಹ್ನೆಗಳಾದ
೧. ಭಾವನೆಗಳು ಇಲ್ಲದಿರುವುದು ೨. ಯೋಚನಾಸರಣಿಯಲ್ಲಿ ಕುಂದು ಕಾಣುವುದು
೩. ಗಮನವನ್ನು ಕೇಂದ್ರೀಕರಿಸಿ ಹಿಡಿದಿಡುವುದಕ್ಕೆ ಆಗದೆ ಇರುವುದು, ಇವೆಲ್ಲವನ್ನೂ
ನಿಲೂಫರ್ನಲ್ಲಿ ಗುರುತಿಸಿದ್ದ, ವಿವರಿಸಿದ್ದ. ಆದರೆ ಇವು ಆ ಬೇನೆಯ ಕುರುಹುಗಳು
ಎಂದವನಿಗೆ ತಿಳಿಯದು.
'ಮದುವೆಯನ್ನು ಈಗ ಮಾಡುವುದು ಬೇಡ, ಮನೋವೈದ್ಯರಲ್ಲಿ
ಚಿಕಿತ್ಸೆಯನ್ನು ಜರೂರಾಗಿ ಮಾಡಿಸು. ಸ್ವಾಸ್ಥ್ಯವು ಉಂಟಾದ ಮೇಳೆ,
ಮನೋವೈದ್ಯರು ಒಪ್ಪಿದಾಗ, ಮದುವೆಯ ಯೋಚನೆಯನ್ನು ಮಾಡುವಿಯಂತೆ.
ಇಂತಹ ವೈದ್ಯರ ಬಳಿಗೆ ಹೋಗು. ನಾನವರೊಡನೆ ಮಾತನಾಡುತ್ತೇನೆ. ತುಂಬಾ
ಶ್ರದ್ಧೆ ಮತ್ತು ಅನುಕಂಪದಿಂದ ಚಿಕಿತ್ಸೆಯನ್ನು ನಡೆಸುತ್ತಾರೆ' ಎಂದು ಹೇಳಿದೆ.
ಸಮೀಯುಲ್ಲಾನ ಮನಸ್ಸು ತುಸು ಹಗುರವಾಯಿತು, ನನ್ನ ಮನಸ್ಸು ತುಸು
ಭಾರವಾಯಿತು. ಗೆಳೆತನ ಎಂದರೆ ಇದೆಯೇನೋ ?
ಒಂದು ವರ್ಷ ಚಿಕಿತ್ಸೆಯನ್ನು ಮಾಡಿದ ಮೇಲೆ ನಿಲೂಫರಳು ಬಹಳಮಟ್ಟಿಗೆ
ಗುಣಹೊಂದಿದಳು. ಓದನ್ನು ಮುಂದುವರಿಸಲಿಲ್ಲ. ಮದುವೆಗೂ ಒಪ್ಪಿದಳು.
ನಿಧಾನಸ್ಥ ಗಂಡನೂ ದೊರಕಿದ. ಮದುವೆ ಆಯಿತು. ಗಂಡನ ಮನೆಯಲ್ಲಿ
ಎಲ್ಲರೊಂದಿಗೂ ಹೊಂದಿಕೊಂಡಳು, 'ಚೆಲ್ಲುಚೆಲ್ಲಾಗಿ ಮಾತನಾಡುಲ್ಲ, ನಮ್ಮ
ಸೊಸೆಯದು ತುಂಬಾ ಗಂಭೀರ ಸ್ವಭಾವ' ಎಂದು ಅತ್ತೆಯಿಂದ ಮೆಹನತ್ತು
ಪಡೆದಳು.
ಮೊದಲ ಹೆರಿಗೆಯಾಗುವ ವೇಳೆಗೆ, ನನಗೆ ಸ್ವಲ್ಪ ಕಸಿವಿಸಿಯಾಯಿತು.
ಹೆರಿಗೆಯಾದ ಸುಸ್ತಿನಿಂದ ಬೇನೆಯು ತಿರುಗಿ ಮರುಕಳಿಸುವುದೋ ಎಂದ.
ಅಲ್ಲಾನ ಕೃಪೆ, ಹಾಗಾಗಲಿಲ್ಲ. ಮಗು ಬಾಣಂತಿ ಆರೋಗ್ಯವಾಗಿದ್ದರು.<noinclude></noinclude>
1vbes7qxouam45hd2fuuhyrkgbl7luw
316704
316676
2026-05-04T07:15:55Z
Shreelatha.Halemane
7642
/* Validated */
316704
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಸ್ಕಿಜೋಫ್ರೆನಿಯಾಗಳು}}{{Right|೨೪೧}}
ಮದುವೆಯು ಶಾಶ್ವತವಾಗಿರಲೇ ಬೇಕಾಗಿಲ್ಲ. ಏರುಪೇರಾದರೆ ತಲಕ್
ಮಾಡಿಕೊಳ್ಳಬಹುದು. ಇದನ್ನು ನೆನಪಿನಲ್ಲಿಟ್ಟುಕೊಂಡು ನಿರ್ಧಾರವನ್ನು ಹೇಳು'
ಎಂದ ಸಮೀಯುಲ್ಲಾ.
{{gap}}ಹುಟ್ಟುಜಾಣತನವಿದ್ದವ, ಅಭ್ಯಾಸದಿಂದ ವಿಶ್ಲೇಷಿಸುವ ಮನಸ್ಸನ್ನು ಹರಿತ
ಮಾಡಿಕೊಂಡಿದ್ದ. ಲೋಕಾನುಭವವೂ ಇತ್ತು. ಕಂಡುದನ್ನು ಸೂಕ್ಷ್ಮವಾಗಿ
ಗ್ರಹಿಸುತ್ತಿದ್ದ, ಸ್ಕಿಜೋಫ್ರೆನಿಯಾದಿಂದ ನರಳುವವರ ಮುಖ್ಯ ಚಿಹ್ನೆಗಳಾದ
೧. ಭಾವನೆಗಳು ಇಲ್ಲದಿರುವುದು ೨. ಯೋಚನಾಸರಣಿಯಲ್ಲಿ ಕುಂದು ಕಾಣುವುದು
೩. ಗಮನವನ್ನು ಕೇಂದ್ರೀಕರಿಸಿ ಹಿಡಿದಿಡುವುದಕ್ಕೆ ಆಗದೆ ಇರುವುದು, ಇವೆಲ್ಲವನ್ನೂ
ನಿಲೂಫರ್ನಲ್ಲಿ ಗುರುತಿಸಿದ್ದ, ವಿವರಿಸಿದ್ದ. ಆದರೆ ಇವು ಆ ಬೇನೆಯ ಕುರುಹುಗಳು
ಎಂದವನಿಗೆ ತಿಳಿಯದು.
{{gap}}'ಮದುವೆಯನ್ನು ಈಗ ಮಾಡುವುದು ಬೇಡ, ಮನೋವೈದ್ಯರಲ್ಲಿ
ಚಿಕಿತ್ಸೆಯನ್ನು ಜರೂರಾಗಿ ಮಾಡಿಸು. ಸ್ವಾಸ್ಥ್ಯವು ಉಂಟಾದ ಮೇಳೆ,
ಮನೋವೈದ್ಯರು ಒಪ್ಪಿದಾಗ, ಮದುವೆಯ ಯೋಚನೆಯನ್ನು ಮಾಡುವಿಯಂತೆ.
ಇಂತಹ ವೈದ್ಯರ ಬಳಿಗೆ ಹೋಗು. ನಾನವರೊಡನೆ ಮಾತನಾಡುತ್ತೇನೆ. ತುಂಬಾ
ಶ್ರದ್ಧೆ ಮತ್ತು ಅನುಕಂಪದಿಂದ ಚಿಕಿತ್ಸೆಯನ್ನು ನಡೆಸುತ್ತಾರೆ' ಎಂದು ಹೇಳಿದೆ.
ಸಮೀಯುಲ್ಲಾನ ಮನಸ್ಸು ತುಸು ಹಗುರವಾಯಿತು, ನನ್ನ ಮನಸ್ಸು ತುಸು
ಭಾರವಾಯಿತು. ಗೆಳೆತನ ಎಂದರೆ ಇದೆಯೇನೋ ?
{{gap}}ಒಂದು ವರ್ಷ ಚಿಕಿತ್ಸೆಯನ್ನು ಮಾಡಿದ ಮೇಲೆ ನಿಲೂಫರಳು ಬಹಳಮಟ್ಟಿಗೆ
ಗುಣಹೊಂದಿದಳು. ಓದನ್ನು ಮುಂದುವರಿಸಲಿಲ್ಲ. ಮದುವೆಗೂ ಒಪ್ಪಿದಳು.
ನಿಧಾನಸ್ಥ ಗಂಡನೂ ದೊರಕಿದ. ಮದುವೆ ಆಯಿತು. ಗಂಡನ ಮನೆಯಲ್ಲಿ
ಎಲ್ಲರೊಂದಿಗೂ ಹೊಂದಿಕೊಂಡಳು, 'ಚೆಲ್ಲುಚೆಲ್ಲಾಗಿ ಮಾತನಾಡುಲ್ಲ, ನಮ್ಮ
ಸೊಸೆಯದು ತುಂಬಾ ಗಂಭೀರ ಸ್ವಭಾವ' ಎಂದು ಅತ್ತೆಯಿಂದ ಮೆಹನತ್ತು
ಪಡೆದಳು.
{{gap}}ಮೊದಲ ಹೆರಿಗೆಯಾಗುವ ವೇಳೆಗೆ, ನನಗೆ ಸ್ವಲ್ಪ ಕಸಿವಿಸಿಯಾಯಿತು.
ಹೆರಿಗೆಯಾದ ಸುಸ್ತಿನಿಂದ ಬೇನೆಯು ತಿರುಗಿ ಮರುಕಳಿಸುವುದೋ ಎಂದ.
ಅಲ್ಲಾನ ಕೃಪೆ, ಹಾಗಾಗಲಿಲ್ಲ. ಮಗು ಬಾಣಂತಿ ಆರೋಗ್ಯವಾಗಿದ್ದರು.<noinclude></noinclude>
9e91dsp1zskmv5t4yb6mowxjqnmrs8f
ಪುಟ:ಮನಮಂಥನ.pdf/೨೬೧
104
62708
316677
314412
2026-05-04T06:41:45Z
Shreesha Sharma
7840
/* Proofread */
316677
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೨೪೨}}{{Right|ಮನಮಂಥನ}}
{{center|'''೭. ಶೀನಪ್ಪನ ಅಮ್ನೀಸಿಯ'''}}
ಐದಾರು ಮಕ್ಕಳಿದ್ದ ಮನೆಯಲ್ಲಿ ಶೀನಪ್ಪ ಜನ್ಮ ತಾಳಿದ. ತುಂಬಾ ಒಳ್ಳೆಯ
ಮಗು ; ಯಾರಿಗೂ ಯಾವ ತೊಂದರೆಯನ್ನೂ ಕೊಡುವುದಿಲ್ಲ, ಎಂದು
ಅಮ್ಮ ಹೊಗಳುತ್ತಿದ್ದಳು. ಹೀಗಿದ್ದರೂ ಒಮ್ಮೊಮ್ಮೆ ರಚ್ಚೆ ಹಿಡಿದು ಅಳಲು
ಪ್ರಾರಂಭಿಸಿದರೆ ಬಡಪೆಟ್ಟಿಗೆ ಸಮಾಧಾನವನ್ನು ಹೊಂದುತ್ತಿರಲಿಲ್ಲ. ಹೆದರಿಸಿ
ಬೆದರಿಸಿದರೆ, ಹೊಡೆದರೆ ಬಡಿದರೆ ಇನ್ನೂ ಹೆಚ್ಚಾಗಿ ಮೊಂಡು ಹಿಡಿಯುತ್ತಿದ್ದ.
ಆದರೆ ಬಹಳ ವಿರಳವಾಗಿ ಅವ ಹಟ ಹಿಡಿಯುತ್ತಿದ್ದುದರಿಂದ ಯಾರಿಗೂ
ಅವನ ಮೇಲೆ ಬೇಸರ ಬಂದಿರಲಿಲ್ಲ. ಶೈಶವದಲ್ಲಿ ಹೇಳಿಕೊಳ್ಳುವಂತಹ ಯಾವ
ಬೇನೆಯೂ ಬರಲಿಲ್ಲ. ಲಕ್ಷಣವಾಗಿ ಉಂಡು ತಿಂದು ಬೆಳೆದ.
ಎಂಟು ಹತ್ತು ವರ್ಷಗಳಾದುವು. ಶಾಲೆಗೆ ಹೋಗಿ ಬರುತ್ತಿದ್ದ. ಆ
ವಯಸ್ಸಿನಲ್ಲಿ ಜತೆ ಹುಡುಗರೊಡನೆ ಗೋಲಿ ಆಡುತ್ತಾ ಜಗಳ ಕಾಯಬೇಕು.
ಮರಕೋತಿ ಆಡುಕ್ಕೆ ಹೋಗಿ ಮೈ ಕೈ ತರಚಿಕೊಂಡು ಬರಬೇಕು. ಆದರೆ
ಶೀನಪ್ಪನದು ಎಷ್ಟು ಸಂಕೋಚ ಪ್ರವೃತ್ತಿ ಅಂತ ; ಇಂತಹ ಆಟಗಳಿಗೆ ಹೋಗುತ್ತಲೇ
ಇರಲಿಲ್ಲ. ಬದಲು ಹರಿಕತೆಗಳಿಗೆ ಹೋಗಿ ಒಂದು ಮೂಲೆಯಲ್ಲಿ ಒಬ್ಬನೇ
ಕೂರುತ್ತಿದ್ದ. ಆಗಲೂ ಜತೆ ಹುಡುಗರನ್ನು ಕರೆಯುತ್ತಿರಲಿಲ್ಲ. ಓದನ್ನೇನೋ
ಸಾಂಗವಾಗಿ ಮುಂದುವರೆಸುತ್ತಿದ್ದ. ಉತ್ತಮ ಕ್ಲಾಸುಗಳನ್ನು ಪರೀಕ್ಷೆಗಳಲ್ಲಿ ಪಡೆಯದೆ
ಇದ್ದರೂ ಎಲ್ಲೂ ಯಾವಾಗಲೂ ಫೈಲ್ ಆಗಲಿಲ್ಲ. ಎಂ.ಕಾಂ. ಪ್ಯಾಸುಮಾಡಿದ
ಮೇಲೆ ದೊಡ್ಡ ಕಂಪನಿಯಲ್ಲಿ ಜವಾಬ್ದಾರಿಯುತವಾದ ಕೆಲಸವು ದೊರಕಿತು.
ಅಂದಮೇಲೆ ಮದುವೆಯೂ ಆಯಿತು : ಹೆಣ್ಣನು ನೋಡಿ ಮಾತನಾಡಿಸಿ, ನೀ
ಒಪ್ಪಿದರೆ ಮದುವೆ ಮಾಡುತ್ತೇವೆ; ಎಂದು ತಾಯ್ತಂದೆಯರೆಂದರು. ಹಿರಿಯರು
ನೀವು, ನೀವು ಸರಿ ಎಂದುದಕ್ಕೆ ನಾನು ಒಪ್ಪುತ್ತೇನೆ. ಹೆಣ್ಣನ್ನು ನಾನೇನು
ನೋಡಬೇಕಾಗಿಲ್ಲ; ಎಂದು ಶೀನಪ್ಪ ಹೇಳಿದ. ಹೆಣ್ಣನ್ನು ನೋಡದೆ ಅವ
ಮದುವೆಯಾಗಲು ಒಪ್ಪಿದ. ಅವನಿಗೆ ಲಭಿಸಿದ ಹೆಣ್ಣು ಕೂಡ ಗಂಡನ್ನು ನೋಡದೆ
ಮದುವೆಗೆ ಒಪ್ಪಿದಳು. ಮಲತಾಯಿಯಿರುವ ಮನೆಯನ್ನು ಬಿಟ್ಟರೆ ಸಾಕು ಎಂದವಳಿಗೆ
ಅನಿಸಿರಬೇಕು. ಮದುವೆಯು ಆದಮೇಲೆ ಯಥಾಪ್ರಕಾರದ ಸಂಸಾರವು<noinclude></noinclude>
qgt4ht2wyswnn7uqjxybm9pspexvxi6
316705
316677
2026-05-04T07:16:21Z
Shreelatha.Halemane
7642
/* Validated */
316705
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೨೪೨}}{{Right|ಮನಮಂಥನ}}
{{center|'''೭. ಶೀನಪ್ಪನ ಅಮ್ನೀಸಿಯ'''}}
{{gap}}ಐದಾರು ಮಕ್ಕಳಿದ್ದ ಮನೆಯಲ್ಲಿ ಶೀನಪ್ಪ ಜನ್ಮ ತಾಳಿದ. ತುಂಬಾ ಒಳ್ಳೆಯ
ಮಗು ; ಯಾರಿಗೂ ಯಾವ ತೊಂದರೆಯನ್ನೂ ಕೊಡುವುದಿಲ್ಲ, ಎಂದು
ಅಮ್ಮ ಹೊಗಳುತ್ತಿದ್ದಳು. ಹೀಗಿದ್ದರೂ ಒಮ್ಮೊಮ್ಮೆ ರಚ್ಚೆ ಹಿಡಿದು ಅಳಲು
ಪ್ರಾರಂಭಿಸಿದರೆ ಬಡಪೆಟ್ಟಿಗೆ ಸಮಾಧಾನವನ್ನು ಹೊಂದುತ್ತಿರಲಿಲ್ಲ. ಹೆದರಿಸಿ
ಬೆದರಿಸಿದರೆ, ಹೊಡೆದರೆ ಬಡಿದರೆ ಇನ್ನೂ ಹೆಚ್ಚಾಗಿ ಮೊಂಡು ಹಿಡಿಯುತ್ತಿದ್ದ.
ಆದರೆ ಬಹಳ ವಿರಳವಾಗಿ ಅವ ಹಟ ಹಿಡಿಯುತ್ತಿದ್ದುದರಿಂದ ಯಾರಿಗೂ
ಅವನ ಮೇಲೆ ಬೇಸರ ಬಂದಿರಲಿಲ್ಲ. ಶೈಶವದಲ್ಲಿ ಹೇಳಿಕೊಳ್ಳುವಂತಹ ಯಾವ
ಬೇನೆಯೂ ಬರಲಿಲ್ಲ. ಲಕ್ಷಣವಾಗಿ ಉಂಡು ತಿಂದು ಬೆಳೆದ.
{{gap}}ಎಂಟು ಹತ್ತು ವರ್ಷಗಳಾದುವು. ಶಾಲೆಗೆ ಹೋಗಿ ಬರುತ್ತಿದ್ದ. ಆ
ವಯಸ್ಸಿನಲ್ಲಿ ಜತೆ ಹುಡುಗರೊಡನೆ ಗೋಲಿ ಆಡುತ್ತಾ ಜಗಳ ಕಾಯಬೇಕು.
ಮರಕೋತಿ ಆಡುಕ್ಕೆ ಹೋಗಿ ಮೈ ಕೈ ತರಚಿಕೊಂಡು ಬರಬೇಕು. ಆದರೆ
ಶೀನಪ್ಪನದು ಎಷ್ಟು ಸಂಕೋಚ ಪ್ರವೃತ್ತಿ ಅಂತ ; ಇಂತಹ ಆಟಗಳಿಗೆ ಹೋಗುತ್ತಲೇ
ಇರಲಿಲ್ಲ. ಬದಲು ಹರಿಕತೆಗಳಿಗೆ ಹೋಗಿ ಒಂದು ಮೂಲೆಯಲ್ಲಿ ಒಬ್ಬನೇ
ಕೂರುತ್ತಿದ್ದ. ಆಗಲೂ ಜತೆ ಹುಡುಗರನ್ನು ಕರೆಯುತ್ತಿರಲಿಲ್ಲ. ಓದನ್ನೇನೋ
ಸಾಂಗವಾಗಿ ಮುಂದುವರೆಸುತ್ತಿದ್ದ. ಉತ್ತಮ ಕ್ಲಾಸುಗಳನ್ನು ಪರೀಕ್ಷೆಗಳಲ್ಲಿ ಪಡೆಯದೆ
ಇದ್ದರೂ ಎಲ್ಲೂ ಯಾವಾಗಲೂ ಫೈಲ್ ಆಗಲಿಲ್ಲ. ಎಂ.ಕಾಂ. ಪ್ಯಾಸುಮಾಡಿದ
ಮೇಲೆ ದೊಡ್ಡ ಕಂಪನಿಯಲ್ಲಿ ಜವಾಬ್ದಾರಿಯುತವಾದ ಕೆಲಸವು ದೊರಕಿತು.
ಅಂದಮೇಲೆ ಮದುವೆಯೂ ಆಯಿತು : ಹೆಣ್ಣನು ನೋಡಿ ಮಾತನಾಡಿಸಿ, ನೀ
ಒಪ್ಪಿದರೆ ಮದುವೆ ಮಾಡುತ್ತೇವೆ; ಎಂದು ತಾಯ್ತಂದೆಯರೆಂದರು. ಹಿರಿಯರು
ನೀವು, ನೀವು ಸರಿ ಎಂದುದಕ್ಕೆ ನಾನು ಒಪ್ಪುತ್ತೇನೆ. ಹೆಣ್ಣನ್ನು ನಾನೇನು
ನೋಡಬೇಕಾಗಿಲ್ಲ; ಎಂದು ಶೀನಪ್ಪ ಹೇಳಿದ. ಹೆಣ್ಣನ್ನು ನೋಡದೆ ಅವ
ಮದುವೆಯಾಗಲು ಒಪ್ಪಿದ. ಅವನಿಗೆ ಲಭಿಸಿದ ಹೆಣ್ಣು ಕೂಡ ಗಂಡನ್ನು ನೋಡದೆ
ಮದುವೆಗೆ ಒಪ್ಪಿದಳು. ಮಲತಾಯಿಯಿರುವ ಮನೆಯನ್ನು ಬಿಟ್ಟರೆ ಸಾಕು ಎಂದವಳಿಗೆ
ಅನಿಸಿರಬೇಕು. ಮದುವೆಯು ಆದಮೇಲೆ ಯಥಾಪ್ರಕಾರದ ಸಂಸಾರವು<noinclude></noinclude>
g7fpvmrhjvh5adq546aqc6q0mr2d2qk
ಪುಟ:ಮನಮಂಥನ.pdf/೨೬೨
104
62709
316678
314411
2026-05-04T06:42:40Z
Shreesha Sharma
7840
/* Proofread */
316678
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಶೀನಪ್ಪನ ಅಮ್ನೀಸಿಯ}}{{Right|೨೪೩}}
ಶುರುವಾಯಿತು. ಆರೇಳು ವರ್ಷಗಳಲ್ಲಿ ಮೂರು ಮಕ್ಕಳೂ ಆದುವು. ಪ್ರಾರಬ್ಧ
ಕರ್ಮದಿಂದ ಹೀಗಾಯಿತು ಎನ್ನಬೇಕೇ ಹೊರತು ಸುರಸ ದಾಂಪತ್ಯದಿಂದ,
ಸರಸ ಸಂಸಾರದಿಂದ; ಬಯಸಿಬಂದ ಮಕ್ಕಳು ಎಂದು ಯಾರೂ
ಹೇಳುವಂತಿರಲಿಲ್ಲ. ಆದರೆ ಗಂಡ ಹೆಂಡಿರಲ್ಲಿ ವಿರಸವಿತ್ತು ಎಂದೇ? ಛೇ !
ಪರಸ್ಪರವಾಗಿ ದನಿಯೆತ್ತಿ ಗಂಡ ಹೆಂಡಿರು ಎಂದೂ ಮಾತನಾಡಿರಲಿಲ್ಲ. ಅಂತೆಯೇ
ನಗುನಗುತ ಹತ್ತೂ ಜನರಿದ್ದರೂ, ಕಣ್ಣ ಹೊಳಪಿನ ಝಳಪದಿಂದ, ಒಬ್ಬರೊಡನೆ
ಇನ್ನೊಬ್ಬರು, ಆದರವನ್ನು ತೋರಿಸಲೂ ಇಲ್ಲ. ಉದ್ವೇಗದ ಆಕರ್ಷಣೆಯನ್ನು
ಪ್ರದರ್ಶಿಸಲೂ ಇಲ್ಲ.
ಕಚೇರಿಯ ಕೆಲಸದಲ್ಲಿ ಶೀನಪ್ಪ ಶ್ರದ್ಧೆಯನ್ನು ವಹಿಸುತ್ತಿದ್ದ. ಆದರೆ
ಸಮಸ್ಯೆಯೊಂದು ಎದುರಾದರೆ, ವಿಶ್ಲೇಷಿಸಿ, ಪರಿಹಾರ ಮಾರ್ಗವನ್ನು
ಕಂಡುಹಿಡಿಯಲು ಅಸಮರ್ಥನಾಗಿದ್ದ. ರೂಢಿಯಲ್ಲಿದ್ದ ಕೆಲಸವನ್ನು ಚಾಚೂ
ತಪ್ಪದೆ ಕುಂದಿಲ್ಲದಂತೆ ಮಾಡುತ್ತಿದ್ದನೇ ಹೊರತು, ಸ್ವಂತ ವಿವೇಚನೆಯಿಂದ
ಯಾವ ಪ್ರಗತಿಯನ್ನೂ ಸಾಧಿಸಲಿಲ್ಲ. ಇಂತಹ ಕುರಿಗಳಂತಿರುವವರಿಂದಲೇ
ಸಂಸ್ಥೆಯ ಸುಸೂತ್ರ ಕಾರ್ಯವು ಸಾಧ್ಯ ! ಸಂಸ್ಥೆಯ ಪ್ರಗತಿಗೆ, ಟಗರುಗಳಂತಿರುವ,
ಹಿಂದೂ ಮುಂದೂ ನೋಡದೆ ನುಗ್ಗುವ, ಮಾಲೀಕ ವರ್ಗದವರು ಕಾರಣರು.
ಅಂತಹ ಟಗರುಗಳಿಗೆ ಇಂತಹ ಕುರಿಗಳು ಬಲು ಪ್ರಿಯ. ಹಾಗಾಗಿ ಶೀನಪ್ಪ,
ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರಿಗೆ ತುಂಬಾ ಬೇಕಾದವನಾಗಿದ್ದ ; ಅವರ
ಮೆಚ್ಚುಗೆಯನ್ನೂ ಪಡೆದಿದ್ದ.
ಸೋಮವಾರ ಎಂದಿನಂತೆ ಬೆಳಿಗ್ಗೆ ಕಚೇರಿಗೆ ಹೋದ. ಹನ್ನೊಂದು
ಗಂಟೆಯ ಹೊತ್ತಿಗೆ ಮೇಜಿನ ಮೇಲೆ ಎಂಟು ಹತ್ತು ಮುಖ್ಯವಾದ
ಕಾಗದಪತ್ರಗಳಿದ್ದುವು. ಪಕ್ಕದಲ್ಲಿ ಬೀಗದಕೈಗಳ ಗೊಂಚಲೂ ಇತ್ತು. ಇದ್ದುದನ್ನೆಲ್ಲ
ಹಾಗೆಯೇ ಬಿಟ್ಟು ಶೀನಪ್ಪ ಎದ್ದುಹೋದ. ಬಾತ್ರೂಮಿಗೆ ಹೋಗುತ್ತಿರಬಹುದು
ಎಂದುಕೊಂಡ ಪಕ್ಕದಲ್ಲಿದ್ದ ಸಹೋದ್ಯೋಗಿ. ಹನ್ನೆರಡಾಯಿತು, ಒಂದು
ಗಂಟೆಯಾಯಿತು, ಶೀನಪ್ಪ ಹಿಂತಿರುಗಿ ಬರಲಿಲ್ಲ. ನೆರೆಯ ಅಧಿಕಾರಿ, ಈ
ಸುದ್ದಿಯನ್ನು ಹಿರಿಯ ಅಧಿಕಾರಿಗೆ ಮುಟ್ಟಿಸಿದ. ಅವರು ಬಂದು ತನಿಖೆ ಮಾಡಿದರು.
ಸಧ್ಯ ! ಹಣಕಾಸು ಎಲ್ಲವೂ ಸರಿಯಾಗಿತ್ತು. ಕಾಗದ ಪತ್ರಗಳೂ ಇದ್ದುವು.
ಶೀನಪ್ಪನ ಮನೆಗೆ ಆರ್ಡಲಿ್ರಯನ್ನು ಕಳಿಸಿದರು. ಊಟಕ್ಕೇನಾದರೂ ಮನೆಗೆ
ಹೋಗಿರಬಹುದೋ ಎಂದು. ಶೀನಪ್ಪ ಅಲ್ಲಿಗೆ ಹೋಗಿರಲಿಲ್ಲ ಎಂದು ತಿಳಿಯಿತು.
ಮನೆಯವರಿಗೆ ಮತ್ತು ಪೋಲೀಸಿನವರಿಗೆ, ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರು<noinclude></noinclude>
r9lihpw3sz9fnizucobalf7xeuiz2gb
316706
316678
2026-05-04T07:16:47Z
Shreelatha.Halemane
7642
/* Validated */
316706
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಶೀನಪ್ಪನ ಅಮ್ನೀಸಿಯ}}{{Right|೨೪೩}}
ಶುರುವಾಯಿತು. ಆರೇಳು ವರ್ಷಗಳಲ್ಲಿ ಮೂರು ಮಕ್ಕಳೂ ಆದುವು. ಪ್ರಾರಬ್ಧ
ಕರ್ಮದಿಂದ ಹೀಗಾಯಿತು ಎನ್ನಬೇಕೇ ಹೊರತು ಸುರಸ ದಾಂಪತ್ಯದಿಂದ,
ಸರಸ ಸಂಸಾರದಿಂದ; ಬಯಸಿಬಂದ ಮಕ್ಕಳು ಎಂದು ಯಾರೂ
ಹೇಳುವಂತಿರಲಿಲ್ಲ. ಆದರೆ ಗಂಡ ಹೆಂಡಿರಲ್ಲಿ ವಿರಸವಿತ್ತು ಎಂದೇ? ಛೇ !
ಪರಸ್ಪರವಾಗಿ ದನಿಯೆತ್ತಿ ಗಂಡ ಹೆಂಡಿರು ಎಂದೂ ಮಾತನಾಡಿರಲಿಲ್ಲ. ಅಂತೆಯೇ
ನಗುನಗುತ ಹತ್ತೂ ಜನರಿದ್ದರೂ, ಕಣ್ಣ ಹೊಳಪಿನ ಝಳಪದಿಂದ, ಒಬ್ಬರೊಡನೆ
ಇನ್ನೊಬ್ಬರು, ಆದರವನ್ನು ತೋರಿಸಲೂ ಇಲ್ಲ. ಉದ್ವೇಗದ ಆಕರ್ಷಣೆಯನ್ನು
ಪ್ರದರ್ಶಿಸಲೂ ಇಲ್ಲ.
{{gap}}ಕಚೇರಿಯ ಕೆಲಸದಲ್ಲಿ ಶೀನಪ್ಪ ಶ್ರದ್ಧೆಯನ್ನು ವಹಿಸುತ್ತಿದ್ದ. ಆದರೆ
ಸಮಸ್ಯೆಯೊಂದು ಎದುರಾದರೆ, ವಿಶ್ಲೇಷಿಸಿ, ಪರಿಹಾರ ಮಾರ್ಗವನ್ನು
ಕಂಡುಹಿಡಿಯಲು ಅಸಮರ್ಥನಾಗಿದ್ದ. ರೂಢಿಯಲ್ಲಿದ್ದ ಕೆಲಸವನ್ನು ಚಾಚೂ
ತಪ್ಪದೆ ಕುಂದಿಲ್ಲದಂತೆ ಮಾಡುತ್ತಿದ್ದನೇ ಹೊರತು, ಸ್ವಂತ ವಿವೇಚನೆಯಿಂದ
ಯಾವ ಪ್ರಗತಿಯನ್ನೂ ಸಾಧಿಸಲಿಲ್ಲ. ಇಂತಹ ಕುರಿಗಳಂತಿರುವವರಿಂದಲೇ
ಸಂಸ್ಥೆಯ ಸುಸೂತ್ರ ಕಾರ್ಯವು ಸಾಧ್ಯ ! ಸಂಸ್ಥೆಯ ಪ್ರಗತಿಗೆ, ಟಗರುಗಳಂತಿರುವ,
ಹಿಂದೂ ಮುಂದೂ ನೋಡದೆ ನುಗ್ಗುವ, ಮಾಲೀಕ ವರ್ಗದವರು ಕಾರಣರು.
ಅಂತಹ ಟಗರುಗಳಿಗೆ ಇಂತಹ ಕುರಿಗಳು ಬಲು ಪ್ರಿಯ. ಹಾಗಾಗಿ ಶೀನಪ್ಪ,
ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರಿಗೆ ತುಂಬಾ ಬೇಕಾದವನಾಗಿದ್ದ ; ಅವರ
ಮೆಚ್ಚುಗೆಯನ್ನೂ ಪಡೆದಿದ್ದ.
{{gap}}ಸೋಮವಾರ ಎಂದಿನಂತೆ ಬೆಳಿಗ್ಗೆ ಕಚೇರಿಗೆ ಹೋದ. ಹನ್ನೊಂದು
ಗಂಟೆಯ ಹೊತ್ತಿಗೆ ಮೇಜಿನ ಮೇಲೆ ಎಂಟು ಹತ್ತು ಮುಖ್ಯವಾದ
ಕಾಗದಪತ್ರಗಳಿದ್ದುವು. ಪಕ್ಕದಲ್ಲಿ ಬೀಗದಕೈಗಳ ಗೊಂಚಲೂ ಇತ್ತು. ಇದ್ದುದನ್ನೆಲ್ಲ
ಹಾಗೆಯೇ ಬಿಟ್ಟು ಶೀನಪ್ಪ ಎದ್ದುಹೋದ. ಬಾತ್ರೂಮಿಗೆ ಹೋಗುತ್ತಿರಬಹುದು
ಎಂದುಕೊಂಡ ಪಕ್ಕದಲ್ಲಿದ್ದ ಸಹೋದ್ಯೋಗಿ. ಹನ್ನೆರಡಾಯಿತು, ಒಂದು
ಗಂಟೆಯಾಯಿತು, ಶೀನಪ್ಪ ಹಿಂತಿರುಗಿ ಬರಲಿಲ್ಲ. ನೆರೆಯ ಅಧಿಕಾರಿ, ಈ
ಸುದ್ದಿಯನ್ನು ಹಿರಿಯ ಅಧಿಕಾರಿಗೆ ಮುಟ್ಟಿಸಿದ. ಅವರು ಬಂದು ತನಿಖೆ ಮಾಡಿದರು.
ಸಧ್ಯ ! ಹಣಕಾಸು ಎಲ್ಲವೂ ಸರಿಯಾಗಿತ್ತು. ಕಾಗದ ಪತ್ರಗಳೂ ಇದ್ದುವು.
ಶೀನಪ್ಪನ ಮನೆಗೆ ಆರ್ಡಲಿ್ರಯನ್ನು ಕಳಿಸಿದರು. ಊಟಕ್ಕೇನಾದರೂ ಮನೆಗೆ
ಹೋಗಿರಬಹುದೋ ಎಂದು. ಶೀನಪ್ಪ ಅಲ್ಲಿಗೆ ಹೋಗಿರಲಿಲ್ಲ ಎಂದು ತಿಳಿಯಿತು.
ಮನೆಯವರಿಗೆ ಮತ್ತು ಪೋಲೀಸಿನವರಿಗೆ, ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರು<noinclude></noinclude>
3vflh8vboihzhicfqngrrrod3jkt62p
ಪುಟ:ಮನಮಂಥನ.pdf/೨೬೩
104
62710
316679
314410
2026-05-04T06:43:20Z
Shreesha Sharma
7840
/* Proofread */
316679
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೨೪೪}}{{Right|ಮನಮಂಥನ}}
ವಿಷಯವನ್ನು ತಿಳಿಸಿದರು.
ಏನೆಲ್ಲ ಶೋಧನೆಗಳನ್ನು ಪೋಲೀಸರು ನಡೆಸಿದರು. ಶೀನಪ್ಪನ ಪತ್ತೆ
ಆಗಲೇ ಇಲ್ಲ. ನಾಲ್ಕು ತಿಂಗಳುಗಳಾದರೂ ಯಾವ ಸುಳಿವೂ ದೊರೆಯಲಿಲ್ಲ.
ಯಾವ ಯಾವ ಊರಿನಲ್ಲಿರುವ ಶೀನಪ್ಪನ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ,
ಹೀಗಾಗಿದೆ, ಇಲ್ಲಿ, ಅಕಸ್ಮಾತ್ ನಿಮ್ಮಲ್ಲಿಗೆ ಬಂದರೆ ತತ್ಕ್ಷಣ ತಿಳಿಸಿ ; ಎಂದು
ಶೀನಪ್ಪನ ತಂದೆ ಕಾಗದಗಳನ್ನು ಬರೆದು ಹಾಕಿದರು. ಜ್ಯೋತಿಷ್ಯರ ಬಳಿಗೆ
ಹೋಗಿ 'ಪ್ರಶ್ನೆ' ಕೇಳಿ ಸಮಾಧಾನವನ್ನು ತಾತ್ಕಾಲಿಕವಾಗಿಯಾದರೂ
ಪಡೆಯಲಾರಂಭಿಸಿದರು.
ಹಿಮಾಚಲ ಪ್ರದೇಶದ ಲಾಂಘೀರಿನಲ್ಲಿ ಲಕ್ಷ್ಮಣರಾಯರು ತರಕಾರಿ ಕೊಂಡು
ಬರಲು ಹೊರಟಿದ್ದರು. ಮಾರುಕಟ್ಟೆಯ ಬಳಿ ಹೋಗುತ್ತಿದ್ದಾಗ, ಎದುರು
ಕಂಡ ಅಪರಿಚಿತನನ್ನು ದಾಟಿ ಮುಂದುವರೆದಾಗ, 'ಎಲ್ಲಿಯೋ ಕಂಡ ಮುಖ'
ಎಂದನಿಸಿತು. ಯಾರು ಎಂದು ನಿಖರವಾಗಿ ನೆನಪಾಗಲಿಲ್ಲ. ಮುಂದೆ ಸಾಗಿದ್ದವರು
ಹಿಂತಿರುಗಿ ಅಪರಿಚಿತನ ಬಳಿಗೆ ಬಂದರು. ಹಿಂತಿರುಗುವಾಗ, ನಾಲ್ಕು ತಿಂಗಳ
ಹಿಂದೆ ಶೀನಪ್ಪನ ತಂದೆಯು ಬರೆದಿದ್ದ ಕಾಗದದ ನೆನಪೂ ಆಗಿತ್ತು. ಅಪರಿಚಿತನ
ಬಳಿಗೆ ಬಂದು 'ಶೀನಪ್ಪಾ' ಎಂದು ಕೂಗಿದರು. ಯಾವ ಪ್ರತಿಕ್ರಿಯೆಯನ್ನೂ
ಅಪರಿಚಿತ ವ್ಯಕ್ತಪಡಿಸಲಿಲ್ಲ. ಇನ್ನೂ ಹತ್ತಿರಕ್ಕೆ ಹೋಗಿ 'ಯಾರು ನೀವು?
ನಿಮ್ಮನ್ನೆಲ್ಲಿಯೋ ಕಂಡ ನೆನಪು, ಹಾಸನದ ಕಡೆಯವರ ಹಾಗೆ ಕಾಣಿಸುತ್ತೀರಿ.
ನಾನೂ ಅದೇ ಊರಿನವ, ಹೊಟ್ಟೆ ಪಾಡಿಗಾಗಿ ಉತ್ತರದ ಈ ಕೊಯ್
ಮೂಲೆಯಲ್ಲಿ ಇರಬೇಕಾಗಿದೆ. ನಮ್ಮ ಊರ ಕಡೆಯವರೇ ಎಂದು ಲಕ್ಷ್ಮಣರಾಯರು
ಹೇಳಿದರು. 'ಹಾಸನ? ಅಂದರೆ ಅದು ಏನು?' ಎಂದು ಅಚ್ಚ ಕನ್ನಡದಲ್ಲಿ
ಅಪರಿಚಿತ ನುಡಿದ. ಧ್ವನಿಯನ್ನು ಕೇಳಿದ ಮೇಲೆ, ಭಾವ ಮೈದುನ ಶೀನಪ್ಪನ
ಧ್ವನಿಯೇ ಇದು ಎಂದು ಖಂಡಿತವಾಯಿತು. ನಾಲ್ಕು ತಿಂಗಳ ಹಿಂದೆಯೇನೋ
ಶೀನಪ್ಪ ಇಲ್ಲಿಗೆ ಬಂದಿಲ್ಲ ಎಂದು ಊರಿಗೆ ತಂತಿಯನ್ನು ಕಳುಹಿಸಿದ್ದರು. ಇಷ್ಟು
ದಿನಗಳಾದ ಮೇಲೆ ಇಲ್ಲಿಗೆ ಹೇಗೆ ಬಂದ ಎಂದು ಕುತೂಹಲವೂ ಉಂಟಾಗಿತ್ತು.
'ಬಾಪ್ಪ, ಶೀನಪ್ಪ, ನಮ್ಮ ಮನೆಗೆ ಹೋಗೋಣ' ಎಂದು ಕರೆದರು. ಅಪರಿಚಿತನಿಗೆ
ಯಾವುದೂ ಅರ್ಥವಾದಂತೆ ಕಾಣಲಿಲ್ಲ ಆದರೂ ಯಾಂತ್ರಿಕವಾಗಿ ಲಕ್ಷ್ಮಣರಾಯರ
ಜತೆಯಲ್ಲಿ ನಡೆದ. ಮನೆಗೆ ಹೋದ ಕೂಡಲೇ, ಶೀನಪ್ಪನನ್ನು ಕಂಡು ಅಕ್ಕ ಅತ್ತು
ಅತ್ತು ಆದರರಿಂದ ಮಾತನಾಡಿಸಿದಳು. ಸ್ವಲ್ಪ ಹೊತ್ತಾದ ಮೇಲೆ ಶೀನಪ್ಪನ<noinclude></noinclude>
ntdli3rot6abjp2naf69rcuwhpqmbdj
316707
316679
2026-05-04T07:17:08Z
Shreelatha.Halemane
7642
/* Validated */
316707
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೨೪೪}}{{Right|ಮನಮಂಥನ}}
ವಿಷಯವನ್ನು ತಿಳಿಸಿದರು.
{{gap}}ಏನೆಲ್ಲ ಶೋಧನೆಗಳನ್ನು ಪೋಲೀಸರು ನಡೆಸಿದರು. ಶೀನಪ್ಪನ ಪತ್ತೆ
ಆಗಲೇ ಇಲ್ಲ. ನಾಲ್ಕು ತಿಂಗಳುಗಳಾದರೂ ಯಾವ ಸುಳಿವೂ ದೊರೆಯಲಿಲ್ಲ.
ಯಾವ ಯಾವ ಊರಿನಲ್ಲಿರುವ ಶೀನಪ್ಪನ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ,
ಹೀಗಾಗಿದೆ, ಇಲ್ಲಿ, ಅಕಸ್ಮಾತ್ ನಿಮ್ಮಲ್ಲಿಗೆ ಬಂದರೆ ತತ್ಕ್ಷಣ ತಿಳಿಸಿ ; ಎಂದು
ಶೀನಪ್ಪನ ತಂದೆ ಕಾಗದಗಳನ್ನು ಬರೆದು ಹಾಕಿದರು. ಜ್ಯೋತಿಷ್ಯರ ಬಳಿಗೆ
ಹೋಗಿ 'ಪ್ರಶ್ನೆ' ಕೇಳಿ ಸಮಾಧಾನವನ್ನು ತಾತ್ಕಾಲಿಕವಾಗಿಯಾದರೂ
ಪಡೆಯಲಾರಂಭಿಸಿದರು.
{{gap}}ಹಿಮಾಚಲ ಪ್ರದೇಶದ ಲಾಂಘೀರಿನಲ್ಲಿ ಲಕ್ಷ್ಮಣರಾಯರು ತರಕಾರಿ ಕೊಂಡು
ಬರಲು ಹೊರಟಿದ್ದರು. ಮಾರುಕಟ್ಟೆಯ ಬಳಿ ಹೋಗುತ್ತಿದ್ದಾಗ, ಎದುರು
ಕಂಡ ಅಪರಿಚಿತನನ್ನು ದಾಟಿ ಮುಂದುವರೆದಾಗ, 'ಎಲ್ಲಿಯೋ ಕಂಡ ಮುಖ'
ಎಂದನಿಸಿತು. ಯಾರು ಎಂದು ನಿಖರವಾಗಿ ನೆನಪಾಗಲಿಲ್ಲ. ಮುಂದೆ ಸಾಗಿದ್ದವರು
ಹಿಂತಿರುಗಿ ಅಪರಿಚಿತನ ಬಳಿಗೆ ಬಂದರು. ಹಿಂತಿರುಗುವಾಗ, ನಾಲ್ಕು ತಿಂಗಳ
ಹಿಂದೆ ಶೀನಪ್ಪನ ತಂದೆಯು ಬರೆದಿದ್ದ ಕಾಗದದ ನೆನಪೂ ಆಗಿತ್ತು. ಅಪರಿಚಿತನ
ಬಳಿಗೆ ಬಂದು 'ಶೀನಪ್ಪಾ' ಎಂದು ಕೂಗಿದರು. ಯಾವ ಪ್ರತಿಕ್ರಿಯೆಯನ್ನೂ
ಅಪರಿಚಿತ ವ್ಯಕ್ತಪಡಿಸಲಿಲ್ಲ. ಇನ್ನೂ ಹತ್ತಿರಕ್ಕೆ ಹೋಗಿ 'ಯಾರು ನೀವು?
ನಿಮ್ಮನ್ನೆಲ್ಲಿಯೋ ಕಂಡ ನೆನಪು, ಹಾಸನದ ಕಡೆಯವರ ಹಾಗೆ ಕಾಣಿಸುತ್ತೀರಿ.
ನಾನೂ ಅದೇ ಊರಿನವ, ಹೊಟ್ಟೆ ಪಾಡಿಗಾಗಿ ಉತ್ತರದ ಈ ಕೊಯ್
ಮೂಲೆಯಲ್ಲಿ ಇರಬೇಕಾಗಿದೆ. ನಮ್ಮ ಊರ ಕಡೆಯವರೇ ಎಂದು ಲಕ್ಷ್ಮಣರಾಯರು
ಹೇಳಿದರು. 'ಹಾಸನ? ಅಂದರೆ ಅದು ಏನು?' ಎಂದು ಅಚ್ಚ ಕನ್ನಡದಲ್ಲಿ
ಅಪರಿಚಿತ ನುಡಿದ. ಧ್ವನಿಯನ್ನು ಕೇಳಿದ ಮೇಲೆ, ಭಾವ ಮೈದುನ ಶೀನಪ್ಪನ
ಧ್ವನಿಯೇ ಇದು ಎಂದು ಖಂಡಿತವಾಯಿತು. ನಾಲ್ಕು ತಿಂಗಳ ಹಿಂದೆಯೇನೋ
ಶೀನಪ್ಪ ಇಲ್ಲಿಗೆ ಬಂದಿಲ್ಲ ಎಂದು ಊರಿಗೆ ತಂತಿಯನ್ನು ಕಳುಹಿಸಿದ್ದರು. ಇಷ್ಟು
ದಿನಗಳಾದ ಮೇಲೆ ಇಲ್ಲಿಗೆ ಹೇಗೆ ಬಂದ ಎಂದು ಕುತೂಹಲವೂ ಉಂಟಾಗಿತ್ತು.
'ಬಾಪ್ಪ, ಶೀನಪ್ಪ, ನಮ್ಮ ಮನೆಗೆ ಹೋಗೋಣ' ಎಂದು ಕರೆದರು. ಅಪರಿಚಿತನಿಗೆ
ಯಾವುದೂ ಅರ್ಥವಾದಂತೆ ಕಾಣಲಿಲ್ಲ ಆದರೂ ಯಾಂತ್ರಿಕವಾಗಿ ಲಕ್ಷ್ಮಣರಾಯರ
ಜತೆಯಲ್ಲಿ ನಡೆದ. ಮನೆಗೆ ಹೋದ ಕೂಡಲೇ, ಶೀನಪ್ಪನನ್ನು ಕಂಡು ಅಕ್ಕ ಅತ್ತು
ಅತ್ತು ಆದರರಿಂದ ಮಾತನಾಡಿಸಿದಳು. ಸ್ವಲ್ಪ ಹೊತ್ತಾದ ಮೇಲೆ ಶೀನಪ್ಪನ<noinclude></noinclude>
ktlnf0tt8vht0c4nqd7cgt7ye76bs0y
ಪುಟ:ಮನಮಂಥನ.pdf/೨೬೪
104
62711
316680
314429
2026-05-04T06:44:12Z
Shreesha Sharma
7840
/* Proofread */
316680
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಶೀನಪ್ಪನ ಅಮೀಸಿಯ}}{{Right|೨೪೫}}
ಮುಖದಲ್ಲಿ ಸ್ವಲ್ಪ ಬದಲಾವಣೆಯಾಯಿತು. ಎಲ್ಲಿದ್ದೇನೆ? ಇದು ಯಾವ ಊರು?
ನೀನು ಲಕ್ಕು ಅಲ್ಲವೇ?' ಎಂದು ಅಕ್ಕನನ್ನು ಕೇಳಿದ. ಆನಂತರ ಶೀನಪ್ಪನಿಗೆ
ತಾನು ಯಾರು ಎಂಬುದು ಸ್ಪಷ್ಟವಾಗಿ ತಿಳಿಯಿತು. ಆದರೆ ಕಳೆದ ನಾಲ್ಕು
ತಿಂಗಳುಗಳು ಏನು ಮಾಡಿದೆ ಎಂಬುದು ಸಂಪೂರ್ಣವಾಗಿ ಮರೆತು ಹೋಗಿತ್ತು.
ಕೆಲವು ದಿನಗಳು ಲಾಂಘೀರಿನಲ್ಲಿ ಆರೈಕೆ ಪಡೆದು, ತನ್ನೂರಿಗೆ ಶೀನಪ್ಪ
ಹಿಂತಿರುಗಿದ. ಪುನಃ ಕೆಲಸಕ್ಕೆ ಹಾಜರಾದ. ಕಂಪೆನಿಯವರು ವೈದ್ಯರ ಸಲಹೆಯನ್ನು
ಪಡೆದು ಶೀನಪ್ಪನನ್ನು ಕೆಲಸಕ್ಕೆ ಸೇರಿಸಿಕೊಂಡರು. ಶೀನಪ್ಪ ಎಂದಿನಂತೆ ಕೆಲಸವನ್ನು
ಮಾಡಿಕೊಂಡಿದ್ದಾನೆ.
ತನ್ನತನವೇ ಮರೆತು ಹೋಗಿ ; ಹಿಂದಿನ ಬಾಳಿನ ನೆನಪೆಲ್ಲವೂ ಅಳಸಿ
ಹೋಗಿ ; ಹೊಸ ಬಾಳನ್ನು ಅಡ್ಡಾದಿಡ್ಡಿಯಾಗಿ ನಡೆಸುವಂತಾಗುವ ಬೇನೆಗೆ
ಪ್ಯೂಗ್ಯೂ ಅಥವಾ ಅನ್ನೀಸಿಯಾ ಎಂಬ ಹೆಸರು.
ತಲೆಗೆ ಭಾರಿ ಪೆಟ್ಟು ಬಿದ್ದವರಿಗೆ ಸ್ವಲ್ಪ ಕಾಲ ಪ್ರಜ್ಞೆಯು ತಪ್ಪಿರುತ್ತದೆ.
ಒಂದೆರಡು ವಾರಗಳಲ್ಲಿ ಜ್ಞಾನವು ಪುನಃ ಬಂದಾಗ, ಪೆಟ್ಟು ಬಿದ್ದ ಕಾರಣ,
ಅಥವಾ ಸನ್ನಿವೇಶ ಇವೆಲ್ಲವೂ ಮರೆತು ಹೋಗಿರುತ್ತದೆ. ಆ ಅವಧಿಯ ಅನುಭವವು
ಅವರ ಸ್ಮರಣೆಯಲ್ಲಿ ಉಳಿದಿರುವುದಿಲ್ಲ. ಇದು ಅನ್ನೀಸಿಯಾ.
ಅದರಂತೆಯೇ ಮೆದುಳಿನಲ್ಲಿ ಬೆಳೆಯುವ ಕೆಲವು ಗೆಡ್ಡೆಗಳು
ಅನ್ನೋಸಿಯಾವನ್ನು ಕಾಣಿಸುತ್ತವೆ. ಹಿಸ್ಟಿರಿಯಾ ಎಂಬ ಮಾನಸಿಕ ರೋಗದ
ಒಂದು ಪರಿಸ್ಥಿತಿ ಇದು, ಎಂದು ಮನಃಶಾಸ್ತ್ರಜ್ಞರ ನಂಬಿಕೆ. ವಾಸ್ತವಿಕ
ಪರಿಸ್ಥಿತಿಯನ್ನು ಮನಸ್ಸು ಒಪ್ಪದೆ ಹೋದರೆ ಬೇರೆ ಇನ್ನಾವ ಪರಿಹಾರವನ್ನೂ
ಸಾಧಿಸಲು ಆಗದೆ ಇದ್ದರೆ, ಆಗ ಮನಸ್ಸು 'ಮರೆವಿನ ನೆರವನ್ನು ಪಡೆಯುತ್ತದೆ.
ಆ ಮರೆವು ಸಂಪೂರ್ಣವಾಗಿಯೂ ಇರುತ್ತದೆ. ಕೆಲಕಾಲ ಹೀಗಿದ್ದು ನಂತರ
ಯಾವುದಾದರೂ ಪ್ರೇರಕದಿಂದ, ಮೊದಲಿದ್ದ ವಾಸ್ತವಿಕ ಪರಿಸ್ಥಿತಿಗೆ ಹಿಂತಿರುಗುತ್ತದೆ.
ಪ್ರಕೃತಿಯಲ್ಲಿ ಪ್ರಾಣಿಗಳ ಪ್ರಗತಿಯಲ್ಲಿಯೂ, ಮೂಲಭೂತವಾದ
ಈ ವರ್ತನೆಯನ್ನು ಕಾಣಬಹುದು. ಅಪಾಯವನ್ನು ಎದುರಿಸಬೇಕಾದಾಗ
ಪ್ರಾಣಿಗಳು ಎರಡು ವಿಧಾನಗಳನ್ನು ಅನುಸರಿಸುತ್ತವೆ.
ಒಂದು, ಅಪಾಯವನ್ನೆದುರಿಸಿ, ಇದ್ದ ಬಲವನ್ನೆಲ್ಲಾ ಉಪಯೋಗಿಸಿ
ಹೋರಾಡಿ, ಗೆಲ್ಲುವುದು. ಹಾಗೆ ಅಪಾಯವನ್ನು ನಿವಾರಿಸುವುದು. ಎರಡನೆಯದು,<noinclude></noinclude>
44223ed9hkcqbq65lxg3ftnmj4vlf3k
316708
316680
2026-05-04T07:17:46Z
Shreelatha.Halemane
7642
/* Validated */
316708
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಶೀನಪ್ಪನ ಅಮೀಸಿಯ}}{{Right|೨೪೫}}
ಮುಖದಲ್ಲಿ ಸ್ವಲ್ಪ ಬದಲಾವಣೆಯಾಯಿತು. ಎಲ್ಲಿದ್ದೇನೆ? ಇದು ಯಾವ ಊರು?
ನೀನು ಲಕ್ಕು ಅಲ್ಲವೇ?' ಎಂದು ಅಕ್ಕನನ್ನು ಕೇಳಿದ. ಆನಂತರ ಶೀನಪ್ಪನಿಗೆ
ತಾನು ಯಾರು ಎಂಬುದು ಸ್ಪಷ್ಟವಾಗಿ ತಿಳಿಯಿತು. ಆದರೆ ಕಳೆದ ನಾಲ್ಕು
ತಿಂಗಳುಗಳು ಏನು ಮಾಡಿದೆ ಎಂಬುದು ಸಂಪೂರ್ಣವಾಗಿ ಮರೆತು ಹೋಗಿತ್ತು.
{{gap}}ಕೆಲವು ದಿನಗಳು ಲಾಂಘೀರಿನಲ್ಲಿ ಆರೈಕೆ ಪಡೆದು, ತನ್ನೂರಿಗೆ ಶೀನಪ್ಪ
ಹಿಂತಿರುಗಿದ. ಪುನಃ ಕೆಲಸಕ್ಕೆ ಹಾಜರಾದ. ಕಂಪೆನಿಯವರು ವೈದ್ಯರ ಸಲಹೆಯನ್ನು
ಪಡೆದು ಶೀನಪ್ಪನನ್ನು ಕೆಲಸಕ್ಕೆ ಸೇರಿಸಿಕೊಂಡರು. ಶೀನಪ್ಪ ಎಂದಿನಂತೆ ಕೆಲಸವನ್ನು
ಮಾಡಿಕೊಂಡಿದ್ದಾನೆ.
{{gap}}ತನ್ನತನವೇ ಮರೆತು ಹೋಗಿ ; ಹಿಂದಿನ ಬಾಳಿನ ನೆನಪೆಲ್ಲವೂ ಅಳಸಿ
ಹೋಗಿ ; ಹೊಸ ಬಾಳನ್ನು ಅಡ್ಡಾದಿಡ್ಡಿಯಾಗಿ ನಡೆಸುವಂತಾಗುವ ಬೇನೆಗೆ
ಪ್ಯೂಗ್ಯೂ ಅಥವಾ ಅನ್ನೀಸಿಯಾ ಎಂಬ ಹೆಸರು.
{{gap}}ತಲೆಗೆ ಭಾರಿ ಪೆಟ್ಟು ಬಿದ್ದವರಿಗೆ ಸ್ವಲ್ಪ ಕಾಲ ಪ್ರಜ್ಞೆಯು ತಪ್ಪಿರುತ್ತದೆ.
ಒಂದೆರಡು ವಾರಗಳಲ್ಲಿ ಜ್ಞಾನವು ಪುನಃ ಬಂದಾಗ, ಪೆಟ್ಟು ಬಿದ್ದ ಕಾರಣ,
ಅಥವಾ ಸನ್ನಿವೇಶ ಇವೆಲ್ಲವೂ ಮರೆತು ಹೋಗಿರುತ್ತದೆ. ಆ ಅವಧಿಯ ಅನುಭವವು
ಅವರ ಸ್ಮರಣೆಯಲ್ಲಿ ಉಳಿದಿರುವುದಿಲ್ಲ. ಇದು ಅನ್ನೀಸಿಯಾ.
{{gap}}ಅದರಂತೆಯೇ ಮೆದುಳಿನಲ್ಲಿ ಬೆಳೆಯುವ ಕೆಲವು ಗೆಡ್ಡೆಗಳು
ಅನ್ನೋಸಿಯಾವನ್ನು ಕಾಣಿಸುತ್ತವೆ. ಹಿಸ್ಟಿರಿಯಾ ಎಂಬ ಮಾನಸಿಕ ರೋಗದ
ಒಂದು ಪರಿಸ್ಥಿತಿ ಇದು, ಎಂದು ಮನಃಶಾಸ್ತ್ರಜ್ಞರ ನಂಬಿಕೆ. ವಾಸ್ತವಿಕ
ಪರಿಸ್ಥಿತಿಯನ್ನು ಮನಸ್ಸು ಒಪ್ಪದೆ ಹೋದರೆ ಬೇರೆ ಇನ್ನಾವ ಪರಿಹಾರವನ್ನೂ
ಸಾಧಿಸಲು ಆಗದೆ ಇದ್ದರೆ, ಆಗ ಮನಸ್ಸು 'ಮರೆವಿನ ನೆರವನ್ನು ಪಡೆಯುತ್ತದೆ.
ಆ ಮರೆವು ಸಂಪೂರ್ಣವಾಗಿಯೂ ಇರುತ್ತದೆ. ಕೆಲಕಾಲ ಹೀಗಿದ್ದು ನಂತರ
ಯಾವುದಾದರೂ ಪ್ರೇರಕದಿಂದ, ಮೊದಲಿದ್ದ ವಾಸ್ತವಿಕ ಪರಿಸ್ಥಿತಿಗೆ ಹಿಂತಿರುಗುತ್ತದೆ.
{{gap}}ಪ್ರಕೃತಿಯಲ್ಲಿ ಪ್ರಾಣಿಗಳ ಪ್ರಗತಿಯಲ್ಲಿಯೂ, ಮೂಲಭೂತವಾದ
ಈ ವರ್ತನೆಯನ್ನು ಕಾಣಬಹುದು. ಅಪಾಯವನ್ನು ಎದುರಿಸಬೇಕಾದಾಗ
ಪ್ರಾಣಿಗಳು ಎರಡು ವಿಧಾನಗಳನ್ನು ಅನುಸರಿಸುತ್ತವೆ.
{{gap}}ಒಂದು, ಅಪಾಯವನ್ನೆದುರಿಸಿ, ಇದ್ದ ಬಲವನ್ನೆಲ್ಲಾ ಉಪಯೋಗಿಸಿ
ಹೋರಾಡಿ, ಗೆಲ್ಲುವುದು. ಹಾಗೆ ಅಪಾಯವನ್ನು ನಿವಾರಿಸುವುದು. ಎರಡನೆಯದು,<noinclude></noinclude>
eq0kymbb9a3zbvd3tsvw9ok32x161bi
ಪುಟ:ಮನಮಂಥನ.pdf/೨೬೫
104
62712
316681
314430
2026-05-04T06:45:52Z
Shreesha Sharma
7840
/* Proofread */
316681
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೨೪೬}}{{Right|ಮನಮಂಥನ}}
ಅಪಾಯದಿಂದ ದೂರ ಓಡಿಹೋಗುವುದು, ಆರೀತಿ ಅಪಾಯವನ್ನು
ನಿವಾರಿಸಿಕೊಳ್ಳುವುದು. ಪ್ರಾಣಿಗಳಲ್ಲಿ ದೇಹಕ್ಕೆ ಆಪಾಯವು ಉಂಟಾಗುತ್ತದೆ ಎಂದಾಗ
ಪ್ರಾಣ ಭಯವು ಓಡು ಅಥವಾ ಹೋರಾಡು, ಎಂಬ ಎರಡು ಉಪಾಯಗಳಲ್ಲಿ
ಒಂದನ್ನು ಸೂಚಿಸುತ್ತದೆ.
ಮಾನವ ಹಂತದಲ್ಲಿ, ದೇಹಕ್ಕಿಂತಲೂ ಮನಸ್ಸಿಗೆ ಹೆಚ್ಚು ಪ್ರಾಧಾನ್ಯವಿದೆ.
ಮನಸ್ಸಿಗೆ ಅಪಾಯ ಬರುವುದು ಎಂದರೆ ಏನು ? ಯಾವುದಾದರೂ ಸಮಸ್ಯೆಯು
ತಲೆದೋರಿದಾಗ, ಆಗುಹೋಗುಗಳನ್ನು ವಿಚಾರಮಾಡಿ ಗಮನಿಸಿ ಸೂಕ್ತ
ನಿರ್ಧಾರವನ್ನು ಮಾಡುವುದು ಮನಸ್ಸಿನ ಕೆಲಸ. ಹೀಗೆ ನಿರ್ಧರಿಸಬೇಕಾದ,
ಹೀಗೆ ಮಾಡಿದರೆ ಅನಾಹುತವೇನಾಗುತ್ತೋ ; ಹಾಗೆ ಮಾಡಿದರೆ ಯಾವ ಕಷ್ಟ
ಬರುತ್ತೋ ಎಂದು ಅನುಮಾನವು ಬರುವುದು ಸಹಜ. ಆಗ ಏನಾದರೂ
ಆಗಲಿ ; ಹೀಗೇ ಮಾಡುತ್ತೇನೆ, ಬಂದುದನ್ನು ಅನುಭವಿಸುತ್ತೇನೆ, ಎಂದು
ಧೈರ್ಯಮಾಡಿ ಮುನ್ನುಗ್ಗುವುದು ಸಾಮಾನ್ಯ ನಡವಳಿಕೆ, ಮನಸ್ಸು ಸುದೃಢವಾಗಿರದೆ
ಇದ್ದರೆ, ಆಗ ಅದು ಎದುರಿಸಿ ಹೋರಾಡುವ ಸ್ಥಿತಿಯಲ್ಲಿರುವುದಿಲ್ಲ. ಆಗ
ವಾಸ್ತವಿಕ ಪರಿಸ್ಥಿತಿಯಿಂದ ಮನಸ್ಸು ಓಡಿಹೋಗುತ್ತದೆ ಅದೇ ಅಮ್ಮಿಸಿಯಾ,ಫ್ಯೂಗ್ಯೂ.
ಕಾಡುಮೃಗಗಳು ದೇಹದ ನಡವಳಿಕೆಯಲ್ಲಿ ಪ್ರದರ್ಶಿಸುವ ರೀತಿಯನ್ನು,
ನಾಡ ಮನುಷ್ಯರು ಮನಸ್ಸಿನ ನಡವಳಿಕೆಯಲ್ಲಿ ಅನುಸರಿಸುತ್ತಾರೆ.
ಶೀನಪ್ಪನ ಮನಸ್ಸು, ಯಾವ ಸಮಸ್ಯೆಯ ಪರಿಹಾರಕ್ಕಾಗಿ, ಮಂಥನವನ್ನು
ಮಾಡುತ್ತಿತ್ತೋ, ಆ ಸಮಸ್ಯೆಯ ಮನದಾಳದಲ್ಲಿರುವ ಬೇರು ಬುಡಗಳನ್ನು
ಶೀನಪ್ಪನೂ ತಿಳಿದಿರಲಿಲ್ಲ. ಮನೆಯವರಿಗಾಗಲೀ, ಸ್ನೇಹಿತರಿಗಾಗಲಿ ತಿಳಿಯಲು
ಅಸಾಧ್ಯ. ಪ್ರತಿ ವ್ಯಕ್ತಿಯ ಮನಸ್ಪೂ ಅತಿ ಗುಪ್ತವಾದ, ಭದ್ರವಾದ ಕೋಟೆ.
ಆ ಕೋಟೆಯಲ್ಲಿರುವ ಸುರಂಗ ಮಾರ್ಗಗಳಾಗಲೀ ಗುಪ್ತ ಕೊಠಡಿಗಳಾಗಲೀ,
ಆ ವ್ಯಕ್ತಿಗೆ ತಿಳಿದಿರುವುದಿಲ್ಲ. ಅಂದ ಮೇಲೆ ಆ ಕೋಟೆಗೆ ಲಗ್ಗೆ ಹಾಕಿ ಎಲ್ಲವನ್ನೂ
ತಿಳಿಯುವುದು ದುಸ್ಸಾಧ್ಯ.
ಮನಮಂಥನವನ್ನು ಸೀನಪ್ಪ ಮಾಡಿದಾಗ, ಹೋರಾಡಿ ಗೆಲ್ಲುವ
ನಿರ್ಣಯವನ್ನು ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ಅವನ ಮನಸ್ಸು
ದೃಢವಾಗಿರಲಿಲ್ಲ ; ಇನ್ನೂ ಮಕ್ಕಳ ಮನಸ್ಸಿನಂತೆಯೇ ವಯಸ್ಸಾದರೂ ಉಳಿದಿತ್ತು.
ಆದಕಾರಣ ವಾಸ್ತವಿಕ ಪರಿಸ್ಥಿತಿಯಿಂದ ದೂರ ಓಡಿಹೋಯಿತು. ಕೆಲಕಾಲಾನಂತರ
ಹಿಂದೆ ಕಾಡುತ್ತಿದ್ದ ಸಮಸ್ಯೆಯು, ತೀವ್ರತೆಯನ್ನು ಸ್ವಾಭಾವಿಕವಾಗಿ, ಕಾಲಾನುಕಾಲದಲ್ಲಿ<noinclude></noinclude>
lg7q1q59cqw9rqg0ylqqgs8bjx8qkqi
316709
316681
2026-05-04T07:18:21Z
Shreelatha.Halemane
7642
/* Validated */
316709
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೨೪೬}}{{Right|ಮನಮಂಥನ}}
ಅಪಾಯದಿಂದ ದೂರ ಓಡಿಹೋಗುವುದು, ಆರೀತಿ ಅಪಾಯವನ್ನು
ನಿವಾರಿಸಿಕೊಳ್ಳುವುದು. ಪ್ರಾಣಿಗಳಲ್ಲಿ ದೇಹಕ್ಕೆ ಆಪಾಯವು ಉಂಟಾಗುತ್ತದೆ ಎಂದಾಗ
ಪ್ರಾಣ ಭಯವು ಓಡು ಅಥವಾ ಹೋರಾಡು, ಎಂಬ ಎರಡು ಉಪಾಯಗಳಲ್ಲಿ
ಒಂದನ್ನು ಸೂಚಿಸುತ್ತದೆ.
{{gap}}ಮಾನವ ಹಂತದಲ್ಲಿ, ದೇಹಕ್ಕಿಂತಲೂ ಮನಸ್ಸಿಗೆ ಹೆಚ್ಚು ಪ್ರಾಧಾನ್ಯವಿದೆ.
ಮನಸ್ಸಿಗೆ ಅಪಾಯ ಬರುವುದು ಎಂದರೆ ಏನು ? ಯಾವುದಾದರೂ ಸಮಸ್ಯೆಯು
ತಲೆದೋರಿದಾಗ, ಆಗುಹೋಗುಗಳನ್ನು ವಿಚಾರಮಾಡಿ ಗಮನಿಸಿ ಸೂಕ್ತ
ನಿರ್ಧಾರವನ್ನು ಮಾಡುವುದು ಮನಸ್ಸಿನ ಕೆಲಸ. ಹೀಗೆ ನಿರ್ಧರಿಸಬೇಕಾದ,
ಹೀಗೆ ಮಾಡಿದರೆ ಅನಾಹುತವೇನಾಗುತ್ತೋ ; ಹಾಗೆ ಮಾಡಿದರೆ ಯಾವ ಕಷ್ಟ
ಬರುತ್ತೋ ಎಂದು ಅನುಮಾನವು ಬರುವುದು ಸಹಜ. ಆಗ ಏನಾದರೂ
ಆಗಲಿ ; ಹೀಗೇ ಮಾಡುತ್ತೇನೆ, ಬಂದುದನ್ನು ಅನುಭವಿಸುತ್ತೇನೆ, ಎಂದು
ಧೈರ್ಯಮಾಡಿ ಮುನ್ನುಗ್ಗುವುದು ಸಾಮಾನ್ಯ ನಡವಳಿಕೆ, ಮನಸ್ಸು ಸುದೃಢವಾಗಿರದೆ
ಇದ್ದರೆ, ಆಗ ಅದು ಎದುರಿಸಿ ಹೋರಾಡುವ ಸ್ಥಿತಿಯಲ್ಲಿರುವುದಿಲ್ಲ. ಆಗ
ವಾಸ್ತವಿಕ ಪರಿಸ್ಥಿತಿಯಿಂದ ಮನಸ್ಸು ಓಡಿಹೋಗುತ್ತದೆ ಅದೇ ಅಮ್ಮಿಸಿಯಾ,ಫ್ಯೂಗ್ಯೂ.
{{gap}}ಕಾಡುಮೃಗಗಳು ದೇಹದ ನಡವಳಿಕೆಯಲ್ಲಿ ಪ್ರದರ್ಶಿಸುವ ರೀತಿಯನ್ನು,
ನಾಡ ಮನುಷ್ಯರು ಮನಸ್ಸಿನ ನಡವಳಿಕೆಯಲ್ಲಿ ಅನುಸರಿಸುತ್ತಾರೆ.
{{gap}}ಶೀನಪ್ಪನ ಮನಸ್ಸು, ಯಾವ ಸಮಸ್ಯೆಯ ಪರಿಹಾರಕ್ಕಾಗಿ, ಮಂಥನವನ್ನು
ಮಾಡುತ್ತಿತ್ತೋ, ಆ ಸಮಸ್ಯೆಯ ಮನದಾಳದಲ್ಲಿರುವ ಬೇರು ಬುಡಗಳನ್ನು
ಶೀನಪ್ಪನೂ ತಿಳಿದಿರಲಿಲ್ಲ. ಮನೆಯವರಿಗಾಗಲೀ, ಸ್ನೇಹಿತರಿಗಾಗಲಿ ತಿಳಿಯಲು
ಅಸಾಧ್ಯ. ಪ್ರತಿ ವ್ಯಕ್ತಿಯ ಮನಸ್ಪೂ ಅತಿ ಗುಪ್ತವಾದ, ಭದ್ರವಾದ ಕೋಟೆ.
ಆ ಕೋಟೆಯಲ್ಲಿರುವ ಸುರಂಗ ಮಾರ್ಗಗಳಾಗಲೀ ಗುಪ್ತ ಕೊಠಡಿಗಳಾಗಲೀ,
ಆ ವ್ಯಕ್ತಿಗೆ ತಿಳಿದಿರುವುದಿಲ್ಲ. ಅಂದ ಮೇಲೆ ಆ ಕೋಟೆಗೆ ಲಗ್ಗೆ ಹಾಕಿ ಎಲ್ಲವನ್ನೂ
ತಿಳಿಯುವುದು ದುಸ್ಸಾಧ್ಯ.
{{gap}}ಮನಮಂಥನವನ್ನು ಸೀನಪ್ಪ ಮಾಡಿದಾಗ, ಹೋರಾಡಿ ಗೆಲ್ಲುವ
ನಿರ್ಣಯವನ್ನು ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ಅವನ ಮನಸ್ಸು
ದೃಢವಾಗಿರಲಿಲ್ಲ ; ಇನ್ನೂ ಮಕ್ಕಳ ಮನಸ್ಸಿನಂತೆಯೇ ವಯಸ್ಸಾದರೂ ಉಳಿದಿತ್ತು.
ಆದಕಾರಣ ವಾಸ್ತವಿಕ ಪರಿಸ್ಥಿತಿಯಿಂದ ದೂರ ಓಡಿಹೋಯಿತು. ಕೆಲಕಾಲಾನಂತರ
ಹಿಂದೆ ಕಾಡುತ್ತಿದ್ದ ಸಮಸ್ಯೆಯು, ತೀವ್ರತೆಯನ್ನು ಸ್ವಾಭಾವಿಕವಾಗಿ, ಕಾಲಾನುಕಾಲದಲ್ಲಿ<noinclude></noinclude>
00m2bmxbfr70dvj0x4nl725h2yjxiua
ಪುಟ:ಮನಮಂಥನ.pdf/೨೬೬
104
62713
316682
314431
2026-05-04T06:46:51Z
Shreesha Sharma
7840
/* Proofread */
316682
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಶೀನಪ್ಪನ ಅಮ್ಮಿಸಿಯ}}{{Right|೨೪೭}}
ಕಳೆದುಕೊಂಡಾಗ, ಹಿಂದಿನ ವಾಸ್ತವಿಕ ಬಾಳಿನ ಸ್ಮರಣೆಯು ಉಂಟಾಯಿತು.
ಎಲ್ಲೋ ಒಮ್ಮೊಮ್ಮೆ ಸಂಭವಿಸುವ ಈ ಬೇನೆಯು ನಮಗೂ ಎಂದೋ
ಸಂಭವಿಸುತ್ತದೆ, ಎಂದು ಹಲವರು ಭೀತಿ ಪಡುತ್ತಾರೆ. ಅತಿ ವಿರಳವಾದುದು
ಇದು ಎಂದು ತಿಳಿದಾಗ ; ಸುದೃಢ ಮನಸಿಗರಿಗೆ ಸಂಭವಿಸುವುದಿಲ್ಲ ಎಂದು
ಖಚಿತವಾದಾಗ, ಶಂಕಿಸುವವರಿಗೆ ಸಮಾಧಾನವಾಗಬೇಕು. ಮನಸ್ಸಿನಲ್ಲಿ ಸ್ವಲ್ಪ
ಕಾತರವು ಕಾಡಿದರೆ, ಆತಂಕವು ಕೊರೆಯಹತ್ತಿದರೆ, ಈ ಭಯವು
ಉಲ್ಬಣಗೊಳ್ಳುತ್ತದೆ. ಭಯದಿಂದ ಆತಂಕವೂ ಇಮ್ಮಡಿಯಾಗುತ್ತದೆ. ಇಂತಹ
ವಿಷಚಕ್ರದಿಂದ ಪಾರಾಗಲು ಭಯವನ್ನು ನಿರ್ಮೂಲಗೊಳಿಸಬೇಕು. ಬೇನೆಯ
ಅರಿವಿನಿಂದಿದು ಸಾಧ್ಯ.
ಹಿಸ್ಟೀರಿಯಾಕ್ಕೆ ತುತ್ತಾದವರ ಮನಃಸ್ಥಿತಿಯೇ ಈ ಬೇನೆಗೂ
ಆಧಾರವೆಂಬುದನ್ನು ತಿಳಿದರೆ ಮೊದಮೊದಲ ಸೂಚನೆಗಳನ್ನು ಸುಲಭವಾಗಿ
ಗಮನಿಸಬಹುದು. ಇಂತಹ ಮನಃಸ್ಥಿತಿಯವರು ತಮ್ಮ ಭಾವ ರಾಗಗಳನ್ನು,
ಪ್ರೀತಿ ದ್ವೇಷಗಳನ್ನು : ಕಲೆಯ ಯಾವುದಾದರೂ ಒಂದು ರೂಪಿನಲ್ಲಿ
ಬಹಿರಂಗಪಡಿಸುವುದರ ಮೂಲಕ, ಬೇನೆಯು ಬಾರದಂತೆ ತಡೆಗಟ್ಟಬಹುದು.
ಈ ತೆರನ ಮನಃಸ್ಥಿತಿಯವರಿಗೆ, ಕಲಾರೂಪಗಳಲ್ಲಿ, ನಾಟಕವು, ಮತ್ತು ಸಂಗೀತವು
ತುಂಬಾ ಯಶಸ್ವಿಯಾಗುತ್ತದೆ. ಜನರ ಸಂಪರ್ಕವನ್ನು ನೇರವಾಗಿ ಹೊಂದುವ
ಕಲಾರೂಪಗಳು ಈ ದೃಷ್ಟಿಯಲ್ಲಿ ತುಂಬಾ ಉಪಯುಕ್ತ. ಆದಕಾರಣ ನಾಟಕ,
ಸಂಗೀತ, ಹರಿಕಥೆ, ಶಿವಕಥೆ ; ಇವು ಬಲು ಪ್ರಶಸ್ತ.<noinclude></noinclude>
m7u2m7qr8nfcmbq61ia6t7gwjad7996
316710
316682
2026-05-04T07:18:58Z
Shreelatha.Halemane
7642
/* Validated */
316710
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಶೀನಪ್ಪನ ಅಮ್ಮೀಸಿಯ}}{{Right|೨೪೭}}
ಕಳೆದುಕೊಂಡಾಗ, ಹಿಂದಿನ ವಾಸ್ತವಿಕ ಬಾಳಿನ ಸ್ಮರಣೆಯು ಉಂಟಾಯಿತು.
{{gap}}ಎಲ್ಲೋ ಒಮ್ಮೊಮ್ಮೆ ಸಂಭವಿಸುವ ಈ ಬೇನೆಯು ನಮಗೂ ಎಂದೋ
ಸಂಭವಿಸುತ್ತದೆ, ಎಂದು ಹಲವರು ಭೀತಿ ಪಡುತ್ತಾರೆ. ಅತಿ ವಿರಳವಾದುದು
ಇದು ಎಂದು ತಿಳಿದಾಗ ; ಸುದೃಢ ಮನಸಿಗರಿಗೆ ಸಂಭವಿಸುವುದಿಲ್ಲ ಎಂದು
ಖಚಿತವಾದಾಗ, ಶಂಕಿಸುವವರಿಗೆ ಸಮಾಧಾನವಾಗಬೇಕು. ಮನಸ್ಸಿನಲ್ಲಿ ಸ್ವಲ್ಪ
ಕಾತರವು ಕಾಡಿದರೆ, ಆತಂಕವು ಕೊರೆಯಹತ್ತಿದರೆ, ಈ ಭಯವು
ಉಲ್ಬಣಗೊಳ್ಳುತ್ತದೆ. ಭಯದಿಂದ ಆತಂಕವೂ ಇಮ್ಮಡಿಯಾಗುತ್ತದೆ. ಇಂತಹ
ವಿಷಚಕ್ರದಿಂದ ಪಾರಾಗಲು ಭಯವನ್ನು ನಿರ್ಮೂಲಗೊಳಿಸಬೇಕು. ಬೇನೆಯ
ಅರಿವಿನಿಂದಿದು ಸಾಧ್ಯ.
{{gap}}ಹಿಸ್ಟೀರಿಯಾಕ್ಕೆ ತುತ್ತಾದವರ ಮನಃಸ್ಥಿತಿಯೇ ಈ ಬೇನೆಗೂ
ಆಧಾರವೆಂಬುದನ್ನು ತಿಳಿದರೆ ಮೊದಮೊದಲ ಸೂಚನೆಗಳನ್ನು ಸುಲಭವಾಗಿ
ಗಮನಿಸಬಹುದು. ಇಂತಹ ಮನಃಸ್ಥಿತಿಯವರು ತಮ್ಮ ಭಾವ ರಾಗಗಳನ್ನು,
ಪ್ರೀತಿ ದ್ವೇಷಗಳನ್ನು : ಕಲೆಯ ಯಾವುದಾದರೂ ಒಂದು ರೂಪಿನಲ್ಲಿ
ಬಹಿರಂಗಪಡಿಸುವುದರ ಮೂಲಕ, ಬೇನೆಯು ಬಾರದಂತೆ ತಡೆಗಟ್ಟಬಹುದು.
ಈ ತೆರನ ಮನಃಸ್ಥಿತಿಯವರಿಗೆ, ಕಲಾರೂಪಗಳಲ್ಲಿ, ನಾಟಕವು, ಮತ್ತು ಸಂಗೀತವು
ತುಂಬಾ ಯಶಸ್ವಿಯಾಗುತ್ತದೆ. ಜನರ ಸಂಪರ್ಕವನ್ನು ನೇರವಾಗಿ ಹೊಂದುವ
ಕಲಾರೂಪಗಳು ಈ ದೃಷ್ಟಿಯಲ್ಲಿ ತುಂಬಾ ಉಪಯುಕ್ತ. ಆದಕಾರಣ ನಾಟಕ,
ಸಂಗೀತ, ಹರಿಕಥೆ, ಶಿವಕಥೆ ; ಇವು ಬಲು ಪ್ರಶಸ್ತ.<noinclude></noinclude>
rirplo85udqy8hqofrcchh9dfuhkdtl
ಪುಟ:ಮನಮಂಥನ.pdf/೨೬೭
104
62714
316692
314432
2026-05-04T07:01:37Z
Shreesha Sharma
7840
/* Proofread */
316692
proofread-page
text/x-wiki
<noinclude><pagequality level="3" user="Shreesha Sharma" /></noinclude>{{center|'''೮. ದೈಹಿಕ ಬೇನೆಗಳಿಂದ ಉಂಟಾಗುವ'''}}
{{center|'''ಮನೋರೋಗಗಳು'''}}
ಪ್ಲೇಗು, ವಿಷಮಶೀತಜ್ವರ, ದೊಡ್ಡ ಸಿಡುಬು ; ಇತ್ಯಾದಿ ಅತ್ಯುಗ್ರವಾದ
ಕಾಯಿಲೆಗಳು ಬಡಿದಾಗ ರೋಗಿಗೆ ಸನ್ನಿ ಬಡಿಯುತ್ತದೆ. ಅಂದರೆ ಅವ ಹುಚ್ಚು
ಹುಚ್ಚಾಗಿ ಅಸಂಬದ್ಧವಾಗಿ ಮಾತನಾಡುತ್ತಾನೆ. ಆದರೆ ಬೇನೆಯು
ಇಳಿಮುಖವಾದಾಗ ಅವನ ಸನ್ನಿಯೂ ಇಳಿಯುತ್ತದೆ. ನಂತರ ಅವನ ಮನಸ್ಸು
ಸ್ವಾಸ್ಥ್ಯವನ್ನು ಪಡೆಯುತ್ತದೆ. ಬೇನೆಯು ಉಲ್ಬಣವಾಗಿದ್ದಾಗ ಮನಸ್ಸ ಹುಚ್ಚೆದ್ದಂತೆ
ಇದ್ದರೂ ; ಇವೆಲ್ಲಾ ಮನೋರೋಗಗಳು ಎಂದೆನಿಸಿಕೊಳ್ಳುವುದಿಲ್ಲ. ಏಕೆಂದರೆ
ಮನಸ್ಸು ಸ್ವಸ್ಥವಾಗಿದ್ದರೂ, ದೇಹದ ಬೇನೆಯು ತಾಪದಿಂದ ಮತ್ತು ವಿಷದಿಂದ,
ಕೆಟ್ಟಿದ್ದಂತೆ ತಾತ್ಕಾಲಿಕವಾಗಿ ವರ್ತಿಸುತ್ತದೆ.
ಆದರೆ ಕೆಲವು ದೈಹಿಕ ಲೋಪಗಳು ಅಥವಾ ಬೇನೆಗಳು, ಮನಸ್ಸಿನ
ಬೆಳವಣಿಗೆಯಲ್ಲಿ ಹಾಗೂ ನಡವಳಿಕೆಯಲ್ಲಿ ಶಾಶ್ವತವಾದ ಏರುಪೇರುಗಳನ್ನು
ಮಾಡುತ್ತದೆ. ಮನಸ್ಸು ಪಲ್ಲಟವಾದಂತೆಯೇ ಇವರು ನಡೆದುಕೊಳ್ಳುತ್ತಾರೆ. ಪೂರ್ಣ
ಸ್ವಾಸ್ಥ್ಯವನ್ನು ಇವರು ಎಂದೂ ಪಡೆಯಲು ಸಾಧ್ಯವಿಲ್ಲ. ಈ ಚಿಕಿತ್ಸೆಯನ್ನು
ಮಾಡಿಸೋಣ, ಆ ಪೂಜೆಯನ್ನು ಹಾಕಿಸೋಣ; ಪ್ರಸಿದ್ಧವಾದ ಆ ಯಾತ್ರಾಸ್ಥಳಕ್ಕೆ
ಹೋಗೋಣ; ಎಂದು ವೃಥಾ ಶ್ರಮವನ್ನೂ ಹಣದ ದುರ್ವ್ಯಯವನ್ನೂ
ಮಾಡುವಂತಾಗುತ್ತದೆ. ಇದನ್ನಾದರೂ ತಪ್ಪಿಸಿಕೊಳ್ಳಬಹುದು ; ವಿಷಯವನ್ನು
ಸರಿಯಾಗಿ ಅರ್ಥಮಾಡಿಕೊಂಡರೆ, ತಿಳಿದುಕೊಂಡರೆ ; ಇಂತಹ
ಮನೋರೋಗಗಳನ್ನು ಇನ್ನು ಮುಂದೆ ವಿವರಿಸಲಾಗುವುದು.
{{center|'''ಮಕ್ಕಳಲ್ಲಿ'''}}
{{Left|ಹುಟ್ಟು ದೋಷದ ಕಾಯಿಲೆಗಳು (Down's Syndrome)}}
ಐದು ವರ್ಷದ ಹೆಣ್ಣು ಮಗುವನ್ನು ಕರೆತಂದರು ಪರೀಕ್ಷೆಗೆಂದು. ಸರಿಯಾಗಿ
ಬೆಳೆದಿಲ್ಲ. ಕೆಮ್ಮು ಕಸಾಲೆ ಮೇಲಿಂದ ಮೇಲೆ ಬರುತ್ತದೆ. ಪರೀಕ್ಷೆ ಮಾಡಿಸಿ,
ಸೂಕ್ತ ಟಾನಿಕ್ ಕೊಡಿಸಬೇಕು ಎಂದು ಕರೆತಂದಿದ್ದರು. 'ಬಾ' ಎಂದು ಕರೆದಾಗ<noinclude></noinclude>
4o1ke1gza63llg5i1wzum6937x410c3
316711
316692
2026-05-04T07:19:27Z
Shreelatha.Halemane
7642
/* Validated */
316711
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|'''೮. ದೈಹಿಕ ಬೇನೆಗಳಿಂದ ಉಂಟಾಗುವ'''}}
{{center|'''ಮನೋರೋಗಗಳು'''}}
{{gap}}ಪ್ಲೇಗು, ವಿಷಮಶೀತಜ್ವರ, ದೊಡ್ಡ ಸಿಡುಬು ; ಇತ್ಯಾದಿ ಅತ್ಯುಗ್ರವಾದ
ಕಾಯಿಲೆಗಳು ಬಡಿದಾಗ ರೋಗಿಗೆ ಸನ್ನಿ ಬಡಿಯುತ್ತದೆ. ಅಂದರೆ ಅವ ಹುಚ್ಚು
ಹುಚ್ಚಾಗಿ ಅಸಂಬದ್ಧವಾಗಿ ಮಾತನಾಡುತ್ತಾನೆ. ಆದರೆ ಬೇನೆಯು
ಇಳಿಮುಖವಾದಾಗ ಅವನ ಸನ್ನಿಯೂ ಇಳಿಯುತ್ತದೆ. ನಂತರ ಅವನ ಮನಸ್ಸು
ಸ್ವಾಸ್ಥ್ಯವನ್ನು ಪಡೆಯುತ್ತದೆ. ಬೇನೆಯು ಉಲ್ಬಣವಾಗಿದ್ದಾಗ ಮನಸ್ಸ ಹುಚ್ಚೆದ್ದಂತೆ
ಇದ್ದರೂ ; ಇವೆಲ್ಲಾ ಮನೋರೋಗಗಳು ಎಂದೆನಿಸಿಕೊಳ್ಳುವುದಿಲ್ಲ. ಏಕೆಂದರೆ
ಮನಸ್ಸು ಸ್ವಸ್ಥವಾಗಿದ್ದರೂ, ದೇಹದ ಬೇನೆಯು ತಾಪದಿಂದ ಮತ್ತು ವಿಷದಿಂದ,
ಕೆಟ್ಟಿದ್ದಂತೆ ತಾತ್ಕಾಲಿಕವಾಗಿ ವರ್ತಿಸುತ್ತದೆ.
{{gap}}ಆದರೆ ಕೆಲವು ದೈಹಿಕ ಲೋಪಗಳು ಅಥವಾ ಬೇನೆಗಳು, ಮನಸ್ಸಿನ
ಬೆಳವಣಿಗೆಯಲ್ಲಿ ಹಾಗೂ ನಡವಳಿಕೆಯಲ್ಲಿ ಶಾಶ್ವತವಾದ ಏರುಪೇರುಗಳನ್ನು
ಮಾಡುತ್ತದೆ. ಮನಸ್ಸು ಪಲ್ಲಟವಾದಂತೆಯೇ ಇವರು ನಡೆದುಕೊಳ್ಳುತ್ತಾರೆ. ಪೂರ್ಣ
ಸ್ವಾಸ್ಥ್ಯವನ್ನು ಇವರು ಎಂದೂ ಪಡೆಯಲು ಸಾಧ್ಯವಿಲ್ಲ. ಈ ಚಿಕಿತ್ಸೆಯನ್ನು
ಮಾಡಿಸೋಣ, ಆ ಪೂಜೆಯನ್ನು ಹಾಕಿಸೋಣ; ಪ್ರಸಿದ್ಧವಾದ ಆ ಯಾತ್ರಾಸ್ಥಳಕ್ಕೆ
ಹೋಗೋಣ; ಎಂದು ವೃಥಾ ಶ್ರಮವನ್ನೂ ಹಣದ ದುರ್ವ್ಯಯವನ್ನೂ
ಮಾಡುವಂತಾಗುತ್ತದೆ. ಇದನ್ನಾದರೂ ತಪ್ಪಿಸಿಕೊಳ್ಳಬಹುದು ; ವಿಷಯವನ್ನು
ಸರಿಯಾಗಿ ಅರ್ಥಮಾಡಿಕೊಂಡರೆ, ತಿಳಿದುಕೊಂಡರೆ ; ಇಂತಹ
ಮನೋರೋಗಗಳನ್ನು ಇನ್ನು ಮುಂದೆ ವಿವರಿಸಲಾಗುವುದು.
{{center|'''ಮಕ್ಕಳಲ್ಲಿ'''}}
{{Left|ಹುಟ್ಟು ದೋಷದ ಕಾಯಿಲೆಗಳು (Down's Syndrome)}}
{{gap}}ಐದು ವರ್ಷದ ಹೆಣ್ಣು ಮಗುವನ್ನು ಕರೆತಂದರು ಪರೀಕ್ಷೆಗೆಂದು. ಸರಿಯಾಗಿ
ಬೆಳೆದಿಲ್ಲ. ಕೆಮ್ಮು ಕಸಾಲೆ ಮೇಲಿಂದ ಮೇಲೆ ಬರುತ್ತದೆ. ಪರೀಕ್ಷೆ ಮಾಡಿಸಿ,
ಸೂಕ್ತ ಟಾನಿಕ್ ಕೊಡಿಸಬೇಕು ಎಂದು ಕರೆತಂದಿದ್ದರು. 'ಬಾ' ಎಂದು ಕರೆದಾಗ<noinclude></noinclude>
mox5xl7088290gha9gxtuw0v4mwb105
ಪುಟ:ಮನಮಂಥನ.pdf/೨೬೮
104
62715
316693
314433
2026-05-04T07:03:01Z
Shreesha Sharma
7840
/* Proofread */
316693
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ದೈಹಿಕ ಬೇನೆಗಳಿಂದ ಉಂಟಾಗುವ ಮನೋರೋಗಗಳು}}{{Right|೨೪೯}}
ನಗುನಗುತ್ತಾ ಡಾಕ್ಟರ ಹತ್ತಿರಕ್ಕೆ ಮಗು ಬಂದಿತು.
ತಾಯಿಯು ಕಂಚಿ ಕಡಸಿನ ತರಹ ಗಿಡ್ಡು. ಅಂದಮೇಲೆ ಮಗುವೂ
ಗಿಡ್ಡಾಗಿದೆ. ಆದರೆ ಕಣ್ಣಿಗೆ ಕಾಣುವಂತೇನೂ ಬಡಕಲಾಗಿರಲಿಲ್ಲ. ಕಣ್ಣುಗಳು
ಮಾತ್ರ ಚೀನಿಯರ ಕಣ್ಣುಗಳಂತೆ, ಬಂಗಾಳೀ ಚಿತ್ರಕಾರರ ಮೀನಾಕ್ಷಿಯರಂತೆ V
ಹಾಗಿದ್ದುವು. ಹೊರ ತುದಿಯು ಒಳತುದಿಗಿಂತ ಮೇಲಕ್ಕಿತ್ತು. ಕಣ್ಣುಗಳ ಮೂಗಿನ
ಕಡೆಯ ತುದಿಯಲ್ಲಿ ತೆಳು ಪೊರೆಯ ದುರ್ಮಾಂಸವು ಇತ್ತು.
ಮಗುವು ಹತ್ತಿರಕ್ಕೆ ಬಂದಿತು. ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು
ಕೊಡುತ್ತಿತ್ತು. ಪೆಚ್ಚು ಪೆಚ್ಚಾಗಿ ಏನೂ ಉತ್ತರಿಸಲಿಲ್ಲ. ಕೆಲವು ಮಕ್ಕಳು ಅತಿ
ನಾಚಿಕೆಯಿಂದ, ಬಲು ಸಂಕೋಚದಿಂದ ಹೊಸಬರೊಡನೆ ಮಾತನಾಡುತ್ತವೆ.
ಆದರೆ ಈ ಮಗು ಹಾಗಲ್ಲ. ಸದರದಿಂದಲೇ ಮಾತನಾಡುತ್ತಿತ್ತು.
ದೇಹಪರೀಕ್ಷೆಯನ್ನು ಮಾಡಿದಾಗ ಹೃದಯದಲ್ಲೂ ಹುಟ್ಟು ಲೋಪವು
ಇದ್ದುದು ಪತ್ತೆಯಾಯಿತು. ಇವೆಲ್ಲಾ ಚಿಹ್ನೆಗಳು (Down's Syndrome) ಬೇನೆ
ಎಂದು ಸ್ಪಷ್ಟ ಮಾಡಿದುವು.
ತಾಯ ಗರ್ಭದಲ್ಲಿ ಇಂತಹ ಮಕ್ಕಳು ಬೆಳೆಯುವಾಗ, ಮೆದುಳಿನ ಬುಡದ
ಭಾಗದಲ್ಲಿ; ಹೃದಯದಲ್ಲಿ; ಹಾಗೂ ಪಿಟ್ಯೂಟರಿ ಗ್ರಂಥಿಯಲ್ಲಿ ವಯಸ್ಸಿಗೆ ತಕ್ಕ
ಬೆಳವಣಿಗೆಯು ಕಾರಣಾಂತರಗಳಿಂದ ಸ್ತಬ್ಧವಾಗಿರುತ್ತದೆ. ಮಗುವು ಮುಂದೆ
ಬೆಳೆಯುವಾಗ ಜನ್ಮ ತಾಳಿದ ಮೇಲೆ ಬೆಳೆಯುವಾಗ, ಹುಟ್ಟು ದೋಷದಿಂದಾಗಿ
ಆ ಭಾಗಗಳು ವೃದ್ಧಿಯಾಗುವುದಿಲ್ಲ. ಹಾಗಾಗಿ ಒಟ್ಟು ಬೆಳವಣಿಗೆಯೂ ಕುಂಟುತ್ತದೆ.
ಅಲ್ಲದೆ ಮನಸ್ಸು ಅಣಿಯಾಗಿ ರೂಪುಗೊಳ್ಳುವುದಿಲ್ಲ. ಸಾಮಾನ್ಯವಾಗಿ ಇಂತಹ
ಮಕ್ಕಳ ಬಾಳು ಎರಡು ಮೂರು ದಶಕಗಳಷ್ಟು ಮಾತ್ರ
ವಿದ್ಯಾಭ್ಯಾಸವನ್ನು ಮಾಡಿಸುವಾಗ, ಬಲು ಎಚ್ಚರವನ್ನು ವಹಿಸಬೇಕು.
ಎಲ್ಲ ಮಕ್ಕಳಂತೆ ಬೇಗ ಕಲಿಯಲಿಲ್ಲ ಎಂದು ಶಿಕ್ಷೆ ಮಾಡಿದರೆ, ಅಟ್ಟದ ಮೇಲಿಂದ
ಬಿದ್ದು ಗಾಯಗೊಂಡವರನ್ನು ಶಿಕ್ಷಿಸಿದಂತಾಗುತ್ತದೆ. ತಾಳ್ಮೆಯಿಂದ ಸಾಧ್ಯವಾದಷ್ಟು
ವಿದ್ಯೆಯನ್ನು ಕಲಿಸಬೇಕು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇಂತಹ ಮಕ್ಕಳಿಗಾಗಿ ಪ್ರತ್ಯೇಕವಾದ
ವಿದ್ಯಾಭ್ಯಾಸ ಕ್ರಮಗಳಿವೆ.
'ನಮ್ಮ ಮಗು ಸ್ವಲ್ಪ ಪೆಚ್ಚು. ಆದರೆ ಎಲ್ಲರಂತೆಯೆ ಸಂಸಾರವನ್ನು
ಮಾಡಿಕೊಂಡಿರುತ್ತದೆ' ಎಂದು ತಾಯ್ತಂದೆಯರು ಅಂದುಕೊಳ್ಳುತ್ತಾರೆ.
'ಪ್ರಾಪ್ತವಯಸ್ಸಿನಲ್ಲಿ ಸಾಧ್ಯವಾದರೆ ಮದುವೆಯನ್ನೂ ಮಾಡಿಬಿಡುತ್ತಾರೆ' ಹೇಗೋ
ಸಂಸಾರವನ್ನು ನಿಭಾಯಿಸುತ್ತಾಳೆ ಎಂದು ಆಸೆ ಪಡುತ್ತಾರೆ.<noinclude></noinclude>
8r3hkl9rz20bcx4huejwv8zvydlgpv3
316712
316693
2026-05-04T07:20:14Z
Shreelatha.Halemane
7642
/* Validated */
316712
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ದೈಹಿಕ ಬೇನೆಗಳಿಂದ ಉಂಟಾಗುವ ಮನೋರೋಗಗಳು}}{{Right|೨೪೯}}
ನಗುನಗುತ್ತಾ ಡಾಕ್ಟರ ಹತ್ತಿರಕ್ಕೆ ಮಗು ಬಂದಿತು.
{{gap}}ತಾಯಿಯು ಕಂಚಿ ಕಡಸಿನ ತರಹ ಗಿಡ್ಡು. ಅಂದಮೇಲೆ ಮಗುವೂ
ಗಿಡ್ಡಾಗಿದೆ. ಆದರೆ ಕಣ್ಣಿಗೆ ಕಾಣುವಂತೇನೂ ಬಡಕಲಾಗಿರಲಿಲ್ಲ. ಕಣ್ಣುಗಳು
ಮಾತ್ರ ಚೀನಿಯರ ಕಣ್ಣುಗಳಂತೆ, ಬಂಗಾಳೀ ಚಿತ್ರಕಾರರ ಮೀನಾಕ್ಷಿಯರಂತೆ V
ಹಾಗಿದ್ದುವು. ಹೊರ ತುದಿಯು ಒಳತುದಿಗಿಂತ ಮೇಲಕ್ಕಿತ್ತು. ಕಣ್ಣುಗಳ ಮೂಗಿನ
ಕಡೆಯ ತುದಿಯಲ್ಲಿ ತೆಳು ಪೊರೆಯ ದುರ್ಮಾಂಸವು ಇತ್ತು.
{{gap}}ಮಗುವು ಹತ್ತಿರಕ್ಕೆ ಬಂದಿತು. ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು
ಕೊಡುತ್ತಿತ್ತು. ಪೆಚ್ಚು ಪೆಚ್ಚಾಗಿ ಏನೂ ಉತ್ತರಿಸಲಿಲ್ಲ. ಕೆಲವು ಮಕ್ಕಳು ಅತಿ
ನಾಚಿಕೆಯಿಂದ, ಬಲು ಸಂಕೋಚದಿಂದ ಹೊಸಬರೊಡನೆ ಮಾತನಾಡುತ್ತವೆ.
ಆದರೆ ಈ ಮಗು ಹಾಗಲ್ಲ. ಸದರದಿಂದಲೇ ಮಾತನಾಡುತ್ತಿತ್ತು.
{{gap}}ದೇಹಪರೀಕ್ಷೆಯನ್ನು ಮಾಡಿದಾಗ ಹೃದಯದಲ್ಲೂ ಹುಟ್ಟು ಲೋಪವು
ಇದ್ದುದು ಪತ್ತೆಯಾಯಿತು. ಇವೆಲ್ಲಾ ಚಿಹ್ನೆಗಳು (Down's Syndrome) ಬೇನೆ
ಎಂದು ಸ್ಪಷ್ಟ ಮಾಡಿದುವು.
{{gap}}ತಾಯ ಗರ್ಭದಲ್ಲಿ ಇಂತಹ ಮಕ್ಕಳು ಬೆಳೆಯುವಾಗ, ಮೆದುಳಿನ ಬುಡದ
ಭಾಗದಲ್ಲಿ; ಹೃದಯದಲ್ಲಿ; ಹಾಗೂ ಪಿಟ್ಯೂಟರಿ ಗ್ರಂಥಿಯಲ್ಲಿ ವಯಸ್ಸಿಗೆ ತಕ್ಕ
ಬೆಳವಣಿಗೆಯು ಕಾರಣಾಂತರಗಳಿಂದ ಸ್ತಬ್ಧವಾಗಿರುತ್ತದೆ. ಮಗುವು ಮುಂದೆ
ಬೆಳೆಯುವಾಗ ಜನ್ಮ ತಾಳಿದ ಮೇಲೆ ಬೆಳೆಯುವಾಗ, ಹುಟ್ಟು ದೋಷದಿಂದಾಗಿ
ಆ ಭಾಗಗಳು ವೃದ್ಧಿಯಾಗುವುದಿಲ್ಲ. ಹಾಗಾಗಿ ಒಟ್ಟು ಬೆಳವಣಿಗೆಯೂ ಕುಂಟುತ್ತದೆ.
ಅಲ್ಲದೆ ಮನಸ್ಸು ಅಣಿಯಾಗಿ ರೂಪುಗೊಳ್ಳುವುದಿಲ್ಲ. ಸಾಮಾನ್ಯವಾಗಿ ಇಂತಹ
ಮಕ್ಕಳ ಬಾಳು ಎರಡು ಮೂರು ದಶಕಗಳಷ್ಟು ಮಾತ್ರ
{{gap}}ವಿದ್ಯಾಭ್ಯಾಸವನ್ನು ಮಾಡಿಸುವಾಗ, ಬಲು ಎಚ್ಚರವನ್ನು ವಹಿಸಬೇಕು.
ಎಲ್ಲ ಮಕ್ಕಳಂತೆ ಬೇಗ ಕಲಿಯಲಿಲ್ಲ ಎಂದು ಶಿಕ್ಷೆ ಮಾಡಿದರೆ, ಅಟ್ಟದ ಮೇಲಿಂದ
ಬಿದ್ದು ಗಾಯಗೊಂಡವರನ್ನು ಶಿಕ್ಷಿಸಿದಂತಾಗುತ್ತದೆ. ತಾಳ್ಮೆಯಿಂದ ಸಾಧ್ಯವಾದಷ್ಟು
ವಿದ್ಯೆಯನ್ನು ಕಲಿಸಬೇಕು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇಂತಹ ಮಕ್ಕಳಿಗಾಗಿ ಪ್ರತ್ಯೇಕವಾದ
ವಿದ್ಯಾಭ್ಯಾಸ ಕ್ರಮಗಳಿವೆ.
{{gap}}'ನಮ್ಮ ಮಗು ಸ್ವಲ್ಪ ಪೆಚ್ಚು. ಆದರೆ ಎಲ್ಲರಂತೆಯೆ ಸಂಸಾರವನ್ನು
ಮಾಡಿಕೊಂಡಿರುತ್ತದೆ' ಎಂದು ತಾಯ್ತಂದೆಯರು ಅಂದುಕೊಳ್ಳುತ್ತಾರೆ.
'ಪ್ರಾಪ್ತವಯಸ್ಸಿನಲ್ಲಿ ಸಾಧ್ಯವಾದರೆ ಮದುವೆಯನ್ನೂ ಮಾಡಿಬಿಡುತ್ತಾರೆ' ಹೇಗೋ
ಸಂಸಾರವನ್ನು ನಿಭಾಯಿಸುತ್ತಾಳೆ ಎಂದು ಆಸೆ ಪಡುತ್ತಾರೆ.<noinclude></noinclude>
kocdu8g9otv28mryx3tvzqd7e0dyf4q
ಪುಟ:ಮನಮಂಥನ.pdf/೨೬೯
104
62716
316694
314434
2026-05-04T07:04:07Z
Shreesha Sharma
7840
/* Proofread */
316694
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೨೫೦}}{{Right|ಮನಮಂಥನ}}
'ಪೆದ್ದು ಹೆಣ್ಣು ; ಬಡಿದರೆ ಬುದ್ಧಿ ಬರುತ್ತದೆ' ಎಂದು ಗಂಡನ ಮನೆಯವರು
ನಡೆದುಕೊಳ್ಳುತ್ತಾರೆ. ದಿಟವಾಗಿಯೂ ಇಂತಹ ಮಕ್ಕಳ ಭವಿಷ್ಯವು ಶೋಚನೀಯ
ಅಲ್ಪಾಯುಗಳಾದುದೊಂದೇ ದೇವರ ಕೃಪೆ.
ಮಗುವಿನ ತಾಯ್ತಂದೆಯರನ್ನು ಕರೆಸಿ, ಇದ್ದ ವಿಷಯವನ್ನು ಸ್ಪಷ್ಟವಾಗಿ
ವಿವರಿಸಲಾಯಿತು. 'ಗರ್ಭದಲ್ಲಿದ್ದಾಗಲೇ ಈ ನ್ಯೂನತೆಗಳು ಸಂಭವಿಸಿದವು.
ಇದನ್ನು ಸರಿಪಡಿಸುವಂತಹ ಜ್ಞಾನವು ವೈದ್ಯವಿಜ್ಞಾನದಲ್ಲಿ ಇನ್ನೂ ಸಾಧಿತವಾಗಿಲ್ಲ.
ಚಿಕಿತ್ಸೆ ಮಾಡಿಸಿದರೆ ಮುಂದೆ ಎಲ್ಲರಂತೆ ಈ ಮಗುವೂ ಬೆಳೆಯುತ್ತದೆ ಎಂದು
ನಂಬ ಕೂಡದು. ಮೆದುಳಿನಲ್ಲಿರುವ ದೋಷದಿಂದ ಮಗುವು ಪೆದ್ದುಪೆದ್ದಾಗಿಯೇ
ಇರುತ್ತದೆ. ಮನೆಪಾಠಗಳನ್ನಿಟ್ಟು ಕಲಿಸುತ್ತೀವಿ ಎಂದು ಆಸೆ ಇಟ್ಟುಕೊಳ್ಳಬೇಡಿ.
ಹೃದಯದಲ್ಲಿ ಇಂತಹ ಹುಟ್ಟು ದೋಷವಿದೆ. ಅದರಿಂದಾಗಿ ಆಗಾಗ್ಗೆ ಕೆಮ್ಮು,
ಜ್ವರ, ಉಬ್ಬಸ, ಇತ್ಯಾದಿ ಶ್ವಾಸಕೋಶದ ಬೇನೆಗಳು ಬರುತ್ತವೆ. ಸೂಕ್ತ ಚಿಕಿತ್ಸೆಯನ್ನು
ತತ್ಕ್ಷಣ ಕೊಡಿಸಬೇಕು.
ಪಿಟ್ಯೂಟರಿ ದೋಷದಿಂದಾಗಿ ಹಾರ್ಮೋನುಗಳ ಅವ್ಯವಸ್ಥೆಯು ಇರುತ್ತದೆ.
ಅದರಿಂದಾಗಿ ಬೆಳವಣಿಗೆಯಲ್ಲೂ ನ್ಯೂನತೆಗಳಿರುತ್ತವೆ. ಇವೆಲ್ಲಾ ಟಾನಿಕ್ಗಳಿಂದ
ಸರಿಹೋಗುವುದಿಲ್ಲ. ವೃಥಾ ಹಣವನ್ನು ಲೋಪ ಮಾಡಬೇಡಿ, ಇಲ್ಲದ
ಅನಿಷ್ಟಗಳನ್ನು ತರಹಾವಾರಿ ಔಷಧಿಗಳಿಂದ ತರಿಸಬೇಡಿ.
ಇದೂ ಒಂದು ಗಂಡು ಮಗು ಎಂದು ತಿಳಿದುಕೊಂಡು ಮನೆಯಲ್ಲಿಯೇ
ಇರುವಂತೆ ಏರ್ಪಾಡುಗಳನ್ನು ಮಾಡಿ, ಮದುವೆಗಿದುವೆಯ ಯೋಚನೆಯನ್ನು
ಮಾಡಬೇಡಿ,
ಎಂದು ವಿಶದವಾಗಿ ಹೇಳಲಾಯಿತು.
ದೈಹಿಕವಾದ ಹುಟ್ಟು ದೋಷದಿಂದ ಉಂಟಾಗುವ ಈ ಬೇನೆಯನ್ನು
ಮನೋರೋಗ ಎಂದು ಕರೆಯಬಾರದು. ಆದರೂ ಮನಸ್ಸಿನ ಪೆದ್ದುತನವೇ
ರೋಗದ ಪ್ರಮುಖ ಚಿಹ್ನೆಯಾದುದರಿಂದ, ಸುಲಭವಾಗಿ ತಿಳಿದುಕೊಳ್ಳವುದಕ್ಕಾಗಿ
ಆ ಗುಂಪಿನಲ್ಲಿ ಉಲ್ಲೇಖಿಸಬಹುದು.
'''ಮೆನಿಂಜೈಟಿಸ್'''
ಮೆದುಳು ಮತ್ತು ಮೆದುಳಿನ ಹೊರಪೊರೆಗಳಿಗೆ ವೈರಸ್ಸುಗಳು
ಬ್ಯಾಕ್ಟಿರಿಯಾಗಳು ಸೋಂಕಿಕೊಂಡು, ಜ್ವರ, ಸೆಳೆವು, ಜ್ಞಾನಾಜ್ಞಾನ ಇತ್ಯಾದಿಗಳು
ಉಂಟಾಗುತ್ತವೆ. ಮೆನಿಂಜೈಟಿಸ್ ಎಂದು ಈ ಬೇನೆಗಳನ್ನು ಕರೆಯುತ್ತಾರೆ.<noinclude></noinclude>
82ks9c3n4ai3ja6z2kd7elb3wfvzspe
316713
316694
2026-05-04T07:20:56Z
Shreelatha.Halemane
7642
/* Validated */
316713
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೨೫೦}}{{Right|ಮನಮಂಥನ}}
{{gap}}'ಪೆದ್ದು ಹೆಣ್ಣು ; ಬಡಿದರೆ ಬುದ್ಧಿ ಬರುತ್ತದೆ' ಎಂದು ಗಂಡನ ಮನೆಯವರು
ನಡೆದುಕೊಳ್ಳುತ್ತಾರೆ. ದಿಟವಾಗಿಯೂ ಇಂತಹ ಮಕ್ಕಳ ಭವಿಷ್ಯವು ಶೋಚನೀಯ
ಅಲ್ಪಾಯುಗಳಾದುದೊಂದೇ ದೇವರ ಕೃಪೆ.
{{gap}}ಮಗುವಿನ ತಾಯ್ತಂದೆಯರನ್ನು ಕರೆಸಿ, ಇದ್ದ ವಿಷಯವನ್ನು ಸ್ಪಷ್ಟವಾಗಿ
ವಿವರಿಸಲಾಯಿತು. 'ಗರ್ಭದಲ್ಲಿದ್ದಾಗಲೇ ಈ ನ್ಯೂನತೆಗಳು ಸಂಭವಿಸಿದವು.
ಇದನ್ನು ಸರಿಪಡಿಸುವಂತಹ ಜ್ಞಾನವು ವೈದ್ಯವಿಜ್ಞಾನದಲ್ಲಿ ಇನ್ನೂ ಸಾಧಿತವಾಗಿಲ್ಲ.
ಚಿಕಿತ್ಸೆ ಮಾಡಿಸಿದರೆ ಮುಂದೆ ಎಲ್ಲರಂತೆ ಈ ಮಗುವೂ ಬೆಳೆಯುತ್ತದೆ ಎಂದು
ನಂಬ ಕೂಡದು. ಮೆದುಳಿನಲ್ಲಿರುವ ದೋಷದಿಂದ ಮಗುವು ಪೆದ್ದುಪೆದ್ದಾಗಿಯೇ
ಇರುತ್ತದೆ. ಮನೆಪಾಠಗಳನ್ನಿಟ್ಟು ಕಲಿಸುತ್ತೀವಿ ಎಂದು ಆಸೆ ಇಟ್ಟುಕೊಳ್ಳಬೇಡಿ.
ಹೃದಯದಲ್ಲಿ ಇಂತಹ ಹುಟ್ಟು ದೋಷವಿದೆ. ಅದರಿಂದಾಗಿ ಆಗಾಗ್ಗೆ ಕೆಮ್ಮು,
ಜ್ವರ, ಉಬ್ಬಸ, ಇತ್ಯಾದಿ ಶ್ವಾಸಕೋಶದ ಬೇನೆಗಳು ಬರುತ್ತವೆ. ಸೂಕ್ತ ಚಿಕಿತ್ಸೆಯನ್ನು
ತತ್ಕ್ಷಣ ಕೊಡಿಸಬೇಕು.
{{gap}}ಪಿಟ್ಯೂಟರಿ ದೋಷದಿಂದಾಗಿ ಹಾರ್ಮೋನುಗಳ ಅವ್ಯವಸ್ಥೆಯು ಇರುತ್ತದೆ.
ಅದರಿಂದಾಗಿ ಬೆಳವಣಿಗೆಯಲ್ಲೂ ನ್ಯೂನತೆಗಳಿರುತ್ತವೆ. ಇವೆಲ್ಲಾ ಟಾನಿಕ್ಗಳಿಂದ
ಸರಿಹೋಗುವುದಿಲ್ಲ. ವೃಥಾ ಹಣವನ್ನು ಲೋಪ ಮಾಡಬೇಡಿ, ಇಲ್ಲದ
ಅನಿಷ್ಟಗಳನ್ನು ತರಹಾವಾರಿ ಔಷಧಿಗಳಿಂದ ತರಿಸಬೇಡಿ.
{{gap}}ಇದೂ ಒಂದು ಗಂಡು ಮಗು ಎಂದು ತಿಳಿದುಕೊಂಡು ಮನೆಯಲ್ಲಿಯೇ
ಇರುವಂತೆ ಏರ್ಪಾಡುಗಳನ್ನು ಮಾಡಿ, ಮದುವೆಗಿದುವೆಯ ಯೋಚನೆಯನ್ನು
ಮಾಡಬೇಡಿ,
{{gap}}ಎಂದು ವಿಶದವಾಗಿ ಹೇಳಲಾಯಿತು.
{{gap}}ದೈಹಿಕವಾದ ಹುಟ್ಟು ದೋಷದಿಂದ ಉಂಟಾಗುವ ಈ ಬೇನೆಯನ್ನು
ಮನೋರೋಗ ಎಂದು ಕರೆಯಬಾರದು. ಆದರೂ ಮನಸ್ಸಿನ ಪೆದ್ದುತನವೇ
ರೋಗದ ಪ್ರಮುಖ ಚಿಹ್ನೆಯಾದುದರಿಂದ, ಸುಲಭವಾಗಿ ತಿಳಿದುಕೊಳ್ಳವುದಕ್ಕಾಗಿ
ಆ ಗುಂಪಿನಲ್ಲಿ ಉಲ್ಲೇಖಿಸಬಹುದು.
'''ಮೆನಿಂಜೈಟಿಸ್'''
{{gap}}ಮೆದುಳು ಮತ್ತು ಮೆದುಳಿನ ಹೊರಪೊರೆಗಳಿಗೆ ವೈರಸ್ಸುಗಳು
ಬ್ಯಾಕ್ಟಿರಿಯಾಗಳು ಸೋಂಕಿಕೊಂಡು, ಜ್ವರ, ಸೆಳೆವು, ಜ್ಞಾನಾಜ್ಞಾನ ಇತ್ಯಾದಿಗಳು
ಉಂಟಾಗುತ್ತವೆ. ಮೆನಿಂಜೈಟಿಸ್ ಎಂದು ಈ ಬೇನೆಗಳನ್ನು ಕರೆಯುತ್ತಾರೆ.<noinclude></noinclude>
pdrsv2jfzqk88y8bplfnugvynyajsky
ಪುಟ:ಮನಮಂಥನ.pdf/೨೭೦
104
62717
316695
314435
2026-05-04T07:05:12Z
Shreesha Sharma
7840
/* Proofread */
316695
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ದೈಹಿಕ ಬೇನೆಗಳಿಂದ ಉಂಟಾಗುವ ಮನೋರೋಗಗಳು}}{{Right|೨೫೧}}
ಮೆನಿಂಜೀಸ್:- ಮೆದುಳಿನ ಹೊರಗಿರುವ ರಕ್ಷಣಾ ಪೊರೆಗಳು. ಇವುಗಳಿಗೆ
ಸೋಂಕಿ ಕಾಡುವ ಬೇನೆಗಳನ್ನು ಮೆನಿಂಜೈಟಿಸ್ ಎನ್ನುತ್ತಾರೆ.
ಮೂರು ವರ್ಷದ ಲಚ್ಚುವಿಗೆ ಹಠಾತ್ತನೆ ಒಂದು ದಿನ ಕೆಂಡಾಮಂಡಲ
ಜ್ವರವು ಬಂತು. ಮೂರು ನಾಲ್ಕು ತಾಸುಗಳಲ್ಲಿ ಉಗ್ರವಾದ ಮೂರ್ಛಯೂ
ಎರಡು ಮೂರು ಸಾರಿ ಬಂದಿತು. ತತ್ಕ್ಷಣ ಆಸ್ಪತ್ರೆಗೆ ಸೇರಿಸಿದರು. ಅಗತ್ಯ
ಚಿಕಿತ್ಸೆಯೂ ಸಕಾಲದಲ್ಲಿ ದೊರಕಿತು. ಆರು ದಿನಗಳಾದ ಮೇಲೆ ಜ್ಞಾನ ಬಂತು.
ಜ್ವರವೂ ಇಳಿದಿತ್ತು. ಹದಿನೈದು ದಿನಗಳಾದ ಮೇಲೆ ಮನೆಗೆ ಕರೆದುಕೊಂಡು
ಬಂದರು.
ಎಂಟು ವರ್ಷದ ಮಗುವಾದಾಗ ದಂಟು ಎನ್ನಲು ಕಲಿಯಲಿಲ್ಲ.
ಈ ಮಧ್ಯೆ ಆಗೊಮ್ಮೆ ಈಗೊಮ್ಮೆ ಮೂರ್ಛಯು ಬರುತ್ತಿತ್ತು. ಅದಕ್ಕೆಂದು
ಔಷಧಿಗಳನ್ನು ಸತತವಾಗಿ ಕೊಡುತ್ತಲೇ ಇದ್ದರು.
ಮಗುವಿನ ಮನಸ್ಸು ದೇಹದ ಜತೆಗೆ ಸರಿಯಾಗಿ ಬೆಳೆಯಲೇ ಇಲ್ಲ.
ತಡವರಿಸಿಕೊಂಡು ತೊದಲುತ್ತಾ ಎರಡು ಮಾತಾಡುತ್ತಿದ್ದ ಲಚ್ಚು ಹೆಸರು ಕೂಗಿದರೆ
ಅತ್ತ ನೋಡುತ್ತಲಿದ್ದ. ಮನೆಯವರನ್ನು ಗುರುತಿಸುತ್ತಿದ್ದ. ಅಷ್ಟಕ್ಕೇ ಮುಗಿಯಿತು,
ಅವನ ಮನಸ್ಸಿನ ಮುಂದೋಟ.
ಮೆನಿಂಜೈಟಿಸ್ ಬಂದಾಗ, ಮೂರ್ಛಗಳು ಯದ್ವಾತದ್ವಾ ಬಡಿದಾಗ,
ಜ್ವರದ ತಾಪವು ಅತಿಯಾಗಿದ್ದಾಗ ಮೆದುಳಿನ ಕೆಲಭಾಗಗಳಲ್ಲಿ ಅಲ್ಪಸ್ವಲ್ಪ ರಕ್ತ
ಸ್ರಾವವಾಗಬಹುದು. ಕಾಲಾನುಕಾಲದಲ್ಲಿ ಹೆಪ್ಪುಗಟ್ಟಿಕೊಂಡು ಮೆದುಳಿನ ನೆರೆ
ಭಾಗಗಳನ್ನು ಒತ್ತಿ ಅಲ್ಲಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಅಂದಮೇಲೆ
ಮನಸ್ಸಿಗೆ ಆಧಾರವಾದ ಮೆದುಳು ಅಜ್ಜಿಬಜ್ಜಿಯಾದರೆ, ಮನಸ್ಸು ತಾನೇ ಹೇಗೆ
ಬೆಳೆಯಲು ಸಾಧ್ಯ !
ಲಚ್ಚುವಿಗೆ ಮನೋರೋಗವಿದೆ ಎಂದು ಹೇಳುವಂತಿಲ್ಲ. ಮೆದುಳಿಗೆ
ಬಡಿದ ಧಕ್ಕೆಯಿಂದಾಗಿ ಅವನ ಮನಸ್ಸಿನ ಬೆಳವಣಿಗೆಯು ಸ್ತಬ್ಧವಾಗಿದೆ. ಹೆಡ್ಡನಂತೆ
ನಡೆದುಕೊಳ್ಳುತ್ತಾನೆ. ಆದರೆ ಅದನ್ನು ಸರಿಪಡಿಸುವ ವಿಧಾನಗಳು ಇನ್ನೂ ಕಂಡು
ಹಿಡಿಯಲ್ಪಟ್ಟಿಲ್ಲ. ಉಪಶಮನದ ಚಿಕಿತ್ಸೆಗಳೇ ಗತಿ.
'''ಮುಪ್ಪಿನಲ್ಲಿ'''
ಚೆನ್ನಾಗಿ ಬಾಳಿ ಬದುಕಿದವರು ಸಂಪಂಗಿರಾಮಯ್ಯನವರು. ಅರವತ್ತಾರರ
ಪ್ರಾಯವಾದರೂ ಲಕ್ಷಣವಾಗಿ ಉಂಡು ಜೀರ್ಣಿಸಿಕೊಳ್ಳುತ್ತಿದ್ದರು. ಬೆಳೆದ
ಮಕ್ಕಳೆಲ್ಲರೂ ಸಾಕಷ್ಟು ಸಂಪಾದಿಸಿಕೊಂಡಿದ್ದರು. ವಿಭೂತಿ, ದೇವರ ಪೂಜೆ,<noinclude></noinclude>
mpcdmcqgop1lqeugtl860x2r64mprad
316714
316695
2026-05-04T07:21:51Z
Shreelatha.Halemane
7642
/* Validated */
316714
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ದೈಹಿಕ ಬೇನೆಗಳಿಂದ ಉಂಟಾಗುವ ಮನೋರೋಗಗಳು}}{{Right|೨೫೧}}
ಮೆನಿಂಜೀಸ್:- ಮೆದುಳಿನ ಹೊರಗಿರುವ ರಕ್ಷಣಾ ಪೊರೆಗಳು. ಇವುಗಳಿಗೆ
ಸೋಂಕಿ ಕಾಡುವ ಬೇನೆಗಳನ್ನು ಮೆನಿಂಜೈಟಿಸ್ ಎನ್ನುತ್ತಾರೆ.
{{gap}}ಮೂರು ವರ್ಷದ ಲಚ್ಚುವಿಗೆ ಹಠಾತ್ತನೆ ಒಂದು ದಿನ ಕೆಂಡಾಮಂಡಲ
ಜ್ವರವು ಬಂತು. ಮೂರು ನಾಲ್ಕು ತಾಸುಗಳಲ್ಲಿ ಉಗ್ರವಾದ ಮೂರ್ಛಯೂ
ಎರಡು ಮೂರು ಸಾರಿ ಬಂದಿತು. ತತ್ಕ್ಷಣ ಆಸ್ಪತ್ರೆಗೆ ಸೇರಿಸಿದರು. ಅಗತ್ಯ
ಚಿಕಿತ್ಸೆಯೂ ಸಕಾಲದಲ್ಲಿ ದೊರಕಿತು. ಆರು ದಿನಗಳಾದ ಮೇಲೆ ಜ್ಞಾನ ಬಂತು.
ಜ್ವರವೂ ಇಳಿದಿತ್ತು. ಹದಿನೈದು ದಿನಗಳಾದ ಮೇಲೆ ಮನೆಗೆ ಕರೆದುಕೊಂಡು
ಬಂದರು.
{{gap}}ಎಂಟು ವರ್ಷದ ಮಗುವಾದಾಗ ದಂಟು ಎನ್ನಲು ಕಲಿಯಲಿಲ್ಲ.
ಈ ಮಧ್ಯೆ ಆಗೊಮ್ಮೆ ಈಗೊಮ್ಮೆ ಮೂರ್ಛಯು ಬರುತ್ತಿತ್ತು. ಅದಕ್ಕೆಂದು
ಔಷಧಿಗಳನ್ನು ಸತತವಾಗಿ ಕೊಡುತ್ತಲೇ ಇದ್ದರು.
{{gap}}ಮಗುವಿನ ಮನಸ್ಸು ದೇಹದ ಜತೆಗೆ ಸರಿಯಾಗಿ ಬೆಳೆಯಲೇ ಇಲ್ಲ.
ತಡವರಿಸಿಕೊಂಡು ತೊದಲುತ್ತಾ ಎರಡು ಮಾತಾಡುತ್ತಿದ್ದ ಲಚ್ಚು ಹೆಸರು ಕೂಗಿದರೆ
ಅತ್ತ ನೋಡುತ್ತಲಿದ್ದ. ಮನೆಯವರನ್ನು ಗುರುತಿಸುತ್ತಿದ್ದ. ಅಷ್ಟಕ್ಕೇ ಮುಗಿಯಿತು,
ಅವನ ಮನಸ್ಸಿನ ಮುಂದೋಟ.
{{gap}}ಮೆನಿಂಜೈಟಿಸ್ ಬಂದಾಗ, ಮೂರ್ಛಗಳು ಯದ್ವಾತದ್ವಾ ಬಡಿದಾಗ,
ಜ್ವರದ ತಾಪವು ಅತಿಯಾಗಿದ್ದಾಗ ಮೆದುಳಿನ ಕೆಲಭಾಗಗಳಲ್ಲಿ ಅಲ್ಪಸ್ವಲ್ಪ ರಕ್ತ
ಸ್ರಾವವಾಗಬಹುದು. ಕಾಲಾನುಕಾಲದಲ್ಲಿ ಹೆಪ್ಪುಗಟ್ಟಿಕೊಂಡು ಮೆದುಳಿನ ನೆರೆ
ಭಾಗಗಳನ್ನು ಒತ್ತಿ ಅಲ್ಲಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಅಂದಮೇಲೆ
ಮನಸ್ಸಿಗೆ ಆಧಾರವಾದ ಮೆದುಳು ಅಜ್ಜಿಬಜ್ಜಿಯಾದರೆ, ಮನಸ್ಸು ತಾನೇ ಹೇಗೆ
ಬೆಳೆಯಲು ಸಾಧ್ಯ !
{{gap}}ಲಚ್ಚುವಿಗೆ ಮನೋರೋಗವಿದೆ ಎಂದು ಹೇಳುವಂತಿಲ್ಲ. ಮೆದುಳಿಗೆ
ಬಡಿದ ಧಕ್ಕೆಯಿಂದಾಗಿ ಅವನ ಮನಸ್ಸಿನ ಬೆಳವಣಿಗೆಯು ಸ್ತಬ್ಧವಾಗಿದೆ. ಹೆಡ್ಡನಂತೆ
ನಡೆದುಕೊಳ್ಳುತ್ತಾನೆ. ಆದರೆ ಅದನ್ನು ಸರಿಪಡಿಸುವ ವಿಧಾನಗಳು ಇನ್ನೂ ಕಂಡು
ಹಿಡಿಯಲ್ಪಟ್ಟಿಲ್ಲ. ಉಪಶಮನದ ಚಿಕಿತ್ಸೆಗಳೇ ಗತಿ.
'''ಮುಪ್ಪಿನಲ್ಲಿ'''
{{gap}}ಚೆನ್ನಾಗಿ ಬಾಳಿ ಬದುಕಿದವರು ಸಂಪಂಗಿರಾಮಯ್ಯನವರು. ಅರವತ್ತಾರರ
ಪ್ರಾಯವಾದರೂ ಲಕ್ಷಣವಾಗಿ ಉಂಡು ಜೀರ್ಣಿಸಿಕೊಳ್ಳುತ್ತಿದ್ದರು. ಬೆಳೆದ
ಮಕ್ಕಳೆಲ್ಲರೂ ಸಾಕಷ್ಟು ಸಂಪಾದಿಸಿಕೊಂಡಿದ್ದರು. ವಿಭೂತಿ, ದೇವರ ಪೂಜೆ,<noinclude></noinclude>
cbzpywrkzqqtoptdwyjaywdw335s9jh
ಪುಟ:ಮನಮಂಥನ.pdf/೨೭೧
104
62718
316696
314436
2026-05-04T07:05:59Z
Shreesha Sharma
7840
/* Proofread */
316696
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೨೫೨}}{{Right|ಮನಮಂಥನ}}
ಅಭಿಷೇಕ, ಅಂತ ಸುಮಾರು ಹೊತ್ತು ಕಳೆಯುತ್ತಿದ್ದರೂ ಪುಣ್ಯಾತ್ಮ ಏಳುತ್ತಿದ್ದುದು
ಬೆಳಿಗ್ಗೆ ಏಳರ ಮೇಲೆಯೇ. ಅನಂತರ ಕಾಫಿ, ನಂತರ ಸ್ನಾನ, ಆಮೇಲೆ
ದೇವರಪೂಜೆ, ಆರಾಮವಾಗಿ ಪೂಜೆಯನ್ನು ಮಾಡಿ, ನಂತರ ದೇವರಂತೆ ತಾನೂ
ವಿಶ್ರಾಂತಿ ಪಡೆದು, ಊಟಕ್ಕೇಳುತ್ತಿದ್ದ ರಿಟಾಯ್ರ್ಡ್ ಆಫೀಸರು.
ಇತ್ತಿಂದೀಚೆಗೆ ಎಲ್ಲರ ಮೇಲೂ, ಸಣ್ಣಪುಟ್ಟ ಕಾರಣಗಳಿಗೆಲ್ಲಾ
ಸಿಡುಕಾಡುವುದು ಹೆಚ್ಚಾಗುತ್ತ ಬಂದಿತು. ನಾಳೆ ಗಣೇಶನ ಹಬ್ಬ, ಬೆಳಿಗ್ಗೆ ಎಂಟರ
ಹೊತ್ತಿಗಾದರೂ ಪುರೋಹಿತರು ಬಂದರೆ, ಬೇಗ ಪೂಜೆ ಮುಗಿಸಿ ಕಾಫಿ
ಕುಡಿಯಬಹುದು ; ಹೇಳಿದ ಹೊತ್ತಿಗೆ ಬರುತ್ತಾರೋ ಇಲ್ಲವೋ, ಎಷ್ಟು ಮನೆಗಳಿಗೆ
ಪೂಜೆ ಮಾಡಿಸಲು ಒಪ್ಪಿಕೊಂಡಿದ್ದಾರೋ? ಹೀಗೆ ಹಿಂದಿನ ಸಂಜೆಯಿಂದ
ತರಪರಗುಟ್ಟಲು ಆರಂಭಿಸಿದ್ದರು. ತಾವೆಲ್ಲಾ ಏರ್ಪಾಡನ್ನು ಸರಿಯಾಗಿ ಮಾಡಿದ್ದೀವಿ,
ಎಂದು ಬೆಳೆದ ಮಕ್ಕಳು ಎಷ್ಟು ಹೇಳಿದರೂ, ಸಮಾಧಾನ ಹೊಂದುತ್ತಿರಲಿಲ್ಲ.
ಸರಿಯಾಗಿ ನಿದ್ರೆ ಬರುಲ್ಲ ಅಂತ ಡಾಕ್ಟರ ಬಳಿಗೆ ಹೋಗಿ ನಿದ್ರೆ ಗುಳಿಗೆಗಳನ್ನು
ತಂದಿಟ್ಟುಕೊಂಡಿದ್ದರು. ಇಂತಹ ಗುಳಿಗೆಗಳಿಂದ ಮುಂದೆ ದೇಹಾರೋಗ್ಯಕ್ಕೆ
ಅಪಾಯವಾಗಬಹುದು ಎಂದುಕೊಂಡು ಅವನ್ನು ಸೇವಿಸದೆ ಹಾಗೆಯೇ ಇಟ್ಟಿದ್ದರು.
ಎಲ್ಲದರಲ್ಲಿಯೂ ಅನುಮಾನ, ಯಾವುದಕ್ಕೂ ಸಂದೇಹ. ಮನೆಯವರಿಗೆಲ್ಲಾ
ಬೇಸರ ತುಂಬುವಂತಾಗಿತ್ತು. ಹಿರಿಯರು, ನಮ್ಮನ್ನೆಲ್ಲ ವಿಶ್ವಾಸದಿಂದ ಸಾಕಿ
ಸಲಹಿದವರು, ಎಂಬ ಕೃತಜ್ಞತೆಯಿಂದಾಗಿ, ಮಕ್ಕಳು ಬೇಸರವನ್ನು
ಪ್ರದರ್ಶಿಸುತ್ತಿರಲಿಲ್ಲ.
ಐದಾರು ತಿಂಗಳುಗಳಲ್ಲಿ ಬಹಳಷ್ಟು ಬದಲಾವಣೆಯು ಅವರಲ್ಲಿ ಕಂಡು
ಬಂದಿತು. 'ಬ್ಲಡ್ಪ್ರೆಷರ್ ಹೆಚ್ಚಾಗಿದೆಯಂತೆ ನನಗೆ, ಉಪ್ಪು ಕಡಿಮೆ ಮಾಡು
ಎಂದರು ಡಾಕ್ಟರು' ಎಂದು ಹೇಳಿ ಉಪ್ಪನ್ನು ಬಿಟ್ಟರು. ಊಟವೂ ಕಡಿಮೆಯಾಯಿತು.
ದೇಹವೂ ಕೃಶವಾಗತೊಡಗಿತು. ಅದಕ್ಕಿಂತ ಹೆಚ್ಚಾಗಿ ಅವರ ವರ್ತನೆಯು
ವಿಚಿತ್ರವಾಗತೊಡಗಿತು. ಮರೆವು ಅತಿಯಾಯಿತು. ರಾತ್ರಿ ಎರಡು ಗಂಟೆಗೆ ಎದ್ದು,
ದೀಪ ಹಚ್ಚಿಕೊಂಡು ಕ್ಷೌರ ಮಾಡಿಕೊಳ್ಳಲು ಒಮ್ಮೆ ಶುರು ಮಾಡಿದರು. 'ಇದೇನೂ
ಅಂದ್ರೆ, ಈ ಅವೇಳೆಯಲ್ಲಿ ಕ್ಷೌರ, ಬೆಳಗಾದ ಮೇಲೆ ಮಾಡಿಕೊಳ್ಳಬಾರದೆ
ಎಂದು ಹೆಂಡತಿಯು ಹೇಳಿದಾಗ, “ನೀನು ಮುದುಕಿಯಾದೆ, ಅರಳುಮರಳು,
ಈಗಾಗಲೇ ಆರು ಗಂಟೆಯಾಗುತ್ತಾ ಬಂತಲ್ಲೇ' ಅಂತ ದಬಾಯಿಸಿದರು. ಹಗಲು
ರಾತ್ರಿ ಅನ್ನುವುದರಲ್ಲಿ ತಪ್ಪು ಮಾಡದೇ ಇದ್ದರೂ, ಹೊತ್ತುಗೊತ್ತುಗಳನ್ನು
ಗುರುತಿಸುತ್ತಿರಲಿಲ್ಲ.<noinclude></noinclude>
7vu2qoc2h45y0vlydum7izhez6dorf4
316715
316696
2026-05-04T07:22:09Z
Shreelatha.Halemane
7642
/* Validated */
316715
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೨೫೨}}{{Right|ಮನಮಂಥನ}}
ಅಭಿಷೇಕ, ಅಂತ ಸುಮಾರು ಹೊತ್ತು ಕಳೆಯುತ್ತಿದ್ದರೂ ಪುಣ್ಯಾತ್ಮ ಏಳುತ್ತಿದ್ದುದು
ಬೆಳಿಗ್ಗೆ ಏಳರ ಮೇಲೆಯೇ. ಅನಂತರ ಕಾಫಿ, ನಂತರ ಸ್ನಾನ, ಆಮೇಲೆ
ದೇವರಪೂಜೆ, ಆರಾಮವಾಗಿ ಪೂಜೆಯನ್ನು ಮಾಡಿ, ನಂತರ ದೇವರಂತೆ ತಾನೂ
ವಿಶ್ರಾಂತಿ ಪಡೆದು, ಊಟಕ್ಕೇಳುತ್ತಿದ್ದ ರಿಟಾಯ್ರ್ಡ್ ಆಫೀಸರು.
{{gap}}ಇತ್ತಿಂದೀಚೆಗೆ ಎಲ್ಲರ ಮೇಲೂ, ಸಣ್ಣಪುಟ್ಟ ಕಾರಣಗಳಿಗೆಲ್ಲಾ
ಸಿಡುಕಾಡುವುದು ಹೆಚ್ಚಾಗುತ್ತ ಬಂದಿತು. ನಾಳೆ ಗಣೇಶನ ಹಬ್ಬ, ಬೆಳಿಗ್ಗೆ ಎಂಟರ
ಹೊತ್ತಿಗಾದರೂ ಪುರೋಹಿತರು ಬಂದರೆ, ಬೇಗ ಪೂಜೆ ಮುಗಿಸಿ ಕಾಫಿ
ಕುಡಿಯಬಹುದು ; ಹೇಳಿದ ಹೊತ್ತಿಗೆ ಬರುತ್ತಾರೋ ಇಲ್ಲವೋ, ಎಷ್ಟು ಮನೆಗಳಿಗೆ
ಪೂಜೆ ಮಾಡಿಸಲು ಒಪ್ಪಿಕೊಂಡಿದ್ದಾರೋ? ಹೀಗೆ ಹಿಂದಿನ ಸಂಜೆಯಿಂದ
ತರಪರಗುಟ್ಟಲು ಆರಂಭಿಸಿದ್ದರು. ತಾವೆಲ್ಲಾ ಏರ್ಪಾಡನ್ನು ಸರಿಯಾಗಿ ಮಾಡಿದ್ದೀವಿ,
ಎಂದು ಬೆಳೆದ ಮಕ್ಕಳು ಎಷ್ಟು ಹೇಳಿದರೂ, ಸಮಾಧಾನ ಹೊಂದುತ್ತಿರಲಿಲ್ಲ.
ಸರಿಯಾಗಿ ನಿದ್ರೆ ಬರುಲ್ಲ ಅಂತ ಡಾಕ್ಟರ ಬಳಿಗೆ ಹೋಗಿ ನಿದ್ರೆ ಗುಳಿಗೆಗಳನ್ನು
ತಂದಿಟ್ಟುಕೊಂಡಿದ್ದರು. ಇಂತಹ ಗುಳಿಗೆಗಳಿಂದ ಮುಂದೆ ದೇಹಾರೋಗ್ಯಕ್ಕೆ
ಅಪಾಯವಾಗಬಹುದು ಎಂದುಕೊಂಡು ಅವನ್ನು ಸೇವಿಸದೆ ಹಾಗೆಯೇ ಇಟ್ಟಿದ್ದರು.
ಎಲ್ಲದರಲ್ಲಿಯೂ ಅನುಮಾನ, ಯಾವುದಕ್ಕೂ ಸಂದೇಹ. ಮನೆಯವರಿಗೆಲ್ಲಾ
ಬೇಸರ ತುಂಬುವಂತಾಗಿತ್ತು. ಹಿರಿಯರು, ನಮ್ಮನ್ನೆಲ್ಲ ವಿಶ್ವಾಸದಿಂದ ಸಾಕಿ
ಸಲಹಿದವರು, ಎಂಬ ಕೃತಜ್ಞತೆಯಿಂದಾಗಿ, ಮಕ್ಕಳು ಬೇಸರವನ್ನು
ಪ್ರದರ್ಶಿಸುತ್ತಿರಲಿಲ್ಲ.
{{gap}}ಐದಾರು ತಿಂಗಳುಗಳಲ್ಲಿ ಬಹಳಷ್ಟು ಬದಲಾವಣೆಯು ಅವರಲ್ಲಿ ಕಂಡು
ಬಂದಿತು. 'ಬ್ಲಡ್ಪ್ರೆಷರ್ ಹೆಚ್ಚಾಗಿದೆಯಂತೆ ನನಗೆ, ಉಪ್ಪು ಕಡಿಮೆ ಮಾಡು
ಎಂದರು ಡಾಕ್ಟರು' ಎಂದು ಹೇಳಿ ಉಪ್ಪನ್ನು ಬಿಟ್ಟರು. ಊಟವೂ ಕಡಿಮೆಯಾಯಿತು.
ದೇಹವೂ ಕೃಶವಾಗತೊಡಗಿತು. ಅದಕ್ಕಿಂತ ಹೆಚ್ಚಾಗಿ ಅವರ ವರ್ತನೆಯು
ವಿಚಿತ್ರವಾಗತೊಡಗಿತು. ಮರೆವು ಅತಿಯಾಯಿತು. ರಾತ್ರಿ ಎರಡು ಗಂಟೆಗೆ ಎದ್ದು,
ದೀಪ ಹಚ್ಚಿಕೊಂಡು ಕ್ಷೌರ ಮಾಡಿಕೊಳ್ಳಲು ಒಮ್ಮೆ ಶುರು ಮಾಡಿದರು. 'ಇದೇನೂ
ಅಂದ್ರೆ, ಈ ಅವೇಳೆಯಲ್ಲಿ ಕ್ಷೌರ, ಬೆಳಗಾದ ಮೇಲೆ ಮಾಡಿಕೊಳ್ಳಬಾರದೆ
ಎಂದು ಹೆಂಡತಿಯು ಹೇಳಿದಾಗ, “ನೀನು ಮುದುಕಿಯಾದೆ, ಅರಳುಮರಳು,
ಈಗಾಗಲೇ ಆರು ಗಂಟೆಯಾಗುತ್ತಾ ಬಂತಲ್ಲೇ' ಅಂತ ದಬಾಯಿಸಿದರು. ಹಗಲು
ರಾತ್ರಿ ಅನ್ನುವುದರಲ್ಲಿ ತಪ್ಪು ಮಾಡದೇ ಇದ್ದರೂ, ಹೊತ್ತುಗೊತ್ತುಗಳನ್ನು
ಗುರುತಿಸುತ್ತಿರಲಿಲ್ಲ.<noinclude></noinclude>
i6v8jg283kkc6309y8w7pouyfbjelpi
ಪುಟ:ಮನಮಂಥನ.pdf/೨೭೨
104
62719
316697
314437
2026-05-04T07:07:05Z
Shreesha Sharma
7840
/* Proofread */
316697
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ದೈಹಿಕ ಬೇನೆಗಳಿಂದ ಉಂಟಾಗುವ ಮನೋರೋಗಗಳು}}{{Right|೨೫೩}}
ಮನೆಯ ಹತ್ತಿರವೇ ಇದ್ದ ತುಳಸೀತೋಟಕ್ಕೆ ಅಡ್ಡಾಡಿ ಬರೋಣ
ಎಂದೊಮ್ಮೆಹೋದರು. ಸುಮಾರು ಎರಡು ಫರ್ಲಾಂಗ್ ದೂರವಿರಬಹುದು.
ಎರಡು ರಸ್ತೆಗಳನ್ನು ದಾಟಬೇಕು. ಎಷ್ಟೋ ಸಾರಿ ಹೋಗಿ ಬಂದಿದ್ದರು. ಆದರೆ
ಆ ದಿನ ತೋಟಕ್ಕೆ ಹೋದರು. ಹಿಂತಿರುಗಿ ಮನೆಗೆ ಹೋಗಬೇಕು ! ಆದರೆ
ದಾರಿ ಗೊತ್ತಾಗಲಿಲ್ಲ. ಎಲ್ಲಿದೆ ನನ್ನ ಮನೆ? ಎಂದು ಎಷ್ಟೋ ಯೋಚಿಸಿದರು.
ದಿಕ್ಕು ತೋರಲಿಲ್ಲ. 'ಇದೇನು ಅಜ್ಜಯ್ಯ, ಇಲ್ಲಿ ನಿಂತಿದ್ದೀರಿ, ಅಷ್ಟು ಹೊತ್ತಿನಿಂದ
ಒಬ್ಬರೆ' ಎಂದು ಹತ್ತುವರ್ಷದ ಹುಡುಗಿಯೊಬ್ಬಳು ಹತ್ತಿರಬಂದು ಕೇಳಿದಳು,
'ನೀನ್ಯಾರಮ್ಮ ! ನನ್ನ ಪರಿಚಯ ನಿನಗುಂಟೇ' ಎಂದು ಕೇಳಿದರು' 'ನಿಮ್ಮ
ಮೊಮ್ಮಗಳು ಉಷಾ ನನ್ನ ಕ್ಲಾಸ್ಮೇಟ್' ಎಂದಳು ಆ ಹುಡುಗಿ. 'ಹಾಗಾದರೆ
ನಮ್ಮನೆ ಎಲ್ಲಿದೆ ಗೊತ್ತೇ' ಎಂದರು. ಕ್ಯೂ ಅಂದಿತು ಹುಡುಗಿ, 'ರಸ್ತೆ ಮರೆತು
ಹೋಗಿದೆ, ಮನೆಯದಾರಿ ತೋರಿಸುತ್ತೀಯಾ' ಎಂದು ಕೇಳಿದರು. ಆ ಹುಡುಗಿ
ಕರೆದುಕೊಂಡು ಬಂದು ಮನೆ ಸೇರಿಸಿತು. ಮರವು ಈ ಹಂತವನ್ನು ಮುಟ್ಟಿತ್ತು.
ಇನ್ನೊಂದೆರಡು ತಿಂಗಳುಗಳಾದವು. ಅಸಂಬದ್ಧವಾಗಿ ಮಾತನಾಡುವುದು
ಶುರುವಾಯಿತು. ಮಕ್ಕಳನ್ನು ಗುರುತಿಸುವುದರಲ್ಲಿಯೂ ತಪ್ಪು
ಮಾಡಲಾರಂಭಿಸಿದರು. ಸಿಡುಕಾಡುವುದು ಅತಿಯಾಯಿತು. ಒಂದು ಬೆಳಗ್ಗೆ
ಕಾಫಿಯನ್ನು ಮಗ ತಂದುಕೊಟ್ಟ ಅವನ ಕುತ್ತಿಗೆಯನ್ನು ಬಲವಾಗಿ ಹಿಡಿದುಕೊಂಡು
ಅದುಮತೊಡಗಿದರು. ಒಂದು ನಿಮಿಷ ಮಗ ದಿಗ್ಗಾಂತನಾದ, ನಂತರ ತಂದೆಯ
ಕೈಗಳನ್ನು ರೂಡಿಸಿ ಒಗೆದ. ಮನೆಯವರು ಆ ವೇಳೆಗೆ ಗದ್ದಲವನ್ನು ಕೇಳಿ
ಕೊಠಡಿಗೆ ಬಂದಿದ್ದರು. 'ಇದು ಯಾಕೆ ಹೀಗಾಡ್ತಾ ಇದ್ದಾರೆ. ಹುಚ್ಚುಗಿಚ್ಚು
ಹಿಡಿದಿದೆಯೇನೋ?' ಎಂದು ಹೆಂಡತಿ ಬೊಬ್ಬೆ ಹೊಡೆಯಲಾರಂಭಿಸಿದಳು.
ಮಗನಿಗೂ ಹೆದರಿಕೆಯಾಗಿತ್ತು. ನನಗೆ ಮಾಡಿದಂತೆ ಮಕ್ಕಳ ಮೇಲೆ ಕೈಮಾಡಿದರೆ,
ಅವು ಉಳಿಯಕ್ಕಾಗುತ್ತೆ ಎಂಬ ಭಯ. ಕಾರಣ, ಮಾನಸಿಕ ಆಸ್ಪತ್ರೆಗೆ ಜರೂರಾಗಿ
ಸೇರಿಸಿದರು.
ಸಂಪಂಗಿರಾಮಯ್ಯನವರ ಮೆದುಳು, ಹಲವಾರು ಕಾರಣಗಳಿಂದ
ಶಿಥಿಲವಾಗ ತೊಡಗಿತ್ತು. ಮೊದಮೊದಲು ವಿಚಿತ್ರವಾಗಿ ವರ್ತಿಸತೊಡಗಿದರು.
ಶಿಥಿಲತೆಯು ಮೆದುಳಿನಲ್ಲಿ ಹೆಚ್ಚಾದಾಗ, ಮರೆವು ಅತಿಯಾಯಿತು. ಅಸಂಬದ್ಧವಾಗಿ
ಮಾತನಾಡಲಾರಂಭಿಸಿದರು. ಶಿಥಿಲತೆಯು ಇನ್ನೂ ಹೆಚ್ಚಾದಾಗ, ಹುಚ್ಚರಂತೆ
ವರ್ತಿಸತೊಡಗಿದರು. ಈ ರೀತಿಯ ಹುಚ್ಚು ಗುಣಹೊಂದಬೇಕಾದರೆ, ಮೆದುಳಿಗೆ
ಕಾಯಕಲ್ಪವನ್ನು ಮಾಡಬೇಕು. ಈಗಿನ ವೈಜ್ಞಾನಿಕ ಹಂತದಲ್ಲಿ, ಅದು ಸಾಧ್ಯವಿಲ್ಲ;<noinclude></noinclude>
kqf9xqoy7hpppmr0xj1qz64gig7553d
316716
316697
2026-05-04T07:22:39Z
Shreelatha.Halemane
7642
/* Validated */
316716
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ದೈಹಿಕ ಬೇನೆಗಳಿಂದ ಉಂಟಾಗುವ ಮನೋರೋಗಗಳು}}{{Right|೨೫೩}}
{{gap}}ಮನೆಯ ಹತ್ತಿರವೇ ಇದ್ದ ತುಳಸೀತೋಟಕ್ಕೆ ಅಡ್ಡಾಡಿ ಬರೋಣ
ಎಂದೊಮ್ಮೆಹೋದರು. ಸುಮಾರು ಎರಡು ಫರ್ಲಾಂಗ್ ದೂರವಿರಬಹುದು.
ಎರಡು ರಸ್ತೆಗಳನ್ನು ದಾಟಬೇಕು. ಎಷ್ಟೋ ಸಾರಿ ಹೋಗಿ ಬಂದಿದ್ದರು. ಆದರೆ
ಆ ದಿನ ತೋಟಕ್ಕೆ ಹೋದರು. ಹಿಂತಿರುಗಿ ಮನೆಗೆ ಹೋಗಬೇಕು ! ಆದರೆ
ದಾರಿ ಗೊತ್ತಾಗಲಿಲ್ಲ. ಎಲ್ಲಿದೆ ನನ್ನ ಮನೆ? ಎಂದು ಎಷ್ಟೋ ಯೋಚಿಸಿದರು.
ದಿಕ್ಕು ತೋರಲಿಲ್ಲ. 'ಇದೇನು ಅಜ್ಜಯ್ಯ, ಇಲ್ಲಿ ನಿಂತಿದ್ದೀರಿ, ಅಷ್ಟು ಹೊತ್ತಿನಿಂದ
ಒಬ್ಬರೆ' ಎಂದು ಹತ್ತುವರ್ಷದ ಹುಡುಗಿಯೊಬ್ಬಳು ಹತ್ತಿರಬಂದು ಕೇಳಿದಳು,
'ನೀನ್ಯಾರಮ್ಮ ! ನನ್ನ ಪರಿಚಯ ನಿನಗುಂಟೇ' ಎಂದು ಕೇಳಿದರು' 'ನಿಮ್ಮ
ಮೊಮ್ಮಗಳು ಉಷಾ ನನ್ನ ಕ್ಲಾಸ್ಮೇಟ್' ಎಂದಳು ಆ ಹುಡುಗಿ. 'ಹಾಗಾದರೆ
ನಮ್ಮನೆ ಎಲ್ಲಿದೆ ಗೊತ್ತೇ' ಎಂದರು. ಕ್ಯೂ ಅಂದಿತು ಹುಡುಗಿ, 'ರಸ್ತೆ ಮರೆತು
ಹೋಗಿದೆ, ಮನೆಯದಾರಿ ತೋರಿಸುತ್ತೀಯಾ' ಎಂದು ಕೇಳಿದರು. ಆ ಹುಡುಗಿ
ಕರೆದುಕೊಂಡು ಬಂದು ಮನೆ ಸೇರಿಸಿತು. ಮರವು ಈ ಹಂತವನ್ನು ಮುಟ್ಟಿತ್ತು.
{{gap}}ಇನ್ನೊಂದೆರಡು ತಿಂಗಳುಗಳಾದವು. ಅಸಂಬದ್ಧವಾಗಿ ಮಾತನಾಡುವುದು
ಶುರುವಾಯಿತು. ಮಕ್ಕಳನ್ನು ಗುರುತಿಸುವುದರಲ್ಲಿಯೂ ತಪ್ಪು
ಮಾಡಲಾರಂಭಿಸಿದರು. ಸಿಡುಕಾಡುವುದು ಅತಿಯಾಯಿತು. ಒಂದು ಬೆಳಗ್ಗೆ
ಕಾಫಿಯನ್ನು ಮಗ ತಂದುಕೊಟ್ಟ ಅವನ ಕುತ್ತಿಗೆಯನ್ನು ಬಲವಾಗಿ ಹಿಡಿದುಕೊಂಡು
ಅದುಮತೊಡಗಿದರು. ಒಂದು ನಿಮಿಷ ಮಗ ದಿಗ್ಗಾಂತನಾದ, ನಂತರ ತಂದೆಯ
ಕೈಗಳನ್ನು ರೂಡಿಸಿ ಒಗೆದ. ಮನೆಯವರು ಆ ವೇಳೆಗೆ ಗದ್ದಲವನ್ನು ಕೇಳಿ
ಕೊಠಡಿಗೆ ಬಂದಿದ್ದರು. 'ಇದು ಯಾಕೆ ಹೀಗಾಡ್ತಾ ಇದ್ದಾರೆ. ಹುಚ್ಚುಗಿಚ್ಚು
ಹಿಡಿದಿದೆಯೇನೋ?' ಎಂದು ಹೆಂಡತಿ ಬೊಬ್ಬೆ ಹೊಡೆಯಲಾರಂಭಿಸಿದಳು.
ಮಗನಿಗೂ ಹೆದರಿಕೆಯಾಗಿತ್ತು. ನನಗೆ ಮಾಡಿದಂತೆ ಮಕ್ಕಳ ಮೇಲೆ ಕೈಮಾಡಿದರೆ,
ಅವು ಉಳಿಯಕ್ಕಾಗುತ್ತೆ ಎಂಬ ಭಯ. ಕಾರಣ, ಮಾನಸಿಕ ಆಸ್ಪತ್ರೆಗೆ ಜರೂರಾಗಿ
ಸೇರಿಸಿದರು.
{{gap}}ಸಂಪಂಗಿರಾಮಯ್ಯನವರ ಮೆದುಳು, ಹಲವಾರು ಕಾರಣಗಳಿಂದ
ಶಿಥಿಲವಾಗ ತೊಡಗಿತ್ತು. ಮೊದಮೊದಲು ವಿಚಿತ್ರವಾಗಿ ವರ್ತಿಸತೊಡಗಿದರು.
ಶಿಥಿಲತೆಯು ಮೆದುಳಿನಲ್ಲಿ ಹೆಚ್ಚಾದಾಗ, ಮರೆವು ಅತಿಯಾಯಿತು. ಅಸಂಬದ್ಧವಾಗಿ
ಮಾತನಾಡಲಾರಂಭಿಸಿದರು. ಶಿಥಿಲತೆಯು ಇನ್ನೂ ಹೆಚ್ಚಾದಾಗ, ಹುಚ್ಚರಂತೆ
ವರ್ತಿಸತೊಡಗಿದರು. ಈ ರೀತಿಯ ಹುಚ್ಚು ಗುಣಹೊಂದಬೇಕಾದರೆ, ಮೆದುಳಿಗೆ
ಕಾಯಕಲ್ಪವನ್ನು ಮಾಡಬೇಕು. ಈಗಿನ ವೈಜ್ಞಾನಿಕ ಹಂತದಲ್ಲಿ, ಅದು ಸಾಧ್ಯವಿಲ್ಲ;<noinclude></noinclude>
1u0pfshdaiwi7d05g6t3579iokt58gz
ಪುಟ:ಮನಮಂಥನ.pdf/೨೭೩
104
62720
316691
314438
2026-05-04T06:59:20Z
Shreesha Sharma
7840
/* Proofread */
316691
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೨೫೪}}{{Right|ಮನಮಂಥನ}}
ಅಂದರೆ ಮೆದುಳಿನ ಶಿಥಿಲತೆಯಿಂದ ಮುಪ್ಪಿಗರಲ್ಲಿ ಸಂಭವಿಸುವ ಮಾನಸಿಕ
ಪಲ್ಲಟಕ್ಕೆ ಉಪಶಮನವನ್ನು ಮಾಡಬಹುದೇ ವಿನಹಾ ಸಫಲ ಚಿಕಿತ್ಸೆಯನ್ನಲ್ಲ.
ಸಂಪಂಗಿರಾಮಯ್ಯನವರು ಮಾನಸಿಕ ಆಸ್ಪತ್ರೆಯಲ್ಲಿ ಒಂದೆರಡು ತಿಂಗಳು ಇದ್ದರು.
ನಂತರ ತೀರಿಕೊಂಡರು.
ಚಿಕ್ಕಪಾಪಯ್ಯನವರ ಬಾಳೂ ಮುಪ್ಪಿನಲ್ಲಿ ವಿಚಿತ್ರವಾಯಿತು. ಪೇಟೆಯಲ್ಲಿ
ಅವರು ಮುಖ್ಯಸ್ಥರಾಗಿದ್ದರು. ಶ್ರೀಮಂತರು, ದೊಡ್ಡ ಪ್ರಮಾಣದಲ್ಲಿ ವ್ಯಾಪಾರವನ್ನು
ಮಾಡುತ್ತಿದ್ದರು. ಪೇಟೆಯ ಆಂಜನೇಯನ ಗುಡಿಯ ಧರ್ಮದರ್ಶಿಗಳಾಗಿದ್ದರು.
ಬಹಳ ಭಕ್ತಿಯಿಂದ ದೇವಸ್ಥಾನದ ಕೈಂಕರ್ಯ ಮತ್ತು ಪೂಜಾದಿಗಳನ್ನು
ಏರ್ಪಡಿಸುತ್ತಿದ್ದರು. ತುಂಬಿದ ಮನೆ, ಆದರದ ಸ್ವಭಾವ, ಶ್ರೀಮಂತರಾಗಿದ್ದರೂ
ಬಿಡುಗೈ ದೊರೆ.
ಅರವತ್ತರ ಸುಮಾರಿಗೆ ಮಧುಮೂತ್ರದ ಬೇನೆ ಇರುವುದು ತಿಳಿಯಬಂತು.
ಇನ್ದ್ರಕ್ಷನ್ನುಗಳನ್ನು ತೆಗೆದುಕೊಂಡರೂ, ಪಥ್ಯವಿರುವುದು ಅವರಿಗೆ ಸಾಧ್ಯವಾಗಲಿಲ್ಲ.
ಜತೆಗೆ ರಕ್ತದ ಒತ್ತಡವೂ ಹೆಚ್ಚಾಯಿತು. ಎಷ್ಟೋ ಜನ ಮುದುಕರಲ್ಲಿ ಇವೆರಡೂ
ಬೇನೆಗಳೂ ಒಟ್ಟೋಟ್ಟಿಗೆ ಕಾಣಿಸಿಕೊಳ್ಳುತ್ತವೆ. ಹಾಗೂ ಹೀಗೂ ಒದ್ದಾಡಿಕೊಂಡು
ತಮ್ಮ ಕೆಲಸವನ್ನು ಸಾಕಷ್ಟು ಪರಿಣಾಮಕಾರಿಯಾಗಿ ನಡೆಸಿಕೊಂಡಿರುತ್ತಾರೆ.
ಆದರೆ ಚಿಕ್ಕಪಾಪಯ್ಯನವರಂತಹ ಕೆಲವರಲ್ಲಿ ಈ ಬೇನೆಗಳ ಜತೆಗೆ, ಮೆದುಳಿನ
ಶಿಥಿಲತೆಯೂ ಕಾಣಿಸಿಕೊಳ್ಳುತ್ತದೆ.
ದೈವಭಕ್ತರೂ ಧಾರ್ಮಿಕರೂ ಆಗಿದ್ದ ಚಿಕ್ಕಪಾಪಯ್ಯನವರು ಅರವತ್ತ
ಮೂರರ ವಯಸ್ಸಿನಲ್ಲಿ ಬಿಳಿಮೀಸೆಗೆ ಕರಿಬಣ್ಣವನ್ನು ಹಚ್ಚಲಾರಂಭಿಸಿದರು.
ಬಿಳಿರುಮಾಲನ್ನು ಕಟ್ಟುತ್ತಿದ್ದವರು, ಈಗೀಗ ಜರಿ ರುಮಾಲಿಗೆ ಮಾರುಹೋದರು.
ಕೆರೆ ಏರಿಯ ಬಳಿಯಿದ್ದ ನಾಗಾಸಾನಿಯ ಮನೆಗೆ ಮೇಲಿಂದ ಮೇಲೆ
ಹೋಗಲಾರಂಭಿಸಿದರು. ಕಿಟ್ಟಪ್ಪನ ಗೆಳೆತನವೂ ಆಯಿತು. ಅವನಲ್ಲಿ ನಂಬಿಕೆಯೂ
ಹುಟ್ಟಿತು. ಊರಿನಲ್ಲೆಲ್ಲಾ ಕಿಟ್ಟಪ್ಪ ಸುಪ್ರಸಿದ್ಧನಾಗಿದ್ದ. ಹತ್ತಾರು ಹೆಣ್ಣುಮಕ್ಕಳ
ಯೋಗಕ್ಷೇಮವನ್ನು ಅವ ನೋಡಿಕೊಳ್ಳುತ್ತಿದ್ದ. ಅದಕ್ಕಾಗಿ ಚಿಕ್ಕಪಾಪಯ್ಯನವರ
ಭೋಗ ಕ್ಷೇಮವನ್ನೂ ವಹಿಸಿಕೊಂಡ. ಚಿಕ್ಕಪಾಪಯ್ಯನವರೂ ಬಲೆಗೆ ಬಿದ್ದರು.
ಮಂಡಿಗೆ ಹೋಗಿ ವ್ಯಾಪಾರದ ಉಸ್ತುವಾರಿಯನ್ನು ವೈನವಾಗಿ
ನಡೆಸುತ್ತಿದ್ದರು, ಚಿಕ್ಕಪಾಪಯ್ಯನವರು. ಆದರೆ ಖರ್ಚು ಮಾತ್ರ
ವಿಪರೀತವಾಗತೊಡಗಿತು. ಸೆರಗಿನಲ್ಲಿ ಹಣವನ್ನು ಕೇರತೊಡಗಿದರೆ, ಮಣ್ಣು
ಧೂಳು ಮಾತ್ರ ಉಳಿಯುತ್ತದೆ. ಚಿಕ್ಕಪಾಪಯ್ಯನವರ ವಿಚಿತ್ರ ವರ್ತನೆಯಿಂದ<noinclude></noinclude>
mvuhkhwsz1vm759bddctvw3juo5ftf2
316717
316691
2026-05-04T07:23:10Z
Shreelatha.Halemane
7642
/* Validated */
316717
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೨೫೪}}{{Right|ಮನಮಂಥನ}}
ಅಂದರೆ ಮೆದುಳಿನ ಶಿಥಿಲತೆಯಿಂದ ಮುಪ್ಪಿಗರಲ್ಲಿ ಸಂಭವಿಸುವ ಮಾನಸಿಕ
ಪಲ್ಲಟಕ್ಕೆ ಉಪಶಮನವನ್ನು ಮಾಡಬಹುದೇ ವಿನಹಾ ಸಫಲ ಚಿಕಿತ್ಸೆಯನ್ನಲ್ಲ.
ಸಂಪಂಗಿರಾಮಯ್ಯನವರು ಮಾನಸಿಕ ಆಸ್ಪತ್ರೆಯಲ್ಲಿ ಒಂದೆರಡು ತಿಂಗಳು ಇದ್ದರು.
ನಂತರ ತೀರಿಕೊಂಡರು.
{{gap}}ಚಿಕ್ಕಪಾಪಯ್ಯನವರ ಬಾಳೂ ಮುಪ್ಪಿನಲ್ಲಿ ವಿಚಿತ್ರವಾಯಿತು. ಪೇಟೆಯಲ್ಲಿ
ಅವರು ಮುಖ್ಯಸ್ಥರಾಗಿದ್ದರು. ಶ್ರೀಮಂತರು, ದೊಡ್ಡ ಪ್ರಮಾಣದಲ್ಲಿ ವ್ಯಾಪಾರವನ್ನು
ಮಾಡುತ್ತಿದ್ದರು. ಪೇಟೆಯ ಆಂಜನೇಯನ ಗುಡಿಯ ಧರ್ಮದರ್ಶಿಗಳಾಗಿದ್ದರು.
ಬಹಳ ಭಕ್ತಿಯಿಂದ ದೇವಸ್ಥಾನದ ಕೈಂಕರ್ಯ ಮತ್ತು ಪೂಜಾದಿಗಳನ್ನು
ಏರ್ಪಡಿಸುತ್ತಿದ್ದರು. ತುಂಬಿದ ಮನೆ, ಆದರದ ಸ್ವಭಾವ, ಶ್ರೀಮಂತರಾಗಿದ್ದರೂ
ಬಿಡುಗೈ ದೊರೆ.
{{gap}}ಅರವತ್ತರ ಸುಮಾರಿಗೆ ಮಧುಮೂತ್ರದ ಬೇನೆ ಇರುವುದು ತಿಳಿಯಬಂತು.
ಇನ್ದ್ರಕ್ಷನ್ನುಗಳನ್ನು ತೆಗೆದುಕೊಂಡರೂ, ಪಥ್ಯವಿರುವುದು ಅವರಿಗೆ ಸಾಧ್ಯವಾಗಲಿಲ್ಲ.
ಜತೆಗೆ ರಕ್ತದ ಒತ್ತಡವೂ ಹೆಚ್ಚಾಯಿತು. ಎಷ್ಟೋ ಜನ ಮುದುಕರಲ್ಲಿ ಇವೆರಡೂ
ಬೇನೆಗಳೂ ಒಟ್ಟೋಟ್ಟಿಗೆ ಕಾಣಿಸಿಕೊಳ್ಳುತ್ತವೆ. ಹಾಗೂ ಹೀಗೂ ಒದ್ದಾಡಿಕೊಂಡು
ತಮ್ಮ ಕೆಲಸವನ್ನು ಸಾಕಷ್ಟು ಪರಿಣಾಮಕಾರಿಯಾಗಿ ನಡೆಸಿಕೊಂಡಿರುತ್ತಾರೆ.
ಆದರೆ ಚಿಕ್ಕಪಾಪಯ್ಯನವರಂತಹ ಕೆಲವರಲ್ಲಿ ಈ ಬೇನೆಗಳ ಜತೆಗೆ, ಮೆದುಳಿನ
ಶಿಥಿಲತೆಯೂ ಕಾಣಿಸಿಕೊಳ್ಳುತ್ತದೆ.
{{gap}}ದೈವಭಕ್ತರೂ ಧಾರ್ಮಿಕರೂ ಆಗಿದ್ದ ಚಿಕ್ಕಪಾಪಯ್ಯನವರು ಅರವತ್ತ
ಮೂರರ ವಯಸ್ಸಿನಲ್ಲಿ ಬಿಳಿಮೀಸೆಗೆ ಕರಿಬಣ್ಣವನ್ನು ಹಚ್ಚಲಾರಂಭಿಸಿದರು.
ಬಿಳಿರುಮಾಲನ್ನು ಕಟ್ಟುತ್ತಿದ್ದವರು, ಈಗೀಗ ಜರಿ ರುಮಾಲಿಗೆ ಮಾರುಹೋದರು.
ಕೆರೆ ಏರಿಯ ಬಳಿಯಿದ್ದ ನಾಗಾಸಾನಿಯ ಮನೆಗೆ ಮೇಲಿಂದ ಮೇಲೆ
ಹೋಗಲಾರಂಭಿಸಿದರು. ಕಿಟ್ಟಪ್ಪನ ಗೆಳೆತನವೂ ಆಯಿತು. ಅವನಲ್ಲಿ ನಂಬಿಕೆಯೂ
ಹುಟ್ಟಿತು. ಊರಿನಲ್ಲೆಲ್ಲಾ ಕಿಟ್ಟಪ್ಪ ಸುಪ್ರಸಿದ್ಧನಾಗಿದ್ದ. ಹತ್ತಾರು ಹೆಣ್ಣುಮಕ್ಕಳ
ಯೋಗಕ್ಷೇಮವನ್ನು ಅವ ನೋಡಿಕೊಳ್ಳುತ್ತಿದ್ದ. ಅದಕ್ಕಾಗಿ ಚಿಕ್ಕಪಾಪಯ್ಯನವರ
ಭೋಗ ಕ್ಷೇಮವನ್ನೂ ವಹಿಸಿಕೊಂಡ. ಚಿಕ್ಕಪಾಪಯ್ಯನವರೂ ಬಲೆಗೆ ಬಿದ್ದರು.
{{gap}}ಮಂಡಿಗೆ ಹೋಗಿ ವ್ಯಾಪಾರದ ಉಸ್ತುವಾರಿಯನ್ನು ವೈನವಾಗಿ
ನಡೆಸುತ್ತಿದ್ದರು, ಚಿಕ್ಕಪಾಪಯ್ಯನವರು. ಆದರೆ ಖರ್ಚು ಮಾತ್ರ
ವಿಪರೀತವಾಗತೊಡಗಿತು. ಸೆರಗಿನಲ್ಲಿ ಹಣವನ್ನು ಕೇರತೊಡಗಿದರೆ, ಮಣ್ಣು
ಧೂಳು ಮಾತ್ರ ಉಳಿಯುತ್ತದೆ. ಚಿಕ್ಕಪಾಪಯ್ಯನವರ ವಿಚಿತ್ರ ವರ್ತನೆಯಿಂದ<noinclude></noinclude>
aadckcjz24lljf3u92hrvtky1v7d3zh
ಪುಟ:ಮನಮಂಥನ.pdf/೨೭೪
104
62721
316690
314439
2026-05-04T06:58:29Z
Shreesha Sharma
7840
/* Proofread */
316690
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ದೈಹಿಕ ಬೇನೆಗಳಿಂದ ಉಂಟಾಗುವ ಮನೋರೋಗಗಳು}}{{Right|೨೫೫}}
ಆಸ್ತಿಯು ಕರಗತೊಡಗಿತು.
ಬೆಳೆದ ಮಕ್ಕಳು : ಸ್ಥಿತಿವಂತ ಅಳಿಯಂದಿರೂ ಮೊಮ್ಮಕ್ಕಳೂ ಎಲ್ಲರೂ
ಇದ್ದರು. ಹಿರಿಯರ ಈ ವರ್ತನೆಯಿಂದ ತಮ್ಮ ಆಸ್ತಿಗೆ ಮತ್ತು ಬಾಳಿಗೆ ಎಲ್ಲಿ ಧಕ್ಕೆ
ಬರುತ್ತದೆಯೋ ಎಂದು ಮಕ್ಕಳಿಗೆ ಭಯವಾಯಿತು. 'ಪಿತ್ರಾರ್ಜಿತ ಆಸ್ತಿ ನಮಗೂ
ಇದರಲ್ಲಿ ಹಕ್ಕಿದೆ. ಚಿಕ್ಕಪಾಪಯ್ಯನವರು ಅನಿಷ್ಟರ ದುರ್ನುಡಿಗೆ ಮರುಳಾಗಿ
ಆಸ್ತಿಯನ್ನು ಮಾರತೊಡಗಿದ್ದಾರೆ. ಇದು ಊರ್ಜಿತವಾಗುವುದಿಲ್ಲ. ಆದಕಾರಣ
ಸುಲಭವಾಗಿ ಸಿಕ್ಕಿತು ಎಂದು ಆಸೆ ಪಟ್ಟುಕೊಂಡವರು ಕೆಟ್ಟುಹೋಗುತ್ತಾರೆ'.
ಎಂದು ಲಾಯರ ಮೂಲಕ ಎಲ್ಲ ಪತ್ರಿಕೆಗಳಲ್ಲಿಯೂ ಜಾಹೀರಾತು ಮಾಡಿಸಿದರು.
ಅವಮಾನಕರವಾದ ಈ ಜಾಹೀರಾತುಗಳನ್ನು ಕಂಡು ಚಿಕ್ಕಪಾಪಯ್ಯನವರಿಗೆ
ಯಾವ ದುಃಖವೂ ಆದಂತೆ ಕಾಣಿಸಲಿಲ್ಲ. ನಾಗಾಸಾನಿಯ ಮನೆಯಲ್ಲೇ ಹೆಚ್ಚು
ಕಾಲವನ್ನು ಕಳೆಯಲಾರಂಭಿಸಿದರು. ಆರೇಳು ತಿಂಗಳ ಅವಧಿಯಲ್ಲಿ ಅವರ
ವರ್ತನೆಯು ನಾಗಾಸಾನಿಗೂ ಬೇಸರವನ್ನು ತಂದಿತು, ಚಿಕ್ಕಪಾಪಯ್ಯನವರ
ಕೈಯೂ ಬರಿದಾಗಿತ್ತು. ಹೊರಗೆ ಹಾಕಿದಳು. ಹುಚ್ಚರಂತೆ ರಸ್ತೆಗಳಲ್ಲಿ
ಅಡ್ಡಾಡತೊಡಗಿದರು. ಒಮ್ಮೊಮ್ಮೆ ಮನೆಗೂ ಬರುತ್ತಿದ್ದರು. ಊಟವನ್ನೂ
ಮಾಡುತ್ತಿದ್ದರು. ಕಯಾಲಿ ತಿರುಗಿದಂತೆ ಮಾತನಾಡುವುದು ; ಹೆಂಗಸರಿದ್ದಾರೆ
ಮಕ್ಕಳಿದ್ದಾರೆ ಎನ್ನುವುದನ್ನು ಗಮನಿಸದೆ ತೋಚಿದ ಕೆಟ್ಟ ಮಾತುಗಳನ್ನು
ಆಡಿಬಿಡುವುದು ಇವೆಲ್ಲವೂ ಶುರುವಾಯಿತು.
ಮಾನಸಿಕ ಆಸ್ಪತ್ರೆಗೆ ಸೇರಿಸಬೇಕಾಯಿತು. ಒಂದೆರಡು ವಾರಗಳಲ್ಲಿ ಅಲ್ಲಿ
ಲಕ್ವಾ ಬಡಿಯಿತು, ಎಂಟು ಹತ್ತು ದಿನಗಳಲ್ಲಿ ತೀರಿಕೊಂಡರು.
ಮಾನ ಮರ್ಯಾದೆಗಳನ್ನು ಮರೆತು ವಿಷಯಲಂಪಟರಾದ ದಿನದಿಂದ
ಸಾಯುವ ವೇಳೆಗೆ ಕೇವಲ ಎರಡೇ ವರ್ಷಗಳಾಗಿತ್ತು. ಅಷ್ಟರಲ್ಲಿ ಅರ್ಧಮುಕ್ಕಾಲು
ಆಸ್ತಿಯನ್ನು ವಿಲೇವಾರಿ ಮಡಿಬಿಟ್ಟಿದ್ದರು. ಮನೆಯವರು ಅದನ್ನೆಲ್ಲಾ ಕೋರ್ಟಿನಲ್ಲಿ
ಮೊಕದ್ದಮೆ ಹೂಡಿ, ವಾಪಸು ಪಡೆಯುವ ವೇಳೆಗೆ ಅರ್ಧಕ್ಕಿಂತ ಹೆಚ್ಚರಷ್ಟು
ಲಾಯರ ಪಾಲಾಗಿರುತ್ತದೆ, ಕೋರ್ಟಿನ ಖರ್ಚಾಗುತ್ತದೆ.
ಮೆದುಳಿನ ಶಿಥಿಲತೆಯಿಂದ ಈ ತೆರನ ನಡವಳಿಕೆಯೂ ಸಾಮಾನ್ಯವಾಗಿ
ಕಾಣಬರುತ್ತದೆ.<noinclude></noinclude>
ars5hf7mus2xhdh3nz14zspshmcwjf8
316718
316690
2026-05-04T07:23:43Z
Shreelatha.Halemane
7642
/* Validated */
316718
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ದೈಹಿಕ ಬೇನೆಗಳಿಂದ ಉಂಟಾಗುವ ಮನೋರೋಗಗಳು}}{{Right|೨೫೫}}
ಆಸ್ತಿಯು ಕರಗತೊಡಗಿತು.
{{gap}}ಬೆಳೆದ ಮಕ್ಕಳು : ಸ್ಥಿತಿವಂತ ಅಳಿಯಂದಿರೂ ಮೊಮ್ಮಕ್ಕಳೂ ಎಲ್ಲರೂ
ಇದ್ದರು. ಹಿರಿಯರ ಈ ವರ್ತನೆಯಿಂದ ತಮ್ಮ ಆಸ್ತಿಗೆ ಮತ್ತು ಬಾಳಿಗೆ ಎಲ್ಲಿ ಧಕ್ಕೆ
ಬರುತ್ತದೆಯೋ ಎಂದು ಮಕ್ಕಳಿಗೆ ಭಯವಾಯಿತು. 'ಪಿತ್ರಾರ್ಜಿತ ಆಸ್ತಿ ನಮಗೂ
ಇದರಲ್ಲಿ ಹಕ್ಕಿದೆ. ಚಿಕ್ಕಪಾಪಯ್ಯನವರು ಅನಿಷ್ಟರ ದುರ್ನುಡಿಗೆ ಮರುಳಾಗಿ
ಆಸ್ತಿಯನ್ನು ಮಾರತೊಡಗಿದ್ದಾರೆ. ಇದು ಊರ್ಜಿತವಾಗುವುದಿಲ್ಲ. ಆದಕಾರಣ
ಸುಲಭವಾಗಿ ಸಿಕ್ಕಿತು ಎಂದು ಆಸೆ ಪಟ್ಟುಕೊಂಡವರು ಕೆಟ್ಟುಹೋಗುತ್ತಾರೆ'.
ಎಂದು ಲಾಯರ ಮೂಲಕ ಎಲ್ಲ ಪತ್ರಿಕೆಗಳಲ್ಲಿಯೂ ಜಾಹೀರಾತು ಮಾಡಿಸಿದರು.
{{gap}}ಅವಮಾನಕರವಾದ ಈ ಜಾಹೀರಾತುಗಳನ್ನು ಕಂಡು ಚಿಕ್ಕಪಾಪಯ್ಯನವರಿಗೆ
ಯಾವ ದುಃಖವೂ ಆದಂತೆ ಕಾಣಿಸಲಿಲ್ಲ. ನಾಗಾಸಾನಿಯ ಮನೆಯಲ್ಲೇ ಹೆಚ್ಚು
ಕಾಲವನ್ನು ಕಳೆಯಲಾರಂಭಿಸಿದರು. ಆರೇಳು ತಿಂಗಳ ಅವಧಿಯಲ್ಲಿ ಅವರ
ವರ್ತನೆಯು ನಾಗಾಸಾನಿಗೂ ಬೇಸರವನ್ನು ತಂದಿತು, ಚಿಕ್ಕಪಾಪಯ್ಯನವರ
ಕೈಯೂ ಬರಿದಾಗಿತ್ತು. ಹೊರಗೆ ಹಾಕಿದಳು. ಹುಚ್ಚರಂತೆ ರಸ್ತೆಗಳಲ್ಲಿ
ಅಡ್ಡಾಡತೊಡಗಿದರು. ಒಮ್ಮೊಮ್ಮೆ ಮನೆಗೂ ಬರುತ್ತಿದ್ದರು. ಊಟವನ್ನೂ
ಮಾಡುತ್ತಿದ್ದರು. ಕಯಾಲಿ ತಿರುಗಿದಂತೆ ಮಾತನಾಡುವುದು ; ಹೆಂಗಸರಿದ್ದಾರೆ
ಮಕ್ಕಳಿದ್ದಾರೆ ಎನ್ನುವುದನ್ನು ಗಮನಿಸದೆ ತೋಚಿದ ಕೆಟ್ಟ ಮಾತುಗಳನ್ನು
ಆಡಿಬಿಡುವುದು ಇವೆಲ್ಲವೂ ಶುರುವಾಯಿತು.
{{gap}}ಮಾನಸಿಕ ಆಸ್ಪತ್ರೆಗೆ ಸೇರಿಸಬೇಕಾಯಿತು. ಒಂದೆರಡು ವಾರಗಳಲ್ಲಿ ಅಲ್ಲಿ
ಲಕ್ವಾ ಬಡಿಯಿತು, ಎಂಟು ಹತ್ತು ದಿನಗಳಲ್ಲಿ ತೀರಿಕೊಂಡರು.
{{gap}}ಮಾನ ಮರ್ಯಾದೆಗಳನ್ನು ಮರೆತು ವಿಷಯಲಂಪಟರಾದ ದಿನದಿಂದ
ಸಾಯುವ ವೇಳೆಗೆ ಕೇವಲ ಎರಡೇ ವರ್ಷಗಳಾಗಿತ್ತು. ಅಷ್ಟರಲ್ಲಿ ಅರ್ಧಮುಕ್ಕಾಲು
ಆಸ್ತಿಯನ್ನು ವಿಲೇವಾರಿ ಮಡಿಬಿಟ್ಟಿದ್ದರು. ಮನೆಯವರು ಅದನ್ನೆಲ್ಲಾ ಕೋರ್ಟಿನಲ್ಲಿ
ಮೊಕದ್ದಮೆ ಹೂಡಿ, ವಾಪಸು ಪಡೆಯುವ ವೇಳೆಗೆ ಅರ್ಧಕ್ಕಿಂತ ಹೆಚ್ಚರಷ್ಟು
ಲಾಯರ ಪಾಲಾಗಿರುತ್ತದೆ, ಕೋರ್ಟಿನ ಖರ್ಚಾಗುತ್ತದೆ.
{{gap}}ಮೆದುಳಿನ ಶಿಥಿಲತೆಯಿಂದ ಈ ತೆರನ ನಡವಳಿಕೆಯೂ ಸಾಮಾನ್ಯವಾಗಿ
ಕಾಣಬರುತ್ತದೆ.<noinclude></noinclude>
4ymxja8sjxz5fe2jxok5yuykxcf5f6x
ಪುಟ:ಮನಮಂಥನ.pdf/೨೭೫
104
62722
316689
314440
2026-05-04T06:57:10Z
Shreesha Sharma
7840
/* Proofread */
316689
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೨೫೬}}{{Right|ಮನಮಂಥನ}}
{{center|'''೯. ಚಿಕಿತ್ಸಾ ಕ್ರಮಗಳು'''}}
ಯಾವ ಬೇನೆಗಾದರೂ, ದೈಹಿಕವಾಗಲೀ, ಮಾನಸಿಕವಾಗಲೀ, ಚಿಕಿತ್ಸೆಯನ್ನು
ಮಾಡುವುದಕ್ಕಿಂತ, ಬೇನೆಯು ಬರದೆ ಇರುವಂತೆ ತಡೆಗಟ್ಟುವುದು ಉತ್ತಮ.
ಆದರೆ ಈ ನೀತಿಯನ್ನು ಅನುಸರಿಸುವುದು ಮಾನಸಿಕ ಬೇನೆಗಳಲ್ಲಿ ಅಷ್ಟು
ಸುಲಭವಲ್ಲ. ಏಕೆಂದರೆ ಮಾನಸಿಕ ಬೇನೆಗಳು ವಿಧವಿಧವಾದುವು. ಒಂದರಂತೆ
ಇನ್ನೊಂದು ಇರುವುದಿಲ್ಲ. ಹಾಗೂ ಅಲ್ಲದೆ ಎರಡು ಮೂರು ತೆರನಾದ ಮಾನಸಿಕ
ಬೇನೆಗಳು ಒಂದನ್ನೊಂದು ಜತೆಗೂಡಿಕೊಂಡಿರುತ್ತವೆ. ಯಾವುದೊಂದೂ, ಒಂದೇ
ಆಗಿ ಇರುವುದಿಲ್ಲ. ಆದಕಾರಣ ಮುಂಜಾಗ್ರತಾಕ್ರಮಗಳನ್ನು ಕೈಗೊಳ್ಳಬೇಕಾದರೆ,
ಬೇನೆಗಳಲ್ಲಿ ಅತಿಯಾಗಿ ಕಾಣುವ ಭಾಗವನ್ನು ಗಮನಕ್ಕೆ ತೆಗೆದುಕೊಳ್ಳಬೇಕು.
'''ಮುಂಜಾಗ್ರತಾ ಕ್ರಮಗಳು'''
೧. ಕೆಲವೊಂದು ಮಾನಸಿಕ ಬೇನೆಗಳಲ್ಲಿ ಅನುವಂಶಿಕ ಪ್ರವೃತ್ತಿಯು
ಎದ್ದು ಕಾಣುತ್ತದೆ. ಇಂತಹ ಬೇನೆಗಳಲ್ಲಿ ಸ್ಕಿಜೋಫ್ರೆನಿಯಾ ಮುಖ್ಯವಾದುದು.
ಆನುವಂಶಿಕ ಪ್ರವೃತ್ತಿಯು ಇದೆ ; ಆದುದರಿಂದ ಈ ಬೇನೆಯಿಂದ ನರಳುವವರು
ಮಕ್ಕಳಾಗದಂತೆ ಎಚ್ಚರವಹಿಸಬೇಕು. ಅಲ್ಲದೆ ಈ ಪ್ರವೃತ್ತಿಯು ಕಂಡುಬಂದಿರುವ
ಎರಡು ಮನೆತನದವರು ಬೀಗರಾಗದೆ ಇರುವುದು ಒಳಿತು. ದಂಪತಿಗಳಲ್ಲಿ
ಇಬ್ಬರಿಗೂ ಸ್ಟೀಜೋ ಪ್ರವೃತ್ತಿಯು ಇದ್ದರೆ, ಹುಟ್ಟುವ ಮಕ್ಕಳಲ್ಲಿ ಹೆಚ್ಚು ಮಂದಿಗೆ
ಜೋ ಕಾಣಿಸಿಕೊಳ್ಳುವ ಸಂಭವವು ಇದೆ. ಆದರೆ ದಂಪತಿಗಳಲ್ಲಿ ಒಬ್ಬರಿಗೆ
ಮಾತ್ರ ಈ ಪ್ರವೃತ್ತಿಯು ಇದ್ದರೆ, ಹುಟ್ಟುವ ಮಕ್ಕಳಲ್ಲಿ ಕಡಿಮೆ ಸಂಖ್ಯೆಗೆ ಜೋ
ಬರಬಹುದು.
ಅಂದರೆ ಮದುವೆಯನ್ನು ಮಾಡಿಕೊಳ್ಳುವಾಗ, ಮನೆತನವನ್ನು
ಗಮನಿಸಬೇಕು. ಜೋಪ್ರವೃತ್ತಿಯು ಸ್ಪಷ್ಟವಾಗಿ ಮನೆತನದಲ್ಲಿ ಇದೆ ಎಂದು
ಕಂಡು ಬಂದರೆ, ಎಚ್ಚರದಿಂದಿರಬೇಕು. ಎರಡೂ ಮನೆತನಗಳಲ್ಲಿದ್ದರೆ ವಿವಾಹ
ಸಂಬಂಧವನ್ನು ಮಾಡದೆ ಇರುವುದು ಕ್ಷೇಮ. ಒಂದರಲ್ಲಿ ಮಾತ್ರ ಇದ್ದರೆ,
ಮಿಕ್ಕೆಲ್ಲ ಅನುಕೂಲಗಳೂ ಲಕ್ಷಣವಾಗಿದ್ದರೆ, ವಿವಾಹವನ್ನು ನಿಷೇಧಿಸಬೇಕಾಗಿಲ್ಲ.<noinclude></noinclude>
3gcu6w233sg2rgyirm2oktpf9s5rqrf
316719
316689
2026-05-04T07:24:09Z
Shreelatha.Halemane
7642
/* Validated */
316719
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೨೫೬}}{{Right|ಮನಮಂಥನ}}
{{center|'''೯. ಚಿಕಿತ್ಸಾ ಕ್ರಮಗಳು'''}}
{{gap}}ಯಾವ ಬೇನೆಗಾದರೂ, ದೈಹಿಕವಾಗಲೀ, ಮಾನಸಿಕವಾಗಲೀ, ಚಿಕಿತ್ಸೆಯನ್ನು
ಮಾಡುವುದಕ್ಕಿಂತ, ಬೇನೆಯು ಬರದೆ ಇರುವಂತೆ ತಡೆಗಟ್ಟುವುದು ಉತ್ತಮ.
ಆದರೆ ಈ ನೀತಿಯನ್ನು ಅನುಸರಿಸುವುದು ಮಾನಸಿಕ ಬೇನೆಗಳಲ್ಲಿ ಅಷ್ಟು
ಸುಲಭವಲ್ಲ. ಏಕೆಂದರೆ ಮಾನಸಿಕ ಬೇನೆಗಳು ವಿಧವಿಧವಾದುವು. ಒಂದರಂತೆ
ಇನ್ನೊಂದು ಇರುವುದಿಲ್ಲ. ಹಾಗೂ ಅಲ್ಲದೆ ಎರಡು ಮೂರು ತೆರನಾದ ಮಾನಸಿಕ
ಬೇನೆಗಳು ಒಂದನ್ನೊಂದು ಜತೆಗೂಡಿಕೊಂಡಿರುತ್ತವೆ. ಯಾವುದೊಂದೂ, ಒಂದೇ
ಆಗಿ ಇರುವುದಿಲ್ಲ. ಆದಕಾರಣ ಮುಂಜಾಗ್ರತಾಕ್ರಮಗಳನ್ನು ಕೈಗೊಳ್ಳಬೇಕಾದರೆ,
ಬೇನೆಗಳಲ್ಲಿ ಅತಿಯಾಗಿ ಕಾಣುವ ಭಾಗವನ್ನು ಗಮನಕ್ಕೆ ತೆಗೆದುಕೊಳ್ಳಬೇಕು.
'''ಮುಂಜಾಗ್ರತಾ ಕ್ರಮಗಳು'''
{{gap}}೧. ಕೆಲವೊಂದು ಮಾನಸಿಕ ಬೇನೆಗಳಲ್ಲಿ ಅನುವಂಶಿಕ ಪ್ರವೃತ್ತಿಯು
ಎದ್ದು ಕಾಣುತ್ತದೆ. ಇಂತಹ ಬೇನೆಗಳಲ್ಲಿ ಸ್ಕಿಜೋಫ್ರೆನಿಯಾ ಮುಖ್ಯವಾದುದು.
ಆನುವಂಶಿಕ ಪ್ರವೃತ್ತಿಯು ಇದೆ ; ಆದುದರಿಂದ ಈ ಬೇನೆಯಿಂದ ನರಳುವವರು
ಮಕ್ಕಳಾಗದಂತೆ ಎಚ್ಚರವಹಿಸಬೇಕು. ಅಲ್ಲದೆ ಈ ಪ್ರವೃತ್ತಿಯು ಕಂಡುಬಂದಿರುವ
ಎರಡು ಮನೆತನದವರು ಬೀಗರಾಗದೆ ಇರುವುದು ಒಳಿತು. ದಂಪತಿಗಳಲ್ಲಿ
ಇಬ್ಬರಿಗೂ ಸ್ಟೀಜೋ ಪ್ರವೃತ್ತಿಯು ಇದ್ದರೆ, ಹುಟ್ಟುವ ಮಕ್ಕಳಲ್ಲಿ ಹೆಚ್ಚು ಮಂದಿಗೆ
ಜೋ ಕಾಣಿಸಿಕೊಳ್ಳುವ ಸಂಭವವು ಇದೆ. ಆದರೆ ದಂಪತಿಗಳಲ್ಲಿ ಒಬ್ಬರಿಗೆ
ಮಾತ್ರ ಈ ಪ್ರವೃತ್ತಿಯು ಇದ್ದರೆ, ಹುಟ್ಟುವ ಮಕ್ಕಳಲ್ಲಿ ಕಡಿಮೆ ಸಂಖ್ಯೆಗೆ ಜೋ
ಬರಬಹುದು.
{{gap}}ಅಂದರೆ ಮದುವೆಯನ್ನು ಮಾಡಿಕೊಳ್ಳುವಾಗ, ಮನೆತನವನ್ನು
ಗಮನಿಸಬೇಕು. ಜೋಪ್ರವೃತ್ತಿಯು ಸ್ಪಷ್ಟವಾಗಿ ಮನೆತನದಲ್ಲಿ ಇದೆ ಎಂದು
ಕಂಡು ಬಂದರೆ, ಎಚ್ಚರದಿಂದಿರಬೇಕು. ಎರಡೂ ಮನೆತನಗಳಲ್ಲಿದ್ದರೆ ವಿವಾಹ
ಸಂಬಂಧವನ್ನು ಮಾಡದೆ ಇರುವುದು ಕ್ಷೇಮ. ಒಂದರಲ್ಲಿ ಮಾತ್ರ ಇದ್ದರೆ,
ಮಿಕ್ಕೆಲ್ಲ ಅನುಕೂಲಗಳೂ ಲಕ್ಷಣವಾಗಿದ್ದರೆ, ವಿವಾಹವನ್ನು ನಿಷೇಧಿಸಬೇಕಾಗಿಲ್ಲ.<noinclude></noinclude>
esmhed8d8hg9jbur8ytok0a08w5awpk
ಪುಟ:ಮನಮಂಥನ.pdf/೨೭೬
104
62723
316688
314441
2026-05-04T06:55:18Z
Shreesha Sharma
7840
/* Proofread */
316688
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಚಿಕಿತ್ಸಾಕ್ರಮಗಳು}}
ಆದರೆ ಹೆಚ್ಚು ಮಕ್ಕಳಾಗದಂತೆ ಎಚ್ಚರವಹಿಸುವುದು ಒಳ್ಳೆಯದು.
ಬಹು ಪಾಲು ಮೂವತ್ತರ ಪ್ರಾಯವು ಮೀರಿದ ಮೇಲೆ ಜೋ
ಬೇನೆಯು ಕಾಣಿಸಿಕೊಳ್ಳುತ್ತದೆ. ಆ ವೇಳೆಗೆ ಮದುವೆಯಾಗಿ, ಮಕ್ಕಳೂ ಆಗಿರುತ್ತದೆ,
ನಮ್ಮ ಸಮಾಜದಲ್ಲಿ, ಅಂದಮೇಲೆ ನಮ್ಮಲ್ಲಿ ಮುಂಜಾಗ್ರತಾ ಕ್ರಮಗಳಲ್ಲೊಂದಾದ,
ಮದುವೆಯ ಸಲಹೆಯು, ಸುಮಾರುಪಾಲು ನಿಷ್ಟ್ರಯೋಜಕ.
ಅದೂ ಅಲ್ಲದೆ ದೇವರು ಎಂದು ಶೈಶವದಿಂದಲೂ ಕೇಳಿಸಿಕೊಳ್ಳುವ
ನಮ್ಮ ಸಮಾಜದಲ್ಲಿ, ಇನ್ನೊಂದು ವಿಚಿತ್ರವನ್ನೂ ಕಾಣುತ್ತೇವೆ. ಪ್ರೌಢ
ವಿದ್ಯಾಭ್ಯಾಸವನ್ನು ಮಾಡಿದ ಈ ತರುಣನಿಗೆ ಜೋದ ಚಿಹ್ನೆಗಳಿವೆ. ಇವನಿಗೆ
ಕೆಲಕಾಲವಾದರೂ ಮದುವೆಯನ್ನು ಮಾಡಬಾರದು ಎಂದು ಮನೋವೈದ್ಯರು
ಒತ್ತಿ ಹೇಳಿರುತ್ತಾರೆ. 'ಹುಚ್ಚು ಬಿಟ್ಟ ಹೊರತು ಹೆಣ್ಣು ಕೊಡುವುದಿಲ್ಲ ; ಹೆಣ್ಣು
ಕೊಟ್ಟ ಹೊರತು ಹುಚ್ಚು ಬಿಡುವುದಿಲ್ಲ' ಎಂಬ ಗಾದೆಯನ್ನು ಡಾಕ್ಟರು ಕೇಳಿಯೇ
ಇಲ್ಲವೇನೋ ? ಎಂದು ಡಾಕ್ಟರನ್ನು ಮೂದಲಿಸಿ, ಆ ತರುಣನಿಗೆ ಮದುವೆಯನ್ನು
ಮಾಡಿ ಬಿಡುತ್ತಾರೆ. ಸಂಸಾರದ ಮೊದಲು ಕೆಲವು ವರ್ಷಗಳು
ಅಡ್ಡಾದಿಡ್ಡಿಯಾದರೂ, ನಂತರ ತಕ್ಕಮಟ್ಟಿಗೆ ಸುಖವಾಗಿಯೇ ಇರುತ್ತಾರೆ, ಆ
ದಂಪತಿಗಳು. ಇದನ್ನು ಸಾಕ್ಷಾತ್ತಾಗಿ ಕಂಡ ಯಾವ ವೈದ್ಯನೂ, ವಿವಾಹವನ್ನು
ಮುಂದಕ್ಕೆ ತಳ್ಳಿ ಎಂದು ತಾನು ಕೊಡಬೇಕಾದ ಸಲಹೆಯನ್ನು
ಒತ್ತಾಯಪಡಿಸುವುದಿಲ್ಲ. ಪಾಶ್ಚಾತ್ಯ ಸಮಾಜಗಳಲ್ಲಿ ಇಂತಹ ಸಲಹೆಯನ್ನು ಒತ್ತಿ
ಹೇಳಬೇಕು. ಆದರೆ ನಮ್ಮ ಸಂಸ್ಕೃತಿಯ ಸಮಾಜದಲ್ಲಿ, ಒತ್ತಾಯಪಡಿಸಬೇಕಾಗಿಲ್ಲ.
ದೇವರಲ್ಲಿನ ಶೈಶವದಿಂದ ರೂಢಿಸಲ್ಪಟ್ಟ ನಂಬಿಕೆಯೇ ಇಂತಹ ಉತ್ತಮ ಫಲಿತಾಂಶಕ್ಕೆ
ಕಾರಣವೇ? ಎಂಬುದನ್ನು ಮನೋವಿಜ್ಞಾನಿಗಳು ಸಂಶೋಧಿಸಬೇಕು.
ಇನ್ನೂ ಒಂದು ತೊಂದರೆಯಿದೆ, ನಮ್ಮ ಸಮಾಜದಲ್ಲಿ, ಜೋ ತರಹ
ಬೇನೆ ಯಾವುದು? ಮ್ಯಾನಿಕ್ ಡಿಪ್ರೆಸಿವ್ ಸೈಕೋಸಿಸ್ ಯಾವುದು ಎಂದು ಜನ
ಸಾಮಾನ್ಯರಿಗೆ ತಿಳಿಯುವುದಿಲ್ಲ. ಹುಚ್ಚು ಬೆಪ್ಪು ಶಿವಲೀಲೆ ಎಂದು ನಮ್ಮ ಜನತೆ
ಮಾನಸಿಕ ಬೇನೆಗಳನ್ನು ವಿಂಗಡಿಸುತ್ತಾರೆ. ಅವರ ಪಾಲಿಗೆ ಹುಚ್ಚು ಎಂದರೆ
ಒಂದೇ ಗುಂಪು, ಹಾಗಾಗಿ ಆನುವಂಶಿಕ ಪ್ರವೃತ್ತಿಯು ಸ್ಪಷ್ಟವಾಗಿರದೆ ಇರುವ
ಇತರ ಮಾನಸಿಕ ಬೇನೆಗಳವರನ್ನೂ, ವಿವಾಹಕ್ಕೆ ಅಸಾಧು ಎಂದು ತಳ್ಳಿ ಹಾಕುತ್ತಾರೆ.
ಇದರಿಂದ ಸುಮಾರು ತೊಂದರೆಯೂ, ನಿವಾರಿಸಬಹುದಾದ ಕಷ್ಟ ಸಂಕಟಗಳೂ
ಉಂಟಾಗುತ್ತವೆ. ಜನತೆಯು ಈ ವಿಷಯದಲ್ಲಿ ಎಚ್ಚರಗೊಳ್ಳಬೇಕಾದರೆ, ಅವರಿಗೆ
ಆ ವಿಷಯದ ತಿಳುವಳಿಕೆಯೂ ಕಲಿಸಲ್ಪಡಬೇಕು. ಅಥವಾ ಅನುಮಾನ ಬಂದಾಗ<noinclude></noinclude>
9sbic8pfibnetn5lpxjhp1h4on2ujku
316720
316688
2026-05-04T07:24:46Z
Shreelatha.Halemane
7642
/* Validated */
316720
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಚಿಕಿತ್ಸಾಕ್ರಮಗಳು}}
ಆದರೆ ಹೆಚ್ಚು ಮಕ್ಕಳಾಗದಂತೆ ಎಚ್ಚರವಹಿಸುವುದು ಒಳ್ಳೆಯದು.
{{gap}}ಬಹು ಪಾಲು ಮೂವತ್ತರ ಪ್ರಾಯವು ಮೀರಿದ ಮೇಲೆ ಜೋ
ಬೇನೆಯು ಕಾಣಿಸಿಕೊಳ್ಳುತ್ತದೆ. ಆ ವೇಳೆಗೆ ಮದುವೆಯಾಗಿ, ಮಕ್ಕಳೂ ಆಗಿರುತ್ತದೆ,
ನಮ್ಮ ಸಮಾಜದಲ್ಲಿ, ಅಂದಮೇಲೆ ನಮ್ಮಲ್ಲಿ ಮುಂಜಾಗ್ರತಾ ಕ್ರಮಗಳಲ್ಲೊಂದಾದ,
ಮದುವೆಯ ಸಲಹೆಯು, ಸುಮಾರುಪಾಲು ನಿಷ್ಟ್ರಯೋಜಕ.
{{gap}}ಅದೂ ಅಲ್ಲದೆ ದೇವರು ಎಂದು ಶೈಶವದಿಂದಲೂ ಕೇಳಿಸಿಕೊಳ್ಳುವ
ನಮ್ಮ ಸಮಾಜದಲ್ಲಿ, ಇನ್ನೊಂದು ವಿಚಿತ್ರವನ್ನೂ ಕಾಣುತ್ತೇವೆ. ಪ್ರೌಢ
ವಿದ್ಯಾಭ್ಯಾಸವನ್ನು ಮಾಡಿದ ಈ ತರುಣನಿಗೆ ಜೋದ ಚಿಹ್ನೆಗಳಿವೆ. ಇವನಿಗೆ
ಕೆಲಕಾಲವಾದರೂ ಮದುವೆಯನ್ನು ಮಾಡಬಾರದು ಎಂದು ಮನೋವೈದ್ಯರು
ಒತ್ತಿ ಹೇಳಿರುತ್ತಾರೆ. 'ಹುಚ್ಚು ಬಿಟ್ಟ ಹೊರತು ಹೆಣ್ಣು ಕೊಡುವುದಿಲ್ಲ ; ಹೆಣ್ಣು
ಕೊಟ್ಟ ಹೊರತು ಹುಚ್ಚು ಬಿಡುವುದಿಲ್ಲ' ಎಂಬ ಗಾದೆಯನ್ನು ಡಾಕ್ಟರು ಕೇಳಿಯೇ
ಇಲ್ಲವೇನೋ ? ಎಂದು ಡಾಕ್ಟರನ್ನು ಮೂದಲಿಸಿ, ಆ ತರುಣನಿಗೆ ಮದುವೆಯನ್ನು
ಮಾಡಿ ಬಿಡುತ್ತಾರೆ. ಸಂಸಾರದ ಮೊದಲು ಕೆಲವು ವರ್ಷಗಳು
ಅಡ್ಡಾದಿಡ್ಡಿಯಾದರೂ, ನಂತರ ತಕ್ಕಮಟ್ಟಿಗೆ ಸುಖವಾಗಿಯೇ ಇರುತ್ತಾರೆ, ಆ
ದಂಪತಿಗಳು. ಇದನ್ನು ಸಾಕ್ಷಾತ್ತಾಗಿ ಕಂಡ ಯಾವ ವೈದ್ಯನೂ, ವಿವಾಹವನ್ನು
ಮುಂದಕ್ಕೆ ತಳ್ಳಿ ಎಂದು ತಾನು ಕೊಡಬೇಕಾದ ಸಲಹೆಯನ್ನು
ಒತ್ತಾಯಪಡಿಸುವುದಿಲ್ಲ. ಪಾಶ್ಚಾತ್ಯ ಸಮಾಜಗಳಲ್ಲಿ ಇಂತಹ ಸಲಹೆಯನ್ನು ಒತ್ತಿ
ಹೇಳಬೇಕು. ಆದರೆ ನಮ್ಮ ಸಂಸ್ಕೃತಿಯ ಸಮಾಜದಲ್ಲಿ, ಒತ್ತಾಯಪಡಿಸಬೇಕಾಗಿಲ್ಲ.
ದೇವರಲ್ಲಿನ ಶೈಶವದಿಂದ ರೂಢಿಸಲ್ಪಟ್ಟ ನಂಬಿಕೆಯೇ ಇಂತಹ ಉತ್ತಮ ಫಲಿತಾಂಶಕ್ಕೆ
ಕಾರಣವೇ? ಎಂಬುದನ್ನು ಮನೋವಿಜ್ಞಾನಿಗಳು ಸಂಶೋಧಿಸಬೇಕು.
{{gap}}ಇನ್ನೂ ಒಂದು ತೊಂದರೆಯಿದೆ, ನಮ್ಮ ಸಮಾಜದಲ್ಲಿ, ಜೋ ತರಹ
ಬೇನೆ ಯಾವುದು? ಮ್ಯಾನಿಕ್ ಡಿಪ್ರೆಸಿವ್ ಸೈಕೋಸಿಸ್ ಯಾವುದು ಎಂದು ಜನ
ಸಾಮಾನ್ಯರಿಗೆ ತಿಳಿಯುವುದಿಲ್ಲ. ಹುಚ್ಚು ಬೆಪ್ಪು ಶಿವಲೀಲೆ ಎಂದು ನಮ್ಮ ಜನತೆ
ಮಾನಸಿಕ ಬೇನೆಗಳನ್ನು ವಿಂಗಡಿಸುತ್ತಾರೆ. ಅವರ ಪಾಲಿಗೆ ಹುಚ್ಚು ಎಂದರೆ
ಒಂದೇ ಗುಂಪು, ಹಾಗಾಗಿ ಆನುವಂಶಿಕ ಪ್ರವೃತ್ತಿಯು ಸ್ಪಷ್ಟವಾಗಿರದೆ ಇರುವ
ಇತರ ಮಾನಸಿಕ ಬೇನೆಗಳವರನ್ನೂ, ವಿವಾಹಕ್ಕೆ ಅಸಾಧು ಎಂದು ತಳ್ಳಿ ಹಾಕುತ್ತಾರೆ.
ಇದರಿಂದ ಸುಮಾರು ತೊಂದರೆಯೂ, ನಿವಾರಿಸಬಹುದಾದ ಕಷ್ಟ ಸಂಕಟಗಳೂ
ಉಂಟಾಗುತ್ತವೆ. ಜನತೆಯು ಈ ವಿಷಯದಲ್ಲಿ ಎಚ್ಚರಗೊಳ್ಳಬೇಕಾದರೆ, ಅವರಿಗೆ
ಆ ವಿಷಯದ ತಿಳುವಳಿಕೆಯೂ ಕಲಿಸಲ್ಪಡಬೇಕು. ಅಥವಾ ಅನುಮಾನ ಬಂದಾಗ<noinclude></noinclude>
3xfejwxkoeabqbe16kloh8qqkwu0noa
ಪುಟ:ಮನಮಂಥನ.pdf/೨೭೭
104
62724
316687
314442
2026-05-04T06:51:54Z
Shreesha Sharma
7840
/* Proofread */
316687
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೨೫೮}}{{Right|ಮನಮಂಥನ}}
ಇದು ಬೇಡ ಎಂದು ತಾವೇ ನಿರ್ಧರಿಸುವ ಮೊದಲು ಮನೋವೈದ್ಯರಲ್ಲಿ
ಅಗತ್ಯವಾದ ಸಲಹೆಯನ್ನು ಪಡೆಯಬೇಕು.
ಮಾನಸಿಕ ಬೇನೆಯು ಒಂದು ಕಳಂಕ ಎಂದೆಂಬ ನಂಬಿಕೆಯು ನಮ್ಮಲ್ಲಿ
ಇನ್ನೂ ಉಳಿದಿದೆ. ಆದರೆ ನಮ್ಮ ಸಮಾಜವು, ಬಹು ಕಾಲದಿಂದ ಕೆಲವು
ಮಾನಸಿಕ ಬೇನೆಗಳನ್ನು ದೆವ್ವ ಹಿಡಿದಿದೆ, ಅವನಿಗೆ' ; 'ಮೋಹಿನಿ ಬಡಿದಿದೆ' ;
*ಸವತಿಕಾಟ ಅವಳಿಗೆ' ; 'ಕೊಳ್ಳಿ ಪಿಶಾಚಿ ಅವಳ ಹೊಟ್ಟೆಯನ್ನು ಹೊಕ್ಕಿದೆ'
ಎಂದು ಹೆಸರಿಡುತ್ತಿದ್ದರು. ಪಂಜುರ್ಲಿ ಭೂತವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ
ಬಿಡಿಸಿದರೆ, ಕುಟ್ಟಿಚಾತನ್ನನ್ನು ಕೇರಳದಲ್ಲಿ ದಿಗ್ಧಂಧಿಸುತ್ತಿದ್ದರು.
ದೆವ್ವ ಹಿಡಿದರೆ ಕಳಂಕವೇನೂ ಅಲ್ಲ ಎಂದು ನಂಬಿಕೆಯೂ ಮೂಡಿತ್ತು.
ನಮ್ಮ ಸಮಾಜದ ನಂಬಿಕೆಗಳನ್ನು ಮನೋವೈದ್ಯರೂ ಬಳಸಿಕೊಂಡು
'ಇದು ಮಾನಸಿಕ ಬೇನೆಯಲ್ಲ-ಕೇವಲ ಭೂತದ ಕಾಟ, ಪಿಶಾಚಿಯ ಆಟ
ಇದನ್ನು ನಾವೂ ದಿಗ್ಧಂಧಿಸಬಲ್ಲೆವು ಈ ರೀತಿಯಲ್ಲಿ' ಎಂದು ಹೇಳಿ ತಾವು
ಎಂದಿನಂತೆ ಮಾಡುವ ಚಿಕಿತ್ಸೆಯನ್ನೇ ಪರಿಣಾಮಕಾರಿಯಾಗಿ ಮಾಡಬಹುದು.
ಆಗ ಸಮಾಜದಲ್ಲಿ 'ಕಳಂಕ'ದ ಸೊಲ್ಲು ಏಳುವುದಿಲ್ಲ. ಮನೋವಿಜ್ಞಾನಿಗಳು
ಈ ಕ್ರಮವನ್ನು ಆಚರಿಸುವುದು ಅಷ್ಟು ಸುಲಭವಲ್ಲ ; ಅವರು ಅಭ್ಯಾಸಿಸುವ
ಸಂಸ್ಥೆಗಳೇ ಇದಕ್ಕೆ ಅಡಚಣೆಯಾಗುತ್ತದೆ. ಆದರೆ ಮನೆಯ ವೈದ್ಯರುಗಳು
ಈ ಉಪಾಯವನ್ನು ಸುಲಭವಾಗಿ ಆಚರಿಸಿ, ತಟ್ಟಬಹುದಾದ ಕಳಂಕವನ್ನು
ನಿವಾರಿಸಬಹುದು.
೨. ಮಾನಸಿಕ ಬೇನೆಗಳ ಮೊದಲ ಹಂತವನ್ನು ಗುರುತಿಸುವುದು :
ಮೊದಮೊದಲ ಹಂತದಲ್ಲಿ ಮಾನಸಿಕ ಬೇನೆಗಳನ್ನು ಗುರುತಿಸಿದರೆ,
ಅವುಗಳನ್ನು ಗುಣಪಡಿಸುವುದು ಹೆಚ್ಚು ಸುಲಭ. ಮೊದಲ ಹಂತದಲ್ಲಿ
ಗುರುತಿಸಬೇಕಾದರೆ, ಮನೆಯಲ್ಲಿರುವ ಜನರಿಗೆ, ಶಾಲೆಯಲ್ಲಿರುವ ಮಂದಿಗೆ,
ಈ ಬೇನೆಗಳ ಸ್ವರೂಪವು ತಿಳಿದಿರಬೇಕು. ವಿಷಯವು ತಿಳಿದಿದ್ದಾಗ ಮಾತ್ರ
ಅದನ್ನು ಗುರುತಿಸಲು ಸಾಧ್ಯ. ಬೇನೆಗಳ ಸ್ವರೂಪವು ಎಲ್ಲರಿಗೂ ತಿಳಿಯಲಿ
ಎಂದೇ ಈ ಪುಸ್ತಕವನ್ನು ಬರೆದಿರುವುದು. ಚಿಕಿತ್ಸಾ ವಿಧಾನಗಳಲ್ಲಿ ಜ್ಞಾನ ಪ್ರಸಾರವೂ
ಮುಖ್ಯವಾದ ಒಂದು ಅಂಶ.
೩. ಹಿರಿಯ ಮನೋವಿಜ್ಞಾನಿಯಾದ Jung ಎಂಬುವನು ಈ ರೀತಿ
ಒಂದೆಡೆ ಹೇಳಿದ್ದಾನೆ :
:
"People are groping for some system of religious belief".<noinclude></noinclude>
47gptaqbc6rshrak2h0851jluyskqla
316721
316687
2026-05-04T07:25:51Z
Shreelatha.Halemane
7642
/* Validated */
316721
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೨೫೮}}{{Right|ಮನಮಂಥನ}}
ಇದು ಬೇಡ ಎಂದು ತಾವೇ ನಿರ್ಧರಿಸುವ ಮೊದಲು ಮನೋವೈದ್ಯರಲ್ಲಿ
ಅಗತ್ಯವಾದ ಸಲಹೆಯನ್ನು ಪಡೆಯಬೇಕು.
{{gap}}ಮಾನಸಿಕ ಬೇನೆಯು ಒಂದು ಕಳಂಕ ಎಂದೆಂಬ ನಂಬಿಕೆಯು ನಮ್ಮಲ್ಲಿ
ಇನ್ನೂ ಉಳಿದಿದೆ. ಆದರೆ ನಮ್ಮ ಸಮಾಜವು, ಬಹು ಕಾಲದಿಂದ ಕೆಲವು
ಮಾನಸಿಕ ಬೇನೆಗಳನ್ನು ದೆವ್ವ ಹಿಡಿದಿದೆ, ಅವನಿಗೆ' ; 'ಮೋಹಿನಿ ಬಡಿದಿದೆ' ;
*ಸವತಿಕಾಟ ಅವಳಿಗೆ' ; 'ಕೊಳ್ಳಿ ಪಿಶಾಚಿ ಅವಳ ಹೊಟ್ಟೆಯನ್ನು ಹೊಕ್ಕಿದೆ'
ಎಂದು ಹೆಸರಿಡುತ್ತಿದ್ದರು. ಪಂಜುರ್ಲಿ ಭೂತವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ
ಬಿಡಿಸಿದರೆ, ಕುಟ್ಟಿಚಾತನ್ನನ್ನು ಕೇರಳದಲ್ಲಿ ದಿಗ್ಧಂಧಿಸುತ್ತಿದ್ದರು.
{{gap}}ದೆವ್ವ ಹಿಡಿದರೆ ಕಳಂಕವೇನೂ ಅಲ್ಲ ಎಂದು ನಂಬಿಕೆಯೂ ಮೂಡಿತ್ತು.
{{gap}}ನಮ್ಮ ಸಮಾಜದ ನಂಬಿಕೆಗಳನ್ನು ಮನೋವೈದ್ಯರೂ ಬಳಸಿಕೊಂಡು
{{gap}}'ಇದು ಮಾನಸಿಕ ಬೇನೆಯಲ್ಲ-ಕೇವಲ ಭೂತದ ಕಾಟ, ಪಿಶಾಚಿಯ ಆಟ
ಇದನ್ನು ನಾವೂ ದಿಗ್ಧಂಧಿಸಬಲ್ಲೆವು ಈ ರೀತಿಯಲ್ಲಿ' ಎಂದು ಹೇಳಿ ತಾವು
ಎಂದಿನಂತೆ ಮಾಡುವ ಚಿಕಿತ್ಸೆಯನ್ನೇ ಪರಿಣಾಮಕಾರಿಯಾಗಿ ಮಾಡಬಹುದು.
ಆಗ ಸಮಾಜದಲ್ಲಿ 'ಕಳಂಕ'ದ ಸೊಲ್ಲು ಏಳುವುದಿಲ್ಲ. ಮನೋವಿಜ್ಞಾನಿಗಳು
ಈ ಕ್ರಮವನ್ನು ಆಚರಿಸುವುದು ಅಷ್ಟು ಸುಲಭವಲ್ಲ ; ಅವರು ಅಭ್ಯಾಸಿಸುವ
ಸಂಸ್ಥೆಗಳೇ ಇದಕ್ಕೆ ಅಡಚಣೆಯಾಗುತ್ತದೆ. ಆದರೆ ಮನೆಯ ವೈದ್ಯರುಗಳು
ಈ ಉಪಾಯವನ್ನು ಸುಲಭವಾಗಿ ಆಚರಿಸಿ, ತಟ್ಟಬಹುದಾದ ಕಳಂಕವನ್ನು
ನಿವಾರಿಸಬಹುದು.
{{gap}}೨. ಮಾನಸಿಕ ಬೇನೆಗಳ ಮೊದಲ ಹಂತವನ್ನು ಗುರುತಿಸುವುದು :
{{gap}}ಮೊದಮೊದಲ ಹಂತದಲ್ಲಿ ಮಾನಸಿಕ ಬೇನೆಗಳನ್ನು ಗುರುತಿಸಿದರೆ,
ಅವುಗಳನ್ನು ಗುಣಪಡಿಸುವುದು ಹೆಚ್ಚು ಸುಲಭ. ಮೊದಲ ಹಂತದಲ್ಲಿ
ಗುರುತಿಸಬೇಕಾದರೆ, ಮನೆಯಲ್ಲಿರುವ ಜನರಿಗೆ, ಶಾಲೆಯಲ್ಲಿರುವ ಮಂದಿಗೆ,
ಈ ಬೇನೆಗಳ ಸ್ವರೂಪವು ತಿಳಿದಿರಬೇಕು. ವಿಷಯವು ತಿಳಿದಿದ್ದಾಗ ಮಾತ್ರ
ಅದನ್ನು ಗುರುತಿಸಲು ಸಾಧ್ಯ. ಬೇನೆಗಳ ಸ್ವರೂಪವು ಎಲ್ಲರಿಗೂ ತಿಳಿಯಲಿ
ಎಂದೇ ಈ ಪುಸ್ತಕವನ್ನು ಬರೆದಿರುವುದು. ಚಿಕಿತ್ಸಾ ವಿಧಾನಗಳಲ್ಲಿ ಜ್ಞಾನ ಪ್ರಸಾರವೂ
ಮುಖ್ಯವಾದ ಒಂದು ಅಂಶ.
{{gap}}೩. ಹಿರಿಯ ಮನೋವಿಜ್ಞಾನಿಯಾದ Jung ಎಂಬುವನು ಈ ರೀತಿ
ಒಂದೆಡೆ ಹೇಳಿದ್ದಾನೆ :
:
{{gap}}"People are groping for some system of religious belief".<noinclude></noinclude>
o9iyf4lwn17rt19fqkt7kabcn9ondt5
ಪುಟ:ಮನಮಂಥನ.pdf/೨೭೮
104
62725
316686
314443
2026-05-04T06:50:31Z
Shreesha Sharma
7840
/* Proofread */
316686
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಚಿಕಿತ್ಸಾಕ್ರಮಗಳು}}{{Right|೨೫೯}}
Mayer gross ಎಂಬ ಪ್ರಸಿದ್ಧ ಮನೋವೈದ್ಯನು ಒಂದು ಕಡೆ ಹೇಳಿದ್ದಾನೆ.
"Freudian Analysis will do for some, what Religious
Conversion will do for others"
ಈ ಎರಡು ಅರ್ಥಗರ್ಭಿತ ವಾಕ್ಯಗಳನ್ನು ಏಕೆ ಉದ್ಧರಿಸಿದ್ದೇನೆ ಎಂದರೆ,
ಹಲವಾರು ತೆರನ ಮಾನಸಿಕ ತಳಮಳಗಳು ದೇವರು, ದಿಂಡರು ; ಮತ ವ್ರತ;
ಪೂಜೆ ಪುನಸ್ಕಾರ ಇತ್ಯಾದಿ ಆಚರಣೆಗಳಿಂದ ಸಾಕಷ್ಟು ಸಮಾಧಾನವನ್ನು
ಹೊಂದುತ್ತವೆ. 'ಇವೆಲ್ಲವೂ ಮೂಢನಂಬಿಕೆಗಳು. ದೇವರು ಇದ್ದದ್ದೇ ಆದರೆ, ಈ
ಬೇನೆಯನ್ನು ಯಾಕೆ ಕೊಡಬೇಕಾಗಿತ್ತು? ನಂತರ ಅವನೆದುರಿಗೆ ತೆಂಗಿನಕಾಯಿ
ಒಡೆದರೆ ವಾಸಿಮಾಡುತ್ತಾನೋ? ಎಂದು ಪದವೀಧರರು ಎನಿಸಿಕೊಂಡವರು
ನಗೆಯಾಡುತ್ತಾರೆ ದಿಟ. ಆದರೆ ಇದು ಅವರುಗಳ ಮೌಡ್ಯವನ್ನು ಮುಂದು
ಮಾಡಿ ತೋರಿಸುತ್ತದೆಯೇ ವಿನಃ ಅವರ ವೈಜ್ಞಾನಿಕ ಅರಿವನ್ನಲ್ಲ.
ಮಾನಸಿಕ ತಳಮಳವು ಒಬ್ಬನಿಗೆ ಉಂಟಾಗಿದೆ ಎನ್ನೋಣ. ಅವನ
ನಡವಳಿಕೆಯನ್ನು ಕಂಡವರು 'ಇವನಿಗೆ ಭೂತ ಹಿಡಿದಿದೆ ಅಥವಾ ದೆವ್ವ ಬಡಿದಿದೆ'
ಎಂದನ್ನಬಹುದು. ದೆವ್ವ, ಭೂತ ಅಂಥ ಯಾರು ಅನ್ನುತ್ತಾರೆಯೋ ಅವರುಗಳು
ದೇವರುದಿಂಡಿರು ಭೂತವನ್ನು ಓಡಿಸುತ್ತಾರೆ, ದೆವ್ವವನ್ನು ಉಚ್ಚಾಟಣೆ ಮಾಡುತ್ತಾರೆ
ಎಂದೂ ನಂಬುತ್ತಾರೆ. ಅಂತಹವರು ದೇವರು, ವ್ರತ, ಪೂಜೆ, ಇತ್ಯಾದಿಗಳಿಂದ
ತಮ್ಮ ಮಾನಸಿಕ ತಳಮಳವನ್ನು ಗುಣಪಡಿಸಿಕೊಳ್ಳುತ್ತಾರೆ. ರೋಗಿಗಳಿಗೆ ಸ್ವಾಸ್ಥ್ಯ
ಉಂಟಾಗುವುದು ಮುಖ್ಯವೇ ಹೊರತು, ದೇವರು ಇದ್ದಾನೆಯೇ, ಭೂತಗಳು
ಇವೆಯೇ ಎಂಬ ಪ್ರಶ್ನೆಯು ಈ ವಿಷಯದಲ್ಲಿ ಅಪ್ರಕೃತ, ಅಸಂಗತ. ಕೆಲವು
ಮಾನಸಿಕ ರೋಗಿಗಳಿಗೆ ಪೂಜೆ, ವ್ರತಗಳು ಸಮಾಧಾನವನ್ನು ತಂದಿರುವುದು
ಎಲ್ಲರ ಅನುಭವಕ್ಕೂ ಎಂದಾದರೂ ಬಂದೇ ಇರುತ್ತದೆ. ಆದಕಾರಣ, ಇದು
ಹೇಗೆ ಸಾಧ್ಯವಾಯಿತು ಎಂದು ಸಂಶೋಧನೆ ನಡೆಸಬೇಕು. ಇದು ಮೂಢನಂಬಿಕೆ
ಎಂದು ಅಲ್ಲಗಳೆಯುವುದು ಭಯಂಕರ ಮೌಡ್ಯತನ !
Jung ಮತ್ತು Mayer-Gross ಅವರುಗಳು ಈ ರೀತಿಯ
ಸಂಶೋಧನೆಯಲ್ಲಿ ತೊಡಗಿದವರು. ಸಂಪೂರ್ಣವಾಗಿ ವಿವರಗಳನ್ನು
ಹೊರಗೆಡವಲು ಸಾಧ್ಯವಾಗಿಲ್ಲ. ಆದರೂ ಪಕ್ವವಾದ ಹಾಗೂ ವಿಶಾಲವಾದ
ಅನುಭವದಿಂದ ಮೇಲೆ ಉದ್ಧರಿಸುವ ಮಾತುಗಳನ್ನು ಹೇಳಿದ್ದಾರೆ. ಬಹಳಷ್ಟು
ಅರ್ಥಗರ್ಭಿತವಾದ ವಾಕ್ಯಗಳು.
ನಮ್ಮ ಸಂಸ್ಕೃತಿಯಲ್ಲಿ ಬೆಳೆದು ಬಂದಿರುವ ನಮ್ಮ ಸಮಾಜದ ಮಾನಸಿಕ<noinclude></noinclude>
96jhh3tmbce9vsxl1etk99jrtczdylt
316722
316686
2026-05-04T07:26:32Z
Shreelatha.Halemane
7642
/* Validated */
316722
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಚಿಕಿತ್ಸಾಕ್ರಮಗಳು}}{{Right|೨೫೯}}
Mayer gross ಎಂಬ ಪ್ರಸಿದ್ಧ ಮನೋವೈದ್ಯನು ಒಂದು ಕಡೆ ಹೇಳಿದ್ದಾನೆ.
{{gap}}"Freudian Analysis will do for some, what Religious
Conversion will do for others"
{{gap}}ಈ ಎರಡು ಅರ್ಥಗರ್ಭಿತ ವಾಕ್ಯಗಳನ್ನು ಏಕೆ ಉದ್ಧರಿಸಿದ್ದೇನೆ ಎಂದರೆ,
ಹಲವಾರು ತೆರನ ಮಾನಸಿಕ ತಳಮಳಗಳು ದೇವರು, ದಿಂಡರು ; ಮತ ವ್ರತ;
ಪೂಜೆ ಪುನಸ್ಕಾರ ಇತ್ಯಾದಿ ಆಚರಣೆಗಳಿಂದ ಸಾಕಷ್ಟು ಸಮಾಧಾನವನ್ನು
ಹೊಂದುತ್ತವೆ. 'ಇವೆಲ್ಲವೂ ಮೂಢನಂಬಿಕೆಗಳು. ದೇವರು ಇದ್ದದ್ದೇ ಆದರೆ, ಈ
ಬೇನೆಯನ್ನು ಯಾಕೆ ಕೊಡಬೇಕಾಗಿತ್ತು? ನಂತರ ಅವನೆದುರಿಗೆ ತೆಂಗಿನಕಾಯಿ
ಒಡೆದರೆ ವಾಸಿಮಾಡುತ್ತಾನೋ? ಎಂದು ಪದವೀಧರರು ಎನಿಸಿಕೊಂಡವರು
ನಗೆಯಾಡುತ್ತಾರೆ ದಿಟ. ಆದರೆ ಇದು ಅವರುಗಳ ಮೌಡ್ಯವನ್ನು ಮುಂದು
ಮಾಡಿ ತೋರಿಸುತ್ತದೆಯೇ ವಿನಃ ಅವರ ವೈಜ್ಞಾನಿಕ ಅರಿವನ್ನಲ್ಲ.
{{gap}}ಮಾನಸಿಕ ತಳಮಳವು ಒಬ್ಬನಿಗೆ ಉಂಟಾಗಿದೆ ಎನ್ನೋಣ. ಅವನ
ನಡವಳಿಕೆಯನ್ನು ಕಂಡವರು 'ಇವನಿಗೆ ಭೂತ ಹಿಡಿದಿದೆ ಅಥವಾ ದೆವ್ವ ಬಡಿದಿದೆ'
ಎಂದನ್ನಬಹುದು. ದೆವ್ವ, ಭೂತ ಅಂಥ ಯಾರು ಅನ್ನುತ್ತಾರೆಯೋ ಅವರುಗಳು
ದೇವರುದಿಂಡಿರು ಭೂತವನ್ನು ಓಡಿಸುತ್ತಾರೆ, ದೆವ್ವವನ್ನು ಉಚ್ಚಾಟಣೆ ಮಾಡುತ್ತಾರೆ
ಎಂದೂ ನಂಬುತ್ತಾರೆ. ಅಂತಹವರು ದೇವರು, ವ್ರತ, ಪೂಜೆ, ಇತ್ಯಾದಿಗಳಿಂದ
ತಮ್ಮ ಮಾನಸಿಕ ತಳಮಳವನ್ನು ಗುಣಪಡಿಸಿಕೊಳ್ಳುತ್ತಾರೆ. ರೋಗಿಗಳಿಗೆ ಸ್ವಾಸ್ಥ್ಯ
ಉಂಟಾಗುವುದು ಮುಖ್ಯವೇ ಹೊರತು, ದೇವರು ಇದ್ದಾನೆಯೇ, ಭೂತಗಳು
ಇವೆಯೇ ಎಂಬ ಪ್ರಶ್ನೆಯು ಈ ವಿಷಯದಲ್ಲಿ ಅಪ್ರಕೃತ, ಅಸಂಗತ. ಕೆಲವು
ಮಾನಸಿಕ ರೋಗಿಗಳಿಗೆ ಪೂಜೆ, ವ್ರತಗಳು ಸಮಾಧಾನವನ್ನು ತಂದಿರುವುದು
ಎಲ್ಲರ ಅನುಭವಕ್ಕೂ ಎಂದಾದರೂ ಬಂದೇ ಇರುತ್ತದೆ. ಆದಕಾರಣ, ಇದು
ಹೇಗೆ ಸಾಧ್ಯವಾಯಿತು ಎಂದು ಸಂಶೋಧನೆ ನಡೆಸಬೇಕು. ಇದು ಮೂಢನಂಬಿಕೆ
ಎಂದು ಅಲ್ಲಗಳೆಯುವುದು ಭಯಂಕರ ಮೌಡ್ಯತನ !
{{gap}}Jung ಮತ್ತು Mayer-Gross ಅವರುಗಳು ಈ ರೀತಿಯ
ಸಂಶೋಧನೆಯಲ್ಲಿ ತೊಡಗಿದವರು. ಸಂಪೂರ್ಣವಾಗಿ ವಿವರಗಳನ್ನು
ಹೊರಗೆಡವಲು ಸಾಧ್ಯವಾಗಿಲ್ಲ. ಆದರೂ ಪಕ್ವವಾದ ಹಾಗೂ ವಿಶಾಲವಾದ
ಅನುಭವದಿಂದ ಮೇಲೆ ಉದ್ಧರಿಸುವ ಮಾತುಗಳನ್ನು ಹೇಳಿದ್ದಾರೆ. ಬಹಳಷ್ಟು
ಅರ್ಥಗರ್ಭಿತವಾದ ವಾಕ್ಯಗಳು.
{{gap}}ನಮ್ಮ ಸಂಸ್ಕೃತಿಯಲ್ಲಿ ಬೆಳೆದು ಬಂದಿರುವ ನಮ್ಮ ಸಮಾಜದ ಮಾನಸಿಕ<noinclude></noinclude>
7tjye4as8xg7yhll4rglwbpk1z7gz4n
ಪುಟ:ಮನಮಂಥನ.pdf/೨೭೯
104
62726
316685
314444
2026-05-04T06:49:33Z
Shreesha Sharma
7840
/* Proofread */
316685
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೨೬೦}}{{Right|ಮನಮಂಥನ}}
ರೋಗಿಗಳಿಗೆ, ಪೂಜೆ, ವ್ರತ, ಇತ್ಯಾದಿಗಳು ಸಾಕಷ್ಟು ಪರಿಣಾಮಕಾರಿಯಾಗುತ್ತವೆ.
ಆದರೆ ಮಾನಸಿಕ ರೋಗಿಗಳಿಗೆ ಸ್ವಂತ ವಿವೇಚನಾಶಕ್ತಿಯು ಸಾಕಷ್ಟು
ದೃಢವಾಗಿರುವುದಿಲ್ಲ. ಹಾಗಿದ್ದಿದ್ದರೆ ಮಾನಸಿಕ ತಳಮಳವೇ ಉಂಟಾಗುತ್ತಿರಲಿಲ್ಲ.
ಅಂತಹವರ ಎದುರಿನಲ್ಲಿ ಮನೋವೈದ್ಯರು, ಮನೆಯವೈದ್ಯರಾಗಲೀ 'ಪೂಜೆ
ಪುನಸ್ಕಾರ, ಹರಕೆ, ಯಾತ್ರೆ ಇವೆಲ್ಲಾ ಶುದ್ಧ ತಿಳಿಗೇಡಿತನ' ಎಂದು ಹೇಳಿದರೆ,
ಮಾನಸಿಕ ತಳಮಳದ ಜತೆಗೆ ಸಂದೇಹವೂ, ಅನಿಶ್ಚಿತತೆಯೂ ಕೂಡಿಕೊಳ್ಳುತ್ತದೆ.
ಯಾವ ಪೂಜಾ ಪುನಸ್ಕಾರಗಳಿಂದ, ರೋಗಿಯ ತಳಮಳವು ಬಹುಶಃ
ಕಡಿಮೆಯಾಗುತ್ತಿತ್ತೋ, ಅದಕ್ಕೆ ಅಡ್ಡಿಮಾಡಿದಂತಾಗುತ್ತದೆ. ಖಂಡಿತವಾಗಿಯೂ
ಇದಾಗಬಾರದು. ನಮ್ಮ ಇಂದಿನ ಮನೋವೈದ್ಯರ ಅರಿವಿನ ಹಂತದಲ್ಲಿ, ದೊರಕುವ
ಎಲ್ಲಾ ಸಾಧನೆಗಳನ್ನೂ ಬಳಸಿಕೊಳ್ಳುವುದು ಜಾಣತನ.
ಆದಕಾರಣ, ಮಡಿ, ಮುಸಿರೆ; ವ್ರತ, ಭಜನೆ; ನಗರ ಸಂಕೀರ್ತನೆ, ನಾಮ
ಸಂಕೀರ್ತನೆ ಎಂದು ಯಾವುದಾದರೂ ಆಚರಣೆಯನ್ನು ತುಸು ವಿಪರೀತವಾಗಿ
ಯಾರಾದರೂ ಮಾಡಲೆತ್ನಿಸಿದರೆ; ಅವರನ್ನು ಅರ್ಥಮಾಡಿಕೊಳ್ಳಬೇಕು. ಮಾನಸಿಕ
ತಳಮಳವಾಗಿದ್ದುದರಿಂದಲೇ ಅವರು ಹಾಗೆ ಮಾಡಿ, ಸಮಾಧಾನವನ್ನು ಪಡೆಯ
ಲೆತ್ನಿಸುತ್ತಾರೆ. ಹಾಗೆಂದು ವಿವೇಚಿಸಿ, ಯೋಚಿಸಿ, ಅವರುಗಳು ಮಾಡುವುದಿಲ್ಲ.
ಮನಸ್ಸಿನ ಅಸ್ಪಷ್ಟವಾದ ಭಾಗಗಳಲ್ಲಿ ಈ ತೆರನ ನಿರ್ಣಯವು ಹೊರಬಂದು,
ಅದು ನಡಸಿದಂತೆ ಅವರುಗಳು ಆಚರಿಸುತ್ತಾರೆ. ಹಾಗೆ ಮಾಡುವುದರಿಂದ
ಅವರ ಮನಸ್ಸಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿಯು ದೊರಕುತ್ತದೆ. ಬೈದು, ಮೂದಲಿಸಿ,
ಅವರೆದುರಿಗೆ ಅವರ ಆಚರಣೆಯನ್ನು ಅವಹೇಳನ ಮಾಡಿದರೆ, ಅವರುಗಳ
ಡೋಲಾಯಮಾನ ಸ್ಥಿತಿಯಲ್ಲಿರುವ ಮನಸ್ಸು ಮೊಂಡು ಹಿಡಿದುಕೊಳ್ಳುತ್ತದೆ.
'ಯಾರೂ ನನಗೆ ಸ್ನೇಹಿತರಲ್ಲ, ಯಾರಿಗೂ ನನ್ನ ನೆಮ್ಮದಿಯ ಕಾತರವಿಲ್ಲ.'
ಎಂದು ಮನಸ್ಸು, ಸುತ್ತಮುತ್ತಲಿನವರನ್ನು ದ್ವೇಷಿಸುವಂತೆ ಮಾಡುತ್ತದೆ. ಅಂದರೆ
ಸಮಾಜದಲ್ಲಿ ಒಬ್ಬನಾಗಿ, ಅದರೊಂದಿಗೆ ಅನುಸರಿಸಿಕೊಂಡು ಹೋಗುವ
ಆರೋಗ್ಯವಂತರ ನಡವಳಿಕೆಯು ತಪ್ಪಿಹೋಗುತ್ತದೆ. ಸಮಾಜವನ್ನು ಮನಃಪೂರ್ಣ
ದ್ವೇಷಿಸಿ, ತನ್ನಲ್ಲಿ ತಾನೇ ಕೊರಗುತ್ತ ತೊಳಲುತ್ತ ಅದರಿಂದಲೇ ತುಸು ನೆಮ್ಮದಿಯನ್ನು
ಪಡೆಯುವಂತಾಗುತ್ತದೆ. ಅಂದರೆ ಮಾನಸಿಕ ರೋಗವು ಸ್ಥಿರವಾದಂತೆಯೇ.
ಇದಾಗಬಾರದು. ಮೊದಮೊದಲ ಹಂತದಲ್ಲಿ ವಿಪರೀತವಾದ, ವಿಚಿತ್ರವಾದ
ಆಚರಣೆಯನ್ನು ಕಂಡರೆ, ತುಂಬಾ ಅನುಕಂಪ ಮತ್ತು ಸಹಾನುಭೂತಿಯನ್ನು
ಮನೆಯವರು ಮತ್ತು ಇತರರು ತೋರಿಸಬೇಕು.<noinclude></noinclude>
p3nfw99cvbxgehozgia87w3bzrb2bfs
316723
316685
2026-05-04T07:26:56Z
Shreelatha.Halemane
7642
/* Validated */
316723
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೨೬೦}}{{Right|ಮನಮಂಥನ}}
ರೋಗಿಗಳಿಗೆ, ಪೂಜೆ, ವ್ರತ, ಇತ್ಯಾದಿಗಳು ಸಾಕಷ್ಟು ಪರಿಣಾಮಕಾರಿಯಾಗುತ್ತವೆ.
ಆದರೆ ಮಾನಸಿಕ ರೋಗಿಗಳಿಗೆ ಸ್ವಂತ ವಿವೇಚನಾಶಕ್ತಿಯು ಸಾಕಷ್ಟು
ದೃಢವಾಗಿರುವುದಿಲ್ಲ. ಹಾಗಿದ್ದಿದ್ದರೆ ಮಾನಸಿಕ ತಳಮಳವೇ ಉಂಟಾಗುತ್ತಿರಲಿಲ್ಲ.
ಅಂತಹವರ ಎದುರಿನಲ್ಲಿ ಮನೋವೈದ್ಯರು, ಮನೆಯವೈದ್ಯರಾಗಲೀ 'ಪೂಜೆ
ಪುನಸ್ಕಾರ, ಹರಕೆ, ಯಾತ್ರೆ ಇವೆಲ್ಲಾ ಶುದ್ಧ ತಿಳಿಗೇಡಿತನ' ಎಂದು ಹೇಳಿದರೆ,
ಮಾನಸಿಕ ತಳಮಳದ ಜತೆಗೆ ಸಂದೇಹವೂ, ಅನಿಶ್ಚಿತತೆಯೂ ಕೂಡಿಕೊಳ್ಳುತ್ತದೆ.
ಯಾವ ಪೂಜಾ ಪುನಸ್ಕಾರಗಳಿಂದ, ರೋಗಿಯ ತಳಮಳವು ಬಹುಶಃ
ಕಡಿಮೆಯಾಗುತ್ತಿತ್ತೋ, ಅದಕ್ಕೆ ಅಡ್ಡಿಮಾಡಿದಂತಾಗುತ್ತದೆ. ಖಂಡಿತವಾಗಿಯೂ
ಇದಾಗಬಾರದು. ನಮ್ಮ ಇಂದಿನ ಮನೋವೈದ್ಯರ ಅರಿವಿನ ಹಂತದಲ್ಲಿ, ದೊರಕುವ
ಎಲ್ಲಾ ಸಾಧನೆಗಳನ್ನೂ ಬಳಸಿಕೊಳ್ಳುವುದು ಜಾಣತನ.
{{gap}}ಆದಕಾರಣ, ಮಡಿ, ಮುಸಿರೆ; ವ್ರತ, ಭಜನೆ; ನಗರ ಸಂಕೀರ್ತನೆ, ನಾಮ
ಸಂಕೀರ್ತನೆ ಎಂದು ಯಾವುದಾದರೂ ಆಚರಣೆಯನ್ನು ತುಸು ವಿಪರೀತವಾಗಿ
ಯಾರಾದರೂ ಮಾಡಲೆತ್ನಿಸಿದರೆ; ಅವರನ್ನು ಅರ್ಥಮಾಡಿಕೊಳ್ಳಬೇಕು. ಮಾನಸಿಕ
ತಳಮಳವಾಗಿದ್ದುದರಿಂದಲೇ ಅವರು ಹಾಗೆ ಮಾಡಿ, ಸಮಾಧಾನವನ್ನು ಪಡೆಯ
ಲೆತ್ನಿಸುತ್ತಾರೆ. ಹಾಗೆಂದು ವಿವೇಚಿಸಿ, ಯೋಚಿಸಿ, ಅವರುಗಳು ಮಾಡುವುದಿಲ್ಲ.
ಮನಸ್ಸಿನ ಅಸ್ಪಷ್ಟವಾದ ಭಾಗಗಳಲ್ಲಿ ಈ ತೆರನ ನಿರ್ಣಯವು ಹೊರಬಂದು,
ಅದು ನಡಸಿದಂತೆ ಅವರುಗಳು ಆಚರಿಸುತ್ತಾರೆ. ಹಾಗೆ ಮಾಡುವುದರಿಂದ
ಅವರ ಮನಸ್ಸಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿಯು ದೊರಕುತ್ತದೆ. ಬೈದು, ಮೂದಲಿಸಿ,
ಅವರೆದುರಿಗೆ ಅವರ ಆಚರಣೆಯನ್ನು ಅವಹೇಳನ ಮಾಡಿದರೆ, ಅವರುಗಳ
ಡೋಲಾಯಮಾನ ಸ್ಥಿತಿಯಲ್ಲಿರುವ ಮನಸ್ಸು ಮೊಂಡು ಹಿಡಿದುಕೊಳ್ಳುತ್ತದೆ.
'ಯಾರೂ ನನಗೆ ಸ್ನೇಹಿತರಲ್ಲ, ಯಾರಿಗೂ ನನ್ನ ನೆಮ್ಮದಿಯ ಕಾತರವಿಲ್ಲ.'
ಎಂದು ಮನಸ್ಸು, ಸುತ್ತಮುತ್ತಲಿನವರನ್ನು ದ್ವೇಷಿಸುವಂತೆ ಮಾಡುತ್ತದೆ. ಅಂದರೆ
ಸಮಾಜದಲ್ಲಿ ಒಬ್ಬನಾಗಿ, ಅದರೊಂದಿಗೆ ಅನುಸರಿಸಿಕೊಂಡು ಹೋಗುವ
ಆರೋಗ್ಯವಂತರ ನಡವಳಿಕೆಯು ತಪ್ಪಿಹೋಗುತ್ತದೆ. ಸಮಾಜವನ್ನು ಮನಃಪೂರ್ಣ
ದ್ವೇಷಿಸಿ, ತನ್ನಲ್ಲಿ ತಾನೇ ಕೊರಗುತ್ತ ತೊಳಲುತ್ತ ಅದರಿಂದಲೇ ತುಸು ನೆಮ್ಮದಿಯನ್ನು
ಪಡೆಯುವಂತಾಗುತ್ತದೆ. ಅಂದರೆ ಮಾನಸಿಕ ರೋಗವು ಸ್ಥಿರವಾದಂತೆಯೇ.
{{gap}}ಇದಾಗಬಾರದು. ಮೊದಮೊದಲ ಹಂತದಲ್ಲಿ ವಿಪರೀತವಾದ, ವಿಚಿತ್ರವಾದ
ಆಚರಣೆಯನ್ನು ಕಂಡರೆ, ತುಂಬಾ ಅನುಕಂಪ ಮತ್ತು ಸಹಾನುಭೂತಿಯನ್ನು
ಮನೆಯವರು ಮತ್ತು ಇತರರು ತೋರಿಸಬೇಕು.<noinclude></noinclude>
tw4cesx7hk6lwe3wwrwsctjik02jaj7
ಪುಟ:ಮನಮಂಥನ.pdf/೨೮೦
104
62727
316684
314445
2026-05-04T06:48:36Z
Shreesha Sharma
7840
/* Proofread */
316684
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಚಿಕಿತ್ಸಾಕ್ರಮಗಳು}}{{Right|೨೬೧}}
ಇದನ್ನೂ ಮುಂಜಾಗ್ರತಾ ಕ್ರಮ ಎನ್ನಬೇಕು. ಏಕೆಂದರೆ, ಮಾನಸಿಕ
ತಳಮಳವು ತನ್ನಷ್ಟಕ್ಕೆ ತಾನೇ ಸ್ವಾಭಾವಿಕವಾಗಿ ಸರಿಹೋಗುವಂತಿರುವಾಗ
ಉಳಿದವರು ಎಂದರೆ ವೈದ್ಯರುಗಳು ಕೂಡ, ತೆಪ್ಪಗಿರಬೇಕು. ಸಾಧ್ಯವಾದರೆ,
ಸ್ವಾಭಾವಿಕವಾಗಿ ನಡೆಯುತ್ತಿರುವ ಆಚರಣೆಗಳಿಗೆ ಸಹಾಯವನ್ನು ಮಾಡಬೇಕು.
ಅದು ಬಿಟ್ಟು, ಸ್ವಾಭಾವಿಕವಾಗಿ ನಡೆಯುವ ಸಮಾಧಾನಪಡಿಸುವ ಕಾವ್ಯಗಳಿಗೆ
ಆಡಚಣೆಯನ್ನುಂಟುಮಾಡಿದರೆ, ಮಾನಸಿಕ ಬೇನೆಯು ಪ್ರಾರಂಭವಾಗುತ್ತದೆ,
ಪ್ರಬಲವೂ ಆಗುತ್ತದೆ. ಹೀಗಾಗಲು ಬಿಡಬಾರದು. ಈ ವಿಷಯದಲ್ಲಿ ಜನರೆಲ್ಲರೂ
ಅರಿವನ್ನು ಪಡೆದರೆ, ಆಗ, ತಳಮಳವು ಬೇರೆಯಾಗಿ ಬೇರೂರದಂತೆ
ಮುಂಜಾಗ್ರತೆಯನ್ನು ಕೈಗೊಳ್ಳಬಹುದು. ಆದಕಾರಣ ಈ ತೆರನ ಪುಸ್ತಕಗಳ
ಅಗತ್ಯವು ಬಹಳ, ನಮ್ಮ ಸಮಾಜದಲ್ಲಿ.
೨. ಕೆಲವು ಮಕ್ಕಳು ಬಹಳ ಚುರುಕಾಗಿರುತ್ತವೆ. ಕೂತಲ್ಲಿ ಕೂರುವುದಿಲ್ಲ.
ನಿಂತಲ್ಲಿ ನಿಲ್ಲುವುದಿಲ್ಲ, ಪಾದರಸದಂತೆ ಅಲ್ಲಿ ಇಲ್ಲಿ ಓಡಾಡುತ್ತವೆ. ಹೊಸ ಮುಖ
ಅನ್ನುವುದಿಲ್ಲ ಎಲ್ಲರ ಹತ್ತಿರವೂ ಸದರದಿಂದ ಆಡಹೋಗುತ್ತವೆ. ಇದರ ಜತೆಗೂ
ಕೋಪ ಹಠವೂ ಅತಿಯಾಗಿರುತ್ತದೆ. ಚಾಕುವನ್ನು ಹಿಡಿದು ಆಡುತ್ತಿರುವಾಗ,
ಅದನ್ನು ಕಂಡ ದೊಡ್ಡವರು ಕೈಯಿಂದ ಚಾಕುವನ್ನು ಕಿತ್ತುಕೊಂಡರೆ, ರಚ್ಚಾಟದ
ಅಳುವನ್ನು ಶುರು ಮಾಡುತ್ತದೆ. ಯಾರು ಸಮಾಧಾನವನ್ನು ಮಾಡಿದರೂ
ಪ್ರಯೋಜನವಿರುವುದಿಲ್ಲ. ಉಸಿರು ಹಿಡಿದು ಅಳಲಾರಂಭಿಸಿ, ಕಡೆಗೆ ಉಸಿರು
ಕಟ್ಟಿ ಜ್ಞಾನವೂ ಒಂದೆರಡು ನಿಮಿಷ ತಪ್ಪುತ್ತದೆ. ಆಗ ಮಗು ನೀಲಿಯೂ ಆಗುತ್ತದೆ.
ಉಸಿರು ಹಿಡಿದುದರಿಂದ ರಕ್ತದಲ್ಲಿ ಆಕ್ಸಿಜನ್ ಕಡಿಮೆಯಾಗುತ್ತದೆ. ನೀಲಿ ಛಾಯೆಯು
ಮೂಡುತ್ತದೆ. ತುಂಬಾ ಭಯ ತರಿಸುವ ದೃಶ್ಯ, ಆದರೆ ಒಂದೆರಡು ನಿಮಿಷಗಳಲ್ಲಿ
ದೊಡ್ಡ ಉಸಿರನ್ನೆಳೆದುಕೊಂಡು, ನಂತರ ಸರಾಗವಾಗಿ ಉಸಿರಾಡುತ್ತದೆ.
ನಿದ್ರೆಯನ್ನೂ ಸ್ವಲ್ಪ ಕಾಲ ಮಾಡುತ್ತದೆ. ಮೈಯ ಬಣ್ಣವೂ ನೀಲಿಯಿಂದ ಸಾಮಾನ್ಯ
ಸ್ಥಿತಿಗೆ ತಿರುಗುತ್ತದೆ. ಎದ್ದ ಕೂಡಲೇ ಮತ್ತೆ ಪಾದರಸದಂತಹ ಚಟುವಟಿಕೆ
ಮತ್ತು ಚೇಷ್ಟೆ ಶುರುವಾಗುತ್ತದೆ. Tantrums ಎಂದು ಈ ಪರಿಸ್ಥಿತಿಯನ್ನು
ಕರೆಯುತ್ತಾರೆ. ಮಗುವು ಬೆಳೆದಂತೆಲ್ಲ, ಅದರ ನರಮಂಡಲ ರಚನೆಯು
ಪ್ರೌಢವಾದಂತೆ Tantrums ಆವೇಷಗಳು ಕಡಿಮೆಯಾಗುತ್ತವೆ. ಸುಮಾರು
೮-೧೦ ಪ್ರಾಯಕ್ಕೆ ಸಂಪೂರ್ಣವಾಗಿ ನಿಂತುಹೋಗುತ್ತದೆ.
ಇಂತಹ ರಚ್ಚೆಯು ಆವೇಶ, ಮತ್ತು ಜ್ಞಾನ ತಪ್ಪುವಿಕೆ, ಹಾಗೂ ಕೈಕಾಲುಗಳ
ಸೆರೆವ ಬಡಿದಾಟ, ಇವನ್ನು ಕಂಡು ಮೂರ್ಛರೋಗ ಬಂದಿದೆ ಎಂದು<noinclude></noinclude>
bzfhlypm1h6ecggwayy0njaxlrsufll
316724
316684
2026-05-04T07:27:27Z
Shreelatha.Halemane
7642
/* Validated */
316724
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಚಿಕಿತ್ಸಾಕ್ರಮಗಳು}}{{Right|೨೬೧}}
{{gap}}ಇದನ್ನೂ ಮುಂಜಾಗ್ರತಾ ಕ್ರಮ ಎನ್ನಬೇಕು. ಏಕೆಂದರೆ, ಮಾನಸಿಕ
ತಳಮಳವು ತನ್ನಷ್ಟಕ್ಕೆ ತಾನೇ ಸ್ವಾಭಾವಿಕವಾಗಿ ಸರಿಹೋಗುವಂತಿರುವಾಗ
ಉಳಿದವರು ಎಂದರೆ ವೈದ್ಯರುಗಳು ಕೂಡ, ತೆಪ್ಪಗಿರಬೇಕು. ಸಾಧ್ಯವಾದರೆ,
ಸ್ವಾಭಾವಿಕವಾಗಿ ನಡೆಯುತ್ತಿರುವ ಆಚರಣೆಗಳಿಗೆ ಸಹಾಯವನ್ನು ಮಾಡಬೇಕು.
ಅದು ಬಿಟ್ಟು, ಸ್ವಾಭಾವಿಕವಾಗಿ ನಡೆಯುವ ಸಮಾಧಾನಪಡಿಸುವ ಕಾವ್ಯಗಳಿಗೆ
ಆಡಚಣೆಯನ್ನುಂಟುಮಾಡಿದರೆ, ಮಾನಸಿಕ ಬೇನೆಯು ಪ್ರಾರಂಭವಾಗುತ್ತದೆ,
ಪ್ರಬಲವೂ ಆಗುತ್ತದೆ. ಹೀಗಾಗಲು ಬಿಡಬಾರದು. ಈ ವಿಷಯದಲ್ಲಿ ಜನರೆಲ್ಲರೂ
ಅರಿವನ್ನು ಪಡೆದರೆ, ಆಗ, ತಳಮಳವು ಬೇರೆಯಾಗಿ ಬೇರೂರದಂತೆ
ಮುಂಜಾಗ್ರತೆಯನ್ನು ಕೈಗೊಳ್ಳಬಹುದು. ಆದಕಾರಣ ಈ ತೆರನ ಪುಸ್ತಕಗಳ
ಅಗತ್ಯವು ಬಹಳ, ನಮ್ಮ ಸಮಾಜದಲ್ಲಿ.
{{gap}}೨. ಕೆಲವು ಮಕ್ಕಳು ಬಹಳ ಚುರುಕಾಗಿರುತ್ತವೆ. ಕೂತಲ್ಲಿ ಕೂರುವುದಿಲ್ಲ.
ನಿಂತಲ್ಲಿ ನಿಲ್ಲುವುದಿಲ್ಲ, ಪಾದರಸದಂತೆ ಅಲ್ಲಿ ಇಲ್ಲಿ ಓಡಾಡುತ್ತವೆ. ಹೊಸ ಮುಖ
ಅನ್ನುವುದಿಲ್ಲ ಎಲ್ಲರ ಹತ್ತಿರವೂ ಸದರದಿಂದ ಆಡಹೋಗುತ್ತವೆ. ಇದರ ಜತೆಗೂ
ಕೋಪ ಹಠವೂ ಅತಿಯಾಗಿರುತ್ತದೆ. ಚಾಕುವನ್ನು ಹಿಡಿದು ಆಡುತ್ತಿರುವಾಗ,
ಅದನ್ನು ಕಂಡ ದೊಡ್ಡವರು ಕೈಯಿಂದ ಚಾಕುವನ್ನು ಕಿತ್ತುಕೊಂಡರೆ, ರಚ್ಚಾಟದ
ಅಳುವನ್ನು ಶುರು ಮಾಡುತ್ತದೆ. ಯಾರು ಸಮಾಧಾನವನ್ನು ಮಾಡಿದರೂ
ಪ್ರಯೋಜನವಿರುವುದಿಲ್ಲ. ಉಸಿರು ಹಿಡಿದು ಅಳಲಾರಂಭಿಸಿ, ಕಡೆಗೆ ಉಸಿರು
ಕಟ್ಟಿ ಜ್ಞಾನವೂ ಒಂದೆರಡು ನಿಮಿಷ ತಪ್ಪುತ್ತದೆ. ಆಗ ಮಗು ನೀಲಿಯೂ ಆಗುತ್ತದೆ.
ಉಸಿರು ಹಿಡಿದುದರಿಂದ ರಕ್ತದಲ್ಲಿ ಆಕ್ಸಿಜನ್ ಕಡಿಮೆಯಾಗುತ್ತದೆ. ನೀಲಿ ಛಾಯೆಯು
ಮೂಡುತ್ತದೆ. ತುಂಬಾ ಭಯ ತರಿಸುವ ದೃಶ್ಯ, ಆದರೆ ಒಂದೆರಡು ನಿಮಿಷಗಳಲ್ಲಿ
ದೊಡ್ಡ ಉಸಿರನ್ನೆಳೆದುಕೊಂಡು, ನಂತರ ಸರಾಗವಾಗಿ ಉಸಿರಾಡುತ್ತದೆ.
ನಿದ್ರೆಯನ್ನೂ ಸ್ವಲ್ಪ ಕಾಲ ಮಾಡುತ್ತದೆ. ಮೈಯ ಬಣ್ಣವೂ ನೀಲಿಯಿಂದ ಸಾಮಾನ್ಯ
ಸ್ಥಿತಿಗೆ ತಿರುಗುತ್ತದೆ. ಎದ್ದ ಕೂಡಲೇ ಮತ್ತೆ ಪಾದರಸದಂತಹ ಚಟುವಟಿಕೆ
ಮತ್ತು ಚೇಷ್ಟೆ ಶುರುವಾಗುತ್ತದೆ. Tantrums ಎಂದು ಈ ಪರಿಸ್ಥಿತಿಯನ್ನು
ಕರೆಯುತ್ತಾರೆ. ಮಗುವು ಬೆಳೆದಂತೆಲ್ಲ, ಅದರ ನರಮಂಡಲ ರಚನೆಯು
ಪ್ರೌಢವಾದಂತೆ Tantrums ಆವೇಷಗಳು ಕಡಿಮೆಯಾಗುತ್ತವೆ. ಸುಮಾರು
೮-೧೦ ಪ್ರಾಯಕ್ಕೆ ಸಂಪೂರ್ಣವಾಗಿ ನಿಂತುಹೋಗುತ್ತದೆ.
{{gap}}ಇಂತಹ ರಚ್ಚೆಯು ಆವೇಶ, ಮತ್ತು ಜ್ಞಾನ ತಪ್ಪುವಿಕೆ, ಹಾಗೂ ಕೈಕಾಲುಗಳ
ಸೆರೆವ ಬಡಿದಾಟ, ಇವನ್ನು ಕಂಡು ಮೂರ್ಛರೋಗ ಬಂದಿದೆ ಎಂದು<noinclude></noinclude>
qs291tgrq1529l5zub3uehu383fw00g
ಪುಟ:ಮನಮಂಥನ.pdf/೨೮೧
104
62728
316683
314446
2026-05-04T06:47:50Z
Shreesha Sharma
7840
/* Proofread */
316683
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೨೬೨}}{{Right|ಮನಮಂಥನ}}
ಮನೆಯವರು ಅಂದುಕೊಳ್ಳುವುದೂ ಉಂಟು. ಹಾಗಂದುಕೊಂಡು ಮೂರ್ಛ
ರೋಗಕ್ಕೆ ಬಳಸುವ ಔಷಧಗಳನ್ನು ಕೊಡಲಾರಂಭಿಸಬಹುದು. ಇಂತಹ ಔಷಧಿಗಳು
ಬಹಳ ವರ್ಷ ಕೊಡಬೇಕಾದುದರಿಂದ, ಇದು ಮೆದುಳಿನ ಕಾರ್ಯದ ಸುವ್ಯವಸ್ಥೆಗೆ
ಅಡ್ಡಿಯಾಗುತ್ತದೆ. ಇದರಿಂದ ದುಷ್ಪರಿಣಾಮವೂ ಮುಂದೆ ಆಗುತ್ತದೆ. ಮಾನಸಿಕ
ಮಾಂದ್ಯತೆ, Dull Child ಉಂಟಾಗಬಹುದು. ಬೆಳೆದ ಮೇಲೆ ಮಾನಸಿಕ ಸ್ವಾಸ್ಥ್ಯವೂ
ಸಾಕಷ್ಟು ಉಳಿಯುವುದಿಲ್ಲ, ಬೆಳೆಯುವುದೂ ಇಲ್ಲ.
ಆದಕಾರಣ ಮಾನಸಿಕ ಅವ್ಯವಸ್ಥೆಯು ಮುಂದೆ ಉಂಟಾಗದಂತೆ
ಎಚ್ಚರಿಕೆಯನ್ನು ವಹಿಸುವಾಗ ಈ ವಿಷಯವನ್ನು ಗಮನಿಸಬೇಕು. ಸ್ವಲ್ಪ
ಅನುಮಾನವು ಬಂದರೂ ಕಂದಾಚಾರದ ನಂಬಿಕೆಗಳಿಗೆ ತುತ್ತಾಗದೆ, ನುರಿತ
ವೈದ್ಯರ ಸಲಹೆಯನ್ನು ಪಡೆಯಬೇಕು.<noinclude></noinclude>
8qi5tnr5wh54p0a3u3ow9ant32tu5bw
316725
316683
2026-05-04T07:27:46Z
Shreelatha.Halemane
7642
/* Validated */
316725
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೨೬೨}}{{Right|ಮನಮಂಥನ}}
ಮನೆಯವರು ಅಂದುಕೊಳ್ಳುವುದೂ ಉಂಟು. ಹಾಗಂದುಕೊಂಡು ಮೂರ್ಛ
ರೋಗಕ್ಕೆ ಬಳಸುವ ಔಷಧಗಳನ್ನು ಕೊಡಲಾರಂಭಿಸಬಹುದು. ಇಂತಹ ಔಷಧಿಗಳು
ಬಹಳ ವರ್ಷ ಕೊಡಬೇಕಾದುದರಿಂದ, ಇದು ಮೆದುಳಿನ ಕಾರ್ಯದ ಸುವ್ಯವಸ್ಥೆಗೆ
ಅಡ್ಡಿಯಾಗುತ್ತದೆ. ಇದರಿಂದ ದುಷ್ಪರಿಣಾಮವೂ ಮುಂದೆ ಆಗುತ್ತದೆ. ಮಾನಸಿಕ
ಮಾಂದ್ಯತೆ, Dull Child ಉಂಟಾಗಬಹುದು. ಬೆಳೆದ ಮೇಲೆ ಮಾನಸಿಕ ಸ್ವಾಸ್ಥ್ಯವೂ
ಸಾಕಷ್ಟು ಉಳಿಯುವುದಿಲ್ಲ, ಬೆಳೆಯುವುದೂ ಇಲ್ಲ.
{{gap}}ಆದಕಾರಣ ಮಾನಸಿಕ ಅವ್ಯವಸ್ಥೆಯು ಮುಂದೆ ಉಂಟಾಗದಂತೆ
ಎಚ್ಚರಿಕೆಯನ್ನು ವಹಿಸುವಾಗ ಈ ವಿಷಯವನ್ನು ಗಮನಿಸಬೇಕು. ಸ್ವಲ್ಪ
ಅನುಮಾನವು ಬಂದರೂ ಕಂದಾಚಾರದ ನಂಬಿಕೆಗಳಿಗೆ ತುತ್ತಾಗದೆ, ನುರಿತ
ವೈದ್ಯರ ಸಲಹೆಯನ್ನು ಪಡೆಯಬೇಕು.<noinclude></noinclude>
8677esx4z436knp7hk0woai1tb42dp0
ಪುಟ:ಮನಮಂಥನ.pdf/೨೮೨
104
62729
316726
314447
2026-05-04T07:29:00Z
Shreelatha.Halemane
7642
/* Proofread */
316726
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|'''ಮನಮಂಥನ'''}}
{{center|'''ಭಾಗ-೨'''}}<noinclude></noinclude>
hxu7dpe2wriowrkqsac7oy9dazxb66h
ಪುಟ:ಮನಮಂಥನ.pdf/೨೮೩
104
62730
316727
314448
2026-05-04T07:29:26Z
Shreelatha.Halemane
7642
316727
proofread-page
text/x-wiki
<noinclude><pagequality level="1" user="Shreesha Sharma" /></noinclude>
ಪರಿವಿಡಿ
ಭಾಗ-೨
ದೇಹ ಮತ್ತು ಮನಸ್ಸಿನ ಸಂಬಂಧ
ದೇಹವನ್ನು ಜರೆಯುವುದು, ಮನಸ್ಸನ್ನು ಹೊಗಳುವುದು,
ಪರಸ್ಪರ ಸಂಬಂಧ, Merns sano Corpore sane
9.
ಮನಸ್ಸಿನ ಸ್ವರೂಪ
=
ವಿಚಾರ ಮತ್ತು ಸ್ಮರಣೆ
ಸ್ಫೂರ್ತಿ ಮತ್ತು ಕುತೂಹಲ :-
ಮನಸ್ಸು ದೇಹದ ಒಂದು ಅಂಗ :-
ಮನಸ್ಸು ಸತ್ ಚೈತನ್ಯವಾದಾಗ
ದೇಹಾತೀತವಾದ ಚೇತನ :-
ಮನಸ್ಸು ಯಾವ ತೆರನ ಶಕ್ತಿ ?
=
ಮನಸ್ಸಿಗೆ ಕವಚವಿದೆಯೇ ?-ಮಾನವನು ಹಿಂಡು ಜೀವಿ :-
ಮುಪ್ಪು ಮತ್ತು ಮನಸ್ಸು -
ಮನಸ್ಸನ್ನು ನಡಸುವ ಚೇತನ :-
ಮನಸ್ಸು ; ಅರಿಷಡ್ವರ್ಗಗಳಿಂದ ಮಲಿನತೆ :-
ದೇಹ ಮತ್ತು ಮನಸ್ಸಿನ ಪರಸ್ಪರ ಸಂಬಂಧ :-
ಸ್ಥಾವರ ಮತ್ತು ಜಂಗಮ -
ಆಲಯ ಮತ್ತು ಬಯಲು :- ಮನಸ್ಸು ಎಲ್ಲಿದೆ :
9.. ಮೆದುಳಿನ ಪ್ರಮುಖ ಭಾಗಗಳು
ಮದುಳಿನ ಅವತಾರ :- ವಿವಿಧ ಭಾಗಗಳು :-
ಮೆದುಳಿನಲ್ಲಿನ ಸಂಪರ್ಕ ವ್ಯವಸ್ಥೆ :-
=
ಮದುಳಿನ ಕಾರ್ಯಗಳ ಸಮನ್ವಯದಿಂದ ಮನಸ್ಸಿನ
ಅಭಿವೃದ್ಧಿ :-
ಮನಸ್ಸಿನ ಅಭಿವೃದ್ಧಿ ಮತ್ತು ಸಮಕಾಲೀನ ಜ್ಞಾನ
ಭಂಡಾರ :-
OLF
೩೦೯<noinclude></noinclude>
gdvp2d7zkswr0qdxcoi3s3ijuzhs1ce
ಪುಟ:ಮನಮಂಥನ.pdf/೨೮೫
104
62732
316728
314450
2026-05-04T07:31:12Z
Shreelatha.Halemane
7642
/* Proofread */
316728
proofread-page
text/x-wiki
<noinclude><pagequality level="3" user="Shreelatha.Halemane" /></noinclude>
{{center|'''ಭಾಗ-೨'''}}
{{center|'''ಅರಿಕೆ-ಹಾರೈಕೆ'''}}
{{gap}}ಮಾನಸಿಕ ಬೇನೆಗಳ ವಿರಾಟ್ ಸ್ವರೂಪದ, ಚಿತ್ರವಿಚಿತ್ರ ಪ್ರದರ್ಶನಗಳನ್ನು
ಸಾಕಷ್ಟು ವಿವರವಾಗಿ ನೋಡಿದವು. ಮನಸ್ಸು ಯಾವ ರೀತಿಯಲ್ಲಿ ವಕ್ರವಾಗುತ್ತದೆ
ಎಂಬುದನ್ನೂ ಸ್ಕೂಲವಾಗಿ ತಿಳಿದವು.
{{gap}}ಸಂಜೆಯ ಮಸುಕಿನಲ್ಲಿ ಹಾದಿಯಲ್ಲಿ ಕಾಣಿಸಿದುದು ಹಾವೋ ಹಗ್ಗವೋ
ಎಂಬ ಸಂದೇಹವು ಬರುತ್ತದೆ. ಸಂದೇಹದ ಹಿಂದೆಯೇ ಭಯ ಮತ್ತು ಆತಂಕ,
ಟಾರ್ಚ್ ಬೆಳಕನ್ನು ಅದರ ಮೇಲೆ ಚೆಲ್ಲಿದರೆ, ಸಂದೇಹವು ಮಾಯವಾಗುತ್ತದೆ.
ಹಗ್ಗವಾಗಿದ್ದರೆ ಮುನ್ನಡೆಯುತ್ತೇವೆ. ಹಾವಾಗಿದ್ದರೆ ಸೂಕ್ತವಾದ ರಕ್ಷಣೆಯನ್ನು
ಮಾಡಿಕೊಳ್ಳುತ್ತೇವೆ.
{{gap}}ಮಾನಸಿಕ ಬೇನೆಗಳ ವಿಷಯದಲ್ಲಿ ಜನಸಾಮಾನ್ಯರಲ್ಲಿ ಸಾಕಷ್ಟು ಸಂದೇಹಗಳಿವೆ.
ಮನಸ್ಸು ಹೇಗೆ ವರ್ತಿಸುತ್ತದೆ? ನಿರ್ಣಯಗಳನ್ನು ಹೇಗೆ ನಿರ್ಧರಿಸುತ್ತದೆ? ಅದರ
ಕಾರ್ಯಕ್ರಮವು ಹಳಿ ತಪ್ಪುವುದು ಹೇಗೆ? ಇವುಗಳನ್ನು ತಿಳಿದುಕೊಂಡರೆ, ಸಂದೇಹದ
ಮೇಲೆ ಬೆಳಕನ್ನು ಚೆಲ್ಲಿದಂತಾಗುತ್ತದೆ, ಆಗ ಸಂದೇಹ ಪರಿಹಾರವಾಗುತ್ತದೆ.
{{gap}}ಆದಕಾರಣ ಮನಸ್ಸಿನ ಸ್ಕೂಲ ಪರಿಚಯವನ್ನು ಮಾಡಿಕೊಡಲು
ಈ ಭಾಗದಲ್ಲಿ ಯತ್ನಿಸಿದ್ದೇನೆ. ಮನಸ್ಸಿನ ವಿಷಯದಲ್ಲಿ ಮನೋವೈಜ್ಞಾನಿಕರು
ಪ್ರಗತಿಯನ್ನು ಸಾಧಿಸಿದ್ದಾರೆ ಆದರ ಆ ಜ್ಞಾನವು ಇನ್ನೂ ಶೈಶವಾವಸ್ಥೆಯಲ್ಲಿದೆಯೋ
ಎಂಬ ಅನುಮಾನವು ವಿಜ್ಞಾನಿಗಳಲ್ಲಿ ಬೇರೂರಿದೆ.
{{gap}}ನಮ್ಮ ನಾಡಿನಲ್ಲಿ ಮನಸ್ಸಿನ ವಿಶ್ಲೇಷಣೆ ಮತ್ತು ಮನಸ್ಸನ್ನು ನಡೆಸುವ
ಆವುದೋ ಅವ್ಯಕ್ತವಾದ ಅಂಶವು ಇದೆ, ಅದನ್ನು ಅರಿಯಬೇಕು ಎಂಬುದೇ
ಪುರಾತನ ಕಾಲದ ಮನನಿಗರ ಮತ್ತು ಋಷಿಗಳ ಏಕಮಾತ್ರ ಧೈಯವಾಗಿತ್ತು.
{{gap}}ಅವರುಗಳು ನುಡಿದ ಭಾಷೆಯು, ನಾವು ವೈಜ್ಞಾನಿಕವಾಗಿ ಆಡುವ ಭಾಷೆಗೆ
ಯಾವ ಸಂಬಂಧವನ್ನೂ ಹೊಂದಿಲ್ಲ. ಆದರೂ ಶ್ರದ್ಧೆಯನ್ನು ವಹಿಸಿ ಎರಡನ್ನೂ
ಅಭ್ಯಾಸ ಮಾಡಿದರೆ, ಅವುಗಳೆರಡಕ್ಕೂ ಇರುವ ಸಾಮ್ಯವು ಸ್ಪಷ್ಟವಾಗುತ್ತದೆ. ಹಿರಿಯ
ಋಷಿಗಳು ಹೇಳಿದುದನ್ನು ಗಮನಿಸಿದರೆ ಮನೋವಿಜ್ಞಾನವು ಮುಂದೆ ಯಾವ<noinclude></noinclude>
e2xc2tae3tha5zwrwu8clp5ajwhncyf
316739
316728
2026-05-04T08:55:59Z
Shreesha Sharma
7840
/* Validated */
316739
proofread-page
text/x-wiki
<noinclude><pagequality level="4" user="Shreesha Sharma" /></noinclude>
{{center|'''ಭಾಗ-೨'''}}
{{center|'''ಅರಿಕೆ-ಹಾರೈಕೆ'''}}
{{gap}}ಮಾನಸಿಕ ಬೇನೆಗಳ ವಿರಾಟ್ ಸ್ವರೂಪದ, ಚಿತ್ರವಿಚಿತ್ರ ಪ್ರದರ್ಶನಗಳನ್ನು
ಸಾಕಷ್ಟು ವಿವರವಾಗಿ ನೋಡಿದವು. ಮನಸ್ಸು ಯಾವ ರೀತಿಯಲ್ಲಿ ವಕ್ರವಾಗುತ್ತದೆ
ಎಂಬುದನ್ನೂ ಸ್ಕೂಲವಾಗಿ ತಿಳಿದವು.
{{gap}}ಸಂಜೆಯ ಮಸುಕಿನಲ್ಲಿ ಹಾದಿಯಲ್ಲಿ ಕಾಣಿಸಿದುದು ಹಾವೋ ಹಗ್ಗವೋ
ಎಂಬ ಸಂದೇಹವು ಬರುತ್ತದೆ. ಸಂದೇಹದ ಹಿಂದೆಯೇ ಭಯ ಮತ್ತು ಆತಂಕ,
ಟಾರ್ಚ್ ಬೆಳಕನ್ನು ಅದರ ಮೇಲೆ ಚೆಲ್ಲಿದರೆ, ಸಂದೇಹವು ಮಾಯವಾಗುತ್ತದೆ.
ಹಗ್ಗವಾಗಿದ್ದರೆ ಮುನ್ನಡೆಯುತ್ತೇವೆ. ಹಾವಾಗಿದ್ದರೆ ಸೂಕ್ತವಾದ ರಕ್ಷಣೆಯನ್ನು
ಮಾಡಿಕೊಳ್ಳುತ್ತೇವೆ.
{{gap}}ಮಾನಸಿಕ ಬೇನೆಗಳ ವಿಷಯದಲ್ಲಿ ಜನಸಾಮಾನ್ಯರಲ್ಲಿ ಸಾಕಷ್ಟು ಸಂದೇಹಗಳಿವೆ.
ಮನಸ್ಸು ಹೇಗೆ ವರ್ತಿಸುತ್ತದೆ? ನಿರ್ಣಯಗಳನ್ನು ಹೇಗೆ ನಿರ್ಧರಿಸುತ್ತದೆ? ಅದರ
ಕಾರ್ಯಕ್ರಮವು ಹಳಿ ತಪ್ಪುವುದು ಹೇಗೆ? ಇವುಗಳನ್ನು ತಿಳಿದುಕೊಂಡರೆ, ಸಂದೇಹದ
ಮೇಲೆ ಬೆಳಕನ್ನು ಚೆಲ್ಲಿದಂತಾಗುತ್ತದೆ, ಆಗ ಸಂದೇಹ ಪರಿಹಾರವಾಗುತ್ತದೆ.
{{gap}}ಆದಕಾರಣ ಮನಸ್ಸಿನ ಸ್ಕೂಲ ಪರಿಚಯವನ್ನು ಮಾಡಿಕೊಡಲು
ಈ ಭಾಗದಲ್ಲಿ ಯತ್ನಿಸಿದ್ದೇನೆ. ಮನಸ್ಸಿನ ವಿಷಯದಲ್ಲಿ ಮನೋವೈಜ್ಞಾನಿಕರು
ಪ್ರಗತಿಯನ್ನು ಸಾಧಿಸಿದ್ದಾರೆ ಆದರ ಆ ಜ್ಞಾನವು ಇನ್ನೂ ಶೈಶವಾವಸ್ಥೆಯಲ್ಲಿದೆಯೋ
ಎಂಬ ಅನುಮಾನವು ವಿಜ್ಞಾನಿಗಳಲ್ಲಿ ಬೇರೂರಿದೆ.
{{gap}}ನಮ್ಮ ನಾಡಿನಲ್ಲಿ ಮನಸ್ಸಿನ ವಿಶ್ಲೇಷಣೆ ಮತ್ತು ಮನಸ್ಸನ್ನು ನಡೆಸುವ
ಆವುದೋ ಅವ್ಯಕ್ತವಾದ ಅಂಶವು ಇದೆ, ಅದನ್ನು ಅರಿಯಬೇಕು ಎಂಬುದೇ
ಪುರಾತನ ಕಾಲದ ಮನನಿಗರ ಮತ್ತು ಋಷಿಗಳ ಏಕಮಾತ್ರ ಧೈಯವಾಗಿತ್ತು.
{{gap}}ಅವರುಗಳು ನುಡಿದ ಭಾಷೆಯು, ನಾವು ವೈಜ್ಞಾನಿಕವಾಗಿ ಆಡುವ ಭಾಷೆಗೆ
ಯಾವ ಸಂಬಂಧವನ್ನೂ ಹೊಂದಿಲ್ಲ. ಆದರೂ ಶ್ರದ್ಧೆಯನ್ನು ವಹಿಸಿ ಎರಡನ್ನೂ
ಅಭ್ಯಾಸ ಮಾಡಿದರೆ, ಅವುಗಳೆರಡಕ್ಕೂ ಇರುವ ಸಾಮ್ಯವು ಸ್ಪಷ್ಟವಾಗುತ್ತದೆ. ಹಿರಿಯ
ಋಷಿಗಳು ಹೇಳಿದುದನ್ನು ಗಮನಿಸಿದರೆ ಮನೋವಿಜ್ಞಾನವು ಮುಂದೆ ಯಾವ<noinclude></noinclude>
ec8mqjfqoiqfc6mag1zel1jsn1ihgt5
ಪುಟ:ಮನಮಂಥನ.pdf/೨೮೬
104
62733
316729
314451
2026-05-04T07:33:22Z
Shreesha Sharma
7840
/* Proofread */
316729
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೨೬೮}}{{Right|ಮನಮಂಥನ}}
ಹಾದಿಯಲ್ಲಿ ಪ್ರಯೋಗಗಳ ಮೂಲಕ ಅರಿವನ್ನು ಪಡೆಯಬಹುದು ಎಂಬುದನ್ನು
ಕಾಣಬಹುದು. ಅಂತಹ ಪ್ರಯತ್ನವೇ ಈ ಭಾಗದ ಧೈಯ ಮತ್ತು ಉದ್ದೇಶ.
{{gap}}ಮನಸ್ಸಿನ ವಿಷಯದಲ್ಲೂ ಕನ್ನಡ ಜನರು, 'ಕಾಲದ' ವಿಷಯದಲ್ಲಿ ವಿ.ಸೀ
ಅವರು ನುಡಿದಂತೆ, ಜಡರು; ಜಾಡ್ಯರು. ಆದರೂ ಹಲ ಕೆಲವರಾದರೂ,
ಒಬ್ಬಿಬ್ಬರಾದರೂ ಸಾಕು, ಇದನ್ನು ಓದಿ, ಮುಂದಿನ ಪ್ರಗತಿಯ ಪಥವನ್ನು ದರ್ಶನಿಸುವಂತಾದರೆ ಕೃತಾರ್ಥ. ಅವರುಗಳಿಗೆ `ಧೀಯೋ ಯೋನಃ
ಪ್ರಚೋದಯಾತ್' ಎಂದು ಹಾರೈಸಿ, ಈ ಭಾಗವು ಪ್ರಚೋದಿಸಲಿ ಎಂದು
ಬೇಡಿಕೊಳ್ಳುತ್ತೇನೆ, (ಅದನ್ನು)
{{Right|ಎಂ. ಶಿವರಾಂ}}<noinclude></noinclude>
lfgwdyb4i15c31owzcyn36r0grn8wft
316768
316729
2026-05-04T09:13:53Z
Shreelatha.Halemane
7642
/* Validated */
316768
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೨೬೮}}{{Right|ಮನಮಂಥನ}}
ಹಾದಿಯಲ್ಲಿ ಪ್ರಯೋಗಗಳ ಮೂಲಕ ಅರಿವನ್ನು ಪಡೆಯಬಹುದು ಎಂಬುದನ್ನು
ಕಾಣಬಹುದು. ಅಂತಹ ಪ್ರಯತ್ನವೇ ಈ ಭಾಗದ ಧೈಯ ಮತ್ತು ಉದ್ದೇಶ.
{{gap}}ಮನಸ್ಸಿನ ವಿಷಯದಲ್ಲೂ ಕನ್ನಡ ಜನರು, 'ಕಾಲದ' ವಿಷಯದಲ್ಲಿ ವಿ.ಸೀ
ಅವರು ನುಡಿದಂತೆ, ಜಡರು; ಜಾಡ್ಯರು. ಆದರೂ ಹಲ ಕೆಲವರಾದರೂ,
ಒಬ್ಬಿಬ್ಬರಾದರೂ ಸಾಕು, ಇದನ್ನು ಓದಿ, ಮುಂದಿನ ಪ್ರಗತಿಯ ಪಥವನ್ನು ದರ್ಶನಿಸುವಂತಾದರೆ ಕೃತಾರ್ಥ. ಅವರುಗಳಿಗೆ `ಧೀಯೋ ಯೋನಃ
ಪ್ರಚೋದಯಾತ್' ಎಂದು ಹಾರೈಸಿ, ಈ ಭಾಗವು ಪ್ರಚೋದಿಸಲಿ ಎಂದು
ಬೇಡಿಕೊಳ್ಳುತ್ತೇನೆ, (ಅದನ್ನು)
{{Right|ಎಂ. ಶಿವರಾಂ}}<noinclude></noinclude>
gxopbfgl2cvqefk129c5qzcp8nhf9rg
ಪುಟ:ಮನಮಂಥನ.pdf/೨೮೭
104
62734
316731
314452
2026-05-04T07:34:27Z
Shreesha Sharma
7840
/* Proofread */
316731
proofread-page
text/x-wiki
<noinclude><pagequality level="3" user="Shreesha Sharma" /></noinclude>{{center|ಭಾಗ-೨}}
{{center|೧. ದೇಹ ಮತ್ತು ಮನಸ್ಸಿನ ಸಂಬಂಧ}}
ಮೂರು ವರ್ಷದ ದುಂಡು ದುಂಡು ಮಗುವಾಗಿದ್ದಾಗಿನಿಂದಲೂ ಪಮ್ಮಿಗೆ
ನನ್ನನ್ನು ಕಂಡರೆ ಸದರ. ಕತ್ತಿನ ಸುತ್ತ ಮಾಲೆಯಂತೆ ಸ್ಟೆತೋಸ್ಕೋಪನ್ನು
ಹಾಕಿಕೊಂಡು, ಎದುರು ಹೋದರೆ ಸುಮಾರುಪಾಲು ಮಕ್ಕಳು ಕಿಠಾರಂತ
ಅರಚಿಕೊಳ್ಳುತ್ತವೆ. ಆದರೆ ಕೆಲವು ಮಕ್ಕಳು, ಅದೇ ವಯಸ್ಸಿನ ಮಕ್ಕಳು, ನನ್ನೊಂದಿಗೆ
ಚಕ್ಕಂದವಾಡತೊಡಗುತ್ತವೆ. ಪಮ್ಮಿ ಇಂತಹದೊಂದು ಮುದ್ದು ಮಗು, ಅಜ್ಜ
ಅಜ್ಜಿಯರು ಪ್ರಮೀಳಾ ಎಂದು ಹೆಸರಿಟ್ಟಿದ್ದರೂ, ಮನೆಯವರೆಲ್ಲರೂ ಪಮ್ಮಿ
ಎಂದೇ ಕರೆಯುತ್ತಿದ್ದರು. ಮೂರು ತುಂಬಿದ ಮೇಲೆ ಶಾಲೆಗೆ ಸೇರಿಸಿದಾಗ,
ಪ್ರಮೀಳಾ ಎಂಬುದು ನನ್ನ ಹೆಸರು ಅಂತ ಅವಳಿಗೆ ಸರಿಯಾಗಿ ತಿಳಿದದ್ದು.
ಮದುವೆಯಾಗಿ, ಹೊಸ ಸಂಸಾರವನ್ನು ಪ್ರಮೀಳಾ ಹೂಡಿದಳು.
ಆಣಿಯಾದ ಸುಸಂಸ್ಕೃತ ಗಂಡ ಇಬ್ಬರೂ ದವಾಖಾನೆಗೆ ಬಂದು, ಅನುಕೂಲವಾದ
ಒಂದು ಸಂಜೆ ಅವರ ಮನೆಗೆ ಟೀಗೆ ಬರಬೇಕೆಂದೂ, ರಾಹುಕಾಲವು
ಆರಂಭವಾಗುವ ಮೊದಲೇ ಬರುತ್ತೀನಿ. ಮರೆತುಬಿಟ್ಟು ಹರೆಯದ ಹುಮ್ಮಸ್ಸಿನಲ್ಲಿ
ಸಿನಿಮಾಕ್ಕೆ ಹೋಗಿಬಿಡಬೇಡಿ, ಎಂದು ಎಚ್ಚರಿಸಿ, ನಾನು ಒಪ್ಪಿಕೊಂಡೆ. ಹೋದೆ;
ಭಾನುವಾರ ನಾಲ್ಕರ ವೇಳೆಗೆ ಲಘುಫಲಾಹಾರವನ್ನು ನೀಡಿದರು. ಇನ್ನೆರಡು
ದಿನ ಪೂರ್ಣ ಉಪವಾಸವನ್ನು ಮಾಡಿದರೂ, ತಡೆದುಕೊಳ್ಳಬಹುದು ಎನ್ನುವಷ್ಟು
ಇಬ್ಬರೂ ಆದರದಿಂದ ಗಿಡುಗಿದರು. ರುಚಿರುಚಿಯಾಗಿದ್ದುದರಿಂದ, ಮುದುಕನ
ಚಪಲವೂ ಅತಿಯಾಗುವುದರಿಂದ, ಕಬಳಿಸಿದೆ ; ನಂತರ ಯೋಗಕ್ಷೇಮದ
ಮಾತುಗಳು.
“ಪಮ್ಮಿ ! ಇನ್ನು ಮೇಲೆ ಹಾಡು ಹಸೆ, ಗಮಕ ಕಲೆ ಎಲ್ಲವೂ
ಮುಗಿದಂತೆಯೇನೇ?' ಎಂದು ಕೇಳಿದೆ. ಕನ್ನಡ ಗೀತೆಗಳನ್ನು ಇಂಪಾಗಿ ಮತ್ತು
ಭಾವಪೂರ್ಣವಾಗಿ ಪಮ್ಮಿ ಹಾಡುತ್ತಿದ್ದಳು. ಮದುವೆಯಾದಮೇಲೆ ಇತರ
ಆತುರಗಳು. ಮನೆಗೆಲಸಗಳೂ ತುಂಬಿಕೊಂಡು ಬರುತ್ತವಲ್ಲ. ಹಾಡು ಹಸೆಗಳಿಗೆ
ವ್ಯವಧಾನವಿರುತ್ತದೆಯೇ ? ಆದುದರಿಂದ ಹಾಗೆ ಕೇಳಿದೆ.<noinclude></noinclude>
ks2n1vkfz5lnn9w5t5uj23twz5n6717
316738
316731
2026-05-04T08:27:47Z
Pragathi. BH
7585
/* Validated */
316738
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಭಾಗ-೨}}
{{center|೧. ದೇಹ ಮತ್ತು ಮನಸ್ಸಿನ ಸಂಬಂಧ}}
ಮೂರು ವರ್ಷದ ದುಂಡು ದುಂಡು ಮಗುವಾಗಿದ್ದಾಗಿನಿಂದಲೂ ಪಮ್ಮಿಗೆ
ನನ್ನನ್ನು ಕಂಡರೆ ಸದರ. ಕತ್ತಿನ ಸುತ್ತ ಮಾಲೆಯಂತೆ ಸ್ಟೆತೋಸ್ಕೋಪನ್ನು
ಹಾಕಿಕೊಂಡು, ಎದುರು ಹೋದರೆ ಸುಮಾರುಪಾಲು ಮಕ್ಕಳು ಕಿಠಾರಂತ
ಅರಚಿಕೊಳ್ಳುತ್ತವೆ. ಆದರೆ ಕೆಲವು ಮಕ್ಕಳು, ಅದೇ ವಯಸ್ಸಿನ ಮಕ್ಕಳು, ನನ್ನೊಂದಿಗೆ
ಚಕ್ಕಂದವಾಡತೊಡಗುತ್ತವೆ. ಪಮ್ಮಿ ಇಂತಹದೊಂದು ಮುದ್ದು ಮಗು, ಅಜ್ಜ
ಅಜ್ಜಿಯರು ಪ್ರಮೀಳಾ ಎಂದು ಹೆಸರಿಟ್ಟಿದ್ದರೂ, ಮನೆಯವರೆಲ್ಲರೂ ಪಮ್ಮಿ
ಎಂದೇ ಕರೆಯುತ್ತಿದ್ದರು. ಮೂರು ತುಂಬಿದ ಮೇಲೆ ಶಾಲೆಗೆ ಸೇರಿಸಿದಾಗ,
ಪ್ರಮೀಳಾ ಎಂಬುದು ನನ್ನ ಹೆಸರು ಅಂತ ಅವಳಿಗೆ ಸರಿಯಾಗಿ ತಿಳಿದದ್ದು.
ಮದುವೆಯಾಗಿ, ಹೊಸ ಸಂಸಾರವನ್ನು ಪ್ರಮೀಳಾ ಹೂಡಿದಳು.
ಆಣಿಯಾದ ಸುಸಂಸ್ಕೃತ ಗಂಡ ಇಬ್ಬರೂ ದವಾಖಾನೆಗೆ ಬಂದು, ಅನುಕೂಲವಾದ
ಒಂದು ಸಂಜೆ ಅವರ ಮನೆಗೆ ಟೀಗೆ ಬರಬೇಕೆಂದೂ, ರಾಹುಕಾಲವು
ಆರಂಭವಾಗುವ ಮೊದಲೇ ಬರುತ್ತೀನಿ. ಮರೆತುಬಿಟ್ಟು ಹರೆಯದ ಹುಮ್ಮಸ್ಸಿನಲ್ಲಿ
ಸಿನಿಮಾಕ್ಕೆ ಹೋಗಿಬಿಡಬೇಡಿ, ಎಂದು ಎಚ್ಚರಿಸಿ, ನಾನು ಒಪ್ಪಿಕೊಂಡೆ. ಹೋದೆ;
ಭಾನುವಾರ ನಾಲ್ಕರ ವೇಳೆಗೆ ಲಘುಫಲಾಹಾರವನ್ನು ನೀಡಿದರು. ಇನ್ನೆರಡು
ದಿನ ಪೂರ್ಣ ಉಪವಾಸವನ್ನು ಮಾಡಿದರೂ, ತಡೆದುಕೊಳ್ಳಬಹುದು ಎನ್ನುವಷ್ಟು
ಇಬ್ಬರೂ ಆದರದಿಂದ ಗಿಡುಗಿದರು. ರುಚಿರುಚಿಯಾಗಿದ್ದುದರಿಂದ, ಮುದುಕನ
ಚಪಲವೂ ಅತಿಯಾಗುವುದರಿಂದ, ಕಬಳಿಸಿದೆ ; ನಂತರ ಯೋಗಕ್ಷೇಮದ
ಮಾತುಗಳು.
“ಪಮ್ಮಿ ! ಇನ್ನು ಮೇಲೆ ಹಾಡು ಹಸೆ, ಗಮಕ ಕಲೆ ಎಲ್ಲವೂ
ಮುಗಿದಂತೆಯೇನೇ?' ಎಂದು ಕೇಳಿದೆ. ಕನ್ನಡ ಗೀತೆಗಳನ್ನು ಇಂಪಾಗಿ ಮತ್ತು
ಭಾವಪೂರ್ಣವಾಗಿ ಪಮ್ಮಿ ಹಾಡುತ್ತಿದ್ದಳು. ಮದುವೆಯಾದಮೇಲೆ ಇತರ
ಆತುರಗಳು. ಮನೆಗೆಲಸಗಳೂ ತುಂಬಿಕೊಂಡು ಬರುತ್ತವಲ್ಲ. ಹಾಡು ಹಸೆಗಳಿಗೆ
ವ್ಯವಧಾನವಿರುತ್ತದೆಯೇ ? ಆದುದರಿಂದ ಹಾಗೆ ಕೇಳಿದೆ.<noinclude></noinclude>
njzteq6gosup6ognnlg95txa9tsjqx2
316806
316738
2026-05-04T09:47:27Z
Pragathi. BH
7585
316806
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಭಾಗ-೨}}
{{center|೧. ದೇಹ ಮತ್ತು ಮನಸ್ಸಿನ ಸಂಬಂಧ}}
{{gap}}ಮೂರು ವರ್ಷದ ದುಂಡು ದುಂಡು ಮಗುವಾಗಿದ್ದಾಗಿನಿಂದಲೂ ಪಮ್ಮಿಗೆ
ನನ್ನನ್ನು ಕಂಡರೆ ಸದರ. ಕತ್ತಿನ ಸುತ್ತ ಮಾಲೆಯಂತೆ ಸ್ಟೆತೋಸ್ಕೋಪನ್ನು
ಹಾಕಿಕೊಂಡು, ಎದುರು ಹೋದರೆ ಸುಮಾರುಪಾಲು ಮಕ್ಕಳು ಕಿಠಾರಂತ
ಅರಚಿಕೊಳ್ಳುತ್ತವೆ. ಆದರೆ ಕೆಲವು ಮಕ್ಕಳು, ಅದೇ ವಯಸ್ಸಿನ ಮಕ್ಕಳು, ನನ್ನೊಂದಿಗೆ
ಚಕ್ಕಂದವಾಡತೊಡಗುತ್ತವೆ. ಪಮ್ಮಿ ಇಂತಹದೊಂದು ಮುದ್ದು ಮಗು, ಅಜ್ಜ
ಅಜ್ಜಿಯರು ಪ್ರಮೀಳಾ ಎಂದು ಹೆಸರಿಟ್ಟಿದ್ದರೂ, ಮನೆಯವರೆಲ್ಲರೂ ಪಮ್ಮಿ
ಎಂದೇ ಕರೆಯುತ್ತಿದ್ದರು. ಮೂರು ತುಂಬಿದ ಮೇಲೆ ಶಾಲೆಗೆ ಸೇರಿಸಿದಾಗ,
ಪ್ರಮೀಳಾ ಎಂಬುದು ನನ್ನ ಹೆಸರು ಅಂತ ಅವಳಿಗೆ ಸರಿಯಾಗಿ ತಿಳಿದದ್ದು.
{{gap}}ಮದುವೆಯಾಗಿ, ಹೊಸ ಸಂಸಾರವನ್ನು ಪ್ರಮೀಳಾ ಹೂಡಿದಳು.
ಆಣಿಯಾದ ಸುಸಂಸ್ಕೃತ ಗಂಡ ಇಬ್ಬರೂ ದವಾಖಾನೆಗೆ ಬಂದು, ಅನುಕೂಲವಾದ
ಒಂದು ಸಂಜೆ ಅವರ ಮನೆಗೆ ಟೀಗೆ ಬರಬೇಕೆಂದೂ, ರಾಹುಕಾಲವು
ಆರಂಭವಾಗುವ ಮೊದಲೇ ಬರುತ್ತೀನಿ. ಮರೆತುಬಿಟ್ಟು ಹರೆಯದ ಹುಮ್ಮಸ್ಸಿನಲ್ಲಿ
ಸಿನಿಮಾಕ್ಕೆ ಹೋಗಿಬಿಡಬೇಡಿ, ಎಂದು ಎಚ್ಚರಿಸಿ, ನಾನು ಒಪ್ಪಿಕೊಂಡೆ. ಹೋದೆ;
ಭಾನುವಾರ ನಾಲ್ಕರ ವೇಳೆಗೆ ಲಘುಫಲಾಹಾರವನ್ನು ನೀಡಿದರು. ಇನ್ನೆರಡು
ದಿನ ಪೂರ್ಣ ಉಪವಾಸವನ್ನು ಮಾಡಿದರೂ, ತಡೆದುಕೊಳ್ಳಬಹುದು ಎನ್ನುವಷ್ಟು
ಇಬ್ಬರೂ ಆದರದಿಂದ ಗಿಡುಗಿದರು. ರುಚಿರುಚಿಯಾಗಿದ್ದುದರಿಂದ, ಮುದುಕನ
ಚಪಲವೂ ಅತಿಯಾಗುವುದರಿಂದ, ಕಬಳಿಸಿದೆ ; ನಂತರ ಯೋಗಕ್ಷೇಮದ
ಮಾತುಗಳು.
{{gap}}“ಪಮ್ಮಿ ! ಇನ್ನು ಮೇಲೆ ಹಾಡು ಹಸೆ, ಗಮಕ ಕಲೆ ಎಲ್ಲವೂ
ಮುಗಿದಂತೆಯೇನೇ?' ಎಂದು ಕೇಳಿದೆ. ಕನ್ನಡ ಗೀತೆಗಳನ್ನು ಇಂಪಾಗಿ ಮತ್ತು
ಭಾವಪೂರ್ಣವಾಗಿ ಪಮ್ಮಿ ಹಾಡುತ್ತಿದ್ದಳು. ಮದುವೆಯಾದಮೇಲೆ ಇತರ
ಆತುರಗಳು. ಮನೆಗೆಲಸಗಳೂ ತುಂಬಿಕೊಂಡು ಬರುತ್ತವಲ್ಲ. ಹಾಡು ಹಸೆಗಳಿಗೆ
ವ್ಯವಧಾನವಿರುತ್ತದೆಯೇ ? ಆದುದರಿಂದ ಹಾಗೆ ಕೇಳಿದೆ.<noinclude></noinclude>
mhy4cowvvmst4x9v8ifwicdfjmjegae
ಪುಟ:ಮನಮಂಥನ.pdf/೨೮೮
104
62735
316732
314453
2026-05-04T07:35:56Z
Shreesha Sharma
7840
/* Proofread */
316732
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೨೭೦}}{{Right|ಮನಮಂಥನ}}
'ಇನ್ನು ಮೇಲೆ ಇವರ ಕುಣಿತಕ್ಕೆ ತಕ್ಕ ಹಾಗೆ ನಾನು ಹಾಡಬೇಕು. ಅಂದ
ಮೇಲೆ ಮುಂದೆ ಹೇಗೆ ಎಂದು ಹೇಳಲಿ ಮಾಮ” ಎಂದಳು ಪ್ರಮೀಳಾದೇವಿ ;
ತುಂಟ ನಗುವನ್ನು ಗಂಡನತ್ತ ಮೀಂಟುತ್ತಾ.
'ಮುಂದೆ ಹೇಗಾದರೂ ಆಗಲಿ, ಈಗ ಒಂದು ಗೀತವನ್ನು ಹಾಡಮ್ಮ'ಎಂದೆ.
ಪ್ರಮೀಳನಿಗೆ ಕಂಠಶ್ರೀ ಇದೆ. ಶಾರೀರಕ್ಕೆ ತಕ್ಕ ಸೊಬಗಿನ ಶರೀರ. ಇಪ್ಪತ್ತರ
ಪ್ರಾಯದ ಕಳೆಯು ಮುಖಕ್ಕೆ ಚೆಲುವನ್ನು ಮಸ್ತು ಮೂಡಿಸಿತ್ತು.
{{gap}}ಕಲ್ಮಶದ ವಲ್ಮೀಕವೆಂದೊಡಲ ಜರೆಯದಿರು
{{gap}}ಬ್ರಹ್ಮಪುರಿಯಂದದನು ಋಷಿಗಳೊರೆದಿಹರು
{{gap}}ಹಮುಳ್ಳ ಹಯವ ಕಾಪಿಟ್ಟು ಕಡಿವಣ ತೊಡಿಸಿ
{{gap}}ನಮ್ಮ ಗುರಿ ಗೈದಿಪುದು-ಮಂಕುತಿಮ್ಮ
ಎಂಬ ಸುಪ್ರಸಿದ್ಧ ಗೀತೆಯೊಂದನ್ನು ಪಮ್ಮಿ ಬಲು ಭಾವಪೂರ್ಣವಾಗಿ
ಹಾಡಿದಳು. ನೆಮ್ಮದಿಯಿಂದ ತುಂಬು ಬಾಳನ್ನು ನಡೆಸಿ ಎಂದು ಹರಸಿ,
ಹೊರಬಂದೆ, ಅವರ ಮನೆಯಿಂದ.
ಪಮ್ಮಿ ಹಾಡಿದ ಗೀತವನ್ನು ಎಷ್ಟೋ ಬಾರಿ ಕೇಳಿದ್ದೆ. ಅದು ನನಗೆ ಕಂಠ
ಗತವಾಗಿತ್ತು. ಆದರೆ ಈ ಸಂಜೆ ಪಮ್ಮಿ ಹಾಡಿದ್ದು ನನ್ನ ಮನಸ್ಸಿಗೆ ನಾಟಿತು.
ಸಂಗೀತ ಲಾಲಿತ್ಯಕ್ಕಿಂತಲೂ ಸಾಹಿತ್ಯವು ಕಾಡಲಾರಂಭಿಸಿತು. ಒಡಲಿನಲ್ಲಿ ಕಲ್ಮಶವು
ಇರುವುದು ಎಲ್ಲರಿಗೂ ತಿಳಿದ ವಿಷಯ. ಅದರ ಸುತ್ತಲೂ ದೇಹವು ಹುತ್ತ
ಎಂದರೆ ವಲ್ಮೀಕದಂತೆ ಬೆಳೆದಿದೆ. ಆದರೆ ಅದನ್ನು ಜರೆಯಬೇಕೇಕೆ? ಪಮ್ಮಿಯನ್ನು
ಕಂಡರೆ ಸಂತಸವುಂಟಾಗುತ್ತದೆ. ತಿರುಗಿ ತಿರುಗಿ ನೋಡಬೇಕು ಎನ್ನುವ
ಆಸೆಯಾಗುತ್ತದೆ. ಇಂತಹ ಸುಂದರ ದೇಹವನ್ನು ಜರೆಯದಿರು ಎಂದನ್ನಲು
ಕಾರಣವೇನು? ಹಿರಿಯರು ಹಲವರು ಒಡಲನ್ನು ನಿಕೃಷ್ಟವಾಗಿ ಕಂಡಿರಬೇಕು.
ಆದುದರಿಂದ, ದೃಷ್ಟಾರರಾದ ಡಿ.ವಿ.ಜಿ.ಯವರು 'ಒಡಲನ್ನು ಜರೆಯಬೇಡಿ'
ಎಂದು ಒತ್ತಿ ಹೇಳಿದ್ದಾರೆ.
ಒಡಲನ್ನು ಆರೋಗ್ಯವಾಗಿರುವಂತೆ ಕಾಪಾಡಿಕೊಂಡು ಬಂದರೆ,
ಮನಸ್ಸಿನ ಆರೋಗ್ಯವೂ ಸ್ವಸ್ಥವಾಗಿರುತ್ತದೆ ಎಂದು, ಉಚ್ಛಾಯ ಸ್ಥಿತಿಯಲ್ಲಿದ್ದಾಗ
ರೋಂ ಸಾಮ್ರಾಜ್ಯದ ಮನಸಿಗರು ನಾಣ್ಣುಡಿಯನ್ನು ಕಟ್ಟಿದರು. Mens sane in
corpore sano, ಆರೋಗ್ಯವಾದ ದೇಹವಿದ್ದರೆ ಮನಸ್ಸ ಆರೋಗ್ಯವಾಗಿರುತ್ತದೆ.
ಎಂಬ ಲ್ಯಾಟಿನ್ ನಾಣ್ಣುಡಿ, ಅನುಭವ ಹೇಳಲ್ಪಟ್ಟ ನಾಣ್ಣುಡಿಯು<noinclude></noinclude>
eud2xus8n81r2go6e0bt9uk7con29cw
316767
316732
2026-05-04T09:13:25Z
Shreelatha.Halemane
7642
/* Validated */
316767
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೨೭೦}}{{Right|ಮನಮಂಥನ}}
{{gap}}'ಇನ್ನು ಮೇಲೆ ಇವರ ಕುಣಿತಕ್ಕೆ ತಕ್ಕ ಹಾಗೆ ನಾನು ಹಾಡಬೇಕು. ಅಂದ
ಮೇಲೆ ಮುಂದೆ ಹೇಗೆ ಎಂದು ಹೇಳಲಿ ಮಾಮ” ಎಂದಳು ಪ್ರಮೀಳಾದೇವಿ ;
ತುಂಟ ನಗುವನ್ನು ಗಂಡನತ್ತ ಮೀಂಟುತ್ತಾ.
{{gap}}'ಮುಂದೆ ಹೇಗಾದರೂ ಆಗಲಿ, ಈಗ ಒಂದು ಗೀತವನ್ನು ಹಾಡಮ್ಮ'ಎಂದೆ.
ಪ್ರಮೀಳನಿಗೆ ಕಂಠಶ್ರೀ ಇದೆ. ಶಾರೀರಕ್ಕೆ ತಕ್ಕ ಸೊಬಗಿನ ಶರೀರ. ಇಪ್ಪತ್ತರ
ಪ್ರಾಯದ ಕಳೆಯು ಮುಖಕ್ಕೆ ಚೆಲುವನ್ನು ಮಸ್ತು ಮೂಡಿಸಿತ್ತು.
{{gap}}ಕಲ್ಮಶದ ವಲ್ಮೀಕವೆಂದೊಡಲ ಜರೆಯದಿರು
{{gap}}ಬ್ರಹ್ಮಪುರಿಯಂದದನು ಋಷಿಗಳೊರೆದಿಹರು
{{gap}}ಹಮುಳ್ಳ ಹಯವ ಕಾಪಿಟ್ಟು ಕಡಿವಣ ತೊಡಿಸಿ
{{gap}}ನಮ್ಮ ಗುರಿ ಗೈದಿಪುದು-ಮಂಕುತಿಮ್ಮ
{{gap}}ಎಂಬ ಸುಪ್ರಸಿದ್ಧ ಗೀತೆಯೊಂದನ್ನು ಪಮ್ಮಿ ಬಲು ಭಾವಪೂರ್ಣವಾಗಿ
ಹಾಡಿದಳು. ನೆಮ್ಮದಿಯಿಂದ ತುಂಬು ಬಾಳನ್ನು ನಡೆಸಿ ಎಂದು ಹರಸಿ,
ಹೊರಬಂದೆ, ಅವರ ಮನೆಯಿಂದ.
{{gap}}ಪಮ್ಮಿ ಹಾಡಿದ ಗೀತವನ್ನು ಎಷ್ಟೋ ಬಾರಿ ಕೇಳಿದ್ದೆ. ಅದು ನನಗೆ ಕಂಠ
ಗತವಾಗಿತ್ತು. ಆದರೆ ಈ ಸಂಜೆ ಪಮ್ಮಿ ಹಾಡಿದ್ದು ನನ್ನ ಮನಸ್ಸಿಗೆ ನಾಟಿತು.
ಸಂಗೀತ ಲಾಲಿತ್ಯಕ್ಕಿಂತಲೂ ಸಾಹಿತ್ಯವು ಕಾಡಲಾರಂಭಿಸಿತು. ಒಡಲಿನಲ್ಲಿ ಕಲ್ಮಶವು
ಇರುವುದು ಎಲ್ಲರಿಗೂ ತಿಳಿದ ವಿಷಯ. ಅದರ ಸುತ್ತಲೂ ದೇಹವು ಹುತ್ತ
ಎಂದರೆ ವಲ್ಮೀಕದಂತೆ ಬೆಳೆದಿದೆ. ಆದರೆ ಅದನ್ನು ಜರೆಯಬೇಕೇಕೆ? ಪಮ್ಮಿಯನ್ನು
ಕಂಡರೆ ಸಂತಸವುಂಟಾಗುತ್ತದೆ. ತಿರುಗಿ ತಿರುಗಿ ನೋಡಬೇಕು ಎನ್ನುವ
ಆಸೆಯಾಗುತ್ತದೆ. ಇಂತಹ ಸುಂದರ ದೇಹವನ್ನು ಜರೆಯದಿರು ಎಂದನ್ನಲು
ಕಾರಣವೇನು? ಹಿರಿಯರು ಹಲವರು ಒಡಲನ್ನು ನಿಕೃಷ್ಟವಾಗಿ ಕಂಡಿರಬೇಕು.
ಆದುದರಿಂದ, ದೃಷ್ಟಾರರಾದ ಡಿ.ವಿ.ಜಿ.ಯವರು 'ಒಡಲನ್ನು ಜರೆಯಬೇಡಿ'
ಎಂದು ಒತ್ತಿ ಹೇಳಿದ್ದಾರೆ.
{{gap}}ಒಡಲನ್ನು ಆರೋಗ್ಯವಾಗಿರುವಂತೆ ಕಾಪಾಡಿಕೊಂಡು ಬಂದರೆ,
ಮನಸ್ಸಿನ ಆರೋಗ್ಯವೂ ಸ್ವಸ್ಥವಾಗಿರುತ್ತದೆ ಎಂದು, ಉಚ್ಛಾಯ ಸ್ಥಿತಿಯಲ್ಲಿದ್ದಾಗ
ರೋಂ ಸಾಮ್ರಾಜ್ಯದ ಮನಸಿಗರು ನಾಣ್ಣುಡಿಯನ್ನು ಕಟ್ಟಿದರು. Mens sane in
corpore sano, ಆರೋಗ್ಯವಾದ ದೇಹವಿದ್ದರೆ ಮನಸ್ಸ ಆರೋಗ್ಯವಾಗಿರುತ್ತದೆ.
ಎಂಬ ಲ್ಯಾಟಿನ್ ನಾಣ್ಣುಡಿ, ಅನುಭವ ಹೇಳಲ್ಪಟ್ಟ ನಾಣ್ಣುಡಿಯು<noinclude></noinclude>
0qi5plaefjxy0sgcd90uvy9ympa0hs1
ಪುಟ:ಮನಮಂಥನ.pdf/೨೮೯
104
62736
316733
314454
2026-05-04T07:36:53Z
Shreesha Sharma
7840
/* Proofread */
316733
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ದೇಹ ಮತ್ತು ಮನಸ್ಸಿನ ಸಂಬಂಧ}}{{Right|೨೭೧}}
ಸತ್ಯವಾಗಲೇಬೇಕು? ಸತ್ಯವಲ್ಲವೇನೋ ಎಂಬ ಸಂದೇಹವುಂಟಾಗುತ್ತದೆ. ಮತ್ತೆ
ಯಾಕೆ ರೋಂಇನ ಮನಸಿಗರು ಹಾಗಂದರು?
ರೋಮನ್ ಸಾಮ್ರಾಜ್ಯವು ಆ ಕಾಲದಲ್ಲಿ ಸಂಪದ್ಭರಿತವಾಗಿತ್ತು. ರೋಂನಗರ
ವನಕ ಭೋಗ ಜೀವನಕ್ಕೆ ಸುಖ ಲೋಲಾಪ್ತಿಗಳಿಗೆ ಎಲ್ಲ ತೆರನ ಅವಕಾಶಗಳನ್ನೂ
ಒದಗಿಸುತ್ತಿತ್ತು ; ಅಲ್ಪಸಂಖ್ಯಾತರಾದ ಶ್ರೀಮಂತ ಕುಟುಂಬದವರು ಆಡಿದ್ದೇ
ಆಟ. ಬಹುಸಂಖ್ಯಾತರಾದ ಇತರರು ಇಂತಹ ಶ್ರೀಮಂತರ ಜೀತದಾಳುಗಳು
ಅಥವಾ ಗುಲಾಮರು, ತಲತಲಾಂತರದಿಂದಲೂ ಗುಲಾಮರಾಗಿಯೇ
ಇರಬೇಕಾಗಿದ್ದವರು. ಸಾಮಾಜಿಕವಾಗಿ ಈ ವ್ಯವಸ್ಥೆಯು ಇದ್ದರೂ, ಗಂಡು
ಹೆಣ್ಣು ಎಂಬ ಎರಡೇ ವ್ಯತ್ಯಾಸವು ಬಾಳಿನಲ್ಲಿ ಗುರುತಿಸಲ್ಪಡುತ್ತಿತ್ತು. ಹೀಗಾಗಿ
ಗುಲಾಮ ಹೆಣ್ಣುಗಳು, ಶ್ರೀಮಂತರ ಆಟಕ್ಕೆ ಮತ್ತು ಕೂಟಕ್ಕೆ ಸಿದ್ಧವಾಗಿರಬೇಕಾಗಿತ್ತು.
ಈ ರೀತಿಯಲ್ಲಿ ಗುಪ್ತ ವ್ಯಾಧಿಗಳು ಎಲ್ಲರಲ್ಲೂ ಸರಿಸಮಾನತೆಯಿಂದ ಹರಡಲು
ಅನುಕೂಲವಾಗಿತ್ತು. ಸಿಫಿಲಿಸ್ ಎಂಬ ರತಿ ವ್ಯಾಧಿಯು ಸುಮಾರು ಮಂದಿಯನ್ನು
ಕಾಡುತ್ತಿತ್ತು. ಆಗಿನ ಕಾಲದಲ್ಲಿ ಈ ವ್ಯಾಧಿಗೆ ಪರಿಣಾಮಕಾರಿಯಾದ ಯಾವ
ಔಷಧವೂ ಇರಲಿಲ್ಲ. ವ್ಯಾಧಿಯು ಉಲ್ಬಣಿಸುತ್ತ ಹೋದಾಗ ನರಗಳು ಮತ್ತು
ಮೆದುಳುಗಳನ್ನೂ ಆಕ್ರಮಿಸಿಕೊಳ್ಳುತ್ತಿತ್ತು. ಆಗ ರೋಗಿಗೆ ಪಾರ್ಶ್ವ ಮತ್ತಿತರ
ವಾಯುಗಳೂ ಮತ್ತು ಉನ್ಮಾದಾವಸ್ಥೆಯೂ ಉಂಟಾಗುತ್ತಿತ್ತು. General paralysis
of the insane ಎಂಬ ಈ ಬೇನೆಯು ರೋಂ ನಗರದ ಬಹಳಷ್ಟು ಮಂದಿಯಲ್ಲಿ
ಕಾಣಿಸಿಕೊಂಡಿತ್ತು.
ಈ ದೃಶ್ಯವನ್ನು ಕಂಡ ಆ ಕಾಲದ ಆ ನಗರದ ಮನನಿಗರು, ಸ್ವಾಭಾವಿಕವಾಗಿ
ಹೀಗೆ ತೀರ್ಮಾನಿಸಿದರು. 'ಇವರ ದೇಹವು ಕೆಟ್ಟ ಜಾಡ್ಯದಿಂದ ಮಲಿನವಾಯಿತು.
ಮಲಿನಗೊಂಡ ದೇಹದಲ್ಲಿ ಸ್ವಸ್ಥ್ಯವನ್ನು ಹೊಂದಿದ ಮನಸ್ಸು ಇರಲು ಸಾಧ್ಯವಿಲ್ಲ.
ಅದಕಾರಣ ದೇಹವನ್ನು ಶುಚಿಯಾಗಿರಿಸಿಕೊಂಡರೆ, ಆರೋಗ್ಯವಾಗಿ
ಕಾಪಾಡಿಕೊಂಡರೆ, ಆಗ ಮನಸ್ಸು ಆರೋಗ್ಯವಾಗಿರುತ್ತದೆ, ಶುಚಿಯಾಗಿರುತ್ತದೆ'
ಎಂದು. ಆಗಿನ ಕಾಲದ ಆ ದೇಶದ ಸ್ಥಿತಿಯಲ್ಲಿ ಅವರು ನುಡಿದುದು ಸತ್ಯ.
ಆದರೆ ಈಗಿನ ಕಾಲದಲ್ಲಿ; ಮಾನವ ಜ್ಞಾನ ಭಂಡಾರವು ಅತ್ಯಾಶ್ಚರ್ಯ
ಕರವಾಗಿ ಅಭಿವೃದ್ಧಿ ಹೊಂದಿರುವಾಗ, ಆ ನಾಣ್ಣುಡಿಯು ಸರಿಯಲ್ಲ, ಮುಕ್ಕಾಲು
ಪಾಲು ತಪ್ಪು ಎಂಬುದು ಖಚಿತವಾಗುತ್ತದೆ. ಕೆಲವು ವರ್ತಮಾನಕಾಲದ
ನಿದರ್ಶನಗಳನ್ನು ಪರಿಶೀಲಿಸೋಣ.<noinclude></noinclude>
7ul5mnpaahbhn9sdcyag5jc772oroqg
316736
316733
2026-05-04T08:15:51Z
Pragathi. BH
7585
/* Validated */
316736
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|ದೇಹ ಮತ್ತು ಮನಸ್ಸಿನ ಸಂಬಂಧ}}{{Right|೨೭೧}}
ಸತ್ಯವಾಗಲೇಬೇಕು? ಸತ್ಯವಲ್ಲವೇನೋ ಎಂಬ ಸಂದೇಹವುಂಟಾಗುತ್ತದೆ. ಮತ್ತೆ
ಯಾಕೆ ರೋಂಇನ ಮನಸಿಗರು ಹಾಗಂದರು?
ರೋಮನ್ ಸಾಮ್ರಾಜ್ಯವು ಆ ಕಾಲದಲ್ಲಿ ಸಂಪದ್ಭರಿತವಾಗಿತ್ತು. ರೋಂನಗರ
ವನಕ ಭೋಗ ಜೀವನಕ್ಕೆ ಸುಖ ಲೋಲಾಪ್ತಿಗಳಿಗೆ ಎಲ್ಲ ತೆರನ ಅವಕಾಶಗಳನ್ನೂ
ಒದಗಿಸುತ್ತಿತ್ತು ; ಅಲ್ಪಸಂಖ್ಯಾತರಾದ ಶ್ರೀಮಂತ ಕುಟುಂಬದವರು ಆಡಿದ್ದೇ
ಆಟ. ಬಹುಸಂಖ್ಯಾತರಾದ ಇತರರು ಇಂತಹ ಶ್ರೀಮಂತರ ಜೀತದಾಳುಗಳು
ಅಥವಾ ಗುಲಾಮರು, ತಲತಲಾಂತರದಿಂದಲೂ ಗುಲಾಮರಾಗಿಯೇ
ಇರಬೇಕಾಗಿದ್ದವರು. ಸಾಮಾಜಿಕವಾಗಿ ಈ ವ್ಯವಸ್ಥೆಯು ಇದ್ದರೂ, ಗಂಡು
ಹೆಣ್ಣು ಎಂಬ ಎರಡೇ ವ್ಯತ್ಯಾಸವು ಬಾಳಿನಲ್ಲಿ ಗುರುತಿಸಲ್ಪಡುತ್ತಿತ್ತು. ಹೀಗಾಗಿ
ಗುಲಾಮ ಹೆಣ್ಣುಗಳು, ಶ್ರೀಮಂತರ ಆಟಕ್ಕೆ ಮತ್ತು ಕೂಟಕ್ಕೆ ಸಿದ್ಧವಾಗಿರಬೇಕಾಗಿತ್ತು.
ಈ ರೀತಿಯಲ್ಲಿ ಗುಪ್ತ ವ್ಯಾಧಿಗಳು ಎಲ್ಲರಲ್ಲೂ ಸರಿಸಮಾನತೆಯಿಂದ ಹರಡಲು
ಅನುಕೂಲವಾಗಿತ್ತು. ಸಿಫಿಲಿಸ್ ಎಂಬ ರತಿ ವ್ಯಾಧಿಯು ಸುಮಾರು ಮಂದಿಯನ್ನು
ಕಾಡುತ್ತಿತ್ತು. ಆಗಿನ ಕಾಲದಲ್ಲಿ ಈ ವ್ಯಾಧಿಗೆ ಪರಿಣಾಮಕಾರಿಯಾದ ಯಾವ
ಔಷಧವೂ ಇರಲಿಲ್ಲ. ವ್ಯಾಧಿಯು ಉಲ್ಬಣಿಸುತ್ತ ಹೋದಾಗ ನರಗಳು ಮತ್ತು
ಮೆದುಳುಗಳನ್ನೂ ಆಕ್ರಮಿಸಿಕೊಳ್ಳುತ್ತಿತ್ತು. ಆಗ ರೋಗಿಗೆ ಪಾರ್ಶ್ವ ಮತ್ತಿತರ
ವಾಯುಗಳೂ ಮತ್ತು ಉನ್ಮಾದಾವಸ್ಥೆಯೂ ಉಂಟಾಗುತ್ತಿತ್ತು. General paralysis
of the insane ಎಂಬ ಈ ಬೇನೆಯು ರೋಂ ನಗರದ ಬಹಳಷ್ಟು ಮಂದಿಯಲ್ಲಿ
ಕಾಣಿಸಿಕೊಂಡಿತ್ತು.
ಈ ದೃಶ್ಯವನ್ನು ಕಂಡ ಆ ಕಾಲದ ಆ ನಗರದ ಮನನಿಗರು, ಸ್ವಾಭಾವಿಕವಾಗಿ
ಹೀಗೆ ತೀರ್ಮಾನಿಸಿದರು. 'ಇವರ ದೇಹವು ಕೆಟ್ಟ ಜಾಡ್ಯದಿಂದ ಮಲಿನವಾಯಿತು.
ಮಲಿನಗೊಂಡ ದೇಹದಲ್ಲಿ ಸ್ವಸ್ಥ್ಯವನ್ನು ಹೊಂದಿದ ಮನಸ್ಸು ಇರಲು ಸಾಧ್ಯವಿಲ್ಲ.
ಅದಕಾರಣ ದೇಹವನ್ನು ಶುಚಿಯಾಗಿರಿಸಿಕೊಂಡರೆ, ಆರೋಗ್ಯವಾಗಿ
ಕಾಪಾಡಿಕೊಂಡರೆ, ಆಗ ಮನಸ್ಸು ಆರೋಗ್ಯವಾಗಿರುತ್ತದೆ, ಶುಚಿಯಾಗಿರುತ್ತದೆ'
ಎಂದು. ಆಗಿನ ಕಾಲದ ಆ ದೇಶದ ಸ್ಥಿತಿಯಲ್ಲಿ ಅವರು ನುಡಿದುದು ಸತ್ಯ.
ಆದರೆ ಈಗಿನ ಕಾಲದಲ್ಲಿ; ಮಾನವ ಜ್ಞಾನ ಭಂಡಾರವು ಅತ್ಯಾಶ್ಚರ್ಯ
ಕರವಾಗಿ ಅಭಿವೃದ್ಧಿ ಹೊಂದಿರುವಾಗ, ಆ ನಾಣ್ಣುಡಿಯು ಸರಿಯಲ್ಲ, ಮುಕ್ಕಾಲು
ಪಾಲು ತಪ್ಪು ಎಂಬುದು ಖಚಿತವಾಗುತ್ತದೆ. ಕೆಲವು ವರ್ತಮಾನಕಾಲದ
ನಿದರ್ಶನಗಳನ್ನು ಪರಿಶೀಲಿಸೋಣ.<noinclude></noinclude>
lswvvjz38vuznqr7l0l42e73q69htif
316737
316736
2026-05-04T08:25:57Z
Pragathi. BH
7585
316737
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ದೇಹ ಮತ್ತು ಮನಸ್ಸಿನ ಸಂಬಂಧ|right=೨೭೧}}
ಸತ್ಯವಾಗಲೇಬೇಕು? ಸತ್ಯವಲ್ಲವೇನೋ ಎಂಬ ಸಂದೇಹವುಂಟಾಗುತ್ತದೆ. ಮತ್ತೆ
ಯಾಕೆ ರೋಂಇನ ಮನಸಿಗರು ಹಾಗಂದರು?
{{gap}}ರೋಮನ್ ಸಾಮ್ರಾಜ್ಯವು ಆ ಕಾಲದಲ್ಲಿ ಸಂಪದ್ಭರಿತವಾಗಿತ್ತು. ರೋಂನಗರ
ವನಕ ಭೋಗ ಜೀವನಕ್ಕೆ ಸುಖ ಲೋಲಾಪ್ತಿಗಳಿಗೆ ಎಲ್ಲ ತೆರನ ಅವಕಾಶಗಳನ್ನೂ
ಒದಗಿಸುತ್ತಿತ್ತು ; ಅಲ್ಪಸಂಖ್ಯಾತರಾದ ಶ್ರೀಮಂತ ಕುಟುಂಬದವರು ಆಡಿದ್ದೇ
ಆಟ. ಬಹುಸಂಖ್ಯಾತರಾದ ಇತರರು ಇಂತಹ ಶ್ರೀಮಂತರ ಜೀತದಾಳುಗಳು
ಅಥವಾ ಗುಲಾಮರು, ತಲತಲಾಂತರದಿಂದಲೂ ಗುಲಾಮರಾಗಿಯೇ
ಇರಬೇಕಾಗಿದ್ದವರು. ಸಾಮಾಜಿಕವಾಗಿ ಈ ವ್ಯವಸ್ಥೆಯು ಇದ್ದರೂ, ಗಂಡು
ಹೆಣ್ಣು ಎಂಬ ಎರಡೇ ವ್ಯತ್ಯಾಸವು ಬಾಳಿನಲ್ಲಿ ಗುರುತಿಸಲ್ಪಡುತ್ತಿತ್ತು. ಹೀಗಾಗಿ
ಗುಲಾಮ ಹೆಣ್ಣುಗಳು, ಶ್ರೀಮಂತರ ಆಟಕ್ಕೆ ಮತ್ತು ಕೂಟಕ್ಕೆ ಸಿದ್ಧವಾಗಿರಬೇಕಾಗಿತ್ತು.
ಈ ರೀತಿಯಲ್ಲಿ ಗುಪ್ತ ವ್ಯಾಧಿಗಳು ಎಲ್ಲರಲ್ಲೂ ಸರಿಸಮಾನತೆಯಿಂದ ಹರಡಲು
ಅನುಕೂಲವಾಗಿತ್ತು. ಸಿಫಿಲಿಸ್ ಎಂಬ ರತಿ ವ್ಯಾಧಿಯು ಸುಮಾರು ಮಂದಿಯನ್ನು
ಕಾಡುತ್ತಿತ್ತು. ಆಗಿನ ಕಾಲದಲ್ಲಿ ಈ ವ್ಯಾಧಿಗೆ ಪರಿಣಾಮಕಾರಿಯಾದ ಯಾವ
ಔಷಧವೂ ಇರಲಿಲ್ಲ. ವ್ಯಾಧಿಯು ಉಲ್ಬಣಿಸುತ್ತ ಹೋದಾಗ ನರಗಳು ಮತ್ತು
ಮೆದುಳುಗಳನ್ನೂ ಆಕ್ರಮಿಸಿಕೊಳ್ಳುತ್ತಿತ್ತು. ಆಗ ರೋಗಿಗೆ ಪಾರ್ಶ್ವ ಮತ್ತಿತರ
ವಾಯುಗಳೂ ಮತ್ತು ಉನ್ಮಾದಾವಸ್ಥೆಯೂ ಉಂಟಾಗುತ್ತಿತ್ತು. General paralysis
of the insane ಎಂಬ ಈ ಬೇನೆಯು ರೋಂ ನಗರದ ಬಹಳಷ್ಟು ಮಂದಿಯಲ್ಲಿ
ಕಾಣಿಸಿಕೊಂಡಿತ್ತು.
{{gap}}ಈ ದೃಶ್ಯವನ್ನು ಕಂಡ ಆ ಕಾಲದ ಆ ನಗರದ ಮನನಿಗರು, ಸ್ವಾಭಾವಿಕವಾಗಿ
ಹೀಗೆ ತೀರ್ಮಾನಿಸಿದರು. 'ಇವರ ದೇಹವು ಕೆಟ್ಟ ಜಾಡ್ಯದಿಂದ ಮಲಿನವಾಯಿತು.
ಮಲಿನಗೊಂಡ ದೇಹದಲ್ಲಿ ಸ್ವಸ್ಥ್ಯವನ್ನು ಹೊಂದಿದ ಮನಸ್ಸು ಇರಲು ಸಾಧ್ಯವಿಲ್ಲ.
ಅದಕಾರಣ ದೇಹವನ್ನು ಶುಚಿಯಾಗಿರಿಸಿಕೊಂಡರೆ, ಆರೋಗ್ಯವಾಗಿ
ಕಾಪಾಡಿಕೊಂಡರೆ, ಆಗ ಮನಸ್ಸು ಆರೋಗ್ಯವಾಗಿರುತ್ತದೆ, ಶುಚಿಯಾಗಿರುತ್ತದೆ'
ಎಂದು. ಆಗಿನ ಕಾಲದ ಆ ದೇಶದ ಸ್ಥಿತಿಯಲ್ಲಿ ಅವರು ನುಡಿದುದು ಸತ್ಯ.
{{gap}}ಆದರೆ ಈಗಿನ ಕಾಲದಲ್ಲಿ; ಮಾನವ ಜ್ಞಾನ ಭಂಡಾರವು ಅತ್ಯಾಶ್ಚರ್ಯ
ಕರವಾಗಿ ಅಭಿವೃದ್ಧಿ ಹೊಂದಿರುವಾಗ, ಆ ನಾಣ್ಣುಡಿಯು ಸರಿಯಲ್ಲ, ಮುಕ್ಕಾಲು
ಪಾಲು ತಪ್ಪು ಎಂಬುದು ಖಚಿತವಾಗುತ್ತದೆ. ಕೆಲವು ವರ್ತಮಾನಕಾಲದ
ನಿದರ್ಶನಗಳನ್ನು ಪರಿಶೀಲಿಸೋಣ.<noinclude></noinclude>
36g2ex5xt8cppqqakapxl5vns6bmc9c
ಪುಟ:ಮನಮಂಥನ.pdf/೨೯೦
104
62737
316734
314455
2026-05-04T07:37:59Z
Shreesha Sharma
7840
/* Proofread */
316734
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೨೭೨}}{{Right|ಮನಮಂಥನ}}
೧. ಹುಚ್ಚು ಬೆಪ್ಪು ಶೀವಲೀಲೆ ಇಂತಹ ಮಾನಸಿಕ ರೋಗಗಳಿಂದ
ನರಳುವವರಲ್ಲಿ ಸಾಕಷ್ಟು ಪಾಲು ಜನರ ದೇಹಾರೋಗ್ಯವು ಸಮರ್ಪಕವಾಗಿಯೇ
ಇರುತ್ತದೆ. ಹಲವಾರು ಹಿಸ್ಟಿರಿಯಾ ರೋಗಿಗಳು ; ಒಬ್ರೆಷನ್ ತಗುಲಿದವರು,
ಹಾಗೂ ಅತಿ ಆತಂಕದಿಂದ ನರಳುವವರು ; ಮತ್ತು ಇತರ ತೆರನ ಮಾನಸಿಕ
ರೋಗಿಗಳು ; ತೋಳದಂತೆ ಶಕ್ತಿಯುತವಾದ ದೇಹವನ್ನು ಹೊಂದಿರುತ್ತಾರೆ,
ಕಿರುಬಗಳಂತೆ ಧಂಡಿ ಧಂಡಿ ತಿಂದು ಅರಗಿಸಿಕೊಳ್ಳುತ್ತಾರೆ. ಮಜಭೂತಾಗಿರುವ
ಅವರ ದೇಹ ಎಂಬ ದೇವಾಲಯದಲ್ಲಿ ಅಥವಾ ಬ್ರಹ್ಮಪುರಿಯಲ್ಲಿ, ಮನಸ್ಸಿನ
ಭೂತಗಳು ಮತ್ತು ಪಿಶಾಚಿಗಳು ಹೇಗೆ ಸೇರಿಕೊಂಡವು? ದೇಹವು
ದಾರ್ಡ್ಯವಾಗಿರುವಾಗ, ಮನಸ್ಸಿಗೆ ರೋಗಗಳು ಹೇಗೆ ಬಡಿಯಿತು?
ಬ್ರಹ್ಮಪುರಿಯು ಬ್ರಹ್ಮ ರಾಕ್ಷಸನ ಆವಾಸಸ್ಥಳವಾದುದು ಹೇಗೆ? ಅದೂ
ಆರೋಗ್ಯಸ್ಥಿತಿಯಲ್ಲಿರುವಾಗ?
೨. ಮನೋದೈಹಿಕ ಬೇನೆಗಳಿಂದ ನರಳುವವರ ಸಂಖ್ಯೆಯು; ಎಲ್ಲಾ
ತರಹ ರೋಗಗಳಿಂದ ನರಳುವವರ ಸಂಖ್ಯೆಯಲ್ಲಿ ಶತಾಂಶ ೭೦-೮೦ ರಷ್ಟಿದೆ
ಎಂದು ಅನುಭವಸ್ಥ ವೈದ್ಯರ ಅಂದಾಜು. ಈ ತೆರನ ಬೇನೆಗಳಿಂದ ನರಳುವವರು
ಹಲವಾರು ಬಾರಿ, ಕೆಲವಾರು ನುರಿತ ವೈದ್ಯರುಗಳಿಂದ ಸಂಪೂರ್ಣ ದೇಹ
ಪರೀಕ್ಷೆಯನ್ನು ಮಾಡಿಸಿ ಕೊಂಡಿರುತ್ತಾರೆ. ನೂರು ನೂರು ಗಟ್ಟಲೆ ಹಣವನ್ನು
ನೀರಿನಂತೆ ಖರ್ಚುಮಾಡಿ, ಹತ್ತಾರು ತೆರನಾದ ರಕ್ತ ಪರೀಕ್ಷೆ ; ಎಕ್ಸರೆ ಪರೀಕ್ಷೆ;
ಇ.ಇ.ಜಿ. ಪರೀಕ್ಷೆಗಳನ್ನು ಮಾಡಿಸಿಕೊಂಡಿರುತ್ತಾರೆ. 'ದೇಹದ ಕಾರ್ಯಕ್ರಮಗಳಲ್ಲಿ
ಯಾವುದೊಂದು ಕೊಂಕೂ ಇಲ್ಲ; ವಿನಾಕಾರಣ ನೀವು ನರಳುತ್ತಿದ್ದೀರಿ ;
ಆತಂಕ ಪಡಬೇಡಿ' ಎಂಬ ಸಲಹೆಯನ್ನು ನಿಷ್ಣಾತ ವೈದ್ಯರುಗಳಿಂದ ಪಡೆಯುತ್ತಾರೆ.
ಆದರೂ ಅವರುಗಳು ಮನೋ ದೈಹಿಕ ಬೇನೆಗಳಿಂದ ನರಳುತ್ತಲೇ ಇರುತ್ತಾರೆ.
ಅಂದರೆ ದೇಹವು ಆರೋಗ್ಯವಾಗಿದ್ದರೂ, ಮಾನಸಿಕ ತಳಮಳದ
ಕಾರಣಗಳಿಂದಾಗಿ, ಬೇನೆಯ ಸಂಕಟವನ್ನು ಅನುಭವಿಸುತ್ತದೆ. ಮಾನಸಿಕ ಸ್ವಾಸ್ಥ್ಯವು
ಅಲ್ಲೋಲಕಲ್ಲೋಲವಾಗಿರುತ್ತದೆ. ಬ್ರಹ್ಮಪುರಿಯು ಆರೋಗ್ಯದಿಂದಿದ್ದರೆ, ಮಾನಸಿಕ
ಬ್ರಹ್ಮರಾಕ್ಷಸನ ಹಾವಳಿಯು ಆಗುವುದೇಕೆ?
೩. ದೀರ್ಘ ಕಾಲದ ಕಾಯಿಲೆಗಳಿಂದ ದೇಹವು ನರಳುತ್ತಿದ್ದರೂ, ಅಂತಹ
ರೋಗಿಗಳ ಮನಸ್ಸು ಸ್ವಸ್ಥವಾಗಿಯೇ ಇರುತ್ತದೆ. ಅಲ್ಲದೆ ಹಲವಾರು ರೋಗಿಗಳಲ್ಲಿ
ಬಹಳ ಚುರುಕಾಗಿಯೂ ಕೆಲಸವನ್ನು ಮಾಡುತ್ತದೆ. ಉದಾಹರಣೆಗೆ Robert
Louis Stevenson, ಮತ್ತು A.j. Comin, ಇವರುಗಳು ಇಂಗ್ಲೀಷಿನಲ್ಲಿಯೂ,<noinclude></noinclude>
cmzulc1467efzsviyg61r4rixetwdq5
316735
316734
2026-05-04T08:00:27Z
Pragathi. BH
7585
/* Validated */
316735
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೨೭೨|right=ಮನಮಂಥನ}}
{{gap}}೧. ಹುಚ್ಚು ಬೆಪ್ಪು ಶೀವಲೀಲೆ ಇಂತಹ ಮಾನಸಿಕ ರೋಗಗಳಿಂದ
ನರಳುವವರಲ್ಲಿ ಸಾಕಷ್ಟು ಪಾಲು ಜನರ ದೇಹಾರೋಗ್ಯವು ಸಮರ್ಪಕವಾಗಿಯೇ
ಇರುತ್ತದೆ. ಹಲವಾರು ಹಿಸ್ಟಿರಿಯಾ ರೋಗಿಗಳು ; ಒಬ್ಸೇಷನ್ ತಗುಲಿದವರು,
ಹಾಗೂ ಅತಿ ಆತಂಕದಿಂದ ನರಳುವವರು ; ಮತ್ತು ಇತರ ತೆರನ ಮಾನಸಿಕ
ರೋಗಿಗಳು ; ತೋಳದಂತೆ ಶಕ್ತಿಯುತವಾದ ದೇಹವನ್ನು ಹೊಂದಿರುತ್ತಾರೆ,
ಕಿರುಬಗಳಂತೆ ಧಂಡಿ ಧಂಡಿ ತಿಂದು ಅರಗಿಸಿಕೊಳ್ಳುತ್ತಾರೆ. ಮಜಭೂತಾಗಿರುವ
ಅವರ ದೇಹ ಎಂಬ ದೇವಾಲಯದಲ್ಲಿ ಅಥವಾ ಬ್ರಹ್ಮಪುರಿಯಲ್ಲಿ, ಮನಸ್ಸಿನ
ಭೂತಗಳು ಮತ್ತು ಪಿಶಾಚಿಗಳು ಹೇಗೆ ಸೇರಿಕೊಂಡವು? ದೇಹವು
ದಾರ್ಡ್ಯವಾಗಿರುವಾಗ, ಮನಸ್ಸಿಗೆ ರೋಗಗಳು ಹೇಗೆ ಬಡಿಯಿತು?
ಬ್ರಹ್ಮಪುರಿಯು ಬ್ರಹ್ಮ ರಾಕ್ಷಸನ ಆವಾಸಸ್ಥಳವಾದುದು ಹೇಗೆ? ಅದೂ
ಆರೋಗ್ಯಸ್ಥಿತಿಯಲ್ಲಿರುವಾಗ?
{{gap}}೨. ಮನೋದೈಹಿಕ ಬೇನೆಗಳಿಂದ ನರಳುವವರ ಸಂಖ್ಯೆಯು; ಎಲ್ಲಾ
ತರಹ ರೋಗಗಳಿಂದ ನರಳುವವರ ಸಂಖ್ಯೆಯಲ್ಲಿ ಶತಾಂಶ ೭೦-೮೦ ರಷ್ಟಿದೆ
ಎಂದು ಅನುಭವಸ್ಥ ವೈದ್ಯರ ಅಂದಾಜು. ಈ ತೆರನ ಬೇನೆಗಳಿಂದ ನರಳುವವರು
ಹಲವಾರು ಬಾರಿ, ಕೆಲವಾರು ನುರಿತ ವೈದ್ಯರುಗಳಿಂದ ಸಂಪೂರ್ಣ ದೇಹ
ಪರೀಕ್ಷೆಯನ್ನು ಮಾಡಿಸಿ ಕೊಂಡಿರುತ್ತಾರೆ. ನೂರು ನೂರು ಗಟ್ಟಲೆ ಹಣವನ್ನು
ನೀರಿನಂತೆ ಖರ್ಚುಮಾಡಿ, ಹತ್ತಾರು ತೆರನಾದ ರಕ್ತ ಪರೀಕ್ಷೆ ; ಎಕ್ಸರೆ ಪರೀಕ್ಷೆ;
ಇ.ಇ.ಜಿ. ಪರೀಕ್ಷೆಗಳನ್ನು ಮಾಡಿಸಿಕೊಂಡಿರುತ್ತಾರೆ. 'ದೇಹದ ಕಾರ್ಯಕ್ರಮಗಳಲ್ಲಿ
ಯಾವುದೊಂದು ಕೊಂಕೂ ಇಲ್ಲ; ವಿನಾಕಾರಣ ನೀವು ನರಳುತ್ತಿದ್ದೀರಿ ;
ಆತಂಕ ಪಡಬೇಡಿ' ಎಂಬ ಸಲಹೆಯನ್ನು ನಿಷ್ಣಾತ ವೈದ್ಯರುಗಳಿಂದ ಪಡೆಯುತ್ತಾರೆ.
ಆದರೂ ಅವರುಗಳು ಮನೋ ದೈಹಿಕ ಬೇನೆಗಳಿಂದ ನರಳುತ್ತಲೇ ಇರುತ್ತಾರೆ.
ಅಂದರೆ ದೇಹವು ಆರೋಗ್ಯವಾಗಿದ್ದರೂ, ಮಾನಸಿಕ ತಳಮಳದ
ಕಾರಣಗಳಿಂದಾಗಿ, ಬೇನೆಯ ಸಂಕಟವನ್ನು ಅನುಭವಿಸುತ್ತದೆ. ಮಾನಸಿಕ ಸ್ವಾಸ್ಥ್ಯವು
ಅಲ್ಲೋಲಕಲ್ಲೋಲವಾಗಿರುತ್ತದೆ. ಬ್ರಹ್ಮಪುರಿಯು ಆರೋಗ್ಯದಿಂದಿದ್ದರೆ, ಮಾನಸಿಕ
ಬ್ರಹ್ಮರಾಕ್ಷಸನ ಹಾವಳಿಯು ಆಗುವುದೇಕೆ?
{{gap}}೩. ದೀರ್ಘ ಕಾಲದ ಕಾಯಿಲೆಗಳಿಂದ ದೇಹವು ನರಳುತ್ತಿದ್ದರೂ, ಅಂತಹ
ರೋಗಿಗಳ ಮನಸ್ಸು ಸ್ವಸ್ಥವಾಗಿಯೇ ಇರುತ್ತದೆ. ಅಲ್ಲದೆ ಹಲವಾರು ರೋಗಿಗಳಲ್ಲಿ
ಬಹಳ ಚುರುಕಾಗಿಯೂ ಕೆಲಸವನ್ನು ಮಾಡುತ್ತದೆ. ಉದಾಹರಣೆಗೆ Robert
Louis Stevenson, ಮತ್ತು A.j. Comin, ಇವರುಗಳು ಇಂಗ್ಲೀಷಿನಲ್ಲಿಯೂ,<noinclude></noinclude>
brj90scze9s5kwyev2371902w7ntycb
ಪುಟ:ಮನಮಂಥನ.pdf/೨೯೧
104
62738
316740
314456
2026-05-04T08:57:28Z
Shreesha Sharma
7840
/* Proofread */
316740
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ದೇಹ ಮತ್ತು ಮನಸ್ಸಿನ ಸಂಬಂಧ}}{{Right|೨೬೩}}
ನಮ್ಮ ನಂದಳಿಕೆ ಲಕ್ಷ್ಮೀನಾರಣಪ್ಪ ಮುದ್ದು ಮುದ್ದಾಗಿ ಕನ್ನಡದ ಮುದ್ದಣನಾಗಿ
ಬರೆದುದೂ; ಅವರುಗಳು ಕ್ಷಯ ರೋಗದಿಂದ ನರಳಲಾರಂಭಿಸಿದ ಮೊದಮೊದಲ
ಕಾಲದಲ್ಲಿ. ನಮ್ಮ ರಾಷ್ಟ್ರದ ಮೊದಲ ರಾಷ್ಟ್ರಾಧ್ಯಕ್ಷರಾದ ಕೀರ್ತಿಶೇಷ,
ಬಾಬುರಾಜೇಂದ್ರ ಪ್ರಸಾದರು ತೀವ್ರತರದ ಉಬ್ಬಸದಿಂದ ನರಳುತ್ತಿದ್ದರು. ಆದರೂ
ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳೊಂದಿಗೆ, ಆಧ್ಯಾತ್ಮಿಕ ಪ್ರಗತಿಯನ್ನೂ
ಅಮೋಘವಾಗಿ ಸಾಧಿಸಿದರು. ಭಗವದ್ಗೀತೆಗೆ ತಮ್ಮದೇ ಆದ ವಿಮರ್ಶನಾ
ಟೀಕಾವನ್ನು ಬರೆದರು.
J.B.S.Haldane ಎಂಬ ಇಂಗ್ಲೆಂಡಿನ ಪ್ರಚಂಡ ವಿಜ್ಞಾನಿಯೊಬ್ಬನು, ಪಾಶ್ಚಾತ್ಯ
ದೇಶಗಳಲ್ಲಿ ಲೋಕ ಪ್ರಸಿದ್ಧಿಯನ್ನು ಪಡೆದಿದ್ದ. ಆದರೆ ಆತನಿಗೆ ತೃಪ್ತಿಯು
ದೊರಕಲಿಲ್ಲ. FR.S. ಎಂಬ ಅತ್ಯಂತ ಔನ್ನತ್ಯದ ವೈಜ್ಞಾನಿಕ ಮನ್ನಣೆಯನ್ನು
ಗಳಿಸಿದ್ದ. ನಮ್ಮ ಭಾರತಕ್ಕೆ ವಲಸೆಬಂದು, ಭಾರತೀಯ ಪ್ರಜೆಯಾದ. ಕರುಳಿನಲ್ಲಿ
ಅವನಿಗೆ ಅರ್ಬುದ ರೋಗವು ಪ್ರಾರಂಭವಾಯಿತು. ಆ ವಿನಾಶಕಾರೀ ರೋಗವು
ವೃದ್ಧಿಸಿತು. ಅದೇ ಅವನಿಗೆ ಯಮಪಾಶವನ್ನೂ ಬೀಸಿ ಎಲ್ಲಿಂದ ಬಂದಿದ್ದನೋ
ಅಲ್ಲಿಗೆ ಕೊಂಡೊಯ್ದಿತು. ಆದರೆ ಕೊನೆಯುಸಿರು ಆಡುವತನಕ ಅವನ ಮನಸ್ಸು
ಸ್ವಾಸ್ಥ್ಯದಿಂದಲೇ, ಚುರುಕಾಗಿ, ಜ್ಞಾನಾರ್ಜನೆಯನ್ನು ಮಾಡುತ್ತಿತ್ತು.
೪. ಮಾನಸಿಕ ರೋಗಗಳಿಂದ ಬಲು ಕಾಲ ನರಳಿ ನಿಧನರಾದವರ
ಮೆದುಳನ್ನು ಬಹಳ ಸೂಕ್ಷ್ಮವಾಗಿ ಪರೀಕ್ಷೆಯನ್ನು ಮಾಡಿದಾಗ, ಮೆದುಳಿನಲ್ಲಿ
ಯಾವ ವ್ಯತ್ಯಾಸವೂ ಕಾಣಬರಲಿಲ್ಲ. ಮಾನಸಿಕ ರೋಗಗಳು ಯಾವುವೂ
ಕಾಣಬರದೇ, ನೆಮ್ಮದಿಯಿಂದ ಬಾಳುತ್ತಿದ್ದವರು, ಅಕಸ್ಮಾತ್ ಸತ್ತಾಗ, ಪೊಸ್ಟ್
ಮಾರ್ಟಂ ಅನ್ನು ಮಾಡುತ್ತಾರೆ. ಅಂತಹ ಸಂದರ್ಭಗಳಲ್ಲಿ ಯಾವ ಪೆಟ್ಟೂ
ತಲೆಗೆ ತಗುಲಿರದ ಕೆಲವರ ಮೆದುಳು ಬಹುಪಾಲು ಅವ್ಯವಸ್ಥಿತವಾಗಿರುತ್ತದೆ.
ಸುಮಾರು ಕಾಲದಿಂದಲೂ ಹಾಗೆ ರೋಗ ಪೀಡಿತವಾಗಿತ್ತು ಎನ್ನುವುದಕ್ಕೂ
ಪುರಾವೆಗಳು ದೊರೆಯುತ್ತವೆ.
ಅಂದರೆ ಮೆದುಳಿನ ಅವ್ಯವಸ್ಥೆಗೂ ಮಾನಸಿಕ ಬೇನೆಗಳಿಗೂ ಸಂಬಂಧವನ್ನು
ಕಲ್ಪಿಸುವಂತಿಲ್ಲ. ಆಜನ್ಮಸಿದ್ಧವಾದ ಹಲವು ಮಾನಸಿಕ ವಿಪರೀತದ ಕಾಯಿಲೆಗಳಲ್ಲಿ
ಮೆದುಳಿನ ರಚನೆ ಮತ್ತು ಅಭಿವೃದ್ಧಿಯಲ್ಲಿ ಸಾಕಷ್ಟು ಲೋಪದೋಷಗಳನ್ನು
ಕಾಣಬಹುದು. ಆದರೆ ಬಹಳಷ್ಟು ಮಾನಸಿಕ ಬೇನೆಯಿಂದ ನರಳುವವರ,
ಮೆದುಳು ಚೆನ್ನಾಗಿರುತ್ತದೆ.<noinclude></noinclude>
8w1fydkyr8ff0hm04rvxq57zyhsuqlu
316752
316740
2026-05-04T09:06:50Z
Shreelatha.Halemane
7642
/* Validated */
316752
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ದೇಹ ಮತ್ತು ಮನಸ್ಸಿನ ಸಂಬಂಧ}}{{Right|೨೬೩}}
ನಮ್ಮ ನಂದಳಿಕೆ ಲಕ್ಷ್ಮೀನಾರಣಪ್ಪ ಮುದ್ದು ಮುದ್ದಾಗಿ ಕನ್ನಡದ ಮುದ್ದಣನಾಗಿ
ಬರೆದುದೂ; ಅವರುಗಳು ಕ್ಷಯ ರೋಗದಿಂದ ನರಳಲಾರಂಭಿಸಿದ ಮೊದಮೊದಲ
ಕಾಲದಲ್ಲಿ. ನಮ್ಮ ರಾಷ್ಟ್ರದ ಮೊದಲ ರಾಷ್ಟ್ರಾಧ್ಯಕ್ಷರಾದ ಕೀರ್ತಿಶೇಷ,
ಬಾಬುರಾಜೇಂದ್ರ ಪ್ರಸಾದರು ತೀವ್ರತರದ ಉಬ್ಬಸದಿಂದ ನರಳುತ್ತಿದ್ದರು. ಆದರೂ
ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳೊಂದಿಗೆ, ಆಧ್ಯಾತ್ಮಿಕ ಪ್ರಗತಿಯನ್ನೂ
ಅಮೋಘವಾಗಿ ಸಾಧಿಸಿದರು. ಭಗವದ್ಗೀತೆಗೆ ತಮ್ಮದೇ ಆದ ವಿಮರ್ಶನಾ
ಟೀಕಾವನ್ನು ಬರೆದರು.
{{gap}}J.B.S.Haldane ಎಂಬ ಇಂಗ್ಲೆಂಡಿನ ಪ್ರಚಂಡ ವಿಜ್ಞಾನಿಯೊಬ್ಬನು, ಪಾಶ್ಚಾತ್ಯ
ದೇಶಗಳಲ್ಲಿ ಲೋಕ ಪ್ರಸಿದ್ಧಿಯನ್ನು ಪಡೆದಿದ್ದ. ಆದರೆ ಆತನಿಗೆ ತೃಪ್ತಿಯು
ದೊರಕಲಿಲ್ಲ. FR.S. ಎಂಬ ಅತ್ಯಂತ ಔನ್ನತ್ಯದ ವೈಜ್ಞಾನಿಕ ಮನ್ನಣೆಯನ್ನು
ಗಳಿಸಿದ್ದ. ನಮ್ಮ ಭಾರತಕ್ಕೆ ವಲಸೆಬಂದು, ಭಾರತೀಯ ಪ್ರಜೆಯಾದ. ಕರುಳಿನಲ್ಲಿ
ಅವನಿಗೆ ಅರ್ಬುದ ರೋಗವು ಪ್ರಾರಂಭವಾಯಿತು. ಆ ವಿನಾಶಕಾರೀ ರೋಗವು
ವೃದ್ಧಿಸಿತು. ಅದೇ ಅವನಿಗೆ ಯಮಪಾಶವನ್ನೂ ಬೀಸಿ ಎಲ್ಲಿಂದ ಬಂದಿದ್ದನೋ
ಅಲ್ಲಿಗೆ ಕೊಂಡೊಯ್ದಿತು. ಆದರೆ ಕೊನೆಯುಸಿರು ಆಡುವತನಕ ಅವನ ಮನಸ್ಸು
ಸ್ವಾಸ್ಥ್ಯದಿಂದಲೇ, ಚುರುಕಾಗಿ, ಜ್ಞಾನಾರ್ಜನೆಯನ್ನು ಮಾಡುತ್ತಿತ್ತು.
{{gap}}೪. ಮಾನಸಿಕ ರೋಗಗಳಿಂದ ಬಲು ಕಾಲ ನರಳಿ ನಿಧನರಾದವರ
ಮೆದುಳನ್ನು ಬಹಳ ಸೂಕ್ಷ್ಮವಾಗಿ ಪರೀಕ್ಷೆಯನ್ನು ಮಾಡಿದಾಗ, ಮೆದುಳಿನಲ್ಲಿ
ಯಾವ ವ್ಯತ್ಯಾಸವೂ ಕಾಣಬರಲಿಲ್ಲ. ಮಾನಸಿಕ ರೋಗಗಳು ಯಾವುವೂ
ಕಾಣಬರದೇ, ನೆಮ್ಮದಿಯಿಂದ ಬಾಳುತ್ತಿದ್ದವರು, ಅಕಸ್ಮಾತ್ ಸತ್ತಾಗ, ಪೊಸ್ಟ್
ಮಾರ್ಟಂ ಅನ್ನು ಮಾಡುತ್ತಾರೆ. ಅಂತಹ ಸಂದರ್ಭಗಳಲ್ಲಿ ಯಾವ ಪೆಟ್ಟೂ
ತಲೆಗೆ ತಗುಲಿರದ ಕೆಲವರ ಮೆದುಳು ಬಹುಪಾಲು ಅವ್ಯವಸ್ಥಿತವಾಗಿರುತ್ತದೆ.
ಸುಮಾರು ಕಾಲದಿಂದಲೂ ಹಾಗೆ ರೋಗ ಪೀಡಿತವಾಗಿತ್ತು ಎನ್ನುವುದಕ್ಕೂ
ಪುರಾವೆಗಳು ದೊರೆಯುತ್ತವೆ.
{{gap}}ಅಂದರೆ ಮೆದುಳಿನ ಅವ್ಯವಸ್ಥೆಗೂ ಮಾನಸಿಕ ಬೇನೆಗಳಿಗೂ ಸಂಬಂಧವನ್ನು
ಕಲ್ಪಿಸುವಂತಿಲ್ಲ. ಆಜನ್ಮಸಿದ್ಧವಾದ ಹಲವು ಮಾನಸಿಕ ವಿಪರೀತದ ಕಾಯಿಲೆಗಳಲ್ಲಿ
ಮೆದುಳಿನ ರಚನೆ ಮತ್ತು ಅಭಿವೃದ್ಧಿಯಲ್ಲಿ ಸಾಕಷ್ಟು ಲೋಪದೋಷಗಳನ್ನು
ಕಾಣಬಹುದು. ಆದರೆ ಬಹಳಷ್ಟು ಮಾನಸಿಕ ಬೇನೆಯಿಂದ ನರಳುವವರ,
ಮೆದುಳು ಚೆನ್ನಾಗಿರುತ್ತದೆ.<noinclude></noinclude>
kx0hvyh4asmqjz0bya3gdbjqe9ft3aq
ಪುಟ:ಮನಮಂಥನ.pdf/೨೯೨
104
62739
316741
314457
2026-05-04T08:58:17Z
Shreesha Sharma
7840
/* Proofread */
316741
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೨೭೪}}{{Right|ಮನಮಂಥನ}}
ಈ ಎಲ್ಲ ಕಾರಣಗಳಿಂದ ಇಂದಿನ ವೈಜ್ಞಾನಿಕ ಪ್ರಗತಿಯ ಹಂತದಲ್ಲಿ
ಮನಸ್ಸು ಆರೋಗ್ಯವಾಗಿದ್ದರೆ, ದೇಹವೂ ಆರೋಗ್ಯವಾಗಿರುತ್ತದೆ ಎನ್ನುವ
ದಾರ್ಡ್ಯವನ್ನು ಹೊಂದಬಹುದು.
ಇಂತಹ ವೈಜ್ಞಾನಿಕ ಕಾರಣಗಳಂತಿರಲಿ, ಸುತ್ತಲೂ ಕಣ್ಣು ಬಿಟ್ಟು ನೋಡಿದರೆ
ಬೇಕಾದಷ್ಟು ನಿದರ್ಶನಗಳು ದೊರೆಯುತ್ತವೆ. ಮಹಾತ್ಮಾ ಗಾಂಧೀಯವರ
ದೇಹದಾರ್ಡ್ಯವು ಅಂತಹ ಹೇಳಿಕೊಳ್ಳುವಂತೇನೂ ಇರಲಿಲ್ಲ. ಕೀರ್ತಿಶೇಷ ಕೈಲಾಸಂ
ಒಮ್ಮೆ ನಗೆಯಾಡಿದಂತೆ, ಯಮಕೆ ಗಾಂಧೀ. ಆದರೆ ಅಂತಹ ಬಡಕಲು ದೇಹದಲ್ಲಿ,
ಶಿಸ್ತು ಸಂಯಮಗಳಿಂದ ಸಿದ್ಧಗೊಳಿಸಲ್ಪಟ್ಟ ಮನಸ್ಸು, ಏನೇನೆಲ್ಲವನ್ನೂ ನಮ್ಮ
ಜನತೆಗೆ ಸಾಧಿಸಿಕೊಟ್ಟಿತು ! ದೃಢವಾದ ಮನಸ್ಸು ಇದ್ದುದರಿಂದಲೇ ಹಲವಾರು
ಬಾರಿ ಕೈಗೊಂಡ ಕಠಿಣ ಉಪವಾಸಗಳನ್ನು ಅವರ ದೇಹವು ತಡೆದುಕೊಂಡಿತು.
ಅವರಂತೆಯೇ ಶಿಸ್ತು ಸಂಯಮಗಳಿಂದ, ಯಮ, ನಿಯಮ, ಆಸನ,
ಪ್ರಾಣಾಯಾಮ, ಧಾರಣ ಮತ್ತು ಧ್ಯಾನಗಳಿಂದ ಮನಸ್ಸನ್ನು ಹದಗೊಳಿಸಿದ
ಆಚಾರ್ಯ ವಿನೋಬಾಜೀಯವರ ಸಣಕಲ ದೇಹವು ಲಕ್ಷಾಂತರ
ಕಿಲೋಮೀಟರುಗಳ ಪಾದಯಾತ್ರೆಯನ್ನು ಮಾಡಿತು.
ದೇಹ ಮತ್ತು ಮನಸ್ಸುಗಳ ಪರಸ್ಪರ ಸಂಬಂಧದಲ್ಲಿ, ಇಂದಿನ ಮಾನವನ
ಪ್ರಗತಿ ಹೊಂದಿದ ಮನಸ್ಸು ಹೆಚ್ಚು ಹೊಣೆಯನ್ನು ಹೊಂದಿದೆ.
ಮನುಷ್ಯನು ಸಂಘಜೀವಿ. ಅವನು ಸುರಕ್ಷಿತವಾಗಿರಬೇಕಾಗಿದ್ದರೆ, ಅವನಿರುವ
ಸಮಾಜವೂ ಸುಭದ್ರವಾಗಿರಬೇಕು. ಸಮಾಜದ ಸುಭದ್ರತೆಗೆ ಅವನೂ ಹೊಣೆಯನ್ನು
ಹೊರಬೇಕು. ಸುಭದ್ರವಾಗಿರಬೇಕಾದರೆ ಅಂತಹ ಸಮಾಜವು ಹಲವಾರು
ನಿಯಮಗಳನ್ನೂ ಕಟ್ಟುಪಾಡುಗಳನ್ನೂ ವಿಧಿಸಬೇಕು. ಇವುಗಳಿಗನುಗುಣವಾಗಿ
ಸಭ್ಯ ರೀತಿಯಲ್ಲಿ ವ್ಯಕ್ತಿಯು ನಡೆದುಕೊಳ್ಳಬೇಕು. ಸಭ್ಯ ನಡವಳಿಕೆಯನ್ನು ಸಹಜವಾಗಿ
ನಡೆಸಬೇಕಾದರೆ, ವ್ಯಕ್ತಿಗೆ ಸತ್ ಇಂದ ಪ್ರಭಾವಿತವಾದ ಚಿತ್ತವು, ಅಂದರೆ
ಸಂಯಮದಿಂದ ನಡೆಸಿಕೊಂಡ ಮನಸ್ಸು ಅಣಿಯಾಗಬೇಕು. ದಾಸವರ್ಯರ
'ಸತ್ಚಿತ್ತದಿ ನಡೆದರೆ ಅದೆ ಮಡಿಯು' ಎಂಬ ವಾಕ್ಯದ ಪೂರ್ಣಾರ್ಥವು ಇದು.
ದೇಹ ಮತ್ತು ಮನಸ್ಸಿನ ಪರಸ್ಪರವಾದ ಹಾಗೂ ನಿಕಟವಾದ ಸಂಬಂಧದಲ್ಲಿ;
ಇಂದಿನ ಮಾನವನ ಪ್ರಗತಿಯ ಹಂತದಲ್ಲಿ ಮನಸ್ಸಿನ ಪಾತ್ರವು ಹಿರಿದಾದುದು
ಎಂದು ತಿಳಿದೆವು. ದೇಹಾರೋಗ್ಯವನ್ನು ಕಾಪಾಡಿಕೊಳ್ಳುವಾಗ, ಅಥವಾ
ಸಾಧಿಸುವಾಗ, ಮನಸ್ಸಿನ ಆರೋಗ್ಯಸ್ಥಿತಿಯನ್ನು ಬಲು ಜಾಗ್ರತೆಯಿಂದ
ಕಾಪಾಡಿಕೊಳ್ಳಬೇಕು. ಯಶಸ್ವಿಯಾಗಿ ಹಾಗೆ ಸಾಧಿಸಬೇಕಾದರೆ, ಮನಸ್ಸಿನ<noinclude></noinclude>
lsk363w68oe6wh5kbfkslcc632nxeu4
316753
316741
2026-05-04T09:07:27Z
Shreelatha.Halemane
7642
/* Validated */
316753
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೨೭೪}}{{Right|ಮನಮಂಥನ}}
{{gap}}ಈ ಎಲ್ಲ ಕಾರಣಗಳಿಂದ ಇಂದಿನ ವೈಜ್ಞಾನಿಕ ಪ್ರಗತಿಯ ಹಂತದಲ್ಲಿ
ಮನಸ್ಸು ಆರೋಗ್ಯವಾಗಿದ್ದರೆ, ದೇಹವೂ ಆರೋಗ್ಯವಾಗಿರುತ್ತದೆ ಎನ್ನುವ
ದಾರ್ಡ್ಯವನ್ನು ಹೊಂದಬಹುದು.
{{gap}}ಇಂತಹ ವೈಜ್ಞಾನಿಕ ಕಾರಣಗಳಂತಿರಲಿ, ಸುತ್ತಲೂ ಕಣ್ಣು ಬಿಟ್ಟು ನೋಡಿದರೆ
ಬೇಕಾದಷ್ಟು ನಿದರ್ಶನಗಳು ದೊರೆಯುತ್ತವೆ. ಮಹಾತ್ಮಾ ಗಾಂಧೀಯವರ
ದೇಹದಾರ್ಡ್ಯವು ಅಂತಹ ಹೇಳಿಕೊಳ್ಳುವಂತೇನೂ ಇರಲಿಲ್ಲ. ಕೀರ್ತಿಶೇಷ ಕೈಲಾಸಂ
ಒಮ್ಮೆ ನಗೆಯಾಡಿದಂತೆ, ಯಮಕೆ ಗಾಂಧೀ. ಆದರೆ ಅಂತಹ ಬಡಕಲು ದೇಹದಲ್ಲಿ,
ಶಿಸ್ತು ಸಂಯಮಗಳಿಂದ ಸಿದ್ಧಗೊಳಿಸಲ್ಪಟ್ಟ ಮನಸ್ಸು, ಏನೇನೆಲ್ಲವನ್ನೂ ನಮ್ಮ
ಜನತೆಗೆ ಸಾಧಿಸಿಕೊಟ್ಟಿತು ! ದೃಢವಾದ ಮನಸ್ಸು ಇದ್ದುದರಿಂದಲೇ ಹಲವಾರು
ಬಾರಿ ಕೈಗೊಂಡ ಕಠಿಣ ಉಪವಾಸಗಳನ್ನು ಅವರ ದೇಹವು ತಡೆದುಕೊಂಡಿತು.
ಅವರಂತೆಯೇ ಶಿಸ್ತು ಸಂಯಮಗಳಿಂದ, ಯಮ, ನಿಯಮ, ಆಸನ,
ಪ್ರಾಣಾಯಾಮ, ಧಾರಣ ಮತ್ತು ಧ್ಯಾನಗಳಿಂದ ಮನಸ್ಸನ್ನು ಹದಗೊಳಿಸಿದ
ಆಚಾರ್ಯ ವಿನೋಬಾಜೀಯವರ ಸಣಕಲ ದೇಹವು ಲಕ್ಷಾಂತರ
ಕಿಲೋಮೀಟರುಗಳ ಪಾದಯಾತ್ರೆಯನ್ನು ಮಾಡಿತು.
{{gap}}ದೇಹ ಮತ್ತು ಮನಸ್ಸುಗಳ ಪರಸ್ಪರ ಸಂಬಂಧದಲ್ಲಿ, ಇಂದಿನ ಮಾನವನ
ಪ್ರಗತಿ ಹೊಂದಿದ ಮನಸ್ಸು ಹೆಚ್ಚು ಹೊಣೆಯನ್ನು ಹೊಂದಿದೆ.
{{gap}}ಮನುಷ್ಯನು ಸಂಘಜೀವಿ. ಅವನು ಸುರಕ್ಷಿತವಾಗಿರಬೇಕಾಗಿದ್ದರೆ, ಅವನಿರುವ
ಸಮಾಜವೂ ಸುಭದ್ರವಾಗಿರಬೇಕು. ಸಮಾಜದ ಸುಭದ್ರತೆಗೆ ಅವನೂ ಹೊಣೆಯನ್ನು
ಹೊರಬೇಕು. ಸುಭದ್ರವಾಗಿರಬೇಕಾದರೆ ಅಂತಹ ಸಮಾಜವು ಹಲವಾರು
ನಿಯಮಗಳನ್ನೂ ಕಟ್ಟುಪಾಡುಗಳನ್ನೂ ವಿಧಿಸಬೇಕು. ಇವುಗಳಿಗನುಗುಣವಾಗಿ
ಸಭ್ಯ ರೀತಿಯಲ್ಲಿ ವ್ಯಕ್ತಿಯು ನಡೆದುಕೊಳ್ಳಬೇಕು. ಸಭ್ಯ ನಡವಳಿಕೆಯನ್ನು ಸಹಜವಾಗಿ
ನಡೆಸಬೇಕಾದರೆ, ವ್ಯಕ್ತಿಗೆ ಸತ್ ಇಂದ ಪ್ರಭಾವಿತವಾದ ಚಿತ್ತವು, ಅಂದರೆ
ಸಂಯಮದಿಂದ ನಡೆಸಿಕೊಂಡ ಮನಸ್ಸು ಅಣಿಯಾಗಬೇಕು. ದಾಸವರ್ಯರ
'ಸತ್ಚಿತ್ತದಿ ನಡೆದರೆ ಅದೆ ಮಡಿಯು' ಎಂಬ ವಾಕ್ಯದ ಪೂರ್ಣಾರ್ಥವು ಇದು.
{{gap}}ದೇಹ ಮತ್ತು ಮನಸ್ಸಿನ ಪರಸ್ಪರವಾದ ಹಾಗೂ ನಿಕಟವಾದ ಸಂಬಂಧದಲ್ಲಿ;
ಇಂದಿನ ಮಾನವನ ಪ್ರಗತಿಯ ಹಂತದಲ್ಲಿ ಮನಸ್ಸಿನ ಪಾತ್ರವು ಹಿರಿದಾದುದು
ಎಂದು ತಿಳಿದೆವು. ದೇಹಾರೋಗ್ಯವನ್ನು ಕಾಪಾಡಿಕೊಳ್ಳುವಾಗ, ಅಥವಾ
ಸಾಧಿಸುವಾಗ, ಮನಸ್ಸಿನ ಆರೋಗ್ಯಸ್ಥಿತಿಯನ್ನು ಬಲು ಜಾಗ್ರತೆಯಿಂದ
ಕಾಪಾಡಿಕೊಳ್ಳಬೇಕು. ಯಶಸ್ವಿಯಾಗಿ ಹಾಗೆ ಸಾಧಿಸಬೇಕಾದರೆ, ಮನಸ್ಸಿನ<noinclude></noinclude>
0kk48k7mks3d4ddt6nlkpxvc8fnsyp3
ಪುಟ:ಮನಮಂಥನ.pdf/೨೯೩
104
62740
316742
314458
2026-05-04T08:59:00Z
Shreesha Sharma
7840
/* Proofread */
316742
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ದೇಹ ಮತ್ತು ಮನಸ್ಸಿನ ಸಂಬಂಧ}}{{Right|೨೭೫}}
ಸ್ವರೂಪವನ್ನೂ ವಿಧವಿಧವಾದ ಅದರ ಚಟುವಟಿಕೆಗಳನ್ನೂ ಹಾಗೂ
ಅವ್ಯವಸ್ಥಿತವಾಗಲು ಕಾರಣಗಳನ್ನೂ ತಿಳಿದುಕೊಳ್ಳಬೇಕು. ಅನಂತರ ಮಾನಸಿಕ
ಸ್ವಾಸ್ಥ್ಯವನ್ನು ಸಾಧಿಸಿಕೊಳ್ಳುವುದು ಸುಲಭವಾಗುತ್ತದೆ.<noinclude></noinclude>
5i0zkal938wa3w0ge61ovt3lo6unmqz
316754
316742
2026-05-04T09:07:40Z
Shreelatha.Halemane
7642
/* Validated */
316754
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ದೇಹ ಮತ್ತು ಮನಸ್ಸಿನ ಸಂಬಂಧ}}{{Right|೨೭೫}}
ಸ್ವರೂಪವನ್ನೂ ವಿಧವಿಧವಾದ ಅದರ ಚಟುವಟಿಕೆಗಳನ್ನೂ ಹಾಗೂ
ಅವ್ಯವಸ್ಥಿತವಾಗಲು ಕಾರಣಗಳನ್ನೂ ತಿಳಿದುಕೊಳ್ಳಬೇಕು. ಅನಂತರ ಮಾನಸಿಕ
ಸ್ವಾಸ್ಥ್ಯವನ್ನು ಸಾಧಿಸಿಕೊಳ್ಳುವುದು ಸುಲಭವಾಗುತ್ತದೆ.<noinclude></noinclude>
3z50tf7ktw8lczqnj4r62qtgcke58mn
ಪುಟ:ಮನಮಂಥನ.pdf/೨೯೪
104
62741
316743
314459
2026-05-04T09:00:27Z
Shreesha Sharma
7840
/* Proofread */
316743
proofread-page
text/x-wiki
<noinclude><pagequality level="3" user="Shreesha Sharma" /></noinclude>{{Right|ಮನಮಂಥನ}}
{{center|'''೨. ಮನಸ್ಸಿನ ಸ್ವರೂಪ'''}}
ಮನಸ್ಸು ಎಂದರೇನು ? ಯಾವುದರ ನೆರವಿನಿಂದ ನಾವು ಆಲೋಚಿಸು
ತ್ತೇವೆಯೋ ಅದನ್ನು ಮನಸ್ಸು ಎನ್ನಬೇಕು. ಆಲೋಚನೆಗಳು ಎಂದರೆ ಏನು ?
ಮನಸ್ಸಿನಲ್ಲಿ ತೋರಿಬರುವ ವಿಶೇಷಗಳು ಎನ್ನಬೇಕು. ಒಂದು ಪ್ರಶ್ನೆಯನ್ನು
ಬಿಡಿಸಲಾಗದೆ ಇನ್ನೊಂದು ಪ್ರಶ್ನೆಯಿಂದ ಉತ್ತರಿಸಿದಂತಾಯಿತು. ಆದುದರಿಂದಲೇ
ಅಮೆರಿಕಾದ ಸುಪ್ರಸಿದ್ಧ ಮನನಿಗ-ನಗೆಗಾರ Ambrose Bierce ತನ್ನ Devil's
Dictionary ಯಲ್ಲಿ ಮನಸ್ಸನ್ನು ಈ ರೀತಿ ವರ್ಣಿಸಿದ್ದಾರೆ. Mind: The thing
with which we think, we think, ಮನಸ್ಸು ಎಂಬುದರ ಸಮಸ್ಯೆಯನ್ನು ಈ
ವಾಕ್ಯವು ಎತ್ತಿ ತೋರಿಸುತ್ತದೆ. ಇಂತಹ ಸಮಸ್ಯೆಗಳನ್ನು ಬಿಡಿಸುವ ಗೋಜು
ವೇದಾಂತಿಗಳದು. ನಮ್ಮ ಮನಸ್ಸು ಸ್ವಸ್ಥವಾಗಿರಬೇಕು ; ಆ ಕಾರಣದಿಂದ
ಮನಸ್ಸು ಎನ್ನುವುದನ್ನು ಯೋಚಿಸುವ ಹಾಗೂ ಸ್ಮರಣೆಯಲ್ಲಿಟ್ಟುಕೊಳ್ಳುವ, ಒಂದು
ತೆರನ ಶಕ್ತಿ ಎಂದು ಹೇಳಬಹುದು. ನಮ್ಮ ದಿನದಿನದ ಅನುಭವಕ್ಕೆ ಈ ವಿವರಣೆಯು
ಹೊಂದಿಕೊಳ್ಳುತ್ತದೆ.
ಒಂದು ಉದಾಹರಣೆಯಿಂದ ಮನಸ್ಸಿನ ಹಲವಾರು ತೆರನ
ಚಟುವಟಿಕೆಗಳನ್ನು ತಿಳಿಯುವ :
ಬೇಸಿಗೆಯ ರಜದಲ್ಲಿ ನನ್ನ ಅಜ್ಜಯ್ಯನನ್ನು ನೋಡಿಕೊಂಡು ಬರಲು
ಹಳ್ಳಿಗೆ ಹೋದೆ. ಅಜ್ಜಯ್ಯನನ್ನು ನೋಡಿಕೊಂಡು ಬರುವುದು ಒಂದು ಆಸೆ.
ಆಸೆಯೇ ಯೋಚನೆಯಾಯಿತು. ಈ ಯೋಚನೆಯನ್ನು ಕಾರ್ಯಗತ ಮಾಡಲು
ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಂದರೆ ಒಂದರಿಂದ ಇನ್ನೊಂದು
ಸಂಬಂಧವನ್ನು ಹೊಂದುವಂತೆ ಯೋಚನೆಗಳನ್ನು ಮಾಡಬೇಕು. ಇಂತಹ
ರೈಲಿನಲ್ಲಿ ಇಷ್ಟು ಹೊತ್ತಿಗೆ ಹೊರಟರೆ, ಅಜ್ಜಯ್ಯನ ಹಳ್ಳಿಯ ಹತ್ತಿರ ಇರುವ
ಸ್ಟೇಷನ್ನಿಗೆ ತಲಪುತ್ತೇನೆ. ಅಲ್ಲಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ
ಹಳ್ಳಿಗೆ ನಡೆಯಬೇಕು. ಹಳ್ಳಿಯ ಕಡೆಯ ರಸ್ತೆಗಳು ; ಅಂದರೆ ರಸ್ತೆಗಳೇ ಇಲ್ಲ.
ಚಪ್ಪಲಿಗಳನ್ನು ಮೆಟ್ಟಿಕೊಂಡು ಅಷ್ಟು ದೂರ ನಡೆದು ಅಭ್ಯಾಸವಿಲ್ಲ. ಬರೀ
ಕಾಲುಗಳಲ್ಲಿ ನಡೆಯುವುದನಕ ಅಸಾಧ್ಯ. ಆದ್ದರಿಂದ ಹೂಗಳನ್ನು ಹಾಕಿಕೊಂಡು<noinclude></noinclude>
axtjbb5v3zqfbujims7eq0pv80cx8rs
316755
316743
2026-05-04T09:08:04Z
Shreelatha.Halemane
7642
/* Validated */
316755
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Right|ಮನಮಂಥನ}}
{{center|'''೨. ಮನಸ್ಸಿನ ಸ್ವರೂಪ'''}}
{{gap}}ಮನಸ್ಸು ಎಂದರೇನು ? ಯಾವುದರ ನೆರವಿನಿಂದ ನಾವು ಆಲೋಚಿಸು
ತ್ತೇವೆಯೋ ಅದನ್ನು ಮನಸ್ಸು ಎನ್ನಬೇಕು. ಆಲೋಚನೆಗಳು ಎಂದರೆ ಏನು ?
ಮನಸ್ಸಿನಲ್ಲಿ ತೋರಿಬರುವ ವಿಶೇಷಗಳು ಎನ್ನಬೇಕು. ಒಂದು ಪ್ರಶ್ನೆಯನ್ನು
ಬಿಡಿಸಲಾಗದೆ ಇನ್ನೊಂದು ಪ್ರಶ್ನೆಯಿಂದ ಉತ್ತರಿಸಿದಂತಾಯಿತು. ಆದುದರಿಂದಲೇ
ಅಮೆರಿಕಾದ ಸುಪ್ರಸಿದ್ಧ ಮನನಿಗ-ನಗೆಗಾರ Ambrose Bierce ತನ್ನ Devil's
Dictionary ಯಲ್ಲಿ ಮನಸ್ಸನ್ನು ಈ ರೀತಿ ವರ್ಣಿಸಿದ್ದಾರೆ. Mind: The thing
with which we think, we think, ಮನಸ್ಸು ಎಂಬುದರ ಸಮಸ್ಯೆಯನ್ನು ಈ
ವಾಕ್ಯವು ಎತ್ತಿ ತೋರಿಸುತ್ತದೆ. ಇಂತಹ ಸಮಸ್ಯೆಗಳನ್ನು ಬಿಡಿಸುವ ಗೋಜು
ವೇದಾಂತಿಗಳದು. ನಮ್ಮ ಮನಸ್ಸು ಸ್ವಸ್ಥವಾಗಿರಬೇಕು ; ಆ ಕಾರಣದಿಂದ
ಮನಸ್ಸು ಎನ್ನುವುದನ್ನು ಯೋಚಿಸುವ ಹಾಗೂ ಸ್ಮರಣೆಯಲ್ಲಿಟ್ಟುಕೊಳ್ಳುವ, ಒಂದು
ತೆರನ ಶಕ್ತಿ ಎಂದು ಹೇಳಬಹುದು. ನಮ್ಮ ದಿನದಿನದ ಅನುಭವಕ್ಕೆ ಈ ವಿವರಣೆಯು
ಹೊಂದಿಕೊಳ್ಳುತ್ತದೆ.
{{gap}}ಒಂದು ಉದಾಹರಣೆಯಿಂದ ಮನಸ್ಸಿನ ಹಲವಾರು ತೆರನ
ಚಟುವಟಿಕೆಗಳನ್ನು ತಿಳಿಯುವ :
{{gap}}ಬೇಸಿಗೆಯ ರಜದಲ್ಲಿ ನನ್ನ ಅಜ್ಜಯ್ಯನನ್ನು ನೋಡಿಕೊಂಡು ಬರಲು
ಹಳ್ಳಿಗೆ ಹೋದೆ. ಅಜ್ಜಯ್ಯನನ್ನು ನೋಡಿಕೊಂಡು ಬರುವುದು ಒಂದು ಆಸೆ.
ಆಸೆಯೇ ಯೋಚನೆಯಾಯಿತು. ಈ ಯೋಚನೆಯನ್ನು ಕಾರ್ಯಗತ ಮಾಡಲು
ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಂದರೆ ಒಂದರಿಂದ ಇನ್ನೊಂದು
ಸಂಬಂಧವನ್ನು ಹೊಂದುವಂತೆ ಯೋಚನೆಗಳನ್ನು ಮಾಡಬೇಕು. ಇಂತಹ
ರೈಲಿನಲ್ಲಿ ಇಷ್ಟು ಹೊತ್ತಿಗೆ ಹೊರಟರೆ, ಅಜ್ಜಯ್ಯನ ಹಳ್ಳಿಯ ಹತ್ತಿರ ಇರುವ
ಸ್ಟೇಷನ್ನಿಗೆ ತಲಪುತ್ತೇನೆ. ಅಲ್ಲಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ
ಹಳ್ಳಿಗೆ ನಡೆಯಬೇಕು. ಹಳ್ಳಿಯ ಕಡೆಯ ರಸ್ತೆಗಳು ; ಅಂದರೆ ರಸ್ತೆಗಳೇ ಇಲ್ಲ.
ಚಪ್ಪಲಿಗಳನ್ನು ಮೆಟ್ಟಿಕೊಂಡು ಅಷ್ಟು ದೂರ ನಡೆದು ಅಭ್ಯಾಸವಿಲ್ಲ. ಬರೀ
ಕಾಲುಗಳಲ್ಲಿ ನಡೆಯುವುದನಕ ಅಸಾಧ್ಯ. ಆದ್ದರಿಂದ ಹೂಗಳನ್ನು ಹಾಕಿಕೊಂಡು<noinclude></noinclude>
begpre34rgbpa77ll6jdxethywgt4jk
ಪುಟ:ಮನಮಂಥನ.pdf/೨೯೫
104
62742
316744
314460
2026-05-04T09:01:14Z
Shreesha Sharma
7840
/* Proofread */
316744
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಮನಸ್ಸಿನ ಸ್ವರೂಪ}}{{Right|೨೭೭}}
ಹೋಗಬೇಕು. ಅಲ್ಲಿ ಒಂದು ವಾರ ಇರುವ ಏರ್ಪಾಡು. ಹಳ್ಳಿಯಲ್ಲಿ ಲಾಂಡ್ರಿ
ಇರುವುದಿಲ್ಲ. ಆದಕಾರಣ ವಾರಕ್ಕೆ ಅಗತ್ಯವಾದಷ್ಟು ಬಟ್ಟೆಗಳನ್ನು ತೆಗೆದುಕೊಂಡು
ಹೋಗಬೇಕು. ಇದೂ ಮಿತಿಯಲ್ಲಿರಬೇಕು. ಏಕೆಂದರೆ ಸೂಟ್ಕೇಸನ್ನು ನಾನೇ
ಹೊತ್ತುಕೊಂಡು ನಡೆಯಬೇಕು. ಹೀಗೆಲ್ಲಾ ವಿವರವಾಗಿ ಯೋಚಿಸಿ ಸಾಮಾನುಗಳ
ಪಟ್ಟಿಯನ್ನು ಬರೆದಿಡುತ್ತೇನೆ.
ಅಂದರೆ ನನ್ನ ಮನಸ್ಸು : ನನ್ನ ಪ್ರಮಾಣದ, ನನ್ನ ರಜೆಯ ಅವಧಿಯ,
ಎಲ್ಲಾ ಯೋಚನೆಗಳನ್ನೂ ನಿಖರವಾಗಿ ಮಾಡಿತು. 'ನಿನ್ನ ಆಸೆ ಆಕಾಂಕ್ಷೆಯು
ಸಫಲವಾಗಬೇಕಾದರೆ ಹೀಗೆ ಹೀಗೆ ಮಾಡು ಎಂದು ನಿರ್ಧರಿಸಿತು.
ಅನುಕೂಲಗಳನ್ನು ಮತ್ತು ಪ್ರತಿಕೂಲಗಳನ್ನು ತುಲನಾತ್ಮಕವಾಗಿ ಯೋಚಿಸುವುದು
ಮನಸ್ಸಿನ ಒಂದು ಕಾರ್ಯ. ಅನಂತರ ನಿರ್ಧಾರವನ್ನು ಕೈಗೊಳ್ಳುವುದು ಇನ್ನೊಂದು
ಕಾರ್ಯ.
ಅಜ್ಜಯ್ಯನ ಮನೆಗೆ ಹೋದೆ. ಎಂಭತ್ತಾರರ ಪ್ರಾಯ ಅಜ್ಜಯ್ಯನಿಗೆ.
ಆದರೂ ನನ್ನ ಗುರುತನ್ನು ಹತ್ತು ವರ್ಷಗಳ ನಂತರ, ಸುಲಭವಾಗಿ ಹಿಡಿದು,
ಯೋಗಕ್ಷೇಮವನ್ನು ವಿಚಾರಿಸಿದರು. ನನ್ನ ತಂದೆ, ತಾಯಿ, ಅಣ್ಣ ತಮ್ಮಂದಿರು,
ಅಕ್ಕ ತಂಗಿಯರು, ಎಲ್ಲರ ಹೆಸರುಗಳನ್ನು ಹೇಳಿ, ಈಗ ಏನು ಮಾಡಿಕೊಂಡಿದ್ದಾರೆ,
ಎಷ್ಟು ಜನ ಮಕ್ಕಳು, ಇತ್ಯಾದಿ ಯೋಗಕ್ಷೇಮವನ್ನು ಕೇಳಿದರು. ಮುಪ್ಪಿನ
ಮುದುಕರಾದರೂ ಎಲ್ಲರ ಹೆಸರುಗಳನ್ನೂ ನೆನಪಿನಲ್ಲಿಟ್ಟುಕೊಂಡಿದ್ದಾರಲ್ಲಾ ಎಂದು
ಆಶ್ಚರ್ಯವಾಯಿತು.
ಆದರೆ ಮುಂದಿನ ಹತ್ತು ನಿಮಿಷಗಳಲ್ಲಿ ಕೇಳಿದ್ದನ್ನೇ ಕೇಳಿದರು. ಗೆರೆ
ತಪ್ಪಿದ ಗ್ರಾಮೋಫೋನ್ ರಿಕಾರ್ಡು, ಬಂದನೋ, ಬಂದನೋ, ಬಂದನೋ
ಅಂತ ಕಿಸುಬಾಯಿದಾಸನ ತರಹ ಹೊಡೆದುಕೊಳ್ಳುವುದಿಲ್ಲವೇ, ಅದರಂತೆಯೇ
ಅಜ್ಜಯ್ಯನೂ ಕೇಳಿದ್ದನ್ನೇ ಕೇಳಲಾರಂಭಿಸಿದ. ಪುನಃ ಪುನಃ ಕೇಳಿದ. ಹಿಂದೆ
ಎಂದೋ ನಡೆದಿದ್ದ ವಿಷಯಗಳ ನೆನಪು ಅಜ್ಜಯ್ಯನ ಮನಸ್ಸಿನಲ್ಲಿ ಹಚ್ಚ ಹಸುರಾಗಿ
ಉಳಿದಿದೆ. ಆದರೆ ಈಗ ತಾನೇ ಪ್ರಶ್ನೆಯನ್ನು ಕೇಳಿದೆ ಎಂಬ ನೆನಪು ಉಳಿದೇ
ಇಲ್ಲ. ಎಂದನಿಸಿತು.
ಸ್ಮರಣೆಯಲ್ಲಿಟ್ಟುಕೊಳ್ಳುವುದು ; ಅಗತ್ಯ ಬಿದ್ದಾಗ ನೆನಪಿಗೆ ತಂದುಕೊಂಡು
ಉಪಯೋಗಿಸಿಕೊಳ್ಳುವುದೂ ಮನಸ್ಸಿನ ಮುಖ್ಯ ಕಾರ್ಯಗಳಲ್ಲಿ ಒಂದು.<noinclude></noinclude>
h9r39zfs5n40dfqdcimza11si8xuuto
316756
316744
2026-05-04T09:08:31Z
Shreelatha.Halemane
7642
/* Validated */
316756
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಮನಸ್ಸಿನ ಸ್ವರೂಪ}}{{Right|೨೭೭}}
ಹೋಗಬೇಕು. ಅಲ್ಲಿ ಒಂದು ವಾರ ಇರುವ ಏರ್ಪಾಡು. ಹಳ್ಳಿಯಲ್ಲಿ ಲಾಂಡ್ರಿ
ಇರುವುದಿಲ್ಲ. ಆದಕಾರಣ ವಾರಕ್ಕೆ ಅಗತ್ಯವಾದಷ್ಟು ಬಟ್ಟೆಗಳನ್ನು ತೆಗೆದುಕೊಂಡು
ಹೋಗಬೇಕು. ಇದೂ ಮಿತಿಯಲ್ಲಿರಬೇಕು. ಏಕೆಂದರೆ ಸೂಟ್ಕೇಸನ್ನು ನಾನೇ
ಹೊತ್ತುಕೊಂಡು ನಡೆಯಬೇಕು. ಹೀಗೆಲ್ಲಾ ವಿವರವಾಗಿ ಯೋಚಿಸಿ ಸಾಮಾನುಗಳ
ಪಟ್ಟಿಯನ್ನು ಬರೆದಿಡುತ್ತೇನೆ.
{{gap}}ಅಂದರೆ ನನ್ನ ಮನಸ್ಸು : ನನ್ನ ಪ್ರಮಾಣದ, ನನ್ನ ರಜೆಯ ಅವಧಿಯ,
ಎಲ್ಲಾ ಯೋಚನೆಗಳನ್ನೂ ನಿಖರವಾಗಿ ಮಾಡಿತು. 'ನಿನ್ನ ಆಸೆ ಆಕಾಂಕ್ಷೆಯು
ಸಫಲವಾಗಬೇಕಾದರೆ ಹೀಗೆ ಹೀಗೆ ಮಾಡು ಎಂದು ನಿರ್ಧರಿಸಿತು.
ಅನುಕೂಲಗಳನ್ನು ಮತ್ತು ಪ್ರತಿಕೂಲಗಳನ್ನು ತುಲನಾತ್ಮಕವಾಗಿ ಯೋಚಿಸುವುದು
ಮನಸ್ಸಿನ ಒಂದು ಕಾರ್ಯ. ಅನಂತರ ನಿರ್ಧಾರವನ್ನು ಕೈಗೊಳ್ಳುವುದು ಇನ್ನೊಂದು
ಕಾರ್ಯ.
{{gap}}ಅಜ್ಜಯ್ಯನ ಮನೆಗೆ ಹೋದೆ. ಎಂಭತ್ತಾರರ ಪ್ರಾಯ ಅಜ್ಜಯ್ಯನಿಗೆ.
ಆದರೂ ನನ್ನ ಗುರುತನ್ನು ಹತ್ತು ವರ್ಷಗಳ ನಂತರ, ಸುಲಭವಾಗಿ ಹಿಡಿದು,
ಯೋಗಕ್ಷೇಮವನ್ನು ವಿಚಾರಿಸಿದರು. ನನ್ನ ತಂದೆ, ತಾಯಿ, ಅಣ್ಣ ತಮ್ಮಂದಿರು,
ಅಕ್ಕ ತಂಗಿಯರು, ಎಲ್ಲರ ಹೆಸರುಗಳನ್ನು ಹೇಳಿ, ಈಗ ಏನು ಮಾಡಿಕೊಂಡಿದ್ದಾರೆ,
ಎಷ್ಟು ಜನ ಮಕ್ಕಳು, ಇತ್ಯಾದಿ ಯೋಗಕ್ಷೇಮವನ್ನು ಕೇಳಿದರು. ಮುಪ್ಪಿನ
ಮುದುಕರಾದರೂ ಎಲ್ಲರ ಹೆಸರುಗಳನ್ನೂ ನೆನಪಿನಲ್ಲಿಟ್ಟುಕೊಂಡಿದ್ದಾರಲ್ಲಾ ಎಂದು
ಆಶ್ಚರ್ಯವಾಯಿತು.
{{gap}}ಆದರೆ ಮುಂದಿನ ಹತ್ತು ನಿಮಿಷಗಳಲ್ಲಿ ಕೇಳಿದ್ದನ್ನೇ ಕೇಳಿದರು. ಗೆರೆ
ತಪ್ಪಿದ ಗ್ರಾಮೋಫೋನ್ ರಿಕಾರ್ಡು, ಬಂದನೋ, ಬಂದನೋ, ಬಂದನೋ
ಅಂತ ಕಿಸುಬಾಯಿದಾಸನ ತರಹ ಹೊಡೆದುಕೊಳ್ಳುವುದಿಲ್ಲವೇ, ಅದರಂತೆಯೇ
ಅಜ್ಜಯ್ಯನೂ ಕೇಳಿದ್ದನ್ನೇ ಕೇಳಲಾರಂಭಿಸಿದ. ಪುನಃ ಪುನಃ ಕೇಳಿದ. ಹಿಂದೆ
ಎಂದೋ ನಡೆದಿದ್ದ ವಿಷಯಗಳ ನೆನಪು ಅಜ್ಜಯ್ಯನ ಮನಸ್ಸಿನಲ್ಲಿ ಹಚ್ಚ ಹಸುರಾಗಿ
ಉಳಿದಿದೆ. ಆದರೆ ಈಗ ತಾನೇ ಪ್ರಶ್ನೆಯನ್ನು ಕೇಳಿದೆ ಎಂಬ ನೆನಪು ಉಳಿದೇ
ಇಲ್ಲ. ಎಂದನಿಸಿತು.
{{gap}}ಸ್ಮರಣೆಯಲ್ಲಿಟ್ಟುಕೊಳ್ಳುವುದು ; ಅಗತ್ಯ ಬಿದ್ದಾಗ ನೆನಪಿಗೆ ತಂದುಕೊಂಡು
ಉಪಯೋಗಿಸಿಕೊಳ್ಳುವುದೂ ಮನಸ್ಸಿನ ಮುಖ್ಯ ಕಾರ್ಯಗಳಲ್ಲಿ ಒಂದು.<noinclude></noinclude>
odvpglh1p4tdou3p9saga62g2dj4c85
ಪುಟ:ಮನಮಂಥನ.pdf/೨೯೬
104
62743
316745
314461
2026-05-04T09:02:28Z
Shreesha Sharma
7840
/* Proofread */
316745
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೨೭೮}}{{Right|ಮನಮಂಥನ}}
'ಶೃಂಗದಾ ಬೆನ್ನೇರಿ ಬಂತು. ಕಲ್ಪನಾ ವಿಲಾಸ' ಎಂದು ಕವಿ ಬೇಂದ್ರೆ
ಹಾಡಿದರು. ಕವಿಯ ಮನಸ್ಸಿನ ಕಲ್ಪನೆಯು ಹಾಡಾಗಿ ಹೊರ ಹೊಮ್ಮುವಾಗ
ಮಧುವನ್ನರಸುವ ದುಂಬಿಯ ಝೇಂಕಾರದಂತೆ ಮೂಡಿಬರುತ್ತದೆಯಂತೆ. ಎಷ್ಟು
ಚೆನ್ನಾಗಿ ನುಡಿದಿದ್ದಾರೆ ಅನ್ನಿಸುತ್ತೆ ನಿಮಗೆ. ಅಯ್ಯೋ ! ಈ ತೆರನಾಗಿ ನಾವು
ಹಾಡನ್ನು ಏಕೆ ಕಟ್ಟಬಾರದು ? ಅಂತಹ ಯೋಗ್ಯತೆಯು ನಮಗೇಕೆ ಬರಲಿಲ್ಲ
ಎಂದು ತುಸು ವ್ಯಸನವೂ ಆಗುವುದು. ತುಂಬಾ ವಿಚಾರವನ್ನು ನಡೆಸಿದ ನಂತರ
ಬೇಂದ್ರೆಯವರ ಮನಸ್ಸಿನಲ್ಲಿ ಈ ನುಡಿಗಳು ಮೂಡಲಿಲ್ಲ ಭಾವನೆಯು-Emotions -
ಅವರ ಅಂತಃಕರಣವನ್ನು ತುಂಬಿಕೊಂಡಿತು. ಕಡೆದ ಮೊಸರಲ್ಲಿ
ಬೆಣ್ಣೆಯು ತೇಲಿ ಬರುವಂತೆ, ಭಾವನಾ ಮನಸ್ಸಿನಿಂದ ಈ ನುಡಿಗಳು ತಾವಾಗಿ
ತಾವೇ ಮೂಡಿಬಂದುವು. ಮನಸ್ಸಿನ ಚಟುವಟಿಕೆಗಳಲ್ಲಿ ಭಾವ ರಾಗ ದ್ವೇಷಾದಿಗಳೂ
ಪಾತ್ರವನ್ನು ವಹಿಸುತ್ತವೆ. ಮನಸ್ಸಿನ ಈ ಗುಣವನ್ನು ಸ್ಫೂರ್ತಿ ಎಂದೆನ್ನುತ್ತಾರೆ.
ತನ್ನ ಇಷ್ಟದಂತೆ ಮೂಡಿ ಬರುವ, ನಮ್ಮ ಇಷ್ಟದಂತೆ ನಡೆಯದೇ ಇರುವ,
ಸ್ಫೂರ್ತಿಯೂ ಮನಸ್ಸಿನ ಒಂದು ಪ್ರದರ್ಶನ, ಕೆಲವೇ ಮಂದಿಗೆ ಲಭಿಸುವ,
ಗುಣ.
ನ್ಯೂಟನ್ನನ ಕತೆಯನ್ನು ಎಲ್ಲರೂ ಕೇಳಿದ್ದಾರೆ. ಸೇಬಿನ ಮರದ ಕೆಳಗೆ
ಅವಕುಳಿತಿದ್ದ, ಅಥವಾ ನೆರಳಿನಲ್ಲಿ ಮಲಗಿದ್ದರೂ ಇರಬಹುದು. ಅಥವಾ ಅನತಿ
ದೂರದಲ್ಲಿ ನಿಂತೋ ನಡೆದೋ ಇದ್ದಿರಬಹುದು. ಮರದಿಂದ ಸೇಬು ಕೆಳಕ್ಕೆ,
ನೆಲದ ಮೇಲೆ ಬಿತ್ತು. ಹೀಗೇನಾದರೂ ನನಗೆ ಆಗಿದ್ದಿದ್ದರೆ, ಆ ಸೇಬಿನ ಹಣ್ಣನ್ನು
ತೆಗೆದುಕೊಂಡು, ಕೊಳೆತಿದೆಯೋ ಇಲ್ಲವೋ ನೋಡಿಕೊಂಡು, ತಿಂದು ಬಿಡುತ್ತಿದ್ದೆ.
ಲೊಟ್ಟೆಯನ್ನು ಹೊಡೆಯುತ್ತಿದ್ದೆ. ಆದರೆ ಸರ್ ಐಸೆಕ್ ನ್ಯೂಟನ್ ಹಾಗೆ ಮಾಲಿಲ್ಲ.
ಭೂಮಿಯಮೇಲಕ್ಕೆ ಮರದಿಂದ ಸೇಬಿನ ಹಣ್ಣು ಏಕೆ ಬಿತ್ತು, ಎಂದು ಅವನ
ಕುತೂಹಲವು ಕೆರಳಿತು. 'ಮರವು ಹಣ್ಣನ್ನು ದೂಡಿತೇ? ಅಥವಾ ಭೂಮಿಯು
ಹಣ್ಣನ್ನು ಸೆಳೆದುಕೊಂಡಿತೆ'? ಎಂದು ಅವನ ವಿಚಾರಪರ ಮನಸ್ಸು,
ಕುತೂಹಲದಿಂದ ಕೆರಳಿತು. ಕುತೂಹಲವನ್ನು ನೆಮ್ಮದಿಗೊಳಿಸಲು, ಮನಸ್ಸನ್ನು
ತೃಪ್ತಿಗೊಳಿಸಲು, ಅವ ಸಂಶೋಧನೆಯಲ್ಲಿ ತೊಡಗಿದ. ಗುರುತ್ವಾಕರ್ಷಣೆಯ
ಸಿದ್ಧಾಂತವನ್ನು ಪ್ರಕಟಿಸಿದ. ಸೇಬಿನ ಹಣ್ಣು ಭೂಮಿಯನ್ನು ಆಕರ್ಷಿಸಿತು.
ಭೂಮಿಯು ಸೇಬನ್ನು ಆಕರ್ಷಿಸಿತು. ಇದು ಪರಸ್ಪರ ಆಕರ್ಷಣೆ. ಆಕರ್ಷಣೆಯ
ಪ್ರಮಾಣವು ಆಕರ್ಷಿಸುವ ವಸ್ತುವಿನ ಗಾತ್ರಕ್ಕೆ ಅನುಗುಣವಾಗಿರುತ್ತದೆ. ಭೂಮಿಯ
ಗಾತ್ರವು, ಸೇಬಿನ ಹಣ್ಣಿನ ಗಾತ್ರಕ್ಕಿಂತ ಕೊಟ್ಯಂತರ ಪಾಲು ಹೆಚ್ಚು. ಆದಕಾರಣ<noinclude></noinclude>
2k9o5ujb38f1ejxpsqhe77i9th5u4ud
316758
316745
2026-05-04T09:09:36Z
Shreelatha.Halemane
7642
/* Validated */
316758
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೨೭೮}}{{Right|ಮನಮಂಥನ}}
{{gap}}'ಭ್ರುಂಗದಾ ಬೆನ್ನೇರಿ ಬಂತು. ಕಲ್ಪನಾ ವಿಲಾಸ' ಎಂದು ಕವಿ ಬೇಂದ್ರೆ
ಹಾಡಿದರು. ಕವಿಯ ಮನಸ್ಸಿನ ಕಲ್ಪನೆಯು ಹಾಡಾಗಿ ಹೊರ ಹೊಮ್ಮುವಾಗ
ಮಧುವನ್ನರಸುವ ದುಂಬಿಯ ಝೇಂಕಾರದಂತೆ ಮೂಡಿಬರುತ್ತದೆಯಂತೆ. ಎಷ್ಟು
ಚೆನ್ನಾಗಿ ನುಡಿದಿದ್ದಾರೆ ಅನ್ನಿಸುತ್ತೆ ನಿಮಗೆ. ಅಯ್ಯೋ ! ಈ ತೆರನಾಗಿ ನಾವು
ಹಾಡನ್ನು ಏಕೆ ಕಟ್ಟಬಾರದು ? ಅಂತಹ ಯೋಗ್ಯತೆಯು ನಮಗೇಕೆ ಬರಲಿಲ್ಲ
ಎಂದು ತುಸು ವ್ಯಸನವೂ ಆಗುವುದು. ತುಂಬಾ ವಿಚಾರವನ್ನು ನಡೆಸಿದ ನಂತರ
ಬೇಂದ್ರೆಯವರ ಮನಸ್ಸಿನಲ್ಲಿ ಈ ನುಡಿಗಳು ಮೂಡಲಿಲ್ಲ ಭಾವನೆಯು-Emotions -
ಅವರ ಅಂತಃಕರಣವನ್ನು ತುಂಬಿಕೊಂಡಿತು. ಕಡೆದ ಮೊಸರಲ್ಲಿ
ಬೆಣ್ಣೆಯು ತೇಲಿ ಬರುವಂತೆ, ಭಾವನಾ ಮನಸ್ಸಿನಿಂದ ಈ ನುಡಿಗಳು ತಾವಾಗಿ
ತಾವೇ ಮೂಡಿಬಂದುವು. ಮನಸ್ಸಿನ ಚಟುವಟಿಕೆಗಳಲ್ಲಿ ಭಾವ ರಾಗ ದ್ವೇಷಾದಿಗಳೂ
ಪಾತ್ರವನ್ನು ವಹಿಸುತ್ತವೆ. ಮನಸ್ಸಿನ ಈ ಗುಣವನ್ನು ಸ್ಫೂರ್ತಿ ಎಂದೆನ್ನುತ್ತಾರೆ.
ತನ್ನ ಇಷ್ಟದಂತೆ ಮೂಡಿ ಬರುವ, ನಮ್ಮ ಇಷ್ಟದಂತೆ ನಡೆಯದೇ ಇರುವ,
ಸ್ಫೂರ್ತಿಯೂ ಮನಸ್ಸಿನ ಒಂದು ಪ್ರದರ್ಶನ, ಕೆಲವೇ ಮಂದಿಗೆ ಲಭಿಸುವ,
ಗುಣ.
{{gap}}ನ್ಯೂಟನ್ನನ ಕತೆಯನ್ನು ಎಲ್ಲರೂ ಕೇಳಿದ್ದಾರೆ. ಸೇಬಿನ ಮರದ ಕೆಳಗೆ
ಅವಕುಳಿತಿದ್ದ, ಅಥವಾ ನೆರಳಿನಲ್ಲಿ ಮಲಗಿದ್ದರೂ ಇರಬಹುದು. ಅಥವಾ ಅನತಿ
ದೂರದಲ್ಲಿ ನಿಂತೋ ನಡೆದೋ ಇದ್ದಿರಬಹುದು. ಮರದಿಂದ ಸೇಬು ಕೆಳಕ್ಕೆ,
ನೆಲದ ಮೇಲೆ ಬಿತ್ತು. ಹೀಗೇನಾದರೂ ನನಗೆ ಆಗಿದ್ದಿದ್ದರೆ, ಆ ಸೇಬಿನ ಹಣ್ಣನ್ನು
ತೆಗೆದುಕೊಂಡು, ಕೊಳೆತಿದೆಯೋ ಇಲ್ಲವೋ ನೋಡಿಕೊಂಡು, ತಿಂದು ಬಿಡುತ್ತಿದ್ದೆ.
ಲೊಟ್ಟೆಯನ್ನು ಹೊಡೆಯುತ್ತಿದ್ದೆ. ಆದರೆ ಸರ್ ಐಸೆಕ್ ನ್ಯೂಟನ್ ಹಾಗೆ ಮಾಲಿಲ್ಲ.
ಭೂಮಿಯಮೇಲಕ್ಕೆ ಮರದಿಂದ ಸೇಬಿನ ಹಣ್ಣು ಏಕೆ ಬಿತ್ತು, ಎಂದು ಅವನ
ಕುತೂಹಲವು ಕೆರಳಿತು. 'ಮರವು ಹಣ್ಣನ್ನು ದೂಡಿತೇ? ಅಥವಾ ಭೂಮಿಯು
ಹಣ್ಣನ್ನು ಸೆಳೆದುಕೊಂಡಿತೆ'? ಎಂದು ಅವನ ವಿಚಾರಪರ ಮನಸ್ಸು,
ಕುತೂಹಲದಿಂದ ಕೆರಳಿತು. ಕುತೂಹಲವನ್ನು ನೆಮ್ಮದಿಗೊಳಿಸಲು, ಮನಸ್ಸನ್ನು
ತೃಪ್ತಿಗೊಳಿಸಲು, ಅವ ಸಂಶೋಧನೆಯಲ್ಲಿ ತೊಡಗಿದ. ಗುರುತ್ವಾಕರ್ಷಣೆಯ
ಸಿದ್ಧಾಂತವನ್ನು ಪ್ರಕಟಿಸಿದ. ಸೇಬಿನ ಹಣ್ಣು ಭೂಮಿಯನ್ನು ಆಕರ್ಷಿಸಿತು.
ಭೂಮಿಯು ಸೇಬನ್ನು ಆಕರ್ಷಿಸಿತು. ಇದು ಪರಸ್ಪರ ಆಕರ್ಷಣೆ. ಆಕರ್ಷಣೆಯ
ಪ್ರಮಾಣವು ಆಕರ್ಷಿಸುವ ವಸ್ತುವಿನ ಗಾತ್ರಕ್ಕೆ ಅನುಗುಣವಾಗಿರುತ್ತದೆ. ಭೂಮಿಯ
ಗಾತ್ರವು, ಸೇಬಿನ ಹಣ್ಣಿನ ಗಾತ್ರಕ್ಕಿಂತ ಕೊಟ್ಯಂತರ ಪಾಲು ಹೆಚ್ಚು. ಆದಕಾರಣ<noinclude></noinclude>
6qfhqphbiqk4vovdjbi8h37u7ur9nfv
ಪುಟ:ಮನಮಂಥನ.pdf/೨೯೭
104
62744
316747
314462
2026-05-04T09:03:47Z
Shreesha Sharma
7840
/* Proofread */
316747
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಮನಸ್ಸಿನ ಸ್ವರೂಪ}}{{Right|೨೭೯}}
ಭೂಮಿಯ ಮೇಲಕ್ಕೆ ಸೇಬಿನ ಹಣ್ಣು ಬಿತ್ತು. ಇಲ್ಲದಿದ್ದರೆ ಸೇಬಿನ ಹಣ್ಣಿನ ಮೇಲೆ
ಭೂಮಿಯು ಬೀಳಬೇಕಾಗುತ್ತಿತ್ತು! ಎಂದವ ಸಿದ್ಧಾಂತವನ್ನು ಮಾಡಿದ, ಗಣಿತ
ಶಾಸ್ತ್ರದ ಪ್ರಕಾರ ತನ್ನ ಸಿದ್ಧಾಂತವನ್ನು ಸಮರ್ಥಿಸಿದ. ಪರಸ್ಪರ ಆಕರ್ಷಣೆಯ
ಪ್ರಮಾಣವನ್ನು ಅಳತೆಮಾಡಿ ತೋರಿಸಿದ.
ಕುತೂಹಲವು ನ್ಯೂಟನ್ನನ ಮನಸ್ಸನ್ನು ದೆವ್ವದಂತೆ ಹಿಡಿದುಕೊಂಡಿತ್ತು.
ಅವನ ವಿಚಾರಪರ ಮನಸ್ಸು ತಾ ಕಂಡ ಸಮಸ್ಯೆಗೆ ಪರಿಹಾರವನ್ನು
ಕಂಡುಹಿಡಿಯಲು, ಅತಿ ಶ್ರದ್ಧೆಯಿಂದ ತೊಡಗಿತು.
ಮನಸ್ಸಿನ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ, ಕುತೂಹಲವು ಒಂದು
ಮುಖ್ಯ ಪ್ರೇರಕ.
ದೇಹದ ಹೊರಗಿನ ವಸ್ತು ಸ್ಥಿತಿಯನ್ನು ಇಂದ್ರಿಯಗಳ ಮೂಲಕ ಗ್ರಹಿಸಿ,
ನಂತರ ವಿವೇಚಿಸಿ, ಸೂಕ್ತವಾದ ನಿರ್ಣಯಗಳನ್ನು ಮಾಡಿ ಕಾರ್ಯರೂಪಕ್ಕೆ
ತರುವುದು ; ಮನಸ್ಸಿನ ಸಾಮಾನ್ಯವಾದ ಒಂದು ಚಟುವಟಿಕೆ. ಅನುಭವಿಸಿದುದನ್ನು
ಸ್ಮರಣೆಯಲ್ಲಿಟ್ಟುಕೊಂಡು, ಅದರಿಂದ ಕಲಿತ ಪಾಠವನ್ನು ಅಗತ್ಯ ಬಿದ್ದಾಗ
ಬಳಸಿಕೊಳ್ಳುವುದು, ಸಾಮಾನ್ಯವಾದ ಇನ್ನೊಂದು ಚಟುವಟಿಕೆ. ಅಂತಃಕರಣದಿಂದ
ಭಾವನಾಪರವಶನಾದಾಗ, ಹಾಗೂ ಕೂತೂಹಲದಿಂದ ಕೆರಳಿದಾಗ, ಹಠಾತ್ತನೆ
ತೇಲಿಬರುವ ಸ್ಪೂರ್ತಿಯೂ ಮನಸ್ಸಿನೊಂದು ಗುಣ. ಮನಸ್ಸಿನ ಮುಖ್ಯ ಕಾವ್ಯಗಳಲ್ಲಿ
ಇವು ಮೂರನ್ನೂ ಗಮನಿಸಬೇಕು.
ದೇಹ ಮತ್ತು ಮನಸ್ಸು ಇವೆರಡರ ಸಮನ್ವಯವೇ ಬಾಳಿನ ಜೀವಾಳ.
ದೇಹವು ಇರದಿದ್ದರೆ, ಮನಸ್ಸು ಸ್ವತಂತ್ರವಾಗಿ ಇರಲು ಸಾಧ್ಯವೇ ಹಾಗೂ
ಮನಸ್ಸು ಇಲ್ಲದಿದ್ದರೆ, ದೇಹವು ಉಳಿಯಲು ಸಾಧ್ಯವೇ ? ಈಗಿನ ನಮ್ಮ
ತಿಳಿವಳಿಕೆಯ ಪ್ರಕಾರ, ಎರಡರ ಒಕ್ಕೂಟವು ಸಾಧ್ಯವೇ ಹೊರತು, ಒಂದು,
ಇನ್ನೊಂದನ್ನು ಬಿಟ್ಟು ಇರಲು ಸಾಧ್ಯವೇ ಇಲ್ಲ. ಅಂದಮೇಲೆ ಮನಸ್ಸು ದೇಹದ
ಅಗೋಚರವಾದ ಒಂದು ಅಂಗ, ಅಥವಾ ದೇಹವು ಮನಸ್ಸಿನ ಗೋಚರವಾದ
ಒಂದು ಅಂಗ, ಎಂದನ್ನಬಹುದು.
ಕಣ್ಣು, ದೇಹದಲ್ಲಿ ಕಾಣಿಸಿಸುವ ಒಂದು ಅಂಗ. ಕಿವಿಯು ಕೇಳಿಸಿಸುವ
ಒಂದು ಅಂಗ. ಮೂಗು ವಾಸನೆಯನ್ನು ಅರುಹುವ ಒಂದು ಅಂಗ. ನಾಲಿಗೆಯು
ಉಂಡುದರ ಸವಿ ಕಹಿಗಳನ್ನು ರುಚಿಸಿಸುವ ಒಂದು ಅಂಗ ಸ್ಪರ್ಶಸುಖ
ಅಥವಾ ದುಃಖವನ್ನು ಒದಗಿಸುವ ಚರ್ಮವು ಒಂದು ಅಂಗ. ಪಂಚೇಂದ್ರಿಯಗಳೂ<noinclude></noinclude>
qe9gu88l9mfe3nymu6j86emoark0jss
316760
316747
2026-05-04T09:10:15Z
Shreelatha.Halemane
7642
/* Validated */
316760
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಮನಸ್ಸಿನ ಸ್ವರೂಪ}}{{Right|೨೭೯}}
ಭೂಮಿಯ ಮೇಲಕ್ಕೆ ಸೇಬಿನ ಹಣ್ಣು ಬಿತ್ತು. ಇಲ್ಲದಿದ್ದರೆ ಸೇಬಿನ ಹಣ್ಣಿನ ಮೇಲೆ
ಭೂಮಿಯು ಬೀಳಬೇಕಾಗುತ್ತಿತ್ತು! ಎಂದವ ಸಿದ್ಧಾಂತವನ್ನು ಮಾಡಿದ, ಗಣಿತ
ಶಾಸ್ತ್ರದ ಪ್ರಕಾರ ತನ್ನ ಸಿದ್ಧಾಂತವನ್ನು ಸಮರ್ಥಿಸಿದ. ಪರಸ್ಪರ ಆಕರ್ಷಣೆಯ
ಪ್ರಮಾಣವನ್ನು ಅಳತೆಮಾಡಿ ತೋರಿಸಿದ.
{{gap}}ಕುತೂಹಲವು ನ್ಯೂಟನ್ನನ ಮನಸ್ಸನ್ನು ದೆವ್ವದಂತೆ ಹಿಡಿದುಕೊಂಡಿತ್ತು.
ಅವನ ವಿಚಾರಪರ ಮನಸ್ಸು ತಾ ಕಂಡ ಸಮಸ್ಯೆಗೆ ಪರಿಹಾರವನ್ನು
ಕಂಡುಹಿಡಿಯಲು, ಅತಿ ಶ್ರದ್ಧೆಯಿಂದ ತೊಡಗಿತು.
{{gap}}ಮನಸ್ಸಿನ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ, ಕುತೂಹಲವು ಒಂದು
ಮುಖ್ಯ ಪ್ರೇರಕ.
{{gap}}ದೇಹದ ಹೊರಗಿನ ವಸ್ತು ಸ್ಥಿತಿಯನ್ನು ಇಂದ್ರಿಯಗಳ ಮೂಲಕ ಗ್ರಹಿಸಿ,
ನಂತರ ವಿವೇಚಿಸಿ, ಸೂಕ್ತವಾದ ನಿರ್ಣಯಗಳನ್ನು ಮಾಡಿ ಕಾರ್ಯರೂಪಕ್ಕೆ
ತರುವುದು ; ಮನಸ್ಸಿನ ಸಾಮಾನ್ಯವಾದ ಒಂದು ಚಟುವಟಿಕೆ. ಅನುಭವಿಸಿದುದನ್ನು
ಸ್ಮರಣೆಯಲ್ಲಿಟ್ಟುಕೊಂಡು, ಅದರಿಂದ ಕಲಿತ ಪಾಠವನ್ನು ಅಗತ್ಯ ಬಿದ್ದಾಗ
ಬಳಸಿಕೊಳ್ಳುವುದು, ಸಾಮಾನ್ಯವಾದ ಇನ್ನೊಂದು ಚಟುವಟಿಕೆ. ಅಂತಃಕರಣದಿಂದ
ಭಾವನಾಪರವಶನಾದಾಗ, ಹಾಗೂ ಕೂತೂಹಲದಿಂದ ಕೆರಳಿದಾಗ, ಹಠಾತ್ತನೆ
ತೇಲಿಬರುವ ಸ್ಪೂರ್ತಿಯೂ ಮನಸ್ಸಿನೊಂದು ಗುಣ. ಮನಸ್ಸಿನ ಮುಖ್ಯ ಕಾವ್ಯಗಳಲ್ಲಿ
ಇವು ಮೂರನ್ನೂ ಗಮನಿಸಬೇಕು.
{{gap}}ದೇಹ ಮತ್ತು ಮನಸ್ಸು ಇವೆರಡರ ಸಮನ್ವಯವೇ ಬಾಳಿನ ಜೀವಾಳ.
ದೇಹವು ಇರದಿದ್ದರೆ, ಮನಸ್ಸು ಸ್ವತಂತ್ರವಾಗಿ ಇರಲು ಸಾಧ್ಯವೇ ಹಾಗೂ
ಮನಸ್ಸು ಇಲ್ಲದಿದ್ದರೆ, ದೇಹವು ಉಳಿಯಲು ಸಾಧ್ಯವೇ ? ಈಗಿನ ನಮ್ಮ
ತಿಳಿವಳಿಕೆಯ ಪ್ರಕಾರ, ಎರಡರ ಒಕ್ಕೂಟವು ಸಾಧ್ಯವೇ ಹೊರತು, ಒಂದು,
ಇನ್ನೊಂದನ್ನು ಬಿಟ್ಟು ಇರಲು ಸಾಧ್ಯವೇ ಇಲ್ಲ. ಅಂದಮೇಲೆ ಮನಸ್ಸು ದೇಹದ
ಅಗೋಚರವಾದ ಒಂದು ಅಂಗ, ಅಥವಾ ದೇಹವು ಮನಸ್ಸಿನ ಗೋಚರವಾದ
ಒಂದು ಅಂಗ, ಎಂದನ್ನಬಹುದು.
{{gap}}ಕಣ್ಣು, ದೇಹದಲ್ಲಿ ಕಾಣಿಸಿಸುವ ಒಂದು ಅಂಗ. ಕಿವಿಯು ಕೇಳಿಸಿಸುವ
ಒಂದು ಅಂಗ. ಮೂಗು ವಾಸನೆಯನ್ನು ಅರುಹುವ ಒಂದು ಅಂಗ. ನಾಲಿಗೆಯು
ಉಂಡುದರ ಸವಿ ಕಹಿಗಳನ್ನು ರುಚಿಸಿಸುವ ಒಂದು ಅಂಗ ಸ್ಪರ್ಶಸುಖ
ಅಥವಾ ದುಃಖವನ್ನು ಒದಗಿಸುವ ಚರ್ಮವು ಒಂದು ಅಂಗ. ಪಂಚೇಂದ್ರಿಯಗಳೂ<noinclude></noinclude>
h781kxz08f4ksoz519srn5dqia81jzt
ಪುಟ:ಮನಮಂಥನ.pdf/೨೯೮
104
62745
316749
314463
2026-05-04T09:04:55Z
Shreesha Sharma
7840
/* Proofread */
316749
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೨೮೦}}{{Right|ಮನಮಂಥನ}}
ವಿವಿಧ ತೆರನಾಗಿ, ಬಾಹ್ಯ ಪ್ರಪಂಚದ, ಅಥವಾ ನಮ್ಮ ಹೊರಗಿನ ಲೋಕದ
ಸುದ್ದಿಗಳನ್ನು ನಮಗೆ ತಿಳಿಸಿಕೊಡುತ್ತವೆ. ಪಂಚೇಂದ್ರಿಯಗಳೂ ಕಳುಹಿಸಿಕೊಟ್ಟ
ಸುದ್ದಿಗಳನ್ನು ಮನಸ್ಸು ಜರಡಿ ಹಿಡಿದಂತೆ, ಶೋಧಿಸಿ, ಈ ಲೋಕದ, ಈ ಜನ್ಮಕ್ಕೆ
ಅಗತ್ಯವಾದವುಗಳನ್ನು ಮನಸ್ಸಿಗೆ ಮುಟ್ಟಿಸುತ್ತದೆ. ಈ ಜನ್ಮದ ಬಾಳಿಗೆ ಅಗತ್ಯವಾದ
ಜಳ್ಳುಗಳನ್ನು, ಮನಸ್ಸಿನ ಆಳದಲ್ಲಿರುವ ಹಗೇವುಗಳಿಗೆ ಸಾಗಹಾಕಿ, ಮರೆ ಮಾಡಿ,
ಮರೆತು ಹೋಗುವಂತೆ, ಮನಸ್ಸಿನ ಒಂದು ಹಿರಿಯಂಶವು ಅಡ್ಡಗೋಡೆಯನ್ನು
ಹಾಕುತ್ತದೆ. ಸಾಕಷ್ಟು ದೃಢವಾಗಿ ಈ ಲೋಕದ, ಈ ಜನ್ಮದ ಬಾಳಿಗೆ ಅತ್ಯವಶ್ಯಕವಾದ
ಕಾಳುಗಳನ್ನು, ಮನಸ್ಸಿನ ತೋರ ಹಾಗೂ ಸ್ಮರಣಾ ಭಾಗಗಳಿಗೆ ಮುಟ್ಟಿಸುತ್ತದೆ.
ಜಳ್ಳು ಯಾವುದು? ಕಾಳು ಯಾವುದು? ಇವೆರಡೂ ಮನಸ್ಸಿನಲ್ಲಿ
ಹುದುಗಿಕೊಂಡಿರುತ್ತವೆ. ಯಾವಾಗಲಾದರೂ ಒದ್ದು ಕೆರಳಿಸುತ್ತವೆ. ಬಾಳಿನಲ್ಲಿ
ಇವೆರಡೂ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಜಳ್ಳಾಗಲೀ ಕಾಳಾಗಲೀ ಎರಡೂ
ಕೂಡಿ, ಈ ಜನ್ಮದ ಮಾನವ ಬಾಳ್ವೆಯನ್ನು ನಡೆಸುತ್ತದೆ. ಈ ಜನ್ಮದ ಈ
ಲೋಕದ ಬಾಳ್ವೆಗೆ ಅಗತ್ಯವಾದುದನ್ನು ಕಾಳು ಎಂದು ಮನಸ್ಸಿನ ವಿಚಾರಪರ
ಭಾಗವು ನಿರ್ಣಯಿಸುತ್ತದೆ. ಅಂತೆಯೇ ಜಳ್ಳು ಎಂದು ಮಿಕ್ಕವನ್ನು ಗಣಿಸಿ ಆಳ
ಮನಸ್ಸಿನ ಹಗೇವುಗಳಿಗೆ ದೂಡಿಬಿಡುತ್ತದೆ. ಜಳ್ಳು ಕಾಳು ಎಂದು ವಿಂಗಡಿಸುವಾಗ
ಮನಸ್ಸು ತಪ್ಪುಮಾಡುವುದಿಲ್ಲ, ಎಂದನ್ನುವಂತಿಲ್ಲ. ತಪ್ಪು ಮಾಡುವುದುಂಟು. ಜಳ್ಳಿನಲ್ಲಿ
ಕಾಳುಗಳೂ ಹಗೇವುಗಳಿಗೆ ದೂಡಲ್ಪಡಬಹುದು. ಅದೇ ರೀತಿಯಲ್ಲಿ ಜಳ್ಳು
ಕೂಡ ಕಾಳುಗಳೊಂದಿಗೆ ತೋರ ಮನಸ್ಸಿಗೆ ಅಥವಾ ಸ್ಮರಣಾ ಕೇಂದ್ರಗಳಿಗೆ
ರವಾನಿಸಲ್ಪಡಬಹುದು. ಈ ತೆರನ ದೋಷಗಳು ಮನಸ್ಸಿನ ಸ್ವಾಸ್ಥ್ಯವನ್ನು ಲೋಕದ
ಬಾಳಿನಲ್ಲಿ ಕದಡುತ್ತವೆ. ಮಾನಸಿಕ ಬೇನೆಗಳಿಗೆ, ಮೂಲಭೂತವಾದ
ಕಾರಣಗಳಾಗುತ್ತವೆ.
ಅಂದರೆ ಮನಸ್ಸಿನ ಒಂದು ಭಾಗವು ದೇಹದ ಐದು ಇಂದ್ರಿಯಗಳಂತೆ,
ಆರನೆಯದೊಂದು ಅಂಗವಾಗಿದೆ ಎಂದನ್ನಬಹುದು. ಮನಸ್ಸಿನ ಮತ್ತೊಂದು
ಭಾಗವು ದೇಹದಿಂದ ಪ್ರತ್ಯೇಕವಾದ, ಇನ್ನಾವುದೋ ಲೋಕದ, ಮತ್ತೆ ಯಾವುದೋ
ಬಾಳಿನೊಂದಿಗೆ ಕೊಂಡಿಯನ್ನು ಹಾಕಿಕೊಂಡಿರುತ್ತದೆಯೋ ಏನೋ? ಹೌದು
ಎಂದು ಸಾರಿದ್ದಾರೆ. ಎಲ್ಲ ಕಾಲದ, ಎಲ್ಲ ದೇಶದ, ಮನನಿಗರು ; ಆಳವಾಗಿ
ಅಭ್ಯಾಸ ಮಾಡಿದ ಮನನಿಗರು.
ಅಂದ ಮೇಲೆ ೧. ಮನಸ್ಸು ಒಂದು ತೆರನ ಶಕ್ತಿ ; ವಸ್ತುವಲ್ಲ.
೨. ಅದರದೊಂದು ಭಾಗವು ದೇಹದೊಂದಿಗೆ ನಿಕಟ ಸಂಬಂಧವನ್ನು ಪಡೆದು,<noinclude></noinclude>
9279q42ar5a19owtaz712pq7ty1rbz6
316762
316749
2026-05-04T09:10:47Z
Shreelatha.Halemane
7642
/* Validated */
316762
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೨೮೦}}{{Right|ಮನಮಂಥನ}}
ವಿವಿಧ ತೆರನಾಗಿ, ಬಾಹ್ಯ ಪ್ರಪಂಚದ, ಅಥವಾ ನಮ್ಮ ಹೊರಗಿನ ಲೋಕದ
ಸುದ್ದಿಗಳನ್ನು ನಮಗೆ ತಿಳಿಸಿಕೊಡುತ್ತವೆ. ಪಂಚೇಂದ್ರಿಯಗಳೂ ಕಳುಹಿಸಿಕೊಟ್ಟ
ಸುದ್ದಿಗಳನ್ನು ಮನಸ್ಸು ಜರಡಿ ಹಿಡಿದಂತೆ, ಶೋಧಿಸಿ, ಈ ಲೋಕದ, ಈ ಜನ್ಮಕ್ಕೆ
ಅಗತ್ಯವಾದವುಗಳನ್ನು ಮನಸ್ಸಿಗೆ ಮುಟ್ಟಿಸುತ್ತದೆ. ಈ ಜನ್ಮದ ಬಾಳಿಗೆ ಅಗತ್ಯವಾದ
ಜಳ್ಳುಗಳನ್ನು, ಮನಸ್ಸಿನ ಆಳದಲ್ಲಿರುವ ಹಗೇವುಗಳಿಗೆ ಸಾಗಹಾಕಿ, ಮರೆ ಮಾಡಿ,
ಮರೆತು ಹೋಗುವಂತೆ, ಮನಸ್ಸಿನ ಒಂದು ಹಿರಿಯಂಶವು ಅಡ್ಡಗೋಡೆಯನ್ನು
ಹಾಕುತ್ತದೆ. ಸಾಕಷ್ಟು ದೃಢವಾಗಿ ಈ ಲೋಕದ, ಈ ಜನ್ಮದ ಬಾಳಿಗೆ ಅತ್ಯವಶ್ಯಕವಾದ
ಕಾಳುಗಳನ್ನು, ಮನಸ್ಸಿನ ತೋರ ಹಾಗೂ ಸ್ಮರಣಾ ಭಾಗಗಳಿಗೆ ಮುಟ್ಟಿಸುತ್ತದೆ.
ಜಳ್ಳು ಯಾವುದು? ಕಾಳು ಯಾವುದು? ಇವೆರಡೂ ಮನಸ್ಸಿನಲ್ಲಿ
ಹುದುಗಿಕೊಂಡಿರುತ್ತವೆ. ಯಾವಾಗಲಾದರೂ ಒದ್ದು ಕೆರಳಿಸುತ್ತವೆ. ಬಾಳಿನಲ್ಲಿ
ಇವೆರಡೂ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಜಳ್ಳಾಗಲೀ ಕಾಳಾಗಲೀ ಎರಡೂ
ಕೂಡಿ, ಈ ಜನ್ಮದ ಮಾನವ ಬಾಳ್ವೆಯನ್ನು ನಡೆಸುತ್ತದೆ. ಈ ಜನ್ಮದ ಈ
ಲೋಕದ ಬಾಳ್ವೆಗೆ ಅಗತ್ಯವಾದುದನ್ನು ಕಾಳು ಎಂದು ಮನಸ್ಸಿನ ವಿಚಾರಪರ
ಭಾಗವು ನಿರ್ಣಯಿಸುತ್ತದೆ. ಅಂತೆಯೇ ಜಳ್ಳು ಎಂದು ಮಿಕ್ಕವನ್ನು ಗಣಿಸಿ ಆಳ
ಮನಸ್ಸಿನ ಹಗೇವುಗಳಿಗೆ ದೂಡಿಬಿಡುತ್ತದೆ. ಜಳ್ಳು ಕಾಳು ಎಂದು ವಿಂಗಡಿಸುವಾಗ
ಮನಸ್ಸು ತಪ್ಪುಮಾಡುವುದಿಲ್ಲ, ಎಂದನ್ನುವಂತಿಲ್ಲ. ತಪ್ಪು ಮಾಡುವುದುಂಟು. ಜಳ್ಳಿನಲ್ಲಿ
ಕಾಳುಗಳೂ ಹಗೇವುಗಳಿಗೆ ದೂಡಲ್ಪಡಬಹುದು. ಅದೇ ರೀತಿಯಲ್ಲಿ ಜಳ್ಳು
ಕೂಡ ಕಾಳುಗಳೊಂದಿಗೆ ತೋರ ಮನಸ್ಸಿಗೆ ಅಥವಾ ಸ್ಮರಣಾ ಕೇಂದ್ರಗಳಿಗೆ
ರವಾನಿಸಲ್ಪಡಬಹುದು. ಈ ತೆರನ ದೋಷಗಳು ಮನಸ್ಸಿನ ಸ್ವಾಸ್ಥ್ಯವನ್ನು ಲೋಕದ
ಬಾಳಿನಲ್ಲಿ ಕದಡುತ್ತವೆ. ಮಾನಸಿಕ ಬೇನೆಗಳಿಗೆ, ಮೂಲಭೂತವಾದ
ಕಾರಣಗಳಾಗುತ್ತವೆ.
{{gap}}ಅಂದರೆ ಮನಸ್ಸಿನ ಒಂದು ಭಾಗವು ದೇಹದ ಐದು ಇಂದ್ರಿಯಗಳಂತೆ,
ಆರನೆಯದೊಂದು ಅಂಗವಾಗಿದೆ ಎಂದನ್ನಬಹುದು. ಮನಸ್ಸಿನ ಮತ್ತೊಂದು
ಭಾಗವು ದೇಹದಿಂದ ಪ್ರತ್ಯೇಕವಾದ, ಇನ್ನಾವುದೋ ಲೋಕದ, ಮತ್ತೆ ಯಾವುದೋ
ಬಾಳಿನೊಂದಿಗೆ ಕೊಂಡಿಯನ್ನು ಹಾಕಿಕೊಂಡಿರುತ್ತದೆಯೋ ಏನೋ? ಹೌದು
ಎಂದು ಸಾರಿದ್ದಾರೆ. ಎಲ್ಲ ಕಾಲದ, ಎಲ್ಲ ದೇಶದ, ಮನನಿಗರು ; ಆಳವಾಗಿ
ಅಭ್ಯಾಸ ಮಾಡಿದ ಮನನಿಗರು.
{{gap}}ಅಂದ ಮೇಲೆ ೧. ಮನಸ್ಸು ಒಂದು ತೆರನ ಶಕ್ತಿ ; ವಸ್ತುವಲ್ಲ.
೨. ಅದರದೊಂದು ಭಾಗವು ದೇಹದೊಂದಿಗೆ ನಿಕಟ ಸಂಬಂಧವನ್ನು ಪಡೆದು,<noinclude></noinclude>
dbigq3etl4y8ra2javor2f2typsojl8
ಪುಟ:ಮನಮಂಥನ.pdf/೨೯೯
104
62746
316750
314464
2026-05-04T09:05:54Z
Shreesha Sharma
7840
/* Proofread */
316750
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಮನಸ್ಸಿನ ಸ್ವರೂಪ}}{{Right|೨೮೧}}
ಪಂಚೇಂದ್ರಿಯಗಳಂತೆ, ಆರನೆಯ ಅಂಗವಾಗಿದೆ. ೩. ಮತ್ತೊಂದು ಭಾಗವು
ವ್ಯಾವಹಾರಿಕ ಬಾಳಿನೊಂದಿಗೆ ನಿಕಟ ಸಂಬಂಧವನ್ನು ಹೊಂದಿರದಿದ್ದರೂ,
ವ್ಯಾವಹಾರಿಕವಾದ, ನಶ್ವರವಾದ ಈ ಲೋಕದ ಬಾಳನ್ನು, ಅರಿವು ಪೂರ್ಣವಾದ
ಮತ್ತಾವುದೋ ಇರುವಿಕೆಯತ್ತ ಸೆಳೆಯುತ್ತದೆ. ಈ ಮೂರು ಅಂಶಗಳನ್ನು
ವಿಚಾರಪರವಾಗಿ, ವಿಜ್ಞಾನದ ರೀತಿಯಲ್ಲಿ ಒಪ್ಪಿಕೊಳ್ಳಬೇಕು.
ಮನಸ್ಸು ಎಂಬುದೊಂದು ಶಕ್ತಿಯು ಅಥವಾ ಚೈತನ್ಯವು ಕಾಣಿಸದೇ
ಇದ್ದರೂ ದೇಹದಲ್ಲಿದೆ ಎಂದು ಒಪ್ಪಿಕೊಳ್ಳಬೇಕು. ಏಕೆಂದರೆ ಮನಸ್ಸಿನ
ಚಟುವಟಿಕೆಗಳಿಂದ ಉಂಟಾಗುವ, ದೇಹದಲ್ಲಿ ಸಾಕ್ಷಾತ್ ಕಂಡುಬರುವ,
ಪರಿಣಾಮಗಳು ಸಾಕ್ಷ್ಯಗಳನ್ನು ನೀಡುತ್ತವೆ. ಗಾಳಿಯು ಕಣ್ಣಿಗೆ ಕಾಣಿಸದೇ ಇದ್ದರೂ
ಗಿಡಗಳ ಎಲೆಗಳು, ಹೊದ್ದುಕೊಂಡಿರುವ ಸೆರಗುಗಳು, ಹಾರಾಡುವುದನ್ನು
ನೋಡಿ, ಗಾಳಿಯು ಬೀಸುತ್ತದೆ ಎಂದು ನಿಸ್ಸಂದೇಹವಾಗಿ ನಿರ್ಧರಿಸುವಂತೆ.
ನನ್ನ ಮನಸ್ಸಿನಲ್ಲಿ ಮೂಡಿದ ಯೋಚನೆಗಳನ್ನು, ಮಾತುಗಳ ಸಂಕೇತದ
ಮೂಲಕ, ಬರೆಯುತ್ತೇನೆ. ಬರೆದುದು ಪ್ರಕಟವೂ ಆಗುತ್ತದೆ. ಪ್ರಕಟವಾದುದನ್ನು
ಓದಬಹುದಾದ ನೀವು; ಎರಡು ಪಂಖ್ಯೆಗಳನ್ನು ಓದಿ 'ತೆಗೆಯೋ, ಇವನ
ಕಂತೆಯನ್ನ : ಬಿಸಾಕೋ, ಬರಿ ಬೋರ್ ಹೊಡೀತಾನೆ' ಎಂದು ಪುಸ್ತಕವನ್ನು
ಕಸದ ಬುಟ್ಟಿಗೆ ಎಸೆಯಬಹುದು. ಅಥವಾ 'ಪಾಪ ! ಏನೋ ಒದರಲಿಕ್ಕೆ
ಹೊಂಟಾನ, ಏನಂತಾನ? ಓದಿ ನೋಡುವ' ಎಂದು ಮುಂದುವರಿಸಲೂಬಹುದು.
ಇಂತಹ ವಿಧ ವಿಧವಾದ ಪ್ರತಿಕ್ರಿಯೆಯು ನಿಮ್ಮಲ್ಲಿ ಮೂಡಿ ಬಂದದ್ದು : ನಿಮ್ಮ
ಮನಸ್ಸಿನಿಂದ. Ambrose Bierce ಅನ ವ್ಯಾಖ್ಯಾನವನ್ನು ಕೇಳಿದ ಮೇಲೆ ಕೂಡ,
ಮನಸ್ಸು ಎಂಬ ಶಕ್ತಿಯು ಅಥವಾ ಚೈತನ್ಯವು ನಿಜವಾಗಲೂ ಅಸ್ತಿತ್ವದಲ್ಲಿದೆ
ಎಂದು ಒಪ್ಪಲೇ ಬೇಕು.
ಮನಸ್ಸು ಒಂದು ಶಕ್ತಿ, ಒಂದು ಚೈತನ್ಯ, ಒಂದು ಕ್ರಿಯಾಕಾರಣ ಪ್ರಭಾವ
ಎಂದೆವು. ಕಣ್ಣುಗಳಿಗೆ ಕಾಣಿಸದಿದ್ದರೂ, ಕಿವಿಗೆ ಕೇಳಿಸದಿದ್ದರೂ ಪಂಚೇಂದ್ರಿಯಗಳಿಗೆ
ನೇರವಾಗಿ ಗೋಚರವಾಗದಿದ್ದರೂ, ಮನಸ್ಸು ಅಸ್ತಿತ್ವದಲ್ಲಿದೆ ಎಂದು
ತೀರ್ಮಾನಿಸಿದೆವು. ಆದರೆ ಅದು ಯಾವ ತೆರನ ಶಕ್ತಿ? ಎಂತಹ ಚೈತನ್ಯ.
ಧನುರ್ಮಾಸದಲ್ಲಿ ಬೆಳಗಿನ ಝಾಮ ಬಚ್ಚಲೊಲೆಯ ಬೆಂಕಿ ಮುಂದೆ
ಕುಳಿತರೆ, ಮೈಕೈ ಹಿತವಾಗಿ ಕಾಯುತ್ತದೆ. ಆದರೆ ಒಲೆಯ ಬೆಂಕಿಯಿಂದ ನಮ್ಮ<noinclude></noinclude>
8deooh9yjs72qnsrwb5nn6g4vn04pam
316764
316750
2026-05-04T09:11:20Z
Shreelatha.Halemane
7642
/* Validated */
316764
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಮನಸ್ಸಿನ ಸ್ವರೂಪ}}{{Right|೨೮೧}}
ಪಂಚೇಂದ್ರಿಯಗಳಂತೆ, ಆರನೆಯ ಅಂಗವಾಗಿದೆ. ೩. ಮತ್ತೊಂದು ಭಾಗವು
ವ್ಯಾವಹಾರಿಕ ಬಾಳಿನೊಂದಿಗೆ ನಿಕಟ ಸಂಬಂಧವನ್ನು ಹೊಂದಿರದಿದ್ದರೂ,
ವ್ಯಾವಹಾರಿಕವಾದ, ನಶ್ವರವಾದ ಈ ಲೋಕದ ಬಾಳನ್ನು, ಅರಿವು ಪೂರ್ಣವಾದ
ಮತ್ತಾವುದೋ ಇರುವಿಕೆಯತ್ತ ಸೆಳೆಯುತ್ತದೆ. ಈ ಮೂರು ಅಂಶಗಳನ್ನು
ವಿಚಾರಪರವಾಗಿ, ವಿಜ್ಞಾನದ ರೀತಿಯಲ್ಲಿ ಒಪ್ಪಿಕೊಳ್ಳಬೇಕು.
{{gap}}ಮನಸ್ಸು ಎಂಬುದೊಂದು ಶಕ್ತಿಯು ಅಥವಾ ಚೈತನ್ಯವು ಕಾಣಿಸದೇ
ಇದ್ದರೂ ದೇಹದಲ್ಲಿದೆ ಎಂದು ಒಪ್ಪಿಕೊಳ್ಳಬೇಕು. ಏಕೆಂದರೆ ಮನಸ್ಸಿನ
ಚಟುವಟಿಕೆಗಳಿಂದ ಉಂಟಾಗುವ, ದೇಹದಲ್ಲಿ ಸಾಕ್ಷಾತ್ ಕಂಡುಬರುವ,
ಪರಿಣಾಮಗಳು ಸಾಕ್ಷ್ಯಗಳನ್ನು ನೀಡುತ್ತವೆ. ಗಾಳಿಯು ಕಣ್ಣಿಗೆ ಕಾಣಿಸದೇ ಇದ್ದರೂ
ಗಿಡಗಳ ಎಲೆಗಳು, ಹೊದ್ದುಕೊಂಡಿರುವ ಸೆರಗುಗಳು, ಹಾರಾಡುವುದನ್ನು
ನೋಡಿ, ಗಾಳಿಯು ಬೀಸುತ್ತದೆ ಎಂದು ನಿಸ್ಸಂದೇಹವಾಗಿ ನಿರ್ಧರಿಸುವಂತೆ.
{{gap}}ನನ್ನ ಮನಸ್ಸಿನಲ್ಲಿ ಮೂಡಿದ ಯೋಚನೆಗಳನ್ನು, ಮಾತುಗಳ ಸಂಕೇತದ
ಮೂಲಕ, ಬರೆಯುತ್ತೇನೆ. ಬರೆದುದು ಪ್ರಕಟವೂ ಆಗುತ್ತದೆ. ಪ್ರಕಟವಾದುದನ್ನು
ಓದಬಹುದಾದ ನೀವು; ಎರಡು ಪಂಖ್ಯೆಗಳನ್ನು ಓದಿ 'ತೆಗೆಯೋ, ಇವನ
ಕಂತೆಯನ್ನ : ಬಿಸಾಕೋ, ಬರಿ ಬೋರ್ ಹೊಡೀತಾನೆ' ಎಂದು ಪುಸ್ತಕವನ್ನು
ಕಸದ ಬುಟ್ಟಿಗೆ ಎಸೆಯಬಹುದು. ಅಥವಾ 'ಪಾಪ ! ಏನೋ ಒದರಲಿಕ್ಕೆ
ಹೊಂಟಾನ, ಏನಂತಾನ? ಓದಿ ನೋಡುವ' ಎಂದು ಮುಂದುವರಿಸಲೂಬಹುದು.
ಇಂತಹ ವಿಧ ವಿಧವಾದ ಪ್ರತಿಕ್ರಿಯೆಯು ನಿಮ್ಮಲ್ಲಿ ಮೂಡಿ ಬಂದದ್ದು : ನಿಮ್ಮ
ಮನಸ್ಸಿನಿಂದ. Ambrose Bierce ಅನ ವ್ಯಾಖ್ಯಾನವನ್ನು ಕೇಳಿದ ಮೇಲೆ ಕೂಡ,
ಮನಸ್ಸು ಎಂಬ ಶಕ್ತಿಯು ಅಥವಾ ಚೈತನ್ಯವು ನಿಜವಾಗಲೂ ಅಸ್ತಿತ್ವದಲ್ಲಿದೆ
ಎಂದು ಒಪ್ಪಲೇ ಬೇಕು.
{{gap}}ಮನಸ್ಸು ಒಂದು ಶಕ್ತಿ, ಒಂದು ಚೈತನ್ಯ, ಒಂದು ಕ್ರಿಯಾಕಾರಣ ಪ್ರಭಾವ
ಎಂದೆವು. ಕಣ್ಣುಗಳಿಗೆ ಕಾಣಿಸದಿದ್ದರೂ, ಕಿವಿಗೆ ಕೇಳಿಸದಿದ್ದರೂ ಪಂಚೇಂದ್ರಿಯಗಳಿಗೆ
ನೇರವಾಗಿ ಗೋಚರವಾಗದಿದ್ದರೂ, ಮನಸ್ಸು ಅಸ್ತಿತ್ವದಲ್ಲಿದೆ ಎಂದು
ತೀರ್ಮಾನಿಸಿದೆವು. ಆದರೆ ಅದು ಯಾವ ತೆರನ ಶಕ್ತಿ? ಎಂತಹ ಚೈತನ್ಯ.
{{gap}}ಧನುರ್ಮಾಸದಲ್ಲಿ ಬೆಳಗಿನ ಝಾಮ ಬಚ್ಚಲೊಲೆಯ ಬೆಂಕಿ ಮುಂದೆ
ಕುಳಿತರೆ, ಮೈಕೈ ಹಿತವಾಗಿ ಕಾಯುತ್ತದೆ. ಆದರೆ ಒಲೆಯ ಬೆಂಕಿಯಿಂದ ನಮ್ಮ<noinclude></noinclude>
pbiaqahmb4l4d8ikxjmo2dhjdkois9m
ಪುಟ:ಮನಮಂಥನ.pdf/೩೦೦
104
62747
316765
314465
2026-05-04T09:12:28Z
Shreelatha.Halemane
7642
/* Proofread */
316765
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೨೮೨}}{{Right|ಮನಮಂಥನ}}
ಮೈಯಿಗೆ ಶಾಖವು ಹರಿದು ಬರುವುದು ಕಾಣಿಸುವುದಿಲ್ಲ. ಆದರೆ ಶಾಖವು
ಹರಿದು ಬಂದಿರಲೇಬೇಕು. ಶಾಖವು ಒಂದು ರೀತಿಯ ಶಕ್ತಿ.
ಕುದುರೆಯ ಲಾಳದಂತಿರುವ ಮ್ಯಾಗ್ನೆಟ್ಟನ್ನಿಟ್ಟು, ಅದರ ಮೇಲೆ ಕಾಗದವನ್ನು
ಹರಡಿ, ಕಾಗದದ ಮೇಲೆ ಕಬ್ಬಿಣದ ಹುಡಿಯನ್ನು ಉದುರಿಸಿದರೆ, ಹುಡಿಯು
ಒಂದು ವಿಚಿತ್ರವಾದ ರೇಖಾ ಚಿತ್ರವನ್ನು ರಚಿಸಿಕೊಳ್ಳುತ್ತದೆ. ಲಾಳವಿರುವ ಎರಡೂ
ಪಕ್ಕಗಳಲ್ಲಿ ಹುಡಿಯು ರಂಗೋಲಿಯನ್ನಿಟ್ಟಂತಾಗುತ್ತದೆ. ಲಾಳದ ಎರಡು
ತುದಿಗಳಲ್ಲೂ ಮೀಸೆ ಕಟ್ಟಿಕೊಳ್ಳುತ್ತದೆ. ಮ್ಯಾಗ್ನೆಟಿಕ್ನ ಆಯಸ್ಕಾಂತ ಶಕ್ತಿಯು
ಕಬ್ಬಿಣದ ಹುಡಿಯನ್ನು ಈ ರೀತಿ ಚೆಲ್ಲಾಡಿಸುತ್ತದೆ. ಮ್ಯಾಗ್ನೆಟ್ಟಿನ ಶಕ್ತಿಯು ಒಂದು
ತೆರನಾದುದು.
ಇಲೆಕ್ಟಿಕ್ ಸ್ಟವ್ನಲ್ಲಿ, ಸ್ವಿಚ್ ಹಾಕಿದ ಮೇಲೆ, ಕೆಂಪಗೆ ಲೋಹದ ಸುರುಳಿಗಳು
ಕಾಯುತ್ತವೆ. ಉತ್ಪತ್ತಿಯಾದ ಆ ಶಾಖದಿಂದ ಅಡಿಗೆಯನ್ನು ಬೇಯಿಸಬಹುದು.
ಆ ಇಲೆಕ್ಟಿಕ್ ಶಕ್ತಿಯನ್ನು ತೆಳು ತಂತಿಗಳಿರುವ ಬಲ್ಲಿನಲ್ಲಿ ಹರಿಯ ಬಿಟ್ಟರೆ,
ಬೆಳಕು ಹರಡುತ್ತದೆ. ಶಾಖವನ್ನೂ ಬೆಳಕನ್ನೂ ಹಾಗೂ ಮ್ಯಾಗ್ನೆಟಿಕ್
ಪ್ರತಿಕ್ರಿಯೆಗಳನ್ನೂ, ಇಲೆಕ್ಲಿಸಿಟಿಯು ಸಾಧಿಸುತ್ತದೆ. ಇಲೆಕ್ಟಿಸಿಟಿಯೂ ಒಂದು
ವಿಧವಾದ ಶಕ್ತಿ.
ಗುರುತ್ವಾಕರ್ಷಣೆಯೂ ಒಂದು ತೆರನ ಶಕ್ತಿ.
ಕಂತ್ರಿ ನಾಯಿಯ ಕಡೆಗೆ ಹುಡುಗನು ಕಲ್ಲನ್ನೆಸೆಯುತ್ತಾನೆ. ಅವನ
ತೋಳ್ಳಲದಿಂದ ಎಸೆದ ಕಲ್ಲು ರಭಸದಿಂದ ಸ್ವಲ್ಪ ದೂರ ಸಾಗುತ್ತದೆ. ತೋಳ್ಳಲವು
ಒಂದು ವಿಧದ ಶಕ್ತಿ. ಫಿಸಿಕಲ್ ಶಕ್ತಿ.
ಇವೆಲ್ಲ ತೆರನ ಶಕ್ತಿಗಳು, ಆಮೂಲಾಗ್ರವಾಗಿ ವಿಜ್ಞಾನಿಗಳಿಂದ ಅಭ್ಯಸಿಸಲ್ಪಟ್ಟಿವೆ.
ಇವುಗಳ ಗುಣಗಳು ಎಣಿಸಲ್ಪಟ್ಟಿವೆ, ಗುಣಿಸಲ್ಪಟ್ಟಿವೆ. ಹಾಗಾಗಿ ಮಾನವನ
ಹತೋಟಿಗೆ ಒಳಗಾಗಿವೆ. ಅವನ ಬಾಳನ್ನು ಸುಖಮಯವಾಗಿಸಿವೆ ; ಅವನ
ದೈಹಿಕ ಶ್ರಮವನ್ನು ಬಹುಪಾಲು ನಿವಾರಿಸಿವೆ.
ಇತ್ತಿಂದೀಚೆಗೆ ಅಣುವನ್ನು ಬಿರಿಸಿದರೆ ಆಪಾರಶಕ್ತಿಯು ಹೊರ ಹೊಮ್ಮುತ್ತದೆ
ಎಂಬುದನ್ನು ಕಂಡು ಹಿಡಿದರು. ಈ ಶಕ್ತಿಯನ್ನು ಶಾಖವನ್ನಾಗಿ ಪರಿವರ್ತಿಸಿ
ಏನೆಲ್ಲವನ್ನೂ ಸುಟ್ಟು ಹಾಕಬಹುದು. ಇಲೆಕ್ಟಿಕ್ ಶಕ್ತಿಯನ್ನಾಗಿ ಪರಿವರ್ತಿಸಿ
ಬಳಸಿಕೊಳ್ಳಲೂಬಹುದು. ಅಟಾಮಿಕ್ ಶಕ್ತಿಯೂ ನಿಖರವಾಗಿ
ಅಳೆಯಲ್ಪಡಬಹುದು. ಹೈಡೋಜನ್ನಿನ ಎರಡು ಅಣುಗಳನ್ನು ಬೆಸೆದರೆ, ಆಗಲೂ
ಶಕ್ತಿಯು ಅಪಾರವಾಗಿ ಹೊರ ಹೊಮ್ಮುತ್ತದೆ. ಪ್ಯೂಷನ್ ಬಾಂಬ್ ಎಂಬ<noinclude></noinclude>
0ta4qxpqpjesgx52xsc2jlu4f3wj73o
ಪುಟ:ಮನಮಂಥನ.pdf/೩೩೫
104
62782
316769
314531
2026-05-04T09:14:56Z
Shreelatha.Halemane
7642
/* Validated */
316769
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|'''೪. ಬಾಲ್ಯ, ಆಗಿನ ಮನಸ್ಸು '''}}
{{gap}}ಕ್ಷೀರಸಾಗರದಲ್ಲಿ ವಟಪತ್ರದ ಮೇಲೆ ಮಲಗಿ, ಕಾಲಬೆರಳನ್ನು ಸುಖವಾಗಿ
ಚೀಪುತ್ತ ಮಂದಸ್ಮಿತನಾಗಿ ಮಲಗಿರುವ ಮಗು, ಕೃಷ್ಣ ನಮ್ಮಲ್ಲಿ ಬಹಳ ಜನರ
ಆರಾಧ್ಯ ದೇವರು. ಯಾವ ಯೋಚನೆಯೂ ಇರದೆ, ನಿಶ್ಚಿಂತನಾಗಿ ಮಂದಸ್ಮಿತನಾದ
ಬಾಲಕೃಷ್ಣನು, ಅಂತಸ್ಮಿತನೂ ಆಗಿದ್ದಾನೆ ಎಂದು ಎಲ್ಲರ ನಂಬಿಕೆ. ಬಾಲಕೃಷ್ಣನಂತೆ
ನಾವೂ ಬಾಳನ್ನು ನಡೆಸಿದರೆ ಬಲು ಚೆನ್ನ ಎಂದು ಆಸೆಯೂ ಆಗುತ್ತದೆ.
ಆಳಮನಸ್ಸಿನ ಅಂತರಾಳದಲ್ಲಿರುವ ಇಂತಹ ಹಿರಿಯಾಸೆಯೇ ಪುರಾಣದ
ಕತೆಗಳಾಗಿ, ಬಾಲಕೃಷ್ಣನ ರೂಪಿನಲ್ಲಿ ಪ್ರತೀಕವಾಗಿರಬಹುದು.
{{gap}}ಬೆರಳನ್ನು ಚೀಪುತ್ತ ಸಂತಸದಿಂದ ಮಲಗಿರುವ ಮಗುವಿನ ಹೊಟ್ಟೆಯು
ತುಂಬಿರಬೇಕು. ಇಲ್ಲದಿದ್ದರೆ ಮಂದಸ್ಮಿತವಾಗಿರುವ ಬದಲು ರಚ್ಚೆ ಹಿಡಿದು
ಲಬೋ ಲಬೋ ಮಾಡುತ್ತದೆ. ಹೊಟ್ಟೆಯು ಕಚ್ಚುತ್ತಲೂ ಇರಬಹುದು.
ನೋವಾಗುತ್ತಿರಬಾರದು. ಸಾಫಾಗಿ, ಮಲ ಜಲಗಳ ವಿಸರ್ಜನೆಯೂ ಆಗಿರಬೇಕು.
ಹಾಗಿರುವಾಗ, ಸಂತಸದಿಂದ ಬೆರಳನ್ನು ಚೀಪುತ್ತ ಮಂದಸ್ಮಿತವಾಗಿರುತ್ತದೆ.
{{gap}}ಮಗುವಿನ ಎದುರು ಅಪರಿಚಿತರು, ಅದರಲ್ಲೂ ವಿಚಿತ್ರ ಮುಖದವರು,
ಹೋಗಿ ಗೊಗ್ಗರ ಧ್ವನಿಯಲ್ಲಿ ಮುದ್ದು-ಲಾಲಿ ಹಾಡ ಹೋದರೆ,ಮಗುವು ಅಳುತ್ತದೆ,
ಕಿಠಾರಂತ ಕಿರುಚಿಕೊಂಡು ಆಳುತ್ತದೆ. ಆದರೆ ಪರಿಚಿತವಾದ ತಾಯಿ ಮುಖವನ್ನು
ಕಂಡರೆ, ಮಾದಕ ನಗೆಯನ್ನು ಬೊಚ್ಚು ಬಾಯಿಯಲ್ಲಿ ಮೂಡಿಸುತ್ತದೆ. ಪುಟ್ಟ
ಕೈಗಳೆರಡನ್ನೂ ಎತ್ತಿಕೋ ಎನ್ನುವಂತೆ ಚಾಚುತ್ತದೆ. ಎತ್ತಿಕೊಂಡ ತಾಯಿಯ
ಕೊರಳಸುತ್ತ ತನ್ನ ಕೈಗಳನ್ನು ಬಳಸಿ ಹಿಡಿದುಕೊಳ್ಳುತ್ತದೆ.
{{gap}}ನಿಶ್ಚಿಂತರಾಗಿ ಬಾಲಕೃಷ್ಣನಂತೆ ಇರಬೇಕು ಎಂದು ಆಸೆಪಡುವಾಗ
ಮಗುವಿಗಿರುವ ನಿರ್ಮಲ ಮನಸ್ಸು ಇರಬೇಕು ಎಂದು ಅರ್ಥವೇ ಹೊರತು,
ಮಗುವಿನಂತೆ ತಾಯ ಆಸರೆಯನ್ನು ಸದಾಕಾಲವೂ ಪಡೆದಿರಬೇಕು ಎಂದಲ್ಲ.
ಅಪರಿಚಿತರನ್ನು ಕಂಡರೆ ಬೆದರಿ ಬೊಬ್ಬೆ ಹಾಕಬೇಕು. ಎಂದಲ್ಲ. ಮಗುವು
ಪರಾವಲಂಬಿ. ಹಸಿವಾದಾಗ ಅಳುವುದೊಂದೇ ಅದರ ಮನಸ್ಸು ಹೂಡುವ
ಪ್ರತಿಕ್ರಿಯೆ. ತಾಯಿಯೋ ದಾದಿಯೋ ಆಗ ಬಂದು ಹಾಲನ್ನು ಕುಡಿಸುತ್ತಾಳೆ.<noinclude></noinclude>
dttxr55gnetl9lhy4k5c6nfq74310zd
ಪುಟ:ಮನಮಂಥನ.pdf/೩೫೯
104
62806
316671
314611
2026-05-04T03:38:36Z
Shreesha Sharma
7840
/* Validated */
316671
proofread-page
text/x-wiki
<noinclude><pagequality level="4" user="Shreesha Sharma" />{{rh|ಬಾಲ್ಯ ಆಗಿನ ಮನಸ್ಸು||೩೪೧}}</noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೪೧}}
ಸತ್-ಚೈತನ್ಯಾಂಶದ ಆದಿಮೂಲವು ನನ್ನ ನೆರವಿಗೆ ಬಂದು, ಆಗಬಹುದಾದ
ದುಃಖವನ್ನು ತಪ್ಪಿಸಬಹುದು. ಈ ರೀತಿ ವಿಚಾರಮಾಡಿ, ವಿಚಾರಪರ ಮನಸ್ಸಿನ
ಅಂಶವು. ತನ್ನನ್ನು ತಾನೇ ಸ್ತಬ್ಧಗೊಳಿಸುತ್ತದೆ. ಮನಸ್ಸಿನ ವಿಚಾರಪರ ಅಂಶವು
ತಾನಾಗಿಯೇ 'ಬಲಿ'ಯಾಗುತ್ತದೆ. ಚಿತ್ತವೃತ್ತಿ ನಿರೋಧಃ ಎಂದು ಪತಂಜಲಿ
ಮಹರ್ಷಿಗಳೂ ಯೋಗವನ್ನು ವಿವರಿಸುವಾಗ ಹೇಳಿದುದು,
ಈ ದೃಷ್ಟಾಂತದಿಂದಲೂ ಸಮರ್ಥನೀಯವಾಗಿದೆ. ಆದರೆ ಮತ್ತೂ ಹೆಚ್ಚಿನ
ವಿಶಾಲ ಅರ್ಥವುಳ್ಳ ಆ ವಾಕ್ಯವನ್ನು ಮುಂದೆ ಅಭ್ಯಾಸ ಮಾಡೋಣ. ಅರಿಯಲು
ಪ್ರಯತ್ನಿಸೋಣ.
{{gap}}ವಯಸ್ಕರ ಮನಸ್ಸಿನಲ್ಲಿ ಕಾರ್ಯಕ್ರಮಗಳು ಹೇಗೆ ನಡೆಯುತ್ತವೆ ಎಂಬುದನ್ನು
ಸ್ಕೂಲವಾಗಿ ತಿಳಿದೆವು. ಇವಕ್ಕೆಲ್ಲಾ ಸ್ವಾರ್ಥವು ಪ್ರಮುಖವಾದ ಪ್ರೇರಣೆಯೆಂಬುದನ್ನೂ
ಅರಿತೆವು. ಬಾಳ ಅನುಭವವು, ವಿಚಾರಪರ ಮನಸ್ಸಿನ ಅಂಶದಿಂದ ನೆರವು
ಪಡೆದು, 'ನಿನ್ನ ನೀ ಕಾಪಾಡಿಕೊ ಇತರರನ್ನು ಭಗವಂತ ರಕ್ಷಿಸುತ್ತಾನೆ' ಎಂಬ
ಪಾಠವನ್ನು ಚಚ್ಚಿ ಬಡಿದು ಕಲಿಸಿರುತ್ತದೆ. ಸ್ವಂತ ಸಂರಕ್ಷಣೆಯನ್ನು
ಸಮಾಜದಲ್ಲಿದ್ದುಕೊಂಡೇ, ಮಾಡಿಕೊಳ್ಳುವಾಗ, ವಯಸ್ಕರಲ್ಲಿ ಹಲವಾರು ವಿಚಿತ್ರ
ನಡವಳಿಕೆಗಳು ಕಾಣಬರುತ್ತವೆ.
{{gap}}ಒಂದು-ನಾನು, ನಾನಿದ್ದರೆ, ತಾನೇ ಈ ಬಾಳು, ಈ ಲೋಕ,
ಈ ಸಮಾಜ, ಈ ಸಂಸಾರ. ಅಂತಹ ನನ್ನನ್ನು, ನಾನೇ, ನನಗಿರುವ ವಿಚಾರ
ಮಾಡುವ ಮನಸ್ಸಿನಿಂದ ಸಾಧಿಸಲೇಬೇಕು. ನನಗೆ ಯಾರೂ ನೆರವಾಗುವುದಿಲ್ಲ.
ಈ ಯೋಚನೆಯಿಂದ ಯಾರನ್ನೂ ನಂಬದೆ, ಬಾಳುವವರು ಕೆಲವರು.
{{gap}}ಎರಡು-ನಾನು ಇರಬೇಕಾದರೆ, ಸಮಾಜ ಮತ್ತು ಸಂಸಾರವು ನೆರವಾಗಲೇ
ಬೇಕು. ಬಾಲ್ಯದಲ್ಲಿ ತಾಯ್ತಂದೆಯರು, ಅಥವಾ ಪೋಷಕರು ಹೀಗೆ ನೆರವಾದರು,
ಮುಂದೆಯೂ ಹೀಗೆಯೇ ಆಗಬೇಕು. ಆದಕಾರಣ, ಸ್ವಾರ್ಥಕ್ಕಾಗಿಯಾದರೂ
ಪರಾರ್ಥ ಹಿತವನ್ನು ಆಗ ಮಾಡಬೇಕು ; ಎನ್ನುವವರು ಕೆಲವರು.
{{gap}}ಮೂರು-ನಾನು ಮತ್ತು ನನ್ನ ಸುಖವನ್ನು ಹಾಗೂ ಹಿತವನ್ನು
ನಡಸಿಕೊಡಬೇಕಾದರೆ, ಲೌಕಿಕವಾದ ಸಮಾಜ ಮತ್ತು ಸಂಸಾರವು ಹೆಚ್ಚು
ಪ್ರಯೋಜಕವಾಗುವುದಿಲ್ಲ. ಆದಕಾರಣ, ಬ್ರಹ್ಮಾಂಡವನ್ನು ನಡೆಸುವ ಅವ್ಯಕ್ತವಾದ
ಆದಿ ಮೂಲಕ್ಕೆ ಶರಣಾಗುವುದು ಲೇಸು. ಅದು ನನ್ನನ್ನು ರಕ್ಷಿಸುತ್ತದೆ ಎಂದು
ನಿರ್ಧರಿಸಿ, ಅದರಂತೆ ನಡೆಯುವವರು ಹಲವಾರು ಮಂದಿ, ಶರಣಾಗತರು,
ಶರಣರು.<noinclude></noinclude>
3hxogtol8gq0bp1yr3sebceh504d2xc
ಪುಟ:ಮನಮಂಥನ.pdf/೪೬೨
104
62909
316770
313827
2026-05-04T09:15:39Z
Shreelatha.Halemane
7642
316770
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೪೪೪}}{{Right|ಮನಮಂಥನ}}
Hereditary characters ಎಂಬುವು ದೇಹದ ವಿಷಯದಲ್ಲಿ ಸಾಮಾನ್ಯ
ಅನುಭವದಿಂದಲೂ ಹಾಗೂ ವೈಜ್ಞಾನಿಕವಾಗಿಯೂ ಸಮರ್ಥನೀಯವಾಗಿವೆ.
Memory is the deified from of hereditary characteristics o
ಥಾಮಸ್ ಮ್ಯಾನ್ ಹೇಳಿದ್ದಾನೆ. ಮನಸ್ಸು ಎಂಬ ಶಕ್ತಿಯ ವಿಚಾರವು ಇಂದಿನ್ನೂ
ನಮಗೆ ವಿಶದವಾಗಿ ತಿಳಿದಿಲ್ಲ. ದೇಹವು ಇಲ್ಲವಾದಾಗ, ಮನಸೂ
ಶೂನ್ಯವಾಗುತ್ತದೆಯೇ? ಅಥವಾ ಇನ್ನೊಂದು ತರಹ ಶಕ್ತಿಯಾಗಿ ಪರಿವರ್ತನೆಯನ್ನು
ಹೊಂದುತ್ತದೆಯೇ? ಯಾರೂ ತಿಳಿದಿಲ್ಲ. ಪುನರ್ಜನ್ಮವನ್ನು ನಂಬಿದವರು, ಸತ್ತವರ
ಮನಸ್ಸು ಅಥವಾ ಅದರ ಮುಖ್ಯಾಂಶವೊಂದು ಉಳಿದಿರುತ್ತದೆ. ಆದರೆ ಅದಕ್ಕೆ
ದೇಹವಿಲ್ಲದಿದುದರಿಂದ, ಇತರ ಲೌಕಿಕರ ಕಣ್ಣಿಗೆ ಕಾಣುವುದಿಲ್ಲ. ಇನ್ನೊಂದು
ದೇಹವು, ಯಾವ ಪ್ರಾಣಿಯದೇ ಆಗಲಿ ದೊರೆತರೆ, ಅದರಲ್ಲಿ ಪ್ರತಿಷ್ಠಿತವಾಗಿ,
ಆ ದೇಹದೊಂದಿಗೆ ಜನಿಸುತ್ತದೆ. ಇದನ್ನು ನಂಬುವುದಾದರೆ, ಹಿಂದಿನ ಜನ್ಮದ
ಕರ್ಮಫಲಗಳು ಅಥವಾ ಸ್ಮರಣೆಗಳು, ಅಂತಹ ಮನಸ್ಸಿನಲ್ಲಿ ಉಳಿದಿರುವುದು
ಸಮರ್ಥನೀಯ. ಈ ದೃಷ್ಟಿಯಿಂದ ನೋಡಿದರೆ ಮೇಲೆ ಉಲ್ಲೇಖಿಸಿರುವ
ಸೂತ್ರಗಳು ಅರ್ಥಗರ್ಭಿತವಾಗಿರುತ್ತವೆ.
{{center|ತೇ ವ್ಯಕ್ತ ಸೂಕ್ಷ್ಮ ಗುಣಾತ್ಮಾನ:}}
{{gap}}ತೇ, ಎಂದರೆ ಭೂತ, ವರ್ತಮಾನ, ಭವಿಷ್ಯ :-ವ್ಯಕ್ತವಾದುವು, ಮತ್ತು
ಅವ್ಯಕ್ತವಾದುವು, ಅನುಭವಿಸಿದುದು, ಹಾಗೂ ಅತಿ ಸೂಕ್ಷ್ಮವಾಗಿದ್ದು ಇನ್ನೂ
ಅನುಭವಕ್ಕೆ ಬಾರದೆ ಇರುವುವು, ಇವೆಲ್ಲವೂ ಸತ್ವ, ರಜಸ್, ತಮೋಗುಣಗಳ
ವಿಧ ವಿಧವಾದ ಸಮ್ಮಿಶ್ರಣದ ಫಲಗಳು. ಮೂರೂ ಈ ಗುಣಗಳ ಮೊದಲ
ಅವಸ್ಥೆಯು 'ಮಹತ್' ತತ್ತ್ವ ಎಂದು ಸಾಂಖ್ಯಕಾರಕರೂ, ಚಿತ್ರ ಎಂದು
ಯೋಗವಾದಿಗಳೂ ಹೆಸರಿಸುತ್ತಾರೆ.
{{center|ಪರಿಣಾಮೈಕತ್ವಾದ್ ವಸ್ತು ತತ್ತ್ವಂ}}
{{gap}}ಮೂರು ಗುಣಗಳ ಪರಿಣಾಮದ ಐಕ್ಯದಿಂದ, ವಸ್ತುವು ಒಂದು ಎಂಬ
ಭಾವನೆಯು ಮೂಡುತ್ತದೆ.
{{center|ವಸ್ತು ಸಾಮ್ಯ ಚಿತ್ತ ಭೇದಾತ್ ತಯೋ ವಿಭಕ್ತ ಪಂಥಾ}}
{{gap}}ಭೇದ ಭೇದವಾದ ಮನಸ್ಸುಗಳಿರುವುದರಿಂದ, ವಸ್ತುವು ಒಂದೇ ಆಗಿದ್ದರೂ,
ಅದು ವಿಧವಿಧವಾಗಿ ಕಾಣಿಸುತ್ತದೆ ; ಅಥವಾ ಗ್ರಹಿಸಲ್ಪಡುತ್ತದೆ. ಸ್ತ್ರೀಯು ಒಬ್ಬಳೇ
ಆಗಿದ್ದರೂ, ಪ್ರಿಯನ ಮನಸ್ಸಿನಲ್ಲಿ ಆಹ್ಲಾದವನ್ನುಂಟುಮಾಡಿ, ಸವತಿಯ ಮನಸ್ಸಿನಲ್ಲಿ
ಮತ್ಸರವನ್ನು ಮಾಡಿ, ಸಂನ್ಯಾಸಿಯ ಮನಸ್ಸಿನಲ್ಲಿ ಯಾವ ಪರಿಣಾಮವನ್ನೂ<noinclude></noinclude>
trz8b7zcmwfl286j15tepk0c0egd912
ಪುಟ:ಕುರುಕ್ಷೇತ್ರ ಗ್ರಂಥ.djvu/೯
104
72333
316807
143727
2026-05-04T09:48:44Z
Hariprasad Shetty10
7490
/* ಪರಿಶೀಲಿಸಲಾಗಿಲ್ಲ */
316807
proofread-page
text/x-wiki
<noinclude><pagequality level="1" user="Hariprasad Shetty10" />೨ ಕುರುಕ್ಷೇತ್ರ!</noinclude>ತ್ರ : ಟ - ಮರು, ಅಸ್ಪರ್ಶ. ೮., ಆಕೆಯ ಹೃದಯವನ್ನು ಸೇವಿಸುತ ವೈವ, ಆಕೆಯ ತನ್ನ ಗಲ್ಲಗಳು ತೇಜಃಪ್ರ"ಸವಾಗಿದ್ದು, ಗದ್ದದ ಹಾಗು ಎಡಗಲ್ಲದ ಮೇಲಿನ ಚಿಕ್ಕ ಹಚ್ಚಿಂಗಟ್ಟುಗಳು ನಿಚ್ಚಳವಾಗಿ ಕಾಣುತ್ತಿದ್ದವು. ದಾಡಿಮೀಬೀಜದು ಹಲ್ಲುಗಳು ಬೆಳ್ಳಗೆ ಸ್ವಚ್ಚವಾಗಿದ್ದವು. ಒಟ್ಟಿನಲಿ ಆಕೆಯ ಮುಖಮುದ್ರೆಯು ಸು ಪ್ರಸನ್ನವಾಗಿತ್ತೆಂದು ಹೇಳಬಹುದು. ಆಕೆಯ ನೆಲಕ್ಕಿ ಎಳೆಯುವಂಥ ಒಂದು ಕ್ಯಾಮಿಯ ಕಸವಿಯನ್ನು ಹಾಕಿಕೊಂಡು, ಅದು ಸರಿ ಕೈಲಾದ ಒಂದು ಗಿಡ್ಡ ಅಂಗಿಯನ್ನು, ತೊಟ್ಟುಕೊಂಡಿಲ್ಲ. ಆಕೆಯ ಎಡಹಗಲಮೇಲಿಂದ ಒಂದು ಕಿಲಂಗ ವಸ್ತ್ರದಪಯು ಒಲುಗಳೊಳಗಿಂದ ಹೊಟ್ಟೆಯಮೇಲೆ ಹಾಮ ಎವಿಯಲೆ ಗಂಟು ಹೊಡೆದಿತ್ತು. ಆಕೆಯು ಕಿವಿಟೊಪ್ಪಿಗೆಯನ್ನು ಹಾಕಿಕೊಂಡಿದ್ದು, ಅದರ ಕಸಿಗಳನ್ನು ಮೇಲಕ್ಕೆರಿಸಿ ತಲೆ ಯಮೇಲೆ ಅವುಗಳ ಗಂಟು ಹೊಡೆದಿದ್ದಳು. ಆಕೆಯ ಬಲಗಾಲೊಳಗಿನ ಕಬ್ಬಿಣದ ಸರಿಗೆ ಯೂ, ಬಲಗೈಯಾಳಗಿನ ತಂತಿಯ ಪೋಣಿಕೆಯ ಮಣಿಗಳ ಮಾಲೆಯೂ, ಕೊರಳೊಳಗಿನ ಕಾಜು-ಕಲ್ಲ-ಆನೆಹಲ್ಲುಗಳ ಸರಗಳೂ ಆಕೆಯ ವೈರಾಗ್ಯದ ಲಕ್ಷಣಗಳಾಗಿದ್ದವು. ಆ ಲಕ್ಷಣಗಳಿಗೆ ಕ್ಯಾವಿಯ ಉಡಿಗೆ-ತೊಡಿಗೆಯ ಜೋಡುದೊರೆತದ್ದರಿಂದ, ಆಕೆಯ ವೈರಾಗ್ಯ ಮುತ್ತಿನ ಕಳೆಯದಂತಾಗಿತ್ತು. ಆಕೆಯು ಸರ್ವಾಂಗಕ್ಕೆ ಬೂದಿಯ ಬಳಿದು ಬರಿಗೆ
ನಿಂದ ನಡೆಯುತ್ತಿದಳು. ಆಕೆಯ ಪಾವಗಳ, ಬೆರಳುಗಳ ಸುಂದರವಾಗಿದ್ದವು ಬಲ ಕೈಯಲ್ಲಿ ಸುಂದರವಾದ ಕರಿಯವ ನುಣಪಾದ ಬೆತ್ತರು. ಅವರ ಹಿಡಿಕೆಗೆ ಸಿಂಗ *ಚಲುಗಳು ಹವವು. ಅವುಗಳ “Tಲಗ" ಎಂ ಮಂಜಲಧನಿಯುತಿಸಿ 137 ಗಿ ಕೇಳುತ್ತಿತ್ತು. ಎಡಗಡೆಯ ಹಗಲೆ ಎಡಗೈಯಿಂದ ಓಡಿದ ಒಂದು ಸರಸ್ವತಿ ಪ್ರೀನ್ ಒಪ್ಪುತ್ತಿತ್ತು. ಅದರ ಎರಡೂ ತುದಿಗಳಿಗೆ ಒಂದೊಂದು ಬಣದ ಸಣ ಸಣ್ಣ ಕುಂಬಳಕಾಯಿಗಳಿದ್ದವು. ವೀಣೆಯ ಕಿವಿಗಳು ಆನೆಹಲ್ಲಿನವಿದ್ದವ.
* ಈ ಚಂದದಿಂದ ತರುಣಿಯು ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತ ಸಾಗಿದ್ದಳು. ಆಗ ಕುದುರೆಗಳ ಜೀಕರಿಸುವ ಸಪ್ಪಳವೂ ಆನೆಗಳ ಗಂಭೀರಧನಿಯ, ನೌಬತ್ತು, ಬಜಂತ್ರಿ, ಕೊಂಬು, ತುತ್ತೂರಿ, ಕರ್ಣಿ ಇವುಗಳ ಧ್ವನಿಯೂ, ತಾಸೆಯ ಕಡಕಡಾಟವೂ, ಮನುಷ್ಯರ ಕರ್ಕಶ ಕೂಗುಗಳೂ ಆಕೆಯ ಕಿವಿಗೆ ಬೀಳತೊಡಗಿದವು; ಆದ್ದರಿಂದ ಸಮಾಜದಲ್ಲಿಯೆ ದಂಡಿನ ಛಾವಣಿಯಿರಬಹುದೆಂದು ತಿಳಿದು, ಆಕೆಯು ಒಂದು ಹಳ್ಳದ ದಂಡಿಯ ಹಿಡಿದು ಛಾವಣಿಯ ದಿಕ್ಕಿಗೆ ಸಾಗಿದ್ದಳು. ಅಷ್ಟರಲ್ಲಿ ಇಬ್ಬರು ಟೊಣಪಾದ ಪಠಾಣರು ಆಕೆಯ ಈಗೆ ಬಿದ್ದರು. ಅವರನ್ನು ನೋಡಿದ ಕೂಡಲೆ ಆ ಬೈರಾಗಿಣಿಯ ಸೊಂಡೆಯೊಣಗಿತು. ಆಕೆಯ ಕಣ್ಣುಗಳು ಕತ್ತಲಗೂಡಿಸಿದಹಾಗಾದವು ಸರ್ವಾಂಗದಲ್ಲಿ ಕಂಪವು ಉತ್ಪನ್ನ ಪಾಯಿತು. ಆಗ ಚಳಿಗಾಲದ ಬೆಳಗಿನ ಸಮಯವಾಗಿದ್ದರೂ, ಅಂಜಿಕೆಯಿಂದ ಆಕೆಯ ಪಿಯು ಚೋರೆಂದು ಬೆವತಿತು. ಆಕೆಯನ್ನು ನೋಡಿ ಆ ಕಾಳಪುರುಷರಿಗೆ ಹರ್ಷವಾ ಯುವು ಉತ್ಪನ್ನವಾಯಿತು. ಅವರು ಅಟ್ಟಹಾಸದಿಂದ ಗಹಗಹಿಸಿ ನಗಡಗಿದರು. ಅವರು ನತ್ತ ಆ ತರುಣಬೈರಾಗಿಣಿಯ ಬಳಿಗೆ ಹೋಗಿ ಆಕೆಯ ಕೈ ಹಿಡಿಯಲು ಆಕೆಯ
-
19<noinclude></noinclude>
4869uqs9uvrrleq9u0p599ouo6ucb52
316809
316807
2026-05-04T09:51:50Z
Hariprasad Shetty10
7490
316809
proofread-page
text/x-wiki
<noinclude><pagequality level="1" user="Hariprasad Shetty10" />
{{rh||''ಕುರುಕ್ಷೇತ್ರ!''|೨ }}</noinclude>ತ್ರ : ಟ - ಮರು, ಅಸ್ಪರ್ಶ. ೮., ಆಕೆಯ ಹೃದಯವನ್ನು ಸೇವಿಸುತ ವೈವ, ಆಕೆಯ ತನ್ನ ಗಲ್ಲಗಳು ತೇಜಃಪ್ರ"ಸವಾಗಿದ್ದು, ಗದ್ದದ ಹಾಗು ಎಡಗಲ್ಲದ ಮೇಲಿನ ಚಿಕ್ಕ ಹಚ್ಚಿಂಗಟ್ಟುಗಳು ನಿಚ್ಚಳವಾಗಿ ಕಾಣುತ್ತಿದ್ದವು. ದಾಡಿಮೀಬೀಜದು ಹಲ್ಲುಗಳು ಬೆಳ್ಳಗೆ ಸ್ವಚ್ಚವಾಗಿದ್ದವು. ಒಟ್ಟಿನಲಿ ಆಕೆಯ ಮುಖಮುದ್ರೆಯು ಸು ಪ್ರಸನ್ನವಾಗಿತ್ತೆಂದು ಹೇಳಬಹುದು. ಆಕೆಯ ನೆಲಕ್ಕಿ ಎಳೆಯುವಂಥ ಒಂದು ಕ್ಯಾಮಿಯ ಕಸವಿಯನ್ನು ಹಾಕಿಕೊಂಡು, ಅದು ಸರಿ ಕೈಲಾದ ಒಂದು ಗಿಡ್ಡ ಅಂಗಿಯನ್ನು, ತೊಟ್ಟುಕೊಂಡಿಲ್ಲ. ಆಕೆಯ ಎಡಹಗಲಮೇಲಿಂದ ಒಂದು ಕಿಲಂಗ ವಸ್ತ್ರದಪಯು ಒಲುಗಳೊಳಗಿಂದ ಹೊಟ್ಟೆಯಮೇಲೆ ಹಾಮ ಎವಿಯಲೆ ಗಂಟು ಹೊಡೆದಿತ್ತು. ಆಕೆಯು ಕಿವಿಟೊಪ್ಪಿಗೆಯನ್ನು ಹಾಕಿಕೊಂಡಿದ್ದು, ಅದರ ಕಸಿಗಳನ್ನು ಮೇಲಕ್ಕೆರಿಸಿ ತಲೆ ಯಮೇಲೆ ಅವುಗಳ ಗಂಟು ಹೊಡೆದಿದ್ದಳು. ಆಕೆಯ ಬಲಗಾಲೊಳಗಿನ ಕಬ್ಬಿಣದ ಸರಿಗೆ ಯೂ, ಬಲಗೈಯಾಳಗಿನ ತಂತಿಯ ಪೋಣಿಕೆಯ ಮಣಿಗಳ ಮಾಲೆಯೂ, ಕೊರಳೊಳಗಿನ ಕಾಜು-ಕಲ್ಲ-ಆನೆಹಲ್ಲುಗಳ ಸರಗಳೂ ಆಕೆಯ ವೈರಾಗ್ಯದ ಲಕ್ಷಣಗಳಾಗಿದ್ದವು. ಆ ಲಕ್ಷಣಗಳಿಗೆ ಕ್ಯಾವಿಯ ಉಡಿಗೆ-ತೊಡಿಗೆಯ ಜೋಡುದೊರೆತದ್ದರಿಂದ, ಆಕೆಯ ವೈರಾಗ್ಯ ಮುತ್ತಿನ ಕಳೆಯದಂತಾಗಿತ್ತು. ಆಕೆಯು ಸರ್ವಾಂಗಕ್ಕೆ ಬೂದಿಯ ಬಳಿದು ಬರಿಗೆ
ನಿಂದ ನಡೆಯುತ್ತಿದಳು. ಆಕೆಯ ಪಾವಗಳ, ಬೆರಳುಗಳ ಸುಂದರವಾಗಿದ್ದವು ಬಲ ಕೈಯಲ್ಲಿ ಸುಂದರವಾದ ಕರಿಯವ ನುಣಪಾದ ಬೆತ್ತರು. ಅವರ ಹಿಡಿಕೆಗೆ ಸಿಂಗ *ಚಲುಗಳು ಹವವು. ಅವುಗಳ “Tಲಗ" ಎಂ ಮಂಜಲಧನಿಯುತಿಸಿ 137 ಗಿ ಕೇಳುತ್ತಿತ್ತು. ಎಡಗಡೆಯ ಹಗಲೆ ಎಡಗೈಯಿಂದ ಓಡಿದ ಒಂದು ಸರಸ್ವತಿ ಪ್ರೀನ್ ಒಪ್ಪುತ್ತಿತ್ತು. ಅದರ ಎರಡೂ ತುದಿಗಳಿಗೆ ಒಂದೊಂದು ಬಣದ ಸಣ ಸಣ್ಣ ಕುಂಬಳಕಾಯಿಗಳಿದ್ದವು. ವೀಣೆಯ ಕಿವಿಗಳು ಆನೆಹಲ್ಲಿನವಿದ್ದವ.
* ಈ ಚಂದದಿಂದ ತರುಣಿಯು ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತ ಸಾಗಿದ್ದಳು. ಆಗ ಕುದುರೆಗಳ ಜೀಕರಿಸುವ ಸಪ್ಪಳವೂ ಆನೆಗಳ ಗಂಭೀರಧನಿಯ, ನೌಬತ್ತು, ಬಜಂತ್ರಿ, ಕೊಂಬು, ತುತ್ತೂರಿ, ಕರ್ಣಿ ಇವುಗಳ ಧ್ವನಿಯೂ, ತಾಸೆಯ ಕಡಕಡಾಟವೂ, ಮನುಷ್ಯರ ಕರ್ಕಶ ಕೂಗುಗಳೂ ಆಕೆಯ ಕಿವಿಗೆ ಬೀಳತೊಡಗಿದವು; ಆದ್ದರಿಂದ ಸಮಾಜದಲ್ಲಿಯೆ ದಂಡಿನ ಛಾವಣಿಯಿರಬಹುದೆಂದು ತಿಳಿದು, ಆಕೆಯು ಒಂದು ಹಳ್ಳದ ದಂಡಿಯ ಹಿಡಿದು ಛಾವಣಿಯ ದಿಕ್ಕಿಗೆ ಸಾಗಿದ್ದಳು. ಅಷ್ಟರಲ್ಲಿ ಇಬ್ಬರು ಟೊಣಪಾದ ಪಠಾಣರು ಆಕೆಯ ಈಗೆ ಬಿದ್ದರು. ಅವರನ್ನು ನೋಡಿದ ಕೂಡಲೆ ಆ ಬೈರಾಗಿಣಿಯ ಸೊಂಡೆಯೊಣಗಿತು. ಆಕೆಯ ಕಣ್ಣುಗಳು ಕತ್ತಲಗೂಡಿಸಿದಹಾಗಾದವು ಸರ್ವಾಂಗದಲ್ಲಿ ಕಂಪವು ಉತ್ಪನ್ನ ಪಾಯಿತು. ಆಗ ಚಳಿಗಾಲದ ಬೆಳಗಿನ ಸಮಯವಾಗಿದ್ದರೂ, ಅಂಜಿಕೆಯಿಂದ ಆಕೆಯ ಪಿಯು ಚೋರೆಂದು ಬೆವತಿತು. ಆಕೆಯನ್ನು ನೋಡಿ ಆ ಕಾಳಪುರುಷರಿಗೆ ಹರ್ಷವಾ ಯುವು ಉತ್ಪನ್ನವಾಯಿತು. ಅವರು ಅಟ್ಟಹಾಸದಿಂದ ಗಹಗಹಿಸಿ ನಗಡಗಿದರು. ಅವರು ನತ್ತ ಆ ತರುಣಬೈರಾಗಿಣಿಯ ಬಳಿಗೆ ಹೋಗಿ ಆಕೆಯ ಕೈ ಹಿಡಿಯಲು ಆಕೆಯ
-
19<noinclude></noinclude>
g87d18u6umk11l13plzl7hveex7ibtp
316811
316809
2026-05-04T09:53:18Z
Hariprasad Shetty10
7490
316811
proofread-page
text/x-wiki
<noinclude><pagequality level="1" user="Hariprasad Shetty10" />
{{left||''ಕುರುಕ್ಷೇತ್ರ!''|೨ }}</noinclude>ತ್ರ : ಟ - ಮರು, ಅಸ್ಪರ್ಶ. ೮., ಆಕೆಯ ಹೃದಯವನ್ನು ಸೇವಿಸುತ ವೈವ, ಆಕೆಯ ತನ್ನ ಗಲ್ಲಗಳು ತೇಜಃಪ್ರ"ಸವಾಗಿದ್ದು, ಗದ್ದದ ಹಾಗು ಎಡಗಲ್ಲದ ಮೇಲಿನ ಚಿಕ್ಕ ಹಚ್ಚಿಂಗಟ್ಟುಗಳು ನಿಚ್ಚಳವಾಗಿ ಕಾಣುತ್ತಿದ್ದವು. ದಾಡಿಮೀಬೀಜದು ಹಲ್ಲುಗಳು ಬೆಳ್ಳಗೆ ಸ್ವಚ್ಚವಾಗಿದ್ದವು. ಒಟ್ಟಿನಲಿ ಆಕೆಯ ಮುಖಮುದ್ರೆಯು ಸು ಪ್ರಸನ್ನವಾಗಿತ್ತೆಂದು ಹೇಳಬಹುದು. ಆಕೆಯ ನೆಲಕ್ಕಿ ಎಳೆಯುವಂಥ ಒಂದು ಕ್ಯಾಮಿಯ ಕಸವಿಯನ್ನು ಹಾಕಿಕೊಂಡು, ಅದು ಸರಿ ಕೈಲಾದ ಒಂದು ಗಿಡ್ಡ ಅಂಗಿಯನ್ನು, ತೊಟ್ಟುಕೊಂಡಿಲ್ಲ. ಆಕೆಯ ಎಡಹಗಲಮೇಲಿಂದ ಒಂದು ಕಿಲಂಗ ವಸ್ತ್ರದಪಯು ಒಲುಗಳೊಳಗಿಂದ ಹೊಟ್ಟೆಯಮೇಲೆ ಹಾಮ ಎವಿಯಲೆ ಗಂಟು ಹೊಡೆದಿತ್ತು. ಆಕೆಯು ಕಿವಿಟೊಪ್ಪಿಗೆಯನ್ನು ಹಾಕಿಕೊಂಡಿದ್ದು, ಅದರ ಕಸಿಗಳನ್ನು ಮೇಲಕ್ಕೆರಿಸಿ ತಲೆ ಯಮೇಲೆ ಅವುಗಳ ಗಂಟು ಹೊಡೆದಿದ್ದಳು. ಆಕೆಯ ಬಲಗಾಲೊಳಗಿನ ಕಬ್ಬಿಣದ ಸರಿಗೆ ಯೂ, ಬಲಗೈಯಾಳಗಿನ ತಂತಿಯ ಪೋಣಿಕೆಯ ಮಣಿಗಳ ಮಾಲೆಯೂ, ಕೊರಳೊಳಗಿನ ಕಾಜು-ಕಲ್ಲ-ಆನೆಹಲ್ಲುಗಳ ಸರಗಳೂ ಆಕೆಯ ವೈರಾಗ್ಯದ ಲಕ್ಷಣಗಳಾಗಿದ್ದವು. ಆ ಲಕ್ಷಣಗಳಿಗೆ ಕ್ಯಾವಿಯ ಉಡಿಗೆ-ತೊಡಿಗೆಯ ಜೋಡುದೊರೆತದ್ದರಿಂದ, ಆಕೆಯ ವೈರಾಗ್ಯ ಮುತ್ತಿನ ಕಳೆಯದಂತಾಗಿತ್ತು. ಆಕೆಯು ಸರ್ವಾಂಗಕ್ಕೆ ಬೂದಿಯ ಬಳಿದು ಬರಿಗೆ
ನಿಂದ ನಡೆಯುತ್ತಿದಳು. ಆಕೆಯ ಪಾವಗಳ, ಬೆರಳುಗಳ ಸುಂದರವಾಗಿದ್ದವು ಬಲ ಕೈಯಲ್ಲಿ ಸುಂದರವಾದ ಕರಿಯವ ನುಣಪಾದ ಬೆತ್ತರು. ಅವರ ಹಿಡಿಕೆಗೆ ಸಿಂಗ *ಚಲುಗಳು ಹವವು. ಅವುಗಳ “Tಲಗ" ಎಂ ಮಂಜಲಧನಿಯುತಿಸಿ 137 ಗಿ ಕೇಳುತ್ತಿತ್ತು. ಎಡಗಡೆಯ ಹಗಲೆ ಎಡಗೈಯಿಂದ ಓಡಿದ ಒಂದು ಸರಸ್ವತಿ ಪ್ರೀನ್ ಒಪ್ಪುತ್ತಿತ್ತು. ಅದರ ಎರಡೂ ತುದಿಗಳಿಗೆ ಒಂದೊಂದು ಬಣದ ಸಣ ಸಣ್ಣ ಕುಂಬಳಕಾಯಿಗಳಿದ್ದವು. ವೀಣೆಯ ಕಿವಿಗಳು ಆನೆಹಲ್ಲಿನವಿದ್ದವ.
* ಈ ಚಂದದಿಂದ ತರುಣಿಯು ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತ ಸಾಗಿದ್ದಳು. ಆಗ ಕುದುರೆಗಳ ಜೀಕರಿಸುವ ಸಪ್ಪಳವೂ ಆನೆಗಳ ಗಂಭೀರಧನಿಯ, ನೌಬತ್ತು, ಬಜಂತ್ರಿ, ಕೊಂಬು, ತುತ್ತೂರಿ, ಕರ್ಣಿ ಇವುಗಳ ಧ್ವನಿಯೂ, ತಾಸೆಯ ಕಡಕಡಾಟವೂ, ಮನುಷ್ಯರ ಕರ್ಕಶ ಕೂಗುಗಳೂ ಆಕೆಯ ಕಿವಿಗೆ ಬೀಳತೊಡಗಿದವು; ಆದ್ದರಿಂದ ಸಮಾಜದಲ್ಲಿಯೆ ದಂಡಿನ ಛಾವಣಿಯಿರಬಹುದೆಂದು ತಿಳಿದು, ಆಕೆಯು ಒಂದು ಹಳ್ಳದ ದಂಡಿಯ ಹಿಡಿದು ಛಾವಣಿಯ ದಿಕ್ಕಿಗೆ ಸಾಗಿದ್ದಳು. ಅಷ್ಟರಲ್ಲಿ ಇಬ್ಬರು ಟೊಣಪಾದ ಪಠಾಣರು ಆಕೆಯ ಈಗೆ ಬಿದ್ದರು. ಅವರನ್ನು ನೋಡಿದ ಕೂಡಲೆ ಆ ಬೈರಾಗಿಣಿಯ ಸೊಂಡೆಯೊಣಗಿತು. ಆಕೆಯ ಕಣ್ಣುಗಳು ಕತ್ತಲಗೂಡಿಸಿದಹಾಗಾದವು ಸರ್ವಾಂಗದಲ್ಲಿ ಕಂಪವು ಉತ್ಪನ್ನ ಪಾಯಿತು. ಆಗ ಚಳಿಗಾಲದ ಬೆಳಗಿನ ಸಮಯವಾಗಿದ್ದರೂ, ಅಂಜಿಕೆಯಿಂದ ಆಕೆಯ ಪಿಯು ಚೋರೆಂದು ಬೆವತಿತು. ಆಕೆಯನ್ನು ನೋಡಿ ಆ ಕಾಳಪುರುಷರಿಗೆ ಹರ್ಷವಾ ಯುವು ಉತ್ಪನ್ನವಾಯಿತು. ಅವರು ಅಟ್ಟಹಾಸದಿಂದ ಗಹಗಹಿಸಿ ನಗಡಗಿದರು. ಅವರು ನತ್ತ ಆ ತರುಣಬೈರಾಗಿಣಿಯ ಬಳಿಗೆ ಹೋಗಿ ಆಕೆಯ ಕೈ ಹಿಡಿಯಲು ಆಕೆಯ
-
19<noinclude></noinclude>
0nmragnow36mhtwkv5hqfmhrlt5cn4z
316812
316811
2026-05-04T09:53:39Z
Hariprasad Shetty10
7490
316812
proofread-page
text/x-wiki
<noinclude><pagequality level="1" user="Hariprasad Shetty10" />
{{lt||''ಕುರುಕ್ಷೇತ್ರ!''|೨ }}</noinclude>ತ್ರ : ಟ - ಮರು, ಅಸ್ಪರ್ಶ. ೮., ಆಕೆಯ ಹೃದಯವನ್ನು ಸೇವಿಸುತ ವೈವ, ಆಕೆಯ ತನ್ನ ಗಲ್ಲಗಳು ತೇಜಃಪ್ರ"ಸವಾಗಿದ್ದು, ಗದ್ದದ ಹಾಗು ಎಡಗಲ್ಲದ ಮೇಲಿನ ಚಿಕ್ಕ ಹಚ್ಚಿಂಗಟ್ಟುಗಳು ನಿಚ್ಚಳವಾಗಿ ಕಾಣುತ್ತಿದ್ದವು. ದಾಡಿಮೀಬೀಜದು ಹಲ್ಲುಗಳು ಬೆಳ್ಳಗೆ ಸ್ವಚ್ಚವಾಗಿದ್ದವು. ಒಟ್ಟಿನಲಿ ಆಕೆಯ ಮುಖಮುದ್ರೆಯು ಸು ಪ್ರಸನ್ನವಾಗಿತ್ತೆಂದು ಹೇಳಬಹುದು. ಆಕೆಯ ನೆಲಕ್ಕಿ ಎಳೆಯುವಂಥ ಒಂದು ಕ್ಯಾಮಿಯ ಕಸವಿಯನ್ನು ಹಾಕಿಕೊಂಡು, ಅದು ಸರಿ ಕೈಲಾದ ಒಂದು ಗಿಡ್ಡ ಅಂಗಿಯನ್ನು, ತೊಟ್ಟುಕೊಂಡಿಲ್ಲ. ಆಕೆಯ ಎಡಹಗಲಮೇಲಿಂದ ಒಂದು ಕಿಲಂಗ ವಸ್ತ್ರದಪಯು ಒಲುಗಳೊಳಗಿಂದ ಹೊಟ್ಟೆಯಮೇಲೆ ಹಾಮ ಎವಿಯಲೆ ಗಂಟು ಹೊಡೆದಿತ್ತು. ಆಕೆಯು ಕಿವಿಟೊಪ್ಪಿಗೆಯನ್ನು ಹಾಕಿಕೊಂಡಿದ್ದು, ಅದರ ಕಸಿಗಳನ್ನು ಮೇಲಕ್ಕೆರಿಸಿ ತಲೆ ಯಮೇಲೆ ಅವುಗಳ ಗಂಟು ಹೊಡೆದಿದ್ದಳು. ಆಕೆಯ ಬಲಗಾಲೊಳಗಿನ ಕಬ್ಬಿಣದ ಸರಿಗೆ ಯೂ, ಬಲಗೈಯಾಳಗಿನ ತಂತಿಯ ಪೋಣಿಕೆಯ ಮಣಿಗಳ ಮಾಲೆಯೂ, ಕೊರಳೊಳಗಿನ ಕಾಜು-ಕಲ್ಲ-ಆನೆಹಲ್ಲುಗಳ ಸರಗಳೂ ಆಕೆಯ ವೈರಾಗ್ಯದ ಲಕ್ಷಣಗಳಾಗಿದ್ದವು. ಆ ಲಕ್ಷಣಗಳಿಗೆ ಕ್ಯಾವಿಯ ಉಡಿಗೆ-ತೊಡಿಗೆಯ ಜೋಡುದೊರೆತದ್ದರಿಂದ, ಆಕೆಯ ವೈರಾಗ್ಯ ಮುತ್ತಿನ ಕಳೆಯದಂತಾಗಿತ್ತು. ಆಕೆಯು ಸರ್ವಾಂಗಕ್ಕೆ ಬೂದಿಯ ಬಳಿದು ಬರಿಗೆ
ನಿಂದ ನಡೆಯುತ್ತಿದಳು. ಆಕೆಯ ಪಾವಗಳ, ಬೆರಳುಗಳ ಸುಂದರವಾಗಿದ್ದವು ಬಲ ಕೈಯಲ್ಲಿ ಸುಂದರವಾದ ಕರಿಯವ ನುಣಪಾದ ಬೆತ್ತರು. ಅವರ ಹಿಡಿಕೆಗೆ ಸಿಂಗ *ಚಲುಗಳು ಹವವು. ಅವುಗಳ “Tಲಗ" ಎಂ ಮಂಜಲಧನಿಯುತಿಸಿ 137 ಗಿ ಕೇಳುತ್ತಿತ್ತು. ಎಡಗಡೆಯ ಹಗಲೆ ಎಡಗೈಯಿಂದ ಓಡಿದ ಒಂದು ಸರಸ್ವತಿ ಪ್ರೀನ್ ಒಪ್ಪುತ್ತಿತ್ತು. ಅದರ ಎರಡೂ ತುದಿಗಳಿಗೆ ಒಂದೊಂದು ಬಣದ ಸಣ ಸಣ್ಣ ಕುಂಬಳಕಾಯಿಗಳಿದ್ದವು. ವೀಣೆಯ ಕಿವಿಗಳು ಆನೆಹಲ್ಲಿನವಿದ್ದವ.
* ಈ ಚಂದದಿಂದ ತರುಣಿಯು ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತ ಸಾಗಿದ್ದಳು. ಆಗ ಕುದುರೆಗಳ ಜೀಕರಿಸುವ ಸಪ್ಪಳವೂ ಆನೆಗಳ ಗಂಭೀರಧನಿಯ, ನೌಬತ್ತು, ಬಜಂತ್ರಿ, ಕೊಂಬು, ತುತ್ತೂರಿ, ಕರ್ಣಿ ಇವುಗಳ ಧ್ವನಿಯೂ, ತಾಸೆಯ ಕಡಕಡಾಟವೂ, ಮನುಷ್ಯರ ಕರ್ಕಶ ಕೂಗುಗಳೂ ಆಕೆಯ ಕಿವಿಗೆ ಬೀಳತೊಡಗಿದವು; ಆದ್ದರಿಂದ ಸಮಾಜದಲ್ಲಿಯೆ ದಂಡಿನ ಛಾವಣಿಯಿರಬಹುದೆಂದು ತಿಳಿದು, ಆಕೆಯು ಒಂದು ಹಳ್ಳದ ದಂಡಿಯ ಹಿಡಿದು ಛಾವಣಿಯ ದಿಕ್ಕಿಗೆ ಸಾಗಿದ್ದಳು. ಅಷ್ಟರಲ್ಲಿ ಇಬ್ಬರು ಟೊಣಪಾದ ಪಠಾಣರು ಆಕೆಯ ಈಗೆ ಬಿದ್ದರು. ಅವರನ್ನು ನೋಡಿದ ಕೂಡಲೆ ಆ ಬೈರಾಗಿಣಿಯ ಸೊಂಡೆಯೊಣಗಿತು. ಆಕೆಯ ಕಣ್ಣುಗಳು ಕತ್ತಲಗೂಡಿಸಿದಹಾಗಾದವು ಸರ್ವಾಂಗದಲ್ಲಿ ಕಂಪವು ಉತ್ಪನ್ನ ಪಾಯಿತು. ಆಗ ಚಳಿಗಾಲದ ಬೆಳಗಿನ ಸಮಯವಾಗಿದ್ದರೂ, ಅಂಜಿಕೆಯಿಂದ ಆಕೆಯ ಪಿಯು ಚೋರೆಂದು ಬೆವತಿತು. ಆಕೆಯನ್ನು ನೋಡಿ ಆ ಕಾಳಪುರುಷರಿಗೆ ಹರ್ಷವಾ ಯುವು ಉತ್ಪನ್ನವಾಯಿತು. ಅವರು ಅಟ್ಟಹಾಸದಿಂದ ಗಹಗಹಿಸಿ ನಗಡಗಿದರು. ಅವರು ನತ್ತ ಆ ತರುಣಬೈರಾಗಿಣಿಯ ಬಳಿಗೆ ಹೋಗಿ ಆಕೆಯ ಕೈ ಹಿಡಿಯಲು ಆಕೆಯ
-
19<noinclude></noinclude>
24ldgc4hrhrm4nbklsx7k4nl7u32aaa
316814
316812
2026-05-04T09:54:13Z
Hariprasad Shetty10
7490
316814
proofread-page
text/x-wiki
<noinclude><pagequality level="1" user="Hariprasad Shetty10" />
{{left||''ಕುರುಕ್ಷೇತ್ರ!''|೨ }}</noinclude>ತ್ರ : ಟ - ಮರು, ಅಸ್ಪರ್ಶ. ೮., ಆಕೆಯ ಹೃದಯವನ್ನು ಸೇವಿಸುತ ವೈವ, ಆಕೆಯ ತನ್ನ ಗಲ್ಲಗಳು ತೇಜಃಪ್ರ"ಸವಾಗಿದ್ದು, ಗದ್ದದ ಹಾಗು ಎಡಗಲ್ಲದ ಮೇಲಿನ ಚಿಕ್ಕ ಹಚ್ಚಿಂಗಟ್ಟುಗಳು ನಿಚ್ಚಳವಾಗಿ ಕಾಣುತ್ತಿದ್ದವು. ದಾಡಿಮೀಬೀಜದು ಹಲ್ಲುಗಳು ಬೆಳ್ಳಗೆ ಸ್ವಚ್ಚವಾಗಿದ್ದವು. ಒಟ್ಟಿನಲಿ ಆಕೆಯ ಮುಖಮುದ್ರೆಯು ಸು ಪ್ರಸನ್ನವಾಗಿತ್ತೆಂದು ಹೇಳಬಹುದು. ಆಕೆಯ ನೆಲಕ್ಕಿ ಎಳೆಯುವಂಥ ಒಂದು ಕ್ಯಾಮಿಯ ಕಸವಿಯನ್ನು ಹಾಕಿಕೊಂಡು, ಅದು ಸರಿ ಕೈಲಾದ ಒಂದು ಗಿಡ್ಡ ಅಂಗಿಯನ್ನು, ತೊಟ್ಟುಕೊಂಡಿಲ್ಲ. ಆಕೆಯ ಎಡಹಗಲಮೇಲಿಂದ ಒಂದು ಕಿಲಂಗ ವಸ್ತ್ರದಪಯು ಒಲುಗಳೊಳಗಿಂದ ಹೊಟ್ಟೆಯಮೇಲೆ ಹಾಮ ಎವಿಯಲೆ ಗಂಟು ಹೊಡೆದಿತ್ತು. ಆಕೆಯು ಕಿವಿಟೊಪ್ಪಿಗೆಯನ್ನು ಹಾಕಿಕೊಂಡಿದ್ದು, ಅದರ ಕಸಿಗಳನ್ನು ಮೇಲಕ್ಕೆರಿಸಿ ತಲೆ ಯಮೇಲೆ ಅವುಗಳ ಗಂಟು ಹೊಡೆದಿದ್ದಳು. ಆಕೆಯ ಬಲಗಾಲೊಳಗಿನ ಕಬ್ಬಿಣದ ಸರಿಗೆ ಯೂ, ಬಲಗೈಯಾಳಗಿನ ತಂತಿಯ ಪೋಣಿಕೆಯ ಮಣಿಗಳ ಮಾಲೆಯೂ, ಕೊರಳೊಳಗಿನ ಕಾಜು-ಕಲ್ಲ-ಆನೆಹಲ್ಲುಗಳ ಸರಗಳೂ ಆಕೆಯ ವೈರಾಗ್ಯದ ಲಕ್ಷಣಗಳಾಗಿದ್ದವು. ಆ ಲಕ್ಷಣಗಳಿಗೆ ಕ್ಯಾವಿಯ ಉಡಿಗೆ-ತೊಡಿಗೆಯ ಜೋಡುದೊರೆತದ್ದರಿಂದ, ಆಕೆಯ ವೈರಾಗ್ಯ ಮುತ್ತಿನ ಕಳೆಯದಂತಾಗಿತ್ತು. ಆಕೆಯು ಸರ್ವಾಂಗಕ್ಕೆ ಬೂದಿಯ ಬಳಿದು ಬರಿಗೆ
ನಿಂದ ನಡೆಯುತ್ತಿದಳು. ಆಕೆಯ ಪಾವಗಳ, ಬೆರಳುಗಳ ಸುಂದರವಾಗಿದ್ದವು ಬಲ ಕೈಯಲ್ಲಿ ಸುಂದರವಾದ ಕರಿಯವ ನುಣಪಾದ ಬೆತ್ತರು. ಅವರ ಹಿಡಿಕೆಗೆ ಸಿಂಗ *ಚಲುಗಳು ಹವವು. ಅವುಗಳ “Tಲಗ" ಎಂ ಮಂಜಲಧನಿಯುತಿಸಿ 137 ಗಿ ಕೇಳುತ್ತಿತ್ತು. ಎಡಗಡೆಯ ಹಗಲೆ ಎಡಗೈಯಿಂದ ಓಡಿದ ಒಂದು ಸರಸ್ವತಿ ಪ್ರೀನ್ ಒಪ್ಪುತ್ತಿತ್ತು. ಅದರ ಎರಡೂ ತುದಿಗಳಿಗೆ ಒಂದೊಂದು ಬಣದ ಸಣ ಸಣ್ಣ ಕುಂಬಳಕಾಯಿಗಳಿದ್ದವು. ವೀಣೆಯ ಕಿವಿಗಳು ಆನೆಹಲ್ಲಿನವಿದ್ದವ.
* ಈ ಚಂದದಿಂದ ತರುಣಿಯು ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತ ಸಾಗಿದ್ದಳು. ಆಗ ಕುದುರೆಗಳ ಜೀಕರಿಸುವ ಸಪ್ಪಳವೂ ಆನೆಗಳ ಗಂಭೀರಧನಿಯ, ನೌಬತ್ತು, ಬಜಂತ್ರಿ, ಕೊಂಬು, ತುತ್ತೂರಿ, ಕರ್ಣಿ ಇವುಗಳ ಧ್ವನಿಯೂ, ತಾಸೆಯ ಕಡಕಡಾಟವೂ, ಮನುಷ್ಯರ ಕರ್ಕಶ ಕೂಗುಗಳೂ ಆಕೆಯ ಕಿವಿಗೆ ಬೀಳತೊಡಗಿದವು; ಆದ್ದರಿಂದ ಸಮಾಜದಲ್ಲಿಯೆ ದಂಡಿನ ಛಾವಣಿಯಿರಬಹುದೆಂದು ತಿಳಿದು, ಆಕೆಯು ಒಂದು ಹಳ್ಳದ ದಂಡಿಯ ಹಿಡಿದು ಛಾವಣಿಯ ದಿಕ್ಕಿಗೆ ಸಾಗಿದ್ದಳು. ಅಷ್ಟರಲ್ಲಿ ಇಬ್ಬರು ಟೊಣಪಾದ ಪಠಾಣರು ಆಕೆಯ ಈಗೆ ಬಿದ್ದರು. ಅವರನ್ನು ನೋಡಿದ ಕೂಡಲೆ ಆ ಬೈರಾಗಿಣಿಯ ಸೊಂಡೆಯೊಣಗಿತು. ಆಕೆಯ ಕಣ್ಣುಗಳು ಕತ್ತಲಗೂಡಿಸಿದಹಾಗಾದವು ಸರ್ವಾಂಗದಲ್ಲಿ ಕಂಪವು ಉತ್ಪನ್ನ ಪಾಯಿತು. ಆಗ ಚಳಿಗಾಲದ ಬೆಳಗಿನ ಸಮಯವಾಗಿದ್ದರೂ, ಅಂಜಿಕೆಯಿಂದ ಆಕೆಯ ಪಿಯು ಚೋರೆಂದು ಬೆವತಿತು. ಆಕೆಯನ್ನು ನೋಡಿ ಆ ಕಾಳಪುರುಷರಿಗೆ ಹರ್ಷವಾ ಯುವು ಉತ್ಪನ್ನವಾಯಿತು. ಅವರು ಅಟ್ಟಹಾಸದಿಂದ ಗಹಗಹಿಸಿ ನಗಡಗಿದರು. ಅವರು ನತ್ತ ಆ ತರುಣಬೈರಾಗಿಣಿಯ ಬಳಿಗೆ ಹೋಗಿ ಆಕೆಯ ಕೈ ಹಿಡಿಯಲು ಆಕೆಯ
-
19<noinclude></noinclude>
0nmragnow36mhtwkv5hqfmhrlt5cn4z
316815
316814
2026-05-04T09:55:29Z
Hariprasad Shetty10
7490
316815
proofread-page
text/x-wiki
<noinclude><pagequality level="1" user="Hariprasad Shetty10" />
{{rh|೨|''ಕುರುಕ್ಷೇತ್ರ!''|}}</noinclude>ತ್ರ : ಟ - ಮರು, ಅಸ್ಪರ್ಶ. ೮., ಆಕೆಯ ಹೃದಯವನ್ನು ಸೇವಿಸುತ ವೈವ, ಆಕೆಯ ತನ್ನ ಗಲ್ಲಗಳು ತೇಜಃಪ್ರ"ಸವಾಗಿದ್ದು, ಗದ್ದದ ಹಾಗು ಎಡಗಲ್ಲದ ಮೇಲಿನ ಚಿಕ್ಕ ಹಚ್ಚಿಂಗಟ್ಟುಗಳು ನಿಚ್ಚಳವಾಗಿ ಕಾಣುತ್ತಿದ್ದವು. ದಾಡಿಮೀಬೀಜದು ಹಲ್ಲುಗಳು ಬೆಳ್ಳಗೆ ಸ್ವಚ್ಚವಾಗಿದ್ದವು. ಒಟ್ಟಿನಲಿ ಆಕೆಯ ಮುಖಮುದ್ರೆಯು ಸು ಪ್ರಸನ್ನವಾಗಿತ್ತೆಂದು ಹೇಳಬಹುದು. ಆಕೆಯ ನೆಲಕ್ಕಿ ಎಳೆಯುವಂಥ ಒಂದು ಕ್ಯಾಮಿಯ ಕಸವಿಯನ್ನು ಹಾಕಿಕೊಂಡು, ಅದು ಸರಿ ಕೈಲಾದ ಒಂದು ಗಿಡ್ಡ ಅಂಗಿಯನ್ನು, ತೊಟ್ಟುಕೊಂಡಿಲ್ಲ. ಆಕೆಯ ಎಡಹಗಲಮೇಲಿಂದ ಒಂದು ಕಿಲಂಗ ವಸ್ತ್ರದಪಯು ಒಲುಗಳೊಳಗಿಂದ ಹೊಟ್ಟೆಯಮೇಲೆ ಹಾಮ ಎವಿಯಲೆ ಗಂಟು ಹೊಡೆದಿತ್ತು. ಆಕೆಯು ಕಿವಿಟೊಪ್ಪಿಗೆಯನ್ನು ಹಾಕಿಕೊಂಡಿದ್ದು, ಅದರ ಕಸಿಗಳನ್ನು ಮೇಲಕ್ಕೆರಿಸಿ ತಲೆ ಯಮೇಲೆ ಅವುಗಳ ಗಂಟು ಹೊಡೆದಿದ್ದಳು. ಆಕೆಯ ಬಲಗಾಲೊಳಗಿನ ಕಬ್ಬಿಣದ ಸರಿಗೆ ಯೂ, ಬಲಗೈಯಾಳಗಿನ ತಂತಿಯ ಪೋಣಿಕೆಯ ಮಣಿಗಳ ಮಾಲೆಯೂ, ಕೊರಳೊಳಗಿನ ಕಾಜು-ಕಲ್ಲ-ಆನೆಹಲ್ಲುಗಳ ಸರಗಳೂ ಆಕೆಯ ವೈರಾಗ್ಯದ ಲಕ್ಷಣಗಳಾಗಿದ್ದವು. ಆ ಲಕ್ಷಣಗಳಿಗೆ ಕ್ಯಾವಿಯ ಉಡಿಗೆ-ತೊಡಿಗೆಯ ಜೋಡುದೊರೆತದ್ದರಿಂದ, ಆಕೆಯ ವೈರಾಗ್ಯ ಮುತ್ತಿನ ಕಳೆಯದಂತಾಗಿತ್ತು. ಆಕೆಯು ಸರ್ವಾಂಗಕ್ಕೆ ಬೂದಿಯ ಬಳಿದು ಬರಿಗೆ
ನಿಂದ ನಡೆಯುತ್ತಿದಳು. ಆಕೆಯ ಪಾವಗಳ, ಬೆರಳುಗಳ ಸುಂದರವಾಗಿದ್ದವು ಬಲ ಕೈಯಲ್ಲಿ ಸುಂದರವಾದ ಕರಿಯವ ನುಣಪಾದ ಬೆತ್ತರು. ಅವರ ಹಿಡಿಕೆಗೆ ಸಿಂಗ *ಚಲುಗಳು ಹವವು. ಅವುಗಳ “Tಲಗ" ಎಂ ಮಂಜಲಧನಿಯುತಿಸಿ 137 ಗಿ ಕೇಳುತ್ತಿತ್ತು. ಎಡಗಡೆಯ ಹಗಲೆ ಎಡಗೈಯಿಂದ ಓಡಿದ ಒಂದು ಸರಸ್ವತಿ ಪ್ರೀನ್ ಒಪ್ಪುತ್ತಿತ್ತು. ಅದರ ಎರಡೂ ತುದಿಗಳಿಗೆ ಒಂದೊಂದು ಬಣದ ಸಣ ಸಣ್ಣ ಕುಂಬಳಕಾಯಿಗಳಿದ್ದವು. ವೀಣೆಯ ಕಿವಿಗಳು ಆನೆಹಲ್ಲಿನವಿದ್ದವ.
* ಈ ಚಂದದಿಂದ ತರುಣಿಯು ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತ ಸಾಗಿದ್ದಳು. ಆಗ ಕುದುರೆಗಳ ಜೀಕರಿಸುವ ಸಪ್ಪಳವೂ ಆನೆಗಳ ಗಂಭೀರಧನಿಯ, ನೌಬತ್ತು, ಬಜಂತ್ರಿ, ಕೊಂಬು, ತುತ್ತೂರಿ, ಕರ್ಣಿ ಇವುಗಳ ಧ್ವನಿಯೂ, ತಾಸೆಯ ಕಡಕಡಾಟವೂ, ಮನುಷ್ಯರ ಕರ್ಕಶ ಕೂಗುಗಳೂ ಆಕೆಯ ಕಿವಿಗೆ ಬೀಳತೊಡಗಿದವು; ಆದ್ದರಿಂದ ಸಮಾಜದಲ್ಲಿಯೆ ದಂಡಿನ ಛಾವಣಿಯಿರಬಹುದೆಂದು ತಿಳಿದು, ಆಕೆಯು ಒಂದು ಹಳ್ಳದ ದಂಡಿಯ ಹಿಡಿದು ಛಾವಣಿಯ ದಿಕ್ಕಿಗೆ ಸಾಗಿದ್ದಳು. ಅಷ್ಟರಲ್ಲಿ ಇಬ್ಬರು ಟೊಣಪಾದ ಪಠಾಣರು ಆಕೆಯ ಈಗೆ ಬಿದ್ದರು. ಅವರನ್ನು ನೋಡಿದ ಕೂಡಲೆ ಆ ಬೈರಾಗಿಣಿಯ ಸೊಂಡೆಯೊಣಗಿತು. ಆಕೆಯ ಕಣ್ಣುಗಳು ಕತ್ತಲಗೂಡಿಸಿದಹಾಗಾದವು ಸರ್ವಾಂಗದಲ್ಲಿ ಕಂಪವು ಉತ್ಪನ್ನ ಪಾಯಿತು. ಆಗ ಚಳಿಗಾಲದ ಬೆಳಗಿನ ಸಮಯವಾಗಿದ್ದರೂ, ಅಂಜಿಕೆಯಿಂದ ಆಕೆಯ ಪಿಯು ಚೋರೆಂದು ಬೆವತಿತು. ಆಕೆಯನ್ನು ನೋಡಿ ಆ ಕಾಳಪುರುಷರಿಗೆ ಹರ್ಷವಾ ಯುವು ಉತ್ಪನ್ನವಾಯಿತು. ಅವರು ಅಟ್ಟಹಾಸದಿಂದ ಗಹಗಹಿಸಿ ನಗಡಗಿದರು. ಅವರು ನತ್ತ ಆ ತರುಣಬೈರಾಗಿಣಿಯ ಬಳಿಗೆ ಹೋಗಿ ಆಕೆಯ ಕೈ ಹಿಡಿಯಲು ಆಕೆಯ
-
19<noinclude></noinclude>
pqxawnof38n6zkdu3s3unz93q7d2u66
316816
316815
2026-05-04T09:56:57Z
Hariprasad Shetty10
7490
316816
proofread-page
text/x-wiki
<noinclude><pagequality level="1" user="Hariprasad Shetty10" />
{{rh|೨|''ಕುರುಕ್ಷೇತ್ರ!''|}}</noinclude>ನೆಟ್ಟನ ಮೂಗು, ಅಚ್ಚ ಕೆಂಪಾದ ತುಟಿಗಳು, ಆಕೆಯ ಹೃದಯವನ್ನು ಸೇವಿಸುತ ವೈವ, ಆಕೆಯ ತನ್ನ ಗಲ್ಲಗಳು ತೇಜಃಪ್ರ"ಸವಾಗಿದ್ದು, ಗದ್ದದ ಹಾಗು ಎಡಗಲ್ಲದ ಮೇಲಿನ ಚಿಕ್ಕ ಹಚ್ಚಿಂಗಟ್ಟುಗಳು ನಿಚ್ಚಳವಾಗಿ ಕಾಣುತ್ತಿದ್ದವು. ದಾಡಿಮೀಬೀಜದು ಹಲ್ಲುಗಳು ಬೆಳ್ಳಗೆ ಸ್ವಚ್ಚವಾಗಿದ್ದವು. ಒಟ್ಟಿನಲಿ ಆಕೆಯ ಮುಖಮುದ್ರೆಯು ಸು ಪ್ರಸನ್ನವಾಗಿತ್ತೆಂದು ಹೇಳಬಹುದು. ಆಕೆಯ ನೆಲಕ್ಕಿ ಎಳೆಯುವಂಥ ಒಂದು ಕ್ಯಾಮಿಯ ಕಸವಿಯನ್ನು ಹಾಕಿಕೊಂಡು, ಅದು ಸರಿ ಕೈಲಾದ ಒಂದು ಗಿಡ್ಡ ಅಂಗಿಯನ್ನು, ತೊಟ್ಟುಕೊಂಡಿಲ್ಲ. ಆಕೆಯ ಎಡಹಗಲಮೇಲಿಂದ ಒಂದು ಕಿಲಂಗ ವಸ್ತ್ರದಪಯು ಒಲುಗಳೊಳಗಿಂದ ಹೊಟ್ಟೆಯಮೇಲೆ ಹಾಮ ಎವಿಯಲೆ ಗಂಟು ಹೊಡೆದಿತ್ತು. ಆಕೆಯು ಕಿವಿಟೊಪ್ಪಿಗೆಯನ್ನು ಹಾಕಿಕೊಂಡಿದ್ದು, ಅದರ ಕಸಿಗಳನ್ನು ಮೇಲಕ್ಕೆರಿಸಿ ತಲೆ ಯಮೇಲೆ ಅವುಗಳ ಗಂಟು ಹೊಡೆದಿದ್ದಳು. ಆಕೆಯ ಬಲಗಾಲೊಳಗಿನ ಕಬ್ಬಿಣದ ಸರಿಗೆ ಯೂ, ಬಲಗೈಯಾಳಗಿನ ತಂತಿಯ ಪೋಣಿಕೆಯ ಮಣಿಗಳ ಮಾಲೆಯೂ, ಕೊರಳೊಳಗಿನ ಕಾಜು-ಕಲ್ಲ-ಆನೆಹಲ್ಲುಗಳ ಸರಗಳೂ ಆಕೆಯ ವೈರಾಗ್ಯದ ಲಕ್ಷಣಗಳಾಗಿದ್ದವು. ಆ ಲಕ್ಷಣಗಳಿಗೆ ಕ್ಯಾವಿಯ ಉಡಿಗೆ-ತೊಡಿಗೆಯ ಜೋಡುದೊರೆತದ್ದರಿಂದ, ಆಕೆಯ ವೈರಾಗ್ಯ ಮುತ್ತಿನ ಕಳೆಯದಂತಾಗಿತ್ತು. ಆಕೆಯು ಸರ್ವಾಂಗಕ್ಕೆ ಬೂದಿಯ ಬಳಿದು ಬರಿಗೆ
ನಿಂದ ನಡೆಯುತ್ತಿದಳು. ಆಕೆಯ ಪಾವಗಳ, ಬೆರಳುಗಳ ಸುಂದರವಾಗಿದ್ದವು ಬಲ ಕೈಯಲ್ಲಿ ಸುಂದರವಾದ ಕರಿಯವ ನುಣಪಾದ ಬೆತ್ತರು. ಅವರ ಹಿಡಿಕೆಗೆ ಸಿಂಗ *ಚಲುಗಳು ಹವವು. ಅವುಗಳ “Tಲಗ" ಎಂ ಮಂಜಲಧನಿಯುತಿಸಿ 137 ಗಿ ಕೇಳುತ್ತಿತ್ತು. ಎಡಗಡೆಯ ಹಗಲೆ ಎಡಗೈಯಿಂದ ಓಡಿದ ಒಂದು ಸರಸ್ವತಿ ಪ್ರೀನ್ ಒಪ್ಪುತ್ತಿತ್ತು. ಅದರ ಎರಡೂ ತುದಿಗಳಿಗೆ ಒಂದೊಂದು ಬಣದ ಸಣ ಸಣ್ಣ ಕುಂಬಳಕಾಯಿಗಳಿದ್ದವು. ವೀಣೆಯ ಕಿವಿಗಳು ಆನೆಹಲ್ಲಿನವಿದ್ದವ.
* ಈ ಚಂದದಿಂದ ತರುಣಿಯು ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತ ಸಾಗಿದ್ದಳು. ಆಗ ಕುದುರೆಗಳ ಜೀಕರಿಸುವ ಸಪ್ಪಳವೂ ಆನೆಗಳ ಗಂಭೀರಧನಿಯ, ನೌಬತ್ತು, ಬಜಂತ್ರಿ, ಕೊಂಬು, ತುತ್ತೂರಿ, ಕರ್ಣಿ ಇವುಗಳ ಧ್ವನಿಯೂ, ತಾಸೆಯ ಕಡಕಡಾಟವೂ, ಮನುಷ್ಯರ ಕರ್ಕಶ ಕೂಗುಗಳೂ ಆಕೆಯ ಕಿವಿಗೆ ಬೀಳತೊಡಗಿದವು; ಆದ್ದರಿಂದ ಸಮಾಜದಲ್ಲಿಯೆ ದಂಡಿನ ಛಾವಣಿಯಿರಬಹುದೆಂದು ತಿಳಿದು, ಆಕೆಯು ಒಂದು ಹಳ್ಳದ ದಂಡಿಯ ಹಿಡಿದು ಛಾವಣಿಯ ದಿಕ್ಕಿಗೆ ಸಾಗಿದ್ದಳು. ಅಷ್ಟರಲ್ಲಿ ಇಬ್ಬರು ಟೊಣಪಾದ ಪಠಾಣರು ಆಕೆಯ ಈಗೆ ಬಿದ್ದರು. ಅವರನ್ನು ನೋಡಿದ ಕೂಡಲೆ ಆ ಬೈರಾಗಿಣಿಯ ಸೊಂಡೆಯೊಣಗಿತು. ಆಕೆಯ ಕಣ್ಣುಗಳು ಕತ್ತಲಗೂಡಿಸಿದಹಾಗಾದವು ಸರ್ವಾಂಗದಲ್ಲಿ ಕಂಪವು ಉತ್ಪನ್ನ ಪಾಯಿತು. ಆಗ ಚಳಿಗಾಲದ ಬೆಳಗಿನ ಸಮಯವಾಗಿದ್ದರೂ, ಅಂಜಿಕೆಯಿಂದ ಆಕೆಯ ಪಿಯು ಚೋರೆಂದು ಬೆವತಿತು. ಆಕೆಯನ್ನು ನೋಡಿ ಆ ಕಾಳಪುರುಷರಿಗೆ ಹರ್ಷವಾ ಯುವು ಉತ್ಪನ್ನವಾಯಿತು. ಅವರು ಅಟ್ಟಹಾಸದಿಂದ ಗಹಗಹಿಸಿ ನಗಡಗಿದರು. ಅವರು ನತ್ತ ಆ ತರುಣಬೈರಾಗಿಣಿಯ ಬಳಿಗೆ ಹೋಗಿ ಆಕೆಯ ಕೈ ಹಿಡಿಯಲು ಆಕೆಯ
-
19<noinclude></noinclude>
1lbd42th302x17ch84fhu90p6srnn17
316817
316816
2026-05-04T09:58:14Z
Hariprasad Shetty10
7490
316817
proofread-page
text/x-wiki
<noinclude><pagequality level="1" user="Hariprasad Shetty10" />
{{rh|೨|''ಕುರುಕ್ಷೇತ್ರ!''|}}</noinclude>ನೆಟ್ಟನ ಮೂಗು, ಅಚ್ಚ ಕೆಂಪಾದ ತುಟಿಗಳು, ಆಕೆಯ ಸೌಂದರ್ಯವನ್ನು ಹೆಚ್ಚಿಸುತಲಿದ್ದವು. ಆಕೆಯ ತನ್ನ ಗಲ್ಲಗಳು ತೇಜಃಪ್ರ"ಸವಾಗಿದ್ದು, ಗದ್ದದ ಹಾಗು ಎಡಗಲ್ಲದ ಮೇಲಿನ ಚಿಕ್ಕ ಹಚ್ಚಿಂಗಟ್ಟುಗಳು ನಿಚ್ಚಳವಾಗಿ ಕಾಣುತ್ತಿದ್ದವು. ದಾಡಿಮೀಬೀಜದು ಹಲ್ಲುಗಳು ಬೆಳ್ಳಗೆ ಸ್ವಚ್ಚವಾಗಿದ್ದವು. ಒಟ್ಟಿನಲಿ ಆಕೆಯ ಮುಖಮುದ್ರೆಯು ಸು ಪ್ರಸನ್ನವಾಗಿತ್ತೆಂದು ಹೇಳಬಹುದು. ಆಕೆಯ ನೆಲಕ್ಕಿ ಎಳೆಯುವಂಥ ಒಂದು ಕ್ಯಾಮಿಯ ಕಸವಿಯನ್ನು ಹಾಕಿಕೊಂಡು, ಅದು ಸರಿ ಕೈಲಾದ ಒಂದು ಗಿಡ್ಡ ಅಂಗಿಯನ್ನು, ತೊಟ್ಟುಕೊಂಡಿಲ್ಲ. ಆಕೆಯ ಎಡಹಗಲಮೇಲಿಂದ ಒಂದು ಕಿಲಂಗ ವಸ್ತ್ರದಪಯು ಒಲುಗಳೊಳಗಿಂದ ಹೊಟ್ಟೆಯಮೇಲೆ ಹಾಮ ಎವಿಯಲೆ ಗಂಟು ಹೊಡೆದಿತ್ತು. ಆಕೆಯು ಕಿವಿಟೊಪ್ಪಿಗೆಯನ್ನು ಹಾಕಿಕೊಂಡಿದ್ದು, ಅದರ ಕಸಿಗಳನ್ನು ಮೇಲಕ್ಕೆರಿಸಿ ತಲೆ ಯಮೇಲೆ ಅವುಗಳ ಗಂಟು ಹೊಡೆದಿದ್ದಳು. ಆಕೆಯ ಬಲಗಾಲೊಳಗಿನ ಕಬ್ಬಿಣದ ಸರಿಗೆ ಯೂ, ಬಲಗೈಯಾಳಗಿನ ತಂತಿಯ ಪೋಣಿಕೆಯ ಮಣಿಗಳ ಮಾಲೆಯೂ, ಕೊರಳೊಳಗಿನ ಕಾಜು-ಕಲ್ಲ-ಆನೆಹಲ್ಲುಗಳ ಸರಗಳೂ ಆಕೆಯ ವೈರಾಗ್ಯದ ಲಕ್ಷಣಗಳಾಗಿದ್ದವು. ಆ ಲಕ್ಷಣಗಳಿಗೆ ಕ್ಯಾವಿಯ ಉಡಿಗೆ-ತೊಡಿಗೆಯ ಜೋಡುದೊರೆತದ್ದರಿಂದ, ಆಕೆಯ ವೈರಾಗ್ಯ ಮುತ್ತಿನ ಕಳೆಯದಂತಾಗಿತ್ತು. ಆಕೆಯು ಸರ್ವಾಂಗಕ್ಕೆ ಬೂದಿಯ ಬಳಿದು ಬರಿಗೆ
ನಿಂದ ನಡೆಯುತ್ತಿದಳು. ಆಕೆಯ ಪಾವಗಳ, ಬೆರಳುಗಳ ಸುಂದರವಾಗಿದ್ದವು ಬಲ ಕೈಯಲ್ಲಿ ಸುಂದರವಾದ ಕರಿಯವ ನುಣಪಾದ ಬೆತ್ತರು. ಅವರ ಹಿಡಿಕೆಗೆ ಸಿಂಗ *ಚಲುಗಳು ಹವವು. ಅವುಗಳ “Tಲಗ" ಎಂ ಮಂಜಲಧನಿಯುತಿಸಿ 137 ಗಿ ಕೇಳುತ್ತಿತ್ತು. ಎಡಗಡೆಯ ಹಗಲೆ ಎಡಗೈಯಿಂದ ಓಡಿದ ಒಂದು ಸರಸ್ವತಿ ಪ್ರೀನ್ ಒಪ್ಪುತ್ತಿತ್ತು. ಅದರ ಎರಡೂ ತುದಿಗಳಿಗೆ ಒಂದೊಂದು ಬಣದ ಸಣ ಸಣ್ಣ ಕುಂಬಳಕಾಯಿಗಳಿದ್ದವು. ವೀಣೆಯ ಕಿವಿಗಳು ಆನೆಹಲ್ಲಿನವಿದ್ದವ.
* ಈ ಚಂದದಿಂದ ತರುಣಿಯು ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತ ಸಾಗಿದ್ದಳು. ಆಗ ಕುದುರೆಗಳ ಜೀಕರಿಸುವ ಸಪ್ಪಳವೂ ಆನೆಗಳ ಗಂಭೀರಧನಿಯ, ನೌಬತ್ತು, ಬಜಂತ್ರಿ, ಕೊಂಬು, ತುತ್ತೂರಿ, ಕರ್ಣಿ ಇವುಗಳ ಧ್ವನಿಯೂ, ತಾಸೆಯ ಕಡಕಡಾಟವೂ, ಮನುಷ್ಯರ ಕರ್ಕಶ ಕೂಗುಗಳೂ ಆಕೆಯ ಕಿವಿಗೆ ಬೀಳತೊಡಗಿದವು; ಆದ್ದರಿಂದ ಸಮಾಜದಲ್ಲಿಯೆ ದಂಡಿನ ಛಾವಣಿಯಿರಬಹುದೆಂದು ತಿಳಿದು, ಆಕೆಯು ಒಂದು ಹಳ್ಳದ ದಂಡಿಯ ಹಿಡಿದು ಛಾವಣಿಯ ದಿಕ್ಕಿಗೆ ಸಾಗಿದ್ದಳು. ಅಷ್ಟರಲ್ಲಿ ಇಬ್ಬರು ಟೊಣಪಾದ ಪಠಾಣರು ಆಕೆಯ ಈಗೆ ಬಿದ್ದರು. ಅವರನ್ನು ನೋಡಿದ ಕೂಡಲೆ ಆ ಬೈರಾಗಿಣಿಯ ಸೊಂಡೆಯೊಣಗಿತು. ಆಕೆಯ ಕಣ್ಣುಗಳು ಕತ್ತಲಗೂಡಿಸಿದಹಾಗಾದವು ಸರ್ವಾಂಗದಲ್ಲಿ ಕಂಪವು ಉತ್ಪನ್ನ ಪಾಯಿತು. ಆಗ ಚಳಿಗಾಲದ ಬೆಳಗಿನ ಸಮಯವಾಗಿದ್ದರೂ, ಅಂಜಿಕೆಯಿಂದ ಆಕೆಯ ಪಿಯು ಚೋರೆಂದು ಬೆವತಿತು. ಆಕೆಯನ್ನು ನೋಡಿ ಆ ಕಾಳಪುರುಷರಿಗೆ ಹರ್ಷವಾ ಯುವು ಉತ್ಪನ್ನವಾಯಿತು. ಅವರು ಅಟ್ಟಹಾಸದಿಂದ ಗಹಗಹಿಸಿ ನಗಡಗಿದರು. ಅವರು ನತ್ತ ಆ ತರುಣಬೈರಾಗಿಣಿಯ ಬಳಿಗೆ ಹೋಗಿ ಆಕೆಯ ಕೈ ಹಿಡಿಯಲು ಆಕೆಯ
-
19<noinclude></noinclude>
bw4l3pxbxxjgx7rt1smqxjfohrr0tg3
316821
316817
2026-05-04T10:02:09Z
Hariprasad Shetty10
7490
316821
proofread-page
text/x-wiki
<noinclude><pagequality level="1" user="Hariprasad Shetty10" />
{{rh|೨|''ಕುರುಕ್ಷೇತ್ರ!''|}}</noinclude>ನೆಟ್ಟನ ಮೂಗು, ಅಚ್ಚ ಕೆಂಪಾದ ತುಟಿಗಳು, ಆಕೆಯ ಸೌಂದರ್ಯವನ್ನು ಹೆಚ್ಚಿಸುತಲಿದ್ದವು. ಆಕೆಯ ತೆಳ್ಳಗಿನ ಗಲ್ಲಗಳು ತೇಜಃಪುಂಜವಾಗಿದ್ದು, ಗದ್ದದ ಹಾಗು ಎಡಗಲ್ಲದ ಮೇಲಿನ ಚಿಕ್ಕ ಹಚ್ಚಿಂಗಟ್ಟುಗಳು ನಿಚ್ಚಳವಾಗಿ ಕಾಣುತ್ತಿದ್ದವು. ದಾಳಿಂಬ ಬೀಜದಂತಹ ಹಲ್ಲುಗಳು ಬೆಳ್ಳಗೆ ಸ್ವಚ್ಚವಾಗಿದ್ದವು. ಒಟ್ಟಿನಲಿ ಆಕೆಯ ಮುಖಮುದ್ರೆಯು ಸುಪ್ರಸನ್ನವಾಗಿತ್ತೆಂದು ಹೇಳಬಹುದು. ಆಕೆಯ ನೆಲಕ್ಕಿ ಎಳೆಯುವಂಥ ಒಂದು ಕ್ಯಾಮಿಯ ಕಸವಿಯನ್ನು ಹಾಕಿಕೊಂಡು, ಅದು ಸರಿ ಕೈಲಾದ ಒಂದು ಗಿಡ್ಡ ಅಂಗಿಯನ್ನು, ತೊಟ್ಟುಕೊಂಡಿಲ್ಲ. ಆಕೆಯ ಎಡಹಗಲಮೇಲಿಂದ ಒಂದು ಕಿಲಂಗ ವಸ್ತ್ರದಪಯು ಒಲುಗಳೊಳಗಿಂದ ಹೊಟ್ಟೆಯಮೇಲೆ ಹಾಮ ಎವಿಯಲೆ ಗಂಟು ಹೊಡೆದಿತ್ತು. ಆಕೆಯು ಕಿವಿಟೊಪ್ಪಿಗೆಯನ್ನು ಹಾಕಿಕೊಂಡಿದ್ದು, ಅದರ ಕಸಿಗಳನ್ನು ಮೇಲಕ್ಕೆರಿಸಿ ತಲೆ ಯಮೇಲೆ ಅವುಗಳ ಗಂಟು ಹೊಡೆದಿದ್ದಳು. ಆಕೆಯ ಬಲಗಾಲೊಳಗಿನ ಕಬ್ಬಿಣದ ಸರಿಗೆ ಯೂ, ಬಲಗೈಯಾಳಗಿನ ತಂತಿಯ ಪೋಣಿಕೆಯ ಮಣಿಗಳ ಮಾಲೆಯೂ, ಕೊರಳೊಳಗಿನ ಕಾಜು-ಕಲ್ಲ-ಆನೆಹಲ್ಲುಗಳ ಸರಗಳೂ ಆಕೆಯ ವೈರಾಗ್ಯದ ಲಕ್ಷಣಗಳಾಗಿದ್ದವು. ಆ ಲಕ್ಷಣಗಳಿಗೆ ಕ್ಯಾವಿಯ ಉಡಿಗೆ-ತೊಡಿಗೆಯ ಜೋಡುದೊರೆತದ್ದರಿಂದ, ಆಕೆಯ ವೈರಾಗ್ಯ ಮುತ್ತಿನ ಕಳೆಯದಂತಾಗಿತ್ತು. ಆಕೆಯು ಸರ್ವಾಂಗಕ್ಕೆ ಬೂದಿಯ ಬಳಿದು ಬರಿಗೆ
ನಿಂದ ನಡೆಯುತ್ತಿದಳು. ಆಕೆಯ ಪಾವಗಳ, ಬೆರಳುಗಳ ಸುಂದರವಾಗಿದ್ದವು ಬಲ ಕೈಯಲ್ಲಿ ಸುಂದರವಾದ ಕರಿಯವ ನುಣಪಾದ ಬೆತ್ತರು. ಅವರ ಹಿಡಿಕೆಗೆ ಸಿಂಗ *ಚಲುಗಳು ಹವವು. ಅವುಗಳ “Tಲಗ" ಎಂ ಮಂಜಲಧನಿಯುತಿಸಿ 137 ಗಿ ಕೇಳುತ್ತಿತ್ತು. ಎಡಗಡೆಯ ಹಗಲೆ ಎಡಗೈಯಿಂದ ಓಡಿದ ಒಂದು ಸರಸ್ವತಿ ಪ್ರೀನ್ ಒಪ್ಪುತ್ತಿತ್ತು. ಅದರ ಎರಡೂ ತುದಿಗಳಿಗೆ ಒಂದೊಂದು ಬಣದ ಸಣ ಸಣ್ಣ ಕುಂಬಳಕಾಯಿಗಳಿದ್ದವು. ವೀಣೆಯ ಕಿವಿಗಳು ಆನೆಹಲ್ಲಿನವಿದ್ದವ.
* ಈ ಚಂದದಿಂದ ತರುಣಿಯು ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತ ಸಾಗಿದ್ದಳು. ಆಗ ಕುದುರೆಗಳ ಜೀಕರಿಸುವ ಸಪ್ಪಳವೂ ಆನೆಗಳ ಗಂಭೀರಧನಿಯ, ನೌಬತ್ತು, ಬಜಂತ್ರಿ, ಕೊಂಬು, ತುತ್ತೂರಿ, ಕರ್ಣಿ ಇವುಗಳ ಧ್ವನಿಯೂ, ತಾಸೆಯ ಕಡಕಡಾಟವೂ, ಮನುಷ್ಯರ ಕರ್ಕಶ ಕೂಗುಗಳೂ ಆಕೆಯ ಕಿವಿಗೆ ಬೀಳತೊಡಗಿದವು; ಆದ್ದರಿಂದ ಸಮಾಜದಲ್ಲಿಯೆ ದಂಡಿನ ಛಾವಣಿಯಿರಬಹುದೆಂದು ತಿಳಿದು, ಆಕೆಯು ಒಂದು ಹಳ್ಳದ ದಂಡಿಯ ಹಿಡಿದು ಛಾವಣಿಯ ದಿಕ್ಕಿಗೆ ಸಾಗಿದ್ದಳು. ಅಷ್ಟರಲ್ಲಿ ಇಬ್ಬರು ಟೊಣಪಾದ ಪಠಾಣರು ಆಕೆಯ ಈಗೆ ಬಿದ್ದರು. ಅವರನ್ನು ನೋಡಿದ ಕೂಡಲೆ ಆ ಬೈರಾಗಿಣಿಯ ಸೊಂಡೆಯೊಣಗಿತು. ಆಕೆಯ ಕಣ್ಣುಗಳು ಕತ್ತಲಗೂಡಿಸಿದಹಾಗಾದವು ಸರ್ವಾಂಗದಲ್ಲಿ ಕಂಪವು ಉತ್ಪನ್ನ ಪಾಯಿತು. ಆಗ ಚಳಿಗಾಲದ ಬೆಳಗಿನ ಸಮಯವಾಗಿದ್ದರೂ, ಅಂಜಿಕೆಯಿಂದ ಆಕೆಯ ಪಿಯು ಚೋರೆಂದು ಬೆವತಿತು. ಆಕೆಯನ್ನು ನೋಡಿ ಆ ಕಾಳಪುರುಷರಿಗೆ ಹರ್ಷವಾ ಯುವು ಉತ್ಪನ್ನವಾಯಿತು. ಅವರು ಅಟ್ಟಹಾಸದಿಂದ ಗಹಗಹಿಸಿ ನಗಡಗಿದರು. ಅವರು ನತ್ತ ಆ ತರುಣಬೈರಾಗಿಣಿಯ ಬಳಿಗೆ ಹೋಗಿ ಆಕೆಯ ಕೈ ಹಿಡಿಯಲು ಆಕೆಯ
-
19<noinclude></noinclude>
go0ffuq9o9fbu5t0k2e2rqj7gkw7fvt
316838
316821
2026-05-04T10:22:50Z
Hariprasad Shetty10
7490
316838
proofread-page
text/x-wiki
<noinclude><pagequality level="1" user="Hariprasad Shetty10" />
{{rh|೨|''ಕುರುಕ್ಷೇತ್ರ!''|}}</noinclude>ನೆಟ್ಟನ ಮೂಗು, ಅಚ್ಚ ಕೆಂಪಾದ ತುಟಿಗಳು, ಆಕೆಯ ಸೌಂದರ್ಯವನ್ನು ಹೆಚ್ಚಿಸುತಲಿದ್ದವು. ಆಕೆಯ ತೆಳ್ಳಗಿನ ಗಲ್ಲಗಳು ತೇಜಃಪುಂಜವಾಗಿದ್ದು, ಗಲ್ಲದ ಹಾಗೂ ಎಡಗಲ್ಲದ ಮೇಲಿನ ಚಿಕ್ಕ ಹಚ್ಚಿಯಬಟ್ಟುಗಳು ನಿಚ್ಚಳವಾಗಿ ಕಾಣುತ್ತಿದ್ದವು. ದಾಳಿಂಬ ಬೀಜದಂತಹ ಹಲ್ಲುಗಳು ಬೆಳ್ಳಗೆ ಸ್ವಚ್ಚವಾಗಿದ್ದವು. ಒಟ್ಟಿನಲಿ ಆಕೆಯ ಮುಖಮುದ್ರೆಯು ಸುಪ್ರಸನ್ನವಾಗಿತ್ತೆಂದು ಹೇಳಬಹುದು. ಆಕೆಯ ನೆಲಕ್ಕಿ ಎಳೆಯುವಂಥ ಒಂದು ಕ್ಯಾಮಿಯ ಕಸವಿಯನ್ನು ಹಾಕಿಕೊಂಡು, ಅದು ಸರಿ ಕೈಲಾದ ಒಂದು ಗಿಡ್ಡ ಅಂಗಿಯನ್ನು, ತೊಟ್ಟುಕೊಂಡಿಲ್ಲ. ಆಕೆಯ ಎಡಹಗಲಮೇಲಿಂದ ಒಂದು ಕಿಲಂಗ ವಸ್ತ್ರದಪಯು ಒಲುಗಳೊಳಗಿಂದ ಹೊಟ್ಟೆಯಮೇಲೆ ಹಾಮ ಎವಿಯಲೆ ಗಂಟು ಹೊಡೆದಿತ್ತು. ಆಕೆಯು ಕಿವಿಟೊಪ್ಪಿಗೆಯನ್ನು ಹಾಕಿಕೊಂಡಿದ್ದು, ಅದರ ಕಸಿಗಳನ್ನು ಮೇಲಕ್ಕೆರಿಸಿ ತಲೆ ಯಮೇಲೆ ಅವುಗಳ ಗಂಟು ಹೊಡೆದಿದ್ದಳು. ಆಕೆಯ ಬಲಗಾಲೊಳಗಿನ ಕಬ್ಬಿಣದ ಸರಿಗೆ ಯೂ, ಬಲಗೈಯಾಳಗಿನ ತಂತಿಯ ಪೋಣಿಕೆಯ ಮಣಿಗಳ ಮಾಲೆಯೂ, ಕೊರಳೊಳಗಿನ ಕಾಜು-ಕಲ್ಲ-ಆನೆಹಲ್ಲುಗಳ ಸರಗಳೂ ಆಕೆಯ ವೈರಾಗ್ಯದ ಲಕ್ಷಣಗಳಾಗಿದ್ದವು. ಆ ಲಕ್ಷಣಗಳಿಗೆ ಕ್ಯಾವಿಯ ಉಡಿಗೆ-ತೊಡಿಗೆಯ ಜೋಡುದೊರೆತದ್ದರಿಂದ, ಆಕೆಯ ವೈರಾಗ್ಯ ಮುತ್ತಿನ ಕಳೆಯದಂತಾಗಿತ್ತು. ಆಕೆಯು ಸರ್ವಾಂಗಕ್ಕೆ ಬೂದಿಯ ಬಳಿದು ಬರಿಗೆ
ನಿಂದ ನಡೆಯುತ್ತಿದಳು. ಆಕೆಯ ಪಾವಗಳ, ಬೆರಳುಗಳ ಸುಂದರವಾಗಿದ್ದವು ಬಲ ಕೈಯಲ್ಲಿ ಸುಂದರವಾದ ಕರಿಯವ ನುಣಪಾದ ಬೆತ್ತರು. ಅವರ ಹಿಡಿಕೆಗೆ ಸಿಂಗ *ಚಲುಗಳು ಹವವು. ಅವುಗಳ “Tಲಗ" ಎಂ ಮಂಜಲಧನಿಯುತಿಸಿ 137 ಗಿ ಕೇಳುತ್ತಿತ್ತು. ಎಡಗಡೆಯ ಹಗಲೆ ಎಡಗೈಯಿಂದ ಓಡಿದ ಒಂದು ಸರಸ್ವತಿ ಪ್ರೀನ್ ಒಪ್ಪುತ್ತಿತ್ತು. ಅದರ ಎರಡೂ ತುದಿಗಳಿಗೆ ಒಂದೊಂದು ಬಣದ ಸಣ ಸಣ್ಣ ಕುಂಬಳಕಾಯಿಗಳಿದ್ದವು. ವೀಣೆಯ ಕಿವಿಗಳು ಆನೆಹಲ್ಲಿನವಿದ್ದವ.
* ಈ ಚಂದದಿಂದ ತರುಣಿಯು ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತ ಸಾಗಿದ್ದಳು. ಆಗ ಕುದುರೆಗಳ ಜೀಕರಿಸುವ ಸಪ್ಪಳವೂ ಆನೆಗಳ ಗಂಭೀರಧನಿಯ, ನೌಬತ್ತು, ಬಜಂತ್ರಿ, ಕೊಂಬು, ತುತ್ತೂರಿ, ಕರ್ಣಿ ಇವುಗಳ ಧ್ವನಿಯೂ, ತಾಸೆಯ ಕಡಕಡಾಟವೂ, ಮನುಷ್ಯರ ಕರ್ಕಶ ಕೂಗುಗಳೂ ಆಕೆಯ ಕಿವಿಗೆ ಬೀಳತೊಡಗಿದವು; ಆದ್ದರಿಂದ ಸಮಾಜದಲ್ಲಿಯೆ ದಂಡಿನ ಛಾವಣಿಯಿರಬಹುದೆಂದು ತಿಳಿದು, ಆಕೆಯು ಒಂದು ಹಳ್ಳದ ದಂಡಿಯ ಹಿಡಿದು ಛಾವಣಿಯ ದಿಕ್ಕಿಗೆ ಸಾಗಿದ್ದಳು. ಅಷ್ಟರಲ್ಲಿ ಇಬ್ಬರು ಟೊಣಪಾದ ಪಠಾಣರು ಆಕೆಯ ಈಗೆ ಬಿದ್ದರು. ಅವರನ್ನು ನೋಡಿದ ಕೂಡಲೆ ಆ ಬೈರಾಗಿಣಿಯ ಸೊಂಡೆಯೊಣಗಿತು. ಆಕೆಯ ಕಣ್ಣುಗಳು ಕತ್ತಲಗೂಡಿಸಿದಹಾಗಾದವು ಸರ್ವಾಂಗದಲ್ಲಿ ಕಂಪವು ಉತ್ಪನ್ನ ಪಾಯಿತು. ಆಗ ಚಳಿಗಾಲದ ಬೆಳಗಿನ ಸಮಯವಾಗಿದ್ದರೂ, ಅಂಜಿಕೆಯಿಂದ ಆಕೆಯ ಪಿಯು ಚೋರೆಂದು ಬೆವತಿತು. ಆಕೆಯನ್ನು ನೋಡಿ ಆ ಕಾಳಪುರುಷರಿಗೆ ಹರ್ಷವಾ ಯುವು ಉತ್ಪನ್ನವಾಯಿತು. ಅವರು ಅಟ್ಟಹಾಸದಿಂದ ಗಹಗಹಿಸಿ ನಗಡಗಿದರು. ಅವರು ನತ್ತ ಆ ತರುಣಬೈರಾಗಿಣಿಯ ಬಳಿಗೆ ಹೋಗಿ ಆಕೆಯ ಕೈ ಹಿಡಿಯಲು ಆಕೆಯ
-
19<noinclude></noinclude>
fro0sgtaqlqqbhegd45f6l2mves3u6l
ಪುಟ:ನನ್ನ ನಲ್ಲ.pdf/೧೨೪
104
75521
316870
313094
2026-05-04T11:11:59Z
Pragathi. BH
7585
/* Validated */
316870
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|ನನ್ನ ನಲ್ಲ}}{{Right|೧೦೧}}
<poem>ನನ್ನಯ ಆಶೆಗೆ ನೀವಾಧಾರ
ನನ್ನಯ ಜನ್ಮಕೆ ನೀವ್ ಕೈವಾರ
ನೀವಾಧಾರ ನೀವೇ ಪೂರಾ
ನೀವೇ ಎನ್ನಯ ಸೂತ್ರಧಾರಾ
ನೀವೇ ಎನ್ನಯ ಗತಿಮತಿ ಪೂರಾ
ನೀವೇ ನನ್ನನು ನಡಿಸಿರಿ ಪೂರಾ
ಪೂರಾ ಪೂರಾ ನೀವೇ ಪೂರಾ
ಪೂರ್ಣಾತ್ ಪೂರ್ಣಮಿದಂ ಪರಿಪೂರಾ</poem><noinclude></noinclude>
lmyxnqf57xc5hvdy77stu2nzba1dg83
316871
316870
2026-05-04T11:13:12Z
Pragathi. BH
7585
316871
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ನನ್ನ ನಲ್ಲ|right=೧೦೧}}
<poem>ನನ್ನಯ ಆಶೆಗೆ ನೀವಾಧಾರ
ನನ್ನಯ ಜನ್ಮಕೆ ನೀವ್ ಕೈವಾರ
ನೀವಾಧಾರ ನೀವೇ ಪೂರಾ
ನೀವೇ ಎನ್ನಯ ಸೂತ್ರಧಾರಾ
ನೀವೇ ಎನ್ನಯ ಗತಿಮತಿ ಪೂರಾ
ನೀವೇ ನನ್ನನು ನಡಿಸಿರಿ ಪೂರಾ
ಪೂರಾ ಪೂರಾ ನೀವೇ ಪೂರಾ
ಪೂರ್ಣಾತ್ ಪೂರ್ಣಮಿದಂ ಪರಿಪೂರಾ</poem><noinclude></noinclude>
gmx32ns78g1amnkyb2snaotnk65jub8
316872
316871
2026-05-04T11:13:29Z
Pragathi. BH
7585
316872
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ನನ್ನ ನಲ್ಲ|right=೧೦೧}}
<poem>ನನ್ನಯ ಆಶೆಗೆ ನೀವಾಧಾರ
ನನ್ನಯ ಜನ್ಮಕೆ ನೀವ್ ಕೈವಾರ
ನೀವಾಧಾರ ನೀವೇ ಪೂರಾ
ನೀವೇ ಎನ್ನಯ ಸೂತ್ರಧಾರಾ
ನೀವೇ ಎನ್ನಯ ಗತಿಮತಿ ಪೂರಾ
ನೀವೇ ನನ್ನನು ನಡಿಸಿರಿ ಪೂರಾ
ಪೂರಾ ಪೂರಾ ನೀವೇ ಪೂರಾ
ಪೂರ್ಣಾತ್ ಪೂರ್ಣಮಿದಂ ಪರಿಪೂರಾ</poem><noinclude></noinclude>
abjavzeakwh5z8szbfmd0ddg947ik5c
ಪುಟ:ನನ್ನ ನಲ್ಲ.pdf/೧೨೫
104
75522
316873
313095
2026-05-04T11:14:36Z
Pragathi. BH
7585
/* Validated */
316873
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|೧೦೨}}{{Right|ನನ್ನ ನಲ್ಲ}}
'''೩೪, ಅಭೇದ'''
<poem>ತಾಯಿಯೆ ತಂದೆ- | ತಂದೆಯ ತಾಯಿ
ಈರ್ವರು ನಮಗೊಂದಾಗಿ ಹಿರಿ
ತಾಯೇ, ತಂದೇ, | ನಿಮ್ಮೊಳು ಭೇದವ
ಗೈಯುವ ಬುದ್ಧಿಯ ತೊಲಗಿಸಿರಿ ೧
ಒಂದೋ ಎರಡೋ | ನೀವೇ ಬಲ್ಲಿರಿ
ಶಿಶುಗುಣ ಪೊರೆಯಲು ಬಂದಿಹಿರಿ
ಒಂದಿದ್ದೂ ಸಹ । ಎರಡಾಗಿಹಿರಿ
ಎರಡಾಗಿಯು ಒಂದೇ ಇಹಿರಿ ೨
ಕಽ ವೇ ಖs ವು । ಖs ವೇ ಕs ವು
ಶ್ರುತಿಧರರೊಡೆದಿಹಿರೀ ಒಗಟು
ಕಽ ವೇಂ ? ಖs ವೇಂ? । ಕs -ಗಃ ಘ
ಓ-ಬಧಿರರಿಗೆಲ್ಲಿಯ ಒಡಪು? ೩
ಅದುವೂ ಪೂರ್ಣ೦ | ಇದುವೂ ಪೂರ್ಣ೦
ಪೂರ್ಣದಿಂದ ಪೂರ್ಣದ ಹುಟ್ಟು
ಮುದದಿಂ ಪೂರ್ಣಕೆ | ಪೂರ್ಣವು ಕೂಡಲು
ಪೂರ್ಣವೆ ಕಾಂಬುವ ಹಿರಿಗುಟ್ಟು ೪
ಒಂದೆಂಬುದರಲಿ | ಒಂದನೆ ಕೂಡಿಸಿ
ಒಂದನೆ ಕಾಂಬುವದೀ ಚದುರಿ
ಒಂದೆಂಬುದರಲಿ | ಒಂದನೆ ಕಳೆದು
ಒಂದನೆ ಕಾಣೆವು ನಮ್ಮಿದಿರು </poem> ೫<noinclude></noinclude>
teasm3fdlj0s5t0byzj4wy6iirz7pjo
316874
316873
2026-05-04T11:16:51Z
Pragathi. BH
7585
316874
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೧೦೨|right=ನನ್ನ ನಲ್ಲ}}
'''೩೪, ಅಭೇದ'''
<poem>ತಾಯಿಯೆ ತಂದೆ- | ತಂದೆಯ ತಾಯಿ
ಈರ್ವರು ನಮಗೊಂದಾಗಿ ಹಿರಿ
ತಾಯೇ, ತಂದೇ, | ನಿಮ್ಮೊಳು ಭೇದವ
ಗೈಯುವ ಬುದ್ಧಿಯ ತೊಲಗಿಸಿರಿ ೧
ಒಂದೋ ಎರಡೋ | ನೀವೇ ಬಲ್ಲಿರಿ
ಶಿಶುಗುಣ ಪೊರೆಯಲು ಬಂದಿಹಿರಿ
ಒಂದಿದ್ದೂ ಸಹ । ಎರಡಾಗಿಹಿರಿ
ಎರಡಾಗಿಯು ಒಂದೇ ಇಹಿರಿ ೨
ಕಽ ವೇ ಖs ವು । ಖs ವೇ ಕs ವು
ಶ್ರುತಿಧರರೊಡೆದಿಹಿರೀ ಒಗಟು
ಕಽ ವೇಂ ? ಖs ವೇಂ? । ಕs -ಗಃ ಘ
ಓ-ಬಧಿರರಿಗೆಲ್ಲಿಯ ಒಡಪು? ೩
ಅದುವೂ ಪೂರ್ಣಂ | ಇದುವೂ ಪೂರ್ಣಂ
ಪೂರ್ಣದಿಂದ ಪೂರ್ಣದ ಹುಟ್ಟು
ಮುದದಿಂ ಪೂರ್ಣಕೆ | ಪೂರ್ಣವು ಕೂಡಲು
ಪೂರ್ಣವೆ ಕಾಂಬುವ ಹಿರಿಗುಟ್ಟು ೪
ಒಂದೆಂಬುದರಲಿ | ಒಂದನೆ ಕೂಡಿಸಿ
ಒಂದನೆ ಕಾಂಬುವದೀ ಚದುರಿ
ಒಂದೆಂಬುದರಲಿ | ಒಂದನೆ ಕಳೆದು
ಒಂದನೆ ಕಾಣೆವು ನಮ್ಮಿದಿರು </poem> ೫<noinclude></noinclude>
o9idwzvj10mo1dbt6w494vqas1jqp7t
316875
316874
2026-05-04T11:17:43Z
Pragathi. BH
7585
316875
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೧೦೨|right=ನನ್ನ ನಲ್ಲ}}
'''೩೪, ಅಭೇದ'''
<poem>ತಾಯಿಯೆ ತಂದೆ- | ತಂದೆಯ ತಾಯಿ
ಈರ್ವರು ನಮಗೊಂದಾಗಿ ಹಿರಿ
ತಾಯೇ, ತಂದೇ, | ನಿಮ್ಮೊಳು ಭೇದವ
ಗೈಯುವ ಬುದ್ಧಿಯ ತೊಲಗಿಸಿರಿ ೧
ಒಂದೋ ಎರಡೋ | ನೀವೇ ಬಲ್ಲಿರಿ
ಶಿಶುಗುಣ ಪೊರೆಯಲು ಬಂದಿಹಿರಿ
ಒಂದಿದ್ದೂ ಸಹ । ಎರಡಾಗಿಹಿರಿ
ಎರಡಾಗಿಯು ಒಂದೇ ಇಹಿರಿ ೨
ಕಽ ವೇ ಖs ವು । ಖs ವೇ ಕs ವು
ಶ್ರುತಿಧರರೊಡೆದಿಹಿರೀ ಒಗಟು
ಕಽ ವೇಂ ? ಖs ವೇಂ? । ಕs -ಗಃ ಘ
ಓ-ಬಧಿರರಿಗೆಲ್ಲಿಯ ಒಡಪು? ೩
ಅದುವೂ ಪೂರ್ಣಂ | ಇದುವೂ ಪೂರ್ಣಂ
ಪೂರ್ಣದಿಂದ ಪೂರ್ಣದ ಹುಟ್ಟು
ಮುದದಿಂ ಪೂರ್ಣಕೆ | ಪೂರ್ಣವು ಕೂಡಲು
ಪೂರ್ಣವೆ ಕಾಂಬುವ ಹಿರಿಗುಟ್ಟು ೪
ಒಂದೆಂಬುದರಲಿ | ಒಂದನೆ ಕೂಡಿಸಿ
ಒಂದನೆ ಕಾಂಬುವದೀ ಚದುರಿ
ಒಂದೆಂಬುದರಲಿ | ಒಂದನೆ ಕಳೆದು
ಒಂದನೆ ಕಾಣೆವು ನಮ್ಮಿದಿರು </poem> ೫<noinclude></noinclude>
sylus3kd5yrh6eavpow7vyon4i9z9j0
316891
316875
2026-05-04T11:25:33Z
Pragathi. BH
7585
316891
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೧೦೨|right=ನನ್ನ ನಲ್ಲ}}
'''೩೪, ಅಭೇದ'''
<poem>ತಾಯಿಯೆ ತಂದೆ- | ತಂದೆಯ ತಾಯಿ
ಈರ್ವರು ನಮಗೊಂದಾಗಿ ಹಿರಿ
ತಾಯೇ, ತಂದೇ, | ನಿಮ್ಮೊಳು ಭೇದವ
ಗೈಯುವ ಬುದ್ಧಿಯ ತೊಲಗಿಸಿರಿ {{Right|೧}}
ಒಂದೋ ಎರಡೋ | ನೀವೇ ಬಲ್ಲಿರಿ
ಶಿಶುಗುಣ ಪೊರೆಯಲು ಬಂದಿಹಿರಿ
ಒಂದಿದ್ದೂ ಸಹ । ಎರಡಾಗಿಹಿರಿ
ಎರಡಾಗಿಯು ಒಂದೇ ಇಹಿರಿ {{Right|೨}}
ಕಽ ವೇ ಖs ವು । ಖs ವೇ ಕs ವು
ಶ್ರುತಿಧರರೊಡೆದಿಹಿರೀ ಒಗಟು
ಕಽ ವೇಂ ? ಖs ವೇಂ? । ಕs -ಗಃ ಘ
ಓ-ಬಧಿರರಿಗೆಲ್ಲಿಯ ಒಡಪು? {{Right|೩}}
ಅದುವೂ ಪೂರ್ಣಂ | ಇದುವೂ ಪೂರ್ಣಂ
ಪೂರ್ಣದಿಂದ ಪೂರ್ಣದ ಹುಟ್ಟು
ಮುದದಿಂ ಪೂರ್ಣಕೆ | ಪೂರ್ಣವು ಕೂಡಲು
ಪೂರ್ಣವೆ ಕಾಂಬುವ ಹಿರಿಗುಟ್ಟು {{Right|೪}}
ಒಂದೆಂಬುದರಲಿ | ಒಂದನೆ ಕೂಡಿಸಿ
ಒಂದನೆ ಕಾಂಬುವದೀ ಚದುರಿ
ಒಂದೆಂಬುದರಲಿ | ಒಂದನೆ ಕಳೆದು
ಒಂದನೆ ಕಾಣೆವು ನಮ್ಮಿದಿರು {{Right|೫}}
</poem><noinclude></noinclude>
2ykb1isxxw9q568ahwvleqdlhna02kv
ಪುಟ:ನನ್ನ ನಲ್ಲ.pdf/೧೨೬
104
75523
316880
313096
2026-05-04T11:20:15Z
Pragathi. BH
7585
/* Validated */
316880
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|ನನ್ನ ನಲ್ಲ}}{{Right|೧೦೩}}
ಒಂದೂ ಅಹುದು | ಎರಡೂ ಅಹುದು
{{gap}}ಎಡಮೊಗ ಬಲಮೊಗವೆರಡೇನು ?
ಒಂದೂ ಅಹುದು | ಎರಡೂ ಅಹುದು
{{gap}}ಎಡಬಲಗೈ ಎರಡಲ್ಲೇನು ? ೬
ಒಬ್ಬರು ಆತ್ಮನು / ಒಬ್ಬರು ಜೀವಳು
{{gap}}ವ್ಯಕ್ತಕೆ ಈರ್ವರು ಆಧಾರಾ
ಇಬ್ಬರು ದಿವ್ಯರು / ಇಬ್ಬರು ಭವರು
{{gap}}ನಿಮ್ಮಿಂದಲೆ ಜಗದುದ್ಧಾರ ೭
ತಾಯಿಯೆ ತಂದೆಯು |ತಂದೆಯೆ ತಾಯಿಯು
{{gap}}ಈರ್ವರು ನಮಗೊಂದಾಗಿಹಿರಿ
ತಾಯೇ, ತಂದೇ, | ನಿಮ್ಮೊಳು ಭೇದವ
{{gap}}ಗೈಯುವ ಬುದ್ಧಿಯ ತೊಲಗಿಸಿರಿ ೮<noinclude></noinclude>
pd7u6urzy8ra7z4scpbyqzlu5z1mi0t
316884
316880
2026-05-04T11:21:47Z
Pragathi. BH
7585
316884
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ನನ್ನ ನಲ್ಲ|right=೧೦೩}}
<poem>ಒಂದೂ ಅಹುದು | ಎರಡೂ ಅಹುದು
{{gap}}ಎಡಮೊಗ ಬಲಮೊಗವೆರಡೇನು ?
ಒಂದೂ ಅಹುದು | ಎರಡೂ ಅಹುದು
{{gap}}ಎಡಬಲಗೈ ಎರಡಲ್ಲೇನು ? ೬
ಒಬ್ಬರು ಆತ್ಮನು / ಒಬ್ಬರು ಜೀವಳು
{{gap}}ವ್ಯಕ್ತಕೆ ಈರ್ವರು ಆಧಾರಾ
ಇಬ್ಬರು ದಿವ್ಯರು / ಇಬ್ಬರು ಭವರು
{{gap}}ನಿಮ್ಮಿಂದಲೆ ಜಗದುದ್ಧಾರ ೭
ತಾಯಿಯೆ ತಂದೆಯು |ತಂದೆಯೆ ತಾಯಿಯು
{{gap}}ಈರ್ವರು ನಮಗೊಂದಾಗಿಹಿರಿ
ತಾಯೇ, ತಂದೇ, | ನಿಮ್ಮೊಳು ಭೇದವ
{{gap}}ಗೈಯುವ ಬುದ್ಧಿಯ ತೊಲಗಿಸಿರಿ ೮ </poem><noinclude></noinclude>
pt2slwu9lhespnc8ezoti32e0tt6txq
316886
316884
2026-05-04T11:22:24Z
Pragathi. BH
7585
316886
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ನನ್ನ ನಲ್ಲ|right=೧೦೩}}
<poem>ಒಂದೂ ಅಹುದು | ಎರಡೂ ಅಹುದು
{{gap}}ಎಡಮೊಗ ಬಲಮೊಗವೆರಡೇನು ?
ಒಂದೂ ಅಹುದು | ಎರಡೂ ಅಹುದು
{{gap}}ಎಡಬಲಗೈ ಎರಡಲ್ಲೇನು ? ೬
ಒಬ್ಬರು ಆತ್ಮನು / ಒಬ್ಬರು ಜೀವಳು
{{gap}}ವ್ಯಕ್ತಕೆ ಈರ್ವರು ಆಧಾರಾ
ಇಬ್ಬರು ದಿವ್ಯರು / ಇಬ್ಬರು ಭವರು
{{gap}}ನಿಮ್ಮಿಂದಲೆ ಜಗದುದ್ಧಾರ {{Right|೭}} ೭
ತಾಯಿಯೆ ತಂದೆಯು |ತಂದೆಯೆ ತಾಯಿಯು
{{gap}}ಈರ್ವರು ನಮಗೊಂದಾಗಿಹಿರಿ
ತಾಯೇ, ತಂದೇ, | ನಿಮ್ಮೊಳು ಭೇದವ
{{gap}}ಗೈಯುವ ಬುದ್ಧಿಯ ತೊಲಗಿಸಿರಿ ೮ </poem><noinclude></noinclude>
e97688y0hdeqvzolp3dk26dks4e1v1k
316889
316886
2026-05-04T11:23:48Z
Pragathi. BH
7585
316889
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ನನ್ನ ನಲ್ಲ|right=೧೦೩}}
<poem>ಒಂದೂ ಅಹುದು | ಎರಡೂ ಅಹುದು
{{gap}}ಎಡಮೊಗ ಬಲಮೊಗವೆರಡೇನು ?
ಒಂದೂ ಅಹುದು | ಎರಡೂ ಅಹುದು
{{gap}}ಎಡಬಲಗೈ ಎರಡಲ್ಲೇನು ? {{Right|೬}}
ಒಬ್ಬರು ಆತ್ಮನು / ಒಬ್ಬರು ಜೀವಳು
{{gap}}ವ್ಯಕ್ತಕೆ ಈರ್ವರು ಆಧಾರಾ
ಇಬ್ಬರು ದಿವ್ಯರು / ಇಬ್ಬರು ಭವರು
{{gap}}ನಿಮ್ಮಿಂದಲೆ ಜಗದುದ್ಧಾರ {{Right|೭}} ೭
ತಾಯಿಯೆ ತಂದೆಯು |ತಂದೆಯೆ ತಾಯಿಯು
{{gap}}ಈರ್ವರು ನಮಗೊಂದಾಗಿಹಿರಿ
ತಾಯೇ, ತಂದೇ, | ನಿಮ್ಮೊಳು ಭೇದವ
{{gap}}ಗೈಯುವ ಬುದ್ಧಿಯ ತೊಲಗಿಸಿರಿ {{Right|೮}}
</poem><noinclude></noinclude>
19txqfcaxwwjqx7h0jbsipu7xfk35z5
316890
316889
2026-05-04T11:24:11Z
Pragathi. BH
7585
316890
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ನನ್ನ ನಲ್ಲ|right=೧೦೩}}
<poem>ಒಂದೂ ಅಹುದು | ಎರಡೂ ಅಹುದು
{{gap}}ಎಡಮೊಗ ಬಲಮೊಗವೆರಡೇನು ?
ಒಂದೂ ಅಹುದು | ಎರಡೂ ಅಹುದು
{{gap}}ಎಡಬಲಗೈ ಎರಡಲ್ಲೇನು ? {{Right|೬}}
ಒಬ್ಬರು ಆತ್ಮನು / ಒಬ್ಬರು ಜೀವಳು
{{gap}}ವ್ಯಕ್ತಕೆ ಈರ್ವರು ಆಧಾರಾ
ಇಬ್ಬರು ದಿವ್ಯರು / ಇಬ್ಬರು ಭವರು
{{gap}}ನಿಮ್ಮಿಂದಲೆ ಜಗದುದ್ಧಾರ {{Right|೭}}
ತಾಯಿಯೆ ತಂದೆಯು |ತಂದೆಯೆ ತಾಯಿಯು
{{gap}}ಈರ್ವರು ನಮಗೊಂದಾಗಿಹಿರಿ
ತಾಯೇ, ತಂದೇ, | ನಿಮ್ಮೊಳು ಭೇದವ
{{gap}}ಗೈಯುವ ಬುದ್ಧಿಯ ತೊಲಗಿಸಿರಿ {{Right|೮}}
</poem><noinclude></noinclude>
d6c9eqra0ljsl09l2el88ay6kg833by
ಪುಟ:ನನ್ನ ನಲ್ಲ.pdf/೧೨೭
104
75524
316893
313097
2026-05-04T11:26:20Z
Pragathi. BH
7585
/* Validated */
316893
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|೧೦೪}}{{Right|ನನ್ನ ನಲ್ಲ}}
'''೩೫. ಕ್ಷಮಾಯಾಚನೆ'''
<poem>ತಾಯಮ್ಮ ಮುನಿಸು ತಾಳಿದೆ ನಿನ್ನ ಮೇಲೆ
ತಾಯಮ್ಮ ಮುನಿಯದಿರು ನೀನೆನ್ನಮೇಲೆ
ಮುನಿಯದಿರು ಮುನಿಯದಿರು ಶ್ರೀ ಲೋಕಮಾತೇ
ಘನಕೃಪಾನಿಧೀ ನೀನು ಕ್ಷಮಿಸೆನ್ನ ಪ್ರೀತೇ
ಮನವ ತಡೆಯದುದಕ್ಕೆ ತನು ಕೆಡುತಲಿರಲು
ಮನವ ತಡೆಯುವೆನೆಂದು ನಾ ಬಗೆಯುತಿರಲು
ತನುತಾಪ ಮಿಗಿಲಾಗೆ ಮನತಾಳ ತಪ್ಪಿ
ಜನನಿ ಜನಕರ ಮೇಲೆ ಅನುತಾಪ ಹೆಚ್ಚಿ
ಕೃಪೆಯನ್ನ ಮೇಲೆ ನೀವಿಟ್ಟಿಲ್ಲವೆಂದ
ಕಪಿಯಂತೆ ಕಟುತರ್ಕ ಜಾಲವನು ಹೆಣೆದ
ನೀವು ಜೀವರ ನಿರಂಕುಶ ಧನಿಯರೆಂದ
ನಾವು ನಿರುಪಾಯ ಜೀವಿಗಳು ಪ್ರಜರೆಂದ
ಹದಿನಾರು ವರುಷಗಳ ಹಿಂದೊಮ್ಮೆ ಹೀಗೇ
ಹದತಪ್ಪಿ ಸಲಿಗೆಯಾ ಸಲ್ಲಾಪಗೈದೆ
ಆಗೆನ್ನ ಕ್ಷಮಿಸಿದಿರಿ ಸಣ್ಣ ಕೂಸೆಂದು
ಈಗಲೂ ಕ್ಷಮಿಸಿ ಇನ್ನು ಮಗುವೆಂದು
ಅಪರಾಧ ಗೈಯುವದಕಳತೆ ನನಗಿಲ್ಲ.
ಅಪರಾಧ ನೀವೆಣಿಸೆ ನನಗೆ ಉಳಿವಿಲ್ಲ.
ಕ್ಷಮಿಸೆನ್ನ ತಾಯಮ್ಮ ಕ್ಷಮಿಸೆನ್ನ ತಾಯಿ
ಕ್ಷಮಿಸವ್ವ ಕ್ಷಮಿಸವ್ವ ಕ್ಷಮಿಸೆನ್ನ ಕಾಯೇ
ಅಪರಾಧ ಕ್ಷಮೆಗಾಗಿ ಗೈದ ಸ್ತೋತ್ರ
ಅಪಕಾರ ಮನ್ನಿಸ್ ಕ್ಷಮೆಗಾರ್ತಿ ಸುತರಾ
ಕ್ಷಮಿಸೆನ್ನ ಸಂತಯಿಸಿ ಹರಸೆನ್ನ ತಾಯಿ
ಸುಮನಸಳೆ ಸುತನನ್ನು ಸಂತವಿಸು ದೇವೀ</poem><noinclude></noinclude>
6lknxbjse1g8p6v6342az3dcdya9mrj
316894
316893
2026-05-04T11:27:24Z
Pragathi. BH
7585
316894
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೧೦೪|right=ನನ್ನ ನಲ್ಲ}}
'''೩೫. ಕ್ಷಮಾಯಾಚನೆ'''
<poem>ತಾಯಮ್ಮ ಮುನಿಸು ತಾಳಿದೆ ನಿನ್ನ ಮೇಲೆ
ತಾಯಮ್ಮ ಮುನಿಯದಿರು ನೀನೆನ್ನಮೇಲೆ
ಮುನಿಯದಿರು ಮುನಿಯದಿರು ಶ್ರೀ ಲೋಕಮಾತೇ
ಘನಕೃಪಾನಿಧೀ ನೀನು ಕ್ಷಮಿಸೆನ್ನ ಪ್ರೀತೇ
ಮನವ ತಡೆಯದುದಕ್ಕೆ ತನು ಕೆಡುತಲಿರಲು
ಮನವ ತಡೆಯುವೆನೆಂದು ನಾ ಬಗೆಯುತಿರಲು
ತನುತಾಪ ಮಿಗಿಲಾಗೆ ಮನತಾಳ ತಪ್ಪಿ
ಜನನಿ ಜನಕರ ಮೇಲೆ ಅನುತಾಪ ಹೆಚ್ಚಿ
ಕೃಪೆಯನ್ನ ಮೇಲೆ ನೀವಿಟ್ಟಿಲ್ಲವೆಂದ
ಕಪಿಯಂತೆ ಕಟುತರ್ಕ ಜಾಲವನು ಹೆಣೆದ
ನೀವು ಜೀವರ ನಿರಂಕುಶ ಧನಿಯರೆಂದ
ನಾವು ನಿರುಪಾಯ ಜೀವಿಗಳು ಪ್ರಜರೆಂದ
ಹದಿನಾರು ವರುಷಗಳ ಹಿಂದೊಮ್ಮೆ ಹೀಗೇ
ಹದತಪ್ಪಿ ಸಲಿಗೆಯಾ ಸಲ್ಲಾಪಗೈದೆ
ಆಗೆನ್ನ ಕ್ಷಮಿಸಿದಿರಿ ಸಣ್ಣ ಕೂಸೆಂದು
ಈಗಲೂ ಕ್ಷಮಿಸಿ ಇನ್ನು ಮಗುವೆಂದು
ಅಪರಾಧ ಗೈಯುವದಕಳತೆ ನನಗಿಲ್ಲ.
ಅಪರಾಧ ನೀವೆಣಿಸೆ ನನಗೆ ಉಳಿವಿಲ್ಲ.
ಕ್ಷಮಿಸೆನ್ನ ತಾಯಮ್ಮ ಕ್ಷಮಿಸೆನ್ನ ತಾಯಿ
ಕ್ಷಮಿಸವ್ವ ಕ್ಷಮಿಸವ್ವ ಕ್ಷಮಿಸೆನ್ನ ಕಾಯೇ
ಅಪರಾಧ ಕ್ಷಮೆಗಾಗಿ ಗೈದ ಸ್ತೋತ್ರ
ಅಪಕಾರ ಮನ್ನಿಸ್ ಕ್ಷಮೆಗಾರ್ತಿ ಸುತರಾ
ಕ್ಷಮಿಸೆನ್ನ ಸಂತಯಿಸಿ ಹರಸೆನ್ನ ತಾಯಿ
ಸುಮನಸಳೆ ಸುತನನ್ನು ಸಂತವಿಸು ದೇವೀ</poem><noinclude></noinclude>
p69mhmfv7y4rh2m6sk0sd1ka07dqr5i
ಪುಟ:ನನ್ನ ನಲ್ಲ.pdf/೧೨೮
104
75525
316898
313100
2026-05-04T11:29:40Z
Pragathi. BH
7585
/* Validated */
316898
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|ನನ್ನ ನಲ್ಲ}}{{Right|೧೦೫}}
'''೩೬. ಅರ್ಪಣ'''
<poem>ನನ್ನಯ ಜನ್ಮವು ನಿಮಗೇ
{{gap}}ನನ್ನಯ ಮನ-ದೇಹ-ಧನಗಳೆಲ್ಲವು ನಿಮಗೇ
{{gap}}ನನ್ನಯ ಶಕ್ತಿಯು ನಿಮಗೇ
{{gap}}ನನ್ನಯ ಹೊರವೊಳಗೆಲ್ಲ ಅರ್ಪಿತ ನಿಮಗೇ {{Right|೧}}
ಮನ ನಿಮಗರ್ಪಿತವಾಗಲು
{{gap}}ಮನದಿಂ ಸಲೆ ನಿಮ್ಮದಲ್ಲದನವನೊಂದುಂ
{{gap}}ಅಣು ಸಹ ಅರಿಯಲು ಬಾರದು
{{gap}}ಅನುದಿನ ನಿಮಗಲ್ಲದುದ ವಿಚಾರಿಪುದಲ್ಲಂ {{Right|೨}}
ಧನ ನಿಮಗರ್ಪಿತವಾಗಲು
{{gap}}ಕ್ಷಣ ಸಹ ನಿಮಗಲ್ಲದುದಕೆ ದುಡಿಯುವುದಲ್ಲಂ
{{gap}}ಎನಿತುಂಟೊ ಬಳಿಯೊಳನಿತುಂ
{{gap}}ಘನ ಮಹಿಮರೆ ನಿಮ್ಮ ಸೊತ್ತು ಇದೆ ಸತ್ಯಪಥಂ {{Right|೩}}
ಕಾರ್ಯಾರ್ಪಿತವಾಗಲು ತಾ
{{gap}}ಕಾಯದ ಕಳವಳಕೆ ಬೆಂದು ಬಾಳುವುದಲ್ಲಂ
{{gap}}ಸಾಯ್ದುದನೆ ನೆನಿಸಿ ಕುದಿಯದೆ
{{gap}}ಸಾಯದ ಸವಿ ಆಮೃಕೆಳಸಿ ಹರ್ಷಿಪುದೆಲ್ಲಂ {{Right|೪}}
ನಿಮ್ಮದು ತನು ನಿಮ್ಮದು ಮನ
{{gap}}ನಿಮ್ಮದು ಧನ ಜೀವಜೀವಿತಾದಿಗಳೆಲ್ಲಂ
{{gap}}ನಿಮ್ಮವೆ ಕನಸಿನೊಳುಂ ಸಹ
{{gap}}ಕಮ್ಮನೆ ತಾನಿದುವೆ ನಿತ್ಯಪಥ ನಿಜಪದಕೆ {{Right|೫}}
</poem><noinclude></noinclude>
mb67w07rmhqda5f7hcrbq6qt08ib20q
ಪುಟ:ನನ್ನ ನಲ್ಲ.pdf/೧೨೯
104
75526
316901
313101
2026-05-04T11:32:12Z
Pragathi. BH
7585
/* Validated */
316901
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೧೦೬|right=ನನ್ನ ನಲ್ಲ}}
'''೩೭. ಸಂಧ್ಯಾ'''
<poem>ಗಿಡಮರೆದೆಲೆಗಳು ಕೈಮುಗಿದಯುವವು
ಗುಡಿಯೊಳು ಭಕ್ತರ ಶಿರಬಾಗುವವು {{Right|೧}}
ಹೂಗಿಡಗಳ ಎದೆ ಹೂವರಳುವವು
ಆಗಸದಲಿ ತಾರಗೆ ಮೂಡುವವು {{Right|೨}}
ಪಡುವಣದಲಿ ಆರತಿ ಬೆಳಗುವದು
ಪೊಡವಿಯೆ ಸಿರಿನಾಳನು ಕೋರುವದು {{Right|೩}}
ದಿನಪತಿ ಮರೆವನೊ ತಮ್ಮನು ಎಂದು
ಮನದಲಿ ಜಡಚೇತನಗಳ ನೊಂದು {{Right|೪}}
ಹೃದಯದ ಹಿರಿಯಾಶೆಯ ಸವಿನೋವು
ಪದುಳದಿ ಹರಡಿದೆ ಕೇಸರಿ ಠೀವು {{Right|೫}}
</poem><noinclude></noinclude>
r1sq2r7wqsc5emoocj0yw3n9cbk9q55
ಪುಟ:ನನ್ನ ನಲ್ಲ.pdf/೧೩೦
104
75527
316903
313102
2026-05-04T11:34:13Z
Pragathi. BH
7585
/* Validated */
316903
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|ನನ್ನ ನಲ್ಲ}}{{Right|೧೦೭}}
'''೩೮. ಅನಾದ್ಯನಂತ'''
<poem>ಶಾಶ್ವತ ತಾಯೆ ಅ-ನಂತಾ ತಂದೇ
ಸ್ವರೂಪ ನಿಮ್ಮದು ಭವ್ಯವಿದು
ವಿಶ್ವಾಂತರ್ಯ ವಿಶ್ವಾಧಾರಾ
ಲೀಲೆಯು ನಿಮ್ಮದು ದಿವ್ಯವಿದು {{Right|೧}}
ಶಾಶ್ವತ “ಜೀವಂ” ಅನಂತ ಆತ್ಮನು
ದೇಹದಲ್ಲೆ ದೇಹಿಗಳಿವರು
ವಿಶ್ವದಲ್ಲಿ ಶಿವ-ಶಕ್ತಿಯರಿಬ್ಬರು
ಅಗಲದೆ ಎಂದಿಗು ಇದ್ದವರು {{Right|೨}}
ಒಬ್ಬನೆ ಎಂಬೆವು ಏಕಂ ತತ್ವಂ
ಇಬ್ಬರೆಂಬುದತಿ ಗೂಢವಿದು
ಒಬ್ಬನಶಕ್ಯನು ನಾಸ್ತಿಕವಾದಿಗೆ
ಇಬ್ಬರ ಬಿಗಿ ಏಕೇಶ್ವರಿಗೂ {{Right|೩}}
ಒಬ್ಬನೆ ಇರುತಿರೆ ಏಕಾಕಾರಂ
ಏಕದ ಗುಣಿತವು ಏಕೈಕಂ
ಇಬ್ಬರ ಕಾರಣ ಅಖಿಳ್ಳೆಶ್ವರಂ
ಈರ್ವರಿಂದ ಪೂರ್ಣಾತ್ಪರ್ಣ೦ {{Right|೪}}
ತಾಯಿಯು ಹೃದಯಂ ತಂದೆಯ ಶೀರ್ಷ೦
ಈರ್ವರ ಐಕ್ಯದೊಳೇಕಾಂಗಂ
“ಮಾಯಿನಂತು ಮಾ-ಹೇಶ್ವರ"ನೆಂಬುದು
ಶ್ವೇತಾಶ್ವರದ ಶ್ರುತಿಯಂಗಂ {{Right|೫}}
“ಶಿಶುವಿನ” ಪದ್ಯವು ನಲ್ಮೆಯ ನೆಲೆಯಿದು
ಬುದ್ಧಿಗೆ ಚಂದ್ರನ ಚರ್ಚಿತವು
ಮಿಸುನಿಗು ಬಣ್ಣಕು ಬೆಸೆದಂತಿರುವಾ
ಜನನೀ ಜನಕರ ಸಂಸ್ತವವು {{Right|೬}}
</poem><noinclude></noinclude>
3owqk8ekgei2ccc1s5fmvfigik0tsn4
316904
316903
2026-05-04T11:34:54Z
Pragathi. BH
7585
316904
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ನನ್ನ ನಲ್ಲ|right=೧೦೭}}
'''೩೮. ಅನಾದ್ಯನಂತ'''
<poem>ಶಾಶ್ವತ ತಾಯೆ ಅ-ನಂತಾ ತಂದೇ
ಸ್ವರೂಪ ನಿಮ್ಮದು ಭವ್ಯವಿದು
ವಿಶ್ವಾಂತರ್ಯ ವಿಶ್ವಾಧಾರಾ
ಲೀಲೆಯು ನಿಮ್ಮದು ದಿವ್ಯವಿದು {{Right|೧}}
ಶಾಶ್ವತ “ಜೀವಂ” ಅನಂತ ಆತ್ಮನು
ದೇಹದಲ್ಲೆ ದೇಹಿಗಳಿವರು
ವಿಶ್ವದಲ್ಲಿ ಶಿವ-ಶಕ್ತಿಯರಿಬ್ಬರು
ಅಗಲದೆ ಎಂದಿಗು ಇದ್ದವರು {{Right|೨}}
ಒಬ್ಬನೆ ಎಂಬೆವು ಏಕಂ ತತ್ವಂ
ಇಬ್ಬರೆಂಬುದತಿ ಗೂಢವಿದು
ಒಬ್ಬನಶಕ್ಯನು ನಾಸ್ತಿಕವಾದಿಗೆ
ಇಬ್ಬರ ಬಿಗಿ ಏಕೇಶ್ವರಿಗೂ {{Right|೩}}
ಒಬ್ಬನೆ ಇರುತಿರೆ ಏಕಾಕಾರಂ
ಏಕದ ಗುಣಿತವು ಏಕೈಕಂ
ಇಬ್ಬರ ಕಾರಣ ಅಖಿಳ್ಳೆಶ್ವರಂ
ಈರ್ವರಿಂದ ಪೂರ್ಣಾತ್ಪರ್ಣ೦ {{Right|೪}}
ತಾಯಿಯು ಹೃದಯಂ ತಂದೆಯ ಶೀರ್ಷ೦
ಈರ್ವರ ಐಕ್ಯದೊಳೇಕಾಂಗಂ
“ಮಾಯಿನಂತು ಮಾ-ಹೇಶ್ವರ"ನೆಂಬುದು
ಶ್ವೇತಾಶ್ವರದ ಶ್ರುತಿಯಂಗಂ {{Right|೫}}
“ಶಿಶುವಿನ” ಪದ್ಯವು ನಲ್ಮೆಯ ನೆಲೆಯಿದು
ಬುದ್ಧಿಗೆ ಚಂದ್ರನ ಚರ್ಚಿತವು
ಮಿಸುನಿಗು ಬಣ್ಣಕು ಬೆಸೆದಂತಿರುವಾ
ಜನನೀ ಜನಕರ ಸಂಸ್ತವವು {{Right|೬}}
</poem><noinclude></noinclude>
8tb717sxf6886yknh65eorvdondcji8
316905
316904
2026-05-04T11:35:30Z
Pragathi. BH
7585
316905
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ನನ್ನ ನಲ್ಲ|right=೧೦೭}}
'''೩೮. ಅನಾದ್ಯನಂತ'''
<poem>ಶಾಶ್ವತ ತಾಯೆ ಅ-ನಂತಾ ತಂದೇ
ಸ್ವರೂಪ ನಿಮ್ಮದು ಭವ್ಯವಿದು
ವಿಶ್ವಾಂತರ್ಯ ವಿಶ್ವಾಧಾರಾ
ಲೀಲೆಯು ನಿಮ್ಮದು ದಿವ್ಯವಿದು {{Right|೧}}
ಶಾಶ್ವತ “ಜೀವಂ” ಅನಂತ ಆತ್ಮನು
ದೇಹದಲ್ಲೆ ದೇಹಿಗಳಿವರು
ವಿಶ್ವದಲ್ಲಿ ಶಿವ-ಶಕ್ತಿಯರಿಬ್ಬರು
ಅಗಲದೆ ಎಂದಿಗು ಇದ್ದವರು {{Right|೨}}
ಒಬ್ಬನೆ ಎಂಬೆವು ಏಕಂ ತತ್ವಂ
ಇಬ್ಬರೆಂಬುದತಿ ಗೂಢವಿದು
ಒಬ್ಬನಶಕ್ಯನು ನಾಸ್ತಿಕವಾದಿಗೆ
ಇಬ್ಬರ ಬಿಗಿ ಏಕೇಶ್ವರಿಗೂ {{Right|೩}}
ಒಬ್ಬನೆ ಇರುತಿರೆ ಏಕಾಕಾರಂ
ಏಕದ ಗುಣಿತವು ಏಕೈಕಂ
ಇಬ್ಬರ ಕಾರಣ ಅಖಿಳ್ಳೆಶ್ವರಂ
ಈರ್ವರಿಂದ ಪೂರ್ಣಾತ್ಪರ್ಣಂ {{Right|೪}}
ತಾಯಿಯು ಹೃದಯಂ ತಂದೆಯ ಶೀರ್ಷಂ
ಈರ್ವರ ಐಕ್ಯದೊಳೇಕಾಂಗಂ
“ಮಾಯಿನಂತು ಮಾ-ಹೇಶ್ವರ"ನೆಂಬುದು
ಶ್ವೇತಾಶ್ವರದ ಶ್ರುತಿಯಂಗಂ {{Right|೫}}
“ಶಿಶುವಿನ” ಪದ್ಯವು ನಲ್ಮೆಯ ನೆಲೆಯಿದು
ಬುದ್ಧಿಗೆ ಚಂದ್ರನ ಚರ್ಚಿತವು
ಮಿಸುನಿಗು ಬಣ್ಣಕು ಬೆಸೆದಂತಿರುವಾ
ಜನನೀ ಜನಕರ ಸಂಸ್ತವವು {{Right|೬}}
</poem><noinclude></noinclude>
9c8j4th22toiqr7qhwf8sbhd0eb377n
ಪುಟ:ವೈಶಾಖ.pdf/೮೬
104
82015
316476
277176
2026-05-03T13:24:19Z
Shreelatha.Halemane
7642
/* Validated */
316476
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{Left|೭೦}}{{Right|ವೈಶಾಖ}}
ತಲೆಚಿಟ್ಟು, ಅಕ್ಕಪಕ್ಕದ ಮನೆಗಳಿಂದ ಅಥವಾ ಎದುರು ಸಾಲಿನ ಮನೆಗಳಿಂದ ಯಾರಾದರೂ ಹಾಡುವ ಧ್ವನಿಯಾಗಲಿ, ನುಡಿಸುವ ವೀಣೆಯ ಇಂಚರವಾಗಲಿ ತೇಲಿ ಬಂದರೆ ಒಡನೆಯೆ ತಮ್ಮ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚವಳು!... ಒಮ್ಮೆ ಅವಳೆದುರಿಗೆ ಯಾರೋ ಅಂದರು: “ಕಾವೇರಿ ನದಿಯ ದಡದಾಚೆಗೆ ಇರುವ ಬಸವಾಪಟ್ಟಣ ವೇದಾಧ್ಯಯನಕ್ಕೆ ಘನಪಾಠಿಗಳಿಗೆ ವಿಖ್ಯಾತವಾಗಿದ್ದರೆ, ನಮ್ಮ ರುದ್ರಪಟ್ಟಣ ಸಂಗೀತಕ್ಕೆ ಅದರಲ್ಲೂ ವೈಣಿಕರಿಗೆ ಮತ್ತು ಗಾಯಕರಿಗೆಹೆಸರುಗಳಿಸಿದೆ. ಸಾವಿತ್ರಿಗೆ ಈ ಹೊಗಳಿಕೆ ಪ್ರಿಯವೆನಿಸಲಿಲ್ಲ. “ಏನು ಮಾತು ತೆಗೀರಿ, ಈ ಊರಿನಲ್ಲಿ ಬಾಯಿ ಅಗಲಿಸಿ ಕಿರುಚೋರೆಲ್ಲ ಗಾಯಕರು! ಬೆರಳು ಬಗ್ಗಿಸಿ ತಂತಿ ಮೀಟೋರೆಲ್ಲ ವೈಣಿಕರು!... ನನಗೇನೋ ನಮ್ಮ ಮನೆಗೆಲಸ ಮಾಡಿಕೊಂಡು ಹೋಗೋದೇ ವೇದಾಧ್ಯಯನ, ನನ್ನ ಮಕ್ಕಳ ಮಾತು ಕೇಳ್ತಾ ಇರೋದೇ ಸಂಗೀತ!”
{{gap}}ಇವರ ಮನೆಯಲ್ಲಿ ಎಲ್ಲ ವಿಷಯಗಳಲ್ಲೂ ಸಾವಿತ್ರಿಯದೇ ಮೇಲುಗೈ ಆಗಿದ್ದರೂ ಭೋಜನದಲ್ಲಿ ಮಾತ್ರ ಅಶ್ವತ್ಥ ನಿಸ್ಲಿಮನಾಗಿದ್ದ. ಅಚ್ಚರಿಯ ಮಾತೆಂದರೆ ಅವನು ಊಟ ಮಾಡುವಷ್ಟು ಗ್ರಾಸವನ್ನು ಇಡೀ ರುದ್ರಪಟ್ಟಣದಲ್ಲಿ ಬೇರೆ ಯಾರೂ ಮಾಡಲಾರರೆಂದೇ ಊರಿನಲ್ಲೆಲ್ಲ ಪ್ರತೀತಿಯಾಗಿತ್ತು. ಒಂದು ಮದುವೆ ಭೋಜನಕೂಟದಲ್ಲಿ ಬಾಳೆಲೆ ತುಂಬ ಬಡಿಸಿದ ಬಿಳಿ ಅನ್ನವನ್ನು ತೊಟ್ಟೆಯಲ್ಲಿ ಕಲೆಸಿ ಊಟ ಮಾಡಿ, ಅನಂತರ ಮಜ್ಜಿಗೆಹುಳಿಯಲ್ಲಿ ಮತ್ತೆ ಎಲೆ ತುಂಬ ಅನ್ನವನ್ನು ಹೊಟ್ಟೆಗೆ ಸೇರಿಸಿ, ಬಳಿಕ ಗೋಪುರಾಕಾರದಲ್ಲಿ ಇಟ್ಟ ಚಿತ್ರಾನ್ನವನ್ನು ಕಬಳಿಸಿ, ಸುಮಾರು ಇಪ್ಪತ್ತೈದು ಅಂಬೊಡೆಗಳು, ಹೆಸರು ಬೇಳೆ ಕಡಲೆಬೇಳೆ ಕೋಸಂಬರಿಗಳು, ಎರಡು ಬಗೆಯ ಪಲ್ಯಗಳು, ಗೊಜ್ಜು, ಕೇಳಿ ಕೇಳಿ ಹಾಕಿಸಿಕೊಂಡ ಹಪ್ಪಳ ಸಂಡಿಗೆಗಳು ಇತ್ಯಾದಿಗಳನ್ನು ಹೊಟ್ಟೆಗೆ ತುಂಬುತ್ತ ಆರು ದೊಡ್ಡ ದೊನ್ನೆಗಳ ಭರ್ತಿ ಶ್ಯಾವಿಗೆ ಖೀರು ಸುರಿದು ಕೊಳ್ಳುತ್ತ, ಇಪ್ಪತ್ತ ಲಾಡುಗಳನ್ನು ತಿಂದು ಮುಗಿಸುತ್ತಿದ್ದಂತೆ, ಇನ್ನೂ ಇಪ್ಪತ್ತು ಲಾಡು ತಿಂತೀಯೆನೋ ಎಂದು ಚೆಷ್ಟೆಯಿಂದ ಯಾರೋ ಆಹ್ವಾನಿಸಿದಾಗ, “ತಿಂದರೆ ಏನು ಕೊಡ್ತೀಯೆ?ನೂರು ರೂಪಾಯಿ ಬಾಜಿ ಕಟೀಯಾ?” ಎಂದು ಕೆದಕಿ, ಆತ ಆ ಪಂಥಕ್ಕೆ ಒಪ್ಪಿ ಆಗಬಹುದು ಎಂದಾಗ, ಮತ್ತೆ ಇಪ್ಪತ್ತು ಲಾಡುಗಳನ್ನು ಸಲೀಸಾಗಿ ತಿಂದು ತೇಗಿ, ಒಂದು ಚೆಂಬು ನೀರು ಕುಡಿದು, ಪಂಥದ ಒಂದು ನೂರು ರೂಪಾಯಿಗಳನ್ನು ಗಿಟ್ಟಿಸಿದ್ದನಂತೆ!- ಅದರಿಂದ ರಾತ್ರಿಯ ಭೋಜನಕ್ಕೇನೂ ತೊಂದರೆಯಾಗಲಿಲ್ಲವಂತೆ!... ಹೀಗೆ ಅದೆಷ್ಟೇ ಊಟಮಾಡಿದರೂ, ಅಶ್ವತ್ಥನ<noinclude></noinclude>
54me3voy4rlgjqvcktmc27kxwtdrlji
ಪುಟ:ವೈಶಾಖ.pdf/೯೮
104
82027
316417
277223
2026-05-03T11:59:09Z
Shreelatha.Halemane
7642
/* Validated */
316417
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{Left|೮೨}}{{Right|ವೈಶಾಖ}}
ಕಂಡು ವಿಸ್ಮಯಪಟ್ಟೆ, ಸದಾ ಖುಷಿಯಾಗಿ ಹಕ್ಕಿಯಂತೆ ಯಾವುದಾದರೂ ಹಾಡು ಗುನುಗುತ್ತ (ಜಾನಕಿಯದು ಮಧುರವಾದ ಕಂಠ, ಅವಳಿಗೆ ಸಂಗೀತ ಪಾಠ ಹೇಳಿಸದೆ ಸಾತು ಅನ್ಯಾಯ ಮಾಡಿದ್ದಳು) ಬರುತ್ತಿದ್ದ ಹುಡುಗಿ, ಈ ದಿನ ತಲೆಗೂದಲೆಲ್ಲ ಕೆದರಿ ಅಸ್ತವ್ಯಸ್ತವಾದ, ಬೆದರುಗಣ್ಣು ಬಿಡುತ್ತಬಂದುದು ನನ್ನನ್ನು ಇನ್ನೂ ಅಧಿಕ ಆತಂಕದಲ್ಲಿ ಕೆಡವಿತ್ತು.
“ಯಾಕಮ್ಮ ಜಾನಿ, ಹೀಗಿದ್ದೀಯ?.... ಏನಾಯಿತು?.... ಯಾಕಿಷ್ಟು ಗಾಬರಿಗೊಂಡಿದೀಯೆ?” ಅತ್ಯಾತುರವಾಗಿ ಕೇಳಿದ್ದೆ.
ಜಾನಕಿ ನಿರುತ್ತರಳಾಗಿ ನನ್ನನ್ನು ತಬ್ಬಿ ನನ್ನೆದೆಗೆ ತನ್ನ ತಲೆಯಾನಿಸಿ ಗಳ ಗಳ ಅತ್ತಳು. ನನಗೆ ದಿಕ್ಕೇ ತೋಚದಾಯಿತು... ಜಾನಿ ಯಾಕೆ ಮಾತು ಆಡುತ್ತಿಲ್ಲ?.... ಯಾಕೆ ಹೀಗೆ ಸುಮ್ಮನೆ ಕಣ್ಣೀರ್ಗರೆಯುತ್ತಿದ್ದಾಳೆ?... ಇವಳಿಗೆ ಆಗಿರುವುದಾದರೂ ಏನು?...
ಅವಳ ಬೆನ್ನು ಸವರುತ್ತ, “ಅಳಬೇಡ, ತಾಯಿ. ಏನಾಗಿದೆ ಹೇಳು” ಎಂದು ಸಂತೈಸುತ್ತಿರುವಂತೆ, ಅವಳ ಹಿಂದಿನಿಂದ ಶ್ಯಾಮನೂ ಅವಳ ಪುಸ್ತಕದ ಕೈಚೀಲ ಹಿಡಿದು ಒಳಗೆ ಕಾಲಿಟ್ಟಿದ್ದು ರುಕ್ಕಿಣಿಗೆ ಮತ್ತೂ ಸೋಜಿಗವೆನಿಸಿತು. ಶ್ಯಾಮ ಬಂದವನೆ, ಕೈಚೀಲವನ್ನು ಮರದ ಸಂದೂಕಿನ ಮೇಲಿಟ್ಟು ಸನ್ನೆಮಾಡಿ, ಅವಳನ್ನು ಬೇಗ ಮಲಗಿಸು ಎಂದಷ್ಟೇ ಹೇಳಿದ, ಬಿಕ್ಕಿ ಬಿಕ್ಕಿ ಅಳುತ್ತಿದ್ದ ಜಾನಿಯನ್ನು ತಬ್ಬಿದಂತೆಯೆ ಮೃದುವಾಗಿ ಕರೆದೊಯ್ದು ಅವಳೂ ಶೇಷನೂ ಮಲಗುವ ಕೊಠಡಿಯಲ್ಲಿ ಹಾಸಿಗೆ ಬಿಡಿಸಿ ಮಲಗಿಸಿದೆ. ನಾನು ಹೊರಗೆ ಬಂದಾಗ ನನ್ನನ್ನು ಒಂದು ಪಕ್ಕಕ್ಕೆ ಕರೆದು ನಡೆದ ಸಂಗತಿ ಎಲ್ಲವನ್ನೂ ಶ್ಯಾಮ ವಿವರಿಸಿ ಹೇಳಿದ್ದ. ವಿವರಿಸುತ್ತಿರುವಂತೆ ಅವನೇ ಗದ್ಗದಿತನಾಗುತ್ತಿದ್ದ:
ನೆನ್ನೆ ರಾತ್ರಿಯೇ ಶ್ಯಾಮ ಬಸವಾಪಟ್ಟಣಕ್ಕೆ ತೆರಳಿ ನೆಂಟರ ಮನೆಯಲ್ಲಿ ತಂಗಿದ್ದನಂತೆ. ಅಲ್ಲಿಂದ ತಿಂಡಿ ಮುಗಿಸಿ, ರುದ್ರಪಟ್ಟಣದ ಹಾದಿ ಹಿಡಿಯುವಾಗ ಹತ್ತಿರ ಹತ್ತಿರ ಹನ್ನೊಂದಾಗಿತ್ತಂತೆ. ದಾರಿಯಲ್ಲಿ ಪುರಂದರದಾಸರ ನೀನ್ಯಾಕೊ ನಿನ್ನ ಹಂಗ್ಯಾಕೊ' ಪದವನ್ನು ಗುನುಗುತ್ತ ಬರುತ್ತಿದ್ದನಂತೆ. ಆಗ ಹೊಳೆಯ ದಡದಲ್ಲಿ ಉದ್ದಕ್ಕೂ ಹರಡಿದಂತಿದ್ದು ಕೆಲವು ಕಡೆ ದಟ್ಟವಾಗಿದ್ದ ಭಾರಿ ಮರಗಳ ಸಾಲಿನಲ್ಲಿ ಹರಿಗಲು ನಿಲ್ಲುವ ಜಾಗಕ್ಕೆ ಸುಮಾರು ದೂರದಲ್ಲಿ ಯಾರನ್ನೂ ಜೋರು ಜೋರಾಗಿ ಗದರಿಸುತ್ತಿರುವ ಗಂಡು ಧ್ವನಿಗಳನ್ನು ಕೇಳಿ, ಏನೋ ಜಗಳವಿರಬಹುದೆಂದು ಭಾವಿಸಿ ಕುತೂಹಲದಿಂದ ಆ ಕಡೆಗೆ ಹೆಜ್ಜೆಯಿಟ್ಟಂತೆ. ಶ್ಯಾಮ ಕಣ್ಣಿಗೆ ಬಿದ್ದೊಡನೆಗೆ ಆ ಇಬ್ಬರು ಹುಡುಗರು ಅಲ್ಲಿಂದ ಸರನೆ ಫೇರಿ<noinclude></noinclude>
l7skdddnx9vh27iqbjy0equdw11bc9g
ಪುಟ:ವೈಶಾಖ.pdf/೯೯
104
82028
316418
277225
2026-05-03T12:00:33Z
Shreelatha.Halemane
7642
/* Validated */
316418
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{Left|ಸಮಗ್ರ ಕಾದಂಬರಿಗಳು}}{{Right|೮೩}}
ಕಿತ್ತರಂತೆ... ಅವರಿಬ್ಬರೂ ಹಾಗೆ ಓಡಿದ್ದೇಕೆ? ಹುಡುಗಿಯೊಬ್ಬಳೇ ಅಳುತ್ತ ಆ ಮರದ ಬುಡದಲ್ಲಿ ಕುಳಿತಿರುವುದಾದರೂ ಯಾಕೆ?- ಎಂಬ ಸಂಶಯ ಹುಟ್ಟಿ ಶ್ಯಾಮ ಮುಂದೆ ಬಂದಂತೆ, ಆ ಹೆಣ್ಣು ಮಂಡಿಗಳನ್ನು ಕೊಕ್ಕರಿಸಿ ಕುಳಿತು ಅವುಗಳ ನಡುವೆ ಮುಖ ಹುದುಗಿಸಿ, ಅಳುವಾಗಲೂ ಹೆದರಿ ಹೆದರಿ ಬಿಕ್ಕುವುದನ್ನು ಗಮನಿಸಿ, “ಯಾರಮ್ಮಾ ನೀನು? ಭಯಪಡಬೇಡ” ಎನ್ನುತ್ತ ಅವಳ ಹತ್ತಿರ ಹೋಗಿ ನೋಡಿದರೆ ನಮ್ಮ ಜಾನಕಿ!...
ಶ್ಯಾಮ ಹುಡುಗಿಯನ್ನು ರಮಿಸಿ,
{{gap}}“ಏನಾಯಿತು ಕಂದ? ಅವರಿಬ್ಬರೂ ಯಾರು ಹಾಗೆ ಓಡಿಹೋದವರು?” ಎಂದು ಕೇಳಲಾಗಿ, ಇನ್ನೂ ಗಟ್ಟಿಯಾಗಿ ರೋದಿಸುತ್ತ,
“ನಾನು-ನಾನು ಹೇಳಿದರೆ ನನ್ನ... ನನ್ನ ಕೊಂದು ಹಾಕೀವೀಂತ” ಹೇಳಿ, ಬಿಕ್ಕುವುದರಲ್ಲೇ ಮಾತು ನಿಲ್ಲಿಸಿದ್ದಳಂತೆ.
“ಹೆದರಬೇಡ, ನಾನಿದೀನಿ. ಯಾರಿಗೂ ಹೇಳಲ್ಲ” ಎಂದು ಬಗೆಬಗೆಯಾಗಿ ಧೈರ್ಯ ತುಂಬಿದ ಬಳಿಕ, ಪಾಪ ಆ ಹೆಣ್ಣು, ನಡೆದ ಸಂಗತೀನ ಅಳುತ್ತಳುತ್ತಲೆ ತುಂಡು ತುಂಡು ವಾಕ್ಯಗಳಲ್ಲಿ ತೊದಲಿದ್ದಳಂತೆ:
- ಎಂದಿನಂತೆ ಶಾಲೆಗೆ ಹರಿಗರಲಿನಲ್ಲಿ ಹೊಳೆ ದಾಟಿ ತಾನೊಬ್ಬಳೇ ಬಸವಾಪಟ್ಟಣದ ಹಾದಿ ಹಿಡಿದಿದ್ದಳಂತೆ. ಆಗ ಬೈಸೆಟ್ಟಿ, ಹೀರೋಜಿ... ಇಬ್ಬರೂವೆ... ಅಲ್ಲೆ... ಬಿಲುವಾರ ಮರದ ಬುಡದಲ್ಲಿ ನಿಂತಿದ್ದೋರು... ನಿನ್ನ ತಮ್ಮ... ಶೇಷನಿಗೆ ಮರದಿಂದ ಬಿದ್ದು ಕಾಲು ಮುರಿದಿದೆ...”
“ಬೈಸೆಟ್ಟಿ, ಹೀರೋಜಿ ಅಂದರೆ ನಿನ್ನ ತಮ್ಮ ಆ ದಾಂಡಿಗ ಸ್ನೇಹಿತರು ತಾನೆ?” ಶ್ಯಾಮ ಕೇಳಿದ್ದನಂತೆ.
“ಹೂ... ಹೌದು-ಅವರೇನೆ....”
“ಆಮೇಲೆ?”
“ನಾನು... ಅವರು ಹೇಳೋದು ... ನಿಜ ಇರಬಹುದು... ಅಂತ... ಹದರಿ... ಅವರ ಜೊತೇಲಿ... ಅಲ್ಲಿ ಕಾಣುತ್ತಲ್ಲ ಆ ಮುರುಕು ಮಂಟಪದೊಳಕ್ಕೆ ಹೋದೆ... ಅಲ್ಲಿ ಶೇಷ ಇರಲಿಲ್ಲ.... ನನಗೆ ಭಯ ಆಗಿ... ಅಲ್ಲಿಂದ ಓಡಲಿಕ್ಕೆ ಪ್ರಯತ್ನಪಟ್ಟೆ... ಆಗ ಅವರಿಬ್ಬರೂ ನನ್ನ ತಬ್ಬಿ ಮತ್ತೆ... ಮತ್ತೆ... ಕೆಳಕ್ಕೆ ಕೆಡವಿ...”
ಮುಂದೆ ಅವಳು ಹೇಳುವಂತಿರಲಿಲ್ಲ. ಹೇಳಬೇಕಾಗಿಯೂ ಇರಲಿಲ್ಲ... ಆ ಪುಂಡರು ನಡೆಸಿದ ಅತ್ಯಾಚಾರದಿಂದ ಶ್ಯಾಮನ ನರನರದಲ್ಲಿಯೂ ರೋಷ ಹರಿದಾಡಿತಂತೆ... ಅವರೆಲ್ಲಿ ತಪ್ಪಿಸಿ ಹೋಗ್ತಾರೆ? ಊರಿನವರು ತಾನೆ? ಇಂದಲ್ಲ<noinclude></noinclude>
elfiait7aj9rwkmn26ctklnffm5c3ba
ಪುಟ:ವೈಶಾಖ.pdf/೧೦೦
104
82029
316419
277228
2026-05-03T12:01:26Z
Shreelatha.Halemane
7642
/* Validated */
316419
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{Left|೮೪}}{{Right|ವೈಶಾಖ}}
ನಾಳೆ ಸಿಕ್ಕೇ ಸಿಗ್ತಾರೆ. ತಾನು ಮೈಸೂರಿಗೆ ಹಿಂದಿರುಗುವುದರ ಒಳಗೆ ಅವರನ್ನ ಹಣ್ಣುಗಾಯಿ ನೀರುಗಾಯಿ ಆಗುವ ಹಾಗೆ ಬಡಿದು, ಅವರು ಊರಿನಲ್ಲಿ ಇನ್ನು ಎಂದೆಂದಿಗೂ ಇಂಥ ದುಷ್ಕೃತ್ಯ ನಡೆಸದ ಹಾಗೆ ಮಾಡಬೇಕು, ಎನ್ನಿಸಿತಂತೆ. ಆದರೆ ತಕ್ಷಣ ವಿವೇಕ ಉದ್ರೇಕಕ್ಕೆ ಕಡಿವಾಣ ಹಾಕತಂತೆ... ಹೌದು, ಅವರನ್ನು ಶಿಕ್ಷಿಸಲು ಹೋಗಿ, ಅನ್ಯಾಯವಾಗಿ ಆ ಬಾಲಕಿಯ ಮಾನ ಕಳೆದಂತಾಗುವುದಿಲ್ಲವೆ? ಎಂಬ ಚಿಂತೆ ಹುಟ್ಟಿ, ಯಾರಿಗೂ ಪ್ರಕಟಿಸುವುದಿಲ್ಲವೆಂದು ಜಾನಕಿಗೆ ಧೈರ್ಯ ತುಂಬಿ, ಉಪಾಯವಾಗಿ ಹೊಳೆಯ ಆಚೆಯ ದಡದಲ್ಲಿ ಹರಿಗಲು ನಿಲ್ಲುವ ತಾಣದವರೆಗೂ ಅವಳನ್ನು ಕರೆದು ತಂದಿದ್ದನಂತೆ. ಆ ಬಳಿಕೆ ಹೊಳೆಯ ಮಧ್ಯದಲ್ಲಿ ಹರಗಲು ದಡ ಮುಟ್ಟವವರೆಗೂ ಕಾದಿದ್ದು, ಅವಳನ್ನು ಅದರೊಳಗೆ ಹತ್ತಿಸಿ ಕುಳ್ಳಿರಿಸಿದನಂತೆ. ಹರಿಗಲು ಈಚೆ ದಡ ಸೇರುವವರೆಗೂ ಶ್ಯಾಮನಿಗೆ ಆತಂಕ-ಎಲ್ಲಿ ಜಾನಕಿ ಹರಿಗಲಿನಿಂದ ಹೊಳೆಗೆ ಹಾರಿಬಿಡುವಳೋ ಎಂದು!... ಅಂತೂ ಹೀಗೆ ಮೈಯೆಲ್ಲ ಕಣ್ಣಾಗಿ ಕಾವಲಿದ್ದು, ಹರಿಗಲು ಅವರನ್ನು ಈಚೆ ದಡದಲ್ಲಿ ಇಳಿಸಿದಾಗ, ವೀರಾಂಜನೆಯ ಗುಡಿ ಸಮೀಪ, ಯಥಾಪ್ರಕಾರ ಶಾಲೆಗೆ ಚಕ್ಕರ್ ಹೊಡೆದು, ಶೇಷ ಇನ್ನೂ ಕೆಲವರು ಹುಡುಗರೊಂದಿಗೆ ಚಿನ್ನಿ ಆಡುತ್ತಿದ್ದುದು ಕಾಣಿಸಿತಂತೆ. ಹಾಳಾದವನು ಇವನಾದರೂ ಜೊತೆಗೆ ಇದ್ದಿದ್ದರೆ ಈ ಅನಾಹುತ ತಪ್ಪುತ್ತಿಲ್ಲ ಎಂದು ಶ್ಯಾಮನಿಗೆ ಅನ್ನಿಸಿತ್ತಂತೆ.
ನಡೆದ ಸಂಗತಿಯನ್ನೆಲ್ಲ ನನಗೆ ಈ ಪರಿಯಲ್ಲಿ ವರ್ಣಿಸಿ, ಶ್ಯಾಮ ಕೊನೆಯದಾಗಿ-
“ಹುಡುಗಿಗೆ ತುಂಬಾ ಘಾಸಿಯಾಗಿದೆ. ಎಲ್ಲಿ ಅವಳು ಪ್ರಾಣ ಕಳೆದು ಕೊಳ್ತಾಳೊ ಎನ್ನುವ ಚಿಂತೆ ನನ್ನನ್ನು ಬಾದಿಸ್ತಾ ಇದೆ, ರುಕ್ಕಿಣಿ. ನಿಮ್ಮ ಅತ್ತಿಗೆಗೂ ಅಣ್ಣನಿಗೂ ಹೇಳು- ಈ ವಿಚಾರ ಬಹಿರಂಗ ಮಾಡದೆ ಗೋಪ್ಯವಾಗಿಟ್ಟು, ಹುಡಿಗೀನ ಆದಷ್ಟು ಜಾಗ್ರತೆ ಲಗ್ನಮಾಡಿ ಕಳಿಸುವ ಏರ್ಪಾಡು ಮಾಡಬೇಕು” ಎಂದ.
ಶ್ಯಾಮ ಹೊರಟುಹೋಗುತ್ತಲೂ ಎಣ್ಣೆನೀರು ಎರದುಕೊಳ್ಳುತ್ತಿದ್ದ ಅತ್ತಿಗೆ ಬಚ್ಚಲು ಕೋಣೆಯಿಂದ ಹೊರಬರುವವರೆಗೂ ನಾನು ಉದ್ವೇಗದಿಂದಲೇ ಕಾದಿದ್ದೆ. ಅವಳು ತಲೆಗೂದಲ ತೇವವನ್ನು ಒತ್ತಿ ತೆಗೆಯುತ್ತಿರುವಾಗ, “ಕೊಂಚ ಹೀಗೆ ಬರೀರ, ಅತ್ತಿಗೆ?” ಅಂದೆ. ನನ್ನ ದನಿಯಲ್ಲಿದ್ದ ಆತಂಕವನ್ನು ನನ್ನ ಪಿಸು ಮಾತನ್ನು ಗಮನಿಸಿ, ಕಳವಳಗೊಂಡ ಅತ್ತಿಗೆ ಸದ್ದಿಲ್ಲದೆ ನನ್ನೊಂದಿಗೆ ಬಂದಳು. ನಾವಿಬ್ಬರೂ ಸಾತು ಮಲಗುವ ಕೋಣೆ ಸೇರುತ್ತಲೂ ನಡೆದ ವಿಚಾರವನ್ನು<noinclude></noinclude>
1rqt6xhizu57xl3c2gyspnu80fw46f9
ಪುಟ:ವೈಶಾಖ.pdf/೧೦೧
104
82030
316420
277233
2026-05-03T12:02:36Z
Shreelatha.Halemane
7642
/* Validated */
316420
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{Left|ಸಮಗ್ರ ಕಾದಂಬರಿಗಳು}}{{Right|೮೫}}
ಕಣ್ಣೀರು ಸುರಿಸುತ್ತಲೇ ತಿಳಿಸಿದ್ದೆ... ಕೇಳುತ್ತ, ಸಾತು ಹುಚ್ಚಿಯಂತೆ ಆದಳು...
“ಎಲ್ಲಿದ್ದಾಳೆ ನನ್ನ ಮಗಳು ಎಲ್ಲಿದ್ದಾಳೆ?” ಎಂದು ಕೂಗುತ್ತ ಎದೆ ಎದೆ ಬಡಿದು ಹಜಾರಕ್ಕೆ ನುಗ್ಗಲು ಯತ್ನಿಸಿದಳು ಆಗ ನಾನು ಅಡ್ಡಗಟ್ಟಿ,
“ಹೀಗೆ ರಂಬಾಟ ಮಾಡಿದರೆ, ಜಾನಕಿ ಪ್ರಾಣ ತೆಗೆದುಕೊಳ್ಳುವ ಅಪಾಯವಿದೆ, ಅದರೊಟ್ಟಿಗೆ ಮಾನಾಪಹರಣದ ಸುದ್ದಿಯ ಡಾಣಾಡಂಗುರ ವಾಗುತ್ತದೆ” ಎಂದು ಎಚ್ಚರಿಸಿದೆ. ಆಗಲೂ ಸಾತು ಗೋಳುಗರೆಯುತ್ತ,
“ನನಗೆ ದಾರಿ ಬಿಡು, ರುಕ್ಕು, ನನಗೆ ದಾರಿ ಬಿಡು” ಎಂದು ಚಡಪಡಿಸುತ್ತಲೆ ಇದ್ದಳು.
ಮುಂದೆ ತುಸು ವೇಳೆಯಲ್ಲಿ ಅಣ್ಣನೂ ಬಂದು, ನನ್ನ ಮಾತನ್ನೆ ಸಮರ್ಥಿಸಿದ್ದರಿಂದ, ಸಾತು ನಮ್ಮಿಂದ ದೂರ ಸರಿದು ಮಂಚದ ಮೇಲೆ ಬಿದ್ದು ಹೊರಳಾಡುತ್ತ ಗೋಳುಗೆರೆಯುತ್ತಲೇ ಇದ್ದಳು. ಅವಳ ಹುಚ್ಚು ಉದ್ವೇಗ ಸಮಾಧಾನ ಸ್ಥಿತಿ ತಲುಪದವವರೆಗೆ ಅವಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಅಣ್ಣನನ್ನು ಪ್ರಾರ್ಥಿಸಿ, ರುಕ್ಕಿಣಿ ಜಾನಕಿಯ ಕೋಣೆಗೆ ಬಂದಿದ್ದಳು. ಹುಡುಗಿ ಅತ್ತು ಅತ್ತು ದಣಿದು ಪ್ರಜ್ಞೆ ಹೊದವಳಂತೆ ಮಲಗಿದ್ದಳು. ರುಕ್ಕಿಣಿಯು ಅವಳ ಬಳಿಯೇ ಬಹಳ ಕಾಲ ಮೌನವಾಗಿ ಕುಳಿತಿದ್ದಳು. ಇದ್ದಕ್ಕಿದ್ದಂತೆ ಬೆಚ್ಚಿ 'ಅಮ್ಮಾ' ಎಂದು ಕೂಗುತ್ತ ಜಾನಕಿ ಎದ್ದು ಕೂತಳು. ಅವಳನ್ನು ತಬ್ಬಿ ಎದೆಗೆ ಒತ್ತಿದಂತೆ ಆನಿಸಿಕೊಂಡು,
{{gap}}“ಹೆದರಬೇಡ, ಜಾನಿ, ಅದದ್ದು ಆಯ್ತು, ಈ ಸುದ್ದಿ ಯಾರಿಗೂ ತಿಳಿಯದ ಹಾಗೆ ನಾನು, ಅಮ್ಮ, ಅಪ, ಶ್ಯಾಮ ಎಲ್ಲರೂ ಜಾಗರೂಕತೆ ವಹಿಸೇವೆ” ಎಂದು ರುಕ್ಕಿಣಿ ಆಶ್ವಾಸನೆ ಕೊಡುತ್ತಿದ್ದರೂ ಆ ಹುಡುಗಿ ಮಂಕು ಕವಿದಂತೆ ಎದಿರು ಗೋಡೆಯಲ್ಲೇ ದೃಷ್ಟಿ ನೆಟ್ಟು ಮೌನವಾಗಿ ಕಣ್ಣೀರು ಸುರಿಸುತ್ತಲೆ ಇದ್ದಳು. ತನ್ನೊಬ್ಬಳಿಂದಲೆ ಅವಳನ್ನು ಸುಧಾರಿಸುವುದು ಸಾಧ್ಯವಾಗದೆಂದು ಮನಗಂಡ ರುಕ್ಕಿಣಿ, ಎದ್ದು ಹೋಗಿ ಅಣ್ಣನನ್ನೂ ಅಷ್ಟರಲ್ಲಿ ಕೊಂಚ ಸಮಾಧಾನಸ್ಥಿತಿಗೆ ಬಂದಿದ್ದ ಸಾತು ಅತ್ತಿಗೆಯನ್ನೂ ಕರೆದು ತಂದಿದ್ದಳು. ಅವರಿಬ್ಬರೂ ಜಾನಕಿಯನ್ನು ಪರಿಪರಿಯಾಗಿ ಸಂತೈಸಿದರು. ನಾನು ಬಿಸಿಬಿಸಿ ಕಾಫಿ ತಯಾರಿಸಿ ತಂದಿತ್ತೆ. ಒಲ್ಲೆ ಒಲ್ಲೆ ಎಂದು ತಲೆಯಾಡಿಸಿದಳು, ನಾವೆಲ್ಲರೂ ಮಹತ್ತಾಗಿ ಪ್ರಯತ್ನ ನೆಡಸಿದ ಬಳಿಕ, ಚಿಕ್ಕಮಕ್ಕಳಂತೆ, ಗುಟುಕು ಗುಟುಕಾಗಿ ಕಾಲು ಲೋಟ ಕುಡಿಯಲು ಅವಳಿಗೆ ಅರ್ಧಗಂಟೆಯೇ ಹಿಡಿಯುತು...<noinclude></noinclude>
1a88jnkojk1eahn7rzj0koy019c2nci
ಪುಟ:ವೈಶಾಖ.pdf/೧೦೨
104
82031
316421
277239
2026-05-03T12:03:58Z
Shreelatha.Halemane
7642
/* Validated */
316421
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{Left|೮೬}}{{Right|ವೈಶಾಖ}}
ಮೂರು ತಿಂಗಳ ಹಿಂದೆಯೇ ಜಾನಕಿ ಮೈನೆರೆದಿದ್ದರೂ ಸಾತು ಆ ವಿಷಯವನ್ನು ಊರಿನವರಿಂದ ಮುಚ್ಚಿಟ್ಟಿದ್ದಳು. ಆಗಲೆ ಹತ್ತಿರದ ಸಂಬಂಧಿಕರ ಒಂದು ವರೆ ವರ್ಷದ ಹಿಂದೆಯೇ ಬಂದಿದ್ದರೂ ಆ ಹುಡುಗಿನ ಮನೆಯವರು ಬಡವರು, ತನ್ನ ಮಗಳು ಲಕ್ಷಣವಾಗಿದ್ದಾಳೆ, ಸ್ವಲ್ಪ ತಡೆದರೆ ಹಣಕಾಸಿನಲ್ಲಿ ಇನ್ನೂ ಉತ್ತಮವಾದ ವರ ಬಂದೇ ಬರುತ್ತದೆಂದು ನಂಬಿ, ಆ ವರನನ್ನು ತಿರಸ್ಕರಿಸಿದ್ದಳು ಸಾವಿತ್ರಿ.... ಅಲ್ಲದೆ ಮಗಳು ಇಷ್ಟು ಜಾಗ್ರತೆ ಮೈನೆರೆಯುವಳೆಂದೂ ಅವಳು ಎಣಿಸಿರಲಿಲ್ಲ. ಇನ್ನೊಂದೆರಡು ವರ್ಷಗಳಾದರೂ ತಡೆಯುತ್ತದೆ. ಅಷ್ಟರಲ್ಲಿ ಯಾವುದಾದರೂ ಉತ್ತಮ ಸಂಬಂಧ ಕುದುರಿಸಿ ಲಗ್ನ ಮಾಡುವುದು ಎಂದೂ ಎಣಿಕೆಹಾಕಿದ್ದಳು. ಆದರೆ ಲೆಕ್ಕಾಚಾರ ತಪ್ಪಿ, ಮಗಳು ಮೈನೆರೆದು ನಿಂತಾಗ ಅದನ್ನು ಮುಚ್ಚಿ ಮುಂದಿನ ಸಾಲಿಗೆ ಲಗ್ನ ಮಾಡಿಬಿಡುವುದೆಂದು ಲೆಕ್ಕಹಾಕಿದಳು. ಈಗ ಅದು ಏರುಪೇರಾಗಿ ಸಾವಿತ್ರಿಗೆ ದಿಕ್ಕೇತೋಚದಂತಾಗಿತ್ತು.
ಸಾವಿತ್ರಿ, ಮಗಳು ದೊಡ್ಡವಳಾದ ವಿಷಯವನ್ನು ಊರಿನವರಿಂದ ರಹಸ್ಯವಾಗಿಡಲು ಕೆಲಕಾಲ ಯಶಸ್ವಿಯಾದರೂ, ಶೇಷನ ಮುಖೇನ ಅವನ ಪೋಲಿಗುಂಪಿಗೆ ಇದು ತಿಳಿಯಲು ಬಹುದಿನ ಬೇಕಾಗಲಿಲ್ಲ. ಆ ಗುಂಪಿನಲ್ಲಿದ್ದ ಕೆಲವು ಹುಡುಗರಿಗೆ ಮೀಸೆ ಮೊಳೆಯುತ್ತಿದ್ದು ಅದರಂತೆಯೆ ಹೆಣ್ಣಿನ ಬಗ್ಗೆ ಕುತೂಹಲವೂ ಬೆಳೆಯತೊಡಗಿತ್ತು. ಇಂಥ ದುಷ್ಟ ಕುತೂಹಲವೇ ಈ ಅನರ್ಥಕ್ಕೆಲ್ಲ ಕಾರಣ ಎಂದು ರುಕ್ಕಿಣಿ ತನ್ನಲ್ಲಿ ತರ್ಕಿಸಿದ್ದಳು. ಇದರ ಜೊತೆಗೆ ಯಾವಾಗಲೂ ಜಾನಕಿಯೊಡನೆ ತಪ್ಪದೆ ಶಾಲೆಗೆ ಹೋಗುತ್ತಿದ್ದ ಗಿರಿಜಮ್ಮನ ಮಗಳು ಸುಮಿಗೆ ಕಳೆದೆರಡು ದಿನಗಳಿಂದಲೂ ಜ್ವರ ಬಂದು ಹಾಸಿಗೆ ಹಿಡಿದದ್ದು, ಜಾಕಿಯ ದುರ್ದೈವ!
ಆ ದಿವಸ ಮನೆಯಲ್ಲಿ ಯಾರೂ ಊಟ ಮಾಡಲಿಲ್ಲ-ಶೇಷ ಒಬ್ಬನನ್ನು ಉಳಿದು!... ಮನೆಗೆ ಸತ್ತ ಮನೆಯ ಛಾಯೆ ಬಡಿದಿತ್ತು. ತಾನೊಬ್ಬನೇ ಊಟ ಮಾಡುವಾಗ ಮನೆಯವರೆಲ್ಲರಿಗೂ ಈ ದಿನ ಏನಾಗಿದೆ, ಎಂದು ತಿಳಿದುಕೊಳ್ಳುವ ಚಪಲ ಶೇಷನಿಗೆ! ಆದರೆ ಅವನಿಗೆ ಗುಟ್ಟು ಎಂದು ಹೇಳುವುದೂ ಒಂದೆ, ಪತ್ರಿಕೆಗಳಿಗೆ ಜಾಹೀರಾತು ಕೊಡುವುದೂ ಒಂದೆ!- ಎಂದು ಶ್ಯಾಮ ಎಚ್ಚರಿಕೆ ಕೊಟ್ಟಿದ್ದರಿಂದ, ಜಾನಕಿ ಹುಷಾರು ತಪ್ಪಿದ್ದಾಳೆ, ವಿಪರೀತ ಜ್ವರ ಬಂದಿದೆ, ಎಂದು ತಿಳಿಸಿದೆವು... ಶೇಷನಿಗೆ ಮನೆಯಲ್ಲಿ ಇದ್ದ ಆಸಕ್ತಿಯೆಲ್ಲ ತಾನು ತಿಂಡಿ, ಊಟ ಮುಗಿಸುವವರೆಗೆ ಮಾತ್ರ ಅದು ಒಮ್ಮೆ ಮುಗಿಯಿತೆಂದರೆ, ಆ ಮನೆಗೂ ಅವನಿಗೂ ಯಾವ ಸಂಬಂಧವೂ ಇದ್ದಂತೆ ತೋರುತ್ತಿರಲಿಲ್ಲ. ಶೇಷನಲ್ಲಿ ಮನೆಯ<noinclude></noinclude>
f41lggnvyozqrphewd24atkvfnzjngg
ಪುಟ:ವೈಶಾಖ.pdf/೧೦೩
104
82032
316422
277242
2026-05-03T12:04:59Z
Shreelatha.Halemane
7642
/* Validated */
316422
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{Left|ಸಮಗ್ರ ಕಾದಂಬರಿಗಳು}}{{Right|೮೭}}
ಬಗ್ಗೆ ಹೀಗೆ ಅನಾದರ ಬೆಳೆಯಲು ಸಾತುವೂ ಬಹುಮಟ್ಟಿಗೆ ಕಾರಣ ಎಂದರೂ ತಪ್ಪಾಗಲಾರದು...
ಒಂದು ದಿನ ಅತ್ತಿಗೆ ತೋಟಕ್ಕೆ ಹೋಗಿದ್ದಾಗ ಆಶ್ವಣ್ಣ ಹೇಳಿದದ್ದ:
“ನೋಡು ರುಕ್ಕು, ಯಾವಾಗ ಮಕ್ಕಳೆದುರಿಗೆ ಹೆಂಡತಿಯಾದವಳು ಗಂಡನಿಗೆ ಮರ್ಯಾದೆ ತೋರದೆ ಉದ್ಧಟನದಿಂದ ವರ್ತಿಸುತ್ತಾಳೆ, ಆಗ ಆ ಮಕ್ಕಳೂ ಕೂಡ ಯಾರ ಅಂಕೆ ಅಂಕುಶವಿಲ್ಲದೆ ಬೆಳೆಯಲು ಆರಂಭಿಸುತ್ತವೆ. ಶೇಷನಿಗೆ ಆಗಿರುವುದೂ ಅಷ್ಟೇಯೆ... ಮದುವೆಯಾದ ದಿನದಿಂದಲೂ ಸಾತು ನನ್ನನ್ನು ಹೀನಾಯವಾಗೇ ಕಾಣುತ್ತ ಬಂದಿದ್ದಾಳೆ. ಈಗಲೂ ಮಾತುಮಾತಿಗೂ ನನ್ನನ್ನವಳು ಧಿಕ್ಕರಿಸುವುದನ್ನ ನೀನೂ ಕಂಡೇ ಇದ್ದೀಯೆ. ಆರಂಭದಲ್ಲಿ ಶೇಷ ಏನಾದರೂ ತಪ್ಪು ಮಾಡಿ ನಾನು ಅವನನ್ನು ಗದರಿಸಿದರೆ, “ಅಯ್ಯೋ ಪಾಪ, ನಮ್ಮ ಶೇಷ ಇನ್ನೂ ಚಿಕ್ಕೋನು. ಸಣ್ಣಪುಟ್ಟ ತಪ್ಪನ್ನೆಲ್ಲ ಒಂದು ಭಾರಿ ಪರ್ವತ ಮಾಡಿ, ಕಂದನ ಮನಸ್ಸನ್ನ ನೋಯಿಸಬೇಡಿ” ಎಂದು ಅವನನ್ನ ವಹಿಸಿಕೊಳ್ಳುತ್ತಲೆ ಇದ್ದಳು. ಈ ಪಕ್ಷಪಾತದಿಂದ ತಂದೆಯಾದ ನನ್ನಲ್ಲಿ ಅವನಿಗಿದ್ದ ಭಯ, ಗೌರವ ಎಲ್ಲವೂ ಮಾಯವಾದವು. ತಾನೂ ಏನೇ ಅಪರಾಧವೆಸಗಿದರೂ ತಾಯಿಯ ಬೆಂಬಲ ತನ್ನ ಕಡೆಗಿದೆ ಎನ್ನುವ ಭಾವನೆ ಅವನಲ್ಲಿ ಬಲವಾಗಿ ಬೇರೂರಿತು... ಗಾಡಿ ಚಕ್ರದ ಒಂದು ಕಡಾಣಿ ಕಿತ್ತ ಬಳಿಕ ಇನ್ನೊಂದು ಕಡಾಣಿ ಕಿತ್ತುಬೀಳಲು ಎಷ್ಟು ಕಾಲ ಬೇಕು?- ಶೇಷನಿಗೆ ಯಾವಾಗ ನನ್ನ ಹತೋಟಿ ತಪ್ಪಿ ಸ್ಟೇಚ್ಚೆಯ ರುಚಿ ಕಂಡನೋ ಅಂದಿನಿಂದ ತನ್ನ ತಾಯಿಯ ಹತೋಟಿಯಿಂದಲೂ ತಪ್ಪಿಸಿಕೊಳ್ಳಲು ಹವಣಿಸಿದ. ಊರು ಸೊರೆಹೋದಬಳಿಕ ಕೋಟೆಬಾಗಿಲು ಹಾಕುವ ಯತ್ನ ನಡೆಸಿದಳು ನಿಮ್ಮತ್ತಿಗೆ. ಆಗ ಶೇಷ ಬಗ್ಗುತ್ತಾನೆಯೆ? ಮರದ ಕಾಂಡದೊಳಗೆ ಚೇಗು ಆಗಲೆ ವಿಪರೀತವಾಗಿ ಬೆಳೆದುಹೋಗಿತ್ತು, ತಾಳ್ಮೆಗೆಟ್ಟು ಸಾತು ಮಗನಿಗೆ ಅತ್ಯುಗ್ರ ಶಿಕ್ಷೆಗಳನ್ನೆಲ್ಲ ವಿಧಿಸಿದಳು, ಅನುಭವಿಸಿದಷ್ಟೂ ಅವನಿಗೆ ಈಗ ಜಡ್ಡು ಕಟ್ಟುತ್ತ ಬಂತು. ಕೊನೆಗೆ ಅವಳೇ ಸೋತು ಅವನ ಸ್ವಚ್ಚೆಗೆ ಅವನನ್ನು ಬಿಟ್ಟು ಬಿಟ್ಟಳು... ಬಾಲ್ಯದಲ್ಲಿ ನೀನು ಕಂಡ ಹಾಗೆ ಶೇಷ ವಿಧೇಯನಾಗೇ ಇದ್ದ, ಒಳ್ಳೆಯ ಸ್ವಭಾವದವನೂ ಆಗಿದ್ದ. ಆದರೆ ಈಗ?”- ಎನ್ನುತ್ತಿರುವಂತೆ ದುಃಖ ಒತ್ತಿರಿಸಿ ಬಂದು ವಲ್ಲಿಯ ತುದಿಯಿಂದ ಕಣ್ಣುಗಳನೊರೆಸುತ್ತ, “ಡಿಂಬನಂಥದೆ ಕಥೆಯನ್ನು ಮಾಡಿಟ್ಟಳಲ್ಲ. ಮಹಾತಾಯಿ!...” ಎಂದು ಉದ್ಗರಿಸಿದ. ಒಂದೊಂದು ಮಾತೂ ದ್ವೇಷದಿಂದಲೆ ಹುಟ್ಟಿ ಬಂದಂತಿತ್ತು. ಆದರೆ ಮಾಡುವುದೇನು? ಕಾಲ ಮಿಂಚಿತ್ತು. ಅಲ್ಲದೆ, ಹೆಂಡತಿಯನ್ನು ಮೊದಲಿನಿಂದಲೂ ಹತೋಟಿಮಾಡದೆ,<noinclude></noinclude>
tbucnf5yzgkhf5cjg743z6xhuxpalxf
ಪುಟ:ವೈಶಾಖ.pdf/೧೦೪
104
82033
316423
277243
2026-05-03T12:06:24Z
Shreelatha.Halemane
7642
/* Validated */
316423
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{Left|೮೮}}{{Right|ವೈಶಾಖ}}
ಈಗ ಪ್ರಲಾಪ ಮಾಡಿದರೆ ಬಂದ ಭಾಗ್ಯವೇನು?- ಇದು ಒಂದು ರೀತಿಯ ಪಂಡ ರೋಷವಲ್ಲವೆ? ಎಂದೆನ್ನಿಸದೇ ಇರಲಿಲ್ಲ ರುಕ್ಕಿಣಿಗೆ, ಮರುಗಳಿಗೆಯಲ್ಲೇ, ಅಯ್ಯೋ ಸಾತುವಿನಂತಹ ಬಜಾರಿ ಹೆಂಗಸನ್ನು ಅಂಕೆಯಲ್ಲಿಟ್ಟು ಅಳಬೇಕಾದರೆ, ನಮ್ಮಣ್ಣನಂತಹ ಬಡಪಾಯಿ ಸಾಧುಪ್ರಾಣಿಯಿಂದ ಸಾಧ್ಯವೆ? ಅದಕ್ಕೆ ಬಲು ಹಮೀರ ಗಂಡೇ ಆಗಿರಬೇಕಿತ್ತು ಎಂದುಕೊಂಡಳು...
ಮುಂದೆ ಜಾನಕಿಯು ಮುಟ್ಟಾಗುವ ದಿನಗಳನ್ನೆ ನಾವೆಲ್ಲರೂ ರಹಸ್ಯವಾಗಿ ಲೆಕ್ಕ ಹಾಕುತ್ತಿದೆವು. ಒಂದು ವೇಳೆ ಜಾನಕಿ ಬಸಿರಾದರೆ, ಗರ್ಭವನ್ನು ಯಾರಿಂದ ತೆಗೆಸಬಹುದು?- ಸಾತಾನಿ ವಜ್ರಮನೋರೆ? ಅಥವಾ ಮೇಲ ಕಟ್ಟುವವರ ಜಾತಿ ತಾಯಕ್ಕನ ಕೇಳಲೆ?- ಕೂತರೆ ನಿಂತರೆ ನನ್ನ ಸಂಗಡ ಇದೇ ಪಲ್ಲವಿ ಸಾತು ಅತ್ತಿಗೆಯದು?....
“ತಾಳಿ ಅತ್ತಿಗೆ, ಈಗಲೆ ಯಾಕೆ ಆ ಮಾತೆಲ್ಲ?... ಇನ್ನೂ ದಿನ ಇದೆಯಲ್ಲ. ಕಾದು ನೋಡೋಣ”
ಇಲ್ಲ. ನನ್ನ ಯಾವ ಸಮಾಧಾನದ ಮಾತೂ ಅವಳಿಗೆ ಪಥ್ಯವಾಗಿರಲಿಲ್ಲ. ಕಾದು ಮರಳುವ ನೀರಿನಂತೆ ಅವಳು ಪ್ರತ್ಯಕ್ಷವಾಗಿ ಕುದಿಯುತ್ತಿದ್ದಳು. ಎಲ್ಲೂ ನಿಲ್ಲಲಾರಳು, ಕೂರಲಾರಳು, ರಾತ್ರಿ ಮಲಗಿದಾಗಲೂ ಸಹ ಸ್ವಲ್ಪ ಹೊತ್ತಿಗೆಲ್ಲ ಎದ್ದು ಕುಳಿತು, ಅಣ್ಣನ ಮಾತಿನಲ್ಲಿ ಹೇಳುವುದಾದರೆ- ಇದೇ ರಾಗ, ತಾನ, ಪಲ್ಲವಿ ಆರಂಭಿಸಿ, ಅಣ್ಣನಿಗೂ ನಿದ್ರೆ ಕೊಡದೆ ಅವನನ್ನು ಇಡೀ ರಾತ್ರಿ ಜಾಗರಣೆ ಕೆಡುವುತ್ತಿದ್ದಳಂತೆ....
ಜಾನಕಿಗೆ ಹದಿನೈದು ದಿನಗಳ ಪರ್ಯಂತ ಜ್ವರ ಕಾದಿರಬೇಕು. ಈಗ ಜ್ವರ ನಿಂತಿದೆ, ಆಹಾರವನ್ನೂ ಕೊಂಚಕೊಂಚವಾಗಿ ಸೇವಿಸುತ್ತಿದ್ದಾಳೆ. ಅವಳಿಗೆ ಬೇಸರ ಕಳೆಯಲೆಂದು, ಗಿರಿಜಮ್ಮನವರ ಮನೆಯಿಂದ ಹಳುಗುಳಿಮಣೆ ತಂದು, ಅವಳ ಮುಂದುಗಡೆಯೇ ಕುಳಿತು ಸಾತುವಿನೊಂದಿಗೆ ರುಕ್ಕಿಣಿ “ಕಟ್ಟುವ ಮನೆ' ಆಟ ಆಡುವಳು. ಹಳ್ಳುಗುಳಿಮಣೆಯನ್ನು ಗಿರಿಜಮ್ಮನವರ ಮನೆಯಿಂದ ಈಸಿ ತರುವಾಗ, ಅವರು
“ಇದೇನೆ ಸೋಜಿಗೆ?... ಸಾತು ನಿನ್ನ- ಹಗಲುಹಾದರಗಿತ್ತಿ, ಶ್ಯಾಮನ ಹಟ್ಟಿಯಲ್ಲಿ ಯಾರೂ ಇಲ್ಲದೇ ಇರುವಾಗ, ಹೊಲೆಗೆ ಬಟ್ಟೆ ಒಗೆಯಲು ಹೋಗುವ ನೆವದಲ್ಲಿ, ಹಗಲು ಹೊತ್ತೇ ಅವನ ಜೊತೆ ಮಲಗಿದ್ದು ಬಾಳಮ್ಮ ಅಂತ ದನಿ ಸಣ್ಣಗೆ ಮಾಡಿ, ಕಣ್ಣು ಮೂಗು ತಿರುಗಿಸ್ತ ಹೇಳ್ತ ಇದ್ದಳಲ್ಲ ನನ್ನ ಸಂಗಡ? ಈಗೇನು ಇಂಥ ಬದಲಾವಣೆ?... ಈಗ ನಮ್ಮ ಹಟ್ಟಿಕಡೆ ಹರಟೆಗೂ ಬರಲ್ಲ.<noinclude></noinclude>
a5st92iya6q6n4dujqzk93wo9r82eq1
ಪುಟ:ವೈಶಾಖ.pdf/೧೦೫
104
82034
316424
277246
2026-05-03T12:07:26Z
Shreelatha.Halemane
7642
/* Validated */
316424
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{Left|ಸಮಗ್ರ ಕಾದಂಬರಿಗಳು}}{{Right|೮೯}}
ತಿರುಗಿಯೂ ನೋಡಲ್ಲ... ಅದು ಸರಿ, ಒಟ್ಟಿಗೆ ಹುಗುಳಿಮಣೆ ಆಡುವ ಮಟ್ಟಿಗೆ ನೀವಿಬ್ಬರೂ ಹೇಗೆ ಹೊಂದಿಕೊಂಡಿರಿ?... ಈ ಕಲಿಗಾಲದಲ್ಲಿ ಹುಲಿ, ಗೋವು ಎರಡೂ ತಮ್ಮವೈರ ತ್ಯಜಿಸಿ ಒಂದಾಗುವುದೂ ಉಂಟೆ?- ಈಗ ಮಾತು ನಿನ್ನ ಮೇಲಣ ದ್ವೇಷ ಬಿಟ್ಟಿರೋದು ಗಮನಿಸಿದರೆ, ಅದೂ ಸಂಭವಿಸೋದು ಸಾಧ್ಯ ಅನ್ನೋದರಲ್ಲಿ ನನಗೆ ಯಾವ ಅನುಮಾನವೂ ಉಳಿದಿಲ್ಲಮ್ಮ!” ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು...
ಆಗೀಗ ಶ್ಯಾಮನೂ ವೀಣೆಯನ್ನು ಇಲ್ಲಿಗೇ ತಂದು ತಲ್ಲೀನತೆಯಿಂದ ನುಡಿಸಿ ನಡೆದುಹೋದ ಸಂಗತಿಯನ್ನು ಕೆಟ್ಟ ಕನಸೊ ಎಂಬಂತೆ ಜಾನಕಿ ಅದನ್ನು ಮರೆಯುವಂತೆ ಮಾಡಲು ಪ್ರಯತ್ನಿಸುತ್ತಿದ್ದ. ಅಂಥ ಸಮಯಗಳಲ್ಲಿ ನಮ್ಮ ಸಾವಿತ್ರಿ ತನ್ನ ಸಂಗೀತದ ದ್ವೇಷವನ್ನು ಲವಲೇಶವೂ ಪ್ರಕಟಿಸಿಸದೆ ತಾನೂ ಮೆಚ್ಚುವೆನೆಂದು ತೋರಲು ಆಗಾಗ ತಲೆದೂಗುತ್ತಿದ್ದುದು ಅಣ್ಣನಿಗೂ ನನಗೂ ಬಲು ಮೋಜಿನ ಸಂಗತಿಯೇ ಆಗಿತ್ತು...
ಆದರೆ ದೈವ ಜಾನಕಿಯ ಪರವಾಗಿತ್ತೆಂದೇ ಹೇಳಬೇಕು. ಮಾಮೂಲಿಗಿನ್ನ ಎರಡು ದಿನ ತಡವಾಗಿ ನಮ್ಮೆಲ್ಲರನ್ನೂ ಆತಂಕದಲ್ಲಿ ಕೆಡವಿದರೂ ಜಾನಕಿ ಮುಟ್ಟಾಗಿ ನಮ್ಮೆಲ್ಲರ ಎದೆಯ ಮೇಲಿನ ಭಾರವನ್ನೂ ಇಳುಕಿದ್ದಳು!- ಸಾತು ಸಂಭ್ರಮದಿಂದ ದೇವರ ಕೋಣೆಯ ನಂದಾದೀಪಕ್ಕೆ ಹಸುವಿನ ತುಪ್ಪವನ್ನೇ ಸುರಿದು ದೀಪ ಹಚ್ಚಿದ್ದಳು...
{{center|'''೯'''}}
ರುದ್ರಪಟ್ಟದಲ್ಲಿ ಆ ದಿನ ರುಕ್ಕಣಿ ಇನ್ನಿಲ್ಲದ ನೆಮ್ಮದಿಯಿಂದ ಕಾವೇರಿ ನದಿಯಲ್ಲಿ ಬಟೆ ಒಗೆಯುತ್ತಿದ್ದಳು. ಪಾಪ ಏನೂ ಅರಿಯದ ಮುಗ್ಧ ಬಾಲೆ ಜಾನಕಿಯು ಭೀಕರವಾದ ದುರಂತದಿಂದ ಪಾರಾದುದು ಅವಳ ನೆಮ್ಮದಿಗೆ ಒಂದು ಕಾರಣವಾದರೆ, ಸಾತು ಅತ್ತಿಗೆ ಹಿಂದಿನಂತೆ ಕುಳಿತರೆ ನಿಂತರೆ ತಪ್ಪು ಹುಡುಕಿ ತನ್ನ ಮೇಲೆ ಹರಿಹಾಯುವುದನ್ನು ನಿಲ್ಲಿಸಿದ್ದುದು ಮತ್ತೊಂದು ಕಾರಣವಾಗಿತ್ತು, ಆದರೆ ಆ ಬಾಲಕಿಗೆ ದುರಂತ ಸಂಭವಿಸಿ, ಅದರಿಂದ ನನಗೆ ನೆಮ್ಮದಿ ದೊರಕಿದ್ದುದು, ರುಕ್ಕಿಣಿಗೆ ಭರಿಸಲಾಗದ ಕಸಿವಿಸಿಯಾಗಿತ್ತು...
{{gap}}ಕಾವೇರಿ ತನ್ನ ಅಗಲವಾದ ಪಾತ್ರದಲ್ಲಿ ಗಂಭೀರವಾಗಿ ನೆಮ್ಮದಿಯೆಂಬಂತೆ ಹರಿಯುವುದನ್ನೂ ಅದರ ಮೇಲೆ ದಡದಿಂದ ದಡಕ್ಕೆ ಹರಿದಾಡುವ ಹರಿಗಳನ್ನೂ ರುಕ್ಕಿಣಿ ಬಟ್ಟೆಯೊಗೆಯುತ್ತಲೇ ಗಮನಿಸುತ್ತಿದ್ದಳು. ಆಗ, ಹಿಂದೆ ಜಾನಕಿಯಂತೆ<noinclude></noinclude>
45n6m5k7x2hxpgy6p7299s9ikdgfhbu
ಪುಟ:ವೈಶಾಖ.pdf/೧೦೬
104
82035
316425
277248
2026-05-03T12:08:07Z
Shreelatha.Halemane
7642
/* Validated */
316425
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{Left|೯೦}}{{Right|ವೈಶಾಖ}}
ತಾನೂ ಕೂಡ ಹರಿಗಲಿನಲ್ಲಿ ಕುಳಿತು ಬಸವಾಪಟ್ಟಣದ ಶಾಲೆಗೆ ಹೋಗಿ ಬರುತ್ತಿದ್ದುದು ನೆನಪಾಯಿತು...
ಆಗ ತಾನಿನ್ನೂ ಚಿಕ್ಕವಳು, ಮೈನೆರೆದಿರಲಿಲ್ಲ. ಆದರೂ ಮೈ ಕೈ ತುಂಬಿ ದುಂಡುದುಂಡಾಗಿದ್ದೆ. ನೋಡಿದವರಿಗೆ ಮೈ ನೆರೆದಿರಬಹುದು ಎನ್ನುವಂತೆಯೆ ಕಾಣುತ್ತಿದ್ದೆ. ಆಗ ನಮ್ಮ ತಾಯಿ ಇನ್ನೂ ಬದುಕಿದ್ದರು!- ನನ್ನ ಆಗಿನ ಆರೋಗ್ಯ ನನ್ನ ತಾಯಿಯ ಆರೈಕೆಯ ಫಲವಿರಬೇಕು...
{{gap}}ಹೀಗಿರುವಾಗ ಒಂದು ದಿನ ಅಂಬಿಗರ ಹನುಮ, ಸಂಜೆಹೊತ್ತು ಆಚೆ ದಡದಿಂದ ನಾನೊಬ್ಬಳೆ ಹರಿಗಲ ಹತ್ತಿದ್ದು ಕಂಡು, ಒಂದು ಥರಾ ನಕ್ಕಿದ್ದ. ಆ ಮೇಲೆ ಹುಟ್ಟು ಹಾಕುವಾಗ- ಧೂ, ನೆನೆಸಿಕೊಳ್ಳೋಕು ನಾಚಿಕೆ ಆಗುತ್ತೆ- ಚಡ್ಡ ಗುಂಡಿಯನ್ನೆ ಹಾಕಿರಲಿಲ್ಲ... ಆದರೆ ಅವನು ಬೇಕೆಂದು ಹಾಗೆ ಮಾಡಿದ್ದನೊ, ಇಲ್ಲ ಅವನ ಬೇಜವಾಬುದಾರಿಯಿಂದ ಹಾಗಾಗಿತ್ತೊ, ಈಗಲೂ ನನಗೆ ಸಂದೇಹವೆ!... ಹನುಮ ಕಡ್ಡಿಯ ಹಾಗೆ ಬೆಳೆದಿದ್ದ. ಆಳು ಸೆಣಕಲ. ಅವನ್ನು ಮದುವೆಯಾಗಿದ್ದ ಎಂಕಟಿ ನಾನು ರುದ್ರಪಟ್ಟಣಕ್ಕೆ ಹೋದ ಹೊಸದರಲ್ಲಿ ಸಿಕ್ಕಿದ್ದಳು. ಯಾವುದೊ ಮಾತು ಬಂದು, “ನಿನ್ನ ಗಂಡ ಚೆನ್ನಾಗಿದ್ದಾನೇನೆ?” ಕೇಳಿದ್ದೆ. “ಯಾವ ಗಂಡನ್ನ ನೀವು ಕ್ಯಾಳಾದು?” ಅಂತ ಕೇಳಿ ನನ್ನನ್ನೆ ಬೆರಗುಗೊಳಿಸಿದ್ದಳು. ಎಂಕಟಿ ನನ್ನ ವಾರಗೆಯುವಳು. ನಮ್ಮ ತೋಟಕ್ಕೆ ಅವಳು, ಅವಳ ತಾಯಿ ಇಬ್ಬರೂ ಕೂಲಿಕಂಬಲಕ್ಕೆ ಬರುತ್ತಿದ್ದುದುಂಟು ಆಗೊಮ್ಮೆ- “ನಿನ್ನ ಮಗಳನ್ನ ಯಾರಿಗೆ ಕೊಟ್ಟು ಲಗ್ನಮಾಡ್ತೀಯೆ?” ಎಂದು ಎಂಕಟಿಯ ತಾಯಿಯನ್ನ ಅಣ್ಣ
ಕೇಳಿದ್ದ.
“ಬ್ಯಾರೆ ಯಾಕೆ ಉಡುಕ್ಕಂಡೋಗ್ಲಿ, ಅಯ್ಯಾರೆ?- ನಮ್ಮ ಅನುಮನೆ ಇಲ್ವ?... ಅವಂಗೇ ಕೊಡಾದು” ಎಂದಿದ್ದಳು. ಅದೇ ಮಾತು ನೆನಪಿನಲ್ಲಿ ಉಳಿದಿದ್ದುದರಿಂದ ಎಂಕಟಿಯನ್ನು ಕೇಳಿದ್ದೆ:
“ಹಾಗಾದ್ರೆ ಹನುಮನ್ನೆ ನೀನು ಲಗ್ನ ಆದದ್ದು ಅಲ್ಲವಾ?... ಮತ್ತೆ ಯಾವ ಗಂಡನ್ನ ನೀವು ಕೇಳೋದು ಅಂದೆಯಲ್ಲ ಯಾಕೆ?”
{{gap}}“ಚು, ಆಗಿದ್ದೆ ಕತ್ರವ್ವ, ಅವನ್ನೇ ಆಗಿದ್ದ. ಇಲ್ಲಾಂತ ಯಾವ ಬಾಯಲ್ಲಿ ಯೋಲ್ಲಿ?- ಆದ್ರೆ ಯಾವ ಸೀಮೆ ಗಮಡಸ ಅವ್ರು?... ಮಗ್ಗಲಲ್ಲಿ ಮನಗಿಸಿಕಂಡೆ, ಒಂದು ಎಲೆ ಕೂಸ ತಬ್ಬಂಡು ಮನಕ್ಕಂಡಗಾಯ್ತಿತ್ತು. ಅದರಾಗೆ ಯಾವ ಸುಕ, ತಗೀರಿ. ಬರಿ ನೀರಿಗೆ ಬೆಟ್ಟ ಅದ್ದಿ ಚೀಪಿದಂಗೆ, ಅಸ್ತೇಯ... ನಾನೂವೆ ಒಂದು ಒಂದೂವರೆ ವರ್ಸದ ತಂಕ ಎಂಗೊ ಸೈಸಿಕಂಡಿದ್ದೆ...”<noinclude></noinclude>
aegk6gl0m6b1xdzzo88azap6bppm0pa
ಪುಟ:ವೈಶಾಖ.pdf/೧೦೭
104
82036
316426
277252
2026-05-03T12:09:51Z
Shreelatha.Halemane
7642
/* Validated */
316426
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{Left|ಸಮಗ್ರ ಕಾದಂಬರಿಗಳು}}{{Right|೯೧}}
ಎಂದು ಸ್ವಲ್ಪ ತಡೆದಳು. ತರುವಾಯ, “ಅಯ್ಯೋ, ಪರ್ಪಂಚಕೇ ಗ್ವತ್ತಿರ್ವಾಗ ನಿಮ್ಮ ತಾವು ಮುಚ್ಚಕ್ಕೆ ಹ್ವಾದರೆ, ತಿಕ ಬುಟ್ಟು ಸ್ಯಾಲೆ ಸುತ್ತಿಗಂಡಂಗೆ ಆಯ್ತದೆ... ಕ್ಯಾಳಿ. ನಿಮ್ಮ ತಾವು ಯೋಳಕ್ಕೇನು- ನಂದೂ ಎಣ್ಣು ಜಲ್ಮ ತಡೀನಿಲ್ಲ. ಅವನ್ನ ಬುಟ್ಟುಬುಟ್ಟು ಬ್ಯಾರೆ ಒಬ್ಬ ಮಡೀಕಂಡಿವ್ನಿ.”- ನೀರು ಕುಡಿದಷ್ಟು ಸಲೀಸಾಗಿ ನುಡಿದಿದ್ದಳು!...
{{gap}}ಬಸವಾಪಟ್ಟಣದ ಬಳೆಗಾರ ಜಗಸೆಟ್ಟಿ ಬಳೆಮಲಾರವನ್ನು ತನ್ನ ಹೆಗಲಿನಿಂದ ಹಿಂದೆಮುಂದೆ ತೂಗಿಬಿಟ್ಟ ಬಟ್ಟೆಗಂಟಿನಲ್ಲಿ ಹೊತ್ತು ಹರಿಗಲಿನಿಂದ ಈಚೆ ದಡದಲ್ಲಿ ಇಳಿದಾಗ ಬಿಸಿಲಿನ ಪ್ರಭೆಗೆ ಫಲಫಲ ಹೊಳೆಯುವ ರಂಗುರಂಗಿನ ಬಳೆಗಳು ನನ್ನೊಳಗೆ ಬತ್ತಿಹೋಗಿದ್ದ ಬಯಕೆಯನ್ನು ಮೀಟುತ್ತಿದ್ದವು. ನನ್ನ ಸನಿಹದಲ್ಲೆ ಕುಳಿತು ಬಟ್ಟಗಳಿಗೆ ಸಾಬೂನು ಹಚ್ಚಿತ್ತಿದ್ದ ನಮ್ಮ ಮನೆಯ ಹಿಂದಿನ ಸಾಲಿನಲ್ಲಿ ವಾಸಿಸುವ ನಾಗಪ್ಪನವರ ಸೊಸೆ ಲಕ್ಷ್ಮಿದೇವಿಯ ಎರಡೂ ಮುಂಗೈಗಳ ತುಂಬ ಎರಡೆರಡು ಚಿನ್ನದ ಬಳೆಗಳ ಕಣ್ಣು ಕೋರೈಸುವ ಗಾಜಿನ ಕೆಂಪು ಹಸಿರು ಬಳೆಗಳ ಮೇಲೆ ನನ್ನ ದೃಷ್ಟಿ ಹರಿದಿತ್ತು. ನನಗರಿವಿಲ್ಲದಂತೆಯೆ ಅಸೂಯೆ ಬೆರೆತ ನಿಟ್ಟುಸಿರುಬಿಟ್ಟಿದ್ದೆ. ಲಕ್ಷ್ಮೀದೇವಿಗೂ ನನ್ನಂತೆ ಗಂಡ ಜೊತೆಗಿಲ್ಲ ವ್ಯತ್ಯಾಸ ಇಷ್ಟೆ, ನನ್ನ ಪತಿ ಸತ್ತು ಸ್ವರ್ಗ ಸೇರಿದ್ದರೆ, ಅವಳ ಗಂಡ ಅವಳನ್ನು ತೊರೆದು ಬೇರೆ ಜಾತಿಯ ಗಂಡನುಳ್ಳ ಗರತಿಯೊಡನೆ ಬೊಂಬಾಯಿಗೆ ಓಡಿಹೋಗಿದ್ದಾನೆ... ಆದರೂ ಅವಳಿಗೆ ತನ್ನ ಮುಂಗೈಗಳಿಗೆ ಬಳೆ ಹಾಕಿಕೊಳ್ಳುವ ಆದಿಕಾರವುಂಟು. ನನಗೆ ಮಾತ್ರ ಎಂದು ವಿಷಣ್ಣಳಾಗಿ, ಒಗೆ ಬಟ್ಟೆಗಳನ್ನು ನೀರಿನಲ್ಲಿ ಜಾಲಿಸುತ್ತಿರುವಾಗ, ಅವಳ ಬೆನ್ನಿನ ಹಿಂದೆಪರಿಚಿತ ದನಿಯೊಂದು “ ಅಮಾರೆಅಮ್ಮಾರೆ...” ಎಂಬ ಕೂಗು ಕಿವಿಗೆ ಬಿದ್ದು ಚಕಿತಳಾದಳು. ಕುಕ್ಕರಗಾಲಿನಲ್ಲಿ ಕುಳಿತಂತೆಯೆ ಹಿಂದಿರುಗಿ ನೋಡಿದಳು... ದರುಮನಳ್ಳಿಯ ಲಕ್ಕ!ಸಂತೋಷವಾಯಿತು. ಅವನ ಪಕ್ಕದಲ್ಲೆ ಅವನನ್ನು ಎಂದೂ ಎಡೆಬಿಡದ ಅವನ ಬಾಳ ಸಂಗಾತಿ- ನಾಲಿಗೆ ಹಿರಿದು ನಗುತ್ತ ನಿಂತ, ಬೊಡ್ಡ...
“ನೀನು ಯಾವಾಗ ಬಂದೆಯೊ, ಲಕ್ಕ?” ಕೇಳಿದೆ.
“ಇದೇ ಬಂದೆ ಕನವ”- ಅವನು ಅಂದಾಗ, ಅವನ ಮುಖ ಅಳುಅಳು ಸುರಿಯುತ್ತಿತ್ತು.
ನನಗೆ ಮತ್ತೂ ಅಚ್ಚರಿಯಾಯಿತು. ಲಕ್ಕನದು ಯಾವಾಗಲೂ ನಗು ನಗುತ್ತ ಇರುವ ಲವಲವಿಕೆಯ ಸ್ವಭಾವ. ಖುಷಿ ಹೈದ. ನಮ್ಮ ಹಳ್ಳಿಗೆ ಬರವಾಗಲೆಲ್ಲ ಮುಖದಲ್ಲಿ ಸದಾ ಸಂತೋಷವನ್ನು ತುಳುಕಿಸುತ್ತ ಬರುತ್ತಿದ್ದ. ಏನೇ ಕಷ್ಟ<noinclude></noinclude>
jru7p2fi2yv4se8tk29d1hcgt2p7i21
ಪುಟ:ವೈಶಾಖ.pdf/೧೦೮
104
82037
316427
277255
2026-05-03T12:11:12Z
Shreelatha.Halemane
7642
/* Validated */
316427
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{Left|೯೨}}{{Right|ವೈಶಾಖ}}
ಬಂದರೂ 'ಮನುಸನಿಗೆ ಬರದೆ ಮರಕ್ಕೆ ಬಂದಾತ?' ಎಂದು ತಾಳಿಕೊಳ್ಳುವ ಪ್ರವೃತ್ತಿ, ಇಂಥವನು ಯಾಕೆ ಈ ದಿನ ಅಳುಮೂಂಜಿಯಾಗಿ ಈ ರೀತಿ ಸಪ್ಪೆ ಮೋರೆ ಹಾಕಿ ನಿಂತಿದ್ದಾನೆ?- ಏನಾಗಿರಬಹುದು?...
- “ಲಕ್ಕ. ನಿನೊಬ್ಬನೆ ಬಂದೆಯೇನು?” ಅಂದುದಕ್ಕೆ, ಸುಮ್ಮನೆ ಹೌದು ಎನ್ನುವಂತೆ ತಲೆ ಕುಣಿಸಿದ್ದ.
- “ನಡೆದೇ ಬಂದಿಯೇನು?” ಅಂತ ಕೇಳಿದಾಗ, “ಗಾಡೀಲಿ ಬಂದೆ” ಎಂದಷ್ಟೇ ಹೇಳಿ ನಿಲ್ಲಿಸಿದ್ದ. ನನಗೆ ಸೋಜಿಗವೆನಿಸಿ, “ಗಾಡಿ ಯಾಕೆ?” ಎಂದೇ.
“ನಿಮ್ಮ ಊರಿಗೆ ಕರಂಡೋಗ” ಅಂದಾಗ- ಸ್ನಾನಘಟ್ಟದಲ್ಲಿ ಬಟ್ಟೆ ಒಗೆಯುತ್ತಿದ್ದ, ಪಾತ್ರೆಗಳನ್ನು ಬೆಳಗಿ ಹಿತ್ತಾಲೆ ಮತ್ತು ತಾಮ್ರದ ಬಿಂದಿಗೆಗಳಲ್ಲಿ ನೀರು ತುಂಬುತ್ತಿದ್ದ ಮಹಿಳಾವೃಂದದ ಕಿವಿಗಳು ನೆಟ್ಟಗಾದವು.
“ಈಗ- ಅದೇನು ಉರಿಗೆ?”- ಆಶ್ಚರ್ಯಪಡುತ್ತಲೆ ಕೇಳಿದ್ದಕ್ಕೆ. “ಅಟ್ಟಿ ತಾವಿಕೆ ಬನ್ನಿ, ಯೋನಿ” ಅಂದ.
ಲಕ್ಕೆ ಪರವಾಗಿಲ್ಲ; ಈಚೀಚೆಗೆ ಪ್ರಾವಿಚಕ್ಷಣೆ ಬಂದಿದೆ ಎಂದುಕೊಳ್ಳತ್ತ ಬಟ್ಟೆಗಳನ್ನು ಹಿಂಡಿ, ಕುಕ್ಕೆಗೆ ತುಂಬಿ, ಅದನ್ನು ಹೊತ್ತು, ಎದ್ದಳು.
ಮನೆ ತಲುಪಿದ ತರುವಾಯವೆ ಲಕ್ಕ ಬಾಯಿ ಬಿಚ್ಚಿದ್ದು:
{{gap}}ನಮ್ಮ ಸುಶೀಲತ್ತೆ ದರುಮನಹಳ್ಳಿಯ ನಮ್ಮ ತೋಟದ ಕೊಳದ ಹಾಸುಗಲ್ಲಿನ ಮೇಲೆ ನೆನ್ನೆ ಬಟ್ಟೆ ಒಗೆಯುತ್ತಿದ್ದರಂತೆ. ಆಗ ಏನೊ ಅವರ ಕಾಲು ಕಡಿದ ಹಾಗೆ ಆಯ್ತಂತೆ. ಯಾವುದೊ ಹುಳು ಇರಬೇಕು ಅನ್ನಿಸಿ, ಆತ್ತ ಗಮನ ಕೊಡದೆ, ಸರಸಿಯ ಲಂಗಕ್ಕೆ ಸಾಬೂನು ಹಚ್ಚುವುದರಲ್ಲಿ ನಿರತರಾಗಿದ್ದರಂತೆ. ಅಲ್ಲಿ ಸಮೀಪದಲ್ಲೆ ತನ್ನ ಪಾಡಿಗೆ ತಾನು ಆಡುತ್ತಿದ್ದ ಸರಸಿ ಚಿಟ್ಟನೆ ಚೀರಿ, 'ಹಾವುಹಾವು' ಎನ್ನುತ್ತ ತನ್ನ ತಾಯಿಯ ಬಳಿಗೆ ಓಡಬಂದಳಂತೆ... “ಎಲ್ಲೆ ಹಾವು?” ಎಂದು ಸುಶೀಲಕ್ಕೆ ತಿರುಗಿ ನೋಡಿದರಂತೆ ದೂರದಲ್ಲಿ ಬಿಸಿಲಿನ ಝಳಕ್ಕೆ ಮಿರಿಮಿರಿ ಮಿಂಚುವ ಭಾರಿ ಗೋಧಿನಾಗರ ಹಾವು ಹರಿದುಹೋಗುತ್ತಿತ್ತಂತೆ. ತನ್ನ ಕಾಲನ್ನು ನೋಡಿಕೊಂಡಳಂತೆ. ಬಲಗಾಲನಿನ ಕಿರುಬೆರಳಿನಲ್ಲಿ ಗಾಯವಾಗಿ ರಕ್ತ ಸೋರುತ್ತಿತ್ತಂತೆ! ಮನಃ ಕಣ್ಣೆತ್ತಿ ಸರಸರನೆ ನುಲಿನುಲಿದು ಸಾಗುವ ಘಟಸರ್ಪವನ್ನು ಇನ್ನೊಮ್ಮೆ ನೋಡಿದರಂತೆ. ಮತ್ತೆ ಅದರಿಂದ ಕಣ್ಣು ಕಿತ್ತು ರಕ್ತ ಬಸಿಯುತ್ತಿರುವ ಬೆರಳಿನ ಗಾಯದತ್ತ ದೃಷ್ಟಿ ನೆಟ್ಟರಂತೆ. ಆ ಗಳಿಗೆಯಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತಂತೆ!... ಸಮೀಪದ ಅಡಿಕೆಮರಕ್ಕೆ ಒರಗಿಸಿದ್ದ ಬಿದಿರೇಣಿಯಿಮದ ಇಳಿಯುತ್ತಿದ್ದ ಮಾವನವರು, ಸರಸಿ ಕಿರಚಿದಾಗ ಮಾತ್ರ ಆ<noinclude></noinclude>
amyi1rgir0kn8jzpk3iuclbybgrd9yy
ಪುಟ:ವೈಶಾಖ.pdf/೧೦೯
104
82038
316428
277257
2026-05-03T12:12:05Z
Shreelatha.Halemane
7642
/* Validated */
316428
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{Left|ಸಮಗ್ರ ಕಾದಂಬರಿಗಳು}}{{Right|೯೩}}
ಕಡೆ ಗಮನ ಹರಿಸಿದ್ದುದಂತೆ. ಅವರು ಕೆಳಗಿಳಿದು ಧಾವಿಸಿ ಬರುವುದರಲ್ಲಿ ಅವರ ತಂಗಿ ಕುಳಿತು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದರಂತೆ!...
ಕೇಳಿ ನನಗೆ ಹೌಹಾರಿದಂತಾಯಿತು. ಸುಳೀಲತ್ತೆ ಎಂಥ ಧೈರ್ಯಗಾತಿ! ಹಾವು-ಎಲ್ಲಿ ಸಿಕ್ಕಲಿ ಅಲ್ಲಿ ಸದೆಬಡಿಯುತ್ತಿದ್ದವಳು!... ಅವಳಿಗೆ ಇಂಥ ಗತಿಯೆ? ಎಂದು ನಾನು ವಿವಶಳಾದೆ... ತಟ್ಟನೆ ಹಿಂದೆ ಸುಶೀಲತೆ ಹಾವನ್ನು ಎದುರಿಸಿದ ಪ್ರಸಂಗವೊಂದು ನೆನಪಾಗಿ ರುಕ್ಕಿಣಿಯ ಮೈ ಜುಮ್ಮೆಂದಿತು:
{{gap}}ಒಂದು ರಾತ್ರಿ ದರುಮನಳ್ಳಿಯ ನಮ್ಮ ಮನೆಯಲ್ಲಿ ಎಲ್ಲರಿಗೂ ಊಟ ಮುಗಿದಿತ್ತು. ಸರಸಿಯೊಡನೆ ಮಲಗುವ ಕೋಣೆಗೆ ಕಾಲಿಟ್ಟೆ, ಒಳಗೆ ಸರಸರ, ಭುಸ್ಭುಸ್ ಸದ್ದಾಯಿತು. ದಿಗ್ಟಾಂತಳಾದೆ. ಸರಸಿಯಂತೂ ಕಿಟಾರನೆ ಕಿರಚಿ, ನನ್ನನ್ನು ಬಲವಾಗಿ ತಬ್ಬಿದಳು. ಇಬ್ಬರೂ ಹೊರಕ್ಕೆ ಓಡಿಬಂದು 'ಹಾವು-ಹಾವು!? ಎಂದು ಕೂಗಿದೆವು. ಮಾವಯ್ಯ ಓಡಿ ಬಂದಿದ್ದರು. ಸುಶೀಲತೆ ಲಾಟೀನು ತಂದಿದ್ದರು. ಆ ಬೆಳಕಿನಲ್ಲಿ ಸರ್ಪ ಸ್ಪಷ್ಟವಾಗಿ ಗೋಚರಿಸಿತು. ಎಂದು ಬಾರದ ಸರ್ಪ ಎಷ್ಟು ಒಳಭಾಗದಲ್ಲಿ ಇರುವ ಕೋಣೆಯೊಳಗೆ ಹೇಗೆ ಬಂದಿತು?ಎಂದು ಎಲ್ಲರಿಗೂ ವಿಸ್ತಯ-ಲಾಟೀನಿನ ಬೆಳಕು ಕೋಣೆಯಲ್ಲಿ ಬಿದ್ದಾಗ ಸರ್ಪ ಬಾಗಿಲಿಗೆ ಎದಿರಾಗಿ ಹೆಡೆಯೆತ್ತಿ ಬುಸುಗುಡುತ್ತಿತ್ತು. ಸರ್ಪವನ್ನು ಹೊಡೆಯಬಾರದು ಎಂದು ಮಾವಯ್ಯ. ನಾವು ಸ್ವಲ್ಪ ದೂರ ನಿಂತು ಅವಖಾಸ ಮಾಡಿಕೊಟ್ಟರೆ ಸಾಕು, ಅದು ಹೊರಟುಹೋಗುತ್ತೆ, ಬೇಕಾದರೆ ಕೋಲಿನಿಂದ ತಾನು ಅದನ್ನು ಹೆದರಿಸುತ್ತ, ಬೀದಿಬಾಗಿಲಿನಿಂದ ಅದು ಹೊರಗೆ ಹೋಗುವಂತೆ ಮಾಡೇನೆಎಂಬುದು ಮಾವಯ್ಯನ ವಾದ. ಸುಶೀಲತೆಗೆ ಆ ವಾದ ಹಿಡಿಸಲಿಲ್ಲ.
{{gap}}“ಹೋಗಣ್ಣ, ನೀನೂ ಸರಿ. ಮಂತ್ರಿಸಿದರೆ ಮಾವಿನಕಾಯಿ ಉದುರುತ್ತೆ? ನೀನು ಅದನ್ನ ಓಡಿಸ್ತೀನಿ ಎಂದು ಹೋಗಿ, ಅದು ಉಗ್ರವಾಗಿ ನಿನ್ನ ಮೇಲೇ ತಿರುಗಿಬಿದ್ದು ನಿನ್ನನ್ನೆ ಕಚ್ಚಿಬಿಟ್ಟರೆ?- ಆಗೇನು ಮಾಡೋದು?... ಅದೆಲ್ಲ ಆಗಲ್ಲ. ಆ ಕೋಲು ತಾ ಇಲ್ಲಿ!” ಎಂದು ಸುಶೀಲತೆ ಅಣ್ಣನಿಂದ ಕೋಲು ಪಡೆದು, ತನ್ನ ಕೈಲಿದ್ದ ಲಾಟೀನನ್ನು ಮಾವಯ್ಯನ ಕೈಗಿತ್ತು, “ಲ್ಯಾಟೀನಿನ ಬೆಳಕನ್ನು ಇನ್ನೂ ದೊಡ್ಡದು ಮಾಡಣ್ಣ” ಎಂದು ಸೂಚಿಸಿದಳು...
- ಸರಸಿ, ನಾನು ಇಬ್ಬರೂ ಹೆದರಿ ಹಜಾರದ ಒಂದು ಮೂಲೆಗೆ ಹೋಗಿ ನಿಂತೆವು..ಕೈಯಲ್ಲಿ ಕೋಲು ಹಿಡಿದು ಸುಶೀಲತೆ, ಸರ್ಪ ಕೋಣೆಯ ಹೊರಗೆ ಬರುವುದನ್ನೇ ಕಾಯುತ್ತ ನಿಂತಿದ್ದಳು. ಲಾಟೀನಿನ ಬೆಳಕನ್ನು ದೊಡ್ಡದು ಮಾಡಿ, ಕೋಣೆಯೊಳಗೆ ಪ್ರಕಾಶ ಬೀಳುವಂತೆ ಮಾಡುವ ನಿರ್ವಾಹವಿಲ್ಲದ ಕೆಲಸ<noinclude></noinclude>
252veyfeqq85eermluxbjy4gk0f509i
ಪುಟ:ವೈಶಾಖ.pdf/೧೧೦
104
82039
316429
277273
2026-05-03T12:12:50Z
Shreelatha.Halemane
7642
/* Validated */
316429
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{Left|೯೪}}{{Right|ವೈಶಾಖ}}
ಮಾವನ ಪಾಲಿಗೆ ಬಂದಿತು. ಸರ್ಪ ಬಹಳ ಸಮಯ ಕೋಣೆಯೊಳಗೆ ಬುಸುಗುಡುತ್ತ, ಆಗಾಗ ಹೆಡೆಯತ್ತಿ ನಿಲ್ಲುತ್ತ, ಅಲ್ಲಲ್ಲಿ ಸುತ್ತುತ್ತಿತ್ತೇ ಹೊರತು, ಹೊರಗೆ ಮಾತ್ರ ಅದು ಬರಲೇ ಇಲ್ಲ. ಅತ್ತೆಗೂ ರೋಸಿತು. “ಎಲ್ಲಿ, ಬೆಳಕನ್ನು ಇನ್ನೂ ಕೊಂಚ ಹತ್ತಿರ ತಾ” ಎಂದು ಅಣ್ಣನಿಗೆ ಹೇಳಿದಳು. ಮಾವಯ್ಯ ನಾಲ್ಕು ಹೆಜ್ಜೆ ಮುಂದೆ ಹೋಗಿ ಲಾಟೀನನ್ನು ಎತ್ತಿ ಹಿಡಿದರು. ಲಾಟೀನಿನ ಪ್ರಕಾಶ, ತನ್ನೆದುರು ನಿಂತು ತನ್ನ ಚಲನೆಗೆ ಅಡ್ಡಿ ಮಾಡುತ್ತಿರುವ ಜನ, ಇವೆಲ್ಲದರಿಂದಲೂ ಕುಪಿತಗೊಂಡ ಸರ್ಪ ಭಯಂಕರವಾಗಿ ಮೊರೆಯುತ್ತ, ತನ್ನ ಹೆಡೆಯನ್ನು ಅತ್ತಿಂದಿತ್ತ ಭೀಕರವಾಗಿ ಆಡಿಸುತ್ತ, ಇನ್ನೂ ಹತ್ತಿರ ಬಂದರೆ ಮೇಲೆಬೀಳಲು ಸಿದ್ಧತೆ ನಡೆಸಿದಂತಿತ್ತು. ಆದರೆ ಸುಶೀಲತೆ ಮಹಾ ಎದೆಗಾತಿ, ಕೋಲನ್ನು ಮೇಲೆತ್ತಿ ಧೈರ್ಯವಾಗಿ ಕೋಣೆಯೊಳಗೆ ನುಗ್ಗಿ, ಒಕ್ಕಣೆಯಲ್ಲಿ ರೈತರು ಕೋಲಿನಿಂದ ತೆನೆಗಳನ್ನು ಬಡಿಯುವಂತೆ ಆ ಸರ್ಪವನ್ನು ಸದೆಬಡಿಸಿದ್ದಳು!...
ಅಂಥವಳಿಗೆ ಕೇವಲ ಹಾವು ಕಚ್ಚಿತು ಎಂಬ ಅರಿವು ಮೂಡಿದೊಡನೆಯೆ ಪ್ರಾಣ ಹೋಗಬೇಕೆ?... ಎಂಥ ವಿಚಿತ್ರ-ಹಾವಿನ ಬಗ್ಗೆ ಅಷ್ಟು ನಿರ್ಲಕ್ಷ್ಯದಿಂದಿದ್ದವಳು, ಅದು ಕಚ್ಚಿತೆಂದು ತಿಳಿದ ಮರುಕ್ಷಣದಲ್ಲೇ ಭೀತಿಯಿಂದ ಕಣ್ಮುಚ್ಚಿದಳಲ್ಲ....
ಅಂದಿನಿಂದ ಆ ಕೋಣೆಯಲ್ಲಿ ಮಲಗುವುದೆಂದರೆ ಸರಸಿಗೂ ನನಗೂ ಎಲ್ಲಿಲ್ಲದ ಭಯ, ಆದರೆ ಸುಶೀಲ ಬಿಡಬೇಕಲ್ಲ:
“ಯಾಕೆ ರುಕ್ಕು, ಇಷ್ಟು ಭಯ ಬೀಳೀಯ?- ನಿನ್ನನ್ನು ನೋಡಿ, ನಮ್ಮ ಸರಸಿಗೂ ಪುಕ್ಕಲು ಬಂದುಬಿಟ್ಟಿದೆ. ಈ ಪುಕ್ಕಲು ಬಿಡಬೇಕು. ಕಚ್ಚಿಸಿಕೊಂಡು ಸಾಯಬೇಕೂಂತ ನಮ್ಮ ಹಣೇಲಿ ಬರೆದಿದ್ದರೆ, ಅದನ್ನ ನಾವು ತಪ್ಪಿಸಿಕೊಳ್ಳಲಿಕ್ಕೆ ಆಗುತ್ಯೆ?- ಹುಚ್ಚಿ, ಆ ಮಗೂಗು ಧೈರ್ಯ ಹೇಳಿ, ಸುಮ್ಮನೆ ಹೋಗಿ ಮಲಕ್ಕೊ” ಎಂದು ಒತ್ತಾಯಿಸಿದ್ದಳು
ಅತ್ತೆಯ ಬಲವಂತಕ್ಕೆ ಆ ಕೋಣೆಗೆ ಹೋಗಿ ಮಲಗಿದ್ದಾಯಿತು. ಆದರೆ ಮಾವಯ್ಯ ಆ ಕೋಣೆ ಮೂಲೆಯಲ್ಲಿ ದೀಪಾಲೆ ಕಂಬ ಇಡಿಸಿ, ಅದರ ಮೇಲೆ ಹಣತೆ ತಂದಿರಿಸಿ, ಉಪಕಾರ ಮಾಡಿದ್ದರು. ಆ ದೀಪ ಬಂದ ಬಳಿಕವೆ ಸ್ವಲ್ಪ ಧೈರ್ಯದಿಂದ ನಾವಿಬ್ಬರೂ ನಿದ್ರೆ ಮಾಡುವುದು ಸಾಧ್ಯವಾಗಿತ್ತು. ಆದರೂ ಒಂದೊಂದು ಸಲ ನಡುರಾತ್ರಿಯ ವೇಳೆ ಎಚ್ಚರವಾದಾಗ, ಯಾವುದಾದರೂ ಹಾವು ಬಂದು ಪಕ್ಕದಲ್ಲಿ ಮಲಗಿದೆಯೋ ಹೇಗೆ, ಎಂದು ತಡಕಾಡಿ ನಡುಗಿದ್ದೂ ಉಂಟು!...
ಇಷ್ಟಾದರೂ ಲಕ್ಕ ಹೇಳಿದ ಸುದ್ದಿಯನ್ನು ಇನ್ನೂ ತಾನು ನಂಬುವುದೇ<noinclude></noinclude>
easrpzaxiovdo5z916k4sfqpvat95az
ಪುಟ:ವೈಶಾಖ.pdf/೧೧೧
104
82040
316430
277279
2026-05-03T12:13:26Z
Shreelatha.Halemane
7642
/* Validated */
316430
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|left=ಸಮಗ್ರ ಕಾದಂಬರಿಗಳು|center=|right=೯೫}}
ಕಠಿಣವಾಗಿತ್ತು.... 'ದಾವಾಯ್ತದೆ, ವಸಿ ಮಜ್ಜಿಗೆ ಕ್ವಡಿ” ಎಂದು ಕೇಳಿ ಲಕ್ಕ ಮಾತು ನಿಲ್ಲಿಸಿದ. ಮಜ್ಜಿಗೆ ತರಲು ರುಕ್ಕಿಣಿಯೆ ಎದ್ದು ಹೋಗಿದ್ದಳು. “ಗಟ್ಟಿ ಮಜ್ಜಿಗೆ ಬ್ಯಾಡಿ. ಈರುಳ್ಳಿ ಕತ್ತಿರಿಸಾಕಿ, ವಸಿ ಉಪ್ಯೂವೆ ಕದ್ರಿ, ಕಣ್ಣೀರಂಗೆ ಮಜ್ಜಿಗೆ ಮಾಡಿಕಂಬನ್ನಿ, ಫಕತ್ತಾಗಿ ಒಂದು ಚೊಂಬು ಮಜ್ಜಿಗೆ ತರಬೇಕು” ಎಂದಿದ್ದ. ರುಕ್ಕಿಣಿ ಅವನು ಬಯಸಿದಂತೆಯೇ ನೀರು ಮಜ್ಜಿಗೆ ತಯಾರಿಸಿ, ಅದಕ್ಕೆ ಅವನು ಹೇಳದಿದ್ದ ಕರಿಬೇವಿನ ಸೊಪ್ಪು ಹಸಿಶುಂಠಿಗಳನ್ನು ಸೇರಿಸಿದ್ದಳು.
“ಮಜ್ಜಿಗೆ ವೈನಾಗದೆ, ಅಮ್ಮಾರೆ”- ಕೃತಜ್ಞತೆ ಸೂಚಿಸುತ್ತ, ಸಂತೋಷದಿಂದ ಕುಡಿಯುತ್ತಿದ್ದ ಲಕ್ಕ, ರುಕ್ಕಿನಿಯೂ ಬೇಸರಪಡದೆ, ದೊನ್ನೆಗೆ ತಾನು ಸುರಿದ ಮಜ್ಜಿಗೆಯನ್ನು ಅವನು ಖಾಲಿ ಮಾಡಿದಂತೆ ಪುನಃ ಸುರಿತು ಭರ್ತಿ ಮಾಡುತ್ತಿದ್ದಳು. ಹೀಗೆ ಸಂತೋಷವಾಗಿ ಊಟ ಮಾಡುವವರಿಗೆ ಉಣಬಡಿಸುವುದೆಂದರೆ ರುಕ್ಕಿಣಿಗೆ ಬಲು ಪ್ರೀತಿ, ತನ್ನ ಗಂಡನೂ ಲಕ್ಕನಂತೆ ಊಟದಲ್ಲಿ ಅಚ್ಚುಕಟ್ಟು, ಊಟ ಮಾಡುವಾಗ, ಅದು ಚೆನ್ನಿಲ್ಲ, ಇದು ಚೆನ್ನಿಲ್ಲ' ಎಂದು ಕೆಲವರು ಮಾಡಿದ ಅಡಿಗೆಯನ್ನು ಹೀಗಳೆಯುವಂತೆ, ಅವರು ಎಂದೂ ಹೀಗಳೆದವರಲ್ಲ, ತೃಪ್ತಿಯಿಂದ, ಪ್ರೀತಿಯಿಂದ ಎಲೆಯ ಮೇಲೆ ಬಡಿಸಿದುದನ್ನು ದೇವರ ಪ್ರಸಾದವೆನ್ನುವಂತೆ ಸ್ವೀಕರಿಸುತ್ತಿದ್ದರು...
ಲಕ್ಕ ತನ್ನ ಹೇಳಿಕೆಯಂತೆ ಒಂದು ಚೆಂಬು ಮಜ್ಜಿಗೆಯನ್ನೆ ಕುಡಿದಿದ್ದ. ಮಜ್ಜಿಗೆ ಕುಡಿದು ದಾಹ ಪರಿಹಾರವಾದ ಬಳಿಕ, ತನ್ನ ನಿರೂಪಣೆಯನ್ನು ಮುಂದುವರಿಸಿದ್ದ: ಸುಶೀಲತೆ ದೈವಾಧೀನಳಾದ ಸಂಜೆಯೇ ಕ್ರಿಯಾದಿಗಳಿಗೆ ನೆಂಟರಿಷ್ಟರನ್ನು ಕರೆಸಬೇಕೆಂದು ಮಾವನವರ ಇರಾದೆಯಂತೆ. ಆದರೆ ಗತಿಸಿದ ಗಂಡ ಮನೆವರಿಗೂ ಸುಶೀಲತೆಗೂ ಬಾಂಧವ್ಯ ಕಡಿದು ಹೋಗಿ ಬಹುದಿನಗಳಾದ ಕಾರಣ, ಅವಳ ಗಂಡನ ಮನೆಯವರು ಯಾರೂ ಕರೆದೂರು ಬರುವಂತಿರಲಿಲ್ಲ. ನಾವು ಇರುವುದಂತೂ ಬಹಳ ದೂರದ ಊರಾದ ರುದ್ರಪಟ್ಟಣದಲ್ಲಿ. ನಮಗೋಸ್ಕರ ಶವವನ್ನು ಎರಡು ದಿನಗಳಾದರೂ ದಹನ ಮಾಡದೆ ಹಾಗೆಯೇ ಇಡಬೇಕಾಗುತ್ತಿತ್ತು. ಆದರೆ ಈ ರೀತಿ ವರ್ತಿಸಿದರೆ ಶಾಸ್ತ್ರಕ್ಕೆ ವಿರೋಧ, ತಂಗಳು ಹೆಣ ಆಗುತ್ತದೆ, ಎಂದು ಕೇರಿಯ ಬ್ರಾಹ್ಮಣರು ಮಾವನವರ ಮೇಲೆ ಒತ್ತಾಯ ಹೇರಲಾರಂಭಿಸಿದರಂತೆ. ಆದರೆ ಬ್ರಾಹ್ಮಣ ಗುಂಪಿನ ಈ ಒತ್ತಾಯದ ಹಿಂದಿದ್ದ ಪ್ರಬಲವಾದ ಕಾರಣವೇ ಬೇರೆ. ಹೆಣವನ್ನು ಸುಟ್ಟು ಗತಿ ಕಾಣಿಸುವವರೆಗೆ ಅವರಲ್ಲಿ ಅನೇಕರು ನೀರನ್ನು ಸಹ ಬಾಯಿಗೆ ಸೋಕಿಸುವಂತಿರಲಿಲ್ಲ....
ರುಕ್ಕಿಣಿ ಮನಸ್ಸಿನಲ್ಲೇ ನಕ್ಕಳು. ತನ್ನ ಗಂಡ ಸತ್ತಾಗ, ತನ್ನ ತಲೆ ಬೋಳಿಸದೆ,<noinclude></noinclude>
5039i59ekszv2a9w8x6hm8epk68v0ya
ಪುಟ:ವೈಶಾಖ.pdf/೧೧೨
104
82041
316431
277288
2026-05-03T12:14:13Z
Shreelatha.Halemane
7642
/* Validated */
316431
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|left=೯೬|center=|right=ವೈಶಾಖ}}
ಸಕೇಶಿಯನ್ನಾಗಿ ಮಾವ ತನ್ನನ್ನುಳಿಸಿದಾಗ, ಅದೇ ಬ್ರಾಹ್ಮಣಸಮಾಜ ಹಾರಾಡಿದ್ದೆಷ್ಟು! ಬಹಿಷ್ಕಾರ ಹಾಕಿದ್ದೆಷ್ಟು!... ಕಾಲ ಎಲ್ಲವನ್ನೂ ಮರೆಸುತ್ತದೆ. ಅಲ್ಲದೆ, ಸಾವಿನ ಮುಂದೆ ಎಂಥ ಚಿಲ್ಲರೆ ಮನಸ್ತಾಪಗಳೂ ಕರಗಲೇಬೇಕಲ್ಲ!...
- ಅಂತೂ ಕಡೆಗೆ ಸಮೀಪದ ಹಳ್ಳಿಗಳಲ್ಲಿ ವಾಸಿಸುವ ನೆಂಟರಿಷ್ಟರನ್ನು ಕರೆಸಲು ಮಾತ್ರ ಸಾಧ್ಯವಾಗಿತ್ತಂತೆ ಮಾವನವರಿಗೂ ಆ ಬ್ರಾಹ್ಮಣರ ವಾದ ಸೂಕ್ತವಾಗಿ ಕಂಡಿದ್ದರಿಂದಲೊ, ಸತ್ತ ಹೆಣದ ಮುಂದೆ ಈ ಜನರ ಕೂಡೆ ವೃಥಾ ಯಾಕೆ ವಾಗ್ವಾದ ಎನ್ನಿಸಿದ್ದರಿಂದಲೋ, “ನಿಮಿಷ ಪ್ರಕಾರವೆ ಕಾರ್ಯ ನಡೆಸಿ” ಎಂದು ಒಪ್ಪಿದ್ದರಂತೆ. ಗಂಡನ ಮನೆಯವರು ಬಾರದೆ ಹೋದುದರಿಂದ ಮಾವಯ್ಯನೆ ಕರ್ತೃವಾಗಿ ನಿಲ್ಲಬೇಕಾಯಿತಂತೆ! ಇಷ್ಟು ತಿಳಿಸಿ,
“ತಾಯಿ ಕಳಕಂಡ ಆ ನಿಮ್ಮ ಸರಸಮ್ಮ ಗೋಳಂತೂ ಯೋಳೋ ಅಂಗೇ ಇಲ್ಲ. ಕಣ್ಣ ಗುಡ್ಡೆ ಕಳಚಿ ಬಿದ್ದೋಗೊ ಮಟ್ಟಿಗೆ ಆ ಪಾಯಿ ಸೋಕಮಾಡ್ತಿತ್ತು. ನನ್ನ ವಂದ್ದೇ ಬತ್ತೀನಿ ಅಂತಾವ ನ್ಯಾತು ಆಕಂಡಿತ್ತು. ಆಗ ನಿಮ್ಮ ಕರಕಂಬರಕ್ಕೆ ವೊಂಟಿ, ಅಂಗೆ ಇಂಗೇಂತ ಆ ಮೊಗಾವ ಸಂಜಾಯಿ ಮಾಡಿ ಅಲ್ಲೆ ಉಳುಸಿಕಳಾಕೆ ಅಯ್ಯಾರ ಪಟ್ಟ ಪಾಡು ಬ್ಯಾಡಿ, ಬ್ಯಾಡಿ- ಎಕ್ಕಾಸಿ ಆಗೋಯ್ತು ... ಆ ಎಂಕಣ್ಣ ದೋಯಿ ಎಣ್ಣುಗೋಳು ಸಾಸಮಾಡಿ ಎಂಗೊ ತಮ್ಮಟ್ಟಿಗೆ ಕರಕಂಡೋಗಿ ಕೂಡಕಂಡೊ... ರುಕ್ಕಿಣಿಯ ಸಂಗಡಲೆ ಕುಳಿತು ಲಕ್ಕನ ಮಾತನ್ನು ಸವಿಸ್ತಾರವಾಗಿ ಆಲಿಸಿದ ಅಣ್ಣನೂ ಅತ್ತಿಗೆಯೂ,
“ಈಗ ನಮ್ಮ ಮನೆಯಲ್ಲಿ ಅಸಂದರ್ಭ. ನಮ್ಮ ಜಾನಕಿಯ ಮೈಯಲ್ಲಿ ಅಷ್ಟು ಹರ್ಷ ಇಲ್ಲ. ಈಗ ನೀನು ನಿಮ್ಮ ರುಕ್ಕಿಣಮ್ಮನವರನ್ನು ಕರೆದುಕೊಂಡು ಹೋಗಿ ಬಿಡು. ಅಷ್ಟರಲ್ಲಿ ನಮ್ಮ ಜಾನಕಿ ಚೇತರಿಸಿದರೆ, ನಾವಿಬ್ಬರೂ ವೈಕುಂಠದ ಸಮಯಕ್ಕೆ ಬತ್ತಾರೆ ಎಂದು ಕೃಷ್ಣಶಾಸ್ತ್ರಿಗಳಿಗೆ ತಿಳಿಸಪ್ಪ” ಎಂದು ಹೇಳಿದರು. ಲಕ್ಕೆ ಒಪ್ಪಲಿಲ್ಲ.
{{gap}}“ಈಟೊತ್ನಲ್ಲಿ ಒಂಟಿಗಾಡಿ ವೊಂಟರೆ ಅಪಾಯ ಕಾದಿಟ್ಟದ್ದೇಯ. ನಮ್ಮ ಸುತ್ತಿನಂಗಲ್ಲ. ನಮ್ಮ ಕಡೆ ಒಬ್ಬರಿಬ್ಬರು ಎಂಗಸರೆ ಕಾಡಲ್ಲಿ ಓಡಾಡಿದ್ರೂವೆ ಅವ್ರ ಮಂಡೆ ಕೂಯ್ದು ಚುಳ್ ಅನ್ನಕ್ಕಿಲ್ಲ... ಅದರಾಗೂ ನಾವು ವೋಗಬೇಕಾಗಿರೊ ಹಾದೀಲಿ ಕಾಟಗರ ಕಾಟ ಇಪರೀತ. ನಾನೂವೆ ನಮ್ಮೂರಿಂದ ಸಂದೆ ದನಿಗೆ ಗಾಡಿ ಕಟ್ಟೋನು, ಬ್ಯಾಲಾಳಲ್ಲಿ ರಾತ್ರಿ ತಂಗಿದ್ದು, ಅಲ್ಲಿಂದ ಕೋಳಿ ಕೂಗಕ್ಕೂ ಮುಂಬೈ ಇದ್ದು ಇಲ್ಲಿ ಬರಕ್ಕೆ ಮದ್ದಿನವೊ ಆಯ್ತು. ಇನ್ನು ಒಂಟಿಗಾಡಿ ಅಟ್ಠಂಡು, ರುಕ್ಕಿಣದ್ವಾರ ವಬ್ಬರೆ ಗಾಡ್ಯಾಗೆ ಕುಂದರಿಗಂಡು, ನಾನಂತೂ ವೋಗಕ್ಕೆ ತಯ್ಯಾರಿಲ್ಲ.<noinclude></noinclude>
mi8xg7e9bj7a0jf73wqopk2y7ydtoix
316432
316431
2026-05-03T12:14:47Z
Shreelatha.Halemane
7642
316432
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|left=೯೬|center=|right=ವೈಶಾಖ}}
ಸಕೇಶಿಯನ್ನಾಗಿ ಮಾವ ತನ್ನನ್ನುಳಿಸಿದಾಗ, ಅದೇ ಬ್ರಾಹ್ಮಣಸಮಾಜ ಹಾರಾಡಿದ್ದೆಷ್ಟು! ಬಹಿಷ್ಕಾರ ಹಾಕಿದ್ದೆಷ್ಟು!... ಕಾಲ ಎಲ್ಲವನ್ನೂ ಮರೆಸುತ್ತದೆ. ಅಲ್ಲದೆ, ಸಾವಿನ ಮುಂದೆ ಎಂಥ ಚಿಲ್ಲರೆ ಮನಸ್ತಾಪಗಳೂ ಕರಗಲೇಬೇಕಲ್ಲ!...
{{gap}}ಅಂತೂ ಕಡೆಗೆ ಸಮೀಪದ ಹಳ್ಳಿಗಳಲ್ಲಿ ವಾಸಿಸುವ ನೆಂಟರಿಷ್ಟರನ್ನು ಕರೆಸಲು ಮಾತ್ರ ಸಾಧ್ಯವಾಗಿತ್ತಂತೆ ಮಾವನವರಿಗೂ ಆ ಬ್ರಾಹ್ಮಣರ ವಾದ ಸೂಕ್ತವಾಗಿ ಕಂಡಿದ್ದರಿಂದಲೊ, ಸತ್ತ ಹೆಣದ ಮುಂದೆ ಈ ಜನರ ಕೂಡೆ ವೃಥಾ ಯಾಕೆ ವಾಗ್ವಾದ ಎನ್ನಿಸಿದ್ದರಿಂದಲೋ, “ನಿಮಿಷ ಪ್ರಕಾರವೆ ಕಾರ್ಯ ನಡೆಸಿ” ಎಂದು ಒಪ್ಪಿದ್ದರಂತೆ. ಗಂಡನ ಮನೆಯವರು ಬಾರದೆ ಹೋದುದರಿಂದ ಮಾವಯ್ಯನೆ ಕರ್ತೃವಾಗಿ ನಿಲ್ಲಬೇಕಾಯಿತಂತೆ! ಇಷ್ಟು ತಿಳಿಸಿ,
{{gap}}“ತಾಯಿ ಕಳಕಂಡ ಆ ನಿಮ್ಮ ಸರಸಮ್ಮ ಗೋಳಂತೂ ಯೋಳೋ ಅಂಗೇ ಇಲ್ಲ. ಕಣ್ಣ ಗುಡ್ಡೆ ಕಳಚಿ ಬಿದ್ದೋಗೊ ಮಟ್ಟಿಗೆ ಆ ಪಾಯಿ ಸೋಕಮಾಡ್ತಿತ್ತು. ನನ್ನ ವಂದ್ದೇ ಬತ್ತೀನಿ ಅಂತಾವ ನ್ಯಾತು ಆಕಂಡಿತ್ತು. ಆಗ ನಿಮ್ಮ ಕರಕಂಬರಕ್ಕೆ ವೊಂಟಿ, ಅಂಗೆ ಇಂಗೇಂತ ಆ ಮೊಗಾವ ಸಂಜಾಯಿ ಮಾಡಿ ಅಲ್ಲೆ ಉಳುಸಿಕಳಾಕೆ ಅಯ್ಯಾರ ಪಟ್ಟ ಪಾಡು ಬ್ಯಾಡಿ, ಬ್ಯಾಡಿ- ಎಕ್ಕಾಸಿ ಆಗೋಯ್ತು ... ಆ ಎಂಕಣ್ಣ ದೋಯಿ ಎಣ್ಣುಗೋಳು ಸಾಸಮಾಡಿ ಎಂಗೊ ತಮ್ಮಟ್ಟಿಗೆ ಕರಕಂಡೋಗಿ ಕೂಡಕಂಡೊ... ರುಕ್ಕಿಣಿಯ ಸಂಗಡಲೆ ಕುಳಿತು ಲಕ್ಕನ ಮಾತನ್ನು ಸವಿಸ್ತಾರವಾಗಿ ಆಲಿಸಿದ ಅಣ್ಣನೂ ಅತ್ತಿಗೆಯೂ,
{{gap}}“ಈಗ ನಮ್ಮ ಮನೆಯಲ್ಲಿ ಅಸಂದರ್ಭ. ನಮ್ಮ ಜಾನಕಿಯ ಮೈಯಲ್ಲಿ ಅಷ್ಟು ಹರ್ಷ ಇಲ್ಲ. ಈಗ ನೀನು ನಿಮ್ಮ ರುಕ್ಕಿಣಮ್ಮನವರನ್ನು ಕರೆದುಕೊಂಡು ಹೋಗಿ ಬಿಡು. ಅಷ್ಟರಲ್ಲಿ ನಮ್ಮ ಜಾನಕಿ ಚೇತರಿಸಿದರೆ, ನಾವಿಬ್ಬರೂ ವೈಕುಂಠದ ಸಮಯಕ್ಕೆ ಬತ್ತಾರೆ ಎಂದು ಕೃಷ್ಣಶಾಸ್ತ್ರಿಗಳಿಗೆ ತಿಳಿಸಪ್ಪ” ಎಂದು ಹೇಳಿದರು. ಲಕ್ಕೆ ಒಪ್ಪಲಿಲ್ಲ.
{{gap}}“ಈಟೊತ್ನಲ್ಲಿ ಒಂಟಿಗಾಡಿ ವೊಂಟರೆ ಅಪಾಯ ಕಾದಿಟ್ಟದ್ದೇಯ. ನಮ್ಮ ಸುತ್ತಿನಂಗಲ್ಲ. ನಮ್ಮ ಕಡೆ ಒಬ್ಬರಿಬ್ಬರು ಎಂಗಸರೆ ಕಾಡಲ್ಲಿ ಓಡಾಡಿದ್ರೂವೆ ಅವ್ರ ಮಂಡೆ ಕೂಯ್ದು ಚುಳ್ ಅನ್ನಕ್ಕಿಲ್ಲ... ಅದರಾಗೂ ನಾವು ವೋಗಬೇಕಾಗಿರೊ ಹಾದೀಲಿ ಕಾಟಗರ ಕಾಟ ಇಪರೀತ. ನಾನೂವೆ ನಮ್ಮೂರಿಂದ ಸಂದೆ ದನಿಗೆ ಗಾಡಿ ಕಟ್ಟೋನು, ಬ್ಯಾಲಾಳಲ್ಲಿ ರಾತ್ರಿ ತಂಗಿದ್ದು, ಅಲ್ಲಿಂದ ಕೋಳಿ ಕೂಗಕ್ಕೂ ಮುಂಬೈ ಇದ್ದು ಇಲ್ಲಿ ಬರಕ್ಕೆ ಮದ್ದಿನವೊ ಆಯ್ತು. ಇನ್ನು ಒಂಟಿಗಾಡಿ ಅಟ್ಠಂಡು, ರುಕ್ಕಿಣದ್ವಾರ ವಬ್ಬರೆ ಗಾಡ್ಯಾಗೆ ಕುಂದರಿಗಂಡು, ನಾನಂತೂ ವೋಗಕ್ಕೆ ತಯ್ಯಾರಿಲ್ಲ.<noinclude></noinclude>
to0mcmgwdn5m69ahozv6jxt20hsre6t
ಪುಟ:ವೈಶಾಖ.pdf/೧೧೩
104
82042
316433
277302
2026-05-03T12:15:24Z
Shreelatha.Halemane
7642
/* Validated */
316433
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|left=ಸಮಗ್ರ ಕಾದಂಬರಿಗಳು|center=|right=೯೭}}
ನಾ ವಚ್ಚೇ ಆಗಿದ್ರೆ ಆ ಮಾತು ಬ್ಯಾರೆ. ನೂರು ಜನ ಬಂದು ಬೀಳಿ- ಒಂದು ಕಯ್ಯ ಸ್ವಾಡಿಕತ್ತೀನಿ. ಇವು ಜೊತೆ ಇದ್ರೆ ಮಾತ್ರ ನನ್ನ ಜವಾಬ್ದಾರಿ ಜಾಸ್ತಿ... ಈಗ ಜಾನಕವ್ವನ್ನೂ ಕರಕಂಡು ನೀವೆಲ್ಲರೂ ಸುಮೈಲ್ವಂಡಿ, ಯೇನಾರ ಎಚ್ಚುಕಮ್ಮಿ ಆದ್ರೆ, ನಮ್ಮೂರಿನಾಗೆ ಔಸ್ಥ ಕೊಡುಸಾನ”...
{{gap}}ಲಕ್ಕನ ಮಾತನ್ನ ಸುಲಭವಾಗಿ ತಳ್ಳಿ ಹಾಕುವ ಹಾಗಿರಲಿಲ್ಲ. ಅದರೆ ಅಣ್ಣ, ಅತ್ತಿಗೆ, ಅವರ ಸಂಸಾರ ಎಲ್ಲಾ ಬಂದರೆ, ಅಸ್ಥಿಸಂಚಯನ ಒಂದೇ ಅಲ್ಲದೆ ವೈಕುಂಠ ಮುಗಿಯುವವರೆಗೂ ದರುಮನಳ್ಳಿಯನ್ನು ಅವರು ಬಿಡುವ ಹಾಗಿಲ್ಲ. ಈ ತರ್ಕ ಹೂಡಿ, ಅಣ್ಣ ಬರಲು ಹಿಂದೇಟುಹಾಕುತ್ತಿದ್ದ. ಆದರೆ ಅತ್ತಿಗೆ,
{{gap}}“ಅಯ್ಯೋ, ಇಲ್ಲಿ ನಮ್ಮ ರೇಜಿಗೆ ಇದ್ದೇ ಇದೆ. ಅದು ಯಾವುತ್ತು ಮುಗಿಯುತ್ತೆ?- ನಡಿರಿ ಹೋಗೋಣ. ಒಂದು ಹತ್ತು ಹದಿನೈದು ದಿವಸ ಇಲ್ಲಿ ಕಾಷ್ಠವ್ಯಸನಗಳನ್ನೆಲ್ಲ ಮರೆತು ಹಾಯಾಗಿದ್ದು ಬರೋಣ. ನಿಮ್ಮ ದಾಯಾದಿ ಸುಬ್ಬಾವಧಾನಿಗಳಿಗೆ ಹೇಳಿದರೆ ನಮ್ಮ ಮನೆ ಕಡೆ ನೊಡಿಕೊಳ್ತಾರೆ. ಅವರಿಗೂ ಮಕ್ಕಳು ಜಾಸ್ತಿ: ಮನೆಯೂ ಕಿಷ್ಕಂಧ, ಉಗ್ರಾಣಕ್ಕೂ ನಾವು ಮಲಗುವ ಕೋಣೆಗೂ ಬೀಗ ಹಾಕ್ಕೇನೆ. ಅವರ ಮೂರುನಾಲ್ಕು ಮಕ್ಕಳು ಇಲ್ಲೇ ಓದಿ, ಮಲಗಿ ಮನೆ ನೋಡಿಕೊಳ್ಳಬಹುದು. ಅದರಲ್ಲೂ ಅವರ ಹಿರಿಯ ಮಗ ಸುಬ್ಬರಾಮು ಸಂಗೀತರಾಗ, ಅವನು ತಮ್ಮ ಮನೆಯಲ್ಲಿ ಅಭ್ಯಾಸ ಮಾಡೊದನ್ನ ಇಲ್ಲೆ ಮಾಡಿಕೊಳ್ತಾ ಇರಬಹುದು. ಬೇರೆ ಹುಡುಗರು ಆಗಿಂದೀಗ ಮನೆಬಿಟ್ಟು ಓಡಾಡಿದರೂ ಆ ಸುಬ್ಬರಾಮು ಮಾತ್ರ ಮನೆ ಬಿಟ್ಟು ಅಲ್ಲಾಡಲ್ಲ.”
{{gap}}ಅತ್ತಿಗೆಯ ಕೊನೆಯ ಮಾತುಗಳು ಆಳದಲ್ಲೆಲ್ಲೊ ಕಚಗುಳಿ ಇಟ್ಟಿದ್ದವು. ಅಜೂಬಾಜೂ ಮನೆಗಳಲ್ಲಿ ಸಂಗೀತ ಸೂಸಿದರೆ, ಬೇಸರದಿಂದ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚತ್ತಿದ್ದ ಈ ಸಂಗೀದ್ವೇಷಿ, ತಾನಿಲ್ಲದಾಗ ತನ್ನ ಮನೆಯಲ್ಲೆ ಸುಬ್ಬರಾಮುವಿನ ಸಂಗೀತಾಭ್ಯಾಸಕ್ಕೆ ಅವಕಾಶಮಾಡಿಕೊಟ್ಟದ್ದು ರುಕ್ಕಿಣಿಯ ಒಳಗಡೆ ನಗು ಉಕ್ಕಿಸಿತ್ತು. ಅವಳು-ಜೀವನ ನಮ್ಮ ಕೈಯಲ್ಲಿ ಏನೇನು ಮಾಡಿಸುತ್ತೆ ಎಂದು ಅಚ್ಚರಿಪಟ್ಟಿದ್ದಳು. ಅದರೆ ನಮ್ಮನ್ನು ಒಂದು ಪ್ರಬಲ ಪರೀಕ್ಷೆಗೆ ಒಡ್ಡುವ ಪ್ರಸಂಗ ಬಂದರೆ- ಆಗ ಹೇಗೆ ನಡೆದುಕೊಳ್ಳತ್ತೇವೊ, ನಮಗೆ ಅರಿವಿಲ್ಲದಂತೆ ನಮ್ಮ ಬದುಕಿನ ಕ್ರಮಕ್ಕೆ ವಿರುದ್ಧವಾಗಿ ನಾವೇ ಏನೇನು ಮಾಡಿಬಿಡುತ್ತೇವೋಈಗ ನಮ್ಮ ಅತ್ತಿಗೆ ಮಾಡುತ್ತಿರುವ ಹಾಗೆ!....
{{gap}}ಅತ್ತಿಗೆಯ ಅಭಿಪ್ರಾಯವನ್ನು ಅಣ್ಣ ಒಪ್ಪಿದರೂ ಆ ಸಂಜೆಯ ಪ್ರಯಾಣಕ್ಕೆ ಮಾತ್ರ ಆತ ಸುತರಾಂ ಸಮ್ಮತಿಸಲಿಲ್ಲ.<noinclude></noinclude>
t27l86cyzouqzq3i727m50ewi1kl09p
ಪುಟ:ವೈಶಾಖ.pdf/೧೧೪
104
82043
316434
277310
2026-05-03T12:16:08Z
Shreelatha.Halemane
7642
/* Validated */
316434
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|left=೯೮|center=|right=ವೈಶಾಖ}}
{{gap}}“ಈಗ ನಾವು ಎಲ್ಲ ಏರ್ಪಾಡು ಮಾಡಿ ಹೊರಟು, ದರುಮನಳ್ಳಿ ಸೇರಲು ಮಧ್ಯರಾತ್ರಿಯೇ ಅಗತ್ತೆ. ದಾರಿಯಲ್ಲಿ ದರೋಡೋಕಾರರ ಅಪಾಯ ಇದೆ ಎಂದು ಲಕ್ಕ ಹೇಳುವ ಮಾತನ್ನು ಯಾರೂ ತೆಗೆದುಹಾಕುವಂತಿಲ್ಲ. ಈ ದಾರಿಯಲ್ಲಿ ರಾತ್ರಿವೇಳೆ ಪ್ರಯಾಣ ಹೊರಟ ಗಾಡಿಗಳನ್ನು ಕಳ್ಳರು ಅಡ್ಡ ಹಾಕಿದ ಪ್ರಕರಣಗಳು ಆಗಾಗ ಜರುಗುತ್ತಲೇ ಇವೆ. ಎರಡು ತಿಂಗಳಿಗೊ ಮೂರು ತಿಂಗಳಿಗೊ ಒಂದು ಸರ್ತಿ ಇಂಥ ಪ್ರಕರಣ ನಡೆದು ರಾತ್ರೆ ಪ್ರಯಾಣಕ್ಕೆ ನಮ್ಮ ಜನ ಹೆದದಾರೆ. ಆದ್ದರಿಂದ ಬೆಳಿಗ್ಗೆ ಹೋಗೋದೆ ವಾಸಿ. ಏನಂತೀಯ ಸಾತು?”
{{gap}}ಅತ್ತಿಗೆ ಮನಸ್ಸಿನಲ್ಲಿ ಏನಾದರೂ ಬಂದರೆ ತುದಿಗಾಲಿನ ಆತುರ.
{{gap}}“ಹೋಗೀಂದ್ರೆ ಕೊತ್ತಿ ಸೀತ ಹಾಗೆ ನೀವು ಏನೇನೋ ಹೇಳಿ ನನ್ನ ಕೈ ಕಾಲು ಬಿಡಿಸಿದಿರಿ. ನೀವು ಧೈರ್ಯ ಮಾಡಿದ್ರೆ ಲಕ್ಕನೂ ಕೂಡ ಒಪೇ ಒಪ್ಪಿದ್ದ. ಆ ಕಳ್ಳರು ನಮ್ಮ ಹತ್ತಿರ ಏನಿದೆ ಎಂದು ನಮ್ಮ ಮೇಲೆ ಬೀಳ್ತಾರೆ?.... ನೀವು ಬಿಡಿ, ಮಹಾ ಪುಕ್ಕಲು. ನರಿ ಬಂತು ಅಂದರೆ ಹುಲಿ ಬಂತು ಅನ್ನುವ ಜಾತಿ!”....
{{gap}}ಆದರೆ ರುಕ್ಕಿಣಿಗೆ ಒಳಗೇ ಸಂದೇಹ. ಆಶ್ವತ್ಸಣ್ಣ ಸಂಜೆ ಪ್ರಯಾಣಕ್ಕೆ ತಡೆ ಹಾಕಿದ್ದು ಕಳ್ಳಕಾಕರ ಭೀತಿಯಿಂದಲೋ ಅಥವಾ ಈ ಇಳಿಹೊತ್ತಿನಲ್ಲಿ ಕೇವಲ ಒಂದು ಲೋಟ ಕಾಫಿ ಹೀರಿ ಹೊರಟು ಮಧ್ಯರಾತ್ರಿಯಲ್ಲಿ ದರುಮನಳ್ಳಿ ಸೇರಿದರೆ, ಅಂಥ ಆವೇಳೆಯಲ್ಲಿ ಸಾವಿನ ಮನೆಯಲ್ಲಿ ಹೊಟ್ಟೆ ತಾಳ ಹಾಕುತ್ತ ಮಲಗಬೇಕಾಗಬಹುದು ಎಂಬ ಭಯದಿಂದಲೊ!... ಇಷ್ಟಾದರೂ ಅತ್ತಿಗೆಯ ಮಾತು ತಾನೆ ನಡೆಯಬೇಕು ಆ ಮನೆಯಲ್ಲಿ!... ಆದರೆ ಲಕ್ಕನೂ ಸಹ ಅಣ್ಣನ ಮಾತನ್ನೆ ಜೋರಾಗಿ ಸಮರ್ಥಿಸಿದ್ದರಿಂದ, ಅತ್ತಿಗೆ ಗೊಣಗುತ್ತಲೇ ಒಪ್ಪಬೇಕಾಯಿತು...
{{gap}}ಬೆಳಿಗ್ಗೆ ಏಳು ಗಂಟೆಗೆ ಹೊರಡಲು ಸಕಲ ಸಿದ್ಧತೆಗಳೂ ಮುಗಿದಿದ್ದವು. ಸುಬ್ಬಾವಧಾನಿಗಳನ್ನು ಒಪ್ಪಿಸಿಯಾಗಿತ್ತು. ಮನೆಯ ಬೀಗದ ಕೀಲಿಯನ್ನು ಸುಬ್ಬಾವಧಾನಿಗಳ ಹಿರಿಮಗ ಸುಬ್ಬರಾಮುವಿನ ವಶಕ್ಕೂ ಕೊಟ್ಟದ್ದಾಯಿತು. ಇನ್ನೇನು ಹೊರಡಬೇಕು ಎನ್ನುವಾಗ ಅವರ ಮಗ ಶೇಷ ತಾನು ರುದ್ರಪಟ್ಟಣದಲ್ಲಿ ಉಳಿಯುವುದಾಗಿ ರಂಬಾಟ ಮಾಡಿದ. ಮಗಳು ಕೆಡಲು ತನ್ನ ಪೋಲಿ ಸ್ನೇಹಿತರಿಗೆ ಜಾನಕಿ ಮೈನೆರೆದ ವಿಚಾರ ತಿಳಿಸಿದ್ದರಿಂದ ಅಲ್ಲವೆ ಎಂಬ ಬೇಗೆ ಸುಡುತ್ತಿದ್ದರೂ ಆ ಸಮಯದಲ್ಲಿ ಅದೇ ಕಾರಣ ಹೇಳಿ ದಂಡಿಸಿದ್ದರೆ ಗುಟ್ಟು ರಟ್ಟಾಗಬಹುದು ಎಂಬ ಭಯದಿಂದ ಸಾವಿತ್ರಿ ಹಿಂದೆ ನಡೆದ ಪ್ರಸಂಗದಲ್ಲಿ ಸುಮ್ಮನಾಗಿದ್ದುಂಟು. ಆದರೆ ಈಗ ಒಳಗೊಳಗೇ ಅವಳನ್ನು ದಹಿಸುತ್ತಿದ್ದ ಕಿಚ್ಚಿಗೆ ಒಂದು ಹೊರದಾರಿ<noinclude></noinclude>
n7pi7cgaki05vi9a4dl7tf5ft769d41
ಪುಟ:ವೈಶಾಖ.pdf/೧೧೫
104
82044
316435
277323
2026-05-03T12:17:09Z
Shreelatha.Halemane
7642
/* Validated */
316435
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|left=ಸಮಗ್ರ ಕಾದಂಬರಿಗಳು|center=|right=೯೯}}
ಸಿಕ್ಕಿದಂತಾಯಿತು. ಶೇಷನ ಕೆನ್ನೆಗೆ ರಪರಪ ತೀಡಿ, ಬೆನ್ನಿಗೆ ಗುದ್ದಿ, ಮುಂಗೂದಲು ಜಗ್ಗಿ, ಕೆಳಕ್ಕೆ ತಳ್ಳಿ, ತನ್ನ ಆಕ್ರೋಶವನ್ನೆಲ್ಲ ತೀರಿಸಕೊಂಡಳು... ಶೇಷ ಜಗಮೊಂಡ. ಯಾವ ಶಿಕ್ಷೆಗೂ ಜಗ್ಗಲಿಲ್ಲ. ಅವಳು ತಳ್ಳಿದಾಗ ಕೆಳಗೆ ಬಿದ್ದವನು ಸುಮ್ಮನೆ ಎದ್ದು ನಿಂತಿದ್ದ. ಕಣ್ಣುಗಳಲ್ಲಿ ಒಂದು ಹನಿ ನೀರಿಲ್ಲ, ಕೋಪದಿಂದ ತಾಯಿಯನ್ನು ದುರುದುರು ನೋಡುತ್ತ ನಿಂತಿದ್ದ... ಸಾವಿತ್ರಿಗೆ ಕಿಚ್ಚು ಮತ್ತೂ ಪ್ರಜ್ವಲಿಸಿತು. “ರುಕ್ಕು ಅಟ್ಟಕ್ಕೆ ಹತ್ತಿ, ಬೆತ್ತದ ಕೋಲು ತೆಕ್ಕೊಂಡು. ಇವನಿಗೆ ಇಷ್ಟೇ ಸಾಲದು. ಹುಟ್ಟಿದ ದಿನ ಕಾಣಿಸ್ತೀನಿ!”- ಕಿಡಿ ಕಾರಿದಳು. ಆದರೆ ಹೊರಗಿನಿಂದ ಲಕ್ಕ,
{{gap}}“ನೀವು ಇಂಗಾಡಿ ಅಂಗಾಡಿ ವೊಂಡೋದ ಏಳು ಮದ್ದಿನ್ನ ಮಾಡಿ, ನಾವು ಅಸವಾಳು ತಲಪೋವೋತ್ಸೆ ಕಾವು ಕವುಚಿಗತ್ತದೆ. ಆಗ ಕಳ್ಳರು ಬಂದು ಬಿದ್ರೆ, ಆ ದ್ಯಾವರೆ ನಮ್ಮ ಕಾಪಾಡ್ಕಬೇಕು” ಎಂದು ಬೆದರಿಸಿದ್ದು, ಸಾತುವಿನ ಕಿಚ್ಚಿಗೆ ತಣ್ಣೀರೆರಚಿತು. ಆದರೂ ಶೇಷನನ್ನು ಮನಸ್ವೀ ಬೈಯುತ್ತಲೆ ಗಾಡಿ ಹತ್ತಿದ್ದಳು. ಅಶ್ವತ್ಥಣ್ಣ ಮಾತ್ರ ಸುಬ್ಬರಾಮುವನ್ನು ಒಂದು ಪಕ್ಕಕ್ಕೆ ಕರೆದು,
{{gap}}“ನಮ್ಮ ಶೇಷ ಅಂಥ ಕೆಟ್ಟ ಹುಡುಗ ಏನಲ್ಲ. ಪೋಲಿ ಸಹವಾಸ, ಏನೂ ಮಾಡಲಿಕ್ಕಾಗುತ್ತೆ. ಗಾದೆ ಕೇಳಿಲ್ಲವೆ- ಸಹವಾಸದಂಥ ಬುದ್ದಿ, ಆಹಾರದಂಥ ಲದ್ದಿ... ಬೇಳೀತ ಬೆಳಿತ ಸರಿಹೋಗ್ತಾನೆ. ನಾವು ಬರೋವರೆಗೂ ಅವನ ಊಟೋಪಚಾರ ನೀನೇ ನೋಡಿಕೋಬೇಕು. ತಗೊ” ಎನ್ನುತ್ತ ಇಪ್ಪತ್ತು ರೂಪಾಯಿಗಳನ್ನು ಕೈಗಿಡಲು ಹೋದ.
{{gap}}“ಇದೇನು, ನೀವು ಮಾಡ್ತಿರೋದು?... ಚೆನ್ನಾಗಿದೆ. ಶೇಷ ಒಬ್ಬನಿಗೆ ಕೇವಲ ಹತ್ತು ಹದಿನೈದು ದಿವಸ ಊಟ ಹಾಕಲಿಕ್ಕೆ ನಿಮ್ಮಿಂದ ಹಣ ತೆಗೋಬೇಕೆ?... ಸುಮ್ಮನೆ ನಿಮ್ಮ ಪಾಡಿಗೆ ನೀವು ಹೋಗಿ, ಅವನ ಯೋಗಕ್ಷೇಮ ನಿಮಗಿರಲಿ” ಎಂದು ಸುಬ್ಬರಾಮು ನಿರಾಕರಿಸಿದ್ದ.
{{gap}}ಎಲ್ಲರೂ ಕುಳಿತಿದ್ದು ಖಾತರಿಯಾದ ತರುವಾಯ ಲಕ್ಕನೂ ಬಲಗೋಲು ಎತ್ತನ್ನು ಚಿಗಿಸಿ ದಾರಿಮಾಡಿಕೊಳ್ಳುತ್ತ ಗಾಡಿಯ ಮುಂಭಾಗಕ್ಕೆ ನೆಗೆದು ಕುಳಿತಿದ್ದ. ಹಗ್ಗವನ್ನು ಕೈಯಲ್ಲಿ ಹಿಡಿದು ಅವನು ಹುಶ್ ಹುಶ್ ಸದ್ದು ಮಾಡಿ, ಎತ್ತುಗಳ ಕುಂಡಿಬಳೆಗೆ ಕೈಯಿಟೊಡನೆಯ ಎತ್ತಿನ ಬಂಡಿಯು ಮುಂದಕ್ಕೆ ಹೊರಟಿತು.
{{gap}}“ಲಕ್ಕ, ನಿಮ್ಮ ನಾಯಿ ಬೊಡ್ಡ ಎಲ್ಲಿ ಕಾಡ್ತಾನೆ ಇಲ್ಲವಲ್ಲ? ಊರಿನೊಳಗೆ ಎಲ್ಲಾದರೂ ಉಳಿದುಬಿಟ್ಟತೇ ಹೇಗೆ?”- ಉದ್ಗಾರ ತೆಗೆದಿದ್ದವಳು ರುಕ್ಕಿಣಿ.
{{gap}}“ಅಯ್, ನೀವು ಸರಿ, ನಿಮ್ಮ ಬುತ್ತಿ ವಾಶಣ ಗಗನೆ ಗಾಳಿ ಮೈಯೊಳಗಾಗೆಲ್ಲ ತಂಬುಕಂಡಿದ್ದಾಗ, ಬೊಡ್ಡ ಅದೆಲ್ಲಿ ತಾನೆ ಹ್ವಾದಾತುಬುಡಿ...<noinclude></noinclude>
kj2sczrvz1hlkpqoaax3w75rv2h1zmo
ಪುಟ:ವೈಶಾಖ.pdf/೧೧೬
104
82045
316436
277325
2026-05-03T12:18:18Z
Shreelatha.Halemane
7642
/* Validated */
316436
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|left=೧೦೦|center=|right=ವೈಶಾಖ}}
ಅದು ವಂದಿಗೆ ಬತ್ತಾ ಅದೆ- ನಮ್ಮ ಗಾಡಿ ಕೆಳಾಗಡೆ, ಏಡೂ ಚಕ್ರಗಳ ನಡೂಮದ್ಯ ಬೆಳುಗ್ನಲ್ಲಿ ಅದ್ರೆ ನೀವು ಗಡದ್ದಾಗಿ ಬೋನೆ ಆಕ್ಕಿಲ್ಲವಾ?- ಬಯಾರೆ ತಾವಕೆ ಯಾಕಾರು ವೋಗಬೇಕು ಅದು?”
{{gap}}ಲಕ್ಕ ಮಾತಾಡುತ್ತಿರುವಂತೆ ಬಂಡಿ, ಗುಡಿಯನ್ನೂ ಗುಡಿ ವಠಾರದವರ ಮನೆಗಳನ್ನೂ ದಾಟುತ್ತಿರುವಾಗ, ಗುಡಿಯ ಹಿಂಭಾಗದಲ್ಲಿ ಕಾಣುವ ಕೋಟೆಯ ಅವಶೇಷಗಳನ್ನೇ ನೋಡುತ್ತ ಆಶ್ವತ್ಥ,
{{gap}}“ಪಿರಿಯಾಪಟ್ಟಣದ ಪಾಳೆಯಗಾರರ ಕಾಲದಲ್ಲಿ ಈ ಊರಿಗೆ ಕೋಟೆ ಕಟ್ಟಿಸಿ ರುದ್ರನಾಯ್ಕ ಅನ್ನೋನು ಇಲ್ಲಿ ಆಳಿದನಂತೆ. ಅವನ ಹೆಸರಿನ ಮೇಲೇ ಈ ಊರಿಗೆ ರುದ್ರಪಟ್ಟಣ ಎಂದು ಹೆಸರು ಬಂದಿತಂತೆ. ಆ ನಾಯಕನ ಕಾಲದಲ್ಲಿ ಈ ಊರು ಎಂಥ ವೈಭೋಗದಿಂದ ಮೆರೆದಿರಬೇಕು. ಅಲ್ಲವೇ?...” ಎಂದಾಗ,
{{gap}}“ಈಗ ಈ ಮಾತು ತೆಕ್ಕೊಂಡು ಯಾವ ಪುರಷಾರ್ಥ ಅಂತೀನಿ?” ವೀಳೆಯದೆಲೆಗೆ ಸುಣ್ಣ ಹಚ್ಚುತ್ತ ಸಾವಿತ್ರಿ, “ಅದಿಲ್ಲಿ, ತೋಟದ ವ್ಯವಸ್ಥೆ ಏನು ಮಾಡಿ ಬಂದಿದೀರಿ?- ಆದಾದರೂ ಪ್ರಸ್ತುತಕ್ಕೆ ಬಂದದ್ದು. ಆ ವಿಚಾರ ಹೇಳಿ.” ರಸ್ತೆಗೇ ಕಾಣುತ್ತಿದ್ದ ತಮ್ಮ ತೋಟವನ್ನೇ ನೋಡುತ್ತ ಸಾತು ಕೇಳಿದಳು.
{{gap}}“ಅದನ್ನೆಲ್ಲ ಬಂದೋಬಸ್ತು ಮಾಡಿ ಬಂದಿದೀನಿ, ನೀನು ಏನೂ ತಲೆ ಕೆಡಿಸಿಕೊಳ್ಳಬೇಕಿಲ್ಲ. ಕಾವಲಿಗೆ ಸಾಬೂಲಾಲ್ ಹಾಕಿದೀನಿ, ಅವನಿಗೆ ಎಷ್ಟು ಎಂದು ಮಾತಾಡಿ, ಹೊಸ ಅಡಿಕೆ ಸೊಸಿಗಳಿಗೆ ನೀರು ಹಾಕಲಿಕ್ಕೂ ಏಪಾಡು ಮಾಡಿದೀನಿ. ನಮ್ಮ ಸುಬ್ಬಧಾನಿಗಳೂ ನಮ್ಮ ಪಕ್ಕದ ತೋಟದವರೇ ಆದ್ದರಿಂದ ಬಾಳೆಹಣ್ಣಿನ ಮಾರಾಟವನ್ನೂ ಅವರಿಗೆ ವಹಿಸಿಬಿಟ್ಟಿದೀನಿ.”
{{gap}}ಗಾಡಿ ರುದ್ರಪಟ್ಟಣದ ಬಂಡಿ ಹಾದಿಯಿಂದ ಹನ್ಯಾಳು ಬಳಿ ಎಡಕ್ಕೆ ಹೊರಳಿ ದೊಡ್ಡ ಮಾರ್ಗವನ್ನು ಹಿಡಿಯಿತು. ಅಶ್ವತ್ಥನಿಗೆ ಮಾತಿನ ಚಪಲ, ಹನ್ಯಾಳು ದಾಟುತ್ತಿರುವಂತೆ ಹನ್ಯಾಳಿನ ಬಗ್ಗೆ ವಿವರಣೆ ಕೊಡುತ್ತಿದ್ದ:
{{gap}}“ಹನ್ಯಾಳು ಅಂದರೆ ಹಸುಳೆಯ ಹಾಲು. ಹಿಂದೆ ಈ ಊರಿನಲ್ಲಿ ಹಾಲು ಮೊಸರು ಧಂಡಿಯಾಗಿದ್ದ ಕಾರಣ ಈ ಗ್ರಾಮಕ್ಕೆ ಈ ಹೆಸರನ್ನು ಇಟ್ಟರಂತೆ.”
{{gap}}ಸಾವಿತ್ರಿಗೆ ತಲೆಚಿಟ್ಟು, “ಸಾಕು ನಿಲ್ಲಿಸಿ” ಸಿಡುಕಿ, ಗಂಡನ ಬಾಯಿ ಮುಚ್ಚಿಸಿ,
{{gap}}“ರುಕ್ಕು, ನಿಮ್ಮಣ್ಣ ಹಾಡಿದ್ದನ್ನೇ ಹಾಡುವ ಕಿಸಬಾಯಿದಾಸರು. ಇವರ ವರ್ಣನೆ ಕೇಳಿ ಕೇಳಿ ನನ್ನ ಕಿವಿ ಕಿವುಡಾಗಿದೆ ಉಳಿದಿರೋದೆ ನನಗೆ ಪರಮಾಶ್ಚಯ್ಯ!” ಎಂದಳು.
{{gap}}ರುಕ್ಕಿಣಿ ನಕ್ಕಿದ್ದಳು. ಅದು ಸದ್ದಿಲ್ಲದ ನಗು. ಗಟ್ಟಿಯಾಗಿ ನಕ್ಕರೆ ಅಣ್ಣನಿಗೆ<noinclude></noinclude>
d6ew0dt89n4k9wq2974cput7vgvo4lw
ಪುಟ:ವೈಶಾಖ.pdf/೧೧೭
104
82046
316437
277345
2026-05-03T12:19:00Z
Shreelatha.Halemane
7642
/* Validated */
316437
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|left=ಸಮಗ್ರ ಕಾದಂಬರಿಗಳು|center=|right=೧೦೧}}
ನೋವು-ಅತ್ತಿಗೆಯ ಹಾಸ್ಯಕ್ಕೆ ಓಗೊಟು ನಗದಿದ್ದರೆ ಅತ್ತಿಗೆಗೆ ನಿಷ್ಠುರ.
{{gap}}ಅಲ್ಲಿಂದ ಮುಂದೆ ತಮ್ಮ ಊರಿನ ಹಾಗೂ ಬಸವಾಪಟ್ಟಣದ ಕೆಲವು ಮನೆಗತನಗಳ ಸುರುಳಿ ಬಿಚ್ಚಿ ಅವನ್ನು ಆದಷ್ಟು ಕೆಟ್ಟದು ಮಾಡಿ ಹರಟಿದಳು ಸಾವಿತ್ರಿ, ರುಕ್ಕಿಣಿಗೆ ವಿಸ್ಮಯ. ತನ್ನ ಪಕ್ಕದಲ್ಲಿ ಕುಳಿತ ಮಗಳು ಜಾನಕಿಯ ದೃಷ್ಟಾಂತವೆ ಇನ್ನೂ ಹಸಿಹಸಿಯಾಗಿರುವಾಗ ಇನ್ನೊಬ್ಬರನ್ನು ಹಳಿಯುವ ದಾಷ್ಟ್ರೀಕ ಅತ್ತಗೆಗೆ ಹೇಗಾದರೂ ಬಂತು? ಎಂಬ ಪ್ರಶ್ನೆ ಉದ್ಭವಿಸಿ, ಉತ್ತರ ಸಿಗದೆ ಅಲ್ಲೇ ಕಮರಿ ಹೋಯಿತು...
{{gap}}ಸಾತು ಅತ್ತಿಗೆಯ ರಂಬಾಟದಲ್ಲಿ ರುದ್ರಪಟ್ಟಣವನ್ನು ಬಿಡುವಾಗ ಸುಮಾರು ಎಂಟು ಗಂಟೆಯೇ ಸಂದಿರಬೇಕು. ರಾಮರೂರು, ಹಳಗನಹಳ್ಳಿ ದಾಟಿ ಅವರು ಬೆಟ್ಟದಪುರ ಸೇರುವ ವೇಳೆಗೆ ಮಧ್ಯಾಹ್ನ ಒಂದು ಗಂಟೆಗೂ ಮೀರಿರಬೇಕು. ಅಲ್ಲಿ ಗಾಡಿ ನಿಲ್ಲಿಸಿ, ಎತ್ತುಗಳನ್ನು ಅಟ್ಟಿಕೊಂಡು ಹೋಗಿ ತಾವರೆಕೆರೆಯಲ್ಲಿ ನೀರು ಕುಡಿಸಿ, ಪಕ್ಕದ ಮರದ ತೋಪಿಗೆ ತಂದು ಅವಕ್ಕೆ ಲಕ್ಕ ಹುಲ್ಲು ಹಾಕಿದ್ದ. ಅಷ್ಟರಲ್ಲಿ ಅವರೆಲ್ಲರೂ ಕೆರೆಯಲ್ಲಿ ಕೈಕಾಲು ತೊಳೆದು ಬಂದು ತೋಪಿನಲ್ಲಿ ಅಡಿಕೆಪಟ್ಟೆಯ ಬುತ್ತಿ ಬಿಚ್ಚಿದೆವು. ಮೊದಲು ಅಶ್ವತ್ಥನಿಗೆ ಬಲು ಪ್ರಿಯವಾದ ಅಕ್ಕಿ ರೊಟ್ಟಿ, ಅದಕ್ಕೆ ನೆಂಚಿಕೊಳ್ಳಲು ಕೊಬ್ಬರಿ ಖಾರ, ಹಸುವಿನ ಬೆಣ್ಣೆ- ಇವನ್ನು ಬಾಳೆಯೆಲೆಯ ಮೇಲಿಟ್ಟು ಸಾವಿತ್ರಿ ಎಲ್ಲರಿಗೂ ವಿನಿಯೋಗ ಮಾಡಿದಳು. ತರುವಾಯ ಸಣ್ಣ ಸಣ್ಣ ಈರುಳ್ಳಿಗಳಲ್ಲಿ ಹುಳಿ ಮಾಡಿ ಅದರಲ್ಲಿ ಕಲೆಸಿದ ಅನ್ನ, ಗಟ್ಟಿಮೊಸರಿನಲ್ಲಿ ಕಲೆಸಿದ ಅನ್ನ, ನೆಲ್ಲಿಕಾಯಿ, ಮಾಗಳಿಬೇರು ಉಪ್ಪಿನಕಾಯಿಗಳು ಇವಿಷ್ಟನ್ನೂ ರುಕ್ಕಿಣಿ ಸರಬರಾಜು ಮಾಡಿದ್ದಲು. ಊಟ ಮುಗಿಯುತ್ತಿದ್ದಂತೆ ರಸಬಾಳೆ ಹಣ್ಣುಗಳನ್ನು ಎಲ್ಲರೂ ಸೇವಿಸಿದ್ದಾಯಿತು. ಲಕ್ಕ ಎಲ್ಲರಂತೆ ಅಷ್ಟಿಷ್ಟು ಹುಳಿ ಅನ್ನ ಮೊಸರನ್ನ ಎರಡು ರೊಟ್ಟಿಗಳಿಗೇ ತೃಪ್ತನಾಗಿದ್ದರೆ, ಆಶ್ವತ್ಥ ನಾಲ್ಕು ರೊಟ್ಟಿಗಳನ್ನು ತಿಂದುದಲ್ಲದೆ, ಈರುಳ್ಳಿ ಹುಳಿ ಅನ್ನ ಮೊಸರನ್ನಗಳನ್ನು ಪುಷ್ಕಳವಾಗಿ ಸವಿರಿಸಿ, ದಾರಿಯಲ್ಲಿ ಒಂದು ಚಿಪ್ಪು ರಸಬಾಳೆಹಣ್ಣುಗಳನ್ನೂ ಹೊಟ್ಟೆಯೊಳಗೆ ಇಳಿಸಿದ್ದ! ಲಕ್ಕ ರುಕ್ಕಿಣಿಯ ಬಲಾತ್ಕಾರಕ್ಕೆ ನಾಲ್ಕು ಬಾಳೆಹಣ್ಣು ತಿಂದಿದ್ದ. ಕೆರೆಯ ನೀರಿನಲ್ಲಿ ಈಜಾಡಿ ಬಂದ ಬೊಡ್ಡನ ಯೋಗಕ್ಷೇಮವನ್ನು ರುಕ್ಕಿಣಿಯೇ ನೋಡಿಕೊಂಡಿದ್ದಳು...
{{gap}}ಊಟ, ವಿಶ್ರಾಂತಿಗಳಲ್ಲಿ ಮುಕ್ಕಾಲು ಗಂಟೆಯೇ ಕಳೆದುಹೊಗಿತ್ತು. ಸಾವಿತ್ರಿಗೆ ತೋಪು ಬಿಟ್ಟು ಏಳುವ ಮನಸ್ಸೇ ಇರಲಿಲ್ಲ. ಲಕ್ಕ-
{{gap}}“ಇಲ್ಲಿ ನೀನು ಇಂಗೆ ವೊತ್ತು ಮಾಡ್ತಾ ಕುಂತಿದ್ರೆ ನಾವು ಅಸವಾಳು<noinclude></noinclude>
12mzvs34g1zyrtbuwggbrbmjl3e6aoq
ಪುಟ:ವೈಶಾಖ.pdf/೧೧೮
104
82047
316438
277440
2026-05-03T12:20:21Z
Shreelatha.Halemane
7642
/* Validated */
316438
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=೧೦೨|right=ವೈಶಾಖ}}
ತಲಪೋವೊತ್ತಿಗೆ ಸರಿನಾತ್ತೇನೆ ಆಯ್ತದೆ. ಆಮ್ಯಾಕೆ ಕಳ್ಳಕಾಕರು ಮ್ಯಾಲೆ ಬಿದ್ದು ಎಚ್ಚುಕಮ್ಮಿ ಆದರೆ ನನ್ನ ತಪ್ಪಿಲ್ಲ” ಅನ್ನುತ್ತಲೂ ಸಾವಿತ್ರ ದಡಬಡನೆ ಎದ್ದಿದ್ದಳು...
{{gap}}ಎತ್ತಿನ ಗಾಡಿಯು ಪುನಃ ಚಲಿಸಲು ಆರಂಭಿಸಿತು.
ರುದ್ರಪಟ್ಟಣದಿಂದ ಹೊರಟಾಗಿನಿಂದಲೂ ದೂರದಲ್ಲಿ ಕಾಣುತ್ತಿದ್ದ ಸಿಡಿಲು ಮಲ್ಲಿಕಾರ್ಜುನ ಬೆಟ್ಟ, ಬೆಟ್ಟದಮರವನ್ನು ಸಮೀಪಿಸಿದಂತೆ ಹತ್ತಿರ ಹತ್ತಿರವಾಗುತ್ತಿದ್ದು, ಬೆಟ್ಟದಪುರಕ್ಕೆ ಬಂದ ಕೂಡಲೇ ಎದಿರಿಗೇ ನಿಂತ ಅದರ ಎತ್ತರ ಕಂಡು ಎಲ್ಲರೂ ಬೆರಗಾದರು. ಹಿಂದೆ ಅದನ್ನು ರುಕ್ಕಿಣಿ ನೋಡಿರಲಿಲ್ಲವೆಂದಲ್ಲ. ತಾನು ತೌರಿಗೂ ಗಂಡನ ಮನೆಗೂ ಹೋಗಿ ಬರುತ್ತ ಈ ಬೆಟ್ಟವನ್ನು ಕೆಲವು ಸಲ ನೋಡಿದ್ದಳು. ಆದರೂ ನೋಡಿದಾಗಲೆಲ್ಲ ಈ ಬೆಟ್ಟವನ್ನು ಇದೀಗ ಹೊಸದಾಗಿ ನೊಡಿದಂತೆಯೇ ಅನ್ನಿಸುವುದಲ್ಲ, ಯಾಕೆ ಹೀಗೆ?- ಎಂದು ರುಕ್ಕಿಣಿಗೆ ಕೌತುಕ. ಮೈಸೂರಿನ ಚಾಮುಂಡಿಬೆಟ್ಟಕ್ಕೆ ಎರಡರಷ್ಟು ಎತ್ತರವಿರುವ ಆ ಬೆಟ್ಟವನ್ನು ಬಳಸಿ, ಲಕ್ಕ ಬೆಟ್ಟದ ಪಕ್ಕದಲ್ಲೆ ಬಾರಸೆಯ ಕಡೆಗೆ ಗಾಡಿಯನ್ನು ದೌಡಾಯಿಸಿದ.
{{gap}}ಬಾರಸೆ ಮಠದ ಮಂಟಿಗಳನ್ನು ದಾಟಿ, ಆಯಿಚನ ಹಳ್ಳಿ, ರಾಮನಾಥ ತುಂಗಗಳು ಒಂದಾದಂತೆ ಮಲ್ಲಿಕಾರ್ಜುನ ಬೆಟ್ಟವೂ ದೂರು ಸರಿಯಿತು. ಸೂರ್ಯಾಸ್ತವಾಗಿ ಅಸವಾಳು ಸಮೀಪಿಸುತ್ತಿದ್ದಂತೆ, ಲಕ್ಕ ಗಾಡಿ ನಿಲ್ಲಿಸಿ, ಅದರ ಕೆಳಗಡೆ ಹಿಂದೆ ಮತ್ತು ಮುಂದೆ ತೂಗಿ ಹಾಕಿದ್ದ ಲಾಟೀಗಳನ್ನು ಹೊತ್ತಿಸಿದ್ದ.
{{gap}}“ಮಬ್ಬುಬೆಳಕು ಇನ್ನೂ ಇದೆ. ಈಗಲೆ ಯಾಕೆ ಲಾಟೀನು ಹಚ್ಚಿದೆಯೊ, ಲಕ್ಕ?” ಸಾವಿತ್ರಿ ಕೇಳಿದ್ದಳು
{{gap}}“ಅಸವಾಳು ಇನ್ನೇನು ಬಂದುಬುತ್ತದೆ. ಒಂದು ಅರ್ಧಗಂಟೆ ಪಯಣ. ಆ ತಾವೆ ಕಳ್ಳರ ಕಾಟ ಎಚ್ಚು, ಅದ್ರೆ ನಾನು ಚೆಂದಾಕಿ ಬೆಳುಕಿರಾವಾಗ್ಗೆ ಆ ಈಚಲುಗುತ್ತಿ ದಾಟಾವ ಅಂತ ಮಾಡ್ಕಂಡಿದ್ದದ್ದು. ಆದ್ರೆ ನೀವು ಕಜೆ ಆಡ್ಕಂಡು ವೊಂಡೊದ ತಡ ಮಾಡಿದಿರಿ, ವೋಗ್ಲಿ ಅಂದರೆ ಬೆಟ್ಟದಪುರ ತೋಪಿನಾಗೂವೆ ಮಂಟಾಡಿಕಂಡೇ ಕುಂತಿದ್ರೆ... ಉಂ, ಈಗೇನ ಮಾಡಕ್ಕಾದಾತು?- ದ್ಯಾವರ ಮೇಲೆ ಭಾರ ಆಕಾದು, ವೋಟೆಯ.” ಬೇಸರದಿಂದ ನುಡಿದು, ಎತ್ತುಗಳನ್ನು ಲಕ್ಕ ಉಚಾಯಿಸಿದ್ದ...
{{gap}}ಈಚಲುಗುತ್ತಿ, ಕಳ್ಳರು ಎಂದೊಡನೆಯೇ, ಎಲ್ಲರ ಬಾಯಿಗಳಿಗೂ ಬೀಗ ಬಿದ್ದಿತ್ತು. ಒಂಟಿಗಾಡಿಯ ಚಕ್ರಗಳು ಆ ನುರುಜುಗಲ್ಲಿನ ಹಾದಿಯಲ್ಲಿ ಉರುಳುವಾಗ ಎಬ್ಬಿಸುತ್ತಿದ್ದ ಗಡಲ್ ಗಡಕ್ ಶಬ್ದವನ್ನುಳಿದು ಗಾಡಿಯೊಳಗೆ ಮೃತ್ಯಮೌನ ಹೊರಗೆ ಹಕ್ಕಿಗಳು ಗುಂಪುಗುಂಪಾಗಿ ರಸ್ತೆಯ ಇಕ್ಕೆಲದ ಸಾಲುಮರಗಳ ತಮ್ಮ ತಮ್ಮ<noinclude></noinclude>
t3g5qfrvd0jh5tnf2mxvj497umk4q4j
316439
316438
2026-05-03T12:20:46Z
Shreelatha.Halemane
7642
316439
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=೧೦೨|right=ವೈಶಾಖ}}
ತಲಪೋವೊತ್ತಿಗೆ ಸರಿನಾತ್ತೇನೆ ಆಯ್ತದೆ. ಆಮ್ಯಾಕೆ ಕಳ್ಳಕಾಕರು ಮ್ಯಾಲೆ ಬಿದ್ದು ಎಚ್ಚುಕಮ್ಮಿ ಆದರೆ ನನ್ನ ತಪ್ಪಿಲ್ಲ” ಅನ್ನುತ್ತಲೂ ಸಾವಿತ್ರ ದಡಬಡನೆ ಎದ್ದಿದ್ದಳು...
{{gap}}ಎತ್ತಿನ ಗಾಡಿಯು ಪುನಃ ಚಲಿಸಲು ಆರಂಭಿಸಿತು.
{{gap}}ರುದ್ರಪಟ್ಟಣದಿಂದ ಹೊರಟಾಗಿನಿಂದಲೂ ದೂರದಲ್ಲಿ ಕಾಣುತ್ತಿದ್ದ ಸಿಡಿಲು ಮಲ್ಲಿಕಾರ್ಜುನ ಬೆಟ್ಟ, ಬೆಟ್ಟದಮರವನ್ನು ಸಮೀಪಿಸಿದಂತೆ ಹತ್ತಿರ ಹತ್ತಿರವಾಗುತ್ತಿದ್ದು, ಬೆಟ್ಟದಪುರಕ್ಕೆ ಬಂದ ಕೂಡಲೇ ಎದಿರಿಗೇ ನಿಂತ ಅದರ ಎತ್ತರ ಕಂಡು ಎಲ್ಲರೂ ಬೆರಗಾದರು. ಹಿಂದೆ ಅದನ್ನು ರುಕ್ಕಿಣಿ ನೋಡಿರಲಿಲ್ಲವೆಂದಲ್ಲ. ತಾನು ತೌರಿಗೂ ಗಂಡನ ಮನೆಗೂ ಹೋಗಿ ಬರುತ್ತ ಈ ಬೆಟ್ಟವನ್ನು ಕೆಲವು ಸಲ ನೋಡಿದ್ದಳು. ಆದರೂ ನೋಡಿದಾಗಲೆಲ್ಲ ಈ ಬೆಟ್ಟವನ್ನು ಇದೀಗ ಹೊಸದಾಗಿ ನೊಡಿದಂತೆಯೇ ಅನ್ನಿಸುವುದಲ್ಲ, ಯಾಕೆ ಹೀಗೆ?- ಎಂದು ರುಕ್ಕಿಣಿಗೆ ಕೌತುಕ. ಮೈಸೂರಿನ ಚಾಮುಂಡಿಬೆಟ್ಟಕ್ಕೆ ಎರಡರಷ್ಟು ಎತ್ತರವಿರುವ ಆ ಬೆಟ್ಟವನ್ನು ಬಳಸಿ, ಲಕ್ಕ ಬೆಟ್ಟದ ಪಕ್ಕದಲ್ಲೆ ಬಾರಸೆಯ ಕಡೆಗೆ ಗಾಡಿಯನ್ನು ದೌಡಾಯಿಸಿದ.
{{gap}}ಬಾರಸೆ ಮಠದ ಮಂಟಿಗಳನ್ನು ದಾಟಿ, ಆಯಿಚನ ಹಳ್ಳಿ, ರಾಮನಾಥ ತುಂಗಗಳು ಒಂದಾದಂತೆ ಮಲ್ಲಿಕಾರ್ಜುನ ಬೆಟ್ಟವೂ ದೂರು ಸರಿಯಿತು. ಸೂರ್ಯಾಸ್ತವಾಗಿ ಅಸವಾಳು ಸಮೀಪಿಸುತ್ತಿದ್ದಂತೆ, ಲಕ್ಕ ಗಾಡಿ ನಿಲ್ಲಿಸಿ, ಅದರ ಕೆಳಗಡೆ ಹಿಂದೆ ಮತ್ತು ಮುಂದೆ ತೂಗಿ ಹಾಕಿದ್ದ ಲಾಟೀಗಳನ್ನು ಹೊತ್ತಿಸಿದ್ದ.
{{gap}}“ಮಬ್ಬುಬೆಳಕು ಇನ್ನೂ ಇದೆ. ಈಗಲೆ ಯಾಕೆ ಲಾಟೀನು ಹಚ್ಚಿದೆಯೊ, ಲಕ್ಕ?” ಸಾವಿತ್ರಿ ಕೇಳಿದ್ದಳು
{{gap}}“ಅಸವಾಳು ಇನ್ನೇನು ಬಂದುಬುತ್ತದೆ. ಒಂದು ಅರ್ಧಗಂಟೆ ಪಯಣ. ಆ ತಾವೆ ಕಳ್ಳರ ಕಾಟ ಎಚ್ಚು, ಅದ್ರೆ ನಾನು ಚೆಂದಾಕಿ ಬೆಳುಕಿರಾವಾಗ್ಗೆ ಆ ಈಚಲುಗುತ್ತಿ ದಾಟಾವ ಅಂತ ಮಾಡ್ಕಂಡಿದ್ದದ್ದು. ಆದ್ರೆ ನೀವು ಕಜೆ ಆಡ್ಕಂಡು ವೊಂಡೊದ ತಡ ಮಾಡಿದಿರಿ, ವೋಗ್ಲಿ ಅಂದರೆ ಬೆಟ್ಟದಪುರ ತೋಪಿನಾಗೂವೆ ಮಂಟಾಡಿಕಂಡೇ ಕುಂತಿದ್ರೆ... ಉಂ, ಈಗೇನ ಮಾಡಕ್ಕಾದಾತು?- ದ್ಯಾವರ ಮೇಲೆ ಭಾರ ಆಕಾದು, ವೋಟೆಯ.” ಬೇಸರದಿಂದ ನುಡಿದು, ಎತ್ತುಗಳನ್ನು ಲಕ್ಕ ಉಚಾಯಿಸಿದ್ದ...
{{gap}}ಈಚಲುಗುತ್ತಿ, ಕಳ್ಳರು ಎಂದೊಡನೆಯೇ, ಎಲ್ಲರ ಬಾಯಿಗಳಿಗೂ ಬೀಗ ಬಿದ್ದಿತ್ತು. ಒಂಟಿಗಾಡಿಯ ಚಕ್ರಗಳು ಆ ನುರುಜುಗಲ್ಲಿನ ಹಾದಿಯಲ್ಲಿ ಉರುಳುವಾಗ ಎಬ್ಬಿಸುತ್ತಿದ್ದ ಗಡಲ್ ಗಡಕ್ ಶಬ್ದವನ್ನುಳಿದು ಗಾಡಿಯೊಳಗೆ ಮೃತ್ಯಮೌನ ಹೊರಗೆ ಹಕ್ಕಿಗಳು ಗುಂಪುಗುಂಪಾಗಿ ರಸ್ತೆಯ ಇಕ್ಕೆಲದ ಸಾಲುಮರಗಳ ತಮ್ಮ ತಮ್ಮ<noinclude></noinclude>
j55avt6w5b8acn8jf420h2jzu49bb88
ಪುಟ:ವೈಶಾಖ.pdf/೧೧೯
104
82048
316440
277441
2026-05-03T12:21:09Z
Shreelatha.Halemane
7642
/* Validated */
316440
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೦೩}}
ಗೂಡುಗಳಿಗೆ ಹಿಂದಿರುಗುತ್ತಿದ್ದವು. ಅಸವಾಳದ ಈಚಲುಗುತ್ತಿ ಸಮೀಪಿಸುತ್ತಿರುವಂತೆ ಜಾನಕಿ ಭಯದಿಂದಲೋ ಏನೋ ದೊಡ್ಡದಾಗಿ ಕೆಮ್ಮಿದ್ದಳು. ಸಾವಿತ್ರಿ ಗಾಬರಿಗೊಂಡು ಕಣ್ಣು ಅಗಲಿಸಿ ತನ್ನ ಬಾಯಿಗೆ ಬೆರಳಿಟ್ಟು, ಸದ್ದು ಮಾಡಕೂಡದೆನ್ನುವಂತೆ ಸೂಚಿಸುವ 'ಶ್' ಮಾಡಿದ್ದಳು. ಪರ್ವತಕ್ಕಿಗಳು ಒಂದರ ಹಿಂದೆ ಒಂದು ಸಾಲುಗಟ್ಟಿ ಕರ್ಕಶವಾಗಿ ಸದ್ದು ಮಾಡುತ್ತ ಗಾಡಿಯ ಮುಂದುಗಡೆಯ ಎತ್ತರದಲ್ಲಿ ಸಾಗುತ್ತಿದ್ದವು. ಇದ್ದಕ್ಕಿದ್ದಂತೆ ಗಾಡಿಯ ಕೆಳಗೆ ಇಷ್ಟು ಸಮಯವೂ ಮೌನವಾಗಿ ಬರುತ್ತಿದ್ದ ಬೊಡ್ಡ ಕೆಟ್ಟದಾಗಿ ಬಗಳತೊಡಗಿತ್ತು. ಪಕ್ಕದ ಸಾಲು ಮರವೊಂದರಲ್ಲಿ ಮರಗಿಳಿಗಳು ಚಿಲಿಪಿಲಿಗುಡುತ್ತಿದ್ದಂತೆಯೆ, ತಟ್ಟನೆ ಯಾರೊ ಒಬ್ಬಾತ ಈಚಲು ಗುತ್ತಿಯಿಂದ ನೆಗೆದು ಬಂದು ಗಾಡಿಯ ಮುಂದೆ ನಿಂತು, ಗಾಡಿಯ ಮೂಕಿಯನ್ನು ಹಿಡಿದು ನಿಲ್ಲಿಸಿದ. ಮತ್ತೊಬ್ಬ ಲಕ್ಕನ ಬಲಪಾರ್ಶ್ವಕ್ಕೆ, ನಿಂತು, “ಒಂದೇಡು ಚಿಟಕಿ ನಸ್ಯಕ್ವಡಪ್ಪ...” ಎಂದ. ಅಷ್ಟರಲ್ಲಿ ಇನ್ನಿಬ್ಬರು ಕಮಾನುಗಾಡಿಯ ಹಿಂದೆ ಬಂದು ನಿಂತಿದ್ದರು. ಗಾಡಿಯಲ್ಲಿ ಕುಳಿತ ನಾವೆಲ್ಲರೂ ಭಯಭ್ರಾಂತರಾದೆವು. ಸಾವಿತ್ರಿ ಅದದ್ದಾಯಿತು, ಒಡವೆಗಳನ್ನಾದರೂ ಉಳಿಸಿಕೊಳ್ಳುವ ಎಂಬ ಚಪಲದಿಂದ ಸರಸರನೆ ಕುತ್ತಿಗೆಯಿಂದ ಎರಡು ತೊಲ ಬಂಗಾರದ ಅವಲಕ್ಕೆ ಮಾದರಿಯ ಸರವನ್ನು ತೆಗೆದು, ಕಿವಿಗಳಿಂದ ವಜ್ರ ಓಲೆಗಳನ್ನು ಕಳಚಿ, ತಾನು ಕುಳತ ಮೆತ್ತೆಯ ಕೆಳಗೆ ಬಚ್ಚಿಟ್ಟಳು. ರುಕ್ಕಿಣಿ, ಕಳ್ಳರು ಏನು ಬೇಕಾದರೂ ಕೊಂಡೊಯ್ಯಲಿ, ನಮ್ಮ ಮಾನಹಾನಿ ಮಾಡದಿದ್ದರೆ ಸಾಕು ಎಂದುಕೊಳ್ಳುತ್ತಿದ್ದಳು. ಜಾನಕಿಯ ಪ್ರತಿಕ್ರಿಯೆ ವಿಚಿತ್ರವಾದುದಾಗಿತ್ತು. ಇಬ್ಬರು ದುಷ್ಟರು ತನ್ನ ಮೈಮೇಲೆ ಬಿದ್ದು ಘಾಸಿಗೊಳಿಸಿದ ಘಟನೆಯಿಂದ ಅವಳ ಮನಸ್ಸು ಇನ್ನೂ ಮುಕ್ತವಾಗಿರಲಿಲ್ಲ. ಅದಕ್ಕಿನ್ನ ಹೆಚ್ಚಿನ ದುರಂತ ಏನು ಸಂಭವಿಸೀತು, ಎನ್ನುವ ಒಂದು ರೀತಿಯ ವಿಷಣ್ಣಭಾವದ ಛಾಯೆ ಅವಳ ವದನವನ್ನು ಆವರಿಸಿದಂತಿತ್ತು. ಆಶ್ವತ್ಥ ಗಾಯತ್ರಿ ಜಪ ಮಾಡಲು ಶುರುಹಚ್ಚಿದ...
{{gap}}“ವಸಿ ತಡಕಪ್ಪ, ನಸ್ಯ ತಕ್ಕಟ್ಟೇನು...” ಎಂದವನೇ, ದೊಣ್ಣೆ ಹಿರಿದು, ಗಾಡಿಯ ಎಡಗೋಲು ಎತ್ತಿನ ಕಡೆಯಿಂದ ಕೆಳಕ್ಕೆ ಧುಮುಕಿ, ಲಕ್ಕ ಗಾಡಿಯ ಮುಂದೆ ಮೂಕಿ ಹಿಡಿದವನ ಮೇಲೆ ದೊಣ್ಣೆ ಬೀಸಿದ. ಹಟಾತ್ತನೆ ಎರಗಿದ ಆ ಬಿರುಸಿನ ಹೊಡೆತಕ್ಕೆ ತತ್ತರಿಸಿ ಆ ವ್ಯಕ್ತಿ ನೆಲಕ್ಕುರುಳಿದ. ತನ್ನ ಯಜಮಾನನ್ನು ಅನುಸರಿಸಿ ಗಾಡಿಯ ಕೆಳಗಿದ್ದ ಬೊಡ್ಡ, ಬಲಪಾರ್ಶ್ವದಲ್ಲಿ ನಿಂತವನ ಮೇಲೆ ನುಗ್ಗಿ ನೆಗೆದು ಅವನ ಬಲತೊಡೆಯನ್ನು ಕಚ್ಚಿದಾಗ ಆತನೂ ನೆಲಕ್ಕೆ ಕುಸಿದು ತನ್ನ ಕೈಯಲ್ಲಿದ್ದ ದೊಣ್ಣೆಯನ್ನು ನಾಯಿಯತ್ತ ಬೀಸುತ್ತಿದ್ದ. ಆದರೆ ಅತ್ತ ಇತ್ತ<noinclude></noinclude>
tr5hj5li7t9tke6rjlaw93nhpvm7ywd
ಪುಟ:ವೈಶಾಖ.pdf/೧೨೦
104
82049
316441
277442
2026-05-03T12:21:54Z
Shreelatha.Halemane
7642
/* Validated */
316441
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=೧೦೪|right=ವೈಶಾಖ}}
ನೆಗೆಯುತ್ತ ಬೊಡ್ಡ ಏಟಿಗೆ ಸಿಕ್ಕದೆ ತೊಪ್ಪಿಸಿಕೊಳ್ಳುತ್ತಿರುವಂತೆ, ಲಕ್ಕ ಮೊದಲು ತನ್ನಿಂದ ಏಟು ತಿಂದವನಿಗೆ ಮೇಲೆ ಏಳದಂತೆ ಇನ್ನೂ ಒಂದೆರಡು ಏಟು ಬಿಗಿದು, ನಾಯಿಯಿಂದ ಕಚ್ಚಿಸಿಕೊಂಡು ಕೆಳಗೆ ಬಿದ್ದವನ ಮೇಲೆ ಹರಿಹಾಯ್ದ, ದೊಣ್ಣೆಯಲ್ಲಿ ಬಾರಿಸಿ, ಒದ್ದು ಉರುಳಿಸಿದ. ಅಷ್ಟರಲ್ಲಿ ಗಾಡಿಯ ಹಿಂದುಗಡೆ ಬಂದು ನಿಂತ ಇಬ್ಬರಲ್ಲಿ ಒಬ್ಬಾತ ಅಶ್ವತ್ಥನ ಕೈಯಿಂದ ಬೆಳ್ಳಿಯ ನಶ್ಯದ ಡಬ್ಬಿಯನ್ನು ಕಸಿದಿದ್ದ. ಇನ್ನೊಬ್ಬ ಜಾನಕಿಯ ಕೊರಲಿನಿಂದ ಚಿನ್ನದ ಒಂದೆಳೆ ಸರವನ್ನು ಕಿತ್ತಿದ್ದ. ಮುಂದಿನವರಿಬ್ಬರೂ ಪೆಟ್ಟು ತಿಂದು ಕೆಳಗುರುಳಿದ್ದನ್ನು ಕಂಡು ಹಿಂದಿದ್ದ ಇವರಿಬ್ಬರೂ ಕೆರಳಿ, ಲಕ್ಕನ ಮೇಲೆ ನುಗ್ಗಿ ಆಕ್ರಮಣ ಮಾಡಿದರು. ಲಕ್ಕ ಬೊಡ್ಡ ಒಂದು ಕಡೆ, ಇವರಿಬ್ಬರೂ ಇನ್ನೊಂದು ಕಡೆ – ಹೀಗೆ ಹೋರಾಟ ನಡೆಯುತ್ತಿರುವಂತೆ, ಆ ಜಾಗದಲ್ಲಿ ನಡೆಯುತ್ತಿದ್ದ ಗದ್ದಲ ಎದಿರುಗಡೆಯಿಂದ ಅನತಿದೂರದಲ್ಲಿ ಬರುತ್ತಿದ್ದ ನಾಲ್ಕು ಗಾಡಿಗಳ ಜನರಿಗೆ ಕೇಳಿ ಅವರು, ಈಚಲುಗುತ್ತಿಯ ಸಮೀಪ ಕಳ್ಳರು ಯಾವುದೋ ಗಾಡಿಯ ಮೇಲೆ ಆಕ್ರಮಣ ಮಾಡಿರಬಹುದೆಂದು ಊಹಿಸಿ,
{{gap}}“ಬಂದೊ, ಬಂದೂ-ಹೆದರಬ್ಯಾಡಿ, ಹೆದರಬ್ಯಾಡಿ...” ಎಂದು ಜೋರಿನಿಂದ ಕೂಗಿದ್ದು ಕೇಳಿಸಿತು. ಆ ಕೂಗನ್ನು ಕೇಳಿ, ಕಳ್ಳರು ಅಲ್ಲಿಂದ ದೌಡು ಹೊಡೆದು ಈಚಲುಗುತ್ತಿಯ ಕತ್ತಲಲ್ಲಿ ಮರೆಯಾದರೆ.
{{gap}}ಎದಿರು ಗಾಡಿಗಳ ಕೆಲವು ಗಂಡಸರು ಕೆಳಗಿಳಿದು ಬಂದರು., ಲಕ್ಕನ ಕಾಲಿಗೆ, ಬೆನ್ನಿಗೆ ಪೆಟ್ಟು ಬಿದ್ದಿತು. ದೊಡ್ಡ ಮಾತ್ರ ಅತ್ತ ಇತ್ತ ನೆಗೆದು ಹೇಗೋ ಹೆಚ್ಚು ಜಖಂ ಆಗದೆ ಉಳಿದಿತ್ತು... ಎದಿರು ಗಾಡಿಯವರು ನಮ್ಮನ್ನುದ್ದೇಶಿಸಿ ಹೇಳಿದ್ದರು:
“ಇಷ್ಟು ಬೇಗ ಸಾಮಾನ್ಯವಾಗಿ ಕಳ್ಳರು ಬೀಳೋದು ಅಪರೂಪ. ಏನಿದ್ದರೂ ಒಂಬತ್ತು ಗಂಟೆ ಕಳೆದ ಮ್ಯಾಲೇ ಇಲ್ಲಿ ಅವಾಂತ, ಈ ಮುಚ್ಚಂಜೇಲಿ ನಿಮ್ಮ ಒಂಟಿಗಾಡಿ ನೋಡಿ ಧೈರ್ಯ ಮಾಡಿರೋಹಂಗೆ ಕಾಡ್ತಿದೆ. ಸದ್ಯಕ್ಕೆ, ದ್ಯಾವರು ನಿಮ್ಮ ಇಸ್ಪಕ್ಕೇ ಪಾರು ಮಾಡಿದ. ನಿಮ್ಮ ಪುಣ್ಯ ಚೆಂದಾಗಿತ್ತು. ಅವರು ಏನು ಮಾಡಕ್ಕೂ ಹೇಸದೇ ಇರೋ ಜನ!”
“ನೀವೆಲ್ಲಗೆ ಹೊರಟಿರೋದು?” -ಅಶ್ವತ್ಥ ಕೇಳಿದ್ದ.
“ಬೆಟ್ಟದಪುರಕ್ಕೆ” ಎಂದಿದ್ದರು.
ಲಕ್ಕ ಕುಂಟುತ್ತಲೆ ಗಾಡಿಯನ್ನು ಹತ್ತಿ ಕುಳಿತಿದ್ದ. ಅಶ್ವತ ಆ ಗಾಡಿಗಳ ಮುಂದಾಳುಗಳಿಗೆ<noinclude></noinclude>
ipodzfk5de739ulvtst2rlq9ggb02ov
ಪುಟ:ವೈಶಾಖ.pdf/೧೨೧
104
82050
316442
277443
2026-05-03T12:37:43Z
Shreelatha.Halemane
7642
/* Validated */
316442
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೦೫}}
{{gap}}“ದೇವರೇ ನಿಮ್ಮನ್ನು ಈ ಹೊತ್ತಿನಲ್ಲಿ ಇಲ್ಲಿಗೆ ಕರೆದು ತಂದ. ನೀವು ಬಂದ್ದರಿಂದ ಒಂದು ಗಂಡಾಂತರದಿಂದ ನಾವು ಪಾರಾದೆವು. ನಿಮಗೆ ನಾವು ಸರ್ವದಾ ಋಣಿಗಳು” ಎಂದು ಕೃತಜ್ಞತೆಯ ಮಾತುಗಳನ್ನಾಡಿದ್ದ.
{{gap}}“ಇನ್ನು ಮುಂದೆ ಹಾದಿ ಸುಗಮ. ನಿರಾತಂಕದಿಂದ ನೀವು ಮುಂದಿನ ಪಯಣ ಬೆಳುಸಬೌದು” ಎಂದು ಆಶ್ವಾಸನೆ ನೀಡಿ, ಅವರೆಲ್ಲರೂ ತಮ್ಮ ತಮ್ಮ ಗಾಡಿಗಳನ್ನೇರಿ ಬೆಟ್ಟದಪುರದತ್ತ ಸಾಗಿದರು... ನಮ್ಮ ಗಾಡಿಯ ಆ ಜಾಗವನ್ನು ಬಿಟ್ಟು ಕದಲಿದಂತೆ, ನಾವು ಸರಾಗವಾಗಿ ಉಸಿರಾಡುವಂತೆ ಆಯಿತು.
{{gap}}ದೊಡ್ಡ ಬೇಲಾಳಿಗೆ ಬರುವವರೆಗೂ ಇದೇ ಸುದ್ದಿ ಅವರೆಲ್ಲರ ಮಾತಿಗೆ ಗ್ರಾಸ ಒದಗಿಸಿತ್ತು. ಬೇಲಾಳು ಮುಟ್ಟಿದಂತೆ, ಅಶ್ವತ್ಥನಿಗೆ ಹೊಟ್ಟೆಯ ಕಡೆ ಗಮನ ಹರಿಯಿತು.
{{gap}}“ಅದೆಲ್ಲ ಸರಿಯೆ. ದೇವರು ಹೇಗೂ ಪಾರು ಮಾಡಿದನಲ್ಲ. ಆ ವಿಷಯ ಎಷ್ಟು ಸಮಯ ಮಾತಾಡಿದರೂ ಅಷ್ಟೆ, ಈಗ ನನಗೆ ವಿಪರೀತ ಹಸಿವು, ನೀನು ತಂದಿರುವ ರವೆಉಂಡೆ, ಕೋಡುಬಳೆಗಳನ್ನ ಹೊರಕ್ಕೆ ತೆಗೆಯೆ, ಸಾತು” ಎಂದು.
{{gap}}ಅವನ ಇಚ್ಛೆಯಂತೆ ಸಾವಿತ್ರಿ ರವೆ ಉಂಡೆ, ಕೋಡುಬಳೆಗಳ ಸಂತರ್ಪಣೆಯನ್ನು ಅವರಿಗೆಲ್ಲರಿಗೂ ನಡೆಸಿದಳು. ಅದರಲ್ಲಿ ಬಹುಭಾಗ ವಿನಿಯೋಗವಾದದ್ದು ಅಶ್ವತ್ಥನಿಗೆ!...
{{gap}}ಬೇಲಾಳನ್ನು ದಾಟಿ ಎತ್ತಿನಗಾಡಿಯು ಮುಂದುವರಿದಂತೆ, ಗಾಡಿಯ ಗಡಲ್ ಗಡಕ್ ಜೋಗುಳಕ್ಕೆ ರುಕ್ಕಿಣಿಗೆ ಮಂಪರ ಬಂದಂತಾಗಿ ಎಂದೋ ಮುಳುಗಿ ತಳ ಸೇರಿದ್ದ ಸಂಗತಿಗಳು ಮೇಲೆರಿ ಬರತೊಡಗಿದ್ದವು:
{{gap}}ತನ್ನ ಪತಿ ಗತಿಸಿ ಹದಿನೈದು ಹದಿನಾರು ದಿನಗಳಾಗಿರಬೇಕು. ದುಃಖದ ಆವೇಗದಲ್ಲಿ ತಾನೆಲ್ಲಾದರೂ ಪ್ರಾಣಹರಣ ಮಾಡಿಕೊಳ್ಳಬಹುದೆಂದು ಅಲ್ಲಿಯವರೆಗೆ ಹಗಲಿರುಳು ಎಚ್ಚರವಹಿಸಿದ್ದ ಮಾವಯ್ಯ ಮತ್ತು ಸುಶೀಲತ್ತೆ ಇಬ್ಬರೂ-ತಾನು ತೋರಿಕೆಗೆ ಶಾಂತಳಾಗಿ ಕಾಣುತ್ತಿದ್ದುದರಿಂದ, ಮೋಸಹೋಗಿದ್ದರು. ಆದರೆ ತನ್ನೆದೆಯೊಳಗೆ ಒಂದು ಅಗ್ನಿಕುಂಡವೆ ಉರಿಯುತ್ತಿತ್ತು... ಅವರು ಎಂತಹ ವ್ಯಕ್ತಿ! -ಲೋವರ್ ಸೆಕೆಂಡರಿವರೆಗೆ ಓದಿದ್ದ ತನ್ನಿಂದ ಕನ್ನಡ ಕಾವ್ಯಗಳನ್ನು ಓದಿಸಿ, ಅರ್ಥ ಹೇಳಿಕೊಟ್ಟು, ತನ್ನ ವಿದ್ಯಾಭ್ಯಾಸವನ್ನು ಹೆಚ್ಚಿಸಿದ್ದರು. ಜೊತೆಗೆ ಸಂಸ್ಕೃತ ಕಾವ್ಯನಾಟಕಗಳನ್ನು ಓದಿ ವಿವರಿಸಿ ತನ್ನ ಸಂಸ್ಕೃತಿಯನ್ನು ವರ್ಧಿಸಿದ್ದರು. ಇದು ಎಲ್ಲಕ್ಕೂ ಮಿಗಿಲಾಗಿ ಅವರ ಒಂದೊಂದು ನಡೆನುಡಿಯಲ್ಲೂ ರಸಿಕತೆ ತುಂಬಿರುತ್ತಿತ್ತು. ಅವರ ಸಂಗಡ ಕಳೆದ ಒಂದೊಂದು ಕ್ಷಣವೂ ಒಂದೊಂದು<noinclude></noinclude>
3idu5u2g4i1wx9v9rjxvx2fmchq08ny
316443
316442
2026-05-03T12:38:15Z
Shreelatha.Halemane
7642
316443
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೦೫}}
{{gap}}“ದೇವರೇ ನಿಮ್ಮನ್ನು ಈ ಹೊತ್ತಿನಲ್ಲಿ ಇಲ್ಲಿಗೆ ಕರೆದು ತಂದ. ನೀವು ಬಂದ್ದರಿಂದ ಒಂದು ಗಂಡಾಂತರದಿಂದ ನಾವು ಪಾರಾದೆವು. ನಿಮಗೆ ನಾವು ಸರ್ವದಾ ಋಣಿಗಳು” ಎಂದು ಕೃತಜ್ಞತೆಯ ಮಾತುಗಳನ್ನಾಡಿದ್ದ.
{{gap}}“ಇನ್ನು ಮುಂದೆ ಹಾದಿ ಸುಗಮ. ನಿರಾತಂಕದಿಂದ ನೀವು ಮುಂದಿನ ಪಯಣ ಬೆಳುಸಬೌದು” ಎಂದು ಆಶ್ವಾಸನೆ ನೀಡಿ, ಅವರೆಲ್ಲರೂ ತಮ್ಮ ತಮ್ಮ ಗಾಡಿಗಳನ್ನೇರಿ ಬೆಟ್ಟದಪುರದತ್ತ ಸಾಗಿದರು... ನಮ್ಮ ಗಾಡಿಯ ಆ ಜಾಗವನ್ನು ಬಿಟ್ಟು ಕದಲಿದಂತೆ, ನಾವು ಸರಾಗವಾಗಿ ಉಸಿರಾಡುವಂತೆ ಆಯಿತು.
{{gap}}ದೊಡ್ಡ ಬೇಲಾಳಿಗೆ ಬರುವವರೆಗೂ ಇದೇ ಸುದ್ದಿ ಅವರೆಲ್ಲರ ಮಾತಿಗೆ ಗ್ರಾಸ ಒದಗಿಸಿತ್ತು. ಬೇಲಾಳು ಮುಟ್ಟಿದಂತೆ, ಅಶ್ವತ್ಥನಿಗೆ ಹೊಟ್ಟೆಯ ಕಡೆ ಗಮನ ಹರಿಯಿತು.
{{gap}}“ಅದೆಲ್ಲ ಸರಿಯೆ. ದೇವರು ಹೇಗೂ ಪಾರು ಮಾಡಿದನಲ್ಲ. ಆ ವಿಷಯ ಎಷ್ಟು ಸಮಯ ಮಾತಾಡಿದರೂ ಅಷ್ಟೆ, ಈಗ ನನಗೆ ವಿಪರೀತ ಹಸಿವು, ನೀನು ತಂದಿರುವ ರವೆಉಂಡೆ, ಕೋಡುಬಳೆಗಳನ್ನ ಹೊರಕ್ಕೆ ತೆಗೆಯೆ, ಸಾತು” ಎಂದು.
{{gap}}ಅವನ ಇಚ್ಛೆಯಂತೆ ಸಾವಿತ್ರಿ ರವೆ ಉಂಡೆ, ಕೋಡುಬಳೆಗಳ ಸಂತರ್ಪಣೆಯನ್ನು ಅವರಿಗೆಲ್ಲರಿಗೂ ನಡೆಸಿದಳು. ಅದರಲ್ಲಿ ಬಹುಭಾಗ ವಿನಿಯೋಗವಾದದ್ದು ಅಶ್ವತ್ಥನಿಗೆ!...
{{gap}}ಬೇಲಾಳನ್ನು ದಾಟಿ ಎತ್ತಿನಗಾಡಿಯು ಮುಂದುವರಿದಂತೆ, ಗಾಡಿಯ ಗಡಲ್ ಗಡಕ್ ಜೋಗುಳಕ್ಕೆ ರುಕ್ಕಿಣಿಗೆ ಮಂಪರ ಬಂದಂತಾಗಿ ಎಂದೋ ಮುಳುಗಿ ತಳ ಸೇರಿದ್ದ ಸಂಗತಿಗಳು ಮೇಲೆರಿ ಬರತೊಡಗಿದ್ದವು:
{{gap}}ತನ್ನ ಪತಿ ಗತಿಸಿ ಹದಿನೈದು ಹದಿನಾರು ದಿನಗಳಾಗಿರಬೇಕು. ದುಃಖದ ಆವೇಗದಲ್ಲಿ ತಾನೆಲ್ಲಾದರೂ ಪ್ರಾಣಹರಣ ಮಾಡಿಕೊಳ್ಳಬಹುದೆಂದು ಅಲ್ಲಿಯವರೆಗೆ ಹಗಲಿರುಳು ಎಚ್ಚರವಹಿಸಿದ್ದ ಮಾವಯ್ಯ ಮತ್ತು ಸುಶೀಲತ್ತೆ ಇಬ್ಬರೂ-ತಾನು ತೋರಿಕೆಗೆ ಶಾಂತಳಾಗಿ ಕಾಣುತ್ತಿದ್ದುದರಿಂದ, ಮೋಸಹೋಗಿದ್ದರು. ಆದರೆ ತನ್ನೆದೆಯೊಳಗೆ ಒಂದು ಅಗ್ನಿಕುಂಡವೆ ಉರಿಯುತ್ತಿತ್ತು... ಅವರು ಎಂತಹ ವ್ಯಕ್ತಿ! -ಲೋವರ್ ಸೆಕೆಂಡರಿವರೆಗೆ ಓದಿದ್ದ ತನ್ನಿಂದ ಕನ್ನಡ ಕಾವ್ಯಗಳನ್ನು ಓದಿಸಿ, ಅರ್ಥ ಹೇಳಿಕೊಟ್ಟು, ತನ್ನ ವಿದ್ಯಾಭ್ಯಾಸವನ್ನು ಹೆಚ್ಚಿಸಿದ್ದರು. ಜೊತೆಗೆ ಸಂಸ್ಕೃತ ಕಾವ್ಯನಾಟಕಗಳನ್ನು ಓದಿ ವಿವರಿಸಿ ತನ್ನ ಸಂಸ್ಕೃತಿಯನ್ನು ವರ್ಧಿಸಿದ್ದರು. ಇದು ಎಲ್ಲಕ್ಕೂ ಮಿಗಿಲಾಗಿ ಅವರ ಒಂದೊಂದು ನಡೆನುಡಿಯಲ್ಲೂ ರಸಿಕತೆ ತುಂಬಿರುತ್ತಿತ್ತು. ಅವರ ಸಂಗಡ ಕಳೆದ ಒಂದೊಂದು ಕ್ಷಣವೂ ಒಂದೊಂದು<noinclude></noinclude>
14pfklofp9lx4s9fawbx10n5e6xxusu
ಪುಟ:ವೈಶಾಖ.pdf/೧೨೨
104
82051
316444
277444
2026-05-03T12:39:40Z
Shreelatha.Halemane
7642
/* Validated */
316444
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=೧೦೬|right=ವೈಶಾಖ}}
ರಸನಿಮಿಷವೇ ಆಗಿರುತ್ತಿತ್ತು. ಅಂಥ ಮಹಾನುಭಾವವನನ್ನು ಕಳೆದುಕೊಂಡು ತಾನಾದರೂ ಯಾಕೆ ಬದುಕಿರಬೇಕು?- ತಾನೋಬ್ಬಳೇ ಏಕಾಂತದಲ್ಲಿರುವಾಗ ತಟ್ಟನೆ ಮುಖಾಮುಖಿಯಾಗಿ ಎದಿರು ನಿಲ್ಲುತ್ತಿದ್ದ ಪ್ರಶ್ನೆಯಿದು... ಸದಾ ಬಾಧಿಸುತ್ತಿದ್ದ ಈ ಪ್ರಶ್ನೆ ಒಂದು ರಾತ್ರಿ ಅವಳಿಂದ ಸ್ಪಷ್ಟ ಉತ್ತರವನ್ನೇ ಬೇಡಿತ್ತು...
{{gap}}ರುಕ್ಕಿಣಿಯು ಮೆಲ್ಲನೆ ಮೇಲೆದ್ದಿದ್ದಳು. ಪಕ್ಕದಲ್ಲಿ ಮಲಗಿದ್ದ ಸರಸಿಯನ್ನೊಮ್ಮೆ ತಾಯ್ತನದ ಕಂಬನಿದುಂಬಿ ದೃಷ್ಟಿಸಿದಳು. ತನ್ನನ್ನು ತನ್ನ ಸ್ವಂತ ತಾಯಿಗಿಂತಲೂ ಅತಿಶಯವಾಗಿ ಹಚ್ಚಿಕೊಂಡಿರುವ ಈ ಬಾಲೆಯನ್ನು ಬಿಟ್ಟು ಹೋಗುವುದಾದರೂ ಹೇಗೆ?- ಎಂದು ಪರಿತಪಿಸಿದಳು. ಆದರೆ ಈ ಮೋಹವನ್ನು ಕಡಿದುಕೊಳ್ಳದಿದ್ದಲ್ಲಿ, ಕುಟ್ಟೆಹುಳುವಾಗಿ ಕೊಪರೆಯುವ ಭರಿಸಲಾಗದ ಈ ಚಿಂತೆಯಿಂದ ತನಗೆ ಮುಕ್ತಿಯುಂಟೆ?...
{{gap}}ಕ್ಷಣಕಾಲ ಅಂತಃಕರಣ ಹೊಯ್ದಾಡಿತು. ಕೊನೆಗೊಮ್ಮೆ ಮನಸ್ಸು ಕಲ್ಲುಮಾಡಿ ಹೇಗೋ ಆ ಕೋಣೆಯಿಂದ ಹೊರನಡೆದಿದ್ದಳು. ತಲೆಬಾಗಿಲು ತೆರೆಯುವಾಗ ತಾನೆಷ್ಟು ಆಸ್ಥೆ ವಹಿಸಿದ್ದರೂ ಹೊನ್ನೆಮರದ ದಪ್ಪನೆಯ ಹಳೆಯದಾದ ಬಾಗಿಲು ಕಿರ್್ರ ಅನ್ನದೆ ಇರಲಿಲ್ಲ. ಆ ಗಳಿಗೆಯಲ್ಲಿ ಅವಳಿಗೆ ಅವಳ ಹೃದಯದ ಬಡಿತವೇ ನಿಂತಂತಾಗಿತ್ತು!- ಪುಣ್ಯಕ್ಕೆ ಆ ಶಬ್ದದಿಂದ ಮನೆಯವಯ್ಯಾರೂ ಎಚ್ಚರಗೊಳ್ಳಲಿಲ್ಲ....
{{gap}}ಹೊಸಿಲು ದಾಟಿದ್ದಳು... ಏನೋ ಕಳವಳ... ಮಾವಯ್ಯ, ಸುಶೀಲತೆ ಇಬ್ಬರೂ ತನ್ನ ಬೆನ್ನು ಹಿಂದೆಯೇ ತಡೆಯಲು ಬರುತ್ತಿರುವ ಹಾಗೆ... ಸರಸಿ ತನ್ನ ಪುಟ್ಟ ಕೈಗಳೆರಡನ್ನೂ ಬಾಚಿ ಅಡ್ಡನಿಂತು, ತಾನು ಮುಂದೆ ಅಡಿಯಿಡದಂತೆ ತಡೆಯುತ್ತಿರುವ ಹಾಗೆ...
{{gap}}ನಿದ್ರೆಯಲ್ಲಿ ನಡೆಯುವವಳಂತೆ ಮನೆಯ ಮುಂದಿನ ಮೆಟ್ಟಿಲುಗಳನ್ನು ಒಂದೊಂದಾಗಿ ಇಳಿದಿದ್ದಳು. ಮೆಟ್ಟಿಲುಗಳಿಗೂ ಕತ್ತಲು ಮೆತ್ತಿದಂತಿತ್ತು. ಜಾಗರೂಕತೆಯಿಂದ ಮೆಟ್ಟಿಲಿಳಿದು ಕತ್ತಲು ಹಾಸಿದ ಬೀದಿಗೆ ಕಾಲಿಟ್ಟಳು.
{{gap}}ಆಚೆಮನೆಯ ಬಾಣಂತಿಕೋಣೆಯ ದೀಪ ಹೊರಗಿನ ಕತ್ತಳನ್ನು ಕೆಣಕಲಾರದೆ ಒಳಗೇ ಅಡಗಿ ಕುಳಿತಿತ್ತು...
{{gap}}ನಿಂತಳು. ಯಾರಾದರೂ ಈ ಸರಿಹೊತ್ತಿನಲ್ಲಿ ಎದ್ದಿರಬಹುದೆ?... ತರ್ಕಿಸಿದಳು... ಇಲ್ಲ, ಯಾರು ಕಾಣುತ್ತಿಲ್ಲ. ದೂರದ ಮನೆಯಲ್ಲಿ ಯಾವುದೊ ಹಸುಕಂದ ಅಳುವ ಸದ್ದ! ತಾಯಿ ಸನ್ಯಕೊಡುತ್ತಿರಬಹುದು.... ಈಗ ಆ ಸದ್ದೂ ನಿಂತದೆ... ಊರು ಮಲಗಿದಂತೆ, ಶಬ್ದವೂ ನಿದ್ದೆಯಲ್ಲಿ ಮುಳುಗಿದಂತಿತ್ತು... ಬಾವಿ ಇರುವುದು ತಮ್ಮ ಮನೆಯಿಂದ ನಾಲ್ಕು ಮನೆಯ ಆಚೆಗೆ, ರುಕ್ಕಿಣಿ<noinclude></noinclude>
gb5gta9itn4p7k824g8eovt5zizvfpl
ಪುಟ:ವೈಶಾಖ.pdf/೧೨೩
104
82052
316445
277446
2026-05-03T12:41:15Z
Shreelatha.Halemane
7642
/* Validated */
316445
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೦೭}}
{{gap}}ಅಂದಾಜಿನಲ್ಲಿ ಹೆಜ್ಜೆಯಿಡುತ್ತಿದ್ದಳು.....
{{gap}}ಏನದು ಸದ್ದು?- ಅತಿ ದೂರದಿಂದೇನಲ್ಲ !.... ನಮ್ಮ ಕೇರಿಯಿಂದ ಕೊಂಚ ಆಚೆಗಿರಬೇಕು... ಈಗ ಸಸ್ಪವಾಗುತ್ತಿದೆ- ಇದು ನಾಯಿ ಬೊಗಳುವ ಸದ್ದೆ!... ಮನಃ ನಿಂತಳು, ನಿಂತು ಕಿವಿಗೊಟ್ಟಳು-ಸಂಶಯವೆ ಬೇಡ, ಇದು ಲಕ್ಕನ ನಾಯಿ ಬೊಡ್ಡನೆ!... ಹಾಗಾದರೆ ಅದರ ಹಿಂದೆ ಲಕ್ಕೆ ಬರುತ್ತಿರಬೇಕು..... ಅರ್ಥವಾಯಿತು-ಅವನ ದೊಡ್ಡಪ್ಪ ಕುಂದೂರಯ್ಯ ತಾನೆ ಊರಿನ ಕುಳವಾಡಿ. ಅವನ ಒಬ್ಬನೇ ಮಗ ಪುಟ್ಟಾರಿಗೆ ಈ ಕುಳವಾಡಿ ಕೆಲಸದಲ್ಲಿ ಆಸಕ್ತಿಯೇ ಇರಲಿಲ್ಲ. ಅನೇಕ ವೇಳೆ ಕುಂದೂರಯ್ಯನಿಗೆ ಹುಶಾರು ತಪ್ಪಿದರೆ, ಅಥವಾ ಅಸಂದರ್ಭ ಆದರೆ, ಆ ಕೆಲಸ ಲಕ್ಕನಿಗೇ ಗಂಟು ಬೀಳುತ್ತಿದ್ದುದು ತನಗೆ ತಿಳಿದಿಲ್ಲವೆ?...
{{gap}}ಹಾಗಾದರೆ ಇದು ಲಕ್ಕನೆ!- ಸಂದೇಹವೇ ಇಲ್ಲ.... ಅಯ್ಯೋ, ಲಕ್ಕ ಬಂದುಬಿಟ್ಟರೆ?- ಆಗ ತನ್ನ ನಿರ್ಧಾರಕ್ಕೆ ಅವನು ಅಡ್ಡಿ ಮಾಡುವುದಂತೂ ಶತಸಿದ್ದ.... ಇನ್ನು ತಡಮಾಡಬಾರದು....
{{gap}}ನಡಿಗೆಯನ್ನು ತೂರೆಗೊಳಿಸಿದಳು. ಬ್ರಾಹ್ಮಣರ ಕೇರಿಯ ತಿರುವಿನಲ್ಲಿ ಬೆಳಕು ಚೆಲ್ಲಿ, ಆ ಬೆಳಿನಲ್ಲಿ ಬೊಡ್ಡನ ಆಕೃತಿಯು ಸ್ಪಷ್ಟವಾಗತೊಡಗಿತು. ಹಿಂದೆಮುಂದಾಡುವ ಲಾಟೀನಿನ ಬೆಳಕು ನಮ್ಮ ಬೀದಿಗೆ ತಿರುಗಿ, ತನ್ನತ್ತಲೆ ಹರಿದು ಬರುತ್ತಿರುವಂತೆ ಕಂಡಿತು. ಆ ಬೆಳಕಿನ ಹಿಂದೆ ನಿಸ್ಸಂಶವಾಗಿ ಲಕ್ಕ ಇದ್ದಿರಬೇಕು.... ಮುಂದೇನು ಗತಿ? ಎಂದು ಚಿತ್ತಕೋಭೆಗೊಳಗಾಯಿತು...
{{gap}}ನಡಿಗೆ ಓಟಕ್ಕಿಟ್ಟಿತು... ಬೊಡ್ಡ ಬೊಗಳಲು ಶುರು ಹೆಚ್ಚಿತು. ಲಕ್ಕನಿಗೆ ಸಂದೇಹವಾಗಿರಲೇಬೇಕು. “ಯಾರು-ಯಾರದು?” ಕೂಗುತ್ತ, ಅವನೂ ಓಡುತ್ತಲೆ ಬಂದ...
{{gap}}ತಾನೂ ಓಡಿದ್ದಳು. ಲಕ್ಕನಿಗಿನ್ನ ಮುಂದೆ ಬಂದ ಬೊಡ್ಡ ಇನ್ನೇನು ತನ್ನನ್ನು ಮುಟ್ಟಬೇಕು ಎನ್ನುವಷ್ಟರಲ್ಲಿ ತನಗೆ ಬಾವಿ ಸಿಕ್ಕಿತ್ತು. ತಾನು ಬಾವಿಕಟ್ಟೆಯನ್ನೇರಿ ನಿಂತಂತೆ, ಲಕ್ಕನೂ ಓಡಿಬರುತ್ತ, ತನ್ನನ್ನು ಗುರುತಿಸಿ “ಓ, ರುಕ್ಕಿಣವೆ?... ನೀವು... ಇದ್ಯಾಕೆ?... ಬ್ಯಾಡಿ... ಬ್ಯಾಡಿ” ಕೂಗುತ್ತಲೇ ಇದ್ದ. ಅವನ ಧ್ವನಿ ಸಮೀಪವಾಗುತ್ತಿದ್ದದಷ್ಟೆ ತನಗೆ ನೆನಪು. ತಾನು ಬಾವಿಯೊಳಕ್ಕೆ ಹರಿ ಬಿಟ್ಟಿದ್ದಳು...
{{gap}}ಮುಂದೆ ನಡೆದುದ್ದನ್ನು ಲಕ್ಕನೇ ತನಗೆ ವಿವರಿಸಿದ್ದ:
{{gap}}ನಾಯಿ ಬೊಗಳಿದಾಗ ಮೊದಮೊದಲು ಯಾರೋ ಕಳ್ಳ ಊರಿನಲ್ಲಿ ಠಳಾಯಿಸುತ್ತಿರಬೇಕು. ಅನ್ನಿಸಿತಂತೆ. ಹತ್ತಿರ ಬಂದಂತೆ ಸೀರೆಯುಟ್ಟ ಹೆಂಗಸಿನ<noinclude></noinclude>
8k8y32npajvrga78zwt0w1j9ocerzep
ಪುಟ:ವೈಶಾಖ.pdf/೧೨೪
104
82053
316446
277447
2026-05-03T12:41:47Z
Shreelatha.Halemane
7642
/* Validated */
316446
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=೧೦೮|right=ವೈಶಾಖ}}
ರೂಪ ಅಸ್ಪಷ್ಟವಾಗಿ ಕಾಣಿಸಿತಂತೆ. ಬಾವಿಕಟ್ಟೆಯನ್ನು ಸಮೀಪಿಸಿದ ಹಾಗೆ ಕಟ್ಟೆಯ ಮೇಲೆ ನಿಂತಿದ್ದ ಹೆಂಗಸು ತಾನೆ ಎಂದು ಗುರುತಿಸಿ ಕೂಗುವಷ್ಟರಲ್ಲಿ ತಾನು ನೀರಿಗೆ ಧುಮುಕಿದ್ದೆನಂತೆ!...
{{gap}}ತಕ್ಷಣ ಲಕ್ಕ ಹುಯಿಲೆಬ್ಬಿಸಿದಾಗ ಮೊದಲು ಓಡಿಬಂದವರು ಬಾವಿಗೆ ಸಮೀಪದ ಮನೆಯವರು. ಅನಂತರ ಅಕ್ಕಪಕ್ಕದ ಮನೆಯವರು ಕೂಡಿಕೊಂಡಿರಬೇಕು. ಮಾವಯ್ಯ ಯಾವಾಗ ಬಂದರೋ ಅವನಿಗೆ ತಿಳಿಯದು. ಮೊದಲು ಬಂದ ಮನೆಯವರೇ ಬಾವಿಯ ಹಗ್ಗವನ್ನು ತಂದಿತ್ತು ಲಕ್ಕನನ್ನು ಬಾವಿಯೊಳಗೆ ಇಳಿಸಿದವರು. ಬೆಳಕಿಗಾಗಿ ಸ್ವಲ್ಪಮೇಲುಗಡೆಗೆ ಕಟ್ಟಿದ ಲಾಟೀನಿನೊಡನೆ ಹಗ್ಗ ಹಿಡಿದು ಲಕ್ಕ ಬಾವಿಗಿಳಿಯುತ್ತಿರುವಂತೆ, ತಾನು ನೀರನಿಲ್ಲಿ ಮುಳುಗಿ ಸತ್ತಿರಬೇಕೆಂಬ ಶಂಕೆಯೇ ಅವನನ್ನು ಬಾಧಿಸುತ್ತಿತ್ತಂತೆ!- ಮೇಲೆ ಬಾವಿಯ ತುದಿಗೆ ಜಮಾಯಿಸಿದ್ದ ಜನಕ್ಕೂ ಅದೇ ಭಾವನೆ ಇದ್ದಿರಬೇಕು... ಆದರೆ ನೀರಿಗೆ ನೇರವಾಗಿ ಬಿದ್ದಿದ್ದೆ. ಎರಡು ಸಲ ನೀರಿನಲ್ಲಿ ಮುಳುಗಿ ಮೇಲೇಳುವಾಗ, ಅತ್ತ ಇತ್ತ ಬಡಿಯುವ ಕೈಗೆ ನೀರಿನ ಅಂಚಿಗೆ ಒತ್ತಿದಂತಿದ್ದ ಚಾಚುಗಲ್ಲೊಂದು ಸಿಕ್ಕಿತ್ತು. ಅದನ್ನು ಭದ್ರವಾಗಿ ಹಿಡಿದು ತಾನು ನೀರಿನಲ್ಲಿ ಮುಳುಗಿ ತೇಲುತ್ತಿದ್ದೆ...
{{gap}}ತಾನು ಸಾಯಬೇಕೆಂದು ನೀರಿಗೆ ಬಿದ್ದವಳು. ಈಗ ನೆನೆದರೆ ಅಶ್ಚದ್ಯವಾಗುತ್ತದೆ. ಆ ಗಳಿಗೆಯಲ್ಲಿ, ಬೇರೆ ಯಾವುದರ ಪರಿವೆಯೂ ಇಲ್ಲದೆ, ಹೇಗಾದರೂ ಸರಿಯೇ ಜೀವವನ್ನು ಉಳಿಸಿಕೊಳ್ಳಬೇಕು ಎಂಬುದೊಂದೇ ಉಗ್ರವಾಗಿ ತನ್ನೊಳಗೆ ತುಡಿಯುತ್ತಿದ್ದ ಬಯಕೆ!... ಆಗ ತಾನು ಅಸ್ಪುಟವಾಗಿ ಚೀರಿರಬೇಕು. ತನ್ನ ಚೀತ್ಕಾರ ಬಾವಿಯೊಳಗೆ ಅರ್ಧಕ್ಕಿಂತ ಕೆಳಗೆ ಇಳಿದಿದ್ದಾಗಲೆ ಲಕ್ಕನಿಗೆ ಕೇಳಿಸಿ, ತನಗಿನ್ನೂ ಜೀವ ಹೋಗಿಲ್ಲ ಎಂದು ಅವನಿಗೆ ಮನವರಿಕೆಯಾಗಿತ್ತಂತೆ!...
{{gap}}ಅವನು ತಳ ಮುಟ್ಟಿದಾಗ, ಆಗಲೆ ಭುಜಮಟ್ಟ ಮುಳುಗಿ ಚಾಚುಗಲ್ಲಿನಿಂದ ಇನ್ನೇನು ಹಿಡಿತ ಕಳೆದುಕೊಳ್ಳುವುದರಲ್ಲಿದ್ದ ತನ್ನನ್ನು ತಬ್ಬಿ ಹಿಡಿದು, ಲಕ್ಕ ನೀರಿನಲ್ಲಿ ಈಜುತ್ತಲೆ ಇದ್ದ. ಅನಂತರ ಹಗ್ಗ ಕಳಚಿ, “ರುಕ್ಕಮ್ಮಾರು ಬದುಕಿ-ಬದುಕಿ!” ಎಂತಲೂ ಕೂಗಿದ್ದ... ಬಾವಿಯ ಮೇಲುಗಡೆ ಹತ್ತಾರು ಲಾಟೀನುಗಳು ಕನಸಿನ ಲೋಕದವೋ ಎಂಬಂತೆ ಹೊಳೆಯುತ್ತಿದ್ದವು. ಅಷ್ಟರಲ್ಲಿ ಲಕ್ಕನನ್ನು ಇಳಿಸಿದ್ದ ಹಗ್ಗವನ್ನು ಎಳೆದುಕೊಂಡಿರಬೇಕು. ತುಸು ವೇಳೆಯಾದ ಬಳಿಕ, “ಬಿದಿರುತೊಟ್ಟಿಲಿಗೆ ಹಗ್ಗ ಕಟ್ಟಾ ಇದ್ದೀವಿ, ಇನ್ನೇನು ಬಿಡ್ತೀವಿ”- ಅನೇಕ ಧ್ವನಿಗಳ ಕೂಗು, ಆ ಕೂಗು<noinclude></noinclude>
d850781jl52u8n1qakyhbhl45y5r3r0
ಪುಟ:ವೈಶಾಖ.pdf/೧೨೫
104
82054
316447
277448
2026-05-03T12:42:36Z
Shreelatha.Halemane
7642
/* Validated */
316447
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೦೯}}
ಮಂಪರದಲ್ಲಿದ್ದ ತನಗೆ ದೇವತೆಗಳು ಆ ರೂಪದಲ್ಲಿ ಅಭಯವಿಯುತ್ತಿದ್ದಂತೆ ಭಾಸವಾಗಿತ್ತು. ಇನ್ನೂ ಸ್ವಲ್ಪ ಸಮಯ ಕಳೆಯುವುದರಲ್ಲಿ ಲಾಟೀನುಸಹಿತ ಹಗ್ಗ ಕಟ್ಟಿದ್ದ ಬಿದಿರುಗೊಟ್ಟಿಲನ್ನು ಮೇಲಿನಿಂದ ಇಳಿಬಿಟ್ಟಿದ್ದರು. ಲಕ್ಕ ಬಲು ಪ್ರಯಾಸದಿಂದ ತನ್ನನ್ನು ಬಿದಿರುತೊಟ್ಟಿಲಿನೊಳಗೆ ಸೇರಿಸಿದ್ದ. ಮೇಲಿನವರು ತನ್ನನ್ನು ಹೊತ್ತ ಬಿದಿರುತೊಟ್ಟಿಲನ್ನು ಮೇಲೆ ಎಳೆದುಕೊಳ್ಳುತ್ತಿರುವಂತೆ ತನ್ನ ಪ್ರಜ್ಞೆ ಮಂದವಾಗುತ್ತ, ಬಾವಿಯ ಮೇಲೆ ಕಪ್ಪು ಮಸಿಯ ಗುಂಡುಹಲಗೆಯ ಹಾಗೆ ಕಾಣುವ ಆಕಾಶ, ಅದರ ಕೆಳಗೆ ಬಾವಿಯ ಸುತ್ತಲೂ ಬೆಳಕು ಹಿಡಿದು ನಿಂತ ಜನ-ಇವೆಲ್ಲ ಕ್ರಮಕ್ರಮವಾಗಿ ಕರಗಿ ಇಲ್ಲವಾದವು... ಮುಂದೆ ನಡೆದುದೇನೂ ನನಗೆ ತಿಳಿಯದು. ಈ ವಿಚಾರವನ್ನೂ ಸಹ ಮುಂದೊಂದು ದಿನ ಲಕ್ಕನ ಕೊಟ್ಟಿಗೆಯಲ್ಲಿ “ಹಿಂಗಾಯ್ತು ಅಮಾರೆ” ಎಂದು ಕರೆ ಮಾಡಿ ಹೇಳಿದ್ದ.
{{gap}}ಬಿದಿರುತೊಟ್ಟಿಲಿನಿಂದ ತನ್ನನ್ನ ಇಳಿಸಿದ ಬಳಿಕ ಲಕ್ಕನಿಗೂ ಮನಃ ಹಗ್ಗ ಬಿಟ್ಟಿದ್ದರಂತೆ. ಹಗ್ಗದ ಆಶ್ರಯದಲ್ಲಿ ಅವನು ಮೇಲೆ ಬಂದಾಗ, ಮಾವನವರು ತನ್ನುನ್ನು ಮಕಾಡೆ ಮಲಗಿಸಿ ದೇಹವನ್ನು ಎರಡೂ ಕೈಗಳಿಂದ ಬಲವಾಗಿ ಅದುಮಿ ತಾನು ಬಾವಿಯಲ್ಲಿ ಮುಳುಗಿದಾಗ ಕುಡಿದಿದ್ದ ನೀರನ್ನು ಹೊರಕ್ಕೆ ಕಡೆಸುತ್ತಿದ್ದರಂತೆ...
{{gap}}ಇದೇ ಚಿಂತನೆಯಲ್ಲಿ ಮುಳುಗಿದ್ದ ರುಕ್ಕಿಣಿಯನ್ನು “ಕಂಪಲಾಪುರ ಬಂತು” ಎಂಬ ಅಶ್ವತ್ಥನ ಮಾತು ಎಚ್ಚರಗೊಳಿಸಿತ್ತು. ಗಾಡಿ ಕಂಪಲಾಪುರವನ್ನು ದಾಟಿ ದರುಮನಳ್ಳಿಯನ್ನು ಸೇರುವ ವೇಳೆಗೆ ಕೋಳಿಗಳು ಕೂಗಿ ಅವರನ್ನು ಎಚ್ಚರಗೊಳಿಸುತ್ತಿದ್ದವು. ಮನೆಯಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಂದ ನೆರೆದ ನೆಂಟರು ಆಗಲೆ ಎದ್ದಿದ್ದು, ಹಟ್ಟಿ ಗಿಜಗುಡುತ್ತ ಸಾವಿನ ಮನೆ ಎಂಬ ಅಂಶವನ್ನು ಮರೆಸುವಂತಿತ್ತು. ಪ್ರೀತಿಯ ತಂಗಿಯನ್ನು ಕಳೆದಕೊಂಡವರಂತೆ ಶಾಸ್ತ್ರಿಗಳು ತಮ್ಮ ಎಂದಿನ ಲವಲವಿಕೆಯನ್ನೂ ಚಿತ್ತಸ್ಟ್ರವನ್ನೂ ಕಳೆದುಕೊಂಡವರಂತೆ ತೋರುತ್ತಿದ್ದರು. ಮಗ ತೀರಿಹೋದಾಗ ಇಂಥದೇ ಸ್ಥಿತಿಯಲ್ಲಿ ಶಾಸ್ತ್ರಿಗಳು ಪರಿತಾಪಪಡುತ್ತಿದ್ದುದನ್ನು ರುಕ್ಕಿಣಿ ಹಿಂದೆ ಕಂಡಿದ್ದಳು. ಮಂಕುಹಿಡಿದವರಂತೆ ಕುಳಿತ ಅವರನ್ನು ನೋಡಿದಾಗ ಅಯ್ಯೋ ಎನ್ನಿಸದಿರಲಿಲ್ಲ...
{{gap}}ಅಸ್ಥಿಸಂಚಯನವಾಗಿ, ವೈಕುಂಠ ಮುಗಿಯುವುದನ್ನೆ ಕಾದಿದ್ದ ನೆಂಟರು ಇಷ್ಟರು ತಮ್ಮ ತಮ್ಮ ಊರುಗಳಿಗೆ ಹೊರಟು ನಿಂತರು. ಅಶ್ವತ್ಥ, ಸಾವಿತ್ರಿ ಮತ್ತು ಜಾನಕಿಯನ್ನು ರುದ್ರಪಟ್ಟಣಕ್ಕೆ ಹಿಂದಿರುಗಿಸುವ ಕಾರ್ಯಭಾರವು ಲಕ್ಕನ ಪಾಲಿಗೆ ಬಿದ್ದಿತ್ತು. ರುಕ್ಕಿಣಿಯನ್ನೂ ಇನ್ನೂ ಎರಡು ಮೂರು ತಿಂಗಳುಗಳವರೆಗಾದರೂ<noinclude></noinclude>
8ty7ig2s0f1hforaskrmkgicz9hh029
ಪುಟ:ವೈಶಾಖ.pdf/೧೨೬
104
82055
316448
277449
2026-05-03T12:44:19Z
Shreelatha.Halemane
7642
/* Validated */
316448
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=೧೧೦|right=ವೈಶಾಖ}}
ಕಳಿಸಿಕೊಡಬೇಕೆಂದು ಸಾವಿತ್ರಿ ಶಾಸ್ತಿಗಳಿಗೆ ನಿವೇದಿಸಿದಳು. ಅವರು ಒಪ್ಪಲಿಲ್ಲ. ಸರಸಿಯ ಕಡೆ ಕೈಮಾಡಿ,
{{gap}}“ಇಲ್ಲಿ, ಇವಳನ್ನು ಯಾರು ನೋಡಬೇಕು?” -ಪ್ರಶ್ನೆ ಹಾಕಿದರು.
{{gap}}“ಇವಳನ್ನೂ ಕಳಿಸಿ, ತಾಯಿಯನ್ನು ಕಳೆದುಕೊಂಡಿರುವ ಹುಡುಗಿ, ಸ್ಥಳ ಬದಲಾವಣೆಯಿಂದ ಅವಳಿಗೂ ದುಃಖ ಶಮನವಾಗಲು ಅನುಕೂಲವಾಗುತ್ತೆ.” -ಸಾವಿತ್ರಿ ವಾದಿಸಿದಳು.
{{gap}}ಶಾಸ್ತ್ರಿಗಳು ನಿರುಪಾಯರಾದವರಂತೆ ಕೈಚೆಲ್ಲಿ,
{{gap}}ಅವಳನ್ನೆ ಕೇಳಿ, ಅವಳು ನಿಮ್ಮೊಡನೆ ಬರುವುದಾದರೆ ನನ್ನದೇನೂ ಅಭ್ಯಂತರವಿಲ್ಲ” ಎಂದರು.
{{gap}}ಸಾವಿತ್ರಿ ಸರಸಿಯನ್ನು ಅತಿಶಯವಾಗಿ ಮುದ್ದಿಸುತ್ತ,
{{gap}}“ನಮ್ಮ ರುದ್ರಪಟ್ಟಣ ನಿಮ್ಮ ಹಳ್ಳಿಯ ಹಾಗಲ್ಲ. ಅಲ್ಲಿ ಜುಳುಜುಳು ಹರಿಯುವ ಹೊಳೆಯಿದೆ. ಅದರಲ್ಲಿ ನೀನು ಮುಳುಗುಹಾಕಿ ಆಟ ಆಡ್ಡ ಸ್ನಾನ ಮಾಡಬಹುದು... ಅಮೇಲೆ ಹೊಳೆ ದಡದಲ್ಲಿ ಹರಗಲು ನಿಂತಿರುತ್ತೆ. ನೀನು ಆ ಹರಿಗಲಿನಲ್ಲಿ ಕುಳಿತು ಬೇಕಾದ ಹಾಗೆ ಹೊಳೆಯ ಆಚೆ ದಡದಿಂದ ಈಚೆ ದಡಕ್ಕೆ ಅಡ್ಡಾಡಬಹುದು...” ಎಂದೆಲ್ಲ ಅಮಿಷ ಒಡ್ಡಿ, “ನೋಡು ನಮ್ಮೂರಲ್ಲಿ ಇಷ್ಟೆಲ್ಲ ಇದೆ. ನಮ್ಮ ಜೊತೆಗೆ ಬರೀಯ, ಸರಸು?” ಎಂದು ಕರೆದಳು. ಜಾನಕಿಯೂ “ಬಾರೆ, ಸರಸು” ಎಂದು ರಮಿಸಿದಳು.
{{gap}}ಸರಸಿಯದು ಒಂದೇ ಖಡಕ್ಕಾದ ಉತ್ತರ:
{{gap}}“ನಾ ಬರಲ್ಲ.”
{{gap}}ಸಾವಿತ್ರಿ ಪೆಚ್ಚಾದಳು. ಅಶ್ವತ್ಥ ಪಾತುವಿನ ಕಡೆ ತಿರುಗಿ “ನೀನಾದರೂ ಬಾಮ್ಮ -ನೀನೂ ನಿನ್ನ ಯಜಮಾನರೂ ನಮ್ಮ ಊರಿಗೆ ಬಂದು ಬಹಳ ಕಾಲವೇ ಸಂದಿದೆ. ನೀವೆಲ್ಲ ಈಗಲಾದರೂ ಬನ್ನಿ, ಹಾಯಾಗಿ ಒಂದೆರಡು ತಿಂಗಳವರೆಗೆ ಇದ್ದು ಬೇಸರ ಕಳೆದು ಹೋಗುವಿರಂತೆ” ಎಂದು ಆಹ್ವಾನಿಸಿದ್ದ.
{{gap}}“ಯಜಮಾನರೇ ಇದಾರಲ್ಲ, ಕೇಳಿ. ಅವರು ಒಪ್ಪಿದರೆ ನನ್ನದೇನೂ ಅಭ್ಯಂತರವಿಲ್ಲ. ನಾನು ಕೇವಲ ಬಸವನ ಹಿಂದಿನ ಬಾಲ. ಅವರು ಹೇಗೆ ಹೇಳಿದರೆ ಹಾಗೆ”, ಎಂದು ಪಾರ್ವತಿ, ಚಂದ್ರಶೇಖರಯ್ಯ ನವರತ್ತ 'ಏನಪ್ಪಣೆ? ಎನ್ನುವ ಹಾಗೆ ನೋಟ ಬೀರಿದ್ದಳು. ಚಂದ್ರಶೇಖರಯ್ಯ ನಗುತ್ತ,
{{gap}}“ಭಾವ ಇಷ್ಟು ಪ್ರೇಮದಿಂದ ಕರೆಯುವಾಗ, ಯಾಕೆ ಹೋಗಬಾರದು?... ನಡಿಯೆ ಪಾತು, ರುದ್ರಪಟ್ಟಣವನ್ನು ನಾನೂ ನೋಡಿ ತುಂಬಾ ಸಮಯಾನೆ<noinclude></noinclude>
t3y7qlrekp6i6xd7yhf4afp99lc1af3
ಪುಟ:ವೈಶಾಖ.pdf/೧೨೭
104
82056
316449
277450
2026-05-03T12:45:35Z
Shreelatha.Halemane
7642
/* Validated */
316449
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೧೧}}
ಆಯಿತು... ಹೇಗೂ ಇಷ್ಟು ದೂರ ಬಂದಿದೀವಿ. ಹೀಗೇನೇ ಭಾವ ಅತ್ತಿಗೆ ಜೊತೆಗೆ ಹೋಗಿ ನಾಲ್ಕು ದಿನ ಇದ್ದು ಬರೋಣ” ಎಂದಿದ್ದರು.
{{gap}}“ನೀವು ಬರಲು ಒಪ್ಪಿದ್ದು ಬಹಳ ಸಂತೋಷ. ಬನ್ನಿ, ಬನ್ನಿ, ನಾಲ್ಕು ದಿನ ಯಾಕೆ, ರುದ್ರಪಟ್ಟಣ ನಿಮಗೆ ಬೇಸರ ಹಿಡಿಸುವವರೆಗೂ ಇದ್ದು ಬರುವಿರಂತೆ” ಎಂದು ಸಾವಿತ್ರಿಯೂ ಕಳಕಳಿಯಿಂದಲೆ ಆಹ್ವಾನಿಸಿದ್ದಳು... ಜಾನಕಿಗೆ ಆಗಿದ್ದ ಆಘಾತವನ್ನು ಮರೆಸಲು ಮತ್ತು ತಾನೂ ಮರೆಯಲು, ಚಂದ್ರಶೇಖರಯ್ಯನಂಥ ಖುಷಿ ಮನುಷ್ಯ ಸ್ವಲ್ಪ ಕಾಲ ಜೊತೆಗಿದ್ದರೆ ವಾಸಿ ಎಂಬ ಭಾವನೆಯನ್ನು ಸಾವಿತ್ರಿಯ ಆಹ್ವಾನದಲ್ಲಿ ರುಕ್ಕಿಣಿ ಗುರುತಿಸಿದ್ದಳು!....
{{gap}}ಅವರೆಲ್ಲರೂ ರುದ್ರಪಟ್ಟಣಕ್ಕೆ ತೆರಳಿದ ಬಳಿಕ ಸರಸಿ ಕೆಲ ಸಮಯ ಪೆಚ್ಚಾದಂತೆಯೇ ಇರುತ್ತಿದ್ದಳು. ಆದರೆ ವೆಂಕಣ್ಣ ಜೋಯಿಸರ ಹೆಣ್ಣುಮಕ್ಕಳು, ತೋಟ ಇವುಗಳ ಸಂಭ್ರಮದಲ್ಲಿ ಆ ಕೊರಗನ್ನು ಬಹುಜಾಗ್ರತೆ ಮರೆತಿದ್ದಳು..
{{rh|center='''೧೦'''|left=|right=}}
{{gap}} ಇತ್ತಾಗಿ ಲಕ್ಕ, ಅಸ್ವತ್ತಪ್ಪಾರು-ಚಮದ್ರಸೇಕರಪ್ಪಾರು ಇಬ್ರ ಮನೆಯೋರನೂವೆ ರುದ್ರಪಟ್ಟಣಕ್ಕೆ ಸೇರುಸಿ ಊರಿಗೆ ಮರಳಿದ್ದ. ಈ ಸರಿ ವೋಗೋವಾಗ್ಲೆ ಆಸ್ತೇಯ, ಬರೂವಾ ಅಸ್ಥೆಯ, ಲಕ್ಕನ ಅದ್ರುಸ್ಪಕ್ಕೆ ಉದ್ದ ಕೂವೆ ಜೊತೆ ಗಾಡಿಗಲೆ ಸಿದ್ದಬೇಕ!... ಅದಕೇ ಇರಬೈದು ಹಾದೀಲಿ ಯಾತಾವೂ ಕಳ್ಳರು ಕನಸೂ ಸೈತ ಬೀಳಿಲ್ಲ... ಇದ್ದೆ ಯೋಚ್ಛೆಗೆ ತಂದ್ಯೋತ್ತ, ಲಕ್ಕ ತಮ್ಮ ವೊಲಗೇರಿಯ ಗುಡ್ಡು ತಾವಿಕೆ ಬಂದಿದ್ದ. ತನ್ನ ಯಜಮಾನ ಮಾತಿಲ್ಲೆ ಕತಿಲ್ಲೆ ಕಾಲೆಳೀತ ಬತ್ತಿದ್ದ ಕಂಡು ಬೊಡ್ಡನೂ ಬೊಗಳದೆ ಮತ್ತಗೆ ಬತ್ತಾ ಇದ್ದದ್ದು, ತನ್ನ ಬೆನ್ನ ಹಿಂಚೋರಿ ಕುಂತು ಕಡಿಯಕ್ಕೆ ಮುಟ್ಟಿಗಂಡ ತೋಣಚಿಯ ಬಗ್ಗಿ ಬಗ್ಗಿ ಕಚ್ಚುತಾ ಒದ್ದಾಡ್ತ ಇತ್ತು...
{{gap}}ತಮ್ಮ ಗುಡ್ಡು ಇನ್ನೇನು ಸಿಕ್ಕು ಅನ್ನೋವಾಗ, ಅವದ ವಳಾಗಡೆ ಎದ್ದ ಗುಲ್ಲು ಆ ಗುಡ್ಡ ನೆರಿಕೆ ವಳಗೆಲ್ಲ ಬಡಿದಾಡಿ ತಡಕಾಡಿ ವೋರಗಡೀಗೂ ಮೊಖ ಆಕಿ ಲಕ್ಕನ ಕಿವಗಳೊವೆ ತಟ್ಟಿ, ಅವನ ಕಾಲೆ ಗೂಟ ವೊಡುದು ನಿಲ್ಲುಸ್ತು:
{{gap}}“ಯಾಕಮ್ಮಿ ವೋಟೋಂದ ಬಾಯಿಬಿಚ್ಚದೆ ಲಿಪಿ ಕುಂತಂಗೆ ಕುಂತಿದ್ದೀ?”
{{gap}}ಈ ಗರ್ಜನೆ ಅಯ್ಯಂದೇಯ... ಅಯ್ಯ, ಒಂದೊಂದು ದಪ ಊಂಕರಿಸಿ ಆನೆ ಅಂತದು ಲದ್ದಿ ಆಕಾಬೇಕು!... ಆದ್ರೆ ಅಯ್ಯಂಗೆ ಕ್ವಾಪ ಹತ್ತಾದೆ ಅಸುರ್ಪ.<noinclude></noinclude>
m3xcgsa90t7th2d9jool3lgbyi0vdw5
ಪುಟ:ವೈಶಾಖ.pdf/೧೨೮
104
82057
316450
277451
2026-05-03T12:54:54Z
Shreelatha.Halemane
7642
/* Validated */
316450
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=೧೧೨|right=ವೈಶಾಖ}}
ಹಾಳು ಕುಡ ಪಾಟ ಅದೇನಿಂದ ಮಂಕಾಗೇ ಇರಾದು.
{{gap}}“ಅಸ್ಸಿ ಜಟಜಟ್ಟೆ ಅದ್ಯಾನಿಝುವೆ ಕೈಸರಾಡ್ಡೆ ಯೋಳಿಬುಡು. ಮೂಗು ದೆವ್ವದಂಗೆ ಅದ್ಯಾವ ಚೆಂದಾಕೆ ಅತ್ತೀಯೆ?...”
ಅಯ್ಯನ ಬಾಣ ಬಿರುಸ್ಥೆ ಯಾರೊ ಅತ್ತಂಗೆ ಅಲ್ವ?... ಲಕ್ಕಂಗೆ ಯಾಕೆ ಅನುಮನಸು-ವಳುಗೆ ಕಾತುರಿಕೆ. ಒಂದು ಕಿವ್ಯ ಪೂರ್ತಾ ಆತ್ತಾಗಿ ತಿರುಗಿಸ್ತಮಾತು ಇನ್ನೂ ವಳಕ್ಕೆ ತಕ್ಕಳಕ್ಕೆ....
{{gap}}ಎಂಗಸಿನ ಕೊರಳಂಗೇ ಅದೆ!... ಅವಂಗೂ ಪರಿಚಯ ಇರಾ ಕೊರಳೇಯ!... ಅವನ ಕೊರಳಂತೂ ಅಲ್ಲ... ಎಂಗಸಿನ ಕರುಳು ಜೋರು ಜೋಗ್ನಿಂದ ಕಿತ್ತುಗಂಡಂಗೆ ಫ್ರೆಂಡತಿತ್ತು-ಎಲ್ಲಾ, ಇದು ನಂಜನಗೂಡು ಸೀಮೆ ಕ್ವಟ್ಟಿರಾ ನನ್ನ ತಂಗಿ ಸಿವುನಿ ಅಲ್ವ?... ಮತ್ತೇನಪ್ಪ ವಕ್ರಸ್ತು?
{{gap}}ಮಳೆ ಸುರೀತಿರೊ ವೊತ್ತಲ್ಲಿ ಬಿಸಿಲು ನುಸಿದಂತೆ ಸಿವುನಿ ಅಳ್ತಾಅಳ್ತಾನೆ ಮಾತ ಕಡೆಸಿದ್ದಲು:
{{gap}}“ನಂಗೂವೆ ತಡುದೂ ತಡುದೂ ಸಾಕಾಯ್ತು... ಅವಯ್ಯ ತನ್ನಾಟ ಬುಡನಿಲ್ಲ-ವಯಸಾದ ಎಣ್ಣುಗಳೇನೊ ಮೋಗ್ಲಿ ಅಂದ್ರೆ, ಇನ್ನೂವಿ ವಯಸಿಗೆ ಬರದಿರಾ ಎಣ್ಣುಗಳ ಲಂಗದ ಮ್ಯಾಲೂ ಅವನ್ನ ಕಣ್ಣು ಓಡಡುದ ಕಂಡು ನಂಗೆ ಸೈಸನಿಲ್ಲ....”
{{gap}}ಕೂಸು ಅಳಕ್ಕೆ ಮುಟ್ಟುಗಂಡು ಸಿವುನಿ ಮಾತು, ವೊಸ್ಪಕ್ಕೆ ಸೊರಸೊರಗುಪ್ತ ನಿಂತಿತು. ಆಲಾ ಕೂಸ್ಥೆ ಎದೆ ಕಚ್ಚುತ್ತಿರಬೈದು, ಅಂದುಕತ್ತಿದ್ದ ಲಕ್ಕ.
{{gap}}ಕೂಸಿನ ಅಳ ನಿಂತು, ಸಿವುನಿಯ ಮಾತು ವಳುಗೇಯ ಸೊರಸೊರಗುಪ್ತ ಇರೂವಾಗ, ಅವ್ವ
{{gap}}“ಹಯ್ಯ, ತೆಗಿ ತೆಗಿ, ಈ ಹಾಳು ಗಂಡಸಿನ ಜಾತ್ಯ ಅಣಾಬರಾವೆ ಅಸ್ಸುಕನ” ಅಂತ ತತ್ವಯೋಳೋಳಂಗೆ ಅದು “ಯೇನ ಮಾಡಾದು-ಬ್ರಮ್ಮಗಂಟು ಬಿದ್ದ ಮ್ಯಾಲೆ ಯಲ್ಲಾನೂವೆ ಸೈಸಕನೆಬೇಕು... ಈಗ ನಿಮ್ಮಯ್ಯ ದುಡಿಯಾ ದುಡ್ಡೆಲ್ಲ ಆ ರಾಚನ ಎಂಡದ ಬುಂಡೆಗೆ ಸುರುದು ಇಲ್ಲಿ ಬಂದು ನನ್ನ ಮ್ಯಾಲೆ ಮಾಡಾದಿಲ್ವ ವಾಂತ್ಯ?
{{{gap}}ಲೇ ಲೇ ಲೇ ಲೇ, ಅಂತ ಅಯ್ಯ ಗುರುಕಾಯಿಸ್ತಾನೇ ಇದ್ದ
{{gap}} ಅವ್ವ ಗಂಟ್ಲ ದಪ್ಪ ಮಾಡಿ
{{gap}}“ನೀ ಯಾಕೆ ಇಂಗೆ ಅರಚಾಡಿ?- ಮೊದ್ದೆ ಉಸಾರು ತೆಪದೆ, ಗಮನೋಗಿ
ಮನಕ್ಕೊ” ಅಂದೋಳು, “ನಿಂಗೊಸಿ ಗಂಜೀನಾರ ಕಾಯಿಸವ ಅಂದ್ರೆ, ವಳ್ಗೆ<noinclude></noinclude>
b6xqxepip2o5kfiagz27arv4rbugbbh
ಪುಟ:ವೈಶಾಖ.pdf/೧೨೯
104
82058
316451
277452
2026-05-03T12:55:51Z
Shreelatha.Halemane
7642
/* Validated */
316451
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೧೩}}
ಮೂರು ಅಕ್ಕಿಕಾಳೂ ಇಲ್ವಲ್ಲ...” ಕರುಳು ಕಿವುಚಿದಂಗೆ ಅಂದು, “ನಮ್ಮ ಲಕ್ಕ ಅದೇಟೊತ್ತಿಗೆ ಬತ್ತಾನೊ ಯಾನೊ.... ಅವ್ರು ಯಾನಾರ ತಂದ್ರೆ, ಇವತ್ತು ನಾವು ವಂದೇಟು ಉಣ್ಣಾವರು. ಅವ್ರು ತರಿಲ್ಲ-ವೊಟ್ಟೆಗೆ ವದ್ದೆ ಪಾವುಡೆ ಇಕ್ಕಂಡು ಉಪಾಸ ಬಿದ್ದು ನಾವೆಲ್ಲ ಸಾಯಾದೆ!...”- ತನ್ನೊಟ್ಟಿಗೆ ತಾನು ಯಾಳಿಕಂಡು, “ಊ. ಆಮ್ಯಾಕೆ?” ಅಂತ ತಾಕೀತು ಮಾಡಾಳಂಗೆ ಮಗಳ ಕ್ಯಾಳಿಗಳು-ಸಿವುನಿ ತಡುದಿದ್ದ ಮಾತ ಪುನಾ ಉಿಳ್ಳಿಸಿದ್ಲು.
{{gap}}“ಅದ್ರೂ ನಾ ಸೈಸಿಕಂಡಿ ಕನವ್ವ... ಕುಡಿಯಾದು, ಅಲ್ಲಿ ಬಂದು ದನ ಬಡಿದಂಗೆ ನನ್ನ ಬಡಿಯಾದು-ಅದೂ ನಾ ಸೈಸಿಕಂಡಿ. ಆದ್ರೆ ಆ ಮಿಂಡಗಾತಿ ಕಯ್ಯಗೆ ನಮ್ಮಟ್ಟಿ ವಗುತನಯಲ್ಲಾನೂವಿ ಕ್ವಿಟ್ಟು ನನ್ನ ಅವಳ ಜೀತಗಾತಿ ಮಾಡಕ್ಕೆ ಯತ್ಥ ಮಾಡ್ಡಾಗ ಮಾತ್ರ ನನ್ನ ಆತುಮಕೆ ವಗ್ಗನಿಲ್ಲ- ಅಲ್ಲಿಂದ ಕಡದು ಬಂದಿ...”
{{gap}}ತಂಗೆಮ್ಮ ಮಾತುಗಳ ಆತುರ ಆತುಗತ್ತ ಲಕ್ಕ ಗುಡ್ಡು ಬಾಗಿಲೈ ಅಡ್ಡಾಡಿ ಬಂದು ನಿಂತ. ಬಿಸು ಜಳದಿಂದ ಬಂದು ನಿಂತೋನ್ಸೆ, ಕತ್ತಲು ಎಪ್ಪೆಪ್ಪಾಗಿ ವಳುಖ್ಯಿಂದ ಎದ್ದು ಬಂದು ಕಣ್ಣಿಗೆ ಮೆತ್ತಿಗತ್ತು, ಗುಡ್ಲು ವಳುಚೂರಿ ಕುಂತೋರು ಯಾರೂವೆ ಅವಂಗೆ ಕಾಣಿಸನೇ ಇಲ್ಲ. ಒಂದು ದಪ ಅಂತೂ ಕತ್ತಲು ಕಕ್ಕಿಟ್ಟು ಹಿಂದೈ ದಬ್ಬಿದಂಗಾಯ್ತು...
{{gap}}“ಓ-ಲಕ್ಕಣ್ಣ....” ಸಿವುನಿ ಬೇರುದ್ದು.
{{gap}}ಮಗನ ಹೆಸರು ಕರ್ನದೊಳಗೆ ಇಳೀತಿರೋನೂವೆ ಕಲ್ಯಾಣಮ್ಮನ ಮೈಯ್ಯ ಎಲೆಬಿಸಲು ತಬ್ಬಿದ ಹಂಗೆ ಬೆಚ್ಚಗೆ ಮಾಡು.
{{gap}}“ಬಂದ್ಯಾ-ಮೊಗ?” ಅಂತ ಸೊರದಲ್ಲಿ ತನ್ನ ಮಗನ ಬಾಜಿ ಮುದ್ದಾಡಿದ್ದಲು. ಆಮ್ಯಾಲೆ, “ಇದ್ಯಾಕೆ ಹರಚ್ಚಿಗೆ ನಿಂತೆ? ಬಾ ವಳೀಕೆ... ಇಲ್ನೋಡಿದ್ಯಾ- ನಿನ್ನ ತಂಗೆಮ್ಮ ಕೂಸು ತತ್ತುಗಂಡು ನಂಜನಗೂಡ್ನಿಂದ ನಮ್ಮ ಗುಡ್ಡಾಗೆ ಇರಕ್ಕೆ ಬಂದದ್ದೆ. ಇವಳ ಗಂಡ ಆದ್ಯವಳೋ ತಲೆಮಾಸಿದೋಲ ಕಟ್ಟಿಗಂಡು, ಇವಳ ಅಲ್ಲಿಂದ ಗಡೀಪಾರು ಮಾಡ... “ಚುಟುಕದಲ್ಲಿ ತನ್ನ ಮಗಳ ಬದುಕು ಹೈರಾಣಾದ ಕತೆಯ ಯೋಳಿ ಮುಗಿಸಿದ್ದು.
{{gap}}ಲಕ್ಕೆ ನ್ಯಾಡಿದ್ದಂಗೆ, ಅವನ ದುಸೀಯ ಮುಚ್ಚಗಮಡಿದ್ದ ಕಾವಳ ವಸಿವಸ್ಕಾಗಿ ಹಾದಿ ಕಟ್ಟು, ಮೊಗೀಗೆ ಮೊಲೆ ಉಣ್ಣಿಸಿದ್ದ ಸಿವುನಿ; ಒಂದು ಕಾಲ ನೀಡಿ ಕೊಕ್ಕರಿಸ್ಥ ಇನ್ನೊಂದು ಕಾಲ್ಮಾಲೆ ಮೊಣಕಯೂರಿ, ಮೊಡಚಿದ ಹಸ್ತಕ್ಕೆ ಕೆನ್ನೆ ಆಂತು ಸಿವುನಿ ವತ್ತಿಗೇ ಕುಂತ ಅವ್ವ; ಅಷ್ಟೊತ್ತಿಗಂಟ ಮುದಿ ಹುಲಿಯಂಗೆ ಅರಚಾಡ್ತಿದ್ದೋನು ಗುಡ್ಡ ಒಂದು ಮೂಲೆ ಸೇರಿ, ಕರಿಕಂಬಳಿ ವೊದ್ದ ಕುಂತಿರೋ<noinclude></noinclude>
2ixo8ux1k22tiu60tqtpepyqg35adf3
ಪುಟ:ವೈಶಾಖ.pdf/೧೩೦
104
82059
316452
277453
2026-05-03T12:56:53Z
Shreelatha.Halemane
7642
/* Validated */
316452
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=೧೧೪|right=ವೈಶಾಖ}}
ಅಯ್ಯ-ಯೆಲ್ಲಾರೂವೆ ಚಿತ್ತಾರದ ಗೊಂಬೆಗಳಂಗೆ ಮೂಡಿದ್ರ...
{{gap}}ಲಕ್ಕ ತಂಗ್ಯಮ್ಮನ ನ್ಯಾಡಿದ. ಸಿವುನಿ ಅಣ್ಣನ ಕ್ವಾಡಿದ್ದು. ಈ ಕಣ್ಣು ಆ ಕಣ್ಣಲ್ಲಿ ನೀರ ಕಚ್ಚುಸ್ತು, ಲಕ್ಕ ಸಾವುರಿ,
{{gap}}“ಅವ್ವ, ಸಾಸ್ತ್ರಿಗಳ ಅಟ್ಟಿ ನೆಂಟರ ಬುಟ್ಟು ಬತ್ತಾ ಇದ್ದಾಗ, ನಾ ನಂಬೆ ಇಲ್ಲಿಲ್ಲ. ಆ ಜೀನಿ ಜಿಪುಣಮ್ಮ ರುಕ್ಕಿಣದ್ವಾರ ಅಣ್ಣನ ಎಡತಿ-ಕ್ವಾಡು, ನಾಕು ಬಳ್ಳರಾಗಿ, ಏಡು ತೆಂಗಿನಕಾಯಿ ಕಟ್ಟು, ನನ್ನ ಕಯ್ಯಾಗು ಒಂದು ರೂಪಾಯಿ ಮಡಗಿದರು” ಎಂದು ಬೆನ್ನ ಮ್ಯಾಲೆ ಸ್ವತ್ತಿದ್ದ ಹಸಿಬೆ ಚೀಲವ ಅವಳ ಮುಂದೆ ಇರಿಸಿದ. ಮೊಖದಲ್ಲಿ ಸಂತೋಸವ ನಲದಾಡುಸ್ಕ ಅವ್ವ-
{{gap}}“ನ್ವಾಡೊ ಲಕ್ಕ, ನೀ ಕೂಲಿ ಕಂಬಳಕೆ ವೋಗೊ ಅಟ್ಟಿಗಳಿಗೆಲ್ಲ, ಆ ರುಕ್ಕಿಣವ್ವನಟ್ಟಿ, ಬುಂಡಮ್ಮಾರ ಅಟ್ಟಿಯೋರೇಯ ವಸಿ ಕಯ್ಯ ಬಿಚ್ಚಿ ಕಂಬಳ ಕ್ವಡೋರು, ಅವೇಡು ಅಚ್ಚನು ತಂಪೋತ್ನಲ್ಲಿ ನೆನೀಬೇಕು” ಅಂತ ಇದ್ದಾಗ, ಮಾಯದ ನಿದ್ದೆ ಕಣ್ಣ ಮುಚ್ಚಿದ್ದ ಕೂಸ ಅವ್ವನ ಕಯ್ಯಗಿಡ ಸಿವುನಿ,
{{gap}}“ಇದ್ದ ಅಂಗ ಮನಗಿಸವ್ವ, ನಾನು ವೋಟರಲ್ಲಿ ರಾಗಿ ಬೀಸಿ ಲಡಿಮಾಡ್ತೀನಿ” ಅಂದ ಸಡಗಾರ ಮಾಡ್ತ ದುಡುದುಡು ಯೆದ್ದೋದ್ದಲು.
{{gap}}ಲಕ್ಕ ಅವ್ವನ ವತ್ತಿಗೆ ಬಂದು ಕುಂತ. ಅವ್ವನ ತೊಡೆ ಮ್ಯಾಗ್ನಿಂದ ಮೊಗಾವ ಜ್ವಾಪಾನಾಗಿ ತನ್ನ ತೊಡೆ ಮ್ಯಾಕ್ಕೆ ವರ್ಗಾಯಿಸಿ, ಅದರ ಮೊಖದ ಮ್ಯಾಲೆಲ್ಲ ಕಣ್ಣಾಡಿಸಿ, ಅದರ ತುಟಿ ಮುಟ್ಟಕ್ಕೆ ಇಂಜರೀತ ಇಂಜರೀತ ತನ ಕಮ್ಮಿ ಬೆಳ್ಳ ತಕ್ಕಂಡೋಗುತ ಇದ್ದಾಗ
{{gap}}“ಇದ್ಯಾಕಪ್ಪು, ತೆಗಿ ಕಯ್ಯ... ಮೊಗ ಅರೆನಿದ್ದೇಲಿ ಯೆದ್ದು ಚಂಡಿ ತೆಗುದ್ರೆ ಆಮ್ಯಾಕೆ ಸಿವುನಿ ಆ ರಚ್ಚೆ ತೀರುಸಕ್ಕೆ ರಾಗಿ ಬೀಸೋದ್ರೂ ಅರ್ದಕೇ ಬುಟ್ಟು ಬಟ್ಟಾಡಬೇಕಾಯ್ತದೆ....”
{{gap}}ಅಂದ ಕಲ್ಯಾಣಿ-ಮೊಗಾವ ಮನಗಿಸಕ್ಕೆ ಈಚಲು ಚಾಪೆ, ಆ ಚಾಪೆ ಮ್ಯಾಲೆ ಕಂಬಳಿ, ಆ ಕಮಬಳಿ ಮ್ಯಾಲೆ ಒಂದು ಹಳೆ ಸ್ಯಾಲೆ ತುಂಡು, ಹಿಂಗೆ ಅಣಿ ಮಾಡುತ್ತ,
{{gap}}“ನೀನೂ ಒಬ್ಬಳ ಬ್ಯಾಗ ಬ್ಯಾಗ ಕಟ್ಟೋ, ಇಂಗೆ ಚೆಂದೂಳ್ಳಿ ಮೊಗಾವ ತಗಂಡು. ಹವಳದ ಕುಡಿಯಂಗಿರೋ ಅದರ ತುಟಿಗೆ ಮುತ್ತಿಕ್ಕಬೈದು!” ಎಂದು ಗೇಲಿ ಮಾಡುತ್ತ ನಕ್ಕು, ತಯಾರಿಸಿದ ಮೆತ್ತೆ ಮ್ಯಾಲೆ ಕೂಸನ ಮನಗಿಸೊ ವ್ಯಾಳ್ಯದಲ್ಲಿ, ಸಿವುನಿ ರಾಗಿ ಕಲ್ಲಿನ ಗರ್ಗರ್್ರಗರ್ ಸದ್ದೆ ತನ್ನ ಕೊರಳಿನ ಹಾಡನೂ ಸೇರುಸಿ, ಮಕ್ಕಳೆ ಯಾಕೆ, ದೊಡೋರಿಗೂ ನಿದ್ದೆ ಅತ್ತೋವಂಗೆ<noinclude></noinclude>
cn1jhj7fm7zt05rz357dp8nrbk6nh2i
ಪುಟ:ವೈಶಾಖ.pdf/೧೩೧
104
82060
316453
277454
2026-05-03T12:58:32Z
Shreelatha.Halemane
7642
/* Validated */
316453
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೧೫}}
ಮಾಡುತ್ತ ಇದ್ದು.
{{gap}}ಅಂಗಾಡಿ ಇಂಗಾಡಿ, ಆ ಮಾತು ಈ ಮಾತ್ನಲ್ಲಿ ಸಂಜೆಗಪ್ಪು ಗುಡ್ಲುಮ್ಯಾಲೆಲ್ಲ ಕವೀತು.
{{gap}} “ಸೊಡ್ಲುಯೆಲ್ಲಿಟ್ಟಿದಿಯೋಳವ್ವ ದೀವಿಗೆ ಕತ್ತಿಸ್ತೀನಿ” ಅಂತ ಸಿವುನಿ ಅಂದಾಗ ಹಣೆ ಚೆಚ್ಚಿಗೊತ್ತ,
{{gap}}“ಹಯ್ಯೋ, ಬರಿ ಸೊಡ್ಡ ಕಟಿಗಂಡು ಯೇನ ಮಾಡಾದು! ಎಣೆ ಮೊನ್ನೆ ನಾತಿಂದ್ರ ನಾನೂವೆ ಜೋಪಾರು ಅತ್ತದ್ದೆ ಅತ್ತದ್ದು. ಯಾರಾರ ಅಟ್ಟಿಗೊ ವೋಗಿ ಗ್ವಾಗತ್ತೆ, ಯಾತಾವೂ ದ್ವರೀನಿಲ್ಲ” ಅಂತ ಕಲ್ಯಾಣಮ್ಮ ಉಸುರು ಬುಟ್ಟು.
ಅವ್ವ ಇಂಗೆ ಹೇಳುತ್ತಲೆ, ಲಕ್ಕ ದಿಗ್ಗನೆದ್ದು,
{{gap}}“ಇದ್ಯಾಕವ್ವ ಬಟ್ಟಾಡಿಯೇ? -ಎಂಗೂ ನನ್ನತ್ರ ಒಂದು ರೂಪಾಯಿ ಇಲ್ಲ?...ಅಮ್ಮದ್ ಕಾಕನ ಅಂಗಡೀಲಿ ಸೀಮೆಎಣ್ಣೆ ಬುಡಿಸಿ ತನಂತೆ. ಆ ಖಾಲಿ ಸೀಸೆ ಕೂಡು” ಅಂದು ಈಸಿಕೊಂಡು ಎಣ್ಣೆ ತರಕ್ಕೆ ತೆರಳ್ದ,
{{gap}}ಸಿವುನಿ ಉರೀತಿದ್ದ ಒಲೆಗೆ ಮತ್ತೆ ನಾಕೈದು ಸೀಳು ಸೌದೆ ಒಟ್ಟಿ, ಉರುಬಿ, ದೊಡ್ಡುರಿ ಮಾಡಿದ್ದು, ಅನಂತ್ರ ಉರಿಯೊ ಕೊಳ್ಳಿಗಳ ಒಲೆ ಈಚೆ ಹಿರದು, ಕೆಲವು ಸೀಳು ಮೊರಗಡೆಗೂ ಉರಿಯುವಂಗೆ ಮಾಡಿದ್ದು, ಆ ಬೆಳಕು ಗುಡಿಸಿಲ್ಪವಳಗೆ ಸೋಲ್ಲ ಭಾಗದಿಂದ ಕತ್ತಲು ಫೇರಿ ಕೀಳೋವಂಗೆ ಮಾಡಿತ್ತು. ಕುದಿಯೊ ನೀರಿಗೆ ರಾಗಿ ಹಸಿಟ್ಟಾಕಿ ತಿರುವಿ, ಅದು ಹದವಾಗಿ ಬೆಂದ ಬಳಿಕ, ಹಿಟ್ಟಿನ ಮಡಕೆಯ ಒಲೆ ಮ್ಯಾಲಿಂದ ಕೆಳಕ್ಕಿಳಿಕಿ, ಕಾಂದ ವದೆ ಊಟ, ಅಡಕೆ ದಬ್ಬಿಂದ ಹಿಟ್ಟು ಜಡೀತ ಇದ್ದಂಗೆ, ಲಕ್ಕ ಕಾಕನ ಅಂಗಡಿಂದ ಸೀಮೆಯೆಣ್ಣೆ ಬುಡಸಿ ತಂದು ತಗಡಿನ ಸೀಮೆಎಣ್ಣೆ ಬುಡ್ಡಿ ಹೊತ್ತಸ್ಥ, ಸಿವುನಿ ರಾಗಿಮುದ್ದೆಗಳ ಕಟ್ಟಿಟ್ಟು, ಒಲೆ ಮ್ಯಾಲೆ ಇನ್ನೊಂದು ಮಡಕೇಲಿ ನೀರಿಟ್ಟು, ರಾಗಿ ಅಂಬಲಿ ಕಾಯಿಸಿ, ಹೋಗ್ನಲ್ಲಿ ಹುರುಳಿ ಎಸನ್ನೂ ತಯಾರ್ಸಿ,
{{gap}}“ಅವ್ವ, ಇಟ್ಟು ಆಗದೆ. ಅಮ್ಮ ಇಬ್ಬರಿಸಿಗಂಬಾ. ಅವರಿಗೆ ರಾಗಿ ಅಂಬಲೀನೂ ಲಡಿಮಾಡಿ” ಅಂದ್ಲು.
{{gap}}ಎಲ್ಲಾರೂವ ಒಲೆ ಮುಂದೆ ಬಂದು ಉಣ್ಣಕ್ಕೆ ಕುಂತರು. ನಿಂಗಯ್ಯನೂ ಸೀಟಾಡ್ ಸೀಟಾಡ ಬಂದು ಕುಂತ, ಎಲ್ಲಾರ ತಣಿಗೆಗೂವೆ ಕಟ್ಟಿದ ಮುದ್ದೆ ಇಕ್ಕಿ, ಹುರುಳಿ 'ಉದಕ' ಬುಟ್ಟಳು. ಬಳಿಕ ಬೆಂದ ಹುರುಳಿ ಕಾಳನೂವೆ ಎಲ್ಲಾರ ತಣಿಗೂ ಇಟ್ಟು, ತನ್ನ ತಣಗ್ಗೆ ಮಗಳು ಅಂಬಲಿ ಸುರಿಯಕ್ಕೆ ಬಂದಾಗ,
{{gap}}“ಯಾಕಮ್ಮಿ, ನಂಗೇನಾಗದೆ ಅಂತ ರಾಗಿ ಅಂಬಲಿ ನೀಡುತ್ತಿದ್ದೀ?... ತಮ್ಮ<noinclude></noinclude>
nhawqtc4aga5lkuhnf4u9263cjyqhl3
ಪುಟ:ವೈಶಾಖ.pdf/೧೩೨
104
82061
316454
277455
2026-05-03T12:59:44Z
Shreelatha.Halemane
7642
/* Validated */
316454
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=೧೧೬|right=ವೈಶಾಖ}}
ಮುದ್ಯ, ನಂಗ್ಯಾವ ಊಾಗವೂ ಇಲ್ಲಕನ, ಇರಾ ರಾಗವೆಲ್ಲ ವೊಟ್ಟೆಗಿಲ್ಲೆ ಇರೋದ್ರೇಯ” ಅಂದು ಮೊಟ್ಟೆ ಬಡಿದ. ಕಲ್ಯಾಣಿ ತನ್ನ ಕೆಂಪು ಹರಳಿನ ಮೂಗುನತ್ತ ಬಲಗೈಯಿಂದ ತಿರುವ್ತ.
{{gap}}“ಊ ಊ ಸಾಜ, ಸಾಜ ಈವಯ್ಯಗೆ ವೊಟ್ಟೆಗಿಲ್ಲೆ ಇರೋದೆ ಕಾಯ್ದೆ ಅನ್ನೂದ ನಾನೂವೆ ವದ್ಭುತೀನಿ... ಅಲ್ಲ ಕನೆ ಸಿವುನಿ, ಬಾಗಿ ಕೇಮಿ ಮಾಡುದ್ರೆ ತಾನೆ ಮೊಟ್ಟೆ ತುಂಬಾದು?... ನಿಮ್ಮಯ್ಯ ಅನ್ನಸಿಗಂಡ ಈ ಗ್ರಾಸ್ತ್ರ ಇತ್ತಿತ್ತಾಗಿ ಗ್ಯಾನ ಬಂದ ಗಿರಾಕಿಯಾಗವೈ, ಮನಸಿಗೆ ಬಂತಾ, ಗೇಯಕ್ಕೆ ವೊಂಟ, ತೆವಲು ತಿರುಗ್ಯ ತಾನು ಗೇದ ದುಡ್ಡು ವಕ್ಕಡೀಕಿಲ್ಲ, ನನ್ನತ್ರ ಇದ್ದ ಬದ್ದ ದುಡ್ಡನೂವೆ ವೊಡದೂ ಬಡದು ಕಿತ್ತುಗಂಡೋಗಿ ರಾಚನ ಆ ಹಾಲು ಎಂಡಕೆ ಸುರಿಯಾದು, ಇಂಗಾಡಿದೆ, ವೊಟ್ಟೆ ತುಂಬು ಅಂದ್ರೆ ಯಾ ತಾವುಣಿಂದ ತುಂಬಾತು?” ಆಪಾದಿಸಿದ್ದು, ನಿಂಗಯ್ಯ ತಣಿಗೆ ಅಲ್ಲಾಡಿಸ.
{{gap}}“ಇವಳು ಮಾತು ಒಂದು ಮಂತ್ರ ಅಂತ ಕ್ಯಾಳಿಕಂಡು ಕುಂತುಗವ್ವ, ನೇರ್ಪಾಯ್ತದೆ... ಮೊದ್ಧ ಕ್ವಾಳಿಲ್ವ ಗಾದ್ಯ-ಕುಟುಗಲು ಮಳೆ ಬ್ಯಾಡ, ಲೋಟಗಾಲೆ ಎಡತಿ ಬ್ಯಾಡ, ಅಂತಾವ?... ತತ್ವ, ತತ್ತ” ಅಂತ ಆತುರಿಸ್ತ.
{{gap}}“ಇದು ಸರಿಕನವ್ವ, ನಂಗೇ ತಿರುಗಿಸಿಬುಟ್ಟಲ್ಲ ಗಾದ್ಯ.... ಅದು ಇರಾದು-
ಕುಟುಗಲು ಮಳೆ ಬ್ಯಾಡ, ಲೋಟಗಾಲೆ ಗಂಡ ಬ್ಯಾಡ, ಅಂತಾವ” ಕಲ್ಯಾಣಿ ಜಯಬೇರಿ ವೋಡೀತಾ ನುಡಿದ್ದು, ಆಗ ನಿಂಗಯ್ಯ,
{{gap}}“ಈಗ್ಯಾರು ಲೋಟಗಾಲೆ ವೊಡೀತಿರಾದು? -ಸುಮ್ಮೆ ಉಣ್ಣು” ಅನ್ತಾ ಇರೋವಾಗ ಕೋಳ್ಳಿಯ ಉರಿ ಆಡಿದಂಗೆ, ಒಂದು ದಪ ಕತ್ತಲಲ್ಲಿ ಬಾಡಿ, ಇನ್ನೊಂದು ದಪ ಬೆಳಕಲ್ಲಿ ಮೂಡ್ತಿದ್ದ ತನ್ನ ಅಯ್ಯನ ಮೊಕವ ಲಕ್ಕ ತನ್ನ ಕಣ್ಣಲ್ಲಿ ತುಂಬಿಕೊತ್ತ ನ್ಯಾಡಿದ. ಎಲ್ಲರೂ ಉಂಡು ಎದ್ದಾಗ ಬೊಡ್ಡಂಗೂ ಅರ್ಧ ಮುದ್ದೆ ದಕ್ಕಿತ್ತು.
{{gap}}ಮನಗಿದಾಗ ಲಕ್ಕ ಆ ಕಡಿಂದ ಈ ಕಡೀಕೆ ವೊಳ್ಳಾಡುತಲೆ ಇದ್ದ. ಹಿಂದೊದ ದಿನಗಳ ಗ್ಯಾಪಕ ಅವನ್ನ ಗಾಳ ಅಕಿ ಎಳೀತಿತ್ತು... ಎಂಗಿದ್ದ ಆಳು ಅಯ್ಯ, ಎಂಗಾಗಿಬುಟ್ಟಮ್ಮೆ?- ಇತ್ತಿತ್ತಾಗಿ ಹಿಂದುಕಿದ್ದ ಕ್ವಾಪವೂ ಕಾಣುಸ್ತಿಲ್ಲ... ಹಿಂದೆ, ಅಯ್ಯನ ಕ್ವಾಪಕ್ಕೆ ಮೊಖ ಕೊಟ್ಟು ನಿಂತೋರೆ ಕಮ್ಮಿ. ಆದರೆ ಆ ಕ್ವಾಪ ಆ ಕ್ಷಣಕ್ಕೆ ಉಗ್ರ ನರಸಿಂಹ ಆದರೂವೆ, ಬಾಳ ಸಮಯ ಉರಿದಾಡೋ ತರದ್ದಲ್ಲ. ಇಂಗೆ ಬಂದು ಅಂಗೆ ವೊಂಟೋಗೋದು... ಒಂದು ದಪ ಅಯ್ಯ ಕುಡುದು<noinclude></noinclude>
oku57gobn458s8y7rxvnnwgr5nrystr
ಪುಟ:ವೈಶಾಖ.pdf/೧೩೩
104
82062
316455
277456
2026-05-03T13:01:42Z
Shreelatha.Halemane
7642
/* Validated */
316455
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೧೭}}
ಬಂದುಬುಟ್ಟವನೆ. ಗುಡ್ಲು ವಳೀಕೆ ಬಂದೋನೆ ಬಂದ. ತಣಿಗೆ ಮಡಿಕ್ಕಂಡು ಕುಂತ. 'ಕಲ್ಯಾಣಿ' ಅಂತ ಗರ್ಜುಸ್ಥ, ಕಾದು ಕಾದು ಸುಸ್ತಾಗಿ ವಕ್ಕಡೆ ಮೂಲೆಗೆ ಬಿದ್ದಿದ್ದ ಅವ್ವ, ಮಯ್ಯ ಮುರುದು ಯೇಳ.
{{gap}}“ರೋಜಿನ ಇದೇ ಕೊಳೆ ಪಂಚಾತಿ ಆಗೋಯ್ತು. ಒಂಜಿನ ಆದೂವೆ ಗ್ರಾಸ್ತರಂಗೆ ಬಂದು ವೊತ್ತಿಗೆ ಮುಂಚೆ ಉಂಡು ಮನಗಾನ ಅನ್ನಾ ಬುದ್ಯ ಕ್ಲಷ್ಟೇ ಇಲ್ವಲ್ಲ ಆ ದ್ಯಾವರು?” ಅಂದುಕೊತ್ತ ಬಂದು ಇಟ್ಟಿನ ಮುದ್ದ ಅಯ್ಯನ ತಣಿಗೆಗೆ ನೀಡಿದಳು. ಲಕ್ಕನೂ ಅಯ್ಯನ ಎದರಾಬದುರು ಉಣ್ಣಕ್ಕೆ ಕುಂತಿದ್ದ, ಅವ್ವನ ಮಾತು ಹಸಿಗಂಡು ಬಂದಿದ್ದ ಅಯ್ಯನ ಕಚ್ಚಿದಂಗಾಗಿ ಕ್ಯಾಣ ಇಸ ಏರಿದಂಗೆ ಅವನ ಮೊಖದಲ್ಲಿ ಮುಕ್ಕಳುಸ್ತು.
{{gap}}“ಉದಕ ಯಾತರದ?-ಬಾಡಿನ ಎಸರ?” ಕ್ಯಾಳಿದ ಅಯ್ಯ,
{{gap}}“ಊ, ಬಾಡಿನೆಸರ ರೋಜಿನ ಮಾಡಕ್ಕೆ ನೀನು ತಂದು ಮಡಗಿದ್ದೀಯಲ್ಲ ಗೆಖ್ಯ?... ಸಮ್ಮೆ ಉಣ್ಣು. ವಳುಗಿಲ್ಲ ಮಗಳ ದೊಗದಿಕ್ಕು ಅಂದ್ರೆ, ನಾ ಇನ್ಯಾವ ಬೂಮಂಡಲದಿಂದ ತಂದು ವದುಗಿಸ್ಲಿ? ಅನ್ತಾ ಅನ್ತಾ ಉಪ್ಪು ಸಾರ ತಂದು ನೀಡಿದ್ದು.
{{gap}}ಇಟ್ಟಿನ ಮುದ್ದೆ ಮ್ಯಾಲೆ ಕಯ್ಯಾಡಿಸ್ತಿದ್ದ ಅಯ್ಯ, ಉಪ್ಪು ಸಾರ ಮರದ ಸೊಟಗದಿಂದ ಬುಡುವಾಗ ಬಕ್ಕಂಡಿದ್ದ ಅವ್ವನ ಕೆನ್ನೆಗೆ ಚಟ್ಟನೆ ಅಯ್ತು ಬೆಳ್ಳೂ ಮೂಡೊ ತರ ಬಡ್ಡ,
{{gap}}“ಕೆಟ್ಟೆನೆಲ್ಲಷ್ಟೊ” – ಚಿರಿ, ಕುಕ್ಕನೆ ಕುಂತು, ಅವ್ವ ಎದೆ ಎದೆ ಬಡುಕುತ್ತ, “ನಾ ನಿನ್ನೆದುರೆ ಇರೆ ತಾನೆ ನಿಂಗೆ ಕ್ಯಾಣಸರ. ನಾ ಕಣ್ಮುಚ್ಚಿಗಂದ್ರೆ, ಆಗೇನ ಮಾಡೀ?... ಆಗ ನಿನ್ನ ಕ್ಯಾಣ ಒಂದೆ ಕುಂತು ಈ ಗುಡ್ಡು ನೆರಿಕೆ ಪಸೀಬೇಕು, ವೋಟೇಯ” ಅಂದೋಳೆ, ಜಟ್ಟನೆದ್ದು ಗುಡ್ಡು ಮಂಚೂರಿ ತಡಿಕೆ ಕದಾವ ತಳ್ಳಿ, ಕೆರೆ ದಿಕ್ಕ ನಡೀತಿದ್ದು.
{{gap}}ತಾನೆದ್ದು ಮುಲುಕಾಡೊ ವೋಟಲ್ಲಿ, ಅಯ್ಯ ದಡನೆದ್ದ
{{gap}}“ನಿಂತುಗಣೆ... ಕಲ್ಯಾಣಿ-ನಿಂತುಗಣೆ...” ಕೂಗ್ಯ, ಅವ್ವನ ಇಂದಿಂದೆ ಓಡ್ಡ, ತಾನು ಗುತ್ತು ಮುಂದಕೆ ಬಂದು ನಿಂತೋನು, ತಾನು ಅವರ ಹಿಂದೆ ವೋಗೋದೊ ಬ್ಯಾಡದೊ ಚಿಂತಿಸ್ತಾ ಇರೋನೂವೆ
{{gap}}ಕೆರೆ ಓಣಿ ತಲೆಕೊಟ್ಟಲ್ಲೆ ಅವನ್ನ ಇಡುದು ನಿಲ್ಲುಸಿ, ದಮ್ಮಯ್ಯ ಅಂದು, ದತ್ತಯ್ಯ ಅಂದು, ನಾ ಇನ್ನು ಕ್ವಾಪ ಮಾಡಿಕಂಡ್ರೆ ನಿನ್ನ ಅಳೆ ಪಾಪಾಸ ತಕ್ಕಂಡು ಹೃಡಿ- ಅಂತ ಬೆಣ್ಣೆ ಮಾತಾಡಿ, ಅಯ್ಯ ಅವ್ವನ್ನ ಇಂದ್ರೆ ಕರಕೊಂಬಂದಿದ್ದ.<noinclude></noinclude>
lx7imsmx73g1iwvbd6cmp6os6gov8sl
ಪುಟ:ವೈಶಾಖ.pdf/೧೩೪
104
82063
316456
277458
2026-05-03T13:04:11Z
Shreelatha.Halemane
7642
/* Validated */
316456
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=೧೧೮|right=ವೈಶಾಖ}}
ಗುಡ್ಲು ವಳೀಕೆ ಏಡೂ ಆಳೂವೆ ಬಂದೋರು ಒಬ್ಬರಿಗೊಬ್ರು 'ನಂಗೆ ಅಸೀತಾ ಇಲ್ಲ, ನೀ ಮೊದ್ದು ಉಣ್ಣು-ಉಷ್ಣು, ನೀ ಮೊದ್ದು ಉಣ್ಣು, ಆಮ್ಯಾಕೆ ನಾ ಉಣ್ಣುತೀನಿ'- ಇಂಗೆ ಸರಸ ಆಡಕ್ಕೆ ಮುಟ್ಟುಗಂಡದ್ದು ಲಕ್ಕಂಗೆ ಬೋ ಮೋಜು ತಂದಿತ್ತು....
{{gap}}ಮಾರನೆ ಸಂದೆ ದನಿಗೆ ತಾನು ಕೇಮೆ ಮುಗುಸಿ ತಮ್ಮಗುಡ್ಡಿಗೆ ವಾಪಸಾಗಿದ್ದ. ಆ ಜಿನ ಪೂರ್ತ ಕ್ವಾಟೆ ಬುಳ್ಳಪ್ಪನ ಇತ್ತಲ ಬೇಲಿ ಲಿಪೇರೀಲೆ ತಾನು ತೊಡಗಿದ್ದದ್ದು. ಬುಳಪ್ಪನ ಜೊತೆ ಗಾಡಿ ಅಟ್ಟಿಗಂಡು ಕಾಡಿಗೋಗಿ ಬಾಯಿಬಡಿಕೆ ಬರಲ ಹೇರಿಕಂಬಂದು ಹಳೇ ಬೇಲಿಗೆ ಅಂಟಿಸಿದ್ದ, ಆಳುಗಳು ತಾವಿಬ್ಬರೇಯ. ಆ ಜಿನ ಬ್ಯಾರೆ ಜನಾವ ನೇಮುಸಿಕಂಡೇ ಇನ್ನಿಲ್ಲ. ಆದ್ರೆ ನಾಕು ಜಿನದಲ್ಲಿ ಆಗೊ ಕೆಲಸ ಎಂಟು ಜಿನಗಂಟ ಎಳುದಿತ್ತು... ಈವೊತ್ತೆ ಬೇಲಿ ಕೆಲಸ ಮುಗುಸಿ ಬಂದೋನು,
{{gap}}“ನ್ವಾಡವ್ವ, ಇನ್ನೊಂದು ಜಿನ ಅವಯ್ಯ ಅಟ್ಟಿ, ಕೆಲಸಕೆ ವೋಗೂಂತ ಯೋಳಿದ್ರೆ, ನಾ ಸುಮ್ಮಿರಕ್ಕಿಲ್ಲ. ಇಕಾ, ಅವಯ್ಯ ಕೂಟ್ಟಿರೋ ಕೂಲಿ, ಹಿಡಿ ಕಯ್ಯಾ” ಅಂತ ತಾನು ಅವನ ಬಿಚ್ಚಿದ ಅಂಗೈಗೆ ದುಡ್ಡು ಸುರುದಾಗ, ಅವಳ ಅಂಗೈಲಿ, ಒಂದು ಎಣ್ಣಾಳಿಗೆ ಕ್ವಡೊ ಕೂಲಿಗಿಂತ ಜಾಸ್ತಿ ಇರೋದ ಕಂಡು,
{{gap}}“ಇದೇನವ್ವ ಈ ಜಿನ ಆಚರ-ನೀ ಯಾವ ಗನಂದಾರಿ ಕೇಮೆ ಮಾಡೇಂತ ಈಟು ದುಡ್ಡು ಕೃಟ್ಟಿ?” ಅಂತ ತಾನು ಕ್ಯಾಳಿದ್ದ.
{{gap}}ದುಡ್ಡು ಎಣಿಸ್ಸಾ ನಮ್ಮವ್ವ,
{{gap}}“ಊ. ನಾ ಮಾಡೋ ಕೇಮೆಗೆ ಈಟು ದುಡ್ಡು ಕೃಟ್ಟರೆ, ಆ ಮನೆ ಚೊಕ್ಕಟ್ಟಾಗಿ ಊಳಕಂಡೋಗೋದೇಯ” ಅಂದ್ಲು-ಅವ್ವನ ಮಾತ್ನ ಜಾಡು ಅರ್ತ ಆಗದೆ ತಾನು,
{{gap}}“ಮೆಂತೆ?” ಅಂತ ಕ್ಯಾಳುತ್ತ, ತಾನು ಹುಬ್ಬ ಮ್ಯಾಕ್ಕೇರಿಸಿದ್ದ.
{{gap}}ಅವ್ವ, ಹಣದ ಸೂರ್ತ ಎಣಿಸೋವರೂವೆ ಸುಮಕಿದ್ದು, ಅದು ಮುಗುದ ಮ್ಯಾಲೆ, ತನ್ನ ಕಡೀಕೆ ತಿರುಗಿ,
{{gap}}“ಹಯ್ಯೋ, ಇದು ನನ್ನ ಸಂಬಳದ ದುಡ್ಡು ವೊಸೊ ಅಂತ ತಿಳೀಬ್ಯಾಡಕನೊ, ಲಕ್ಕ, ಇದರಾಗೆ ನಿಮ್ಮಯ್ಯ ಈ ಜಿನ ಊಟ್ಟ ದುಡ್ಡೂ ಬೆರಕಂಡಂದೆ” ಅಂತ ಇವರಣೆ ಕ್ವಟ್ಟಿದ್ಲು.
{{gap}}ತಾನು ಬೆಕ್ಕಸ ಬೆರಗಾಗಿ,
{{gap}} “ಇದ್ಯಾನವ್ವ ಚೋಚಿಗದ ಸುದ್ದಿ ನೀ ಯೋಳ್ಳಿರಾದು?” ಅಂದಾಗ, ಅವ್ವ,<noinclude></noinclude>
agbu9v2vijahw4efsrw066s23139b87
ಪುಟ:ವೈಶಾಖ.pdf/೧೩೫
104
82064
316457
277459
2026-05-03T13:05:12Z
Shreelatha.Halemane
7642
/* Validated */
316457
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೧೯}}
{{gap}}“ನೆನ್ನೆ ನಾನಾಗ ಬಾಡಿನೆಸರ ಮಾಡ್ಲಿಲ್ಲಾಂತ ನನ್ನ ವಂದಿಗುಟ್ಟೆ ಕದ್ದ ಮಾಡ್ಲಿಲ್ಲ ನಿಮ್ಮಯ್ಯ?- ಈಗ ಆ ಪುಣ್ಯಾತ್ಮನಿಗೆ ಅದ್ಯಾವ ಮಾರಕ್ಕೆ ತಾಯಿ ಗ್ಯಾನ ಕ್ವಿಟ್ಟಳೋ ಕಾಣೆ. ಬೋ ಜಿನದ ಮ್ಯಾಗೆ, ಈ ದಿವೃ ಗೇದ ದುಡ್ಡ ಮೂರ್ತ ನನ್ನ ಕಯ್ಯಗೆ ಹಟ್ಟಿ `ಕಲ್ಯಾಣಿ-ನಾಳಿಕೆ ಈ ದುಡ್ಡು, ನಿನ್ನ ಕಂಬಳದ ದುಡ್ಡು, ಲಕ್ಕ ಗೆದು ತಂದ ದುಡ್ಡು ಯಲ್ಲಾನೂವೆ ಜಮಾಯಿ ಪಸಂದಾಗಿ ಬಾಡೀನ ಸಾರು ಮಾಡು ಮತ್ತೆ ರಾಗಿ ಮುದ್ದೆಗೂವೆ ಬಾಡಿನ ಸಾರಿಗೂವೆ ವೈನಾಯ್ತದೆ. ಸುಮಾರು ಜಿನವೇ ಆಯ್ತು ನಿನ್ನ ಕಯ್ಯನ ಬಾಡಿನ ಸಾರು ರುತಿ ನ್ಯಾಡಿ, ಆ ರಾಚನ ಹಳು ಹುರಿ ಬಾಡು ತಿಂದು ಬಾಯೆಲ್ಲ ಕೆಟ್ರೋಗದೆ, ಅಂದೋನು 'ಜಪ್ಪಯ್ಯನ ಮಟದ ಅಯ್ಯೋರು ಯೋಳಿ ಕಳಿಸಿ, ನಾಳೀಕೆ ಅವರ ಮಠದ ಜಮೀನಿನ ಕೇಮೆ ಇರಬೈದೇನೊ. ಕ್ಯಾಳಿಕಂಬತ್ತೀನಿ' ಅಂತೇಳಿ, ಅಯ್ಯ ಆ ಕಡಿದ. ನೀ ಈ ಕಡೀಕೆ ಬಂದೆ” ಅಂದ್ಲು.
{{gap}}ಅಂಗಂದು, ಸೊಂಟದಿಂದ ಇಮ್ಮಣಿ ಚೀಲವ ತಗದ ಅದರೊಳಿಕೆ ಅಂಗೈ ದುಡ್ಡೆಲ್ಲ ಸುರುದು, ಮತ್ತೆ ಇಮ್ಮಣಿ ಚೀಲವ ಸೊಂಟಕೇ ಸಿಕ್ಕುಸ್ತ.
{{gap}}“ಲಕ್ಕ, ನಿಮ್ಮಯ್ಯನ ಕ್ವಾಪ-ಆದ್ರಿ ಮಲೆ ಇಲ್ಲ ಅಂದೆ. ಅದು ಬಂದು ಬೀಳೋ ಬಿರುಸ್ಸಲ್ಲಿ -ಹಾಳು ಗಂಡಸಿನ ಜಲ್ಮ ಎಂಗಸಾಗಾರೂವೆ ಉಟ್ಟಬಾರದಾಗಿತ್ತ- ಅನ್ನುಸಿ, ಅದೇ ಬಿರುಸ್ಸಲ್ಲಿ ನಿಂತೋಗಕ್ಕಿಲ್ಲ, ಅಂಗೆ!
{{gap}}ಚಾಪೆ ಮ್ಯಾಲೆ ವೋಳ್ಳಾಡ್ತ ಮನಗಿದ್ದ ಲಕ್ಕ ಯೋಚ್ಛೆ ಮಾಡ್ತಾನೆ ಇದ್ದ...
{{gap}}ಅಯ್ಯನಲ್ಲಿ ಇಂದಕಿದ್ದ ಕ್ವಾಪ ಬತ್ತಾಬತ್ತಾ ಯೆತ್ತಾಗಿ ವೊಂಟೋಯ್ತು...
ಈಗ್ಗೂವೆ ಬರಕ್ಕಿಲ್ಲ ಅಂತಲ್ಲ. ಬತ್ತದೆ, ಮಾತ್ರ, ಆ ಕ್ವಾಪದಲ್ಲಿ ಇಂದ್ರೆ ಇದ್ದಂತಾ ಊರಣ ಇವತ್ತಿಲ್ಲ...ಯಾಕೆ?... ಹಯ್ಯೋ, ಯಾಕೆ ಅಂತ ಈ ಇಚಾರವ ಐಗಂಚಿ ಪಟ್ಟಕ್ಕೋಗಿ ಉಡುಕಬೇಕ?... ನಮ್ಮಣ್ಣ ಬದುಕಿರಾ ಕಾಲದಾಗೆ ನಮ್ಮಯ್ಯ ಕುಸಾಮತ್ತೆ ಕುಸಾಮತ್ತು ಅಣ್ಣ ಜೊತೆಗಿದ್ದಾಗ ಅಯ್ಯ ಆಕಾಸದಾಗೆ ನಡೀತಿದ್ದ, ಆಸೆ ವೊರತು, ಆಗೇನು ಅಯ್ಯ ಯಾರ ಮ್ಯಾಲೂವೆ ತಟಕ್ಕೆ ಕ್ವಾಪ ಮಾಡಿಕರಿಲ್ಲಮಾತ್ಮಾತಿಗೂ ಸಿಣಿಸಿಣೀಂತಿರನಿಲ್ಲ. ತಾನೂ ನಗೋದು, ಬರೆಯೋರು ಕುಸಿ ಮಾಡಿ ನಗಸೋನು... ನಮ್ಮಣ್ಣ ವೋದ, ಇಂದುಗುಡ್ಡೆ ಅಮರಿಕತ್ತು ಕ್ವಾಪ ನಮ್ಮಯ್ಯ!...
{{gap}}ಗೆಜ್ಜುಗಣ್ಣ, ಅಯ್ಯಂಗೆ ಇರೀ ಮಗ. ನಡೂವೆ ಅವಳಿ ಜವಳಿ ಮಕ್ಕಳುಒಂದು ಗಂಡು, ಒಂದು ಎಣ್ಣು. ಇದಾದ ನಾಕೈದು ವರುಸಕೆ ಉಟ್ಟಿದೋನಂತೆ<noinclude></noinclude>
kw9cdbym3oqcozlso8iey3zmcallz2f
316458
316457
2026-05-03T13:06:29Z
Shreelatha.Halemane
7642
316458
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೧೯}}
{{gap}}“ನೆನ್ನೆ ನಾನಾಗ ಬಾಡಿನೆಸರ ಮಾಡ್ಲಿಲ್ಲಾಂತ ನನ್ನ ವಂದಿಗುಟ್ಟೆ ಕದ್ದ ಮಾಡ್ಲಿಲ್ಲ ನಿಮ್ಮಯ್ಯ?- ಈಗ ಆ ಪುಣ್ಯಾತ್ಮನಿಗೆ ಅದ್ಯಾವ ಮಾರಕ್ಕೆ ತಾಯಿ ಗ್ಯಾನ ಕ್ವಿಟ್ಟಳೋ ಕಾಣೆ. ಬೋ ಜಿನದ ಮ್ಯಾಗೆ, ಈ ದಿವೃ ಗೇದ ದುಡ್ಡ ಮೂರ್ತ ನನ್ನ ಕಯ್ಯಗೆ ಹಟ್ಟಿ `ಕಲ್ಯಾಣಿ-ನಾಳಿಕೆ ಈ ದುಡ್ಡು, ನಿನ್ನ ಕಂಬಳದ ದುಡ್ಡು, ಲಕ್ಕ ಗೆದು ತಂದ ದುಡ್ಡು ಯಲ್ಲಾನೂವೆ ಜಮಾಯಿ ಪಸಂದಾಗಿ ಬಾಡೀನ ಸಾರು ಮಾಡು ಮತ್ತೆ ರಾಗಿ ಮುದ್ದೆಗೂವೆ ಬಾಡಿನ ಸಾರಿಗೂವೆ ವೈನಾಯ್ತದೆ. ಸುಮಾರು ಜಿನವೇ ಆಯ್ತು ನಿನ್ನ ಕಯ್ಯನ ಬಾಡಿನ ಸಾರು ರುತಿ ನ್ಯಾಡಿ, ಆ ರಾಚನ ಹಳು ಹುರಿ ಬಾಡು ತಿಂದು ಬಾಯೆಲ್ಲ ಕೆಟ್ರೋಗದೆ, ಅಂದೋನು 'ಜಪ್ಪಯ್ಯನ ಮಟದ ಅಯ್ಯೋರು ಯೋಳಿ ಕಳಿಸಿ, ನಾಳೀಕೆ ಅವರ ಮಠದ ಜಮೀನಿನ ಕೇಮೆ ಇರಬೈದೇನೊ. ಕ್ಯಾಳಿಕಂಬತ್ತೀನಿ' ಅಂತೇಳಿ, ಅಯ್ಯ ಆ ಕಡಿದ. ನೀ ಈ ಕಡೀಕೆ ಬಂದೆ” ಅಂದ್ಲು.
{{gap}}ಅಂಗಂದು, ಸೊಂಟದಿಂದ ಇಮ್ಮಣಿ ಚೀಲವ ತಗದ ಅದರೊಳಿಕೆ ಅಂಗೈ ದುಡ್ಡೆಲ್ಲ ಸುರುದು, ಮತ್ತೆ ಇಮ್ಮಣಿ ಚೀಲವ ಸೊಂಟಕೇ ಸಿಕ್ಕುಸ್ತ.
{{gap}}“ಲಕ್ಕ, ನಿಮ್ಮಯ್ಯನ ಕ್ವಾಪ-ಆದ್ರಿ ಮಲೆ ಇಲ್ಲ ಅಂದೆ. ಅದು ಬಂದು ಬೀಳೋ ಬಿರುಸ್ಸಲ್ಲಿ -ಹಾಳು ಗಂಡಸಿನ ಜಲ್ಮ ಎಂಗಸಾಗಾರೂವೆ ಉಟ್ಟಬಾರದಾಗಿತ್ತ- ಅನ್ನುಸಿ, ಅದೇ ಬಿರುಸ್ಸಲ್ಲಿ ನಿಂತೋಗಕ್ಕಿಲ್ಲ, ಅಂಗೆ!
{{gap}}ಚಾಪೆ ಮ್ಯಾಲೆ ವೋಳ್ಳಾಡ್ತ ಮನಗಿದ್ದ ಲಕ್ಕ ಯೋಚ್ಛೆ ಮಾಡ್ತಾನೆ ಇದ್ದ...
{{gap}}ಅಯ್ಯನಲ್ಲಿ ಇಂದಕಿದ್ದ ಕ್ವಾಪ ಬತ್ತಾಬತ್ತಾ ಯೆತ್ತಾಗಿ ವೊಂಟೋಯ್ತು...
ಈಗ್ಗೂವೆ ಬರಕ್ಕಿಲ್ಲ ಅಂತಲ್ಲ. ಬತ್ತದೆ, ಮಾತ್ರ, ಆ ಕ್ವಾಪದಲ್ಲಿ ಇಂದ್ರೆ ಇದ್ದಂತಾ ಊರಣ ಇವತ್ತಿಲ್ಲ...ಯಾಕೆ?... ಹಯ್ಯೋ, ಯಾಕೆ ಅಂತ ಈ ಇಚಾರವ ಐಗಂಚಿ ಪಟ್ಟಕ್ಕೋಗಿ ಉಡುಕಬೇಕ?... ನಮ್ಮಣ್ಣ ಬದುಕಿರಾ ಕಾಲದಾಗೆ ನಮ್ಮಯ್ಯ ಕುಸಾಮತ್ತೆ ಕುಸಾಮತ್ತು ಅಣ್ಣ ಜೊತೆಗಿದ್ದಾಗ ಅಯ್ಯ ಆಕಾಸದಾಗೆ ನಡೀತಿದ್ದ, ಆಸೆ ವೊರತು, ಆಗೇನು ಅಯ್ಯ ಯಾರ ಮ್ಯಾಲೂವೆ ತಟಕ್ಕೆ ಕ್ವಾಪ ಮಾಡಿಕರಿಲ್ಲಮಾತ್ಮಾತಿಗೂ ಸಿಣಿಸಿಣೀಂತಿರನಿಲ್ಲ. ತಾನೂ ನಗೋದು, ಬರೆಯೋರು ಕುಸಿ ಮಾಡಿ ನಗಸೋನು... ನಮ್ಮಣ್ಣ ವೋದ, ಇಂದುಗುಡ್ಡೆ ಅಮರಿಕತ್ತು ಕ್ವಾಪ ನಮ್ಮಯ್ಯ!...
{{gap}}ಗೆಜ್ಜುಗಣ್ಣ, ಅಯ್ಯಂಗೆ ಇರೀ ಮಗ. ನಡೂವೆ ಅವಳಿ ಜವಳಿ ಮಕ್ಕಳುಒಂದು ಗಂಡು, ಒಂದು ಎಣ್ಣು. ಇದಾದ ನಾಕೈದು ವರುಸಕೆ ಉಟ್ಟಿದೋನಂತೆ<noinclude></noinclude>
q0m7yc8gqskxa0iar48xt4vn7okdyw7
ಪುಟ:ವೈಶಾಖ.pdf/೧೩೬
104
82065
316459
277460
2026-05-03T13:07:14Z
Shreelatha.Halemane
7642
/* Validated */
316459
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=೧೨೦|right=ವೈಶಾಖ}}
ನಾನು......ನಾನು ಪತನಾದ ಏಡೇ ವರುಷಕೆ ಈ ಪ್ರತುವಿಗೆ ನಮ್ಮವ್ವ ಕಟ್ಟ ಕೊನೇ ಫಸಲು-ನನ್ನ ತಂಗಿ ಸಿವುನಿ!....
{{gap}}ಉಟ್ಟಿರೋದು ಎಸರಿಗೆ ನಾಕು ಕುಳ ಆದರೂವೆ, ಈಗ ಉಳಿದಿರೋದುಸಿವುನಿ, ನಾನು ಇಬ್ಬರೇಯ!... ಅವಳಿ ಗಂಡು ಸಣ್ಣಕೆ ಕಡ್ಡಿಯಾಗೆ ಉಟ್ಟಿ, ಬದುಕಿರಾ ಅತ್ತುತಿಂಗಳೂವೆ ನವದೂ ನವದೇ ಸತೋಯ್ತಂತೆ. ಈಗಲೂವೆ ಅವ್ವಂಗೆ ಗಾಳಿ ಬೀಸಿದಂಗೆ ಯಾವಾಗಲಾರೂ ಆ ಕೂಸಿನ ಗ್ಯಾಪನ ಬರಾದುಂಟು. ಆಗ “ಇದಿಯಮ್ಮ ಆ ಕೂಸಿನ ಕಣ್ಣು ಮೂಗ ಬೋ ನೀಟಾಗಿ ತಿದ್ದಿದ್ದು ಕನೋ, ಲಕ್ಕ, ಅಮ್ಮ ದಕ್ಕಿಸಿಕಳಾಕೆ ಮುಕ್ಯ ನಾವು ಅದ್ರುಸ್ಟ ತಂದಿರನಿಲ್ಲ.”- ಯೋವ್ರ ಯೋಳ, ಕಣ್ಣೀರ ಚೆಲ್ಲಾಡಿಸಿದ್ದು ಅವ್ವ!...
{{gap}}ಇನ್ನೊಂದು ಅವಳಿ ಎಣ್ಣು-ಅವಳೇನೂ ಉಲುಮಲವಾಗಿ ಬೆಳುದು ಒಳ್ಳೆ ಕಡೀಕೆ ಲಗ್ನಾಗಿದ್ರೂವೆ, ಮೊದಲೆ ಕನ್ನೆರಿಗೇಲೆ ಮೊಗೀನ ಸೈತ ಪ್ರಾಣ ಬುಟ್ಟಿದ್ದು... ಅವಳು ಸತ್ತದ್ದೆ ಸತ್ತದ್ದು ಬ್ಯಾರೆ ಊರಿನ ನಮ್ಮ ಭಾವಂಗೂ ನಮ್ಮವೆ ಹೊಕ್ಕಳ ಸಮ್ಮಂದವೇ ಕಡುದೋಯ್ತು. ಅಮ್ಮು ಬ್ಯಾರೆ ಲಗ್ಧ ಆದಾಗ್ಯೂ ಬೂಪ ನಮ್ಮೆ ಯೋಳಿ ಕಳಿಸನೇ ಇಲ್ಲ..... ಗೆಜ್ಜುಗಣ್ಣ ಮಾತ್ರ ಇರೋವರೆಗೂವೆ ನಮ್ಮ ಗುದ್ದ ತಾಳಗಂಬದ ತರ ನಮ್ಮ ಸಂಸಾರಕ್ಕೆ ಬಲಭುಜವಾಗಿದ್ದ!
{{gap}}ಲಕ್ಕನ ಆಲೋಚ್ಛೆಯ ಒಂದು ತಿಗಣೆ ಕಚ್ಚಿ ತುಸ ಬ್ಯಾಳ್ಯ ಅಡ್ಡಗಟ್ಟೆ ಆಕಿತ್ತು. “ಹಾಳುಗೇರಿ ತಿಗಣೆ ತಾನೆ ಯಾಪಾಟ ಎಚ್ಚವೆ ಈ ಗುಡ್ಡಲ್ಲಿ!” ಗೊಣಗಿ, ಚಡ್ಡಿ ಒಳಗೆ ಹರಿದಾಡೊ ತಿಗಣೆಯಮ್ಯಾಲಿನಿಂದಲೆ ಹೊಸಗಾಕ್ತ, ಪೂನಾ ನಿಂತೋದ ಅವನ ಆಲೋಚೌ ಚಾಲೂ ಆಯ್ತ...
{{gap}}ಅಣ್ಣನ ಕುರುತೇ ಮನಸು ಸುತ್ತಾಡ್ತ ಇದ್ದದ್ದು, ಗೆಜ್ಜುಗಣ್ಣನ ರೂಪವ ಲಕ್ಕನ ಮುಂಡೈ ಕಡೆದು ನಿಲ್ಲಸಿದಂಗಾಯ್ತು: ಗಣೆಮರ ಬೆಳುದಂಗೆ ಬೆಳಿದಿದ್ದ ಎತ್ತರದ ಆಳು, ಮೊಖದಾಗೆ ಮಾರಮ್ಮ ಕಳ್ಳುಮುಳ್ಳು ಹೂದು ಅಲ್ಲಲ್ಲಿ ಸಣ್ಣಸಣ್ಣಗುಳಿ ಬಿದ್ದಿದ್ರೂವೆ, ಗೆಜ್ಜುಗಣ್ಣನೆ, ತನಗಿಂತಲೂವೆ ಎಚ್ಚಾಗಿ ಅಯ್ಯನ ವೋಲಿಕೆ ವೊತ್ತೋನು. ನಗಸಾರ ಮಾಡಾದರಲ್ಲೂ ಥೇಟ್ ಅಯ್ಯನೆ! ಯಾವ ಕೇಮೆ ಅದ್ರೂ ಸೈ, ಅಯ್ಯನ್ನೆ ಒಂದು ಕೈ ಮೀರಿಸೋನು!... ಅದುಕೇ ಊರಿನ ದೊಡ್ಡ ದುಳಗೊಳೆಲ್ಲ ಯಾವ ಸೀಮೆ ಬಿದ್ದರೂ ಮೊದ್ದು ಉಡುಕ್ತಾ ಇದ್ದದ್ದು ಗೆಜ್ಜುಗಣ್ಣ!...ಪಸಂದಾಗಿ ಗೇಯೊ ಎತ್ತು ಯಾರಿಗೆ ಬ್ಯಾಡದು?...
{{gap}}ನಮಗೂ ನಾಕು ಎಕರೆ ಕುಸ್ತಿ ಜಮೀನಿತ್ತು, ಅಯ್ಯನ ಲಗ್ಗದಲ್ಲಿ ಕೆಂಗಣ್ಣಪ್ಪನ ಅತ್ರ ಮಾಡ್ಡ ಸಾಲಕೆ ಬಡ್ಡಿ ಯೇರಿ ಯೇರಿ ಅಪ್ಪಾರ ಆಗಿ, ಅಯ್ಯ ಅಣ್ಣ<noinclude></noinclude>
e3izaqhmlvxvz49xd5a270yyx7ovnvs
ಪುಟ:ವೈಶಾಖ.pdf/೧೩೭
104
82066
316460
277461
2026-05-03T13:08:07Z
Shreelatha.Halemane
7642
/* Validated */
316460
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೨೧}}
ಏಡಾಳ್ವೆ ಮೂಗ್ನಲ್ಲಿ ಕವಡೆ ಕಟ್ಟಿ ಗೇದರೂವೆ, ಆ ವೊರೆ ಬಾರಕ್ಕೆ ನಮ್ಮ ನೇರಳೆ ಮರದ ಪಾಲಿನ ಜಮೀನ ಆವುತಿ ತಕ್ಕಂಡಿತ್ತು... ನಮ್ಮಯ್ಯ ಹೊಲದಂಚಿಗಿದ್ದ ಜಮ್ಮುನೇರಳೆ ಮರದ ಬುಡದಲ್ಲಿ ಕುಂತು, ಗೆಜ್ಜುಗಣ್ಣನ ಕೊಳ್ಳ ತಬ್ಬಿ, ನಮ್ಮೊಲದ ಕೆಬ್ಬೆಮಣ್ಣಿಗೆ ಕಣ್ಣೀರು ಸುರುಸ್ಥ. ನಮ್ಮವ್ವ ಆ ಕೆಂಪಾನೆ ಮಣ್ಣ ಕಯ್ಯ ಬೊಗಸೇಲಿ ಯೆತ್ತಿ ಯೆತ್ತಿ ತನ್ನ ತಲೆಮ್ಯಾಕ್ಕೆ ಸುರುಕು “ಕೆಟ್ಟೆವಲ್ಲಷ್ಟೋ...”ಅಂತ ಗೋಳಾಡುದ ಕಂಡೋರೆಲ್ಲ ಕಣ್ಣೀರಾಕ್ತ ವೋಯ್ತಿದ್ರು... ನಂಗಿನ್ನೂ ಹೈಲಾಟದ ವಯಸ, ನಮ್ಮ ಜಮೀನು ಬ್ಯಾರೆಯೋರ ವಸಕ್ಕೆ ವೊಂಟೋದರೆ, ಇನ್ನು ಈ ನೇರಿಳೆ ಮರದ ತಕ್ಕೆ ಬರಾದು ಬಂದಾಯ್ತದೆ ಅನ್ನಾದು ಧ್ವತ್ತಾಗಿ, ಆಗ್ಗೆ ಆದೋಟು ನೇರಿಳೆ ಅಣ್ಣ ಕಮಾಯಿಸುವ ಅಂತ, ಕಲ್ಲು ತಕ್ಕಂಡು ಬೀರಿ, ಉದುರ ನೇರಿಳೆ ಅಣ್ಣ ಆರುಸಿ ಆರುಸಿ ಚಡ್ಡಿ ಜೋಬಿಗೆ ತುಂಬುಕತ್ತಿದ್ದೆ.....
{{gap}}ಆಗ ನಾನು ಮಟಕೋಯ್ತಿದೆ. ನಮ್ಮಯ್ಯ ಕೆಂಗಣ್ಣಪ್ಪನ ತಾವು ಮತ್ತೆ ಅಯಿವತ್ತು ರೂಪಾಯ ಈಸುಗಂಡು ಅವನಟ್ಟಿಗೆ ಜೀತಕ್ಕೆ ಸೇರುಸಿದ್ದ. ಅಲ್ಲಿಂದ ಮಾರನೆ ವರುಸ ಕೆಂಗಣ್ಣಪ್ಪ ಅಯಿವತ್ತು ರೂಪಾಯಿ ಸಾಲ ತೀರುಸಿ, ಬುಂಡಮಾರು ಅದರ ಮ್ಯಾಲೆ ಅಯಿವತ್ತು ರೂಪಾಯಿ ಕ್ವಟ್ಟು ತಮ್ಮ ಅಟ್ಟಲೆ ಜೀತಕಿರುಸಿಕಂಡು...
ನನ್ನ ಕಂಡರೆ, ಗೆಜ್ಜುಗಣ್ಣಂಗೆ ಪಂಚಪ್ರಾಣ. ಅಯ್ಯ ನನ ಮಟ ಬುಡಸಿ ಕೆಂಗಣ್ಣಪ್ಪ ತಾವು ಜೀತಕ್ಕೆ ಇರುಸಿದ್ದೆ ಅಣ್ಣಂಗೆ ತಾಪ ಆಗಿತ್ತು. ಈಗ ಬುಂಡಮಾರ ಅಟ್ಟಿ ಸೇರುಸಿದ್ದು ಅವಂಗೆ ಇನ್ನೂ ಬ್ಯಾಸರಾಯ್ತು.
{{gap}}“ನಂಗೇನೂ ವೋದು ಬರಾವು ಕಲಿಯಾ ಪುಣ್ಯ ನನ್ನಣೇಲಿ ಬರೀನಿಲ್ಲ....ತಮ್ಮಂಗೂ ಮಟದಿಂದ ದೂರ ಮಾಡಿ ಬುಟ್ಯಲ್ಲ?” - ಅಂತ ಅಯ್ಯನ ಕುಟ್ಟೆ ಕದ್ರಕ್ಕೆ ಬಿದ್ದಿದ್ದ....
{{gap}}ಆದ್ರೆ ಬುಂಡಮ್ಮಾರ ಅಟ್ಟಿ ಬುಡಿಸಬೇಕಾದರೆ ಒಂದು ನೂರು ರೂಪಾಯಿ ಜಮಾ ಆಗಬೇಕು. ಯಲ್ಲಿಂದ ವೋಟು ದುಡ್ಡ ವೊಂದಿಸಾದು?- ಅದೇ ಕೊರಗ್ನಲ್ಲಿ ಕಾಲ ತಳ್ತಾ ಇದ್ದ ಅಣ್ಣ... ಇಂಗೇ ಇರೋನೂವೆ ಪುಣ್ಯಕ್ಕೆ ಎಡತೊರೆ ಸೀಮಿಂದ ಎಣ್ಣು ಕೂಡ್ತೀವಿಂತ ಯಾರೊ ಬಂದರು. ಅಯ್ಯ,
{{gap}}“ವಳ್ಳಿ ಸಮ್ಮಂದ, ನಿಂಗೂ ವಯಸ ಜಿನಾ ಜಿನಾ ಕಳುದಂಗೆ ಕಮ್ಮಿ ಆದಾತ, ಗೆಜ್ಜುಗ?- ಸುಮ್ಮೆ ವಷ್ಟುಗಯ್ಯಾ” ಅಂತ ಮೀಟ.
{{gap}}ಅವ್ವನ ವರಾತವೂ ಕಮ್ಮಿ ಇರನಿಲ್ಲ. ಲಕುಸಣದಲ್ಲಿ ಎಣ್ಣು ಅಂತಾ ತಗದಾಕೊ ಬಾಬತ್ತಿಂದಲ್ಲ. ಆದರೂವೆ ಅಣ್ಣ ಅಳದೂ ಸುರದೂ ತೊಂಟಿತಕರಾರು ತಗದು, ಒಂದು ದೀವಳಿಗೆ ದಾಟಿಸಿದ್ದ....<noinclude></noinclude>
kcc7uwlr9r3xmogo8li85b4it2crrf9
ಪುಟ:ವೈಶಾಖ.pdf/೧೩೮
104
82067
316461
277602
2026-05-03T13:08:50Z
Shreelatha.Halemane
7642
/* Validated */
316461
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=೧೨೨|right=ವೈಶಾಖ}}
{{gap}}ಇನ್ನೊಂದು ದೀವಳಿಗೇನೂ ಕಳೀತು. ಈಗ ಮಾತ್ರ ಅಯ್ಯನೂ ಅವನೂ ಒಕ್ಕಡೆ ಅವ್ರು ಇನ್ನೊಕ್ಕಡೆ, ಇವಳು, ಜಪ್ಪಯಾಂದು ಜಗ್ಗಾಡ್ಡೆ ಗೆಜ್ಜುಗಣ್ಣಂಗೆ ಪಚಂಡಿ ಗಂಟಾಕಿ ವಪ್ಪುಸಿದ್ರು...
{{gap}}ವಪ್ಪಿಗಂಡಮ್ಯಾಲೇ ಬಂದದ್ದು ಗೋಳು... ಲಗ್ಲ ಅಂದ್ರೆ ಬಾಯಿ ಮಾತ? -ಬಡಸ್ತನದ ಲಗ್ಗ ಅಂದರೂವೆ ಮುನ್ನೂರು ಮುನ್ನೂರೈವತ್ತು ಇಲ್ಲೆ ನಡೀತದ?... ವೋಸ್ಸು ಅಣವ ಯಾವ ಮುಲಾಜೂ ಇಲ್ಲೆ ಯಾರ ಕ್ವಡಾರು?... ಜಪ್ಪಯ್ಯನ ಮಠದ ಸ್ವಾಮಿಗಳೇನೊ ಅಯ್ಯನ ಕಯ್ಲಿ ಒಂದು ಜತೆ ಕೆಂಪು ಕಡ್ಡಿ ಪಂಚ್ಯ ವರನಿಗೇಂತ ಮುಪತ್ತಾಗಿ ಊಟ್ಟಿದ್ದಂತೆ. ರಾವಳಾಸುರನ ವೊಟ್ಟೆಗೆ ಅರೆಕಾಸಿನ ಮಜ್ಜಿಗೇಂತ ಅದ್ಯಾವ ಮೂಲೆ ಎಟಕಾತು?... ಲಗ್ದಾದ ಮ್ಯಾಲೆ ಗೆಜ್ಜುಗಣ್ಣನ ಜೀತಕಿರುಸ್ತೀನಿ ಅಂತವಾ ಕೆಂಗಣ್ಣಪ್ಪನ ಅತ್ತಿರೆವೆ ಅಯ್ಯ ಆರು ನೂರು ರುಪಾಯ ಈಸಗಂಡು ಅದರಾಗೆ ಒಂದು ನೂರು ರೂಪಾಯ ಬುಂಡಮ್ಮಾರಿಗೆ ಕ್ವಿಟ್ಟು ನನ್ನ ಜೀತ ಬುಡಸಿದ್ದ. ಉಳಿಕೆ ಅಣವ, ಲಗ್ಗದ ಜಿನ ಬರಾವತ್ತೂ ಜಾಪಾನಾಗಿಡು ಅಂತ ಅವ್ವನ ಕಯ್ಲಿ ಕ್ವಿಟ್ಟಿದ್ದ... ಅಣ್ಣಂಗೆ ಆ ಅಣದಲ್ಲಿ ತನ್ನ ಲಗೃಕ್ಕಿಂತ ಒಂದು ಏಡು ತುಂಡು ಹೊಲಾನಾರ ಕಂಡುಕಳಾವ ಅನ್ನಾ ಆಸೆ, ಅಯ್ಯನ ಮನಸಿನಾಗೂ ಈಚೀಚೆ ಅದೇ ಇರಾದೆ ಇಣುಕಕ್ಕೆ ಸುರು ಮಾಡಿತ್ತು. ಆದ್ರೆ ಅವ್ವ ಬುಡಬೇಕಲ್ಲ;
{{gap}}“ಈ ಅಣ, ಗೆಜ್ಜುಗನ ಲಗೃಕೇ ಮುಡುಪು... ಬ್ಯಾರೆ ಯಾತಕೂ ಇದ್ದ ಮುರುಸಕ್ಕೆ ನಾ ವಸ್ತುನಾರಿ.” -ಉಡ ಇಡಿದಂಗೆ ಒಂದೆ ಪಟ್ಟು, ಇಡಿದ್ದು!....
{{gap}}ಇಂಗೆ ಅಟ್ಟೇಲಿ ಲಟಾಪಟಿ ನಡದು, ಕಡೀಕೆ ಆ ಅಣವ ಗೆಜ್ಜುಗಣ್ಣನ ಲಗ್ಗಕೇ ಬಳಸೋದೂಂತ ಯೆಲ್ಲಾರು ವಷ್ಟುಗೆ ಆದಮ್ಯಾಗೆ, ಅವ್ವ ನಮ್ಮ ಕೇರಿಯ ಪರ್ತಿ ಗುಡ್ಲುಗುಡ್ಡಿಗೂ ವೋಗಿ - “ಅತ್ತಿಗೆಮ್ಮ, ನನ್ನ ಇರೀ ಹೈದ ಗೆಜ್ಜುಗ ಇಲ್ವ-ಅವಂಗೆ ಲಗ್ಗೆ ಯೇರ್ಪಾಡು ಮಾಡ್ತಾ ಇವಿ. ಎಣ್ಣ ಎಡತೊರೆದು” ಅನ್ಮಾದು, ಇನ್ನೊಂದು ದಪ ಅಂಗೇ ಗಾಳಿ ಬೀಸದಂಗೋಗಿ, “ಮಾತ್ರ ನೀವೆಂದೂ ಲಗ್ನಕ್ಕೆ ತೆಪ್ಪಿಸ್ಕೋಬ್ಯಾಡದು” ಅನ್ನಾದು... ಇಂಗೇಯೆ ಅವಳೆ ಸಸಾರ ಇದ್ದ ಕೆಲವು ಉತ್ತುಮರ ಅಟ್ಟಿಗಳೂ ವೋಗಿ ತನಗೆ ಗೆಲವು ತಂದಿದ್ದ ಚಮಾಚಾಲ್ವ ಬಿತ್ತಿ ಬಂದಿದ್ಲು...
{{gap}}ಮೊಸರಲ್ಲಿ ಕೆಂಗಣ್ಣಪ್ಪ ತಲಕಾಡಿಗೆ ಅವರ ಸಮ್ಮಂದೀಕರ ಅಟ್ಟಿಗೆ ವೋಂಟಿದ್ದ. ಕೆಂಗಣ್ಣಪ್ಪ ಅಜ್ಜನ ಕಾಲಕೊ ಮುತ್ತಜನ ಕಾಲಕೊ ಅವರು ತಲಕಾಡೇ ಮೂಲವಂತೆ. ಇಂದ್ರೆ ಇವರ ಅಜ್ಜಂಗೂ ಮುತ್ತಜ್ಜಂಗೂ ದಾಯಾದಿಗೊಳು ಕೋಲು ಯವಾರ ನಡುಸಿ ಇವ್ರ ಗದ್ದೆಗಳೆಲ್ಲ ಲಪಟಾಯಿಸಿದ್ರಂತೆ. ಇಲ್ಲಿಗೆ ಬಂದಮ್ಯಾಲೆ ಇವರಜ್ಜ<noinclude></noinclude>
bkbca5bvnvwhlvqnnmuwk4n4c9b0wf4
ಪುಟ:ವೈಶಾಖ.pdf/೧೩೯
104
82068
316464
277605
2026-05-03T13:12:31Z
Shreelatha.Halemane
7642
/* Validated */
316464
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೨೩}}
ಇಲ್ಲಿ ಆಸ್ತಿ ಕ್ವಂಡಿದ್ದು, ಆ ಅಸ್ತ್ರ ಇವರಯ್ಯ ರುದ್ದಿ ಮಾಡಿದಂತೆ. ಈಗ ಆ ಯವಾರವೆಲ್ಲ ಹಳೆಮರಸೋಗಿ ತಲಕಾಡೂ ಈಗಿನ ತಲೆಯೋರು ನಮ್ಮ ದರುಮನಳ್ಳಿಗೆ, ಇಲ್ಲಿಯೋರು ತಲಕಾಡಿಗೆ, ವೋಗಿ ಬತ್ತಾ ಇಂದ ಸುಮ್ಮಂದವ ಮತ್ತೆ ರೂಡಿ ಮಾಡಿಕಂಡವೆ, ಇಂಗಿರುವಾಗ, ಒಂದು ಜಿನ ತಲಕಾಡ್ನಿಂದ ಒಂದು ಕಾಗಜ ಬಂದಿತ್ತಂತೆ. ಇವರ ನಂತರ ಉಡುಗೀದು ಲಗ್ನ ಯೇರ್ಪಾಡಾಗಿ, ಈಳ್ಯದ ಸಾಸ್ತ್ರಕ್ಕೆ ಬರಬೇಕು ಅಂತಾ... ಕೆಂಗಣ್ಣಪ್ಪ ಈಳ್ಯದ ಸಾಸ್ತ್ರಕ್ಕೆ ವೋಗೋದು ಅಸಂದರ್ಭಾಗಿ ದಾರಾಮೂರ್ತಕೆ ವೊಂಟೋನು, ನಮ್ಮ ಗೆಜ್ಜಗಣ್ಣನ ಕರದು
{{gap}} ಗೆಜ್ಜುಗ, ತಲಕಾಡ್ಲೆ ಮದುವೆಗೆ ವೊಂಟಿ ಕನೆ. ನನ್ನ ಜ್ವತೆ ನೀನೂ ಬಾಗ್ಲ. ನಂಗೊಬ್ಬಂಗೇ ವೋಗಕ್ಕೆ ಸಿಬಿ” ಅಂದು, ಗೆಜ್ಜುಗಣ್ಣ ತೆಪ್ಪಾಕಕ್ಕೆ ಯೇಟೇಟು ಪರ್ಯತ್ನ ಮಾಡಿದ್ರೂ ಬುಡದೆ, ವಂದಿಗೇ ಕರಕಂಡು ನಡುದಿದ್ದ!...
{{gap}}ಈಗ ನಮ್ಮಯ್ಯ ಗುಡ್ಲು ವಳು ಮುಲುಕಾಡಿದ್ದ:
{{gap}}“ಇದೇನ ಈವಯ್ಯ ಕೇವು?... ಲಗ್ಲಾಗೋ ಉಡುಗ್ನ ಅವನ ಪಾಡಿಗೆ ಬುಡದೆ, ಕಾಸಿ ರಾಮೇಶ್ವರಕೆ ವೊಂಟೋರಂಗೆ ಊರೂರ ಸುತ್ತಿಸಾದು?... ಈ ವಯ್ಯಂಗೆ ಕೇಮಿದ್ರೆ, ಅವನೊಬ್ಬನೇ ವೊಗಲೇಳು. ಅಣ ಈಸುಗಂಡಾಕ್ಷಣ ಈಗ್ಗೆ ಜೀತಕೆ ಕ್ವಿಟ್ಟೆವಾ ಹೈ?... ಇನ್ನೇನ ತಿಂಗಳೊಪ್ಪತ್ನಲ್ಲಿ ಲಗ್ಗಯದ್ದೇಯೇಳ್ತದೆ. ಅಮ್ಮಾಕೆ ಮಾರಾಯನಂಗೆ ಕರಕಂಡೋಗ್ಲಿ ಯಾರು ಬ್ಯಾಡ ಅನ್ನಾರು?”...
{{gap}}ಆದ್ರೆ ಕೆಂಗಣ್ಣಪ್ಪ ನಮ್ಮ ಗೆಜ್ಜುಗಣ್ಣನ ಕರಕಂಡೋದ ಕಾರಣವೆ ಬ್ಯಾರೆ. ಅದು ಊರಿನೋರಿಗೂ ತಿಳುದಿದ್ದ ಇಸ್ಕಾನೆ-ಗೆಪ್ತಿ ಆಯ್ತಿದ್ದಂಗೆ, ಕತ್ತಲೇಲೆ ನಾನು ನಗಾಡ್ಡೆ...
{{gap}}ಕೆಂಗಣ್ಣಪ್ಪಂಗೆ ದೊಡ್ಡ ದೊಡ್ಡ ಗುಳ್ಳೆ ಇರೊ ಕೆಂಜರಗಣ್ಣು. ಅವನು ಕಣ್ಣ ಮೆಡರಿಸಿದಾಗ, ಯೆಂಝ ಎದೆ ಜಲ್ ಅನ್ನುದೆ ಇರಕ್ಕಿಲ್ಲ. ಆದ್ರೆ ವಳಾಗಡೆ ಅವನು ಪುಕ್ಕಲ ಅಂದ್ರೆ ಪುಕ್ಕಲ!...ಕಿವ್ಯಾಗೆ ಬಿಳಿ ಅಳ್ಳು ಮೆಟ್ಟಿರೊ ಅತ್ತಗಡಕು, ಕಯ್ಲಿ ಬಂಗಾರದ ಕಪ್ಪ-ಇವು ಅಮ್ಮು ಬೆಳುಕ್ಕಲ್ಲಿ ನಡದಾಗ ಫಳಾರ್ ಫಳಾರ್ ವೋಳೀತಿರವೆ. ಇವ್ರ ಆಕ್ಕಂಡು ದೂರದ ಸೀಮೆಗೆ ಒಬ್ಬೊಂಟ್ಯಾಗಿ ಪಯ್ದು ವೋದಾಗ ಅಲ್ಲಿ ಯಾರಾರು ದಾರೀಲಿ ಅಡ್ಡಾಕಿ, ನಾಕು ಜಡ್ಡು ಇನ್ನೂ ಕಿತ್ತುಗಂದ್ರೆಅನ್ನಾ ಬಯ!... ಅದುಕೆ, ಪರವೂರಿಗೆ ವೊಂಟಾಗ, ಜತೆ ಯಾರಾರ ಇರಲೇಬೇಕು... ಅದೇ ಕಾರಣಕ್ಕೆ ನಮ್ಮ ಗೆಜ್ಜುಗಣ್ಣನ ಇಕ್ ಮತ್ತು ಮಾಡಿ ತನ್ನೊಂದಿಗೆ ವಯ್ದಿದ್ದ... ಉಣಸೂನರಿವನ್ನೂ ಎತ್ತಿನ ಗಾಡಿ ಪಯ್ದ. ಅಲ್ಲಿಂದಾಚೆ ಮಯಸೂರು, ಮೈಸುರಿಂದ ತಲಕಾಡಿಗೆ ಬಸ್ಸಿನಲ್ಲೆ ಮುಟ್ಟಿದ್ದರು....<noinclude></noinclude>
d08xr37uqyatq273b3x1i5v2ho66row
ಪುಟ:ವೈಶಾಖ.pdf/೧೪೦
104
82069
316462
277898
2026-05-03T13:10:19Z
Shreelatha.Halemane
7642
/* Validated */
316462
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=೧೨೪|right=ವೈಶಾಖ}}
{{gap}} ಇವರು ವೋದ ಮಾರನೆ ಜಿನಕೆ ಧಾರೆ. ಮೂರ್ತ ಮದ್ದಿನ ಒಂದೂವರೆ ಗಂಟೆಗೆ ಅಂದಿದ್ರಂತೆ. ಗೆಜ್ಜುಗಣ್ಣ ಯೋಚೆ ಮಾಡಿರಬೇಕು... ಈ ಸುಭ ಕಾರ್ಯವೆಲ್ಲ ಮುಗುದು, ಈ ಉತುಮರಿಗೆಲ್ಲ ಗಂಡಸರ ಪಂಕ್ತಿ ಎಂಗಸರ ಪಂಕ್ತಿ ಊಟ ಮುಗುದು, ನಮಗೆ ವೊರಗಿನೋದ್ದೆ ಉಣ್ಣಕ್ಕೆ ಇಕ್ಕಬೇಕಾದ್ರೆ ಮುಚ್ಚಂಜೆಗೆ ಮುಂಚೆ ಅಂತೂ ಸಾದ್ಯವೇ ಇಲ್ಲ. ಅಲ್ಲೀಗಂಟ ತಾನ್ಯಾಕೆ ಗುರುತು ಪರಿಚಿತ ಇಲ್ಲದಿರೋ ಈ ಊರಿನಾಗೆ ಒಬ್ಬೆ ಲಗ್ಗದ ಅಟ್ಟಿ ಮುಂಬೈ ವಾಲಗದೋರ ತಾವು ಮೂಗುದೆವ್ವದಂಗೆ ಕುಂತಿರಾನೆ? – ಅನ್ನುಸಿರಬೇಕು. ಅಂಗೇ ತಿರುಗಾಡಿಕಂಡು ಬರಾನೆ ಅಂತ ವೊಂಟನಂತೆ. ವೈದ್ಯಸ್ವರ ಸ್ವಾಮಿ ಗುಡಿ ಇಂದುಗಡೇಲಿ ಉದ್ದಕ್ಕೂ ಬೆಟ್ಟದಂಗೆ ಹೇರಿಕಂಡಿದ್ದ ದಪ್ಪ ದಪ್ಪ ಗುಡ್ಡೆ ಮರಳು ರಾಸೀಲಿ ಊರಿನ ಹೈಕಳು ಗುಂಪುಗುಂಪಾಗಿ ಮರಳು ರಾಸಿ ಮ್ಯಾಗ್ನಿಂದ ಕೆಳಕ್ಕೆ ಜಾರಾದು ಪುನಾ ಆ ಮರಳು ಗುತ್ತೇನೆ ಅತ್ತೋಗಿ ಕೆಳಕ್ಕೆ ಜಾರಾದು-ಇಂಗೇ ಆಡ್ತಾ ಇದ್ವಂತೆ!... ನಮ್ಮಣ್ಣಂಗೂ ಆ ಹೈಕಳ ಆಟ ಕ್ವಾಡಿ ಆಸ್ಯಾಗಿ, ಅವನೂ ವಸಿ ವ್ಯಾಳ್ಯ ಅಲ್ಲೆ ಅವರೊಂದಿಗೆ ಮರಳಿನಲ್ಲಿ ಜಾರಿ ಜಾರಿ ಕುಸಪಟ್ಟಂತೆ!... ಆಗ ಪೂಜೆ ಮುಗುಸಿ ವೊರೀಕೆ ಬಂದ ಗುಡಿ ಪುರೋಯಿತರು, ಚಿಕ್ಕ ಚಿಕ್ಕ ಹೈಕಳ ಜ್ವತೆ ಜಾರತಿ ನಮ್ಮ ಧಾಂಡಿಗ ಅಣ್ಣನ ನ್ವಾಡಿ,
{{gap}}“ಯೇನೊ, ಮೀಸೆ ಬಂದ ಗಣ್ಯ-ಮರಳಿನಲ್ಲಿ ಜಾರಕ್ಕೆ ನಿಂಗೂ ಆಸೆ ಆಯೇನೊ?... ನಮ್ಮೂರೆ ವೊಸನಂಗೆ ಕಾಳೇ, ಯಾವು ನಿಮೂರು?” - ಕ್ಯಾಲಿದರಂತೆ
{{gap}}“ನಮ್ಮೂರು ದರುಮನಳ್ಳಿ, ಸೋಮಿ, ಇಲ್ಲಿ ನಡೀತಿರೋ ಮದ್ಯೆಗೆ ಬಂದಿರೋ ನೆಂಟರ ಜ್ವಕ್ಕೆ ಬಂದಿದ್ದಿ” ಅಂದೋನು, ಪರೋಯಿತರು “ಸರಿ, ಸರಿ”ಅಂತ ಎಜ್ಜೆ ಕೀಳ್ತಿರಬೇಕಾದರೆ,
{{gap}}“ಸೋಮಿ, ಸೋಮಿ, ಈ ಮರಳು ದಿಬ್ಬ ದಾಟಿ ವೋದರೆ, ಆಚೆ ಇರಾದೇನು - ವಸಿ ಯೋಳಿ-ಸೋಮಿ” ಅಂತ ಬೇಡಿದ್ರಂತೆ.
{{gap}}“ಈ ಮರಳು ದಿಣ್ಣೆ ಆಚೆ ಇರೋದು ನದಿ. ಕಾವೇರಿ ನದಿ. ಈ ನದಿಯ ಆಚೆ ದಡದಾಗಿರೋ ಊರೇ ಮಾಲಂಗಿ...”
{{gap}}ಪರೋಯಿತರು ಇನ್ನೂವೆ ಮಾತ ಮುಗಿಸ್ತೇ ಇಲ್ಲ. ನದಿ ಅದೆ, ಅನ್ನಾ ಸುದ್ದ ಕರ್ನಕೆ ತಲುಪ್ಪ ಕೂಡ್ಲಿ, ಬಿದ್ದಂ ಬೀಳ ಅಲ್ಲಿಂದ ವಾಟ ವೋಡದಂತೆ ನಮ್ಮಣ್ಣ...
{{gap}}ಹೊಳೆ ತಲುಪತ್ತೂ ನೀರು ಕಂಡು ಅಣ್ಣ ಕುಣುದಾಡಿದನಂತೆ... ನೀರು<noinclude></noinclude>
nf0e9mjbuv1o5ofv6s607bw8rgwe5rm
ಪುಟ:ವೈಶಾಖ.pdf/೧೪೧
104
82070
316463
277899
2026-05-03T13:11:21Z
Shreelatha.Halemane
7642
/* Validated */
316463
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೨೫}}
ಒಂದಿದ್ರೆ ಗೆಜ್ಜುಗಂಗೆ ಈ ಪರ್ಪಂಚದಾಗೆ ಬ್ಯಾರೆ ಯಾವೂ ಬ್ಯಾಡ. ನೀರು ಕಂಡ ಕಡೆ, ಅದರೊಳೀಕೆ ಬಿದ್ದು ಈಜು ವೊಡಿಯೊ ತೆವಲು. ಈ ತೆವಲು ಕಂಡೇ ನಮ್ಮೂರಿನೋರು” ಇವನೆಲ್ಲೊ ಇಂದಿನ ಜನ್ಮದಲ್ಲಿ ಎಮ್ಮೆ ಕ್ವಾನ ಆಗಿರಬೇಕು!” ಅಂತಿದ್ರು.... ಬೇಕಾರೆ-ಮೂಢಲ್ಲಿ ಸ್ವಾಮಿ ಉದಯವಾಗಿ, ಸಂದೆ ಕತ್ತಲಲ್ಲಿ ಕರಗೋಗುಂಟ ನೀರಿನಲ್ಲಿ ಬಿದ್ದಿರಿಯೇನ್ದ ಅಂದರೆ, ಓ-ಸೈ, ಬಿದ್ದಂಡೇ ಇತ್ತೀನಿ, ಅನ್ನಾ ಬೂಪ!...
{{gap}}ಈಚೆ ದಡದಲ್ಲಿ ಮೂರು ನಾಕು ಜನ, ಆಚೆ ದಡದಲ್ಲಿ ಏಡೊ ಮೂರೂ ಆಳು ನ್ಯಾಡಿದ್ದಂಗೇಯ ಅಂಗಿ ಕಳುಚಿ ದಡದ ಮರಳಿನಲ್ಲಿ ಎಸ್ಸು, ಹೊಳೆ ನೀರಿಗೆ ದುಢುಂದೆ ಬಿದ್ದಿದ್ದೆ ಬಿದ್ದಿದ್ದು... ಇವನು ಈಜ ವೊಡೆಯೊ ಕುಸಾಲು ಕ್ವಾಡ್ರ ಏಡೂ ಕಡೆಗಿದ್ದ ಜನ,
{{gap}}“ಯಾವೋನಪ್ಪ ಇವನು? -ಈಟು ಸೊಕ್ಕಾಗಿ ಈಜ ವೋಡೀತಾ ಅವ್ವಲ್ಲ?”... ಅಂತ ಬೆರುಗಾಗಿ ಮೂಗಿನ ಮ್ಯಾಲೆ ಬೆಳ್ಳಿಟ್ಟುಗಂಡು ಗೊಂಬೆಗಳ ತರ ನಿಂತಿದ್ರಂತೆ....
{{gap}}ಅರ್ದ ಮುಕ್ಕಾಲು ಗಂಟೆ ಸ್ವಚ್ಚಾಗಿ ಈಜುತಾ ಇದ್ದೋನು, ಮೀನಿನಂಗೆ ನೀರಿನಲ್ಲಿ ಇಲ್ಲಿ ಮುಳುಗಿ ಅಲ್ಲಿದ್ದು, ಮುನಾ ಮುಳುಗಿ ವಸಿ ಸಮಯ ಯಲ್ಲೂ ಕಾಣಿಸ್ತ ಇದ್ದಾಗ, ಆಚೆ ಈಚೆ ದಡದ ಜನ ಮುಳುಗೋದೊ ಯೇನೊ ಅಂತ ಗಾಬರಿ ಆಗಿದ್ರಂತೆ, ದೂರದಲ್ಲಿ ಮುನಾ ನೀರಿನಿಂದ ಮ್ಯಾಕ್ಕೆ ಕಾನುಗ್ಗ ಅವನ ತಲೆ ಕಂಡು ಅವಿಗೆ ಸಮಾಧಾನ ಆಯ್ತಂತೆ... ಮತ್ತೆ ಈ ಮಾರಾಯ ನೀರಿನಲ್ಲಿಯೆನೇನೊ ಕಸರತ್ತು ಮಾಡಿದ್ದು, ವಸಿ ವೊತ್ತು, ಸತ್ತ ಹೆಣದಂಗೆ ಅಂಗಾತ್ತ ನೀರಿನ ಮ್ಯಲೆ ತೇಲಿದ್ದನಂತೆ... ಕಡೀಕೆ ಮುನಾ ಮಕಾಡೆ ಆಗಿ, ಕಯ್ಯಲ್ಲಿ ನೀರು ಬಡೀತ ಜೋರು ಜೋಗ್ನಿಂದ ಈಜಕ್ಕೆ ಸುರುಮಾಡಿದಂತೆ..
{{gap}}ಇಂಗೆ ಕುಸಾಮತ್ನಿಂದ ಈಜುತಾ ಈಜುತಾ ಮುಂದು ಮುಂಬೈ ವೋಯ್ತಾ ಇದ್ದೋನಿಗೆ ಇದ್ದಕ್ಕಿದ್ದಂಗೆ ಏಡೂ ದಡದ ಕಡೆಗಿದ್ದ ಮಂದಿ ಕೂಗಿಕಂಡ್ರಂತೆ:
{{gap}}“ಅದು ನಿರಿನ ಮಡು, ಅಲ್ಲಿ ಸೆಳುತ ಅದೆ. ಆ ಕಡೀಕೆ ವೋಗಬ್ಯಾಡ...”
{{gap}}ಅವರು ಕೂಗು ಆಕದ್ದು ಅಣ್ಣಂಗೆ ಕ್ಯಾಳಿತೊ, ಇಲ್ಲವೊ... ಗಾಚಾರ, ಅಂಗೇ ಮಯ್ಯಮ್ಯಾಲೆ ಗ್ಯಾನ ಇಲ್ಲದೇಯ ಈಜುತ ಈಜುತ ಮಡು ಇದ್ದ ಜಾಕ್ಕೆ ವೋಗಿ, ಅಲ್ಲಿ ನೀರಿನ ಸೆಳುತಕ್ಕೆ ಸಿಕ್ಕಿ, ಅದು ಅವನ್ನ ವಳೀಕೆ ಎಳಕಂಡತಂತೆ. ಜಾಗ ಸ್ವಸದು. ಅಣ್ಣಂಗೆ ತಿಳೀನಿಲ್ಲ. ಎಂತಾ ಸುಳಿಗೆ ಸಿಕ್ಕಿದ್ರೂ ಪಾರಾಗೊ ಗಂಡೇಯ. ತಟ್ಟನೆ ಕಾಲ ಇಡುದು ಎಳದಂಗಾಗಿರಬೇಕು. ವಳಿಕೆ ವೊಂಟಡೋಗಿರಬೇಕು...<noinclude></noinclude>
76635njnrsm22m5iru5mfsrthpf5sio
ಪುಟ:ವೈಶಾಖ.pdf/೧೪೨
104
82071
316469
277900
2026-05-03T13:16:47Z
Shreelatha.Halemane
7642
/* Validated */
316469
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=೧೨೬|right=ವೈಶಾಖ}}
{{gap}}ಜನ ಸ್ವಾಡುತ್ತಲೆ ಇದ್ರಂತೆ. ಈಗ ಜ್ವರೀಕೆ ಬತ್ತಾನೆ, ಆಗ ಜ್ವರೀಕೆ ಬತ್ತಾನೆ ಅಂತ ಬೋ ವೊತ್ತಿಗಂಟ ಆಸೆ ಇಟ್ಟುಗಂಡೆ ನಿಂತಿದ್ರಂತೆ. ಆದ್ರೆ ಏಟೋತ್ಪಾದೂವೆ ಮ್ಯಾಕೆ ಅವನು ಬರದೇ ವೋದೆ ಮ್ಯಾಲೆ, ಗಂಗಮ್ಮ ತಾಯಿ ಅವನ್ನ ವಳೀಕೆ ಎಳಕಂಡ್ರು ಅಂತ ಖಾತ್ರಿ ಆಯ್ತಂತೆ!<br/> |
{{gap}}ಆ ಕಿವಿಂದ ಈ ಕಿವಿಗೆ ಸುದ್ದಿ ಓಡಾಡಿ, ಮದ್ಯೆ ಅಟ್ಟಿಗೂವೆ ಸುದ್ದಿ ಮುಟ್ಟಿತಂತೆ. ತಕ್ಷಣ ಕೆಂಗನ್ನಪ್ಪ, ಅಮ್ಮ ನೆಂಟರುಯೆಲ್ಲಾರು ಓಡಾಡಿಕಂಡು ಮೊಲಿಸು ಟೇಸನ್ ಕಂಪ್ಲೇಂಟು ಕ್ವಡಾದರ ಸ್ವತ್ತತೆ, ನಮ್ಮಲ್ಲೂ ಒಬ್ಬ ಆಳ ಓಡಿಸಿದ್ರು... ಮಾರನೆ ಜಿನ, ನಮ್ಮ ಅತ್ತಿರದ ನೆಂಟರು ಇಸ್ಪರುಯೆಲ್ಲಾರು ಕರಕಂಡು ತಲಪೋದು ಏಳು ಮದ್ದಿನ್ನವೇ ಆಗಿತ್ತು. ಆವೊತ್ತೆಲ್ಲ ಸಂದೆವ ಉಡುಕಿದ್ದಲ್ಲಿ, ನಾನಾಗೂ ಲಾಟೀನು ಬೆಳುಕಿನಲ್ಲಿ ಹೊಳೆ ಉದ್ದಕೂ ಉಡುಕಿ ಉಡುಕಿ ಸಾಕಾಗೊಯ್ತು. ಅದರ ಮಾರನೆಗೆ ಸಿವನಸಮುದ್ರದಿಂದ ತಲಕಾಡ ವೋಲೀಸು ಟೇಸ ಸುದ್ದಿ ಬಂದಿತ್ತು. ನಮ್ಮ ಗೆಜ್ಜುಗಣ್ಣನ ದೇಯಾವ ಕಾವೇರಿ ಹೊಳೆ ನೀರು ಮಾಲಂಗಿ ಮಡುವಿನಿಂದ್ದೂ ವಳಗೇ ಉಲ್ಲಿಸಿಕಂಡೋಗಿ, ಸಿವನಸಮುದ್ರದ ಕಟಕಟೆಲಿ ಸಿಕ್ಕಾಕಿಸಿತ್ತು... ಇಲ್ಲಿ ಟೇಸನ್ನೋರು ನಮಗೆ ಇಸ್ಯ ತಿಳಿಸುದು, ಆ ಸುದ್ದಿ ವಂದಿಗುಟ್ಟೆ ನಾವಲೂವೆ ಸಿವನಸಮುದ್ರಕ್ಕೋಗಿ, ಪೊಲೀಸು ಮಾಜರು ಮುಗುದು ಅಣ್ಣನ ದೇಯವ ಅವರು ನಮಗೊಪ್ಪಿಸ್ಥ ಮ್ಯಾಲೆ, ಹೊಳೆ ತೀರದಲ್ಲೇಯ ಗುಂಡಿ ತಗುದು, ಅಮ್ಮ ಅಲ್ಲೆ 'ಒಪ್ಪ' ಮಾಡಾಯ್ತು... ಅವ್ವ ತನ್ನೆದೆ ಬಡಕತ್ತ,<br/>
{{gap}}“ಹಯ್ಯೋ, ನನ್ನ ಕಂಡಂಗೆ ಇಂತಾ ಅಪಮುರ್ತ್ಯು ಕಾದಿತ್ತ... ಕಾವೇರಿ ತಾಯಿ, ಅವನ್ನ ನಿನ್ನೋಳೀಕೆ ತಕ್ಕಂಡು ತುರುಪ್ತಿ ಪಟ್ಯಾ?” ಗೋಳುಗರೀತಿದ್ರೂವೆ, ಅಯ್ಯನ ಕಣ್ಣಲ್ಲಿ ಒಂದು ತೊಟ್ಟುನೀರು ಬಂದಿರನಿಲ್ಲ.... ಅಯ್ಯ ಇಗ್ರದಂಗೆ ಕುಂತೇಇದ್ದ. ಯೆಸ್ಕೊ ವ್ಯಾಲ್ಯ ಕಳುದಮ್ಯಾಲೆ,<br/>
{{gap}}“ನನ್ನ ಕಣ್ಣಲ್ಲಿ ಒಂದನಿ ನೀರಾದ್ರೂ ಸುರೀತಾ ಇಲ್ವಲ್ಲ-ಹಯ್ಯೋ, ಈ ಆಳುಗೇರಿ ಕಣ್ಣಾದ್ರು ಯಾಕಿರಬೇಕು-ಬಿರನೆ ಇಂಗೋಗಬಾರ?”- ಬೇಲುಗರೆದದ್ದು ಬೇಳುಗರೆದದ್ದೇಯ...<br/>
{{gap}}ಅಣ್ಣನೆ ಇಲ್ಲದಿದ್ದ ಮ್ಯಾಲೆ, ಇನ್ನು ಅವನ ಲಗೃಕ್ಕೆ ಅಂತ ಕೆಂಗಣ್ಣಪ್ಪ ಆತ್ರ ಸಾಲ ಮಾಡ್ಡ ದುಡ್ಡಲ್ಲಿ ನುರು ರಾಪಾಯ ಬುಂಡಮ್ಮಾರಿಗೆ ಕ್ವಟ್ಟು ಮೊಧೇ ನನ್ನ ಜೀತ ಬುಡಿಸದ್ದಾಗಿತ್ತು. ಇನ್ನೊಂದು ನೂರು ರೂಪಾಯಿ ನಮ್ಮಣ್ಣನ ಸೊರ್ಗ ಸೇರುಸಕ್ಕೆ ಕರ್ಚಾಯ್ತು. ಬುಂಡಮಾರಿಗೆ ಅಣ ಇಂದಿರುಗಿದ್ದಾಗ, ಬುಂಡಮಾರದು ಒಂದೇ ವಾಕ್ಸ:<noinclude></noinclude>
qfiu2q7wwvqqg8z779ihcw1fsgffvmx
ಪುಟ:ವೈಶಾಖ.pdf/೧೪೩
104
82072
316468
277904
2026-05-03T13:16:16Z
Shreelatha.Halemane
7642
/* Validated */
316468
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೨೭}}
{{gap}}“ನಿನ್ನ ಅಣ ತಕ್ಕಂಡು ನಾಯೇನು ಮಡಿಕೊಳ್ಳಿ, ನಿಂಗ?... ನಂಗೆ ಬೇಕಾಗಿರುದು ನಿನ್ನ ಹೃದ-ಲಕ್ಕ... ಇದ್ರೂ ಈಟು ಜಿನದಿಂದ್ಲವೆ ನನ್ನೊಟೇಲಿ ಉಟ್ಟಿದ ಕೂಸಿನಂಗೇ ಸಾಕಿನ್ನಿ ಕನೊ. ಸಪ್ಪಟೆ ಮಾತಲ್ಲ. ಬೇಕಾದರೆ ನಿನ್ನ ಹೈದ್ರೇ ಕ್ಯಾಳು” ಅನ್ತಾ ಅನ್ತಾ ಇನ್ನೊಸಿ ಹೊಗೆಸೊಪ್ಪನ್ನೂ ಈಳೆದೆಲೇನೂ ದವಡೆಗೆ ವತ್ತುರಿಸಿಕೊಂಡು, ಅಯ್ಯನೂವೆ ಅವನು ಕಲಿತ ಬುದ್ದೀನೆಲ್ಲ ಯೆಚ್ಚ ಮಾಡಿದ್ದ. ಅವರ ಅತ್ರ ಆದಾವುದೂ ಬೇಯಿಲ್ಲ. ಕಡೀಕೆ ತೊಪ್ಪೆ ತಾರಿಸಿದ ನೆಲದ ಮ್ಯಾಲೆ ಹಾಸಿ ಉದ್ದುದ್ದಕೆ ಬುಂಡಮ್ಮಾರ ಮುಂದೆ ಮನಗಿ, ಕಯ್ಯ ಮುಕ್ಕಂಡು<br/>
{{gap}}“ನನ್ನ ಕಣ್ಣಾವೆ ನಿಮ್ಮಟ್ಟಿ ಬುಡಸ್ತಿರನಿಲ್ಲ, ಬುಂಡಮಾರೆ. ಈ ನಮ್ಮುಡುಗನೂ ಇವನ ಅವ್ವನ ಕುಟ್ಟೆ ಯೋಳ್ತಾನೆ ಇದ್ದಾನೆ. 'ಬುಂಡವ್ವಾರು ನನ್ನ ನೀ ಗ್ವಾಡಿಕಳಾಕಿಂತ ಸಂದಾಗಿ ನ್ಯಾಡಿಕತ್ತಾರೆ ಕನವ್ವ ಅಂತ! ಅದಕಲ್ಲ ನಾ ಕ್ಯಾರಾದು. ನನ್ನ ಇರೀ ಹೈದ ಗೆಜ್ಜುಗನೆ ಇರೋದು ಒಂದೆ ಚಪಲ, ಬುಂಡುತ್ತಾರೆ. ತಾನಂತೂ ಇದ್ಯ ಕಲೀನಿಲ್ಲ. ತನ್ನ ತಮ್ಮ ಆದ್ರೂವೆ ನಾಕು ಅಕೃರ ಕಲ್ಲು ಮುಂದಕೆ ಬರಲಿ, ಅಂತಾವ...ನನ್ನ ಇರೀ ಹೈದ ಆಸ್ಯ ನೆರವೇರಿಸಿಕಡಾದು ನಿಮ್ಮ ಕಯ್ಯಲಿ ಅದೆ..” ಅಯ್ಯ ಬೇಡುತಾನೆ ಇದ್ದ...
{{gap}}ಇದ್ಯ ಕಲಿಯಕ್ಕೆ ಅವರ ಅಟ್ಟಿ ಜೀತದಿಂದ ನನ್ನ ಬುಡಿಸಬೇಕೂಂತ ಇರಾದು ಅನ್ನಾ ಕಾರಣ ಕ್ಯಾಳಿ, ಬುಂಡಮಾರ ಉಬ್ಬಿನ ಗಂಟು ಬುಟ್ಟೋಯ್ತು.
{{gap}}“ಓ, ಇದ್ಯ ಕಲುಸಕ್ಕೆ ಇವ್ರ ಜೀತ ಬುಡಸ್ತಾ ಇದ್ದೀಯ?... ಈ ಮಾತ ಮೊದ್ದೆ ಯಾಕೆ ಯೋಳ್ಳಿಲ್ಲ?... ಈಟು ಸಣ್ಣ ಇಸ್ಯಕ್ಕೆ ನಿನ್ನ ದೊಡ್ಡ ಸರೀರವ ಕುಗ್ಗುಸಿ, ತಗ್ಗುಸಿ, ಹ್ಯಾಪಾಯಾಗಿ, ಅಲ್ಲುಕಿರುದು ನೆಲದ ಮ್ಯಾಲೆ ಅಡ್ಡಡ್ಡ ಬಿದ್ದುಕಾಬೇಕಾಗಿತ್ತ?... ಮೊದ್ಧ ನ್ಯಾರವಾಗಿ ಯೋಳಿದ್ರೆ ಸಂತೋಷವಾಗಿ ವಷ್ಟುಗತ್ತಿದ್ದೆ. ಈಟೊಂದು ಸತಾಯಿಸ್ತಾನೆ ಇನ್ನಿಲ್ಲ. ಯೇಲೇಳು. ಗಂಡಸು ಅನ್ನುಸಿಕೊಂಡೋನು ಯಾವುದೇ ಇಸ್ಯ ಆದರೂವೆ ಎಣ್ಣೆಂಗಕ್ಕೂ ಕಡ್ಯಾಗಿ ಇಂಗೆ ಬೇತುಕೊಬ್ಯಾಡದು” ಅನ್ತಾ ಅನ್ತಾನೆ ಕ್ವಾಣೆ ವಳಕ್ಕೊದ ಬುಂಡಮಾರು ಎಲೇನೂ ಅಡಿಕೇನೂ ತಂದು ನಮ್ಮಿಬ್ಬರೂ ಕ್ವಟ್ಟು, “ತತ್ತ ಇಲ್ಲಿ ದುಡ್ಡ” ಅಂತ ಈಸಿಗೊಂಡು, ಅದ್ರ ಎಣಿಸ್ತೇಯ ನಡೀಗೆ ಸಿಕ್ಕಿದ್ದ ಇಮ್ಮಣಿ ಚೀಲಕೆ ತುರುಕ ಇರಾದ ಕಂಡು, ನಮ್ಮಯ್ಯ
{{gap}}“ಇದೇನ ಅವಾರೆ-ದುಡ್ಡ ಲೆಕ್ಕ ಮಾಡೇಯ ಚೀಲಕ್ಕೆ ತುರುಕಿದ್ದೀಯಲ್ಲಿ?” ಅಂದುದಕೆ ಆ ಮುದಿಕಿ
{{gap}}“ಸರಿ ಕನೋ, ನಿಂಗ. ನೀ ಯೋಳೋ ಮಾತ ನಾನೂ ವಪ್ಪುದಿ. ಆದ್ರೆ<noinclude></noinclude>
ap5k89rhhqtpvlgm4ehgyu6x1mt8okh
ಪುಟ:ವೈಶಾಖ.pdf/೧೪೪
104
82073
316467
277945
2026-05-03T13:15:29Z
Shreelatha.Halemane
7642
/* Validated */
316467
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=೧೨೮|right=ವೈಶಾಖ}}
ನಂಗೆ ಲೆಕ್ಕಾಚಾರ ಮಾಡಕ್ಕೆ ಬರೋಲ್ಲದಲ್ಲ?” – ಅಂದು, ನನ್ನ ಕಡೀಕೆ ತಿರುಗಿ, ಕಣ್ಣ ಕಿವುಕಿ, ತುಂಟಾಟದ ನಗೆ ನಕ್ಕು, ಅಮ್ಮಾಕೆ ಮೊಖ ಬಿಕ್ಕಂಡು ಗಂಬೀರಾಗಿ <br/>
{{gap}}“ನ್ವಾಡೋ ನಿಂಗ, ನಿಯತ್ತಿರೋರ ತಾವು ಈ ಲೆಕ್ಕಾಚಾರ ಗಿಕ್ಕಾಚಾರ ಯಾವುದೂವೆ ಬೇಕಾಗೇ ಇಲ್ಲ. ನೀಯತ್ತಿಲ್ಲೆ ಇರೋರತ್ರ ಮಾತ್ರ ಮಯ್ಯಲ್ಲ ಕಣ್ಣಾಗಿ ಲೆಕ್ಕ ಮಾಡಾಬೇಕಾಯ್ತದೆ... ಒಂದು ಮಾತು ಯೋನಿ ಕ್ಯಾಳು. ಸಾಚ ಯಾವಾನು, ನಸ್ಥಹರಾಮ್ ಯವಾನು ಅನ್ನೋದ ಪತ್ತೆ ಮಾಡಾದು ಒಬ್ಬ ಗನಂದಾರಿ ಇಸ್ರಾವ?... ಒಬ್ಬ ಮನುಸ ನಡದಾಡೋ ರೀತೀಲಿ, ಯದುರಲ್ಲಿ ನಿಂತುಗಂಡು ಮಾತಾಡೋ ವರಸೇಲಿ, ಅವ್ವ ಯೋಗೇಯ ಅಳೆಯಕ್ಕಾಗಕ್ಕಿಲ್ಲ? ಈಗ ತತ್ವ ತಕರಾರು ತಕ್ಕಂಡೇನ? - ನಿನ್ನ ಹೈದ್ರ ನೀ ಕರದಂಡು ವೋಗು. ಅವ್ರು ಇದ್ಯ ಕಲ್ಲು ಸಂಪನ್ನಾಗಿ ಬದುಕ್ತಿ”- ಹರಸಿ, ನಾವಿಬ್ರೂವೆ ಕಯ್ಯ ಮುಕ್ಕೊಂಡೆ ಬೀದಿಗೆ ಇಳಿತಿರೋನೂವೆ ಅಟ್ಟಿ ಮುಂಬಾಗಿಲವರೂ “ಅದೂವೆ, ನಿನ್ನ ಕಾಣದೆ ಇದ್ರೆ ಸಿಬ್ರಿ ಆಯ್ತದೆ ಕನೋ, ಲಕ್... ಒಗ್ಗಿದ ಪದಾರ್ತವ ಬುಟ್ಟು ಕಳುಸೋದು ಪರಮ ಕಸ್ಟ.. ಆಗಿಂದಾಗ ಬತ್ತಾ ಇರು. ಈ ಮುದುಕಿ ಬಿದ್ದೋಗೊ ಮರ, ಬೀಸೋಗೊ ಗಾಳಿ ಅಂತ ಮತ್ತು ಗಿರು ಬುಟ್ಟಿಯೆ, ಜ್ವಾಕೆ.. ಆಗೀಗ ಬಿಡುವು ಆದಾಗ ಬಂದು, ನನ್ನ ಕಲ್ಕ ಕೆಲಸ ಕಿತ್ಕಂಡು, ಸಾಯ ಮಾಡು-ನಾನೂವೆ ನೀ ಮಾಡ್ಡ ಕೇಮ್ಮೆ ಅನ್ನೊ ಇಸ್ಕೊ ಕ್ಲಷ್ಟೇ ಕ್ವಡ್ತೀನಿ” ಅಂದಿದ್ದರು...<br/>
{{gap}}ಕೆಂಗಣಪ್ಪ ಕಟ್ಟಿದ್ದ ಆರುನೂರು ರೂಪಾಯಲ್ಲಿ ನುರು ರೂಪಾಯಿ ಅಂಗೋಯ್ತು. ಇನ್ನುಳಿಕೆ ಐನೂರು ರೂಪಯ್ಯಲ್ಲಿ ನುರು ರೂಪಾಯಿ ಅಣ್ಣ ಸತ್ತಾಗ ಅದಕೆ ಇದಕೆ ಕರ್ಚಾಗೋಗಿತ್ತು - ಇನ್ನು ಅವ್ವನ ತಾವು ಉಳಿದದ್ದು ನಾನೂರು ರೂಪಾಯಿ. ಅಮ್ಮ ತಕ್ಕಂಡು, ಅಯ್ಯ ನನ್ನೂ ಕಂಡು, ಕೆಂಗಣ್ಣಪ್ಪ ಅಟ್ಟೆ ತಾವಿಕೊಕೋಗಿ,<br/>
{{gap}}“ಸೋಮಿ-ಕೆಂಗಣತ್ತಾರೆ... “ಅಂತ ಅವರ ಅಟ್ಟಿ ಆಚೇ ನಿಂತು ಕರೆದಾಗ,
{{gap}}“ಯಾಕೆ ಬಂದ್ಯೋ, ನಿಂಗ?” ಅಂತ ವೊರೀಕೆ ಬಂದೋಳು ಅಮ್ಮ ಎಡತಿ ಸಿದ್ದಮ್ಮ.<br/>
{{gap}} ಕೆಂಗಣಪ್ಪಂಗೆ ಸದ್ಯುಆದ ಎಡತಿ ಕೂಟ್ಟದ್ದ ದ್ಯಾವರು, ಕೆಂಗಣ್ಣಪ್ಪ ಸೇರಿಗೆ ಅವಳು ಸವ್ವಾಸೇರು! ಅವಳ ಮುಂದೆ ಅವನೇನಾರ ಬಾಯಿ ಬಿಚ್ಚಕ್ಕೆ ಅಪ್ಪಣೆ ಉಂಟ?- ಯಾವತ್ತೂವಿ ಒಳ್ಳೆ ಉಲಿ, ಉಲಿ ಬಿದ್ದಂಗೆ ಬಿದ್ದು ಬುಡೋಳು!..<br/>
{{gap}}ಅವಳ ಕಂಡು, ಈ ಎಂಗಸಿನ ಕುಟ್ಟೆ ಯಾಕೆ ಮಾತು, ಇವಳತ್ತ ಯವಾರ ಸುದ್ದಿಲ್ಲ, ಅಂದುಕಂಡೋಯಾನೊ<noinclude></noinclude>
e42mpnb9dtbsvh07pwszo8c0swnts6x
ಪುಟ:ವೈಶಾಖ.pdf/೧೪೫
104
82074
316465
277946
2026-05-03T13:13:49Z
Shreelatha.Halemane
7642
/* Validated */
316465
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೨೯}}
{{gap}}“ಇಂಗೇ ಬಂದೆ, ಸಿದ್ದಮ್ಮಾ...” ಆಡಬೇಕಾಗಿದ್ದ ಮಾತ ಆಯ್ಯ ಇರುಕಿಸಿಕಂಡಿದ್ದ.<br/>
{{gap}}ಅವರ ಅಟ್ಟೇಲಿ ಜೀತಕಿದ್ದು, ಈ ಎಂಗಸಿನ ಘಾಟಿನ ಅನುಭೋಗ ಸಂದಾಗಿ ಆಗಿದ್ರಿಂದ, ನಾನು ಅವಳೆ ಮೊಖ ಕ್ವಡದೆ, ಅಯ್ಯನ ಇಂದ್ರೆ ಅವುತುಗಂಡಿದ್ದೆ. ಬೆಳ್ಳಿ ಡಬ್ಬಿಯಿಂದ ಮೂಗಿನ ಹೊಳ್ಳೆಗಳಿಗೆ ನಸ್ಯ ಯೇರುಸ್ತ,<br/>
{{gap}}“ಯಾರೂ ಕೇಮಿಲ್ದೆ ಸುಮ್ಸುಮ್ಮೆ ಬರಕ್ಕಿಲ್ಲ ಕನ, ಅದೇನು ಗಂಡರತ್ರ ಯೋಳಬೇಕೂಂತ ಬಂದ್ರೂ, ಅಮ್ಮ ನನ್ನ ಕುಟೇ ಯೋಳು, ಪರವಿಲ್ಲ” ಅಂದ್ಲು.<br/>
{{gap}}ಅಯ್ಯಂಗೆ ಒಂದು ಚಣ ಯೇನ ಯೋಳಕ್ಕೂ ತೋಚೆ, ಬಾಯಿ ವೊಲದಿರೋನಂಗೆ ನಿಂತ. ಸಿದ್ದಮ್ಮ ಚೌಕದಿಂದ ಮೂಗ ವರುಸ್ತ,<br/>
{{gap}}“ಅದೇನ ಇಸ್ಯ, ಯೋಳಬ್ಯಾಡದ?” ಪುನಾ ಕ್ಯಾಳಿದ್ದು.<br/>
{{gap}}ಅಯ್ಯ ತಲೆ ಕೇರಿತ ನಿಂತೇ ಇದ್ದೆ.<br/>
{{gap}}ಈಪಾಟಿ ಚಂಡಿಸಿದ್ರು ಸೊಲ್ಲುಯೆತ್ತದೆ, ಯೇನ ಯೋಳಕ್ಕೂ ತಿಳೀದೆ, ಕಣ್ಣು ಕಣ್ಣು ಬುಡ್ತ ನಿಂತಿದ್ದ ಅಯ್ಯನ ಮೊಖ ಕ್ವಾಡ್ ಕ್ವಾಡ್ರ, ಮುದ್ದಿನ್ನದ ವ್ಯಾಳ್ಯದಲ್ಲಿ ನೆತ್ತಿಗೆ ಏಾ ಬರೋ ಸ್ವಾಮಿ ತರ, ಕ್ಯಾಣ ಸಿದ್ದಮ್ಮನ ತಲೆಬುಂಡೆಗೆ ಜಟಜಟ್ಟೆ ಏಕ್ತಾ ವೋಯ್ತು.<br/>
{{gap}}“ಅಸ್ಸಿ, ಯೋಳೊ ಇಸ್ಯ ಯಾನೂ ಇಲ್ಲೆ ಇದ್ದಮ್ಯಾಗೆ, ಬ್ಯಾತಾಳನಂಗೆ ಇಲ್ಲಿ ಮೊಕ ಮೊಕ ನ್ಯಾಡ ನಿಂತು ಯೇನ ಪರ್ಯೋ ?- ಸುಮ್ಮೆ ಬುಡು ನಿನ್ನ ಗಾಡ್ಯ” ಅಂತೇಳಿ, ಇಂದೈತಿರುಗ್ತಿರೋನೂವೆ, ಕಳ್ಳಕೊತ್ತಿ ಅಂಗೆ, ಮೆತ್ತಗೆ ಕದೀನ ಮರಿಂದ ಈಚೆಗೆ ಕಡುದ, ಕೆಂಗಣಪ್ಪ,<br/>
{{gap}}“ಯಾಕ್ಲ ನಿಂಗ, ಅಮಾರು ಕ್ಯಾಳಿದ ಮ್ಯಾಗೆ ಅದೇನು ಇಸ್ಯ ಯೋಳಿಬುಡು” ಅಂದ.<br/>
{{gap}}ಎಡತಿ ಮುಂದುಗಡೆ ಕೆಂಗಣ್ಣಪ್ಪ ಕೊತ್ತಿಮರಿ ಆಯ್ತಿದ್ದದ್ದ ನಾನು ನ್ಯಾಡಿದ್ದು ಇದೇ ಮೊದಲ ಸರ್ತಿಯೇನಲ್ಲ. ಇಂದ್ರೆ ಇವರ ಅಟ್ಟಲೆ ಜೀತಕಿದ್ದಾಗ, ಈ ನಾಟಕವ ನಾನು ಪರ್ತಿನಿತ್ಯ ಸ್ವಾತ್ತಿದ್ದದ್ದೆ ಅಲ್ವ?...ಎಡತಿ ಎದುರಿಗಿಲ್ಲೆ ಇದ್ದಾಗ, ಸಿಕ್ಕುಸಿಕ್ಕುದೆರ ಮ್ಯಾಲೆಲ್ಲ ದಪ್ಪಾನೆ ಮೀಸೆ ತಿರುವ, ಕಣ್ಣ ಮೇಡರಿಸ್ತಿದ್ದ ಮನುಸ, ಎಡತಿ ಅಟ್ಟಿ ವಳುಗಡೆ ಇದ್ದಾಗ, ವೊರಗಿನ ಜಗಲೀಲಿ ಕುಂತು, ಪರವೂರಿನೊರು ಯಾರಾರ ಬಂದ್ರೆ, ಅವರ ಕುಟ್ಟೆ, ತನ್ನ ಆಸ್ತಿ, ತನ್ನೆತ್ತು ಎಮ್ಮೆ ದನಕರ, ಇವೆಲ್ಲಾದರ ಇಚಾರಾನು ತಪಸೀಲಾಗಿ ಊದಿ, ಕಡೀಕೆ ಗಟ್ಟಾಗಿ ವಳುಗಡೇಲಿರೋ ತನ್ನ ಎಡತಿಗೆ ಕ್ಯಾಳಿಸೋವಂಗೆ, ತನ್ನೆಡತಿ ವಗೆತನದ ಅಚ್ಚುಗಟ್ಟಿ ವೊಗಳ, ಅವಳು<noinclude></noinclude>
31113ylz8shcerldhbge8ehrf7jse3j
ಪುಟ:ವೈಶಾಖ.pdf/೧೪೬
104
82075
316466
277947
2026-05-03T13:14:44Z
Shreelatha.Halemane
7642
/* Validated */
316466
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=೧೩೦|right=ವೈಶಾಖ}}
“ರಾಜಧಾನಿಯಂತಾ ಎಂಗಸಲು"- ಅಂತ ಬೇತುಕತ್ತಿದ್ದದ್ದ ತಾನು ಅದೇಟು ಸಲ ಕೇಳಿರನಿಲ್ಲ?...<br/>
{{gap}}ಸಿದ್ದಮ್ಮ ಕೆಂಗಣಪ್ಪಂಗೆ ಏಡನೆ ಸಮ್ಮಂದವಂತೆ. ಮೊದಲೆ ಎಡತಿ ಒಳ್ಳೆಯೋಳಂತೆ. ಆ ಪುಣಾತಿಸ್ತಿತಿ ಇವ್ರ ಜ್ವತೇಲಿ ನೆಟ್ಟಗೆ ನಾಕು ವರುಸ ಸಂಸಾರ ಮಾಡ್ತಿಲ್ಲವಂತೆ. ಈ ಮಾರಾಯನೊ ಊರಿನಾಗೆ ಒಂದು ಪತ್ತೆ ಎಣ್ಣು ಕಂಡುದ್ದೆ ತಡ, ಅದರ ತಿಕ ಮೂಸಿಗಂಡು ಓಡಾಡೂ ಜಾತಿ!... ಈವಯ್ಯನ ಚರ್ಯ ಕಂಡು ಅಯಮ್ಮ ಊರತಿ, ಕಡ್ಯಾಗಿ ಮೈಸೂರ ಚಯದ ಆಸ್ಪತ್ರೆ ಸೇರಿ, ಯಾವತ್ತೂ ಒಂದು ಜಿನ ಸಿವನ ಪಾದ ಸೇರಿಕಂಡಿದ್ದು- ಈ ಯೆಲ್ಲ ಚಮಾಚಾರೈ ಅಯ್ಯನೆ ಒಂದು ನಾತ್ರೆ, ನಾನು ನಿದ್ದೆ ಮಾಡ್ತಾ ಅಪ್ಪೆ ಅಂತ ತಿಳುದು, ಅವ್ವನ ಕುಟ್ಟೆಗುಟ್ಟಾಗಿ ಯೇಳಿದ್ದದ್ದು ಈಗ ಗ್ಯಾಪನ ಆಗಿತ್ತು...<br/>
{{gap}}ಕೆಂಗಣಪ್ಪ ನಸುಗುನ್ನಿ ಅಂಗೆ,<br/>
{{gap}}“ಯಾಕ್ಲ ನಿಂಗ, ಅಮಾರು ಕ್ಯಾಳಿದ ಮ್ಯಾಲೆ ಬಂದ ಇಸ್ಯ ಅದೇನು ಯೋಳಿಬುಡು” ಅಂದಾಗ, ಅಯ್ಯ ತಡರುಸ್ತ ಬಾಯಿ ಬಿಚ್ಚದ.<br/>
{{gap}} “ಕೆಂಗಣಪ್ಪಾರೆ, ನನ್ನ ಇರಿ ಹೈದ ಲಗ್ನಕ್ಕೆಂತ ನಿಮ್ಮತ್ರ ಸಾಲನೇನೊ ಮಾಡ್ಡೆ. ಆದ್ರೆ ಆ ಬಿಸಿಲಮಾರಮ್ಮ ತಾಯಿಗೆ ನಮ್ಮ ವಂಸದ ಮ್ಯಾಲೆ ಅದೇನು ಕ್ವಾಪವೋ ಕಾಣೆ. ತಲಕಾಡ್ಲೆ ನಿಮ್ಮ ಜ್ವತೆ ಬಂದಿದ್ದೋನ್ನ ಆ ಕಾವೇರಿ ವೋಲೆ ತಿಂದಕತ್ತು...” ಅಂತಿದ್ದುದ ಅಲ್ಲಿಗೆ ತುಂಡುಮಾಡಿ,<br/>
{{gap}}“ಅದೆಲ್ಲ ಗ್ಯಕ್ಕೆ ಅದಲ್ಲೊ, ನಿಂಗ... ಅದು ಅವನ ನಶೀಬು... ಮುಂಬೈ ನಮ್ಮ ಅಣದ ಇಸ್ಯ ಯೆಂಗೆ ಚುಕ್ತಾ ಮಾಡಬೇಕು ಅಂತೀಯೆ, ಅದು ಹ್ಯಾಳಪ್ಪ* ಕೆಂಗಣಪ್ಪ ಬ್ಯಾರೆ ಮಾತ ಕಿವಿಗೆ ಅಕ್ಕಳ್ಳದೆ ಮುಖ್ಯ ಇಸ್ಯಕ್ಕೇ ಇಳುದಿದ್ದ...<br/>
{{gap}}ಅಯ್ಯ ನಾನೂರು ರೂಪಾಯಿ ಅಂಗಿ ಸಿಕ್ಕಿದ್ದ ಕಿಂದ ತಗದು ಎಣಿಸಿ ಎಣಿಸಿ ದೂರದಿಂದ ಕೆಂಗಣಪ್ಪ ಕಯ್ಯಗೆ ಆಕಕ್ಕೊದಾಗ, ಉಬ್ಬ ಗಂಟಾಕಿ, ಉರಿಮಾರಿಯಾಗಿ ನಿಂತಿದ್ದ ಅಮ್ಮ ಎಡತಿ ಸಿದ್ದಮ್ಮ ಸುಮ್ಮೆ ಬಿಗಿಯಾಗಿ ಕಯ್ಯ ನೀಡುದ್ದೇ ಸಮ, ಕೆಂಗಣಪ್ಪ ಮೊಖ ಸುಂಡೋಗಿ ತನ್ನ ಕಯ್ಯ ಕೆಳುಕ್ಕಿಳು...<br/>
{{gap}}ಕಯ್ಯಿಗೆ ಬಿದ್ದ ನೋಟುಗಳ ತಾನೂ ಒಂದು ಸರ್ತಿ ಎಣುಸಿ,<br/>
{{gap}}“ಇದ್ಯಾನೋ ನಿಂಗ- ನಮ್ಮೂರು ನಿಂಗೆ ಊಟ್ಟಿರಾದು ಆರುನೂರು ರೂಪಾಯಿ ಅಲ್ವೇನ್ದ?” ಸಿದ್ದಮ್ಮ ಉಬ್ಬ ಎತ್ಕಂಡು ಕ್ಯಾಳಿದ್ದು...<br/>
{{gap}}“ಸಾಜ ಕತ್ರವ್ವ. ನಿಮ್ಮೆಜಾನ್ನು ನಂಗೆ ಊಟ್ಟಿದ್ದು ಆರುನೂರು ರೂಪಯೇಯ. ಊಟ್ಟಿದ್ದ ದುಡ್ಡು ಇಲ್ಲ ಅಂತ ಅದ್ಯಾವ ಬಾಯ್ಲಿ ಯೋಲ್ಲಿ? ಆದ್ರೆ,<noinclude></noinclude>
1rraga57kpst7dh8xoz3gnynaf72z0q
ಪುಟ:ವೈಶಾಖ.pdf/೧೪೭
104
82076
316473
277948
2026-05-03T13:20:46Z
Shreelatha.Halemane
7642
/* Validated */
316473
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೩೧}}
ಈ ನಮ್ಮಸಣ್ಣ ಹೈದ...” ಅನ್ತಾ, ಅಮ್ಮ ಇಂದ್ರೆ ನಾಯಿಮರಿಯಾಗಿ ನಿಂತಿದ್ದ ನನ್ನ ಮುಂಡೇಳುದು ತೋರುಸ್ತ “ಬುಂಡಮಾರ ಆಟ್ರಿಂದ ಜೀತ ಬುಡಸಕ್ಕೆ ಅವು ಕ್ವಿಟ್ಟಿದ್ದ ಸಾಲದ ದುಡ್ಡು ನೂರು ರೂಪಾಯಿ ವಾಪ್ಪು ಮಾಡಬೇಕಾಯ್ತಲ್ಲ” ಅಂದುದೆ ತಡ, ಸಿದ್ದಮ್ಮ ಹಳುಬೀಜ ಸಿಡಿಯೋ ಪರಿ ಸಿಡಿದ್ದು:<br/>
{{gap}}“ನೀನೂ ಒಳ್ಳೆ ಮನೆತಾನಸ್ ಕನೆ... ಅಲ್ಲ, ನಮ್ಮತ್ರ ಜೀತಿಕಿದ್ದ ಉಡುಗ್ರ ಅಯಿವತ್ತು ಎಚ್ಚಾಗಿ ಕ್ವಂತ ನಮ್ಮಟ್ಟಿ ಬುಡುಸಿ ಅವಳಟ್ಟಿಗೆ ಕೂಡ್ಡೆ, ಈಗ ಲಗ್ಗಕೇಂತ ರೂಪಾಯ ನಮ್ಮತ್ರ ಕಿತ್ಕಂಡು ಅವಳಟ್ಟಿ ಬುಡುಸ್ಥೆ- ಇದ್ಯಾವ ಯವಾಲ್ವ?... ತಗಿ, ತಗಿ: ನಾ ವಪ್ಪನಿಲ್ಲ.” ಅಯ್ಯ ಜರನೆ ಇಳುದೋಗಿ,<br/>
{{gap}}“ಯಾನ ಮಾಡಲ್ವ?- ಸತ್ತು ಸೊರ್ಗ ಸೇರ ನಮ್ಮ ಇರಿ ಹೈದಂದು ಒಂದೇ ಅಸೆ, ತಾನಂತೂ ಓದು ಬರಾವು ಕಲೀನಿಲ್ಲ. ನಮ್ಮ ವಂಸದಾಗೆ ತನ್ನ ತಮ್ಮಂಗಾದ್ರೂವೆ ಇದ್ಯ ಕಲಿಸುವಾಂತ ಅಪೇಕ್ಷೆ ಪಟ್ಟ... ಆ ಗಂಗಾಬವಾನಿ ಅವನ್ನೇ ನುಂಗಾಕಿ ಆಸೆ ಮ್ಯಾಸ ಮಾಡಿದ್ದು... ಈ ಹಾಳು ಲೋಕದಲ್ಲಿ - ಇದ್ದರೂ ಕರ್ಚು ಮೋದರೂ ಕರ್ಚು... ಯನ ಮಾಡೀರಿ?- ನಾನು ನಂಟು ಇಸ್ಸು ಯೆಲ್ಲಾರನೂವೆ ತಲಕಾಡ್ಡೆ ಕರಕಂಡೊದ್ದು, ಅಲ್ಲಿ ಹೈದ್ರ ಒಪ್ಪ, ಅಲ್ಲಿಂದ ಇಂದ್ರೆ ಬಂದು ನೆಂಟರಿಸ್ಪರೆ ಊಟ... ಒಂದ, ಏಡ... ಕರ್ಚಿನ ಮ್ಯಾಲೆ ಕರ್ಚಾ ಒಂದು ನೂರು ರೂಪಾಯಿವರೂವೆ ಕಯ್ಯ ಬುಡ್ತು... ಒಟ್ಟು ಯೆಲ್ಲಾ ಜಮಾ ಮಾಡುದ್ರೆ ಇನ್ನೂರು ರೂಪಾಯಿ ಆಗಿಲ್ಲ?- ನೀವೇ ಕೂಡಿ ನ್ಯಾಡಿ...” ಅಂದದ್ದು ಕ್ಯಾಳಿ, ಮೊಖವ ಒಂದು ತರಾಗತ್ನಲ್ಲಿ ಯೆತ್ಕಂಡು,<br/>
{{gap}}“ಯಾವ ಘನಂದಾರಿ ಲೆಕ್ಕಚಾರ ಇಲ್ಲಿರಾದು?... ಉಡುಗ್ರ ಜೀತದ ದುಡ್ಡು ತಿರುಸಕ್ಕೆ ನೂರು ರೂಪಾಯಿ, ನಿರೀ ರೈ ಸಾವಿನ ಕರ್ಚಿಗೆ ನೂರು ರೂಪಾಯಿ... ಏಡೂ ಸೇರಿ ಇನ್ನೂರು ಆಯ್ತಲ್ಲ... ಊ, ಅದಿರಿ. ಈಗ ನನ್ನ ಕಯ್ಯಗೆ ನೀನಿಕ್ಕಿರಾದು ನಾನೂರೆ ರೂಪಾಯಿ. ಇನ್ನುಳುಕೆ ಇನ್ನೂರು ರೂಪಾಯ ಯೆಂಗೆ ತೀರುಸದೂಂತ ಮಾಡ್ಕಂಡಿದ್ದೀ?” -ಕೊಸಾರೆ ಕ್ಯಾಳಿದ್ದು ಸಿದ್ದಮ್ಮ. ಅದ್ರೆ ತಲೆ ಕೆರೀತ ಅಯ್ಯ ದನಿಯ ಮೆತ್ತಗೆ ಮಾಡಿ ಉಸುರ್ದ:<br/>
{{gap}}“ಇಲ್ನೋಡಿ. ನಾನಿನ್ನೂ ಗಟ್ಟಿಮುಟ್ಟಾಗಿ, ಇನ್ನುಳುಕೆ ಇನ್ನೂರು ರೂಪಾಯೂವೆ ಅದೇನು ದರುಮದ ಬಡ್ಡಿ ಆಕ್ಕತೀರೋ ಅಕ್ಕ, ನಾನು ಮಯ್ಯ ಮುರುದು ಕುಲಿ ಕಂಬಳ ಮಾಡಿ ಗೇದು ನಿಮ್ಮ ಅಣಕೆ ಚೆಕ್ಕಾಸೂ ಲೋಪ ಬರದಂಗೆ ತೀರುಸ್ತೀನಿ.”<br/>
{{gap}}ಈ ತಾವಿಗಂಟ ಸುಮ್ಮೆ ಕ್ಯಾಳ ನಿಂತಿದ್ದ ಕೆಂಗಣಪ್ಪ,<noinclude></noinclude>
bf5l2yvgsx2gz62ymu9v8ckekdltega
ಪುಟ:ವೈಶಾಖ.pdf/೧೪೮
104
82077
316474
277967
2026-05-03T13:22:18Z
Shreelatha.Halemane
7642
/* Validated */
316474
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=೧೩೨|right=ವೈಶಾಖ}}
{{gap}}“ಅದೆಲ್ಲಾದಾದೊ ನಿಂಗ, ಆ ತಾವಿಗಂಟ ಕಾಯಕ್ಕಾದಾತ?” ಅಂದ. ಸಿದ್ದಮ್ಮನಂತೂ ಗುಡುಸಾಗೇಯ,<br/>
{{gap}}“ಕಾಯೊ ಗೀಯೊ ಮಾತೆಲ್ಲ ಯಾಕ? ... ಗಮ್ಮನ ಈಗ್ಗೆ ಯೆಂಗೆ ಫೈಸಲ್ ಮಾಡೋಕು ಅನ್ಮಾದು ವಸಿ ಯೋಚ್ಛೆ ಮಾಡು.” ತಾಕೀತು ಮಾಡಿದ್ದು.
“ನಾನಿನ್ನೇನ ಯೋಚ್ಛೆ ಮಾಡಾನೆ?... ಇದ್ದೆ ಯೋಚ್ಛೆ ಮಾಡ ಕುಂತುಗಳಾಕೆ ನನ್ನ ತಾವು ನಿಮ್ಮ ಅಳೆ ಎಕ್ಕಡವೂ ಉಳುದಿಲ್ಲ”- ಅಯ್ಯ
ಪೇಚಾಡ್ಡ.<br/>
{{gap}}ಆಗ ಕೆಂಗಣಪ್ಪ ಚುಕಾಯಿ,<br/>
{{gap}}“ಒಂದು ಕೆಲ್ಸ ಮಾಡೋ, ನಿಂಗ. ನುರು ರೂಪಾಯ್ಕೆ ನಿಮ್ಮಿ ಹೈದ ನಮ್ಮ ತಾವು ಚೀತಕ್ಕಿಡು. ಉಳಿಕೆ ನುರು ರೂಪಾಯಿ ನೀನು ಕೂಲಿ ಕಂಬಳ ಮಾಡಿ ತೀರುಸು” ಅಂದುದಕ್ಕೆ ಸಿದ್ದಮ್ಮ ಸಿಡಾರೈ<br/>
{{gap}}“ಅಸ್ಸಿ, ಇದ್ಯಾವ, ಇದ್ಯಾವ ಚಂದಕೆ ಮಾತಾಡಿ?, ಈವಯ್ಯಂಗೆ ಯಾವಾಗ ಕ್ವಾಡು, ಸಣ್ಣ ಹೈಕಳೇ ಆಗಬೇಕು.... ಅದ್ಯಲ್ಲ ಬ್ಯಾಡಕನೊ ನಿಂಗ. ನೀನೆ ನಮ್ಮ ತಾವು ಇದ್ದು ಬುಡು, ವರ್ಸಕೆ ನೂರೈವತ್ತರಂಗೆ ತೀರುಸ್ಕತ್ತೀನಿ” ಅಂದುಬುಟ್ಲು.<br/>
{{gap}}ನಾನು ತಿರುಕ್ಕಂಡು ಅಯ್ಯನ ಮೊಖ ನ್ಯಾಡ್ಡೆ, ಅದು ಸಟ್ಟನೆ ಸೊರಗೊಗಿತ್ತು. ಕಣ್ಣುಂಬ ಬೆಪ್ಪು ಮೆತ್ತಿಗಂಡಿತ್ತು. ಆ ಅನ್ನದೆ ಊ ಅನ್ನದೆ ಗೊಂಬ್ಯಾಗಿ ನಿಂತಿದ್ದ.<br/>
{{gap}}“ಬ್ಯಾಗ ಬ್ಯಾಗ ಯೋಳಪ್ಪ, ವಳಗೆ ನಂಗೆ ಅಟ್ಟಿ ಕೆಲ್ಸ ಮಸ್ತಾಗಿ ಇಟ್ಟಾಯ್ತದೆ.” -ಸಿದ್ದಮ್ಮ, ಆತುರಿಸಿದ್ದು.<br/>
{{gap}}ಅಯ್ಯ, ಯೇನೋ ಯೋಳಕ್ಕೊಯ್ತಾನೆ, ಸುಮ್ಮಕಾಯ್ತಾನೆ, ಯೇನೋ ಯೋಳಕ್ಕೊಯ್ತಾನೇ, ಸುಮ್ಮಕಾಯ್ತಾನೆ...<br/>
{{gap}}ಪುನಾ ಸಿದ್ದಮ್ಮ“ಅದೇನು ಬಾಯಿ ಬುಡಪ್ಪ...” ಪುಸಲಾಯಿಸಿದ್ದು.
{{gap}}“ಉ. ಇನ್ನೇನ ಮಾಡಾದು?- ನಾನೇ ಇದ್ದೀನಂತೆ. ವರುಸಕೆ ಇನ್ನುರು ಮಾಡುಕನ್ನಿ.”- ಅಯ್ಯ ಬಿಕ್ಕಟ್ಟಿಂದ ಈ ಮಾತ ವೊರಾಕಿದ್ದ.
{{gap}}ಆದರೆ ಸಿದ್ದಮ್ಮ ವಪ್ಪಬೇಕಲ್ಲ... ತನ್ನ ಕಯ್ಲಿ ಆಗಿದ್ದ ಬಂಗಾರದ ಪೌಚಿ
ತಿರುವ,<br/>
{{gap}}“ನನ್ನ ತಾವು ಇರಾದು ಒಂದೇ ಮಾತು- ಒಂದು ತುರುಬಿಗೆ ಒಂದೇ<noinclude></noinclude>
r1e8bw24wncfhapzuhepbc1xak5ms8a
ಪುಟ:ವೈಶಾಖ.pdf/೧೪೯
104
82078
316475
277968
2026-05-03T13:23:11Z
Shreelatha.Halemane
7642
/* Validated */
316475
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೩೩}}
ಊವು ಅನ್ತಾರಲ್ಲ, ಅಂಗೆ.... ಸುಮ್ಮೆ ವಪಿಗಂಬುಡು” ಅಂದ್ಲು.<br/>
{{gap}}ಅಯ್ಯನ ಕಣ್ಣಲ್ಲಿ ನೀರು ಕಿತ್ತುಗತ್ತು<br/>
{{gap}}“ನಾ ವಪ್ಪಿಗಂದ್ರೆ, ಇನ್ನೂ ಆಯಿವತ್ತು ರೂಪಯಿ ಕೊರೆ ಉಳುದೇ ಉಳುಕತ್ತದೆ. ಆ ಮ್ಯಾಕೆ ನನ್ನ ಹೈದ್ರ ಮಟಕ್ಕೆ ಸೇರಿಸಾದು ಯೆಂಗೆ?” =ತನಗೆ ತಾನೆ ಮಾತಾಡೋನ ತರ ಅಂದ.<br/>
{{gap}}ಸಿದ್ದಮ್ಮ ಬೇಜಾರಿಂದ ಆಕಳಿಸ್ತ,<br/>
{{gap}}“ಹಯ್ಯೋ, ನಿಂಗೊಂದು ಉಚ್ಚು, ಇವಂಗೆ ಇದ್ಯ ಕಲಸಿ, ಇನ್ನು ಅದ್ಯಾವ ರಾಜ್ಯ ಆಳಬೇಕಾಗಿದ್ದದು?... ಬ್ಯಾಂತು ಬ್ರಾಂತು... ಇವುನ್ನೂ ಯಾವುದಾರೂ ಅಟ್ಟಿಗೆ ಸೇರುಸಿ, ಆ ಉಳುಕೆ ಅವತ್ತ ತಂದ್ವಕಡು. ನಿನ್ನ ಸಾಲವೂ ಒಂದೇ ವರುಸಕೆ ತೀರೋಯ್ತದೆ.” ಖಡಕ್ಕಾಗಿ ಅಂದು, ಇನ್ನೊಂದು ಅರೆಗಳಿಗೂ ಅಲ್ಲಿ ನಿಲ್ಲೆ ಅಟ್ಟಿ ವಳೀಕೆ ನಡೀತಿದ್ದು, ಕೆಂಗಣಪ್ಪನೂವೆ “ಅಂಗೇ ಮಾಡ್ಲ” ಅಂದೋನು ಎಡತಿ ಇಂದಿಂದೇಯ ವೊಂಟೋದ.<br/>
{{gap}}ಅಯ್ಯ, ಮುಂದ್ರೇನು ಮಾಡೋದು ತೋಚ್ಚೆ ಕಲ್ಲುಪ್ತತುಮ್ಯಾಗಿ ನಿಂತೇ ಇದ್ದ. ಕಣ್ಣಿಂದ ಗಡಿಗೆ ನೀರ ಬೊಗ್ಗಿಸ್ಟಂಗೆ ಲೊಳಲೊಳೆ ನೀರು ಸುರಿಯಕ್ಕೆ ಮುಟ್ಟುಗತ್ತು, ನಂಗೂ ಅಳ ಬಂತು. ಜೋಗ್ನಿಂದ ಅಳಕ್ಕೆ ಸುರು ಮಾಡ್ಡೆ. ಅಯ್ಯ, ನನ್ನ ತಬ್ಬಿಕಂಡು<br/>
{{gap}}“ಹಯ್ಯೋ, ನನ್ನ ಕಂದ-ನೀನು ಓದು ಬರಾವು ಕಲ್ಲು, ದೊಡ್ಡ ಮನುಸ. ಅನ್ನಿಸಿಕಾಬೇಕು ಅಂತ ನಿನ್ನಣ್ಣ ನಿನ್ನ ಮ್ಯಾಲೆ ಇಟ್ಟುಕಂಡಿದ್ದ ಆಸೆಯೆಲ್ಲಾನೂವೆ, ನಿಮ್ಮಣ್ಣನ ಜ್ವತೆಗೇಯ ಆ ಹಾಳು ಹೊಳೆ ಊಚ್ಚಿಗಂಡೋಯ್ತಲ್ಲೊ...” -ದುಕ್ಕುಡಿಸಿ ದುಕ್ಕುಡಿಸಿ ಅತ್ತ...<br/>
{{gap}}ಗುತ್ತಿಗೆ ಬಂದು ಅವ್ವಂಗೆ ನಡುದ ಸಂಗ್ತಿ ತಿಳುಸ್ತಾಗ-ಚೌಡಿ, ಬಿಸಿಲ ಮಾರಮ್ಮ, ಜಡೆಮಾನಿ, ಈ ಯೆಲ್ಲಾ ದ್ಯಾವರಗಳು ವೆ ಅವಳು ಸ್ಯಾಪ ಆಕಿದ್ದೂ ಆಕಿದ್ದೇ:<br/>
{{gap}}“ಈ ಹಾಳು ದ್ಯಾವರುಗಳ ನಂಬುಕಂಡು ನಾವು ಕೆಟ್ಟೋ... ನಮ್ಮ ಮೊಟ್ಟೆ ಮೂಟ್ಟೆ ಕಟ್ಟಿ, ಈ ಹಾಳು ದ್ಯಾವರುಗಳ ತುರುಪ್ತಿಗೆ ಅದೇಟು ಕೋಳಿ ಕುರಿಗಳ ಕತ್ತು ಆಕಿದೋ, ಯಾನು ಕತೆ?... ಅವೆಲ್ಲ ತಿಂದು ತೇಗಿ, ಈಗ ಸುಮ್ಮೆ ಕಣ್ಮುಚ್ಚಿ ಕುಂಡಾಗಿ ಕುಂತವಲ್ಲ?.... ನಮ್ಮ ಕಸ್ಟಕೆ ಆಗದೇ ಇದ್ದಮ್ಯಾಗೆ, ಈ ಹಾಳು ದ್ಯಾವರುಗಳ ಸಾವಾಸ ಇನ್ನು ನಮಗ್ಯಾಕ?...” ಅಂತ ಪ್ರಲಾಪ ಮಾಡ್ತಾ ಇದ್ದು. ಆಗ ಅಯ್ಯ,<noinclude></noinclude>
aatcr41k1nbrq51nwar3k8v13xrp6rt
ಪುಟ:ವೈಶಾಖ.pdf/೧೫೦
104
82079
316472
277971
2026-05-03T13:20:14Z
Shreelatha.Halemane
7642
/* Validated */
316472
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=೧೩೪|right=ವೈಶಾಖ}}
“ನಾವು ಇಂಗೆ ಅಳ್ತಾ ಕುಂತರೆ, ಯವ ಸುಕವ?... ನಾನು ಜೀತಕೆ ಇರಬೇಕಾಯ್ತಲ್ಲ ಅಂತಾನ ನಾ ಚಿಂತೆ ಮಾಡಕ್ಕಿಲ್ಲ, ಆದ್ರೆ ನಮ್ಮ ಲಕ್ಕನ ಇಂದ್ರೆ ಆ ಮಟದ ಉಪಾದಯ್ ಯಾನೋ ನೆಪ ತಕ್ಕಂಡು ಮಟ ಬುಡಸಿದ್ದ, ಈಗ ಮುನಾ ಮಟ್ಟಕ್ಕೆ ಸೇರುಸಾವ, ಬ್ಯಾರೆ ಉಪಾದ್ಯ ಬಂದ ಅಂದರೆ- ಈಗ ಅನದ ಉಪಾದಿ ಅಗುತುಕಂಡದೆ.... ಇದೇ ನನ್ನ ಮಿದ್ದೆ ಕೆಡುಸ್ತಾ ಇರಾದು” ಅಂತ ನನ್ನ ಇಸ್ಯ ತಕ್ಕಂಡ.<br/>
{{gap}} ಅವ್ವ, ಉಸ್ ಅಂತ ಉಸುರು ಬುಟ್ಟು<br/>
{{gap}}“ಬಾಳಾಟ- ಉದ್ದಕ್ಕೂ ನಮ್ಮಿಬ್ಬರೂವೆ ಯಾಂತರಲ್ಲೂ ನಸೀಬ ತರನಿಲ್ಲ. ಅದು ಯೆಲ್ಲಾರ ಹಾಳುಬಿದ್ದೋಗ್ಲಿ ಅಂದ್ರೆ ಈ ಎಲೆ ವಯಸ್ಸಲ್ಲಿ ನಮ್ಮ ಲಕ್ಕನ ಅಣೇಲಿ ಇಂಗು ಬರದು ಬುಡಾದ...” ಅಂತ ಸೋಕ ಮಾಡ್ತಾನೆ ಇದ್ಲು<br/>
{{gap}} ಏಡು ನಾ-ಯಾನು ಮಾಡಾದು? ಯಾನು ಮಾಡಾದು? ಅನ್ನಾ ಚಿಂತ್ಯೆ ನಮ್ಮೆಲ್ಲಾರ ನಿದ್ದೆ ಕೆಡುಸಿತ್ತು. ಅತ್ತ ಅಳ್ತಾನೆ ಅವ್ವ,
{{gap}}“ಬ್ಯಾರೆ ಉಪಾಯ ಯಾನ ಈಗಿರಾದು?... ಆ ಸಿದ್ದಮ್ಮಾರ ಮತನೂ ತಗದಾಕೊ ಅಂಗಿಲ್ಲ. ಅಂಗೇ ಯೋಚ್ಛೆ ಮಾಡುದ್ರೆ, ನಮ್ಮ ಲಕ್ಕದ ದೊಡ್ಡ ಚಾಕರಿ ಸಿಕ್ಕೊವೊಟು ಓದಿಸಕ್ಕೆ ನಮ್ಮ ತಾವೇನು ಗೆಪ್ಪೆ ಇದ್ದಾತ?... ಆ ಇದ್ಯದ ಮನೆ ಕಿಸಾಂತರಾಯ್ತು. ಈಗ ಆ ಅಯಿವತ್ತು ರೂಪಾಯ ವೊಂದಿಸಾದೆಂಗೆ?”ಪ್ರಶ್ನೆಯೆತ್ತಿದ್ದು.
{{gap}}ಅಯ್ಯನ ಬುದ್ದಯೂ ವೋಟು ದೂರ ವೋಗಿ ನಿಂತೋಗಿತ್ತು.
{{gap}}“ಇನ್ನೇನ ಮಾಡಾದು?- ಲಕ್ಕನ ಬುಂಡಮಾರ ಅಟ್ಟಲೆ ಪನಾ ಜೀತಕಿರುಸಿ, ಅಲವತ್ತು ರೂಪಾಯಿ ಈಸ್ಕಂಡು ಆ ಕೊರೆ ತೀರುಸಿಬುಡಾದು” ಅಂದಿದ್ದ ಅಯ್ಯ.
{{gap}}ಅವ್ವಂಗೆ ವಪ್ಪಿತ ಅಗ್ನಿಲ್ಲ ಆ ಮಾತು.
{{gap}}“ತಿರುಗ ನನ್ನ ಮಗನ ಜೀತಕಿರುಸಕ್ಕೆ ವಪ್ಪಕ್ಕಿಲ್ಲ ನಾನು....” ಅಟಾನೆ ಮಾಡಿದ್ದು!
{{gap}}“ಯಾರ ಮುಂದ್ಯಾ ನಿನ್ನಟ? –ಅಣದ ಯೆದುರೇ ನಿಂತು ಗುದ್ದಾಡಕ್ಕೆ ಯಾವ ಬಡ್ಡಿ ಹೈದನಿಗೆ ಸಾಧ್ಯ?... ಸುಮ್ಮೆ ಯಾಕ ಚಪಲ?- ನಾಳೆ ಸಂದೆಗೆ ಬುಂಡಮ್ಮಾರೆ ವೋಗಿ ಕ್ಯಾಳಿಬುಡಾದು”- ಅಯ್ಯ ಈ ಸಲ ಕೋಲ್ಟಿನಲ್ಲಿ ತೀರ್ಪು ಟ್ಟಂಗೆ ಯೋಳ...
{{gap}}ಆ ತೀರ್ಮಾನಕ್ಕೆ ನಮ್ಮ ಗುಡ್ಡೆಲ್ಲ ತಲೆಬಾಗಿ ವಪ್ಪಿಗಂಡಿತ್ತು...<noinclude></noinclude>
53d7zdrqsddadnv416u2c5p78f1aw8r
ಪುಟ:ವೈಶಾಖ.pdf/೧೫೧
104
82080
316471
278048
2026-05-03T13:19:08Z
Shreelatha.Halemane
7642
/* Validated */
316471
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೩೫}}
ಮಾರೆ ಬೆಳಿಗ್ಗೆ ನಾನು ಕಿಸ್ಥಸಾಸ್ತಿಗಳ ತ್ವಾಟಕ್ಕೆ ಕಂಬಳಕ್ಕೊಗಿದ್ದೆ.... ಬುಂಡಮ್ಮಾರ ಅಟ್ಟಿ ಜೀತ ತಪ್ಪಿದ ಜಿನದಿಂದ್ಲವೆ ನಾನು ಸಾಸ್ತಿಗಳ ತ್ಯಾಟಕೇ ಇಸೇಸ್ವಾಗಿ ಕೂಲಿಕಂಬಳಕ್ಕೆ ವೋಯ್ತಿದ್ದದ್ದು. ಸಾಸ್ತಿಗಳೂವೆ, ನಾನು ಕೆಲಸದಲ್ಲಿ ತೋರಿದ್ದ ಮುತುವರ್ಜಿ ಕಂಡು ತಾಟಕೆ ಬಂದೋರನ ಸಂಗಾಟ "ಈ ಹೈದ್ರ ಕೆಲ್ಸ ನಂಗೆ ತುಂಬಾ ಇಡುಸ್ತು... ದಾನ ಧಡಿಯರೂ ಇವನ ಸಮ ಕೆಲ್ಪ ಮಾಡನಾರು”- ಅಂತ ಯೋಳಿ, ನನ್ನ ಮೆಚ್ಚಿಗಂಡಿದ್ರು...<br/>
{{gap}}ಅವೊತ್ತು ಕೆಲ್ಸಕ್ಕೆ ಬತ್ತೀನಿ ಅಂದಿದ್ದ ಕೂಲಿ ಆಳುಗಳು, ಬ್ಯಾರೆ ತಾವು ಕಂಬಳಕೋಗಿ ಸಾಸ್ತಿಗಳೆ ಗಸ್ತು ಕಟ್ಟಿದ್ರು, ಆಗ ತ್ವಾಟದಲ್ಲಿ ಸಾಸ್ತಿಗಳು ನಾನು ಏಡು ಆಳೇಯ. ಅವೋತ್ತೆ ಮೂರು ವರುಸಕೆ ಅತ್ತತ್ರ ಬೆಳುದ ಈಳ್ಯದೆಲೆ ಹಂಬ, ಅಡಿಕೆಮರದ ಕೆಳುಗೆ ಗುಂಡಿ ತೋಡಿ, ಅದರೊಳೀಕೆ ಆಕಬೇಕು ಅನ್ಮಾದು ಸಾಸ್ತಿಗಳ ಇರಾದೆ... ಮನಸ್ಸಿಗೆ ಬಂದ ಯೇನೇ ತೊಂಟಿ ಬಂದರೂವೆ ಮಾಡೇ ಮುಗಸೀನಿ ಅನ್ನಾ ಸೋಬಾವ ಅವರದ್ದು!...<br/>
{{gap}}“ಈ ಅಡಿಕೆಮರದ ಬೊಡ್ಡೆ ಗುಂಡಿ ತೋಡ್ತೀಯೇನ್ದ?” ಕ್ಯಾಳಿದ್ರು.
{{gap}}“ಆಗ್ಲಿ” ಅಂದಿದ್ದೆ ನಾನು.
{{gap}}“ಹಂಗಾರೆ ಅಡಿಕೆಮರದಿಂದ ಹಂಬ ನಾನಿಳುಸ್ತೀನಿ. ನೀನು ಒಂದಡಿ ಆಳಕೆ ಗುಂಡಿ ತೋಡು ಮತ್ತೆ” ಅಂದ್ರು.
{{gap}}“ನಾನು ಹಲ್ಲೆಕರ ಆಗಿ ಓಡಾಡ, ಗುದ್ದಿ ಹಾರೆ ತಕ್ಕಂಬಂದು ಗುಂಡಿ ಅಗೆಯಕ್ಕೆ ಸುರುಮಾಡ್ಡೆ, ಸಾಸ್ತಿಗೊಳು-ನನ್ನೊಂದಿಗೆ ಅಂದಂಗೆ ಬಿದಿರೇಣೆ ತಂದು ಹಂಬ ಇಳುಸೆ- ಇನ್ನೊಂದು ಅಡಿಕೆಮರದ ಅಡೀಲಿ ತಾವೋವೆ ಗುಂಡ ತಗಿಯಕ್ಕೆ ಮುಟ್ಟುಗಂಡು...
{{gap}}ನಾವು ಏಡಾಳು ಸೇರಿ ಏಳೆಂಟು ಗುಂಡಿ ತಗುದಾಗಿತ್ತು. ಸಾಸ್ತಿಗಳು ನನ್ನ ಕರುದು,
{{gap}}“ಲಕ್ಕ, ಬಾರೋ ಇಲ್ಲಿ, ಆ ಬಿದಿರೇಣಿ ತಲ್ಲಿಕಂಡು ಬರಾವ” ಅಂದಿದ್ರು.
{{gap}}ಏಡು ಆಳೂವೆ ಕಯಾಕಿ ವೋಟು ದೂರದಲ್ಲಿದ್ದ ಬಿದಿರೇಣಿಯ ನೂಕ್ತ ನೂಕ್ತ ಅವರು ಯೋಳ ಜಾಕ್ಕೆ ತಂದೆ. ಸುಮಾರು ಇಪ್ಪತ್ತು ಇಪ್ಪತ್ತೈದು ಅಡಿ ಎತ್ತರ ಇತ್ತು ಆ ಬಿದಿರೇಣಿ. ಅದ್ರ ಇಂದ್ರೆ ತಿಕಡಿ ಕಾಲು. ಆ ಬಿದಿರೇಣಿಗೆ ಒಂದೊಂದು ಮೊಳ ಅಂತಕ್ಕೆ ಒಂದೊಂದು ಕಾಲು. ಅದರ ಮ್ಯಾಕ್ಕೆ ಸರಸರ ಏರೋದ ಸಾಸ್ತಿಗೋಳು ಬಲಿತಿದ್ದ ಹಂಬ ಇಳುಕಿದಾಗ, ಅಸುರು ಹಂಬು ಜಾರದಂಗೆ, ಬಾಳೆ ನಾರಿಂದ ಅರ್ದಡೀಗೆ ಒಂದು ಕಟ್ಟು, ಇನ್ನೊಂದೆರ್ದ<noinclude></noinclude>
cwexorkxt9zg0xh3a2i088onjkx011z
ಪುಟ:ವೈಶಾಖ.pdf/೧೫೨
104
82081
316470
278049
2026-05-03T13:17:55Z
Shreelatha.Halemane
7642
/* Validated */
316470
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=|left=೧೩೬|right=ವೈಶಾಖ}}
ಅಡೀಗೆ ಇನ್ನೊಂದು ಕಟ್ಟು-ಇಂಗೆ ಅಡಿಕೆಮರಕೆ ಬಿಗೀತಾ ಬಂದ್ರು... ಬಲಿತಿರೊ ಕಡ್ಡಿ ಕಾಣಿಡು, ಕಟ್ಟು ಬಿಗುದು ನಿಲಿಸಿದ್ದು ಅಲ್ಲಿಂದಾಚೆ ಹಂಬಿನ ತುದಿಗೆ ಮೂರು ನಾಕು ಅಡಿ ಬುಟ್ಟು, ಹಗ್ಗ ಕಟ್ಟಿದ್ದು... ಯಾಕೆ ಹಂಗೆ ಹಗ್ಗ ಕಟ್ಟಿದಿರಿ ಅಯ್ಯ ಅಂತ, ಯೆಲ್ಲ ಮುಗುದಮ್ಯಾಲೆ, ನಾ ಕ್ಯಾಲಿದ್ದರೆ- ಅಂಗೆ ಹಗ್ಗದ ಕಟ್ಟ ಆಕದೆ ವೋದೆ, ಹಗ್ಗ ಕಟ್ಟದೆ ಅಂಗೇಯ ಹಂಬ ಇಳುಕಿದೆ, ಯೆಲ್ಲ ಹಂಬೂವೆ, ಅಸುರಂಬು ಸೈತವಾಗಿ, ಮೊಗಚಿಕಳ್ಳಕ್ಕಿಲ್ಲವೇನ? ಅಂತ ಇವರಿಸಿದ್ರು... ಹಂಬಿನತುದಿಗ ಮೂರು ನಾಕಡಿ ಬುಟ್ಟು ಹಗ್ಗ ಕಟ್ಟಿದ ಮಾಗೆ, ಅಡಿಕೆ ಮರವ ಕಚ್ಚಿಗಂಡಿದ್ದ ಪಲ್ಲಿಗಳೂವೆ, ಅಂಗೇಯ ಬಾಳೆನಾರ ಕಟ್ಟುಗಳೊವೆ ಸಡಲಿಸಿದ್ದು, ಜಾರುಸ್ಥ ಹಂಬಿನ ಕಡ್ಡಿಗಳ, ಅಲ್ಲಿಂದ ಕೆಳಕ್ಕೆ ಉಪಾಯಲ್ಲಿ ಇಳುಕಿದ್ರು, ಇಳುಕ್ಷ ಕಡ್ಡಿಗಳ ಗುಂಡಗೆ ಮೊಡಚಿ ತೆಕ್ಕೆ ಮಾಡಿದ್ರು, ವೋಟರಲ್ಲಿ ತೋಡಿದ್ದ ಗುಂಡಿಗೆ ನಾನು ಗೊಬ್ಬರ ತಂದಾಕಿದ್ದೆ. ಅದರೊಳೀಕೆ ತೆಕ್ಕೆ ಮಾಡಿದ್ದ ಹಂಬಿನ ಕಡ್ಡಿಗಳ ಸಾಸ್ತಿಗೋಳು ತುರುಕಿದ್ದು, ಅದರ ಮ್ಯಾಲೆ ಮಣ್ಣ ತಳ್ಳಿ ಆ ಗುಂಡಿ ಮುಚ್ಚದ್ರು. ನಾನು ನೆಲಬಾವಿಂದ ಏಡು ಮಣ್ಣಿನ ಗಡಿಗೆ ತುಂಬ ನೀರ ವೊತ್ತು ತಂದು, ಜೀವ ನೀರ ಬುಟ್ಟಿದೆ...<br/>
{{gap}}ಮದ್ದಿನ್ನ ಸ್ವಾಮಿ ನೆತ್ತಿ ಬುಟ್ಟು ಕೆಳಕ್ಕೆ ಇಳುದು ಆಗ್ಗೆ ಪಡುವಲ್ಲಿ ಭೂಮಿ ಅಂಚ ಮುಡ್ತಾ ಇದ್ದ... ಇಂಗೆ ಸಾಗಿತ್ತು ನಮ್ಮ ಕೆಲಸಾಸ್ತ್ರಿಗಳು ಹಂಬು ಇಳುಕಾದು, ತೆಕ್ಕೆ ಮೊಡಚಿ ಗುಂಡಿ ವಳೀಕಾಕಿ ಮಣ್ಣ ತಳ್ಳಾದು ನಾನು ಗಡಿಗೇಲಿ ನೀರ ವೊತ್ತುಗಂಬಂದು ಆ ಹಂಬಿಗೆ ಜೀವ ನೀರ ಎರಯಾದು...<br/>
{{gap}}ಸಾಸಿಗೊಳು ಇನ್ನೊಂದು ಮರದ ಹಂಬ ಇಳುಕಕ್ಕೆ, ಬಿದಿರೇಣಿ ಇಡುದು ಇನ್ನೇನು ಅತ್ತಬೇಕು ಅನ್ನಾದಲ್ಲಿ, ಅವಿಗೆಯೇನನ್ನುಸ್ಕೊ, ನನ್ನ ಕಡೀಕೆ ತಿರುಗಿ
{{gap}}“ಆಸಿವಾಗ್ತಿದೇನ್ದ ಲಕ್ಕ?... ವೊತ್ತಾರೆ ವೊಟ್ಟೆಗೇನು ತಕ್ಕಂಡಿದ್ದೆ?” ಕ್ಯಾಳಿದ್ದರು.
{{gap}}“ತಂಗಳಿಟ್ಟು ತಿಂದಿದ್ದೆ ಕನ್ನಯ್ಯ, “ನಾ ಯೋಳ್ತ ಇದ್ದಂಗೆ,
{{gap}}“ಚ್, ಚ್... ಕೆಲ್ಸದ ಗ್ಯಾನದಲ್ಲಿ ಊಟವೆ ಮರುತೊಯ್ತು. ನಿಂಗೂ ಬಾಳ ಅಸಿವಾಗಿರಬೈದು... ಇದೇ ಕೊನೇ ಮರ, ಈವೊತ್ತಿಗೆ, ಇದು ಮುಗಿಸಿ, ವೊಂಟುಬುಡಾವ.” ಯೋಳಿ, ಅತ್ತಕ್ಕೆ ಸುರು ಮಾಡಿದ್ರು... ನಾನು ತಲೆ ಕೆರೀತ,
{{gap}}“ಅಯ್ಯ..” ತ್ವದಲ್ಲೆ.
{{gap}}“ಯೇನ್ದ?...” ಚೋಜಿಗ ಪಡ್ಡ ಕ್ಯಾಳಿದ್ರು.<noinclude></noinclude>
e5b41di3vmapnf6bp98r59yep17fvdj
ಪುಟ:ವೈಶಾಖ.pdf/೧೫೩
104
82082
316477
278050
2026-05-03T13:28:50Z
Shreesha Sharma
7840
/* Validated */
316477
proofread-page
text/x-wiki
<noinclude><pagequality level="4" user="Shreesha Sharma" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೩೭}}
{{gap}}ಬಲದಾ ಕಾಲ ಯೆಬ್ಬೆಟ್ಟಿಂದ ನೆಲ ಮೀಟ, ನಾನು
{{gap}}“ಈ ಮರದ ಹಂಬ ನಂಗೇ ಬುಡಿ. ನಾನು ಇಳುತ್ತೀನಿ ಕನ್ನಯ್ಯ” ಅಂತ ತಡ್ಕರಿಸಿದ್ದೆ. ಸಾಸ್ತಿಗೊಳು ನಗಾಡ್ರ.<br/>
{{gap}}“ಈ ಹಂಬು ಇಳುಕೊ ಕೆಲ್ಲ ಬಾಳ ಸೂಕ್ಸದ್ದು, ಇಂಗೇ ಬಂದು ಬಂದು ಸ್ವಾಡ ಕಲ್ಲುಕೊ. ನೀನು ಬೆಳುದು ದೊಡೇನಾದಂಗೆ, ನೀನೂ ಒಂದು ಜಿನ ನನ್ನಂಗೆ ಏಣಿ ಅತ್ತಿ ಹಂಬ ಇಳುಕೀವಂತೆ.” ಯೋಳಿ, ಬಿದಿರೇಣಿ ಅತ್ತೋಗಿದ್ರು...
{{gap}}ಕೊನೆ ಗುಂಡಿಗೆ ಮಣ್ಣು ತಳ್ಳಿ, ನೀರುಣ್ಣುಸಿ ಆಗಿತ್ತು, ಕೊಳದಾಗಿ ಕೈಕಾಲು ತೊಳುದು ಸಾಸ್ತಿಗೊಳು ಊರು ದಿಕ್ಕೆ ಮೊಖ ಮಾಡಿದ್ರು, ಹಾದೀಲಿ,
{{gap}}“ನಿಮ್ಮ ಮಗಾರು ಎಲ್ಲಿ ಅಯ್ಯಾರೆ?” ಕುತೂಹಲವಾಗಿ ಕ್ಯಾಳಿದ್ದೆ.
{{gap}}“ಅಡಿಕೆ ಯಾಪಾರಕೆ ಸಿವಮೊಗ್ಗದ ಕಡೆ ಶಾಂಪಲ್ ತಕ್ಕಂಡೋಗವೆ. ಮೊನ್ನೆ ತಾನೆ ವೊದ್ದು. ಬರಾದು ಇನ್ನೂ ಅಯಿದರು ದಿನವೇ ಆಗಬೈದು” ಅಂದಿದ್ರು.
ಮುಂಬೈ, ಹಾದಿ ಉದ್ದಕ್ಕೂ ಏಡು ಆಳಿನದೂ ಮಾತಿಲ್ಲ. ಅಟ್ಟಿ ತಲುಪುತಿಒದ್ದಂಗೆ, ಸಾಸ್ತಿಗಳು,<br/>
{{gap}}“ಈವೊತ್ತಿಗಾಯ್ತಲ್ಲ, ನಾಳೀಕೂ ಬಂದುಬುಡು. ಇವೊತ್ತಿಂದೂ ನಾಳೆದೂ ಯೆಲ್ಲಾನೂ ಸೇರುಸಿ, ಒಟ್ಟಿಗೇ ಕೂಲಿ ಕ್ವಿಟ್ಟು ಬುಡ್ತೀನಿ” ಅಂದ್ರು.<br/>
{{gap}}ನನ್ನ ಮುಖ ಸಪ್ಪಗಾಯ್ತು.
{{gap}}“ನಾಳೀಕೆ ನಾ ಯೆಂಗೆ ಬರಾನೆ?” -ಪ್ರಶ್ನೆ ಎಸುದು ಆಕಾಸ ಸ್ವಾಡುದಾಗ, ಸಾಸ್ತಿಗಳು,
{{gap}}“ಅಂಗಂದ್ರೆ ಯೇನೋ ಅರ್ತ?” -ಕ್ಯಾಳಿದ್ರು.
{{gap}}ನಡುದಲ್ಲಾನೂವೆ ತುದಿಬಾಲ ಒಂದನೂ ಬುಡದೆ ನಾ ಯೋಳಿಕಂಡಾಗ,
“ವಸಿ ಇಲ್ಲೆ ನಿಂತುಗೊ” ಅಂದೋರು, ದಾಪುಗಾಲು ಆಕ್ತ ಅಟ್ಟಿವಳಿಕೆ ವೋಗಿ, ತುಸ ವ್ಯಾಲ್ಯದಲ್ಲೇ ವೋರೀಕೆ ಬಂದು, ಇಡೀಂತ ಆಯಿವತ್ತು ರೂಪಾಯಿ ನನ್ನ ಕಯ್ಯಾಗಿಡ್ಡ.
{{gap}}“ಈ ಅಣವ ನಿನ್ನ ಜೀತಕೆ ಕೂಡಾ ಇಲ್ಲ. ಈಗ ಬಂದಿರೋ ದರದು ತೀರುಸ್ಕೊ, ನಮ್ಮ ತ್ವಾಟಕ್ಕೆ ನೀನು ಬಂದೂ ಬಂದೂ ಕಂಬಳ ಮಾಡದಂಗೆ ಈ ಅಣವ ಕಳೆ ಆಕ್ತ ವೋಯ್ತಿನಿ. ಯಾವೊತ್ತೂ ಒಂದು ಜಿನ ತೀರದೆ. ಯೋಚ್ಛೆ<noinclude></noinclude>
qc2b1ykkgsu0l1msegb09lomgqsn9i3
ಪುಟ:ವೈಶಾಖ.pdf/೧೫೪
104
82083
316478
278055
2026-05-03T13:30:06Z
Shreesha Sharma
7840
/* Validated */
316478
proofread-page
text/x-wiki
<noinclude><pagequality level="4" user="Shreesha Sharma" /></noinclude>________________
{{rh|center=|left=೧೩೮|right=ವೈಶಾಖ}}
ಮಾಡಬ್ಯಾಡ” ಅಂದಿದ್ರು...<br/>
{{gap}}ನನ್ನ ಗುಡ್ಲು ಕಡೀಕೆ ಎಜ್ಜೆ ಆಕ್ತ ನಂಗೊಂದೇ ಯೋಚ್ಛೆ:
{{gap}}“ಈ ಮಾರಾಯ್ತು ಯೇನೋ ಜೀತ ತಪ್ಪುಸಿದ, ಆದರೆ ನಾ ಇದ್ಯ ಕಲಿಯಾದು ಇನ್ನು ತಿಂಗಳಮಾವನಿಗೆ ಮದ್ವೇ ಆದಂಗೆ ಅಲ್ವ?<br/>
{{gap}} ನಾನು ನಮ್ಮ ಗುಡ್ಡ ತಲುಪಕ್ಕೂ ಆ ಕಡಿಂದ ಅಯ್ಯ, ಅವ್ವ ಏಡೂ ಆಳೂವೆ ಬರೋದಕ್ಕೂ ಒಂದೇ ಆಯ್ತು, ಏಡು ಅಳಿನ ಮೊಖವೊವೆ ಉಪ್ಪಾಕಿ ಉಷ್ಟೊ ಬೇಯದೆ, ಇರೋವಷ್ಟು ಜೋಲು ಬಿದ್ದಿತ್ತು. ಮೊದ್ಲು ಉಸುರು ಕಡುಸಿ, ಮಾತ ತಗುದೋಳು ಅವ್ವ;
{{gap}}“ಬುಂಡಮಾರ ಅತ್ರವೂ ಅಣ ದೊರೀನಿಲ್ಲ ಕನೆ... ಅವರೂವೆ ನಾವು ಕೃಟ್ಟ ನೂರು ರೂಪಾಯ ಯಾತಯಾತಕೊ ಬಳಸಿಬುಟ್ಟು, ಅದಿನೈದು ರೂಪಾಯಿ ಉಳುದದೆ, ಕೊಡಾನ ಅಂತ ಕ್ಯಾಳಿದ್ರು... ಅದು ತಕ್ಕಂಡು ನಾವ್ಯಾನ ಮಾಡಾದು ಬ್ಯಾಡಿ, ಅಂದೊ. ಬೋ ಪೆಚಾಡಿಕಂಡ್ರು...”<br/>
{{gap}}ಅಯ್ಯ ತನಗೆ ತಾನೆ ಮಾತಾಡ್ಕಳೂ ಅಂಗೆ ಅಂದ:<br/>
{{gap}} “ಈಗ ಇನ್ಯಾರ ವೋಗಿ ಕೇಳಾದು?” <br/>
{{gap}}ನಾನು ಕಯ್ಯ ಬಿಚ್ಚಿ ಅಣ ತೋರ.<br/>
{{gap}}“ತಕ್ಕ, ಕಿಸ್ಥಸಾಸ್ತ್ರಗೊಳು ಕ್ವಟ್ಟರು” – ಅವ್ವನ ಕಲ್ಕಿಗಿಟ್ಟು, ನಡುದ ಇಸ್ಯ ಯೋಳಿದೆ.
{{gap}}ಅವ್ವ, ಅಯ್ಯ ಏಡಾಳ್ವೆ ಯೇನ ಇದರರ್ತ ಅನ್ನಾ ಅಂಗೆ ಮೊದ್ದು ಮೊಖಮಾಡಿದೋರು, ನಾನು ಇವರಿಸಿದ್ದ ಕ್ಯಾಳಿ, ಬ್ಯಾಸರಪಟ್ಟರು. ಅವ್ವ ಅಂತೂವೆ
{{gap}}“ಸರಿಕನ ಬುಡು, ಇನ್ನು ಮ್ಯಾಲೆ ಸಾಸ್ತಿಗೊಳ ಅಟ್ಟಿಯಾಗೆ ನಮ್ಮ ಹೈದನ ಜೀತ ಕಾಯಂ ಆದಂಗಯ್ತು” ಅಂದು ಅಣ ಎಣಿಸಕ್ಕೆ ಸುಮಾಡಿದ್ದು.
{{gap}}“ಯೆಂಗೊ ಈ ಸವುಳದಲ್ಲಿ ಆ ಪುಣಾತ್ಮ ಬಂದು ಆತುಗಂಡರಲ್ಲ* ಅಂತ, ಕಡೀಕೆ ಅಯ್ಯ ಸಮಾಧಾನ ಮಾಡ್ಕಂಡ...
{{gap}}ಲಕ್ಕ ತಮ್ಮ ಗುಡ್ಡಿನೊಳಗೆ ಮನಗಿದ್ದಂಗೆ, ಹಿಂದೆ ನಡೆದದ್ದೆಲ್ಲ ಮೆಲುಕಾಕಿದ್ದ. ಕಾಲ ಏಟು ಬ್ಯಾಗ ಬ್ಯಾಗ ಓಡೋಯ್ತದೆ ಅಂತ ಇಸ್ಮಯ ಪಡ್ತಿದ್ದ.
{{gap}}ಒಂದು ವರುಸ ಅನ್ನಾದು ಆಡಾಡ್ತ ಮುಗುದೋಗಿತ್ತು. ಅಯ್ಯ, ಗಡುವು ಮುಗುದು ಜೀತ ಕಳೀತಲೆ ಗುಡ್ಡಿಗೆ ವಾಪಾಸಾಗಿದ್ದ. ಆದ್ರೆ ನಮ್ಮ ಆಯಿವತ್ತು<noinclude></noinclude>
0k1u2qbttxth1apc329n174zqglgyg9
ಪುಟ:ವೈಶಾಖ.pdf/೧೫೫
104
82084
316479
278064
2026-05-03T13:30:50Z
Shreesha Sharma
7840
/* Validated */
316479
proofread-page
text/x-wiki
<noinclude><pagequality level="4" user="Shreesha Sharma" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೩೯}}
ರೂಪಾಯಿ ಸಾಲ ಮಾತ್ರ ಇನ್ನೂವೆ ತೀರಿರನಿಲ್ಲ.... ನಾನು ಏಟು ದುಡಿದೂವೆ, ಅವನ ದುಡಿಮೇಲಿ ತಾನೆ ನಮ್ಮ ಗುಡ್ಲು ಭಂಗ ಸಾಗಿದ್ದದ್ದು!... ಇದ ತಿಳುಕಂಡು ಸಾಸ್ತಿಗೊಳು ನಾ ಮಾಡ್ಡ ಕೆಲುಸಕೆ ಆ ಆ ದಿನದ ಕೂಲ್ಯ ಆ ಆ ದಿನವೇ-ನಾನು ಬ್ಯಾಡಿ ಬ್ಯಾಡ ಅಂದರೂವೆ ಕ್ವಿಟ್ಟು ಬುಡ್ತಾ ಇದ್ರು...<br/>
{{gap}}ಇಂಗಾಡಿ ಅಂಗಾಡಿ ಒಂದು ವರುಸ ಪೂತ್ ಕೆಲಸ ಮಾಡಿದ್ದೆ, ಅಯಿವತ್ತು ರೂಪಾಯಿ ಸಾಲದಲ್ಲಿ ನಾನು ತೀರುಸಕ್ಕಾದ್ದು ಅತ್ತೇ ರೂಪಾಯಿ! ಇನ್ನೂ ನಲವತ್ತು ರೂಪಾಯಿ ಸಾಲ ಉಳುಕಂಡಿತ್ತು. ಆದ ತೀರುಸಕ್ಕೆ ಪೂನಾ ನಂಗೆ ಸಾಸ್ತಿಗೊಳ ಕ್ವಾಟದಲ್ಲೆ ದುಡುಮೆ!...<br/>
{{gap}}ಮುಂದಿನ ದಿನಗೊಳಲ್ಲಿ, ಅಯ್ಯ, ಅವ್ವ, ನಾನೂ ಮೂರಾವೆ ಮೊಗ್ಗೆ ಕವಡೆ ಕಟ್ಕಂಡೇ ದುಡುದ್ರೂವೆ, ಸಾಸ್ತಗೊಳ ಸಾಲ ವರ್ಷಾನುಗಟ್ಟೆ ಉಳುದುಬುಡು, ಯಕೆ ಅಂದೆ, ನಮ್ಮಯ್ಯ ಇರಿ ಮಗ ವೊದ್ದ ಮರಿಯಕ್ಕೆ ಕುಡುತ ಪಾಟ ಮಾಡ್ಕಂಡ, ರಾಚನ ಎಂಡದಂಗಡಿಗೇ ಅನ್ನ ಸಂಪಾಲಿ ಮುಕ್ಕಾಲು ಮೂರುವೀಸ ಪಾಲು ವೋಗೋದ್ರ ಜ್ವತೆ, ಒಂದೊಂದು ಸರ್ತಿ ನಮ್ಮವ್ವ ದುಡುವ ದುಡೂ ಅವು ಕಿತ್ಕಂಡೋಗಿ ರಾಚನ ಗಲ್ಲಕೆ ಎಸೀತಿದ್ದ....<br/>
{{gap}}ನಾನು ಎದ್ದೋನೆ ಇತ್ತಿಲ ಕಡೀಕೋಗಿ, ಕೈಕಾಲು ಮೊಖ ತೊಳುದು, ತಂಗಳ ಉಂಡು, ರೋಜಾದಂಗೆ ಕಂಬಳಕೊಂಟೆ, ನಾನಂಗೇ ವೋಯಾ ಇರೋನೂವೆ ಉಪಾದ್ಯರ ಮಠ ಸಿಕ್ಕು, ಆ ಮಠವ ತಟಾಯ್ತಿದ್ದಮಗೆ, ನನ್ನ ವಳುಗಡೆ ಸತ್ತೋದೋರ ಮುಂದೆ ತಮಟೆ ಬಾರುಸ್ಟಂಗಾಯ್ತು?- ಮಠದ ವಳೀಕೊಯ್ತಿದ್ದ ಉಡುಗರೇ ಕಣ್ಣೀರು ತುಂಬಿ ಕ್ವಾಡ್ತಿದ್ದಂಗೆ, ನನ್ನ ಮನಸು ಇಂದ್ರೆ ಅದೇ ಜಾಗ್ನಲ್ಲಿ ನಡುದೊಂದು ಸಂಗ್ಯ ನೆನಸಿಕತ್ತಿತ್ತು:<br/>
{{gap}}ನಾನೂವೆ ಆಗ ಇದೇ ಮಠದಲ್ಲಿ ಓಡ್ತಾ ಇದ್ದೆ. ಒಂದು ಜಿನ ನಾನು ಮಠಕೆ ವೊಂಡೋವೊತ್ತೆ ಮಳೆಯೂವೆ ಮಂಟಾಡಿಕಂತು ಬತ್ತು, ಬ್ಯಾಡ ಬ್ಯಡ ಅಂದ್ರೂವೆ, ಅವ್ವ ಗೊರಗು ತಂದು ಕ್ವಿಟ್ಟಿದ್ದು. ತಲೆ ಮ್ಯಾಲೆ ನೂಲುನೂಲಾಗಿ ಮಾಡದಿಂದ ಇಳುದು, ಮಾಡ್ರ ಸೂರಗಳಿಂದ ತೊಳ್ಕೊಂತ ಸುರಿಯಾ ಪರಿಯಕ್ವಾಡ್ ಕ್ವಾಡ್ರ ನಾನು ಕುಸಿಪಡ್ತಿದ್ದೆ... ವೋಟರಾಗೆ,ಇಂದುಗಡಿಂದ,<br/>
{{gap}}“ಲಕ್ಕೆ ಲೋ - ಲೋ ಲಕ್ಕ...” ಅಂತ ಯಾರೊ ಕುಗಿದಂಗಾಗಿ ತಿರುಗಿ ಕ್ವಾಡುತ್ತೆ- ಸಿವಾಚಾರದ ಗಂಗಿ!...<br/>
{{gap}} ಗಂಗಿ ಅಟ್ಟಿಯೂವೆ ವೊಲಗೇರಿಗೆ ಸಮೀಪ ಇದ್ದದ್ರಿಂದ, ಮದ್ಯೆ ವೋಲ್ವಾಗ ಬಾಗ ಅವಳು ನನ್ನ ಜ್ವತ್ಥ ಇಲ್ಲಿದ್ದಲು, ಮಾತ್ರ ಅವಳು ನಂಗಿಂತ<noinclude></noinclude>
dvjsa567s4i7orqcbcdfvnx3910zipj
ಪುಟ:ವೈಶಾಖ.pdf/೧೫೬
104
82085
316480
278065
2026-05-03T13:31:51Z
Shreesha Sharma
7840
/* Validated */
316480
proofread-page
text/x-wiki
<noinclude><pagequality level="4" user="Shreesha Sharma" /></noinclude>________________
{{rh|center=|left=೧೪೦|right=ವೈಶಾಖ}}
ದೊಡ್ವಳಾದ್ರಿಂದ ಏಡು ಕಿಳಾಸು ಮುಂದು!...<br/>
{{gap}}ಗಂಗಿ ನನ್ನ ಸಮೀಪ ಬಂದೇಟೆ, ಅವಳು ನೆನೀತಿದ್ದ ಕಂಡು, ನಂಗೆ ಪಾಪ ಅನ್ನುಸಿ<br/>
{{gap}}“ಇದ್ಯಾಕರ, ಗೊರಗು ತರಬಾರದಾಗಿತ್ತು?"- ಅಂತ ಅವಳ ಕ್ಯಾಳಿ...
{{gap}}“ಅಯ್ಯೋ ನಮ್ಮಟೇಲಿ ಇರಾದು ಒಂದೇ ಗೊರಗು. ಇನ್ನೊಂದ ಯಾರೋ ಕದ್ದು ಕಂಡೋಡ್ರಂತೆ. ನಿಂಗೊತ್ತದಲ್ಲ ನಮ್ಮವ್ವಂಗೆ ಗೊತ್ತು. ಅದ್ರೆ - ನೀನೇ ತಕ್ಕಂಡೋಗು ಅಂದು, ಅಂಗೇ ಬಂದೆ ಕನೋ, ಲಕ್ಕ” ಅಂದಿದ್ದಲು ಗಂಗಿ.<br/>
{{gap}}ಗಂಗಿ ಅಂಗಂದದ್ದೆ ತಡ, ನಾನು ನನ್ನ ಗೊರಗ ತಗುದು “ಆಕ್ಕಳಿ” ಅಂತ ಊಡಕ್ಕೋಡೆ,<br/>
{{gap}}“ಬ್ಯಾಡ ಬ್ಯಾಡ. ನೀ ಮೋಬೈ ಯಾಕೆ ನೆನೀಬೇಕು?... ತಾಳು, ಇಬ್ಬರೂ ಸೇರಿದಂಗೆ ಇದ ವೊದ್ಧಕಳಾವ” ಅಂದು, ಗಂಗಿ ತಲೆ ಮ್ಯಾಲೆ ಗೊರಗು ಆಕ್ಕಂಡು ನನ್ನ ಆದರೊಳೀಕೆ ಸೇರಿಸ್ಕಂಡ್ಲು! ನಾ ಯೆಸ್ಕೋ ಪರೀಲಿ ಬ್ಯಾಡಿ ಬ್ಯಾಡಿ ಅಂದರೂ ಅವೆಣ್ಣು ಕ್ಯಾಳನೇ ಇಲ್ಲ. ಸದ್ಯಕೆ ಆಗ್ಲೆ ಊರು ಇಂದ್ಯಾಗಿತ್ತು...
{{gap}}“ಇದ್ಯಾಕ್ಲ ಅಪ್ಪಯ್ಯ ಇಂಗಾಡಿ, ಈಗ ಇಲ್ಯಾರಿದ್ದಾರು?- ಮಠ ಸಮೀಪಿಸ್ತಿದ್ದಂಗೆ ನೀನು ಗೊರಗ್ನಿಂದ ಆಚೆ ಚಿಗುದುಬುಟ್ರೆ ಅಯ್ಯಪ್ಪ” ಅಂದ್ಲು
ಗಂಗಿ.
{{gap}}ಬ್ಯಾರೆ ದಾರಿ ಕಾಣದೇಯ, ನಾನು ಗೊರಗಿನೊಳಗೆ ಗಂಗಿ ಜ್ವತೇಲಿ ಯೆದುರ ಯೆಜ್ಜೆ ಆಕ್ಷೆ, ಇಸ್ಕೂಲು ಇನ್ನೇನು ಅತ್ತು ದಾಪು ಇರೋವಂಗೆ, ನಾನು ಗೊರಕ್ನಿಂದ ಗುಡುಕ್ಕೆ ವೊರೀಕೆ ಬಂದರೂ ಉಪಾದಮ್ ಎಂಕಟೇಸಯ್ಯಾರು ನಸ್ಯದ ಮೂಗ್ನಿಂದ ಸೀನ್ತಾ ಸೀನಾ ಇಸ್ಕೂಲಿನ ಮೊರ ಜಗಲಿಗೆ ಬಂದು ಗೊಣ್ಣೆ ಸೀನನ್ನ ಕ್ವಾಡಿಬುಟ್ಟಿದ್ದೂ ಒಂದೇ ಆಯ್ತು...
{{gap}}ಬಾಕಿ ಇಸ್ಯದಲ್ಲಿ ಉಪಾದ್ಯ ಎಂಕಟೇಸಯ್ಯಾರು ವಳ್ವೆಯೋರೇಯ. ಮಾತ್ರ ಕೀಳು ಜಾತ್ರೋರು ಮೇಲು ಜಾತ್ರೋರು ಸಮಸಮ ಇರಾದು, ಮೇಲು ಜಾತ್ರೋರ ನಮ್ಮಂತೋರು ಮುಟ್ಟಿಸ್ಕಳಾದು, ಇಂತ ಒಂದೂ ಸೈಸ್ತಿರಲಿಲ್ಲ. ನಮ್ಮಂತೋರು ಅವರು ಇಸ್ಕೂಲ ವಳಗಡೆ ಉಳುಕೆ ಹೈಕಳ ಜ್ವತೆ ಕುಂಡರಿಸ್ತಿರಿಲ್ಲ. ವೊರಗಡೆ ಜಗುಲೀಲಿ ಕುಂಡರಿಸೇ ಪಾಟ ಹೇಳಿದ್ರು,
{{gap}}ಈಗ ಉತ್ತುಮರ ಎಣ್ಣ ಮುಟ್ಟುಸ್ಕಂಡು ಒಂದೇ ಗೊರಗಿನೋಳೆ ಬತ್ತಾ ಇದ್ದ ಕಂಡು, ಅವರ ಮಯ್ಯಾಗೆಲ್ಲ ಕೆಂಡ ಕಾದಿರಬೇಕು. ಗೊಣ್ಣೆ ಚೌಕದಲ್ಲಿ<noinclude></noinclude>
7uiwghbdo77wcavl4bouq2x3bezp56k
ಪುಟ:ವೈಶಾಖ.pdf/೧೫೭
104
82086
316481
278647
2026-05-03T13:32:54Z
Shreesha Sharma
7840
/* Validated */
316481
proofread-page
text/x-wiki
<noinclude><pagequality level="4" user="Shreesha Sharma" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೪೧}}
ಮೂಗು ಸೀಟ್ತ.
{{gap}}“ಲಕ್ಕ, ಬಾಗ್ಲ ಇಲ್ಲಿ...” ಗರ್ಜಿಸಿದ್ದು,
{{gap}} ನಡು ನಡುಗ ನಾನು ಅತ್ರ ವೋದಾಗ, ಕ್ವಾಪ ನುಂಕಂಡು,
{{gap}}“ಈಗ ನೀನು ವಾಪಸೋಗು, ನಾತ್ರೆಗೆ ನಿಮ್ಮಯ್ಯ ಗುಟ್ಟಾಗಿ ನನ್ನಟ್ಟಿಗೆ ಕರಕಂಬಾ” ಅಂದ್ರು.
{{gap}}ನಾನಾಗ ಅವರಟ್ಟಿ ತಾವಿಕೆ ನನ್ನಯೂ ನಾನೂವೆ ವೋದೆ. ಅವರು ನನ್ನಯ್ಯಂಗೆ ತಾವು ಕಂಡದ್ದೆಲ್ಲ ಇವುರಿಸಿ.
{{gap}}“ಮೇಲು ಜಾತಿ ಯಜಮಾನಿಗೆ ಈ ಇಸ್ಯ ಗ್ರತ್ತಾದೆ, ಈ ಉಡುಗ ಚಮಡ ಸುಲಿದು ಬುತ್ತಾರೆ. ಇಂತಾ ಹೈಕಳು ಆಡೋ ಆಟಾನೆಲ್ಲ ಮುಚ್ಚಿ ಉಪಾದ್ಯಾಂತ ನನ್ನೂವೆ ನಿಮೂರಿಂದ ಗಡೀಪಾರು ಮಾಡ್ತಾರೆ. ಈಗ ಇದ್ದ ಯಾರ ಕುಟ್ಟೂ ಯೇಳೋದು ಬ್ಯಾಡ, ನಿಮ್ಹುಡುಗ ಇಲ್ಲಿಗಂಟ ಕಲ್ಲಿರಾದೆ ಸಾಕು. ಮುಂದುಕೋದಿ ಅವನ್ಯಾವ ದಿವಾನಗಿರಿ ಮಾಡಬೇಕಾಗಿದ್ದಾತೊ, ನಿಂಗ?... ಸುಮ್ಮೆ ಇವ ಯಾರ ಅಟ್ಟಲಾರು ಜೀತಕಿರುಸು, ನಿಂಗೂ ನಾಕೂ ಕಾಸ್ಸು ಕೈಸೇರಿ, ಉಪ್ಪುಗೊ ಸೊಪ್ಪುಗೊ ಅಯ್ತದೆ”- ಅಂತ ಬುದ್ದವಾದ ಯೋಳಿದ್ರ... ಆಗ ನನ್ನ ಕಣ್ಣಲ್ಲಿ ಚಿಲ್ಲನೆ ನೀರು ಕಿತ್ತುಗಂಡಿತ್ತು.
{{gap}}ಆ ಸಂಗ್ತಿಯ ಈಗ ನೆತಿದ್ದಮಗೆ, ಆ ಇಸ್ಕೂಲ ಮುಂದೆ ಇನ್ನೊಂದು ಚಣವೂ ನಿಂತ್ಯನಾರೆ, ಅಲ್ಲಿಂದ ನಾನು ಜೋಲು ಮ್ಯಾರೆ ಆಕ್ಕಂಡು ನಡೀತಿದ್ದೆ...
{{gap}}ಮುಂದೆ ತಿಂಗಳೊಪ್ಪತ್ನಲ್ಲಿ. ಅವಳ ತಮ್ಮ ಸತ್ತೋಗಿ ಎಮ್ಮೆ ಕಾಯೋರಿಲ್ಲಾಂತ, ಗಂಗೀನು ಅವಳ ಅಟ್ಟಿಯೋರು ಮಠ ಬುಡಸಿದ್ರು...<br/>
{{rh|center='''೧೧'''|left=|right=}}
ಇಪ್ಪತ್ತು ದಿನ ರುದ್ರಪಟ್ಟಣ ಮತ್ತು ಅದರ ಸುತ್ತಮುತ್ತಿನ ನೆಂಟರಿಷ್ಟರ ಊರುಗಳಲ್ಲಿ ಸುತ್ತಾಡಿ ಕಾಲಕಳೆದ ಚಂದ್ರಶೇಖರಯ್ಯನ ಸಂಸಾರ, ರುಕ್ಕಿಣಿ ನಿರೀಕ್ಷಿಸಿದಂತೆ ದರುಮನಳ್ಳಿಗೆ ವಾಪಸಾಗದೆ, ಮೈಸೂರಿನಗೆ ಪ್ರಯಾಣ ಬೆಳೆಸಿತ್ತು. ಮೈಸೂರಿನಲ್ಲಿ ಚಂದ್ರಶೇಖರಯ್ಯನ ಅಣ್ಣ ಮಂಜುನಾಥಯ್ಯ ಬ್ಯಾಂಕಿನಲ್ಲಿ ಗುಮಾಸ್ತೆ. ಮಂಜುನಾಥಯ್ಯನ ಮನೆಯಲ್ಲಿ ಸುಮಾರು ಹದಿನೈದು ದಿನಗಳ ಬಿಡಾರ. ಮತ್ತೆ ಅವರೆಲ್ಲರೂ ದರುಮನಳ್ಳಿಗೆ ಹಿಂದಿರುಗಿ, ಇಲ್ಲೂ ಸಹ ರುಕ್ಕಿಣಿಯ ಒತ್ತಾಯಕ್ಕೆ ಮಣಿದು ಒಂದು ವಾರ ಉಳಿದಿದ್ದರು. ಚಂದ್ರಶೇಖರಯ್ಯನಿಗೆ ದರುಮನಳ್ಳಿಯಲ್ಲಿ ಅನೇಕರ ಸ್ನೇಹ. ಹೀಗಾಗಿ ಅವನು ಮನೆಯಲ್ಲಿ ಇರುತ್ತಿದ್ದುದೇ<noinclude></noinclude>
mjwnhv8o4lh5svme4jrb1cv9ppb9edv
ಪುಟ:ವೈಶಾಖ.pdf/೧೫೮
104
82087
316482
278648
2026-05-03T13:33:39Z
Shreesha Sharma
7840
/* Validated */
316482
proofread-page
text/x-wiki
<noinclude><pagequality level="4" user="Shreesha Sharma" /></noinclude>________________
{{rh|center=|left=೧೪೨|right=ವೈಶಾಖ}}
ಅಪರೂಪ. ರುಕ್ಕಿಣಿಗೆ ಪಾರ್ವತಿಯು ಅಕ್ಕ ಮಾತ್ರ ಆಗಿರದೆ ಅತ್ಮೀಯ ಗೆಳತಿಯಂತೆ ನಡೆದುಕೊಳ್ಳುತ್ತಿದ್ದಳು. ಊರಿನಲ್ಲಿ ಯಾರೋಬ್ಬರೂ ಅಕ್ಕತಂಗಿಯರೆಂದರೆ ಹೀಗಿರಬೇಕು ಎನ್ನುತ್ತಿದ್ದರು. ಸರಸಿ. ಗಿರಿಜೆಯರಂತು ಅವಳಮಕ್ಕಳಂತೆ ಊರಿನ ಬೀದಿಬೀದಿಗಳಲ್ಲೂ ಓಡಾಡಿ ನೋಡಿದವರ ಕಣ್ಣಿಗೆ ಆಹ್ಲಾದ ತುಂಬುತ್ತಿದ್ದರು.<br/>
{{gap}}ವಾರ ಕಳೆಯುತ್ತಲೂ ಚಂದ್ರಶೇಖರಯ್ಯನ ಸಂಸಾರ ತಮ್ಮ ಊರಿಗೆ ಹೊರಟು ನಿಂತಿತು. ಅವರನ್ನು ದರುಮನಳ್ಳಿಗೆ ಕರೆದು ತಂದಿದ್ದ ಅವರ ಗಾಡಿ ಹಿಂದೆಯೇ ಅವರ ಹಳ್ಳಿಗೆ ಹಿಂದಿರುಗಿ ಹೋಗಿದ್ದದರಿಂದ, ಕೃಷ್ಣಶಾಸ್ತ್ರಿಗಳು ಲಕ್ಕನಿಗೇ ಹೇಳಿಕಳುಹಿಸಿ ತಮ್ಮ ಎತ್ತಿನ ಗಾಡಿಯನ್ನೆ ಹೊಡಿಸಿದರು.<br/>
{{gap}}ಹೊರಡುವ ವೇಳೆ ಬಂದಾಗ ಪಾರ್ವತಿಯು ಸರಸಿಯನ್ನಪ್ಪಿ,
{{gap}}“ಸರಸು, ನೀನೂ ನಮ್ಮೂರಿಗೆ ಬರ್ತೀಯೇನೆ?” ಎಂದು ಪ್ರೀತಿಯಿಂದ ಕರೆದಳು.
{{gap}}ಸಾವಿತ್ರಿಗೆ ಅಷ್ಟು ಖೈಡಾಗಿ “ಬರಲ್ಲ” ಎಂದು ಉತ್ತರಿಸಿದ್ದ ಬಾಲೆ. ಪಾರ್ವತಿಯು ಕರೆಯುತ್ತಲೂ “ಓ ಬತ್ತೀನಿ” ಎಂದು ಅತಿ ಸುಲಭವಾಗಿ ಒಪಿದ್ದಳು!.... ಈ ಸಮ್ಮತಿಗೆ ಮುಖ್ಯ ಕಾರಣ. ಪಾರ್ವತಿಯ ಮಗಳು ಗಿರಿಜೆ! ಅವರಿಬ್ಬರಿಗೂ ಹೆಚ್ಚು ಕಡಿಮೆ ಒಂದೇ ವಯಸ್ಸು, ಯಾವಾಗಲೂ ಸರಸಿ ಅವಳನ್ನು ಗಿಜಿ ಗಿಜ್ಜಿ ಎಂದು ಪೂರಾ ಹಚ್ಚಿಕೊಂಡಿದ್ದಳು, ಜತೆಗೇ ಊಟ, ಮಲಗುವುದೂ ಒಂದೇ ಹಾಸಿಗೆಯಲ್ಲಿ. ಹೀಗಾಗಿ ಪಾರ್ವತಿ ಕರೆದುದೇ ತಡ. ಎಳೆಗರುವಿನಂತೆ ಸಡಗರದಿಂದ ಓಡಾಡುತ್ತ ತನ್ನ ಲಂಗ ಜಂಪರುಗಳನ್ನು ಪುಟ್ಟ ಟ್ರಂಕೊಂದರೊಳಗೆ ತಾನೇ ತುಂಬುತ್ತಿದ್ದಳು. “ಟವಲ್ಲು ಬೇಡವೇನೆ?” ಎಂದು ರುಕ್ಕಿಣಿ ಕೇಳಿದ್ದಕ್ಕೆ, “ಅಲ್ಲಿ-ಗಿಜಿ ಟವಲ್ಲು ಎರಲ್ವ?” ಎಂದು ಅವಳು ರಾಗ ಎಳೆದಾಗ ಆ ಶೋಕದ ಮನೆಯಲ್ಲೂ ನಗು ಬುಗ್ಗೆ ಬುಗ್ಗೆಯಾಗಿ ಚಿಮ್ಮಿತ್ತು.
{{gap}}ಎತ್ತುಗಳನ್ನು ಹೂಡಿ ಸಿದ್ಧವಾಗಿದ್ದ ತಮ್ಮ ಕಮಾನು ಗಾಡಿಯ ಮುಂಭಾಗಕ್ಕೆ ಇಬ್ಬರು ಬಾಲಕಿಯರನ್ನೂ ಎತ್ತಿ ಕೂರಿಸಿದ್ದವಳು ರುಕ್ಕಿಣಿಯೆ! ಉಳಿದವರೂ ಒಬ್ಬೊಬ್ಬರಾಗೆ ಹತ್ತಿ ಕುಳಿತು, ಲಕ್ಕೆ ಎತ್ತುಗಳನ್ನು ಮುಟ್ಟಿ ಹುರಿ ಹುರಿದುಂಬಿಸಿದೊಡನೆ, ಗಾಡಿ ಚಲಿಸತೊಡಗಿತು.<br/>
{{gap}}ರುಕ್ಕಿಣಿಯು ಜಗಲಿಯ ಕಂಬವನ್ನೊರಗಿ ನಿಂತಿದ್ದಳು. ಗಾಡಿಯು ತಮ್ಮ ಕೇರಿಯ ತಿರುವಿನಲ್ಲಿ ಮರೆಯಾಗುವವರೆಗೂ ಲಕ್ಕನಿಗಿನ್ನ ಮಿಗಿಲಾಗಿ ಇಬ್ಬರು ಬಾಲಕಿಯರೂ “ಹುಚ್ ಹುಚ್.... ಹುಚ್ ಹುಚ್” ಎಂದು<noinclude></noinclude>
j8e4ret0far5fcunu3fhv2hjh45eikg
ಪುಟ:ವೈಶಾಖ.pdf/೧೫೯
104
82088
316484
278649
2026-05-03T13:35:57Z
Ashwini Rai K
8475
/* Validated */
316484
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೪೩}}
ಸಂಭ್ರಮಿಸುತ್ತಿದ್ದದನ್ನೆ ಆಲಿಸುತ್ತ ಬಹುಸಮಯ ಅವಳು ನಿತೇ ಇದ್ದಳು.<br/>
<br/>
{{center|೧೨}}
{{gap}} ಚಂದ್ರಸೇಕರಯ್ಯಾರ ಸಂಸಾರವ ಅವರೂರಿಗೆ ತಲುಪ್ಪಿ ಬಂದ ಲಕ್ಕನಿಗೆ, ತನ್ನ ಗಂತೆಮ್ಮನ ಒಂದೊಂದು ಕೇಮೆಯೂ ತಾರೀಪು ತಂದಿತ್ತು... ಸಿವುನಿ ಕಾಲಿಟ್ಟಿದ್ದೆ ಕಾಲಿಟ್ಟದ್ದು ಆ ಗುಡ್ಡಿಗೆ ಒಂದು ವಪ್ಪ ವಾರಣ ಬೆಳಕತ್ತು-ಕಲ್ಯಾಣಿ ಅತ್ತರಾಗಿತ್ತಾಗಿ ಚೆಲಾಡ್ತಿದ್ದ ಮಡಿಕೆಕುಡಿಕೇನಲ್ಲ ಅವು ಎಲ್ಲೆಲ್ಲಿರಬೇಕೊ ಅಲ್ಲಲ್ಲಿ ಜೋಡಿಸಿದ್ದು. ಸಿವುನಿ, ಗುಡ್ಡ ವಳುಗಿನ ನೆಲಕೆಲ್ಲ ಆಗಾಗ ತೊವ್ವ ತಾರಿಸ್ತಿದ್ದಲು. ಪರ್ತಿ ಜಿನ ಬೆಳುವಾದರೆ ತೆಪ್ಪದೆ ಗುಡ್ಲು ಮುಂದಕೆ ರಂಗೋಲಿ ಚಿತ್ತಾರವ ತರಾವರಿ ಬುಡುಸ್ತಿದ್ದು. ಅವೆಲ್ಲಕ್ಕೂ ಮಿಗಿಲಾಗಿ ಅವಳಯ್ಯಂಗೆ ಬೇಸ್ ಅನಿಸುದ್ದು ಅಂದರೆ, ಅವಳು ನಂಜನಗೂಡು ಸೀಮೆಲಿ ಕಲ್ಲುಗಂಬಂದು ಅಡುಗೆ ಮಾಡಾದರಲ್ಲಿ ತೋರಿಸ್ತಿದ್ದ ಕಯ್ಯ ಚಳಕ!... ಅಯ್ಯಂಗೆ ನೆಗಡಿ ಆಯ್ತು ಅನ್ನಾದೆ ತಡ ಸೀಗಡಿ ಸಾರು ತಯಾರು ಮಾಡಿ ಇಕ್ಕುತಿದ್ದಲು. ಏಳೆಂಟು ಜಿನ ಸುರುದಾಡಿ ನೆಗಡಿ ವೊಂಟೋದಾಗ,<br/>
“ನನ್ನ ಮಗಳು ಸಿವುನಿ ಮಾಡಿ ಇಕ್ಷ ಸೀಗಡಿ ಮೀನಿನ ಸಾರೇ ನನ್ನ ಸೀತ್ವ, ವೊಡದದ್ದು”- ಅಂತ ಸಿಕ್ಕಸಿಕ್ಕದೋರ ಕುಟ್ಟೆ ನಿಂಗಯ್ಯ ಸಾರಿದ್ದ. “ಕಲ್ಯಾಣಿ, ನೀನಿ ಯೇನಿದ್ರೂವೆ ವೊರಗಿನ ಕೇಮ್ಮೆ ಲಾಯಕ್ಕು. ಅಡುಗೇಲಿ ನಿನ್ನ ಮಗಳ ಕರಾಮತ್ತೇ ಕರಾಮತ್ತು” ಅಂದು ಮಗಳ ಮೇಲು ಮಾಡಿ, ಎಡತಿಯ ಆಳೀತಿದ್ದ. ಆಗ ಕಲ್ಯಾಣಿ,
- “ಬಾಯದೆ ಅಂತ ಬೋಮಾನದ ಮಾತಾಡಬುಟ್ರೆ ಯೇನ ಬಂದದ್ದು? ನಾನು ನನ್ನ ದುಡ್ಡಲ್ಲಿ ಸೀಗಡಿ ತಂದು ಕ್ವಟ್ಟುದ್ದಕ್ಕೆ ಅಲ್ವ ನಿನ್ನ ಮಗಳು ಸಾರು ಮಾಡಕ್ಕಾಯ್ತು” ಅಂದು ಬಾಯಿ ಮುಚ್ಚುಸ್ತಿದ್ದು.
ನಿಂಗಯ್ಯಂಗೆ ಸೋಸಲು ಮೀನು ಮೇಲೋಗರ ಅಂದರೆ ಬಲು ಇಚ್ಚೆ, ಒಂದು ಜಿನ ಮಗಳಿಗೆ,
“ಸೋಸಲು ಮೀನು ಉದಕ ಮಾಡಮ್ಮಿ” ಅಂದಾಗ, ಸಿವುನಿ“ಅಯ್ಯೋ-ದುಡ್ಡು?” ಕೇಳಿದಳು. “ಅಯ್ಯಂಗೇಳಿ ತರಸು” ಅಂತ ಇದ್ದಂತೆ, ಕಲ್ಯಾಣಿ
“ಊ. ದೊರೆ ಮೊಮ್ಮಗ ಯೋಳುಬುಟ್ಟ... ಯೆಲ್ಲಿಂದ ಉದುರಾದೊ ಕಾಣೆ ದುಡ್ಡು?... ನಾನು ನನ್ನ ಮಗ ಗೇಯೋದು ನಮ್ಮ ಇಟ್ಟು ಸೊಪ್ಪೆ<noinclude></noinclude>
87tzs03aox52z2helb0z2uzhaqdpub4
ಪುಟ:ವೈಶಾಖ.pdf/೧೬೦
104
82089
316485
278650
2026-05-03T13:36:23Z
Ashwini Rai K
8475
/* Validated */
316485
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=೧೪೪|right=ವೈಶಾಖ}}
ಸಾಲಕ್ಕಿಲ್ಲ. ಈ ಪುಣಾತ್ಮ ಗೇದ ದುಡ್ಡೆಲ್ಲ ತಕ್ಕಂಡೋಗಿ ಆ ರಾಚನ ಎಂಡಕೇ ಮುಳುಗುಸ್ತವನೆ?... ಇಮ್ಮಿಗೆ ಸೋಸಲು ಬೇಕು, ಸೀಗಡಿ ಬೇಕು. ಯಲ್ಲೇಆ ರುತಿ ರುತಿ ಅಡುಗೇನೆ ಆಗಬೇಕು!... ತಗಿ, ತಗಿ ಇವ್ರ ಮಾಕ್ಕೂ ಒಂದು ಲಿಂಗ ಅಂತ ಕಟ್ಕಂಡೋಗು, ನೇರ್ಪಾಯ್ತದೆ!... ಕ್ವಡಾದು ಮೂರು ಕಾಸು ಕ್ಲಾಣೆ ತುಂಬ ಹಾಸು, ಅನ್ನಾ ಗೆಣೆಕಾರ ನಿನ್ನಯ” -ಕಟಕಟನೆ ಯೋಳಿಬುಟ್ಟಾಗ, ಎಡತಿ ಮಾತ ತೆಳ್ಳಾಕನಾರದೆ, ನಿಂಗಯ್ಯ ತೆಪ್ಪಗಾಗಿದ್ದ. ಮಾತ್ರ ಸೊಸಲು ಮೀನು ಅತ್ವಾ ಕರಿಮೀನಿನ ಸೆ ಅವನ್ನ ಬಲವಾಗಿ ತಬ್ಬಿಕತ್ತು, ಎಂಡ ಕಮ್ಮಿ ಮಾಡಿ, ಹುಣಸೂರಿನ ಬೇಸ್ತವಾರ ಸಂತೇಲಿ ವೋಸ್ಸು ಕರ್ಮಿನ ಖರೀದಿ ಮಾಡಿ ತಂದು ಮಗಳ ಕಯ್ಯಗಿಡ.<br/>
{{gap}}“ತಕಮ್ಮಿ ಕರ್ಮಿನ...ನಾ ಅತ್ತೀಗೆನು ತರಕಿಲ್ಲ ಅಂತಾವ ನಿಸೂರು ಕೊಸೀತಿದ್ದಲ್ಲಿ ನಿಮ್ಮವ್ವ-ಕ್ವಾಡು, ಏಟೊಂದು ತಂದಿಮ್ಮಿ?” –ಇತ್ತಲಲ್ಲಿ ಚಾಪೆ ಎಣೆಯಕ್ಕೆ ಅಂತ ಒಣಾಕಿದ್ದ ಈಚಲು ಗರಿಗಳ ಗುಡ್ಡು ವಳೀಕೆ ತತ್ತುಗಂಬತ್ತಿದ್ದ ಕಲ್ಯಾಣಿಗೆ ಕೇಳೂವಂಗೆ ಧಿಮಾಕ್ನಿಂದ ಯೋಳಿ, ವೊದ್ದಿದ್ದ ವಸ್ತದ ತುದೀಲಿ ಗಂಟಾಕಿದ್ದ ಸೊಸಲು ಮೀನಿ ಸುರುದು ಗುಡ್ಡೆ ಮಾಡಿದ.<br/>
ಈ ಗುಡೇಲಿ ಅರ್ಧ ತಕ್ಕಂಡು, ರುಕ್ಕಿಣ್ಣವ್ವಾರು ಲಕ್ಕನ ಕಯ್ಲಿ ಕ್ವಿಟ್ಟು ಕಳಿಸಿದ್ದ ಮೊಗರು ಒದ್ದೆಕಾಯಿನೂವೆ ಸೇರುಸಿ, ಸಿವುನಿ ಮೆಲೋಗರ ಮಾಡಿದಳು. ಅದರೊಳಿಕೆ ಹಿಟ್ಟು ಹೊರಳಿಸಿ ನುಂಗೈ ನುಂಗ ನಿಂಗಯ್ಯ ತಾನು ಕಂಗಣ್ಣಪಾರ ಅಟ್ಟೇಲಿ ಜೀತಕಿದ್ದಾಗ ಅವರ ಹೆಂಡತಿ ಸಿದ್ದಮ್ಮ ಮಾಡ್ತಿದ್ದ ಮೇಲೋಗರದಂಗೇ ಅದೆ ಅಂತ ನೆನೆಸಿಕೊತ್ತಿದ್ದ, ಏಡು ಜಿನ ಬುಟ್ಟು ಉಳಿದಿದ್ದ ಕರ್ಮಿನಿನಲ್ಲಿ ಗೊಜ್ಜು ಮಾಡಿದ್ದಲು ಸಿವುನಿ. ಅದನಂತೂ ನಿಂಗಯ್ಯ ವೊಗಳದ್ದೂ ವೊಗಳದ್ದೆ!
“ತೆಗಿ, ತಗಿ, ಗಂಗಡಕಾರರೂ ನಿನ್ನ ಜಪಾತಿಮಾಂವುಸದ ಅಡುಗೆ ಮಾಡನಾರು ಕನ... ಮುಕ್ಯ, ಆ ನಿನ್ನ ಗಂಡ ಅನ್ನುಸಿಕಂಡ ನಂಜನಗೂಡ ಆ ತಲೆ ಮಾಡಿಸದೋಸ್ಥೆ ನಿನ್ನ ಕಗ್ನಿ ರುತಿ ಉಣ್ಣಾಕೆ ಅದ್ರುಸ್ವಪಡೀನಿಲ್ಲ” ಅಂತಿದ್ದಮಗೆ ಅವನ ಕಣ್ಣಲ್ಲಿ ನೀರಾಡಿದ್ದು ಉಂಟು.<br/>
ದರುಮನಳ್ಳಿಯ ಗಿಡಗಂಟ, ಅಳ್ಳಕೊಳ್ಳ, ಅಟ್ಟಿಗುಡ್ಲುಗಳೆಲ್ಲ ಗುಮ್ಮನೆ ಕತ್ತಲು ಮುಚ್ಚುಗತ್ತಾ ಬತ್ತಿತ್ತು... ಉಂಡು ತಡಿಕೆಬಾಗಿಲ ತಳ್ತಾ ಈಚೆಗೆ ಬಂದ ಲಕ್ಕ, ಗುಡ್ಡ ಬಾಜೂನಲ್ಲೆ ಇದ್ದ ಸೊಂಟದೆತ್ತರದ ಬಂಡೆ ಅತ್ತಿ ಕುಂತು ಬೀಡಿ ಕತ್ತಿದ್ದ. ಇನ್ನೂ ಉರೀತಿದ್ದ ಬೆಂಕಿಕಡ್ಡಿಯ ಉಫ್ ಅಂದು ಆರುಸಿ, ವಕ್ಕಡೆ ಎಸದು, ಕತ್ತೆತ್ತಿದ- ಯಾರೋ ತಳಗದಿಂದ ಮೀಟಿದ ತರ, ಒಂದು ಕೆಂಡದ<noinclude></noinclude>
fwcvir53ewcwlvj8tjls0zhxxk9uc1b
ಪುಟ:ವೈಶಾಖ.pdf/೧೬೧
104
82090
316486
278651
2026-05-03T13:36:39Z
Ashwini Rai K
8475
/* Validated */
316486
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೪೫}}
ಉಂಡೆ ವಸಿ ವಸ್ಯಾಗಿ ಚಿಮ್ಮಿ ಮೂಡಲ ಬಾನಿನಲ್ಲಿ ತಳತಳಗುಟ್ಟಕ್ಕೆ ಸುರು ಮಾಡಿತ್ತು... ಅದ್ರೇಯ ಹೊಸದಾಗಿ ನೋಡೋನಂಗೆ ಬುಟ್ಟ ಕಣ್ಣು ಬುಟ್ಟ ಬಾಯಾಗಿ ಕ್ವಾಡ್ರ ಕುಂತ ಲಕ್ಕ, “ಇವೊತ್ತೆ ಉಣ್ಣಿಮೆ ಇರಬೈದ?” ಯೋಚಿಸ್ತ ಇಾಗ, ಕುಂಡಿಮಾದಿ ಇವರ ಗುಡ್ಡ ಮುಂಚೋರಿಕೆ ಬಂದು,<br/>
“ಕಲ್ಯಾಣ, ಕಲ್ಯಾಣ-ನಾವೆಲ್ಲಾರೂವೆ ದ್ಯಾವಾಜಮ್ಮನ ಗುಡ್ಡು ಮುಂಚೂರಿ ಸೇರಾ ಇವಿ- ಚಾಪೆ ಎಣೆಯಾಕೆ. ಜಟ್ಟೆ ವೊಂಟು ಬನ್ನಿ, ಬೆಳದಿಂಗು ಚೆಲ್ಲಾಡ ಬಿದ್ದದೆ” ಎಂದು ಒಂದೇ ಉಸುರಿಗೆ ಯೋಳಿ, ಇನ್ನೊಂದು ಗುಡ್ಡು ತಾವಿಕೆ ಚಿಗಿದ್ದು.
ಹಿಂದೆಯೇ ಒಣಾಕಿದ ಈಚಲು ಗರಿ ಸೋಗೆಗಳ ಸಿಗದು ಕಂತೆಗಳ ಮಾಡಿ, ಆ ಕಂತೆಗಳೆ ತ್ಯಾವದ ಪಾವುಡೆ ಸುತ್ತಿ, ಆ ಕಂತೆಗಳ ಸೈತ ಕಲ್ಯಾಣಿ, ಜತೆ ಕೂಸು ತತ್ತುಗಂಡ ಸಿವುನಿ ಇಬ್ಬರೂವೆ ಗುಡ್ಡಿಂದ ವೊಂಟು ದ್ಯಾವಾಜಮ್ಮನ ಗುತ್ತು ಮುಂದಕೋದರು.
ಆ ಗುಡ್ಲು ಮುಂದಕೆ ಒಬ್ಬೊಬ್ಬರಾಗಿ ಇಬ್ಬಿಬ್ಬರಾಗಿ ಎಂಗಸರು ಬಂದು ಹಾಸಿದ ಚಾಪೆಗಳ ಮೇಲೆ ಕುಂತರು. ಕುಂತು ತಂತಮ್ಮ ಕಂತೆಗಳ ಬಿಚ್ಚುತಿದ್ದಂಗೆ ಅವರವರಲ್ಲಿ ಮಾತೂ ಬಿಚ್ಚಗತ್ತು.
ಗೋಟಡಿಕೆ ಬಾಯಿಗೆಸೆದು, ವೀಳೆಯದೆಲೆಗೆ ಸುಣ್ಣ ಹಚ್ಚುತ್ತ, ಮೊದ್ಲು ಮಾತಿನ ಬೋಣಿ ಉಳಿಸಿದೋಳು ದ್ಯಾವಾಜಮ್ಮ:
“ಲೇ ಸಿವುನಿ, ನಿಮ್ಮಯ್ಯ ಯಾವತ್ತೂವೆ ನಿನ್ನ ಕಮ್ಮಿ ರುತಿಯ ನಮ್ಮೋರತ್ರ ಆಡ್ತಾನೆ ಇಲ್ಲವಂತೆ... ಇವೊತ್ತು ಯಾವ ಮಾಡಿದ್ರಣೆ ನಂಜಕ್ಕೆ?”
ಕಂತೆಗೆ ಸುತ್ತಿದ್ದ ಒದ್ದೆ ಪವುಡೆ ಆಳೀತ ಸಿವುನಿ,
“ಬೇಸ್ತವಾರ ಸಂತಿಂದ ನಮ್ಮಯ್ಯ ತಂದಿದ ಕರ್ಮಿನ್ನಲ್ಲಿ ವಸಿ ತಕ್ಕಂಡು, ಬದನೆಕಾಯಿ ಜ್ವತೆ ಕುದ್ದಿ ಆ ಜಿನವೆ ಮ್ಯಾಲೋಗರ ಮಾಡಿದ್ದಿ, ಇನ್ನುಳುಕೆ ಸೋಸಲು ಬತ್ತಿಸಿ ನಂಜಕ್ಕೆ ಗೊಜ್ಜು ಮಾಡಿದ್ದೆ ಕನ” ವರದಿ ಮಾಡಿ, ಬೆಲ್ಲಗೆ ಮೆತುವಾಗಿದ್ದ ಈಚಲುಗರಿಗಳ ಚಾಪೆ ಇಣೆಯಕ್ಕೆ ಅಣಿಯದ್ದು.
- ದ್ಯಾವಾಜಿ ಮಾತಿನ ಮಲ್ಲಿ, ವೀಳ್ಯದೆಲೆಯ ದವಡೆಗೆ ವರುಸಿ ಹೊಗೆಸೊಪ್ಪ ಅಂಗಯ್ಯಲಿ ತೀಡಿ, ಬಾಯಿಗೆಸೆದು, ಸರಸವಾಗಿ ಕಣ್ಣ ವೊರಳುಸಿ, ತನ್ನ ಗಲ್ಲವ ಕಯ್ಯಲಿ ಹಿಡಿದು,<br/>
“ಕ್ಯಾಳಿದಿರೇನವ್ವ, ಈ ಎಣ್ಣು ಯೋಳಿದ ಮಾತ?... ಅವತ್ತು ಕಲ್ಕಿನ್ನೂ ಬದ್ರೆಕಾಯೂವೆ ಬಿರುಸಿ, ಮ್ಯಾಲೋಗ್ರ ಮಾಡಿದ್ದಂತೆ. ಇವತ್ತು ಉಳುಕೆ ಕರ್ಮಿನ<noinclude></noinclude>
lgry1h52j0l7bkf5jpqfclbh6ik0qf2
ಪುಟ:ವೈಶಾಖ.pdf/೧೬೨
104
82091
316487
278652
2026-05-03T13:36:56Z
Ashwini Rai K
8475
/* Validated */
316487
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=೧೪೬|right=ವೈಶಾಖ}}
ಬತ್ತಿಸಿ ಗೊಜ್ಜು ಮಾಡಿದ್ದಂತೆ... ಅದ್ಯಾಕೆ, ನನ್ನೂವೆ ಕರದಿದ್ರೆ ನಾ ಯೇನ ವಲ್ಲೆ ಅಂತದ್ಮಾ?- ಕರ್ಮೀನು ನಂಗೇನು ಸೆಡೀದೆ ಇತ್ತ?” ಅಂದುದಕೆ ಅಲ್ಲಿ ನೆರೆದಿದ್ದ ಎಂಗಸರೆಲ್ಲಾರು ಗೋಲ್ ಗೊಳ್ ನಗಾಡಿದರು. ಅಂಗೇಯ ಚಾಪೆ ಎಣೆಯಾಕೆ ತಂತಮ್ಮ ಬೆರಳುಗಳ ತೊಡಗಿಸಿದ್ದು,<br/>
{{gap}}ಎಣೀತ ಎಣೀತ ಚೌಡಿ ಮೆತ್ತಗೆ ಉಸಿರೆತ್ತಿದ್ದು:
“ಕ್ವಾಡಾಕ್ಕ, ನಮ್ಮ ಕಿರಿಹೈದ ಇಲ್ವಾ, ಅವುಸ್ಥೆ ಈ ಊರಲ್ಲಿ ಯಾವ ಮೂಳಿ ಮದ್ದು ಆಕಿದ್ದು. ಮೊದಮೊದ್ಲು ನಮಗ್ಯಾರಿಗೂವೆ ಇದ್ರ ಸುಳೂವೇ ಅತ್ತನಿಲ್ಲ. ಉಡುಗ ದಿನದಿನ್ನೆ ನವೀತ ಬತ್ತಿದ್ದ. ಅನುಮನಸಾಯ್ತು, ಸಂತೆಗೋಗಿದ್ದಾಗ ಜವುಳಿ ಅನಂತ ಸೆಟ್ಟರು ಯೋಳಿದ್ರು. ಇದ್ಯೆ ಮದ್ದ ಅಕಿರೂವಂಗೆ ಕಾಣದೆ. ಈ ಮದ್ವ ತಗಿಯೊ ವಬ್ಬಳು ಬೂಬಮ್ಮ ಅವೈ. ಅವಳತ್ರ ಕರಕಂಡೋಗಿ ತೊರುಸು, ಅಂದ, ಅವಳೆಸರು ಕಾಸಿಂಬೀ, ಸಂತೆಮಾಳದಾಗೆ ಅವ್ರ ಮನೆ. ಅಲ್ಲಿಗೆ ನಮ್ಮುಡುಗ್ನ ಕರಕಂಡೋದೆ. ಅವ್ರು ಅದ್ಯಾನೊ ವಮನ ಮಾಡೊ ಅವುಸ್ಥೆ ಕುಡಿಸ್ದ್ದು. ವಸಿ ವೊತ್ಸಲ್ಲೆ ಹೈದ ವಮನ ಮಡಿಕತ್ತು-ಈಟು, ಒಂದು ತಣಿಗೆ ತುಂಬ!... ಆಚರ್ಯದ ಸಂಗ್ತಿ ಅಂದ್ರೆ, ಆ ಬೊಬಮ್ಮ ತಣಿಗೆ ವಳುಗಿನ ವಮನದಲ್ಲಿ ಕಾಡಿ ಗೆಜ್ಜುಗದ ಗಾತ್ರದ ಒಂದು ಉಂಡೆ ತಗದು, ಕ್ವಾಡು. ಇದೇ ಇಕ್ಕಮದ್ದು. ಇದ್ದ ಕಡಬ್ಬಲ್ಲಿ ಸೇರಿ ಕ್ವಟ್ಟಿ, ಸುಮಾರು ಜಿನ ಆಗೈತೆ. ಇಲ್ನೋಡು, ಆಗ್ಗೆ ಇದರಾಗೆ ಕೂದಲೂ ಬೆಳುದು ಬುಟ್ಟಿದೆ” ಅಂತ ತೋರಿಸಿದ್ದು... ಸದ್ಯಕೆ, ಪುಣಾತಿಗಿತ್ತಿಂದ ನನ್ನ ಕಂದ ಬದುಕ್ಕತ್ತು.”<br/>
{{gap}}ಚೌಡಿ ಮಾತ ಮುಗಸ್ತಿದ್ದಂಗೆ,
“ಅದ್ವಿ, ಇದ್ಯಾವ ಚಾಳಿ ಕಲ್ಲಿದ್ದಾರು, ಈ ರಂಡೇರು?” ಖಾಾಗಿ ಕಲ್ಯಾಣಿ ಅಂದುದಕ್ಕೆ, ದ್ಯಾವಾಜಿ,<br/>
“ಹಯ್ಯೋ, ಅಷ್ಟೇ ಯಾಕೆ-ಯಾರೂ ಧ್ವರೀದೆ ಇದ್ರೆ, ಕೂಡಿದ ಗಂಡನ್ಗ ಆಕು ಅನ್ನುಸ್ತದಂತೆ ಈ ಚಾಲಿ ಕಲುತೋರೆ!” ಅಂದಾಗ,
“ಅಸ್, ಇವರ ಮನೆ ಎಕ್ಕುಟ್ಟೋಗ” ಅಂತ ಯಾರೋ ಒಬ್ಬಳಂದ್ಲು.
“ಊರಲ್ಲಿ ಇಂತೋರು ಕೆಲವು ಎಂಗಸರು ಅವರೆ. ಉತ್ತಮರಲ್ಲೂ ಅವರೆ ಅಂತಾನು ಕ್ಯಾಳಿ” ಇನ್ನೊಬ್ಬಂದ್ಲು.
ಇಕ್ಕು ಮದ್ದಿನ ಸುದ್ದಿ ಇಂಗೆ ಒಬ್ಬರಿಂದೊಬ್ಬರಿಗೆ ಉರುಟ್ಟೆ ಆಡ್ತಾ ಇರೋನೂವೆ, ಕುಂಡಿಮಾದಿ,<br/>
“ಹಯ್ಯೋ, ಇಕ್ಕ ಮದ್ದು ಇಕ್ಕಬುಟ್ಟರಾರೂ ಸೈಸಕಬೈದು. ಆದ್ರೆ ಈ ಚಿತ್ರ<noinclude></noinclude>
n5651lpedp1xl6nqu2p2s2jm2jy6pbw
ಪುಟ:ವೈಶಾಖ.pdf/೧೬೩
104
82092
316483
278653
2026-05-03T13:35:12Z
Shreesha Sharma
7840
/* Validated */
316483
proofread-page
text/x-wiki
<noinclude><pagequality level="4" user="Shreesha Sharma" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೪೭}}
ಇಂವುಸೆ ಪಡಕ್ಕಿಂತ ಆ ಜಡೆಮುನಿ ತನ್ನ ತಾವಿಕೆ ಬ್ಯಾಗ ಕರಕಂಬುಟ್ರೆ ನಿಶ್ಚಿಂತಿಂದ ವೊಂಟೋಗಬೈದು...” ಇಸ್ಸು ಯೋಳಿ ಉಸುರುಗರುದ್ದು.<br/>
{{gap}}ಎಂಗಸರೆಲ್ಲಾರೂವೆ ಒಂದೇ ಉಸುರೆ,
{{gap}}“ಯಾನವ್ವ ಅಂತಾದ್ದು? ಯಾನಾಯ್ತು? ಬುಡುಸಿ ಯಾಳವ್ವ.” ಗಂಟಲು ದೊಡ್ಡದು ಮಾಡಿ ಕ್ಯಾಳಿದರು.
{{gap}}ಕುಂಡಿಮಾದಿ ಚಾಪೆ ಎಣೆಯೋದ ನಿಲ್ಲುಸದೆ,
{{gap}}“ಹಯ್ಯೋ, ಯಾನಂತ ಯೋಳಲವ್ವ...” ಅಂದು, ನಿಟ್ಟುಸುರು ಎಳೀತಾನೆ ಇಾಗ, ದ್ವಾವಾಜಿ,<br/>
{{gap}}“ಹಯ್ಯ, ಎಂಗವ್ವ ಯೋಳಲಿ?...” ಪೇಚಾಡ್ತಾನೆ ಇದ್ಲು. ದ್ಯಾವಜಿಗೆ ರೇಗು.
“ಯೋಳಕ್ಕೆ ಈಟು ಕಷ್ಟ ಆದ್ರೆ, ಬಾಯಿ ಮುಚ್ಚಂಡು ಗಮ್ಮನೆ ಕುಕ್ಕರುಸು” ಅಂತ ತುಟಿ ಬಿರುವಿದ್ದು, ಆಗಲಾರು ಕುಂಡಿಮಾದಿ ಬಾಯಿ ಮುಚ್ಚಕಳನಿಲ್ಲ. ಮುನಾ ಉಸುರೇಳಿತ,<br/>
{{gap}}“ಒಂದು ಚೆಂದುಳ್ಳಿ ಪದಾರ್ತ ನಮ್ಮತ್ರ ಇದ್ರೆ, ಯೇನಾಯ್ತದೆ ನೀವೆ ಯೋಳಿ?” ಕ್ಯಾಳಿಬುಟ್ಟು.
{{gap}}ಕಲ್ಯಾಣಿಗೆ ತಡೀನಿಲ್ಲ.
{{gap}}“ಇದ್ಯಾಕಮ್ಮಿ ಮಾತ್ನಲ್ಲ ಇಂಗೆ ಒಂಟು ಮಾಡ್ತೀಯೆ?” ಅಂದ್ಲು. ದ್ಯಾವಾಜಿ ಫೈಡ್ ಅನ್ನೋ ಅಂಗೆ ಸಿಡಿದ್ದು:
{{gap}}“ಒಂದು, ಒಂದು ಒಂಟು! ಯಾಕೆ ಇಂಗೆ ಮಾತ್ತೆಲ್ಲ ಒಂಟು ಮಾಡಿ ಮಾತಾಡೀ- ಒಂಟೊಂಟು ವಡೇರ ಗಂಟು ನಿಮ್ಮಪ್ಪನ ಕೊರಳೆಲ್ಲ ಸರಗಂಟು, ಅಂತಾವ?”
{{gap}}ಈಗಲೀಗ ಕುಂಡಿಮಾದಿ ಇಸ್ಯಕ್ಕೆ ಬಂದ್ಲು.<br/>
{{gap}}“ಹಯ್ಯೋ, ಯಾಕ್ರವ್ವ ಇಂಗೆ ಕ್ವಾಪಸ್ಕಂಡೀರಿ-ಬುಡಸೇ ಯೋಳ್ತೀನಿ ಕ್ಯಾಳಕನ್ನಿ...ನಮ್ಮಣ್ಣು ಸಾವಂತ್ರಿ ಇಲ್ವ?-ಅವಳಿನ್ನೂ ರುತುಮತ್ತೆ ಅಗ್ನಿಲ್ಲ ಅನ್ನಾದು ನಿಮಗೆಲ್ಲಾರೂ ಗೃ ಅದಲ್ಲ... ಆ ಕೆಂಗಣ್ಣಪ್ಪಾರೆ ಹೊಗೆಸೊಪ್ಪ ಚಪ್ಪರದ ಗಳುಗಟ್ಟೆ ಹೊಗೆಸೊಪ್ಪ ಮಾಲೆಗಳ ನ್ಯಾತಾಕಿ ಇನ್ನೇನು ಮುಗುದಿತ್ತಂತೆ. ಯೆಲ್ಲೊ ವಸಿ ಮಾಲೆ ಉಳುಕಂಡಿದ್ವಂತೆ. 'ಇವ ನಾನು ಈವೆಣ್ಣು ಏಡಾಳೂವೇ ಆಕತ್ತೀವಿ. ನೀವೆಲ್ಲಾರೂ ವೊಗರಮ್ಮಿ ಅಂತ ಕಳಸುಬುಟ್ಟು-ಊರ ಆಚೆಗಿರೊವುರ ಇತ್ತಲಲ್ಲಿ, ಒಂಟಿ ಸಿಕ್ಕಾಕಂಡ ನಮ್ಮಣ್ಣಿನ ಮ್ಯಾಲೆ ಬಿಡ್ಕಂಡು ಹೊಸಕಾಡಿದ್ರಂತೆ... ಇಂಗೂ<noinclude></noinclude>
c52d6r3w0qpqgixna6c44vhep3pzjd3
ಪುಟ:ವೈಶಾಖ.pdf/೧೬೪
104
82093
316488
278654
2026-05-03T13:37:19Z
Ashwini Rai K
8475
/* Validated */
316488
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=೧೪೮|right=ವೈಶಾಖ}}
ಉಂಟೇನವ್ವ?- ಒಂದು ಪಕ್ಕಸ ನಮ್ಮ ಸಾವಂತ್ರಿ ರುತುಮತಿಯೇ ಆಗಿದೆ, ಯಾನ ಗತಿ?”<br/>
{{gap}}ಕುಂಡಿಮಾದಿ ಇವರಿಸಿದ ಆ ಸಂಗ್ತಿ ಅಲ್ಲಿ ನೆರೆದಿದ್ದೋರು ಎಲ್ಲಾರನೂ ದಿಗ್ಧಮೆಗೊಳಿಸಿದ್ರೂ ದ್ಯಾವಾಜಿ ಮಾತ್ರ “ಇಸ್ರೇಯ?” ನಗಾಡ, ಬೆಪ್ಪಾಗಿ ಕುಂತಿದ್ದ ಆ ಎಂಗಸರ ಇನ್ನೂ ಬೆಷ್ಟುಗುಡಿದಳು. ಎಲ್ಲಾರು ತಂತಮ್ಮ ಚಾಪೆ ಎಣೆಯಾದ ನಿಲ್ಲುಸಿ, ದ್ಯಾವಾಜಿ ಮೊಖಾನೆ ಒಂದು ಚಣ ನೋಡದ್ರು, ದ್ಯಾವಾಜಿ ನಗಾಡಾದ ನಿಲ್ಲುಸಿ,<br/>
{{gap}}“ಹಯ್ಯೋ, ಇದರಾಗೆ ಯಾವ ಅತಿಸಯ ಇದ್ದದು ತಗಿ... ಆವಯ್ಯ ಸರಕಾರಿ ಗೂಳಿ ಅಂಗೆ ಕಂಡ ಕಂಡ ಅಮೀರು ಮ್ಯಾಲೆಲ್ಲ ಹಾರಿ, ತನ್ನ ಪುರುಸಾನೆಲ್ಲ ಕಳಕಂಡು ಭಾಳ ಕಾಲ ಆಗೋಯ್ತು, ಈಗ ಮ್ಯಾಲೆ ದಬ್ಬನೆ ಬೀಳಾದು, ಪ್ರಸಕಾಡಾದು, ಈಟೇಯ ಆವೃ ಕಣ್ಣು ಕಿಸಿಯಾದು! ಅವು ಮಡಕ್ಕಂಡಿದ್ದ ಮರಸು ವಕ್ಕಲಿಗರ ದ್ಯಾವೀನೆ ನನ್ನ ಕುಟ್ಟೆ ನಗಾಢ ಯೋಳಿದ್ದು... ಈಗ ನಿನ್ನ ಸಾವಂತ್ರಿ ರುತುಮತಿ ಆಗದಿದ್ರೂ ವೋಟೇಯ, ಆಗಿದ್ರೂ ವೋಟೇಯನಿಂಗ್ಯಾಕಮ್ಮಿ ಬಯ?... ನೀನೊಂದ ಪೆದ್ದುಗರ, ಸಾವಂತ್ರಿಗೆ ಯೋಳುಕಡು. ಇನ್ನೊಂದು ದಪ ಇಂಗೇನಾರ ಆಡುಕ್ಕೆ ಬಂದ್ರೆ ಮೊದ್ದು ದುಡ್ಡು ಮಡಗು ಅನ್ನಲಿ” ಅಂದೋಳು, ಇನ್ನೊಟು ಹೊಗೆಸೊಪ್ಪ ಇಮ್ಮಣಿಚೀಲದಿಂದ ತಗದು ದವಡೆಗೆ ವತ್ತರುಸ್ತ, “ಈವಯ್ಯ ಆಡೋ ಆಟಕೆ ದ್ಯಾವರು ಐನಾತಿ ಎಡತೀನೆ ಗಂಟಾಕಪ್ಪೆ, ತಕೋ.... ಇನ್ನು ಕದ್ದು ಮಾಡಾದ, ಅವಳು ರಾಜಾರೋಸವಾಗೆ ಮಾಡ್ಡವಳಲ್ಲ?... ಈ ಮುಂಡೇದೇನಾರ ತುಟಿಪಿಟಕನ್ನಾಕೆ ಅಪ್ಪಣೆ ಉಂಟ?ನಮ್ಮೂರಲ್ಲಿ ಆಡೋ ಯಕ್ಷಗಾನದಲ್ಲಿ ಮರದ ಅಟ್ಟ ನಡಗಿಸಕ್ಕಿ, ತೊಂಡಾ ನೂರು ರಕ್ಕಸಿ, ಅವಂಗೆ ಒಂದು ದಪ ಅಬ್ಬರಿಸು ಮುಗಿದೊಯ್ತು, ಇಂದುಗಡೆ ಸ್ಯಾವಿಗೆ ಒತ್ತಿಗತ್ತದೆ ಅಯ್ಯನಿಗೆ?...” ರಸ್ತತಾಗಿ ಇಂಗೆ ಯೋಳಿದಾಗ ಎಂಗಸರೆಲ್ಲ ಬಿದ್ದು ಬಿದ್ದು ವೊಟ್ಟೆ ಉಣ್ಣಾಗೊ ವಝವೆ ನಗಾಡಿದರು ಹುಚ್ಚು ಬೋರಿಯಂತೂ “ಅವ್ವಯ್ಯ! ನಾ ಇನ್ನು ನಗನಾರಿ...” ಅಂತ ತನ್ನ ಪಕ್ಕೇನೆ ಏಡು ಕಯ್ಯ ಇಡಕಂಡ್ಲು.<br/>
{{gap}ದೂರದಿಂದ್ದೆ, ಲಕ್ಕನೂ ನಕ್ಕ. ಕುಸಾಮತ್ತಿನ ಮಾತುಗಾರಿಕೇಲಿ, ನಿಮ್ಮ ಹೊಲಗೇರಿಗೆಲ್ಲ ದ್ಯಾವಾಜೀನೆ ಒಂದನೆ ನಂಬೂಂತ ಕೇಸವಯ್ಯಾರು ಯೋಳ್ತಿದ್ದದ್ದು ಸಪ್ಪಟ್ಟೆ ಮಾತೇನಲ್ಲ!... ಲಕ್ಕಂಗೆ ತಾನೂವೆ ಆ ಎಂಗಸರ ಜ್ವತೆ ಸೇರಿ ಚಾಪೆ ಎಣೆಯೊ ಚಪಲ. ಆದ್ರೆ, ಈ ದಿನ ದೇಸವಯ್ಯರು ತಮ್ಮ ತ್ವಾಟದಲ್ಲಿ ಮಯ್ಯ<noinclude></noinclude>
6922e26vtcp7ikgod085b466ht23t3v
ಪುಟ:ವೈಶಾಖ.pdf/೧೬೫
104
82094
316489
278655
2026-05-03T13:37:36Z
Ashwini Rai K
8475
/* Validated */
316489
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೪೯}}
<br/>
ಮುರಿಯೊ ಕೇಮೆ ಮಾಡಿಸಿದ್ದು, ಅದು ಯಾರೋ ಯಾನು ಮಾಡಕ್ಕೂ ಉಮ್ಮಸ್ಸೇ ಬತ್ತಾ ಇಲ್ಲ. ಮಮ್ಮಿ ಕಯ್ಯಲ್ಲ ಯಾತಾವು ಹುಣ್ಣು ನೋಯೂವಂಗೆ ನೋಯ್ತಾ ಅವೆ... ಈಗ ಕಿಸ್ಟಸಾಸ್ತಿಗಳ ಅತ್ರ ತಕ್ಕಂಡಿದ್ದ ಸಾಲ ತೀರೋಗಿ, ತಾನು ಊರಲ್ಲಿ ಬ್ಯಾರೆಬ್ಯಾರೆಯೋರ ತ್ವಾಟತುಡಿಕೆಗೂ ಕೂಲಿಕಂಬಳಕೆ ವೋಗಕ್ಕೆ ಅವಕಾಸ ಸಿಕ್ಕಿತ್ತು. ಆದ್ರೂವೆ ಸಾಸ್ತಿಗಳ ತ್ವಾಟಕೇ ಈಗಲೂ ಎಚ್ಚಾಗಿ ವೋಯ್ತಿದ್ದದ್ದು. ಒಂದೊಂದು ಜಿನ ಸಾಸ್ತಿಗಳ ತ್ವಾಟದಲ್ಲಿ ಅಪ್ಪರ ಕೆಲ್ಸ ಇಲ್ಲಿದ್ದ ಜನ, ಅವರೇನು “ನಾಳೆ ಬ್ಯಾರೆ ಯೆಲ್ಲಾರು ಕೂಲೆ ಕ್ವಾಡಿಕಳ್ಳ' ಅಂದುಬುತ್ತಿದ್ದರು. ಅಂಗಾಗಿ, ತಾನೂವೆ ಈಚೀಚೆ ಅವರಿವರ ತ್ವಾಟಕೂ ವೋಗೋದ ಪಾಟಮಾಡ್ಕಂಡಿದ್ದ. ಅದೇ ಕಾರಣಕೆ ಈ ಜಿನ ಕೇಸವಯ್ಯಾರ ತ್ವಾಟಕೋಗಿದ್ದ... ಆ ಕೇಸವಯ್ಯ ಕೆಲಸ ತಗಿಯಾದಲ್ಲಿ ಬೋ ನಿಪುಣ! ಮಾತಿನ ಸಂದೀಲೇ ಅವರೇಕಾಯಿ ಕುಯ್ಯೋ ಆಸಾಮಿ. ವಳ್ಳಿ, ಮಾತಾಡ್ ಮಾತಾಡ್ತಾನೆ, ನಾವು ಏಟು ಕೇಮೆ ಮಾಡೋ ಅನ್ನಾದೆ ಗ್ವತ್ತಾಗದ ತರ, ಮಂಕುಬೂದಿ ಯೆರಚುಬುಡ್ತಾನೆ!-* ಲೋ ಲಕ್ಕ, ಈ ದರುಮನಳ್ಳಿ ಬಡ್ಡಿ ಮಕ್ಕಳೆಲ್ಲ ಊಟುಕೆ ಮುಂದು, ಕೆಲಸಕ್ಕೆ ಇಂದು... ಸೋಂಬೇರಿ ಇಸಂಗಳು... ನಾನ್ನಾಡಿದಲ್ಲಿ ನೀನೋಬೈ ಮಮ್ಮಿಗಳನ ಮಡ್ಡೆ ನಿರ್ವಂಚನ್ಯಾಗೆ ಕೆಲ್ಸ ಮಾಡೋನು. ನಾವು ಕ್ವಡೋ ದುಡ್ಡಿಗೆ ನೀನೆಂದೂ ಮಾಸ ಮಾಡಕಿಲ್ಲ. ಅದೇ ನಂಗೆ ತಾರೀಪು. ಅದುಕೆ ನಾನು-ಬಾಳೆ ಗುಣಿ ತೋಡೋದು, ನೀರು ಹರಿಯೊ ಹಿಕ್ಕಲು ಸೋಸೊದು, ಇಂತಾ ದೊಡ್ಡ ಕೆಲ್ಪ ಕಾರಗಳೆಲ್ಲ ನಿನ್ನೇ ಕರೆಯೋದು!... ಬಾಕಿಯೋವು ಬತ್ತವ-ಮೂದೇವಿ ಮುಕ್ಕಗಳು!... ಹಾರೆ ಇಳುಕಿ ನೆಟ್ಟಗೆ ಒಂದು ಮೊಳ ಗುಂಡಿ ತೋಡಿಲ್ಲ, ಗುದ್ದಲಿ ಆಡಿ ನೆಟ್ಟಗೆ ಮೂರು ಮೊಳ ಹಿಕ್ಕಲು ಸೋಸನಿಲ್ಲ-ನಡ ಬಿದ್ದೋದೊರಂಗೆ ಉಸ್ ಅಂದುಕುಂತುಗಂಡು ಬುಡೋದೇಯ.... ಅಂತಾ ಹೊಳ್ಳಂದೊಳ್ಳೆ ಆಸಾಮಿಗೊಳ ಕಂಡರೆ ನಂಗೆ ಉಂಗುಸ್ತದಿಂದ ಇಡಿದು ನಡುವೆತ್ತಿ ತನಕ ಉರಿ ಕಿತ್ತುಗತ್ತದೆ, ನ್ಯಾಡಪ್ಪ... ಚ್, ಅವರ ಮಾತು ಈಗ್ಯಾಕೆ ಬುಡು. ನೀ ಎಸ್ಸಾದರೂ ವಸಿ ಓದ್ದೋನು. ಅ-ಆ-ಇ-ಈ ಅನ್ನಕ್ಕಾರೂ ಬತ್ತದೆ. ಬಣ್ಣ ಒಂದೇ ಅಂತ ಕಾಗೇನೂ ಕೋಗಿಲೆನೂವೆ ಒಂದೇ ಅನ್ನಕಾದಾತ?- ನೀನೇ ಯೋಳು...' ಇದೇ ತರ ತನ್ನ ಕೆಲ್ಸ ಸಾಧಿಸಬೇಕಾದ್ರೆ ಮಾತ್ಮಾಡ್ಲಿ ಬೆಣ್ಣೆ ಸವುತ್ತಾನೆ ಇದ್ದಾನೆ...<br/>
{{gap}}ಲಕ್ಕನ ಯೋಚ್ಛೆ ಇಂಗೆ ಗಾಣ ವೋಡೀತಿದ್ದಾಗ, ಕೆರೆ ಓಣಿ ತಿರುವಿನಲ್ಲಿ ಬೊಡ್ಡ ಒಂದೇ ಸಮನೆ ಬೋಗುಳ ಇದ್ದದ್ದ ಕೇಳಿ, “ಯಲ, ಇಲ್ಲೆ ನನ್ನ ಕಾಲು<noinclude></noinclude>
k57joclkp71p2qtdmwdpoxzrio8b661
ಪುಟ:ವೈಶಾಖ.pdf/೧೬೬
104
82095
316572
278656
2026-05-03T16:28:06Z
Ashwini Rai K
8475
/* Validated */
316572
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=೧೫೦|right=ವೈಶಾಖ}}
<br/>
ಬುಡದಲ್ಲೆ ನೆಕ್ಕುತಾ ಕುಂತಿದ್ದದ್ದು ಅದ್ಯಾವ ಮಾಯದಲ್ಲಿ ಅತ್ತಾಗಿ ಹಾರು”?<br/>
{{gap}}ಗಕ್ಕನೆ ಎದ್ದು ನಿಂತ.<br/>
{{gap}}ಸಾದಾರಣವಾಗಿ ಬೊಡ್ಡ ಬೊಗುಳೋದೆ ಒಂದು ರೀತ. ಅದಕೆ ಬೆದೆ ಬಂದು ಎಣ್ಣುನಾಯಿ ಕಂಡಾಗ ಬೊಗುಳೋದೆ ಬ್ಯಾರೆ ತರ. ಇನ್ನೊಂದು ನಾಯಿ ಕುಟ್ಟೆ ಕದ್ರಕ್ಕೆ ನಿಂತಾಗ ಗುರುಕಾಯಿಸ್ತಾ ಮಾಡೋ ಸದ್ದೇ ಬ್ಯಾರೆ. ವೊಟ್ಟೆ ಅಸಿದು, ಇಟ್ಟು ರೊಟ್ಟಿ ಬಾಡು ಬೇಕು ಅನ್ನುಸಿದಾಗ ಸುತ್ತ ತಿರುಗ ಬೇಡೆ ಮಕ್ಕಳಂಗೆ ಹೊಂದಿಸೊ ರಾಗಾನೆ ಬ್ಯಾರೆ. ಟ್ವಾಳನ್ನೂ ಕಿರುಬನ್ನೋ ಕಮಡು ನಡುಕ್ತ ಅರಚಿಕಳ ಸೊಲ್ಲೇ ಬ್ಯಾರೆ...<br/>
{{gap}}ಕಿವಿಕ್ವಟ್ಟು ಆಲಿಸ್ತ.<br/>
ಇಲ್ಲ, ಇದರಾಗೆ ಸಂಸಯ ಇಂಕರಾನು ಇಲ್ಲ. ಇದು ಯಾನೊ ಕಂಡು ಹೆದುರದೆ, ನೋಡವ-ಅಂತ ಕೆರೆ ಓಣಿ ತಿರುವಿಗೋದ.
ಅಲ್ಲಿ ಅಮ್ಮ ಕಣ್ಣಿಗೆ ಬಿದ್ದ ಸ್ವಾಟ, ಅವ್ರ ಎದೆಯ ನಡುಗುಸ್ತು, ತಟಕ್ಕೆ ನಾಕೆಜ್ಜೆ ಇಮ್ಮೆಟ್ಟಿ ನಿಂತ. ಅಲ್ಲಿ ಒಂದು ಕೀರನ್ನೂ ಒಂದು ನಾಗರಹಾವಿಗೂವೆ ವೋರಾಟ ನಡೀತಿತ್ತು... ಇಂತದೊಂದು ನಡೀತದೆ, ಇವು ಏಡು ಪ್ರಾಣಿಗಳೂ ಹುಟ್ಟಾ ವೈರ ಅನ್ನಾದನೇನೊ ಇನ್ನೂ ಕೇಳಿದ್ದ ಮಾತ್ರ ಇಲ್ಲೀಗಂಟ, ಇನ್ನ ಜೀವಮಾನ್ನಲ್ಲಿ ಕಣ್ಣಾರ ಕಂಡೀರನಿಲ್ಲ....<br/>
{{gap}}ವೋಟಗಲ ಹೆಡೆ ಬಿಚ್ಚಿ ಕಡು ರೋಸದಿಂದ ಮೊರೆದಾತ್ತ ನಾಗರಹಾವು ರೊತ್ ರೊನ್ನೆ ಹೆಡೆ ಅಪ್ಪುಳಸಿ ಕೀರನ್ನ ಕಚ್ಚಕ್ಕೆ ಪರ್ಯತ್ನ ಮಾಡ್ತಿತ್ತು, ಕೀರ ಕುಣುಕುಣಕಂಡ ಅತ್ತಿಂದಿತ್ತಾಗಿ ಕುಪ್ಪುಳುಕ್ತ ತಪ್ಪಿಸಕತ್ತಿತ್ತು. ಆರಂಬದಲ್ಲಿ ನಾಗರಹಾವಿನ ಅಬ್ಬರವೆ ಜೋರಲ್ಲಿ ನಡುದಿತ್ತು, ಅದ್ರೆ ವಸಿ ದಣಿವು ಕಾಣಿಸಂಗೆ ಆಯಿತ್ತೂವೆ, ಕೀರ ಮ್ಯಾಲೆ ಬಿದ್ದು ಹಾವಿನ ಕುತ್ತಿಗೆ ಕಚ್ಚಿತು. ಆದರೆ ಹಾವು ಸರಕ್ಕೆ ತೆಷ್ಟು ಸಿಕಂಡು ಕೀರನ ಬೆನ್ನಿಗೆ ಬಲವಾಗಿ ಬಡುದು ಕಚ್ಚಿಬುಡ್ತು. ಆ ಗಳಗ್ನಿಂದ ಅವೇಡೂವೆ ಅತಿಸಯ ಪರಕ್ರಮದಿಂದ ಹೋರಟ ನಡುಸ್ಕೊ. ಒಂದನ್ನೊಂದು ಕಚ್ಚಿ ಕಡುದು ಬಿಸಾಕ್ತಿದ್ರೋ... ಕಡೀಕೆ ಹಾವು ಕೀರನ ಮುಖ್ಯ ಸುತ್ತಲೂವೆ ಉಡಕಂಡು ಕಚ್ಚಿಕಚ್ಚಿ ಇಡ್ತಾ ಇದ್ದಾಗ, ಹೊಂಚುಗಾರ ಕೀರ ಸಮಯ ಕಾದು ಹಾವಿನ ಬಾಯ್ ಗಪ್ಪನೆ ಹಿಡುದು, ಕಚ್ಚಿ ಕಡಿದಾಕಿಬುಡು... ಕೀರನ ಮಯ್ಯ ಸುತ್ತಾಕಿದ್ದ ಸರ್ಪದ ಹಿಡುತ ಮೆತ್ತಮೆತ್ತಗೆ ಬುಟ್ಟೋಯ್ತ ಇದ್ದು, ಆಮ್ಯಾಕೆ ಕೀರ ಒಂದು ಸಲ ತನ್ನ ಮಯ್ಯ ವದು ಕುಣಿದಾಡಿದಾಗ, ಹಾವು ಸತ್ತು ಕೆಳುಕ್ಕೆ ಬಿತ್ತು...<noinclude></noinclude>
snwzgbjl75du78866mlgnikri5alpt3
ಪುಟ:ವೈಶಾಖ.pdf/೧೬೭
104
82096
316573
278657
2026-05-03T16:28:50Z
Ashwini Rai K
8475
/* Validated */
316573
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೫೧}}
{{gap}}ಆ ಕ್ಷಣದಲ್ಲಿ ಕೀರ ಆ ಜಾಗ ಖಾಲಿಮಾಡಿ, ಗುಡುಗಡೆ ವಾಟ ಹೈಡಿಯಕ್ಕೆ ಸುರು ಮಾಡ್ತು. ಆದ ಕಂಡು ಲಕ್ಕನ ಆಸಕ್ತಿ ಕೆರಳು, ಅವು ಕೇಳಿದ್ದಹಾಮ್ಮಿಂದ ಕಚ್ಚಿಸಿಕೊಂಡ ಕೀರ ತಕ್ಷಣದಲ್ಲಿ ಯಾವುದೊ ಮೂಲಿಕೆ ತಿಂತದೆ, ಅದರಿಂದ ಅದಕೆ ಹಾವಿನ ಇಸ ಅಂತಕ್ಕಿಲ್ಲ. ಅಂತಾವ... ಜನದ ಮಾತ ಪರೀಕ್ಷೆ ಮಾಡಬೇಕು ಅನ್ನುಸಿ, ಅದರ ಇಂದಿಂದೇನೆ ದೌಡಾಯಿಸ್ತ, ಆದರೆ ಆ ಕೀರ ಅಲ್ಲಿ ನುಗ್ಗಿ ಇಲ್ಲಿ ನುಗ್ಗಿ, ಅಲ್ಲಿ ನುಸುದು ಇಲ್ಲಿ ನುಸುದು, ವೋಟು ದೂರದವರೂ ಕಣ್ಣಿಗೆ ಕಾಣಿಸ್ತಿದ್ದದ್ದು, ಲಾಜಾದಲ್ಲಿ ಎತ್ತಾಗೊ ಪರಾರಿಯಾಯ್ತು.<br/>
{{gap}}“ಬಡ್ಡಿ ಹೆತ್ತದ್ದು ಗಸ್ತು ಕ್ವಟ್ಟುಬುಡ್ತಲ್ಲ!” -ಬಾಯಿ ತುಂಬ ಸ್ಯಾಪ ಆಕ್ತ ಬತ್ತಾ ಇರೋನೂವೆ, ಕೆರೆ ಓಣೀಲಿ, ವೋಟು ದೂರದಲ್ಲಿ ಸವುದೆ ತುಂಬಿದ ಗಾಡಿಗೋಳು ಊರ ದಿಕ್ಕೇ ಇರಾದು ಮಂದಟ್ಟಾಗಿ, ಲಕ್ಕ, “ಯಾರ ಗಾಡಿಗಳು ಇವು?... ಈಟು ನತ್ರೀಲಿ ಸವುದೆ ತಕ್ಕಂಬರ ಬಂಜರ ಯೇನ ಇದ್ದದ್ದು?... ಇದರಾಗೆ ಯೇನಾರ ಇಕಮತ್ತು ಇರಬೈದ?”.. ತರ್ಕ ಮಾಡ್ಕತ್ತ, ಹಲಸಿದ ಮರದ ಮರೆಗೆ ಹೊಳ್ಳಿ ನಿಂತ. ಗಾಡಿಗಳು ಸಮೀಪಿಸ್ತ ಸಮೀಪಿಸ್ತ ಮಾರಿಗುಡಿ ಅಣ್ಣದೀರು-ಬೈಲಿಗರಂಗ, ಗುರುಮಲ್ಲು, ರುದ್ರ, ರಾಚೇವಾರದ ಕಾಳೂರ, ಕೊಪ್ಪಲು ಚೆನ್ನ-ಒಬ್ಬೊಬ್ಬರೂವೆ ಒಂದೊಂದು ಗಾಳ ವೋಡೀತ ಇದ್ದದ್ದು ಕಾಣುಸ್ತು. ಭರ್ತಿ ಗಾಡಿಗಳು, ಅವುಗಳ ತುಂಬ ಸವುದೆ!... ಗಾಡಿಗೊಳು ಊರ ವಳಿಕೆ ಬರದೆ, ಕೊಪ್ಪಲು ಓಣಿ ಚೋರೀಕೆ ತಿರುಕ್ಕಂಡೊ. ತಿರುಕ್ಕಂಡೋವ ಅಂಗೆ ನಿಂತೊ... ಯಾಕಪ್ಪ ನಿಂತೊ ಅಂತ ಲಕ್ಕ ಅಂತು ಸ್ವಾಡುದ್ರೆ, ಎದುರ್ಗೆ ನಂಜೇಗೌಡರು ನಿಂತಿ!- ಅವರು ಎಲಡಿಕೆ ರಸವ ಪಿಚಕ್ಷೆ ಉಗದು,<br/>
{{gap}}“ಏನಲ್ಲ, ಹುಚ್ಚುಕಳ್ಳಿ ಸತ್ಯಾಗಿ ತುಂಬಿಕಂಡು ಬಂದಿದೀರೇನಲ?” - ಕೇಳಿದ್ದಕ್ಕೆ ಬೈಲಿಗ ರಂಗನ ದನಿ ಮುಂದಾಗಿ, ಉಳಿಕೆಯೋರ ದನಿಗಳೂ ಜ್ವತೆಯಾಗಿ,<br/>
{{gap}}“ಊ, ಸಹ್ಯಾಗೆ ತುಂಬಿಕಂಬದಿವಿ ಕನ್ನಯ್ಯ” ಅಂದರು.
{{gap}}“ಆ ಫಾರೆಸ್ಟ್ ಗಾರ್ಡು ರಾಮಯ್ಯನ, ನೀವು ಅಲ್ಲಿದ್ದಾಗ, ಫಾರೆಸ್ಟಿಗೆ ವೋಗದಂಗೆ ತಡೀಬೇಕಾದ್ರೆ ನಂಗೂವೆ ಇನ್ನೊಂದು ಸಲ ತಾಯಿ ವೋಟೇಲಿ ಉಟ್ಟಿ ಬಂದಂಗಾಯ್ತು. ಗಡದ್ದಾಗಿ ಊಟ ಆಕಿಸ್ಥೆ, ಕಯ್ಯ ಬೆಚ್ಚಗೂ ಮಾಡ್ಡೆ. ಆದ್ರೆ ಅವಯ್ಯಂಗೆ ಗ್ಯಾಮಾಳೆಯೇ ಇಲ್ಲ. ಪರ್ತಿ ಸಲಾನೂ ಸುಲುದು ಬುಡ್ಗನೆ” ಅಂದು, “ಊ, ಅದು ನನ್ನ ಅಣೆಬರಾವು. ಈಗ ಬುಡಿ ಗಾಡ್... ಪೊಲೀಸನೊರತ, ಮೈಸೂರು ತೋಲ್ಗೇಟ್ನಲ್ಲಿ ಜ್ವಾಪಾನ. ಈಟು ಜಿನದಂಗೇಯ ಆ ಪಿಶಾತಿಗಳೆ<noinclude></noinclude>
4wgqwvf46a3mkdn2hfjyxopk5bby7lq
316584
316573
2026-05-03T16:43:50Z
Ashwini Rai K
8475
316584
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೫೧}}
{{gap}}ಆ ಕ್ಷಣದಲ್ಲಿ ಕೀರ ಆ ಜಾಗ ಖಾಲಿಮಾಡಿ, ಗುಡುಗಡೆ ವಾಟ ಹೈಡಿಯಕ್ಕೆ ಸುರು ಮಾಡ್ತು. ಆದ ಕಂಡು ಲಕ್ಕನ ಆಸಕ್ತಿ ಕೆರಳು, ಅವು ಕೇಳಿದ್ದಹಾಮ್ಮಿಂದ ಕಚ್ಚಿಸಿಕೊಂಡ ಕೀರ ತಕ್ಷಣದಲ್ಲಿ ಯಾವುದೊ ಮೂಲಿಕೆ ತಿಂತದೆ, ಅದರಿಂದ ಅದಕೆ ಹಾವಿನ ಇಸ ಅಂತಕ್ಕಿಲ್ಲ. ಅಂತಾವ... ಜನದ ಮಾತ ಪರೀಕ್ಷೆ ಮಾಡಬೇಕು ಅನ್ನುಸಿ, ಅದರ ಇಂದಿಂದೇನೆ ದೌಡಾಯಿಸ್ತ, ಆದರೆ ಆ ಕೀರ ಅಲ್ಲಿ ನುಗ್ಗಿ ಇಲ್ಲಿ ನುಗ್ಗಿ, ಅಲ್ಲಿ ನುಸುದು ಇಲ್ಲಿ ನುಸುದು, ವೋಟು ದೂರದವರೂ ಕಣ್ಣಿಗೆ ಕಾಣಿಸ್ತಿದ್ದದ್ದು, ಲಾಜಾದಲ್ಲಿ ಎತ್ತಾಗೊ ಪರಾರಿಯಾಯ್ತು.<br/>
{{gap}}“ಬಡ್ಡಿ ಹೆತ್ತದ್ದು ಗಸ್ತು ಕ್ವಟ್ಟುಬುಡ್ತಲ್ಲ!” -ಬಾಯಿ ತುಂಬ ಸ್ಯಾಪ ಆಕ್ತ ಬತ್ತಾ ಇರೋನೂವೆ, ಕೆರೆ ಓಣೀಲಿ, ವೋಟು ದೂರದಲ್ಲಿ ಸವುದೆ ತುಂಬಿದ ಗಾಡಿಗೋಳು ಊರ ದಿಕ್ಕೇ ಇರಾದು ಮಂದಟ್ಟಾಗಿ, ಲಕ್ಕ, “ಯಾರ ಗಾಡಿಗಳು ಇವು?... ಈಟು ನತ್ರೀಲಿ ಸವುದೆ ತಕ್ಕಂಬರ ಬಂಜರ ಯೇನ ಇದ್ದದ್ದು?... ಇದರಾಗೆ ಯೇನಾರ ಇಕಮತ್ತು ಇರಬೈದ?”.. ತರ್ಕ ಮಾಡ್ಕತ್ತ, ಹಲಸಿದ ಮರದ ಮರೆಗೆ ಹೊಳ್ಳಿ ನಿಂತ. ಗಾಡಿಗಳು ಸಮೀಪಿಸ್ತ ಸಮೀಪಿಸ್ತ ಮಾರಿಗುಡಿ ಅಣ್ಣದೀರು-ಬೈಲಿಗರಂಗ, ಗುರುಮಲ್ಲು, ರುದ್ರ, ರಾಚೇವಾರದ ಕಾಳೂರ, ಕೊಪ್ಪಲು ಚೆನ್ನ-ಒಬ್ಬೊಬ್ಬರೂವೆ ಒಂದೊಂದು ಗಾಳ ವೋಡೀತ ಇದ್ದದ್ದು ಕಾಣುಸ್ತು. ಭರ್ತಿ ಗಾಡಿಗಳು, ಅವುಗಳ ತುಂಬ ಸವುದೆ!... ಗಾಡಿಗೊಳು ಊರ ವಳಿಕೆ ಬರದೆ, ಕೊಪ್ಪಲು ಓಣಿ ಚೋರೀಕೆ ತಿರುಕ್ಕಂಡೊ. ತಿರುಕ್ಕಂಡೋವ ಅಂಗೆ ನಿಂತೊ... ಯಾಕಪ್ಪ ನಿಂತೊ ಅಂತ ಲಕ್ಕ ಅಂತು ಸ್ವಾಡುದ್ರೆ, ಎದುರ್ಗೆ ನಂಜೇಗೌಡರು ನಿಂತಿ!- ಅವರು ಎಲಡಿಕೆ ರಸವ ಪಿಚಕ್ಷೆ ಉಗದು,<br/>
{{gap}}“ಏನಲ್ಲ, ಹುಚ್ಚುಕಳ್ಳಿ ಸತ್ಯಾಗಿ ತುಂಬಿಕಂಡು ಬಂದಿದೀರೇನಲ?” - ಕೇಳಿದ್ದಕ್ಕೆ ಬೈಲಿಗ ರಂಗನ ದನಿ ಮುಂದಾಗಿ, ಉಳಿಕೆಯೋರ ದನಿಗಳೂ ಜ್ವತೆಯಾಗಿ,<br/>
{{gap}}“ಊ, ಸಹ್ಯಾಗೆ ತುಂಬಿಕಂಬದಿವಿ ಕನ್ನಯ್ಯ” ಅಂದರು.
{{gap}}“ಆ ಫಾರೆಸ್ಟ್ ಗಾರ್ಡು ರಾಮಯ್ಯನ, ನೀವು ಅಲ್ಲಿದ್ದಾಗ, ಫಾರೆಸ್ಟಿಗೆ ವೋಗದಂಗೆ ತಡೀಬೇಕಾದ್ರೆ ನಂಗೂವೆ ಇನ್ನೊಂದು ಸಲ ತಾಯಿ ವೋಟೇಲಿ ಉಟ್ಟಿ ಬಂದಂಗಾಯ್ತು. ಗಡದ್ದಾಗಿ ಊಟ ಆಕಿಸ್ಥೆ, ಕಯ್ಯ ಬೆಚ್ಚಗೂ ಮಾಡ್ಡೆ. ಆದ್ರೆ ಅವಯ್ಯಂಗೆ ಗ್ಯಾಮಾಳೆಯೇ ಇಲ್ಲ. ಪರ್ತಿ ಸಲಾನೂ ಸುಲುದು ಬುಡ್ಗನೆ” ಅಂದು, “ಊ, ಅದು ನನ್ನ ಅಣೆಬರಾವು. ಈಗ ಬುಡಿ ಗಾಡ್... ಪೊಲೀಸನೊರತ, ಮೈಸೂರು ತೋಲ್ಗೇಟ್ನಲ್ಲಿ ಜ್ವಾಪಾನ. ಈಟು ಜಿನದಂಗೇಯ ಆ ಪಿಶಾತಿಗಳ್ಗೆ<noinclude></noinclude>
jcbbsd37zm8on4peppwidszyrh8d9rh
ಪುಟ:ವೈಶಾಖ.pdf/೧೬೮
104
82097
316777
278658
2026-05-04T09:18:56Z
Ashwini Rai K
8475
/* Validated */
316777
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=೧೫೨|right=ವೈಶಾಖ}}
ಕ್ವಡೊ ಮಾಮೂಲ ಬಿಸಾಕಿ, ಈ ಮಾಲ ತಟಾಯಿಸೋ ಬಾರ ನಿಮ್ಮದು!... ಮೈಸೂರ ಶ್ರೀನಿವಾಸಯ್ಯ ಕೋಠಿಲಿ ಶ್ರೀಗಂಧದ ತುಂಡುಗಳ ಇಳುಕಿ, ಆಳಿಗೆ ಐದೈದು ರೂಪಾಯಿ ಈಸುಗನ್ನಿ- ಮೈಸೂರಿಗೋದಾಗ ನಾನು ಲೆಕ್ಕ ಚುಕ್ತಾ ಮಾಡ್ಕತ್ತೀನಿ, ಅಂಗೇಯ ಮೈಸೂರು ಪಟ್ಟಣದಲ್ಲಿ ಗಾಡಿಮೇಲೆ ಹೇರಿರೊ ಸವುದೆ ಮಾರಿ ಬಂದ ದುಡ್ಡಲ್ಲಿ, ಮೂರು ಮೂರು ರೂಪಾಯಿ ತಕ್ಕಂದು ಮಜಾ ಮಾಡ್ಕಂಬನ್ನಿ.... ಉಂ” - ನಂಜೇಗೌಡರು ಅನ್ನಾದೆ ತಡ,<br/>
{{gap}}“ಅಂಗೇ ಆಗ್ಲಿ. ನಾವಿನ್ನು ಬತ್ತೀವಿ ಕನ್ನಯ್ಯ” ಅಂದು ಮಾರಿಗುಡಿ ಅಣ್ಣಂದೀರು ಗಾಡಿಗಳ ದೌಡಾಯಿಸಿದ್ರು. ಗಾಡಿಗಳು ವೋಟು ದೂರ ವೋಗೋದೇ ಗ್ವಾಡಿದ್ದು, ನಸ್ಯ ಮೂಸಿ, ನಂಜೇಗೌಡರು ಊರ ದಿಕ್ಕೆ ವೊಂಟರು...<br/>
{{gap}}ಅಸೋಮ್, ಯೇನೇನು ಕರಾಮತ್ತು ನಡೀತದೆ ಈ ಊರಲ್ಲಿ! - ಇಂಗೆ ನಡೀತದೆ ಅಂತ ಯಾರಾರೊ ಗುಸುಗುಟ್ಟೋದ ಲಕ್ಕನೂ ಕೇಳಿದ್ದ. ಮಾತ್ರ ತನ್ನ ಕಣ್ಣಾರೆ ಕಂಡಿರನಿಲ್ಲ... ತಲೆ ತೂಗ್ಯ, ಲಕ್ಕ ಹಲಸಿನ ಮರದ ಸಂದಿನಿಂದ ವೋರಿಕೆ ಬಂದು ಕೆರೆ ಓಣಿಗೆ ಇಳಿದ. ಕಳ್ಳಿ ಬೇಲಿ ಒತ್ತಿನಲ್ಲಿ ಸತ್ತು ಬಿದ್ದಿದ್ದ ಹಾವಿನ ಅತ್ರವೆ ಕುಂತು ಬೊಡ್ಡ ತಲೆ ಕೆಟ್ಟೋದಂಗೆ ವಸಿ ವೊತ್ತು ಬುಟ್ಟೂ ಬುಟ್ಟು ಬೊಗಳ್ತಾನೆ ಇತ್ತು. ಲಕ್ಕ ಕಣ್ಣಿಗೆ ಬಿದ್ದೇಟಿಗೆ, ಅದು ಅವನ ಸಮೀಪ ಬಂದು ನಿಂತು, ಸತ್ತು ಬಿದ್ದ ಹಾವನೆ ಕ್ವಾಡ್ರ ಮನಾ ಜೋರಾಗಿ ಬೊಗಳು, ಲಕ್ಕ, ಅದಕ್ಕೊಂದು ಒತ್ತ ಕ್ವಟ್ಟು, “ಬಾ ಬಾ-ನೀ ಇಂಗೆ ಬೊಗಳ್ತಾ ಕುಂತಿದ್ರೆ, ಇದ್ಯಾವ ತಿಕ್ಲು ಅಂದಾರು” ಸಿಡುಕಿ, ಮುಂದುಮುಂದಕೆ ಸಾಗ್ತಾ ಇದ್ದಂಗೆ ಬೊಡ್ಡ ಉರುಳಾಡ್ತ ಎದ್ದು, ಅವನೆ ಇಂಬಾಲಿಸ್ತು. ಆದ್ರೆ ಹೋಲಗೇರಿ ತಿರುವುಗಂಟ ತುಸ ತುಸ ದೂರಕೆ ವೋದಂಗೆಲ್ಲ ತಿರುತಿರುಗಿ ಬೊಗಳೋದು ಬುಡನೇ ಇಲ್ಲ!
ಲಕ್ಕೆ ಮತ್ತೆ ಬಂದು ಗುಡ್ಡ ಬಾಜೂನಲ್ಲಿದ್ದ ಬಂಡೆ ಏರಿ ಕುಂತ, ಚಾಪೆ ಎಣೆಯೊ ಎಂಗಸರು-ಮಾತು, ಪರಸಂಗ ಎಲ್ಲಾನು ನಿಲ್ಲುಸಿ ಪದ ಯೋಳಕ್ಕೆ ಸುರು ಮಾಡಿದ್ರು, ಆಗಲೆ ಒಬ್ಬೊಬ್ಬರೂವೆ ಅತ್ರ ಅತ್ರ ಅರ್ದದಷ್ಟು ಚಾಪೆ ಎಣೆದಿದ್ರು, ಬಾಣದಲ್ಲಿ ತಿಂಗಳ ಮಾವ ಆಗಲೆ ಮ್ಯಾಕ್ಕೆ ಬಂದು ಗುಂಡಗೆ ಥಳಥಳ ತೂಗ್ತಿದ್ದ. ಆ ಚಂದ್ರನ ಬೆಳಕು ಅರ್ದ ಎಣೆದ ಬೆಳ್ಳನೆ ಚಾಪೆಗೊಳ ಮ್ಯಾಲೆ ಬೆಳಗಿ ಅವುನ್ನ ಇನ್ನೂ ಬೆಳ್ಳಗೆ ಮಾಡಿತ್ತು. ಕಯ್ಯಲ್ಲಿ ಇಡುವ ನಾಕು ನಾಕು ಗರಿಗಳ, ತಮ್ಮ ಬೆರಳುಗಳಿಮದ ಮದ್ಯಕ್ಕೆ ನುಗ್ಗುಸಿ ನುಗ್ಗುಸಿ ತಗೀತ ಇದ್ದ ಆ ಎಂಗಸರ ಕಮ್ಮಿ ಚಳುಕದಲ್ಲಿ ಚಾಪೆಗಳು ನಿರುಮಾಣ ಆಯ್ತಿದ್ದುದ<noinclude></noinclude>
0d948din08m7naxf3spxunbe1cvq7t8
ಪುಟ:ವೈಶಾಖ.pdf/೧೬೯
104
82098
316778
278660
2026-05-04T09:19:16Z
Ashwini Rai K
8475
/* Validated */
316778
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೫೩}}
ನಿರುಕಸ್ತ ಇದ್ದ ಲಕ್ಕಂಗೆ, ಆ ಈಚಲು ಗರಿಗಳ ತರಕ್ಕೆ ಅವ್ವ ಪಡ್ತಿದ್ದ ಪರಿಪಾಟ್ಟು ಗೆಪ್ಪಾಗಿ, ಅವನ ಮನ ನೊಂದಿಕತ್ತು...<br/>
{{gap}}ಆ ಈಚಲು ಗರಿಗಳ ತರಕ್ಕೋದಾಗ ಏಟೋ ಸರ್ತಿ ಅವ್ವ, ಜತ್ತೆ, ಅನೇಕ ಈಚಲು ಪ್ಯಾಟೆಗಳ ತಾವಿಕೆ, ಲಕ್ಕನೂ ವೋದ್ದುಂಟು. ಮೋದೂರು ಈಚಲು ಪ್ಯಾಟೆ, ಮಾಕೋಡು ಈಚಲು ಪ್ಯಾಟೆ, ಮಲ್ಲಾಡಿ ಈಚಲು ವನಇಂಗೇ ಇನ್ನೂ ಏಟೇಟೋ ದೂರದರದ ಈಚಲು ಪ್ಯಾಟೆಗಳನ್ನ ಅವ್ವನ್ನ ದ್ವಿತೆ ಬಳಿಸದ್ದುಂಟ. ಒಂದೊಂದು ಸಲು ಈಚಲು ಗರಿಗಳಾಗಿ ಅದಿನಯದು ಇಪ್ಪತ್ತು ಮೈಲಿ ದೂರಕೆ ವೊದ್ದೂ ಉಂಟು. ದರುಮನಳ್ಳಿ ಹೈರಚ್ಚಿಗಿರೊ ಈಚಲು ವನಕ್ಕೆ ವೋಗಿ ಬಂದ ಲೆಕ್ಕಾನೇ ಇಲ್ಲ. ಅಯ್ಯ, ಬಾಕಿ ಈಚಲು ಪ್ಯಾಟೆಗಳಗಿಂತಲೂವೆ ದರುಮನಳ್ಳಿ ಈಚಲು ವನಕ್ಕೆ ಬಿಜಮಾಡಾದಲ್ಲಿ ತನ್ನ ಆಯುಸ್ಸೆಲ್ಲ ಕಳುದಿದ್ದ. ಅಯ್ಯ ಅಲ್ಲಿಗೆ ವೋಗಿ ಬತ್ತ ಇದ್ದದ್ದು ಗರಿ ಸಂಪಾದೈಗಿಂತ ಮುಕ್ಯವಾಗಿ ದರುಮನಳ್ಳಿ ಈಚಲು ಪ್ಯಾಟೇಲಿ ರಾಚ ಇಟ್ಟಿದ್ದ ಅಂಗಡಿ ಎಂಡಕಾಗಿ!... ಅಯ್ಯ ಬಾಕಿ ಈಚಲು ಪ್ಯಾಟೆ ಬುಟ್ಟು ರಾಚನ ಸರಾಪಿನ ಅಂಗಡಿಗೇ ವೊಯ್ದಿದ್ದಕ್ಕೆ, ಅವ್ವ ಕೃತ್ತಿದ್ದ ಕಾರಣವೆ ಬ್ಯಾರೆ: ಆ ರಾಯ ಯಾವನೋ ಮಲಯಾಳದ ಮಂತ್ರಗಾರಿಂದ ಮಾಟ ಮಾಡಿಸಿ, ನನ್ನ ಗಂಡನ ತಲೆ ಕೆಡುಸ...<br/>
{{gap}}ಅವ್ವ, ಏಳೆಂಟು ಎಂಗಸರ ಜತೆ ವೊತ್ತಿಗೆ ಮುಂಚೆ ಮೊಂಟುಬುಡಾದು. ಯಾವುದಾದರೂ ಈಚಲು ಪ್ಯಾಟೆಗೆ ವೋಗೋದು. ಅಲ್ಲಿ ಒಂದೊಂದು ಈಚಲು ಮರದಲ್ಲಿ ಅವರೆಲ್ಲಾರು ಸೇರಿ ಅತ್ತೊ ಅದಿನೈದೊ ಎಳುಸಾಗಿರೊ ಗರಿಗಳ ಉದ್ದಾನೆ ಲೋಟಗಳಗಳಲ್ಲಿ ಕುಯ್ಯೋದು. ಇಂತೋವ ಅದಿನೆಂಟೊ ಇಪ್ಪತ್ತೊ ಈಚಲು ಮರಗಳಲ್ಲಿ ಕುಯ್ದರೆ ಆ ಏಳೆಂಟು ಎಂಗಸರೂವೆ ಒಂದೊಂದು ಹೊರೆ ಅಯ್ತದೆ. ಒಂದು ಕ್ವರೆಗೆ ಇಪ್ಪತ್ತೊ ಇಪ್ಪತ್ತೈದೊ ಗರಿ ಕಟ್ಟೋದು. ಇಂಗೆ ಜ್ವರೆ ಕಟ್ಟಿದ ಮ್ಯಾಗೆ, ಈಚಲು ಪ್ಯಾಟೆ ವಳಾಗಡೆ ಯಾವಾಗೂ ನೀರು ಅರೀತಿರೊ ಅಳ್ಳದ ಕುಂತು ಬುತ್ತಿ ಬಿಚ್ಚಿ, ಉಣಕಂಡು, ಅಳ್ಳದಾಗಿ ಅರಿಯೊ ನೀರು ಕುಡುದು, ಕುಂತು ಈಳ್ಯದೆಲೆ ಅಕ್ಕತ್ತ ಸುಬ್ರಾಯಿಸ್ಕಂಡು, ಅಮ್ಮಾಕೆ ಜ್ವರೆವೊತ್ತು ಬತ್ತಾ ದಾರೀಲಿ ವೋಟೋಟು ದೂರಕೆ ಹಿಂದೂ ಪುಣಾತ್ಮರು ಯಾರೊ ನೆಡುಸಿದ್ದ ಜ್ವರೆಗಲ್ಲಿನ ಮ್ಯಾಲೆ ಇಳುಕಿ, ಮತ್ತು ಮತ್ತೂ ಸುದ್ರಾಯಿಸ್ಕತ್ತಿದ್ದು ಸಂದೆ ದನಿಗೆಲ್ಲ ಊರು ಸೇರೋದು...<br/>
{{gap}}ಚಿಕ್ಕೋನಾಗಿದ್ದಾಗ, ಅವನ ಜತೆ ಮೊದಲ ಸಲ ಈಚಲು ಪ್ಯಾಟೆಗೆ ವೋದಾಗ, ಲಕ್ಕಂಗೆ ಎಲ್ಲಿಲ್ಲ ಸುಮಾನ! ಅವ್ವ ಬ್ಯಾಡ ಬ್ಯಾಡ ಅಂದರೂವೆ,<noinclude></noinclude>
0wo31wnbhsam1ixp4dmbvfmzmstbjrm
ಪುಟ:ವೈಶಾಖ.pdf/೧೭೦
104
82099
316779
278661
2026-05-04T09:19:32Z
Ashwini Rai K
8475
/* Validated */
316779
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=೧೫೪|right=ವೈಶಾಖ}}
ಲೋಟಿಗಳದಲ್ಲಿ ಅತ್ತಾರು ಗರಿಗಳ ಕಿತ್ತಿದ್ದ. ಅವಲ್ಲಿ ಮೂರು ಗರಿಗಳು ಮತ್ರ ಬಲಿತಿದ್ದೂ, ಉಳಿಕೆಯೋವೆಲ್ಲ ಎಳುಸು ಅಂತಾ ಎಳುಸಿನ ಗರಿಗಳ ಕುಯ್ದ ಅವ್ವ ಚೀಮಾರಿ ಆಕಿದ್ದು. ಆದ್ರೆ ಬೈದಲಲ್ಲಾಂತ ಲಕ್ಕ ಊರಗಿದ್ದು ಒಂದೇ ಗಳಿಗೆ, ಆ ಗಳಿಗೆ ಮುಗೀತು. ಲಕ್ಕನ ಕುಸಿ ಮುಗುಲ್ನ ಮುಟ್ಟಿತ್ತು. ಎಲ್ಲಾರು ಜ್ವರೆಗಳ ಕಟ್ಟಿ ಮುಗುದು, ಉಣ್ಣಕ್ಕೆ ಕುಂತಾಗ, ಲಕ್ಕನ ಮೊಖ ಜೋಲು ಬಿದ್ದಿತ್ತು. ಅನೂಕೂಲವಾಗಿದ್ದೊರು ರಾಗಿ ರೊಟ್ಟಿ, ನಂಜಕ್ಕೆ ಹುಳ್ಳಿ ಜಿಯಕ ತಂದಿದ್ರೆ, ಅವ್ವ ನೆಂಜಕ್ಕೆ ಬರೀ ಹಸಿಮೆಣಸಿನಕಾಯಿ ತರಾದ?...<br/>
{{gap}}ಅವ್ವ ಒಂದು ದಪ ಉಸಾರುದಪ್ಪಿದಾಗ, ಅಯ್ಯನ ಜ್ವತೇಲೂವೆ ಲಕ್ಕ ವೋಗಿದ್ದುಂಟು. ಆಗ ಅಯ್ಯ ಕರಕಂಡೊದ್ದು ದರಮನಳ್ಳಿ ಈಚಲುವನಕೇಯ... ಈಚಲು ಗರಿಗಳೂ ಕಡಿದಾಯ್ತು, ಜ್ವರೇನೂ ಕಟ್ಟಾಯ್ತು. ಬುನು ಉಂಡಾಯ್ತು. ವಂದಿಗುಟ್ಟೆ ಬಂದಿದ್ದ ಮಂದಿ ತಂತಮ್ಯಹರೆ ವೊತ್ತು ಊರುದಿಕ್ಕೆ ಕಾಲಾಕಿದ್ದೂ ಆಯ್ತು. ಗ್ರಾಸ್ತ ನಮ್ಮಯ್ಯ, ಉಳಿದೋರಂಗೆ ಜ್ವತ್ಥ ವೋಂಡಬಾರದ?- ಉಷ್ಣು. ಅಮ್ಮು ಕಾಲೆಳೆದದ್ದು ರಾಚನ ಎಂಡದಂಗಡಿಗೇಯ....,<br/>
{{gap}}ಲಕ್ಕ ರಾಚನ ಸೇಂದಿ ಅಂಗಡಿಗೆ ಕಾಲಿಟ್ಟದ್ದು ಅದೇ ಪ್ರತುಮ. ವಲ್ಲೆ ವಲ್ಲೇಂತ ಏಟೇ ಆಟ ಮಾಡಿದ್ರೂ ಅಯ್ಯ ಬುಡಬೇಕಲ್ಲ!... ಅಂಗಡಿ ಅಂದರೆ ಸುತ್ತಾಲು ಮಣ್ಣಿನ ಗ್ವಾಡ. ಅದುಕ್ಕೆ ಸುಣ್ಣ ತುಂಬದೆ. ಯಾವ ದ್ವಾಪುರದಾಗೆ ತುಂಬುದೊ ಆ ಸುಣ್ಣ!- ಈಗ ಬಿಳುಪು ಕಳದೋಗಿ ಯಾತಾವು ಮಾಸ್ತು ಮಾಸ್ತು, ಆ ಅಂಗಡಿ ಮ್ಯಾಗಡೆ ಕವುಚಿರಾದು ನಾಡೆಂಚು, ವಳೀಕೋದರೆ, ಇದೆ ಗ್ವಾಡೆ ವತ್ತಿಗೆ ಎತ್ತಿರಿಸಿದ ಗದ್ದುಗೆ. ಗದ್ದುಗೆ ಸುತ್ತಾಲೂ ತುಂಡುಗ್ವಾಡೆ. ಆ ಗದ್ದುಗೆ ಮ್ಯಾಲೆ ನಟಕದ ದರ್ಬಾರ್ ಸೀನಿನಲ್ಲಿ ರಾಜನಂಗೆ ಸೋಕ್ಕಾಗಿ ಕುಂತಿರೋನೆ ಆ ಅಂಗಡಿ ಮಾಲೀಕ ರಾಚ!... ಅವನ ಹೃದೆ ಗಿರಲು ಮೀಸೆ, ಗುಡ್ಡಗಣ್ಣು, ಗುಜ್ಜಾನೆ ಮರಿಯಂಗಿರೊ ದೇಹ, ಇವ ಕಂಡು ಎಂತೋರ ಎದೆಯೂ ನಡುಗಬೇಕು.... ಅವುನ ಮುಂದೆ ಏಡು ಮರದ ತೊಟ್ಟಿ, ಮುವ್ವತ್ತು ನಲವತ್ತು ಸುರಬಿ ಎಂಡ ಇಡಿಸೊವು. ಈಚಲು ಮರದಿಂದ ಎಂಡ ಎಳುಸೋರೆ ಒಂದೊಂದು ಸುದ್ದಿ ಎಂಡ ಕ್ವಡ್ತಾನಂತೆ ರಾಚ. ಎಂಡಾವ ವೊತ್ತು ತರಾರ್ ಬ್ಯಾರೆ. ಅಲ್ಲ ತಂದು ಮರದ ತೊಟ್ಟಿಗಳೆ ತುಂಬುದ ಮ್ಯಾಲೇ ರಾಚ ಬಂದು ಗಲ್ಲ ಏರಿ ಕುಂತುಗಳಾದು!... ಅವುನ ಪಕ್ಕದಾಗೆ ವೋಟು ದೂರಕೆ ಕುಂತು ಚೋರ್ ಚೋರ್ ಅಂತ ಹುರಿ ಬಾಡು, ಚಾಪೀಸುಗಳ ದಾದೆಣೇಲಿ ಕರೀತ ಕುಂತಿರೋಳು ಗಂಡ ಬುಟ್ಟ ಅವುನ ಅಕ್ಕನಂತೆ.... ಬೋದೆ ಮಯ್ಯನ ಎಂಗಸು.<noinclude></noinclude>
0620fjg9stc5i4ql59w8frlekyffz49
ಪುಟ:ವೈಶಾಖ.pdf/೧೭೧
104
82100
316780
278662
2026-05-04T09:19:53Z
Ashwini Rai K
8475
/* Validated */
316780
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೫೫}}
ತಲೆ ತುಂಬ ಕಯ್ಯಣ್ಣ, ಅಣೆಗೆ ಪಾವಲಿ ಅಗಲಕೆ ಕುಂಕುಮ ಇಡುದವಳೆ ಈ ಚಮಾಚಾರನೆಲ್ಲಾ ಅಯ್ಯನ ಬೆಂಟಿ ಬೆಂಟಿ ವಸಿವಸ್ಕಾಗಿ ಲಕ್ಕ ಜಮಾಯಿಸಿದ್ದ. ಆ ಪಡಖತೆ ವಳುಗಡೆ ಜಮಾಯಿಸಿರೊ ಅತ್ತಾರು ಮಂದೀಲಿ ಸುತ್ತಾಮುತ್ನ ಊರೋರೆ ಜಾಸ್ತಿ, ಆ ಕುಡಿಯೊರ ಗುಂಡ್ನಲ್ಲಿ ನಾಕಾರು ಎಂಗಸರೂ ಇದ್ದರು. ವಸಿ ಜನ ಸ್ವಾರೆ ಬುಂಡೆ, ಸಣ್ಣ ಸಣ್ಣ ಗಡಿಗೇಲಿ ತುಂಬಿಸಿಕಿದೆ, ಇನೊಸಿ ಜನ ಮುತ್ತುಗದ ಎಲೇಲಿ ಹಿರಿಬಾಡು, ಚಾಪೀಸು, ಬೇಯಿದ ಮೊಟ್ಟೆ-ಇವ ಅಕಿಸಿಕತ್ತಿದ್ದು, ಇವು ತಿಂದು ಎಸ್ ಮೂಳೆ ಚೂರುಗಳ ನಾಯಿಗಳು ಬೊಗಳ ಒಂದರ ಮ್ಯಾಲೊಂದು ಬಿದ್ದು ಕಚ್ಚಾಡಿ ತಿಂತಿದ್ದೊ...<br/>
{{gap}}“ನೀವಿಟ್ಟಿರಾ ಲಾಟೀನ ಬೆಳಕು ಯಾತಯಾರಕು ಸಾಲು. ಇನ್ನೊಂದು ಏಡು ಲಾಟೀನ ತಂದಿಡಪ್ರೊ” ಅಂತ ರಾಚನಿಗೆ ತೂರಾಡ್ಡ ಯೋಳ ಚೆಳ್ಳೆ ಒಂದು ಎಂಗಸಿನ ತಾವಿಕೋಗಿ “ತಕ್ಕ, ಕುಡಿಯಮ್ಮಿ” ಅಂದು ಎಡತಿಗೂ ಮಿಂಡಗಾತಿಗೊ ಸಣ್ಣ ಗಡಿಗೆ ತುಂಬ ಎಂಡ ನೀಡುದ್ದೆ ತಡ, ಅವುಳು ಅಮ್ಮ ಒಂದೇ ಸಲಕೆ ಗಟಗಟ್ಟೆ ಈರಿಬುಟ್ಟು...<br/>
{{gap}}ಅಯ್ಯ ಸಿನೇಮಿತಗಾರ ಜ್ವತೇಲಿ ಹಕಳೆ ವೊಡೀತ ರಾಚ ಸ್ವಾರೆ ಬುಂಡೇಲಿ ವೊಗದು ಕ್ಲಟ್ಟ ಎಂಡವ ಸೊಲ್ಪಸೊಲ್ಪಾಗಿ ಹೀರ, ಒಂದಾಣೆ ಅವನಕ್ಕೆ ಹಸಿ ಮುತ್ತುಗದೆಲೇಲಿ ಆಕ್ಕೊಟ್ಟ ಹುರಿಬಾಡ ನೆಂಜಕತ್ತ, “ನೀನೂ ಒಂದೇಟು ರುತಿ ಕ್ವಾಡ್ತೀಯೇನ್ನ, ಮೊಗ?” ಅಂತ ಲಕ್ಕನ್ನ ಕೇಳ್ದ.
{{gap}} ಎಂಡದ ದುರ್ವಾಸಣದ ಸೈಸನಾಗ್ಗೆ ಮೂಗು ಮುಚ್ಚುತ್ತಿದ್ದ ಲಕ್ಕ “ವಲ್ಲೆ, ವಲ್ಲೆ” ಅಂತಿದ್ದಂಗೆ “ವೋಗ್ಲಿ, ವಸಿ ಹುರಿಬಾಟ್ನಾರೂ ತಿನ್ನು” ಅಂದು, ಅಯ್ಯ ಆರು ಕಾಸಿಗೆ ಹುರಿಬಾಡ ತಗುದು ಕಟ್ಟಿದ್ದ. ಲಕ್ಕ ಆದ ಬಾಯಿಗೆ ಅಕ್ಕ ಇರೋನೂವೆ, ಮಾರಿಗುಡಿ ಅಣ್ಣನೀರು ಆಗ್ಗೆ ಕುಡುದು ಮುಗಿಸಿ, ಸ್ವಾರೆ ಬುಂಡೆಗಳ ತುಂಬ ಪುನಾ ಎಂಡ ಸುರುಸ್ಕಂಡು ಊರ ದಿಕ್ಕೆ ವೊಂಟಿದ್ದರು...<br/>
{{gap}}ಸೇಂದಿ ಮನೇಲಿ ಗುಲ್ಲೋ ಗುಲ್ಲು. ಒಬ್ಬರಿಗೊಬ್ರು ವಾಗ್ವಾದ ಮಾಡಾದೇನು! ಯಾವದೊ ಚಿಲ್ಲರೆ ಮಾತ ತಕ್ಕಂಡು ಕದ್ದ ಮಾಡಾದೇನು! ಗಮ್ಮಂದ ಪದ ಯೋಳಾದೇನು!... ಅದರಲ್ಲೂ ಒಬ್ಬ ಯೋಳ್ತಿದ್ದ ಪದ ಲಕ್ಕಂಗೆ ಇನ್ನೂ ಗ್ಯಾಪಕ, ಅದ ಯೋಳ್ತಿದ್ದೋನು ಚೊಳ್ಳೆಯೇ ಇರಬೈದು!ಗಟ್ಯಾಗಿ ಪಕ್ಕದಾಗೆ ಇದ್ದ ಅಮ್ಮಿ ತೊಡೆ ತಟ್ಟಿಕೊಂಡು ಯೋಳಿದ್ದ:
ಹಳ್ಳಿವಾಸ | ನಾನೂ ಸಂತೋಸ<noinclude></noinclude>
imq0dfrspyhccxre4ejyr0mmqk0ys9w
ಪುಟ:ವೈಶಾಖ.pdf/೧೭೨
104
82101
316781
278663
2026-05-04T09:20:20Z
Ashwini Rai K
8475
/* Validated */
316781
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=೧೫೬|right=ವೈಶಾಖ}}
{{gap}}ನನ್ನೆತ್ತೂ ಸಂತೋಸ <br/>
{{gap}}ಪ್ಯಾಟೇ ವಾಸ<br/>
{{gap}}ಜಂಖಾನ ಹಾಸ<br/>
{{gap}}ನನ್ನೆತ್ತೂ ಉಪಾಸ<br/>
{{gap}}ನಾನೂ ಉಪಾಸ<br/>
{{gap}}-“ಇದೇನ ಇಂಗ ತಟ್ಟಾದು, ನನ್ನ ತೊಡೆಯೇನು ಮಧ್ಯೆ ಕೆಟ್ಟೋಯ್ತ? - ತಗಿ, ತಗಿ” ಅಂತು ಆ ಎಂಗಸು. ನಿಶಾ ಏರ ಕೆಲವುಏರ್ ಊಊಊ ಅಂತ ಎಲೆ ಮಕ್ಕಳಂಗೆ ಅಳಕ್ಕೆ ಸುರು ಮಾಡಿದ್ರು...<br/>
{{gap}}ಮನೆ ಖಾಲಿ ಆಗೊವೋತೆ ನಾತ್ರೆಗೆ ಸುಮಾರು ವಯಸೇ ಆಗಿತ್ತು. ಸುನಿಕೊಪ್ಪಲ ಗೋಡು ಸಾಬು, ಅಂಗೇಯ ಇನ್ನು ಮೂರು ನಾಕಾಳ ಹೂರೀಕೆ ವೊ೦ಡಸಬೇಕಾದ್ರೆ ರಾಚ ತಾನು ಕಲತ ಬುದ್ದೀನೆಲ್ಲ ಯಚ್ಚ ಮಾಡಬೇಕಾಯ್ತು!<br/>
{{gap}}“ಅಲ್ಲಿ ವೋಟೋಂದ ರುಸಿ ಅಂಗೆ ಕುಂತು ಅದ್ಯಾನ ಮಾಡ್ತಿದ್ದೀಲ ಲಕ್ಕ?... ಗಮ್ಮನೆ ಎದ್ದು ಬಂದು ಚಾಪೆ ಎಣಿಸಯಾದು ಕಂಡಿಪ್ಪಿ -ಕುಂತುಬುಟ್ಟ ಅಲ್ಲಿ ಗಡ್ಡದಯ್ಯನಂಗೆ!- ಬಾ, ಬಾ...” ದ್ಯಾವಾಜಿಯ ಈ ಮಾತು ಲಕ್ಕನ ಆಲೋಚ್ಛೆ ಜಾಡ ತಟಕ್ಕೆ ಕಡುದಾಕ್ಕು.<br/>
“ಇಲ್ಲ ಕನತ್ತೆ, ಇವೊತ್ತು ನಂಗ್ಯಾಕೋ ಮನ್ಶಿಕಯ್ಯ ವಡುತ, ಕುಂತುಕಳಾಕು ಆಯುತಾ ಇಲ್ಲ. ಗುಡ್ಲು ವಳೀಕೋಗಿ ಬಿದ್ದು ಕತ್ತೀನಿ” ಅಂದು ಲಕ್ಕ ಎಲ್ಲೋಯ್ತು ಇಾಗ, ದ್ಯಾವಾಜಿ- “ಬಾರ್ ಅಪ್ಪಯ್ಯ. ಒಂದು ಕತೆ ಯೋಳಿಕೊಟ್ಟೆನು. ಅದ ಕ್ಯಾಳಿದಂಗೆ ನಿನ್ನ ಮಮ್ಮಿಕಯ್ಯ ವಡುತ ಗಿಡುತ ಯೆಲ್ಲ ಚಟ್ ಆಗೋದೆ” ಅಂತ ಆಸೆ ತೋರಿದ್ದು. ಅದಕ್ಕೆ ಕ- “ವೋಗತ್ತೆ, ನಿನ್ನ ಕತೆಯೂ ಬ್ಯಾಡ, ಯಾನೂ ಬ್ಯಾಡ, ಸದ್ಯೆ ನಾ ಗುಡ್ಡ ವಳೀಕೋಗಿ ಬಿದ್ದ ಕಂಡ್ರೆ ಸಾಕಾಗದೆ” ಅಂದು ಗುಡ್ಡು ವಳೀಕೆ ಅವನು ನುಸೀತಿದ್ದಂಗೆ, ದ್ಯಾವಾಜಿ- ಎಂಗಸರ ಕಡೀಕೆ ತಿರುಗಿ, “ಇದ್ಯಾನ ಇವತ್ತು ನಮ್ಮ ಲಕ್ಕ ಒಳ್ಳಿ ಬವಾಳಿ ಬಂದೋನಂಗೆ ಅಡ್ಡವನಲ್ಲ?... ಲೇ ಕಲ್ಯಾಣಿ, ನಿನ್ನ ಹೈದಂಗೆ ಬ್ಯಾಗ ಒಂದು ಎಣ್ಣ ಸ್ವಾಡು. ಈ ಗ್ಯಾನಗೆಟ್ಟಾಟ ಸಾಜವಾಗಿ ಬುಟೋಯ್ತದೆ!” ಅಂದು ಇನ್ನೊಟು ಹೊಗೆಸೊಪ್ಪು ತಗುದು ದವಡೆಗೆ ವತ್ತರಿಸಿದ್ದು.
“ಯಾರನ್ನಾಕೆ ಉಡುಕ್ತ ವೋಗಬೇಕು?- ನಮ್ಮ ಹುಚ್ಚುಬೋರಿ ಎಣ್ಮು ಚಲುವೀನೆ ಇಲ್ವ?” - ಬೊಳ್ಳೆ ಎಡತಿ ಅವರ ಮಾತಿನ ಮದ್ಯಕೆ ಅಗ್ರಣೆ ಆಕಿದ್ದು...<noinclude></noinclude>
ec9m4ial6bxxtl9ymvgube7udqxra1a
ಪುಟ:ವೈಶಾಖ.pdf/೧೭೩
104
82102
316782
278665
2026-05-04T09:20:37Z
Ashwini Rai K
8475
/* Validated */
316782
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೫೭}}
<br/>
{{rh|center='''೧೩'''|left=|right=}}
ಇತ್ತ ಗುಡುಗುಡು ಓಡಾಡುತ್ತ ಮುದ್ದಮುದ್ದಾಗಿ ಲಲ್ಲೆಗರೆಯುತ್ತ ತನ್ನ ಮನೆ, ಮನಗಳೆರಡನ್ನೂ ಮುದಗೊಳಿಸುತ್ತಿದ್ದ ಪುಟ್ಟ ಸರಸಿಯ ಸಹವಾಸ ಅನೇಕ ದಿನಗಳಿಂದಲೂ ತಪ್ಪಿಹೋಗಿ, ರುಕ್ಕಿಣಿ ಮಂಕುಕವಿದವಳಂತೆ ಯಾಂತ್ರಿಕವಾಗಿ ಮನೆಗೆಲಸವನ್ನು ನಿರ್ವಹಿಸುತ್ತಿದ್ದಳು. ಯಾವ ಕೆಲಸ ಮಾಡುತ್ತಿದ್ದರೂ ಸರಸಿಯ ನೆನಪೇ ಮರುಕಳಿಸುವುದು....
ಸರಸಿ ಊರಿನಲ್ಲಿ ತನ್ನ ಸಮವಯಸ್ಕ ಗೆಳತಿಯರ ಒಂದು ದಂಡನೆ ಕೂಡಿಹಾಕಿದ್ದಳು. ಆ ಮಕ್ಕಳ ಆಟಪಾಟ, ಕುಣಿತ ಲಲ್ಲೆಗಳು ವಿಶೇಷವಾಗಿ ಮನೆಯ ಹೊರಗೆ ಕೇರಿಯ ಬೀದಿ ಬಯಲುಗಳಲೊ ನಡೆಯುತ್ತಿದ್ದರೂ ಕೆಲಸಮಯ ತಮ್ಮ ಮನೆಯೊಳಗೂ ಅವು ನಡೆಯುತ್ತಿದ್ದುದುಂಟು. ಮನೆಯೊಳಗಂತೂ ಅವರ ಹಾಡು, ಕುಣಿತ, ಜೂಟಾಟಗಳ ಸಂಭ್ರಮ ಮನೆಯ ಹೊರಗಿದ್ದವರಿಗೆ ಒಳಗಡೆ ಒಂದು ಬಾರಿ ಜಾತ್ರೆಯೇ ನಡೆದಿದೆಯೇನೋ ಎಂಬ ಭ್ರಮೆಯನ್ನು ಹುಟ್ಟಿಸುವಂತಿರುತ್ತಿತ್ತು. ಒಮ್ಮೊಮ್ಮೆ ಸರಸಿಯು ರುಕ್ಕಿಣಿಯನ್ನೂ ಬಿಡದೆ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಿದ್ದುದೂ ಉಂಟು. ಆ ಮಕ್ಕಳು ಕಣ್ಣಾಮುಚ್ಚಾಲೆ ಆಟವಾಡುವಾಗ ರುಕ್ಕಿಣಿಯೇ ಸರದಿಯ ಪ್ರಕಾರ ಒಂದೊಂದು ಮಗುವಿನ ಕಣ್ಣನ್ನೂ ಮುಚ್ಚಿ, ಇತರೇ ಮಕ್ಕಳು ಅವಿತುಕೊಂಡ ತರುವಾಯ ಆ ಮಗುವಿನ ಕಣ್ಣು ಮುಚ್ಚಿದ ಕೈಯನ್ನು ತೆಗೆದು ಬಿಡುತ್ತಿದ್ದಳು. ಬಚ್ಚಿಟ್ಟು ಕೊಂಡವರನ್ನು ಹಿಡಿದುಬಿಟ್ಟಳೆಂದರೆ ಸರಸಿಯ ಕೇಕೆ, ನಗು, ಸಡಗರಗಳು ಮನೆಯ ಛಾವಣಿಯನ್ನೂ ಹಾರಿಸಿಬಿಡುವಂತೆ ಇರುತ್ತಿತ್ತು. ಆಡುತ್ತ ಆಡುತ್ತ ಒಂದು ಬಾರಿ ಶೇಷಪ್ಪನವರ ಮಗಳು ನಳಿನಿಯನ್ನು ಹಿಡಿದುಬಿಟ್ಟ ಆನಂದದಲ್ಲಿ ಸರಸಿ ಓಡಿಬಂದು ರುಕ್ಕಿಣಿಯನ್ನು ತಬ್ಬಿದ್ದಳು. ರುಕ್ಕಿಣಿಯೂ ಅವಳ ಸಂತೋಷದಲ್ಲಿ ಭಾಗಿಯಾಗಿ ಅವಳ ಪುಟ್ಟ ತುಟಿಗಳಿಗೆ ಮೇಲಿಂದ ಮೇಲೆ ಮುತ್ತಿಟ್ಟಳು... ಆಗ
“ಮಕ್ಕಳ ತುಟಿಗೆ ಮುತ್ತಿಟ್ಟಂಗೆ ಅಂತಾವ ಮೊದ್ಧ ಗಾದೆ ಯೋಳಕಿಲ್ವ?ಅದರಾಗ್ಯಾವ ರುತಿ ಇದ್ದದು?” -ಅಂದು, ಕುಹಕವಾಗಿ ನಗುತ್ತ ಬಂದ ನಂಜೇಗೌಡನನ್ನು ಕಂಡು, ಅವನಾಡಿದ ನುಡಿಗಳಿಂದ ಕ್ರುದ್ಧಳಾಗಿ, “ಅದರ ರುಚಿಯನ್ನು ಬಲ್ಲವರೇ ಬಲ್ಲರು” ಎಂದು ಹೇಳಲು ಹೋಗಿ, ಈ ನೀಚನ ಸಂಗಡ ಮಾತು ಬೆಳೆಸುವುದೂ ಉಚಿತವಲ್ಲವೆಂದು ಮನಗಂಡು, ಸರಸಿಯನ್ನು ಅಡಲು ಬಿಟ್ಟು, ಅಡಿಗೆ ಕೋಣೆಯತ್ತ ಅಡಿಯಿಟ್ಟಳು, ನಂಜೇಗೌಡ ಮೀಸೆಯ ಮರೆಯಲ್ಲಿ ನಗುತ್ತ,<noinclude></noinclude>
1hdejftyafszmoyqfo60fix49a3ueju
ಪುಟ:ವೈಶಾಖ.pdf/೧೭೪
104
82103
316783
278677
2026-05-04T09:20:57Z
Ashwini Rai K
8475
/* Validated */
316783
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=೧೫೮|right=ವೈಶಾಖ}}
{{gap}}“ಸಾಸ್ತಿಗೋಳು ತ್ವಾಟದಿಂದ ಬರನಿ, ರುಕ್ಕಿಣವ್ವ ?” ಕೇಳಿದ. ಅವ್ವ ಎಂದು ನಂಜೇಗೌಡ ತನ್ನನ್ನು ಸಂಬೋಧಿಸಿದ್ದು ರುಕ್ಕಿಣಿಯ ಕ್ರೋಧವನ್ನು ಇಮ್ಮಡಿಸಿತು.<br/>
{{gap}}“ಹೊರಗೆ ಅವ್ವ ಅನ್ನೋದು, ಒಳಗೆ ಮಗ್ಗುಲಿಗೆ ಮಲಗಿಸಿಕೊಳ್ಳಲು ಬಾಯಿ ಬಾಯಿ ಬಿಡೋದು... ಜನ ಅನ್ನೋ ಹಾಗೆ, ಈ ಗೌಡ ಹೀನಸುಳಿ. ಇವನ ಬಗ್ಗೆ, ಹೆತ್ತ ತಾಯ ಲಾಡಿ ಬಿಚ್ಚಿ ಬಡ್ಡಿಹೈದ ಅಂತ ಬುಂಡಮ್ಮ ಹೇಳೋ ಮಾತು ಸಂಪೂರ್ಣ ಸತ್ಯ!” ಎಂದು ಸಿಡಿಮಿಡಿಗುಡುತ್ತ ಒಳನಡೆದಿದ್ದಳು.<br/>
{{gap}}ರಾತ್ರಿ ಮಲಗುವಾಗ ಸರಸಿಯದೇ ನೆನಪು. ಮಲಗುವ ಮುನ್ನ ಮಾವಯ್ಯ ಬಾಯಿಪಾಠ ಮಾಡಿಸಿದ್ದ, ರಾಮಂ ಸ್ಕಂದಂ ಹನೂಮಂತಂಶ್ಲೋಕವನ್ನು ತಪ್ಪುತಪ್ಪಾಗಿಯಾದರೂ ಅವಳು ಹೇಳಿ ಮುಗಿಸಿಲೇಬೇಕು. ಪ್ರಾತಃಕಾಲ ಏಳುವಾಗಲೂ ಅಷ್ಟೆ, ಎರಡು ಹಸ್ತಗಳನ್ನೂ ಉಜ್ಜಿ ನೋಡಿಕೊಳ್ಳುತ್ತ -ಕರಾಗೇ ವಸತೇ ಲಕ್ಷ್ಮೀ, ಕರಮಧ್ಯೆ ಸರಸ್ವತಿ, ಶ್ಲೋಕ ಹೇಳಬೇಕು.<br/>
{{gap}} ಮಲಗುವ ಮುನ್ನ ಯಾವುದಾದರೂ ಕಥೆ ಹೇಳೆಂದು ಗಂಟು ಬೀಳುತ್ತಿದ್ದುದೂ ಉಂಟು. ಅದರಲ್ಲೂ “ಬುಡ ಬೆಳ್ಳಿ, ನಡುಚಿನ್ನ, ಎಲೆ ಪಚ್ಚೆ, ಗೊನೆ ಮುತ್ತು ಎನ್ನುವ ಬಾಳೆಕಂಬದ ಕಥೆ” ಅವಳಿಗೆ ಬಹಳ ಮೆಚ್ಚು... ಈ ರಾತ್ರಿ ಎಷ್ಟು ಪ್ರಯತ್ನಿಸಿದರೂ ನಿದ್ರೆ ಬಾರದೆ ಹೊರಳಾಡುತ್ತಿರುವಾಗ, ಸರಸಿ ಪಕ್ಕದಲ್ಲಿ ಮಲಗಿ ಕಥೆ ಕೇಳುತ್ತಿರುವಂತೆಯೂ ತಾನು ಅವಳನ್ನು ಮೃದುವಾಗಿ ತಟ್ಟುತ್ತ ಆ ಕಥೆಯನ್ನು ಮತ್ತೊಮ್ಮೆ ಹೇಳುತ್ತಿರುವಂತೆಯೂ ಭಾಸವಾಯಿತು:<br/>
{{gap}}ಈ ಎಲ್ಲಾ ಅಡಸಗೊಲಜ್ಜಿ ಕಥೆಯಂಥದೆ ಒಂದು ಕಥೆ ಅದು. ಒಬ್ಬ ರಾಕ್ಷ ಒಬ್ಬಳು ರಾಜಕುಮಾರಿಯನ್ನು ಹೊತ್ತುಕೊಂಡು ಹೋಗಿ ಘೋರಾರಣ್ಯದ ನಡುವೆ ಇದ್ದ ಒಂದು ಭಾರಿ ಬೆಟ್ಟದಲ್ಲಿದ್ದ ಗುಹೆಯೊಳಗೆ ಸೇರಿಸಿ, ತನ್ನನ್ನು ವರಿಸುವಂತೆ ಆ ರಾಜಕುಮಾರಿಯನ್ನು ಒತ್ತಾಯಿಸುತ್ತಿರುತ್ತಾನೆ. ಎಲ್ಲಾ ಕಥೆಗಳ ರಾಜಕುಮಾರಿಯಂತೆ ಆ ರಾಜಕುಮಾರಿಯೂ ಮಹಾಚೆಲುವೆಯಾಗಿದ್ದುದೇ ಅಲ್ಲದೆ, ತುಂಬಾ ಜಾಣೆಯೂ ಆಗಿರುತ್ತಾಳೆ. ತಾನೊಂದು ವುತ ಆಚರಿಸುತ್ತಿರುವುದಾಗಿಯೂ ನಲವತ್ತೆಂಟು ದಿನಗಳ ಆ ವ್ರತ ಮುಗಿಯುತ್ತಲೂ ತಾನು ಅವನ ವಶಳಾಗುವುದಾಗಿಯೂ ತಂತ್ರ ಹೂಡುತ್ತಾಳೆ. ಅವಳ ಮಾತಿಗೊಮ್ಮೆ ಒಂದು ದಿನ, ಯಾವಾಗಲೂ ಹೊರಗೆ ಹೊರಡುವಾಗ ಮಾಡುತ್ತಿದ್ದಂತೆ ಒಂದು ಬಂಡೆಯನ್ನು ಆ ಗುಹೆಯ ಬಾಯಿಗಿಟ್ಟು ಮುಚ್ಚಿ ತರುವಾಯ ಅವನು ಆಹಾರವನ್ನರಸಿ ತೆರಳಿರುವ ವೇಳೆಯಲ್ಲಿ, ಬೇಟೆಗೆಂದು ಬಂದ<noinclude></noinclude>
jtnivdt2ij5v00viyffzq7s27owrdfj
ಪುಟ:ವೈಶಾಖ.pdf/೧೭೫
104
82104
316784
278678
2026-05-04T09:21:10Z
Ashwini Rai K
8475
/* Validated */
316784
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೫೯}}
ರಾಜಕುಮಾರನೊಬ್ಬ ಕಾಡುಹಂದಿಯ ಬೆನ್ನುಹತ್ತಿ ತನ್ನ ಸಿಬ್ಬಂದಿಯಿಂದ ಬೇರ್ಪಟ್ಟು ಆ ಗುಹೆಯ ಬಳಿ ಬರುತ್ತಾನೆ. ಕಿಂಡಿಯಿಂದ ನೋಡಿದೊಡನೆಯೆ ಆ ರಾಜಕುಮಾರನಲ್ಲಿ ವಿಶ್ವಾಸ ಹುಟ್ಟಿ ತನ್ನ ದುಃಖದ ವೃತ್ತಾಂತವನ್ನು ಹೇಳಿಕೊಳ್ಳುತ್ತಾಳೆ, ರಾಜಕುಮಾರಿ. ಆಗ ಆ ರಾಜಕುಮಾರ ಅವಳಿಗೆ ಒಂದು ಉಪಾಯವನ್ನು ಹೇಳಿಕೊಡುವನು... ರಾಕ್ಷಸ ಬಂದೊಡನೆಯ, ಇನ್ನೇನು ತಾನು ಕೈಗೊಂಡ ವ್ರತ ಮುಗಿಯುತ್ತಿರುವದರಿಂದ ತಾನೇನೋ ಅವನಿಗೆ ಶರಣಾಗುವುದಾಗಿಯೂ ಆದರೆ ಆಗಿಂದಾಗ ಏಕಾಂಗಿಯಾಗಿ ಕಾಡಿನಲ್ಲಿ ಅಲೆಯುವಾಗ ಯಾರಿಂದಲಾದರೂ ಅವನ ಪ್ರಾಣಕೆ ಹಾನಿ ಸಂಭವಿಸಿದರೆ ತನ್ನ ಪಾಡೇನೆಂದು ಕೇಳಬೇಕೆಂಬುದೇ ಆ ಉಪಾಯ!- ಅದನ್ನು ಹೇಳಿಕೊಟ್ಟು, ದೂರದ ಮರವೊಂದನ್ನೇರಿ ರಾಜಕುಮಾರ ಅವಿತಿರುತ್ತಾನೆ...<br/>
{{gap}} ಆ ಸಂಜೆ ಆಹಾರ ಸಂಗ್ರಹಿಸಿ ಮರಳಿದ ರಾಕ್ಷಸ ಚಿಂತಾಕ್ರಾಂತಳಾಗಿದ್ದಂತೆ ಕಂಡ ರಾಜಕುಮಾರಿಯನ್ನು ಅದರ ಕಾರಣವೇನೆಂದು ಕೇಳುವನು. ಆಗ ರಾಜಕುಮಾರ ಹೇಳಿಕೊಟ್ಟಂತೆ ಅವಳು ನಟನೆ ಮಾಡಿ ಕಣ್ಣೀರಿಡುವಳು. ರಾಕ್ಷಸ ಅವಳ ಕಣ್ಣೀರನ್ನು ಒರಸುತ್ತ, ತನ್ನನ್ನು ಕೊಲ್ಲಲು ಇಡೀ ಭೂಮಂಡಲದಲ್ಲಿ ಯಾರಿಂದಲೂ ಶಕ್ಯವಿಲ್ಲವೆಂದು ಹೇಳಿ, ಸಪ್ತಸಾಗರದ ನಡುವೆ ಇರುವ ದ್ವೀಪದೊಳಗಿನ ಬುಡ ಬೆಳ್ಳಿ ನಡು ಚಿನ್ನ ಎಲೆ ಪಚ್ಚೆಗೊನೆ ಮುತ್ತು ಅನ್ನುವ ಬಾಳೆಕಂಬದಲ್ಲಿ ತನ್ನ ಪ್ರಾಣ ಜೋಪಾನವಾಗಿ ಅಡಗಿರುವುದೆಂದು ತಿಳಿಸುತ್ತಾನೆ...<br/>
ಮಾರನೆಯ ದಿನ ರಾಕ್ಷಸರು ಆಹಾರಸಂಗ್ರಹಣೆಗೆ ತೆರಳಿದ ಸಮಯದಲ್ಲಿ, ಗುಹೆಯ ಬಳಿ ಬಂದ ರಾಜಕುಮಾರನಿಗೆ ರಾಕ್ಷಸನ ಜೀವನದ ರಹಸ್ಯವನ್ನು ಅವಳು ಅರಹುತ್ತಾಳೆ. ಒಡನೆಯೇ ಆ ದ್ವೀಪಕ್ಕೆ ತೆರಳಿ, ಆ ಬಾಳೆಕಂಬವನ್ನು ಕಡಿದುಹಾಕುವುದಾಗಿ ಶಪಥ ಮಾಡಿ ಹೊರಟ ರಾಜಕುಮಾರನಿಗೆ ದಾರಿ ಕ್ರಮಿಸಿದಂತೆ ಸಪ್ತಸಾಗರಗಳ ನಡುವಿನ ಆ ದ್ವೀಪಕ್ಕೆ ತಾನು ಹೋಗುವುದಾದರೂ ಹೇಗೆ? ಎಂಬ ಚಿಂತೆ ಆಕ್ರಮಿಸುತ್ತದೆ. ಕ್ರಮಕ್ರಮೇಣ ಅದು ತನ್ನಿಂದ ಸಾಧ್ಯವೇ ಇಲ್ಲವೆಂದು ಮನಗಂಡಾಗ, ಮಗ್ಗಳಾ ರಾಜಕುಮಾರಿಗೆ ಅಷ್ಟೆಲ್ಲ ಭರವಸೆಯಿತ್ತು ಅನರ್ಧ ಮಾಡಿದೆ. ತನ್ನಂಥ, ಪಾಷಂಡಿಯು ಇನ್ನು ಈ ಲೋದಲ್ಲಿ ಬದುಕಿರಬಾರದೆಂದು ನಿಶ್ಚಯಿಸಿ, ಖಡ್ಗವನ್ನು ಒರೆಯಿಂದ ಹಿರಿದು, ಸಮೀಪದಲ್ಲೆ ಕಾಣಿಸಿದ ಕಾಳಿಕಾಮ್ಮನ ಗುಡಿಯ ಮುಂದೆ ನಿಂತು, ಆ ತಾಯಿಗಾದರೂ ಪ್ರೀತಿಯಾಗಲಿ ಎಂದುಕೊಳ್ಳುತ್ತ, ತಲೆ ಕಡಿದುಕೊಳ್ಳಲು ಖಡ್ಗವನ್ನೆತ್ತಿದಾಗ, ಕಾಳಿಯು ಪ್ರತ್ಯಕ್ಷಳಾಗಿ ಕೆಲವು ಭಸ್ಮದ ಪೊಟ್ಟಣಗಳನ್ನೂ ಮಂತ್ರಾಕ್ಷತೆಯನ್ನೂ ಕೊಟ್ಟು,<noinclude></noinclude>
43ahx1m76udohom7pxqcd6lkofpakxc
ಪುಟ:ವೈಶಾಖ.pdf/೧೭೬
104
82105
316785
278682
2026-05-04T09:21:24Z
Ashwini Rai K
8475
/* Validated */
316785
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=೧೬೦|right=ವೈಶಾಖ}}
ಅವನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ಹೇಳಿಕೊಟ್ಟು, ಅವನ ಇಷ್ಟಾರ್ಥ ಸಿದ್ದಿಯಾಗುವುದೆಂದು ಆಭಯವಿಟ್ಟು ಅಂತರ್ಧಾನಳಾಗುತ್ತಾಳೆ...<br/>
{{gap}} ದೇವಿಯ ಸೂಚನೆಗಳನ್ನು ಅನುಸರಿಸಿ ಒಂದೊಂದು ಸಾಗರದ ಮೇಲೂ ಆ ರಾಜಕುಮಾರನು ಒಂದೊಂದು ಪಟ್ಟಣದಿಂದ ಭಸ್ಮವನ್ನು ಎರಚಿದಂತೆ, ಒಂದೊಂದು ಸಾಗರದ ನಡುವೆಯೂ ಸರಾಗವಾಗಿ ನಡೆದುಕೊಗುವಂತೆ ದಾರಿ ನಿರ್ಮಾಣವಾಗುತ್ತದೆ. ಅವನು ದ್ವೀಪಕ್ಕೆ ಕಾಲಿಟ್ರೊಡನೆಯೆ ಏಳು ಹೆಡೆಯ ಘಟಸರ್ಪವೊಂದು ಮೇಲೇರಿ ಬರುತ್ತದೆ. ಮಂತ್ರಾಕ್ಷತೆಯ ಸ್ವಲ್ಪ ಭಾಗವನ್ನು ಅದರ ಮೇಲೆ ಎಸೆಯುತ್ತಾನೆ. ತಟ್ಟನೆ ಆ ಸರ್ಪಕ್ಕೆ ಗಾಢನಿದ್ರೆ ಬಂದು ಮಲಗಿಬಿಡುತ್ತರದೆ. ಅಲ್ಲಿಂದ ಮುಂದೆ ಸಾಗಿದಂತೆ ಮುಗಿಲೆತ್ತ ಉರಿಯುವ ಅಗ್ನಿಯ ಜ್ವಾಲೆಗಳು ಅವನಿಗೆ ಅಡ್ಡವಾಗುತ್ತವೆ. ಧೈರ್ಯಗೆಡದೆ ಉಳಿದಿದ್ದ ಮಂತ್ರಾಕ್ಷತೆಯನ್ನು ಆ ಜ್ವಾಲೆಗಳ ಮೇಲೆ ಸುರಿಯುತ್ತಾನೆ. ತಕ್ಷಣ ಜ್ವಾಲೆಗಳು ಶಮನವಾದಂತೆ ಬುಡವೆಲ್ಲ ಬೆಳ್ಳಿಯಾಗಿ ನಡುವೆಲ್ಲ ಚಿನ್ನವಾಗಿ ಎಲೆಯೆಲ್ಲ ಪಟ್ಟೆಯಾಗೊ, ಗೊನೆ ಮುತ್ತಾಗಿ ಥಳ ಥಳಿಸುವ ಬಾಳೆಯ ಕಂಬ ಕಣ್ಣಿಗೆ ಬೀಳುತ್ತದೆ... ಅನವಶ್ಯಕವಾಗಿ ಕಾಲ ವಿಳಂಬಮಾಡದೆ ಅವನು ಬಾಳೆಯ ಕಂಬವನ್ನು ಖಡ್ಗದಿಂದ ಬುಡಸಹಿತ ಕತ್ತರಿಸಿ, ಅದರೊಡನೆ ಸರಸರನೆ ಹಿಂದೆ ನಿರ್ಮಾಣವಾದ ಮಾರ್ಗದಲ್ಲಿ ದಾರಿ ಕ್ರಮಿಸಿ, ಭೂಸ್ಪರ್ಶ ಮಾಡುತ್ತಾನೆ...<br/>
{{gap}}ರಾಜಕುಮಾರ ಹಿಂದಿರುಗಿ ಭೂಸ್ಪರ್ಶ ಮಾಡಿದ ಕೂಡಲೆ, ಸಹಸ್ರಾರು ಸಿಡಿಲುಗಳು ಏಕಕಾಲದಲ್ಲಿ ಎರಗಿದ ಹಾಗೆ ಭೀಕರವಾಗಿ ಅಬ್ಬರಿಸುತ್ತ, “ಮೊಸವಾಯ್ತು... ಮೋಸಹೋದೆ...' ಎಂದು ಮೊರೆಯುತ್ತ 'ಆದರೂ ನಿನ್ನನ್ನ ಸುಮ್ಮನೆ ಬಿಡುತ್ತೀನೇನೊ' ಎಂದು ಘುಡುಮುಡಿಸುತ್ತ, ಆ ರಾಕ್ಷಸ ಏರೇರಿ ಬಂದ...<br/>
{{gap}}ಸರಸಿ ಬೆದರಿ 'ಅಮ್ಮಾ...' ಎಂದು ಚೀರಿದ್ದಳು. ರುಕ್ಕಿಣಿಯು ಅವಳನ್ನು ಸಂತೈಸುತ್ತ,<br/>
{{gap}}“ಆಗ ಆ ರಾಜಕುಮಾರನು ಕೊಂಚವೂ ಅಧೀರನಾಗದೆ ದೇವಿಯು ಹೇಳಿಕೊಟ್ಟಿದ್ದ ಪ್ರಕಾರ, ಪಚ್ಚೆಯ ಎಲೆಗಳನ್ನು ಮೊದಲು ಕತ್ತರಿಸಿದ. ಆಗ ರಾಕ್ಷಸನ ಕೈಗಳು ಕತ್ತರಿಸಿಬಿದ್ದವು. ಕೈಗಳು ಬಿದ್ದ ಆ ರಾಕ್ಷಸ ಹೋ ಎಂದು ಎಬ್ಬಿಸಿದ ಹುಯಿಲಿನಿಂದ ಧೈರ್ಯವಂತನಾದ ರಾಜಕುಮಾರನ ಎದೆಯೂ ಸಹ ತಲ್ಲಣಗೊಂಡಿತ್ತು. ಹೇಗೋ ಚೇತರಿಸಿಕೊಂಡು, ಬಿರುಗಾಳಿಯ ಹಾಗೆ ಮುನ್ನುಗ್ಗಿ ಬರುತ್ತಿದ್ದ ಆ ದೈತ್ಯನನ್ನು ಇನ್ನೂ ಹತ್ತಿರ ಬರಲು ಬಿಡಬಾರದೆಂದು<noinclude></noinclude>
0b0dt8c1fruv1a0finn0i661wqqqcue
ಪುಟ:ವೈಶಾಖ.pdf/೧೭೭
104
82106
316786
278704
2026-05-04T09:21:40Z
Ashwini Rai K
8475
/* Validated */
316786
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೬೧}}
ಬಾಳೆಕಂಬದ ಬೆಳ್ಳಿಬುಡವನ್ನು ಕತ್ತರಿಸಿ ಹಾಕಿದ. ಆಗ ಆ ರಾಕ್ಷಸನ ಕಾಲುಗಳೂ ಕಡಿದು ಬಿದ್ದವು. ಅಷ್ಟಾದರೂ ಆ ದೈತ್ಯ ಬೋರ್ಗರೆಯುವ ಸಾಗರದಂತೆ ಉರುಳುತ್ತುರುಳುತ್ತಲೆ ಬರುತ್ತಿದ್ದ. ಇನ್ನೇನು ಹತ್ತಿರ ಹತ್ತಿರ ಬಂದ ಎನ್ನುವಾಗ, ಚಿನ್ನದ ನಡುವಿನ ಭಾಗವನ್ನೂ ಕೊಚ್ಚಿದ. ರಾಕ್ಷಸನ ಸೊಂಟದ ಪ್ರದೇಶವೂ ಕರಿಸಿ ಬಿತ್ತು. ಅಂಥ ಸ್ಥಿತಿಯಲ್ಲೂ ಕೂಡ ಆ ದೈತ್ಯನ ಹೂಂಕಾರ ಕಡಿಮೆಯಾಗಲಿಲ್ಲ. ಶಿರನ್ನೂ ಸೇರಿದಂತೆ ಅವನ ಸೊಂಟದ ಮೇಲ್ಬಾಗದ ಶರೀರವು ಇನ್ನೂ ಮಿತಿಮೀರಿದ ಠೇಂಕಾರದಿಂದ ಅವನತ್ತ ನುಗ್ಗಿ ಬಂತು ಆಗಲೀಗ ರಾಜಕುಮಾರ ಮುತ್ತಿನ ಗೊನೆಯನ್ನೂ ಸಹ ಕೊಚ್ಚಿ ಕೆಡವಿದ. ದೈತ್ಯನ ಶಿರಸ್ಸು ಎದೆಯ ಭಾಗದಿಂದ ಪ್ರತ್ಯೇಕಗೊಂಡು ರಾಜಕುಮಾರನ ಪಾದದ ಬಳಿ ನಿರ್ಜೀವವಾಗಿ ಬಂದು ಬಿತ್ತು.<br/>
{{gap}}ಅಬ್ಬಬ್ಬ ಸದ್ಯ ತೋಲಗಿತಲ್ಲ ಪಿಶಾಚಿ!” ಎಂದು ನಿಟ್ಟುಸಿರುಟ್ಟು, ಆನಂದದಿಂದ “ಆಮೇಲಿನ್ನೇನು?... ನೀನು ಹೇಳೊ ಎಲ್ಲಾ ಕತೇಲೂ ಇರೋ ತರ, ಆ ರಾಜಕುಮಾರ ಆ ರಾಜಕುಮಾರೀನ ಮದ್ಯೆ ಆಗ್ತಾನೆ ಅಲ್ವಾ?” ಎಂದು ತನ್ನ ಜಾಣತವನ್ನು ಪ್ರದರ್ಶಿಸಿದ್ದಳು...<br/>
{{gap}}ಹೌದೆಂದು ಒಪ್ಪಿ, ಆ ಕಥೆಯ ಗುಂಗಿನಲ್ಲಿ ಪರವಶಳಾದಂತಿದ್ದ ಸರಸಿಯನ್ನು ರುಕ್ಕಿಣಿಯು ಪ್ರಶ್ನಿಸಿದ್ದಳು:
{{gap}}“ಒಂದು ಪಕ್ಷ ಈ ಹೊತ್ತಿನಲ್ಲಿ ಅಂಥ ರಾಕ್ಷಸ ಇಲ್ಲಿಗೆ ಬಂದ ಅಂತ ಇಟ್ಟುಕೊ, ಆಗ ನೀನೇನು ಮಾಡ್ತಿದ್ದೆ, ಸರಸಿ”?
ತಟ್ಟನೆ ಆವೇಶ ಬಂದವಳಂತೆ, ರುಕ್ಕಿಣಿಯ ಕುತ್ತಿಗೆಯನ್ನು ಎರಡು ಕೈಗಳಿಂದಲೂ ಅಮುಕತ್ತ.
“ಹಿಂಗೆ, ಹಿಂಗೆ ಅವನ ಕುತ್ತಿಗೇನ ಹಿಚುಕಹಾಕ್ತಿದ್ದೆ” ಎಂದಳು. ಆ ಗಳಿಗೆಯಲ್ಲಿ ಸರಸಿ ಅಡಗೂಲಜ್ಜಿ ಕಥೆಯ ರಾಜಕುಮಾರನೆ ಆದಂತಿತ್ತು....
“ಬಿಡೆ, ಬಿಡೆ ನನ್ನ ಕುತ್ತಿಗೇನ ಯಾಕೆ ಹೀಗೆ ಹಿಚುಕ್ತ ಇದ್ದೀಯೆ!... ನಾನೇನು ಆ ರಾಕ್ಷಸ ಅಲ್ಲ- ನಾನು ನಿನ್ನ ಅಕ್ಕ...” ಎಂದು ರುಕ್ಕಿಣಿಯು ಹೇಳುತ್ತಿದ್ದಂತೆ ಕಿಲಕಿಲನೆ ನಗುತ್ತ, ಅವಳ ಕುತ್ತಿಗೆಯಿಂದ ಸರಸಿ ತನ್ನ ಕೈಗಳನ್ನು ತೆಗೆದಿದ್ದಳು....<br/>
{{gap}}ಗುಡ್ಡ ವೋಳೀಕೆ ಮನಗದ ಲಕ್ಕ ಬೆಳಗ್ಗೆ ಏಳಕ್ಕೆ ಹೃಳ್ಳಾಡ್ತಾನೆ. ಹೃಳ್ಳಾಡ್ತಾನೆ ಆಯ್ತಾನೇ ಇಲ್ಲ... ಅವ್ವ ಬಂದು ಅಣೆ ಮುಟ್ಟಿ ಸ್ವಾಡುದ್ಲು. ಕುಟ್ಟೋಯ್ತ ಇತ್ತು...<noinclude></noinclude>
69otb3k3eth45hksfhg9lhk67a9tiv8
ಪುಟ:ವೈಶಾಖ.pdf/೧೭೮
104
82107
316787
278705
2026-05-04T09:21:55Z
Ashwini Rai K
8475
/* Validated */
316787
proofread-page
text/x-wiki
<noinclude><pagequality level="4" user="Ashwini Rai K" /></noinclude>
{{rh|center=|left=೧೬೨|right=ವೈಶಾಖ}}
{{gap}}“ಸಿವುನಿ, ಅಣ್ಣಂಗೆ ಜೋರು ಜೊರ ಬಂದದೆ. ಕುಂಡಿಮಾದಿ ಅಟ್ಟಲಿ ನಾಕು ಮೆಣಸಿನ ಕಾಳ ಈಸುಗಂಬಂದು ಕಸಾಯ ಕಾಯ್ದೆ ಕೂಡು.”- ಇತ್ತಲ್ಲಿ ಇದ್ದೋಳೆ ಕೂಗಿ ಯೋಳಿ,” ಮಠದ ಅಯೋರು ಕಂಬಳಕೆ ಯೋಳಿಕಳುಸಿ, ನಾ ವೋಯ್ತಾ ಇನ್ನಿ” ಅಂದು, ಗುಡ್ಡಿನ ಕದವ ಮುಂದುಕೆಳುದು ಕಲ್ಯಾಣಿ ಜ್ವರೀಕೆ ವೊಂಟ್ಟು.<br/>
{{gap}}ಇತ್ತಲ್ಲಿ ಮೋಗೀಗೆ ನೀರುದ್ದ ಸಿವುನಿ, ತನ್ನ ಸ್ಯಾಲೆ ಸೆರುಗ್ನಲ್ಲೆ ಆ ಮೊಗೀಗೆ ಮಯ್ಯ, ತಲೆಗೂದ್ದು ಯಲ್ಲಾನು ವರುಸ್ತ, ಅದ್ರ ಗುಡೋಳೀಕೆ ತತ್ತುಗಂಬಂದು, ಚಂಡಿ ತಗುವ ಮೋಗೀಗೆ ಎದೆ ಕಚ್ಚುಸ್ತ, ಅಣ್ಣನ ಪಕ್ಕದಾಗೆ ಕುಂತು, ಅಣೆ ಮುಟ್ಟಿ “ಆಪ್ಟಿ, ಯೇಟೊಂದು ಜೊರ ಬಂದುಬುಟ್ಟಿದೆ?” ಅಂದು, ಹಾಲು ಕುಡೀತಿದ್ದಂಗೆ ತೊಡೆ ಮ್ಯಾಲೆ ನಿದ್ದೆ ಬಂದ ಮೊಗಾವ ನೆರುಕೆ ಮೊಗ್ಗಲೆ ಹಾಸ್ಯ ದುಪಟಿಮ್ಯಾಲೆ ಉಳ್ಳಾಕಿ, ಕುಂಡಿ ಮಾದಿ ಗುಡಿಲಿಗೆ ವೊಂಟು ಅಣ್ಣನ ಕಾಲುದಸೀಲಿ ಮಲ್ಕಚಾಚಿ ಮನಗಿದ್ದ ಬೊಡ್ಡನ ಕಾಲ ತುಣುದ್ದು. ಕೂಡ್ಲೆ ಆ ಚೋರದ ತಾಪದಾಗೂವೆ ಅಣ್ಣ ಮೊಖದ ತುಂಬ ವೊದ್ದಿದ್ದ ದುಪಟ ಸರುಸಿ, “ಯೇನಾಯ್ಕಣೆ ಸಿವುನಿ?- ಬೊಡ್ಡ ಯಾಕಂಗೆ ಅರಚುಗತ್ತು?” ಅಂತ ಕೇಳಿದ್ದ. ಸಿವುನಿಗೆ ಜೋಜಿಗೆ ಅನ್ನುಸಿತ್ತು. ಈ ನಾಯಿಗೂ ನಮ್ಮಣ್ಣಂಗೂ ಯಾವ ನಂಟು? ಅಂದುಕೊತ್ತ.<br/>
{{gap}}“ಯಾನಿಲ್ಲ ಮನಕ್ಕಣ್ಣ, ಕುಂಡಿಮಾದಿ ಆಟೀಲಿ ವಸಿ ಮೆಣಸಿನ ಕಾಳ ತಂದು ನಿಂಗೆ ಕಸಾಯ ಕಾಬ್ರಿಕ್ತಡು ಅಂದ್ಲು ಅವ್ವ, ಅದುಕೆ ಕುಂಡಿಮಾದಿ ಅಟ್ಟಿಗೆ ವೋಯ್ತಿದ್ರೋಳು ಕಾಣೆ ಬೊಡ್ಡನ ಕಾಲ ತುಣದಿ, ಅದುಕೆ ವೋಟು ರಾವುಟ ಅದರು?- ನೀ ಮನಕ್ಕೊ” ಅಂದು ಸಿವುನಿ ಅಚ್ಚೆ ನಡುದ್ಲು.<br/>
{{gap}}ಕುಂಡಿಮಾದಿ ಅಗ್ಗೆ ಕೆಲುಸಕ್ಕೆ ವೊಂಟೋಗಿದ್ದು, ಸಾವಂತ್ರೀನೂ ವೋಂಟೋಗಿತ್ತು. ಕುಂಡಿ ಮಾದಿ ಗಂಡನೂವೆ ಗುಡ್ಡ ಕದ ಎಳುದು ಕಂಬಳಕೆ ವೋಂಡತಿದ್ದ ಕಂಡು ಸಿವುನಿ, ನಿಂತ ಕಾಲ ಮುಂದಕೆಳೆಯಾ ಸಮಯದಲ್ಲಿ, ಆ ದ್ಯಾವರಗುಡ್ಡ-<br/>
{{gap}}“ಯಾನು ಬೇಕಾಗಿತ್ತು?” ಕ್ಯಾಳ,<br/>
{{gap}}“ಇವುನ ಕ್ಯಾಳಿ ಸುಕವೇನ?” -ಅಂದು, ಸಿವುನಿ ಮಾತಾಡದೆ ಮುಂದಾದ್ದು. ಆಗ ಆ ಗ್ರಾಸ್ತ್ರ,<br/>
“ಯಾಕಮ್ಮಿ?... ಯಾಕ ಬಂದದ್ದು ?... ವಳೀಕೆ ಬಾ... ಅದ್ಯಾನು ಬೇಕಿದ್ರೂ ಯೋಳು, ಕೈಟೇನು” ಅಂತ ಕರೆಯೋದ?- ಕ್ವಾಪ ಬಂದು ಸಿಡಾರನೆ,<noinclude></noinclude>
0i3a7qhewlq7bxatvt6zch2khzwc2l6
ಪುಟ:ವೈಶಾಖ.pdf/೧೭೯
104
82108
316788
278706
2026-05-04T09:22:32Z
Ashwini Rai K
8475
/* Validated */
316788
proofread-page
text/x-wiki
<noinclude><pagequality level="4" user="Ashwini Rai K" /></noinclude>
{{rh|center=|left=ಸಮಗ್ರ ಕಾದಂಬರಿಗಳು|right=೧೬೩}}
{{gap}}“ಯಾನೂ ಬೇಕಾಗಿಲ್ಕಿಲ್ಲ. ಮಾದಮ್ಮ ಮಾತಾಡುಸಿ ವೋಗಾವಾಂತ ಬಂದಿ” ಅಂದ್ದು ಸಿವುನಿ.<br/>
{{gap}}ಗುಡ್ಲಕದವ ಇಂದುಕೆತಳ್ಳಿ, ತಾನೂ ವಳುಕ್ಕೋಗಿ ನಿಂತಿದ್ದ ದ್ಯಾವರಗುಡ್ಡ, “ವೋಟೇಯ...” ಅಂದ್ರು, ಮೊಖವ ಆನೆದಡಿ ಕಾಯ್ದಂಗೆ ಇಳಿಬುಟ್ಟ!
ಸಿವುನಿ ಅಲ್ಲಿಂದ ನಡುದು ದ್ಯಾವಾಜಿ ಗುಡ್ಡು ತಾವಿಕೋದೆ, ಅವು ಇಲ್ಲಿಲ್ಲ. ಹುಚ್ಚಬೋರಿ ಗುಡ್ಗತ್ರ ವೋದ್ರೆ ಅವುಳೂ ಇಲ್ಲ!... ಇಪರೀತ ಸಿಟ್ರಿ ಆಗಿ, ಅಲ್ಲಿಂದ ಮುಂದ್ಯೋಯ್ತ ಇರೋನೂವೆ, ಎದುರುಗಂಡಿದ ಹುಚ್ಚುಬೋರಿ ಮಗಳು ಚೆಲುವಿ ಬತ್ತಾ ಇದ್ಲು.<br/>
{{gap}}“ಯೆತ್ತಾಗಿ ಬಂದಿದ್ರಿ, ಅತ್ತಿಗೆ?... ನಮ್ಮ ಗುಡ್ಡ ತಾವು ನಿಂತಂಗಿತ್ತು... ಅವ್ವ ಕಂಬಳಕೋಗದೆ, ನಾ ಇಲ್ಲೆ ದೋಳ್ಳಪ್ಪಾರ ಅಟ್ಟಲಿಹಾಳೊತ್ತಿಗೆ ಕರುದಿದ್ರು, ವೋಗಿದ್ದೆ.” ಒಂದೆ ಉಸುರಗೆ ಯೋಳಿದ್ದು. ಚೆಲುವಿ.<br/>
{{gap}}“ಯಾನೂ ಇಲ್ಲ. ನಮ್ಮಣ್ಣಂಗೆ ಜೊರ ಬಂದದೆ. ನಿಮ್ಮ ತಾವು ಮೆಣಸಿನಕಾಳಿದ್ರೆ ವಸಿ ಈಸುಗಂಡೋಗಾಗವ ಅಂತ ಬಂದಿ. ಆದ್ರೆ ನಿಮ್ಮವ್ವನೇ ಇಲ್ವಲ್ಲ... “ಸಿವುನಿ ಅಂತಿದ್ದಂಗೆ,
“ಅವ್ವ ಇಲ್ಲಿದೆ ನಾನಿಲ್ವ?... ನಾಕು ಮೆಣಸಿನ ಕಾಳ ಕ್ವಡಕ್ಕೆ ಅವ್ವನ್ನೆಲ್ಯಾಳಬೇಕ?- ಬನ್ನಿ, ಬನ್ನಿ” ಅಂದು ಚಲುವಿಹುಲ್ಲೆ ಕರುವೆಆಗಿನೆ ಕಂಡುನೆಕ್ಕಂಡೋಗಿಗುಡ್ಡಕದವ ಬಿಚ್ಚಿ ವಳೇಕೋದ್ರೆ ನಿರುಕುಸ್ತಿದ್ದ ಸಿವುನಿ
“ನಮ್ಮಣ್ಣಂಗೆ ಈವೆಣ್ಣು ಲಾಯಕ್ಕಾಗದೆ. ಗುಣದಲ್ಲೂ ವೋಟೆಯಅಪರಂಜಿ ಮುರುಕು... ಅವ್ವಂಗೂ ಇವುಳ ತರೋ ಅಪೇಕ್ಷೆ ಇರೋವಂಗದೆ. ಒಂದು ಜಿನ ದ್ಯಾವಾಜಿಯೂ ನಮ್ಮ ಗುಡ್ಡಿಗೆ ಬಂದು, ನಿಮ್ಮ ಹೈದಂಗೆ ನಮ್ಮ ಹುಚ್ಚುಖೋರಿ ಎಣ್ಣು ಚೆಲುವಿ ತಂದುಕೊಂಡರೆ ಯೆಂಗೆ?” ಅಂದಾಗ, “ಎಣ್ಣೆನೋ ವೈನಾಗದೆ, ಆದ್ರೆ ನಮ್ಮ ಕಯ್ಯಲಿ ಯಾನವ್ವ ಇದ್ದದು?-ಯೆಲ್ಲ ಆ ಬಿಸುಲು ಮಾರಮ್ಮ ತಾಯಿ ಇಚ್ಚೆ ಅಂದು ತನ್ನ ಮನವ ಬಿಚ್ಚಿಕಂಡಿದ್ದು...” – ಇಂಗೆ ಚಿಮಕುಸ್ತ ಇಲ್ದಾಗ, “ತಕ್ಕನ್ನಿ' ಅಂತ ಜ್ವರೀಕೆ ಬಂದ ಚಲುವಿ, ಏಡು ಮೆಣಸಿನ ಕಾಳ ಎಚ್ಚಾಗ ಕ್ವಟ್ಟಿತ್ತು.
ಆದ ತಂದು ಕಸಾಯ ಮಾಡಿ ಅಣ್ಣಂಗೆ ಕುಡಿಸುದ್ದು. ಯೇನೇನ ಮಾಡುವೆ ಜೊರ ಮೂರು ಆಗಲು ಮೂರು ನಾತ್ರೆ ಕುಟ್ಟಿ ಬಜಾಯಿಸ್ತು. ನಾಕನೆ ಜಿನವೇ ಲಕ್ಕ ಎದ್ದು ಕುಂತು,
“ಸಿವುನಿ, ವಸಿ ರಾಗಿ ಅಂಬಲಿ ಕಾಯಿಸೀಯ?” ಅಂದುದ್ದು.<noinclude></noinclude>
r4leyre8ruudbfy04aa0y0aen0af0vm
ಪುಟ:ವೈಶಾಖ.pdf/೧೮೦
104
82109
316492
278707
2026-05-03T13:40:30Z
Shreesha Sharma
7840
/* Validated */
316492
proofread-page
text/x-wiki
<noinclude><pagequality level="4" user="Shreesha Sharma" /></noinclude>
{{rh|center=|left=೧೬೪|right=ವೈಶಾಖ}}
{{gap}}ಅಲ್ಲೀಗಂಟ ಅವನೇ ಯೇನು ಕ್ವಟ್ಟರೂ ಸೆಡೀದು... ಅಣ್ಣ ಚೇತರಿಸಿಕೊಂಡುದಕೆ ಸಂತೋಸ್ಟಾಗಿ ಸಿವುನಿ ಓಡಾಡುತ ಅಂಬಲಿ ಕಾಯ್ದೆ ತಂದು ಕುಡುಸುದ್ಲು..<br/>
{{gap}}ಆದಾದ ಮಾರನೆ ಜಿನಕೆ ಲಕ್ಕ ಕುಡ್ಲ ತಕ್ಕಂಡು ಕೆಲ್ಸಕ್ಕೆ ತಯಾರಾದ ಗಮ, ಸಿವುನಿ ಮುಂಚೋರಿ ಕದಕೆ ಅಡ್ಡಾಗಿ ನಿಂತು,<br/>
{{gap}}“ನೀ ಕಂಡ್ಯಾ ವೋಗಕೂಡದು. ಇನ್ನಂದು ನಾಕು ಜಿನಾನಾರು ಸೊದಾರಿಸ್ಕೊ”- ಆಟ ಮಾಡಿದ್ದು. ಕಂಗೆ ಚಿಕ್ಕೋನಾಗಿದ್ದ, ತಾವಿನಿಂದಲೂವೆ ಇರೋಳೆ ಒಬ್ಬಳು ತಂಗಿ ಅಂತಾನ, ಸಿವುನಿ ಕಂಡರೆ ಪ್ರಾಣ ಬುಡುಸ್ಕತ್ತಿದ್ದ. ಈಗ ಅವಳ ಮಾತ ಯಂಗೆ ತಗುದಾಕೋದು?- ಕುಡ್ಗ ವಕ್ಕಡಿಕೀಟ್ಟು ತೆಪ್ಪುಗೆ ಕುಂತ.<br/>
{{gap}}ಆದ್ರೆ ನಾಕು ಜಿನ ಕೇಮೆ ಇಲ್ಲದೆ ಕುಂತುಗೊಳೋದು ಲಕ್ಕನ ಜಾಯಮಾನಕ್ಕೆ ಬಂದದ್ದಲ್ಲ.... ಮುಂದೇ ಏಡೇ ಜಿನದಲ್ಲಿ ಸಿವುನಿ ಏಟೇಟು ತಡದ್ರೂವೆ,<br/>
{{gap}}“ನೀ ತಡೀಬ್ಯಾಡ, ಬುಡು, ಕುಂತು ಕುಂತು ನನಗೆ ಸಿಬ್ರಿ ಆಗದೆ.” ಯೋಳಿ, ದಾಪುಗಾಲು ಆಕ್ಕ ಅಣ್ಣ ಹೊಂಟಿದ್ದ. ತಲೆಬಾಗ್ಲಲಿ ನ್ಯಾಡ ನಿಂತ ಸಿವುನಿ.
{{gap}}“ಗಂಡಸು ಇಂಗಲ್ವ ಇರಬೇಕು!” ಅಂತ ಅಣ್ಣನ ಬಗ್ಗೆ ಹೆಮ್ಮೆಪಡ್ಡ ಇರೋನೂವೆ, ಅವಳ ಏಡು ಎದೆ ವಳುಗಡೇಲೂ ಲೊಳನೆ ಹಾಲು ತುಂಬಿಕೊಂಡ ಹಂಗಾಯ್ತು!<br/>
{{gap}}ನಾಕು ವಾರ ಎಪ್ಪತ್ತು ಹಿಂಗೇ ಕಳಿತು. ಬುಧವಾರ ಕಳೆದಮ್ಯಾಲೆ ಬೇಸ್ತಾವಾರ ಬರಬೇಕಲ್ಲ...ಹಂಗೆ, ಇನ್ನೊಂದು ಬೇಸ್ತವಾರ ಬಂದಿತ್ತು.
{{gap}}“ಈ ಜಿನ ನಾನೇ ಸಂತೆಗೆ ವೋಯ್ತಿನಿ ಕನವ್ವ, ವಸಿ ನೀನೆ ಮೊಗ ಸ್ವಾಡುಕೊ.” -ಸಿವುನಿ ಆಂದಾಗ, ಕಲ್ಯಾಣಿ ಬಾಣಂತಿಯಾಗಿ ಗುಡ್ಡಲ್ಲಿ ಒಬ್ಬಳೆ ಕುಂತು ಎಣ್ಣೆಂಗೂ ಬ್ಯಾಸರ ಆಗಿರಬೈದು, ಅಂದುಕತ
{{gap}}“ಅದಕೇನ, ವೋಗಿ ಬಾ, ನಾನು ಸ್ವಾಡುಕತ್ತೀನಿ ಮೊಗಾವ, ರುಕ್ಕಿಣದ್ವಾರು ಎಂಗಿದ್ರೂವೆ ಲಕ್ಕನ ಕಯ್ಲಿ ಯಾವತ್ತಾರು ಕಳುಸ್ತಾರಲ್ಲಗೆ ಇವೊತ್ತೂವೆ ಹಸೀನ ಹಾಲೇ ಕಳುಸಿ, ಮೊಗೀಗೆ ಅಂತಲೇಯ!- ಅತ್ತರೆ, ವಳೇಲಿ ಅದ್ರೆ ಉಯ್ತಿನಿ, ಮನಗುಸ್ತೀನಿ. ಆದ್ರೂವೆ, ನೀ ಮೋಗಕ್ಕೆ ಮುಂಚೆ ಸಮದಾಗಿ ಮೊಲೆ ಉಣ್ಣಿಸಿ ವೋಗು” ಎಂದಿದ್ದು.
{{gap}}ಅವ್ವನ ಮಾತನಿ ಪರ್ಕಾರವೇ ಮನೆಗೆಲಸ ಮುಗಿಸಿ, ಮೊಗೀಗೆ ಮೊಲೆ ಉಣ್ಣಿಸಿ, ಸಿವುನಿ ದರುಮನಳ್ಳಿ ಬುಡುವಾಗ ಆಳುದ್ದ ವೊತ್ತಾಗಿತ್ತು. ಇವಳ ಜೊತೆ<noinclude></noinclude>
ls5kxsvkxavcq7618s6nj3o5ebbybjl
ಪುಟ:ವೈಶಾಖ.pdf/೧೮೧
104
82110
316789
278708
2026-05-04T09:22:51Z
Ashwini Rai K
8475
/* Validated */
316789
proofread-page
text/x-wiki
<noinclude><pagequality level="4" user="Ashwini Rai K" /></noinclude>
{{rh|center=|left=ಸಮಗ್ರ ಕಾದಂಬರಿಗಳು|right=೧೬೫}}
ಹುಣಸೂರವರೆಗೆ ನಡದೋರು, ದ್ವಾವಾನಿ, ಕುಂಡಿಮಾದಿ, ಕುರುಬರ ಸಣ್ಣ, ಕುಂಬಾರರ ಲಕು, ಅವಳ ಗಂಡ ಮಾದಸೆಟ್ಟಿ, ಮತ್ತೆ ಸಕುನಿ ಕೊಪ್ಪಲ ಗೋಸು ಸಾಬರ ಮಗ ಬುಡನ್.<br/>
{{gap}}ದ್ಯಾವಾಜಿ ವಂದಿಗಿದ್ದರೆ ಹೊತ್ತೋಗೋದು ತಿಳಿಯಕ್ಕಿಲ್ಲ... ಯಾರನಾದರ ತೀಟೆ ಮಾಡಬೇಕು. ಜ್ವತೇಲಿದ್ದೋರ ನಗಾಡಿಸಬೇಕು. ತಾನೂವೆ ನಗಾಡಬೇಕು. ಸಸನೆ ಹಾದೀಲಿ ವೋಗೋದು ಅವಳ ಜಾಯಮಾನಕ್ಕೆ ಬಂದಿರನಿಲ್ಲ.<br/>
{{gap}}“ಯಾನು ಕುಂಬಾರಸೆಟ್ಟರೆ, ನಿಮ್ಮ ಲಗ್ಗಾಗಿ ಏಟು ವರ್ಸ್ ಆಯ್ತು?” -ಮಾದಸೆಟ್ಟಿಯ ಕೆಣಕಿದ್ದು.
“ಯಾಕ ದ್ಯಾವಾಜಿ, ಎಂಟೊಂಬತ್ತು ವರ್ಸ ಆಗಿರಬೈದು”- ನಾಚುತ ಯೋಳಿದ ಮಾದ- ಸೆಟ್ಟಿ,<br/>
{{gap}}“ಚ್, ಚ್, ಚ್!- ಎಂಟೊಂಬತ್ತು ವರ್ಸ... ಈಟು ವರುಸಕೆ ನಾಕೈದು ಮಕ್ಕಳಾರು ಆಗರಬೇಕು... ವೋಗ್ಲಿ ಬೊಡ್ಡಮಗಂದು ಒಂದಾದರೂ ಬ್ಯಾಡದ?” ಅಂದಾಗ, ಮಾದಸೆಟ್ಟ ನಾಚಿ ತಲೆತಗ್ಗಿಸ್ತ, ಸಿವುನಿ ಕ್ವಾಡ್ತಾನೆ ಇದ್ಲು. ಅವನ ಎಡತಿ ಮೊದಲೇ ಕೆಂಪಿನಿ ಎಣ್ಣು. ಈ ಮಾತ ಕೇಳಿದ್ದಂಗೆ ಮೊಖದ ತುಂಬ ಕುಂಕುಮ ಎರುಚಿದಂಗಾಯ್ತು... ಉದ್ದಕ್ಕೂ ಇಂಗೇ ಏನಾರ ತೀಟೆ ಮಾಡ್ತ, ಪರಸಂಗ ಯೋಳ, ಲಲ್ಲೆ ವೊಡೀತ, ಹುಣಸೂರು ಹತ್ರ ಆಯ್ತಿದ್ದಂಗೆ, ಸಿವುನಿಯ ವಕ್ಕಡೆ ಕರದು, ಯಾರಿಗೂ ಕೇಳಿಸದಂತೆ ಕಿವೀಲಿ,<br/>
{{gap}}“ಸಿವುನಿ, ನೀನು ನಮ್ಮೂರಿಗೆ ಬಂದು ಏಟು ಕಾಲ ಆಯ್ತು?”ಪಿಸುಗುಟ್ಟಿದ್ದು.<br/>
“ಯಾಕತ್ತೆ?- ಏಡೋ ಮೂರೋ ತಿಂಗೈ ಆಗಿರಬೈದು.”
“ಅವ್ವ, ಏಟೊಂದ ಜಿನ ಆಗೋಯ್ತು... ನಾ ಒಂದು ಮಾತ ಕೇಳುದ್ರೆ ಕ್ವಾಪ ಮಾಕ್ಕಂಡೀಯ?”<br/>
{{gap}}“ಅದೇನು ಕ್ಯಾಳತ್ತೆ?”<br/>
{{gap}}“ಅಲ್ಲ ಕನೆ ಸಿವುನಿ, ನಿಂಗಿನ್ನೂ ಚಿಕ್ಕ ಪ್ರಾಯ. ನೆಲ ಗುದ್ದಿದ್ರೆ ನೀರು ಕಡುಸೊ ವಯಸ್, ಗಂಡ ಇಲ್ಲೆ ಈಟು ಕಾಲ ಒಬ್ಬಳೇಯ ಎಂಗೆ ಸೈಸಿಕಂಡಿದ್ದೀ?”ಕ್ಯಾತೆ ಮಾಡದಾಗ, ಸಿವುನಿಗೆ ಸಾಜವಾಗೂ ಮೆಯ್ಕೆಲ್ಲ ಉರೀತು.<br/>
{{gap}}“ಆಲಾದೋಳೆ...” ಅಂದು, ಇನ್ನೂ ಏನೇನೋ ಮಸ್ತಾಗಿ ಬಯ್ಯಬೇಕು ಅನ್ನೂ ವಸ್ಟರಲ್ಲಿ ದ್ಯಾವಾಜಿ ಕುಂಡಿಮಾದಿ ತಕ್ಕೆ ಜಾರಿ, “ನಿನ್ನ ಎಣ್ಣಿಗೆ ಗಂಡೆಲಿ ಕ್ವಾಡಿದ್ದೀ, ಮಾದಿ?- ನಮ್ಮ ಕಲ್ಯಾಣಿ ಮಗ ಲಕ್ಕ ಆದ್ರೆ ಯೆಂಗೆ?... ಜೋಡಿ<noinclude></noinclude>
3wc465wvy71ayuwncybdt5w52zlhkv6
ಪುಟ:ವೈಶಾಖ.pdf/೧೮೨
104
82111
316790
278709
2026-05-04T09:23:09Z
Ashwini Rai K
8475
/* Validated */
316790
proofread-page
text/x-wiki
<noinclude><pagequality level="4" user="Ashwini Rai K" /></noinclude>
{{rh|center=|left=೧೬೬|right=ವೈಶಾಖ}}
ವೈನಾಗಕ್ಕಿಲ್ವ?” ಅಂತ ತೀವಿತಿದ್ದು.<br/>
{{gap}}ಹಿಂಗೇ ಹಾದಿ ಸಾಗಿತು. ಏಳು ಮೈಲಿ ನಡದು, ಅವರು ಹುಣಸೂರಿನ ಸೇತುವೆ ಸಮೀಪ ಕೆಳೀಕಿಳಿದು, ಲಕ್ಷ್ಮಣತೀರ್ಥ ಹೊಳೇಲಿ ಬೆವತಿದ್ದ ಮುಖ ತೊಳುದು, ನೀರು ಕುಡಿದು, ದಾವಾರಿಸಿಕೊಂಡು ಮ್ಯಾಕ್ಕೆ ಬಂದು, ಸೇತುವೆ ದಾಟಿ, ಅವರೆಲ್ಲರೂವೆ ಸಂತೆಬಯಲು ಮುಟ್ಟಿದರು. ಇವರಿಗೆ ಮುಂಚೆಯೇಯ ಹೊಂಟಿದ್ದ ನಿಂಗಯ್ಯ, ಲಕ್ಕ ಇಬ್ಬರೂವೆ- ಸಿವುನಿಗೆ “ನೀ ಬ್ಯಾಗ ಬಂದರೆ ಸಂತೆ ಮಾಳದಲ್ಲೆ ಇದ್ದೀವಿ, ನೀ ಬರಾದ ಒಂದು ಪಕ್ಷ ವೊತ್ತಾದರೆ, ರಂಗಪ್ಪಸೆಟ್ಟರ ಅಂಗಡೀಲಿ ಇದ್ದೀವಿ: ನೀ ಅಲ್ಲಿಗೇ ಬಂದುಬುಡು” ಅಂದಿದ್ದರು. ತನ್ನ ಜೊತೆಗೆ ಬಂದೋರ ಸಂತೆಮಾದಳದಲ್ಲೆ ಬುಟ್ಟು ರಂಗಪ್ಪಸೆಟ್ಟರ ಅಂಗಡಿಗೆ ಸಿವುನಿ ಬಂದಿದ್ದಳು. ಆಗಲೆ ಅವರಿಬ್ಬರೂವೆ ಒಂದೊಂದು ಅಂಗಿ, ಚಡ್ಡಿ ಬಟ್ಟೆ ಹರಿಸಿ ಹೊಲಿಯಕ್ಕಾಕಿದ್ರು, ಏಡು ಒಂಟಿ ಪಂಚೆ ತೆಗುದಿದ್ದರು. ಸಿವುನಿ ಬಂದದ್ದು ಕಂಡು,<br/>
{{gap}}“ಬಾಣೆ ಸಿವುನಿ, ಬಾ, ನಾವೂನೆ ವರುಸಾಗೊವೋಟು ಬಟ್ಯ ವೊಲಿಯಕ್ಕಾಕಿವಿ... ಅವಗೂ ನಿಂಗೂಗು ಒಂದೊಂದು ಸ್ಯಾಲೆ ಕುಪ್ಪುಸದ ಅರಿವೆ ತಗೀಬ್ಯಾಡದ?... ಅವಳ ಬಾ ಅಂದರೆ ಬರದೇ ವೋದ್ಲು. ಬಟ್ಟೆ ಇಚಾರ ನಂಗೇನು ತಿಳುದಾತು?... ನಿಮ್ಮ ಮಗಳೆ ಕರಕಂಡೋಗಿ ಅಂದ್ಲು... ಬಾ ಬಾ ಇಲ್ನೋಡು, ಸ್ಯಾಲೆಗಳು ಗುಡ್ಡೆ ಆಕವೆ. ನಿಂಗ್ಯಾವುದು ವಸಂದಾಯ್ತುದೆ, ಯೋಳು” ಅಂದೋನು ನಿಂಗಯ್ಯ,<br/>
{{gap}}“ನಂಗೆ ಪ್ಯಾಲೆ ಗೀಲೆ ಯಾವೂ ಬ್ಯಾಡ, ಅವ್ವಂಗೆ ಬೇಕಾದ್ರೆ ಕ್ವಾಡ್ತೀನಿ” ಅಂದೋಳು, “ಎಲ್ಲಾರು ಉಂಟ?- ನೀ ಒಂದು ಸ್ಯಾಲ್ಯ ತಕ್ಕನೇಬೇಕು” ಅಂತ ನಿಂಗಯ್ಯ ಲಕ್ಕ ಇಬ್ಬರೂ ಅಂದುದ ಕೇಳದೆ ಇದ್ದೋಳಂಗೆ ವಳೀಕೆ ನಡದು, “ತೋರಿ ಸೆಟ್ಟರೆ” ಅಂದು, ಸೆಟ್ಟರು ಬಿಳಿಬಟ್ಟೆಯ ನೆಲದ ಮ್ಯಾಲೆ ಹಾಸಿ, ಅದರ ಮ್ಯಾಲೆ ಹರಡಿದ ಸ್ವಾಲೆಗಳ ತಗತಗದು ಪರೀಕ್ಷೆ ಮಾಡಿ, ಕಡೀಕೆ-ಹಳದಿ, ಒಡಲು, ನೀಲಿ ಅಂಚಿನ ಸ್ಯಾಲೆ ಒಂದ ಕಯ್ಯಗೆತ್ತಿಕೊಂಡು, “ಈ ಸ್ಯಾಲೆಗೆ ಏಟ ಸೆಟ್ಟರೆ?"- ಅಂತ ಸಿವುನಿ ಅದರ ಖರೀದಿ ಕೇಳಿದಳು. ರಂಗಪ್ಪ ಸೆಟ್ಟರು.<br/>
“ಹತ್ತು ರೂಪಾಯಿ” ಅಂದರು.<br/> “ಪೂರ ಜಾಸ್ತಿ. ಸೆಟ್ಟರ್ ಅಪ್ಪಾರ ಆಸೆ” ಅಂದೇಬುಟ್ಟಳು ಸಿವುನಿ.
ಅರ್ಧ ಮುಕ್ಕಾಲು ಗಂಟೆ ಆ ಸೀರೆ ಇಚಾರ ರಂಗಪ್ಪಸೆಟ್ಟರೂ ಸಿವುನಿಗೂ ಜಗ್ಗಾಟ ನಡುದು, ಕೊನೆ ರಂಗಪ್ಪಸೆಟ್ಟರು ಅದರ ಬೆಲೇಲಿ ಎಂಟಾಣೆ ತಗ್ಗುಸಿ,<noinclude></noinclude>
ejjpn1pmy2f8tl7g3ljegh88fpvi3iv
ಪುಟ:ವೈಶಾಖ.pdf/೧೮೩
104
82112
316791
278724
2026-05-04T09:23:27Z
Ashwini Rai K
8475
/* Validated */
316791
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಸಮಗ್ರ ಕಾದಂಬರಿಗಳು|right=೧೬೭}}
{{gap}}“ನಿಂಗಯ್ಯ, ಇನ್ನುಮ್ಯಾಲೆ ಜವುಳಿ ಕರೀದಿ ಮಾಡಕ್ಕೆ ನಿನ್ನ ಈ ಮಗಳನ್ನ ಮಾತ್ರ ಕರಕೊಂಡು ಬರಬೇಡ. ಏನಿದ್ರೂವೆ ನಿನ್ನ ಹೆಂಡತಿ ಕಲ್ಯಾಣೀನೆ ಕರಕೊಂಡು ಬಾ, ಈ ನಿನ್ನ ಮಗಳು ಹೇಳೊ ಬೆಲೆಗೆ ನಾನು ಜವುಳಿ ಕೊಡ್ತಾ ಹೋದರೆ, ನನ್ನ ಅಂಗಡಿ ಬಲು ಬೇಗ ದಿವಾಳಿ ಎದ್ದು, ನಾನು ಪಾಪರ್ ಚೀಟಿ ತಕ್ಕೊಬೇಕಾಗ್ತದೆ” ಅನ್ನುತ್ತ, ಆ ಸೀರೆಗೆ ಲಜತ್ತಾದ ಒಂದು ರವಿಕೆ ಬಟ್ಟೇನೂ ತೋರಿ “ಮುಕ್ಕಾಲು ಗಜ ಸಾಕಾಗ್ತದೆ ಅಲ್ಲವಾ?” ಎಂದು ಕೇಳಿ, ಅದರ ಅಳತೆಗೆ ಚೀಟಿಬಟ್ಟೆ ಕತ್ತರಿಸ್ತಾ ಇರುವಾಗ
<br/>
{{gap}}“ಇನ್ನೂ ಒಂದು ಸೀರೆ ತೆಗೀರಿ, ಶೆಟ್ಟರೆ...” ಅಂತ ಯಾರೊ ಅನ್ನುತ್ತಲೂ ಸಿವುನಿ ಗಕ್ಕನೆ ಹೊಳ್ಳಿ ಕ್ವಾಡಿದಳು... ನಮ್ಮ ದರುಮನಹಳ್ಳಿ ಕೇಸವಯ್ಯಾರೇಯ! ಬ್ಯಾರೆ ಯಾರೂ ಅಲ್ಲ!<br/>
{{gap}}“ತಗೋಮ್ಮ ಸಿವುನಿ-ನೀನು ಒಂದು ಸೀರೆ ತಗೊ” ಕಣ್ಣಿನಲ್ಲೆ ನಗುತ್ತ ಪುಸಲಾಯಿಸಿದ ಕೇಶವಯ್ಯ.<br/>
{{gap}}ಸಿವಪೂಜೇಲಿ ಕರಡಿ ಬುಟ್ಟಂಗೆ ಈ ವಯ್ಯ ಯಾತಾನ್ನಿಂದ ಬಂದ?ಅಂತ ಬೇಸರಿಸಿ,<br/>
{{gap}}“ಈ ಬಟ್ಟ ತಕ್ಕತ್ತಿರಾನು ನಮ್ಮಯ್ಯ. ಇದರಾಗೆ ನಿಮ್ಮ ದ್ಯಾನ ಸೋಮಿ ಅಗ್ಗರ್ಣೆ?"- ಖಡಕ್ಕಾಗೆ ಕೇಳಿದಳು. ಸಿವುನಿ.<br/>
“ಹಯ್ಯೋ, ಅಂಗನ್ನಬ್ಯಾಡ ಕನೆ, ಸಿವುನಿ. ನಾವೀಗ ತಕ್ಕರೆ ಬಟ್ಟೆ ಯೆಲ್ಲಾವು ಕಡ”- ನಿಂಗಯ್ಯ ಇವರಣೆಯಿತ್ತ.
“ಸರಿಸರಿ. ಕಡ ಅಂದಮ್ಯಾಲೆ. ಈ ಅಯ್ಯನೋರದು ಯಾನ ಇದರಾಗೆ ಪಾರಪತ್ಯ?”<br/>
ನಿಂಗಯ್ಯ ಹಣೆಹಣೆ ಚೆಚ್ಚಿಕೊತ್ತ ಯೋಳಿದ:<br/>
{{gap}}“ಹಯ್ಯೋ, ನಮ್ಮ ತೀರು ಗ್ವಾಡಿ ಯಾರವ್ವ ಜವುಳಿ ಕಡಾ ಕ್ವಡಾರು?... ಯಾನೊ ಈ ಪುಣಾತ್ಮರು ನಮ್ಮ ಪಾಗಿ ವಪ್ಪಿಗಳಾ ವೊತ್ಸೆ, ಸೆಟ್ಟರೂ ನಮಗೆ ಕಡ ಕೂಡಕ್ಕೊಪ್ಪುದ್ರು... ಆ ಕಿಸ್ಸ ಸಾಸ್ತಿಗಳು ಊರನಾಗಿಲ್ಲ. ಸಿಮೊಗ್ಗಕ್ಕೊಗವಂತೆ. ಬರಾದು ಇನ್ನೂ ವಸಿ ಜಿನ ಆಗಬೈದು ಅಂದರು, ರುಕ್ಕಿಣಮ್ಮ- ಅವರಿದ್ದಲ್ಯಾನೊ ಪುಣಾತ್ಮ ನಮ್ಮ ಹಳತಕೆ ಮಾತ್ರ ಯಾವತ್ತೂವೆ ಇಲ್ಲ ಅಂದಿಲ್ಲ.... ಈಗ ಆ ಗಂಗಪ್ಪಾರ ನಂಬಿ ಇಲ್ಲೀಗಂಟ ಬರಬೇಕಾಯ್ತು. ಆ ರಂಗಪ್ಪಸೆಟ್ಟರ ಅಂಗಡಿ ತಾವಿರಿ. ನಾ ಬಂದು ಕಡ ಕಡುಸ್ತೀನಿ ಅಂದೋರು ಈ ತಾವಿಗಂಟ ಬರನೇ ಇಲ್ಲ! ನಂಗೂ ಕಾದೂ ಕಾದೂ ರೋಸೋಯ್ತು. ಲಕ್ಕನೂವೆ, ನಡಿಯಯ್ಯ
ಕt<noinclude></noinclude>
599wwgnc5frig8tnufw5vftcesfdsk6
ಪುಟ:ವೈಶಾಖ.pdf/೧೮೪
104
82113
316792
314979
2026-05-04T09:23:42Z
Ashwini Rai K
8475
/* Validated */
316792
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=೧೬೮|right=ವೈಶಾಖ}}
ವೋಗಾನೆ, ಬಟ್ಟಲ್ಲದಿದ್ರೆ ಸಮಾಸು-ಅಂದ. ಇನ್ನೇನ ಮಾಡಾದು ಅಂತ ನಾವೇಡಾಳೂವೆ ಅಂಗಡಿ ಮುಂಚೂರಿ ಹಬ್ಬುಗೆಗಳ ಇಳೀತಿರೋ ಸಮಯಕೆ ಸರ್ಯಾಗಿ ನಮ್ಮಿ ಕೇಸವಯ್ಯಾ ಕಾಣಿಸುದ್ದು, ನಮ್ಮ ಕಂಡು-ಯೇನಲ್ಲಾ ಇಲ್ಲಿ ಅಂದ್ರು, ನಾನೂವೆ ಇಸ್ಕಾನೆಲ್ಲ ಯೋಳಬೇಕಾಯ್ತು. ಯೆಲ್ಲಾನು ಕ್ಯಾಳಿ-ಈಟೇಯ? ಇದ್ಯಾವ ಬೋ ಗನಂದಾರಿ ಇಸ್ಕಾಂತ ಚಿಂತೆ ಮಾಡ್ತೀರೊ? -ಬನ್ನಿ ಬನ್ನಿ, ನಾನು ಕಡ ಕ್ವಡುಸ್ತೀನಿ. ನೀವಿಬ್ರೂವೆ ಆಗಾಗ ಬಂದು ನಮ್ಮ ತ್ವಾಟದಲ್ಲಿ ಕಂಬಳ ಮಾಡಿ ತೀರಿಸುದೆ ಆಯ್ತು- ಅಂತ, ಅಂಗಡಿ ವಳಕ್ಕೆ ಕರಕಂಬ೦ದು ಕಡುಸ್ತಾ ಆವರೆ!.... ನೀ ಬ್ಯಾಡ ಅನ್ನಬ್ಯಾಡ, ಸುಮ್ಮೆ ನಿಂಗೆ ಪಸಂದು ಅನ್ನುಸ್ಥ ಒಂದು ಸ್ಯಾಲ್ಯ ತಕ್ಕಂಡು, ಜತೆ ಒಂದು ರವಿಕೆ ಚೀಟಿನೂವೆ ಆರಿಸು.”<br/>
{{gap}}ಸಿವುನಿ “ನಂಗೆ ಯಾನೂ ಬ್ಯಾಡಾಕೆ ಬ್ಯಾಡ” ಅಂದು, ರಂಗಪ್ಪಶೆಟ್ಟರ ಅಂಗಡಿ ಆಚೆಗೆ ಹೊಂಟೇ ವೋದಳು. ಅವಳು ಅಂಗಡಿ ಮೆಟ್ಟಿಲ ಇಳಿಯುವಾಗ ತೂಗಾಡುವ ಅವಳ ಹಿಂಭಾಗದ ಚೆಂದವನ್ನು ನಿಟ್ಟಿಸುತ್ತಿದ್ದ ಕೇಶವಯ್ಯ,<br/>
{{gap}}“ಭೇಷ್, ಭೇಷ್. ನಿನ್ನ ಮಗಳ ನಡತೆ ನನಗೆ ತುಂಬಾ ಮೆಚ್ಚಿಕೆಯಾಯ್ತು, ಕಣೋ, ನಿಂಗ... ಅಬ್ಬ, ಎಂಥ ನಿಷ್ಟುರಗಾತಿ. ಹೆಣ್ಣು ಎಂದರೆ ಹೀಗಿರಬೇಕು?... ಬೇಡ, ಬೇಡ. ಅವಳಿಗೆ ಇಷ್ಟವಿಲ್ಲದ್ದನ್ನ ತೆಗೊ ಎಂದು ಜುಲುಮೆ ಮಾಡೋದು ನ್ಯಾಯವಲ್ಲ.... ಸಂಸಾರವಂದಗಿತ್ತಿ ಎಂದರೆ ಹೀಗಿರಬೇಕು, ನೋಡು, ನನ್ನ ಹೆಂಡತಿ ಹಾಗೆ ದಂಧರಾಳಿ ಅಲ್ಲ, ಇವಳು!... ಇಂಥ ಮಗಳ ಪಡೆಯೋಕೆ ನೀನು ಬಲು ಪುಣ್ಯ ಮಾಡಿದ್ದೆ ಕಣೋ, ನಿಂಗ!”- ಎಂದು ನುಡಿಯುವಾಗ ಅವನ ಒಂದೊಂದು ಮಾತು ಒಂದೊಂದು ಮುತ್ತಿನಂತೆ ನುಣುಪಾಗಿ ಹೊರಬಿದ್ದಿತ್ತು.<br/>
{{gap}}ನಿಂಗಯ್ಯನೂ ಕೇಶವಯ್ಯನ ಅಭಿಪ್ರಾಯವನ್ನು ಒಪ್ಪಿ ಕತ್ತು ಕುಣಿಸಿದ.
{{gap}}“ರವಿಕೆಯನ್ನು ಹೊಳಿಸಬೇಕಾದರೆ, ನಿನ್ನ ಹೆಂಡತೀದೊಂದು ಹಳೆ ರವಿಕೆ ಅಳತೆಗೆ ಬೇಕಲ್ಲಪ್ಪ?” - ಕಟ್ಟಿದ ಜವಳಿಯನ್ನು ನಿಂಗಯ್ಯನ ಕೈಗಿಡುತ್ತ ರಂಗಪ್ಪಶೆಟ್ಟರು ಕೇಳಿದರು. ಅದಕ್ಕೇ,<br/>
{{gap}}“ನಾಳೀಕೆ ನಮ್ಮೋರು ಯಾರಾರ ಹುಣಸೂರೆ ಬರೋರ ಕಯ್ಲಿ ಕಟ್ಟು ಕಳುಸ್ತೀನಿ” ಎಂದು, ನಿಂಗಯ್ಯ ಜವಳಿ ಗಂಟನ್ನು ಕಂದುಳಲ್ಲಿ ಇರುಕಿ ಮೆಟ್ಟಿಲುಗಳನ್ನಿಳಿದು ಲಕ್ಕ ಅವನನ್ನು ಹಿಂಬಾಲಿಸಿದ.
ನಿಂಗಯ್ಯ, ಲಕ್ಕ ಇಬ್ಬರೂ ಸಿವುನಿಯನ್ನು ಕೂಡಿಕೊಳ್ಳತ್ತಲೂ, ನಿಂಗಯ್ಯ “ಹುಣಸೂರಲ್ಲಿ ಇನ್ನೇನಾರ ಕೇಮೆ ಇದ್ದಾತ?- ಊಗ್ಗೆ ಮೊಂಡಾದು<noinclude></noinclude>
ct6cnmgpaoxwftqjrqhsccyiu9k7zgp
ಪುಟ:ವೈಶಾಖ.pdf/೧೮೫
104
82114
316793
278726
2026-05-04T09:24:11Z
Ashwini Rai K
8475
/* Validated */
316793
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಸಮಗ್ರ ಕಾದಂಬರಿಗಳು|right=೧೬೯}}
ತಾನೆ?” -ಎಂದು ಲೋಕಾಭಿರಾಮವಾಗಿ ಕೇಳಿದ.<br/>
{{gap}}“ಊ. ಇಲ್ಲಿ ಇನ್ನೇನ ಜಂಬರ?- ನಡೀರಿ. ಅಲ್ಲೊಂದು ಇಲ್ಲೊಂದು ಮ್ಯಾಡ ಗುರಕಾಯಿಸ್ತಾ ಅದೆ. ಜಟಜಟ್ಟೆ ಊರು ಸೇರುಕಳಾವ” ಎಂದವನು ಲಕ್ಯ.<br/>
{{gap}}“ಸಂತೇಲಿ ತುಸ ಕೆಲ್ಸ ಇತ್ತು...” ಸಿವುನಿ ರಾಗ ಎಳೆದಳು.<br/>
{{gap}}“ಸಂತೇಲಿ ಇನ್ಯವ ಜಂಬರ ಇದ್ದು?” ಸುಳಿವು ತಿಳಿಯದೆ ನಿಂಗಯ್ಯ ಕೇಳಿದ. ಅದುಕ್ಕುತ್ತರವಾಗಿ ಸಿವುನಿ.<br/>
{{gap}}“ಯಾನಿಲ್ಲ. ಒಂದು ಕುರಿ ಕಳ್ಳನಾಂತ...” ಎಂದಳು. <br/>ನಿಂಗಯ್ಯನಿಗೆ ಮೈಯೆಲ್ಲ ಕಿವಿಯಾಯಿತು. “ಸಾಜವಾಗೂವೆ”? ಅದುಕೆ ದುಡ್ಡು?”
“ನಂಜನಗೂಡ್ನಿಂದ ಬಾಗ ವಸಿ ದುಡ್ಡ ತಂದಿದ್ದೆ. ಅಲ್ಲಿ ನಾನು ಕಂಬಳದಲ್ಲಿ ಮಿಗುಸ್ಟ ದುಡ್ಡು, ಅದ್ರೆ ಬಳಸಿ ತಕ್ಕಳಾದು” ಎಂದು ಬಿರಬಿರನ ಹೆಜ್ಜೆ ಹಾಕಿದಳು.
ಸ್ವಲ್ಪ ಹಿಂದಕ್ಕಾದ ನಿಂಗಯ್ಯ, ಲಕ್ಕನೊಡನೆ, - “ಕಾಲದಿಂದ್ಲವೆ ನಮ್ಮಣ್ಣಿನ ಸೊಬಾವಾನೆ ಇಂಗೆ, ಕಷ್ಟದಲ್ಲಿ ರೋರೆ ಸಾಯ ಮಾಡಾದು. ತಾನು ಆಸಿಗಂಡಿದ್ರೂವೆ ಇನ್ನೊಬ್ಬರೆ ಮಾಡಿದ್ದೆಲ್ಲ ಇಕ್ಕಿ ಸಮತರಿಸಾದು?... ಚಿನ್ನದಂತಾ ಗುಣ. ಆ ದ್ಯಾವರು ಕಡೆಗಾಲಲ್ಲಿ ಅಯ್ಯನ ಸುಸೂಸೆ ಮಾಡೀಂತ ಕರಕಂಬಂದನೊ ಯಾನೊ ಇಲ್ಲೀಗಿವಳ!” ಹೇಳುತ್ತ ಹೇಳುತ್ತ ಹಿಗ್ಗಿದ.<br/>
{{gap}}ಸಂತೆಮಾಳದಲ್ಲಿ ಅಳೆದೂ ಸುರಿದೂ ಅತ್ತ ಹೋಗಿ ಇತ್ತಬಂದು, ಮಾರುವವನ ಸಂಗಡ ಚೌಕಾಶಿ ಮಾಡಿ, ಒಂದು ಕುರಿಮರಿಯನ್ನು ಎಂಟು ರೂಪಾಯಿಗೆ ಕೆಡವಿಕೊಳ್ಳುವುದರ ಒಳಗೆ ಪಡುವಳಿಂದ ಕತ್ತಲು ತನ್ನ ಸೆರಗನ್ನು ಹೊದ್ದಿಸುತ್ತ ಬರತ್ತಿತ್ತು. ಕೊಂಡು ಮುಗಿದ ಬಳಿಕವೂ ಬೆಲೆ ಜಾಸ್ತಿಯಾಯ್ಕೆ. ಹೆಂಗೆ, ಎಂದು ಸಂತೆಗೆ ಬಂದಿದ್ದ ಪರಿಚಯಸ್ಥರನ್ನೆಲ್ಲ ಕೇಳಿ, ಅವರು “ಪರವಿಲ್ಲ, ಕಟ್ಟ ದುಡ್ಡಿಗೇನೂ ಮ್ಯಾಸ ಇಲ್ಲ. ಅಂಗೆ ನೋಡುದ್ರೆ, ಇನ್ನೂ ಏಡು ರೂಪಾಯಿ ಎಚ್ಚಾಗೆ ತಡೀತದೆ ಮುಕ್ಕ” ಎಂದನಂತರವೇ ಸಿವುನಿಗೆ ಸಮಾಧಾನ!<br/>
{{gap}}ಇವರ ವ್ಯಾಪಾರ ಮುಗಿದು ಸೇತುವೆ ದಾಟಿ ಬರುವ ವೇಳೆಗೆ ಅವರ ದರುಮನಳ್ಳಿ ಗಾಡಿಗಳೆಲ್ಲ ಆಗಲೆ ಹೊರಟುಹೋಗಿದ್ದವು. ದೊಪ್ಪನೆ ಗಾಡಿಯೊಂದೆ ಇನ್ನೂ ಹೊರಡದೆ ಉಳಿದಿತ್ತು. ದೊಳ್ಯಪ್ಪನ ಹೆಂಡತಿ ಸಂಪಿಗೆಮ್ಮ ಆನಂತಶೆಟ್ಟರ<noinclude></noinclude>
jj4z2q4af2jbuke8g6k8f28thwznfjb
ಪುಟ:ವೈಶಾಖ.pdf/೨೦೦
104
82129
316490
297995
2026-05-03T13:37:39Z
Shreesha Sharma
7840
/* Validated */
316490
proofread-page
text/x-wiki
<noinclude><pagequality level="4" user="Shreesha Sharma" /></noinclude>________________
{{Left|೧೮೪}}
{{Right|ವೈಶಾಖ}}
ತರ ಕುಂತುಬುಟ್ಟ, ಏಟೋ ವೊತ್ತಾದಮ್ಯಾಲೆ ನಮ್ಮಯ್ಯನ ಕುಟ್ಟೆ
{{gap}}“ಕ್ವಾಡಿದೇನ್ದ ನಿಂಗ, ನನ್ನ ಹೈದ ಮಾಡ್ಡ ಆಗರಣಾವ?” ಅಂದು, ವಸಿ ವೊತ್ತು ಕಣ್ಣು ಮುಚ್ಚಂಡಿದ್ದು ಆಮ್ಯಾಕೆ ನಿದಾನ್ವಾಗಿ ಕಣ್ಣ ತೆರೆದು” ಇನ್ನು ನಂಗೂ ಆವಂಗೂ ಬುಟ್ಟೋಯ್ತು... ಈಗೇನ ಸೂರೋದು - ಅವನು ನಂಗೇ ಉಟ್ಟನೇ ಇಲ್ಲ ಅಂತಾವ ಎದೆಮ್ಯಾಲೆ ಕಲ್ಲು ಆಕ್ಕಂಡು ತೆಪ್ಪಗಿದ್ದು ಬುಡ್ತೀನಿ” ಅಂದ..ಸ
{{gap}}ಆಮ್ಯಾಕೆ ಯಾವಾಗಲಾರುವೆ, ಗಾಳಿ ಬೀಸಿದಂಗೆ ನಮ್ಮ ಪುಟ್ಟಾರಿ ಸಂತೇಲಿ ನಂಗೆ ಸಿಕ್ಕೋನು. ವಸಿ ಜಿನ, ಆ ಎಣ್ಣಿನ ಸಂಗದಲ್ಲಿ ಅವು ಕುಸಾಮತ್ನಲ್ಲೆ ಇರೂವಂಗೆ ಕಂಡ್ರು. ಆದ್ರೆ ಇನ್ನೊಂದು ತಿಂಗಳೊಪ್ಪತ್ನಲ್ಲಿ ಆ ಕುಸಾಮತ್ತೆ ಮಂಗರ ಮಾಯ ಆಯ್ತು... ಒಂದು ಬೆಸ್ತವಾರ ಹುಣಸೂರು ಸಂತಿಂದ ಯಾವೊ ಸಾಮಾನ ತರೇಳಿದ್ದಂತೆ ಲೂಸಿ. ಅದು ಮರತೂಗಿ ಪುನಾ ಅಣ್ಣ ಅದೆನ ನೀ ಯೋಳಿದ್ದದ್ದು ಅಂತ ಎಡತಿ ಕ್ಯಾಲಿಕಂಬರಕ್ಕೆ ಕಿರಿಸ್ತಾನ ದೊಡ್ಡಿಗೆ ಇಮ್ಮರಳೊಗಿದ್ದ. ಅವ್ರು ಇಂಗೋಗಿ ಮನೆ ಕದವ ತಟ್ಟಿದಗ, ವಳು ಯಾರೊ ಗುಬ್ಬಲು ಪರದಡುತ ಇದ್ದುದು ಕೇಳುಸ್ತಂತೆ!... ಸೂಸಾನಮ್ಮ ಅಂಗಡಿ ಸಾಮಾನು ತರಕ್ಕೆ ವೊತ್ತಿಗೆ ಮುಂಚೇಯ ವೊಂಟೋಗಿದ್ಧಲ್ಲ, ಇನ್ನು ವಳುಗಿರಾರು ಯಾರು?- ಸಂದೇಯ ಆಯ್ತಂತೆ. ಅಣ್ಣ ಜೋರುಜೋರಾಗಿ ಕದ ತಟ್ಟುತಿದ್ದರೂವೆ, ಭಗ್ಗನೆ ಯಾರೂ ಬಂದು ತಗೀನಿಲ್ವಂತೆ. ಸುಮಾರು ಸಮಯ ಕಳುದ ಆಯಿತ್ತೂ, ಲೂಸಿ ಮೆಕ್ಕನಂಗೆ ಬಂದು ಕದ ತೆಗದ್ದಂತೆ...
{{gap}}“ವಳುಗೆ ಯಾರೋ ಇದ್ದಂಗಿಲ್ವ?”- ಪುಟ್ಟಾರಿ ಕ್ಯಾಳುದಂತೆ.
{{gap}}“ಯಲ್ಲೆ? - ನಾನು ಅಡುಗೆ ಕಾಣೇಲಿ ಪಾತ್ರೆ ಜೋಡುತ್ತಿದ್ದೆ, ಪೀಟರು... ನೀವು ಸಂತಿಂದ ಈಟು ಭಗ್ಗನ ಆದ್ಯಾಕ ಇಂದುಕೆ ಬಂದದು?” -ಎಡತಿ ಯೋಳಿದ್ದರೂನುವೆ, ಯಾಕೊ ಅನುಮನಸಾಗಿ ಮನೆ ವಳಗೆಲ್ಲ ಸುತ್ತಾಡಿ, ಕಡೀಕೆ ಯಾರೂ ಕಾಣದೇಯ,
{{gap}}“ನೀನು ಸಂತ್ಯಂದ ಯೇನೇನೊ ತರಬೇಕು ಅಂತ ಅಂದ್ಯಲ್ಲ?... ನಂಗೆ ಸೀನೆಯಿತಗಾರು ಸಿಕ್ಕಿ ಮರೆತೋಗದೆ... ನೀ ಯೋಳ ಸುಮಾರು ಸಾಮಾನು ಗೆಪ್ತಿ ಆಯ್ತು, ಪೌಡರು, ಲಂಗದ ಬಟ್ಟೆ, ಯೇರ್ಪಿನ್ನು- ಈಟು ಸಾಮಾನು ಗೆಪ್ತಿ ಅದೆ. ಇನ್ಯಾನೊ ಒಂದ ನೀ ಯೋಳದು ಮರತೋಗಿ ಕ್ಯಾಳಿ ವೋಗೋವ ಅಂತ ಬಂದೆ. ನಡಕಂಬದ್ರೆ ಪುನಾ ವೋಗಿ ಬರದು ವೊತ್ತಾಯ್ತದೆ ಅಂತ ಬಾಥ್ ಸೈಕೋಲು ತಕ್ಕಬಂದಿಮ್ಮಿ... ಅದ್ಯಾನ ಇನ್ನೊಂದು ಸಾಮಾನು,<noinclude></noinclude>
82mthu9kex5tc3ygldml86jyq54t6sk
ಪುಟ:ವೈಶಾಖ.pdf/೨೦೧
104
82130
316491
297999
2026-05-03T13:39:03Z
Shreesha Sharma
7840
/* Validated */
316491
proofread-page
text/x-wiki
<noinclude><pagequality level="4" user="Shreesha Sharma" /></noinclude>________________
{{Left|ಸಮಗ್ರ ಕಾದಂಬರಿಗಳು}}{{Right|೧೮೫}}
ಬಿರನೆ ಯೋಳು...” ಅಂತಿದ್ದಂಗೇಯ, ರಾಗಿತೆಂಬೆ ವಳುನ್ನಿಂದ ಯಾರೊ ಜೋನ್ನಿಂದ ಸೀನು ಕಡಸುದ್ದಲು ಕೇಳುಸ್ತು, ಬೆಟ್ಟೋಗಿ ಖಾಲಿ ತೊಂಬೆ ವಳೀಕೆ, ಬಗ್ಗೆ ಕ್ವಾಡುದ್ರೆ- ವಳಗಡೆ ರೋಸಯ್ಯ ಗುರುಗಳು ಕುಂತವ್ರೆ..
{{gap}}ಅಣ್ಣಂಗೆ ಹೇಸೋಯ್ತು. ಎಡತಿಯ ತರಾಟೆ ತಕ್ಕಂಡು
{{gap}}“ಈಗ ಬಯಲಾಯ್ತು ನಿನ್ನ ಬೊಸರು ಮಾಡಿದೋರು ಯಾರು ಅಂತಾವ!- ಕಳ್ಳ ಭೋಷಡಿ, ನೀನೂ ನಿಮ್ಮವ್ವನೂ ಸೇರಂಡು ನಂಗೆ ಮ್ಯಾಸ ಮಾಡಿದ್ರಿ, ಈ ರೋಸಯ್ಯ ಗುರುಗಳು, ಯೆಲ್ಲಾರೂ ಪುರಾಣ ಯೋಳೋರು, ಇಂತಾ ಲುಚ್ಚಾ ಕೆಲ್ಸ ಮಾಡ್ತಾರೆ ಅಂತ ನಾ ಎಣುಸೇ ಇರನಿಲ್ಲ ಥ, ಧೂ... “ ಅಂತಿರೋನೂವೆ, ರೋಸಯ್ಯ ತೊಂಬೆ ವಳುಖ್ಯಿಂದ ಎದ್ದು ಬಂದು,
{{gap}}“ನನ್ನ ತೆಪ್ಪ ಕೈಮೀಸಪ್ಪ, ನಿನ್ನ ದಮ್ಮಯ್ಯ ಕಣೋ, ಪೀಟರು-ನನ್ನ ಮಾನ ಕಳೀಬ್ಯಾಡ.” ಬೇಳುಗರೀತ ಕಾಲು ಕಟ್ಕಂಡರಂತೆ! |
{{gap}}ಅಣ್ಣ ಉಕ್ತಾ ಇದ್ದ ಕ್ವಾಪದ ನುಂಕೊಂಡು,
{{gap}}“ಆಳಾಗೋಗಿ, ನಿಮ್ಮ ಪಾಪಕೆ ನೀವೇ ವೊಯ್ದಿರಿ ನಂಗೇನಂತೆ... ಈಗ ಈ ಲೂಸ್ಮಿಂದ ನನ್ನ ಬಿಡುಗಡೆ ಮಾಡುದ್ರೆ ಸರಿ. ಇಲ್ಲದಿದ್ರೆ, ಈ ದೊಡ್ಡಿಲೆಲ್ಲ ನಿಮ್ರಾಟವ ಟಾಂಟಾಂ ಮಾಡಿ ರಾಣಾರಂಪ ಮಾಡಾಕೀನಿ!” -ಬೆದುರಿಸಿದ್ದಂತೆ.
{{gap}}“ಆಗ್ಲಿ ಆಗ್ಲಿ, ಅಂಗೇ ಮಾಡುವ... ಸೂಸಾನಮ್ಮ ಸಂತೈಂದ ಬರೋಗಂಟ ತುಸ ಸೈಸಿಗಪ್ಪ”- ಬೇಡಿದ್ರಂತೆ ರೋಸಯ್ಯ.
{{gap}}ಸಂದೆ ದನೀಗೆ ಸೂಸಾನಮ್ಮ ಸಂತೈಂದ ಅಂಗಡಿ ಸಾಮಾನ ಯಾರ ಗಾಡೀಲೊ ಹೇರಿಕಂಡು ಮನೆಗೆ ಬಂದ ವಸಿ ವೊತ್ತಿಗೇಯ ಪಂಚಾತಿ ಸೇರುಸಿ,
{{gap}}“ನಂಗೆ ಈ ಎಡತಿ ಬ್ಯಾಡ. ಇವುಗಳಿಂದ ನನ್ನ ಬಿಡುಗಡೆ ಮಾಡಿ,” – ಅಣ್ಣ ಖೈಡಾಗಿ ಯೋಳಿಬುಟ್ನಂತೆ.
{{gap}}ಅಸ್ಸಾರಾಗೆ ರೋಸಯ್ಯ ಗುರುಗಳು ಸೂಸಾನಮ್ಮಂಗೆ ಗುಟ್ಟಾಗಿ ನಡುದ ಇಸ್ಕಾನೆಲ್ಲ ಸೂಕ್ಷ್ಮಾಗಿ ಯೋಲಿರಬೇಕು. ಅವಳು ಕಮಕ್ ಕಿಮಕ್ ಅನ್ನಲಿಲ್ಲವಂತೆ. ಪಂಚಾಯಿತಿದಾರಲ್ಲಿ ಒಬ್ಬ ಮಾತ್ರ ಕ್ಯಾಳಿದ್ದಂತೆ
{{gap}}“ಎಡತೀಲಿ ಅಂತದೇನು ತಪ್ಪು ಕಂಡು ಇಡುದೆ?” ಅಣ್ಣ ಬಾಯಿ ಬುಡಕ್ಕೆ ಮುಂಚೇಯ, ಲೂಸಿ
{{gap}}“ನಂದೂ ತಪ್ಪಿಲ್ಲ, ಅವರೂ ತಪ್ಪಿಲ್ಲ. ನಮ್ಮಿಬ್ಬರೂವೆ ವೋದಾಸ್ಯೆ ಆಯ್ತಾ ಇಲ್ಲ...” ಅಂತಿದ್ದಮಗೇಯ ಅವರಲೊಬ್ಬ ಕಿಲಾಡಿ,
{{gap}}“ವೊಂದಾಣಿಕೆ ಆಗ್ಗೆ ನಾಕು ತಿಂಗೃ ಯೆಂಗಾಯ್
ತು?” ಅಂತ<noinclude></noinclude>
r12e5bbum7vuo79l8tj73pv9tm6gn0h
ಪುಟ:ವೈಶಾಖ.pdf/೨೦೨
104
82131
316794
298147
2026-05-04T09:26:34Z
Ashwini Rai K
8475
/* Validated */
316794
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{Left|೧೮೬}}{{Right|ವೈಶಾಖ}}
ಕ್ಯಾಳೇಬುಟ್ನಂತೆ.
{{gap}}“ಆಗ ರೋಸಯ್ಯ ಗುರುಗಳು “ಯಾನೊ ಅದ್ದು ಆಗೋಯ್ತು... ಈಗ ಇವುರ ಸಂಸಾರ ಎಡಗೋಲು ವಕ್ಕಡೆ ತೊದರೆ ಬಲಗೋಲು ಇನ್ನೊಕ್ಕಡೆ ತೂಯ್ತಾ ಅದೆ... ಇದು ಇನ್ನೂ ಬಿಗಡಾಯಿಸ್ಕಂಡು ಹಡ ರಂಪ ಅಗಕ್ಕೆ ಮುಂದೇಯ, ಇವರಿಬ್ಬರೂ ಬ್ಯಾರೆ ಮಾಡದೆ ಇವೇಕ...”- ಅಂದು, ಸಿಕ್ಕ ಬುಡುಸಕ್ಕೆ ಪರ್ಯತ್ನ ಮಾಡುದ್ರಂತೆ. ಆಗ ಇನ್ನೊಬ್ಬ ಪಂಚಾತಿದಾರ;
{{gap}}“ಸರಿ ಗುರುಗಳೆ, ಹೊಟೆಲ್ಲಿರೊ ಕೂಸಿನ ಗತ್ಯೇನು?- ಅದುಕೆ ಪರಿಯಾರ ಕ್ವಡುಸಬ್ಯಾಡದ?” ನ್ಯಾಯ ಅಡಿದನಂತೆ.
ಆಗ ಸೂಸಾನಮ್ಮ ತಟಕ್ಕನೆ
"ಅವುನು ಪರಿಯಾರ ಕೊಡೂದು ಬ್ಯಾಡ ಯಾನೂ ಬ್ಯಾಡ. ಮೊದಲು ನಮ್ಮ ಹಟ್ಟಿಂದ ಕಡದೋಗ್ಲಿ” ಅಂದ್ಲಂತೆ. “ಸರಿ ಗಂಡ ಎಡತೀರ್ಗೆ ವೊಂದಾಣಿಕೆ ಆಗನಿಲ್ಲ ಅಂದ್ರೆ, ಇನ್ನೇನ ಉಳುದಿರಾದು-ಇವರಿಬ್ರೂ ಬ್ಯಾರೆ ಆಗೋದೇ ಸಮ” -ದೊಡ್ಡಿ ಪಂಚಾತಿದಾರೆಲ್ಲ ತೀರ್ಪು ಕ್ವಟ್ಟರಂತೆ...
ಅಣ್ಣ ಮಾತ್ರ ತಾನು ಮಾತ ಕಟ್ಟಿದ್ದ ಉಳುಸುದ್ದಂತೆ. ರೋಸಯ್ಯ ಗುರುಗಳ ಬೀದ್ದೆ ಎಳಿನಿಲ್ವಂತೆ. ವಸಿ ಜಿನ ಅವಂಗೆ ಅಷ್ಟರಾಗೆ ಸಿನೇಯ್ತ ಆಗಿದ್ದ ಯೇಸುದಾಸ ಅನ್ನೋನ ಅಟ್ಟೇಲಿ, ಅಣ್ಣ ಕಾಲ ನೂಕಿದಂತೆ...
ಅದಾದ ಮುಂದಿನ ಬೇಸ್ತವಾರ ಹುಣಸೂರು ಸಂತೇಲಿ ಸಿಕ್ಕಿ ವಕ್ಕಡಿಂದ ನಡುದುದೆಲ್ಲ ನನ್ನ ಕುಟ್ಟೆ ಅಂಗಾಲು ಸುಳಿಸುದ್ದು ಒಂದು ತಪಸೀಲ್ಲೂ ಬುಡದೆ ತೊಡಿಕಂಡಿದ್ದ. ಅವನ ಜ್ವತೆ ಯೇಸುದಾಸನೂ ಇದ್ದ. ಆಗ ನಾನು,
“ಮುಂದೇನು ಮಾಡೀಯಣ್ಣ?' ಕಣ್ಣೀರು ತುಂಬಿಕ ಕ್ಯಾಳಿದ್ದಕ್ಕೆ,
“ನಮ್ಮ ಈ ಯೇಸುದಾಸರ ತಮ್ಮ ಮೊಸಸು ಅನ್ನೋರು ಸೈನ್ಯಕೆ ಸೇರಿ ಕಂಡವೆ, ನಾನು ಸೇರಿಕಣಿ. ನಮ್ಮಯ್ಯಂಗೆ ಯೋಳಿಬುಡು-ಇಂಗೆಲ್ಲ ಆಗೋಯ್ತು, ಸಾಯದೆ ಬದುಕಿದ್ರೆ ಯಾವತ್ತಾದ್ರೂವೆ ಬಂದು ಸ್ವಾಡ್ತೀನಿ ಅಂತಾ....”
ಅಣ್ಣನ ಮಾತ ಕ್ಯಾಳಿ ಗೋಳೋ ಅಂತ ಅತ್ತೆ, ಮುಟ್ಟಾರಿ ನನ್ನ ತಬ್ಬಿಕಂಡು ತಾನೂ ಅಲ್ಲ,
“ಅಳಬೇಡ ಕಣ್ಣ, ತಮ್ಮ, ಸುಮ್ಕಿರು... ನಸೀಬಿದ್ರೆ ಸೈನ್ಯದಿಂದ ಬದುಕಿ ಬತ್ತೀನಿ. ಇಂದೈ ಬರೂನಾಗ ಸುಮಾರಾಗಿ ಅಣ ಉಳುಸ್ಕಂಬತ್ತೀನಿ. ಆ ಅಣದಿಂದ ಸೊಂತಕೆ ಜಮೀನ ತಕ್ಕತ್ತೀನಿ. ಆಗ ಈ ಊರಿನಾಗೆ ನಾನೂ ಒಬ್ಬ ಮನುಸಾಂತ ಆಗಕ್ಕಿಲ್ವ?- ಅಣ ಇರೋರೆ ತಾನೆ ಈ ಊರನಾಗೆ ಮದ್ವಾದೆ...” ಅಂದ.<noinclude></noinclude>
9s58lxvotbjn4mf5av4uzeql278ohoo
ಪುಟ:ವೈಶಾಖ.pdf/೨೦೩
104
82132
316592
315600
2026-05-03T17:58:20Z
Pragathi. BH
7585
/* Validated */
316592
proofread-page
text/x-wiki
<noinclude><pagequality level="4" user="Pragathi. BH" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೮೭}}
{{gap}}ಲಕ್ಕ ವಳುಗಡೆ ಅತ್ತುಗಂಡೇ ಊರಿಗೆ ಬಂದಿದ್ದ. ಅತ್ತುಗಂಡೇ ದೊಡ್ಡಯ್ಯಂಗೆ ಸುದ್ದಿ ಮುಟ್ಟುಸಿ, ಅವನತ್ರ ನಿಂತುಕೊನಾರದೆ, ತಮ್ಮ ಗುಡ್ಲಿಗೆ ಬಂದಿದ್ದ...
ಇಂದ್ಕೆ ನಡುದ್ನೆಲ್ಲ ಗ್ಯಾಪುಸ್ಕತ್ತ, ಪುಟ್ಟಾರಿ ಅಣ್ಣ ಸೈನ್ಯ ಸೇರದೇಯ ವಂದಿಗೇ ಇದ್ರೆ, ದೊಡ್ಡಯ್ಯ ಇಂಗ್ಯಾಕೆ ಸುಂಡೋಗೋನು?- ಅಂತ ಚಿಂತೆ ಮಾಡ್ತಾನೆ ಲಕ್ಕ.ಮಾಮೂಲ್ನಂತೆ ಒಂದು ಬೇಸ್ತವಾರ ಸಂತೇಗೋತಿದ್ದ, ಹುಣಸೂರಿಂದ ವಾಪ್ಪು ಬತ್ತಾನೂವೆ ಅದೇ ಚಿಂತೆ ಯಾಕೊ ಅವ್ವ ಇವತ್ತೂ ಕಾಡ್ತಾನೇ ಇತ್ತು... ಅದೇ ಮನಸಿನಾಗೆ ತಮ್ಮ ಗುಡ್ಲಿಗೆ ಬಂದಾಗ ಸಿವುನಿ ಮಣ್ಣಿನ ಅಳಿಗೆ ಮುಚ್ಚಳ ತಗುದು ಅದರೊಳಗೆ ಅಡಕಿದ್ದ ಮಾಂವುಸದ ತುಂಡುಗೊಳ ಕೆಟ್ಟೋಗಿದ್ದದೊ ಯೆಂಗೆ ಅಂತ ಚುರುಚೂರಾಗಿ ಎತ್ತಿ ಎತ್ತಿ ಮೂಸಿ ಮೂಸಿ ವಳೀಕೆ ಇಡ್ತಾ ಇದ್ಲು.<br />
{{gap}}ಲಕ್ಕ ಅಡುಗೆ ಕಾಣೆ ಬಾಗಿಲಲ್ಲಿ ನಿಂತು ತಂಗಿ ಸಿವುನಿ ಯೇಕಾಗಾಗಿ ಮಾಡ್ತಿದ್ದ ಕೆಲುಸಾನೆ ಕ್ವಾಡ್ತಾ ಇದ್ದ... ತನ್ನ ತಂಗಿ ಬಂದೀನಿಂದ್ಲವೆ ತನ್ನ ಅಯ್ಯನಿಗಾಗಿ, ಅವ್ವನಿಗಾಗಿ, ತನಗಾಗಿ ಏಟೊಂದು ಮುತುವರ್ಜಿ ವಯಸ್ತವಳೆ. ಅವಂಗೂ ವಯಸ ಆಗೋಯ್ತು, ಈನದಿಂದ ಜಿನಕೆ ಅವುಳ ಸಕ್ತಿ ಕುಂದೊಯಾ ಅದೆ! ಅವನ ಕೇಮೆ, ಯೇನೇ ಅಂದರೂ, ದಪ್ಪಡಿದುಪ್ಪಡಿ. ಆದ್ರೆ ಸಿವುನಿ ಜಾಯಮಾನೈ ಬ್ಯಾರೆ. ಇವರ ವಗೆತನವೇ ಅಚ್ಚುಗಟ್ಟು, ರುತಿರುತ್ಯಾಗಿ ತಮಗೆಲ್ಲಾ ಮಾಡಾಕಬೇಕು. ಕರ್ಚೂವೆ ಹದ್ದು ಮೀರಬಾರು -ಅತೋಟೀಲೆ ಇರಬೇಕು.<br />
{{gap}}ಅವೊತ್ತು ಮರಿ ಕಡುದು ವಸಿ ಮಾಂವುಸ ಬೇಯಿ ನಮಗೆಲ್ಲ ನೀಡಿದ್ದಲ್ಲ - ಈಗ ಉಳುಕೆ ಮಾಂವುಸವ ಉದ್ದಾನೆ ತುಂಡತುಂಡ್ರಂಗೆ ಕತ್ತರಿಸಿದ್ದು. ಆ ತುಂಡಗಳ ತಕ್ಕಂಡು ಈಳಿಗೆಮಣೇಲಿ, ಚೋಟುದ್ದ ಇಂದುಕೆ ಬುಟ್ಟು, ಸೀಳಿದ್ದು. ಅಂಗೆ ಸೀಳ ಒಂದೊಂದು ತುಂಡನೂವೆ ಸಾಲಾಗಿ ಬಿದಿರು ಗಳೀನ ಮ್ಯಾಲೆ ನ್ಯಾತಾಕಿದ್ದು. ಆಮ್ಯಾಕೆ, ಆ ಗಳುಗಳ ನಮ್ಮ ಗುಡ್ಡ ಇಂಚೋರಿ ಇತ್ತಲ್ಲಿ ಕೊಣಮಾವಿನ ಕೊಂಬೆಯಿಂದ ಚುಜ್ಜಲು ಮರದ ಕೊನೆಗಳೆ ತಲುಲಾಗಿ- ಹದ್ದು, ಕಾಗೆ, ಕೊತ್ತಿ ಯಾವುದೊ ಆ ಮಾಂವುಸದ ತುಂಡುಗಳ ಮುಟ್ಟದಂಗೆ ಎಂಟು ಹಗಲು ಒಬ್ಬಳೇಯ ಒಂದೇ ಸಮನೆ ಕಾಯ್ಕಂಡಿದ್ದು, ಸ್ವಾಮಿ ಪಡುವಲಲ್ಲಿ ಮುಳುಗುತಿದ್ದಂಗೆ ಆ ಗಳುಗಳ ಯೆತ್ತಿಂಗಂಬಂದು ವಪರ್ತಿನಾತ್ರೆಯೂವೆ ಅಡುಗೆಕ್ಸಾಣೇಲಿ ಒಂದು<noinclude></noinclude>
o8c56rhhooin1ty78rsev08s8crmb28
316593
316592
2026-05-03T17:58:48Z
Pragathi. BH
7585
316593
proofread-page
text/x-wiki
<noinclude><pagequality level="4" user="Pragathi. BH" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೮೭}}
{{gap}}ಲಕ್ಕ ವಳುಗಡೆ ಅತ್ತುಗಂಡೇ ಊರಿಗೆ ಬಂದಿದ್ದ. ಅತ್ತುಗಂಡೇ ದೊಡ್ಡಯ್ಯಂಗೆ ಸುದ್ದಿ ಮುಟ್ಟುಸಿ, ಅವನತ್ರ ನಿಂತುಕೊನಾರದೆ, ತಮ್ಮ ಗುಡ್ಲಿಗೆ ಬಂದಿದ್ದ...
{{gap}}ಇಂದ್ಕೆ ನಡುದ್ನೆಲ್ಲ ಗ್ಯಾಪುಸ್ಕತ್ತ, ಪುಟ್ಟಾರಿ ಅಣ್ಣ ಸೈನ್ಯ ಸೇರದೇಯ ವಂದಿಗೇ ಇದ್ರೆ, ದೊಡ್ಡಯ್ಯ ಇಂಗ್ಯಾಕೆ ಸುಂಡೋಗೋನು?- ಅಂತ ಚಿಂತೆ ಮಾಡ್ತಾನೆ ಲಕ್ಕ.ಮಾಮೂಲ್ನಂತೆ ಒಂದು ಬೇಸ್ತವಾರ ಸಂತೇಗೋತಿದ್ದ, ಹುಣಸೂರಿಂದ ವಾಪ್ಪು ಬತ್ತಾನೂವೆ ಅದೇ ಚಿಂತೆ ಯಾಕೊ ಅವ್ವ ಇವತ್ತೂ ಕಾಡ್ತಾನೇ ಇತ್ತು... ಅದೇ ಮನಸಿನಾಗೆ ತಮ್ಮ ಗುಡ್ಲಿಗೆ ಬಂದಾಗ ಸಿವುನಿ ಮಣ್ಣಿನ ಅಳಿಗೆ ಮುಚ್ಚಳ ತಗುದು ಅದರೊಳಗೆ ಅಡಕಿದ್ದ ಮಾಂವುಸದ ತುಂಡುಗೊಳ ಕೆಟ್ಟೋಗಿದ್ದದೊ ಯೆಂಗೆ ಅಂತ ಚುರುಚೂರಾಗಿ ಎತ್ತಿ ಎತ್ತಿ ಮೂಸಿ ಮೂಸಿ ವಳೀಕೆ ಇಡ್ತಾ ಇದ್ಲು.<br />
{{gap}}ಲಕ್ಕ ಅಡುಗೆ ಕಾಣೆ ಬಾಗಿಲಲ್ಲಿ ನಿಂತು ತಂಗಿ ಸಿವುನಿ ಯೇಕಾಗಾಗಿ ಮಾಡ್ತಿದ್ದ ಕೆಲುಸಾನೆ ಕ್ವಾಡ್ತಾ ಇದ್ದ... ತನ್ನ ತಂಗಿ ಬಂದೀನಿಂದ್ಲವೆ ತನ್ನ ಅಯ್ಯನಿಗಾಗಿ, ಅವ್ವನಿಗಾಗಿ, ತನಗಾಗಿ ಏಟೊಂದು ಮುತುವರ್ಜಿ ವಯಸ್ತವಳೆ. ಅವಂಗೂ ವಯಸ ಆಗೋಯ್ತು, ಈನದಿಂದ ಜಿನಕೆ ಅವುಳ ಸಕ್ತಿ ಕುಂದೊಯಾ ಅದೆ! ಅವನ ಕೇಮೆ, ಯೇನೇ ಅಂದರೂ, ದಪ್ಪಡಿದುಪ್ಪಡಿ. ಆದ್ರೆ ಸಿವುನಿ ಜಾಯಮಾನೈ ಬ್ಯಾರೆ. ಇವರ ವಗೆತನವೇ ಅಚ್ಚುಗಟ್ಟು, ರುತಿರುತ್ಯಾಗಿ ತಮಗೆಲ್ಲಾ ಮಾಡಾಕಬೇಕು. ಕರ್ಚೂವೆ ಹದ್ದು ಮೀರಬಾರು -ಅತೋಟೀಲೆ ಇರಬೇಕು.<br />
{{gap}}ಅವೊತ್ತು ಮರಿ ಕಡುದು ವಸಿ ಮಾಂವುಸ ಬೇಯಿ ನಮಗೆಲ್ಲ ನೀಡಿದ್ದಲ್ಲ - ಈಗ ಉಳುಕೆ ಮಾಂವುಸವ ಉದ್ದಾನೆ ತುಂಡತುಂಡ್ರಂಗೆ ಕತ್ತರಿಸಿದ್ದು. ಆ ತುಂಡಗಳ ತಕ್ಕಂಡು ಈಳಿಗೆಮಣೇಲಿ, ಚೋಟುದ್ದ ಇಂದುಕೆ ಬುಟ್ಟು, ಸೀಳಿದ್ದು. ಅಂಗೆ ಸೀಳ ಒಂದೊಂದು ತುಂಡನೂವೆ ಸಾಲಾಗಿ ಬಿದಿರು ಗಳೀನ ಮ್ಯಾಲೆ ನ್ಯಾತಾಕಿದ್ದು. ಆಮ್ಯಾಕೆ, ಆ ಗಳುಗಳ ನಮ್ಮ ಗುಡ್ಡ ಇಂಚೋರಿ ಇತ್ತಲ್ಲಿ ಕೊಣಮಾವಿನ ಕೊಂಬೆಯಿಂದ ಚುಜ್ಜಲು ಮರದ ಕೊನೆಗಳೆ ತಲುಲಾಗಿ- ಹದ್ದು, ಕಾಗೆ, ಕೊತ್ತಿ ಯಾವುದೊ ಆ ಮಾಂವುಸದ ತುಂಡುಗಳ ಮುಟ್ಟದಂಗೆ ಎಂಟು ಹಗಲು ಒಬ್ಬಳೇಯ ಒಂದೇ ಸಮನೆ ಕಾಯ್ಕಂಡಿದ್ದು, ಸ್ವಾಮಿ ಪಡುವಲಲ್ಲಿ ಮುಳುಗುತಿದ್ದಂಗೆ ಆ ಗಳುಗಳ ಯೆತ್ತಿಂಗಂಬಂದು ವಪರ್ತಿನಾತ್ರೆಯೂವೆ ಅಡುಗೆಕ್ಸಾಣೇಲಿ ಒಂದು<noinclude></noinclude>
4ygy3helui2e8y31hmrgm4f042bqbs9
ಪುಟ:ವೈಶಾಖ.pdf/೨೦೪
104
82133
316795
315601
2026-05-04T09:27:15Z
Ashwini Rai K
8475
316795
proofread-page
text/x-wiki
<noinclude><pagequality level="3" user="Ashwini Rai K" /></noinclude>________________
{{rh|center=|left=೧೮೮|right=ವೈಶಾಖ}}
ತುಂಡು ಗ್ವಾಡಿಂದ ಇನ್ನೊಂದು ಗ್ವಾಡೆ ತುಗಿದ ತಗು, ಒಲೆ ಬೆಂಕಿ ಸಾಖಕ್ಕೆ ಆ ಮಾಂವುಸದ ತುಂಡುಗಳ ವಣಗುತ್ತಿದ್ದು, ಅಂಗೆ ವಣುಗಿದ ಉದ್ದಾನೆ ಮಾಲೆಗಳ ಗಳುಗಳಿಂದ ಇಳುಕಿ, ಅನ್ನ ಕಿರುಬೆಳ್ಳಿನ ಉದ್ದಕ್ಕೆ ಪುನಾ ಸಣ್ಣಸಣ್ಣದಾಗಿ ಕತ್ತುರಿಸಿ, ಆ ತುಂಡುಗೊಳ ಈ ಅಳಗೇಲಿ ತುಂಬಿಟ್ಟು, ಅವುನ್ನ ಬೇಕುಬೇಕಾದಾಗ ತಕ್ಕಂಡು ನಮ್ಮೆ ಬೇಯ್ಸ ಆಕ್ಕಿದ್ದು... ವಗೆತನದಲ್ಲಿ ಯಾರೂ ಬೆಳ್ಳು ಮಡಿಸೋ ಅಂಗಿಲ್ಲ. ನಿಪುಣೆ-ಇಂಗೆಲ್ಲ ಮನಸಿನಾಗೆ ಅಂದುಕೊತ್ತ, ಲಕ್ಕ,
{{gap}}“ಈಟು ಜಿನ ನೀನು ಮಾಡಾಕಿದ್ರೂವೆ, ಇನ್ನೂ ಉಳುಕಂಡಿದ್ದವ ಮಾಂವುಸದ ತುಂಡುಗಳು?” ಅಂದ.
ಸಿವುನಿ ಬೆಚ್ಚಿ, ಗಕ್ಕನೆ ತಿರುಗಿ
“ನೀನಾ?- ಬುಡ್ತು ಅನ್ನು, ನಾನೇಟು ಬೆಚೋದಿ ಅಂತಾವ?” ಅಂದೋಳು, ಸಾವರಿಸಿಕತ್ತ, “ಆಡೀಲೆಲ್ಲೊ ವಸಿ ಉಳುದವೆ ಕನಣ್ಣ, ಇನ್ನೊಂದು ವೊತ್ತು, ತಪ್ಪದೆ ಏಡೊತ್ತು ಅಟ್ಟರೆ ಮೂಗೀತು” ಅಂದ್ಲು.
{{gap}}“ಅಂಗಾರೆ ಈ ನಾತ್ರೀಕೆ ರಾಗಿಮುದ್ದೆ ಜ್ವತೆ ಈ ಬಾಡಿನ ಸಾರನೂವೆ ಮಾಡು ಮತ್ತೆ...” ಬಾಯಿ ಚಪುರಸ್ತ, ಲಕ್ಕ ಸೂಚನೆ ಕ್ವಟ್ಟ,
{{gap}}“ನಾತ್ರೀಕೆ ನೀ ಯೋಳ್ತಂಗೆ ಬಾಡಿನ ಸಾ ಮಾಡಾದ್ಯಾನೊ ಮಾಡ್ತೀವಿ. ಆದ್ರೆ ನಿನ್ನಗಂಟ ನೀಡಕ್ಕೆ ಅಯ್ಯ ಆದ ಬುಡಬೇಕಲ್ಲ?...” ಸಿವುನಿ ಯೋಳ ಯೋಳ, ನಗಾಡಿ, ಅದೇತಾನೆ ಎಚ್ಚರಾಗಿ ಕಜೆ ತಗುದ ಕೂಸ ತಗಂಡು ಎದೆ ಕಚ್ಚುಸ್ತಿರೋನೂವೆ.<br />
{{gap}}“ನಮ್ಮ ಸುಖಕೆ ಈ ಅರೇದ ಎಣ್ಣ ಸೆರೆ ಅಕ್ಕಂಡಿರಾದು ಯಾವ ಚೆಂದವ?... ಅಯ್ಯ, ಅವ್ವ ಇಬ್ರ ಕುಟ್ಟೂ ಮಾತಾಡಿ, ಯಾವುದಾದ್ರೂ ಗಂಡ ನ್ಯಾಡಿ ಇವುಳ ಗಂಟಾಕಿಬುಡಬೇಕು,” ಅಂದುಕಂಡ ಲಕ್ಕ.<br />
{{center|೧೭}}
{{gap}}ಲಕ್ಷಮ್ಮ ಮುಸುಕು ಹಾಕಿದ ಮಾತುಗಳಲ್ಲಿ ಸೂಕ್ಷ್ಮವಾಗಿ ರುಕ್ಕಿಣಿಯನ್ನು ಚುಚ್ಚುತ್ತ ಇದ್ದಳು...<br />
{{gap}}ಮೊದಮೊದಲು ಲಕ್ಷಮ್ಮನ ಮಾತುಗಳ ಹಿಂಬದಿಗೆ ಅಡಗಿದ್ದ ಮರ್ಮ ರುಕ್ಕಿಣಿಗೆ ಅರಿವಾಗಲಿಲ್ಲ. ಆದರೆ ಆ ಮಾತುಗಳನ್ನೆ ಮೆಲುಕು ಹಾಕಿದಂತೆ ಅವುಗಳ ಹಿಂದೆ ಯಾವುದೆ ಗೂಡಾರ್ಥ ಅಡಗಿದೆ ಎಂಬ ಶಂಕೆ ತಲೆದೋರಿತು. ಆ ಶಂಕೆಯ ನಿವಾರಣೆಗೆ ಬಹುಕಾಲವೇನೂ ಬೇಕಾಗಲಿಲ್ಲ. ಊರಿನೊಳಗೆ<br /><noinclude></noinclude>
0nxopioplq338wm5n9rntga7861uwcv
316796
316795
2026-05-04T09:27:34Z
Ashwini Rai K
8475
316796
proofread-page
text/x-wiki
<noinclude><pagequality level="3" user="Ashwini Rai K" /></noinclude>________________
{{rh|center=|left=೧೮೮|right=ವೈಶಾಖ}}
ತುಂಡು ಗ್ವಾಡಿಂದ ಇನ್ನೊಂದು ಗ್ವಾಡೆ ತುಗಿದ ತಗು, ಒಲೆ ಬೆಂಕಿ ಸಾಖಕ್ಕೆ ಆ ಮಾಂವುಸದ ತುಂಡುಗಳ ವಣಗುತ್ತಿದ್ದು, ಅಂಗೆ ವಣುಗಿದ ಉದ್ದಾನೆ ಮಾಲೆಗಳ ಗಳುಗಳಿಂದ ಇಳುಕಿ, ಅನ್ನ ಕಿರುಬೆಳ್ಳಿನ ಉದ್ದಕ್ಕೆ ಪುನಾ ಸಣ್ಣಸಣ್ಣದಾಗಿ ಕತ್ತುರಿಸಿ, ಆ ತುಂಡುಗೊಳ ಈ ಅಳಗೇಲಿ ತುಂಬಿಟ್ಟು, ಅವುನ್ನ ಬೇಕುಬೇಕಾದಾಗ ತಕ್ಕಂಡು ನಮ್ಮೆ ಬೇಯ್ಸ ಆಕ್ಕಿದ್ದು... ವಗೆತನದಲ್ಲಿ ಯಾರೂ ಬೆಳ್ಳು ಮಡಿಸೋ ಅಂಗಿಲ್ಲ. ನಿಪುಣೆ-ಇಂಗೆಲ್ಲ ಮನಸಿನಾಗೆ ಅಂದುಕೊತ್ತ, ಲಕ್ಕ,
{{gap}}“ಈಟು ಜಿನ ನೀನು ಮಾಡಾಕಿದ್ರೂವೆ, ಇನ್ನೂ ಉಳುಕಂಡಿದ್ದವ ಮಾಂವುಸದ ತುಂಡುಗಳು?” ಅಂದ.
ಸಿವುನಿ ಬೆಚ್ಚಿ, ಗಕ್ಕನೆ ತಿರುಗಿ
“ನೀನಾ?- ಬುಡ್ತು ಅನ್ನು, ನಾನೇಟು ಬೆಚೋದಿ ಅಂತಾವ?” ಅಂದೋಳು, ಸಾವರಿಸಿಕತ್ತ, “ಆಡೀಲೆಲ್ಲೊ ವಸಿ ಉಳುದವೆ ಕನಣ್ಣ, ಇನ್ನೊಂದು ವೊತ್ತು, ತಪ್ಪದೆ ಏಡೊತ್ತು ಅಟ್ಟರೆ ಮೂಗೀತು” ಅಂದ್ಲು.
{{gap}}“ಅಂಗಾರೆ ಈ ನಾತ್ರೀಕೆ ರಾಗಿಮುದ್ದೆ ಜ್ವತೆ ಈ ಬಾಡಿನ ಸಾರನೂವೆ ಮಾಡು ಮತ್ತೆ...” ಬಾಯಿ ಚಪುರಸ್ತ, ಲಕ್ಕ ಸೂಚನೆ ಕ್ವಟ್ಟ,
{{gap}}“ನಾತ್ರೀಕೆ ನೀ ಯೋಳ್ತಂಗೆ ಬಾಡಿನ ಸಾ ಮಾಡಾದ್ಯಾನೊ ಮಾಡ್ತೀವಿ. ಆದ್ರೆ ನಿನ್ನಗಂಟ ನೀಡಕ್ಕೆ ಅಯ್ಯ ಆದ ಬುಡಬೇಕಲ್ಲ?...” ಸಿವುನಿ ಯೋಳ ಯೋಳ, ನಗಾಡಿ, ಅದೇತಾನೆ ಎಚ್ಚರಾಗಿ ಕಜೆ ತಗುದ ಕೂಸ ತಗಂಡು ಎದೆ ಕಚ್ಚುಸ್ತಿರೋನೂವೆ.<br />
{{gap}}“ನಮ್ಮ ಸುಖಕೆ ಈ ಅರೇದ ಎಣ್ಣ ಸೆರೆ ಅಕ್ಕಂಡಿರಾದು ಯಾವ ಚೆಂದವ?... ಅಯ್ಯ, ಅವ್ವ ಇಬ್ರ ಕುಟ್ಟೂ ಮಾತಾಡಿ, ಯಾವುದಾದ್ರೂ ಗಂಡ ನ್ಯಾಡಿ ಇವುಳ ಗಂಟಾಕಿಬುಡಬೇಕು,” ಅಂದುಕಂಡ ಲಕ್ಕ.<br />
{{center|೧೭}}
{{gap}}ಲಕ್ಷಮ್ಮ ಮುಸುಕು ಹಾಕಿದ ಮಾತುಗಳಲ್ಲಿ ಸೂಕ್ಷ್ಮವಾಗಿ ರುಕ್ಕಿಣಿಯನ್ನು ಚುಚ್ಚುತ್ತ ಇದ್ದಳು...<br />
{{gap}}ಮೊದಮೊದಲು ಲಕ್ಷಮ್ಮನ ಮಾತುಗಳ ಹಿಂಬದಿಗೆ ಅಡಗಿದ್ದ ಮರ್ಮ ರುಕ್ಕಿಣಿಗೆ ಅರಿವಾಗಲಿಲ್ಲ. ಆದರೆ ಆ ಮಾತುಗಳನ್ನೆ ಮೆಲುಕು ಹಾಕಿದಂತೆ ಅವುಗಳ ಹಿಂದೆ ಯಾವುದೆ ಗೂಡಾರ್ಥ ಅಡಗಿದೆ ಎಂಬ ಶಂಕೆ ತಲೆದೋರಿತು. ಆ ಶಂಕೆಯ ನಿವಾರಣೆಗೆ ಬಹುಕಾಲವೇನೂ ಬೇಕಾಗಲಿಲ್ಲ. ಊರಿನೊಳಗೆ<br /><noinclude></noinclude>
dg90g6rvlwr2mh9fugtku6rarnf274a
ಪುಟ:ವೈಶಾಖ.pdf/೨೧೦
104
82139
316798
192386
2026-05-04T09:30:35Z
Ashwini Rai K
8475
/* Proofread */
316798
proofread-page
text/x-wiki
<noinclude><pagequality level="3" user="Ashwini Rai K" /></noinclude>________________
{{rh|left=೧೯೪|center=|right=ವೈಶಾಖ}}
{{gap}}ಮರುದಿನ ಎದ್ದಾಗ ಹಿಂದಿನ ಎರಡು ರಾತ್ರಿಗಳ ಕಠೋರ ಅನುಭವವನ್ನೇ ಅವಳ ಮನಸ್ಸು ಚಿಂತಿಸುತ್ತಿತ್ತು. ಇದೇ ಚಿಂತೆಯಲ್ಲಿ ಮನೆಗೆಲಸಗಳನ್ನು ಹೇಗೋ ಯಾಂತ್ರಿಕವಾಗಿ ಮುಗಿಸಿ, ಹಾಸಿಗೆಯ ಮೇಲೆ ಮೈಚೆಲ್ಲಿದ್ದಳು. ಹಿಂದಿನ ರಾತ್ರಿಗಳಲ್ಲಿ ಸರಿಯಾಗಿ ನಿದ್ದೆ ಬಾರದಿದ್ದುದರಿಂದಲೇ ರುಕ್ಕಿಣಿಗೆ ಈ ರಾತ್ರಿ ನಿಶ್ಚಿಂತ ನಿದ್ದೆ! ಅವಳ ಮೈಮೇಲೆ ಯಾವುದೋ ಭಾರ ಬಿದ್ದಂತಾದಾಗಲೆ ಅವಳಿಗೆ ಎಚ್ಚರ. ಕಣ್ಣು ತೆರೆದಾಗ ಅವಳ ಮುಖದೆದುರು ಅಗಲವಾದ ಮಾವಯ್ಯನ ಮುಖ! ಕಿರುಚಲು ಪ್ರಯತ್ನಿಸಿದಾಗ ಮಾವಯ್ಯ ಬಾಯಿ ಮುಚ್ಚಿದರು-ಕಮ್ಮಿಂದ ಅಲ್ಲ, ತಮ್ಮ ದಪ್ಪನೆ ತುಟ್ಟಿಗಳಿಂದ...<br />
{{gap}}ತನ್ನ ಹೊಯ್ದಾಟ, ಮಾವಯ್ಯನ ಧಡೂತಿ ಶರೀರವನ್ನು ಮೈಮೇಲಿನಿಂದ ತಳ್ಳಹಾಕುವ ತನ್ನ ದುರ್ಬಲ ಪ್ರಯತ್ನ ಯಶಸ್ವಿಯಾಗಲಿಲ್ಲ. ಮನಸ್ಸು ಎಲ್ಲೆಲ್ಲೂ ತೇಲಿತು...<br />
{{gap}}ಸುರಕ್ಷಿತ ವಾಗಿ ತಾನು ಕುಳಿತು ಸಾಗುತ್ತಿದ್ದ ಹರಿಗಳು ಥಟ್ಟನೆಮಗುಚಿದಂತಾಗಿ ಹೊಳೆಯ ನೀರಿಗೆ ಬಿದ್ದು ಉಸಿರುಕಟ್ಟಿ ಕೈಕಾಲು ಬಡಿಯುತ್ತಿರುವ ಅನುಭವ... ನೀರಿನ ಸೆಳಕು ಮುಳುಗಿಸಿ, ಮೇಲೆತ್ತಿ ತೇಲಿಸಿ ಸೆಳೆದೊಯ್ಯತ್ತ, ರಾಮನಾಥಪುರದ ಗೋವುಗಳಲ್ಲಿನ ಗರ್ಭದದ ಕತ್ತಲಿಗೆ ನೂಕಿ, ಅಲ್ಲಿ ಹೊಳೆಯ ನೀರು ಎತ್ತಿಎತ್ತಿ, ಕುಕ್ಕಿಕುಕ್ಕಿ, ಕಡೆಗೊಮ್ಮೆ ಆಚೆಗೆ ದಬ್ಬಿದಂತಾಗಿ, ದಡಕ್ಕೆ ಬಂದು ಬಿದ್ದಿದ್ದಳು... ಹೊರಗೆ ಬಂದಾಗ ಭಾರ ಇಳುಕಿದಂತೆ ಶರೀರ ಹಗುರಾಯಿತು...<br />
{{gap}}ಕಣ್ಣು ತೆರೆದಾಗ, ಹೊರಳಿ ಮೇಲೆದ್ದ ಮಾವಯ್ಯ, ಕಚ್ಚೆಯನ್ನು ಸರಿಪಡಿಸಿಕೊಳ್ಳುತ್ತ, ಕೋಣೆಯ ಬಾಗಿಲು ತೆರೆದು ಸರಸರ ಹೊರಟುಹೋದರು. ಯಾಕೊ ಆ ಗಳಿಗೆಯಲ್ಲಿ ತನ್ನ ಗಂಡ ಹೇಳಿದ್ದ ಅಹಲ್ಯಯ ಪ್ರಸಂಗ ನೆನಪಾಯಿತು. ಅಪರಾಧಿಯಂತೆ ತಲೆತಗ್ಗಿಸಿ ಅವರು ಹೊರಟುಹೋದ ರೀತಿ, ಅವಳಿಗೆ ಕೃತ್ರಿಮದಿಂದ ಅಹಲೈಯನ್ನು ಭೋಗಿಸಿದ ಇಂದ್ರನ ಚೋರವರ್ತನೆಯಂತೆ ಕಂಡಿತು. ಆ ಭಾವನೆ ಬಂದೊಡನೆಯೆ ತಬ್ಬಿಬ್ಬು ಆದಳು... ತಾನು ಏನೇ ಆದರೂ ಅವಕಾಶ ಕೊಡಬಾರದಿತ್ತು -ಆದರೆ ಭಕ್ತಿ, ಗೌರವಗಳು ಇರುವ ಕಡೆ ಪ್ರತಿಭಟಿಸುವುದು ಅಷ್ಟು ಸುಲಭವೆ?... ಯಾವುತ್ತೂ ಮಹಾ ಸಂಯಮಿಯಾಗಿದ್ದ ಮಾವಯ್ಯ ಈ ಹೊತ್ತು ಯಾಕೆ ಸಡಿಲಗೊಳ್ಳಬೇಕಿತ್ತು?... ಈ ತನಕ ಗತಿಸಿದ ಗಂಡನ ಬಗ್ಗೆ ತಾನು ಇರಿಸಿಕೊಂಡಿದ್ದ ಪ್ರೇಮ ಏನಾಯಿತು?... ತಪ್ಪು ಯಾರದೇ ಆದರೂ ಇನ್ನು ಮುಂದೆ ತನಗೆ ಮಾತ್ರ ಈ ಯಾತನೆಯಿಂದ, ಈ ಪಾಪಭಾವದಿಂದ<br /><noinclude></noinclude>
or5538bnambqe4llx3d474b7kibc0u5
ಪುಟ:ವೈಶಾಖ.pdf/೨೧೧
104
82140
316799
192387
2026-05-04T09:32:22Z
Ashwini Rai K
8475
/* Proofread */
316799
proofread-page
text/x-wiki
<noinclude><pagequality level="3" user="Ashwini Rai K" /></noinclude>________________
{{rh|left=೧೯೫|center=|right=ಸಮಗ್ರ ಕಾದಂಬರಿಗಳು}}
ಮುಕ್ತಿಯಿಲ್ಲ.... ಹೀಗೆ ಏನೇನೋ ಗೋಜಲು... ದುರ್ಗಮವಾದ ಅರಣ್ಯದಲ್ಲಿ ದಿಕ್ಕು ತಪ್ಪಿದ ಭಾವನೆ... ಮನಸ್ಸು ಅಷ್ಟು ದೂರ ಸಾಗಿ ಮುಂದೆ ಆಲೋಚನೆ ಮಾಡಲು ಅಸಮರ್ಥವಾಗಿ ತಟಸ್ಥವಾಯಿತು... ಆದರೂ ಎಲ್ಲೋ ಆಳದಲ್ಲಿ ಆ ನಾಶಬಾಯಿ ಲಕ್ಷಮ್ಮನಂಥವರು ಆಡಿದ ಮಾತೇ ನಿಜುವಾಗಬೇಕೆ?- ಎಂದು ಪರಿತಪಿಸಿದಳು. ಅವಳ ಬಾಯಲ್ಲಿ ಮತ್ತಿ ಇದೆ ಎನ್ನುತ್ತಾರೆ ಜನ. ಇರಬಹುದೆ?...
{{gap}}ಈ ಒಳಗುದಿಯಲ್ಲೆ ಆ ರಾತ್ರಿ ಕಳೆದು ಬೆಳಗಾಗುತ್ತಿರುವಂತೆ ನೆರೆಮನೆಯ ವೆಂಕಣ್ಣ ಜೋಯಿಸರ ಮನೆಯೋಳಗಿನಿಂದ ಅವರು ಬಾಲಕರಿಗೆ ಹೇಳಿಕೊಡುತ್ತಿದ್ದ ವೇದಪಾಠ ಗಾಳಿಯಲ್ಲಿ ಕೇಳಿಬರುತ್ತಿತ್ತು. ಯಜುರ್ವೇದದ ಮಂತ್ರ, ರುದ್ರನನ್ನು ಕುರಿತದ್ದು ಎಂದು ತನ್ನ ಪತಿ ಹೇಳುತ್ತಿದ್ದ ನೆನಪು. ಒಮ್ಮೆ ಗುರುಗಳು ಹೇಳಿಕೊಟ್ಟ ವೇದವಾಕ್ಯವನ್ನು, ಬಾಯಿ ನೆನೆಯಲಿ, ಜ್ಞಾಪಕಕ್ಕೆ ಬರಲಿ, ಎಂದು ಬಾಲಕರು ಎರಡು ಸಲ ತಮಗೆ ತಾವೇ ಹೇಳಿಕೊಳ್ಳುತ್ತ ಅಭ್ಯಾಸ ಮಾಡುತ್ತಿದ್ದರು... ಬಾಲಕರ ತಂಡ ಎರಡು ಗುಂಪಾಗಿ ಒಂದು ಗುಂಪಾದ ನಂತರ ಇನ್ನೊಂದು ಗುಂಪು ಮಂತ್ರವನ್ನು ಬಿಡಿಬಿಡಯಾಗಿ ಘೋಷಿಸುತ್ತಿತ್ತು:<br />
{{gap}}ಪ್ರತಿ ಪೂರುಷಮೇಕ ಕಪಾಲಾನ್ನಿಧ್ವಪತಿ (ಎರಡು ಬಾರಿ)
-ಮೊದಲನೆಯ ಗುಂಪು (ಬಹುಶಃ ಹತ್ತು ಅಥವಾ ಹದಿನೈದು ಬಾಲಕರ ಗಡವೇ ಸೇರಿರಬೇಕು!) ಏಕಕಂಠದಲ್ಲಿ ಸುಸ್ವರವಾಗಿ ಘೋಷಿಸುತ್ತಿತ್ತು.
ಅನಂತರ ಎರಡನೆಯ ಗುಂಪು ವೇದಮಂತ್ರದ ಇನ್ನೊಂದು ವಾಕ್ಯವನ್ನು, ಜಾತಾ ಏವ ಪ್ರಜಾರುದ್ರಾನ್ನಿರವದಯತೇ ಎಂದು ಅಷ್ಟೆ ಸ್ವರಹಿತ ಏಕಕಂಠದಿಂದ ಎರಡು ಸಲ ತಾನೂ ಘೋಷಿಸಿತು.
{{gap}} ಪುನಃ ಮೊದಲನೆಯ ಗುಂಪು
ಏಕ ಮತಿ ರಿಕಂ ಎಂದರೆ, ಎರಡನೆಯ ಗುಂಪು
{{gap}}ಆನಿಷ್ಯಮಾಣಾ ಏವ ಪ್ರಜಾರುದ್ರಾನ್ನಿರವದಯತೇ ಎಂದು ಘೋಷಿಸುತ್ತಿತ್ತು.... -ವೇದಮಂತ್ರವು ಹೀಗೆ ಸುಶ್ರಾವ್ಯವಾಗಿ ಬಾಲಕರ 'ಸಂಚಾರಿ'ಯ ಅಭ್ಯಸರೂಪದಲ್ಲಿ ತೇಲಿಬರುವಾಗ, ತನ್ನ ತೌರೂರು ರುದ್ರಪಟ್ಟಣ ಹಾಗೂ ಸಮೀಪದ ಬಸವಾಪಟ್ಟಣಗಳಲ್ಲಿ ಮತ್ತು ಇದೇ ದರುಮನಹಳ್ಳಿಯಲ್ಲಿ ಯಾವುದಾದರೂ ವಿಶಿಷ್ಟ ಶುಭಕಾರ್ ನಡೆದು ಭೋಜನಾನಂತರ ತಾಂಬೂಲ ಸವಿಯುವಾಗ ಶೋತ್ರಿಯ ಬ್ರಾಹ್ಮಣಸಮೂಹವು ಇಂತಹ ವೇದಮಂತ್ರಗಳನ್ನು<noinclude></noinclude>
bpjhqko6oxl3f3otwvxsv1gebfo4nt3
316800
316799
2026-05-04T09:32:42Z
Ashwini Rai K
8475
316800
proofread-page
text/x-wiki
<noinclude><pagequality level="3" user="Ashwini Rai K" /></noinclude>________________
{{rh|left=೧೯೫|center=|right=ಸಮಗ್ರ ಕಾದಂಬರಿಗಳು}}
ಮುಕ್ತಿಯಿಲ್ಲ.... ಹೀಗೆ ಏನೇನೋ ಗೋಜಲು... ದುರ್ಗಮವಾದ ಅರಣ್ಯದಲ್ಲಿ ದಿಕ್ಕು ತಪ್ಪಿದ ಭಾವನೆ... ಮನಸ್ಸು ಅಷ್ಟು ದೂರ ಸಾಗಿ ಮುಂದೆ ಆಲೋಚನೆ ಮಾಡಲು ಅಸಮರ್ಥವಾಗಿ ತಟಸ್ಥವಾಯಿತು... ಆದರೂ ಎಲ್ಲೋ ಆಳದಲ್ಲಿ ಆ ನಾಶಬಾಯಿ ಲಕ್ಷಮ್ಮನಂಥವರು ಆಡಿದ ಮಾತೇ ನಿಜುವಾಗಬೇಕೆ?- ಎಂದು ಪರಿತಪಿಸಿದಳು. ಅವಳ ಬಾಯಲ್ಲಿ ಮತ್ತಿ ಇದೆ ಎನ್ನುತ್ತಾರೆ ಜನ. ಇರಬಹುದೆ?...
{{gap}}ಈ ಒಳಗುದಿಯಲ್ಲೆ ಆ ರಾತ್ರಿ ಕಳೆದು ಬೆಳಗಾಗುತ್ತಿರುವಂತೆ ನೆರೆಮನೆಯ ವೆಂಕಣ್ಣ ಜೋಯಿಸರ ಮನೆಯೋಳಗಿನಿಂದ ಅವರು ಬಾಲಕರಿಗೆ ಹೇಳಿಕೊಡುತ್ತಿದ್ದ ವೇದಪಾಠ ಗಾಳಿಯಲ್ಲಿ ಕೇಳಿಬರುತ್ತಿತ್ತು. ಯಜುರ್ವೇದದ ಮಂತ್ರ, ರುದ್ರನನ್ನು ಕುರಿತದ್ದು ಎಂದು ತನ್ನ ಪತಿ ಹೇಳುತ್ತಿದ್ದ ನೆನಪು. ಒಮ್ಮೆ ಗುರುಗಳು ಹೇಳಿಕೊಟ್ಟ ವೇದವಾಕ್ಯವನ್ನು, ಬಾಯಿ ನೆನೆಯಲಿ, ಜ್ಞಾಪಕಕ್ಕೆ ಬರಲಿ, ಎಂದು ಬಾಲಕರು ಎರಡು ಸಲ ತಮಗೆ ತಾವೇ ಹೇಳಿಕೊಳ್ಳುತ್ತ ಅಭ್ಯಾಸ ಮಾಡುತ್ತಿದ್ದರು... ಬಾಲಕರ ತಂಡ ಎರಡು ಗುಂಪಾಗಿ ಒಂದು ಗುಂಪಾದ ನಂತರ ಇನ್ನೊಂದು ಗುಂಪು ಮಂತ್ರವನ್ನು ಬಿಡಿಬಿಡಯಾಗಿ ಘೋಷಿಸುತ್ತಿತ್ತು:<br />
{{gap}}ಪ್ರತಿ ಪೂರುಷಮೇಕ ಕಪಾಲಾನ್ನಿಧ್ವಪತಿ (ಎರಡು ಬಾರಿ)
-ಮೊದಲನೆಯ ಗುಂಪು (ಬಹುಶಃ ಹತ್ತು ಅಥವಾ ಹದಿನೈದು ಬಾಲಕರ ಗಡವೇ ಸೇರಿರಬೇಕು!) ಏಕಕಂಠದಲ್ಲಿ ಸುಸ್ವರವಾಗಿ ಘೋಷಿಸುತ್ತಿತ್ತು.
ಅನಂತರ ಎರಡನೆಯ ಗುಂಪು ವೇದಮಂತ್ರದ ಇನ್ನೊಂದು ವಾಕ್ಯವನ್ನು, ಜಾತಾ ಏವ ಪ್ರಜಾರುದ್ರಾನ್ನಿರವದಯತೇ ಎಂದು ಅಷ್ಟೆ ಸ್ವರಹಿತ ಏಕಕಂಠದಿಂದ ಎರಡು ಸಲ ತಾನೂ ಘೋಷಿಸಿತು.
{{gap}} ಪುನಃ ಮೊದಲನೆಯ ಗುಂಪು
ಏಕ ಮತಿ ರಿಕಂ ಎಂದರೆ, ಎರಡನೆಯ ಗುಂಪು
{{gap}}ಆನಿಷ್ಯಮಾಣಾ ಏವ ಪ್ರಜಾರುದ್ರಾನ್ನಿರವದಯತೇ ಎಂದು ಘೋಷಿಸುತ್ತಿತ್ತು.... -ವೇದಮಂತ್ರವು ಹೀಗೆ ಸುಶ್ರಾವ್ಯವಾಗಿ ಬಾಲಕರ 'ಸಂಚಾರಿ'ಯ ಅಭ್ಯಸರೂಪದಲ್ಲಿ ತೇಲಿಬರುವಾಗ, ತನ್ನ ತೌರೂರು ರುದ್ರಪಟ್ಟಣ ಹಾಗೂ ಸಮೀಪದ ಬಸವಾಪಟ್ಟಣಗಳಲ್ಲಿ ಮತ್ತು ಇದೇ ದರುಮನಹಳ್ಳಿಯಲ್ಲಿ ಯಾವುದಾದರೂ ವಿಶಿಷ್ಟ ಶುಭಕಾರ್ ನಡೆದು ಭೋಜನಾನಂತರ ತಾಂಬೂಲ ಸವಿಯುವಾಗ ಶೋತ್ರಿಯ ಬ್ರಾಹ್ಮಣಸಮೂಹವು ಇಂತಹ ವೇದಮಂತ್ರಗಳನ್ನು<noinclude></noinclude>
4ua7pt0npuqxryjel8mpsfchv7hzjpq
ಪುಟ:ವೈಶಾಖ.pdf/೨೧೨
104
82141
316801
192388
2026-05-04T09:34:56Z
Ashwini Rai K
8475
/* Proofread */
316801
proofread-page
text/x-wiki
<noinclude><pagequality level="3" user="Ashwini Rai K" /></noinclude>________________
{{rh|left=೧೯೬|center=|right=ವೈಶಾಖ}}
ಸ್ವರಪೂರ್ವಕ ಸೊಗಸುಗಾರಿಕೆಯಿಂದ ಉಚ್ಚರಿಸುವುದನ್ನು ರುಕ್ಕಿಣಿಯು ತಲೆದೂಗುತ್ತ ಜ್ಞಾಪಿಸಿಕೊಂಡಳು... ಕೂಡಲೆ, ಈ ವೇದಮಂತ್ರಗಳನ್ನು ತನ್ನಂತಹ ಸ್ತ್ರೀಯರಿಗೆ ಯಾಕೆ ಕಲಿಸದೇ ಹೋದರು-? ನಮ್ಮ ಕಂಠದಿಂದ ಈ ಮಂತ್ರಗಳು ಇನ್ನೂ ಇಂಪಾಗಿ ಹೊಮ್ಮುತ್ತಿದ್ದವೋ ಏನೊ, ಎಂದು ತರ್ಕಿಸಿದಳು.
{{center|೧೮}}
{{gap}}ಬಿಚ್ಚಿಹೋದ ಕಚ್ಚೆಯನ್ನು ಸರಿಪಡಿಸಿಕೊಳ್ಳುತ್ತ ರುಕ್ಕಿಣಿಯ ಕೋಣೆಯಿಂದ ಹೊರನಡೆದ ಕೃಷ್ಣಶಾಸ್ತ್ರಿಗಳು ಬಿಚ್ಚಿಹೋದ ತಮ್ಮ ಸಂಯಮದ ಗಂಟನ್ನು ಮತ್ತೊಮ್ಮೆ ಸರಿಪಡಿಸುವ ಯತ್ನದಲ್ಲೆ ಇಡೀ ರಾತ್ರಿಯನ್ನು ಕಳೆದರು. ನಾನು ಎಂಥ ಪಾಪ ಮಾಡಿದೆ, ಎಂಥ ಪಾಪ ಮಾಡಿದೆ ಎಂದು ಹಲುಬುತ್ತ ಕಣ್ಣೀರಿಟ್ಟರು. ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ ಹೊರಳುವರು. ಎದ್ದು ಕೂರುವರು. ಮಲಗುವರು. ಏಳುವರು. ಮತ್ತೆ ಮಲಗುವರು... ಉರಿ, ಉರಿ, ಉರಿ... ಪಶ್ಚಾತ್ತಾಪದ ಬೆಂಕಿಯಲ್ಲಿ ಬೇಯುತ್ತಿದ್ದರು....ರುಕ್ಕಿಣಿ ತನ್ನ ಮಗನ ಹೆಂಡತಿ! ಮಗಳಿಗೆ ಸಮಾನವಾದವಳು!- ಛೇ, ಎಂಥ ಹೇಸಿಗೆ ಕೆಲಸ ಮಾಡಿಬಿಟ್ಟೆ?... ಛೇ, ಛೇ, ಛೇ ಐವತ್ತು ವರ್ಷಗಳಿಗೂ ಮಿಕ್ಕಿದ ನನ್ನ ಸಂಯಮದ ಪುಣ್ಯವನ್ನು ಕೇವಲ ಕ್ಷಣಗಳ ಲಾಲಸೆಗೆ ಕ್ಷಯಮಾಡಿದೆನಲ್ಲ?- ಎಂಥ ಅವಿವೇಕ?... ಅಯ್ಯೋ, ಒಟ್ಟಿನಲ್ಲಿ ದೈವ ಕೈಬಿಟ್ಟಿತು; ಅದರಿಂದಲೇ ಮನಸ್ಸು ಕೈಕೊಟ್ಟಿತು. ಹೆಂಡತಿ ಸತ್ತ ದಿನವೇ ನನ್ನ ಕಾಮವೂ ಸತ್ತುಹೋಯಿತೆಂದೂ ನಾನು ಅತಿಶಯವಾಗಿ ಮೋಹಿಸಿದ್ದ ಆ ಪಾರ್ಥಿ ಶರೀರವನ್ನು ಕಟ್ಟಿಗೆಯೊಟ್ಟಿ ಸ್ಮಶಾನದಲ್ಲಿ ಸುಟ್ಟ ದಿನವೇ ನನ್ನಲ್ಲಿ ತುಂಬಿದ್ದ ಕಾಮವನ್ನೂ ಸುಟ್ಟೆನೆಂದು ಭ್ರಮಿಸಿದ್ದೆನಲ್ಲ?... ಶಿವ ಸುಟ್ಟರೂ ಕಾಮದೇವ ಅನಂಗನಾದನೆಂದು ಪುರಾಣಗಳು ಸಾರುತ್ತವೆ... ನಾನು ಆ ದಿನವೇ ನನ್ನ ವಿಷಯಾಸಕ್ತಿಗಳನ್ನೆಲ್ಲ ಸುಟ್ಟೆನೆಂದು ವಿಜೃಂಭಿಸಿದ್ದು ಹುಸಿಯಾಯಿತಲ್ಲ!... ಇನ್ನು ಯಾವುದಕ್ಕಾಗಿ ಅಹಂಕಾರ ಪಡಬೇಕು?~ ಎಂದುಕೊಳ್ಳುತ್ತಿರುವಂತೆಯೆ, ಇನ್ನು ಯಾತಕ್ಕಾಗಿಯಾದರೂ ನಾನು ಬದುಕಬೇಕು ಎಂಬ ಭಾವನೆಯೂ ಸುಳಿದು ಹೋಯಿತು. ಛೇ, ಛ, ಆತ್ಮಹತ್ಯೆ ಮಹಾಪಾತಕ, ಒಂದು ಪಾಪದಿಂದ ಇನ್ನೊಂದು ಪಾಪಕ್ಕೆ ಜಿಗಿಯುವುದೆ?...<br />
{{gap}}ಎದ್ದರು. ಒಳಗೊಳಗೇ ಅಳುತ್ತ ತೋಟಕ್ಕೆ ನಡೆದರು. ಮೊದಲು ಹೆಂಡತಿಯನ್ನು ಸುಟ್ಟ ಜಾಗದಲ್ಲಿ ಏಳಿಸಿದ್ದ ಮಲ್ಲಿಗೆ ವನದ ಮುಂದೆ ನಿಂತು ಗೋಳುಗರೆದರು... ತಮಗೆ ವಾಂತಿ, ಭೇದಿ ಆದಾಗ, ತಾವು ಬೇಡ ಬೇಡ<br /><noinclude></noinclude>
iduap4cie9wsk07dan9fwoq1qamrhjr
ಪುಟ:ವೈಶಾಖ.pdf/೨೧೩
104
82142
316802
192389
2026-05-04T09:37:22Z
Ashwini Rai K
8475
/* Proofread */
316802
proofread-page
text/x-wiki
<noinclude><pagequality level="3" user="Ashwini Rai K" /></noinclude>________________
{{rh|left=ಸಮಗ್ರ ಕಾದಂಬರಿಗಳು|center=|right=೧೯೭}}
ಎಂದರೂ ಕೇಳದೆ ತಮ್ಮ ಶುಶೂಷೆಗೆ ನಡುಕಟ್ಟಿ ನಿಂತು, ತಾವು ಮಾಡಿದ ವಾಂತಿ, ಭೇದಿಗಳನ್ನು ಸ್ವಲ್ಪವೂ ಬೇಸರಿಸದೆ ತಾನೇ ತನ್ನ ಕಯ್ಯಂದ ಬಳಿದು, ತಮ್ಮನ್ನು ಬದುಕಿಸಿ, ಅನಂತರ ತಾನೇ ಕಾಲಾರಾ ಪಿಡುಗಿಗೆ ತುತ್ತಾದುದನ್ನು ನೆನೆನೆನೆದು ಅತ್ತರು... ನೀನಿದ್ದರೆ ಹೀಗಾಗುತ್ತಿತ್ತೆ?- ಧರ್ಮದ ಬೇಲಿಯಾಗಿ ನೀನು ಇಂಥ ಅವಿವೇಕದಿಂದ ನನ್ನನ್ನು ರಕ್ಷಿಸುತ್ತಿದೆಯಲ್ಲವೆ?...
{{gap}}ಕೃಷ್ಣಶಾಸ್ತ್ರಿಗಳ ಅಂತರಂಗದ ಶೋಭೆಯಲ್ಲಿ ಹಿಂದಿನದೊಂದು ಸಂಗತಿ ಸುಟಗೊಂಡಿತು: ಹೆಂಡತಿಯ ಮೊದಲ ಬಾಣಂತಿತನ, ಒಂದು ತಿಂಗಳು ಬದುಕಿ ಹೆಣ್ಣು ಮಗು ತೀರಿಕೊಂಡಿತ್ತು. ಅದಕ್ಕೆ ಸಂಸ್ಕಾರ ಮಾಡಲು ನಾನು ನಮ್ಮ ತೋಟಕ್ಕೆ ಹೋದಾಗ ಅನ್ಯಜಾತಿಯವರ ಒಂದು ಕೂಸೂ ಅದೇ ಕಾಲಕ್ಕೆ ಮೃತ್ಯವಶವಾಗಿ, ಅದನ್ನೂ ನಮ್ಮ ತೋಟಕ್ಕೆ ಸಮೀಪದ ಹೊಲದಲ್ಲಿ ಸಂಸ್ಕಾರ ಮಾಡಲು ತಂದಿದ್ದರು. ಹಸುಗೂಸುಗಳು ತೀರಿಕೊಂಡಾಗ ಅನ್ಯಜಾತಿಯವರೆಲ್ಲ ಅನುಸರಿಸುವ ಪದ್ಧತಿಯಂತೆ, ಹೊಲದಲ್ಲಿದ್ದ ಹುತ್ತವನ್ನು ಬಗೆದು ಅವರು ತಮ್ಮ ಕೂಸನ್ನು ಮಲಗಿಸಲು ಹೋದಾಗ, ನಾಗರಹಾವು ಹುತ್ತದಾಚೆಗೆ ಹೊರಬಂದು ಹೆಡೆ ಬಿಚ್ಚಿತು. ತಕ್ಷಣ ಪುರೋಹಿತ ವೆಂಕಣ್ಣ ಜೋಯಿಸರು ಬೇಡ ಬೇಡವೆಂದರೂ ಆ ಹಾವನ್ನು ಕೋಲಿನಿಂದ ಬಡಿದು ಕೊಂದು, ಸತ್ತ ಕೂಸನ್ನು ಹುತ್ತದೊಳಗೆ ಮಲಗಿಸಿ, ಹುತ್ತದ ಮಣ್ಣಿನಿಂದ ಮುಚ್ಚಿ, ಅದರ ಮೇಲೆ ಕಾರೆ ಮುಳ್ಳನ್ನು ಹೊದಿಸಿ, ಮೇಲೊಂದು ದೊಡ್ಡ ಕಲ್ಲನ್ನಿಟ್ಟು, ಆ ಜನ ತಮ್ಮ ಕೂಸಿನ ಸಂಸ್ಕಾರವನ್ನು ಆ ರೀತಿಯಲ್ಲಿ ಪೂರೈಸಿದ್ದರು!...<br />
{{gap}}ಮನೆಗೆ ಹಿಂದಿರುಗಿದಾಗ ಈ ವಿಷಯವನ್ನು ಪ್ರಾಸಂಗಿಕವಾಗಿ ಹೆಂಡತಿಗೆ ತಿಳಿಸಿದಾಗ ನಾಗು ಕೇಳಿದ್ದಳು...<br />
{{gap}}“ಕೂಸನ್ನು ಹುತ್ತದೊಳಗೆ ಯಾಕೆ ಹಾಕ್ತಾರೆ?”<br />
{{gap}}“ಒಂದೆರಡು ತಿಂಗಳಿನ ಕೂಸು ಇನ್ನೂ ಗರ್ಭದಲ್ಲಿರೊ ಪಿಂಡದ ಹಾಗೆ ಕೈ ಕಾಲು ಮುದುರಿಕೊಂಡಿರುತ್ತೆ - ಹುತ್ತದೊಳಗೆ ಹಾವು ಸಿಂಬಿ ಸುತ್ತಿ ಮಲಗಿರುತ್ತಲ್ಲ, ಹಾಗೆ... ಹುತ್ತದ ಕತ್ತಲಿಗೂ ತಾಯಿಯ ಗರ್ಭಕೋಶದ ಕತ್ತಲಿಗೂ ಸಾಮ್ಯವಿದೆ. ಅದರಂತೆ ಹಾವು, ಎಳೆಕೂಸು ಎರಡೂ ಸಿಂಬಿ ಸುತ್ತಿ ಮಲಗುತ್ತವೆ; ಹಾಲು ಕುಡಿಯುತ್ತವೆ... ಅವೆರಡಕ್ಕೂ ಇಷ್ಟು ಸಾಮ್ಯವಿರೋದರಿಂದ ಪ್ರಾಯಶಃ ಈ ಪದ್ಧತಿಯನ್ನು ಅನುಸರಿಸ್ತಾರೆ-“ ಎಂದು ಹೇಳಿದ ನೆನಪು...<br />
“ಇದಕ್ಕೆ ಇರಬೇಕು, ಒಂದು ಸಲ ಬುಂಡಮ್ಮ ಯಾವುದೊ ಮಾತಿಗೆ 'ಹುತ್ತದ ಮೊಗ ಹೊಟ್ಟೆ ವಳುಗೆ' ಅಂದಿದ್ದಳು!” ಎಂದು ಉದ್ಗರಿಸಿದ ನಾಗು,<noinclude></noinclude>
k3cap6kuktxpp0cx09q61gdluo4ba7d
316868
316802
2026-05-04T11:06:33Z
Pragathi. BH
7585
/* Validated */
316868
proofread-page
text/x-wiki
<noinclude><pagequality level="4" user="Pragathi. BH" /></noinclude>________________
{{rh|left=ಸಮಗ್ರ ಕಾದಂಬರಿಗಳು|center=|right=೧೯೭}}
ಎಂದರೂ ಕೇಳದೆ ತಮ್ಮ ಶುಶೂಷೆಗೆ ನಡುಕಟ್ಟಿ ನಿಂತು, ತಾವು ಮಾಡಿದ ವಾಂತಿ, ಭೇದಿಗಳನ್ನು ಸ್ವಲ್ಪವೂ ಬೇಸರಿಸದೆ ತಾನೇ ತನ್ನ ಕಯ್ಯಂದ ಬಳಿದು, ತಮ್ಮನ್ನು ಬದುಕಿಸಿ, ಅನಂತರ ತಾನೇ ಕಾಲಾರಾ ಪಿಡುಗಿಗೆ ತುತ್ತಾದುದನ್ನು ನೆನೆನೆನೆದು ಅತ್ತರು... ನೀನಿದ್ದರೆ ಹೀಗಾಗುತ್ತಿತ್ತೆ?- ಧರ್ಮದ ಬೇಲಿಯಾಗಿ ನೀನು ಇಂಥ ಅವಿವೇಕದಿಂದ ನನ್ನನ್ನು ರಕ್ಷಿಸುತ್ತಿದೆಯಲ್ಲವೆ?...
{{gap}}ಕೃಷ್ಣಶಾಸ್ತ್ರಿಗಳ ಅಂತರಂಗದ ಶೋಭೆಯಲ್ಲಿ ಹಿಂದಿನದೊಂದು ಸಂಗತಿ ಸುಟಗೊಂಡಿತು: ಹೆಂಡತಿಯ ಮೊದಲ ಬಾಣಂತಿತನ, ಒಂದು ತಿಂಗಳು ಬದುಕಿ ಹೆಣ್ಣು ಮಗು ತೀರಿಕೊಂಡಿತ್ತು. ಅದಕ್ಕೆ ಸಂಸ್ಕಾರ ಮಾಡಲು ನಾನು ನಮ್ಮ ತೋಟಕ್ಕೆ ಹೋದಾಗ ಅನ್ಯಜಾತಿಯವರ ಒಂದು ಕೂಸೂ ಅದೇ ಕಾಲಕ್ಕೆ ಮೃತ್ಯವಶವಾಗಿ, ಅದನ್ನೂ ನಮ್ಮ ತೋಟಕ್ಕೆ ಸಮೀಪದ ಹೊಲದಲ್ಲಿ ಸಂಸ್ಕಾರ ಮಾಡಲು ತಂದಿದ್ದರು. ಹಸುಗೂಸುಗಳು ತೀರಿಕೊಂಡಾಗ ಅನ್ಯಜಾತಿಯವರೆಲ್ಲ ಅನುಸರಿಸುವ ಪದ್ಧತಿಯಂತೆ, ಹೊಲದಲ್ಲಿದ್ದ ಹುತ್ತವನ್ನು ಬಗೆದು ಅವರು ತಮ್ಮ ಕೂಸನ್ನು ಮಲಗಿಸಲು ಹೋದಾಗ, ನಾಗರಹಾವು ಹುತ್ತದಾಚೆಗೆ ಹೊರಬಂದು ಹೆಡೆ ಬಿಚ್ಚಿತು. ತಕ್ಷಣ ಪುರೋಹಿತ ವೆಂಕಣ್ಣ ಜೋಯಿಸರು ಬೇಡ ಬೇಡವೆಂದರೂ ಆ ಹಾವನ್ನು ಕೋಲಿನಿಂದ ಬಡಿದು ಕೊಂದು, ಸತ್ತ ಕೂಸನ್ನು ಹುತ್ತದೊಳಗೆ ಮಲಗಿಸಿ, ಹುತ್ತದ ಮಣ್ಣಿನಿಂದ ಮುಚ್ಚಿ, ಅದರ ಮೇಲೆ ಕಾರೆ ಮುಳ್ಳನ್ನು ಹೊದಿಸಿ, ಮೇಲೊಂದು ದೊಡ್ಡ ಕಲ್ಲನ್ನಿಟ್ಟು, ಆ ಜನ ತಮ್ಮ ಕೂಸಿನ ಸಂಸ್ಕಾರವನ್ನು ಆ ರೀತಿಯಲ್ಲಿ ಪೂರೈಸಿದ್ದರು!...<br />
{{gap}}ಮನೆಗೆ ಹಿಂದಿರುಗಿದಾಗ ಈ ವಿಷಯವನ್ನು ಪ್ರಾಸಂಗಿಕವಾಗಿ ಹೆಂಡತಿಗೆ ತಿಳಿಸಿದಾಗ ನಾಗು ಕೇಳಿದ್ದಳು...<br />
{{gap}}“ಕೂಸನ್ನು ಹುತ್ತದೊಳಗೆ ಯಾಕೆ ಹಾಕ್ತಾರೆ?”<br />
{{gap}}“ಒಂದೆರಡು ತಿಂಗಳಿನ ಕೂಸು ಇನ್ನೂ ಗರ್ಭದಲ್ಲಿರೊ ಪಿಂಡದ ಹಾಗೆ ಕೈ ಕಾಲು ಮುದುರಿಕೊಂಡಿರುತ್ತೆ - ಹುತ್ತದೊಳಗೆ ಹಾವು ಸಿಂಬಿ ಸುತ್ತಿ ಮಲಗಿರುತ್ತಲ್ಲ, ಹಾಗೆ... ಹುತ್ತದ ಕತ್ತಲಿಗೂ ತಾಯಿಯ ಗರ್ಭಕೋಶದ ಕತ್ತಲಿಗೂ ಸಾಮ್ಯವಿದೆ. ಅದರಂತೆ ಹಾವು, ಎಳೆಕೂಸು ಎರಡೂ ಸಿಂಬಿ ಸುತ್ತಿ ಮಲಗುತ್ತವೆ; ಹಾಲು ಕುಡಿಯುತ್ತವೆ... ಅವೆರಡಕ್ಕೂ ಇಷ್ಟು ಸಾಮ್ಯವಿರೋದರಿಂದ ಪ್ರಾಯಶಃ ಈ ಪದ್ಧತಿಯನ್ನು ಅನುಸರಿಸ್ತಾರೆ-“ ಎಂದು ಹೇಳಿದ ನೆನಪು...<br />
“ಇದಕ್ಕೆ ಇರಬೇಕು, ಒಂದು ಸಲ ಬುಂಡಮ್ಮ ಯಾವುದೊ ಮಾತಿಗೆ 'ಹುತ್ತದ ಮೊಗ ಹೊಟ್ಟೆ ವಳುಗೆ' ಅಂದಿದ್ದಳು!” ಎಂದು ಉದ್ಗರಿಸಿದ ನಾಗು,<noinclude></noinclude>
qborml1ckcnf98sgnh9fpcccnrywtw8
316869
316868
2026-05-04T11:07:35Z
Pragathi. BH
7585
316869
proofread-page
text/x-wiki
<noinclude><pagequality level="4" user="Pragathi. BH" /></noinclude>________________
{{rh|left=ಸಮಗ್ರ ಕಾದಂಬರಿಗಳು|center=|right=೧೯೭}}
ಎಂದರೂ ಕೇಳದೆ ತಮ್ಮ ಶುಶೂಷೆಗೆ ನಡುಕಟ್ಟಿ ನಿಂತು, ತಾವು ಮಾಡಿದ ವಾಂತಿ, ಭೇದಿಗಳನ್ನು ಸ್ವಲ್ಪವೂ ಬೇಸರಿಸದೆ ತಾನೇ ತನ್ನ ಕಯ್ಯಂದ ಬಳಿದು, ತಮ್ಮನ್ನು ಬದುಕಿಸಿ, ಅನಂತರ ತಾನೇ ಕಾಲಾರಾ ಪಿಡುಗಿಗೆ ತುತ್ತಾದುದನ್ನು ನೆನೆನೆನೆದು ಅತ್ತರು... ನೀನಿದ್ದರೆ ಹೀಗಾಗುತ್ತಿತ್ತೆ?- ಧರ್ಮದ ಬೇಲಿಯಾಗಿ ನೀನು ಇಂಥ ಅವಿವೇಕದಿಂದ ನನ್ನನ್ನು ರಕ್ಷಿಸುತ್ತಿದೆಯಲ್ಲವೆ?...
{{gap}}ಕೃಷ್ಣಶಾಸ್ತ್ರಿಗಳ ಅಂತರಂಗದ ಶೋಭೆಯಲ್ಲಿ ಹಿಂದಿನದೊಂದು ಸಂಗತಿ ಸುಟಗೊಂಡಿತು: ಹೆಂಡತಿಯ ಮೊದಲ ಬಾಣಂತಿತನ, ಒಂದು ತಿಂಗಳು ಬದುಕಿ ಹೆಣ್ಣು ಮಗು ತೀರಿಕೊಂಡಿತ್ತು. ಅದಕ್ಕೆ ಸಂಸ್ಕಾರ ಮಾಡಲು ನಾನು ನಮ್ಮ ತೋಟಕ್ಕೆ ಹೋದಾಗ ಅನ್ಯಜಾತಿಯವರ ಒಂದು ಕೂಸೂ ಅದೇ ಕಾಲಕ್ಕೆ ಮೃತ್ಯವಶವಾಗಿ, ಅದನ್ನೂ ನಮ್ಮ ತೋಟಕ್ಕೆ ಸಮೀಪದ ಹೊಲದಲ್ಲಿ ಸಂಸ್ಕಾರ ಮಾಡಲು ತಂದಿದ್ದರು. ಹಸುಗೂಸುಗಳು ತೀರಿಕೊಂಡಾಗ ಅನ್ಯಜಾತಿಯವರೆಲ್ಲ ಅನುಸರಿಸುವ ಪದ್ಧತಿಯಂತೆ, ಹೊಲದಲ್ಲಿದ್ದ ಹುತ್ತವನ್ನು ಬಗೆದು ಅವರು ತಮ್ಮ ಕೂಸನ್ನು ಮಲಗಿಸಲು ಹೋದಾಗ, ನಾಗರಹಾವು ಹುತ್ತದಾಚೆಗೆ ಹೊರಬಂದು ಹೆಡೆ ಬಿಚ್ಚಿತು. ತಕ್ಷಣ ಪುರೋಹಿತ ವೆಂಕಣ್ಣ ಜೋಯಿಸರು ಬೇಡ ಬೇಡವೆಂದರೂ ಆ ಹಾವನ್ನು ಕೋಲಿನಿಂದ ಬಡಿದು ಕೊಂದು, ಸತ್ತ ಕೂಸನ್ನು ಹುತ್ತದೊಳಗೆ ಮಲಗಿಸಿ, ಹುತ್ತದ ಮಣ್ಣಿನಿಂದ ಮುಚ್ಚಿ, ಅದರ ಮೇಲೆ ಕಾರೆ ಮುಳ್ಳನ್ನು ಹೊದಿಸಿ, ಮೇಲೊಂದು ದೊಡ್ಡ ಕಲ್ಲನ್ನಿಟ್ಟು, ಆ ಜನ ತಮ್ಮ ಕೂಸಿನ ಸಂಸ್ಕಾರವನ್ನು ಆ ರೀತಿಯಲ್ಲಿ ಪೂರೈಸಿದ್ದರು!...<br />
{{gap}}ಮನೆಗೆ ಹಿಂದಿರುಗಿದಾಗ ಈ ವಿಷಯವನ್ನು ಪ್ರಾಸಂಗಿಕವಾಗಿ ಹೆಂಡತಿಗೆ ತಿಳಿಸಿದಾಗ ನಾಗು ಕೇಳಿದ್ದಳು...<br />
{{gap}}“ಕೂಸನ್ನು ಹುತ್ತದೊಳಗೆ ಯಾಕೆ ಹಾಕ್ತಾರೆ?”<br />
{{gap}}“ಒಂದೆರಡು ತಿಂಗಳಿನ ಕೂಸು ಇನ್ನೂ ಗರ್ಭದಲ್ಲಿರೊ ಪಿಂಡದ ಹಾಗೆ ಕೈ ಕಾಲು ಮುದುರಿಕೊಂಡಿರುತ್ತೆ - ಹುತ್ತದೊಳಗೆ ಹಾವು ಸಿಂಬಿ ಸುತ್ತಿ ಮಲಗಿರುತ್ತಲ್ಲ, ಹಾಗೆ... ಹುತ್ತದ ಕತ್ತಲಿಗೂ ತಾಯಿಯ ಗರ್ಭಕೋಶದ ಕತ್ತಲಿಗೂ ಸಾಮ್ಯವಿದೆ. ಅದರಂತೆ ಹಾವು, ಎಳೆಕೂಸು ಎರಡೂ ಸಿಂಬಿ ಸುತ್ತಿ ಮಲಗುತ್ತವೆ; ಹಾಲು ಕುಡಿಯುತ್ತವೆ... ಅವೆರಡಕ್ಕೂ ಇಷ್ಟು ಸಾಮ್ಯವಿರೋದರಿಂದ ಪ್ರಾಯಶಃ ಈ ಪದ್ಧತಿಯನ್ನು ಅನುಸರಿಸ್ತಾರೆ-“ ಎಂದು ಹೇಳಿದ ನೆನಪು...<br />
{{gap}}“ಇದಕ್ಕೆ ಇರಬೇಕು, ಒಂದು ಸಲ ಬುಂಡಮ್ಮ ಯಾವುದೊ ಮಾತಿಗೆ 'ಹುತ್ತದ ಮೊಗ ಹ್ವಟ್ಟೆ ವಳುಗೆ' ಅಂದಿದ್ದಳು!” ಎಂದು ಉದ್ಗರಿಸಿದ ನಾಗು,<noinclude></noinclude>
h6zcn5bhm072r58kk6xeeocaiwi3cfs
ಪುಟ:ವೈಶಾಖ.pdf/೨೧೪
104
82143
316803
192390
2026-05-04T09:38:50Z
Ashwini Rai K
8475
/* Proofread */
316803
proofread-page
text/x-wiki
<noinclude><pagequality level="3" user="Ashwini Rai K" /></noinclude>________________
{{rh|left=೧೯೮|center=|right=ವೈಶಾಖ}}
“ಅದೆಲ್ಲ ಸರಿ, ಆದರೆ ನಾವೇನು ಪಾಪ ಮಾಡಿದೆವು ಎಂದು ನಮ್ಮ ಕಂದನ್ನ ಕಿತ್ತುಕೊಂಡಿತು ವಿಧಿ?” ಎಂದು ಕಂಬನಿಗರೆದಿದ್ದಳು...
{{gap}}ಮೊದಲ ಶಿಶು ಮರಣ ಹೊಂದಿದ್ದು ನಾಗವೇಣಿಯ ಆರೋಗ್ಯ ಮೇಲೆ ಭಯಂಕರ ಪರಿಣಾಮ ಬೀರಿತು. ಅತಿಯಾಗಿ ಕೊರಗಿದ ಪರಿಣಾಮವಾಗಿ, ಅವಳಿಗೆ ಬಾಣಂತಿ ನಂಜಾಯಿತು. ಗುಣವಾಗಲು ಮೈಸೂರಿನ ಆಸ್ಪತ್ರೆಯನ್ನೆ ಸೇರಬೇಕಾಯಿತು. ಗುಣವಾಗಿ ಮನೆಗೆ ಮರಳುವಾಗ ತೌರಿನಿಂದ ತಂಗಿ ಶಕೂ ಕೂಡ ಬಂದಿದ್ದಳು. ಶಕುಂತಲ ಚೆಲ್ಲಾಟದ ಹುಡುಗಿಯಲ್ಲದಿದ್ದರೂ ಇಪ್ಪತ್ತು ಇಪ್ಪತ್ತೊಂದರ ಉಕ್ಕುವ ಹರೆಯದ ಯುವತಿ. ನನಗೂ ಒಳ್ಳೆಯ ಪ್ರಾಯ. ಅವಳು ಮನೆಗೆ ಮರಳಿ ಇನ್ನೂ ನೆಟ್ಟಗೆ ಹದಿನೈದು ದಿನಗಳೂ ಕಳೆದಿಲ್ಲ. ನಾಗು, ರಾತ್ರಿಯ ವೇಳೆ ನನ್ನನ್ನು ಗೋಪ್ಯವಾಗಿ ಕರೆದು “ಶಕೂ ನಾಳೆ ಅವಳ ಊರು ಅಗ್ರಹಾರಕ್ಕೆ ಹೋಗ್ತಾಳೆ” ಎಂದಾಗ, ನಾನು ಬೆರಗಾಗಿ, “ಯಾಕೆ?” ಎಂದೆ. “ಬೆಂಕಿ, ಬೆಣ್ಣೆ ಎರಡೂ ಒಂದೇ ಸ್ಥಳದಲ್ಲಿ ಇರುವುದು ಯುಕ್ತವಲ್ಲ. ನಾಳೆ ಗಾಡಿ ಕಟ್ಟಿಸಿ, ಮೊದಲು ಅವಳನ್ನು ಸಾಗಹಾಕಿ. “ಕಡ್ಡಿ ಮುರಿದಂತೆ ಹೇಳಿದ್ದಳು. ಆ ಪ್ರಕಾರ ಮಾರನೆ ದಿನವೆ ಶಕುಂತಲ ಅವಳ ಊರಿಗೆ ಪ್ರಯಾಣ ಬೆಳಸಿದ್ದಳು...<br />
{{gap}}ನಾಗವೇಣಿ ಹಾಗೆ ಮಾಡಿದ್ದು ತಪ್ಪು ಎಂದು ಹೇಳಲು ನನಗೆ ಯಾವ ಧೈರ್ಯ?- ಯಾರಿಗೆ ಗೊತ್ತು?- ಇನ್ನು ಕೆಲಕಾಲ ಶಕೂ ನಮ್ಮೊಡನೆಯೆ ಇದ್ದಿದ್ದರೆ, ಏನಾಗುತ್ತಿತ್ತೊ?... ಈ ಇಳಿವಯಸ್ಸಿನಲ್ಲಿ ಎಡವಿದ ನಾನು, ಆ ಪ್ರಾಯದಲ್ಲಿ ಎಡವುತ್ತಿರಲಿಲ್ಲ ಎಂದು ಯಾವ ಧೈರ್ಯದಿಂದ ಹೇಳಲಿ?... ನಾಗು, ಧರ್ಮದೇವತೆಯಾಗಿ ಆಗ ನನ್ನನ್ನು ನೀನು ಕಾಪಾಡಿದೆ. ಇಂದು ನೀನು ಬದುಕಿದ್ದಲ್ಲಿ ನಿಶ್ಚಯವಾಗಿಯೂ ಈ ಪತನದಿಂದ ನನ್ನನ್ನು ಪಾರು ಮಾಡುತ್ತಿದ್ದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ನಾಗು, ನಿನಗೆ ಪ್ರಮಾಣ ಮಾಡಿ ಹೇಳೇನೆ: “ಇನ್ನು ಮುಂದೆ ಎಂದೆಂದೂ ಹೀಗೆ ತಪ್ಪು ಮಾಡಲ್ಲ, ಖಂಡಿತ ಮಾಡಲ್ಲ. ದಯಮಾಡಿ ನನ್ನನ್ನು ನಂಬು” –ಥಟ್ಟನೆ ಚಾಟಿ ಏಟಿನಂತೆ ಯಾರೊ ಅಂದರು: ಊರೆಲ್ಲ ಸೂರೆಹೋದನಂತರ...! ಅದು ತಮ್ಮ ಹೆಂಡತಿಯ ಧ್ವನಿಯೊ ಅಥವಾ ತಮ್ಮೊಳಗಿನಿಂದಲೆ ಮೂಡಿದ ಮಾತೊ?<br />
{{gap}}ಕಣ್ಣೀರು ಒರೆಸಿಕೊಳ್ಳುತ್ತ, ಅಲ್ಲಿಂದ ಎದ್ದರು. ಮಗನನ್ನು ಸುಟ್ಟ ಜಾಗಕ್ಕೆ ಹೋದರು. ಕಣ್ಣೀರು ಮತ್ತೆ ಚೆಲ್ಲನೆ ಒಡೆಯಿತು. ಎರಡು ಕೆನ್ನೆಗಳನ್ನೂ ಒದ್ದೆ ಮಾಡಿ ಹರಿಯಿತು... ಕಣ್ಣೀರು ಸುರಿಸುತ್ತಿರುವಂತೆಯೆ ಎಳೆಬಿಸಿಲಿಗೆ ಹಸಿರನ್ನು<br /><noinclude></noinclude>
2n2ils3nmrisqquyg8lnsjj8l40knzi
316804
316803
2026-05-04T09:39:05Z
Ashwini Rai K
8475
316804
proofread-page
text/x-wiki
<noinclude><pagequality level="3" user="Ashwini Rai K" /></noinclude>________________
{{rh|left=೧೯೮|center=|right=ವೈಶಾಖ}}
“ಅದೆಲ್ಲ ಸರಿ, ಆದರೆ ನಾವೇನು ಪಾಪ ಮಾಡಿದೆವು ಎಂದು ನಮ್ಮ ಕಂದನ್ನ ಕಿತ್ತುಕೊಂಡಿತು ವಿಧಿ?” ಎಂದು ಕಂಬನಿಗರೆದಿದ್ದಳು...
{{gap}}ಮೊದಲ ಶಿಶು ಮರಣ ಹೊಂದಿದ್ದು ನಾಗವೇಣಿಯ ಆರೋಗ್ಯ ಮೇಲೆ ಭಯಂಕರ ಪರಿಣಾಮ ಬೀರಿತು. ಅತಿಯಾಗಿ ಕೊರಗಿದ ಪರಿಣಾಮವಾಗಿ, ಅವಳಿಗೆ ಬಾಣಂತಿ ನಂಜಾಯಿತು. ಗುಣವಾಗಲು ಮೈಸೂರಿನ ಆಸ್ಪತ್ರೆಯನ್ನೆ ಸೇರಬೇಕಾಯಿತು. ಗುಣವಾಗಿ ಮನೆಗೆ ಮರಳುವಾಗ ತೌರಿನಿಂದ ತಂಗಿ ಶಕೂ ಕೂಡ ಬಂದಿದ್ದಳು. ಶಕುಂತಲ ಚೆಲ್ಲಾಟದ ಹುಡುಗಿಯಲ್ಲದಿದ್ದರೂ ಇಪ್ಪತ್ತು ಇಪ್ಪತ್ತೊಂದರ ಉಕ್ಕುವ ಹರೆಯದ ಯುವತಿ. ನನಗೂ ಒಳ್ಳೆಯ ಪ್ರಾಯ. ಅವಳು ಮನೆಗೆ ಮರಳಿ ಇನ್ನೂ ನೆಟ್ಟಗೆ ಹದಿನೈದು ದಿನಗಳೂ ಕಳೆದಿಲ್ಲ. ನಾಗು, ರಾತ್ರಿಯ ವೇಳೆ ನನ್ನನ್ನು ಗೋಪ್ಯವಾಗಿ ಕರೆದು “ಶಕೂ ನಾಳೆ ಅವಳ ಊರು ಅಗ್ರಹಾರಕ್ಕೆ ಹೋಗ್ತಾಳೆ” ಎಂದಾಗ, ನಾನು ಬೆರಗಾಗಿ, “ಯಾಕೆ?” ಎಂದೆ. “ಬೆಂಕಿ, ಬೆಣ್ಣೆ ಎರಡೂ ಒಂದೇ ಸ್ಥಳದಲ್ಲಿ ಇರುವುದು ಯುಕ್ತವಲ್ಲ. ನಾಳೆ ಗಾಡಿ ಕಟ್ಟಿಸಿ, ಮೊದಲು ಅವಳನ್ನು ಸಾಗಹಾಕಿ. “ಕಡ್ಡಿ ಮುರಿದಂತೆ ಹೇಳಿದ್ದಳು. ಆ ಪ್ರಕಾರ ಮಾರನೆ ದಿನವೆ ಶಕುಂತಲ ಅವಳ ಊರಿಗೆ ಪ್ರಯಾಣ ಬೆಳಸಿದ್ದಳು...<br />
{{gap}}ನಾಗವೇಣಿ ಹಾಗೆ ಮಾಡಿದ್ದು ತಪ್ಪು ಎಂದು ಹೇಳಲು ನನಗೆ ಯಾವ ಧೈರ್ಯ?- ಯಾರಿಗೆ ಗೊತ್ತು?- ಇನ್ನು ಕೆಲಕಾಲ ಶಕೂ ನಮ್ಮೊಡನೆಯೆ ಇದ್ದಿದ್ದರೆ, ಏನಾಗುತ್ತಿತ್ತೊ?... ಈ ಇಳಿವಯಸ್ಸಿನಲ್ಲಿ ಎಡವಿದ ನಾನು, ಆ ಪ್ರಾಯದಲ್ಲಿ ಎಡವುತ್ತಿರಲಿಲ್ಲ ಎಂದು ಯಾವ ಧೈರ್ಯದಿಂದ ಹೇಳಲಿ?... ನಾಗು, ಧರ್ಮದೇವತೆಯಾಗಿ ಆಗ ನನ್ನನ್ನು ನೀನು ಕಾಪಾಡಿದೆ. ಇಂದು ನೀನು ಬದುಕಿದ್ದಲ್ಲಿ ನಿಶ್ಚಯವಾಗಿಯೂ ಈ ಪತನದಿಂದ ನನ್ನನ್ನು ಪಾರು ಮಾಡುತ್ತಿದ್ದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ನಾಗು, ನಿನಗೆ ಪ್ರಮಾಣ ಮಾಡಿ ಹೇಳೇನೆ: “ಇನ್ನು ಮುಂದೆ ಎಂದೆಂದೂ ಹೀಗೆ ತಪ್ಪು ಮಾಡಲ್ಲ, ಖಂಡಿತ ಮಾಡಲ್ಲ. ದಯಮಾಡಿ ನನ್ನನ್ನು ನಂಬು” –ಥಟ್ಟನೆ ಚಾಟಿ ಏಟಿನಂತೆ ಯಾರೊ ಅಂದರು: ಊರೆಲ್ಲ ಸೂರೆಹೋದನಂತರ...! ಅದು ತಮ್ಮ ಹೆಂಡತಿಯ ಧ್ವನಿಯೊ ಅಥವಾ ತಮ್ಮೊಳಗಿನಿಂದಲೆ ಮೂಡಿದ ಮಾತೊ?<br />
{{gap}}ಕಣ್ಣೀರು ಒರೆಸಿಕೊಳ್ಳುತ್ತ, ಅಲ್ಲಿಂದ ಎದ್ದರು. ಮಗನನ್ನು ಸುಟ್ಟ ಜಾಗಕ್ಕೆ ಹೋದರು. ಕಣ್ಣೀರು ಮತ್ತೆ ಚೆಲ್ಲನೆ ಒಡೆಯಿತು. ಎರಡು ಕೆನ್ನೆಗಳನ್ನೂ ಒದ್ದೆ ಮಾಡಿ ಹರಿಯಿತು... ಕಣ್ಣೀರು ಸುರಿಸುತ್ತಿರುವಂತೆಯೆ ಎಳೆಬಿಸಿಲಿಗೆ ಹಸಿರನ್ನು<br /><noinclude></noinclude>
sloez5p9xibzhyihmdty5f477po3inc
316808
316804
2026-05-04T09:50:18Z
Pragathi. BH
7585
/* Validated */
316808
proofread-page
text/x-wiki
<noinclude><pagequality level="4" user="Pragathi. BH" /></noinclude>________________
{{rh|left=೧೯೮|center=|right=ವೈಶಾಖ}}
“ಅದೆಲ್ಲ ಸರಿ, ಆದರೆ ನಾವೇನು ಪಾಪ ಮಾಡಿದೆವು ಎಂದು ನಮ್ಮ ಕಂದನ್ನ ಕಿತ್ತುಕೊಂಡಿತು ವಿಧಿ?” ಎಂದು ಕಂಬನಿಗರೆದಿದ್ದಳು...
{{gap}}ಮೊದಲ ಶಿಶು ಮರಣ ಹೊಂದಿದ್ದು ನಾಗವೇಣಿಯ ಆರೋಗ್ಯ ಮೇಲೆ ಭಯಂಕರ ಪರಿಣಾಮ ಬೀರಿತು. ಅತಿಯಾಗಿ ಕೊರಗಿದ ಪರಿಣಾಮವಾಗಿ, ಅವಳಿಗೆ ಬಾಣಂತಿ ನಂಜಾಯಿತು. ಗುಣವಾಗಲು ಮೈಸೂರಿನ ಆಸ್ಪತ್ರೆಯನ್ನೆ ಸೇರಬೇಕಾಯಿತು. ಗುಣವಾಗಿ ಮನೆಗೆ ಮರಳುವಾಗ ತೌರಿನಿಂದ ತಂಗಿ ಶಕೂ ಕೂಡ ಬಂದಿದ್ದಳು. ಶಕುಂತಲ ಚೆಲ್ಲಾಟದ ಹುಡುಗಿಯಲ್ಲದಿದ್ದರೂ ಇಪ್ಪತ್ತು ಇಪ್ಪತ್ತೊಂದರ ಉಕ್ಕುವ ಹರೆಯದ ಯುವತಿ. ನನಗೂ ಒಳ್ಳೆಯ ಪ್ರಾಯ. ಅವಳು ಮನೆಗೆ ಮರಳಿ ಇನ್ನೂ ನೆಟ್ಟಗೆ ಹದಿನೈದು ದಿನಗಳೂ ಕಳೆದಿಲ್ಲ. ನಾಗು, ರಾತ್ರಿಯ ವೇಳೆ ನನ್ನನ್ನು ಗೋಪ್ಯವಾಗಿ ಕರೆದು “ಶಕೂ ನಾಳೆ ಅವಳ ಊರು ಅಗ್ರಹಾರಕ್ಕೆ ಹೋಗ್ತಾಳೆ” ಎಂದಾಗ, ನಾನು ಬೆರಗಾಗಿ, “ಯಾಕೆ?” ಎಂದೆ. “ಬೆಂಕಿ, ಬೆಣ್ಣೆ ಎರಡೂ ಒಂದೇ ಸ್ಥಳದಲ್ಲಿ ಇರುವುದು ಯುಕ್ತವಲ್ಲ. ನಾಳೆ ಗಾಡಿ ಕಟ್ಟಿಸಿ, ಮೊದಲು ಅವಳನ್ನು ಸಾಗಹಾಕಿ. “ಕಡ್ಡಿ ಮುರಿದಂತೆ ಹೇಳಿದ್ದಳು. ಆ ಪ್ರಕಾರ ಮಾರನೆ ದಿನವೆ ಶಕುಂತಲ ಅವಳ ಊರಿಗೆ ಪ್ರಯಾಣ ಬೆಳಸಿದ್ದಳು...<br />
{{gap}}ನಾಗವೇಣಿ ಹಾಗೆ ಮಾಡಿದ್ದು ತಪ್ಪು ಎಂದು ಹೇಳಲು ನನಗೆ ಯಾವ ಧೈರ್ಯ?- ಯಾರಿಗೆ ಗೊತ್ತು?- ಇನ್ನು ಕೆಲಕಾಲ ಶಕೂ ನಮ್ಮೊಡನೆಯೆ ಇದ್ದಿದ್ದರೆ, ಏನಾಗುತ್ತಿತ್ತೊ?... ಈ ಇಳಿವಯಸ್ಸಿನಲ್ಲಿ ಎಡವಿದ ನಾನು, ಆ ಪ್ರಾಯದಲ್ಲಿ ಎಡವುತ್ತಿರಲಿಲ್ಲ ಎಂದು ಯಾವ ಧೈರ್ಯದಿಂದ ಹೇಳಲಿ?... ನಾಗು, ಧರ್ಮದೇವತೆಯಾಗಿ ಆಗ ನನ್ನನ್ನು ನೀನು ಕಾಪಾಡಿದೆ. ಇಂದು ನೀನು ಬದುಕಿದ್ದಲ್ಲಿ ನಿಶ್ಚಯವಾಗಿಯೂ ಈ ಪತನದಿಂದ ನನ್ನನ್ನು ಪಾರು ಮಾಡುತ್ತಿದ್ದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ನಾಗು, ನಿನಗೆ ಪ್ರಮಾಣ ಮಾಡಿ ಹೇಳೇನೆ: “ಇನ್ನು ಮುಂದೆ ಎಂದೆಂದೂ ಹೀಗೆ ತಪ್ಪು ಮಾಡಲ್ಲ, ಖಂಡಿತ ಮಾಡಲ್ಲ. ದಯಮಾಡಿ ನನ್ನನ್ನು ನಂಬು” –ಥಟ್ಟನೆ ಚಾಟಿ ಏಟಿನಂತೆ ಯಾರೊ ಅಂದರು: ಊರೆಲ್ಲ ಸೂರೆಹೋದನಂತರ...! ಅದು ತಮ್ಮ ಹೆಂಡತಿಯ ಧ್ವನಿಯೊ ಅಥವಾ ತಮ್ಮೊಳಗಿನಿಂದಲೆ ಮೂಡಿದ ಮಾತೊ?<br />
{{gap}}ಕಣ್ಣೀರು ಒರೆಸಿಕೊಳ್ಳುತ್ತ, ಅಲ್ಲಿಂದ ಎದ್ದರು. ಮಗನನ್ನು ಸುಟ್ಟ ಜಾಗಕ್ಕೆ ಹೋದರು. ಕಣ್ಣೀರು ಮತ್ತೆ ಚೆಲ್ಲನೆ ಒಡೆಯಿತು. ಎರಡು ಕೆನ್ನೆಗಳನ್ನೂ ಒದ್ದೆ ಮಾಡಿ ಹರಿಯಿತು... ಕಣ್ಣೀರು ಸುರಿಸುತ್ತಿರುವಂತೆಯೆ ಎಳೆಬಿಸಿಲಿಗೆ ಹಸಿರನ್ನು<br /><noinclude></noinclude>
sz26uyrrlkzv8yq54tug6g2icd1qfq5
ಪುಟ:ವೈಶಾಖ.pdf/೨೧೫
104
82144
316805
192391
2026-05-04T09:40:53Z
Ashwini Rai K
8475
/* Proofread */
316805
proofread-page
text/x-wiki
<noinclude><pagequality level="3" user="Ashwini Rai K" /></noinclude>________________
{{rh|left=ಸಮಗ್ರ ಕಾದಂಬರಿಗಳು|center=|right=೧೯೯}}
ಉಕ್ಕಿಸುವ ಸಂಪಿಗೆ ಸಸಿಯನ್ನು ದೃಷ್ಟಿಸುತ್ತ ಕುಳಿತರು. ತಟ್ಟನೆ ಆವೇಶ ಬಂದವರಂತೆ, “ಕಂದಾ, ನಿನಗೆ ಪೂರಾ ಅನ್ಯಾಯ ಮಾಡಿದೆ. ಮಹಾಪಾಪಿ ನಾನು. ಮಹಾಪಾಪಿ... ಕ್ಷಮಿಸು ಎಂದು ಯಾವ ಬಾಯಿಂದ ಕೇಳಿ?... ಕೋಟಿ ಕೋಟಿ ಜನ್ನ ಕಳೆದರೂ ಈ ಪಾಪದಿಂದ ನನಗೆ ಮುಕ್ತಿಯಿಲ್ಲ... ಇಲ್ಲ.... ಇಲ್ಲವೇ ಇಲ್ಲ” ಎಂದು ಎದೆ ಬಡಿದುಕೊಳ್ಳುತ್ತ ಸಂಪಿಗೆ ಸಸಿಯೆದಿರು ಮಣ್ಣಿನಲ್ಲಿ ಹೊರಳಾಡಿದರು...
- ಅಷ್ಟರಲ್ಲಿ ತೋಟದೊಳಗೆ ಬಂದ ವೆಂಕಣ್ಣ ಜೋಯಿಸರು, ಶಾಸ್ತ್ರಿಗಳ ಅವಸ್ಥೆಯನ್ನು ದೂರದಿಂದಲೊ ನೋಡಿ ತವಕಗೊಂಡವರಾಗಿ,
“ಶಾಸ್ತಿಗಳೆ, ಶಾಸ್ತಿಗಳೆ- ಇದೇನು ನೀವು ಮಾಡ್ತಿರೋದು?...” ಎನ್ನುತ್ತ ಓಡಿ ಬಂದು ಅವರನ್ನು ಎತ್ತಿ ಕೂರಿಸುತ್ತ, “ಮಹಾಸಂಯಮಿ ನಮ್ಮ ಊರಿನಲ್ಲೆಲ್ಲ. ಎಂದು ಹೆಸರಾದ ನೀವೇ ಹೀಗೆ ಸಂಯಮ ಕಳೆದುಕೊಂಡರೆ, ನಮ್ಮಂಥವರ ಪಾಡೇನು?... ನೀವು ಕಂಡ ಹಾಗೆ, ನಾನೂ ಮೂರು ಗಂಡು ಮಕ್ಕಳನ್ನು ಕಳೆದುಕೊಂಡು ಕೂತಿದೀನಿ, ಪುತ್ರಶೋಖಂ ನಿರಂತರಂ ಎನ್ನುವ ಮಾತು ಸುಳ್ಳಲ್ಲ. ಆದರೂ, ಮಗ ಸತ್ತು ಇಷ್ಟು ಕಾಲ ಕಳೆದ ಬಳಿಕವೂ ಹೀಗೆ ನೀವು ಹುಚ್ಚಾಪಟ್ಟೆ ಆಡುವುದು ತರವೆ?” ಎಂದು ಸಂತೈಸಲು ಯತ್ನಿಸಿದರು.
ಶಾಸ್ತ್ರಿಗಳು ವೆಂಕಣ್ಣ ಜೋಯಿಸರನ್ನು ತಬ್ಬಿ,
“ವೆಂಕಣ್ಣ, ನನ್ನ ಯಾತನೆ ನಿಮಗೆ ಹೇಗೆ ತಿಳಿಯಬೇಕು?” ಎಂದು ಬಿಕ್ಕಿದರು. ಅದಕ್ಕೆ ಜೋಯಿಸರು,
- “ನಾನೂ ಕೂಡ ನೊಂದಿರುವವನೆ, ಕಿಟ್ಟಣ್ಣ... ನಿಮ್ಮ ದುಃಖ ನನಗೂ ಅರ್ಥವಾಗುತ್ತೆ, ಆದರೇನು ಮಾಡುವುದು? ನಮ್ಮ ಕೈಲೇನಿದೆ?- ನಮ್ಮ ಬದುಕು ನಡೆಯವವರೆಗೂ ನಾಣ್ಯ, ಅದು ನಿಮಗೂ ಗೊತ್ತಿಲ್ಲವೆ?- ಸಮಾಧಾನ ತಂದುಕೊಳ್ಳಿ"- ಎಂದು ತಮ್ಮ ಬೋಧೆ ಮಾಡಿದರು.
ಅರ್ಧ ತಾಸು ಕಳೆದಿರಬಹುದು. ಥಟ್ಟನೆ ಯಾವುದೋ ನಿರ್ಧಾರಕ್ಕೆ ಬಂದಂತೆ ಕೃಷ್ಣಶಾಸ್ತ್ರಿಗಳು ವೆಂಕಣ್ಣ ಜೋಯಿಸರ ತೆಕ್ಕೆಯಿಂದ ಬಿಡಿಸಿಕೊಳ್ಳುತ್ತ ಮೇಲೆದ್ದರು. ಹರಬಿಗಳನ್ನು ಎರಡು ಕೈಗಳಲ್ಲೂ ಎತ್ತಿಹಿಡಿದರು. ಮೌನವಾಗಿ ಕೊಳದಲ್ಲಿಗೆ ನಡೆದರು. ಎರಡು ಹರಬಿಗಳಿಗೂ ನೀರು ತುಂಬಿದರು. ಹೊಸದಾಗಿ ನೆಟ್ಟ ಅಡಿಕೆ ಸಸಿಗಳಿಗೆ ನೀರೆರೆಯಲು ಪ್ರಾರಂಭಿಸಿದರು. ಕೆಲಕಾಲ ಅವರನ್ನೇ ಎವೆಯಿಕ್ಕದೆ, ಗೌರವಪೂರ್ಣವಾಗಿ ನೋಡುತ್ತಿದ್ದು, 'ವಿಚಿತ್ರ ಪುರುಷ ಎಂದುಕೊಳ್ಳುತ್ತ, ವೆಂಕಣ್ಣ ಜೋಯಿಸರು ತೋಟದಿಂದ ಹೊರಟವರು<noinclude></noinclude>
nqd0u4rbwwlgwqg4cnhtgvis5c79l0n
316810
316805
2026-05-04T09:52:51Z
Pragathi. BH
7585
/* Validated */
316810
proofread-page
text/x-wiki
<noinclude><pagequality level="4" user="Pragathi. BH" /></noinclude>________________
{{rh|left=ಸಮಗ್ರ ಕಾದಂಬರಿಗಳು|center=|right=೧೯೯}}
ಉಕ್ಕಿಸುವ ಸಂಪಿಗೆ ಸಸಿಯನ್ನು ದೃಷ್ಟಿಸುತ್ತ ಕುಳಿತರು. ತಟ್ಟನೆ ಆವೇಶ ಬಂದವರಂತೆ, “ಕಂದಾ, ನಿನಗೆ ಪೂರಾ ಅನ್ಯಾಯ ಮಾಡಿದೆ. ಮಹಾಪಾಪಿ ನಾನು. ಮಹಾಪಾಪಿ... ಕ್ಷಮಿಸು ಎಂದು ಯಾವ ಬಾಯಿಂದ ಕೇಳಿ?... ಕೋಟಿ ಕೋಟಿ ಜನ್ಮ ಕಳೆದರೂ ಈ ಪಾಪದಿಂದ ನನಗೆ ಮುಕ್ತಿಯಿಲ್ಲ... ಇಲ್ಲ.... ಇಲ್ಲವೇ ಇಲ್ಲ” ಎಂದು ಎದೆ ಬಡಿದುಕೊಳ್ಳುತ್ತ ಸಂಪಿಗೆ ಸಸಿಯೆದಿರು ಮಣ್ಣಿನಲ್ಲಿ ಹೊರಳಾಡಿದರು...
{{gap}}ಅಷ್ಟರಲ್ಲಿ ತೋಟದೊಳಗೆ ಬಂದ ವೆಂಕಣ್ಣ ಜೋಯಿಸರು, ಶಾಸ್ತ್ರಿಗಳ ಅವಸ್ಥೆಯನ್ನು ದೂರದಿಂದಲೊ ನೋಡಿ ತವಕಗೊಂಡವರಾಗಿ,<br />
{{gap}}“ಶಾಸ್ತಿಗಳೆ, ಶಾಸ್ತಿಗಳೆ- ಇದೇನು ನೀವು ಮಾಡ್ತಿರೋದು?...” ಎನ್ನುತ್ತ ಓಡಿ ಬಂದು ಅವರನ್ನು ಎತ್ತಿ ಕೂರಿಸುತ್ತ, “ಮಹಾಸಂಯಮಿ ನಮ್ಮ ಊರಿನಲ್ಲೆಲ್ಲ. ಎಂದು ಹೆಸರಾದ ನೀವೇ ಹೀಗೆ ಸಂಯಮ ಕಳೆದುಕೊಂಡರೆ, ನಮ್ಮಂಥವರ ಪಾಡೇನು?... ನೀವು ಕಂಡ ಹಾಗೆ, ನಾನೂ ಮೂರು ಗಂಡು ಮಕ್ಕಳನ್ನು ಕಳೆದುಕೊಂಡು ಕೂತಿದೀನಿ, ಪುತ್ರಶೋಖಂ ನಿರಂತರಂ ಎನ್ನುವ ಮಾತು ಸುಳ್ಳಲ್ಲ. ಆದರೂ, ಮಗ ಸತ್ತು ಇಷ್ಟು ಕಾಲ ಕಳೆದ ಬಳಿಕವೂ ಹೀಗೆ ನೀವು ಹುಚ್ಚಾಪಟ್ಟೆ ಆಡುವುದು ತರವೆ?” ಎಂದು ಸಂತೈಸಲು ಯತ್ನಿಸಿದರು.
ಶಾಸ್ತ್ರಿಗಳು ವೆಂಕಣ್ಣ ಜೋಯಿಸರನ್ನು ತಬ್ಬಿ,
“ವೆಂಕಣ್ಣ, ನನ್ನ ಯಾತನೆ ನಿಮಗೆ ಹೇಗೆ ತಿಳಿಯಬೇಕು?” ಎಂದು ಬಿಕ್ಕಿದರು. ಅದಕ್ಕೆ ಜೋಯಿಸರು,<br />
{{gap}}“ನಾನೂ ಕೂಡ ನೊಂದಿರುವವನೆ, ಕಿಟ್ಟಣ್ಣ... ನಿಮ್ಮ ದುಃಖ ನನಗೂ ಅರ್ಥವಾಗುತ್ತೆ, ಆದರೇನು ಮಾಡುವುದು? ನಮ್ಮ ಕೈಲೇನಿದೆ?- ನಮ್ಮ ಬದುಕು ನಡೆಯವವರೆಗೂ ನಾಣ್ಯ, ಅದು ನಿಮಗೂ ಗೊತ್ತಿಲ್ಲವೆ?- ಸಮಾಧಾನ ತಂದುಕೊಳ್ಳಿ"- ಎಂದು ತಮ್ಮ ಬೋಧೆ ಮಾಡಿದರು.
ಅರ್ಧ ತಾಸು ಕಳೆದಿರಬಹುದು. ಥಟ್ಟನೆ ಯಾವುದೋ ನಿರ್ಧಾರಕ್ಕೆ ಬಂದಂತೆ ಕೃಷ್ಣಶಾಸ್ತ್ರಿಗಳು ವೆಂಕಣ್ಣ ಜೋಯಿಸರ ತೆಕ್ಕೆಯಿಂದ ಬಿಡಿಸಿಕೊಳ್ಳುತ್ತ ಮೇಲೆದ್ದರು. ಹರಬಿಗಳನ್ನು ಎರಡು ಕೈಗಳಲ್ಲೂ ಎತ್ತಿಹಿಡಿದರು. ಮೌನವಾಗಿ ಕೊಳದಲ್ಲಿಗೆ ನಡೆದರು. ಎರಡು ಹರಬಿಗಳಿಗೂ ನೀರು ತುಂಬಿದರು. ಹೊಸದಾಗಿ ನೆಟ್ಟ ಅಡಿಕೆ ಸಸಿಗಳಿಗೆ ನೀರೆರೆಯಲು ಪ್ರಾರಂಭಿಸಿದರು. ಕೆಲಕಾಲ ಅವರನ್ನೇ ಎವೆಯಿಕ್ಕದೆ, ಗೌರವಪೂರ್ಣವಾಗಿ ನೋಡುತ್ತಿದ್ದು, 'ವಿಚಿತ್ರ ಪುರುಷ ಎಂದುಕೊಳ್ಳುತ್ತ, ವೆಂಕಣ್ಣ ಜೋಯಿಸರು ತೋಟದಿಂದ ಹೊರಟವರು<noinclude></noinclude>
97r00cg8zmfbuiss7c7o4unryf9a2ld
316813
316810
2026-05-04T09:54:00Z
Pragathi. BH
7585
316813
proofread-page
text/x-wiki
<noinclude><pagequality level="4" user="Pragathi. BH" /></noinclude>________________
{{rh|left=ಸಮಗ್ರ ಕಾದಂಬರಿಗಳು|center=|right=೧೯೯}}
ಉಕ್ಕಿಸುವ ಸಂಪಿಗೆ ಸಸಿಯನ್ನು ದೃಷ್ಟಿಸುತ್ತ ಕುಳಿತರು. ತಟ್ಟನೆ ಆವೇಶ ಬಂದವರಂತೆ, “ಕಂದಾ, ನಿನಗೆ ಪೂರಾ ಅನ್ಯಾಯ ಮಾಡಿದೆ. ಮಹಾಪಾಪಿ ನಾನು. ಮಹಾಪಾಪಿ... ಕ್ಷಮಿಸು ಎಂದು ಯಾವ ಬಾಯಿಂದ ಕೇಳಿ?... ಕೋಟಿ ಕೋಟಿ ಜನ್ಮ ಕಳೆದರೂ ಈ ಪಾಪದಿಂದ ನನಗೆ ಮುಕ್ತಿಯಿಲ್ಲ... ಇಲ್ಲ.... ಇಲ್ಲವೇ ಇಲ್ಲ” ಎಂದು ಎದೆ ಬಡಿದುಕೊಳ್ಳುತ್ತ ಸಂಪಿಗೆ ಸಸಿಯೆದಿರು ಮಣ್ಣಿನಲ್ಲಿ ಹೊರಳಾಡಿದರು...
{{gap}}ಅಷ್ಟರಲ್ಲಿ ತೋಟದೊಳಗೆ ಬಂದ ವೆಂಕಣ್ಣ ಜೋಯಿಸರು, ಶಾಸ್ತ್ರಿಗಳ ಅವಸ್ಥೆಯನ್ನು ದೂರದಿಂದಲೊ ನೋಡಿ ತವಕಗೊಂಡವರಾಗಿ,<br />
{{gap}}“ಶಾಸ್ತಿಗಳೆ, ಶಾಸ್ತಿಗಳೆ- ಇದೇನು ನೀವು ಮಾಡ್ತಿರೋದು?...” ಎನ್ನುತ್ತ ಓಡಿ ಬಂದು ಅವರನ್ನು ಎತ್ತಿ ಕೂರಿಸುತ್ತ, “ಮಹಾಸಂಯಮಿ ನಮ್ಮ ಊರಿನಲ್ಲೆಲ್ಲ. ಎಂದು ಹೆಸರಾದ ನೀವೇ ಹೀಗೆ ಸಂಯಮ ಕಳೆದುಕೊಂಡರೆ, ನಮ್ಮಂಥವರ ಪಾಡೇನು?... ನೀವು ಕಂಡ ಹಾಗೆ, ನಾನೂ ಮೂರು ಗಂಡು ಮಕ್ಕಳನ್ನು ಕಳೆದುಕೊಂಡು ಕೂತಿದೀನಿ, ಪುತ್ರಶೋಖಂ ನಿರಂತರಂ ಎನ್ನುವ ಮಾತು ಸುಳ್ಳಲ್ಲ. ಆದರೂ, ಮಗ ಸತ್ತು ಇಷ್ಟು ಕಾಲ ಕಳೆದ ಬಳಿಕವೂ ಹೀಗೆ ನೀವು ಹುಚ್ಚಾಪಟ್ಟೆ ಆಡುವುದು ತರವೆ?” ಎಂದು ಸಂತೈಸಲು ಯತ್ನಿಸಿದರು.
ಶಾಸ್ತ್ರಿಗಳು ವೆಂಕಣ್ಣ ಜೋಯಿಸರನ್ನು ತಬ್ಬಿ,
“ವೆಂಕಣ್ಣ, ನನ್ನ ಯಾತನೆ ನಿಮಗೆ ಹೇಗೆ ತಿಳಿಯಬೇಕು?” ಎಂದು ಬಿಕ್ಕಿದರು. ಅದಕ್ಕೆ ಜೋಯಿಸರು,<br />
{{gap}}“ನಾನೂ ಕೂಡ ನೊಂದಿರುವವನೆ, ಕಿಟ್ಟಣ್ಣ... ನಿಮ್ಮ ದುಃಖ ನನಗೂ ಅರ್ಥವಾಗುತ್ತೆ, ಆದರೇನು ಮಾಡುವುದು? ನಮ್ಮ ಕೈಲೇನಿದೆ?- ನಮ್ಮ ಬದುಕು ನಡೆಯವವರೆಗೂ ನಾಣ್ಯ, ಅದು ನಿಮಗೂ ಗೊತ್ತಿಲ್ಲವೆ?- ಸಮಾಧಾನ ತಂದುಕೊಳ್ಳಿ"- ಎಂದು ತಮ್ಮ ಬೋಧೆ ಮಾಡಿದರು.<br />
{{gap}}ಅರ್ಧ ತಾಸು ಕಳೆದಿರಬಹುದು. ಥಟ್ಟನೆ ಯಾವುದೋ ನಿರ್ಧಾರಕ್ಕೆ ಬಂದಂತೆ ಕೃಷ್ಣಶಾಸ್ತ್ರಿಗಳು ವೆಂಕಣ್ಣ ಜೋಯಿಸರ ತೆಕ್ಕೆಯಿಂದ ಬಿಡಿಸಿಕೊಳ್ಳುತ್ತ ಮೇಲೆದ್ದರು. ಹರಬಿಗಳನ್ನು ಎರಡು ಕೈಗಳಲ್ಲೂ ಎತ್ತಿಹಿಡಿದರು. ಮೌನವಾಗಿ ಕೊಳದಲ್ಲಿಗೆ ನಡೆದರು. ಎರಡು ಹರಬಿಗಳಿಗೂ ನೀರು ತುಂಬಿದರು. ಹೊಸದಾಗಿ ನೆಟ್ಟ ಅಡಿಕೆ ಸಸಿಗಳಿಗೆ ನೀರೆರೆಯಲು ಪ್ರಾರಂಭಿಸಿದರು. ಕೆಲಕಾಲ ಅವರನ್ನೇ ಎವೆಯಿಕ್ಕದೆ, ಗೌರವಪೂರ್ಣವಾಗಿ ನೋಡುತ್ತಿದ್ದು, 'ವಿಚಿತ್ರ ಪುರುಷ ಎಂದುಕೊಳ್ಳುತ್ತ, ವೆಂಕಣ್ಣ ಜೋಯಿಸರು ತೋಟದಿಂದ ಹೊರಟವರು<noinclude></noinclude>
1f0hfgmptujps4l1kygfs7ccz59ter2
ಪುಟ:ಯಕ್ಷಗಾನ ಮಕರಂದ.pdf/೮
104
99715
316841
306783
2026-05-04T10:24:28Z
Hariprasad Shetty10
7490
316841
proofread-page
text/x-wiki
<noinclude><pagequality level="3" user="Anzx-ooo" />|+ಲೇಖನಗಳು-ಲೇಖಕರು
ವ್ಯಕ್ತಿ
{{rh||ಲೇಖನಗಳು-ಲೇಖಕರು|}}</noinclude>{| class=wikitable
|+ಲೇಖನಗಳು-ಲೇಖಕರು
|-
| 1. || ತೆನೆಗಟ್ಟಿದ ತಿರುಳು (ಕವನ) || : || ಏರ್ಯ ಲಕ್ಷ್ಮೀನಾರಾಯಣ ಆಳ್ವ || 1
|-
| 2. || ಯಕ್ಷಗಾನ ವಾಚಸ್ಪತಿ ಪೊಳಲಿ ಶಂಕರನಾರಾಯಣ ಶಾಸ್ತ್ರಿ || : || ಅಮ್ಮೆಂಬಳ ಶಂಕರನಾರಾಯಣ ನಾವಡ || 3
|-
| 3. || ಪೊಳಲಿ ಶಾಸ್ತ್ರಿಯವರು ಮತ್ತು ನಾರಾಯಣ ಕಿಲ್ಲೆಯವರು || : || ಕಯ್ಯಾರ ಕಿಂಞಣ್ಣ ರೈ || 17
|-
| 4. || ನಮ್ಮ ತಂದೆಯವರು || : || ನಿತ್ಯಾನಂದ ಕಾರಂತ || 29
|-
| 5. || ನಮ್ಮ ಶಾಸ್ತ್ರಿಗಳು || : || ಕೆ. ಪಾಂಡುರಂಗ ಪೈ || 38
|-
| 6. || ಕಿಲೆಂಜಾರು ಕಾರಂತರು ಪೊಳಲಿ ಶಾಸ್ತ್ರಿಗಳಾದ ಬಗೆ || : || ಪೊಳಲಿ ಪದ್ಮನಾಭ ಭಟ್ಟ || 44
|-
|7. || ಗುರುವರ್ಯ ಶ್ರೀ ಶಾಸ್ತ್ರಿಗಳು || : || ಡಾ। ಕೆ. ಎಸ್. ಭಟ್ || 50
|-
|8. || ಶಿಸ್ತಿನ ಮೂರ್ತಿ || : || ಪದ್ಮಾವತಿ ಎಸ್. || 54
|-
|9. || ದಿ. ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು || : || ಕೆ. ಬಾಲಕೃಷ್ಣ ರಾವ್ || 59
|-
|10. || ಯಕ್ಷಗಾನ ವಾಚಸ್ಪತಿ ದಿ। ಪೊಳಲಿ ಶಾಸ್ತ್ರಿಗಳು || : || ಎಂ. ಆರ್. ಶಾಸ್ತ್ರಿ || 64
|-
|11. || ಅಭಿಮಾನಧನ ಶ್ರೀ ಶ್ರೀ ಶಾಸ್ತ್ರಿಗಳು || : || ಅ. ಬಾಲಕೃಷ್ಣ ಶೆಟ್ಟಿ, ಪೊಳಲಿ || 69
|-
|12. || ಶಾಸ್ತ್ರಿಗಳ ಸಮದಂಡಿಗಳು || : || ಮಂದಾರ ಕೇಶವ ಭಟ್ಟ || 73
|-
|13. || ಶಾಸ್ತ್ರಿಗಳು ಚಿತ್ರಿಸಿದ ಕೆಲವು ಪಾತ್ರಗಳು || : || ಕೃ. ಭ. ಪೆರ್ಲ || 82
|-
|14. || ಅಂತಃಸತ್ವ ಪ್ರಭಾವ || : || ಮಲ್ಪೆ ಶಂಕರನಾರಾಯಣ ಸಾವಂಗ || 92
|-
|15. || ಬಹುಮುಖ ಪ್ರತಿಭೆಯ ಶಂಕರನಾರಾಯಣ ಶಾಸ್ತ್ರಿಗಳು || : || ಅಡ್ಡ ವಾಸು ಶೆಟ್ಟಿ || 95
|-
|16. || ಪೊಳಲಿ ಪಾತ್ರೋಷಕ ಶಾಸ್ತ್ರಿ || : || ಬಿ. ಜಯರಾಮ ಶೆಟ್ಟಿ || 101
|-
|17. || ಪೊಳಲಿ ಶಂಕರನಾರಾಯಣ ಶಾಸ್ತ್ರಿ || : || ಕೊಳಂಬೆ ಪುಟ್ಟಣ್ಣ ಗೌಡ || 105
|-
|18. || ಶಾಸ್ತ್ರಿಗಳ ಸವಿನೆನಪು || : || ದೇರಾಜೆ ಸೀತಾರಾಮಯ್ಯ || 112
|-
|19. || ಪೊಳಲಿ ಶಾಸ್ತ್ರಿಯವರು : ಕೆಲವು ನೆನಪುಗಳು || : || ಎಂ. ರಾಮಚಂದ್ರ ||121
|-
| 20. || ಸೂರ್ಯನಿಗೆ ಸೊಡರು || : || ತೆಕ್ಕುಂಜ ದಾಮೋದರ ಭಟ್ಟ || 127
|-
| 21. || ಶಾಸ್ತ್ರಿಗಳ ಕಲಾಪ್ರತಿಭೆಯ ಎರಡು ಮುಖಗಳು || : || ಕೆದಂಬಾಡಿ ಜತ್ತಪ್ಪ ರೈ || 131<noinclude></noinclude>
i5f4nilnmsym6akhdlc5o7chduzm9kq
316844
316841
2026-05-04T10:25:07Z
Hariprasad Shetty10
7490
316844
proofread-page
text/x-wiki
<noinclude><pagequality level="3" user="Anzx-ooo" />
{{rh||ಲೇಖನಗಳು-ಲೇಖಕರು|}}
{{rh||ವ್ಯಕ್ತಿ|}}</noinclude>{| class=wikitable
|+ಲೇಖನಗಳು-ಲೇಖಕರು
|-
| 1. || ತೆನೆಗಟ್ಟಿದ ತಿರುಳು (ಕವನ) || : || ಏರ್ಯ ಲಕ್ಷ್ಮೀನಾರಾಯಣ ಆಳ್ವ || 1
|-
| 2. || ಯಕ್ಷಗಾನ ವಾಚಸ್ಪತಿ ಪೊಳಲಿ ಶಂಕರನಾರಾಯಣ ಶಾಸ್ತ್ರಿ || : || ಅಮ್ಮೆಂಬಳ ಶಂಕರನಾರಾಯಣ ನಾವಡ || 3
|-
| 3. || ಪೊಳಲಿ ಶಾಸ್ತ್ರಿಯವರು ಮತ್ತು ನಾರಾಯಣ ಕಿಲ್ಲೆಯವರು || : || ಕಯ್ಯಾರ ಕಿಂಞಣ್ಣ ರೈ || 17
|-
| 4. || ನಮ್ಮ ತಂದೆಯವರು || : || ನಿತ್ಯಾನಂದ ಕಾರಂತ || 29
|-
| 5. || ನಮ್ಮ ಶಾಸ್ತ್ರಿಗಳು || : || ಕೆ. ಪಾಂಡುರಂಗ ಪೈ || 38
|-
| 6. || ಕಿಲೆಂಜಾರು ಕಾರಂತರು ಪೊಳಲಿ ಶಾಸ್ತ್ರಿಗಳಾದ ಬಗೆ || : || ಪೊಳಲಿ ಪದ್ಮನಾಭ ಭಟ್ಟ || 44
|-
|7. || ಗುರುವರ್ಯ ಶ್ರೀ ಶಾಸ್ತ್ರಿಗಳು || : || ಡಾ। ಕೆ. ಎಸ್. ಭಟ್ || 50
|-
|8. || ಶಿಸ್ತಿನ ಮೂರ್ತಿ || : || ಪದ್ಮಾವತಿ ಎಸ್. || 54
|-
|9. || ದಿ. ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು || : || ಕೆ. ಬಾಲಕೃಷ್ಣ ರಾವ್ || 59
|-
|10. || ಯಕ್ಷಗಾನ ವಾಚಸ್ಪತಿ ದಿ। ಪೊಳಲಿ ಶಾಸ್ತ್ರಿಗಳು || : || ಎಂ. ಆರ್. ಶಾಸ್ತ್ರಿ || 64
|-
|11. || ಅಭಿಮಾನಧನ ಶ್ರೀ ಶ್ರೀ ಶಾಸ್ತ್ರಿಗಳು || : || ಅ. ಬಾಲಕೃಷ್ಣ ಶೆಟ್ಟಿ, ಪೊಳಲಿ || 69
|-
|12. || ಶಾಸ್ತ್ರಿಗಳ ಸಮದಂಡಿಗಳು || : || ಮಂದಾರ ಕೇಶವ ಭಟ್ಟ || 73
|-
|13. || ಶಾಸ್ತ್ರಿಗಳು ಚಿತ್ರಿಸಿದ ಕೆಲವು ಪಾತ್ರಗಳು || : || ಕೃ. ಭ. ಪೆರ್ಲ || 82
|-
|14. || ಅಂತಃಸತ್ವ ಪ್ರಭಾವ || : || ಮಲ್ಪೆ ಶಂಕರನಾರಾಯಣ ಸಾವಂಗ || 92
|-
|15. || ಬಹುಮುಖ ಪ್ರತಿಭೆಯ ಶಂಕರನಾರಾಯಣ ಶಾಸ್ತ್ರಿಗಳು || : || ಅಡ್ಡ ವಾಸು ಶೆಟ್ಟಿ || 95
|-
|16. || ಪೊಳಲಿ ಪಾತ್ರೋಷಕ ಶಾಸ್ತ್ರಿ || : || ಬಿ. ಜಯರಾಮ ಶೆಟ್ಟಿ || 101
|-
|17. || ಪೊಳಲಿ ಶಂಕರನಾರಾಯಣ ಶಾಸ್ತ್ರಿ || : || ಕೊಳಂಬೆ ಪುಟ್ಟಣ್ಣ ಗೌಡ || 105
|-
|18. || ಶಾಸ್ತ್ರಿಗಳ ಸವಿನೆನಪು || : || ದೇರಾಜೆ ಸೀತಾರಾಮಯ್ಯ || 112
|-
|19. || ಪೊಳಲಿ ಶಾಸ್ತ್ರಿಯವರು : ಕೆಲವು ನೆನಪುಗಳು || : || ಎಂ. ರಾಮಚಂದ್ರ ||121
|-
| 20. || ಸೂರ್ಯನಿಗೆ ಸೊಡರು || : || ತೆಕ್ಕುಂಜ ದಾಮೋದರ ಭಟ್ಟ || 127
|-
| 21. || ಶಾಸ್ತ್ರಿಗಳ ಕಲಾಪ್ರತಿಭೆಯ ಎರಡು ಮುಖಗಳು || : || ಕೆದಂಬಾಡಿ ಜತ್ತಪ್ಪ ರೈ || 131<noinclude></noinclude>
tfp8eqds52pwlrc2mvu52kp9tmwwak0
316845
316844
2026-05-04T10:25:48Z
Hariprasad Shetty10
7490
316845
proofread-page
text/x-wiki
<noinclude><pagequality level="3" user="Anzx-ooo" />
{{rh||ಲೇಖನಗಳು-ಲೇಖಕರು|}}
{{rh||ವ್ಯಕ್ತಿ|}}</noinclude>{| class=wikitable
|-
| 1. || ತೆನೆಗಟ್ಟಿದ ತಿರುಳು (ಕವನ) || : || ಏರ್ಯ ಲಕ್ಷ್ಮೀನಾರಾಯಣ ಆಳ್ವ || 1
|-
| 2. || ಯಕ್ಷಗಾನ ವಾಚಸ್ಪತಿ ಪೊಳಲಿ ಶಂಕರನಾರಾಯಣ ಶಾಸ್ತ್ರಿ || : || ಅಮ್ಮೆಂಬಳ ಶಂಕರನಾರಾಯಣ ನಾವಡ || 3
|-
| 3. || ಪೊಳಲಿ ಶಾಸ್ತ್ರಿಯವರು ಮತ್ತು ನಾರಾಯಣ ಕಿಲ್ಲೆಯವರು || : || ಕಯ್ಯಾರ ಕಿಂಞಣ್ಣ ರೈ || 17
|-
| 4. || ನಮ್ಮ ತಂದೆಯವರು || : || ನಿತ್ಯಾನಂದ ಕಾರಂತ || 29
|-
| 5. || ನಮ್ಮ ಶಾಸ್ತ್ರಿಗಳು || : || ಕೆ. ಪಾಂಡುರಂಗ ಪೈ || 38
|-
| 6. || ಕಿಲೆಂಜಾರು ಕಾರಂತರು ಪೊಳಲಿ ಶಾಸ್ತ್ರಿಗಳಾದ ಬಗೆ || : || ಪೊಳಲಿ ಪದ್ಮನಾಭ ಭಟ್ಟ || 44
|-
|7. || ಗುರುವರ್ಯ ಶ್ರೀ ಶಾಸ್ತ್ರಿಗಳು || : || ಡಾ। ಕೆ. ಎಸ್. ಭಟ್ || 50
|-
|8. || ಶಿಸ್ತಿನ ಮೂರ್ತಿ || : || ಪದ್ಮಾವತಿ ಎಸ್. || 54
|-
|9. || ದಿ. ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು || : || ಕೆ. ಬಾಲಕೃಷ್ಣ ರಾವ್ || 59
|-
|10. || ಯಕ್ಷಗಾನ ವಾಚಸ್ಪತಿ ದಿ। ಪೊಳಲಿ ಶಾಸ್ತ್ರಿಗಳು || : || ಎಂ. ಆರ್. ಶಾಸ್ತ್ರಿ || 64
|-
|11. || ಅಭಿಮಾನಧನ ಶ್ರೀ ಶ್ರೀ ಶಾಸ್ತ್ರಿಗಳು || : || ಅ. ಬಾಲಕೃಷ್ಣ ಶೆಟ್ಟಿ, ಪೊಳಲಿ || 69
|-
|12. || ಶಾಸ್ತ್ರಿಗಳ ಸಮದಂಡಿಗಳು || : || ಮಂದಾರ ಕೇಶವ ಭಟ್ಟ || 73
|-
|13. || ಶಾಸ್ತ್ರಿಗಳು ಚಿತ್ರಿಸಿದ ಕೆಲವು ಪಾತ್ರಗಳು || : || ಕೃ. ಭ. ಪೆರ್ಲ || 82
|-
|14. || ಅಂತಃಸತ್ವ ಪ್ರಭಾವ || : || ಮಲ್ಪೆ ಶಂಕರನಾರಾಯಣ ಸಾವಂಗ || 92
|-
|15. || ಬಹುಮುಖ ಪ್ರತಿಭೆಯ ಶಂಕರನಾರಾಯಣ ಶಾಸ್ತ್ರಿಗಳು || : || ಅಡ್ಡ ವಾಸು ಶೆಟ್ಟಿ || 95
|-
|16. || ಪೊಳಲಿ ಪಾತ್ರೋಷಕ ಶಾಸ್ತ್ರಿ || : || ಬಿ. ಜಯರಾಮ ಶೆಟ್ಟಿ || 101
|-
|17. || ಪೊಳಲಿ ಶಂಕರನಾರಾಯಣ ಶಾಸ್ತ್ರಿ || : || ಕೊಳಂಬೆ ಪುಟ್ಟಣ್ಣ ಗೌಡ || 105
|-
|18. || ಶಾಸ್ತ್ರಿಗಳ ಸವಿನೆನಪು || : || ದೇರಾಜೆ ಸೀತಾರಾಮಯ್ಯ || 112
|-
|19. || ಪೊಳಲಿ ಶಾಸ್ತ್ರಿಯವರು : ಕೆಲವು ನೆನಪುಗಳು || : || ಎಂ. ರಾಮಚಂದ್ರ ||121
|-
| 20. || ಸೂರ್ಯನಿಗೆ ಸೊಡರು || : || ತೆಕ್ಕುಂಜ ದಾಮೋದರ ಭಟ್ಟ || 127
|-
| 21. || ಶಾಸ್ತ್ರಿಗಳ ಕಲಾಪ್ರತಿಭೆಯ ಎರಡು ಮುಖಗಳು || : || ಕೆದಂಬಾಡಿ ಜತ್ತಪ್ಪ ರೈ || 131<noinclude></noinclude>
2yvusljzbtj87bqyxqrt0zbr0mjvxkx
ಪುಟ:ಯಕ್ಷಗಾನ ಮಕರಂದ.pdf/೪೪
104
99723
316846
295346
2026-05-04T10:29:55Z
Hariprasad Shetty10
7490
316846
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|26}}
ಸ್ಥಾಪಿತವಾದ ಆ ಪತ್ರಿಕೆ ಗಾಂಧೀವಾದ ಮತ್ತು ವಿಧಾನಗಳ ಪ್ರಚಾರದ ಉದಾತ್ತ
ವಾದ ಉದ್ದೇಶವಿಟ್ಟುಕೊಂಡು ಜನಪ್ರಿಯವಾಗಿತ್ತು. ಎಷ್ಟೇ ಕಷ್ಟನಷ್ಟಗಳು
ಬಂದರೂ, ಅವರು ತೀವ್ರ ಕಾಯಿಲೆಗೆ ಒಳಗಾಗುವ ವರೆಗೆ ಆ ಪತ್ರಿಕೆಯನ್ನು
ನಡೆಸುತ್ತಾ ಬಂದರು.
ಮದ್ರಾಸ್ ಸರಕಾರ ರಾಷ್ಟ್ರಕವಿಗಳನ್ನು ಆರಿಸುವರೆ ಒಂದು ಪ್ರಾಂತಿಕ ಸಮಿತಿಯನ್ನು ನೇಮಿಸಿತು.ಕಿಲ್ಲೆಯವರ ಸಾಹಿತ್ಯಶಕ್ತಿಯನ್ನು ಅರಿತಿದ್ದ ಸರಕಾರ ಅವರನ್ನು ಆ ಸಮಿತಿಯ ಓರ್ವ ಸದಸ್ಯರಾಗಿ ಆರಿಸಿತು. ಕನ್ನಡದ ರಾಷ್ಟ್ರಕವಿ ಯೊಬ್ಬರ ಆಯ್ಕೆ ಆಗಬೇಕಾಗಿತ್ತು. ಯಾವುದೇ ಸ್ಥಾನಮಾನಗಳನ್ನು ಒಪ್ಪದ, ಅರ್ಪಿತವಾದ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವವನ್ನು ಅನೇಕ ಸಲ ಒಲ್ಲೆನೆಂದು ದೂರ ನಿಂತ ಗೋವಿಂದ ಪೈಗಳನ್ನು ಒಪ್ಪಿಸಬೇಕಾಗಿತ್ತು, ಕಿಲ್ಲೆಯವರಿಗೆ ಹತ್ತಾರು ಸಲ ಅವರಲ್ಲಿಗೆ ಓಡಾಡಿದರು. ಮಿತ್ರರಿಂದ ಬರೆಸಿದರು.ಕೊನೆಗೂ ಕಿಲ್ಲೆಯವರ ಪ್ರಯತ್ನ ಫಲಿಸಿತು. ಗೋವಿಂದ ಪೈ ಕನ್ನಡದ ಮೊದಲನೆಯ ರಾಷ್ಟ್ರಕವಿಯಾದರು. ಯೋಗ್ಯತೆಗೇ ಹಿರಿಯ ಮನ್ನಣೆ ಸಂದಿತು! “ಹೇಗೂ ತಾವು ಒಪ್ಪಿಕೊಂಡಿರಷ್ಟೆ, ನನಗೆ ಅಷ್ಟೇ ಸಾಕು ಎಂದರು (ಕಿಲ್ಲೆಯವರು). ಅವರ ಕಣ್ಣು ತುಂಬಿತು; ನನ್ನ ಕಣ್ಣು ತೊಟಕಿತು. ಆಗ್ಗೆ ನಾನರಿತೆ ಅವರ ಹೃದಯದ ಮಾರ್ದವವನ್ನು, ಆ ಪ್ರೀತಿಗೇ ನಾನವರಿಗೆ ಮಾರುವೋದೆ…ರಾಷ್ಟ್ರಕವಿ ಗೋವಿಂದ ಪೈಗಳೇ ಆ ಕುರಿತು ಬರೆದ ಪಂಕ್ತಿಗಳಿವು!
ರಾಜಕೀಯ ವೇದಿಕೆಗಳಲ್ಲಿ, ಪುರಾಣ ಪ್ರವಚನಗಳಲ್ಲಿ, ಯಕ್ಷಗಾನ ಅರ್ಥ
ವಿವರಣೆಯಲ್ಲಿ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸಮ್ಮೇಳನಗಳಲ್ಲಿ ಕಿಲ್ಲೆಯವರ ಕಾವ್ಯಮಯ ವಾಣಿಯನ್ನು ಆಬಾಲವೃದ್ಧರು ಕೇಳಿ ತಲೆದೂಗಿದ್ದಾರೆ. ಆದರೆ ಅವರು ತುಳು, ಕನ್ನಡ ಈ ಎರಡು ಭಾಷೆಗಳಲ್ಲಿಯೂ ಕವಿತಾ ಸಾಮರ್ಥ್ಯವನ್ನು ಪಡೆದ ಸರಸ್ವತಿ ಪುತ್ರರೆಂದು ಕೆಲವೇ ಜನರು ಮಾತ್ರ ಬಲ್ಲರು. ಅವರ ಹೆಚ್ಚಿನ ಕವಿತೆಗಳು ೧೯೩೨-೩೩ರ ಸಾಲಿನಲ್ಲಿ ಬರೆದವುಗಳು- ಸೆರೆಮನೆಯ ಕತ್ತಲೆ ಕೋಣೆಗೆ ವಿದೇಶಿ ಪ್ರಭುತ್ವದಿಂದ ತಳ್ಳಲ್ಪಟ್ಟಾಗ ದೊರೆತ ಬಿಡುವಿನ ಕಾಲದಲ್ಲಿ. ಮತ್ತೆ ಸೆರೆಯಿಂದ ಹೊರಬಂದ ಮೇಲೆ ಬಿಡುವೇ ಇಲ್ಲದ ಸಾರ್ವಜನಿಕ ಕಾರ್ಯದಲ್ಲಿ ಮಗ್ನರಾದ ಅವರು ಹೆಚ್ಚಿನ ಬರವಣಿಗೆಯ ಕಾರ್ಯ ಮಾಡಲಿಲ್ಲ. ಲೇಖನಕಾರ್ಯದಲ್ಲಿ ಆ ಮೇಲೆಯೂ ತೊಡಗಿದ್ದರೆ ಎಂತಹ ಉತ್ತಮ ಕೃತಿಗಳನ್ನು ರಚಿಸುತ್ತಿದ್ದರೆಂಬುದಕ್ಕೆ ಅವರ ಪ್ರಕಟಿತ ಕನ್ನಡ ಕೃತಿ “ಮುರಲಿ" ಮತ್ತು ತುಳು “ಕಾನಿಗೆ ಸಾಕ್ಷಿಯಾಗಿವೆ.
'ಕಾನಿಗೆ` ತುಳು ಕವನ ಸಂಗ್ರಹದ ಮುನ್ನುಡಿಯಲ್ಲಿ ಕವಿ' ಎಂದರೆ ಯಾರು ಎಂಬುದನ್ನು ಕಿಲ್ಲೆಯವರು ಹೇಳುವ ರೀತಿ ಕೇಳಿ!
“ಏರೆ ಮನಸ್ ಹದೊಕ್ ಬತ್ತ್ದ್, ಹೃದಯಮಂದಿರೆಡ್ ಗಾನಕಲೆ
ತಾನಾದ್ ಪಿದಡ್ದ್ ಪರತೊನುಂಡಾ, ನನ ಯೇ ಆ ಗಾನಕಲೆನ್ ಒಲಿಪಾಯರ<noinclude></noinclude>
3jqv44oun2enob88odxio4a6j9gs9g7
316847
316846
2026-05-04T10:30:10Z
Hariprasad Shetty10
7490
316847
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|26}}
ಸ್ಥಾಪಿತವಾದ ಆ ಪತ್ರಿಕೆ ಗಾಂಧೀವಾದ ಮತ್ತು ವಿಧಾನಗಳ ಪ್ರಚಾರದ ಉದಾತ್ತ
ವಾದ ಉದ್ದೇಶವಿಟ್ಟುಕೊಂಡು ಜನಪ್ರಿಯವಾಗಿತ್ತು. ಎಷ್ಟೇ ಕಷ್ಟನಷ್ಟಗಳು
ಬಂದರೂ, ಅವರು ತೀವ್ರ ಕಾಯಿಲೆಗೆ ಒಳಗಾಗುವ ವರೆಗೆ ಆ ಪತ್ರಿಕೆಯನ್ನು
ನಡೆಸುತ್ತಾ ಬಂದರು.
ಮದ್ರಾಸ್ ಸರಕಾರ ರಾಷ್ಟ್ರಕವಿಗಳನ್ನು ಆರಿಸುವರೆ ಒಂದು ಪ್ರಾಂತಿಕ ಸಮಿತಿಯನ್ನು ನೇಮಿಸಿತು.ಕಿಲ್ಲೆಯವರ ಸಾಹಿತ್ಯಶಕ್ತಿಯನ್ನು ಅರಿತಿದ್ದ ಸರಕಾರ ಅವರನ್ನು ಆ ಸಮಿತಿಯ ಓರ್ವ ಸದಸ್ಯರಾಗಿ ಆರಿಸಿತು. ಕನ್ನಡದ ರಾಷ್ಟ್ರಕವಿ ಯೊಬ್ಬರ ಆಯ್ಕೆ ಆಗಬೇಕಾಗಿತ್ತು. ಯಾವುದೇ ಸ್ಥಾನಮಾನಗಳನ್ನು ಒಪ್ಪದ, ಅರ್ಪಿತವಾದ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವವನ್ನು ಅನೇಕ ಸಲ ಒಲ್ಲೆನೆಂದು ದೂರ ನಿಂತ ಗೋವಿಂದ ಪೈಗಳನ್ನು ಒಪ್ಪಿಸಬೇಕಾಗಿತ್ತು, ಕಿಲ್ಲೆಯವರಿಗೆ ಹತ್ತಾರು ಸಲ ಅವರಲ್ಲಿಗೆ ಓಡಾಡಿದರು. ಮಿತ್ರರಿಂದ ಬರೆಸಿದರು.ಕೊನೆಗೂ ಕಿಲ್ಲೆಯವರ ಪ್ರಯತ್ನ ಫಲಿಸಿತು. ಗೋವಿಂದ ಪೈ ಕನ್ನಡದ ಮೊದಲನೆಯ ರಾಷ್ಟ್ರಕವಿಯಾದರು. ಯೋಗ್ಯತೆಗೇ ಹಿರಿಯ ಮನ್ನಣೆ ಸಂದಿತು! “ಹೇಗೂ ತಾವು ಒಪ್ಪಿಕೊಂಡಿರಷ್ಟೆ, ನನಗೆ ಅಷ್ಟೇ ಸಾಕು ಎಂದರು (ಕಿಲ್ಲೆಯವರು). ಅವರ ಕಣ್ಣು ತುಂಬಿತು; ನನ್ನ ಕಣ್ಣು ತೊಟಕಿತು. ಆಗ್ಗೆ ನಾನರಿತೆ ಅವರ ಹೃದಯದ ಮಾರ್ದವವನ್ನು, ಆ ಪ್ರೀತಿಗೇ ನಾನವರಿಗೆ ಮಾರುವೋದೆ…ರಾಷ್ಟ್ರಕವಿ ಗೋವಿಂದ ಪೈಗಳೇ ಆ ಕುರಿತು ಬರೆದ ಪಂಕ್ತಿಗಳಿವು!
ರಾಜಕೀಯ ವೇದಿಕೆಗಳಲ್ಲಿ, ಪುರಾಣ ಪ್ರವಚನಗಳಲ್ಲಿ, ಯಕ್ಷಗಾನ ಅರ್ಥ
ವಿವರಣೆಯಲ್ಲಿ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸಮ್ಮೇಳನಗಳಲ್ಲಿ ಕಿಲ್ಲೆಯವರ ಕಾವ್ಯಮಯ ವಾಣಿಯನ್ನು ಆಬಾಲವೃದ್ಧರು ಕೇಳಿ ತಲೆದೂಗಿದ್ದಾರೆ. ಆದರೆ ಅವರು ತುಳು, ಕನ್ನಡ ಈ ಎರಡು ಭಾಷೆಗಳಲ್ಲಿಯೂ ಕವಿತಾ ಸಾಮರ್ಥ್ಯವನ್ನು ಪಡೆದ ಸರಸ್ವತಿ ಪುತ್ರರೆಂದು ಕೆಲವೇ ಜನರು ಮಾತ್ರ ಬಲ್ಲರು. ಅವರ ಹೆಚ್ಚಿನ ಕವಿತೆಗಳು ೧೯೩೨-೩೩ರ ಸಾಲಿನಲ್ಲಿ ಬರೆದವುಗಳು- ಸೆರೆಮನೆಯ ಕತ್ತಲೆ ಕೋಣೆಗೆ ವಿದೇಶಿ ಪ್ರಭುತ್ವದಿಂದ ತಳ್ಳಲ್ಪಟ್ಟಾಗ ದೊರೆತ ಬಿಡುವಿನ ಕಾಲದಲ್ಲಿ. ಮತ್ತೆ ಸೆರೆಯಿಂದ ಹೊರಬಂದ ಮೇಲೆ ಬಿಡುವೇ ಇಲ್ಲದ ಸಾರ್ವಜನಿಕ ಕಾರ್ಯದಲ್ಲಿ ಮಗ್ನರಾದ ಅವರು ಹೆಚ್ಚಿನ ಬರವಣಿಗೆಯ ಕಾರ್ಯ ಮಾಡಲಿಲ್ಲ. ಲೇಖನಕಾರ್ಯದಲ್ಲಿ ಆ ಮೇಲೆಯೂ ತೊಡಗಿದ್ದರೆ ಎಂತಹ ಉತ್ತಮ ಕೃತಿಗಳನ್ನು ರಚಿಸುತ್ತಿದ್ದರೆಂಬುದಕ್ಕೆ ಅವರ ಪ್ರಕಟಿತ ಕನ್ನಡ ಕೃತಿ “ಮುರಲಿ" ಮತ್ತು ತುಳು “ಕಾನಿಗೆ ಸಾಕ್ಷಿಯಾಗಿವೆ.
'ಕಾನಿಗೆ` ತುಳು ಕವನ ಸಂಗ್ರಹದ ಮುನ್ನುಡಿಯಲ್ಲಿ ಕವಿ' ಎಂದರೆ ಯಾರು ಎಂಬುದನ್ನು ಕಿಲ್ಲೆಯವರು ಹೇಳುವ ರೀತಿ ಕೇಳಿ!
“ಏರೆ ಮನಸ್ ಹದೊಕ್ ಬತ್ತ್ದ್, ಹೃದಯಮಂದಿರೆಡ್ ಗಾನಕಲೆ
ತಾನಾದ್ ಪಿದಡ್ದ್ ಪರತೊನುಂಡಾ, ನನ ಯೇ ಆ ಗಾನಕಲೆನ್ ಒಲಿಪಾಯರ<noinclude></noinclude>
sxudves66zwxy2mut0sfqi7hp84n3c8
316848
316847
2026-05-04T10:30:20Z
Hariprasad Shetty10
7490
316848
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|26}}
ಸ್ಥಾಪಿತವಾದ ಆ ಪತ್ರಿಕೆ ಗಾಂಧೀವಾದ ಮತ್ತು ವಿಧಾನಗಳ ಪ್ರಚಾರದ ಉದಾತ್ತ
ವಾದ ಉದ್ದೇಶವಿಟ್ಟುಕೊಂಡು ಜನಪ್ರಿಯವಾಗಿತ್ತು. ಎಷ್ಟೇ ಕಷ್ಟನಷ್ಟಗಳು
ಬಂದರೂ, ಅವರು ತೀವ್ರ ಕಾಯಿಲೆಗೆ ಒಳಗಾಗುವ ವರೆಗೆ ಆ ಪತ್ರಿಕೆಯನ್ನು
ನಡೆಸುತ್ತಾ ಬಂದರು.
ಮದ್ರಾಸ್ ಸರಕಾರ ರಾಷ್ಟ್ರಕವಿಗಳನ್ನು ಆರಿಸುವರೆ ಒಂದು ಪ್ರಾಂತಿಕ ಸಮಿತಿಯನ್ನು ನೇಮಿಸಿತು.ಕಿಲ್ಲೆಯವರ ಸಾಹಿತ್ಯಶಕ್ತಿಯನ್ನು ಅರಿತಿದ್ದ ಸರಕಾರ ಅವರನ್ನು ಆ ಸಮಿತಿಯ ಓರ್ವ ಸದಸ್ಯರಾಗಿ ಆರಿಸಿತು. ಕನ್ನಡದ ರಾಷ್ಟ್ರಕವಿ ಯೊಬ್ಬರ ಆಯ್ಕೆ ಆಗಬೇಕಾಗಿತ್ತು. ಯಾವುದೇ ಸ್ಥಾನಮಾನಗಳನ್ನು ಒಪ್ಪದ, ಅರ್ಪಿತವಾದ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವವನ್ನು ಅನೇಕ ಸಲ ಒಲ್ಲೆನೆಂದು ದೂರ ನಿಂತ ಗೋವಿಂದ ಪೈಗಳನ್ನು ಒಪ್ಪಿಸಬೇಕಾಗಿತ್ತು, ಕಿಲ್ಲೆಯವರಿಗೆ ಹತ್ತಾರು ಸಲ ಅವರಲ್ಲಿಗೆ ಓಡಾಡಿದರು. ಮಿತ್ರರಿಂದ ಬರೆಸಿದರು.ಕೊನೆಗೂ ಕಿಲ್ಲೆಯವರ ಪ್ರಯತ್ನ ಫಲಿಸಿತು. ಗೋವಿಂದ ಪೈ ಕನ್ನಡದ ಮೊದಲನೆಯ ರಾಷ್ಟ್ರಕವಿಯಾದರು. ಯೋಗ್ಯತೆಗೇ ಹಿರಿಯ ಮನ್ನಣೆ ಸಂದಿತು! “ಹೇಗೂ ತಾವು ಒಪ್ಪಿಕೊಂಡಿರಷ್ಟೆ, ನನಗೆ ಅಷ್ಟೇ ಸಾಕು ಎಂದರು (ಕಿಲ್ಲೆಯವರು). ಅವರ ಕಣ್ಣು ತುಂಬಿತು; ನನ್ನ ಕಣ್ಣು ತೊಟಕಿತು. ಆಗ್ಗೆ ನಾನರಿತೆ ಅವರ ಹೃದಯದ ಮಾರ್ದವವನ್ನು, ಆ ಪ್ರೀತಿಗೇ ನಾನವರಿಗೆ ಮಾರುವೋದೆ…ರಾಷ್ಟ್ರಕವಿ ಗೋವಿಂದ ಪೈಗಳೇ ಆ ಕುರಿತು ಬರೆದ ಪಂಕ್ತಿಗಳಿವು!
ರಾಜಕೀಯ ವೇದಿಕೆಗಳಲ್ಲಿ, ಪುರಾಣ ಪ್ರವಚನಗಳಲ್ಲಿ, ಯಕ್ಷಗಾನ ಅರ್ಥ
ವಿವರಣೆಯಲ್ಲಿ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸಮ್ಮೇಳನಗಳಲ್ಲಿ ಕಿಲ್ಲೆಯವರ ಕಾವ್ಯಮಯ ವಾಣಿಯನ್ನು ಆಬಾಲವೃದ್ಧರು ಕೇಳಿ ತಲೆದೂಗಿದ್ದಾರೆ. ಆದರೆ ಅವರು ತುಳು, ಕನ್ನಡ ಈ ಎರಡು ಭಾಷೆಗಳಲ್ಲಿಯೂ ಕವಿತಾ ಸಾಮರ್ಥ್ಯವನ್ನು ಪಡೆದ ಸರಸ್ವತಿ ಪುತ್ರರೆಂದು ಕೆಲವೇ ಜನರು ಮಾತ್ರ ಬಲ್ಲರು. ಅವರ ಹೆಚ್ಚಿನ ಕವಿತೆಗಳು ೧೯೩೨-೩೩ರ ಸಾಲಿನಲ್ಲಿ ಬರೆದವುಗಳು- ಸೆರೆಮನೆಯ ಕತ್ತಲೆ ಕೋಣೆಗೆ ವಿದೇಶಿ ಪ್ರಭುತ್ವದಿಂದ ತಳ್ಳಲ್ಪಟ್ಟಾಗ ದೊರೆತ ಬಿಡುವಿನ ಕಾಲದಲ್ಲಿ. ಮತ್ತೆ ಸೆರೆಯಿಂದ ಹೊರಬಂದ ಮೇಲೆ ಬಿಡುವೇ ಇಲ್ಲದ ಸಾರ್ವಜನಿಕ ಕಾರ್ಯದಲ್ಲಿ ಮಗ್ನರಾದ ಅವರು ಹೆಚ್ಚಿನ ಬರವಣಿಗೆಯ ಕಾರ್ಯ ಮಾಡಲಿಲ್ಲ. ಲೇಖನಕಾರ್ಯದಲ್ಲಿ ಆ ಮೇಲೆಯೂ ತೊಡಗಿದ್ದರೆ ಎಂತಹ ಉತ್ತಮ ಕೃತಿಗಳನ್ನು ರಚಿಸುತ್ತಿದ್ದರೆಂಬುದಕ್ಕೆ ಅವರ ಪ್ರಕಟಿತ ಕನ್ನಡ ಕೃತಿ “ಮುರಲಿ" ಮತ್ತು ತುಳು “ಕಾನಿಗೆ ಸಾಕ್ಷಿಯಾಗಿವೆ.
'ಕಾನಿಗೆ` ತುಳು ಕವನ ಸಂಗ್ರಹದ ಮುನ್ನುಡಿಯಲ್ಲಿ ಕವಿ' ಎಂದರೆ ಯಾರು ಎಂಬುದನ್ನು ಕಿಲ್ಲೆಯವರು ಹೇಳುವ ರೀತಿ ಕೇಳಿ!
“ಏರೆ ಮನಸ್ ಹದೊಕ್ ಬತ್ತ್ದ್, ಹೃದಯಮಂದಿರೆಡ್ ಗಾನಕಲೆ
ತಾನಾದ್ ಪಿದಡ್ದ್ ಪರತೊನುಂಡಾ, ನನ ಯೇ ಆ ಗಾನಕಲೆನ್ ಒಲಿಪಾಯರ<noinclude></noinclude>
nrcye3rnq5dnu88tskqc0sng4x11x3l
316849
316848
2026-05-04T10:30:41Z
Hariprasad Shetty10
7490
316849
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|26}}
ಸ್ಥಾಪಿತವಾದ ಆ ಪತ್ರಿಕೆ ಗಾಂಧೀವಾದ ಮತ್ತು ವಿಧಾನಗಳ ಪ್ರಚಾರದ ಉದಾತ್ತ
ವಾದ ಉದ್ದೇಶವಿಟ್ಟುಕೊಂಡು ಜನಪ್ರಿಯವಾಗಿತ್ತು. ಎಷ್ಟೇ ಕಷ್ಟನಷ್ಟಗಳು
ಬಂದರೂ, ಅವರು ತೀವ್ರ ಕಾಯಿಲೆಗೆ ಒಳಗಾಗುವ ವರೆಗೆ ಆ ಪತ್ರಿಕೆಯನ್ನು
ನಡೆಸುತ್ತಾ ಬಂದರು.
ಮದ್ರಾಸ್ ಸರಕಾರ ರಾಷ್ಟ್ರಕವಿಗಳನ್ನು ಆರಿಸುವರೆ ಒಂದು ಪ್ರಾಂತಿಕ ಸಮಿತಿಯನ್ನು ನೇಮಿಸಿತು.ಕಿಲ್ಲೆಯವರ ಸಾಹಿತ್ಯಶಕ್ತಿಯನ್ನು ಅರಿತಿದ್ದ ಸರಕಾರ ಅವರನ್ನು ಆ ಸಮಿತಿಯ ಓರ್ವ ಸದಸ್ಯರಾಗಿ ಆರಿಸಿತು. ಕನ್ನಡದ ರಾಷ್ಟ್ರಕವಿ ಯೊಬ್ಬರ ಆಯ್ಕೆ ಆಗಬೇಕಾಗಿತ್ತು. ಯಾವುದೇ ಸ್ಥಾನಮಾನಗಳನ್ನು ಒಪ್ಪದ, ಅರ್ಪಿತವಾದ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವವನ್ನು ಅನೇಕ ಸಲ ಒಲ್ಲೆನೆಂದು ದೂರ ನಿಂತ ಗೋವಿಂದ ಪೈಗಳನ್ನು ಒಪ್ಪಿಸಬೇಕಾಗಿತ್ತು, ಕಿಲ್ಲೆಯವರಿಗೆ ಹತ್ತಾರು ಸಲ ಅವರಲ್ಲಿಗೆ ಓಡಾಡಿದರು. ಮಿತ್ರರಿಂದ ಬರೆಸಿದರು.ಕೊನೆಗೂ ಕಿಲ್ಲೆಯವರ ಪ್ರಯತ್ನ ಫಲಿಸಿತು. ಗೋವಿಂದ ಪೈ ಕನ್ನಡದ ಮೊದಲನೆಯ ರಾಷ್ಟ್ರಕವಿಯಾದರು. ಯೋಗ್ಯತೆಗೇ ಹಿರಿಯ ಮನ್ನಣೆ ಸಂದಿತು! “ಹೇಗೂ ತಾವು ಒಪ್ಪಿಕೊಂಡಿರಷ್ಟೆ, ನನಗೆ ಅಷ್ಟೇ ಸಾಕು ಎಂದರು (ಕಿಲ್ಲೆಯವರು). ಅವರ ಕಣ್ಣು ತುಂಬಿತು; ನನ್ನ ಕಣ್ಣು ತೊಟಕಿತು. ಆಗ್ಗೆ ನಾನರಿತೆ ಅವರ ಹೃದಯದ ಮಾರ್ದವವನ್ನು, ಆ ಪ್ರೀತಿಗೇ ನಾನವರಿಗೆ ಮಾರುವೋದೆ…ರಾಷ್ಟ್ರಕವಿ ಗೋವಿಂದ ಪೈಗಳೇ ಆ ಕುರಿತು ಬರೆದ ಪಂಕ್ತಿಗಳಿವು!
ರಾಜಕೀಯ ವೇದಿಕೆಗಳಲ್ಲಿ, ಪುರಾಣ ಪ್ರವಚನಗಳಲ್ಲಿ, ಯಕ್ಷಗಾನ ಅರ್ಥ
ವಿವರಣೆಯಲ್ಲಿ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸಮ್ಮೇಳನಗಳಲ್ಲಿ ಕಿಲ್ಲೆಯವರ ಕಾವ್ಯಮಯ ವಾಣಿಯನ್ನು ಆಬಾಲವೃದ್ಧರು ಕೇಳಿ ತಲೆದೂಗಿದ್ದಾರೆ. ಆದರೆ ಅವರು ತುಳು, ಕನ್ನಡ ಈ ಎರಡು ಭಾಷೆಗಳಲ್ಲಿಯೂ ಕವಿತಾ ಸಾಮರ್ಥ್ಯವನ್ನು ಪಡೆದ ಸರಸ್ವತಿ ಪುತ್ರರೆಂದು ಕೆಲವೇ ಜನರು ಮಾತ್ರ ಬಲ್ಲರು. ಅವರ ಹೆಚ್ಚಿನ ಕವಿತೆಗಳು ೧೯೩೨-೩೩ರ ಸಾಲಿನಲ್ಲಿ ಬರೆದವುಗಳು- ಸೆರೆಮನೆಯ ಕತ್ತಲೆ ಕೋಣೆಗೆ ವಿದೇಶಿ ಪ್ರಭುತ್ವದಿಂದ ತಳ್ಳಲ್ಪಟ್ಟಾಗ ದೊರೆತ ಬಿಡುವಿನ ಕಾಲದಲ್ಲಿ. ಮತ್ತೆ ಸೆರೆಯಿಂದ ಹೊರಬಂದ ಮೇಲೆ ಬಿಡುವೇ ಇಲ್ಲದ ಸಾರ್ವಜನಿಕ ಕಾರ್ಯದಲ್ಲಿ ಮಗ್ನರಾದ ಅವರು ಹೆಚ್ಚಿನ ಬರವಣಿಗೆಯ ಕಾರ್ಯ ಮಾಡಲಿಲ್ಲ. ಲೇಖನಕಾರ್ಯದಲ್ಲಿ ಆ ಮೇಲೆಯೂ ತೊಡಗಿದ್ದರೆ ಎಂತಹ ಉತ್ತಮ ಕೃತಿಗಳನ್ನು ರಚಿಸುತ್ತಿದ್ದರೆಂಬುದಕ್ಕೆ ಅವರ ಪ್ರಕಟಿತ ಕನ್ನಡ ಕೃತಿ “ಮುರಲಿ" ಮತ್ತು ತುಳು “ಕಾನಿಗೆ ಸಾಕ್ಷಿಯಾಗಿವೆ.
'ಕಾನಿಗೆ` ತುಳು ಕವನ ಸಂಗ್ರಹದ ಮುನ್ನುಡಿಯಲ್ಲಿ ಕವಿ' ಎಂದರೆ ಯಾರು ಎಂಬುದನ್ನು ಕಿಲ್ಲೆಯವರು ಹೇಳುವ ರೀತಿ ಕೇಳಿ!
“ಏರೆ ಮನಸ್ ಹದೊಕ್ ಬತ್ತ್ದ್, ಹೃದಯಮಂದಿರೆಡ್ ಗಾನಕಲೆ
ತಾನಾದ್ ಪಿದಡ್ದ್ ಪರತೊನುಂಡಾ, ನನ ಯೇ ಆ ಗಾನಕಲೆನ್ ಒಲಿಪಾಯರ<noinclude></noinclude>
5qfu70yfdalt5eq4i4dulmsvxzy2p4n
316850
316849
2026-05-04T10:31:51Z
Hariprasad Shetty10
7490
316850
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|26}}
ಸ್ಥಾಪಿತವಾದ ಆ ಪತ್ರಿಕೆ ಗಾಂಧೀವಾದ ಮತ್ತು ವಿಧಾನಗಳ ಪ್ರಚಾರದ ಉದಾತ್ತ
ವಾದ ಉದ್ದೇಶವಿಟ್ಟುಕೊಂಡು ಜನಪ್ರಿಯವಾಗಿತ್ತು. ಎಷ್ಟೇ ಕಷ್ಟನಷ್ಟಗಳು
ಬಂದರೂ, ಅವರು ತೀವ್ರ ಕಾಯಿಲೆಗೆ ಒಳಗಾಗುವ ವರೆಗೆ ಆ ಪತ್ರಿಕೆಯನ್ನು
ನಡೆಸುತ್ತಾ ಬಂದರು.
ಮದ್ರಾಸ್ ಸರಕಾರ ರಾಷ್ಟ್ರಕವಿಗಳನ್ನು ಆರಿಸುವರೆ ಒಂದು ಪ್ರಾಂತಿಕ ಸಮಿತಿಯನ್ನು ನೇಮಿಸಿತು.ಕಿಲ್ಲೆಯವರ ಸಾಹಿತ್ಯಶಕ್ತಿಯನ್ನು ಅರಿತಿದ್ದ ಸರಕಾರ ಅವರನ್ನು ಆ ಸಮಿತಿಯ ಓರ್ವ ಸದಸ್ಯರಾಗಿ ಆರಿಸಿತು. ಕನ್ನಡದ ರಾಷ್ಟ್ರಕವಿ ಯೊಬ್ಬರ ಆಯ್ಕೆ ಆಗಬೇಕಾಗಿತ್ತು. ಯಾವುದೇ ಸ್ಥಾನಮಾನಗಳನ್ನು ಒಪ್ಪದ, ಅರ್ಪಿತವಾದ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವವನ್ನು ಅನೇಕ ಸಲ ಒಲ್ಲೆನೆಂದು ದೂರ ನಿಂತ ಗೋವಿಂದ ಪೈಗಳನ್ನು ಒಪ್ಪಿಸಬೇಕಾಗಿತ್ತು, ಕಿಲ್ಲೆಯವರಿಗೆ ಹತ್ತಾರು ಸಲ ಅವರಲ್ಲಿಗೆ ಓಡಾಡಿದರು. ಮಿತ್ರರಿಂದ ಬರೆಸಿದರು.ಕೊನೆಗೂ ಕಿಲ್ಲೆಯವರ ಪ್ರಯತ್ನ ಫಲಿಸಿತು. ಗೋವಿಂದ ಪೈ ಕನ್ನಡದ ಮೊದಲನೆಯ ರಾಷ್ಟ್ರಕವಿಯಾದರು. ಯೋಗ್ಯತೆಗೇ ಹಿರಿಯ ಮನ್ನಣೆ ಸಂದಿತು! “ಹೇಗೂ ತಾವು ಒಪ್ಪಿಕೊಂಡಿರಷ್ಟೆ, ನನಗೆ ಅಷ್ಟೇ ಸಾಕು ಎಂದರು (ಕಿಲ್ಲೆಯವರು). ಅವರ ಕಣ್ಣು ತುಂಬಿತು; ನನ್ನ ಕಣ್ಣು ತೊಟಕಿತು. ಆಗ್ಗೆ ನಾನರಿತೆ ಅವರ ಹೃದಯದ ಮಾರ್ದವವನ್ನು, ಆ ಪ್ರೀತಿಗೇ ನಾನವರಿಗೆ ಮಾರುವೋದೆ…ರಾಷ್ಟ್ರಕವಿ ಗೋವಿಂದ ಪೈಗಳೇ ಆ ಕುರಿತು ಬರೆದ ಪಂಕ್ತಿಗಳಿವು!
ರಾಜಕೀಯ ವೇದಿಕೆಗಳಲ್ಲಿ, ಪುರಾಣ ಪ್ರವಚನಗಳಲ್ಲಿ, ಯಕ್ಷಗಾನ ಅರ್ಥ
ವಿವರಣೆಯಲ್ಲಿ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸಮ್ಮೇಳನಗಳಲ್ಲಿ ಕಿಲ್ಲೆಯವರ ಕಾವ್ಯಮಯ ವಾಣಿಯನ್ನು ಆಬಾಲವೃದ್ಧರು ಕೇಳಿ ತಲೆದೂಗಿದ್ದಾರೆ. ಆದರೆ ಅವರು ತುಳು, ಕನ್ನಡ ಈ ಎರಡು ಭಾಷೆಗಳಲ್ಲಿಯೂ ಕವಿತಾ ಸಾಮರ್ಥ್ಯವನ್ನು ಪಡೆದ ಸರಸ್ವತಿ ಪುತ್ರರೆಂದು ಕೆಲವೇ ಜನರು ಮಾತ್ರ ಬಲ್ಲರು. ಅವರ ಹೆಚ್ಚಿನ ಕವಿತೆಗಳು ೧೯೩೨-೩೩ರ ಸಾಲಿನಲ್ಲಿ ಬರೆದವುಗಳು- ಸೆರೆಮನೆಯ ಕತ್ತಲೆ ಕೋಣೆಗೆ ವಿದೇಶಿ ಪ್ರಭುತ್ವದಿಂದ ತಳ್ಳಲ್ಪಟ್ಟಾಗ ದೊರೆತ ಬಿಡುವಿನ ಕಾಲದಲ್ಲಿ. ಮತ್ತೆ ಸೆರೆಯಿಂದ ಹೊರಬಂದ ಮೇಲೆ ಬಿಡುವೇ ಇಲ್ಲದ ಸಾರ್ವಜನಿಕ ಕಾರ್ಯದಲ್ಲಿ ಮಗ್ನರಾದ ಅವರು ಹೆಚ್ಚಿನ ಬರವಣಿಗೆಯ ಕಾರ್ಯ ಮಾಡಲಿಲ್ಲ. ಲೇಖನಕಾರ್ಯದಲ್ಲಿ ಆ ಮೇಲೆಯೂ ತೊಡಗಿದ್ದರೆ ಎಂತಹ ಉತ್ತಮ ಕೃತಿಗಳನ್ನು ರಚಿಸುತ್ತಿದ್ದರೆಂಬುದಕ್ಕೆ ಅವರ ಪ್ರಕಟಿತ ಕನ್ನಡ ಕೃತಿ “ಮುರಲಿ" ಮತ್ತು ತುಳು “ಕಾನಿಗೆ ಸಾಕ್ಷಿಯಾಗಿವೆ.
'ಕಾನಿಗೆ` ತುಳು ಕವನ ಸಂಗ್ರಹದ ಮುನ್ನುಡಿಯಲ್ಲಿ ಕವಿ' ಎಂದರೆ ಯಾರು ಎಂಬುದನ್ನು ಕಿಲ್ಲೆಯವರು ಹೇಳುವ ರೀತಿ ಕೇಳಿ!
“ಏರೆ ಮನಸ್ ಹದೊಕ್ ಬತ್ತ್ದ್, ಹೃದಯಮಂದಿರೆಡ್ ಗಾನಕಲೆ
ತಾನಾದ್ ಪಿದಡ್ದ್ ಪರತೊನುಂಡಾ, ನನ ಯೇರ್ ಆ ಗಾನಕಲೆನ್ ಒಲಿಪಾಯರೆ<noinclude></noinclude>
06fst3ien2y7urmlsgfl16ck5nzixbn
316851
316850
2026-05-04T10:32:05Z
Hariprasad Shetty10
7490
/* Validated */
316851
proofread-page
text/x-wiki
<noinclude><pagequality level="4" user="Hariprasad Shetty10" /></noinclude>{{Left|26}}
ಸ್ಥಾಪಿತವಾದ ಆ ಪತ್ರಿಕೆ ಗಾಂಧೀವಾದ ಮತ್ತು ವಿಧಾನಗಳ ಪ್ರಚಾರದ ಉದಾತ್ತ
ವಾದ ಉದ್ದೇಶವಿಟ್ಟುಕೊಂಡು ಜನಪ್ರಿಯವಾಗಿತ್ತು. ಎಷ್ಟೇ ಕಷ್ಟನಷ್ಟಗಳು
ಬಂದರೂ, ಅವರು ತೀವ್ರ ಕಾಯಿಲೆಗೆ ಒಳಗಾಗುವ ವರೆಗೆ ಆ ಪತ್ರಿಕೆಯನ್ನು
ನಡೆಸುತ್ತಾ ಬಂದರು.
ಮದ್ರಾಸ್ ಸರಕಾರ ರಾಷ್ಟ್ರಕವಿಗಳನ್ನು ಆರಿಸುವರೆ ಒಂದು ಪ್ರಾಂತಿಕ ಸಮಿತಿಯನ್ನು ನೇಮಿಸಿತು.ಕಿಲ್ಲೆಯವರ ಸಾಹಿತ್ಯಶಕ್ತಿಯನ್ನು ಅರಿತಿದ್ದ ಸರಕಾರ ಅವರನ್ನು ಆ ಸಮಿತಿಯ ಓರ್ವ ಸದಸ್ಯರಾಗಿ ಆರಿಸಿತು. ಕನ್ನಡದ ರಾಷ್ಟ್ರಕವಿ ಯೊಬ್ಬರ ಆಯ್ಕೆ ಆಗಬೇಕಾಗಿತ್ತು. ಯಾವುದೇ ಸ್ಥಾನಮಾನಗಳನ್ನು ಒಪ್ಪದ, ಅರ್ಪಿತವಾದ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವವನ್ನು ಅನೇಕ ಸಲ ಒಲ್ಲೆನೆಂದು ದೂರ ನಿಂತ ಗೋವಿಂದ ಪೈಗಳನ್ನು ಒಪ್ಪಿಸಬೇಕಾಗಿತ್ತು, ಕಿಲ್ಲೆಯವರಿಗೆ ಹತ್ತಾರು ಸಲ ಅವರಲ್ಲಿಗೆ ಓಡಾಡಿದರು. ಮಿತ್ರರಿಂದ ಬರೆಸಿದರು.ಕೊನೆಗೂ ಕಿಲ್ಲೆಯವರ ಪ್ರಯತ್ನ ಫಲಿಸಿತು. ಗೋವಿಂದ ಪೈ ಕನ್ನಡದ ಮೊದಲನೆಯ ರಾಷ್ಟ್ರಕವಿಯಾದರು. ಯೋಗ್ಯತೆಗೇ ಹಿರಿಯ ಮನ್ನಣೆ ಸಂದಿತು! “ಹೇಗೂ ತಾವು ಒಪ್ಪಿಕೊಂಡಿರಷ್ಟೆ, ನನಗೆ ಅಷ್ಟೇ ಸಾಕು ಎಂದರು (ಕಿಲ್ಲೆಯವರು). ಅವರ ಕಣ್ಣು ತುಂಬಿತು; ನನ್ನ ಕಣ್ಣು ತೊಟಕಿತು. ಆಗ್ಗೆ ನಾನರಿತೆ ಅವರ ಹೃದಯದ ಮಾರ್ದವವನ್ನು, ಆ ಪ್ರೀತಿಗೇ ನಾನವರಿಗೆ ಮಾರುವೋದೆ…ರಾಷ್ಟ್ರಕವಿ ಗೋವಿಂದ ಪೈಗಳೇ ಆ ಕುರಿತು ಬರೆದ ಪಂಕ್ತಿಗಳಿವು!
ರಾಜಕೀಯ ವೇದಿಕೆಗಳಲ್ಲಿ, ಪುರಾಣ ಪ್ರವಚನಗಳಲ್ಲಿ, ಯಕ್ಷಗಾನ ಅರ್ಥ
ವಿವರಣೆಯಲ್ಲಿ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸಮ್ಮೇಳನಗಳಲ್ಲಿ ಕಿಲ್ಲೆಯವರ ಕಾವ್ಯಮಯ ವಾಣಿಯನ್ನು ಆಬಾಲವೃದ್ಧರು ಕೇಳಿ ತಲೆದೂಗಿದ್ದಾರೆ. ಆದರೆ ಅವರು ತುಳು, ಕನ್ನಡ ಈ ಎರಡು ಭಾಷೆಗಳಲ್ಲಿಯೂ ಕವಿತಾ ಸಾಮರ್ಥ್ಯವನ್ನು ಪಡೆದ ಸರಸ್ವತಿ ಪುತ್ರರೆಂದು ಕೆಲವೇ ಜನರು ಮಾತ್ರ ಬಲ್ಲರು. ಅವರ ಹೆಚ್ಚಿನ ಕವಿತೆಗಳು ೧೯೩೨-೩೩ರ ಸಾಲಿನಲ್ಲಿ ಬರೆದವುಗಳು- ಸೆರೆಮನೆಯ ಕತ್ತಲೆ ಕೋಣೆಗೆ ವಿದೇಶಿ ಪ್ರಭುತ್ವದಿಂದ ತಳ್ಳಲ್ಪಟ್ಟಾಗ ದೊರೆತ ಬಿಡುವಿನ ಕಾಲದಲ್ಲಿ. ಮತ್ತೆ ಸೆರೆಯಿಂದ ಹೊರಬಂದ ಮೇಲೆ ಬಿಡುವೇ ಇಲ್ಲದ ಸಾರ್ವಜನಿಕ ಕಾರ್ಯದಲ್ಲಿ ಮಗ್ನರಾದ ಅವರು ಹೆಚ್ಚಿನ ಬರವಣಿಗೆಯ ಕಾರ್ಯ ಮಾಡಲಿಲ್ಲ. ಲೇಖನಕಾರ್ಯದಲ್ಲಿ ಆ ಮೇಲೆಯೂ ತೊಡಗಿದ್ದರೆ ಎಂತಹ ಉತ್ತಮ ಕೃತಿಗಳನ್ನು ರಚಿಸುತ್ತಿದ್ದರೆಂಬುದಕ್ಕೆ ಅವರ ಪ್ರಕಟಿತ ಕನ್ನಡ ಕೃತಿ “ಮುರಲಿ" ಮತ್ತು ತುಳು “ಕಾನಿಗೆ ಸಾಕ್ಷಿಯಾಗಿವೆ.
'ಕಾನಿಗೆ` ತುಳು ಕವನ ಸಂಗ್ರಹದ ಮುನ್ನುಡಿಯಲ್ಲಿ ಕವಿ' ಎಂದರೆ ಯಾರು ಎಂಬುದನ್ನು ಕಿಲ್ಲೆಯವರು ಹೇಳುವ ರೀತಿ ಕೇಳಿ!
“ಏರೆ ಮನಸ್ ಹದೊಕ್ ಬತ್ತ್ದ್, ಹೃದಯಮಂದಿರೆಡ್ ಗಾನಕಲೆ
ತಾನಾದ್ ಪಿದಡ್ದ್ ಪರತೊನುಂಡಾ, ನನ ಯೇರ್ ಆ ಗಾನಕಲೆನ್ ಒಲಿಪಾಯರೆ<noinclude></noinclude>
sqb96o2vpyntkqxoid38cl2rfp4lzyb
316852
316851
2026-05-04T10:32:26Z
Hariprasad Shetty10
7490
316852
proofread-page
text/x-wiki
<noinclude><pagequality level="4" user="Hariprasad Shetty10" /></noinclude>{{Left|26}}
ಸ್ಥಾಪಿತವಾದ ಆ ಪತ್ರಿಕೆ ಗಾಂಧೀವಾದ ಮತ್ತು ವಿಧಾನಗಳ ಪ್ರಚಾರದ ಉದಾತ್ತ
ವಾದ ಉದ್ದೇಶವಿಟ್ಟುಕೊಂಡು ಜನಪ್ರಿಯವಾಗಿತ್ತು. ಎಷ್ಟೇ ಕಷ್ಟನಷ್ಟಗಳು
ಬಂದರೂ, ಅವರು ತೀವ್ರ ಕಾಯಿಲೆಗೆ ಒಳಗಾಗುವ ವರೆಗೆ ಆ ಪತ್ರಿಕೆಯನ್ನು
ನಡೆಸುತ್ತಾ ಬಂದರು.
ಮದ್ರಾಸ್ ಸರಕಾರ ರಾಷ್ಟ್ರಕವಿಗಳನ್ನು ಆರಿಸುವರೆ ಒಂದು ಪ್ರಾಂತಿಕ ಸಮಿತಿಯನ್ನು ನೇಮಿಸಿತು.ಕಿಲ್ಲೆಯವರ ಸಾಹಿತ್ಯಶಕ್ತಿಯನ್ನು ಅರಿತಿದ್ದ ಸರಕಾರ ಅವರನ್ನು ಆ ಸಮಿತಿಯ ಓರ್ವ ಸದಸ್ಯರಾಗಿ ಆರಿಸಿತು. ಕನ್ನಡದ ರಾಷ್ಟ್ರಕವಿ ಯೊಬ್ಬರ ಆಯ್ಕೆ ಆಗಬೇಕಾಗಿತ್ತು. ಯಾವುದೇ ಸ್ಥಾನಮಾನಗಳನ್ನು ಒಪ್ಪದ, ಅರ್ಪಿತವಾದ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವವನ್ನು ಅನೇಕ ಸಲ ಒಲ್ಲೆನೆಂದು ದೂರ ನಿಂತ ಗೋವಿಂದ ಪೈಗಳನ್ನು ಒಪ್ಪಿಸಬೇಕಾಗಿತ್ತು, ಕಿಲ್ಲೆಯವರಿಗೆ ಹತ್ತಾರು ಸಲ ಅವರಲ್ಲಿಗೆ ಓಡಾಡಿದರು. ಮಿತ್ರರಿಂದ ಬರೆಸಿದರು.ಕೊನೆಗೂ ಕಿಲ್ಲೆಯವರ ಪ್ರಯತ್ನ ಫಲಿಸಿತು. ಗೋವಿಂದ ಪೈ ಕನ್ನಡದ ಮೊದಲನೆಯ ರಾಷ್ಟ್ರಕವಿಯಾದರು. ಯೋಗ್ಯತೆಗೇ ಹಿರಿಯ ಮನ್ನಣೆ ಸಂದಿತು! “ಹೇಗೂ ತಾವು ಒಪ್ಪಿಕೊಂಡಿರಷ್ಟೆ, ನನಗೆ ಅಷ್ಟೇ ಸಾಕು ಎಂದರು (ಕಿಲ್ಲೆಯವರು). ಅವರ ಕಣ್ಣು ತುಂಬಿತು; ನನ್ನ ಕಣ್ಣು ತೊಟಕಿತು. ಆಗ್ಗೆ ನಾನರಿತೆ ಅವರ ಹೃದಯದ ಮಾರ್ದವವನ್ನು, ಆ ಪ್ರೀತಿಗೇ ನಾನವರಿಗೆ ಮಾರುವೋದೆ…ರಾಷ್ಟ್ರಕವಿ ಗೋವಿಂದ ಪೈಗಳೇ ಆ ಕುರಿತು ಬರೆದ ಪಂಕ್ತಿಗಳಿವು!
ರಾಜಕೀಯ ವೇದಿಕೆಗಳಲ್ಲಿ, ಪುರಾಣ ಪ್ರವಚನಗಳಲ್ಲಿ, ಯಕ್ಷಗಾನ ಅರ್ಥ
ವಿವರಣೆಯಲ್ಲಿ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸಮ್ಮೇಳನಗಳಲ್ಲಿ ಕಿಲ್ಲೆಯವರ ಕಾವ್ಯಮಯ ವಾಣಿಯನ್ನು ಆಬಾಲವೃದ್ಧರು ಕೇಳಿ ತಲೆದೂಗಿದ್ದಾರೆ. ಆದರೆ ಅವರು ತುಳು, ಕನ್ನಡ ಈ ಎರಡು ಭಾಷೆಗಳಲ್ಲಿಯೂ ಕವಿತಾ ಸಾಮರ್ಥ್ಯವನ್ನು ಪಡೆದ ಸರಸ್ವತಿ ಪುತ್ರರೆಂದು ಕೆಲವೇ ಜನರು ಮಾತ್ರ ಬಲ್ಲರು. ಅವರ ಹೆಚ್ಚಿನ ಕವಿತೆಗಳು ೧೯೩೨-೩೩ರ ಸಾಲಿನಲ್ಲಿ ಬರೆದವುಗಳು- ಸೆರೆಮನೆಯ ಕತ್ತಲೆ ಕೋಣೆಗೆ ವಿದೇಶಿ ಪ್ರಭುತ್ವದಿಂದ ತಳ್ಳಲ್ಪಟ್ಟಾಗ ದೊರೆತ ಬಿಡುವಿನ ಕಾಲದಲ್ಲಿ. ಮತ್ತೆ ಸೆರೆಯಿಂದ ಹೊರಬಂದ ಮೇಲೆ ಬಿಡುವೇ ಇಲ್ಲದ ಸಾರ್ವಜನಿಕ ಕಾರ್ಯದಲ್ಲಿ ಮಗ್ನರಾದ ಅವರು ಹೆಚ್ಚಿನ ಬರವಣಿಗೆಯ ಕಾರ್ಯ ಮಾಡಲಿಲ್ಲ. ಲೇಖನಕಾರ್ಯದಲ್ಲಿ ಆ ಮೇಲೆಯೂ ತೊಡಗಿದ್ದರೆ ಎಂತಹ ಉತ್ತಮ ಕೃತಿಗಳನ್ನು ರಚಿಸುತ್ತಿದ್ದರೆಂಬುದಕ್ಕೆ ಅವರ ಪ್ರಕಟಿತ ಕನ್ನಡ ಕೃತಿ “ಮುರಲಿ" ಮತ್ತು ತುಳು “ಕಾನಿಗೆ ಸಾಕ್ಷಿಯಾಗಿವೆ.
'ಕಾನಿಗೆ` ತುಳು ಕವನ ಸಂಗ್ರಹದ ಮುನ್ನುಡಿಯಲ್ಲಿ ಕವಿ' ಎಂದರೆ ಯಾರು ಎಂಬುದನ್ನು ಕಿಲ್ಲೆಯವರು ಹೇಳುವ ರೀತಿ ಕೇಳಿ!
“ಏರೆ ಮನಸ್ ಹದೊಕ್ ಬತ್ತ್ದ್, ಹೃದಯಮಂದಿರೆಡ್ ಗಾನಕಲೆ
ತಾನಾದ್ ಪಿದಡ್ದ್ ಪರತೊನುಂಡಾ, ನನ ಯೇರ್ ಆ ಗಾನಕಲೆನ್ ಒಲಿಪಾಯರೆ<noinclude></noinclude>
gdnosakcjemgxpqbbdgmeintklyrh22
ಪುಟ:ಯಕ್ಷಗಾನ ಮಕರಂದ.pdf/೧೫೯
104
100078
316824
295138
2026-05-04T10:09:29Z
Ashwini Rai K
8475
/* Validated */
316824
proofread-page
text/x-wiki
<noinclude><pagequality level="4" user="Ashwini Rai K" /></noinclude>{{Right|133}}
ನಂತರ ಸಭೆಗೆ ಇವರನ್ನು, ಅದರಲ್ಲಿಯ ಶ್ರೀ ಕೃಷ್ಣನನ್ನು ಪರಿಚಯಿಸಿಕೊಟ್ಟ ಆ
ಹಾಸ್ಯಮಯ ಸನ್ನಿವೇಶವು ಮನಃಪಟಲದಿಂದ ಮಾಯವುದು, ಬರೆದು ತಿಳಿಸಲ
ಸದಳವಾದುದು. ತಿಳಿಯದಾದಿರೇ | ನಮ್ಮ ಕಂಸ | ಅಳಿಯನೀತನು | ನಮಗೆ
ಮೊಮ್ಮನು || “ನಮ್ಮ ಕಂಸ ಮಹಾರಾಜನ ಅಳಿಯನಿವನು. ಅವನ ಮನೆಯನ್ನು
ಅಳಿಸಿ ತೊಳೆದುದಲ್ಲದೆ, ನಮಗೆ ಆ ವಾವೆಯಿಂದ ಮೊಮ್ಮಗನೆಂದು ತೋರಿಸ ಬಂದ
ಗುಮ್ಮನಿವನು” ಎಂದೆನ್ನುವಾಗ ಆ ಹಾಸ್ಯಮುಖಮುದ್ರೆಯು ನೋಡುವಂಥದು.
“ಇನ್ನೂ ಕೇಳಬೇಕು ಇವನ ಬೃಹತ್ಕಥಾ ಮಂಜರಿಯನ್ನು -ಅಕ್ಕರೆಯಿಂದ ಮಗು
ವೆಂದು ಮೊಲೆಯೂಡಿಸ ಬಂದ ಜಕ್ಕ ಜವ್ವನೆಯನ್ನು ಹಾಲು ಹೀರುವುದರೊಂದಿಗೆ,
ಅಸುವನ್ನೇ ಹೀರಿದ ಮಹಾಪರೋಪಕಾರಿ, ಪ್ರಾತಃಸ್ಮರಣೀಯನಿವನು !”
{{gap}}ಬಕ್ಕ, ಧೇನುಕ, ಶಕಟ, ಕುಪ್ಪೆ, ಕುವಲಯಾಪೀಡಾದಿಗಳ ಚಿತ್ರವನ್ನು ಹಾಸ್ಯ
ಮಯವಾಗಿ ಚಿತ್ರಿಸಿದ ದ್ವಯಾರ್ಥವು, ಅದರಲ್ಲಿ ಪ್ರೇಕ್ಷಕರ ಮನಮುಟ್ಟುವಂತೆ
ಕೃಷ್ಣ ಬಾಲಚರಿತಾಮೃತ ಹಾಸ್ಯರಸವನ್ನು ಕೃಷ್ಣನ ಮೈಗೆರೆದು ಅವನ ಮಂಗಳಗುಣ
ಗಾನವನ್ನು ಹಾಸ್ಯರಸದಲ್ಲಿ ಅದ್ದಿ, ತಿಕ್ಕಿ, ನೊಣೆದು, ಜಾಲಾಡಿ, ಅವನ ಮುಖಕ್ಕೆ
ಎತ್ತಿದ, ಆ ಹಾಸ್ಯರಸದಿಂದ ತುಂಬಿದ ಮಂಗಳಾರತಿಯ ಹರಿವಾಣವು ಇನ್ನೂ ನನ್ನ
ಕಣ್ಣ ಮುಂದೆ ಪ್ರಜ್ವಲಿಸುತ್ತಿದೆ. ಈ ಒಂದು ಪದ್ಯಕ್ಕೆ ಅರ್ಥವನ್ನು ಹೇಳುವಾಗ
ನವರಸದ ಝರಿಯೇ ಸಭಿಕರತ್ತ ಹರಿದು ಬಂದಂತಿತ್ತು.<br />
{{gap}}ಆಗ ಕೇಳಬೇಕಿತ್ತು ಶೆಟ್ಟರ ಮುಖದಿಂದ ಹೊರಡುತ್ತಿದ್ದ ಹೂಂಕೃತಿಯನ್ನು
ಆ ರಸಮಯ ಸನ್ನಿವೇಶವು, ಮರೆಯಲಾಗದ ಸತ್ಯ-ಶಿವ-ಸುಂದರ ಸನ್ನಿವೇಶ.<br />
{{gap}}ಬಳಿಕ ಭೀಮಪಾರ್ಥರನ್ನು ಉದ್ದೇಶಿಸಿ, “ಅಯ್ಯೋ ಮಕ್ಕಳೇ ! ನೀವು ನಮ್ಮ
ವರು. ಇವನನ್ನು ನಂಬಿ ಕೆಟ್ಟಿರಿ. ಈ ಹೆಣ್ಣಿಗನನ್ನು ನಂಬಿ ನಿಮ್ಮ ಗಂಡುಗಲಿ
ಗಳೆಂಬ ಬಿರುದೂ ನಿಷ್ಪಲವಾಯಿತು. ನೀವು ಕುರುಶರಧಿಯನ್ನು ದಾಟಲು ಆರಿಸಿ
ದುದು, ಮರದ ನಾವೆಯಲ್ಲ; ಮಕ್ಕಳೇ, ನೀವು ಮರದ ನಾವೆಯೆಂದು ಭ್ರಮಿಸಿ ಕಲ್ಲ
ನಾವೆಯನ್ನು ಅಡರಿದಿರಿ, ಕಲ್ಲ ನಾವೆಯಲ್ಲಿ ಕುಳಿತ ಮೇಲೆ ಬದುಕಿನ ಆಸೆಯಿದೆಯೇ ?
ಮುಳುಗಿದಿರಿ ಮಕ್ಕಳೇ, ಮುಳುಗಿದಿರಿ, ನೀವು ಮುಳುಗುವುದರೊಂದಿಗೆ ನಿಮ್ಮನ್ನು
ನಂಬಿದವರನ್ನೂ ಇವನನ್ನು ನಂಬಿ ಕೆಡಿಸಿದಿರಿ” ಎಂದಾಗ ಒಮ್ಮೆ ಬೃಹದ್ ಭಾರತವೇ
ಕಣ್ಣ ಮುಂದೆ ತೆರೆದಿಟ್ಟಂತೆ ಕಂಡು, ಮಾತಿನ ಹಾಸ್ಯದ ಮೋಡಿಗೆ ಸಭಾಸಮೂಹವೇ
ಕರತಾಡನ ಮಾಡಿ ಗೊಳ್ಳೆಂದು ನಗುವಾಗ, ಶೆಟ್ಟರ ಬದಲಾಗುತ್ತ ಬರುತ್ತಿದ್ದ ಮುಖ
ಭಾವವನ್ನು ನೋಡಬೇಕಿತ್ತು! ಆವೇಶವು ತುಂಬಿ ಮೈರಕ್ತವು ಮುಖದತ್ತ ಹರಿದು,
ಅದು ಸಿಂಹಗಾಂಭೀರ್ಯವನ್ನು ತಾಳುತ್ತ ಬರುತ್ತಿದ್ದ ದೃಶ್ಯವು ಇಂದೂ ನನ್ನ
ಕಣ್ಣ ಮುಂದಿದೆ. ಇದು ಶಾಸ್ತ್ರಿಗಳು ಎದುರಾಳಿಯನ್ನು ಕಳಕ್ಕೆ ಸಜ್ಜುಗೊಳಿಸು
ತಿದ್ದ ಧೀಮಂತತನದ ಚಾಕಚಕ್ಯತೆ,<noinclude></noinclude>
8gwgzzd2jbiy24s21juentt0wmnqyng
ಪುಟ:ಯಕ್ಷಗಾನ ಮಕರಂದ.pdf/೧೬೦
104
100079
316825
295149
2026-05-04T10:10:43Z
Ashwini Rai K
8475
/* Validated */
316825
proofread-page
text/x-wiki
<noinclude><pagequality level="4" user="Ashwini Rai K" /></noinclude>{{Left|134}}
ಅನಂತರ ಕೃಷ್ಣ-ಮಾಗಧರ ಸಂವಾದ ವೈಖರಿಯನ್ನು ಹೇಳಿತೀರುವುದಲ್ಲ.
ಶಾಸ್ತ್ರೀಯವಾಗಿ, ಅಭ್ಯಾಗತರಿಗೆ ಮಧುಪರ್ಕಾದಿಗಳನ್ನು ನೆರವೇರಿಸಿ, ತನ್ನ ವಿದ್ವತ್ಪ್ರ
ಭೆಯನ್ನು ತೋರಿಸಿದ ರೀತಿ, ಪ್ರಾಚೀನ ಕಾಲದ ಸುಗಂಧ ದ್ರವ್ಯಗಳನ್ನು ನಮ್ಮ
ಕಣ್ಣಟ್ಟುವಂತೆ ಮಾತಿನಲ್ಲಿ ತೋರಿಸಿದಾಗ, ಆ ಮಾತಿನ ಮೋಡಿಗೆ ಸಿಕ್ಕಿ, ಆ ಪರಿಮಳ
ವನ್ನು ಆಘ್ರಾಣಿಸಿದೆನೆಂಬ ಭ್ರಾಂತಿಗೆ ಒಳಗಾಗಿ ಮತ್ತೆ ಎಚ್ಚರಗೊಂಡು, ನನ್ನಷ್ಟಕ್ಕೆ
ನಾನೇ ನಕ್ಕು, ನನ್ನ ಮಧ್ಯಕ್ಕೆ ನಾಚಿಕೊಂಡುದು ಮರೆಯಲಾರದ ಸವಿನೆನಪು.
{{gap}}ಬರಿಗೈ ಬಂಟರಾಗಿ ಬಂದ ವೀರಾಗ್ರಣಿಗಳಿಗೆ ತನ್ನ ಅತುಳ ಶಸ್ತ್ರಾಗಾರವನ್ನು
ತೋರಿಸಿ, ಅವುಗಳನ್ನು ಅನುಕ್ರಮವಾಗಿ ಹೆಸರಿಸಿ- ಅವುಗಳ ತೂಕ, ಭಾರ, ಎತ್ತರ,
ವ್ಯಾಸಾದಿಗಳನ್ನು ಶಾಕ್ತವಾಗಿ ವರ್ಣಿಸಿದ, ಆ ಶಿಲ್ಪಶಾಸ್ತ್ರದ ಪರಿಣತಿಯನ್ನು
ಕೇಳಿದ ಅಂದಿನ ಯಾವ ಕಲಾಗಾರನಾದರೂ, ಶಾಸ್ತ್ರಿಗಳ ಆ ಶಿಲ್ಪಶಾಸ್ತ್ರದ ಪಾಂಡಿ
ತ್ಯಕ್ಕೆ ಶರಣು” ಎನ್ನದಿದ್ದರೆ ಅದು ಕೃತಘ್ನತೆಯಾಗದಿರುತ್ತಿರಲಿಲ್ಲ. ಶಾಸ್ತ್ರೋಕ್ತವಾಗಿ ತನ್ನ ಆಯುಧಾಗಾರದ ಓರಣ, ಶಿಲ್ಪಶಾಸ್ತ್ರದಲ್ಲಿರುವ ಪಾಂಡಿತ್ಯ, ಸಂಗ್ರಹಿತ
ಆಯುಧಗಳ ವರ್ಣನೆಯನ್ನು ಮಾಡಿ ತನ್ನ 'ಶಾಸ್ತ್ರಿ' ನಾಮಧೇಯವನ್ನು ಅನ್ವರ್ಥ
ಗೊಳಿಸಿದ ಆ ಪುಣ್ಯ, ಮಾನ್ಯ, ಧನ್ಯ ಜೀವಕ್ಕೆ ನಮೋನ್ನಮಃ.<br />
{{gap}}ಮಾತಿಗೆ ಪ್ರತಿಮಾತು. ಹಾಸ್ಯಕ್ಕೆ ಪ್ರತಿಹಾಸ್ಯ – ಆ ಖಂಡನಾ ಮುಂಡನ
ವೈಖರಿ-ಮಲ್ಲಯುದ್ದದ ಪಟ್ಟು ವರಸೆ, ಲಾಗು-ಲಳಿ-ತುಳಿವಳಿ
ವಂಚನೆಗಳ ವರ್ಣನೆ, ಇಬ್ಬರು ವಾಲ್ಮೀಗಳ ವೈಭವೋಪೇತ ಮಾತಿನ ವಾಗ್ಟರಿ
ಸಭೆಯು ಮೂಕ, ಮೌನವಾಗಿ ತದೇಕಚಿತ್ತದಿಂದ ವೇದಿಕೆಯತ್ತ ಕಿವಿನಿಗುರಿಸಿ
ಟಕ-ಮಕನೆ ನೋಡುತ್ತಿದ್ದ ಆ ದೃಶ್ಯವು-ನಭೂತೋ ನ ಭವಿಷ್ಯತಿ.
{{gap}}ಕಿರಿಯ ಅರ್ಥಧಾರಿಗಳನ್ನು ಎತ್ತಿ ತೋರಿಸುವ ನಿರ್ಮಲ-ನಿರ್ಮತ್ಸರ ಹೃದಯ
ವಂತಿಕೆಯು ಯಕ್ಷಗಾನ ಅರ್ಥಧಾರಿಗಳಲ್ಲಿ ಇದ್ದಿದ್ದರೆ, ಅದು ದಿ| ಶಾಸ್ತ್ರಿಗಳಲ್ಲಿ.
ಅದೊಂದು ದಿನ-ಪ್ರಸಂಗ ಅಂಗದ ಸಂಧಾನ; ಹಲವು ವರುಷಗಳ ಹಿಂದೆ, ಅದ
ಬೆಳ್ಳಾರೆಯ ಪ್ರಾಥಮಿಕ ಶಾಲೆಯಲ್ಲಿಯೇ ಎಂದು ನನ್ನ ನೆನಪು. ಶ್ರೀ ದೇರಜೆ
ಸೀತಾರಾಮಯ್ಯನವರ ಅಂಗದ, ಶಾಸ್ತ್ರಿಗಳ ಪ್ರಹಸ್ತ. ಆಗ ನಾವೆಲ್ಲಾ ಉತ್ಸಾಹ
ದಿಂದ ಈ ಹಿರಿಯರ ಮುಂದೆ ಮೆರೆಯಬೇಕೆಂಬ ಮಹತ್ವಾಕಾಂಕ್ಷೆಯ ಅರೆಬರೆ ಓದಿದ
ತರುಣರು. ಅಂಗದನ ಪ್ರವೇಶವನ್ನು ಕಂಡು ಕೇಳಿದ ಪ್ರಹಸ್ತನು ಮೆಚ್ಚಿ
ಇನ್ನೂ ಇವನ ಆಳವನ್ನು ನೋಡೋಣ ಎಂದು ಈತನು ಪ್ರವೇಶಿಸಿದ ರೀತಿ, ಕುಳಿತ
ಭಂಗಿಯನ್ನು ಕಂಡು, ಇದೇನೂ ನಮಗೆ ಹೊಸತೂ ಅಲ್ಲ ವೈಶಿಷ್ಟ್ಯವೂ ಇದರಲ್ಲಿ
ಕಾಣುವುದಿಲ್ಲ. ನಾವೂ ದೈವಭಕ್ತರು. ನೀನು ಇಲ್ಲಿ ಕುಳಿತ ರೀತಿ-ಠೀವಿಯನ್ನು
ಕಂಡರೆ ನಮ್ಮ ಅರಮನೆಯ ಪ್ರಾಂಗಣದಲ್ಲಿದ್ದ ತುಲಸಿಕಟ್ಟೆಯನ್ನು ಯಾರೋ<br /><noinclude></noinclude>
6ov7hv2o6q9xk9bzw6v8cf3wveq87r4
ಪುಟ:ಯಕ್ಷಗಾನ ಮಕರಂದ.pdf/೧೬೧
104
100080
316826
295150
2026-05-04T10:12:11Z
Ashwini Rai K
8475
/* Validated */
316826
proofread-page
text/x-wiki
<noinclude><pagequality level="4" user="Ashwini Rai K" /></noinclude>{{Right|135}}
ಮಂಗಚೇಷ್ಟಿಗಳು ಎತ್ತಿ ತಂದು ಈ ಸಭಾಭವನದಲ್ಲಿ ಇಟ್ಟಂತೆ ಕಾಣುತ್ತದೆ”
ಎಂದು ಹಾರಿಸಿದ ಚಟಾಕಿಗೆ ಸಭೆಯೇ ಗೊಳ್ಳೆಂದು ನಕ್ಕು ಚಪ್ಪಾಳೆಯ ಮಳೆಗರೆಯಿತು.
{{gap}}ಪ್ರತ್ಯುತ್ಪನ್ನ ಮತಿ ದೇರಜೆಯವರು ಬಿಟ್ಟುಕೊಟ್ಟರೇ! “ಓಹೋ, ಹಾಗೋ?
ನಿನ್ನನ್ನು ನೋಡುವಾಗಲೇ ನೀನೂ ದೈವಭೀರುವೆಂದು ನಮಗರಿವಾಯಿತು.
ಅಂತೆಯೇ ನೀನೂ ನಮ್ಮನ್ನು ನಿರ್ಮತ್ಸರದಿಂದ ಕಂಡ ಧೀರೋದಾರ ವೀರೋಚಿತ
ಗುಣಕ್ಕೆ ನಾವು ಆಭಾರಿಗಳು. ಆದರೆ ನೀನು ಕಂಡು ಬಣ್ಣಿಸಿದ ಈ ತುಲಸಿಯ
ಕಟ್ಟೆಗೆ ಪ್ರದಕ್ಷಿಣಾಪೂರ್ವಕ ಸಾಷ್ಟಾಂಗ ನಮಸ್ಕಾರ ಮಾಡದುದು ದೈವದ್ರೋಹ
ವಲ್ಲದೆ ಸಂಸ್ಕೃತಿಯ ಉಲ್ಲಂಘನೆ ಎಂದು ನಿನಗೆ ನಾನು ನೆನಪಿಸಿಕೊಡಬೇಕಾಗಿ ಬಂದು
ದಕ್ಕೆ ವಿಷಾದಿಸುತ್ತೇನೆ. ಅರಿತ ಮೇಲಾದರೂ ಮಾಡಿದ ತಪ್ಪನ್ನು ಒಪ್ಪಿಕೊಂಡು
ಶಿಷ್ಟ ಸಂಪ್ರದಾಯವನ್ನು ಕಾಪಾಡುವುದು ಲೌಕಿಕ ವೀರಕ್ಕೆ ಸಲ್ಲಕ್ಷಣ” ಎಂದು ಸೀತಾ
ರಾಮಯ್ಯನವರು ಹೇಳುವಾಗ ಪುನಃ ಕರತಾಡನ, ಶಾಸ್ತ್ರಿಗಳ ಸೋತೆನೆಂಬ ಭಾವನೆ
ಯನ್ನು ಬಿಂಬಿಸುವ ಹುಹುಹೂ” ಎಂಬ ನಿರಾಕರಣೆ. ಅಂದಿನಿಂದ ಶ್ರೀ ದೇರಜೆ
ಯವರು ಶ್ರೇಷ್ಠ ಅರ್ಥಧಾರಿಗಳ ಶ್ರೇಣಿಗೆ ಸೇರಿದರೆಂದು ನನ್ನ ಊಹೆ. ನಮಗೆಲ್ಲರಿಗೆ
ಯಕ್ಷಗಾನರಂಗದಲ್ಲಿ ಇಂಥ ಪ್ರೋತ್ಸಾಹಕರ ಸನ್ನಿವೇಶಗಳನ್ನು ಒದಗಿಸಿಕೊಟ್ಟ ಆ
ಯಕ್ಷಗಾನ ಗುರುಶ್ರೇಷ್ಠನನ್ನು ಕಣ್ಮಣದಿಂದ ಇಂದು ನಾವು ಸತ್ಕರಿಸಬೇಕಲ್ಲದೆ,
ಪೊನ್ನ ಕಂಕಣವನ್ನು ತೊಡಿಸುವ ಭಾಗ್ಯಬಾಹಿರರಾದ ನಂತರ ಅದನ್ನು ಸ್ಮರಿಸಿ
ಕೊಂಡು ಅಲವತ್ತರೇನು ಬಂತು?,...
{{center|೨.ನಾ ಕಂಡ ಭಾಗವತೋತ್ತಮ}}
{{gap}}ಸುಮಾರು ನಲುವತ್ತು ವರುಷಗಳ ಹಿಂದೆ. ನಾನು ಪೆರಡಾಲ ಮಹಾಜನ
ಸಂಸ್ಕೃತ ಕಾಲೇಜಿನ ವಿದ್ಯಾರ್ಥಿ. ನನ್ನ ದೊಡ್ಡ ತಂದೆ ಕವಿಭೂಷಣ ಕೆ. ಪಿ. ವೆಂಕಪ್ಪ
ಶೆಟ್ಟರು ಕುಂಬಳೆಯಲ್ಲಿ ವೈದ್ಯಕೀಯ ವೃತ್ತಿಯೊಂದಿಗೆ ಯಕ್ಷಗಾನ ಸಾಹಿತ್ಯಕ್ಕೆ
“ರಾಣಾ ರಾಜಾಸಿಂಹ” ಪ್ರಸಂಗವನ್ನು ಬರೆಯುತ್ತಿದ್ದ ಸಮಯ.
{{gap}}ಶ್ರೀ ಕೃಷ್ಣ ಜನ್ಮಾಷ್ಟಮಿಯಂ ನಮ್ಮ ಕಾಲೇಜಿನಲ್ಲಿ ವಿಜೃಂಭಣೆಯಿಂದ ನಡೆಸಿ
ಕೊಂಡು ಬರುವ ಒಂದು ಪರ್ವದಿನ. ಆ ವರುಷ ಪುರಾಣವಾಚನದೊಂದಿಗೆ
ಮತ್ತೂ ಕೆಲವು ಸ್ಪರ್ಧೆಗಳಲ್ಲಿ ನಾನು ಪ್ರಥಮ ಬಹುಮಾನವನ್ನು ಗಿಟ್ಟಿಸಿದ ಹೆಮ್ಮೆಯ
ವಿಚಾರವನ್ನು ದೊಡ್ಡ ತಂದೆಯವರಿಗೆ ತಿಳಿಸಿದಾಗ ಅವರು ಆನಂದಿತರಾಗಿ ನೆರೆಯ
ಪ್ರತಿಷ್ಠಿತ ಬಂಟರ ಸಮುದಾಯವನ್ನೇ ಕರೆದು, ನನ್ನ ಭಾರತ ವಾಚನದ ಏರ್ಪಾ
ಡೊಂದನ್ನು ಮಾಡುವದೆಂದೂ, ಇದಕ್ಕೆ ಅವರು ಅರ್ಥ ಹೇಳಿದರೆ, ನಾನು ಹೆದರಿ
ಓದಿದನೆಂದರೆ ಆಭಾಸವಾಗಬಹುದೆಂದೂ, ಅಷ್ಟಮಿ ಕಳೆದ ಕೂಡಲೇ ಬರುವ ಗಣೇಶ<noinclude></noinclude>
qmhu8j1cnx0a9i7rb0wcylh4femwqwk
ಪುಟ:ಯಕ್ಷಗಾನ ಮಕರಂದ.pdf/೧೬೨
104
100081
316827
295153
2026-05-04T10:13:19Z
Ashwini Rai K
8475
/* Validated */
316827
proofread-page
text/x-wiki
<noinclude><pagequality level="4" user="Ashwini Rai K" /></noinclude>{{Left|136}}
ಚತುರ್ಥಿಗೆ ನೆರೆಯ ಕೋಟ್ರಗುತ್ತು. ದೇವಸ್ಥಾನದಲ್ಲಿ ಶೆಟ್ಟರ ಮತ್ತು ಶಾಸ್ತ್ರಿಗಳ
ಕೂಡುವಿಕೆಯಿಂದ ಯಕ್ಷಗಾನ ಕೂಟವೊಂದು ಜರಗಲಿದ್ದುದರಿಂದ ಅಲ್ಲಿಂದ ನನ್ನ
ಓದುವಿಕೆಗೆ ಅರ್ಥ ಹೇಳುವರೆ ಶ್ರೀ ಶಾಸ್ತ್ರಿಗಳನ್ನು ಕರೆತರುವದಾಗಿಯೂ, ಹುಡುಗ
ನಾದ ನನ್ನ ಓದುಗಾರಿಕೆಯು ಸಭಾಕಂಪದಿಂದ ವಿಫಲವಾದರೆ ಎಂದು ಯಕ್ಷಗಾನ
ಸಂಗೀತರತ್ನ ಮಹಾಬಲ ನೋಂಡರನ್ನೂ ವಾಚನಕ್ಕಾಗಿ ಕರೆಯುವದೆಂದೂ,
ದ್ರೌಪದಿ ವಸ್ತ್ರಾಪಹರಣವು ವಾಚನ ಭಾಗವೆಂದೂ, ಕುಂಬಳೆ ದೇವಸ್ಥಾನವೇ ಸಭಾ
ಸ್ಥಳವೆಂದೂ ನಿರ್ಣಯವಾಗಿ ನಾನು ಸಭೆಯನ್ನು ರಂಜಿಸಿದರೆ, ವಸ್ತ್ರಾಪಹರಣದ
ನಂತರದ ಭಾಗವನ್ನು ಶ್ರೀ ನೋಂಡರ ಓದಿಗೆ ಕವಿಭೂಷಣರು ಅರ್ಥವಿಸುವುದೆಂದೂ
ನಿರ್ಧರಿಸಿ- ಶ್ರೀ ಶಾಸ್ತ್ರಿಗಳು ಮಹಾ ವಿದ್ವಾನ್ ಅತಿಥಿಯಾದುದರಿಂದ ನನ್ನ ಓದುವಿಕೆ
ಯಿಂದ ಅಭಾಸವಾಗಬಾರದೆಂದು, ದೊಡ್ಡ ತಂದೆಯವರು ನನಗೆ ಕಾರ್ಯಕ್ರಮಕ್ಕೆ
ಮೊದಲೇ ಅಭ್ಯಾಸವನ್ನು ಮಾಡಲು ಆರಂಭಿಸಿದ್ದರು.
{{gap}}ಸಭಾಭವನವು ಘನವಿದ್ಯಾಸಂಪನ್ನರಿಂದ ತುಂಬಿತ್ತು. ವಸ್ತ್ರಾಪಹರಣದ ಭಾಗ
ವಾದುದರಿಂದ ಕುಂಬಳೆಯ ಪ್ರತಿಯೊಂದು ಮನೆಯಿಂದಲೂ ಪುರಾಣಪ್ರಿಯ ಮಹಿಳೆ
ಯರ ಸಮೂಹವೇ ಬಂದು ಸೇರಿತ್ತು. ನೆರೆದ ಸಭೆಯನ್ನು ಕಂಡೇ ದಿಗಿಲುಗೊಂಡ
ನನಗೆ, ದೊಡ್ಡ ತಂದೆಯವರೊಡನೆ ಹಸನ್ಮುಖಿಯಾಗಿ ವಿನೋದದಿಂದ ಮಾತಾಡು
ತಿದ್ದ ಶಾಸ್ತ್ರಿಗಳ ಭವ್ಯಮೂರ್ತಿಯನ್ನು ಕಂಡು, ಪೂರ್ವಪಶ್ಚಿಮಗಳ ಅಪೂರ್ವ
ಸಮ್ಮಿಲನವು ಇಂದಾಯಿತೇ ಎಂದು ಭಾಸವಾಯಿತು. ಶಾಸ್ತ್ರಿಗಳು “ಏತಿ” ಎಂದಲ್ಲಿ
ಶೆಟ್ಟರು “ನೇತಿ” ಎನ್ನುವುದು ಅಂದಿನ ವರೆಗಿನ ಸಂಪ್ರದಾಯ.<br />
{{gap}}ದೊಡ್ಡ ತಂದೆಯವರ ಆಣತಿಯಂತೆ ಸಭೆಗೆ ವಂದಿಸಿ, ವ್ಯಾಸಪೀಠದ ಮೇಲೆ
ಹೂಹಾರಗಳಿಂದ ಅಲಂಕೃತವಾಗಿ, ಸುಗಂಧದ್ರವ್ಯಗಳಿಂದ ಪೂಜೆಗೊಂಡ ಗದುಗಿನ
ಭಾರತವನ್ನು ತೆಗೆದುಕೊಂಡು ನಾಂದಿಯ “ಶ್ರೀವನಿತೆಯರಸನೆ ವಿಮಲ ರಾಜೀವ
ಪೀಠನ ಪಿತನೆ...... ಗದುಗಿನ ವೀ-ರ-ನಾ-ರಾ-ಯ-ಣ” ಎಂದು ಅಕ್ಷರ ಅಕ್ಷರ
ವಿಂಗಡಿಸಿ ಆಲಾಪನೆ ಮಾಡಿ ಪೂಜ್ಯ ಭಾವನೆಯಿಂದ ಶಾಸ್ತ್ರಿಗಳ ಮುಖದತ್ತ ನೋಡಿದೆ.<br />
{{gap}}ಅವರ ಮುಗುಳು ಮುಖವು ಸಂತೋಷದಿಂದ ಅರಳಿತ್ತು. “ಭೇಷ್” ಎಂದು
ನನ್ನ ಬೆನ್ನು ತಟ್ಟಿ, “ಮುಂದರಿಸು” ಎಂದಾಗ ನನ್ನ ಸಂತೋಷಕ್ಕೆ ಪಾರವಿರಲಿಲ್ಲ. ಮತ್ತೆ ಗಣೇಶಸ್ತುತಿಯನ್ನು ಹಾಡುವಾಗ ನಾನು ಎಷ್ಟು ಎತ್ತರದಲ್ಲಿ ಇದ್ದೆನೋ ಎಂದು
ನನಗೆ ಅರಿವಿರಲಿಲ್ಲ. ಸಭೆಯು ಮೌನವಾಗಿ ನೋಡುತ್ತಿತ್ತು. ಪುಸ್ತಕದ ಗುರುತನ್ನು
ಹುಡುಕಿ, ವಸ್ತ್ರಾಪಹರಣದ ಭಾಗವನ್ನು ಕಂಡು ಅದರಲ್ಲಿ ಗುರುತಿಸಿದಂತೆ---<br />
{{gap}}“ಭೂರಮಣ ಕೇಳಖಿಲ ನೃಪ ಸಂಹಾರ ಬೀಜದ ಕರ್ಮಫಲ...... ದ್ಯೂತ
ಕೇಳಿಗೆ ಮಾಡಿದನು ಮನವ” ಎಂಬ ಪದ್ಯವನ್ನು ಹಾಡಿ ಶಾಸ್ತ್ರಿಗಳ ಗಂಭೀರಮುಖ<noinclude></noinclude>
ri38ieezflkdsmd9oyp943168c54mpy
ಪುಟ:ಯಕ್ಷಗಾನ ಮಕರಂದ.pdf/೧೬೩
104
100082
316828
295154
2026-05-04T10:14:23Z
Ashwini Rai K
8475
/* Validated */
316828
proofread-page
text/x-wiki
<noinclude><pagequality level="4" user="Ashwini Rai K" /></noinclude>{{Right|137}}
ದತ್ತ ನೋಡಿದಾಗ, ಅವರ ಮುಕ್ತಕಂಠದಿಂದ ಲೀಲಾಜಾಲವಾಗಿ, ಪ್ರಾರಬ್ಧದ
ಮಹಿಮೆ, ಶನಿಮಹಾತ್ಮ, ಕರ್ಮದ ವಿಚಾರವೆಲ್ಲವನ್ನೂ ಒಂದೇ ಪದ್ಯದಲ್ಲಿ ಧರ್ಮ-
ಕರ್ಮದ ಸಕಲ ಸಾರವನ್ನೂ ನಿರರ್ಗಳವಾಗಿ ವಿವರಿಸಿದ, ಆ ವಿದ್ಯಾವೈಖರಿಗೆ ಮೆಚ್ಚಿ
ತೂಗಿ ತೊನೆಯದ ತಲೆಯೇ ಆ ಸಭಾಭವನದಲ್ಲಿ ಇರಲಿಲ್ಲ. ಕವಿಭೂಷಣರಂತೂ,
ಅರೆನಿಮೀಲಿತನಯನರಾಗಿ ಇಹವನ್ನೇ ಮರೆತಂತಿದ್ದರು.
{{gap}}ವಾಚನವು ಮುಂದುವರಿಯಿತು. ಇಂದುವದನೆಗೆ ದಕ್ಷಿಣಾಕ್ಷಿಸ್ಪಂದವಾಯಿತು
ಅಂದವೇರಿತು ಮುಸುಡು ಶಕುನಿಸುಯೋಧನಾದಿಗಳ-ಈ ಪದ್ಯಕ್ಕೆ ಶಾಸ್ತ್ರಿ
ಗಳು ಅರ್ಥ ಹೇಳುವಾಗ, ಪಳಗಿದ ಜ್ಯೋತಿಷಿಯು ಶಕುನಗಳ ಆಧಾರದಿಂದ,
ಭೂತ, ಭವಿಷ್ಯದ್, ವರ್ತಮಾನದ ಆಗುಹೋಗುಗಳನ್ನು ಕಣ್ಣ ಮುಂದೆ ಕಟ್ಟುವಂತೆ
ವರ್ಣಿಸಿದ ಆ ಸಂದರ್ಭವನ್ನು ಕೇಳಿದ ಕಿವಿ, ಕಂಡ ಕಣ್ಣುಗಳು ಸಾರ್ಥಕತೆಯನ್ನು
ಹೊಂದಿದ ಕವಿಗಳು, ಶಾಸ್ತ್ರವತ್ತಾಗಿ ಇವರು ಜ್ಯೋತಿಃಶ್ಯಾಸ್ತ್ರವನ್ನು ಎಷ್ಟು
ಆಳವಾಗಿ ಅಭ್ಯಸಿಸಿದ್ದರೋ ? ಎಂದು ಮೂಗಿನ ಮೇಲೆ ಬೆರಳಿಡುವಂತಾಯಿತು.
ಶಕುನಿಯು ದೂತದ ಹಾಸನ್ನು ಹಾಸಿದನು. “ಹಲಗೆಯಿಕ್ಕಿತು ಹೊನ್ನ ಸಾರಿಗಳಿಳು
ಹಿದವು.... ... ಗೆಲಿದ ಹೋಗೆಂದೊದರುತಿರ್ದನು ಶಕುನಿ ಬೊಬ್ಬಿರಿದು” ಎಂಬ
ಪದ್ಯವನ್ನು ಓದಿ ನಿಲ್ಲಿಸಿದೆ. ಶಾಸ್ತ್ರಿಗಳು ಸ್ವತಃ ದೂತಕೇಳೀನಿರತನಾದ ಧರ್ಮ
ಜನೋ? ಶಕುನಿಯೋ ಎಂಬಂತೆ ಹಾಸಿನ ವಿವರಣೆ, ದಾಳವನ್ನುರುಳಿಸುವ ಕ್ರಮ
ಜೂಜಿನ ನೀತಿ, ನಿಯಮ, ಹೊನ್ನ ಸಾರಿಗಳ ಬೆಲೆ ಎಲ್ಲವನ್ನೂ ನಿಷ್ಣಾತ ಜೂಜು
ಖೋರನಂತೆ ವಿವರಿಸಿದ ಆ ರೀತಿಗೆ, ಮಾತಿನ ಮೋಡಿಗೆ ಮರುಳಾಗಿ ನೆರೆದ ಜನಸಮು
ದಾಯವೇ ಇವರ ಮುಖದತ್ತ ಒಮ್ಮೆ, ವ್ಯಾಸಪೀಠವೇ ಜೂಜಿನ ಕಳವೇ? ತಾವೂ
ಒಂದು ಸವಾಲು ಹಾಕಲೇ, ಎಂಬಂತೆ ನೋಡುತ್ತಿದ್ದ ಆ ದೃಶ್ಯವು ಮರೆಯುವಂತ
ಹುದಲ್ಲ. ಆ ದಿನ ನನ್ನ ಜೀವಮಾನದ ಒಂದು ಅವಿಸ್ಮರಣೀಯ ದಿನ.
{{gap}}ಕಥೆಯು ಮುಂದುವರಿಯಿತು. ಧರ್ಮಜನು ಧನಕನಕ, ವಸ್ತ್ರಾಭರಣ, ಚತು
ರಂಗ ಬಲವೆಲ್ಲವನ್ನೂ ಜೂಜಿಗೆ ಬಲಿಕೊಟ್ಟುದಾಯಿತು.ನಕುಲ ಸಹದೇವರ
ಸರತಿಯ ಬಂತು. ಧನಂಜಯನೂ ಜೂಜಿನ ಕಳದಲ್ಲಿ ಬೆಲೆಯಿಲ್ಲದ ಕವಡೆಯಾದ.
ಬಕ-ಹಿಡಿಂಬರನ್ನು ಮುಕ್ಕಿದ ಅಜೇಯನಾದ ಭೀಮಸೇನನೂ ಶಕುನಿಯ ದಾಳಕ್ಕೆ
ಆಹುತಿಯಾದ ಮೇಲೆ ಉಳಿದವರೇನು? ಕೊನೆಗೆ ಧರ್ಮಜನು ತನ್ನನ್ನು ತಾನೇ
ಬಲಿಗೊಟ್ಟು ಸರ್ವವನ್ನೂ ಕಳೆದುಕೊಂಡನೆಂದು ಶಕುನಿಯ ಬೊಬ್ಬಿರಿದ
ಈ ಸಂದರ್ಭದ ಶಾಸ್ತ್ರಿಗಳ ಅರ್ಥಗಾರಿಕೆಯನ್ನು ಕೇಳಿ ಮೆಚ್ಚಿದ ಪ್ರೇಕ್ಷಕ
ವೃಂದವು, ಇಹವನ್ನೇ ಮರೆತಂತೆ, ತೆರೆದ ಬಾಯಿಯನ್ನು ಮುಚ್ಚಲೂ ಮರೆತು
ವಾತಾವರಣವೇ ಮೌನ ಗಭೀರತೆಯನ್ನು ತಾಳಿತ್ತು. ಗಾಳಿ ಸುಳಿಯುವ ಸದ್ದು<noinclude></noinclude>
66bqeqb9jox0exit0bmnm8unq8xc0oi
ಪುಟ:ಯಕ್ಷಗಾನ ಮಕರಂದ.pdf/೧೬೪
104
100083
316829
295359
2026-05-04T10:15:45Z
Ashwini Rai K
8475
/* Validated */
316829
proofread-page
text/x-wiki
<noinclude><pagequality level="4" user="Ashwini Rai K" /></noinclude>{{Left|138}}
ಕೂಡಾ ಇಲ್ಲದ ಸನ್ನಿವೇಶದಲ್ಲಿ ಒಂದು ಮೂಕ, ಮೌನ, ವಿದ್ಯಾವಂತ ಪ್ರೇಕ್ಷಕ
ವೃಂದವು ಮಾತ್ರ ಕಾಣುತಿತ್ತು.
{{gap}}ಕೊನೆಯದಾಗಿ ಪಟ್ಟಮಹಿಷಿ ಪಾಂಚಾಲಿಯು ಪಣವೆಂದು ಯುಧಿಷ್ಠಿರನು
ಘೋಷಿಸಿದೊಡನೆ, ಧರ್ಮಜನು ಅವಳನ್ನೂ ಸೋತನೆಂದು ಶಕುನಿಯ
ಘೋಷಣೆಯೊಂದಿಗೆ ಇನ್ನು ಪತಿವ್ರತಾಶಿರೋಮಣಿ ಪಾಂಚಾಲಿಯು ಕೌರವರ
ತೊತ್ತು, ಛಲದಂಕಮಲ್ಲ ಕೌರವೇಶ್ವರನ ಹಡವಳೆಯನ್ನುವಾಗ ಸಭೆಯು ಸಿಡಿಲಾ
ಘಾತಕ್ಕೊಳಗಾದಂತೆ ಕಿವಿಗಳನ್ನು ಮುಚ್ಚಿಕೊಂಡ ಆ ಸನ್ನಿವೇಶವು ಮರೆಯುವುದೇ?
{{gap}}ಈ ಸಮಯದ ವಿದುರನ ಸಂತಾಪದ ಎರಡು ಪದ್ಯಗಳಿಗೆ ಶಾಸ್ತ್ರಿಗಳು ನೀತಿಯ
ಸಾರಸತ್ವ ಸ್ವವನ್ನೇ ಧಾರೆಯೆರೆದಿದ್ದರು. ಇದನ್ನು ತದೇಕಚಿತ್ತದಿಂದ ಕೇಳಿದ ಸಭಿ
ಕರು, ಇವರೆಷ್ಟು ಶಾಸ್ತ್ರಪಾರಂಗತರೋ ಎಂದು ಬೆಟ್ಟು ಕಚ್ಚಿದ ನೆನಪು ಅಚ್ಚಳಿಯದೆ
ನಿಚ್ಚಳವಾಗಿ ಕಣ್ಣ ಮುಂದೆ ಎಚ್ಚರವಾಗಿ ನಿಂತಂತಿದೆ.
{{gap}}ದೌಪದಿಯನ್ನು ಬಹಿಷ್ಠೆ ಎಂದೂ ಬಗೆಯದೆ, ದುಃಶ್ಯಾಸನನಿಂದ ಸಭಾಭವ
ನಕ್ಕೆ ಎಳೆದು ತರಿಸಿದುದಾಯಿತು. ಸಭೆಯಲ್ಲಿ ನೆರೆದ ಹಿರಿಯರು-ಭೀಷ್ಮ, ದ್ರೋಣ
ಧೃತರಾಷ್ಟ್ರ ವಿದುರ, ಸಂಜಯ, ಕೃಪ, ಅಶ್ವತ್ಥಾಮ ಮೊದಲಾದವರನ್ನು ಕುರಿತು
ದೌಪದಿಯು ಇದು ನ್ಯಾಯಸಮ್ಮತವೇ?” ಎಂದು ಸಭಿಕರನ್ನು ಒಬ್ಬೊಬ್ಬರನ್ನೇ
ಬೆಟ್ಟು ತೋರಿಸಿ ನಿರ್ದೇಶಿಸಿದಾಗ, ತಾವೇ ಭೀಷ್ಮ, ದ್ರೋಣ, ಧೃತರಾಷ್ಟ್ರ, ವಿದು
ರಾದಿಗಳೇ? ಎಂಬ ಭ್ರಾಂತಿಯು ಅವರ ಹೃದಯದಲ್ಲಿಯೇ ಅಂಕುರಿಸುವಂತೆ
ಹೃದಯ ಪರಿವರ್ತನೆ ಮಾಡಿದ ಆ ಮಾತಿನ ಮೋಡಿಗೆ ಸೋತು, ತಮ್ಮೊಡನೆಯೇ
ಈ ನ್ಯಾಯದ ಇತ್ಯರ್ಥವನ್ನು ಮಾಡಲು ಕೇಳಿಕೊಂಡ ಪವಾಡ ಸದೃಶ ಸಂದರ್ಭಕ್ಕೆ
ನಾಚಿದ ಹಿರಿಯರು ಇಂದೂ ಕಣ್ಣ ಮುಂದೆ ಕಾಣುತ್ತಾರೆ.
{{gap}}ದೌಪದಿಯ ವಸ್ತ್ರಾಪಹರಣಕ್ಕೆ ಆಣತಿಯಾಯಿತು.ಅಳುಕಿದನೆ ಸುಡಲ
ವನ | ಮೇಲುದ ಸೆಳೆದೊಡನ್ನತಕುಚವ ನಳಿತೋಳಲಿ ಮುಚ್ಚಿದಳಬಲೆ ಬೆಚ್ಚಿ
ದಳವನ ನಿಷ್ಟುರಕೆ, ಮಾದ್ರೀಕುಮಾರಕರ || ಎಂಬ ಪದ್ಯಕ್ಕೆ ಹೇಳಿದ ಅರ್ಥ
ವನ್ನು ಕೇಳಿ ನೆರೆದ ಮಹಿಳಾವೃಂದದಲ್ಲಿ ಒಬ್ಬಳೇ ಒಬ್ಬಳಾದರೂ, ಆ ಹೇಸೀ
ದೃಶ್ಯವನ್ನು ಕಣ್ಣಾರೆ ಕಂಡೆವೋ ? ಎಂಬ ಭ್ರಾಂತಿಗೊಳಗಾಗಿ ಅವನತಮುಖರಾಗ
ದವರಿರಲಿಲ್ಲ. “ಕರನೀದುಃಶ್ಯಾಸನನ ತಂದೆಗಳಿರಾ ಎಂದೊರಲಿದಳು
ತರಳೆ” ಎಂಬ ಹಾಡನ್ನು ನಾನೂ ಅಳುತ್ತಲೇ ಹಾಡಿ ಮುಗಿಸಿ, ಶಾಸ್ತ್ರಿಗಳು ಅರ್ಥೈ
ಸುವಾಗ ಹೆಂಗಸರು-ಮಕ್ಕಳೆನ್ನದೆ ಗಂಡಸರು-ಯುವಕರೆನ್ನದೆ ಸಭೆಗೆ ಸಭೆಯೇ
ಬಿಕ್ಕಿಬಿಕ್ಕಿ ಅಳುತಿತ್ತು. ಇದನ್ನು ಕೇಳಿ ಉದ್ವೇಗಗೊಂಡ ಕುಂಬಳೆಯ ಪ್ರಸಿದ್ಧ
ವ್ಯಾಪಾರಿ, ರಸಿಕ, ಸಜ್ಜನ, ವಾಸಪ್ಪ ನ್ಯಾತರು ಆ ಭೀಭತ್ಸ ದೃಶ್ಯವನ್ನು ಎಣಿಸಿ,
'' ಎಂದು ತೂಕರಿಸಿ ಸಭೆಯಿಂದ ಕಣ್ಣೀರು ಒರಸುತ್ತಾ ಹೊರನಡೆದುದನ್ನು<noinclude></noinclude>
m4bontnjt8b7ywlp9m1j19v61s6dpfj
ಪುಟ:ಯಕ್ಷಗಾನ ಮಕರಂದ.pdf/೧೬೬
104
100084
316831
295385
2026-05-04T10:17:33Z
Ashwini Rai K
8475
/* Validated */
316831
proofread-page
text/x-wiki
<noinclude><pagequality level="4" user="Ashwini Rai K" /></noinclude>{{Left|140}}
{{gap}}ಅಂದಿನ ಯಕ್ಷಗಾನರತ್ನ ಮಹಾಬಲ ನೋಂಡರ ಓದುಗಾರಿಕೆ, ಯಕ್ಷಗಾನ
ವಾಚಸ್ಪತಿ ಪೊಳಲಿ ಶಾಸ್ತ್ರಿಗಳ ಅರ್ಥಗಾರಿಕೆಯು ಪಾವನ ಗಂಗೆ-ತುಂಗೆಯರ ರಸ
ಪ್ರವಾಹ. ಇಲ್ಲಿ ಯಕ್ಷಗಾನ ಭಾಸ್ಕರ ಕವಿಭೂಷಣ ಶೆಟ್ಟರ ಮೇಲ್ವಿಚಾರಣೆ ಎಂದರೆ
ಗುಪ್ತಗಾಮಿನಿಯಾದ ಬಂದ ಕಲಾಸರಸ್ವತಿ. ಈ ತ್ರಿವೇಣೀ ಸಂಗಮದಲ್ಲಿ ಭಾಗಿ
ಯಾದ ಭಕ್ತಮವು ಪುನೀತಗೊಂಡಿತೆಂದರೆ ಉತ್ತೇಕ್ಷೆಯಾಗದು.
ಯಕ್ಷಗಾನ ಪುರಾಣ ಸಾಹಿತಿಗಳ ಈ ತ್ರಿವೇಣೀಸಂಗಮದಲ್ಲಿ ನನ್ನ ಕಣ್ಮ
ಣಾಂಜಲಿಯೊಂದಿಗೆ ಮೂವರಿಗೂ ಸಾಷ್ಟಾಂಗ ನಮನಃ | ಸ್ನಾನವನು ಗಂಗೆಯೊಳು |
ಪಾನವನು | ತುಂಗೆಳು | ಮಾನವರು ಮಾಡಿದರೆ | ಬೇನೆಗೊಳಗಾಗರ್ !
{{center|-ಮೃತ್ಯೋರ್ಮಾ ಅಮೃತಂಗಮಯ—}}
{{center|————————}}
{{gap}}“ಜನಾಂಗದ ಜೀವಂತವಾದ ಸಂಸ್ಕೃತಿ, ಮಾರ್ಗೀಯ ಸಾಹಿತ್ಯದೊಳಗಿನ
ದಕ್ಕಿಂತಲೂ ಸ್ಪುಟತರವಾಗಿ ಜನಪದ ಸಾಹಿತ್ಯದೊಳಗೆ, ಪ್ರತಿಬಿಂಬಿಸುವು
ದಲ್ಲವೆ? ಅದರಿಂದ ಅಖಂಡ ಕನ್ನಡ ನಾಡಿಗೆ ಮಾತ್ರ ಸಂಬದ್ಧವಾದ ಜನಪದ
ಸಾಹಿತ್ಯ' ಅಲ್ಲವೆ 'ಯಕ್ಷಗಾನ ಸಾಹಿತ್ಯ' ಎಂಬ ವಿವೇಚನಾಪೂರ್ಣವಾದ
ಒಂದು ಕನ್ನಡ ಗ್ರಂಥವನ್ನು ಬರೆವುದು ಅತ್ಯಾವಶ್ಯಕ.”
{{Right|-ಮುಳಿಯ ತಿಮ್ಮಪ್ಪಯ್ಯ}}<noinclude></noinclude>
obigvu4aplhczpemfjhgqtrm1d1wazm
ಪುಟ:ಯಕ್ಷಗಾನ ಮಕರಂದ.pdf/೧೬೫
104
100085
316830
295373
2026-05-04T10:16:46Z
Ashwini Rai K
8475
/* Validated */
316830
proofread-page
text/x-wiki
<noinclude><pagequality level="4" user="Ashwini Rai K" /></noinclude>{{Right|139}}
ಕಂಡ ನೆನಪೂ ಅಳಿಯುವುದೇ? ಇದು ಎಂದೆಂದೂ ಮಾಯದ ಗಾಯ. ಈ ಸಂದರ್ಭ
ದಲ್ಲಿ ಕುಳಿತು ಗಂಭೀರವದನರಾಗಿ ಕೇಳುತ್ತಿದ್ದ ಕವಿಭೂಷಣ ಶೆಟ್ಟರು ಎದ್ದು ಶಾಸ್ತ್ರಿ
ಗಳನ್ನು ಆಲಿಂಗಿಸಿದ ದೃಶ್ಯವನ್ನು ಕಂಡ ಕಣ್ಣುಗಳು ಸಾರ್ಥಕ್ಯವನ್ನು ಪಡೆದುವು
{{gap}}ಮುಂದಿನ ಓದು “ಯಕ್ಷಗಾನ ರತ್ನ” ಮಹಾಬಲ ನೋಂಡರದು. ಅರ್ಥ
ಗಾರಿಕೆಯು ಕವಿಭೂಷಣರದು ಎಂದು ನಿರ್ಣಯವಲ್ಲವೇ! ವೇದಿಕೆಗೆ ಬರುವಂತೆ ಶ್ರೀ
ಶೆಟ್ಟರನ್ನು ಶಾಸ್ತ್ರಿಗಳು ಆಹ್ವಾನಿಸಿದರು. ಆದರೆ ಶೆಟ್ಟರು ಶಾಸ್ತ್ರಿಗಳ ಅಂದಿನ ಅರ್ಥ
ಗಾಂಭೀರ್ಯಕ್ಕೆ ಸೋತು ನಿರ್ಮತ್ಸರದಿಂದ “ಶಾಸ್ತ್ರಿಗಳು ಅರ್ಥ ಹೇಳಿದ ನಂತರ
ನಾನು ಅರ್ಥವಿಸುವುದೆಂದರೆ ಪಾಲುಂಡ ಮೇಲುಂಡ ಎಂಬ ನಾಣ್ಣುಡಿಗೆ
ಪಕ್ಕಾಗಬೇಕಾಗುವುದು. ಆದರೆ ಅದಕ್ಕೆ ನಾನು ಸಿದ್ಧನಿಲ್ಲ” ಎಂದು ವಿನಯ
ಪೂರ್ವಕ ನಿರಾಕರಿಸಿ ಸಭಾಕಾರ್ಯವನ್ನು ಶಾಸ್ತ್ರಿಗಳ, ಮಹಾಬಲ ನೋಂಡರ
ಮುಂದುವರಿಸುವಂತೆ ಕೇಳಿಕೊಂಡರು. ನಾನು ಎದ್ದು ಸಭೆಗೂ, ಶಾಸ್ತ್ರಿಗಳಿಗೂ
ವಂದನೆ ಮಾಡಿ ಸಭಾಸಮುದಾಯವನ್ನು ಧನ್ಯತಾಭಾವನೆಯಿಂದ ಸೇರಿಕೊಂಡ.
ದಿವಂಗತ ಕವಿಭೂಷಣ ಯಕ್ಷಗಾನ ಭಾಸ್ಕರ ಕೆ. ಪಿ. ವೆಂಕಪ್ಪ ಶೆಟ್ಟರು ಸಾಹಿತ್ಯ
ರಂಗದಲ್ಲಿ ಸೋಲನ್ನು ಒಪ್ಪಿಕೊಂಡುದು ಅವರ ಜೀವಮಾನದಲ್ಲಿ ಅದೊಂದೇ ದಿನ
ವೆಂದು ಅವರ ಕೊನೆಯ ತನಕದ ಅನುಯಾಯಿಯಾದ ನನ್ನ ಅನುಭವ.
{{gap}}ಮಹಾಬಲ ನೋಂಡರ ವಾಚನ, ಶಾಸ್ತ್ರಿಗಳ ಅರ್ಥ ವಿವರಣೆ, ದ್ರೌಪದಿಯ
ಕರುಣಾಕ್ರಂದನದ ಕಥಾಭಾಗವೆಂದ ಮೇಲೆ ಮತ್ತಿನ ವಿಷಯವನ್ನು ವಿವರಿಸುವ
ಸಾಮರ್ಥ್ಯ ಈ ಬಡ ಲೇಖನಿಗೆ ಇರುವದೆಂದರೆ ಧಾರ್ಷ್ಟ್ಯವೆಂದಾದೀತು.
{{gap}}ಮಹಾಬಲ ನೋಂಡರ ಮನಮೋಹಕ ಕಲಕಂಠದಿಂದ ಹೊರಡುವ ಕರುಣಾ
ಕ್ರಂದನಕ್ಕೆ ನೆರೆದ ಸಭಾಸಮೂಹವೇ ಅಳುವುದರೊಂದಿಗೆ-ಮನಮುಟ್ಟುವಂತೆ
ಕರುಣಾರಸವನ್ನು ವರ್ಣಿಸಿ ಉಣ್ಣಿಸಿದ ಶ್ರೀ ಶಾಸ್ತ್ರಿಗಳ ಅರ್ಥಕ್ಕೆ ಮತ್ತೂ ಅಳುವಿನ
ಜೋಡಣೆ. ಈ ಸಂದರ್ಭವು ಹೇಗಿರಬಹುದು ಎಂದು ವಿದ್ಯಾವಂತ ರಸಿಕ ಓದುಗ
ವೃಂದಕ್ಕೆ ಬಿಟ್ಟುಕೊಟ್ಟು ನಾನು ವಿರಮಿಸುವುದು ಮರ್ಯಾದೆ.
{{gap}}ಇದು ನಾನು ಹಿರಿಮಾರ ಹುಪ್ಪೆಯನ್ನು ಬಳ್ಳದಲ್ಲಿ ಅಳೆದುದು. ಕುದುರೆ
ಮುಖ ಪರ್ವತದ ಏರನ್ನು ಕನ್ನಡಿಯಲ್ಲಿ ಕಾಣಿಸಿದುದು. ಸಮುದ್ರದ ನೀರನ್ನು
ಬೊಗಸೆಯಿಂದ ಎತ್ತಿ ತೋರಿಸಿದುದು ಅಲ್ಲದೆ ದಿವಂಗತ ಶಾಸ್ತ್ರಿಗಳ ಕನ್ನಡ-ಸಂಸ್ಕೃತ
ಪಾಂಡಿತ್ಯದ ಹಿರಿಮೆ-ಗರಿಮೆಯ ಬೃಹದ್ರೂಪವನ್ನು ಕಂಡರಿಸಲು ಎಂದೆಂದೂ
ಸಮರ್ಥನಲ್ಲ. ಯಕ್ಷಗಾನ ವಾಚಸ್ಪತಿ ದಿ! ಶಾಸ್ತ್ರಿಗಳು, ಯಕ್ಷಗಾನ ಭಾಸ್ಕರ
ಕವಿಭೂಷಣ ದಿ| ಶೆಟ್ಟರು, ಯಕ್ಷಗಾನ ರತ್ನ ದಿ| ನೋಂಡರು ಯಕ್ಷಗಾನ,
ಪುರಾಣ ವಾಚನಪ್ರಿಯರ ಕಣ್ಣಿಂದ ದೂರವಾದರೂ ಅವರ ಅಭಿಮಾನಾಕಾಶದಲ್ಲಿ
ಚಿರಂತನವಾಗಿ ಬೆಳಗುವ ಅಮರ ಧ್ರುವತಾರೆಗಳು.<noinclude></noinclude>
npoh822b60k52lbxj7oi1a20sty8slw
ಪುಟ:ಯಕ್ಷಗಾನ ಮಕರಂದ.pdf/೧೬೭
104
100086
316832
295401
2026-05-04T10:20:47Z
Ashwini Rai K
8475
/* Validated */
316832
proofread-page
text/x-wiki
<noinclude><pagequality level="4" user="Ashwini Rai K" /></noinclude>{{Left|ಪ್ರವಚನಕಾರ ಶಾಸ್ತ್ರಿಗಳು}}
———————————————————————————
{{Right|ಕೆ. ವಿ. ಹರಿದಾಸ.}}
ದೇವರ ಅಸ್ತಿತ್ವ, ಧರ್ಮ, ಸತ್ಯ, ಅಹಿಂಸೆ, ಪರೋಪಕಾರ, ಸದಾಚಾರ
ಇತ್ಯಾದಿ ಜೀವನ ಮೌಲಿಕ ಉದಾತತ್ತ್ವಗಳ ಪರಿಚಯವನ್ನು ಜನಸಾಮಾನ್ಯರಿಗೂ
ತಿಳಿಯಪಡಿಸುವ ಕಾರ್ಯಕ್ರಮಗಳಲ್ಲಿ ನಾಟಕ, ಯಕ್ಷಗಾನ, ಉಪನ್ಯಾಸ, ಹರಿಕಥೆ,
ಪುರಾಣ ವಾಚನಗಳೆಂಬ ಹಲವು ವಿಧಗಳಿವೆ. ಇವುಗಳಲ್ಲಿ ಕೆಲವು ಜನಮನರಂಜಕ
ಗಳಾದರೆ, ಇನ್ನು ಕೆಲವು ಜ್ಞಾನಪ್ರಚೋದಕ ಹಾಗೂ ಬುದ್ಧಿ ಪ್ರಬೋಧಕಗಳು.
ಪುರಾಣ ಪ್ರವಚನವು ಎರಡನೆಯ ಸಾಲಿಗೆ ಸೇರುವ, ಧಾರ್ಮಿಕ ಹಿನ್ನೆಲೆಯುಳ್ಳ
ಕಾರ್ಯಕ್ರಮವಾಗಿದೆ. ಇದು ಅಧಿಕೃತ ಗ್ರಂಥವೊಂದರ ಕಥಾನಕದ ಆಧಾರವಿದ್ದು,
ವಿಷಯ ವಿಸ್ತಾರದಿಂದ, ನಿರೂಪಣಾ ಕ್ರಮದಿಂದ ಹೆಚ್ಚು ಪರಿಣಾಮಕಾರಿಯಾಗಿದೆ.
ರಾಮಾಯಣ, ಭಾರತ, ಭಾಗವತಾದಿ ಪುರಾಣಗ್ರಂಥಗಳನ್ನು, ಸಂಸ್ಕೃತ
ಭಾಷೆಯದಾದರೆ, ವಿದ್ವಾಂಸರೊಬ್ಬರು ಆಯ್ದ ಭಾಗದ ಶ್ಲೋಕಗಳನ್ನು ಓದಿ
ವಿವರಣೆ ನೀಡುವುದು ಕ್ರಮ; ಕನ್ನಡ ಕಾವ್ಯಗಳಾದರೆ, ಒಬ್ಬರು ಕಾವ್ಯಭಾಗವನ್ನು
ಓದಿ, ಇನ್ನೊಬ್ಬರು ಅರ್ಥ ವಿವರಿಸುವುದು ಪದ್ಧತಿ. ಈ ರೀತಿ ಅರ್ಥವಿವರಿಸ
ವವರನ್ನು ಅರ್ಥಧಾರಿಗಳು-ಪುರಾಣಿಕರು- ಪ್ರವಚನಕಾರರೆಂದು ಹೇಳುತ್ತಾರೆ.
ನಮ್ಮ ಊರಲ್ಲಿ ಹಿಂದೆ ತಲಪಾಡಿ ದೊಡ್ಡ ಮನೆ ನಾಂಇಪ್ಪ ರೈಗಳೆಂಬ
ಹಿರಿಯ ವಿದ್ವಾಂಸರೊಬ್ಬರು ತುಳುಭಾಷೆಯಲ್ಲಿ ಪುರಾಣದ ಅರ್ಥ ಹೇಳುವುದರಲ್ಲಿ
ಪ್ರಸಿದ್ಧಿ ಹೊಂದಿದ್ದರು. ಈ ಕ್ಷೇತ್ರವನ್ನು ಹುಲುಸಾಗಿ ಬೆಳೆಯಿಸಿ, ಹಸನುಗೊಳಿಸಿ
ದವರಲ್ಲಿ ಶ್ರೀಗಳಾದ ಯಕ್ಷಗಾನಾಚಾರ್ಯ ಅರ್ಕುಳ ಸುಬ್ರಾಯಾಚಾರ್ಯರು,
ದೇಶಬಂಧು ನಾರಾಯಣ ಕಿಲ್ಲೆ, ಕವಿಭೂಷಣ ಕೆ. ಪಿ. ವೆಂಕಪ್ಪ ಶೆಟ್ಟರು, ಯಕ್ಷಗಾನ
ವಾಚಸ್ಪತಿ ದಿ| ಪೊಳಲಿ ಶಂಕರನಾರಾಯಣ ಶಾಸ್ತ್ರಿ, ಮೊದಲಾದ ವಿದ್ವಾಂಸರು
ಒಂದು ತಲೆಮಾರಿನವರು; ಹೆಚ್ಚು ಕಡಿಮೆ ಸಮಕಾಲೀನರು,
ಕೆಲೆಂಚಾರಿನ ಶಂಕರನಾರಾಯಣ ಕಾರಂತರು ಮೈಸೂರು, ಚಿದಂಬರ ಮೊದ
ಲಾದೆಡೆಗಳಲ್ಲಿ ಅಭ್ಯಾಸ ಮಾಡಿದ ಸಂಸ್ಕೃತ ವಿದ್ವತ್ತಿನಿಂದ “ಶಾಸ್ತ್ರಿ” ಎಂಬ ಬಿರು
ದನ್ನು ಪಡೆದು ಊರಿಗೆ ಬಂದು, ತನ್ನ ವಿದ್ಯಾಸೇವೆಯನ್ನು ಪ್ರಾರಂಭಿಸಲು ಪೊಳ<noinclude></noinclude>
o2eejd4qnsp8nixfcf7qwlr2x3ffutl
ಪುಟ:ಯಕ್ಷಗಾನ ಮಕರಂದ.pdf/೧೬೯
104
100088
316833
295429
2026-05-04T10:21:20Z
Ashwini Rai K
8475
/* Validated */
316833
proofread-page
text/x-wiki
<noinclude><pagequality level="4" user="Ashwini Rai K" /></noinclude>{{Right|143}}
ಶ್ರೀ ಶಾಸ್ತ್ರಿಗಳು ಮಂಗಳೂರಿನ ಸೈಂಟ್ ಎಲ್ಲೋಸಿಯಸ್ ಕಾಲೇಜ್ ಹೈಸ್ಕೂ
ಲಿನಲ್ಲಿ ಕನ್ನಡ ಪಂಡಿತರಾಗಿ ಸೇರಿದಾಗ ವಾಸ್ತವ್ಯವೂ ಮಂಗಳೂರಲ್ಲಾಗಿ ಕೊನೆಗೆ
ಎಯಾಡಿಯಲ್ಲಿ ಸ್ವಂತ ಮನೆ ಮಾಡಿಕೊಂಡರು. ಆಗಲೇ ಎಯ್ಯಾಡಿಯ ಶ್ರೀ
ಜಯರಾಮ ಭಜನಾ ಮಂದಿರದಲ್ಲಿ ತೊರವೆ ರಾಮಾಯಣದ ವಾಚನವು ಶಾಸ್ತ್ರಿಗಳಿಂದ ನಡೆಯಿತು. ಓದುವಿಕೆಗೆ ಸ್ಥಳೀಯರಾದ ಶ್ರೀ ಬಿ. ನಾರಾಯಣ ಅಡಪರು ಜೊತೆಗಿದ್ದರು. ಕೆಲವೊಮ್ಮೆ ನಾನೂ ಓದಿಗೆ ಸಹಕರಿಸಿದ ಸಂದರ್ಭಗಳಿದ್ದು ವು. ಸುಮಾರು 82 ವಾರಗಳ ವಾಚನ ಜರಗಿತು.
ಮುಂದೆ ಅದೇ ಎಯ್ಯಾಡಿಯ ರಾಮನಗರದ (ರಾಮಾಯಣ ವಾಚನದಿಂದ
ಸ್ಫೂರ್ತಿ ಪಡೆದ ಹೆಸರು) ಶ್ರೀ ಜಯರಾಮ ಭಜನಾ ಮಂದಿರದಲ್ಲಿ ವಾಚನ ಸಮಿತಿಯ
ನೇತೃತ್ವದಲ್ಲಿ ತಾರೀಕು 29-12-57ರಿಂದ 28-2-60ರ ವರೆಗೆ ಪ್ರತಿ ಆದಿತ್ಯ
ವಾರ ನನ್ನ ಓದುವಿಕೆ, ಶಾಸ್ತ್ರಿಗಳ ಅರ್ಥ ವಿವರಣೆಯಿಂದ “ಶ್ರೀರಾಮಾಭ್ಯುದಯ
ಕಥಾ ಕುಸುಮ ಮಂಜರಿ” (ರಾಮಾಯಣ ಉತ್ತರ ಕಾಂಡವೂ ಸೇರಿರುವ ಕಾವ್ಯ)ಯ
ಪುರಾಣ ವಾಚನವು (112 ವಾರ) ನಡೆಯಿತು. ಈ ವಾಚನಕ್ಕೆ ಶಾಸ್ತ್ರಿಗಳು,
ಅಲ್ಲಿಯ ಜನರ ಅಪೇಕ್ಷೆ ಮೇರೆಗೆ ತುಳುವಿನಲ್ಲಿ ವಿವರಣೆ ನೀಡಿದರು. (ಮುಂದೆ
ಎಯ್ಯಾಡಿಯಲ್ಲಿ ತುಳುವಿನಲ್ಲಿ ಪ್ರವಚನ ಮಾಡುವುದೇ ರೂಢಿಯಾಯಿತು.) ಇದರ
ಮಂಗಲೋತ್ಸವವು ಬಹುವಿಜೃಂಭಣೆಯಿಂದ ನಡೆದಾಗ ಶ್ರೀರಾಮಮಹಿಮೆಗೆ
ಪ್ರವಚನಕಾರರಿಗೆ ಓದುವವರಿಗೆ ಸಂದ ಗೌರವ, ಪುರಸ್ಕಾರಗಳ ಅಪೂರ್ವ
ಸನ್ನಿವೇಶವು ಇಂದಿಗೂ ನನ್ನ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದಿದೆ.
ಆ ಬಳಿಕ ಅಲ್ಲಿಯೇ ಹರಿಶ್ಚಂದ್ರಕಾವ್ಯದ ವಾಚನವು ಏಳು ವಾರ ನಡೆದು
ಮಂಗಲೋತ್ಸವವು ಜರಗಿತು. ತರುವಾಯ ಭಾಗವತ ವಾಚನವು ಸುಮಾರು 5
ವರ್ಷ (15-5-60ರಿಂದ 11-4-65ರ ವರೆಗೆ ಜರಗಿ, ಅದರ ಮಂಗಲೋತ್ಸವ
ಸಮಾರಂಭವು ಬಹಳ ಅದ್ದೂರಿಯಿಂದ, ಮಂದಿರದ ಮುಂಭಾಗದಲ್ಲಿ ರಚಿಸಿದ ಭವ್ಯ
ಸಭಾಮಂಟಪದಲ್ಲಿ ನಡೆಯಿತು. ಅನಂತರದ ವಿಷಯ ಶ್ರೀ ದೇವೀ ಮಹಾತ್ಮ
(ಶಾಸ್ತ್ರಿಗಳೇ ರಚಿಸಿರುವ ಭಾಮಿನೀ ಷಟ್ಟದಿ ಛಂದಸ್ಸಿನ ಕಾವ್ಯ-ಕೈ ಬರಹದಲ್ಲಿದೆ
13 ವಾರ (18-4-65ರಿಂದ 11-7-755ರ ವರೆಗೆ) ನಡೆಯಿತು. ಮುಂದೆ
ಗದುಗು ಭಾರತದ ವಾಚನವು (18-7-65ರಿಂದ 7-12-69ರ ವರೆಗೆ)
ಸುಮಾರು ನಾಲ್ಕುವರೆ ವರ್ಷಗಳ ಕಾಲ ನಡೆದು, ಮಂಗಲೋತ್ಸವವು, ಮಂಗಲ
ಮಯ ವಾತಾವರಣದೊಂದಿಗೆ ಜರಗಿದಾಗ ಸಮಿತಿಯವರು, ಪುರಾಣಾಭಿಮಾನಿಗಳು
ತೋರಿಸಿದ ಗೌರವಾದರಗಳ ಸವಿನೆನಪು ಎಂದಿಗೂ ಮರೆಯತಕ್ಕುದಲ್ಲ.ಆ ಮೇಲೆ
ದಿನಾಂಕ 14-12-769ರಿಂದ ಅಷ್ಟಪರ್ವ ಭಾರತದ ಪ್ರವಚನವು ಆರಂಭವಾಯಿತು.
ಅಶ್ವಮೇಧ ಪರ್ವಕ್ಕೆ ಲಕ್ಷ್ಮೀಶನ ಜೈಮಿನಿ ಭಾರತವನ್ನು ಉಪಯೋಗಿಸಿಕೊಳ್ಳ<noinclude></noinclude>
g33iopx3azo2l7u1qsmzxoddcbt3r6i
ಪುಟ:ಯಕ್ಷಗಾನ ಮಕರಂದ.pdf/೧೭೧
104
100090
316834
295454
2026-05-04T10:21:46Z
Ashwini Rai K
8475
/* Validated */
316834
proofread-page
text/x-wiki
<noinclude><pagequality level="4" user="Ashwini Rai K" /></noinclude>{{Right|145}}
ಲಾದ ಶಾಸ್ತ್ರ ಗ್ರಂಥಗಳ ಆಧಾರಗಳನ್ನು ಆರಿಸಿಕೊಂಡ ಕನ್ನಡ ಭಾಗದ ಸಂಸ್ಕೃತ
ಮೂಲ ವಿಷಯಗಳನ್ನು, ಹಿತಮಿತವಾಗಿ ಬಳಸಿಕೊಂಡು, ಪಾಕಶುದ್ಧವಾಗಿ ಬಡಿಸು
ವುದು ಅವರಲ್ಲಿದ್ದ ಒಂದು ವೈಶಿಷ್ಟ್ಯ. ಅವಶ್ಯವೆಂಬಲ್ಲಿ ಉಪಕಥೆ, ಲೌಕಿಕ ಉದಾ
ಹರಣೆಗಳಿಂದ ವಿಷಯವನ್ನು ಪುಷ್ಟಿಗೊಳಿಸುತ್ತಿದ್ದರು. ಯಾವ ರೀತಿಯನ್ನು ಅನು
ಸರಿಸಿದರೂ, ಪುರಾಣ ಮರ್ಯಾದೆ, ಪಾತ್ರಗೌರವ ಕಾಪಾಡಿಕೊಳ್ಳುವುದು ಅವರ
ವಿದ್ವತ್ತಿಗೊಂದು ನಿದರ್ಶನ !
ಭಾರತ-ಭಾಗವತ ಮೊದಲಾದ ಕನ್ನಡ ಕಾವ್ಯಗಳಲ್ಲಿ ಮೂಲದ ವಿಷಯ
ಇಲ್ಲವೆ ಭಾವ ತಪ್ಪಾಗಿ ವಿವರಿಸಲ್ಪಟ್ಟಿದ್ದರೆ, ಅದನ್ನು ತನ್ನ ಅನುಭವದಿಂದ ಸರಿಪಡಿಸಿ
ವಿವರಿಸುತ್ತಿದ್ದರು. ಉದಾ:- ಭಾರತದಲ್ಲಿ ಸನಸ್ಸು ಜಾತ ನೀತಿಯ ಕೆಲವು ಪದ್ಯ
ಗಳಿಗೆ ಸಂಸ್ಕೃತ ಮೂಲದ ಅಭಿಪ್ರಾಯಗಳನ್ನು ಕೂಡಿಸಿ ಹೇಳಿ, ವಿಷಯವನ್ನು
ಸಮರ್ಥಿಸುತ್ತಿದ್ದರು. ಭಾಗವತದ ಕೆಲವು ಕಥೆಗಳಲ್ಲಿ ಬರುವ ತತ್ತ್ವ ವಿವೇಚನೆಯ
ಸಂದರ್ಭಗಳಲ್ಲಿ ಮೂಲದ ಅಭಿಪ್ರಾಯಗಳನ್ನು ಸೇರಿಸಿ, ಸ್ಪಷ್ಟ ಪಡಿಸುತ್ತಿದ್ದರು.
ಆರಿಸಿಕೊಂಡ ಪುರಾಣ ಭಾಗದಲ್ಲಿ ಪದ್ಯಗಳನ್ನು ತಿದ್ದಿಕೊಂಡು, ಅದಕ್ಕೆ ಸರಿ
ಹೊಂದುವಂತೆ ವಿವರಣೆ ನೀಡುತ್ತಿದ್ದರು. ಉದಾ:- ತೊರವೆಯ ಮಂಡೋದರಿ
ನೀತಿಯಲ್ಲಿ 1) ಅಸುರೇಂದ್ರ ನೀಡಿದನು ನಿಜತನುವ ಮಲಗಿನ ಮೋಡೆಯಲ್ಲಿ (ತಿದ್ದಿ
ದಂತೆ ಮಲಗಿನ ಮೂಡೆಯಲಿ) 2) ಬತ್ತಿದೆಂಣೆಗೆ ಕೂಡೆ ಕಡೆಯಾ | ಯಿತ್ತರದ
ಬಲುದಿಳೆಗೆ ಘನಛೇ | ಸತ್ತುದಿಲ್ಲಾ ಹವಕೆ ಮನ ಮರುಗುವುದು ಮಗಗೆಂದ ೩ ತಿದ್ದಿ
ದಂತೆಬತ್ತಿಗಂಣೆಗೆ ಕೂಡೆ ಕಡೆಯಾ | ಯಿತ್ತದರ ಬಲುಬೇಗೆ ಘನ ಬೇ | ಸತ್ತು
ದಿಲ್ಲಾ ಹವಕೆ, ಮನಮರುಗುವುದು ಮಗನೆಂದ || - ಕೆಳಗಿನ ಪದ್ಯವೊಂದನ್ನು ಗಮ
ನಿಸಿರಿ: 3) ತಾಯ ಮಾತಿನ ರೀತಿ ಕರ್ಣಕೆ | ಸಾಯಕದ ಮೊನೆಯಾಯ್ತು, ನಿನ್ನಯ |
ತಾಯ ತಂದೆಯ ವಚನ, ಚರಿತದ ಬೋಧೆ ಭೂಸುರರ || ವಾಯುವಿನ ತೆರನಾಯ್ತು,
ತಂಗಿಯ | ಮಾಯಗಾತಿಯ ಮಾತು ಕರ್ಣರ | ಸಾಯನವು ನಿನಗಾಯ್ತು, ಸಾಕಿಂ
ನೇಕೆ ಪರಿತಾಪ ! ಮೇಲಿನಂತೆ ಪದಚ್ಛೇದ ಮಾಡಿ ವಿಷಯಕ್ಕೆ ಗೌರವವನ್ನು ತುಂಬಿ
ಸುತ್ತಿದ್ದರು. ಈ ರೀತಿ ಯುಕ್ತ ಕಂಡಲ್ಲಿ ಪುರಾಣ ಭಾಗವನ್ನು ತಿದ್ದಿಕೊಳ್ಳುತ್ತಿದ್ದರು.
ಕೆಲವು ಕಥೆಗಳಿಗೆ, ಸನ್ನಿವೇಶದ ಚೆಲುವು ಮತ್ತು ಪೂರ್ಣತೆಗಾಗಿ ಅವರೇ ಪದ್ಯ
ಗಳನ್ನು ರಚಿಸಿಕೊಟ್ಟು, ಅದರ ಓದುವಿಕೆಗೆ ಅರ್ಥ ವಿವರಣೆ ಮಾಡುತ್ತಿದ್ದರು.
ಉದಾ:- ತೊರವೆಯಲ್ಲಿ ವಿಭೀಷಣನ ಶರಣಾಗತಿಯ ಸಂದರ್ಭ ಶ್ರೀರಾಮನು
ವಿಭೀಷಣನನ್ನು ಪತಿಕರಿಸುವಲ್ಲಿ ತನ್ನ ವರ ಅಭಿಪ್ರಾಯಗಳನ್ನು ತಿಳಿದುಕೊಳ್ಳುವ
ಸನ್ನಿವೇಶಕ್ಕೊಪ್ಪುವಂತೆ ಶಾಸ್ತ್ರಿಗಳು ಈ ಕೆಳಗಣ ಪದ್ಯಗಳನ್ನು ರಚನೆ ಮಾಡಿರುವರು
ಉಸುರಿದನು ತಾರೇಯ ರಿಪುವಿನ 1 ಪಕ್ಷದಿಂ ಬಂದವನು ಶಂಕ್ಯನು | ಮರಸುತ್ತಾ
ತವ ಶಾಕ್ಯದಲ್ಲಿ ರಂಧ್ರದಲ್ಲಿ ಪ್ರಹರಿಪನು || ಅರಿದು ಗುಣದೋಷಗಳ ನೆರೆಪತಿ |<noinclude></noinclude>
i2emkqmx1e38rs4keuxuet713s2mdov
ಪುಟ:ಯಕ್ಷಗಾನ ಮಕರಂದ.pdf/೧೭೨
104
100091
316835
295468
2026-05-04T10:22:05Z
Ashwini Rai K
8475
/* Validated */
316835
proofread-page
text/x-wiki
<noinclude><pagequality level="4" user="Ashwini Rai K" /></noinclude>{{Left|146}}
ಕರಿಸುವುದು ಹಿತಮನಲು ಶರಭನು | ಚರನ ಮುಖದಿಂ ಪರಿಕಿಸುತ ಪತಿಕರಿಸ
ಬೇಕೆಂದ || ೧ | ಉಸುರಿದನು ಜಾಂಬವನು ಪಾಪಿಯ ಬದ್ಧ ವೈರಿಯ ರಾಕ್ಷಸೇಂದ್ರನ |
ಬಳಿಯಿನೈತಂದವನು ಶಂಕ್ಯನದೇಶಕಾಲದಲಿ || ಮೈಂದನೆಂದನು ಮಧುರ ವಚನದಿ |
ಖಳನನುಜನನು ನುಡಿಸಿ ಭಾವವ | ನರಿದುದುಷ್ಟಾದುಷ್ಟನೆಂಬುದ ವರಿಸು ಹಿತ
ನಹಡೆ ॥ ೨ ॥ ವಾಯುಸುತನಿಂತೆಂದ ಸಚಿವರ | ಮಾತು ಸನುಮತವಲ್ಲ ಮನದಿರ |
ವರಿಯಲಸದಳ ಮಾತಿನಿಂ ಚರರಿಂದಲೂಹೆಯಲಿ | ವಂಚಕನು ಮನಬಿಚ್ಚುವನೆಮಿಗೆ |ದೇಶ ಕಾಲ ವಿರೋಧವಲ್ಲಿದು | ವಿಕ್ರಮವ ನಿನ್ನಲ್ಲಿ ಕಂಡಗ್ರಜನ ದೌವನು || ೩ |
ಶಾಸ್ತ್ರಿಗಳಿಗೆ ಕಥನಕಲೆಯು ಸಂಪೂರ್ಣ ಸಿದ್ದಿಸಿತ್ತು. ಆಯಾ ಭಾಗದ ಸಂಧಿ
ಸೂಚನೆಯನ್ನು ಉಪಯೋಗಿಸಿಕೊಂಡು, ಕಥೆಯ ಚೌಕಟ್ಟನ್ನು ರಚಿಸುತ್ತಿದ್ದರು.
ಮುಂದಿನ ಪದ್ಯಗಳ ವಿವರಣೆಯಿಂದ ಅಂದಿನ ಮುಖ್ಯ ಕಥೆಯ ನಿರ್ಮಾಣವಾಗು
ತಿತ್ತು. ಅದರಲ್ಲಿ ವಿಷಯವನ್ನು ಹೊಂದಿಕೊಂಡು ಧರ್ಮ-ಸಂಸ್ಕೃತಿ - ಆಧ್ಯಾತ್ಮಿಕ
ಮೌಲ್ಯಗಳ ಸುಂದರ ದರ್ಶನವಾಗುತ್ತಿತ್ತು. ಉಪಸಂಹಾರದಲ್ಲಿ ಕಥೆಯ ಮುಖ್ಯ
ತತ್ವವನ್ನು ಉದ್ಯೋಧಕವಾಗಿ ತಿಳಿಸುವ ಜಾಣೆ. ಅವರಲ್ಲಿತ್ತು. ಅವರ ಒಂದು
ಪ್ರವಚನವನ್ನು ಮೊದಲಿಂದ ಕೊನೆಯ ವರೆಗೆ ಕೇಳಿ ಅದರಂತೆ ಬರೆದುಕೊಂಡರೆ
ಆದೊಂದು ಸುಂದರ ಕಥಾನಕವಾಗುವಂತೆ ಇರುತ್ತಿತ್ತು. (ಎಯ್ಯಾಡಿಯ ರಾಮಾ
ಯಣ ಪ್ರವಚನದ ವಿಷಯವನ್ನು ಕಥೆಯ ರೂಪದಲ್ಲಿ ಸಂಗ್ರಹಿಸಿ ಪತ್ರಿಕೆಗೂ ಕೊಡು
ತಿದ್ದರು.) ಅವರ ಕಥಾನಿರೂಪಣಾ ಕ್ರಮವು ಅದ್ಭುತ ಸುಂದರ.
ಶಾಸ್ತ್ರಿಗಳು ರಸಜ್ಞರು. ಅವರಿಗೆ ನವರಸಗಳಲ್ಲಿ ಹಿಡಿತವಿತ್ತು. ಸ್ವತಃ ಅನು
ಭವಿಸಿ, ಕೇಳುವವರ ಮೇಲೆ ಪರಿಣಾಮ ಬೀರಿ, ಕೃತಕೃತ್ಯರಾಗುತ್ತಿದ್ದರು. ಯಾವ
ರಸವೇ ಆಗಲಿ, ಒಂದಕ್ಕಿಂತ ಇನ್ನೊಂದು ಉತ್ತಮವೆಂಬಂತೆ ಭಾಸವಾಗುತ್ತಿತ್ತು.
ವೀರರಸ ಪ್ರತಿಬಿಂಬನೆಯ ರೀತಿಯೊಂದಾದರೆ, ರೌದ್ರರಸದ ಮೋಡಿಯೇ ಬೇರೆ.
ಬೀಭತ್ಸರಸದ ವಿವರಣೆ ಜನಮನದಲ್ಲಿ ನಾಟುವಂತಿತ್ತು. ಹೀಗಿದ್ದರೂ ಆ ಪೈಕಿ
ಶೃಂಗಾರ, ಹಾಸ್ಯ, ಕರುಣರಸಗಳ ಆವಿಷ್ಕಾರ ತುಂಬಾ ಪರಿಣಾಮಕಾರಿಯೆನ್ನಬೇಕು.
{{center|'''ಉದಾಹರಣೆ : ಶೃಂಗಾರ'''}}
'''1. ಮಾದ್ರಿಯ ಶೃಂಗಾರಚೇಷ್ಟೆ''' : ವಸಂತೋದಯ. ಆಗ – ಯೋಗಿ
ಗೆತ್ತಿದ ಖಡುಗಧಾರೆ - ವಿಯೋಗಿಗೆತ್ತಿದ ಸಬಳ - ಅಖಿಳ ವಿರಾಗಿಗಳ ಹೆಡತಲೆಯ
ದಡಿ ನೈಷ್ಠಿಕರಿಗಲಗಣಸು-ಆಗಮಿಕರೆದೆ ಶೂಲ-ಗರ್ವಿತ ಗೂಗೆಗಳ ನಖಸಾಳ
ಅಗ್ಗದ ದ ಭೋಗಿಗಳ ಕುಲದೈವವೆಸೆದುದು ಕುಸುಮಮಯ ಸಮಯ. ಆ ಸಮಯ
ವನ್ನು ಅನುಕೂಲ ಮಾಡಿಕೊಂಡು, ಮೊರೆವ ತುಂಬಿಯ ಗಾಯಕರ, ನಯಸರದ
ಕೋಕಿಲ ಪಾಠಕರ, ಬಂಧುರದ ಗಿಳಿಗಳ ಪಂಡಿತರ, ಮಾಮರದ ಕರಿಘಟೆಯ, ಅರಳಿ<noinclude></noinclude>
qxbnb0cj5ge4buqr42t7gfvdc5w7hlf
ಪುಟ:ಯಕ್ಷಗಾನ ಮಕರಂದ.pdf/೧೭೩
104
100092
316836
295499
2026-05-04T10:22:20Z
Ashwini Rai K
8475
/* Validated */
316836
proofread-page
text/x-wiki
<noinclude><pagequality level="4" user="Ashwini Rai K" /></noinclude>{{Right|147}}
ದಂಬುಜ ಸತ್ತಿಗೆಯ, ಮಂಜರಿಯ ಕುಸುಮದ ಚಾಮರದ ಚಾತುರ ವಸಂತ ನೃಪಾಲ
ನಡೆದನು ಪಾಂಡುವಿನ ಮೇಲೆ. ಆಗ ವಸಂತ ಮಾರುತವು ವನವನ್ನೆಲ್ಲ ವ್ಯಾಪಿಸಿತು.
ತಪಸ್ವಿಗಳಾದ ಮುನಿಜನರು ಕೂಡಾ ಕಾಮಬಾಧೆಗೆ ಬಲಿಯಾದರು. ಆ ಮಧುಮಾಸ
ಪ್ರಚೋದನೆಯಿಂದ ಮಾಡ್ತೀದೇವಿಯು ತಳಿರು ಕುಸುಮಗಳಿಂದ ಅಲಂಕೃತಳಾಗಿ,
ಶೃಂಗಾರ ವಿಲಾಸದಿಂದ ನವಯುವತಿಯಂತೆ ಪಾಂಡುವಿನ ಮುಂದೆ ಸುಳಿದಾಗ
“ಆವಳಿವಳರ್ವಶಿಯೋ, ರಂಭೆಯೋ, ದೇವವಧುಗಳ ಸುಳಿವೋ, ಆವ ಚಲುವಿಕೆ
ಶಿವಶಿವಾ” ಎಂದು ಮೋಹಗೊಳ್ಳುವ ಈ ಸಂದರ್ಭ ಚಿತ್ರಣ ಉತ್ತಮ ಉದಾಹರಣೆ.
'''2. ಊರ್ವಶಿಯ ಶಾಪ''': ಈ ಕಥೆಯಲ್ಲಿ ಊರ್ವಶಿಯ ಅಲಂಕಾರ ವರ್ಣನೆ
ವನಜಲೋಚನೆ ಮಾಡಿದಳು ಮಜ್ಜನವ, ಅಮಳದುಕೂಲ ಪರಿಮಂಡನದಲೆಸೆದಳು
ವಿವಿಧ ರತ್ನಾಭರಣ ಶೋಭೆಯಲಿ, ವಿವಿಧ ಅನುಲೇಪನ, ಕುಸುಮದ ಮೊಗ್ಗೆಯಲಿ
ರಚಿಸಿದರು ಸಿರಿಮುಡಿಯ, - ತಿಗುರಗೆಲಿದಳು, ತಿಲಕವನು ತೆತ್ತಿಗರಲಂಕರಿಸಿದರು.
ಹೀಗೆ ಅಲಂಕೃತಳಾಗಿ ಸಖಿಯರ ಸಂದಣಿಯಿಂದ ಅರ್ಜುನನ ಶಯ್ಯಾಗೃಹಕ್ಕೆ ಬಂದಳು.ಆಕೆಯು ಪರಿಮಳದ ಪುತ್ಥಳಿಯೊ, ಚೆಲುವಿನ ಕರುವಿನೆರಕವೊ, ವಿಟರ ಪುಣ್ಯದ ಪರಿಣತೆಯೊ, ಕಾಮುಕರ ಭಾಗ್ಯದ ಕಲ್ಪತರುಫಲವೊ, ಸ್ಮರನ ವಿಜಯ ಧ್ವಜವೋ,ಮನ್ಮಥ ಪರಮಶಾಸ್ತ್ರದ ಮೂಲ ಸೂತ್ರವೊ, ಲೋಕವಶ್ಯದ ತಿಲಕವೊ, ಜಗದೇಕ ರತ್ನವೊ, ವಿಗಡಮುನಿ ಚಿತ್ತಾಕರುಷಣದ ಮಂತ್ರವಾದವೊ,ಋಷಿತಪಃಫಲವೊ,ಲೋಕ ಸೌಂದರ್ಯ್ಯಕ ಸರ್ಗವೊ, ನಾಕಸುಖ ಸಾಕಾರವೊ, ರೂಪೈಕತಾಣವೊ ಎಂಬಂತಿದ್ದಳು.ಮನಸಿಜನ ಮಾರಾಂಕ, ಕಾಮುಕಜನದ ಜೀವಾರ್ಥಕ್ಕೆ ವಿಭುವೆಂದೆನಿಸಿ ಪೂರ್ವಶಿ ಬಂದಳರ್ಜುನದೇವನರಮನೆಗೆ ಎಂಬ ಕುಮಾರವ್ಯಾಸನ ರಸಬುಗ್ಗೆ -ಶಾಸ್ತ್ರಿಗಳ ವಿವರಣೆಯಲ್ಲಿ ಒಸರುವ ಸೊಬಗೇ ಸೊಬಗು !
'''3. ಕೀಚಕನು ಸೈರಂಧಿಗೆ ಅಳುಪಿದುದು''' : ಕೀಚಕನು ಅಕ್ಕನ ಸಭೆ
ಯಲ್ಲಿ ಅಮಲತಾರಾನಿವಹದಲಿ ರೋಹಿಣಿಯವೋಲ್, ಸುರಯುವತಿಯರಲೂರ್ವ
ಶಿಯವೊಲ್, ನದಿಗಳೊಳು ಜಾಹ್ನವಿಯ, ಅವಯವದ ಪರಿಮಳದ ಪಸರಕೆ ಕವಿವ
ತುಂಬಿಯ ಸಾರಸಂಗೀತವನು ಕೇಳುತ ಪಾಂಚಾಲನಂದನೆಯ ಕಂಡನು. ಆಗ ಅವ
ನಲ್ಲುಂಟಾದ ಸ್ಮರವಿಕಾರ- ಹೃದಯತಾಪ-ಬೆರಗು ಇತ್ಯಾದಿ ಭಾವಸಮ್ಮಿಲನದಿಂದ,
“ಇವಳು ಮೂಜಗವ ಮೋಹಿಪ ತಿಲಕವೋ, ಕಾಮಂಗೆ ಕಟ್ಟಿದ ಕಳನ ಭಾಷೆಗೆ
ನಿಂದ ಮಾಸಾ ಮಹಾದೇವ,” - “ಕೊಲೆಗಡಿಗ ಕಂದರ್ಪಕನ ಕರಲಗೆ, ಮದ
ನನ ಸೊಕ್ಕಿದಾನೆ, ನಳಿನವರುಖಿ ಇವಳಾರ ಸತಿಯೆಂದಳುಪಿ ನೋಡಿದನು-
ಮುಗುದನಾದನು ಕಾಮನಂಬುಗಳುಗಿದವೆದೆಯಲಿ ನಟ್ಟ ದೃಷ್ಟಿಯ ತೆಗೆಯ
ಲಾರದೆ ಸೋತು ಕೀಚಕ ಪಾತಕವ ನೆನೆದ. “ರತಿಯ ಚೆಲುವಂತಿರಲಿ, ಸಿರಿಪಾರ್ವತಿಯ
ರಪಂತಿರಲಿ, ಬೊಮ್ಮನ ಸತಿಯ ಸೊಬಗಂತಿರಲಿ, ಈ ಬಾಲಕಿಯ ರೂಪಿಂಗೆ<noinclude></noinclude>
2q84al0aw97yfdv995wz6tab3zblca7
ಪುಟ:ಯಕ್ಷಗಾನ ಮಕರಂದ.pdf/೧೭೪
104
100093
316837
298148
2026-05-04T10:22:39Z
Ashwini Rai K
8475
/* Validated */
316837
proofread-page
text/x-wiki
<noinclude><pagequality level="4" user="Ashwini Rai K" /></noinclude>{{Left|148}}
ಪ್ರತಿಯ ಕಾಣೆನು” ಎಂದು ಉದ್ಧರಿಸಿ ಅಕ್ಕನೊಡನೆ ಆಕೆಯನ್ನು ವಿಚಾರಿಸಿಕೊಳ್ಳು
ವನು. ಮರುದಿನ ದೌಪದಿಯನ್ನು ಅರಮನೆ ಬಾಗಿಲಲ್ಲಿ ಕಂಡು, “ಎಲಗೆ ಸೈರಂಧ್ರಿ
ಕಾಮನ ಬಲ್ಲೆಹದ ಬಲುಗಾಯ ತಾಗಿತು, ಬಲ್ಲೆ ನೀನೌಷಧಿಯ, ರಕ್ಷಿಸಿಕೊಂಬುದೆ
ನೊಡಲ'-ಇತ್ಯಾದಿ ಶೃಂಗಾರರಸ ಪರಿಷ್ಕೃತ ಪದಪುಂಜಗಳನ್ನು ಒಡೆದು ಅದರಿಂದ
ಶಾಸ್ತ್ರಿಗಳು ಹರಿಯಿಸುತ್ತಿದ್ದ ರಸಪ್ರವಾಹವು ಅವರ್ಣನೀಯವೇ ಸರಿ.
{{center|ಹಾಸ್ಯ}}
'''1. ದೌಪದಿ ಸ್ವಯಂವರ''' : ಧರ್ಮಜನ ಆಜ್ಞೆಯಂತೆ ವಿಪ್ರವೇಷದ
ಅರ್ಜುನನು, ಧೋತ್ರದರ್ಭಯ ಗೂಡ ಸಂವರಿಸುತ್ತ ಸಭೆಯಲ್ಲಿ ಎದ್ದು ನಿಂತನು.
ಆಗ “ಏನಂ ಸಿದ್ಧಿ ಯುಪಾಧ್ಯರೆದ್ದಿರಿದೇನು ಧನುವಿಂಗಲ್ಲಲೇ, ತಾನೇನು ಮನ
ದಂಘವಣೆ ಬಯಸಿದಿರೇ ನಿತಂಬಿನಿಯ, ವೈನತೇಯನ ವಿಗಡಿಸಿದ ವಿಷವೇನು ಸದರವೊ ಹಾವಡಿಗರಿಗಿದೇನು ನಿಮ್ಮತ್ಸಾಹ” ಎಂದು ಧೂರ್ತವಟುನಿಕರವೂ,-“ಧನು ತನಗೆನೆಗಹಲ್ಕೆ ಕೃಷ್ಣಾಜಿನವೊ, ಸಾಲಗ್ರಾಮದೇವರೆ, ವಿನುತ ತುಳಸಿಯೊ, ಕುಶವೊ,
ದರ್ಭೆಯ, ಸಮಿಧೆಗಳ ಹೊರೆಯೋ, ನೆನೆದ ತಿಲವೋ, ಮೇಣಿದೌಪಾಸನದ ಕೊಳ
ವಿಯೋ, ಬಣಗು ವಿಪ್ರನ ನೆನಹ ನೋಡಿರೆ, ಘನವಲಾ ದೌಪದಿಯ ಸೌಭಾಗ್ಯ” ಎಂದು
ಕ್ಷತ್ರಿಯರ -ಇತ್ತ ನೋಡ್ ತಾಯೆ ಹಾರುವರ ಗಡ್ಡದುಪಾಧ್ಯರನು, ತಾವೆತ್ತು
ವರು ಗಡ ಧನುವನೆಸುವರು ಗಡ ತಿಮಿಂಗಿಲವ, ಹೊತ್ತುಗಳೆವರೆ ಲೇಸು, ಬಳಿಕಿನ್ನುತ್ತ
ಮರಲಾ-ವಿಪ್ರರು”, ಎಂದು ಸಖಿಯರೂ, ದೌಪದಿಯನ್ನು ಛೇಡಿಸಿ, “ಎಲವೊ
ಮಟ್ಟಿಯ ಮದನ, ದರ್ಭೆಯ ತಿಲದ ಮನ್ಮಥ, ವಿಮಲಧೋತ್ರದ ತಳಿರುಗಾಸೆಯ
ಕಾಮ, ಕೃಷ್ಣಾಜಿನದ ಕಂದರ್ಪ-ನಳಿನಮುಖಿಯನು ವರಿಸು ಬಾ” ಎಂದು ಅರ್ಜು
ನನನ್ನು ಹಾಸ್ಯ ಮಾಡುತ್ತಾ ಹಾರಿಸುವ ಚಟಾಕಿಗಳನ್ನು ಶಾಸ್ತ್ರಿಗಳು ತನ್ನ ರಸಕಾರಂಜಿ
ಯಲ್ಲಿ ಪುಟಿಯಿಸುವ ಮೋಜೇ ಒಂದು ರಸದೌತಣ!
'''2. ಉತ್ತರನ ಪೌರುಷ''': ಉತ್ತರಕುಮಾರನು ತನಗೆ ಸಾರಥಿಯಾಗಿ
ಬಂದ ಬೃಹನ್ನಳೆಗೆ (ನರನಿಗೆ) ಕವಚವನ್ನು ಕೊಟ್ಟನು. ನರನು ತಲೆಕೆಳಗಾಗಿ ಕವಚವ
ಸರಿವುತಿರೆ ಸೊಳ್ಳೆಂದು ಕೈಹೊಯ್ದರಸಿಯರು ನಗೆ, ನಾಚಿದಂತಿರೆ ಪಾರ್ಥ ತಲೆವಾಗಿ,
ತಿರುಗಿ ಮೇಲ್ಮುಖವಾಗಿ ತೊಡಲುತ್ತರೆ ಬಳಿಕ ನಸುನಗಲು, ಸಾರಥಿಯರಿಯ
ತಪ್ಪೆನೆನುತಲುತ್ತರ ತಾನೆ ತೊಡಿಸಿದನು. ಕವಚವನು ತೊಡಲರಿಯದವನಾಹವಕ
ಸಾರಥಿತನವ ಮಾಡುವ ಹವಣು ತಾನೆಂದೆನುತಲಿದ್ದರು ನಿಖಿಳ ನಾರಿಯರು -ಕೌರ
ವನ ಸೇನಾಜಲಧಿಯನ್ನು ಕಂಡು ಹೆದರಿದ ಉತ್ತರನು ರಥದ ಹಿಂದಕೆ ನಿಂದು
ಧುಮ್ಮಿಕ್ಕಿದನು, ಬದುಕಿದೆನೆಂದು ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ,-
ನೋಡಿ ಕೌರವ ಸೇನೆ ಕೆಡೆದುದು ನಗೆಯ ಕಡಲೊಳಗೆ ಎಂಬ ಹಾಸ್ಯಮಯ
ವಿವರಣೆಯನ್ನು ಕೇಳುತಿದ್ದವರೂ ನಗೆಯ ಕಡಲಲ್ಲಿ ಮುಳುಗೇಳುತ್ತಿದ್ದರು,<noinclude></noinclude>
nsnxmuykv2a8qkw7wxc1gu8aw3x87jx
ಪುಟ:ಯಕ್ಷಗಾನ ಮಕರಂದ.pdf/೧೭೫
104
100094
316839
298149
2026-05-04T10:23:01Z
Ashwini Rai K
8475
/* Validated */
316839
proofread-page
text/x-wiki
<noinclude><pagequality level="4" user="Ashwini Rai K" /></noinclude>{{Right|149}}
{{center|ಕರುಣ}}
'''1. ದ್ರೌಪದಿ ವಸ್ತ್ರಾಪಹರಣ ಭಾಗದಲ್ಲಿ''': ದುಶ್ಯಾಸನನು ಪಾಂಚಾ
ಲೆಯ ಸೀರೆ ಸೆಳೆಯಲುದ್ಯುಕ್ತನಾದಾಗ ಆಕೆ, “ಕ್ರೂನಿವ ದುಶ್ಯಾಸನನು ಗಾಂಧಾರಿ
ಬಿಡಿಸೌ ಸೆರಗ, ಸೊಸೆಯಲ್ಲಾರು ಹೇಳೌ, ತಂಗಿಯಲ್ಲಾ ನಿಮಗೆ ಭಾನುಮತಿ, ವೀರ
ಸೈಂಧವನರಸಿ ನೀ ನಾದಿನಿಯಲಾ ಖಳ ಗೌರವದೊಳದ್ದು ವನು ಬಿಡಿಸಂದೊರಲಿದಳು ತರಳೆ” “ಎಲೆ ವಿಲಾಸಿನಿಯರಿರ ಭೂಪನ ತಿಳುಹಿರೌ ತಾಯ್ಗ್ ಳಿರ......” ಎಂದು ಸ್ತ್ರೀಸಮುದಾಯವನ್ನು ಪ್ರಾರ್ಥಿಸುವ ವಿಷಯ ಹಾಗೂ ರಸಪ್ರಕಟನೆ ಒಂದು ರೀತಿಯಾದರೆ,-“ಧಾರುಣೀಪತಿಗಳಿರ, ರಾಜಕುಮಾರರಿರ, ಮಂತ್ರಿಗಳಿರಾ ಪರಿವಾರಕಿದುಪಂಥವೆ, ವಿಚಾರಿಸಿ ನಿರಪರಾಧಿಯನ್ನು, ಕಾರಣಿಕರಿಲ್ಲಾ” ಎಂದು ಪುರುಷ ತಂಡವನ್ನುದೂರಿಡುವ ಹಚ್ಚೆ ಮತ್ತೊಂದು ಪತಿಗಳು, ಭೀಷ್ಮ ಮೊದಲಾದತಿರಥರು, ಧೃತರಾಷ್ಟ್ರ, ಗಾಂಧಾರಿ ಮುಖ್ಯರೇ ತನ್ನ ಪರಿಭವ ನಿವಾರಣೆಗೆ ಒದಗಿಬಾರದಾಗ, ಅನಾಥೆಗೆ ಗತಿ ಕಾಣದಾಗ ದೌಪದಿಯು ತನ್ನ ಲೌಕಿಕ ಅವಲಂಬನವನ್ನು ತೊರೆದು,ದೈವಕ್ಕೆ ಶರಣು ಬರುವ, ಹೃದಯಭಾವ ಕರುಣ ಪೂರ್ಣರಸಪ್ರವಾಹ ಶಾಸ್ತ್ರಿಗಳ ಅಸ್ಪಲಿತವಾಣಿಯಿಂದ ಹರಿದು ಬರುತ್ತಿರುವುದನ್ನು ಸವಿಯುವ ಅನುಭವಇನ್ನೊಂದು, “ನಿನ್ನಯ ಮೈದುನರ ಮರುಳಾಟಕೆನ್ನನು ಕಾಯ್ದು ಕೊಳ್ಳಿ ಕೃಷ್ಣಯೆಂದೊರಲಿದಳು ಲಲಿತಾಂಗಿ” ಎಂಬ ಪದ್ಯದಿಂದ ತೊಡಗಿ, “ಕರುಣಾ ಜಲಧಿಯೇಕೈಗಾಯಬೇಕು -ಗತಿವಿಹೀನರಿಗಕಟ ನೀನೇ ಗತಿಯ ಗೋವಿಂದ, ಕಾಯಿಕರುಣದಲಿ ದಿವಿಜರ ತಾಯ ಪರಿಭವವ, ಕಾಯಿ ಜಾನಕಿಯ, ವೇದವಧುಗಳ
ಕಾಯ್ದೆಲಾ, ದೇವಕೀ ದೇವಿಯರ ಸೆರೆಯನು ದೇವಕೃಪೆಯಲಿ ಬಿಡಿಸಿ - ನಾಥ
ರಿಲ್ಲದ ಶಿಶುಗಳಿಗೆ ನೀ ನಾಥ, ಹೊಲಬುದಪ್ಪಿದ ಹುಲ್ಲೆ ಬೇಡನ ಬಲೆಗೆ ಬಿದ್ದ
ತಾದೆ - ನಂದಗೋಪ ಕುಮಾರ, ಗೋಪೀವೃಂದ ವಲ್ಲಭ........ ಪೂರ್ಣೇಂದು
ಮುಖಿ ಹಲುಬಿದಳು ಬಲುತೆರದಿಂದಲಚ್ಯುತನ” ಎಂಬ ಪದ್ಯದ ವರೆಗೂ, ಒಂದು
ಪದ್ಯಕ್ಕಿಂತ ಹೆಚ್ಚು ಇನ್ನೊಂದು ಎಂಬಂತೆ ಕರುಣೆಯ ಹೊನಲನ್ನು ಹರಿಯಿಸುವ
ವೈಖರಿಯನ್ನು ಕೇಳಿ ಅನುಭವಿಸಬೇಕೇ ಹೊರತು ವಿವರಣೆಗಳವಲ್ಲ!
2.ಕೀಚಕನ ಉಪಟಳವನ್ನು ಸಹಿಸಲಾರದೆ ದೌಪದಿಯು ಭೀಮನ
ಬಾಣಸದ ಮನೆಗೆ ಬಂದು, ತನ್ನ ಅಳಲನ್ನು ತೋಡಿಕೊಳ್ಳುವ ಸನ್ನಿವೇಶವನ್ನು
ಗಮನಿಸಬಹುದು. “ ನಿನ್ನೆ ಹಗಲರೆಯಟ್ಟಿ ಕೀಚಕ ಕುನ್ನಿಯೊದೆದನು ರಾಜಸಭೆ
ಯಲಿ, ನಿನ್ನ ವಂದಿಗರಿರಲು ಪರಿಭವವುಚಿತವೇ ತನಗೆ, ಎನ್ನನವ ಬೆಂಬಳಿಯ
ಬಿಡ, ನಾನಿನ್ನು ಬದುಕುವಳಲ್ಲ” ಎಂದಾಗ “ಉಸುರಲಾಗದು ನಿನ್ನ ಹರಿಬಕೆ
ಮಿಸುಕುವವರಾವಲ್ಲ, ಹೆಂಡಿರ ಗಸಣಿಗೊಂಬವರಲ್ಲ, ಹುದುವಿನ ಗಂಡತನವಿದನು ಶಶಿವದನೆ ಸುಡು, ಕಷ್ಟವೀಯಪದೆಸೆಯವರು ನಾವಲ್ಲ” ಎಂಬ ಭೀಮನ ಮಾತಿನಲ್ಲಿ ಅಡ<noinclude></noinclude>
cdm6j4i15j4dhxv3vk9ga0ebb4v1h0u
ಪುಟ:ಯಕ್ಷಗಾನ ಮಕರಂದ.pdf/೧೭೬
104
100095
316840
298150
2026-05-04T10:24:19Z
Ashwini Rai K
8475
/* Validated */
316840
proofread-page
text/x-wiki
<noinclude><pagequality level="4" user="Ashwini Rai K" /></noinclude>{{Left|150}}
ಗಿರುವ ಅಸಹಾಯಕ ಸ್ಥಿತಿಯು ಕರುಣೆಗೊಂದು ನಿದರ್ಶನ. ಅಂದು ಕೌರವನಾಯಿ
ಸಭೆಯಲ್ಲಿ ತಂದು ತೋರಿದನುನ್ನತಿಯ, ಬಳಿಕಿಂದು ಕೀಚಕ ಕುನ್ನಿ ಯೊದೆದನು ರಾಜ
ಸಭೆಯೊಳಗೆ, ಅಂದು ಮೇಣಿಂದಾದ ಭಂಗಕೆ ಕುಂದದಾವುದು, ನೀವು ಬಲ್ಲಿದರೆಂದು
ಹೊಕ್ಕರೆ ಹೆಣ್ಣ ಕೊಂದಿರಿಯೆಂದಳಿಂದುಮುಖಿ” ಬ್ರೌಪದಿಯ ಈ ಮಾತಿಗೆ
ಭೀಮನ- ಈ ನಪುಂಸಕರೊಡನೆ ಹುಟ್ಟಿದ ನಾನು ಮಗುಳ್ಳವನೆ, ಮಾನಿನಿ
ನೀನು ತೋರಿದ ಪರಿಯಲೆಂಬುದು ಭೀತಿ ಬೇಡೆಂದ” ಈ ಉತ್ತರ ಎಂತಹ ಕರು
ಣೆಯ ಮೊನೆಯುಳ್ಳದು! ಆವ ಹೆಂಗುಸನಳಲಿಸಿದೆನಿನ್ನಾವ ಧರ್ಮವನಳಿದೆನೋ,
ಆವಗರಳವ ಕುಡಿವೆನೋ, ಮೇಣಾವ ಬೆಟ್ಟವನಡರಿ ಬೀಳ್ಕೊನೋ
“ಜನನವೇಪಾಂಚಾಲರಾಯನ ಮನೆ, ಮನೋವಲ್ಲಭರದಾರೆನೆ ಮನುಜಗಿನುಜರು ಗಣ್ಯವೇ ಗೀರ್ವಾಣರಿಂ ಮಿಗಿಲು, ಎನಗೆ ಬಂದೆಡರೀ ವಿರಾಟನ ವನಿತೆಯರುಗಳ ಮುಡಿಯ ಕಟ್ಟುವ, ತನುವ ತಿಗುರುವ, ಕಾಲನೊತ್ತುವ ಕೆಲಸದುತ್ಸಾಹ” – “ಭೀಮ ಕೊಟ್ಟೆ ತನಗೆ ಸಾವಿನ ನೇಮವನು ನಿಮ್ಮಣ್ಣನಾಜ್ಞೆ ವಿರಾಮವಾಗದೆ ಬದುಕಿ ಧರ್ಮದ
ಮೈಸಿರಿಯನರಿದು ಎಂಬ ಮಾತುಗಳಿಂದ ಕರುಣೆಯ ಹನಿಗೂಡಿ, ಹಳ್ಳವಾಗಿ
ಕಟ್ಟೆಯೊಡೆದು ಹರಿಯತೊಡಗಿದಾಗ, ಕಂಬನಿದುಂಬಿದನು, ಕಡು ನೆನೆದುದಂತಃ
ಕರಣ, ವನಿತೆಯನ್ನು ತೆಗೆದಪ್ಪಿದನು, ಕಂಬನಿಯದೊಡೆದನು ಸೆರಗಿನಲಿ ಕಲಿಭೀಮ
ಮಾನಿನಿಯ !” – ಈ ರಸಘಟ್ಟ ಶಾಸ್ತ್ರಿಗಳ ಕಣ್ಣುಗಳಿಂದ ಹರಿಯುವ ಕಣ್ಣೀರ ಕೋಡಿ
ಮತ್ತು ಗದ್ಗದ ಮಾತುಗಳಿಂದ ಇನ್ನಷ್ಟು ಪರಿಪೋಷಣೆ ಹೊಂದುತ್ತಿತ್ತು.
ಭಕ್ತಿಯ ವಿವರಣೆ ಮಾಡುವಾಗಲಂತೂ ಶಾಸ್ತ್ರಿಗಳು ಹೃದಯ ಕರಗಿ, ನೀರಾಗಿ
ಆ ಭಾವದಲ್ಲೇ ತನ್ಮಯರಾಗುತ್ತಿದ್ದರು. ಕೇಳುವ ಶೋತೃಗಳೂ ಭಕ್ತಿಯ ಜಲಧಿ
ಯಲ್ಲಿ ಈಜಾಡುವಂತೆ ಪರಿಣಾಮ ಬೀರುತ್ತಿದ್ದರು. ಅದಕ್ಕೆ ಈ ಕೆಳಗಿನ ಕೆಲವು
ಕಥಾ ಸಂದರ್ಭಗಳನ್ನು ಉದಾಹರಿಸಬಹುದು.
'''ಗದುಗು ಭಾರತ'''ದ ಇಂದ್ರಕೀಲ ಕಥೆಯಲ್ಲಿ ಅರ್ಜುನನ ಶಿವಭಕ್ತಿ –
ದೂರ್ವಾಸಾತಿಥ್ಯದಲ್ಲಿ ದೌಪದಿಯು ಮಾಡಿದ ಶ್ರೀಕೃಷ್ಣಸ್ತೋತ್ರ - ವಿದುರನು
ಶ್ರೀಕೃಷ್ಣನನ್ನು ಭಕ್ತಿಯಿಂದ ಸತ್ಕರಿಸಿದ ಬಗೆ-ಚಕ್ರವನ್ನು ತುಡುಕಿ ಬಂದ ಕೃಷ್ಣ
ನನ್ನು ಭೀಷ್ಮರು ಭಕ್ತಿಯ ಬಲದಿಂದ ಸಂತೈಸಿದುದು-ಜೈಮಿನಿ ಭಾರತದಲ್ಲಿ,
ಕುದಿಯುತ್ತಿರುವ ಎಣ್ಣೆ ಕೊಪ್ಪರಿಗೆಯಲ್ಲಿ ಸುಧನ್ವನು ಮಾಡಿದ ಶ್ರೀಕೃಷ್ಣ ಧ್ಯಾನ-
ಅರ್ಜುನನಿಗೆ ಸಾರಥಿಯಾದ ಅಚ್ಚುತನನ್ನು ಸುಧನ್ವನು ಸ್ತುತಿಮಾಡಿದುದು ಮಯ
ರಧ್ವಜನ ನಿರ್ಮಲ ಭಕ್ತಿ-ಚಂದ್ರಹಾಸನು ಚಂಡಿಕಾದೇವಿಯನ್ನು ಮೆಚ್ಚಿಸಿದುದು.
'''ತೊರವೆ ರಾಮಾಯಣ'''ದಲ್ಲಿ ಅಶೋಕವನದ ಸೀತೆ, ಶ್ರೀರಾಮನಾಮಾ
ಮೃತಪಾನದಿಂದ ಪ್ರಾಣಧಾರಣೆ ಮಾಡಿಕೊಂಡಿದ್ದುದು-ಆಂಜನೇಯನ ಭಕ್ತಿಯ
ಪ್ರಭಾವ ಹರಿಶ್ಚಂದ್ರ ಕಾವ್ಯದಲ್ಲಿ, ವಿಶ್ವೇಶ್ವರನನ್ನು ಸಾಕ್ಷಾತ್ಕರಿಸಿಕೊಂಡ ದಿವ್ಯ<noinclude></noinclude>
7ceun0429wrerngit7dgnh82uxh2pat
ಪುಟ:ಯಕ್ಷಗಾನ ಮಕರಂದ.pdf/೧೭೮
104
100097
316842
298573
2026-05-04T10:24:48Z
Ashwini Rai K
8475
/* Validated */
316842
proofread-page
text/x-wiki
<noinclude><pagequality level="4" user="Ashwini Rai K" /></noinclude>{{Left|'''ಸ್ನೇಹಶೀಲ'''}}
—————————————————
{{Right|- ಮಲ್ಪೆ ರಾಮದಾಸ ಸಾಮಗ,}}
ಹೌದು; ನನ್ನ ಸ್ಮೃತಿದೃಷ್ಟಿಗೆ ಈಗಲ ಶಂಕರನಾರಾಯಣ ಶಾಸ್ತ್ರಿಗಳ
ಮುಖವು ಕಾಣಿಸುತ್ತಿದೆ. ಅವರ ವರ್ಚಸ್ಸಿನ ಮುದ್ರೆಯು ನನ್ನ ಮನಸ್ಸಿನ ಮೇಲೆ
ಬಿದ್ದಿರುವುದರಿಂದ ನಾನವರನ್ನು ಮರೆಯಲೂ ಆರೆನು. ಅವರನ್ನು ನಾನು ಚೆನ್ನಾಗಿ
ಬಲ್ಲೆನೆಂದು ಧೈರವಾಗಿ ಹೇಳಬಲ್ಲೆ. ನಮ್ಮೊಳಗೆ ಆತ್ಮೀಯತೆಯ ಸಂಬಂಧವಿತ್ತು.
ಅವರ ಪರಿಚಯ ಪಡೆಯುವ ಮೊದಲು, ದೂರದಿಂದ ಅವರನ್ನು ಕಂಡು,
ಅವರ ಅರ್ಥವಿವರಣೆಯನ್ನು ಹಲವು ಸಲ ಕೇಳಿದ್ದೆ. ದೇವೀಭಾಗವತವೆಂಬ ಪುರಾಣ
ವೊಂದರ ಬಗ್ಗೆ ನಾನು ಕೇಳಿ ತಿಳಿದಿದ್ದೆನಾದರೂ, ಓದಿರಲಿಲ್ಲ. ಒಮ್ಮೆ ನನ್ನ ಹರಿ
ಕೀರ್ತನೆಯ ವ್ಯವಸಾಯಕ್ಕಾಗಿ ಅದನ್ನು ನೋಡುವ ಆವಶ್ಯಕತೆಯೊದಗಿತು. ಆ
ಗ್ರಂಥವನ್ನು ನಾನು ವಿಚಾರಿಸುತ್ತಿರುವಾಗ, ಶ್ರೀ ಮಂಗಲಾದೇವಿ ದೇಗುಲದಲ್ಲಿ ನವ
ರಾತ್ರಿಯ ವೇಳೆ ಶಾಸ್ತ್ರಿಗಳು ಅದನ್ನು ಪಾರಾಯಣ ಮಾಡುವರೆಂದು ತಿಳಿದು, ಅವರ
ಮನೆಗೆ ಹೋದಾಗಲೇ ಅವರೊಡನೆ ಮೊತ್ತಮೊದಲ ಸಂಭಾಷಣೆಯ ಭಾಗ್ಯ ಲಭಿ
ಸಿತ್ತು. ಅಕೃತ್ರಿಮ ಧ್ವನಿ, ಆಡಂಬರವಿಲ್ಲದ ಶೈಲಿ, ಇವುಗಳಿಗೆ ನಾನು ಮಾರುಹೋದೆ.
ನಾನಾರೆಂದು ಅವರಿಗೆ ತಿಳಿದಿತ್ತಾದರೂ, ಹೆಚ್ಚಿನ ಪರಿಚಯವಿರಲಿಲ್ಲವಷ್ಟೆ.
ನನ್ನ ಶಿಕ್ಷಣ, ವೃತ್ತಿಗಳ ಬಗ್ಗೆ ಆತ್ಮೀಯತೆಯಿಂದ ಅನೇಕ ಪ್ರಶ್ನೆಗಳನ್ನವರು ಕೇಳಿ
ದರು. ವಿಚಾರಣೆಯ ಶೈಲಿ ಅಲ್ಲಿರಲಿಲ್ಲ. ಅನುರಾಗ ಅಭಿಮಾನ ಎದ್ದು ಕಾಣು
ತಿದ್ದುವು. ನನ್ನ ಸಂಸ್ಕೃತ ಅಭ್ಯಾಸದ ಕುರಿತೂ ಅವರಿಗೆ ಆಸಕ್ತಿ, ಕುತೂಹಲಗಳಿ
ದ್ದುವು. ಅಂದಿನಿಂದ ನಾನು ಅವರ ಆತ್ಮೀಯರಲ್ಲೋರ್ವನಾದೆ. ನನ್ನಲ್ಲಿ ವಿಶೇಷ
ವಾತ್ಸಲ್ಯವನ್ನವರು ಅಂದಿನಿಂದ ಇರಿಸಿದ್ದರು. ಮುಂದೆ ಹಲವು ಬಾರಿ ಅವರೊಂದಿಗೆ
ಅರ್ಥ ಹೇಳುವ, ಅವರ ಒಡನಾಟದ ಸಂದರ್ಭಗಳು ಒದಗಿದುವು. ನನ್ನ ಯಕ್ಷಗಾನ
ಅರ್ಥಗಾರಿಕೆ, ಹರಿಕೀರ್ತನೆಗಳನ್ನು ಕೇಳಿ, ಅವರು ಹೃತ್ತೂರ್ವಕ ಮೆಚ್ಚುಗೆಯನ್ನು
ಸೂಚಿಸಿದ್ದನ್ನು ನಾನಿಲ್ಲಿ ಅಭಿಮಾನದಿಂದ ಉಲ್ಲೇಖಿಸುತ್ತೇನೆ.
ಒಮ್ಮೆ ಅವರು ನನ್ನೊಡನೆ “ನೀವು ಅರ್ಥ ಹೇಳುವಾಗ ಪದ್ಯದ ವರ್ತುಲ
ದೊಳಗೇ ಇರುತ್ತೀರಿ. ಇದು ಒಂದು ಉತ್ತಮ ಗುಣ. ಆ ಗುಣವನ್ನು ಉಳಿಸಿ<noinclude></noinclude>
opulrxgomrea728r2t2pn22erljr8ys
ಪುಟ:ಯಕ್ಷಗಾನ ಮಕರಂದ.pdf/೧೭೯
104
100098
316843
298591
2026-05-04T10:25:04Z
Ashwini Rai K
8475
/* Validated */
316843
proofread-page
text/x-wiki
<noinclude><pagequality level="4" user="Ashwini Rai K" /></noinclude>{{Right|153}}
ಕೊಳ್ಳಬೇಕು” ಎಂದು ಉಪದೇಶಿಸಿದ್ದರು. “ತನ್ನ ಪಾಂಡಿತ್ಯ ಪ್ರಕಟನೆಯ
ಉತ್ಸಾಹದಲ್ಲಿ ಪದ್ಯದ ಪರಿಧಿಯ ಹೊರಗೆ ಬಂದು ಅಪ್ರಾಸಂಗಿಕವಾಗಿ ಮಾತನಾಡು
ವುದು ಅಪರಾಧ. ಅದು ಅಪರಾಧವೆಂದು ಹಾಗೆ ಮಾತನಾಡುವವರಿಗೂ ತಿಳಿದಿರು
ಇದೆ. ಆದರೆ ಜನಪ್ರಿಯತೆಗಾಗಿ ಹಾಗೆ ಮಾಡುತ್ತಾರೆ” ಎಂದು ಮುಂತಾಗಿ
ಅವರು ನನಗೆ ತಿಳಿಸಿದ್ದಿದೆ. ಅರ್ಥಗಾರಿಕೆಯ ಹಲವು ಮುಖಗಳನ್ನು, ಸಮಸ್ಯೆ
ಗಳನ್ನು ನಾವು ಬಿಚ್ಚು ಮನಸ್ಸಿನಿಂದ ಚರ್ಚಿಸುವುದಿತ್ತು.
“ಪ್ರತಿಪಾತ್ರ ನಿರ್ವಾಹಕನು ತಾನೂ ತಪ್ಪಿ, ನಮ್ಮನ್ನೂ ಪ್ರಸಂಗ ವರುಲ
ದಿಂದ ಹೊರಗೆಳೆದರೆ?” ಎಂದೊಮ್ಮೆ ನಾನು ಕೇಳಿದಾಗ ನನಗೇ ನಾಚುಗೆಯಾಗು
ವಂತೆ ಮಾರ್ಮಿಕವಾಗಿ, ಸೋದಾಹರಣವಾಗಿ ಅವರ ಉತ್ತರ ಬಂದಿತು.
“ನೀವು ಸೈಕಲ್ಲೇರುತ್ತೀರಾ?” ಎಂದರು.
“ಹೌದು” ಎಂದೆ.
“ನೀವು ನಿಮ್ಮ ದಾರಿಯಲ್ಲಿ ಇದ್ದೀರಿ. ನಿಮ್ಮ ತಪ್ಪಿಲ್ಲ. ಇದಿರಾಗಿ ಬರುವ ಸವಾ
ರನು ನಿಮ್ಮ ಮೇಲೆ ಹಾಯ್ದು ಬೀಳುವುದಕ್ಕೆ ಬಂದರೆ, ನೀವೇನು ಮಾಡುತ್ತೀರಿ?”
“ಸುಮ್ಮನೆ ಇಳಿದೊಂದು ಬದಿಯಲ್ಲಿ ನಿಂತಿರಬೇಕು.”
ಇದೂ ಹಾಗೆಯೇ” ಎಂದರು. ಒಂದೆರಡು ವಾಕ್ಯಗಳಲ್ಲಿ ಒಬ್ಬನ ವಿದ್ವತ್ತು,
ಪರಿಶ್ರಮ, ಪಾತ್ರ ನಿರ್ವಹಣೆಯ ರೀತಿ ತಿಳಿಯುವಾಗ, ಮತ್ತೇಕೆ ಮಾತಿನ ಚಪಲತೆ,
ಎಂದು ಅವರ ಪ್ರಶ್ನೆ, ಮಾತಿನ ಮಲ್ಲರಿಂದ ಅವರ ಮನಸ್ಸಿಗೆಲ್ಲೋ ನೋವಾಗಿರ
ಬೇಕು ಎಂದೂ ನಾನಣಿಸಿದ್ದಿದೆ.
ಭಾಷಾ ಶುದ್ಧತೆ, ವಿಷಯ ಶುದ್ಧತೆ ಇವುಗಳಲ್ಲಿದೆ ಸಾಹಿತ್ಯ ಶುದ್ಧತೆ ಎಂದವರು
ಒಮ್ಮೆ ತಿಳಿಸಿದಾಗ, ನನಗದರ ಅರ್ಥವು ಸರಿಯಾಗಿ ತಿಳಿದಿರಲಿಲ್ಲ. ಮು೦ದೆ
ಅನುಭವದಿಂದ ಅದು ಸ್ಪಷ್ಟವಾಯಿತು. 'ತಾಸುಗಟ್ಟಲೆ ಮಾತಾಡಿಯೂ, ಏನನ್ನೂ
ಹೇಳಿದ ಹಾಗಾಗದಿದ್ದರೆ?? ಯೋಚಿಸುತ್ತ ನನಗದರ ಮರ್ಮ ಹೊಳೆಯಿತು.
ಅವರು ಬರಿಯ ಯಕ್ಷಗಾನ ವ್ಯವಸಾಯಿಯಷ್ಟೆ ಅಲ್ಲ.
ವಂತರೂ, ಸತತ ಅಧ್ಯಯನಶೀಲರೂ ಹೌದು.
ಅವರ ಇತಿಹಾಸಪ್ರಜ್ಞೆಯನ್ನು ತಿಳಿಯುವ ಅವಕಾಶವೊಮ್ಮೆ ಬಂದಿತ್ತು.ವೈದಿಕ ನಿಷ್ಠಾ
ಅವರಲ್ಲಿ ಮಾತನ್ನಾಡುತ್ತ ನಾನೊಮ್ಮೆ, “ಕೋಟ, ಶಿವಳ್ಳಿ ಬ್ರಾಹ್ಮಣರೊಳಗೆ ಮಂಗ
ಳೂರು ಕಡೆ, ಹೆಣ್ಣನ್ನು ಕೊಡುವ ತರುವ ಬಳಕೆಯಿದ್ದಂತೆ ತೋರುವುದಿಲ್ಲ.
ನಮ್ಮತ್ತ ಆ ಭೇದವಿಲ್ಲ. ಅದೇಕೆ ಹಾಗೆ?” ಎಂದು ಹಗುರವಾಗಿ ಎಂಬಂತೆ ಕೇಳಿದ್ದೆ.
ಒಂದು ಕ್ಷಣ ಅವರು ನಗುತ್ತ ನಿಂತರಲ್ಲದೆ, ಏನನ್ನೂ ಹೇಳಲಿಲ್ಲ. ಹಾಗೆ ಕೇಳಬಾರ<noinclude></noinclude>
sr3iwendnt382d6hh8n0lf7yp3ujant
316854
316843
2026-05-04T10:34:24Z
Ashwini Rai K
8475
316854
proofread-page
text/x-wiki
<noinclude><pagequality level="4" user="Ashwini Rai K" /></noinclude>{{Right|153}}
ಕೊಳ್ಳಬೇಕು” ಎಂದು ಉಪದೇಶಿಸಿದ್ದರು. “ತನ್ನ ಪಾಂಡಿತ್ಯ ಪ್ರಕಟನೆಯ
ಉತ್ಸಾಹದಲ್ಲಿ ಪದ್ಯದ ಪರಿಧಿಯ ಹೊರಗೆ ಬಂದು ಅಪ್ರಾಸಂಗಿಕವಾಗಿ ಮಾತನಾಡು
ವುದು ಅಪರಾಧ. ಅದು ಅಪರಾಧವೆಂದು ಹಾಗೆ ಮಾತನಾಡುವವರಿಗೂ ತಿಳಿದಿರು
ಇದೆ. ಆದರೆ ಜನಪ್ರಿಯತೆಗಾಗಿ ಹಾಗೆ ಮಾಡುತ್ತಾರೆ” ಎಂದು ಮುಂತಾಗಿ
ಅವರು ನನಗೆ ತಿಳಿಸಿದ್ದಿದೆ. ಅರ್ಥಗಾರಿಕೆಯ ಹಲವು ಮುಖಗಳನ್ನು, ಸಮಸ್ಯೆ
ಗಳನ್ನು ನಾವು ಬಿಚ್ಚು ಮನಸ್ಸಿನಿಂದ ಚರ್ಚಿಸುವುದಿತ್ತು.
{{gap}}“ಪ್ರತಿಪಾತ್ರ ನಿರ್ವಾಹಕನು ತಾನೂ ತಪ್ಪಿ, ನಮ್ಮನ್ನೂ ಪ್ರಸಂಗ ವರುಲ
ದಿಂದ ಹೊರಗೆಳೆದರೆ?” ಎಂದೊಮ್ಮೆ ನಾನು ಕೇಳಿದಾಗ ನನಗೇ ನಾಚುಗೆಯಾಗು
ವಂತೆ ಮಾರ್ಮಿಕವಾಗಿ, ಸೋದಾಹರಣವಾಗಿ ಅವರ ಉತ್ತರ ಬಂದಿತು.
“ನೀವು ಸೈಕಲ್ಲೇರುತ್ತೀರಾ?” ಎಂದರು.
“ಹೌದು” ಎಂದೆ.
“ನೀವು ನಿಮ್ಮ ದಾರಿಯಲ್ಲಿ ಇದ್ದೀರಿ. ನಿಮ್ಮ ತಪ್ಪಿಲ್ಲ. ಇದಿರಾಗಿ ಬರುವ ಸವಾ
ರನು ನಿಮ್ಮ ಮೇಲೆ ಹಾಯ್ದು ಬೀಳುವುದಕ್ಕೆ ಬಂದರೆ, ನೀವೇನು ಮಾಡುತ್ತೀರಿ?”
“ಸುಮ್ಮನೆ ಇಳಿದೊಂದು ಬದಿಯಲ್ಲಿ ನಿಂತಿರಬೇಕು.”
ಇದೂ ಹಾಗೆಯೇ” ಎಂದರು. ಒಂದೆರಡು ವಾಕ್ಯಗಳಲ್ಲಿ ಒಬ್ಬನ ವಿದ್ವತ್ತು,
ಪರಿಶ್ರಮ, ಪಾತ್ರ ನಿರ್ವಹಣೆಯ ರೀತಿ ತಿಳಿಯುವಾಗ, ಮತ್ತೇಕೆ ಮಾತಿನ ಚಪಲತೆ,
ಎಂದು ಅವರ ಪ್ರಶ್ನೆ, ಮಾತಿನ ಮಲ್ಲರಿಂದ ಅವರ ಮನಸ್ಸಿಗೆಲ್ಲೋ ನೋವಾಗಿರ
ಬೇಕು ಎಂದೂ ನಾನಣಿಸಿದ್ದಿದೆ.
ಭಾಷಾ ಶುದ್ಧತೆ, ವಿಷಯ ಶುದ್ಧತೆ ಇವುಗಳಲ್ಲಿದೆ ಸಾಹಿತ್ಯ ಶುದ್ಧತೆ ಎಂದವರು
ಒಮ್ಮೆ ತಿಳಿಸಿದಾಗ, ನನಗದರ ಅರ್ಥವು ಸರಿಯಾಗಿ ತಿಳಿದಿರಲಿಲ್ಲ. ಮು೦ದೆ
ಅನುಭವದಿಂದ ಅದು ಸ್ಪಷ್ಟವಾಯಿತು. 'ತಾಸುಗಟ್ಟಲೆ ಮಾತಾಡಿಯೂ, ಏನನ್ನೂ
ಹೇಳಿದ ಹಾಗಾಗದಿದ್ದರೆ?? ಯೋಚಿಸುತ್ತ ನನಗದರ ಮರ್ಮ ಹೊಳೆಯಿತು.
ಅವರು ಬರಿಯ ಯಕ್ಷಗಾನ ವ್ಯವಸಾಯಿಯಷ್ಟೆ ಅಲ್ಲ.
ವಂತರೂ, ಸತತ ಅಧ್ಯಯನಶೀಲರೂ ಹೌದು.
ಅವರ ಇತಿಹಾಸಪ್ರಜ್ಞೆಯನ್ನು ತಿಳಿಯುವ ಅವಕಾಶವೊಮ್ಮೆ ಬಂದಿತ್ತು.ವೈದಿಕ ನಿಷ್ಠಾ
ಅವರಲ್ಲಿ ಮಾತನ್ನಾಡುತ್ತ ನಾನೊಮ್ಮೆ, “ಕೋಟ, ಶಿವಳ್ಳಿ ಬ್ರಾಹ್ಮಣರೊಳಗೆ ಮಂಗ
ಳೂರು ಕಡೆ, ಹೆಣ್ಣನ್ನು ಕೊಡುವ ತರುವ ಬಳಕೆಯಿದ್ದಂತೆ ತೋರುವುದಿಲ್ಲ.
ನಮ್ಮತ್ತ ಆ ಭೇದವಿಲ್ಲ. ಅದೇಕೆ ಹಾಗೆ?” ಎಂದು ಹಗುರವಾಗಿ ಎಂಬಂತೆ ಕೇಳಿದ್ದೆ.
ಒಂದು ಕ್ಷಣ ಅವರು ನಗುತ್ತ ನಿಂತರಲ್ಲದೆ, ಏನನ್ನೂ ಹೇಳಲಿಲ್ಲ. ಹಾಗೆ ಕೇಳಬಾರ<noinclude></noinclude>
kk1i42k11ikniiuxit3i5075qgtn2s3
ಪುಟ:ಯಕ್ಷಗಾನ ಮಕರಂದ.pdf/೧೮೦
104
100099
316853
298625
2026-05-04T10:33:18Z
Hariprasad Shetty10
7490
316853
proofread-page
text/x-wiki
<noinclude><pagequality level="3" user="Shreelatha.Halemane" />{{Left|154}}</noinclude>
ದಿತ್ತೇನೋ ಎಂದು ನಾನು ಹೆದರಿದೆ. ಕೋಟ, ಶಿವಳ್ಳಿ, ಕಂದಾವರ ಈ ಮರ
ಒಂದೇ ಬುಡಕಟ್ಟಿನ ಬ್ರಾಹ್ಮಣ ವರ್ಗಗಳೆಂದೂ, ಸಹ್ಯಾದ್ರಿ ಸೀಮೆಯೊಳಗಣ
ಪ್ರಾದೇಶಿಕ ಪ್ರಭೇದಗಳಿವು ಎಂಬುದನ್ನೂ ಸಾಧಾರವಾಗಿ ನನಗವರು ಆ ಮೇಲೆ ತಿಳಿಸಿದರು.ಇಂತಹ ಹಲವು ವಿಷಯಗಳನ್ನು ಅವರಲ್ಲಿ ಚರ್ಚಿಸಿದಾಗ, ಅವರ ಆಳವಾದ ಇತಿಹಾಸಪ್ರಜ್ಞೆ ನನಗೆ ತಿಳಿಯಿತು.
ಸಾತ್ವಿಕತೆ, ಜ್ಞಾನ, ವಿದ್ವತ್ತು, ಪ್ರಯೋಗ ಕೌಶಲ, ಉದಾರಚಿತ್ತ- ಇವೆಲ್ಲ
ಒಂದೆಡೆಯಲ್ಲಿರುತ್ತವೆಯೇ? ಎಂಬ ಪ್ರಶ್ನೆಗೆ ಹೌದೆಂಬ ಉತ್ತರ ನನಗೆ ಅವರ
ವ್ಯಕ್ತಿತ್ವದಲ್ಲಿ ದೊರೆತಿತ್ತು.
{{center|——————}}
“ಹಳ್ಳಿಗಳಲ್ಲಿ ಹುಟ್ಟಿ, ಅಲ್ಲಿಯೇ ಬೆಳೆದು, ಅಲ್ಲಿಯೇ ಸ್ಥಾಯಿಯಾದ ಕಲೆ
ಇದಲ್ಲ.... ಕರ್ಣಾಟಕ ಸಂಗೀತದ ಪಿತಾಮಹರೆನಿಸಿಕೊಂಡ ಪುರಂದರದಾಸರಿಂದ
ಪ್ರಾರಂಭಿಸಿ ಸಂಗೀತಶಾಸ್ತ್ರದಲ್ಲಿ ಪ್ರಮಾಣಭೂತರಾದ ತಂಜಾವರದ ಅರ
ಸರು, ಅಷ್ಟೇ ಖ್ಯಾತಿವಂತರಾದ ಮುಮ್ಮಡಿ ಕೃಷ್ಣರಾಜ, ಅಳಿಯ ಲಿಂಗ
ರಾಜ, ಸಾಹಿತ್ಯದಲ್ಲಿ ಗಣ್ಯಸ್ಥಾನವನ್ನು ಗಳಿಸಿದ ಮುದ್ದಣಾದಿಗಳು ಇದರಲ್ಲಿ
ಆಸ್ಥೆ ವಹಿಸಿ ಕೃಷಿ ಮಾಡಿರುವಾಗ ಇದನ್ನು ಶುದ್ಧ ಜಾನಪದ ಕಲೆಯೆಂದು
ಭಾವಿಸುವುದೆಂತು ?”
{{Right|-ಭೀಮರಾವ್ ಚಿಟಗುಪ್ಪಿ:}}<noinclude></noinclude>
i9epr0yxtywdkd1r3y1yrdouz08226l
316855
316853
2026-05-04T10:34:36Z
Hariprasad Shetty10
7490
316855
proofread-page
text/x-wiki
<noinclude><pagequality level="3" user="Shreelatha.Halemane" />{{Left|154}}</noinclude>
ದಿತ್ತೇನೋ ಎಂದು ನಾನು ಹೆದರಿದೆ. ಕೋಟ, ಶಿವಳ್ಳಿ, ಕಂದಾವರ ಈ ಮೂರೂ
ಒಂದೇ ಬುಡಕಟ್ಟಿನ ಬ್ರಾಹ್ಮಣ ವರ್ಗಗಳೆಂದೂ, ಸಹ್ಯಾದ್ರಿ ಸೀಮೆಯೊಳಗಣ
ಪ್ರಾದೇಶಿಕ ಪ್ರಭೇದಗಳಿವು ಎಂಬುದನ್ನೂ ಸಾಧಾರವಾಗಿ ನನಗವರು ಆ ಮೇಲೆ ತಿಳಿಸಿದರು.ಇಂತಹ ಹಲವು ವಿಷಯಗಳನ್ನು ಅವರಲ್ಲಿ ಚರ್ಚಿಸಿದಾಗ, ಅವರ ಆಳವಾದ ಇತಿಹಾಸಪ್ರಜ್ಞೆ ನನಗೆ ತಿಳಿಯಿತು.
ಸಾತ್ವಿಕತೆ, ಜ್ಞಾನ, ವಿದ್ವತ್ತು, ಪ್ರಯೋಗ ಕೌಶಲ, ಉದಾರಚಿತ್ತ- ಇವೆಲ್ಲ
ಒಂದೆಡೆಯಲ್ಲಿರುತ್ತವೆಯೇ? ಎಂಬ ಪ್ರಶ್ನೆಗೆ ಹೌದೆಂಬ ಉತ್ತರ ನನಗೆ ಅವರ
ವ್ಯಕ್ತಿತ್ವದಲ್ಲಿ ದೊರೆತಿತ್ತು.
{{center|——————}}
“ಹಳ್ಳಿಗಳಲ್ಲಿ ಹುಟ್ಟಿ, ಅಲ್ಲಿಯೇ ಬೆಳೆದು, ಅಲ್ಲಿಯೇ ಸ್ಥಾಯಿಯಾದ ಕಲೆ
ಇದಲ್ಲ.... ಕರ್ಣಾಟಕ ಸಂಗೀತದ ಪಿತಾಮಹರೆನಿಸಿಕೊಂಡ ಪುರಂದರದಾಸರಿಂದ
ಪ್ರಾರಂಭಿಸಿ ಸಂಗೀತಶಾಸ್ತ್ರದಲ್ಲಿ ಪ್ರಮಾಣಭೂತರಾದ ತಂಜಾವರದ ಅರ
ಸರು, ಅಷ್ಟೇ ಖ್ಯಾತಿವಂತರಾದ ಮುಮ್ಮಡಿ ಕೃಷ್ಣರಾಜ, ಅಳಿಯ ಲಿಂಗ
ರಾಜ, ಸಾಹಿತ್ಯದಲ್ಲಿ ಗಣ್ಯಸ್ಥಾನವನ್ನು ಗಳಿಸಿದ ಮುದ್ದಣಾದಿಗಳು ಇದರಲ್ಲಿ
ಆಸ್ಥೆ ವಹಿಸಿ ಕೃಷಿ ಮಾಡಿರುವಾಗ ಇದನ್ನು ಶುದ್ಧ ಜಾನಪದ ಕಲೆಯೆಂದು
ಭಾವಿಸುವುದೆಂತು ?”
{{Right|-'''ಭೀಮರಾವ್ ಚಿಟಗುಪ್ಪಿ''':}}<noinclude></noinclude>
o2tuon6lkom6j8wfsk9qqradcmw4ipa
316856
316855
2026-05-04T10:34:59Z
Hariprasad Shetty10
7490
/* Validated */
316856
proofread-page
text/x-wiki
<noinclude><pagequality level="4" user="Hariprasad Shetty10" />{{Left|154}}</noinclude>
ದಿತ್ತೇನೋ ಎಂದು ನಾನು ಹೆದರಿದೆ. ಕೋಟ, ಶಿವಳ್ಳಿ, ಕಂದಾವರ ಈ ಮೂರೂ
ಒಂದೇ ಬುಡಕಟ್ಟಿನ ಬ್ರಾಹ್ಮಣ ವರ್ಗಗಳೆಂದೂ, ಸಹ್ಯಾದ್ರಿ ಸೀಮೆಯೊಳಗಣ
ಪ್ರಾದೇಶಿಕ ಪ್ರಭೇದಗಳಿವು ಎಂಬುದನ್ನೂ ಸಾಧಾರವಾಗಿ ನನಗವರು ಆ ಮೇಲೆ ತಿಳಿಸಿದರು.ಇಂತಹ ಹಲವು ವಿಷಯಗಳನ್ನು ಅವರಲ್ಲಿ ಚರ್ಚಿಸಿದಾಗ, ಅವರ ಆಳವಾದ ಇತಿಹಾಸಪ್ರಜ್ಞೆ ನನಗೆ ತಿಳಿಯಿತು.
ಸಾತ್ವಿಕತೆ, ಜ್ಞಾನ, ವಿದ್ವತ್ತು, ಪ್ರಯೋಗ ಕೌಶಲ, ಉದಾರಚಿತ್ತ- ಇವೆಲ್ಲ
ಒಂದೆಡೆಯಲ್ಲಿರುತ್ತವೆಯೇ? ಎಂಬ ಪ್ರಶ್ನೆಗೆ ಹೌದೆಂಬ ಉತ್ತರ ನನಗೆ ಅವರ
ವ್ಯಕ್ತಿತ್ವದಲ್ಲಿ ದೊರೆತಿತ್ತು.
{{center|——————}}
“ಹಳ್ಳಿಗಳಲ್ಲಿ ಹುಟ್ಟಿ, ಅಲ್ಲಿಯೇ ಬೆಳೆದು, ಅಲ್ಲಿಯೇ ಸ್ಥಾಯಿಯಾದ ಕಲೆ
ಇದಲ್ಲ.... ಕರ್ಣಾಟಕ ಸಂಗೀತದ ಪಿತಾಮಹರೆನಿಸಿಕೊಂಡ ಪುರಂದರದಾಸರಿಂದ
ಪ್ರಾರಂಭಿಸಿ ಸಂಗೀತಶಾಸ್ತ್ರದಲ್ಲಿ ಪ್ರಮಾಣಭೂತರಾದ ತಂಜಾವರದ ಅರ
ಸರು, ಅಷ್ಟೇ ಖ್ಯಾತಿವಂತರಾದ ಮುಮ್ಮಡಿ ಕೃಷ್ಣರಾಜ, ಅಳಿಯ ಲಿಂಗ
ರಾಜ, ಸಾಹಿತ್ಯದಲ್ಲಿ ಗಣ್ಯಸ್ಥಾನವನ್ನು ಗಳಿಸಿದ ಮುದ್ದಣಾದಿಗಳು ಇದರಲ್ಲಿ
ಆಸ್ಥೆ ವಹಿಸಿ ಕೃಷಿ ಮಾಡಿರುವಾಗ ಇದನ್ನು ಶುದ್ಧ ಜಾನಪದ ಕಲೆಯೆಂದು
ಭಾವಿಸುವುದೆಂತು ?”
{{Right|-'''ಭೀಮರಾವ್ ಚಿಟಗುಪ್ಪಿ''':}}<noinclude></noinclude>
fhf5t5gpqbziwn4xds9xujeyhc9skgt
ಪುಟ:ಯಕ್ಷಗಾನ ಮಕರಂದ.pdf/೧೮೧
104
100100
316857
301164
2026-05-04T10:35:50Z
Hariprasad Shetty10
7490
316857
proofread-page
text/x-wiki
<noinclude><pagequality level="3" user="Shreelatha.Halemane" />{{Left|'''ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು - ನಾನು ಕಂಡಂತೆ'''}}
————————————————————————————————
{{Right|-ಬಿ. ಎಂ. ಇದಿನಬ್ಬ,}}</noinclude>ಶ್ರೀ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳ ಬಗ್ಗೆ ನಾನು ಪತ್ರಿಕೆಗಳಲ್ಲಿ ಅನೇಕ
ವರದಿಗಳನ್ನೂ, ವಿವರಗಳನ್ನೂ ಓದಿದ್ದೆ. ಅವರ ವಿದ್ವತ್ತಿನ ಬಗ್ಗೆ, ಅವರ ಅರ್ಥ
ಗಾರಿಕೆಯ ಬಗ್ಗೆಯ ಕೇಳಿದ್ದೆ. ಅವರನ್ನು ಪ್ರತ್ಯಕ್ಷವಾಗಿ ದೂರದಲ್ಲಿ ಕಂಡು,
ಅವರು ಶಾಸ್ತ್ರಿಗಳು ಎಂಬುದನ್ನು ಮಿತ್ರರು ಪರಿಚಯಿಸಿದ ನೆನಪೂ ನನಗಿದೆ.
ಆದರೆ ಮುಖಾಮುಖಿಯಾಗಿ ಭೇಟಿಯಾಗಿ, ಮಾತನಾಡಿಸುವ ಅವಕಾಶ ನನಗೆ
ದೊರೆತದ್ದು ಅವರು ತೀರಿಹೋಗುವುದಕ್ಕಿಂತ ಸುಮಾರು ಎಂಟು ವರ್ಷಗಳ ಹಿಂದೆ.
ನನ್ನ ಭಾಗ್ಯವೆಂಬಂತೆ ಮೂರು ತಾಳಮದ್ದಳೆಗಳಲ್ಲಿ ಅವರನ್ನು ನೋಡುವ,
ಕೇಳುವ ಅವಕಾಶ ದೊರೆಯಿತು. ಪ್ರಥಮವಾಗಿ ಮಂಗಳೂರಿನ ಪ್ರೌಢಶಾಲೆಯಲ್ಲಿ
ನಡೆಯುತ್ತಿದ್ದ ತಾಳಮದ್ದಳೆಗೆ ನಾನು ಪ್ರೇಕ್ಷಕನಾಗಿ ಹೋಗಿದ್ದ. ಅಂದಿನ ಕಥಾ
ಭಾಗದಲ್ಲಿ ಶ್ರೀ ಶಾಸ್ತ್ರಿಗಳು ರಾವಣನ ಪಾತ್ರವಹಿಸಿದ್ದರು.
ಆದಿಯಿಂದ ಅಂತ್ಯದವರೆಗೂ ಅವರ ಅರ್ಥವನ್ನು ಕೇಳಿ ನಾನು ಆನಂದಪುಲಕಿತನಾದೆ. ಅವರ ಅರ್ಥ ಹೇಳುವ ರೀತಿಯೇ ಒಂದು ವಿಶೇಷ. ಖುದ್ದು ರಾವಣನೇ ಅರ್ಥ ಹೇಳುತ್ತಿರವನೋ ಎಂಬಂಥ ರೀತಿ, ಕಂಚಿನ ಕಂಠ, ಶಬ್ದಗಳ ಜಾಲ ಗಂಭೀರವಾಗಿ ಹೊರಬರುತ್ತಿತ್ತು. ವಾಕ್ಯಗಳನ್ನು ಮುಗಿಸುವ ಧಾಟಿ ಅದೊಂದು ಅಪೂರ್ವ ಏರುಸ್ವರ ಬೇಕಾದಲ್ಲಿ ಏರುಸ್ವರ, ನಿಧಾನವಾಗಿ ಹೇಳಬೇಕಾದಲ್ಲಿ ನಿಧಾನಗತಿ, ಅವರ ಅರ್ಥಗಾರಿಕೆಗೆ ವಿಶೇಷ ರೀತಿಯ ಒಪ್ಪಕೊಡುತಿತ್ತು. ಮಾತುಗಳೆಲ್ಲವೂ ಗೌರವದ ಎಲ್ಲೆಯಲ್ಲೇ ಇರುವುದನ್ನು ಕಡೆಯ ವರೆಗೂ ನಾನು ಗಮನಿಸಿದೆ. ಅವರ ಶೈಲಿಯು ಅವರೊಬ್ಬ ಘನ ಸಂಸ್ಕೃತ ವಿದ್ವಾಂಸರೆಂಬುದನ್ನು ಸಾರಿ ಹೇಳುತಿತ್ತು.
ಆ ಬಳಿಕ ನಾನು ಕೇಳಿದ ತಾಳಮದ್ದಳೆಗಳಲ್ಲಿ ಹೊಸ ಕಥಾಭಾಗ ನನಗೆ ಲಭಿಸಲಿಲ್ಲ; ಮೂರುಬಾರಿಯೂ ಅದೇ ಕಥಾಭಾಗ, ಅದೇ ರಾವಣನ ಪಾತ್ರ. ಆದರೆ
ಮೂರು ಬಾರಿಯೂ ನನಗೆ ನಿರಾಶೆ ಒದಗಲಿಲ್ಲ. ಎಲ್ಲಿಯೂ ಬೇಸರ ತರಿಸಲಿಲ್ಲ.
ಒಮ್ಮೆ ಕೇಳಿ ಮತ್ತೊಮ್ಮೆ ಕೇಳಿದಾಗಲೂ ಒಂದು ರೀತಿಯ ಸೊಬಗು ಎದ್ದು
ತೋರುತ್ತಿತ್ತು. ಚಿನ್ನದ ತಗಡಿಗೆ ಸುತ್ತಿಗೆಯಿಂದ ಹೆಚ್ಚು ಹೆಚ್ಚು ಬಡಿದರೆ ಹೆಚ್ಚು<noinclude></noinclude>
0evs73jbo3wl1x2vf1q0vo30q7bdfqm
316858
316857
2026-05-04T10:36:14Z
Hariprasad Shetty10
7490
316858
proofread-page
text/x-wiki
<noinclude><pagequality level="3" user="Shreelatha.Halemane" />{{Left|'''ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು - ನಾನು ಕಂಡಂತೆ'''}}
————————————————————————————————
{{Right|-ಬಿ. ಎಂ. ಇದಿನಬ್ಬ,}}</noinclude>ಶ್ರೀ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳ ಬಗ್ಗೆ ನಾನು ಪತ್ರಿಕೆಗಳಲ್ಲಿ ಅನೇಕ
ವರದಿಗಳನ್ನೂ, ವಿವರಗಳನ್ನೂ ಓದಿದ್ದೆ. ಅವರ ವಿದ್ವತ್ತಿನ ಬಗ್ಗೆ, ಅವರ ಅರ್ಥ
ಗಾರಿಕೆಯ ಬಗ್ಗೆಯ ಕೇಳಿದ್ದೆ. ಅವರನ್ನು ಪ್ರತ್ಯಕ್ಷವಾಗಿ ದೂರದಲ್ಲಿ ಕಂಡು,
ಅವರು ಶಾಸ್ತ್ರಿಗಳು ಎಂಬುದನ್ನು ಮಿತ್ರರು ಪರಿಚಯಿಸಿದ ನೆನಪೂ ನನಗಿದೆ.
ಆದರೆ ಮುಖಾಮುಖಿಯಾಗಿ ಭೇಟಿಯಾಗಿ, ಮಾತನಾಡಿಸುವ ಅವಕಾಶ ನನಗೆ
ದೊರೆತದ್ದು ಅವರು ತೀರಿಹೋಗುವುದಕ್ಕಿಂತ ಸುಮಾರು ಎಂಟು ವರ್ಷಗಳ ಹಿಂದೆ.
ನನ್ನ ಭಾಗ್ಯವೆಂಬಂತೆ ಮೂರು ತಾಳಮದ್ದಳೆಗಳಲ್ಲಿ ಅವರನ್ನು ನೋಡುವ,
ಕೇಳುವ ಅವಕಾಶ ದೊರೆಯಿತು. ಪ್ರಥಮವಾಗಿ ಮಂಗಳೂರಿನ ಪ್ರೌಢಶಾಲೆಯಲ್ಲಿ
ನಡೆಯುತ್ತಿದ್ದ ತಾಳಮದ್ದಳೆಗೆ ನಾನು ಪ್ರೇಕ್ಷಕನಾಗಿ ಹೋಗಿದ್ದ. ಅಂದಿನ ಕಥಾ
ಭಾಗದಲ್ಲಿ ಶ್ರೀ ಶಾಸ್ತ್ರಿಗಳು ರಾವಣನ ಪಾತ್ರವಹಿಸಿದ್ದರು.
ಆದಿಯಿಂದ ಅಂತ್ಯದವರೆಗೂ ಅವರ ಅರ್ಥವನ್ನು ಕೇಳಿ ನಾನು ಆನಂದಪುಲಕಿತನಾದೆ. ಅವರ ಅರ್ಥ ಹೇಳುವ ರೀತಿಯೇ ಒಂದು ವಿಶೇಷ. ಖುದ್ದು ರಾವಣನೇ ಅರ್ಥ ಹೇಳುತ್ತಿರವನೋ ಎಂಬಂಥ ರೀತಿ, ಕಂಚಿನ ಕಂಠ, ಶಬ್ದಗಳ ಜಾಲ ಗಂಭೀರವಾಗಿ ಹೊರಬರುತ್ತಿತ್ತು. ವಾಕ್ಯಗಳನ್ನು ಮುಗಿಸುವ ಧಾಟಿ ಅದೊಂದು ಅಪೂರ್ವ ಏರುಸ್ವರ ಬೇಕಾದಲ್ಲಿ ಏರುಸ್ವರ, ನಿಧಾನವಾಗಿ ಹೇಳಬೇಕಾದಲ್ಲಿ ನಿಧಾನಗತಿ, ಅವರ ಅರ್ಥಗಾರಿಕೆಗೆ ವಿಶೇಷ ರೀತಿಯ ಒಪ್ಪಕೊಡುತಿತ್ತು. ಮಾತುಗಳೆಲ್ಲವೂ ಗೌರವದ ಎಲ್ಲೆಯಲ್ಲೇ ಇರುವುದನ್ನು ಕಡೆಯ ವರೆಗೂ ನಾನು ಗಮನಿಸಿದೆ. ಅವರ ಶೈಲಿಯು ಅವರೊಬ್ಬ ಘನ ಸಂಸ್ಕೃತ ವಿದ್ವಾಂಸರೆಂಬುದನ್ನು ಸಾರಿ ಹೇಳುತಿತ್ತು.
ಆ ಬಳಿಕ ನಾನು ಕೇಳಿದ ತಾಳಮದ್ದಳೆಗಳಲ್ಲಿ ಹೊಸ ಕಥಾಭಾಗ ನನಗೆ ಲಭಿಸಲಿಲ್ಲ; ಮೂರುಬಾರಿಯೂ ಅದೇ ಕಥಾಭಾಗ, ಅದೇ ರಾವಣನ ಪಾತ್ರ. ಆದರೆ
ಮೂರು ಬಾರಿಯೂ ನನಗೆ ನಿರಾಶೆ ಒದಗಲಿಲ್ಲ. ಎಲ್ಲಿಯೂ ಬೇಸರ ತರಿಸಲಿಲ್ಲ.
ಒಮ್ಮೆ ಕೇಳಿ ಮತ್ತೊಮ್ಮೆ ಕೇಳಿದಾಗಲೂ ಒಂದು ರೀತಿಯ ಸೊಬಗು ಎದ್ದು
ತೋರುತ್ತಿತ್ತು. ಚಿನ್ನದ ತಗಡಿಗೆ ಸುತ್ತಿಗೆಯಿಂದ ಹೆಚ್ಚು ಹೆಚ್ಚು ಬಡಿದರೆ ಹೆಚ್ಚು
'''ದಪ್ಪಗಿನ ಅಕ್ಷರ'''<noinclude></noinclude>
j9tv5rf1qvlvgkmflyiaz63nzx702l7
316859
316858
2026-05-04T10:39:38Z
Hariprasad Shetty10
7490
316859
proofread-page
text/x-wiki
<noinclude><pagequality level="3" user="Shreelatha.Halemane" />{{Left|'''ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು - ನಾನು ಕಂಡಂತೆ'''}}
————————————————————————————————
{{Right|-ಬಿ. ಎಂ. ಇದಿನಬ್ಬ,}}</noinclude>ಶ್ರೀ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳ ಬಗ್ಗೆ ನಾನು ಪತ್ರಿಕೆಗಳಲ್ಲಿ ಅನೇಕ
ವರದಿಗಳನ್ನೂ, ವಿವರಗಳನ್ನೂ ಓದಿದ್ದೆ. ಅವರ ವಿದ್ವತ್ತಿನ ಬಗ್ಗೆ, ಅವರ ಅರ್ಥಗಾರಿಕೆಯ ಬಗ್ಗೆಯ ಕೇಳಿದ್ದೆ. ಅವರನ್ನು ಪ್ರತ್ಯಕ್ಷವಾಗಿ ದೂರದಲ್ಲಿ ಕಂಡು,ಅವರು ಶಾಸ್ತ್ರಿಗಳು ಎಂಬುದನ್ನು ಮಿತ್ರರು ಪರಿಚಯಿಸಿದ ನೆನಪೂ ನನಗಿದೆ.
ಆದರೆ ಮುಖಾಮುಖಿಯಾಗಿ ಭೇಟಿಯಾಗಿ, ಮಾತನಾಡಿಸುವ ಅವಕಾಶ ನನಗೆ
ದೊರೆತದ್ದು ಅವರು ತೀರಿಹೋಗುವುದಕ್ಕಿಂತ ಸುಮಾರು ಎಂಟು ವರ್ಷಗಳ ಹಿಂದೆ.
ನನ್ನ ಭಾಗ್ಯವೆಂಬಂತೆ ಮೂರು ತಾಳಮದ್ದಳೆಗಳಲ್ಲಿ ಅವರನ್ನು ನೋಡುವ,
ಕೇಳುವ ಅವಕಾಶ ದೊರೆಯಿತು. ಪ್ರಥಮವಾಗಿ ಮಂಗಳೂರಿನ ಪ್ರೌಢಶಾಲೆಯಲ್ಲಿ ನಡೆಯುತ್ತಿದ್ದ ತಾಳಮದ್ದಳೆಗೆ ನಾನು ಪ್ರೇಕ್ಷಕನಾಗಿ ಹೋಗಿದ್ದೆ. ಅಂದಿನ ಕಥಾಭಾಗದಲ್ಲಿ ಶ್ರೀ ಶಾಸ್ತ್ರಿಗಳು ರಾವಣನ ಪಾತ್ರವಹಿಸಿದ್ದರು. ಆದಿಯಿಂದ ಅಂತ್ಯದವರೆಗೂ ಅವರ ಅರ್ಥವನ್ನು ಕೇಳಿ ನಾನು ಆನಂದಪುಲಕಿತನಾದೆ. ಅವರ ಅರ್ಥ ಹೇಳುವ ರೀತಿಯೇ ಒಂದು ವಿಶೇಷ. ಖುದ್ದು ರಾವಣನೇ ಅರ್ಥ ಹೇಳುತ್ತಿರವನೋ ಎಂಬಂಥ ರೀತಿ, ಕಂಚಿನ ಕಂಠ, ಶಬ್ದಗಳ ಜಾಲ ಗಂಭೀರವಾಗಿ ಹೊರಬರುತ್ತಿತ್ತು. ವಾಕ್ಯಗಳನ್ನು ಮುಗಿಸುವ ಧಾಟಿ ಅದೊಂದು ಅಪೂರ್ವ ಏರುಸ್ವರ ಬೇಕಾದಲ್ಲಿ ಏರುಸ್ವರ, ನಿಧಾನವಾಗಿ ಹೇಳಬೇಕಾದಲ್ಲಿ ನಿಧಾನಗತಿ, ಅವರ ಅರ್ಥಗಾರಿಕೆಗೆ ವಿಶೇಷ ರೀತಿಯ ಒಪ್ಪಕೊಡುತಿತ್ತು. ಮಾತುಗಳೆಲ್ಲವೂ ಗೌರವದ ಎಲ್ಲೆಯಲ್ಲೇ ಇರುವುದನ್ನು ಕಡೆಯ ವರೆಗೂ ನಾನು ಗಮನಿಸಿದೆ. ಅವರ ಶೈಲಿಯು ಅವರೊಬ್ಬ ಘನ ಸಂಸ್ಕೃತ ವಿದ್ವಾಂಸರೆಂಬುದನ್ನು ಸಾರಿ ಹೇಳುತಿತ್ತು.
ಆ ಬಳಿಕ ನಾನು ಕೇಳಿದ ತಾಳಮದ್ದಳೆಗಳಲ್ಲಿ ಹೊಸ ಕಥಾಭಾಗ ನನಗೆ ಲಭಿಸಲಿಲ್ಲ; ಮೂರುಬಾರಿಯೂ ಅದೇ ಕಥಾಭಾಗ, ಅದೇ ರಾವಣನ ಪಾತ್ರ. ಆದರೆ ಮೂರು ಬಾರಿಯೂ ನನಗೆ ನಿರಾಶೆ ಒದಗಲಿಲ್ಲ. ಎಲ್ಲಿಯೂ ಬೇಸರ ತರಿಸಲಿಲ್ಲ. ಒಮ್ಮೆ ಕೇಳಿ ಮತ್ತೊಮ್ಮೆ ಕೇಳಿದಾಗಲೂ ಒಂದು ರೀತಿಯ ಸೊಬಗು ಎದ್ದು ತೋರುತ್ತಿತ್ತು. ಚಿನ್ನದ ತಗಡಿಗೆ ಸುತ್ತಿಗೆಯಿಂದ ಹೆಚ್ಚು ಹೆಚ್ಚು ಬಡಿದರೆ ಹೆಚ್ಚು<noinclude></noinclude>
bhdr58nkg3qtsz43radjiz4ry8fe15n
316860
316859
2026-05-04T10:39:50Z
Hariprasad Shetty10
7490
/* Validated */
316860
proofread-page
text/x-wiki
<noinclude><pagequality level="4" user="Hariprasad Shetty10" />{{Left|'''ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು - ನಾನು ಕಂಡಂತೆ'''}}
————————————————————————————————
{{Right|-ಬಿ. ಎಂ. ಇದಿನಬ್ಬ,}}</noinclude>ಶ್ರೀ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳ ಬಗ್ಗೆ ನಾನು ಪತ್ರಿಕೆಗಳಲ್ಲಿ ಅನೇಕ
ವರದಿಗಳನ್ನೂ, ವಿವರಗಳನ್ನೂ ಓದಿದ್ದೆ. ಅವರ ವಿದ್ವತ್ತಿನ ಬಗ್ಗೆ, ಅವರ ಅರ್ಥಗಾರಿಕೆಯ ಬಗ್ಗೆಯ ಕೇಳಿದ್ದೆ. ಅವರನ್ನು ಪ್ರತ್ಯಕ್ಷವಾಗಿ ದೂರದಲ್ಲಿ ಕಂಡು,ಅವರು ಶಾಸ್ತ್ರಿಗಳು ಎಂಬುದನ್ನು ಮಿತ್ರರು ಪರಿಚಯಿಸಿದ ನೆನಪೂ ನನಗಿದೆ.
ಆದರೆ ಮುಖಾಮುಖಿಯಾಗಿ ಭೇಟಿಯಾಗಿ, ಮಾತನಾಡಿಸುವ ಅವಕಾಶ ನನಗೆ
ದೊರೆತದ್ದು ಅವರು ತೀರಿಹೋಗುವುದಕ್ಕಿಂತ ಸುಮಾರು ಎಂಟು ವರ್ಷಗಳ ಹಿಂದೆ.
ನನ್ನ ಭಾಗ್ಯವೆಂಬಂತೆ ಮೂರು ತಾಳಮದ್ದಳೆಗಳಲ್ಲಿ ಅವರನ್ನು ನೋಡುವ,
ಕೇಳುವ ಅವಕಾಶ ದೊರೆಯಿತು. ಪ್ರಥಮವಾಗಿ ಮಂಗಳೂರಿನ ಪ್ರೌಢಶಾಲೆಯಲ್ಲಿ ನಡೆಯುತ್ತಿದ್ದ ತಾಳಮದ್ದಳೆಗೆ ನಾನು ಪ್ರೇಕ್ಷಕನಾಗಿ ಹೋಗಿದ್ದೆ. ಅಂದಿನ ಕಥಾಭಾಗದಲ್ಲಿ ಶ್ರೀ ಶಾಸ್ತ್ರಿಗಳು ರಾವಣನ ಪಾತ್ರವಹಿಸಿದ್ದರು. ಆದಿಯಿಂದ ಅಂತ್ಯದವರೆಗೂ ಅವರ ಅರ್ಥವನ್ನು ಕೇಳಿ ನಾನು ಆನಂದಪುಲಕಿತನಾದೆ. ಅವರ ಅರ್ಥ ಹೇಳುವ ರೀತಿಯೇ ಒಂದು ವಿಶೇಷ. ಖುದ್ದು ರಾವಣನೇ ಅರ್ಥ ಹೇಳುತ್ತಿರವನೋ ಎಂಬಂಥ ರೀತಿ, ಕಂಚಿನ ಕಂಠ, ಶಬ್ದಗಳ ಜಾಲ ಗಂಭೀರವಾಗಿ ಹೊರಬರುತ್ತಿತ್ತು. ವಾಕ್ಯಗಳನ್ನು ಮುಗಿಸುವ ಧಾಟಿ ಅದೊಂದು ಅಪೂರ್ವ ಏರುಸ್ವರ ಬೇಕಾದಲ್ಲಿ ಏರುಸ್ವರ, ನಿಧಾನವಾಗಿ ಹೇಳಬೇಕಾದಲ್ಲಿ ನಿಧಾನಗತಿ, ಅವರ ಅರ್ಥಗಾರಿಕೆಗೆ ವಿಶೇಷ ರೀತಿಯ ಒಪ್ಪಕೊಡುತಿತ್ತು. ಮಾತುಗಳೆಲ್ಲವೂ ಗೌರವದ ಎಲ್ಲೆಯಲ್ಲೇ ಇರುವುದನ್ನು ಕಡೆಯ ವರೆಗೂ ನಾನು ಗಮನಿಸಿದೆ. ಅವರ ಶೈಲಿಯು ಅವರೊಬ್ಬ ಘನ ಸಂಸ್ಕೃತ ವಿದ್ವಾಂಸರೆಂಬುದನ್ನು ಸಾರಿ ಹೇಳುತಿತ್ತು.
ಆ ಬಳಿಕ ನಾನು ಕೇಳಿದ ತಾಳಮದ್ದಳೆಗಳಲ್ಲಿ ಹೊಸ ಕಥಾಭಾಗ ನನಗೆ ಲಭಿಸಲಿಲ್ಲ; ಮೂರುಬಾರಿಯೂ ಅದೇ ಕಥಾಭಾಗ, ಅದೇ ರಾವಣನ ಪಾತ್ರ. ಆದರೆ ಮೂರು ಬಾರಿಯೂ ನನಗೆ ನಿರಾಶೆ ಒದಗಲಿಲ್ಲ. ಎಲ್ಲಿಯೂ ಬೇಸರ ತರಿಸಲಿಲ್ಲ. ಒಮ್ಮೆ ಕೇಳಿ ಮತ್ತೊಮ್ಮೆ ಕೇಳಿದಾಗಲೂ ಒಂದು ರೀತಿಯ ಸೊಬಗು ಎದ್ದು ತೋರುತ್ತಿತ್ತು. ಚಿನ್ನದ ತಗಡಿಗೆ ಸುತ್ತಿಗೆಯಿಂದ ಹೆಚ್ಚು ಹೆಚ್ಚು ಬಡಿದರೆ ಹೆಚ್ಚು<noinclude></noinclude>
37xxz3kp78hiwjspbwrv25k4597d460
ಪುಟ:ಯಕ್ಷಗಾನ ಮಕರಂದ.pdf/೧೮೩
104
100102
316861
301168
2026-05-04T10:44:00Z
Hariprasad Shetty10
7490
316861
proofread-page
text/x-wiki
<noinclude><pagequality level="3" user="Shreelatha.Halemane" />{{Left|''ಶಾಸ್ತ್ರಿಗಳ ಅರ್ಥಗಾರಿಕೆ'''}}
———————————————————————————————
{{Right|-ತಾಳ್ತಜೆ ಕೃಷ್ಣ ಭಟ್ಟ.}}</noinclude>ನನ್ನ ನೆನಪಿನಂತೆ ಸುಮಾರು ಐದು ಐದೂವರೆ ಅಡಿ ಎತ್ತರದ ದೇಹ,
ಮೈಬಣ್ಣ ಬಿಳುಪು, ಪ್ರಮಾಣಬದ್ಧವಾದ ಮೈಕಟ್ಟು, ಸರಳವಾದ ಬಿಳಿ ಉಡುಪು, ಕಿವಿಗಳ ಮೇಲ್ಗಡೆ ಸಾಧಾರಣ ಒಂದು ಒಂದೂವರೆ ಇಂಚಿನಷ್ಟು ಎತ್ತರದ ವರೆಗೆ ತಲೆಯ ಹಿಂಭಾಗದ ತನಕದ ಕೂದಲುಗಳನ್ನು ಕಟ್ಟಿದ ಜುಟ್ಟು, ಹಣೆಯ ಭಾಗ ಮುಂದುವರಿದು ನೆತ್ತಿಯ ಹಿಂದುಗಡೆಯ ವರೆಗೆ ಬಕ್ಕತಲೆ (ಸಾಣೆ ತಲೆ), ಗಡ್ಡಮೀಸೆಗಳನ್ನು ಬೋಳಿಸಿಕೊಂಡಿರುವುದರಿಂದ, ಹುಬ್ಬುಗಳನ್ನು ಬಿಟ್ಟರೆ, ಮುಖ, ಹಣೆ, ತಲೆ ಒಂದುಗೂಡಿ ಪಳಪಳ ಹೊಳೆಯುವ ಬಿಳಿಯ ಕನ್ನಡಿ ಎನ್ನಬಹುದು, ಆಂಡಯ್ಯ
ಕವಿಯೆಂದಂತೆ “ಉಜ್ಜಳಿಪ ಮೊಗಂ ಕನ್ನಡಿ” ಇದು ಅವನ ಸೊಬಗಿನಳ್ತರ”. ಇವು ಪೊಳಲಿ ಶಾಸ್ತ್ರಿಗಳ ರೂಪಾಲಂಕಾರಗಳು, ನೂರಾರು ಜನರು ಕೂಡಿದ ಸಭೆಯಲ್ಲಿ ಎದ್ದು ಕಾಣುವ ವ್ಯಕ್ತಿತ್ವವು ಶಾಸ್ತ್ರಿಗಳಿಗಿತ್ತು.
ಹಿಂದೆ ಯಕ್ಷಗಾನದ ಅರ್ಥಗಾರಿಕೆಯು ಈಗಿನಂತೆ ಸುಧಾರಿತವಾಗಿಲಿಲ್ಲ. ಬಲ್ಲಿ
ರೇನಯ್ಯ', 'ಕೇಳಿದ್ರೇನಯ್ಯ' ಮುಂತಾಗಿ ಅರ್ಥಧಾರಿಯು ಭಾಗವತನೊಡನೆ
ಮಾತಾಡುವ ಕ್ರಮವಿತ್ತು. ಇದಕ್ಕೆ ಕಾರಣವೆಂದರೆ, ಆಗ ವಿದ್ಯಾವಂತರಾದವರು
ವಿಶೇಷವಾಗಿ ಯಕ್ಷಗಾನಕ್ಕೆ ಪ್ರವೇಶಿಸುತ್ತಿರಲಿಲ್ಲ. ವಿದ್ವಾಂಸರು ಪ್ರಾಚೀನವಾದ
ಈ ಕಲೆಯ ಸೇವೆಯಲ್ಲಿ ತೊಡಗಿ ಅದರಲ್ಲೊಂದು ಸುಧಾರಿತ ಕ್ರಮವನ್ನು ಅಳವಡಿಸಿದರು. ಆಗ ಯಕ್ಷಗಾನಕೂಟಕ್ಕೆ ಹೊಸ ಕಳೆ ಬಂತು. ಒಮ್ಮೆ ದಿ| ನಾರಾಯಣ ಕಿಲ್ಲೆಯವರು ಹೇಳಿದ್ದರು- “ನಾವು ಬಹಳ ಶ್ರಮಪಟ್ಟು ಈ ತಾಳಮದ್ದಳೆಯಲ್ಲಿ ಅಂದ ಚಂದವನ್ನುಂಟುಮಾಡಲು, ಸುಧಾರಣೆಯನ್ನು ಬೆಳೆಸಲು ಯತ್ನಿಸಿದ್ದೇವೆ. ಆದರೆ ಯಕ್ಷಗಾನದ ನಿಜವಾದ ಸುಂದರ ಮಾರ್ಗವು ಯಾವುದು, ಎಂಬ ನಿರ್ಣಯಕ್ಕೆ ಮುಟ್ಟಲಾಗಲಿಲ್ಲ. ಆಗ ನಮಗೆ ಒಬ್ಬರು ನಿಜವಾದ ಮಾರ್ಗವನ್ನು ತೋರಿಸುವ ವಿದ್ವಾಂಸರು ದೊರಕಿದರು. ನಮ್ಮ ದಾರಿಯೆಂಬ ಬಂಗಾರದ ಹೂವಿಗೆ ಅವರ ಶೈಲಿ ಪರಿಮಳ ತಂದಿತು” ಎಂದು. ದಿ| ಕಿಲ್ಲೆಯವರೆಂದ ಆ “ಅವರೇ? ಶ್ರೀ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು,<noinclude></noinclude>
cvgp34ztxr1u52uqrhjyojim73hjlfk
316862
316861
2026-05-04T10:44:09Z
Hariprasad Shetty10
7490
/* Validated */
316862
proofread-page
text/x-wiki
<noinclude><pagequality level="4" user="Hariprasad Shetty10" />{{Left|''ಶಾಸ್ತ್ರಿಗಳ ಅರ್ಥಗಾರಿಕೆ'''}}
———————————————————————————————
{{Right|-ತಾಳ್ತಜೆ ಕೃಷ್ಣ ಭಟ್ಟ.}}</noinclude>ನನ್ನ ನೆನಪಿನಂತೆ ಸುಮಾರು ಐದು ಐದೂವರೆ ಅಡಿ ಎತ್ತರದ ದೇಹ,
ಮೈಬಣ್ಣ ಬಿಳುಪು, ಪ್ರಮಾಣಬದ್ಧವಾದ ಮೈಕಟ್ಟು, ಸರಳವಾದ ಬಿಳಿ ಉಡುಪು, ಕಿವಿಗಳ ಮೇಲ್ಗಡೆ ಸಾಧಾರಣ ಒಂದು ಒಂದೂವರೆ ಇಂಚಿನಷ್ಟು ಎತ್ತರದ ವರೆಗೆ ತಲೆಯ ಹಿಂಭಾಗದ ತನಕದ ಕೂದಲುಗಳನ್ನು ಕಟ್ಟಿದ ಜುಟ್ಟು, ಹಣೆಯ ಭಾಗ ಮುಂದುವರಿದು ನೆತ್ತಿಯ ಹಿಂದುಗಡೆಯ ವರೆಗೆ ಬಕ್ಕತಲೆ (ಸಾಣೆ ತಲೆ), ಗಡ್ಡಮೀಸೆಗಳನ್ನು ಬೋಳಿಸಿಕೊಂಡಿರುವುದರಿಂದ, ಹುಬ್ಬುಗಳನ್ನು ಬಿಟ್ಟರೆ, ಮುಖ, ಹಣೆ, ತಲೆ ಒಂದುಗೂಡಿ ಪಳಪಳ ಹೊಳೆಯುವ ಬಿಳಿಯ ಕನ್ನಡಿ ಎನ್ನಬಹುದು, ಆಂಡಯ್ಯ
ಕವಿಯೆಂದಂತೆ “ಉಜ್ಜಳಿಪ ಮೊಗಂ ಕನ್ನಡಿ” ಇದು ಅವನ ಸೊಬಗಿನಳ್ತರ”. ಇವು ಪೊಳಲಿ ಶಾಸ್ತ್ರಿಗಳ ರೂಪಾಲಂಕಾರಗಳು, ನೂರಾರು ಜನರು ಕೂಡಿದ ಸಭೆಯಲ್ಲಿ ಎದ್ದು ಕಾಣುವ ವ್ಯಕ್ತಿತ್ವವು ಶಾಸ್ತ್ರಿಗಳಿಗಿತ್ತು.
ಹಿಂದೆ ಯಕ್ಷಗಾನದ ಅರ್ಥಗಾರಿಕೆಯು ಈಗಿನಂತೆ ಸುಧಾರಿತವಾಗಿಲಿಲ್ಲ. ಬಲ್ಲಿ
ರೇನಯ್ಯ', 'ಕೇಳಿದ್ರೇನಯ್ಯ' ಮುಂತಾಗಿ ಅರ್ಥಧಾರಿಯು ಭಾಗವತನೊಡನೆ
ಮಾತಾಡುವ ಕ್ರಮವಿತ್ತು. ಇದಕ್ಕೆ ಕಾರಣವೆಂದರೆ, ಆಗ ವಿದ್ಯಾವಂತರಾದವರು
ವಿಶೇಷವಾಗಿ ಯಕ್ಷಗಾನಕ್ಕೆ ಪ್ರವೇಶಿಸುತ್ತಿರಲಿಲ್ಲ. ವಿದ್ವಾಂಸರು ಪ್ರಾಚೀನವಾದ
ಈ ಕಲೆಯ ಸೇವೆಯಲ್ಲಿ ತೊಡಗಿ ಅದರಲ್ಲೊಂದು ಸುಧಾರಿತ ಕ್ರಮವನ್ನು ಅಳವಡಿಸಿದರು. ಆಗ ಯಕ್ಷಗಾನಕೂಟಕ್ಕೆ ಹೊಸ ಕಳೆ ಬಂತು. ಒಮ್ಮೆ ದಿ| ನಾರಾಯಣ ಕಿಲ್ಲೆಯವರು ಹೇಳಿದ್ದರು- “ನಾವು ಬಹಳ ಶ್ರಮಪಟ್ಟು ಈ ತಾಳಮದ್ದಳೆಯಲ್ಲಿ ಅಂದ ಚಂದವನ್ನುಂಟುಮಾಡಲು, ಸುಧಾರಣೆಯನ್ನು ಬೆಳೆಸಲು ಯತ್ನಿಸಿದ್ದೇವೆ. ಆದರೆ ಯಕ್ಷಗಾನದ ನಿಜವಾದ ಸುಂದರ ಮಾರ್ಗವು ಯಾವುದು, ಎಂಬ ನಿರ್ಣಯಕ್ಕೆ ಮುಟ್ಟಲಾಗಲಿಲ್ಲ. ಆಗ ನಮಗೆ ಒಬ್ಬರು ನಿಜವಾದ ಮಾರ್ಗವನ್ನು ತೋರಿಸುವ ವಿದ್ವಾಂಸರು ದೊರಕಿದರು. ನಮ್ಮ ದಾರಿಯೆಂಬ ಬಂಗಾರದ ಹೂವಿಗೆ ಅವರ ಶೈಲಿ ಪರಿಮಳ ತಂದಿತು” ಎಂದು. ದಿ| ಕಿಲ್ಲೆಯವರೆಂದ ಆ “ಅವರೇ? ಶ್ರೀ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು,<noinclude></noinclude>
0opurpkke3bu09k40faewu1qgr75dxp
ಪುಟ:ಯಕ್ಷಗಾನ ಮಕರಂದ.pdf/೧೮೪
104
100103
316863
301171
2026-05-04T10:45:32Z
Hariprasad Shetty10
7490
316863
proofread-page
text/x-wiki
<noinclude><pagequality level="3" user="Shreelatha.Halemane" />{{Left|158}}</noinclude>
ಶಾಸ್ತ್ರಿಗಳು ತಾಳಮದ್ದಳೆಯ ಕೂಟದಲ್ಲಿ ನಾಯಕ ಇಲ್ಲವೆ ಪ್ರತಿನಾಯಕನ
ಪಾತ್ರದಲ್ಲಿ ಮೃದುಮಧುರ ಗಂಭೀರಧ್ವನಿಯಿಂದ ಸನ್ನಿವೇಶಕ್ಕೆ ಸರಿಯಾದ ರಸ
ದ್ಯೋತಕ ವಾಗ್ವೈಖರಿಯಿಂದ ಮಾತಾಡುವವರು. ಅವರ ವಾಕ್ಯಗಳಲ್ಲಿ ಸಂಸ್ಕೃತ
ಪದಪುಂಜಗಳು ದುಮುದುಮಿಸುವೆಡೆಯಲ್ಲಿ, ತಿಳಿಗನ್ನಡದ ದೇಸಿಯ ಪದಗಳೂ ಒಡ
ಗೂಡಿ ಬರುತ್ತಿದ್ದುವು. ಆದ್ದರಿಂದ ಅವರು ಮಾತಾಡುವಾಗ ಜನರೆಲ್ಲರೂ ಮಂತ್ರ
ಮುಗ್ಧರಾಗಿ ಕೇಳುತ್ತಿದ್ದರು. ರಾಮಾಯಣ ಕಥಾಭಾಗದಲ್ಲಿ ಶಾಸ್ತ್ರಿಗಳು ರಾವಣನ
ಪಾತ್ರವಹಿಸುವುದೇ ರೂಢಿ. ಇನ್ನು ಭೀಷ್ಮಾರ್ಜುನ ಕಾಳಗದಲ್ಲಿ ಭೀಷ್ಮ ಇಲ್ಲವೆ
ಕೃಷ್ಣ, ಕರ್ಣಪರ್ವದಲ್ಲಿ ಶಲ್ಯ, ಕರ್ಣ; ರಾಜಸೂಯ ಪ್ರಸಂಗವಾದರೆ ಮಾಗಧ
ಸುಭದ್ರಾಪರಿಣಯದಲ್ಲಿ ಬಲರಾಮ, ಹೀಗೆ ಅವರಿಗೆ ಒಪ್ಪುವ ಪಾತ್ರಗಳು. ಅವರಿಗೆ
ವೀರರಸವು ಒಪ್ಪುವ ರಸ, ಅದ್ಭುತ, ಭಯಾನಕ ರಸಗಳೂ ವೀರರಸದ ದಾರಿಯವು
ಗಳೇ ಆಗಿ ಕೊಂಚಕೊಂಚ ಹೊಂದಿಕೊಳ್ಳುತ್ತವೆ. ಹಾಸ್ಯರಸದ್ಯೋತಕದಲ್ಲಿ
ಅವರು ಕೈಯಾಡಿಸುವವರೇ. ಆದರೆ ಆ ಹಾಸ್ಯವೂ ಕೊಂಚ ಗಂಭೀರತರದ್ದೇ ಇರು
ತಿತ್ತು. ಹಿಂದಿನ ಕಾಲದ ಅರ್ಥಧಾರಿಗಳು ಭಾಗವತರಲ್ಲಿ ಮಾತಾಡುವುದು ಹೇಗೆ
ಕ್ರಮವೆಂಬಂತಿದ್ದು ತೀರಾ ಅಸ್ವಾಭಾವಿಕವಾಗಿ, ಹಾಗೆಯೇ ಸುಧಾರಿತ ಅರ್ಥ
ಧಾರಿಗಳಲ್ಲಿ ಅನೇಕರಲ್ಲಿ 'ಸ್ವಗತ' ಭಾಷಣದ ಅತಿರೇಕವು ಏರಿತ್ತು. ಅರ್ಥಧಾರಿಯು
ಆಚರಿಸಲೇಬೇಕಾದ ಕ್ರಮ ಎಂಬಲ್ಲಿ ವರೆಗೆ ಅದು ತಲಪಿತ್ತು. ಆ ತರದ ಸ್ವಗತವನ್ನು
ಬಲವಾಗಿ ವಿರೋಧಿಸಿದವರಲ್ಲಿ ಶಾಸ್ತ್ರಿಗಳೊಬ್ಬರು. ಸ್ವಗತವು ಸಂದರ್ಭೋಚಿತವಾಗಿ
ಆ ಕಥೆಯ ಆಂದಿನ ಭಾಗಕ್ಕೆ ಹಿಂದಿನ ಘಟನೆಗಳನ್ನು ಪೋಣಿಸುವಂತಿರಬೇಕು; ಅದೂ
ಸಾಧ್ಯವಿದ್ದರೆ ಸಂಭಾಷಣಾರೂಪದಲ್ಲಿ ತರಬೇಕು, ಭಾಷಣರೂಪದಲ್ಲಲ್ಲ ಎಂದವರು
ಹೇಳುತ್ತಿದ್ದರು. ಇದಲ್ಲದೆ ಇಬ್ಬರು ವ್ಯಕ್ತಿಗಳು ಪರಸ್ಪರ ಮಾತಾಡುವಾಗ ಮಧ್ಯ
ದಲ್ಲಿ ಕೆಲವೆಡೆ ಸ್ವಗತವು ಬರುವುದಿದೆ. ಇದನ್ನು ಹೆಚ್ಚಾಗಿ ಸಂಸ್ಕೃತ, ಹಾಗೂ
ಹಳೆಯ ನಾಟಕಗಳಲ್ಲಿ ಕಾಣುತ್ತೇವೆ. ಪ್ರಸಿದ್ಧ ನಾಟಕಕಾರರಾದ ಸ್ವ- ದ್ವಿಜೇಂದ್ರ
ಲಾಲ ರಾಯರವರು ಇಂತಹ ಸ್ವಗತಗಳು ತೀರಾ ಅಸ್ವಾಭಾವಿಕ ಎಂದಿದ್ದಾರೆ. ಪೊಳಲಿ
ಯವರೂ ಇದನ್ನೇ ಮೆಚ್ಚಿಕೊಂಡಂತೆ ತೋರುತ್ತದೆ. ಅವರು ಸಂಭಾಷಣೆಯಿಂದಲೇ
ಮನೋಗತವನ್ನು ವ್ಯಕ್ತಪಡಿಸುತ್ತಿದ್ದರೇ ಹೊರತು ಸ್ವಗತದಿಂದಲ್ಲ.
ಉದಾ:- ಸೇತುಬಂಧನ ಪ್ರಸಂಗ
“ಓಲಗದೊಳಿರುವ ದಶಕಂಠನಂಭಿಗೆ ಮಣಿದು........ಹೇಳಿದರು ದನುಜೇಂದ್ರಗೆ....”
ಈ ಪದ್ಯವನ್ನು ಹಾಡಿದೊಡನೆ ಹೆಚ್ಚಾಗಿ ರಾವಣನ ಸ್ವಗತವು ಪ್ರಾರಂಭವಾಗು
ಇದೆ. ಆದರೆ ಕಥಾ ಸನ್ನಿವೇಶದಂತೆ ರಾವಣನು ಓಲಗದಲ್ಲಿದ್ದ. ಅಲ್ಲಿಗೆ ಗಡಿ
ರಕ್ಷಕ ಭಟರು ಹೋಗಿ ರಾಮನ ಪಾಳೆಯವನ್ನು ವರ್ಣಿಸುತ್ತಾರೆ. ಮುಂದಿನ ಪದ್ಯವೂ
ಅವರಿಗೇ ಇಲ್ಲಿ ರಾವಣನ ಸ್ವಗತವೆಲ್ಲ ಮುಗಿದ ಮೇಲೆ ಮತ್ತೆ ಈ ಭಟರ ಮಾತು<noinclude></noinclude>
gq86q0lmuqp0un9tb40k3chhxcjnft2
316864
316863
2026-05-04T10:48:23Z
Hariprasad Shetty10
7490
316864
proofread-page
text/x-wiki
<noinclude><pagequality level="3" user="Shreelatha.Halemane" />{{Left|158}}</noinclude>ಶಾಸ್ತ್ರಿಗಳು ತಾಳಮದ್ದಳೆಯ ಕೂಟದಲ್ಲಿ ನಾಯಕ ಇಲ್ಲವೆ ಪ್ರತಿನಾಯಕನ
ಪಾತ್ರದಲ್ಲಿ ಮೃದುಮಧುರ ಗಂಭೀರಧ್ವನಿಯಿಂದ ಸನ್ನಿವೇಶಕ್ಕೆ ಸರಿಯಾದ ರಸ
ದ್ಯೋತಕ ವಾಗ್ವೈಖರಿಯಿಂದ ಮಾತಾಡುವವರು. ಅವರ ವಾಕ್ಯಗಳಲ್ಲಿ ಸಂಸ್ಕೃತ ಪದಪುಂಜಗಳು ದುಮುದುಮಿಸುವೆಡೆಯಲ್ಲಿ, ತಿಳಿಗನ್ನಡದ ದೇಸಿಯ ಪದಗಳೂ ಒಡಗೂಡಿ ಬರುತ್ತಿದ್ದುವು. ಆದ್ದರಿಂದ ಅವರು ಮಾತಾಡುವಾಗ ಜನರೆಲ್ಲರೂ ಮಂತ್ರ ಮುಗ್ಧರಾಗಿ ಕೇಳುತ್ತಿದ್ದರು. ರಾಮಾಯಣ ಕಥಾಭಾಗದಲ್ಲಿ ಶಾಸ್ತ್ರಿಗಳು ರಾವಣನ ಪಾತ್ರವಹಿಸುವುದೇ ರೂಢಿ. ಇನ್ನು ಭೀಷ್ಮಾರ್ಜುನ ಕಾಳಗದಲ್ಲಿ ಭೀಷ್ಮ ಇಲ್ಲವೆ ಕೃಷ್ಣ, ಕರ್ಣಪರ್ವದಲ್ಲಿ ಶಲ್ಯ, ಕರ್ಣ; ರಾಜಸೂಯ ಪ್ರಸಂಗವಾದರೆ ಮಾಗಧ ಸುಭದ್ರಾಪರಿಣಯದಲ್ಲಿ ಬಲರಾಮ, ಹೀಗೆ ಅವರಿಗೆ ಒಪ್ಪುವ ಪಾತ್ರಗಳು. ಅವರಿಗೆ ವೀರರಸವು ಒಪ್ಪುವ ರಸ, ಅದ್ಭುತ, ಭಯಾನಕ ರಸಗಳೂ ವೀರರಸದ ದಾರಿಯವುಗಳೇ ಆಗಿ ಕೊಂಚಕೊಂಚ ಹೊಂದಿಕೊಳ್ಳುತ್ತವೆ. ಹಾಸ್ಯರಸದ್ಯೋತಕದಲ್ಲಿ
ಅವರು ಕೈಯಾಡಿಸುವವರೇ. ಆದರೆ ಆ ಹಾಸ್ಯವೂ ಕೊಂಚ ಗಂಭೀರತರದ್ದೇ ಇರುತಿತ್ತು. ಹಿಂದಿನ ಕಾಲದ ಅರ್ಥಧಾರಿಗಳು ಭಾಗವತರಲ್ಲಿ ಮಾತಾಡುವುದು ಹೇಗೆ ಕ್ರಮವೆಂಬಂತಿದ್ದು ತೀರಾ ಅಸ್ವಾಭಾವಿಕವಾಗಿ, ಹಾಗೆಯೇ ಸುಧಾರಿತ ಅರ್ಥಧಾರಿಗಳಲ್ಲಿ ಅನೇಕರಲ್ಲಿ 'ಸ್ವಗತ' ಭಾಷಣದ ಅತಿರೇಕವು ಏರಿತ್ತು. ಅರ್ಥಧಾರಿಯು ಆಚರಿಸಲೇಬೇಕಾದ ಕ್ರಮ ಎಂಬಲ್ಲಿ ವರೆಗೆ ಅದು ತಲಪಿತ್ತು. ಆ ತರದ ಸ್ವಗತವನ್ನು ಬಲವಾಗಿ ವಿರೋಧಿಸಿದವರಲ್ಲಿ ಶಾಸ್ತ್ರಿಗಳೊಬ್ಬರು. ಸ್ವಗತವು ಸಂದರ್ಭೋಚಿತವಾಗಿ ಆ ಕಥೆಯ ಆಂದಿನ ಭಾಗಕ್ಕೆ ಹಿಂದಿನ ಘಟನೆಗಳನ್ನು ಪೋಣಿಸುವಂತಿರಬೇಕು; ಅದೂ ಸಾಧ್ಯವಿದ್ದರೆ ಸಂಭಾಷಣಾರೂಪದಲ್ಲಿ ತರಬೇಕು, ಭಾಷಣರೂಪದಲ್ಲಲ್ಲ ಎಂದವರು
ಹೇಳುತ್ತಿದ್ದರು. ಇದಲ್ಲದೆ ಇಬ್ಬರು ವ್ಯಕ್ತಿಗಳು ಪರಸ್ಪರ ಮಾತಾಡುವಾಗ ಮಧ್ಯ
ದಲ್ಲಿ ಕೆಲವೆಡೆ ಸ್ವಗತವು ಬರುವುದಿದೆ. ಇದನ್ನು ಹೆಚ್ಚಾಗಿ ಸಂಸ್ಕೃತ, ಹಾಗೂ
ಹಳೆಯ ನಾಟಕಗಳಲ್ಲಿ ಕಾಣುತ್ತೇವೆ. ಪ್ರಸಿದ್ಧ ನಾಟಕಕಾರರಾದ ಸ್ವ- ದ್ವಿಜೇಂದ್ರ
ಲಾಲ ರಾಯರವರು ಇಂತಹ ಸ್ವಗತಗಳು ತೀರಾ ಅಸ್ವಾಭಾವಿಕ ಎಂದಿದ್ದಾರೆ. ಪೊಳಲಿಯವರೂ ಇದನ್ನೇ ಮೆಚ್ಚಿಕೊಂಡಂತೆ ತೋರುತ್ತದೆ. ಅವರು ಸಂಭಾಷಣೆಯಿಂದಲೇ ಮನೋಗತವನ್ನು ವ್ಯಕ್ತಪಡಿಸುತ್ತಿದ್ದರೇ ಹೊರತು ಸ್ವಗತದಿಂದಲ್ಲ.
ಉದಾ:- ಸೇತುಬಂಧನ ಪ್ರಸಂಗ____
“ಓಲಗದೊಳಿರುವ ದಶಕಂಠನಂಭಿಗೆ ಮಣಿದು........ಹೇಳಿದರು ದನುಜೇಂದ್ರಗೆ....”
ಈ ಪದ್ಯವನ್ನು ಹಾಡಿದೊಡನೆ ಹೆಚ್ಚಾಗಿ ರಾವಣನ ಸ್ವಗತವು ಪ್ರಾರಂಭವಾಗು
ಇದೆ. ಆದರೆ ಕಥಾ ಸನ್ನಿವೇಶದಂತೆ ರಾವಣನು ಓಲಗದಲ್ಲಿದ್ದ. ಅಲ್ಲಿಗೆ ಗಡಿ
ರಕ್ಷಕ ಭಟರು ಹೋಗಿ ರಾಮನ ಪಾಳೆಯವನ್ನು ವರ್ಣಿಸುತ್ತಾರೆ. ಮುಂದಿನ ಪದ್ಯವೂ ಅವರಿಗೇ ಇಲ್ಲಿ ರಾವಣನ ಸ್ವಗತವೆಲ್ಲ ಮುಗಿದ ಮೇಲೆ ಮತ್ತೆ ಈ ಭಟರ ಮಾತು<noinclude></noinclude>
lfja8u46pvoxfnlei5sk85hof1nm1f3
316865
316864
2026-05-04T10:48:34Z
Hariprasad Shetty10
7490
/* Validated */
316865
proofread-page
text/x-wiki
<noinclude><pagequality level="4" user="Hariprasad Shetty10" />{{Left|158}}</noinclude>ಶಾಸ್ತ್ರಿಗಳು ತಾಳಮದ್ದಳೆಯ ಕೂಟದಲ್ಲಿ ನಾಯಕ ಇಲ್ಲವೆ ಪ್ರತಿನಾಯಕನ
ಪಾತ್ರದಲ್ಲಿ ಮೃದುಮಧುರ ಗಂಭೀರಧ್ವನಿಯಿಂದ ಸನ್ನಿವೇಶಕ್ಕೆ ಸರಿಯಾದ ರಸ
ದ್ಯೋತಕ ವಾಗ್ವೈಖರಿಯಿಂದ ಮಾತಾಡುವವರು. ಅವರ ವಾಕ್ಯಗಳಲ್ಲಿ ಸಂಸ್ಕೃತ ಪದಪುಂಜಗಳು ದುಮುದುಮಿಸುವೆಡೆಯಲ್ಲಿ, ತಿಳಿಗನ್ನಡದ ದೇಸಿಯ ಪದಗಳೂ ಒಡಗೂಡಿ ಬರುತ್ತಿದ್ದುವು. ಆದ್ದರಿಂದ ಅವರು ಮಾತಾಡುವಾಗ ಜನರೆಲ್ಲರೂ ಮಂತ್ರ ಮುಗ್ಧರಾಗಿ ಕೇಳುತ್ತಿದ್ದರು. ರಾಮಾಯಣ ಕಥಾಭಾಗದಲ್ಲಿ ಶಾಸ್ತ್ರಿಗಳು ರಾವಣನ ಪಾತ್ರವಹಿಸುವುದೇ ರೂಢಿ. ಇನ್ನು ಭೀಷ್ಮಾರ್ಜುನ ಕಾಳಗದಲ್ಲಿ ಭೀಷ್ಮ ಇಲ್ಲವೆ ಕೃಷ್ಣ, ಕರ್ಣಪರ್ವದಲ್ಲಿ ಶಲ್ಯ, ಕರ್ಣ; ರಾಜಸೂಯ ಪ್ರಸಂಗವಾದರೆ ಮಾಗಧ ಸುಭದ್ರಾಪರಿಣಯದಲ್ಲಿ ಬಲರಾಮ, ಹೀಗೆ ಅವರಿಗೆ ಒಪ್ಪುವ ಪಾತ್ರಗಳು. ಅವರಿಗೆ ವೀರರಸವು ಒಪ್ಪುವ ರಸ, ಅದ್ಭುತ, ಭಯಾನಕ ರಸಗಳೂ ವೀರರಸದ ದಾರಿಯವುಗಳೇ ಆಗಿ ಕೊಂಚಕೊಂಚ ಹೊಂದಿಕೊಳ್ಳುತ್ತವೆ. ಹಾಸ್ಯರಸದ್ಯೋತಕದಲ್ಲಿ
ಅವರು ಕೈಯಾಡಿಸುವವರೇ. ಆದರೆ ಆ ಹಾಸ್ಯವೂ ಕೊಂಚ ಗಂಭೀರತರದ್ದೇ ಇರುತಿತ್ತು. ಹಿಂದಿನ ಕಾಲದ ಅರ್ಥಧಾರಿಗಳು ಭಾಗವತರಲ್ಲಿ ಮಾತಾಡುವುದು ಹೇಗೆ ಕ್ರಮವೆಂಬಂತಿದ್ದು ತೀರಾ ಅಸ್ವಾಭಾವಿಕವಾಗಿ, ಹಾಗೆಯೇ ಸುಧಾರಿತ ಅರ್ಥಧಾರಿಗಳಲ್ಲಿ ಅನೇಕರಲ್ಲಿ 'ಸ್ವಗತ' ಭಾಷಣದ ಅತಿರೇಕವು ಏರಿತ್ತು. ಅರ್ಥಧಾರಿಯು ಆಚರಿಸಲೇಬೇಕಾದ ಕ್ರಮ ಎಂಬಲ್ಲಿ ವರೆಗೆ ಅದು ತಲಪಿತ್ತು. ಆ ತರದ ಸ್ವಗತವನ್ನು ಬಲವಾಗಿ ವಿರೋಧಿಸಿದವರಲ್ಲಿ ಶಾಸ್ತ್ರಿಗಳೊಬ್ಬರು. ಸ್ವಗತವು ಸಂದರ್ಭೋಚಿತವಾಗಿ ಆ ಕಥೆಯ ಆಂದಿನ ಭಾಗಕ್ಕೆ ಹಿಂದಿನ ಘಟನೆಗಳನ್ನು ಪೋಣಿಸುವಂತಿರಬೇಕು; ಅದೂ ಸಾಧ್ಯವಿದ್ದರೆ ಸಂಭಾಷಣಾರೂಪದಲ್ಲಿ ತರಬೇಕು, ಭಾಷಣರೂಪದಲ್ಲಲ್ಲ ಎಂದವರು
ಹೇಳುತ್ತಿದ್ದರು. ಇದಲ್ಲದೆ ಇಬ್ಬರು ವ್ಯಕ್ತಿಗಳು ಪರಸ್ಪರ ಮಾತಾಡುವಾಗ ಮಧ್ಯ
ದಲ್ಲಿ ಕೆಲವೆಡೆ ಸ್ವಗತವು ಬರುವುದಿದೆ. ಇದನ್ನು ಹೆಚ್ಚಾಗಿ ಸಂಸ್ಕೃತ, ಹಾಗೂ
ಹಳೆಯ ನಾಟಕಗಳಲ್ಲಿ ಕಾಣುತ್ತೇವೆ. ಪ್ರಸಿದ್ಧ ನಾಟಕಕಾರರಾದ ಸ್ವ- ದ್ವಿಜೇಂದ್ರ
ಲಾಲ ರಾಯರವರು ಇಂತಹ ಸ್ವಗತಗಳು ತೀರಾ ಅಸ್ವಾಭಾವಿಕ ಎಂದಿದ್ದಾರೆ. ಪೊಳಲಿಯವರೂ ಇದನ್ನೇ ಮೆಚ್ಚಿಕೊಂಡಂತೆ ತೋರುತ್ತದೆ. ಅವರು ಸಂಭಾಷಣೆಯಿಂದಲೇ ಮನೋಗತವನ್ನು ವ್ಯಕ್ತಪಡಿಸುತ್ತಿದ್ದರೇ ಹೊರತು ಸ್ವಗತದಿಂದಲ್ಲ.
ಉದಾ:- ಸೇತುಬಂಧನ ಪ್ರಸಂಗ____
“ಓಲಗದೊಳಿರುವ ದಶಕಂಠನಂಭಿಗೆ ಮಣಿದು........ಹೇಳಿದರು ದನುಜೇಂದ್ರಗೆ....”
ಈ ಪದ್ಯವನ್ನು ಹಾಡಿದೊಡನೆ ಹೆಚ್ಚಾಗಿ ರಾವಣನ ಸ್ವಗತವು ಪ್ರಾರಂಭವಾಗು
ಇದೆ. ಆದರೆ ಕಥಾ ಸನ್ನಿವೇಶದಂತೆ ರಾವಣನು ಓಲಗದಲ್ಲಿದ್ದ. ಅಲ್ಲಿಗೆ ಗಡಿ
ರಕ್ಷಕ ಭಟರು ಹೋಗಿ ರಾಮನ ಪಾಳೆಯವನ್ನು ವರ್ಣಿಸುತ್ತಾರೆ. ಮುಂದಿನ ಪದ್ಯವೂ ಅವರಿಗೇ ಇಲ್ಲಿ ರಾವಣನ ಸ್ವಗತವೆಲ್ಲ ಮುಗಿದ ಮೇಲೆ ಮತ್ತೆ ಈ ಭಟರ ಮಾತು<noinclude></noinclude>
fqaafsrmgq6lff4szq0qmgx6phrik2d
ಪುಟ:ಯಕ್ಷಗಾನ ಮಕರಂದ.pdf/೧೮೫
104
100104
316876
301174
2026-05-04T11:18:24Z
Shreesha Sharma
7840
/* Validated */
316876
proofread-page
text/x-wiki
<noinclude><pagequality level="4" user="Shreesha Sharma" /></noinclude>{{Right|159}}
ಪ್ರಾರಂಭ ಮಾಡುವುದಕ್ಕಿಂತ, ಆ ಭಟರು ಹೇಳುವುದನ್ನು ಕೇಳಿ ಕಡೆಗೆ 'ನೀಲ
ನಾಯಕನೆಂಬ ವಾರ್ತೆ.......” ಎಂಬ ಪದ್ಯಕ್ಕೆ ರಾವಣನು ಸಂದರ್ಭೋಚಿತವಾದ
ಸ್ವಗತ ಭಾಷಣ ಮಾಡಿ ಮುಂದುವರಿದರೆ ಹೆಚ್ಚು ಪ್ರಭಾವ ಬರುತ್ತದೆ. ಶಾಸ್ತ್ರಿಗಳು
ಹೀಗೆಯೆ ಮಾಡುತ್ತಿದ್ದರು. ಆಟದಲ್ಲಾದರೆ ರಾವಣನ ಒಡೋಲಗ ಮುಂತಾದು
ವನ್ನು ತೋರಿಸಲೇ ಬೇಕೆಂಬ ಶಾಸ್ತ್ರವಿರುವುದರಿಂದ ಅಲ್ಲಿ ರಾವಣನು ಸ್ವಲ್ಪ ಸ್ವಗತ
ವೆಂದು ತನ್ನ ಪೂರ್ವಕೃತ್ಯಗಳನ್ನು ಹೇಳಲೂ ಬಹುದು. ತಾಳಮದ್ದಳೆಯಲ್ಲಿ
ಶಾಸ್ತ್ರಿಗಳ ಈ ಕ್ರಮವು ಹೆಚ್ಚು ಯುಕ್ತವೆಂದು ತೋರುತ್ತದೆ.
{{gap}}ಪೊಳಲಿಯವರು ತಾನು ಹೇಳುತ್ತಿರುವ ಪಾತ್ರದ ಗೌರವವನ್ನು ಕಾಯು
ಕೊಂಡು ಸಂದರ್ಭಕ್ಕೆ ತಕ್ಕುದಾದ ರಸಕ್ಕೆ ಪ್ರವೇಶಿಸುವ ಕೌಶಲವೂ ಕೆಲವೊಮ್ಮೆ
ತೀರಾ ಚಮತ್ಕಾರಯುಕ್ತವಾಗಿರುತ್ತಿತ್ತು.
{{gap}}ಭೀಷ್ಮಾರ್ಜುನ ಕಾಳಗ ಪ್ರಸಂಗದಲ್ಲಿ ಭೀಷ್ಮನು ಅರ್ಜುನನ ರಥಕ್ಕೆ ತನ್ನ ರಥ
ವನ್ನು ಚಾಚಿ ಯುದ್ಧ ಮಾಡುತ್ತಾನೆ. ಅರ್ಜುನನ ರಥವನ್ನು ಕೃಷ್ಣನು ನಡೆಸು
ತಿರುತ್ತಾನೆ. ಯುದ್ಧವು ಮುಂದರಿಯುತ್ತಾ ಭೀಷ್ಮನ ಒಂದು ಬಾಣವು ಕೃಷ್ಣನ
ಹಣೆಗೆ ಬಡಿಯುತ್ತದೆ, ಕೆನ್ನೆತ್ತರು ಚಿಮ್ಮುತ್ತದೆ. ಇಲ್ಲಿ ಪೊಳಲಿಯವರು ಶ್ರೀಕೃಷ್ಣನ
ಪಾತ್ರದಲ್ಲಿ ತನ್ನ ಕೂದಲಿಲ್ಲದ ತಲೆಯ ಮೇಲೆ ಕೈಯಾಡಿಸಿ ಅರ್ಜುನನ ಕಡೆಗೆ
ನೋಡಿ-“ಅರ್ಜುನಾ! ನೀನು ಬದುಕಿದ್ದೀಯೋ ಸತ್ತಿದ್ದೀಯೋ?” ಎಂದು ಮದ
ಲಿಸಿ ಕೇಳುತ್ತಾ, ಕೈತೋರಿಸಿ “ಏನಿದು ! ಕಣ್ಣು ಕಾಣುತ್ತದೋ ಇಲ್ಲವೋ” ಎಂದು
ತನ್ನ ಹಣೆ ಒಡೆದು ನೆತ್ತರು ಚೆಲ್ಲಿತೆಂಬುದನ್ನು ಸಭೆಗೆ ಗೊತ್ತಾಗುವಂತೆ ಮಾಡಿ, ಆ
ಮೇಲೆ ಸುದರ್ಶನಧಾರಿಯಾಗುವ ಆ ಕ್ರಮ, ಆ ಮಾತು, ಆ ಕೋಪಾಟೋಪ ಇಡೀ
ಸಭೆಯಲ್ಲಿ ಮೈನವಿರೇಳುವಂತಹುದಾಗುತ್ತದೆ.
{{gap}}ಪೊಳಲಿಯವರು ಅರ್ಥಗಾರಿಕೆಯಲ್ಲಿ ತನ್ನ ತರ್ಕವೇ ಮೇಲೆ ನಿಲ್ಲಬೇಕೆಂಬ ಹಟದವರಲ್ಲ. ಅವರ ಸಂವಾದದಲ್ಲಿ ರಂಜನೆಗೆ ಪ್ರಾಧಾನ್ಯವಿತ್ತೇ ಹೊರತು 'ತನ್ನ ಒಂಟೆಗೆ ಮೂರೇ ಕಾಲೆಂಬ ಒಣತರ್ಕಕ್ಕಲ್ಲ. ಒಮ್ಮೆ ಸುಭದ್ರಾ ಕಲ್ಯಾಣ ಪ್ರಸಂಗ; ಶಾಸ್ತ್ರಿ,
ಗಳು ಬಲರಾಮ, ದಿ| ಕವಿಭೂಷಣ ಶೆಟ್ಟರು ಶ್ರೀ ಕೃಷ್ಣ. ಅರ್ಜುನ ಸನ್ಯಾಸಿ
ಯನ್ನು ಸತ್ಕರಿಸಿ ಉತ್ಸವದಿಂದ ಆಲಯಕ್ಕೆ ಬರಮಾಡಿದ ಮೇಲೆ ಕೃಷ್ಣನು ಆ
ಸಮಾರಂಭಕ್ಕೆ ಬರಲಿಲ್ಲವೆಂದು ಬಲಭದ್ರನಿಗೆ ಕೋಪ. ಆಗ ಕೃಷ್ಣನ ಪ್ರವೇಶ.
{{gap}}ಬಲ: -ಎಷ್ಟು ಹೆಣ್ಣುಗಳೋ ನಿನಗೆ! ಇಲ್ಲಿ ಈ ಪುಣ್ಯಕಾರ್ಯ ನಡೆಯುವಾಗ ಯಾವ
{{gap}}ಹೆಣ್ಣಿನ ಕಡೆಗೆ ಅಕ್ಷತೆ ಹಿಡಿದುಕೊಂಡು ಹೋಗಿದ್ದಿ ?
{{gap}}ಕೃಷ್ಣ:-ಅಣ್ಣ, ಏನು ಮಾಡಲಿ! ನಿನಗಿದ್ದಂತಹ ಒಂದು ಹೆಣ್ಣಿರುತ್ತಿದ್ದರೆ ನಾನು
{{gap}}ಏಳೆಂಟು ಹೆಣ್ಣುಗಳ ಸಹವಾಸಕ್ಕೆ ಹೋಗುತ್ತಿದ್ದಿಲ್ಲ!<noinclude></noinclude>
ckr68al91dyfonxuogv10c1p176ii6m
ಪುಟ:ಯಕ್ಷಗಾನ ಮಕರಂದ.pdf/೧೮೬
104
100105
316877
301179
2026-05-04T11:18:56Z
Shreesha Sharma
7840
/* Validated */
316877
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|'''160'''}}
ಬಲ:-ಸಾಕು ಮಾಡು. ನಿನ್ನ ಮೈಯ ಕಪ್ಪು, ಕೂದಲೂ ಕಪ್ಪು, ಅದಕ್ಕೆ
ನಿನ್ನ ಬುದ್ದಿಯೂ ಕಪ್ಪು, ನನ್ನ ಮೈಯ ಬೆಳ್ಳಗೆ, ಕೂದಲೂ ಬೆಳ್ಳಗೆ
ನನ್ನ ಬುದ್ಧಿಯೂ ಬೆಳ್ಳಗೆ, ನಿನ್ನ ತಲೆ ಕೂದಲೂ ಕೊಂಕು, ಬುದ್ಧಿಯೂ
ದಾರಯೂ ಕೊಂಕು. ಮಾತೂ ಕೊಂಕು!
ಕೃಷ್ಣ :-ಸರಿ, ನಿಮ್ಮ ತಲೆ, ಮೈ, ಬುದ್ಧಿ ಎಲ್ಲ ಬೆಳ್ಳಗೆ; ಆದ್ದರಿಂದಲೇ ಈಗ
ನಿಮ್ಮನ್ನು ಬೆಳ್ಳರೆಂದರೆ ಅಪಾರ್ಥವಿಲ್ಲವಷ್ಟೆ?
{{gap}}ಹೀಗೆ ಅವರ ತರ್ಕಕ್ರಮಗಳು ರಸರಂಜನೆಯ ಎಲ್ಲೆಯಲ್ಲಿ ನಡೆಯುತ್ತಿದ್ದುವು.
{{gap}}ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ದಗಲಕ್ಕೆಲ್ಲಾ ಹೋಗಿ ಹಲವಾರು ತಾಳ
ಮದ್ದಳೆಗಳಲ್ಲಿ ಪಾತ್ರವಹಿಸಿ ಸಾವಿರಾರು ಜನರ ಅಭಿಮಾನಬಿಂದುವಾಗಿ ಪೊಳಲಿ
ಯವರು ಮೆರೆದರು. ಅವರು ಆ ಕಲೆಯಿಂದ ಗಳಿಸಿದರೋ ಇಲ್ಲವೋ ತಿಳಿಯದು.
ಒಂದಂತೂ ನಿಶ್ಚಯ. ಅವರು ಅಧ್ಯಾಪಕವೃತ್ತಿ ಮಾಡಿದ್ದರು. ಪ್ರವಚನವನ್ನೂ
ಮಾಡಿದ್ದರು. ಆದರೆ ಅವರಿಗೆ ಪ್ರಸಿದ್ಧಿಯು ಬಂದದ್ದು ಯಕ್ಷಗಾನದಿಂದ ಮಾತ್ರ.
ಕನ್ನಡನಾಡಿನಲ್ಲಿ ಸಿಂಹವಿಲ್ಲದಿದ್ದುದರಿಂದಲೋ ಏನೋ, ಮಹಾವೀರರಿಗೆ ಇಲ್ಲಿ
“ಹುಲಿ' ಎಂಬ ಬಿರುದು ಕೊಡುವುದು ರೂಢಿ (ಪುಲಿಕೇಶಿ ಇತ್ಯಾದಿ). ಅರ್ಥ
ಗಾರಿಕೆಯ ರಂಗದಲ್ಲಿ ಹುಲಿ ಹುಮ್ಮಸ್ಸಿನಿಂದ, ತಕ್ಕ ಗರ್ಜನೆ ತರ್ಜನೆಗಳಿಂದ ಮೆರೆದ
ಶಾಸ್ತ್ರಿಗಳು ನಿಜವಾಗಿಯೂ “ಎಕ್ಕಳಗಾಣ ಪುಲಿ”ಯಾಗಿದ್ದಾರೆ.
{{center|—————}}
{{gap}}“ಜನತೆಗೆ ಮನರಂಜನೆ ಕೊಟ್ಟೆವು ಎಂಬುದಕ್ಕಿಂತ ಒಂದು ಉತ್ತಮ
ಕಲಾಭಿರುಚಿಯನ್ನು ಮೂಡಿಸುವುದು ಸಾರ್ಥಕ ಧೈಯವಲ್ಲವೆ? ಯಕ್ಷಗಾನಕ್ಕೆ
ಒಂದು ಶಾಸ್ತ್ರವಿಲ್ಲ; ಆದರೆ ಸಂಪ್ರದಾಯವಿದೆ. ಇದೇ ಇದರ ಬೆಳವಣಿಗೆಗೆ
ಅವಕಾಶವನ್ನು ಕಲ್ಪಿಸಿಕೊಡುವ ಅಂಶ.... ಯಕ್ಷಗಾನದ ಕಲೆಯ ಸಾಧನ
ವಾಗಲೀ ಸ್ವರೂಪವಾಗಲೀ ಒಂದು ಕಲ್ಪನಾಲೋಕದ ನಿರೂಪಣೆಗೇ ಒಗ್ಗು
ವುದಲ್ಲದೆ ವಾಸ್ತವಿಕ ವಸ್ತುನಿರ್ವಹಣೆಗೆ ಹೊಂದುವಂತಿಲ್ಲ.”
{{Right|– ಪ್ರೊ| ಕೆ. ಜಿ.ಶಾಸ್ತ್ರಿ}}<noinclude></noinclude>
8axihqor7d7fwdht4wf14o4hiv767ed
316878
316877
2026-05-04T11:19:36Z
Shreesha Sharma
7840
316878
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|'''160'''}}
ಬಲ:-ಸಾಕು ಮಾಡು. ನಿನ್ನ ಮೈಯ ಕಪ್ಪು, ಕೂದಲೂ ಕಪ್ಪು, ಅದಕ್ಕೆ
ನಿನ್ನ ಬುದ್ದಿಯೂ ಕಪ್ಪು, ನನ್ನ ಮೈಯ ಬೆಳ್ಳಗೆ, ಕೂದಲೂ ಬೆಳ್ಳಗೆ
ನನ್ನ ಬುದ್ಧಿಯೂ ಬೆಳ್ಳಗೆ, ನಿನ್ನ ತಲೆ ಕೂದಲೂ ಕೊಂಕು, ಬುದ್ಧಿಯೂ
ದಾರಯೂ ಕೊಂಕು. ಮಾತೂ ಕೊಂಕು!
ಕೃಷ್ಣ :-ಸರಿ, ನಿಮ್ಮ ತಲೆ, ಮೈ, ಬುದ್ಧಿ ಎಲ್ಲ ಬೆಳ್ಳಗೆ; ಆದ್ದರಿಂದಲೇ ಈಗ
ನಿಮ್ಮನ್ನು ಬೆಳ್ಳರೆಂದರೆ ಅಪಾರ್ಥವಿಲ್ಲವಷ್ಟೆ?
{{gap}}ಹೀಗೆ ಅವರ ತರ್ಕಕ್ರಮಗಳು ರಸರಂಜನೆಯ ಎಲ್ಲೆಯಲ್ಲಿ ನಡೆಯುತ್ತಿದ್ದುವು.
{{gap}}ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ದಗಲಕ್ಕೆಲ್ಲಾ ಹೋಗಿ ಹಲವಾರು ತಾಳ
ಮದ್ದಳೆಗಳಲ್ಲಿ ಪಾತ್ರವಹಿಸಿ ಸಾವಿರಾರು ಜನರ ಅಭಿಮಾನಬಿಂದುವಾಗಿ ಪೊಳಲಿ
ಯವರು ಮೆರೆದರು. ಅವರು ಆ ಕಲೆಯಿಂದ ಗಳಿಸಿದರೋ ಇಲ್ಲವೋ ತಿಳಿಯದು.
ಒಂದಂತೂ ನಿಶ್ಚಯ. ಅವರು ಅಧ್ಯಾಪಕವೃತ್ತಿ ಮಾಡಿದ್ದರು. ಪ್ರವಚನವನ್ನೂ
ಮಾಡಿದ್ದರು. ಆದರೆ ಅವರಿಗೆ ಪ್ರಸಿದ್ಧಿಯು ಬಂದದ್ದು ಯಕ್ಷಗಾನದಿಂದ ಮಾತ್ರ.
ಕನ್ನಡನಾಡಿನಲ್ಲಿ ಸಿಂಹವಿಲ್ಲದಿದ್ದುದರಿಂದಲೋ ಏನೋ, ಮಹಾವೀರರಿಗೆ ಇಲ್ಲಿ
“ಹುಲಿ' ಎಂಬ ಬಿರುದು ಕೊಡುವುದು ರೂಢಿ (ಪುಲಿಕೇಶಿ ಇತ್ಯಾದಿ). ಅರ್ಥ
ಗಾರಿಕೆಯ ರಂಗದಲ್ಲಿ ಹುಲಿ ಹುಮ್ಮಸ್ಸಿನಿಂದ, ತಕ್ಕ ಗರ್ಜನೆ ತರ್ಜನೆಗಳಿಂದ ಮೆರೆದ
ಶಾಸ್ತ್ರಿಗಳು ನಿಜವಾಗಿಯೂ “ಎಕ್ಕಳಗಾಣ ಪುಲಿ”ಯಾಗಿದ್ದಾರೆ.
{{center|—————}}
{{gap}}“ಜನತೆಗೆ ಮನರಂಜನೆ ಕೊಟ್ಟೆವು ಎಂಬುದಕ್ಕಿಂತ ಒಂದು ಉತ್ತಮ
ಕಲಾಭಿರುಚಿಯನ್ನು ಮೂಡಿಸುವುದು ಸಾರ್ಥಕ ಧೈಯವಲ್ಲವೆ? ಯಕ್ಷಗಾನಕ್ಕೆ
ಒಂದು ಶಾಸ್ತ್ರವಿಲ್ಲ; ಆದರೆ ಸಂಪ್ರದಾಯವಿದೆ. ಇದೇ ಇದರ ಬೆಳವಣಿಗೆಗೆ
ಅವಕಾಶವನ್ನು ಕಲ್ಪಿಸಿಕೊಡುವ ಅಂಶ.... ಯಕ್ಷಗಾನದ ಕಲೆಯ ಸಾಧನ
ವಾಗಲೀ ಸ್ವರೂಪವಾಗಲೀ ಒಂದು ಕಲ್ಪನಾಲೋಕದ ನಿರೂಪಣೆಗೇ ಒಗ್ಗು
ವುದಲ್ಲದೆ ವಾಸ್ತವಿಕ ವಸ್ತುನಿರ್ವಹಣೆಗೆ ಹೊಂದುವಂತಿಲ್ಲ.”
{{Right|– ಪ್ರೊ|ಕೆ.ಜಿ.ಶಾಸ್ತ್ರಿ}}<noinclude></noinclude>
7091fxi4ndm4k6x2wh39stzfde49tl1
ಪುಟ:ಯಕ್ಷಗಾನ ಮಕರಂದ.pdf/೧೮೭
104
100107
316879
301181
2026-05-04T11:20:12Z
Shreesha Sharma
7840
/* Validated */
316879
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|'''ಮಹಾಜ್ಯೋತಿ'''}}
————————————————————————————————
{{Right|'''-ಸೀತಾನದಿ ಗಣಪಯ್ಯ ಶೆಟ್ಟಿ.'''}}
{{gap}}ಯಕ್ಷಗಾನ ನಭೋಮಂಡಲದಲ್ಲಿ ಬೆಳಗಿದ ಮಹಾಜ್ಯೋತಿಗಳಲ್ಲಿ ಕೀರ್ತಿ
ಶೇಷ ಪೊಳಲಿ ಶಂಕರನಾರಾಯಣ ಶಾಸ್ತ್ರಿಯವರು ಒಂದು ಧ್ರುವತಾರೆಯೆನ್ನಬಹುದು.
ಶ್ರೀಯುತರ ನೆನಪು ಅವರನ್ನು ನೋಡಿದ ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿರು
ವುದರಲ್ಲಿ ಅನುಮಾನವಿಲ್ಲ. ನಾನು ಅವರನ್ನು ಪ್ರಪ್ರಥಮವಾಗಿ ನೋಡಿದುದು,
1931ರಲ್ಲಿ ಮಂಗಳೂರಿನ ಅಧ್ಯಾಪಕರ ತರಬೇತಿ ಶಾಲೆಯಲ್ಲಿ ನಡೆದ ಒಂದು ಯಕ್ಷ
ಗಾನ ತಾಳಮದ್ದಲೆಯಲ್ಲಿ. ದಿ! ಉಳ್ಳಾಲ ಮಂಗೇಶರಾಯರು ಆ ಶಾಲಾ ಮುಖ್ಯ
ಪಾಧ್ಯಾಯರಾಗಿದ್ದು, ಅವರ ನೇತೃತ್ವದಲ್ಲಿ ಆ ಕೂಟ ಜರಗಿತ್ತು. ಆ ದಿನ ನಮ್ಮ
ಜಿಲ್ಲೆಯ ಆ ಕಾಲದ ಯಕ್ಷಗಾನ ದಿಗ್ಗಜಗಳೆನಿಸಿದವರಲ್ಲಿ ಹೆಚ್ಚಿನವರು ಬಂದಿದ್ದರು.
ಯಕ್ಷಗಾನ ಧುರಂಧರ ನಾರಾಯಣ ಕಿಲ್ಲೆಯವರು ಉಪ್ಪಿನ ಸತ್ಯಾಗ್ರಹದ ಕಾರಣ
ಸೆರೆಮನೆಯಲ್ಲಿದ್ದುದರಿಂದ ಬಂದಿರಲಿಲ್ಲ. ಆ ದಿನದ ಪ್ರಸಂಗ “ಶ್ರೀರಾಮ
ಪಟ್ಟಾಭಿಷೇಕ”.
{{gap}}ಪೊಳಲಿ ಶಾಸ್ತ್ರಿಯವರು ಶ್ರೀರಾಮನ ಪಾತ್ರ ವಹಿಸಿದ್ದರು. ಅವರು ಆಡಿದ
ಮಾತುಗಳು ಸೂರ್ಯವಂಶದ ಘನತೆ, ಅಯೋಧ್ಯೆಯ ಯುವರಾಜ, ದಶರಥ ಚಕ್ರ
ವರ್ತಿಯ ಮಗ ಎಂಥ ಯೋಗ್ಯತಾ ಸಂಪನ್ನ, ಜನರ ಹೃದಯಾಭಿರಾಮನೆಂಬುದನ್ನು
ಎತ್ತಿ ತೋರಿಸಿದ್ದು ವು. ಮತ್ತು ಆ ದಿನದ ದಶರಥ ಬಾಬಣ್ಣ ಶ್ಯಾನುಬಾಗ), ಕೈಕೇಯಿ
(ಅರ್ಕುಳ ಸುಬ್ರಾಯ ಆಚಾರಿ), ಶ್ರೀ ರಾಮನ ಪಾತ್ರಗಳು ಸರ್ವರ ಶ್ಲಾಘನೆಗೆ ಪಾತ್ರ
ವಾಗಿದ್ದು ವು. ಆಗ ನಾನು ಯಕ್ಷಗಾನ ಕ್ಷೇತ್ರಕ್ಕೆ ಕಾಲಿರಿಸಿರಲಿಲ್ಲ. ಆದರೂ ಯಕ್ಷ
ಗಾನದ ಅಭಿಮಾನ ನನ್ನಲ್ಲಿ ಆಗಲೇ ಜಾಗ್ರತವಾಗಿತ್ತು.
{{gap}}ಮರುದಿನ ಹಗಲು 3 ಗಂಟೆಯಿಂದ ರಾತ್ರಿ 11 ಗಂಟೆಯ ವರೆಗೆ ಕೆನರಾ
ಹೈಸ್ಕೂಲಿನಲ್ಲಿ ಸೀತಾಪಹಾರ ಮತ್ತು ವಾಲಿ ಸಂಹಾರ' ಪ್ರಸಂಗ ಹಿಂದಿನ ದಿನದ
ಕೂಟದವರಿಂದಲೇ ಜರಗಿತು. ಆ ದಿನವೂ ಶ್ರೀ ಶಾಸ್ತ್ರಿಗಳು ಶ್ರೀರಾಮನಾಗಿ ಜನ
ಮನ ಸೂರೆಗೊಂಡರು. ಒಳ್ಳೆಯ ಕಲಾವಿದನೊಬ್ಬ ಜನರ ಪ್ರೀತಿ, ಸಹಾನುಭೂತಿ,
ಗೌರವಗಳನ್ನು ಹೇಗೆ ಗಳಿಸಿಕೊಳ್ಳಬಲ್ಲ ಎಂಬುದನ್ನು ನಾನು ಆಗ ಕಂಡುಕೊಂಡೆ,<noinclude></noinclude>
myn20yraudfmmr4vqkfdac5ci79oz2e
ಪುಟ:ಯಕ್ಷಗಾನ ಮಕರಂದ.pdf/೧೮೮
104
100108
316881
301184
2026-05-04T11:20:40Z
Shreesha Sharma
7840
/* Validated */
316881
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|'''162'''}}
{{gap}}ಕೆಲವು ವರ್ಷಗಳು ಕಳೆದವು. ನಮರ ಕಡೆ ಅಂತಹ ಯಕ್ಷಗಾನ ಕೂಟ
ಜರಗಲಿಲ್ಲ. ಶಾಸ್ತ್ರಿಗಳನ್ನು ಕಾಣುವ ಯೋಗವೂ ಒದಗಲಿಲ್ಲ. 1942ರ ಅನಂತರ
ಶಾಸ್ತ್ರಿಯವರಿದ್ದ ಕೂಟಗಳಲ್ಲಿ ನನಗೂ ಭಾಗವಹಿಸುವ ಸುಯೋಗ ಆಗಾಗ ಒದಗ
ತೊಡಗಿತು. ಅನೇಕ ಬಾರಿ ನಾವು ಜತೆಯಾಗಿ ಅರ್ಥ ಹೇಳಿದೆವು. ನಮ್ಮಲ್ಲಿ ವಾದ,
ಸಂವಾದಗಳು ಸಾಕಷ್ಟು ನಡೆದರೂ ವಿವಾದ, ವಿತಂಡವಾದಗಳು ನಡೆದಿರಲಿಲ್ಲ;
ಬದಲಾಗಿ ಪ್ರೀತಿ, ವಿಶ್ವಾಸ, ಗೌರವಗಳು ಬೆಳೆದುವು. ಯಾರನ್ನೂ ಅವರು ಕಡಿಮೆ
ಯವನೆಂದು ಕಾಣುತ್ತಿರಲಿಲ್ಲ. ಸರಳವಾಗಿ, ಪಾತ್ರ ಗೌರವ ಕೆಡಿಸದೆ, ಕವಿಹೃದಯ
ತಿಳಿದು ಅರ್ಥ ಹೇಳುವವರನ್ನು ಕಂಡರೆ ಅವರಿಗೆ ಮೆಚ್ಚುಗೆ, ಆ ಭಾಗದಲ್ಲಿ ಅವರ
ಬಾಯಿಯಿಂದ ಬಂದ ಪ್ರಶಂಸೆಯ ಮಾತು ನನ್ನ ಪ್ರಣೋದಯವೆಂದು ತಿಳಿದಿದ್ದೇನೆ.
{{gap}}ಶಾಸ್ತ್ರಿಯವರ ಶ್ರೀರಾಮ, ಭೀಷ್ಮ, ಧರ್ಮರಾಯ, ಮಾಗಧ, ಕೌರವ
ಶ್ರೀಕೃಷ್ಣ ಮೊದಲಾದ ಪಾತ್ರಗಳು ಅನ್ಯಾದೃಶ. ಅವರು ಅರ್ಥ ಹೇಳುವಾಗ ಆ
ಪಾತ್ರಗಳು ಜೀವಂತವಾಗಿ ನಮ್ಮೆದುರಿಗಿದ್ದಂತೆ ಭಾಸವಾಗುತಿತ್ತು.
{{gap}}ಶಾಸ್ತ್ರಿಯವರ ಪುರಾಣಪ್ರಜ್ಞೆ ಅಗಾಧ, ಭಾಷಾ ಶೈಲಿ ಶುದ್ಧ, ಸರಳ
ಹಾಗೂ ಗಂಭೀರ, ಪಾತ್ರೋಚಿತವಾದ ವಾದ-ಸಂವಾದಗಳು ಹೃದಯಂಗಮ.
ಶ್ರುತಿಬದ್ಧವಾದ ಮಧುರ ಕಂಠ, ಕವಿಹೃದಯವನ್ನು ಬಿಂಬಿಸಿ ಅರ್ಥ ಹೇಳುವ ಕಲಾ
ಪ್ರೌಢಿಮೆಗೆ ಯಾರೂ ತಲೆದೂಗಲೇಬೇಕು. ದುರಭಿಮಾನ, ದುಸ್ಸಾಧನೆ, ಕುತ
ವಾದ, ಹಟಮಾರಿತನ, ಇದಿರಾಳಿಯನ್ನು ಮುಖಭಂಗ ಮಾಡುವ ಪ್ರವೃತ್ತಿ ಇತ್ಯಾದಿ
ಗಳಿಗೆ ಅವರ ಪರಿಶುದ್ಧ ಹೃದಯದಲ್ಲಿ ಸ್ಥಾನವಿರಲಿಲ್ಲ. “ಯಕ್ಷಗಾನ ವಾಚಸ್ಪತಿ
ಎಂಬ ಬಿರುದು ಅವರಿಗೆ ನಿಜವಾಗಿ ಒಪ್ಪುತ್ತಿತ್ತು.
{{gap}}ಒಮ್ಮೆ ಒಂದು ಯಕ್ಷಗಾನ ಕೂಟದಲ್ಲಿ ಭಾಗವಹಿಸಿದ ಕಲಾವಿದರ ಪೈಕಿ
ಇಬ್ಬರು ಹಿಮ್ಮೇಳದವರಿಗೂ, ನಮಗೆ ಅಂದರೆ ನಾಲ್ವರು ಅರ್ಥಧಾರಿಗಳಿಗೂ ವ್ಯವ
ಸ್ಥಾಪಕರು ಶಾಲು ಹೊದಿಸಿ ಗೌರವಿಸಿದರು. ಇದರಿಂದ ಉಳಿದ ಕಲಾವಿದರಿಗೆ
ಅಸಮಾಧಾನವಾದೀತೆಂದು ಭಾವಿಸಿದ ಶಾಸ್ತ್ರಿಯವರು ಸನ್ಮಾನಿತರ ಪರವಾಗಿ
ಮಾತಾಡುತ್ತಾ.. ಈ ಸನ್ಮಾನ ಕೇವಲ ನವರಿಗೆ ಮಾತ್ರವೆಂದು ನಾವು ಭಾವಿಸಿಲ್ಲ;
ಯಾರೂ ಹಾಗೆ ಭಾವಿಸಬಾರದು. ಇಲ್ಲಿ ಸೇರಿದ ಕಲಾವಿದರೆಲ್ಲರೂ ಯಕ್ಷಗಾನ ಸರ
ಸ್ವತಿಯ ಪುತ್ರರು. ಇವರಲ್ಲಿ ಮೇಲು ಕೀಳಿಲ್ಲ; ಎಲ್ಲರೂ ಸಮಾನರು. ಇದು ಎಲ್ಲ
ರಿಗೂ ಸಿಕ್ಕಿದ ದ ಗೌರವವೆಂದು ತಿಳಿಯಬೇಕು. ಹಾಗೆಂದೇ ನಾವಿದನ್ನು ಪರಿಗ್ರಹಿಸಲು
ಅನುಮತಿ ಕೊಡಬೇಕೆಂದು ಕೇಳಿಕೊಳ್ಳುತ್ತೇವೆ” ಎಂದರು. ಇದರಿಂದ ಅವರ ದೂರ
ದೃಷ್ಟಿ, ಹೃದಯ ವೈಶಾಲ್ಯಗಳನ್ನು ತಿಳಿಯಬಹುದಾಗಿದೆ.
{{center|——————}}<noinclude></noinclude>
pb2gu3glmt2ezjax96v4rnhjeyikjov
ಪುಟ:ಯಕ್ಷಗಾನ ಮಕರಂದ.pdf/೧೮೯
104
100109
316882
301187
2026-05-04T11:21:14Z
Shreesha Sharma
7840
/* Validated */
316882
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|'''ಯಕ್ಷಗಾನ ರಸಋಷಿ'''}}
——————————————————————————————————
{{Right|'''-ಸೊಡಂಕೂರು ತಿರುಮಲೇಶ್ವರ ಭಟ್ಟ.'''}}
{{gap}}'ತಾಳಮದ್ದಳೆ' ಕೂಟದಲ್ಲಿ ಹಿಮ್ಮೇಳದೊಂದಿಗೆ ಭಾಗವತರು ಹಾಡುವ ಪದ್ಯ
ಗಳಿಗೆ ತಕ್ಕಂತೆ ಆಯಾ ರಸಸನ್ನಿವೇಶಗಳನ್ನು ಅರಿತುಕೊಂಡು ಅರ್ಥ ಹೇಳುವುದರ
ಮೂಲಕ ರಸಲೋಕವನ್ನೆ ಸೃಷ್ಟಿಸಿ ರಸಿಕಶೋತೃಗಳನ್ನು ರಸಪಾನಮತ್ತರನ್ನಾಗಿ
ಮಾಡಿದ ಕಲಾವಿದರಲ್ಲಿ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು ಅಗ್ರಗಣ್ಯರು.
{{gap}}ಮೈಸೂರು ಮತ್ತು ಚಿದಂಬರಗಳಲ್ಲಿ ಸಂಸ್ಕೃತ ಸಾಹಿತ್ಯ, ವ್ಯಾಕರಣ, ತರ್ಕ
ಶಾಸ್ತ್ರಗಳ ಅಧ್ಯಯನ ಮಾಡಿ ಅಗಾಧ ಪಾಂಡಿತ್ಯವನ್ನು ಸಂಪಾದಿಸಿದ ದಿ| ಶಾಸ್ತ್ರಿಗಳ
ವರು ಪಂಡಿತರಾಜ ಜಗನ್ನಾಥನ ರಸಗಂಗಾಧರ'ವನ್ನು ಆಳವಾಗಿ ಅಧ್ಯಯನ
ಮಾಡಿದವರು. ಅಂತಲೇ ರಸಜ್ಞರವರು.
{{gap}}ಸಂಸ್ಕೃತ ಕನ್ನಡಗಳೆರಡರಲ್ಲಿ ಆಳವಾದ ಪಾಂಡಿತ್ಯವುಳ್ಳ ಶಾಸ್ತ್ರಿಗಳು, ಅಪೂರ್ವ
ವಾದ ಕಂಠ, ಅಸಾಮಾನ್ಯವಾದ ಸರಸವಾಕ್ ಸಂಪದಗಳಿಂದ ಅದ್ವಿತೀಯ ಅರ್ಥ
ಗಾರನೆನ್ನಿಸಿದರು. ಅನುಪಮ ಪ್ರವಚನಕಾರ ಎನ್ನಿಸಿದರು.
{{gap}}ಶಾಸ್ತ್ರಿಗಳು ಆಯಾ ಪಾತ್ರದ ಕಾಲ, ಕುಲ, ವಯಸ್ಸು, ಸ್ಥಾನಮಾನ,
ಸ್ವಭಾವ, ಸನ್ನಿವೇಶ ಇತ್ಯಾದಿಗಳನ್ನು ತಿಳಿದವರಾಗಿದ್ದುದಲ್ಲದೆ, ಮುಖ್ಯವಾಗಿರ
ಬೇಕಾದ ಪಾತ್ರತನ್ಮಯತೆಯುಳ್ಳವರಾಗಿದ್ದು, ಅರ್ಥ ಹೇಳುವ ಕಲೆಗಾರಿಕೆ ಅವರಿಗೆ
ಕರಗತವಾಗಿತ್ತು. ಅವರ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು.
{{gap}}ವೇದಿಕೆಯ ಮೇಲೆ ಕುಳಿತು ಭಿನ್ನ ಭಿನ್ನ ಪ್ರಕೃತಿಯ ಪಾತ್ರಗಳನ್ನು ನಿರ್ವಹಿ
ಸುತ್ತಾ ದಿ| ಶಾಸ್ತ್ರಿಗಳವರು ರಸಭಾವಾಭಿನಯಪೂರ್ವಕ ಅರ್ಥ ಹೇಳುತ್ತಿರುವು
ದನ್ನು ತಲ್ಲೀನತೆಯಿಂದ ಕೇಳುತ್ತಿರುವ, ನೋಡುತ್ತಿರುವ ಪ್ರೇಕ್ಷಕರಿಗೆ ಆಯಾ ಪಾತ್ರ
ಗಳನ್ನು ಸಾಕ್ಷಾತ್ ಕಂಡಂತಾಗುತ್ತಿತ್ತು. ರಾವಣವಧೆಯ ಧೀರೋದಾತ್ತ ನಾಯಕ
ಶ್ರೀ ರಾಮನ, ಹಾಗೆಯೇ ಧೀರೋದ್ಧತನಾದ ರಾವಣನ, ಪಾತ್ರವನ್ನೂ ಯಥ
ಚಿತವಾಗಿ ಚಿತ್ರಿಸುವ ಪ್ರತಿಭೆ ಶಾಸ್ತ್ರಿಗಳಲ್ಲಿತ್ತು. ರಾಜಸೂಯ ಪ್ರಸಂಗದ ಧೀರೋ
ದ್ಧತನಾಯಕ ಜರಾಸಂಧನ ಪಾತ್ರವನ್ನು ದಿ | ಶಾಸ್ತ್ರಿಗಳಂತೆ, ತಾಳಮದ್ದಳೆ' ವೇದಿಕೆ<noinclude></noinclude>
6tad4jau1eccqiaqe3nswpa9n613oj4
ಪುಟ:ಯಕ್ಷಗಾನ ಮಕರಂದ.pdf/೧೯೦
104
100110
316883
301188
2026-05-04T11:21:33Z
Shreesha Sharma
7840
/* Validated */
316883
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|'''164'''}}
ಯಲ್ಲಿ ರೂಪಿಸುವವರು ವಿರಳವೆಂದರೆ ಅತಿಶಯೋಕ್ತಿಯಾಗದು. ಭೀಮಕೃಷ್ಣಾರ್ಜು
ನರು ಶೈಲಾಗ್ರದೊಳೆಸೆವ ಭೇರೀತ್ರಯವ ಹೊಡೆದಾಗ “ಆ ಶಬ್ದಳೆಯದುರಲಿ
ನಡುವಿರುಳು ಮಗಧೇಶ ಕೈಕೊಂಡ ಯಾಗದಲಿ ಭೂಸುರಾರ್ಚನೆಗಳಲಿ ದಾನಗಳ
ಕೊಡುವೆಡೆಯೊಳೀ ಶಬ್ದ ಕೇಳಿ ಬೆರಗಿನಲಿ” ಈ ಪದ್ಯಕ್ಕೆ ಅರ್ಥ ಹೇಳುವ ಶಾಸ್ತ್ರಿಗಳು
ಪ್ರಕಟಿಸುವ ಆ ಅದ್ಭುತರಸ ನಿಜಕ್ಕೂ ಅದ್ಭುತವಾಗಿತ್ತು. ಬೆರಗನ್ನು ತೋರ್ಪಡಿ
ಸುವ ಆ ಕ್ರಮ ಅವರಿಗೆ ಮೀಸಲಾಗಿತ್ತು. ಮುಂದೆ ಭೀಮಕೃಷ್ಣಾರ್ಜುನರೊಡನೆ
ಸಂಭಾಷಣೆ ನಡೆದು ಕಾಳಗವ ಕೊಡು ನಮ್ಮೊಳಿನಿಬರೊಳೆಂದನಸುರಾರಿ” – ಕೃಷ್ಣನ
ಈ ಮಾತನ್ನು ಕೇಳಿದ ಜರಾಸಂಧನ ಪಾತ್ರ ನಿರ್ವಹಣೆಯನ್ನು ನೋಡಬೇಕು.
“ಕೇಳ್ತಾ ಕಿರುನಗೆಯಿಂ ಬಿ | ಹೇಳುರೆ ರೋಮಾಂಚನದೊಳು ಬೆಕ್ಕಸಬಡುತಾ ||
ತಾಳನು ನಸುನಗೆ ಹಾಸ್ಯದಿ | ಪೇಳ್ವಂ ಮಹಾಜನರಿದಿರೊಳು ಸಭೆಯೊಳಗಾಗಂ”
ಈ ಪದ್ಯದ ಅರ್ಥವನ್ನು ಹೇಳುವಾಗ ಪದ್ಯಕ್ಕೆ ತಕ್ಕಂತೆ ಮುಖದಲ್ಲಿ ಕಿರುನಗೆ ಸೂಸಿ
ಬಿದ್ದೆದ್ದು ರೋಮಾಂಚನಗೊಂಡ ಅನುಭವವನ್ನು ಪ್ರದರ್ಶಿಸಿ ಬೆಕ್ಕಸಬಡುತ್ತ ನಸು
ನಗೆ ಹಾಸ್ಯದಿ' ಮಹಾಜನರಿದಿರೊಳು ಹೇಳುವ ಮಾತುಗಳನ್ನು ಕೇಳಿ ಆಸ್ವಾದಿಸಿದವ
ರಿಗೇ ಅದರ ಅನುಭವವಾದೀತಷ್ಟೆ. ಅಂತಹ ಜರಾಸಂಧನ ಪಾತ್ರವನ್ನು ಈಗ
ನೋಡಲು ದುರ್ಲಭವೆನ್ನಬೇಕು.
{{gap}}ಶಾಸ್ತ್ರಿಗಳವರು ಯಾವ ಪಾತ್ರವನ್ನೇ ವಹಿಸಲಿ, ಅವರಾಡುವ ಮಾತುಗಳು
ರಸಪೋಷಕವಾಗಿದ್ದು ವು. ಪ್ರತಿಭೆ, ಪಾತ್ರತನ್ಮಯತೆ, ನಿರರ್ಗಳವಾದ ಮಾತು
ಗಾರಿಕೆ, ಪ್ರತಿಪಾತ್ರದೊಂದಿಗೆ ಸಮಯೋಚಿತವಾದ ಸಂಭಾಷಣೆ, ಅಪಾರವಾದ
ಪುರಾಣ, ಶಾಸ್ತ್ರ, ಕಾವ್ಯಗಳ ಅಧ್ಯಯನಾನುಭವ ಇವೆಲ್ಲವೂ ಅಲ್ಲಿ ಏಕತ್ರ ಕಾಣಬಹು
ದಾಗಿತ್ತು. ದಿ| ಕಿಲ್ಲೆಯವರು ಕರ್ಣನಾಗಿ ಕುರುಕ್ಷೇತ್ರದಲ್ಲಿ ಕಾಣಿಸುತ್ತಿದ್ದಾಗ
ಸಾರಥಿಯಾದ ಶಲ್ಯನ ಪಾತ್ರವನ್ನು ದಿ| ಶಾಸ್ತ್ರಿಗಳು ನಿರ್ವಹಿಸಿ “ಏಸು ಬಲಾಡ್ಯ
ತೋಳುಗಳೊ........” ಎಂದು ಹೊಗಳುವ ಈ ಸಂದರ್ಭದಲ್ಲಿ ಪ್ರೇಕ್ಷಕರ ಕಣ್ಣ
ಗಳಿಂದ ಆನಂದಬಾಷ್ಪವನ್ನು ಸುರಿಯಿಸುವ ಚಿತ್ರಣ ಚಿತ್ತಸೂರೆಗೊಳ್ಳುವಂತಹದು.
ಅಂತಹ ಕರ್ಣ-ಶಲ್ಯರನ್ನು ನಾವಿನ್ನು ಕಾಣುವಂತಿಲ್ಲ.
{{gap}}ಅದ್ವಿತೀಯ ಅರ್ಥಗಾರ ಎನಿಸಿದ ಶಾಸ್ತ್ರಿಗಳಲ್ಲಿದ್ದ ಮಹೋನ್ನತ ಗುಣವೆಂದರೆ
ಕಥೆಯನ್ನು ಬಿಟ್ಟು ಹೋಗದೆ, ಪದ್ಯವನ್ನು ಮರೆಯದೆ, ಇದಿರಾಳಿಯನ್ನು ಕೆಣಕದೆ,
ರಸದ ಮೇಲೆ ಪೂರ್ಣದೃಷ್ಟಿಯಿಟ್ಟು, ಕವಿಹೃದಯವನ್ನು ತಿಳಿದು ಶೋತೃವರ್ಗ
ವನ್ನು ತನ್ನ ಮಾತುಗಳ ಸರಣಿಯಿಂದ ಆಕರ್ಷಿಸಿ ಏನೂ ಪ್ರಯಾಸವಿಲ್ಲದೆ ಅರ್ಥ
ಹೇಳುತ್ತಿದ್ದುದು. ಇದಿರಾಳಿಯು ಎಷ್ಟು ಪ್ರಶ್ನೆಗಳನ್ನು ಕೇಳಿದರೂ ಅವುಗಳಿಗೆಲ್ಲ
ಸುಲಭವಾಗಿ ನೋಯದಂತೆ ಉತ್ತರ ಕೊಡುತ್ತಿದ್ದರಲ್ಲದೆ ಆತನ ಗೌರವಕ್ಕೆ ಕುಂದು
ತಾರದೆ ತನ್ನ ಗೌರವವನ್ನು ಜನತೆಯ ಮುಂದೆ ತೋರಿಸುತ್ತಿದ್ದರವರು.<noinclude></noinclude>
2bcn02wu39ok8kz7gin52sqfxfhico3
ಪುಟ:ಯಕ್ಷಗಾನ ಮಕರಂದ.pdf/೧೯೧
104
100111
316885
301190
2026-05-04T11:22:23Z
Shreelatha.Halemane
7642
316885
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Right|'''165'''}}
{{gap}}ದಿ| ಶಾಸ್ತ್ರಿಗಳವರ ವಾಲಿವಧೆಯ ವಾಲಿಯ ಪಾತ್ರ ಅನುಪಮ ಹಾಗೂ
ಅಮರ. ಶ್ರೀರಾಮನಿಗೂ ವಾಲಿಗೂ ವಾದರೂಪವಾದ ಸಂಭಾಷಣೆ 'ವಾದೇ
ವಾದೇ ಜಾಯತೇ ತತ್ವಬೋಧಃ' ಎಂಬುದನ್ನು ಸರಿಯಾಗಿ ಮನಗಾಣಿಸುತ್ತಿತ್ತು.
ಪ್ರತಿವಾದ ಎಲ್ಲಿಯೂ ಹಾದಿ ತಪ್ಪಿ ಹೋಗುತ್ತಿರಲಿಲ್ಲ. ಇದಿರಾಳಿಯ ಬಾಯಿ
ಮುಚ್ಚಿಸುವ ಕುಹಕತನ ದಿ| ಶಾಸ್ತ್ರಿಗಳಿಂದ ಅತಿ ದೂರವಾದುದು. ಕೊನೆಗೆ ಪಶ್ಚಾ
ತಾಪ ಪರಿಪೂತನಾದ ವಾಲಿ ಇದು ಮಹೀಮಂಡಲದ ಭಾರವನೊದೆಯಲಾದ
ವಿಲಾಸ' ಎಂದು ಶ್ರೀರಾಮನಿಗೆ ಕೈಮುಗಿಯುವ ದೃಶ್ಯ ಅಪೂರ್ವವಾದುದು,
ದಿ| ಶಾಸ್ತ್ರಿಗಳು ಯೌವನ ದಾಟಿದಾಗ ಹೇಳುತ್ತಿದ್ದರು: ಪಟ್ಟಾಭಿಷೇಕದ ದಶರಥ,
ವಾಲಿವಧೆಯ ವಾಲಿ, ಈ ಪಾತ್ರಗಳನ್ನು ಮೊದಲಿಗಿಂತ ಈಗ ತೃಪ್ತಿಕರವಾಗಿ ನಿರ್ವ
ಹಿಸಬಲ್ಲೆ' ಎಂದು. ಇದು, ಪಾತ್ರೋಚಿತ ರಸಕ್ಕೆ ತಕ್ಕ ವಯಸೂ ಪೋಷಕವೆಂಬ
ಅವರ ರಸಾಭಿಜ್ಞತೆಗೆ ಸಾಕ್ಷಿಯಾಗಿದೆ.
{{gap}}ಪೊಳಲಿ ಶಾಸ್ತ್ರಿಗಳವರು ವೀರ, ಕರುಣ, ರೌದ್ರರಸದ ಪಾತ್ರಗಳನ್ನು ಯಶ
ಸ್ವಿಯಾಗಿ ನಿರ್ವಹಿಸುತ್ತಿದ್ದಂತೆ ಹಾಸ್ಯರಸ ಪೂರ್ಣ ಪಾತ್ರಗಳನ್ನೂ ಜೀವಂತವಾಗಿ
ನಿರ್ವಹಿಸುತ್ತಿದ್ದರು. ಅವರ ಹಾಸ್ಯ ಮೇರಗತಿಯದು. 'ಶರಸೇತು ಭಂಗ'ದ
ವೃದ್ಧ ಬ್ರಾಹ್ಮಣನ ಪಾತ್ರವನ್ನು ವಹಿಸಿ ಅರ್ಥವಿಸುತ್ತಿರುವಾಗ ಆ ವೃದ್ಯೋಚಿತ
ವಾದ ನಡುಗುವ ಸ್ವರ, ತರ್ಕಸರಣಿಯ ಚಮತ್ಕಾರದ ವೃದ್ಧೋಚಿತವಾದ ಮಾತು
ಗಳು ಹಾಸ್ಯರಸಾಭಿವ್ಯಕ್ತಿಗೆ ಉತ್ತಮ ಉದಾಹರಣೆಯಾಗಬಲ್ಲುದು.
ಶಾಸ್ತ್ರಿಗಳು ಎಳೆಕರುಗಳನ್ನು ಮುರಿದು ತಿನ್ನುವ ಹುಲಿಯಾಗಿರದೆ ಹಾಲಿತ್ತು
ಪೋಷಿಸುವ ಕಾಮಧೇನುವಾಗಿದ್ದರು. ಹೊಸಬರಾದರೆ ಪಾತ್ರದ ಪರಿಚಯ ಹೇಳಿ
ಕೊಟ್ಟು ದಾರಿ ತಪ್ಪಿಹೋದಾಗ ಸರಿದಾರಿಗೆಳೆದು ಮುನ್ನಡೆಸುವ ದೊಡ್ಡತನ ಅವರ
ಲ್ಲಿತ್ತು. ನನಗೆ ದಿ | ಶಾಸ್ತ್ರಿಗಳಿದ್ದ ಕೂಟದಲ್ಲಿ ಒಂದೆರಡು ಕಡೆ ಅರ್ಥ ಹೇಳಬೇಕಾಗಿ
ಬಂತು. ಅವರ ಎದುರು ಅರ್ಥ ಹೇಳಲು ಹೆದರಿ ಹಿಂಜರಿದಾಗ ಅವರೇ ನನಗೆ
ಪಾತ್ರ ಪರಿಚಯ ಮಾಡಿಕೊಟ್ಟು ನನ್ನಿಂದ ಅರ್ಥ ಹೇಳಿಸಿ ಪ್ರೋತ್ಸಾಹಿಸಿದುದನ್ನು
ಈಗಲೂ ಮರೆಯುವಂತಿಲ್ಲ.
{{gap}}ತಾಳಮದ್ದಳೆ ಕೂಟದಲ್ಲಿ ಅರ್ಥಗಾರನಾಗಿ ಹೇಗೆ ಹೆಸರು ಪಡೆದಿದ್ದರೆ
ಹಾಗೆ ಪುರಾಣ ಪ್ರವಚನದಲ್ಲಿಯ ಪೊಳಲಿ ಶಾಸ್ತ್ರಿಗಳು ಎತ್ತಿದ ಕೈಯವರು. ಅವರ
ಪ್ರವಚನವು ಯೆಯ್ಯಾಡಿಪದವು ಇತ್ಯಾದಿ ಕೆಲವೆಡೆ ಬಿಡದೆ ನಡೆಯುತ್ತಿತ್ತು. ಸಂಸ್ಕೃತ
ದಲ್ಲಿ ಆಳವಾದ ಪಾಂಡಿತ್ಯವುಳ್ಳ ಶಾಸ್ತ್ರಿಗಳವರು ವ್ಯಾಸ ಭಾರತ, ವಾಲ್ಮೀಕಿ ರಾಮಾ
ಯಣ, ಶುಕಭಾಗವತ ಇವುಗಳನ್ನು ಆಮೂಲಾಗ್ರ ಅಧ್ಯಯನ ಮಾಡಿ ಅರಗಿಸಿ
ಕೊಂಡವರಾದ ಕಾರಣ ಕನ್ನಡದಲ್ಲಿ ಗದುಗು ಭಾರತ, ತೊರವೆ ರಾಮಾಯಣ,
ಜೈಮಿನಿ ಭಾರತ ಇತ್ಯಾದಿಗಳ ವಾಚನಕ್ಕೆ ತನ್ನ ಸಂಸ್ಕೃತ ಪುರಾಣಾನುಭವವನ್ನು<noinclude></noinclude>
mp7e32oxjw6rt1p6ldghv8q1cawj2i4
316887
316885
2026-05-04T11:22:38Z
Shreelatha.Halemane
7642
316887
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Right|'''165'''}}
{{gap}}ದಿ| ಶಾಸ್ತ್ರಿಗಳವರ ವಾಲಿವಧೆಯ ವಾಲಿಯ ಪಾತ್ರ ಅನುಪಮ ಹಾಗೂ
ಅಮರ. ಶ್ರೀರಾಮನಿಗೂ ವಾಲಿಗೂ ವಾದರೂಪವಾದ ಸಂಭಾಷಣೆ 'ವಾದೇ
ವಾದೇ ಜಾಯತೇ ತತ್ವಬೋಧಃ' ಎಂಬುದನ್ನು ಸರಿಯಾಗಿ ಮನಗಾಣಿಸುತ್ತಿತ್ತು.
ಪ್ರತಿವಾದ ಎಲ್ಲಿಯೂ ಹಾದಿ ತಪ್ಪಿ ಹೋಗುತ್ತಿರಲಿಲ್ಲ. ಇದಿರಾಳಿಯ ಬಾಯಿ
ಮುಚ್ಚಿಸುವ ಕುಹಕತನ ದಿ| ಶಾಸ್ತ್ರಿಗಳಿಂದ ಅತಿ ದೂರವಾದುದು. ಕೊನೆಗೆ ಪಶ್ಚಾ
ತಾಪ ಪರಿಪೂತನಾದ ವಾಲಿ ಇದು ಮಹೀಮಂಡಲದ ಭಾರವನೊದೆಯಲಾದ
ವಿಲಾಸ' ಎಂದು ಶ್ರೀರಾಮನಿಗೆ ಕೈಮುಗಿಯುವ ದೃಶ್ಯ ಅಪೂರ್ವವಾದುದು,
ದಿ| ಶಾಸ್ತ್ರಿಗಳು ಯೌವನ ದಾಟಿದಾಗ ಹೇಳುತ್ತಿದ್ದರು: ಪಟ್ಟಾಭಿಷೇಕದ ದಶರಥ,
ವಾಲಿವಧೆಯ ವಾಲಿ, ಈ ಪಾತ್ರಗಳನ್ನು ಮೊದಲಿಗಿಂತ ಈಗ ತೃಪ್ತಿಕರವಾಗಿ ನಿರ್ವ
ಹಿಸಬಲ್ಲೆ' ಎಂದು. ಇದು, ಪಾತ್ರೋಚಿತ ರಸಕ್ಕೆ ತಕ್ಕ ವಯಸೂ ಪೋಷಕವೆಂಬ
ಅವರ ರಸಾಭಿಜ್ಞತೆಗೆ ಸಾಕ್ಷಿಯಾಗಿದೆ.
{{gap}}ಪೊಳಲಿ ಶಾಸ್ತ್ರಿಗಳವರು ವೀರ, ಕರುಣ, ರೌದ್ರರಸದ ಪಾತ್ರಗಳನ್ನು ಯಶ
ಸ್ವಿಯಾಗಿ ನಿರ್ವಹಿಸುತ್ತಿದ್ದಂತೆ ಹಾಸ್ಯರಸ ಪೂರ್ಣ ಪಾತ್ರಗಳನ್ನೂ ಜೀವಂತವಾಗಿ
ನಿರ್ವಹಿಸುತ್ತಿದ್ದರು. ಅವರ ಹಾಸ್ಯ ಮೇರಗತಿಯದು. 'ಶರಸೇತು ಭಂಗ'ದ
ವೃದ್ಧ ಬ್ರಾಹ್ಮಣನ ಪಾತ್ರವನ್ನು ವಹಿಸಿ ಅರ್ಥವಿಸುತ್ತಿರುವಾಗ ಆ ವೃದ್ಯೋಚಿತ
ವಾದ ನಡುಗುವ ಸ್ವರ, ತರ್ಕಸರಣಿಯ ಚಮತ್ಕಾರದ ವೃದ್ಧೋಚಿತವಾದ ಮಾತು
ಗಳು ಹಾಸ್ಯರಸಾಭಿವ್ಯಕ್ತಿಗೆ ಉತ್ತಮ ಉದಾಹರಣೆಯಾಗಬಲ್ಲುದು.
{{gap}}ಶಾಸ್ತ್ರಿಗಳು ಎಳೆಕರುಗಳನ್ನು ಮುರಿದು ತಿನ್ನುವ ಹುಲಿಯಾಗಿರದೆ ಹಾಲಿತ್ತು
ಪೋಷಿಸುವ ಕಾಮಧೇನುವಾಗಿದ್ದರು. ಹೊಸಬರಾದರೆ ಪಾತ್ರದ ಪರಿಚಯ ಹೇಳಿ
ಕೊಟ್ಟು ದಾರಿ ತಪ್ಪಿಹೋದಾಗ ಸರಿದಾರಿಗೆಳೆದು ಮುನ್ನಡೆಸುವ ದೊಡ್ಡತನ ಅವರ
ಲ್ಲಿತ್ತು. ನನಗೆ ದಿ | ಶಾಸ್ತ್ರಿಗಳಿದ್ದ ಕೂಟದಲ್ಲಿ ಒಂದೆರಡು ಕಡೆ ಅರ್ಥ ಹೇಳಬೇಕಾಗಿ
ಬಂತು. ಅವರ ಎದುರು ಅರ್ಥ ಹೇಳಲು ಹೆದರಿ ಹಿಂಜರಿದಾಗ ಅವರೇ ನನಗೆ
ಪಾತ್ರ ಪರಿಚಯ ಮಾಡಿಕೊಟ್ಟು ನನ್ನಿಂದ ಅರ್ಥ ಹೇಳಿಸಿ ಪ್ರೋತ್ಸಾಹಿಸಿದುದನ್ನು
ಈಗಲೂ ಮರೆಯುವಂತಿಲ್ಲ.
{{gap}}ತಾಳಮದ್ದಳೆ ಕೂಟದಲ್ಲಿ ಅರ್ಥಗಾರನಾಗಿ ಹೇಗೆ ಹೆಸರು ಪಡೆದಿದ್ದರೆ
ಹಾಗೆ ಪುರಾಣ ಪ್ರವಚನದಲ್ಲಿಯ ಪೊಳಲಿ ಶಾಸ್ತ್ರಿಗಳು ಎತ್ತಿದ ಕೈಯವರು. ಅವರ
ಪ್ರವಚನವು ಯೆಯ್ಯಾಡಿಪದವು ಇತ್ಯಾದಿ ಕೆಲವೆಡೆ ಬಿಡದೆ ನಡೆಯುತ್ತಿತ್ತು. ಸಂಸ್ಕೃತ
ದಲ್ಲಿ ಆಳವಾದ ಪಾಂಡಿತ್ಯವುಳ್ಳ ಶಾಸ್ತ್ರಿಗಳವರು ವ್ಯಾಸ ಭಾರತ, ವಾಲ್ಮೀಕಿ ರಾಮಾ
ಯಣ, ಶುಕಭಾಗವತ ಇವುಗಳನ್ನು ಆಮೂಲಾಗ್ರ ಅಧ್ಯಯನ ಮಾಡಿ ಅರಗಿಸಿ
ಕೊಂಡವರಾದ ಕಾರಣ ಕನ್ನಡದಲ್ಲಿ ಗದುಗು ಭಾರತ, ತೊರವೆ ರಾಮಾಯಣ,
ಜೈಮಿನಿ ಭಾರತ ಇತ್ಯಾದಿಗಳ ವಾಚನಕ್ಕೆ ತನ್ನ ಸಂಸ್ಕೃತ ಪುರಾಣಾನುಭವವನ್ನು<noinclude></noinclude>
nxf1mku20ith43mzp6kfossm7ofyu2h
ಪುಟ:ಯಕ್ಷಗಾನ ಮಕರಂದ.pdf/೧೯೪
104
100114
316913
293967
2026-05-04T11:47:21Z
Shreelatha.Halemane
7642
/* Proofread */
316913
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|'''168'''}}
{{gap}}ಆದ್ದರಿಂದ ಉಳ್ಳಾಲದ ಬಳಿಯ ಹಳ್ಳಿಯಲ್ಲಿಯ ಸಭೆ ಎಂದೊಡನೆ ನಾನು
ಅಧ್ಯಕ್ಷನಾಗಲು ಒಪ್ಪಿಗೆ ಕೊಟ್ಟೇಬಿಟ್ಟೆ. ಆಗ ಉಳ್ಳಾಲದಲ್ಲಿ ನೇತ್ರಾವತಿ ನದಿಗೆ
ಸೇತುವೆ ಇರಲಿಲ್ಲ. ಆದರೆ ನನ್ನನ್ನು ಕರೆದ ವ್ಯಕ್ತಿ ಸೇತುಬಂಧನ ಮಾಡಬಲ್ಲವನಲ್ಲ
ದಿದ್ದರೂ ನದಿಯನ್ನು ಒಮ್ಮೆ ದಾಟಿಸಿ ಹಿಂದೆ ಕಳಿಸುವವ ಎಂದು ನನಗೆ ಗೊತ್ತಿತ್ತು.
{{gap}}ಹಾಗೆ ಮರುದಿನ ನಾನು ಉಳ್ಳಾಲದಿಂದ ಸ್ವಲ್ಪ ದೂರ ಹಳ್ಳಿ ದಾರಿಯನ್ನು
ನಡೆದು, ಕೆಲವು ಕಾಲುವೆಗಳನ್ನು ಹಾರಿ, ಕೆಲವು ಕಲ್ಲುಗಳ ಮೇಲೆ ನೆಗೆದು, ಅಂತೂ
ನಾನು ನಮ್ಮ ಮಂಗಳೂರು ಬಳಗದೊಡನೆ ಸಭಾ ಚಪ್ಪರವನ್ನು ತಲುಪಿಯಾಯಿತು.
ಅಧ್ಯಕ್ಷರಿಗಾಗಿ ಒಂದು ಮೇಜು, ಅದರ ಮೇಲೆ ಒಂದು ಪೆಟ್ರೋಮೆಕ್ಸ್ ದೀಪ.
ಅಂದಿನ ಸಭೆಯ ಕಾರ್ಯಕ್ರಮ ತಾಳಮದ್ದಳೆ ಎಂದು ತಿಳಿದೊಡನೆ ನನ್ನ ತಲೆಯ
ಮೇಲಿದ್ದ ಭಾರ ಹೆಗಲಿಗೆ ಇಳಿಯಿತು. ಏಕೆಂದರೆ ತಾಳಮದ್ದಳೆಯಲ್ಲಿ ಅಧ್ಯಕ್ಷರಿಗೆ
ಮಾತಾಡಲು ಎಡೆಯಿದ್ದದ್ದು ತಾಳಮದ್ದಳೆ ಮುಗಿದ ಮೇಲೆ, ಆದರೆ ಹೆಚ್ಚಿನ
ತಾಳಮದ್ದಳೆ ಕೂಟಗಳಿಗೆ ಆದಿ ಇದೆಯೇ ಹೊರತು ಅಂತ್ಯವಿಲ್ಲ ಎಂದು ನಾನು
ಆಗಲೇ ತಿಳಿದಿದ್ದೆ. ಆದಕಾರಣ ಅಧ್ಯಕ್ಷನ ಕೆಲಸ ಬಲು ಸುಲಭ.
{{gap}}ಸ್ವಾಗತ ಭಾಷಣವೋ ಪರಿಚಯ ಭಾಷಣವೋ ಆಗುವಾಗಲೇ ಅಂದು ಜರಾ
ಸಂಧ ವಧೆ' ಪ್ರಸಂಗದ ತಾಳಮದ್ದಳೆಯೆಂದು ತಿಳಿಯಿತು. ಜರಾಸಂಧ ಶ್ರೀ ಪೊಳಲಿ
ಶಾಸ್ತ್ರಿಗಳು ಎಂದೊಡನೆ ಒಮ್ಮೆಲೇ ಕಿಟಕೀಳುವ ಚಪ್ಪಾಳೆ ಬಿತ್ತು. ಜರಾಸಂಧನ
ಎದುರು ನಿಲ್ಲುವ ಕೃಷ್ಣನ ಪಾತ್ರಧಾರಿ ಮುಳಿಯ ಮಹಾಬಲ ಭಟ್ಟರು. ಇವರು
ನನ್ನ ಹಳೆಯ ಗೆಳೆಯನಲ್ಲದೆ, ನನ್ನ ಪೂಜ್ಯ ಗುರು ಮುಳಿಯ ತಿಮ್ಮಪ್ಪಯ್ಯನವರ
ಮಗ, ಮದರಾಸಿನಲ್ಲಿ ಇದ್ದ ಉದ್ಯೋಗವನ್ನು ತ್ಯಜಿಸಿ ಆಗ ತಾನೇ ಮಂಗಳೂರಲ್ಲಿ
ವಕೀಲವೃತ್ತಿ ಆರಂಭಿಸಿದವರು. ತಾಳಮದ್ದಳೆಯ ಕೂಟದವರು ಒಡನೆಯೇ
ಶ್ರೀ ಭಟ್ಟರ ಮೇಲೆ ಎರಗಿ ಜನಪ್ರಿಯ ಅರ್ಥಧಾರಿಯನ್ನಾಗಿ ಮಾಡಿದ್ದರು.
{{gap}}ಇತರ ಹೆಚ್ಚಿನ ವಿವರಗಳು ನನಗೆ ನೆನಪಿಲ್ಲ. ತೆಕ್ಕುಂಜೆ ಗೋಪಾಲಕೃಷ್ಣ
ಭಟ್ಟರು ಅರ್ಜುನನ ಪಾತ್ರ ವಹಿಸಿದ್ದರೆಂದು ನೆನಪು. ಆದರೆ ತಾಳಮದ್ದಳೆಯ ಆ
ಕಥಾಭಾಗದಲ್ಲಿ ಕೃಷ್ಣ ಮತ್ತು ಜರಾಸಂಧರೊಳಗಿನ 'ಜಟಾಪಟಿ'ಗೆ ಪ್ರಾಧಾನ್ಯ.
ಇದೇ ಕಥೆಯ ಕೊನೆಯ ಭಾಗ, ಸುಮಾರು ಏಳೂವರೆ ಗಂಟೆಗೆ ಆರಂಭವಾದ ಈ
ತಾಳಮದ್ದಳೆ ಸುಮಾರು ಹನ್ನೊಂದರ ತನಕ ನಿರಾತಂಕವಾಗಿ ನಡೆಯಿತು.
{{gap}}ಆಗಲೇ ಜರಾಸಂಧನಿಗೂ ಕೃಷ್ಣನಿಗೂ ವಾಗ್ಯುದ್ಧ ಆರಂಭವಾದುದು.
ಇಬ್ಬರೂ ತಮ್ಮ ತಮ್ಮ ಕುಲಗೋತ್ರಗಳನ್ನು ಹೊಗಳಿಯಾಯಿತು. ಆ ಮೇಲೆ
ಪರಸ್ಪರ ಕುಲಗೋತ್ರಗಳಿಂದ ಹಿಡಿದು ಮುಂದಿನ ತನಕವೂ ದೂಷಣೆ ಅವಹೇಳನ
ಗಳನ್ನು ಅದಲು ಬದಲು ಮಾಡಿದುದಾಯಿತು. ಅರ್ಥಧಾರಿಗಳ ಪರಸ್ಪರ ಕೌಶಲ್ಯ
ಪ್ರದರ್ಶನ ಮತ್ತು ಅವರ ಪಾಂಡಿತ್ಯ ಪ್ರದರ್ಶನಗಳಿಗೆ ಇದೊಂದು ಸದವಕಾಶ<noinclude></noinclude>
2uplmppi7x5r0u47tosgxw7h6vgt6we
ಪುಟ:ಯಕ್ಷಗಾನ ಮಕರಂದ.pdf/೨೦೪
104
100124
316866
303744
2026-05-04T10:59:57Z
Hariprasad Shetty10
7490
316866
proofread-page
text/x-wiki
<noinclude><pagequality level="3" user="Shreelatha.Halemane" />{{Left|ಶಂಕರನಾರಾಯಣ ಶಾಸ್ತ್ರಿಗಳ ಯಕ್ಷಗಾನ ಪ್ರವೇಶ}}
—————————————————————————————
{{Right|– ಅಗರಿ ಶ್ರೀನಿವಾಸ ಭಾಗವತ,}}</noinclude>
ಸರ್ವಸಾಧಾರಣ 1928ನೇ ಇಸವಿಯಲ್ಲಿ, ಆಗರ್ಭ ಶ್ರೀಮಂತರ ವಿದ್ಯಾಭಿ
ಮಾನಿಗಳೂ ಆಗಿದ್ದ ಕಟ್ಟೆ ಮಾರು ದಿ| ಚೆಲುವಯ್ಯ ಬಲ್ಲಾಳರ ಮಳಲಿಯ ಮನೆ
ಯಲ್ಲಿ ಯಕ್ಷಗಾನ ಕೂಟ. ಪ್ರಸಂಗ 'ಕೃಷ್ಣ ಸಂಧಾನ', ಮಳಲಿಯವರೇ ಆಗಿದ್ದ
ಒಬ್ಬರಿಗೆ ಸಂಜಯನ ಪಾತ್ರವನ್ನು ಒಪ್ಪಿಸಿತ್ತು. “ಶಿವಶಿವ ಯಮಜನೋಲಗದ
ಸಿರಿಯನು” ಎಂಬ ಪದ್ಯಕ್ಕೆ ಸಂಜಯನ ಪಾತ್ರಧಾರಿಗಳು, ಧರ್ಮರಾಯನ ವೈಭವ
ವನ್ನು ಬಣ್ಣಿಸಲು ಆರಂಭಿಸುವಾಗಲೇ ಕೌರವನ ಪಾತ್ರವನ್ನು ವಹಿಸಿದ್ದ ಪ್ರಸಿದ್ಧ
ಅರ್ಥಧಾರಿಗಳ “ಬಾಯಿ ಮುಚ್ಚು” ಎಂಬ ಅಬ್ಬರದ ನಂಡಿಗೆ ಆ ಪಾತ್ರಧಾರಿಗೆ
ಸಭಾಕಂಪನದಿಂದಾಗಿ ತಡವರಿಸಿ, ಮಾತನಾಡಲು ಅಸಾಧ್ಯವಾಯಿತು.
ಅರ್ಥವಿವರಣೆಗೆ ಬೇರೆ ಯಾರೂ ಇಲ್ಲ. ವಿದ್ಯಾಭ್ಯಾಸವನ್ನು ಮುಗಿಸಿ ನೆಂಟರ ಊರಾದ
ಪೊಳಲಿಗೆ ಬಂದಿದ್ದ ಶ್ರೀ ಶಂಕರನಾರಾಯಣ ಶಾಸ್ತ್ರಿಗಳು ಪ್ರೇಕ್ಷಕರಾಗಿ ಆ ಕೂಟಕ್ಕೆ
ಬಂದಿದ್ದರು. ಅವರೊಡನೆ ಆಷ್ಟರು “ಸಂಜಯನ ಅರ್ಥವನ್ನು ನೀವು ಮುಂದು
ವರಿಸಬೇಕೆಂದು ಕೇಳಿಕೊಂಡಾಗ “ನನಗೆ ಪ್ರಸಂಗದ ಪರಿಚಯವಿಲ್ಲ, ಯಕ್ಷಗಾನದಲ್ಲಿ
ಅರ್ಥ ಹೇಳಿ ಅಭ್ಯಾಸವಿಲ್ಲ” ಎಂದು ಎಷ್ಟು ಹೇಳಿದರೂ, ಕೇಳದ ಮಿತ್ರರ
ಒತ್ತಾಯಕ್ಕೆ ಕಟ್ಟು ಬಿದ್ದು ಕೊನೆಗೆ ಒಪ್ಪಿಕೊಂಡರು.
ಪುನಃ ಭಾಗವತರು “ಶಿವಶಿವ ಯಮಜನೋಲಗದ ಸಿರಿಯನು” ಎಂಬ ಪದ್ಯ
ವನ್ನು ಹಾಡಿದಾಗ ಶ್ರೀ ಶಾಸ್ತ್ರಿಗಳು ಧರ್ಮರಾಯನ ವೈಭವದ ವರ್ಣನೆಗೆ ಪ್ರಾರಂ
ಭಿಸಿದರು. ಕೌರವನ ಮುನ್ನಿನಂತೆಯೆ “ಮುಚ್ಚು ಬಾಯಿ” ಎಂಬ ಅಬ್ಬರದ
ನುಡಿ ಬಂತು. ಆಗ ಶಾಸ್ತ್ರಿಗಳು ತಮ್ಮ ಮಾತನ್ನು ನಿಲ್ಲಿಸಿದರು. ಕೌರವನು, “ಧರ್ಮ
ರಾಯನು ಏನು ಹೇಳಿದನು ?” ಎಂದು ಕೇಳಲು ಶಾಸ್ತ್ರಿಗಳು ಪುನಃ ಧರ್ಮರಾಯನ
ವೈಭವದ ವರ್ಣನೆಗೆ ತೊಡಗಿದಾಗ ಪುನಃ “ಮುಚ್ಚು ಬಾಯಿ” ಎಂಬ ಕೌರವನ ಅಧಿ
ಕಾರದ ಆಜ್ಞೆ. ಇದನ್ನು ಕೇಳಿ ಶಾಸ್ತ್ರಿಗಳು, ರಾಜಸ್ಥಾನದ ಗೌರವವೇನು, ರಾಜನ
ಯೋಗ್ಯತೆ ಹೇಗಿರಬೇಕು, ಆಸ್ಥಾನದಲ್ಲಿ ಮಂತ್ರಿಯಾದವನ ಅಧಿಕಾರದ ವ್ಯಾಪ್ತಿ
ಎಷ್ಟು ಎಂಬುದಕ್ಕೆ ಶಾಸ್ತ್ರದ ಆಧಾರ ಕೊಟ್ಟು, ಇದು ನಿನ್ನ ಉದ್ಧಟತನವೆಂದು
ಕೌರವನ ಮಾತನ್ನು ಖಂಡಿಸಿದಾಗ ಅಲ್ಲಿದ್ದವರೆಲ್ಲಾ ವಿಸ್ಮಯಗೊಂಡರು. ಇವರ<noinclude></noinclude>
41tsuq8ljhdw35fxuwbdls7xg89vbf9
316867
316866
2026-05-04T11:00:26Z
Hariprasad Shetty10
7490
316867
proofread-page
text/x-wiki
<noinclude><pagequality level="3" user="Shreelatha.Halemane" />{{Left|ಶಂಕರನಾರಾಯಣ ಶಾಸ್ತ್ರಿಗಳ ಯಕ್ಷಗಾನ ಪ್ರವೇಶ}}
—————————————————————————————
{{Right|– ಅಗರಿ ಶ್ರೀನಿವಾಸ ಭಾಗವತ,}}</noinclude>ಸರ್ವಸಾಧಾರಣ 1928ನೇ ಇಸವಿಯಲ್ಲಿ, ಆಗರ್ಭ ಶ್ರೀಮಂತರ ವಿದ್ಯಾಭಿ
ಮಾನಿಗಳೂ ಆಗಿದ್ದ ಕಟ್ಟೆ ಮಾರು ದಿ| ಚೆಲುವಯ್ಯ ಬಲ್ಲಾಳರ ಮಳಲಿಯ ಮನೆಯಲ್ಲಿ ಯಕ್ಷಗಾನ ಕೂಟ. ಪ್ರಸಂಗ 'ಕೃಷ್ಣ ಸಂಧಾನ', ಮಳಲಿಯವರೇ ಆಗಿದ್ದ ಒಬ್ಬರಿಗೆ ಸಂಜಯನ ಪಾತ್ರವನ್ನು ಒಪ್ಪಿಸಿತ್ತು. “ಶಿವಶಿವ ಯಮಜನೋಲಗದ ಸಿರಿಯನು” ಎಂಬ ಪದ್ಯಕ್ಕೆ ಸಂಜಯನ ಪಾತ್ರಧಾರಿಗಳು, ಧರ್ಮರಾಯನ ವೈಭವ
ವನ್ನು ಬಣ್ಣಿಸಲು ಆರಂಭಿಸುವಾಗಲೇ ಕೌರವನ ಪಾತ್ರವನ್ನು ವಹಿಸಿದ್ದ ಪ್ರಸಿದ್ಧ
ಅರ್ಥಧಾರಿಗಳ “ಬಾಯಿ ಮುಚ್ಚು” ಎಂಬ ಅಬ್ಬರದ ನಂಡಿಗೆ ಆ ಪಾತ್ರಧಾರಿಗೆ
ಸಭಾಕಂಪನದಿಂದಾಗಿ ತಡವರಿಸಿ, ಮಾತನಾಡಲು ಅಸಾಧ್ಯವಾಯಿತು.
ಅರ್ಥವಿವರಣೆಗೆ ಬೇರೆ ಯಾರೂ ಇಲ್ಲ. ವಿದ್ಯಾಭ್ಯಾಸವನ್ನು ಮುಗಿಸಿ ನೆಂಟರ ಊರಾದ
ಪೊಳಲಿಗೆ ಬಂದಿದ್ದ ಶ್ರೀ ಶಂಕರನಾರಾಯಣ ಶಾಸ್ತ್ರಿಗಳು ಪ್ರೇಕ್ಷಕರಾಗಿ ಆ ಕೂಟಕ್ಕೆ
ಬಂದಿದ್ದರು. ಅವರೊಡನೆ ಆಷ್ಟರು “ಸಂಜಯನ ಅರ್ಥವನ್ನು ನೀವು ಮುಂದು
ವರಿಸಬೇಕೆಂದು ಕೇಳಿಕೊಂಡಾಗ “ನನಗೆ ಪ್ರಸಂಗದ ಪರಿಚಯವಿಲ್ಲ, ಯಕ್ಷಗಾನದಲ್ಲಿ
ಅರ್ಥ ಹೇಳಿ ಅಭ್ಯಾಸವಿಲ್ಲ” ಎಂದು ಎಷ್ಟು ಹೇಳಿದರೂ, ಕೇಳದ ಮಿತ್ರರ
ಒತ್ತಾಯಕ್ಕೆ ಕಟ್ಟು ಬಿದ್ದು ಕೊನೆಗೆ ಒಪ್ಪಿಕೊಂಡರು.
ಪುನಃ ಭಾಗವತರು “ಶಿವಶಿವ ಯಮಜನೋಲಗದ ಸಿರಿಯನು” ಎಂಬ ಪದ್ಯ
ವನ್ನು ಹಾಡಿದಾಗ ಶ್ರೀ ಶಾಸ್ತ್ರಿಗಳು ಧರ್ಮರಾಯನ ವೈಭವದ ವರ್ಣನೆಗೆ ಪ್ರಾರಂ
ಭಿಸಿದರು. ಕೌರವನ ಮುನ್ನಿನಂತೆಯೆ “ಮುಚ್ಚು ಬಾಯಿ” ಎಂಬ ಅಬ್ಬರದ
ನುಡಿ ಬಂತು. ಆಗ ಶಾಸ್ತ್ರಿಗಳು ತಮ್ಮ ಮಾತನ್ನು ನಿಲ್ಲಿಸಿದರು. ಕೌರವನು, “ಧರ್ಮ
ರಾಯನು ಏನು ಹೇಳಿದನು ?” ಎಂದು ಕೇಳಲು ಶಾಸ್ತ್ರಿಗಳು ಪುನಃ ಧರ್ಮರಾಯನ
ವೈಭವದ ವರ್ಣನೆಗೆ ತೊಡಗಿದಾಗ ಪುನಃ “ಮುಚ್ಚು ಬಾಯಿ” ಎಂಬ ಕೌರವನ ಅಧಿ
ಕಾರದ ಆಜ್ಞೆ. ಇದನ್ನು ಕೇಳಿ ಶಾಸ್ತ್ರಿಗಳು, ರಾಜಸ್ಥಾನದ ಗೌರವವೇನು, ರಾಜನ
ಯೋಗ್ಯತೆ ಹೇಗಿರಬೇಕು, ಆಸ್ಥಾನದಲ್ಲಿ ಮಂತ್ರಿಯಾದವನ ಅಧಿಕಾರದ ವ್ಯಾಪ್ತಿ
ಎಷ್ಟು ಎಂಬುದಕ್ಕೆ ಶಾಸ್ತ್ರದ ಆಧಾರ ಕೊಟ್ಟು, ಇದು ನಿನ್ನ ಉದ್ಧಟತನವೆಂದು
ಕೌರವನ ಮಾತನ್ನು ಖಂಡಿಸಿದಾಗ ಅಲ್ಲಿದ್ದವರೆಲ್ಲಾ ವಿಸ್ಮಯಗೊಂಡರು. ಇವರ<noinclude></noinclude>
keapkblziis4j009etrby5pxt0yb1db
ಪುಟ:ಯಕ್ಷಗಾನ ಮಕರಂದ.pdf/೨೧೫
104
100135
316912
306437
2026-05-04T11:46:42Z
Shreelatha.Halemane
7642
316912
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Right|'''189'''}}
ನನ್ನನ್ನು ತೋರಿಸಿ, ನನಗೊಂದು 'ಅರ್ಥ' ಕೊಡಿಸುತ್ತಿದ್ದರು. ಕೆಲವು ವರ್ಷಗಳು
ಈ ರೀತಿ ಕಳೆದರೂ ನನ್ನ ಅರ್ಥಗಾರಿಕೆ ಬಹಳ ಮುಂದುವರಿಯದಿದ್ದುದನ್ನು ಗಮನಿಸಿ,
“ನೀವು ಯಾವುದಾದರೂ ಸಂಘದ ಸದಸ್ಯರಾಗಿ ವಾರಕ್ಕೊಮ್ಮೆ ನಡೆಯುವ ಕೂಟ
ಗಳಲ್ಲಿ ಅಭ್ಯಾಸ ಮಾಡಿದರೆ ಒಳ್ಳೆಯದು” ಎಂದು ಸಲಹೆಯಿತ್ತರು.
{{gap}}ಅವರ ಹಾಸ್ಯರಸವು ಎಂತಹ ಸಮುದ್ರಗಂಭೀರರನ್ನೂ ನಗಿಸುವಂತಿತ್ತು.
ಒಂದು ಸಾರಿ 'ಜರಾಸಂಧ'ನಾಗಿ ಕೃಷ್ಣ ತಮ್ಮ ಮೂವರ ಪರಿಚಯ ಮಾಡಿಕೊಡು
ತಿದ್ದಾಗ, ಅರ್ಜುನನ ಕಡೆಗೆ ಬೆಟ್ಟು ತೋರಿಸಿ, “ಈ ಪಡುವಲ ಕಾಯಿಗೆ ಕೈಕಾಲು
ಬಂದಂತಿರುವ ಇವನಾರು........?” ಎಂದು ಸಮಯ ಸ್ಫೂರ್ತಿಯಿಂದ ಕೇಳಿದಾಗ,
ಸಭೆಯಲ್ಲ ನಗೆಗಡಲಲ್ಲಿ ತೇಲಾಡಿತು. ಮತ್ತೊಮ್ಮೆ ಸೇತುಬಂಧನದ 'ರಾವಣ'ನ
ಪಾತ್ರವನ್ನು ವಹಿಸಿ-ರಾಮನ ದಂಡಿನ ಬರೋಣವನ್ನು ತಿಳಿದು, ಬೇಕಾದ ರಕ್ಷಣಾ
ವ್ಯವಸ್ಥೆಯನ್ನು ಮಾಡಿಸುವ ಭರದಲ್ಲಿ ನಮ್ಮ ಸಹಾಯಕ್ಕಾಗಿ ಬಂದಿರುವ ಭೂತ
ಭೇತಾಳಾದಿಗಳನ್ನು ಕೋಟೆಯ ಸುತ್ತಲೂ ನಿಲ್ಲಿಸಿಬಿಟ್ಟು ನಿಮಗೀವೊತ್ತು ಊಟ
ಇಲ್ಲ' ಎಂದು ಬಿಟ್ಟರೆ ಸಾಕು, ಬಂದಿರುವ ರಾಮನ ಕಡೆಯ ಮಂಗಗಳನ್ನೆಲ್ಲಾ ನುಂಗಿ
ಬಿಡುತ್ತಾವೆ........” ಎಂದಾಗ ಬಾಯಿ ತುಂಬಾ ತಾಂಬೂಲ ತುಂಬಿಕೊಂಡಿದ್ದ
ಒಬ್ಬಿಬ್ಬರು ಬಾಯಿ ಮುಚ್ಚಿರಲಾರದೆ, ಅಕ್ಕ ಪಕ್ಕದವರ ಮೇಲೆ ತಾಂಬೂಲ ಸೇಚನ
ಮಾಡಿದರು. ಗುರಿಯಾದವರು ಸುಣ್ಣದ 'ಡಬ್ಬಿ'ಗಳಿರುವ ಮಹನೀಯರ ಆಶ್ರಯ
ಪಡೆದು ಗಾರೆಬಳಿದುಕೊಳ್ಳಬೇಕಾಯಿತು.
{{gap}}ಕರ್ಣಪರ್ವದಲ್ಲಿ ಶ್ರೀಯುತರು ಹೆಚ್ಚಾಗಿ ಶಲ್ಯನ ಪಾತ್ರವಹಿಸುತ್ತಿದ್ದರು
ದಿ| ಕಿಲ್ಲೆಯವರಿದ್ದಷ್ಟು ದಿವಸ, ಆ ಕರ್ಣ-ಶಲ್ಯರ ಉಪಾಲಂಭದ ವೈಖರಿ, ಇವ
ರಿನ್ನು ಮುಖ ನೋಡಿ ಮಾತಾಡಿಕೊಳ್ಳಬಹುದೇ' ಎಂಬ ಸಂದೇಹವನ್ನು ಹುಟ್ಟಿಸು
ತಿತ್ತು. ಒಮ್ಮೆ ಒಂದು ತಾಳಮದ್ದಳೆ ಬೆಳಕು ಹರಿದು ಬಿಸಿಲು ಹೊಡೆಯುವ ತನಕ
ನಡೆದರೂ, ಆ ಕರ್ಣ-ಶಲ್ಯರ ಅಬ್ಬರಕ್ಕೆ ಸಭಿಕರೆಲ್ಲ ಸ್ತಂಭಿತರಾಗಿ ಕುಳಿತಿದ್ದರು.
'ಕರ್ಣಪರ್ವದ' ದುರ್ಯೋಧನನ ಪಾತ್ರದಲ್ಲಿ ದುರ್ಯೋಧನನ ವಾಕ್ಚಾತುರ್ಯ
ಅದ್ಭುತವಾಗಿ ಎದ್ದು ಕಾಣುತ್ತಿತ್ತು. ಆ ಭಾಗದ ದುರ್ಯೋಧನ “ಶಾಸ್ತ್ರಿಗಳಂತೆ
ಹೇಳುವವರಿಲ್ಲ” ಎಂದು ದೇರಾಜೆ ಸೀತಾರಾಮಯ್ಯನವರ ಮತ.
{{gap}}ಮೂಡಬಿದ್ರೆಯ ಸಮಾಜ ಮಂದಿರದಲ್ಲಿ ಒಮ್ಮೆ 'ಭೀಷ್ಮಾರ್ಜನ' ನಡೆದಿತ್ತು.
ಅಂದಿನ ಭೀಷ್ಮನ ಕೊರಗು, ಮನದಳಲು, ಸಭಿಕರಿಗೆ ಜೀವಂತವಾಗಿ ಕಂಡು ಬಂತು.
ಕರ್ಮ ಬಂಧನದ ವಿಚಾರವಾಗಿ ಕೃಷ್ಣನೊಡನೆ ನಡೆದ ಜಿಜ್ಞಾಸೆ, ಮಾನಸ ಗಂಗೋತ್ರಿ
ಯಿಂದ ಆಗಮಿಸಿದ್ದ ಅತಿಥಿಗಳೊಬ್ಬರು ಉದ್ಧಾರವೆತ್ತುವಂತೆ ಮಾಡಿತ್ತು.
{{gap}}ಎಡಪದವಿನ ವಿವೇಕಾನಂದ ಹೈಸ್ಕೂಲಿನಲ್ಲಿ 'ಸುಧನ್ವ ತಾಮ್ರಧ್ವಜ......
ನಡೆದಿತ್ತು. ದಿವಂಗತರು ಮಯೂರಧ್ವಜೆ ಹೇಳಿದ್ದರು, ಕೃಷ್ಣ ಬ್ರಾಹ್ಮಣನಾಗಿ<noinclude></noinclude>
r6yhk1qivjw4krihn1d02dzzihegicm
ಪುಟ:ಯಕ್ಷಗಾನ ಮಕರಂದ.pdf/೨೪೩
104
100163
316914
281782
2026-05-04T11:58:09Z
Shreelatha.Halemane
7642
/* Proofread */
316914
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|217}}
{{gap}}ಒಂದು ಕಡೆ *ಭೀಷ್ಮಾರ್ಜುನ' ಪ್ರಸಂಗ. ಶಾಸ್ತ್ರಿಗಳು ಭೀಷ್ಮ. ತಲೆಯಲ್ಲಿ
ಸಾಕಷ್ಟು ತುಂಬಿಕೊಂಡಿದ್ದ ಕೌರವ ಪಾತ್ರಧಾರಿ "ಆಕ್ಟೋಹಿಣಿ' ಎಂಬ ಪರಿಭಾಷೆಯ
ಮೇಲೆ ಪಟ್ಟು ಹಿಡಿದು ಪರೀಕ್ಷಿಸಲೋ ಎಂಬಂತೆ ಅದಷ್ಟು? ಇದೆಷ್ಟು ? ಎಂದು.
ಕುತ್ತಿ ಕುತ್ತಿ ಪ್ರಶ್ನಿಸತೊಡಗಿದಾಗ, ಶಾಸ್ತ್ರಿಗಳು. . *ಕೃಪಾಚಾರ್ಯರಂದ ಅಷ್ಟು
ವರ್ಷ, ದ್ರೋಣಾಚಾರ್ಯರಿಂದ ಅಷ್ಟು ವರ್ಷ ಪಾಠ ಹೇಳಿಸಿದ್ದೇನಲ್ಲ? ನಾನು
ಈಗ ಹೇಳಬೇಕೇನೋ ನಿನಗೆ?'' ಎಂದು "ಜಬರ್ದಸ್ತು' ಮಾಡಿದುಗ "ಕೌರವ?
ತೆಪ್ಪಗಾಗಬೇಕಾಯಿತು.
{{gap}}ಸ್ಥಳ: ಮಂಗಳೂರು ಪುರಭವನ. ಪ್ರಸಂಗ *ಶರಸೇತು ಭಂಗ', ದೇರಾಜೆಯವರ
ಅರ್ಜುನ, ಇನ್ನೊಬ್ಬ ಪ್ರಸಿದ್ಧ ಅರ್ಥಧಾರಿಯ ಹನೂಮಂತ. ಶಾಸ್ತ್ರಿಗಳ ವೃದ್ಧ.
ವಿಪ್ರ. ಹನೂಮಂತನ ಅರ್ಥ ಹೇಳಿದವರು ಅರ್ಜುನನೊಡನೆ. ಪಟ್ಟು ಬಿಡದೆ ತಮ್ಮ
ವಾದದ ಎಳೆಯನ್ನು ಹಿಡಿದು ಜಗ್ಗುಡಿದಾಗ ಬಹಳ ಹೊತ್ತು ಆಲಿಸಿದ ಶ್ರೋತೃಗಳ
ಸಹನೆಯೂ ತಪ್ಪವಲ್ಲಿಗೆ ಮುಟ್ಟಿ. ಆಗ (ವೃದ್ಧ ಬ್ರಾಹ್ಮಣ) ಮಧ್ಯ ಪ್ರವೇಶಿಸಿ,
ವಾದ ಹೇಗಿರಬೇಕೆಂಬುದಕ್ಕೆ ಶಾಸ್ತ್ರಿಗಳು ಕೊಟ್ಟ ಒಂದು ಉದಾಹರಣೆ: ವಾದ
ಎಂದರೆ ಅದು ದೀಪ ಬೆಳಗಿದಂತೆ ಇರಬೇಕು. ಎಣ್ಣೆ. ಮುಗಿದ ಮೇಲೂ ಉರಿಯುತ್ತಾ
ಇದ್ದರೆ ಬತ್ತಿ ಕರಟಿಹೋಗಿ ಕಮಟು ವಾಸನೆ 'ದಾತ್ರ ಬಂದೀತು. ಫಲಿತಾಂಶ.
ಹನೂಮಂತನ ಅರ್ಥಧಾರಿ ಚಿಕ್ಕ ಮಗುವಿನಂತೆ ತಪ್ಪೊಪ್ಪಿಕೊಂಡರು,
{{gap}}"ಭೀಷ್ಮ ಪರ್ವ'ದ ಒಂದು ಸನ್ನಿವೇಶ, ಶಾಸ್ತ್ರಿಗಳ ಕೃಷ್ಣ, ದೇರಾಜೆಯವರ.
ಭೀಷ್ಮ... “ನೂಸಲೊಡೆದು ರಕ್ತ ಸೂಸೆ,?? ಎಂಬಲ್ಲಿ- "ಭೀಷ್ಮನ ಬಾಣದಿಂದ
ಕೃಷ್ಣನ ಹಣೆಗೆ ಗಾಯವಾಗಿ ರಕ್ತ ಸುರಿಯುತ್ತಿದೆ. ಭೀಷ್ಮ: ಸ್ವಾಮೀ, ನೋವಾ
'ಯಿತೇ ? ಕೃಷ್ಣ (ಹುಸಿ ಮುನಿಸಿಸಿಂದ): ಬಾಣ ಹೊಡೆದು ಗಾಯವಾಗಿ ರಕ್ತ ಸುರಿ
ಯುತ್ತಾ ಇದೆ. ನೋವಾಯಿತೋ ಎಂದು ಕೇಳುತ್ತಿದ್ದಾನೆ. ಭೀಷ್ಮ
(ವಿಷಾದ ಸೂಚಿಸುವ ಧ್ವನಿಯಲ್ಲಿ): ದೇವರಿಗೇ ಹೊಡೆದು ನೋವುಂಟು ಮಾಡಿದೆ.
ಪಾಪಿ ನಾನು, ಕೃಷ್ಣ; ಆಚಾರ್ಯರೇ, ನೋವಾಯಿತು ಎಂದು ನಿಮಗೆ ಯಾರು.
ಹೇಳಿದರು? ಗಾಯ ಮೂತ್ರ ಆಯಿತು, (ಮೊಲೆಯುಣ್ಣುವ ಮಗು ತಾಯಿಯನ್ನು
ಓದೆಯುತ್ತದೆ, ಪರಚುತ್ತದೆ. ತಾಯಿಗೆ ಅದರಿಂದ ನೋವಾಗುವುದೇ? -- ಈ ಭಾವ.)
{{gap}}ಶಾಸ್ತ್ರಿಗಳು ಯಕ್ಷಗಾನ ರಂಗದ ಭೀಷ್ಮ? ಎಂದೇ. ಪ್ರತೀತಿ ಆಗಿದ್ದ ವರಂಃ
ಅನಂತಾಡಿ. ಎಂಬಲ್ಲಿ *ಭೀಷ್ಮಾರ್ಜುನ' ಪ್ರಸಂಗ," *ಧರಿಸಿದೆಯ ಮತ್ಸ್ಯಾದಿ ರೂಪ.
ಗಳ,.....'' ಎಂಬ ಷದ್ಯದ ಭಾಗ್ಯ ಭೀಷ್ಮ (ಶಾಸ್ತ್ರಿಗಳು). ನಿನ್ನ ಅವತಾರದ<noinclude></noinclude>
q3blx3ra1z4rh69mnudzldsy0ho6qr8
ಪುಟ:ಯಕ್ಷಗಾನ ಮಕರಂದ.pdf/೨೫೭
104
100177
316888
314582
2026-05-04T11:23:20Z
Shreelatha.Halemane
7642
/* Validated */
316888
proofread-page
text/x-wiki
<noinclude><pagequality level="4" user="Shreelatha.Halemane" /></noinclude>ಒದಗಿಸುವ ಚಪಲದಿಂದಾಗಿ, ನಾವು ಈ ಮಾಧ್ಯಮವನ್ನು ಕೆಡಿಸುವ ಎಲ್ಲ ಪ್ರಯತ್ನ
ಗಳನ್ನೂ ಮಾಡುತ್ತಿದ್ದೇವೆ.
{{gap}}ಜನಪದ ಕಲೆಯೇ ಆಗಲಿ, ಮಾರ್ಗ ಕಲೆಯೇ ಆಗಲಿ ಅದು ಯಾವ ದೇಶದ್ದೇ
ಆಗಲಿ, ಯಾವ ಜನಗಳದ್ದೇ ಆಗಲಿ ಆ ಮಾಧ್ಯಮದ ಮೂಲಕ ಏನನ್ನು ಸಾಧಿಸ
ಬಲ್ಲುದು, ಸಾಧಿಸಬೇಕು, ಯಾವುದು ಸಂಸ್ಕೃತ, ಯಾವುದು ಅಸಂಸ್ಕೃತ ಎಂಬ ಕಡೆಗೆ ನಮ್ಮ ದೃಷ್ಟಿ ಹರಿಯಬೇಕು. ನಾವು ಬಳಸುವ ಸಮ್ಮಿಶ್ರ ಮಾಧ್ಯಮಗಳ
ಒಂದೊಂದು ಅಂಗವನ್ನೂ ನಾವು ವಿವೇಚನೆಯಿಂದ ಅಭ್ಯಸಿಸಬೇಕು. ನಮ್ಮ ಕಲೆಯ
ಗುರಿ ಏನಿರಬೇಕೆಂದು ನಾವೇ ನಿರ್ಣಯಿಸಿಕೊಳ್ಳಬೇಕು, ಅದಕ್ಕಾಗಿ ಈ ಮಾಧ್ಯಮ
ಗಳನ್ನು ಬಳಸಬೇಕು. ಅಂಥ ಪ್ರವೃತ್ತಿ ಇಲ್ಲದೆ ಹೋದರೆ ನಮ್ಮದೂ ಒಂದು ಕಲೆ,
ಎಂದು ಬೊಬ್ಬಿರಿಯುವುದರಲ್ಲಿ ಅರ್ಥವಿಲ್ಲ. 'ಕಲಾ' ಎನ್ನುವ ಸಂಸ್ಕೃತ ಪದಕ್ಕೂ,
'ಕಲೆ' ಎಂಬ ಅಚ್ಚಕನ್ನಡ ಪದಕ್ಕೂ ಇರುವ ವ್ಯತ್ಯಾಸವನ್ನು ನಾವು ಕಾಣುವ
ತನಕವೂ ನಮ್ಮ ಬಾಯಿಬಡುಕತನವಾಗಲಿ, ಹೆಮ್ಮೆಯಾಗಲಿ ಪ್ರಯೋಜನದ್ದಲ್ಲ.
{{gap}}“ನಾಡಿನ ಸಾರ್ವಜನಿಕವಾದ ಸಂಸ್ಕೃತಿಯ ಸಾರವೆಂದರೆ ದೇಸಿ, ಅದನ್ನು
ಯಾವ ಬಗೆಯಲ ವಿಕೃತಿಗೊಳಿಸಬಾರದು. ಮಾರ್ಗ ಸಾಹಿತ್ಯವಾಗಲಿ,
ಲಕ್ಷಣ ಪದ್ಧತಿಯಾಗಲಿ, ತಮ್ಮ ಹೊರೆಯನ್ನು ಅದರ ಮೇಲೆ ಬಾಗಿಸಿದಲ್ಲಿ,
ಹೊರಿಸಿದಲ್ಲಿ, ಅದರ ತನ್ನತನ ಮಾಯವಾಗುವುದು.”
{{Right|'''-ಮುಳಿಯ ತಿಮ್ಮಪ್ಪಯ್ಯ.'''}}<noinclude></noinclude>
hylrrsuxz4m4zr09t5jayq9p9tdgyxt
ಪುಟ:ಯಕ್ಷಗಾನ ಮಕರಂದ.pdf/೨೫೮
104
100178
316892
314585
2026-05-04T11:25:51Z
Shreelatha.Halemane
7642
/* Validated */
316892
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|'''ಯಕ್ಷಗಾನದ ಶಾಸ್ತ್ರೀಯತೆ'''}}
——--------------------------------------------------------
{{Right|- ಕುಕ್ಕಿಲ ಕೃಷ್ಣ ಭಟ್ಟ.}}
{{gap}}ಬಯಲಾಟ ಹಾಗೂ ದಶಾವತಾರವೆಂದು ಕರೆಯಲ್ಪಡುವ ಯಕ್ಷಗಾನ
ಪ್ರಯೋಗವು ನಮ್ಮ ದಕ್ಷಿಣ ದೇಶದ ಆಂಧ್ರ, ಕರ್ಣಾಟಕ, ತಮಿಳುನಾಡು ಈ
ಮರು ರಾಜ್ಯಗಳ ವಿಸ್ತಾರದಲ್ಲಿ ಬಹುಕಾಲದಿಂದ ತಾಂಡವವಾಡುತ್ತಿದ್ದರೂ ಇದರ
ಪೂರ್ವೋತ್ತರದ ಕುರಿತು ವಿದ್ವಾಂಸರು ಸಂಶೋಧನೆಗೆ ಕೈಹಚ್ಚಿರುವುದು ಕಳೆದ
ಐವತ್ತು ವರ್ಷಗಳಿಂದೀಚೆ. ಅಂದಿನಿಂದ, ಯಕ್ಷಗಾನವೆಂಬ ಹೆಸರು ಯಾವುದರಿಂದ
ಬಂತು ? ಇದು ಶಾಸ್ತ್ರೀಯ ಸಂಪ್ರದಾಯವೋ ಅಥವಾ ಜಾನಪದವೋ? ಮಲ
ವೆಲ್ಲಿ ? ಹುಟ್ಟಿದ್ದೆಂದು ? ಎಂಬ ಜಿಜ್ಞಾಸೆಗಳು ಉಂಟಾಗಿವೆ. ಬಯಲಾಟಕ್ಕೆ ಸದೃಶ
ವಾದುದೇ ದಕ್ಷಿಣದ ನಾಲ್ಕನೇ ರಾಜ್ಯವಾದ ಕೇರಳದ ಕಥಕಳಿ ಎಂಬುದು. ಅದು
ಮಕಾಭಿನಯ ಮತ್ತು ವಿಶೇಷವಾದ ಹಸ್ತಮುದ್ರೆಗಳ 'ಚಿತ್ರಾಭಿನಯ'ವುಳ್ಳುದು
ಎಂಬುದಷ್ಟೆ ಬಯಲಾಟಕ್ಕೂ ಅದಕ್ಕೂ ಹೇಳುವಂತಹ ವ್ಯತ್ಯಾಸವಿರುವುದು.
ಆದರೆ, ಹಿಂದಕ್ಕೆ ಈ ವಿಶೇಷತೆಗಳು ಅದರಲ್ಲಿದ್ದಿಲ್ಲವೆಂದೂ, ಬಯಲಾಟಗಳಲ್ಲಿ
ಈಗಲೂ ಕೆಲವೆಡೆ ರೂಢಿ ಇರುವಂತೆ ಭಾಗವತರೊಂದಿಗೆ ಪಾತ್ರಗಳೂ ಹಾಡುವ
ಸಂಪ್ರದಾಯವಿದ್ದಿತ್ತೆಂದೂ, ಆಗ ಹಸ್ತಮುದ್ರೆಗಳ ಅಭಿನಯವು ಇದ್ದಿರಲಿಲ್ಲವೆಂದೂ
ತಜ್ಞರ ಸಂಶೋಧನೆಗಳಿಂದ ತಿಳಿದು ಬಂದಿದೆ. ಆದರೆ ಅದರ ಹಾಡುಗಾರಿಕೆಯ
ನಾಟ್ಯವೂ ಮೊದಲಿಂದಲೂ ಹೆಚ್ಚಿನ ಮಟ್ಟಿಗೆ ಶಾಸ್ತ್ರೀಯವಾದುದೆನ್ನುತ್ತಾರೆ.
{{gap}}ಯಕ್ಷಗಾನವಾದರೆ, ಕೆಲವು ಕಡೆ ಶಾಸ್ತ್ರೀಯವಾದ ಸಂಗೀತ ನಾಟ್ಯಗಳಿಂದ
ಪ್ರಯೋಗಿಸಲ್ಪಡುವುದು, ಕೆಲವು ಕಡೆ ಸಂಗೀತ-ನಾಟ್ಯಗಳಲ್ಲಿ ಶಾಸ್ತ್ರೀಯ ಅಭ್ಯಾಸ
ವಿಲ್ಲದವರಿಂದ ಜಾನಪದವೆಂಬ ಹಾಗೆ ಆಡಲ್ಪಡುವುದು, ಹೀಗೆ ಎರಡು ವಿಧದಲ್ಲಿನಡೆದು ಬಂದಿದೆ. ಅಶಾಸ್ತ್ರೀಯವೆನ್ನುವ ಪ್ರಯೋಗದಲ್ಲಾದರೂ, ಸಾಂಪ್ರದಾಯಿಕವಾದ ಕೆಲವೊಂದು ಶಾಸ್ತ್ರೀಯ ಆನುವಂಶಿಕವನ್ನು ನಾವು ಲಕ್ಷಿಸಬಹುದಾಗಿದೆ. ಮುಖ್ಯವಾಗಿ, ಪಾತ್ರಗಳು ತೆರೆಹಿಡಿದು ರಂಗಸ್ಥಳ ಪ್ರವೇಶ ಮಾಡುವುದು ಯಾವ ಜಾನಪದ ಸಂಪ್ರದಾಯದಲ್ಲೂ ಇರುವಂತಹದಲ್ಲ. ಕಥಾರಂಭಕ್ಕೆ ಮೊದಲು ನಡೆಯುವ ಸಭಾಲಕ್ಷಣವೆಂಬ ನಾಂದಿ ವಿಧಿ; ಅಲ್ಲಿ ಶಾಸ್ರೋ ಲಕ್ಷಣ ಶ್ಲೋಕಗಳ ಸಮೇತ ವಿಸ್ತರಿಸಲ್ಪಡುವ ನಾಟ್ಯ ಲಕ್ಷಣ, ಗಾಯಕ ಲಕ್ಷಣ, ವಾದ್ಯ-ವಾದಕ-ನಟ<noinclude></noinclude>
3mcec8epz06j9idy4emqtj2leplangc
ಪುಟ:ಯಕ್ಷಗಾನ ಮಕರಂದ.pdf/೨೫೯
104
100179
316895
314586
2026-05-04T11:27:30Z
Shreelatha.Halemane
7642
/* Validated */
316895
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Right|9}}
ವಿದೂಷಕ-ತಾಳಮೇಳ ಇತ್ಯಾದಿ ಲಕ್ಷಣಗಳು, ಮುಖಕ್ಕೆ ಬಣ್ಣ ಹಾಕುವ ಕ್ರಮ,
ವೇಷರಚನೆ, ಕಿರೀಟ, ಕಡಗ, ಕಂಕಣ, ಎದೆಹಾರ, ಭುಜಕೀರ್ತಿ ಇತ್ಯಾದಿ ಆಭರಣ
ವಿಶೇಷಗಳೂ ಜಾನಪದ ಸಂಪ್ರದಾಯದಲ್ಲಿಯ ಇದ್ದಂತೆ ತಿಳಿಯುವುದಿಲ್ಲ.
ಅಲ್ಲದೆ ಕುಣಿತದಲ್ಲಿಯೂ, ದೊಡ್ಡಲಾಗ, ಅಂತರಲಾಗ, ಅಡಂತರಲಾಗ, ಒರ್ಮೈ
ಲಾಗ, ಮಂಡಿ, ಬೀಸು, ತಿರುಸು ಎಂದು ಕರೆಯಲಾಗುವ ಹಾರಾಟ-ಸುತ್ತಾಟಗಳು,
ಶಾಸ್ತ್ರಗ್ರಂಥಗಳಲ್ಲಿ ಕಾಣುವ ಉತ್ಪತೀಕರಣ ಮತ್ತು ಭ್ರಮರಿ' ಎಂಬ ನೃತ್ಯ
ವಿಧಾನಗಳೇ ಆಗಿವೆ. ಈ ಲಾಗನೃತ್ತ'ಗಳನ್ನು ಕೇರಳದ ಕಥಕಳಿಯಲ್ಲಿ ಕಾಣಬಹುದು,
{{gap}}ಬಯಲಾಟದ ಈ ಶಾಸ್ತ್ರೀಯಾಂಶಗಳನ್ನು ಲಕ್ಷಿಸಿದ ಮದ್ರಾಸಿನ ಡಾ | ವಿ.
ರಾಘವನ್ ಅವರಂತಹ ಶಾಸ್ತ್ರ ಪರಿಣತರು, ಕಥಕಳಿಯಂತೆ ಇದೂ ಸಂಸ್ಕೃತ ರೂಪಕ,
ಉಪರೂಪಕಗಳ ಪರಂಪರೆಯಲ್ಲಿ ನಡೆದು ಬಂದ ಸಂಪ್ರದಾಯವಿರಬೇಕೆಂದು ಅಭಿ
ಪ್ರಾಯಪಟ್ಟಿರುತ್ತಾರೆ. ನಮ್ಮಲ್ಲಿಯ ಕೆಲಮಂದಿ ವಿದ್ವಾಂಸರು, ಪ್ರಾಯಶಃ
ಬಯಲಾಟದ ಅಶಾಸ್ತ್ರೀಯ ಗಾನನರ್ತನ ಸಂಪ್ರದಾಯವನ್ನು ಲಕ್ಷಿಸಿ, ಹಾಗೂ
ಶಾಸ್ತ್ರೀಯ ಸಂಗೀತಕ್ಕಿಂತ ಭಿನ್ನವಾದ ಜಾನಪದ ಗಾನಪದ್ಧತಿ ಎಂಬುದರಿಂದ ಯಕ್ಷ
ಗಾನವೆಂಬ ಹೆಸರು ಬಂದುದಿರಬೇಕೆಂದು ಊಹಿಸಿ, ಇದೊಂದು ಹಳೆಯ ಜಾನಪದ
ಸಂಪ್ರದಾಯವೆಂದೆಣಿಸಿದ್ದಾರೆ. ಅಲ್ಲದೆ, ಪೂರ್ವದಲ್ಲಿಯೂ ಇದರ ಹಾಡುವಿಕೆಯು
ಶಾಸ್ತ್ರೀಯವಾಗಿ ಇದ್ದಿರಲಿಕ್ಕಿಲ್ಲವೆಂಬ ಭಾವನೆಯಿಂದ, ಪೂರ್ವದ ನಮ್ಮ ಕಾವ್ಯಗಳಲ್ಲಿ
ಬರುವ ಸಂಗೀತ ನಾಟ್ಯ ವರ್ಣನೆಗಳಲ್ಲಿ ಇದಕ್ಕೆ ಆಧಾರಗಳನ್ನು ಹುಡುಕುವ ಪ್ರಯತ್ನ
ಮಾಡಿದ್ದಾರೆ. ಲೇಖನಗಳನ್ನೂ ಬರೆದಿದ್ದಾರೆ.
{{gap}}ಮಂಗಳೂರಿನ ಹಿರಿಯ ವಿದ್ವಾಂಸರಾಗಿದ್ದ ದಿ| ಪಂಡಿತ ಮುಳಿಯ ತಿಮ್ಮಪ್ಪ
ಯ್ಯನವರು, “ಪಾರ್ತಿಸುಬ್ಬ” ಎಂಬ ತಮ್ಮ ಗ್ರಂಥದಲ್ಲಿ ಅಗ್ಗಳದೇವನೆಂಬ ಕವಿಯ
ಚಂದ್ರಪ್ರಭಪುರಾಣ'ದ ಒಂದು ವೃತ್ತದಲ್ಲಿ ಕಾಣುವ ಎಕ್ಕಲಗಾಣ” ಎಂಬ
ಪದವು ಯಕ್ಷಗಾನ ಎಂಬ ಪದದ ಅಪಭ್ರಂಶವೆಂದೂ ಅದೊಂದು ದೇಸೀ ಗಾನ
ಪದ್ಧತಿಯೆಂದೂ ಊಹಿಸಿದ್ದಾರೆ. ಡಾ| ಶಿವರಾಮ ಕಾರಂತರ ತಮ್ಮ “ಯಕ್ಷ
ಗಾನ ಬಯಲಾಟ” ಎಂಬ ಗ್ರಂಥದಲ್ಲಿ ಇದನ್ನು ಒಪ್ಪಿಕೊಂಡಿದ್ದಾರೆ. ಇದರಿಂದ ಡಾ|
ಎಸ್. ವಿ. ಜೋಗಾ ರಾವು ಎಂಬ ಆಂಧ್ರದ ಯಕ್ಷಗಾನ ಸಂಶೋಧಕರು ಅಗ್ಗಳ
----------------------------------------------------------------
ಈ ಗ್ರಂಥದಲ್ಲಿ ಪ್ರಕಟವಾದ ಡಾ| ವಿ. ರಾಘವನ್ ಅವರ 'ಯಕ್ಷಗಾನ' ಎಂಬ ಲೇಖನದ
ಮೊದಲ ಪಾರಾ ನೋಡಿರಿ,
'ತಾಳಮನಿತ್ತು ಸಮ್ಮನಿಸದೊತ್ತುವ ಪಂಚಮನುರಕ್ಕಣಂ
ಮೇಳತೆಯಿಲ್ಲ ಬೀಣೆಯ ಸರಂ ಬಿಡದಿಲ್ಲಿಯಪ್ಪ ಠಾಯೆಯಿಂ
ದಾಣತಿ ಮಾಡಿ ಸಾಳಗದ ದೇಸಿಯ ಗೀತವನಂದು ಪಾಡುಎಂ
ಪಾಣನನುರ್ವರಾಧಿಪತಿ ಲೀಲೆಯನೆಕ್ಕಲಗಾಣನೊರ್ವನಂ ||
{{Right|ಕೇಳುತ್ತು ಮಿರ್ದ (7-96)}}<noinclude></noinclude>
lawmti4bnzstdf0ifyjkst0167uufce
ಪುಟ:ಯಕ್ಷಗಾನ ಮಕರಂದ.pdf/೨೬೦
104
100181
316896
314587
2026-05-04T11:28:09Z
Shreelatha.Halemane
7642
/* Validated */
316896
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|10}}
ದೇವನು ತನ್ನ ಕಾವ್ಯದಲ್ಲಿ “ಎಕ್ಕಲಗಾಣರೆಂಬ ಆದಿವಾಸಿಗಳು ಯಕ್ಷಗಾನವನ್ನು
ಹಾಡುತ್ತಿದ್ದರೆ"Oದು ತಪ್ಪಾಗಿ ಅರ್ಥ ಮಾಡಿಕೊಂಡುದಲ್ಲದೆ, ಆಂಧ್ರದೇಶದಲ್ಲಿರುವ
ಜಕ್ಕುಲರೆಂಬ ಆದಿವಾಸಿಗಳೂ ಅದೇ ಮೂಲದವರೆಂದೆಣಿಸಿ ಅವರ 'ಪಾಟ'ದ
ಜಾನಪದ ಶೈಲಿಯೇ ಯಕ್ಷಗಾನವಾಗಿದ್ದಿರಬಹುದೆಂದೂ ಊಹಿಸಿದ್ದಾರೆ. ಅಲ್ಲದೆ
ಡಾ| ಕಾರಂತರು ಭರತೇಶ ವೈಭವದಲ್ಲಿ 'ಎಕ್ಕಡಿಗ' ಎಂಬ ಶಬ್ದವನ್ನು ಕಂಡO
ಅಲ್ಲಿಯೂ ಯಕ್ಷಗಾನದ ಕುರುಹುಗಳನ್ನು ಕಾಣುತ್ತಾರೆ. ಅಗ್ಗಳದೇವನ ಆ ಪದ್ಯ
ದಲ್ಲಿ ಹೇಳಿದ ಎಕ್ಕಲಗಾಣ ಎಂದರೆ ಯಕ್ಷಗಾನವಲ್ಲ; ಕೈಯಲ್ಲಿ ಜಾಕಟೆಯನ್ನೂ
ತಾಳವನ್ನೂ ಹಿಡಿದು ಹಾಡುವ ಯಕ್ಷಗಾನ ಭಾಗವತನೂ ಅಲ್ಲ. ಹಾಗೂ ಯಕ್ಷ
ಗಾನವು ಜಾನಪದವೆಂಬುದಕ್ಕೆ ಆ ಪದ್ಯದಲ್ಲಿ ಯಾವ ಸಮರ್ಥನೆಯ ದೊರೆಯು
ವುದಿಲ್ಲ ಎಂದು ನಾನು ಅಂದಿನಿಂದಲೂ ಪ್ರತಿಪಾದಿಸುತ್ತ ಬಂದಿದ್ದೇನೆ. ವಸ್ತುತಃ
ಎಕ್ಕಲಗಾಣ ಎಂಬ ಶಬ್ದವು ಅದೇ ಪದ್ಯದಲ್ಲಿರುವ ಠಾಯೆ, ಆಣತಿ, ಸಾಳಗ, ದೇಸಿ
ಇತ್ಯಾದಿ ಶಬ್ದಗಳಂತೆ ಸಂಗೀತಶಾಸ್ತ್ರದ ಒಂದು ಪಾರಿಭಾಷಿಕ ಪದ. ಎಂದರೆ ಅದು
ಸಂಸ್ಕೃತ ಏಕಲ ಗಾಯನ' ಎಂಬುದರ ಅಪಭ್ರಂಶ ರೂಪ, ಯಾವುದೇ ವಾದ್ಯದ
ಸಹಾಯವಿಲ್ಲದೆ ಒಬ್ಬೊಂಟಿಗನಾಗಿ ಹಾಡುವವನು ಎಂದರ್ಥ, ಎಲ್ಲ ಸಂಗೀತಶಾಸ್ತ್ರ
ಗ್ರಂಥಗಳಲ್ಲಿಯೂ ಗಾಯಕಲಕ್ಷಣವನ್ನು ಹೇಳುವಲ್ಲಿ ಇದು ಬರುತ್ತದೆ. ಶಾರ್ಙ್ಗ
ದೇವನ 'ಸಂಗೀತ ರತ್ನಾಕರ'ದಲ್ಲಿರುವ ಆ ಲಕ್ಷಣ ಶ್ಲೋಕವನ್ನು ಪರಾಂಬರಿಸಿದಲ್ಲಿ
ಇದು ಸ್ಪಷ್ಟವಾಗುತ್ತದೆ.
ಏಕಲೋ ಯಮಲೋ ವೃಂದಗಾಯನ ಶೃತಿ ತ್ರಿಧಾ
ಏಕ ಏವತು ಯೋಗಾ ಯದಸಾವೇಕಲ ಗಾಯನಃ
ಸದ್ವಿತೀಯೋ ಯಮಲಕೋ ಸವೃಂದೋ ವೃಂದ ಗಾಯನಃ
{{gap}}“ಏಕಲ, ಯವಲ, ವೃಂದ ಎಂದು ಗಾಯಕರಲ್ಲಿ ಮೂರು ಭೇದಗಳು.
ಯಾವ ಗಾಯಕನು ಒಂಟಿಯಾಗಿ ಒಬ್ಬನೇ ಹಾಡುತ್ತಾನೋ ಅವನು ಏಕಲಗಾಯ
ನನು, ಎರಡನೆಯವನನ್ನು ಕೂಡಿಕೊಂಡು ಹಾಡುವವನು ಯಮಲಗಾಯನನು,
ಅನೇಕರೊಡನೆ (ವಾದಕಗಾಯಕರು) ಹಾಡುವವನು ವೃಂದಗಾಯನನೆನಿಸುತ್ತಾನೆ.”
{{gap}}ಇದನ್ನು ಸಾಧಾರವಾಗಿಯೂ, ಸವಿಸ್ತರವಾಗಿಯೂ ಇತರೆಡೆಗಳಲ್ಲಿ ವಿವೇಚಿಸಿ
ರುತ್ತೇನೆ. ವಿಸ್ತರಭಯದಿಂದ ಇಲ್ಲಿ ಅತಿ ಸಂಕ್ಷೇಪವಾಗಿ ಸೂಚಿಸಿದ್ದೇನಷ್ಟೆ.
-----------------------------------------------------------
1ಡಾ| ಎಸ್. ವಿ. ಜೋಗಾ ರಾವು ಇವರ “ಆಂಧ್ರ ಯಕ್ಷಗಾನ ವಾಹ್ಮಯ ಚರಿತ್ರೆ' ಎಂಬ
ಬೃಹತ್ಸುಸ್ತಕದಲ್ಲಿ ಈ ಪರಿಪಾಠಗಳನ್ನು ನೋಡಬಹುದು. ಆಂಧ್ರ ವಿಶ್ವಕಳಾ ಪರಿಷತ್ತಿನಿಂದ 1961ರಲ್ಲಿ ಪ್ರಕಾಶಿಸಲ್ಪಟ್ಟಿದೆ. 'ರಾಷ್ಟ್ರಮತ ವಿಶೇಷ ಸಂಚಿಕೆ (೧೯೬೦-೬೧) ಯಲ್ಲಿ ಪ್ರಕಟವಾದ ಈ ಲೇಖಕನ 'ಎಕ್ಕಲಗುಣ' ಎಂಬ ಲೇಖನವನ್ನು ನೋಡಬಹುದು.<noinclude></noinclude>
5f3fafc15v8vwsio75eo8oytsb3itpz
ಪುಟ:ಯಕ್ಷಗಾನ ಮಕರಂದ.pdf/೨೬೧
104
100182
316897
314588
2026-05-04T11:28:46Z
Shreelatha.Halemane
7642
/* Validated */
316897
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Right|11}}
{{gap}}ಹೀಗೆ ಜಾನಪದ ಗಾನಪದ್ಧತಿ ಎಂಬುದರಿಂದ ಯಕ್ಷಗಾನವೆಂಬ ಹೆಸರು
ಬಂದುದಿರಬೇಕೆನ್ನುವವರು, ಯಕ್ಷಗಾನವೆಂದು ಕರೆಯಲ್ಪಟ್ಟಿರುವುದೂ, ಪಡುತ್ತಿರು
ವುದೂ ಆ ಗೇಯಪ್ರಬಂಧಗಳೇ ಎಂಬ ವಾಸ್ತವಾಂಶವನ್ನು ಗಮನಿಸುವುದಿಲ್ಲ.
ಇಂದಿಗೂ ಸರ್ವತ್ರ ರೂಢಿಯಲ್ಲಿ ಪಂಚವಟಿ ಯಕ್ಷಗಾನ, ಕರ್ಣಾರ್ಜುನ ಯಕ್ಷಗಾನ,
ಪಾರಿಜಾತ ಯಕ್ಷಗಾನ, ಯಕ್ಷಗಾನ ನಳಚರಿತ್ರೆ ಎಂಬಂತೆ ವ್ಯವಹಾರವಿರುವುದಲ್ಲದೆ
ಕವಿಗಳೇ ತಮ್ಮ ಆ ಕಾವ್ಯಗಳನ್ನು ಯಕ್ಷಗಾನಗಳೆಂದು ಕರೆದಿರುವುದು ಆ ಕೃತಿಗಳಲ್ಲೇ
ಕಂಡುಬರುತ್ತದೆ. ಪ್ರತ್ಯೇಕ ಗಾನಪದ್ಧತಿ ಎಂಬ ಅರ್ಥದಲ್ಲಿ ಯಾರೂ ವ್ಯವಹರಿ
ಸಿದ್ದಿಲ್ಲ. ಉದಾಹರಣೆಗಾಗಿ ದೇವಿದಾಸನೆಂಬ ಕವಿ ತನ್ನ 'ದೇವಿ ಮಹಾತ್ಮ
ಎಂಬ ಯಕ್ಷಗಾನದಲ್ಲಿ “ಗ್ರಹಿಸಿಕೊಂಡವರಲ ದೇವೀ ಮಹಾತ್ಮಗಳ ವಿಹಿತಮನನಾಗಿ
ವರ ಯಕ್ಷಗಾನಗಳ ಕೂಡಿ ತಿಳಿದಂತೆರವ” ಎಂದಿರುತ್ತಾನೆ. (ಇನ್ನೊಬ್ಬ ಯಕ್ಷ
ಗಾನ ಕವಿ) ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ಎಂಬವನು-ಸಿಂಧುಶಯನನ ದಯದಿ
ಯಕ್ಷಗಾನವ ಗೈದೆ” ಎಂದು ತನ್ನ ರುಕಾಂಗದ ಚರಿತ್ರೆ' ಯಕ್ಷಗಾನದ ಕೊನೆಯ
ಲ್ಲಿಯೂ, ಚೆನ್ನಪ್ಪನೆಂಬ ವೀರಶೈವ ಕವಿ ತನ್ನ ಕೃತಿಯ ಕೊನೆಯಲ್ಲಿ “ಶರಣಲೀಲಾ
ಯಕ್ಷಗಾನವ ವಿರಚಿಸಿದೆನು” ಎಂದೂ ಹೇಳಿಕೊಂಡಿರುತ್ತಾರೆ. ಆಂಧ್ರ ಯಕ್ಷಗಾನ
ಗಳಲ್ಲಿಯೂ ಇದೇ ರೀತಿ ಕವಿವಾಕ್ಯಗಳನ್ನು ಕಾಣಬಹುದು.
{{gap}}ಕರ್ಣಾಟಕ ಕವಿಚರಿತ್ರೆಯಲ್ಲಿಯೂ (ಮೂರನೇ ಭಾಗ) “ಅಪ್ಪಯಾರ್ಯ
ನೆಂಬ ಕವಿ ಕಾಳೀಯಮರ್ದನ, ಕುಚೇಲೋಪಾಖ್ಯಾನಗಳೆಂಬ ಯಕ್ಷಗಾನಗಳನ್ನು
ಬರೆದಿದ್ದಾನೆ; ನಂಜಯ್ಯ-ಕಪೋತವಾಕ್ಯವೆಂಬ ಯಕ್ಷಗಾನವನ್ನು ಬರೆದಿದ್ದಾನೆ.
ಇವನ ಯಕ್ಷಗಾನದಲ್ಲಿ ರಾಮನು ಸುಗ್ರೀವನಿಗೆ ಹೇಳಿದ ಕಪೋತ ಕಥೆ ವಿವರಿಸಿದೆ”
ಇತ್ಯಾದಿಯಾಗಿ ಕೊಟ್ಟಿರುವುದನ್ನು ಲಕ್ಷಿಸಬಹುದು. ಕಿಟ್ಟೆಲರ ಕನ್ನಡ ನಿಘಂಟುವಿ
ನಲ್ಲಿ 'ಯಕ್ಷಗಾನ' ಶಬ್ದಕ್ಕೆ - A poetic composition used in dramas
ಎಂಬ ಅರ್ಥವನ್ನು ಕೊಡಲಾಗಿದೆ. ತೆಲುಗು ನಿಘಂಟುಗಳಲ್ಲಿಯೂ ನಾಟ್ಯಕ್ಕೆ ಉಪ
ಯುಕ್ತವಾದ ದೃಶ್ಯಕಾವ್ಯ ಭೇದವೆಂಬ ಅರ್ಥವಿರುವುದಾಗಿದೆ. ಅದಲ್ಲದೆ, ಸಂಗೀತ
ಶಾಸ್ತ್ರಕರ್ತರ ಯಕ್ಷಗಾನ'ವೆಂದು ಪ್ರಬಂಧವನ್ನೇ ಕುರಿತಾಗಿ ಕರೆದಿರುವುದನ್ನು
ನೋಡಬಹುದು. ತಂಜಾವೂರನ್ನಾಳಿದ ರಘುನಾಥ ನಾಯಕನ (ಕ್ರಿ.ಶ. 16-17ನೇ
ಶತಮಾನ) ಆಸ್ಥಾನ ವಿದ್ವಾಂಸನಾಗಿದ್ದ ಗೋವಿಂದ ದೀಕ್ಷಿತನು ತನ್ನ ಸಂಗೀತ
ಸುಧಾ' ಎಂಬ ಶಾಸ್ತ್ರ ಗ್ರಂಥದಲ್ಲಿ ಆ ನಾಯಕ ರಾಜನ ಗ್ರಂಥರಚನೆಗಳನ್ನು
ಈ ರೀತಿಯಾಗಿ ಉಲ್ಲೇಖಿಸುತ್ತಾನೆ-
ಶ್ರೀರುಕ್ಷ್ಮಿಣೀ ಕೃಷ್ಣ ವಿವಾಹ ಯಕ್ಷಗಾನಂ, ಪ್ರಬಂಧಾನಪಿ ನೈಕಭೇದಾನ್ |
ನಿರ್ಮಾಯವಾಗಿ; ಪ್ರಣುತಾರ್ಥ ಭಾಗೈರ್ವಿದ್ವತ್ ಕವೀನಾಂ ವಿದಧಾಸಿ ಹರ್ಷ||(೧-೬೩)
ಎಂದಿರುತ್ತಾನೆ. “ರುಕ್ಷ್ಮಿಣಿ ಕೃಷ್ಣ ವಿವಾಹವೆಂಬ ಯಕ್ಷಗಾನವನ್ನೂ ಇನ್ನಿತರ
ಅನೇಕ ವಿಧದ ಪ್ರಬಂಧಗಳನ್ನೂ ನಿರ್ಮಿಸಿ ವಿದ್ವತ್ಕವಿಗಳಿಗೆ ಹರ್ಷವನ್ನುಂಟು<noinclude></noinclude>
du19fsgqmmi37aoed50g8d6sl1mpi8w
ಪುಟ:ಯಕ್ಷಗಾನ ಮಕರಂದ.pdf/೨೬೨
104
100183
316899
314589
2026-05-04T11:31:27Z
Shreelatha.Halemane
7642
/* Validated */
316899
proofread-page
text/x-wiki
<noinclude><pagequality level="4" user="Shreelatha.Halemane" /></noinclude>12
ಮಾಡಿರುವಿ” ಎಂಬ ಈ ಶ್ಲೋಕದಿಂದ ಯಕ್ಷಗಾನವೆಂದರೆ ಒಂದು ವಿಶಿಷ್ಟ ಪ್ರಬಂಧ
ಜಾತಿ ಎಂಬುದು ಸ್ಪಷ್ಟವಾಗುವುದಷ್ಟೆ.
{{gap}}ಸಂಸ್ಕೃತ 'ಗಾನ' ಶಬ್ದಕ್ಕೆ ಭಾವಾರ್ಥದಲ್ಲಿ ಹಾಡುವಿಕೆ ಎಂಬ ಅರ್ಥವಾದರೆ,
ಕರ್ಮಾರ್ಥದಲ್ಲಿ ಹಾಡಲ್ಪಡುವ ಪ್ರಬಂಧವೆಂದು ಅರ್ಥವಿರುವುದು.
ಶಾಸ್ತ್ರದಲ್ಲಿ ದೇಶೀಯ ಪ್ರಬಂಧಗಳು ಸರ್ವಸಾಮಾನ್ಯವಾಗಿ 'ಗಾನ'ವೆಂದೇ ಕರೆಯ
ಲ್ಪಟ್ಟಿವೆ. ಅಲ್ಲಿ ಈ 'ಗಾನಕ್ಕೆ, ರಾಗಾಂಗ ಭಾಷಾಂಗ ಕ್ರಿಯಾಂಗಾದಿ ದೇಶೀ
ರಾಗಗಳಲ್ಲಿ, ಎಂದರೆ ಇಂದಿಗೂ ಸಂಗೀತರೂಢಿಯಲ್ಲಿರುವ ಗಾಗಗಳಲ್ಲಿ ಹಾಡಲ್ಪಡ
ತಕ್ಕ ದೇಶಭಾಷಾಪ್ರಬಂಧ ಎಂಬ ವಿಶಿಷ್ಟಾರ್ಥವಿರುತ್ತದೆ. 'ಸಂಗೀತ ರತ್ನಾಕರ'ದ
ಪ್ರಬಂಧಾಧ್ಯಾಯದ ಈ ಶ್ಲೋಕಗಳನ್ನು ಪರಿಶೀಲಿಸಿರಿ-
{{gap}}ಯತ್ತುವಾಗ್ಗೇಯಕಾರೇಣ ರಚಿತಂ ಲಕ್ಷಣಾನ್ವಿತಂ |
{{gap}}ದೇಶಿರಾಗಾದಿಷುಪ್ರೋಕ್ತಂ ತಾನಂ ಜನರಂಜನಂ ||
{{gap}}ಈ ಗಾನ (ಪ್ರಬಂಧ)ಗಳು ದೇಶಭಾಷಾರಚನೆಗಳಾಗಿರುವದರಿಂದ ಆ 'ಸಾಹಿ
ತ್ಯ'ಕ್ಕೆ 'ಮಾತು' ಎಂದೇ ಲಕ್ಷಣ ಗ್ರಂಥಗಳಲ್ಲಿ ಕರೆದಿರುವುದನ್ನು ಲಕ್ಷಿಸಬಹುದು-
('ಮಾತು' ಸಂಸ್ಕೃತ ಶಬ್ದ ವಲ್ಲ).
{{gap}}ವಾಖ್ಯಾತುರುಚ್ಯತೇ ಗೇಯಂ ಧಾತುರಿತ್ಯಭಿಧೀಯತೆ
{{gap}}ವಾಗ್ವರ್ಣಸಮುದಾಯಸ್ತು, ಮಾತುರಿತ್ಯುಚ್ಯತೇ ಬುಧೈ
{{gap}}ಇತ್ಯಾದಿ. ವಾಗ್ಗೇಯಕಾರರೆಂದರೆ ಮಾತು (ಸಾಹಿತ್ಯ) ಮತ್ತು ಧಾತು (ಸರಿಗಮಾದಿ ಸ್ವರವಿಧಿ, ಅಥವಾ ರಾಗನಿರ್ದೇಶ) ಇವುಗಳಲ್ಲಿ ರಚನಾಸಾಮರ್ಥ್ಯವುಳ್ಳವರು ಎಂದರ್ಥ “ಮಾತು ಧಾತುದ್ವಯೋಃ ಕರ್ತಾ ಪ್ರೊಕ್ತೋ ವಾಗ್ಗೇಯಕಾರಕಃ |”
{{gap}}ಯಕ್ಷಗಾನಗಳು ಅಂತಹ ವಾಗ್ಗೇಯಕಾರ ರಚನೆ'ಗಳೆಂದು ತೆಲುಗು ಲಕ್ಷಣ
ಕಾರರು ಹೇಳಿದ್ದಾರೆ. ಈಗ ಸುಮಾರು 300 ವರ್ಷಕ್ಕೆ ಹಿಂದಿನವನಾದ ಆಂಧ್ರದ
ಪ್ರಸಿದ್ಧ ಯಕ್ಷಗಾನ ಕವಿ ಆದಿ ಭಟ್ಟ ನಾರಾಯಣದಾಸನೆಂಬವನು ಆ ಕುರಿತು
ಹೀಗೆ ಹೇಳಿದ್ದಾನೆ…
{{gap}}'ಯಕ್ಷಗಾನಮುಗೂಡ ವಾಗ್ಗೇಯಕಾರ ಪ್ರಣೀತವುಲೇ, ಶ್ರುತಿಲಯಾತ್ಮಕ ರಾಗವೈವಿ
{{gap}}ಧ್ಯಮು ಜಾತಿ ಮೂರ್ಛನಾಯುತಮೈನ ಸ್ವರಾಲಾಪಯುಗಲಿಗಿನ ಗೇಯರಚನ',
{{gap}}ಅಂತೆಯೇ ಇದು ವೀಣಾದಿ ವಾದ್ಯದೊಂದಿಗೆ ಹಾಡಲ್ಪಡುತ್ತಿತ್ತು ಎಂಬು
ದನ್ನೂ, ತಂಜಾವೂರಿನ ವಿಜಯರಾಘವ ನಾಯಕನ ಆಸ್ಥಾನ ಕವಿಯಾಗಿದ್ದ ಚೆಂಗಲ್ವ
ಕಾಳಕವಿ ಎಂಬವನು ರಾಧಾವಿಲಾಸ'ವೆಂಬ ತನ್ನ ಕಾವ್ಯದಲ್ಲಿ ವರ್ಣಿಸಿರುವುದನ್ನು
ನೋಡಬಹುದು
'ಯಕ್ಷಗಾನಂಬುನು ರಾವಣಹಸ್ಯ, ಮುಡುಕು, ದಂಡಮೀಟಲು (ಚೆಂಗುಲು) ಜೇಕಟ, ತಾಳಮುಲನು, ಜೋಲ, ಸುವ್ವಾಲ, ಧವಳಯಲೇಲಲಮರ, ಕೊಂದರತಿವಲು ವಿನಿಪಿಂಚಿರಂದಮುಗನು'<noinclude></noinclude>
44mafs35d17p1osofenbx98ci7r60uv
316900
316899
2026-05-04T11:32:01Z
Shreelatha.Halemane
7642
316900
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|12}}
ಮಾಡಿರುವಿ” ಎಂಬ ಈ ಶ್ಲೋಕದಿಂದ ಯಕ್ಷಗಾನವೆಂದರೆ ಒಂದು ವಿಶಿಷ್ಟ ಪ್ರಬಂಧ
ಜಾತಿ ಎಂಬುದು ಸ್ಪಷ್ಟವಾಗುವುದಷ್ಟೆ.
{{gap}}ಸಂಸ್ಕೃತ 'ಗಾನ' ಶಬ್ದಕ್ಕೆ ಭಾವಾರ್ಥದಲ್ಲಿ ಹಾಡುವಿಕೆ ಎಂಬ ಅರ್ಥವಾದರೆ,
ಕರ್ಮಾರ್ಥದಲ್ಲಿ ಹಾಡಲ್ಪಡುವ ಪ್ರಬಂಧವೆಂದು ಅರ್ಥವಿರುವುದು.
ಶಾಸ್ತ್ರದಲ್ಲಿ ದೇಶೀಯ ಪ್ರಬಂಧಗಳು ಸರ್ವಸಾಮಾನ್ಯವಾಗಿ 'ಗಾನ'ವೆಂದೇ ಕರೆಯ
ಲ್ಪಟ್ಟಿವೆ. ಅಲ್ಲಿ ಈ 'ಗಾನಕ್ಕೆ, ರಾಗಾಂಗ ಭಾಷಾಂಗ ಕ್ರಿಯಾಂಗಾದಿ ದೇಶೀ
ರಾಗಗಳಲ್ಲಿ, ಎಂದರೆ ಇಂದಿಗೂ ಸಂಗೀತರೂಢಿಯಲ್ಲಿರುವ ಗಾಗಗಳಲ್ಲಿ ಹಾಡಲ್ಪಡ
ತಕ್ಕ ದೇಶಭಾಷಾಪ್ರಬಂಧ ಎಂಬ ವಿಶಿಷ್ಟಾರ್ಥವಿರುತ್ತದೆ. 'ಸಂಗೀತ ರತ್ನಾಕರ'ದ
ಪ್ರಬಂಧಾಧ್ಯಾಯದ ಈ ಶ್ಲೋಕಗಳನ್ನು ಪರಿಶೀಲಿಸಿರಿ-
{{gap}}ಯತ್ತುವಾಗ್ಗೇಯಕಾರೇಣ ರಚಿತಂ ಲಕ್ಷಣಾನ್ವಿತಂ |
{{gap}}ದೇಶಿರಾಗಾದಿಷುಪ್ರೋಕ್ತಂ ತಾನಂ ಜನರಂಜನಂ ||
{{gap}}ಈ ಗಾನ (ಪ್ರಬಂಧ)ಗಳು ದೇಶಭಾಷಾರಚನೆಗಳಾಗಿರುವದರಿಂದ ಆ 'ಸಾಹಿ
ತ್ಯ'ಕ್ಕೆ 'ಮಾತು' ಎಂದೇ ಲಕ್ಷಣ ಗ್ರಂಥಗಳಲ್ಲಿ ಕರೆದಿರುವುದನ್ನು ಲಕ್ಷಿಸಬಹುದು-
('ಮಾತು' ಸಂಸ್ಕೃತ ಶಬ್ದ ವಲ್ಲ).
{{gap}}ವಾಖ್ಯಾತುರುಚ್ಯತೇ ಗೇಯಂ ಧಾತುರಿತ್ಯಭಿಧೀಯತೆ
{{gap}}ವಾಗ್ವರ್ಣಸಮುದಾಯಸ್ತು, ಮಾತುರಿತ್ಯುಚ್ಯತೇ ಬುಧೈ
{{gap}}ಇತ್ಯಾದಿ. ವಾಗ್ಗೇಯಕಾರರೆಂದರೆ ಮಾತು (ಸಾಹಿತ್ಯ) ಮತ್ತು ಧಾತು (ಸರಿಗಮಾದಿ ಸ್ವರವಿಧಿ, ಅಥವಾ ರಾಗನಿರ್ದೇಶ) ಇವುಗಳಲ್ಲಿ ರಚನಾಸಾಮರ್ಥ್ಯವುಳ್ಳವರು ಎಂದರ್ಥ “ಮಾತು ಧಾತುದ್ವಯೋಃ ಕರ್ತಾ ಪ್ರೊಕ್ತೋ ವಾಗ್ಗೇಯಕಾರಕಃ |”
{{gap}}ಯಕ್ಷಗಾನಗಳು ಅಂತಹ ವಾಗ್ಗೇಯಕಾರ ರಚನೆ'ಗಳೆಂದು ತೆಲುಗು ಲಕ್ಷಣ
ಕಾರರು ಹೇಳಿದ್ದಾರೆ. ಈಗ ಸುಮಾರು 300 ವರ್ಷಕ್ಕೆ ಹಿಂದಿನವನಾದ ಆಂಧ್ರದ
ಪ್ರಸಿದ್ಧ ಯಕ್ಷಗಾನ ಕವಿ ಆದಿ ಭಟ್ಟ ನಾರಾಯಣದಾಸನೆಂಬವನು ಆ ಕುರಿತು
ಹೀಗೆ ಹೇಳಿದ್ದಾನೆ…
{{gap}}'ಯಕ್ಷಗಾನಮುಗೂಡ ವಾಗ್ಗೇಯಕಾರ ಪ್ರಣೀತವುಲೇ, ಶ್ರುತಿಲಯಾತ್ಮಕ ರಾಗವೈವಿ
{{gap}}ಧ್ಯಮು ಜಾತಿ ಮೂರ್ಛನಾಯುತಮೈನ ಸ್ವರಾಲಾಪಯುಗಲಿಗಿನ ಗೇಯರಚನ',
{{gap}}ಅಂತೆಯೇ ಇದು ವೀಣಾದಿ ವಾದ್ಯದೊಂದಿಗೆ ಹಾಡಲ್ಪಡುತ್ತಿತ್ತು ಎಂಬು
ದನ್ನೂ, ತಂಜಾವೂರಿನ ವಿಜಯರಾಘವ ನಾಯಕನ ಆಸ್ಥಾನ ಕವಿಯಾಗಿದ್ದ ಚೆಂಗಲ್ವ
ಕಾಳಕವಿ ಎಂಬವನು ರಾಧಾವಿಲಾಸ'ವೆಂಬ ತನ್ನ ಕಾವ್ಯದಲ್ಲಿ ವರ್ಣಿಸಿರುವುದನ್ನು
ನೋಡಬಹುದು
'ಯಕ್ಷಗಾನಂಬುನು ರಾವಣಹಸ್ಯ, ಮುಡುಕು, ದಂಡಮೀಟಲು (ಚೆಂಗುಲು) ಜೇಕಟ, ತಾಳಮುಲನು, ಜೋಲ, ಸುವ್ವಾಲ, ಧವಳಯಲೇಲಲಮರ, ಕೊಂದರತಿವಲು ವಿನಿಪಿಂಚಿರಂದಮುಗನು'<noinclude></noinclude>
nizt6p2kjrceyzho7p63tipny0k7csc
ಪುಟ:ಯಕ್ಷಗಾನ ಮಕರಂದ.pdf/೨೬೩
104
100184
316902
314591
2026-05-04T11:33:34Z
Shreelatha.Halemane
7642
/* Validated */
316902
proofread-page
text/x-wiki
<noinclude><pagequality level="4" user="Shreelatha.Halemane" /></noinclude>(ರಾವಣಹಸ್ತ = ಇಪ್ಪತ್ತು ತಂತಿಗಳ ವೀಣೆ; ಮುಡುಕು = ಉಡು ಎಂಬ ಚರ್ಮ ವಾದ್ಯ; ದಂಡೆಮೀಟಲು = ವೀಣೆ; ಜೇಕಟ = ಜಾಕಟಿ.)
{{gap}}ಆಂಧ್ರದ ಲಕ್ಷಣ ಗ್ರಂಥಗಳಲ್ಲಿ 'ಯಕ್ಷಗಾನ ಲಕ್ಷಣ'ವೆಂದು ಕೊಟ್ಟಿರುವುದು,
ಯಾವ ಯಾವ ವಿಧದ ಪದ್ಯಗಳು, ಹಾಡುಗಳು ಆ ರಚನೆಯಲ್ಲಿ ಬರುತ್ತವೆ ಎಂಬು
ದನ್ನೇ. ಅಲ್ಲಿಯ ಪ್ರಾಚೀನತಮ ಕಾವ್ಯಲಕ್ಷಣ ಗ್ರಂಥವೆನ್ನಲಾದ ಲಕ್ಷಣ ದೀಪಿಕಾ'
ಎಂಬುದರಲ್ಲಿ ಅದು ಹೀಗಿದೆ-------"
{{gap}}"ಯಕ್ಷಗಾನಂಬುನನ್ ವೆಲಯು ಪದಂಬುಲು, ದರುವುಲು, ನೇಲಲು, ಧವಳಂಬುಲು, ಮಂಗಳಹಾರತುಲು, ಶೋಭನಂಬುಲು, ನುಯ್ಯಾಲಜೋಲಲು, ಜಕ್ಕುಲರೇಕು ಪದಂಬುಲು' ಕಂದವೃತ್ತಾದುಲು, ಚಂದಮಾಮ ಸುದ್ದುಲು, ಅಷ್ಟಕಂಬುಲು, ಏಕಪದ, ದ್ವಿಪದ, ತ್ರಿಪದ,ಚತುಷ್ಪದ, ಷಟ್ಟದಾಷ್ಪಪದುಲು ನಿವಿಯಾದಿಗಾಗಲು ನನ್ನಿಯು ಲಯಪ್ರಮಾಣಂಬುಲುನೊಪ್ಪಿಮೃದುಮಧುರ ರಚನಲ ಪ್ರಸಿದ್ಧಂಬೈನ ಕವಿತ್ವಂಬುಲು”-(ಲಕ್ಷಣ ದೀಪಿಕಾ' –
– ಪ್ರಾಚ್ಯಲಿಖಿತ ಪುಸ್ತಕ ಭಂಡಾರ ಡಿ. ನಂ. 1329).
{{gap}}ಇದರಲ್ಲಿ ತೋರುವ ದರುಗಳು ಅಥವಾ ದರುಪದಗಳು, ಏಲೆಗಳು (ಯಾಲ
ಪದಗಳು), ಮಂಗಳಾರತಿ ಪದಗಳು, ಶೋಭನ, ಜೋಗುಳ, ಜಕ್ಕುಲರೇಕು ಇತ್ಯಾದಿ
ಪದಗಳು ಮತ್ತು ಕಂದ, ವೃತ್ತ, ದ್ವಿಪದ, ತ್ರಿಪದ, ಷಟ್ಟದ ಮುಂತಾದ ಛಂದಸ್ಸು
ಗಳು ಸೇರಿರುವ ಪ್ರಬಂಧವು 'ಯಕ್ಷಗಾನ'ವಾಗಿದೆ ಎಂಬ ತಾತ್ಪರ್ಯ. ಹೀಗೆ ಚಿತ್ರಕವಿ ಪೆದ್ದನನೆಂಬವನ ಲಕ್ಷಣಸಾರ ಸಂಗ್ರಹ', 'ಅಪ್ಪಕವೀಯ' ಮುಂತಾದ ಲಕ್ಷಣ ಗ್ರಂಥಗಳಿಂದಲೂ ಯಕ್ಷಗಾನವೆಂಬುದು ಪ್ರಬಂಧದ ಹೆಸರೆಂದು ತಿಳಿಯಬಹುದು.
{{gap}}ಇದು ವರೆಗೆ ದೊರೆತಿರುವ ಕನ್ನಡ, ಆಂಧ್ರ, ತಮಿಳು ಯಕ್ಷಗಾನಗಳೆಲ್ಲ ಹದಿ
ನಾರನೇ ಶತಮಾನಕ್ಕಿಂತ ಈಚೆಗಿನವೇ ಆಗಿರುವದರಿಂದ, ಹಾಗೂ ಅದಕ್ಕಿಂತ ಹಿಂದೆ
ನಮ್ಮ ಹಿಂದಿನ ಕಾವ್ಯಾದಿಗಳಲ್ಲಿ ಯಕ್ಷಗಾನವೆಂಬ ಹೆಸರೇ ದೊರೆಯದಿರುವುದರಿಂದ
ಸಹ, ಈ ಸಂಪ್ರದಾಯವು ಆ ಮೇಲೆಯೇ ಹುಟ್ಟಿದ್ದಿರಬೇಕೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಆಂಧ್ರದಲ್ಲಿಯೂ, ಹದಿನೈದನೇ ಶತಮಾನದ ಪೂರ್ವ ಭಾಗದಲ್ಲಿದ್ದ ಶ್ರೀನಾಥನೆಂಬ ಪ್ರಸಿದ್ಧ ಕವಿಯ, ಭೀಮೇಶ್ವರ ಪುರಾಣ'ದಲ್ಲಿ ಈ ಹೆಸರು ಮೊದಲಾಗಿ ಕಾಣುವುದೆಂದೂ ಹೇಳುತ್ತಾರೆ. ನಮ್ಮ ಹಿಂದಿನ ಕಾವ್ಯಾದಿಗಳಲ್ಲಿ ಈ ಹೆಸರು ಕಾಣದಿದ್ದರೂ ದಶಾವತಾರ ಆಟದ ಸಂಪ್ರದಾಯವು ಕಳೆದ 12-13ನೇ ಶತಮಾನಗಳಲ್ಲಿ
ಇದ್ದಿತ್ತೆಂಬುದಕ್ಕೆ ಗ್ರಂಥಾಧಾರ ದೊರೆಯುವುದು, ಚೌಂಡರಸನೆಂಬ ಕವಿಯ 'ದಶ
ಕುಮಾರ ಚರಿತ'ವೆಂಬ ಕಾವ್ಯದ ಪ್ರಸ್ತಾವನೆಯಲ್ಲಿರುವ ಇದೊಂದು ಪದ್ಯವನ್ನು ಪರಿಶೀಲಿಸಿರಿ. (ಈ ಕವಿಯ ಕಾಲ ಕ್ರಿ. ಶ. 1300 ಎಂದು ಕವಿಚರಿತ್ರೆಯಲ್ಲಿ ಕೊಡಲಾಗಿದೆ)
{{gap}}ಮೊದಲೊಳ್ ದಂಡಿಕವೀಶ್ವರಂ ದಶಕುಮಾರಾಖ್ಯಾನ ಚಾರಿತ್ರಮಂ |
{{gap}}ಪದಪಿಂ ಸಂಸ್ಕೃತ ಭಾಷೆಯಿಂ ರಚಿಸಿದಂ ಧಾತ್ರೀಜನಸ್ತೋತ್ರಸ ||<noinclude></noinclude>
6wht824dw1p5puzfuhcr3dotvxrky7h
ಪುಟ:ಯಕ್ಷಗಾನ ಮಕರಂದ.pdf/೨೬೪
104
100185
316906
314592
2026-05-04T11:35:48Z
Shreelatha.Halemane
7642
/* Validated */
316906
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|14}}
{{gap}}ಮುದವಪ್ಪಂತದನಾಂ ಪ್ರಸಿದ್ಧಿಯವತಾರಾಕಾರಮಂ ನಟ್ಟುವಂ |
{{gap}}ವಿದಿತಂ ರಂಗದೊಳಾಡಿ ತೋರ್ಪ ತೆರದಿಂ ಪೇಳ್ವೆಂ ಸುಕರ್ಣಾಟದಿಂ ||
{{gap}}ಚೌಂಡರಸನ 'ದಶಕುಮಾರ ಚರಿತೆ'ಯೆಂಬುದು ಹತ್ತು ಮಂದಿ ರಾಜಪುತ್ರರ
ಕಥೆಗಳನ್ನೊಳಗೊಂಡ ಕಾವ್ಯ. ಈ ಪದ್ಯದಲ್ಲಿರುವ 'ದಶಾವತಾರಾಕಾರ' ಎಂದರೆ,
ವಿಷ್ಣುವಿನ ಹತ್ತು ಅವತಾರದ ಕಥೆಗಳನ್ನೊಳಗೊಂಡ ರೂಪಕ ಅಥವಾ ದೃಶ್ಯಕಾವ್ಯ
ಎಂದರ್ಥ. 'ನಟ್ಟುವಂ' ಎಂದು ಏಕವಚನವಿದ್ದರೂ ಅದು ನಟ್ಟುವ ವರ್ಗ ಅಥವಾ
ನಟ್ಟುವ ಮೇಳ' ಎಂಬರ್ಥದ ಜಾತ್ಯೇಕವಚನಪ್ರಯೋಗವೆಂದೆಣಿಸಬೇಕು.
ನಟ್ಟುವರೆಂಬವರು ನಾಟಕ ಪ್ರಯೋಗದಲ್ಲಿ ನಿರತರೆಂಬುದು ನಮ್ಮ ಪುರಾತನ ಕನ್ನಡ
ಕಾವ್ಯಗಳಲ್ಲಿ ಬರುವ ವರ್ಣನೆಗಳಿಂದ ತಿಳಿಯುವುದು, ಪೊನ್ನನ ಶಾಂತಿ ಪುರಾಣದಲ್ಲಿ
{{gap}}“ಗೀರ್ವಾಣ ಮಂಗಳ ಗಾಯಕರೆ ಸಂಗೀತ ಗಾಯಕರಾಗೆ ನಿಳಿಂಪ ಭಾರತಿಕರೆ
ನಟ್ಟುವರಾಗೆ ಸನ್ಮಾರ್ಗ ನಾಟಕ ಪ್ರಸ್ತುತ ಪವಿತ್ರ ಸೂತ್ರಧಾರನೆ ಮುಂದೆ ನಿಂದು
ಪುಷ್ಪಾಂಜಲಿಯಂಕೆದರೆ” ಎಂಬ ವರ್ಣನೆ ಬರುತ್ತದೆ.
{{gap}}ಹಿಂದಕ್ಕೆ ನಮ್ಮ ದೇವಸ್ಥಾನಗಳಲ್ಲಿ ಈ ನಟ್ಟುವರು ನಾಟ್ಯಸೇವಾನಿರತರಾಗಿ
ದ್ದುದೂ ಶಾಸನಾದಿಗಳಿಂದ ತಿಳಿದು ಬಂದ ವಿಚಾರ. ಆಂಧ್ರ ವಿದ್ವಾಂಸರಾದ ವಿಸ್ಸ
ಅಪ್ಪಾರಾವು ಎಂಬವರು, ಆಂಧ್ರದ ಕೂಚಿಪುಡಿ ಯಕ್ಷಗಾನ ಸಂಪ್ರದಾಯದ
ಕುರಿತು ಬರೆದ ತಮ್ಮ ಒಂದು ಪ್ರಬಂಧದಲ್ಲಿ ಹೇಳಿದ್ದನ್ನು ಗಮನಿಸಿರಿ
{{gap}}"Inscriptions of the 8th, 9th and 10th centuries show the
existence of another group of artistes known as Nattuva
Melas in Kashmir, Andhra, the Dravida Country and Karnataka.
The quality of the art of these Nattuva Melas, in which women
played important roles, was gradually deteriorating.
It was
therefore felt that the pristine purity and quality of this dance
should be restored and as a result, Brahmana Melas which ex-
cluded women were organised and the Kuchipudi Bhagavata
Mela was one of them. The members of these melas received
a broad cultural education in Sanskrit and Telugu literature.
They were proficient in the Natya Sastra, Nandikeswara's
Abhinaya Darpana and Alamkara Sastra, and underwent a
disciplined and rigorous training in nritta, abhinaya and
music."(Indian Dance' Ministry of Information and Broad-
casting, Government of India publication, 1955.)
{{gap}}ಕೂಚಿಪುಡಿ ಯಕ್ಷಗಾನ ಪ್ರಯೋಗದಲ್ಲಿ ಭಾಮಾಕಲಾಪ, ಗೊಲ್ಲ ಕಲಾಪ,
ದಶಾವತಾರ ಇವು ಅತ್ಯಂತ ಪ್ರಧಾನವಾದುವು ಎಂಬುದು ಇಲ್ಲಿ ಗಮನಾರ್ಹವಾಗಿದೆ.<noinclude></noinclude>
9l9wpr9vg7v72ji6wtw6hvo6htcd9qs
ಪುಟ:ಯಕ್ಷಗಾನ ಮಕರಂದ.pdf/೨೬೫
104
100186
316907
314594
2026-05-04T11:37:40Z
Shreelatha.Halemane
7642
/* Validated */
316907
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Right|15}}
{{gap}}ಹೀಗಿರುವದರಿಂದ ಮೇಲಿನ ಚೌಂಡರಸನ ಪದ್ಯದಲ್ಲಿ ತೋರುವಂತೆ ನಟ್ಟುವರ
ದಶಾವತಾರ ಪ್ರಯೋಗವೇ ನಮ್ಮ ದಶಾವತಾರ ಆಟದ ಪೂರ್ವಸ್ಥಿತಿ ಎಂದು
ನ್ಯಾಯವಾಗಿ ಊಹಿಸಬಹುದಾಗಿದೆ. ಅಲ್ಲದೆ ನಮ್ಮ ಪೂರ್ವದ ಕನ್ನಡ ಕಾವ್ಯಗಳಲ್ಲಿ
ವಿಶೇಷವಾಗಿ ವರ್ಣಿಸಲ್ಪಟ್ಟಿರುವ ನಾಟಕಗಳು, ಸಾಮಾನ್ಯವಾಗಿ ಈಗ ವಿದ್ವಾಂಸರು
ಊಹಿಸುತ್ತಿರುವಂತೆ, ಭಾಸ-ಕಾಳಿದಾಸಾದಿ ಕವಿಗಳ ಸಂಸ್ಕೃತ ನಾಟಕಗಳಾಗಿರ
ಬೇಕೆಂದು ಎಣಿಸಬೇಕಾಗಿಲ್ಲ. ಅವು ಪ್ರಾಯಶಃ ಸಂಸ್ಕೃತ ಉಪರೂಪಕಗಳೊ,
ಅಥವಾ ಅಂತಹದೇ ದೃಶ್ಯಪಯುಕ್ತವಾದ ಕನ್ನಡ ಹಾಡುಗಬ್ಬಗಳೊ ಆಗಿರ
ಬಹುದಲ್ಲವೆ ? ಆದ್ದರಿಂದಲೇ ಬಹುಶಃ ನಮ್ಮ ಪೂರ್ವದ ಕನ್ನಡ ಕವಿಗಳು ಕಾಳಿ
ದಾಸಾದಿಗಳ ಸಂಸ್ಕೃತ ನಾಟಕಗಳಂತಹ ರೂಪಕಗಳನ್ನು ರಚಿಸಲಿಲ್ಲ.
{{gap}}ಯಕ್ಷಗಾನ ರಚನೆಗಳು ಹಿಂದೆ ಹೇಳಿದಂತೆ 16ನೇ ಶತಮಾನಕ್ಕಿಂತ ಹಿಂದಿನವು
ದೊರೆತಿಲ್ಲವೇನೋ ಸರಿ. ಆದರೆ 'ಕವಿರಾಜ ಮಾರ್ಗ', 'ಕಾವ್ಯಾವಲೋಕನ'ಗಳಲ್ಲಿ
ಕಾಣುವ ಹಾಡುಗಬ್ಬದ ಲಕ್ಷಣಗಳನ್ನು ಪರಿಶೀಲಿಸಿದರೆ ಅದು ನಮ್ಮ ಯಕ್ಷಗಾನ
ದಂತಹದೇ ರಚನೆಯೆಂದು ತಿಳಿಯಬಹುದು.
{{gap}}ಯಕ್ಷಗಾನದಲ್ಲಿರುವ ರಾಗತಾಳಬದ್ದವಾದ ಪದ್ಯಗಳನ್ನು ಮೊದಲಿಂದಲೂ
ಪದಗಳೆಂದು ಕರೆಯುವ ರೂಢಿಯಿದೆ. ಈ ಪದಗಳ ಎಡೆಎಡೆಯಲ್ಲಿ ಒಂದೊಂದು
ವೃತ್ತಗಳೂ ಕಂದಗಳೂ ಸೇರಿರುವುದು ಯಕ್ಷಗಾನ ರಚನೆಯ ಮುಖ್ಯ ಲಕ್ಷಣ
ವಾಗಿದೆಯಷ್ಟೆ. ಈಗ ಕಾವ್ಯಾವಲೋಕನದಲ್ಲಿ ಕೊಟ್ಟಿರುವ ಹಾಡು, ಹಾಡು
ಗಬ್ಬಗಳ ಲಕ್ಷಣವೇನು?
ಸೂ. 241 ಸಂದಿಸಿ ಕಂದಮುಂ ಪರ
ತೊಂದರಿಕೆಯ ವೃತ್ತಜಾತಿಯುಂ ಪದಮವುತ
ಳೊಂದಿಗೆ ಪನ್ನೆರಡುವರು
ಸಂದುದು ಮೆಲ್ಬಾಡೆನಿಕ್ಕುಮದು ಕನ್ನಡದೊಳ್ ||952||
{{gap}}ಕಂದ ಪದ್ಯವೂ, ಯಾವುದಾದರೂ ಒಂದು ವೃತ್ತವೂ, ಸಂಖ್ಯೆಯಲ್ಲಿ ಹನ್ನೆರಡಕ್ಕೆ ಮೀರದ ಪದಗಳೂ ಇರುವ ರಚನೆಯು ಕನ್ನಡದಲ್ಲಿ 'ಮೆಲ್ವಾಡು' ಎಂದು ಕರೆಯಲ್ಪಡುತ್ತದೆ ಎಂಬುದು ಸಂಗ್ರಹಾರ್ಥವಾಗಿದೆ. ಇಲ್ಲಿ ಪದಗಳು (ಪದಂ ಅವ)
ಎಂದಿರುವುದು ಹಾಡುಗಳೇ ಎಂಬುದರಲ್ಲಿ ಸಂದೇಹವಿಲ್ಲ. ಅದು ಹೊರತು ಮೆಲ್ವಾಡು ಎಂಬ ಹೆಸರಾಗುವುದಾದರೂ ಹೇಗೆ ? ಈ ಪದಗಳು ಅಥವಾ ಹಾಡುಗಳು ಹನ್ನೆರಡಕ್ಕಿಂತ ಹೆಚ್ಚಿರುವ ಪ್ರಬಂಧವು ಮೆಲ್ವಾಡಲ್ಲ, 'ಹಾಡು' ಎಂದೇ ಕರೆಯಲ್ಪಡುತ್ತದೆ.
ಸೂ. 242 ಹದಿನೈದು ಮಿರ್ವತೈದುಂ
ಪದಂ ಯಥಾಸಂಭವ ಪ್ರಬಂಧದ ಮೆಯೊಳ್ |
ಪುದಿದೊದವಿ ನೆಗಳೊಡಂತದು
ಸದಲಂಕಾರಂ ರಸಾಸ್ಪದಂ ಪಾಡಕ್ಕುಂ ॥ 953 ||<noinclude></noinclude>
mkddsnt55iy6gtjm6orhy5ckbsogg2g
ಪುಟ:ಯಕ್ಷಗಾನ ಮಕರಂದ.pdf/೨೬೬
104
100187
316908
314595
2026-05-04T11:40:49Z
Shreelatha.Halemane
7642
/* Validated */
316908
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|16}}
{{gap}}ಹದಿನೈದೋ ಇಪ್ಪತ್ತೈದೋ ಅಥವಾ ವಿಷಯಗೌರವಕ್ಕೆ ತಕ್ಕಂತೆ ಇನ್ನೆಪ್ಪಾ
ದರೋ ಸಂಖ್ಯೆಯ ಪದಗಳಿರಬಹುದಾದ ರಸಾಸ್ಪದ ಪ್ರಬಂಧಕ್ಕೆ 'ಪಾಡು' ಎಂಬ
ಹೆಸರೆಂದು ಈ ಪದ್ಯಕ್ಕೆ, ಅರ್ಥವಾಗುವುದು. ಇನ್ನು:-
ಸೂ. 243
ಪಾಡುಗಳಿಂದಂ ತರಿಸಲೆ
ಮಾಡಿದುದಂ ಪಾಡುಗಬ್ಬವೆಂದು ಬುಧರ್ ಕೊಂ
ಡಾಡುವರದರಿಂ ದಲ್ ಮೇಲ್
ನಾಡುಂ ರೂಢಿಯ ಬೆದಂಡೆಗಬ್ಬ ಮುದುಕ್ಕುಂ ॥ 954 ||
{{gap}}ಮೇಲೆ ಹೇಳಿದ 'ಪಾಡುಗಳು ಒಂದಕ್ಕಿಂತ ಹೆಚ್ಚು ಸೇರಿರುವ ದೊಡ್ಡ ಪ್ರಬಂಧ
ವಾದರೆ ಅದನ್ನು ವಿದ್ವಾಂಸರು 'ಪಾಡುಗಬ್ಬ'ವೆಂದು ಕರೆಯುತ್ತಾರೆ; ಅದುವೇ
'ಮೇಲ್ಪಾಡು' ಅಥವಾ ರೂಢಿಯಲ್ಲಿ 'ಬೆದಂಡೆ' ಎಂದು ಕರೆಯಲ್ಪಡುವ ಹಾಡು
ಗಬ್ಬವಾಗಿದೆ ಎಂದು ಈ ಪದ್ಯದ ತಾತ್ಪರ್ಯ. ಆದುದರಿಂದ 'ಬೆದಂಡೆ' ಎಂಬುದ
ರಲ್ಲಿ, ಎಡೆಎಡೆಯಲ್ಲಿ ಒಂದೊಂದು ವೃತ್ತ ಹಾಗೂ ಕಂದಪದ್ಯಗಳು ಸೇರಿರುವ ಪದ
ಗಳು (ತಾಳಬದ್ಧ ಪದ್ಯಗಳು) ಬಹುಸಂಖ್ಯೆಯಲ್ಲಿರುತ್ತವೆ ಎಂದಾಯಿತು. ಅಂತೆಯೇ
ಕಂದವೃತ್ತಗಳ ಸಂಖ್ಯೆಯೂ ಅಧಿಕವಿರುವುದಾಯಿತು. ಹಾಗಾಗಿ 'ಮೇಲ್ಪಾಡು
ಎಂದರೆ ಮಹಾಪ್ರಬಂಧ, ಅದುವೇ ಬೆದಂಡೆ ಎಂದೂ ವ್ಯಕ್ತವಾಯಿತು. ಹೀಗೆ
ಕಂದವೃತ್ತಗಳು ಅಧಿಕ ಸಂಖ್ಯೆಯಲ್ಲಿರುವ 'ಮಹಾಪ್ರಬಂಧ'ವನ್ನು ಸಂಗೀತ ಶಾಸ್ತ್ರ
ಗ್ರಂಥಗಳಲ್ಲಿ 'ಡಸ್ಥ' ಪ್ರಬಂಧವೆಂದೂ ಕರೆಯಲಾಗಿದೆ.ಅನೇಕ ತಾಳಗಳು
ಏಕತ್ರ ಸೇರಿರುವುದೇ 'ಸೂಡ'ದ ಲಕ್ಷಣ-
ಬಹೂನಾಂ ತಾಳಾನಾಂ ಏಕತ್ರ ಗುಂಘನಂ ಸೂಡಃ (ಸಂಗೀತ ಸಾರಸಂಗ್ರಹ)
{{gap}}ಆದುದರಿಂದಲೇ ಅನೇಕ ತಾಳದ ಪದಗಳಿರುವ ಪ್ರಬಂಧವು 'ಸಡಸ್ಥ'ವೆಂದು
ಕರೆಯಲ್ಪಟ್ಟಿರುವುದು. ಇದರ ಹಾಡುವಿಕೆಗೂ 'ಸೂಡಕ್ರಮ'ವೆಂದು ಹೆಸರು,
ಚಾಲುಕ್ಯ ಸೋಮೇಶ್ವರನ ಮಾನಸೋಲ್ಲಾಸ' ಗ್ರಂಥದ ಸಂಗೀತ ಪ್ರಕರಣದಲ್ಲಿರುವ
ಆ ಲಕ್ಷಣ ಶ್ಲೋಕವನ್ನು ಪರಿಶೀಲಿಸಿರಿ:-
{{gap}}ಕಂದ ವೃತ್ತಾಧಿಕಃ ಕಶ್ಚಿತ್ ಪ್ರಬಂಧನ್ಮಹಾನ್ ಪುರಃ |
{{gap}}ಅಲ್ಪ ಪಶ್ಚಾತ್ ಪ್ರಗತವ್ಯ: ಏಪ ಸೂಕ್ರಮೋ ಮತಃ ||
{{gap}}ಪೂರ್ವದ ಸಂಗೀತಗಾನ ಸಂಪ್ರದಾಯದಲ್ಲಿ ಇಂತಹ ಮಹಾಪ್ರಬಂಧವನ್ನು ಮೊದಲಾಗಿ ಹಾಡುವ ಪದ್ಧತಿ ಇತ್ತೆಂದು ಇದರಿಂದ ವ್ಯಕ್ತವಾಗುವುದು. ಯಕ್ಷಗಾನ
ಗಳನ್ನು ಕವಿಗಳು ಮಹಾಪ್ರಬಂಧವೆಂದ ಕರೆದುಕೊಂಡದ್ದಿದೆ. ಇದನ್ನೆಲ್ಲಾ ಪರಿ
ಶೀಲಿಸಿದಲ್ಲಿ, ಇಂದಿನ 'ಯಕ್ಷಗಾನ'ವು ಹಿಂದೆ ಮಹಾಪ್ರಬಂಧ ಹಾಗೂ ಬೆದಂಡೆ
ಎಂದೂ ಕರೆಯಲ್ಪಡುತ್ತಿತ್ತು. ಅಲ್ಲದೆ ಅದು ನಾಟ್ಯವಿಲ್ಲದ “ಸಭಾಸಂಗೀತ'ದ
ಲ್ಲಿಯ ಹಾಡಲ್ಪಡುತ್ತಿತ್ತೆಂಬಂದಾಗಿ ಅನುಮಾನಿಸಬಹುದಾಗಿದೆ.<noinclude></noinclude>
4xkc14jc9wxyq4ej1dwz5sbrt4b29mq
ಪುಟ:ಯಕ್ಷಗಾನ ಮಕರಂದ.pdf/೨೬೭
104
100188
316909
314596
2026-05-04T11:43:36Z
Shreelatha.Halemane
7642
/* Validated */
316909
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Right|17}}
{{gap}}ತಾಳಬದ್ಧವಾದ ಪದ್ಯಗಳಿಗೆ ಪದ ಎಂಬ ವ್ಯವಹಾರವು ಪುರಾತನ ಸಂಗೀತ
(ಗಾಂಧರ್ವ) ಶಾಸ್ತ್ರ ಪರಂಪರೆಯಿಂದಲೇ ರೂಢಿಗೆ ಬಂದಿರುವುದಾಗಿದೆ. ನಾಟ್ಯಶಾಸ್ತ್ರ
ದಲ್ಲಿ ಭರತ ಮುನಿಯು ಕೊಟ್ಟಿರುವ ಗಾಂಧರ್ವ ಲಕ್ಷಣವನ್ನು ಪರಿಭಾವಿಸಿರಿ-
{{gap}}ಗಾಂಧರ್ವಂ ಯನ್ಮಯಾ ಸೃಷ್ಟಂ (ಪ್ರೋಕ್ತಂ) ಸ್ವರತಾಲ ಪದಾತ್ಮಕಂ |
{{gap}}ಪದಂ ತಸ್ಯ ಭವೇದ್ದು ಸ್ವರತಾಲಾನುಭಾವಕಂ || (ಅ. 26)
{{gap}}ಸ್ವರ, ತಾಲ, ಪದ, ಈ ಮೂರೂ ಕೂಡಿರುವಂಥಾದ್ದೆ ಗಾಂಧರ್ವ, ಇವು
ಗಳೊಳಗೆ ಪದ ಎಂದರೆ ಸ್ವರತಾಲಕ್ಕೆ ಆಶ್ರಯವಾಗಿರುವ ಗೇಯವಸ್ತು ಅಥವಾ
ಪ್ರಬಂಧವಾಗಿರುತ್ತದೆ ಎಂದು ತಾತ್ಪರ್ಯ. 'ಪದ' ಎಂಬುದಕ್ಕೆ ಛಂದಸ್ಸಿನಲ್ಲಿ ಪದ್ಯದ
ಒಂದು ಪಾದವೆಂಬ ಅರ್ಥವಿರುವುದು. ವ್ಯಾಕರಣದಲ್ಲಿ ಪದವೆಂದರೆ, ಏಕಾರ್ಥ
ಬೋಧಕವಾದ ಒಂದು ಶಬ್ದ -ಸುಬಂತ, ತಿಳಿಂತ ಇತ್ಯಾದಿ. ಇಲ್ಲಿ ಈ ಅರ್ಥಗಳಲ್ಲ
ಎಂದು ಸ್ಪಷ್ಟಿಕರಿಸುವುದಕ್ಕಾಗಿ 'ಪದಂ ತಸ್ಯ ಭವೇದ್ವಸ್ತು' ಎಂದಿರುವುದಾಗಿದೆ.
{{gap}}ಹಾಡುವ ಪದ್ಯಕ್ಕೆ ಪ್ರಬಂಧ, ರೂಪಕ, ಗೀತ, ಗೇಯ ಇತ್ಯಾದಿ ಅನೇಕ
ಹೆಸರುಗಳಿರುತ್ತಾ 'ಪದ' ಎಂಬ ಹೊಸ ಹೆಸರನ್ನು ಗಾಂಧರ್ವದಲ್ಲಿ ಪಾರಿಭಾಷಿಕವಾಗಿ
ಆತನು ಕೊಟ್ಟಿರುವುದರ ಔಚಿತ್ಯವೇನೆಂದರೆ - 'ಪದ' ಶಬ್ದದ ನಿಜವಾದ ಅರ್ಥ
ಹೆಜ್ಜೆ, ಪಾದವಿನ್ಯಾಸ (Foot Step) ಎಂದಾಗಿದೆ - “ಪದಗತ” ಎಂಬುದು
ಧಾತ್ವರ್ಥ; “ಪದ್ಯತೇ, ಪದಂ ವ್ಯಶ್ಯತೇ ಇತಿ ಪದಂ' ಇದು ಆ ಶಬ್ದದ ನಿಷ್ಪತ್ತಿ. ಹೆಜ್ಜೆ
ಇಟ್ಟು ಕುಣಿಯಲಿಕ್ಕಿರುವಂಥಾದ್ದು ಎಂಬ ವಿಶಿಷ್ಟಾರ್ಥದಲ್ಲಿ ಗೇಯವಸ್ತುವಿಗೆ ಪಾರಿ
ಭಾಷಿಕವಾಗಿ 'ಪದ' ಎಂದು ಹೆಸರು ಕೊಟ್ಟಿದ್ದಾಗಿದೆ. ಭರತನ ಗಾಂಧರ್ವವೆಂಬುದು
ನಾಟಕಕ್ಕಾಗಿ ಹುಟ್ಟಿದ್ದು. ಆದುದರಿಂದಲೇ 'ಸಂಗೀತ' ಎಂಬ ಶಬ್ದಕ್ಕೆ-“ನೃತ್ಯಂ
ಗೀತಂಚ ವಾದ್ಯಂಚ ತ್ರಯಂ ಸಂಗೀತಮುಚ್ಯತೇ” ಎಂಬ ವಿಶಿಷ್ಟಾರ್ಥ ಬಂದಿರು
ವುದು. ಭರತೋತ್ತರ ಕಾಲದಲ್ಲಿ ಕುಣಿತದ ಪದ್ಯಕ್ಕೆಲ್ಲ 'ಪದ'ವೆಂಬ ಹೆಸರೇ ನಮ್ಮ
ದೇಶದಲ್ಲಿ ರೂಢಿಯಾಗಿ ಬಂದಿರುವುದನ್ನು ಗಮನಿಸಬಹುದು. “ಪದ್ಮಾವತೀ ಚರಣ
ಚಾರಣ ಚಕ್ರವರ್ತಿ” ಎಂದುಕೊಂಡಿರುವ ಜಯದೇವನು ಆತನ ಪ್ರೇಯಸಿಯಾಗಿದ್ದ
ಪದ್ಮಾವತಿಯ ನಾಟ್ಯಕ್ಕಾಗಿ ರಚಿಸಿದ “ಗೀತಗೋವಿಂದ'ವನ್ನು “ಪದ' ವೆಂದೇ
ಕರೆದಿದ್ದಾನೆ. (ಆ ಅಷ್ಟಪದಿ'ಗಳು ಒಂದೊಂದರಲ್ಲಿ ಎಂಟೆಂಟು ಪಾದಗಳಿರುವುದಲ್ಲ,
ಎಂಟೆಂಟು ಪದಗಳು, ಎಂದರೆ 'ಚರಣಗಳು' ಇರುವುದು. ಆದ್ದರಿಂದಲೇ ಅದು
“ಪದಾವಲಿ) ಲಲಿತ ಕೋಮಲ ಕಾಂತ ಪದಾವಲೀಂ ಶ್ರುಣಂತ ರೇ ಜಯದೇವ
ಸರಸ್ವತೀಂ”.
{{gap}}ಇನ್ನಿತರ ಎಷ್ಟೊಂದು ನೃತ್ಯ ಪದ್ಧತಿಗಳಿವೆ ನಮ್ಮಲ್ಲಿ, ಅವುಗಳ ಹಾಡುಗಳೆಲ್ಲ
ಪದಗಳೆಂದೇ ಕರೆಯಲ್ಪಟ್ಟಿವೆ ರಾಸಲೀಲಾಪದ, ರಾಮಲೀಲಾಪದ, 'ಗೊಬ್ಬ'
ಪದ (ಇದು ಗುಜರಾತಿನ ಗರ್ಬಿ ಎಂಬ ರಾಸನೃತ್ಯದ ಹೆಸರು), ಜಕ್ಕಿಣೀ ಪದ
ಚಿಂದು ಪದ, ಕೊರವಂಜಿ ಪದ, ಕೇರಳದಲ್ಲಿ ಕೃಷ್ಣಾಟ್ಟಂ ಪದ, ಕಥಕಳಿ ಪದ, ದಾಸರ<noinclude></noinclude>
g512ixmppjq8u5lxyqh22yokzzucpfv
ಪುಟ:ಯಕ್ಷಗಾನ ಮಕರಂದ.pdf/೨೬೮
104
100189
316910
314602
2026-05-04T11:44:21Z
Shreelatha.Halemane
7642
316910
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|18}}
ಪದ, ಕ್ಷೇತ್ರಜ್ಞನ ಪದ ಇತ್ಯಾದಿ. ಇದೇ ಪರಂಪರೆಯಿಂದ ಯಕ್ಷಗಾನದ ಹಾಡುಗಳೂ ಪದಗಳೆಂದು ಕರೆಯಲ್ಪಟ್ಟಿರುವುದೂ, ನಾಗವರ್ಮನು ಕೊಟ್ಟಿರುವಂತೆ 'ಬೆದಂಡೆ'ಯ ಹಾಡುಗಳಿಗಾದರೂ ಪದಗಳೆಂಬ ಹೆಸರು ನಾಟ್ಯೋದ್ದಿಷ್ಟವಾದುವೆಂಬುದರಿಂದ ಬಂದಿರಬೇಕೆಂಬುದರಲ್ಲಿ ಸಂದೇಹ ಕಾಣುವುದಿಲ್ಲ.
{{gap}}ಸಂಸ್ಕೃತ ನಾಟಕದಲ್ಲಿ ಬೇರೆ ಬೇರೆ ರಸಭಾವ ಸಂದರ್ಭಗಳಲ್ಲಿ ಹಾಡತಕ್ಕ ಪದಗಳಿಗೆ ಭರತನು ಧ್ರುವಗಳು ಅಥವಾ 'ಧ್ರುವಾ ಪದ'ಗಳೆಂದು ವಿಶೇಷ ಸಂಜ್ಞೆಯನ್ನು ಕೊಟ್ಟಿರುತ್ತಾನೆ. ಪ್ರತ್ಯೇಕ ರಸಭಾವ ಸಂದರ್ಭಗಳಲ್ಲಿ ಇಂತಿಂತಹ ಜಾತಿ, ರಾಗ, ತಾಳಗಳಲ್ಲೇ ಹಾಡಬೇಕೆಂಬ ನಿರ್ಣಯವಿರುವ ಪದಗಳಾದ್ದರಿಂದ ಅವು ಧ್ರುವಗಳು,ಯಕ್ಷಗಾನಗಳಲ್ಲಿ ಬರುವ 'ದರು' ಅಥವಾ 'ದರುಪದಗಳು ಆ ಧ್ರುವ ಅಥವಾ ಧ್ರುವ ಪದಗಳ ತದ್ಭವವೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ, ಅದು ಸರಿಯಾದ್ದೇ.(ಭರತನ ಈ ಧ್ರುವಾಪದಗಳ ಕುರಿತು ಹೆಚ್ಚಿನ ವಿವರಕ್ಕೆ ಈ ಲೇಖಕನ “ನಾಟ್ಯ ಶಾಸ್ತ್ರವೂ ಸಂಸ್ಕೃತ ನಾಟಕಗಳೂ” ಎಂಬ ಲೇಖನವನ್ನು ನೋಡಬಹುದು (ಮಾನವಿಕ ಕರ್ನಾಟಕ', ಸಂ. ೧, ಸಂಚಿಕೆ ೨. ವಿ. ವಿ. ನಿಲಯ, ಮೈಸೂರು).
{{gap}}ಇನ್ನು, ಅಂದಿನ 'ಬೆದಂಡೆ' ಇಂದಿನ'ಯಕ್ಷಗಾನ'ಇವೆರಡೂ ಒಂದೇ ರಚನೆಗಳೆಂದಾದರೆ ಬೆದಂಡೆಗೆ ಯಕ್ಷಗಾನವೆಂಬ ಹೆಸರು ಮತ್ತೆ ಯಾವುದರಿಂದ ಬಂತು? ಎಂಬ ಪ್ರಶ್ನೆ, ಇದನ್ನು ವಿಚಾರಿಸುವ ಮೊದಲು ಬೆದಂಡೆ ಎಂಬ ಹೆಸರೇ ಹೇಗೆ ಬಂತು, ಅದರ ಅರ್ಥವೇನೆಂಬುದನ್ನು ಸ್ವಲ್ಪ ಮಟ್ಟಿಗೆ ಪರಿಶೀಲಿಸುವುದು ಯುಕ್ತವಾಗಿದೆ. ಇದು ಅರ್ಥವಾಗಬೇಕಿದ್ದರೆ ನಮ್ಮ ಶಾಸ್ತ್ರೀಯ ಸಂಗೀತ ಪರಂಪರೆ ಹೇಗೆ ನಡೆದುಬಂದಿತ್ತೆಂಬುದನ್ನು ಸಂಕ್ಷೇಪವಾಗಿಯಾದರೂ ತಿಳಿದುಕೊಳ್ಳುವುದು ಅವಶ್ಯ.
{{gap}}ಹಿಂದೆ ಹೇಳಿದಂತೆ ಭರತನ 'ಗಾಂಧರ್ವವೆಂಬುದು ನಾಟಕರಂಗದಲ್ಲಿ ಅದಕ್ಕಾಗಿಯೇ ಹುಟ್ಟಿದ್ದು, ನಾಟ್ಯಶಾಸ್ತ್ರವೇ ಗಾಂಧರ್ವ ಶಾಸ್ತ್ರ, ಆ ಗಾಂಧರ್ವಸಂಗೀತವೆಂದರೆ ಅದು ರಾಗಾಲಾಪಾನೆ ಇಲ್ಲದ ಕೇವಲ ನಿಬದ್ಧ ಗಾನ, ನಾಟಕದಲ್ಲಿ ಆಲಾಪನೆಗೆ ಅವಕಾಶವಿಲ್ಲ. ಆಲಾಪಪೂರ್ವಕವಾಗಿ ಗೀತೆಗಳನ್ನು ಹಾಡುವ ಸಂಪ್ರದಾಯ ಮತ್ತೆ ವಿಕಾಸಗೊಂಡದ್ದು. ಆ ಸ್ವರಾಲಾಪವೇ ರಾಗವೆಂಬ ಹೆಸರು ಪಡೆದುದು. ಆ ಆಲಾಪವೇ ಅನಿಬದ್ಧಗಾನ. ಈ ಸಂಪ್ರದಾಯವು ಭರತೋಕ್ತ ಪದ್ಧತಿಯಲ್ಲಿದ್ದಿಲ್ಲವಾದ್ದರಿಂದ, ಇದು ಮಾರ್ಗಕ್ಕಿಂತ ಭಿನ್ನ ಎಂಬ ಅರ್ಥದಲ್ಲಿ 'ದೇಶೀ ಗಾನ'ವೆಂದು ರೂಢಿಗೆ ಬಂತು. ಇದರ ಮೂಲ ಶಾಸ್ತ್ರಕರ್ತನು ಮತಂಗ ಮುನಿ, ಆತನ ಶಾಸ್ತ್ರ ಗ್ರಂಥವು ಬೃಹದ್ದೇಶೀ'. “ರಾಗ ಮಾರ್ಗಸ್ಯ ಸದಪಂ ಯಂ ಭರತಾಧಿಭಿಃ”-ಭರತಾದಿಗಳು ಹೇಳದೇ ಇರುವ ಈ ರಾಗಪದ್ಧತಿಯನ್ನು ತಾನು ವಿಸ್ತರಿಸುವುದಾಗಿದೆ ಎಂದು ಆ ಗ್ರಂಥದಲ್ಲಿ ಹೇಳಿಕೊಂಡಿದ್ದಾನೆ. ಅಂದು ಮೊದಲಾಗಿ ದೇಶೀ ಗೀತಪ್ರಬಂಧಗಳನ್ನು ಸಾವಯವವಾದ ರಾಗಾಲಾಪಪೂರ್ವಕವಾಗಿ ನಾಟ್ಯವಿಲ್ಲದ<noinclude></noinclude>
p7kj4d3oygoiu3mv2z0vt3f1gqqbc1k
ಪುಟ:ಯಕ್ಷಗಾನ ಮಕರಂದ.pdf/೨೬೯
104
100190
316911
314599
2026-05-04T11:46:01Z
Shreelatha.Halemane
7642
/* Validated */
316911
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Right|19}}
ಕೇವಲ ಸಂಗೀತ (ಸಭಾಸಂಗೀತ)ದಲ್ಲಿ ಹಾಡುವ ಸಂಪ್ರದಾಯವು ಬೆಳೆದು ಬಂತು.
ನಮ್ಮ ಕರ್ಣಾಟಕ ಸಂಪ್ರದಾಯದಲ್ಲಿ ಇದು 'ದಂಡಿಗಾನ'ವೆಂದು ಪ್ರಸಿದ್ಧವಾಯಿತು.
ಠಾಯೆ, ಆಲಾಪ, ಗೀತ, ಪ್ರಬಂಧ ಇವು ನಾಲ್ಕು ಪ್ರತ್ಯೇಕ 'ದಂಡಿ'ಗಳೆಂದು ಪರಿಗಣಿಸ
ಲ್ಪಟ್ಟಿವೆ. ಪ್ರಚಲಿತ ಸಂಗೀತದ ಮೇಳಕರ್ತ ರಾಗಗಳ ಮೂಲಕರ್ತನಾದ ವೆಂಕಟ
ಮುಖಿಯ (ಹಿಂದೆ ಹೇಳಿದ ಗೋವಿಂದ ದೀಕ್ಷಿತನ ಮಗ ) ಆ ಸಂಗೀತ ಶಾಸ್ತ್ರ
ಗ್ರಂಥವು, ಈ ನಾಲ್ಕು ದಂಡಿಗಳನ್ನು ಪ್ರತ್ಯೇಕ ಅಧ್ಯಾಯಗಳಲ್ಲಿ ನಿರೂಪಿಸಿರು
ವುದಾಗಿ 'ಚತುರ್ದಂಡೀ ಪ್ರಕಾಶಿಕೆ' ಎಂಬ ಹೆಸರು ಪಡೆದಿದೆ.
{{gap}}ಬೆದಂಡೆ ಎಂಬುದರ ಸಂಸ್ಕೃತ ರೂಪವು 'ವೈದಂಡಿಕಂ' ಎಂದೂ ಅದು ಕಾವ್ಯದ ಹೆಸರೆಂದ ಕೇಶಿರಾಜನ 'ಶಬ್ದ ಮಣಿದರ್ಪಣ'ದಿಂದ ತಿಳಿಯುವುದು. ಆದ್ದ
ರಿಂದ ಕನ್ನಡ ಬೆದಂಡೆಯಂತಹದೇ 'ವೈದಂಡಿಕ'ವೆಂಬ ಗೇಯ ಕಾವ್ಯವು ಸಂಸ್ಕೃತದಲ್ಲಿದ್ದಿರಬೇಕು. ಇದು ವರೆಗೆ ಅಂಥಾದ್ದು ಉಪಲಬ್ಧವಿಲ್ಲ. ಆದರೆ ಸಂಗೀತ ಶಾಸ್ತ್ರಗ್ರಂಥದಲ್ಲಿ ಕಾಣುವ 'ಮಹಾಪ್ರಬಂಧ'ವೆಂಬುದೇ ಅದಾಗಿದ್ದಿರರಲು ಕಾರಣ ಉಂಟು, ಇರಲಿ,
{{gap}}ವೈದಂಡಿಕಂ' ಎಂಬುದು 'ದಂಡಿ' ಎಂಬುದರಿಂದ ನಿಷ್ಪನ್ನವಾಗುವ ರೂಪ.
ವಿದಂಡೀ ಎಂದರೆ 'ದಂಡೀ'ಯಿಂದ ವ್ಯಪೇತವಾದ್ದು, ಎಂದರೆ ಹೊರತಾದ್ದು
ಎಂದರ್ಥ. 'ವೈದಂಡಿಕಂ' ಎಂಬ ನಪುಂಸಕಲಿಂಗರೂಪವು ಕಾವ್ಯವೆಂಬರ್ಥದಲ್ಲಿ
ಬಂದುದೆಂಬುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಕೇಶಿರಾಜನು ಹೇಳುವಂತೆ,
'ವೈದಂಡಿಕಂ' ಎಂಬುದರ ತದ್ಭವವಾದ 'ಬೆದಂಡೆ' ಎಂಬ ಹೆಸರು, ದಂಡೀ ಸಂಪ್ರ
ದಾಯದ ಪ್ರಬಂಧವಲ್ಲವೆಂಬರ್ಥದಲ್ಲಿ ಬಂದದ್ದೆಂದು ನ್ಯಾಯವಾಗಿ ತಿಳಿಯಬೇಕು.
ದಂಡೀ ಸಂಪ್ರದಾಯದ ಪ್ರಬಂಧಗಳು ಸಂಗೀತಶಾಸ್ತ್ರ ಗ್ರಂಥಗಳಲ್ಲಿ ಮಾತೃಕಾ,
ಉಮಾತಿಲಕ, ಪಂಚಭಂಗೀ, ಪಂಚತಾಲೇಶ್ವರ, ಶ್ರೀರಂಗ, ತಾಲಾರ್ಣವ ಇತ್ಯಾದಿ
ಹೆಸರುಗಳಿಂದ ಬೇರೇ ಇರುತ್ತವೆ. ಇವೊಂದೊಂದೂ ಬಿಡಿ ಪದ್ಯಗಳಾಗಿವೆ ಹೊರತು
ಪದ್ಯಕಾವ್ಯರೂಪಗಳಾಗಿಲ್ಲ.
{{gap}}ಇನ್ನೀಗ ಯಕ್ಷಗಾನವೆಂಬ ಹೆಸರು ಯಾವುದರಿಂದ ಬಂತು, ಎಂಬ ವಿಚಾರ.
ಈ ಹೆಸರು ಪ್ರಬಂಧವಾಚಕವಾಗಿರುವುದೆಂಬುದನ್ನು ಹಿಂದೆ ನೋಡಿದೆವು. ಯಕ್ಷ
ಗಾನ ಎಂದರೆ ಯಕ್ಷ ಪ್ರಬಂಧ ಎಂದರ್ಥ. ಈ ಸಮಸ್ತ ಪದದಲ್ಲಿ ಯಕ್ಷ' ಶಬ್ದವು
'ಗಾನ' ಶಬ್ದಕ್ಕೆ ವಿಶೇಷಣವಾಗಿ ಇದೆ. 'ಯಕ್ಷ' ಎಂಬ ಧಾತುವಿಗೆ ಪೂಜೆ ಅಥವಾ
ಆರಾಧನೆ ಎಂಬುದೇ ನಿಜಾರ್ಥವೆಂದು ಪಾಣಿನಿಯ ಧಾತುಪಾಠದಿಂದ ತಿಳಿಯು
ವುದು-(ಯಕ್ಷ ಪೂಜಾಯಾಂ), ಆಪಟೆ ಸಂಸ್ಕೃತ ನಿಘಂಟುವಿನಲ್ಲಿ ಯ
1,10A (ಆತ್ಮನೇಪದ) to honour, adore, Worship ಎಂಬ ಅರ್ಥ ಕೊಡ
ಲಾಗಿದೆ. ಅಲ್ಲದೆ ಈ ಧಾತುವಿನಿಂದ ನಿಷ್ಪನ್ನವಾದ ಯಕ್ಷ: ಎಂಬ ಪುಲ್ಲಿಂಗ
ರೂಪಕ್ಕೂ worship (ಪೂಜೆ) ಎಂಬ ಅರ್ಥವಿದೆ. ಆದುದರಿಂದ ಯಕ್ಷಗಾನ<noinclude></noinclude>
04swbwv605hkx0497n7r6lddokh13sa
ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು
4
101285
316561
315998
2026-05-03T15:01:28Z
A826
6806
316561
wikitext
text/x-wiki
{| class="wikitable sortable" style="text-align:center; width:100%; font-size:90%; color: blue;"
|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 32880<br><small>ದತ್ತಾಂಶ ಪಡೆದ ಸಮಯ: 2026-05-03 14:59:57 UTC / 2026-05-03 20:29:57 IST</small>
! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು
|-
| 1 || [[Special:Contributions/Pragathi. BH|Pragathi. BH]] || 0 || 0 || 8102 (8251) || 0 || 0 || 7961 || 77 (154) || 49 (147) || 8312 || '''8251'''
|-
| 2 || [[Special:Contributions/Shreelatha.Halemane|Shreelatha.Halemane]] || 0 || 0 || 5652 (6677) || 0 || 0 || 4727 || 562 (1124) || 280 (840) || 5943 || '''6677'''
|-
| 3 || [[Special:Contributions/Shreesha Sharma|Shreesha Sharma]] || 0 || 0 || 2840 (3131) || 0 || 0 || 1995 || 127 (254) || 93 (279) || 3096 || '''3131'''
|-
| 4 || [[Special:Contributions/Sharanya K H|Sharanya K H]] || 0 || 0 || 3046 (3064) || 0 || 0 || 3032 || 16 (32) || 1 (3) || 3085 || '''3064'''
|-
| 5 || [[Special:Contributions/Ashwini Rai K|Ashwini Rai K]] || 0 || 0 || 284 (592) || 0 || 0 || 70 || 54 (108) || 155 (465) || 358 || '''592'''
|-
| 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553'''
|-
| 7 || [[Special:Contributions/A826|A826]] || 10740 || 0 || 182 (224) || 24 || 0 || 3 || 2 (4) || 25 (75) || 10957 || '''245'''
|-
| 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221'''
|-
| 9 || [[Special:Contributions/Anzx-ooo|Anzx-ooo]] || 2 || 0 || 58 (130) || 0 || 0 || 0 || 8 (16) || 42 (126) || 88 || '''132'''
|-
| 10 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109'''
|-
| 11 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44'''
|-
| 12 || [[Special:Contributions/Vikashegde|Vikashegde]] || 0 || 0 || 21 (40) || 0 || 0 || 0 || 11 (22) || 6 (18) || 25 || '''40'''
|-
| 13 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31'''
|-
| 14 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7'''
|-
| 15 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4'''
|-
| 16 || [[Special:Contributions/Hariprasad Shetty10|Hariprasad Shetty10]] || 0 || 0 || 3 (3) || 0 || 0 || 0 || 0 (0) || 0 (0) || 12 || '''3'''
|-
| 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3'''
|-
| 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1'''
|-
| 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1'''
|-
| 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1'''
|-
| 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1'''
|-
| 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1'''
|-
| 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|}
<noinclude>
<syntaxhighlight lang="python" line copy=1>
#!/usr/bin/env python3
import requests
import time
from datetime import datetime, timezone, timedelta
from collections import defaultdict
import re
START_DATE = datetime(2026, 4, 18, 18, 0, 1, tzinfo=timezone.utc)
END_DATE = datetime(2026, 6, 3, 23, 59, 59, tzinfo=timezone.utc)
TARGET_NAMESPACES = [0, 102, 104, 106, 114]
NAMESPACE_NAMES = {
0: "ಮುಖ್ಯ",
102: "ಕರ್ತೃ",
104: "ಪುಟ",
106: "ಪರಿವಿಡಿ",
114: "ಅನುವಾದ"
}
# Scoring rules for namespace 104
SCORING_RULES = {
'page_creation': 1, # New page creation
'proofread': 2, # Edit summary contains "/* Proofread */"
'validation': 3, # Edit summary contains "/* Validated */"
'regular_edit': 1 # Regular edit in namespace 104
}
WIKI_URL = "https://kn.wikisource.org/w/api.php"
DATA_GENERATION_TIME = datetime.now(timezone.utc)
# Convert to IST for display
IST = timezone(timedelta(hours=5, minutes=30))
DATA_GENERATION_TIME_IST = DATA_GENERATION_TIME.astimezone(IST)
START_DATE_IST = START_DATE.astimezone(IST)
END_DATE_IST = END_DATE.astimezone(IST)
# User to exclude from namespace 0 (set their points to zero)
EXCLUDED_USER = "A826"
EXCLUDED_NAMESPACE = 0
def get_namespace_name(ns):
return NAMESPACE_NAMES.get(ns, f"Namespace {ns}")
def fetch_all_edits():
user_namespace_stats = defaultdict(lambda: defaultdict(set)) # Track unique pages per namespace for scoring
user_scores = defaultdict(lambda: defaultdict(int)) # Track scores by user and namespace
user_edit_details = defaultdict(list) # Store edit details for debugging
user_total_edits = defaultdict(int) # Track total number of edits per user (including duplicates)
user_namespace_edit_counts = defaultdict(lambda: defaultdict(int)) # Track total edit counts per namespace
# Track specific edit types in namespace 104
user_ns104_stats = defaultdict(lambda: {
'creations': 0,
'proofreads': 0,
'validations': 0,
'regular': 0,
'proofread_score': 0, # Track proofread score separately
'validation_score': 0 # Track validation score separately
})
start_iso = START_DATE.strftime('%Y-%m-%dT%H:%M:%SZ')
end_iso = END_DATE.strftime('%Y-%m-%dT%H:%M:%SZ')
print("=" * 80)
print("KANNADA WIKISOURCE EDIT SCORING TOOL")
print("=" * 80)
print(f"Start (UTC): {START_DATE.strftime('%Y-%m-%d %H:%M:%S')}")
print(f"Start (IST): {START_DATE_IST.strftime('%Y-%m-%d %H:%M:%S')}")
print(f"End (UTC): {END_DATE.strftime('%Y-%m-%d %H:%M:%S')}")
print(f"End (IST): {END_DATE_IST.strftime('%Y-%m-%d %H:%M:%S')}")
print(f"Generated (UTC): {DATA_GENERATION_TIME.strftime('%Y-%m-%d %H:%M:%S')}")
print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}")
print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}")
print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})")
print(f"Scoring in namespace 104 (ಪುಟ):")
print(f" - Page creation: {SCORING_RULES['page_creation']} point")
print(f" - Proofread (/* Proofread */): {SCORING_RULES['proofread']} points")
print(f" - Validation (/* Validated */): {SCORING_RULES['validation']} points")
print(f" - Regular edit: {SCORING_RULES['regular_edit']} point")
print("-" * 80)
params = {
'action': 'query',
'list': 'recentchanges',
'rcstart': end_iso,
'rcend': start_iso,
'rcnamespace': '|'.join(str(ns) for ns in TARGET_NAMESPACES),
'rcprop': 'title|user|timestamp|ids|comment|flags',
'rctype': 'edit|new',
'rclimit': '500',
'format': 'json'
}
total_edits = 0
excluded_edits = 0
continue_token = None
page_count = 0
while True:
if continue_token:
params['rccontinue'] = continue_token
try:
response = requests.get(WIKI_URL, params=params, timeout=30)
data = response.json()
if 'query' not in data or 'recentchanges' not in data['query']:
break
changes = data['query']['recentchanges']
page_count += 1
print(f"Batch {page_count}... ({len(changes)} edits)")
for change in changes:
user = change.get('user', 'Unknown')
title = change.get('title', '')
ns = change.get('ns', 0)
comment = change.get('comment', '')
is_new = change.get('type') == 'new'
# Increment total edit count for this user (every edit counts)
user_total_edits[user] += 1
total_edits += 1
user_namespace_edit_counts[user][ns] += 1
# Set points to zero for A826 in namespace 0
if ns == EXCLUDED_NAMESPACE and user == EXCLUDED_USER:
score = 0
# Track unique page for scoring purposes (still counts as 0 points)
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
excluded_edits += 1
continue
if ns in TARGET_NAMESPACES:
# Calculate score for this edit
score = 0
if ns == 104: # Special scoring for namespace 104
if is_new:
# Page creation
score = SCORING_RULES['page_creation']
user_ns104_stats[user]['creations'] += 1
user_edit_details[user].append(f"Created page: {title} (+{score})")
elif '/* Validated */' in comment:
# Validation edit
score = SCORING_RULES['validation']
user_ns104_stats[user]['validations'] += 1
user_ns104_stats[user]['validation_score'] += score
user_edit_details[user].append(f"Validated: {title} (+{score})")
elif '/* Proofread */' in comment:
# Proofread edit
score = SCORING_RULES['proofread']
user_ns104_stats[user]['proofreads'] += 1
user_ns104_stats[user]['proofread_score'] += score
user_edit_details[user].append(f"Proofread: {title} (+{score})")
else:
# Regular edit
score = SCORING_RULES['regular_edit']
user_ns104_stats[user]['regular'] += 1
user_edit_details[user].append(f"Regular edit: {title} (+{score})")
else:
# For other namespaces, count each unique page as 1 point
score = 1
# Track unique pages per namespace for scoring
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
if total_edits % 500 == 0:
print(f" Processed {total_edits} edits...")
if 'continue' in data and 'rccontinue' in data['continue']:
continue_token = data['continue']['rccontinue']
time.sleep(0.5)
else:
print("Finished fetching all edits!")
break
except Exception as e:
print(f"Error: {e}")
break
print("-" * 80)
print(f"Batches: {page_count}")
print(f"Total edits fetched: {total_edits}")
print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}")
print(f"Users with edits: {len(user_total_edits)}")
# Summary of total edits per user
print("\nTotal edits per user (including duplicates):")
print("-" * 60)
for user in sorted(user_total_edits.items(), key=lambda x: x[1], reverse=True)[:20]:
print(f" {user[0]}: {user[1]} edits")
print("=" * 80)
return (user_namespace_stats, user_scores, user_ns104_stats,
user_total_edits, total_edits, user_namespace_edit_counts)
def generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts):
table_data = []
for user in user_total_edits.keys():
# Calculate total points (sum of scores from all namespaces)
total_points = sum(user_scores[user].values())
# Get unique page counts per namespace
ns_unique_pages = {}
for ns in TARGET_NAMESPACES:
ns_pages = user_namespace_stats[user].get(ns, set())
ns_unique_pages[ns] = len(ns_pages)
# Get total edit counts per namespace (including duplicates)
ns_total_edits = user_namespace_edit_counts.get(user, {})
# Get namespace 104 detailed stats
ns104_stats = user_ns104_stats.get(user, {
'creations': 0,
'proofreads': 0,
'validations': 0,
'regular': 0,
'proofread_score': 0,
'validation_score': 0
})
table_data.append({
'user': user,
'total_score': total_points,
'total_edits': user_total_edits.get(user, 0),
'ns0_edits': ns_total_edits.get(0, 0), # Show total edits, not unique pages
'ns102_edits': ns_total_edits.get(102, 0),
'ns104_unique': ns_unique_pages.get(104, 0),
'ns104_score': user_scores[user].get(104, 0),
'ns106_edits': ns_total_edits.get(106, 0),
'ns114_edits': ns_total_edits.get(114, 0),
'creations': ns104_stats['creations'],
'proofreads': ns104_stats['proofreads'],
'proofread_score': ns104_stats['proofread_score'],
'validations': ns104_stats['validations'],
'validation_score': ns104_stats['validation_score']
})
table_data = [row for row in table_data if row['total_score'] > 0 or row['total_edits'] > 0]
table_data.sort(key=lambda x: x['total_score'], reverse=True)
if not table_data:
return "No edits found in the specified date range."
wikitable = []
wikitable.append('{| class="wikitable sortable" style="text-align:center; width:100%; font-size:90%; color: blue;"')
wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>')
# Updated header with combined columns for proofread and validation
header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು']
wikitable.append(' '.join(header_cols))
for idx, row in enumerate(table_data, start=1):
user = row['user']
# Always use Special:Contributions link
user_link = f"[[Special:Contributions/{user}|{user}]]"
# Show both unique page count and weighted score for namespace 104
ns104_display = f"{row['ns104_unique']} ({row['ns104_score']})"
# Combine proofread count and score into one column
proofread_display = f"{row['proofreads']} ({row['proofread_score']})"
# Combine validation count and score into one column
validation_display = f"{row['validations']} ({row['validation_score']})"
wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''")
wikitable.append('|}')
return '\n'.join(wikitable)
def main():
(user_namespace_stats, user_scores, user_ns104_stats,
user_total_edits, total_competition_edits, user_namespace_edit_counts) = fetch_all_edits()
if not user_total_edits:
print("\nNo data retrieved.")
return
output = generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts)
print("\n" + "=" * 80)
print("WIKITABLE OUTPUT (Copy this entire section):")
print("=" * 80)
print(output)
print("=" * 80)
if __name__ == "__main__":
main()
</syntaxhighlight>
</noinclude>
[[ವರ್ಗ:ವಿಕಿಸೋರ್ಸ್೨೦]]
0cns6mc2pcttzqz9t0u1biura3jfn4f
316730
316561
2026-05-04T07:33:34Z
A826
6806
316730
wikitext
text/x-wiki
{| class="wikitable sortable" style="text-align:center; width:100%; font-size:90%; color: blue;"
|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 33047<br><small>ದತ್ತಾಂಶ ಪಡೆದ ಸಮಯ: 2026-05-04 07:31:59 UTC / 2026-05-04 13:01:59 IST</small>
! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು
|-
| 1 || [[Special:Contributions/Pragathi. BH|Pragathi. BH]] || 0 || 0 || 8126 (8295) || 0 || 0 || 7961 || 77 (154) || 72 (216) || 8350 || '''8295'''
|-
| 2 || [[Special:Contributions/Shreelatha.Halemane|Shreelatha.Halemane]] || 0 || 0 || 5688 (6788) || 0 || 0 || 4727 || 582 (1164) || 308 (924) || 5993 || '''6788'''
|-
| 3 || [[Special:Contributions/Shreesha Sharma|Shreesha Sharma]] || 0 || 0 || 2862 (3255) || 0 || 0 || 1995 || 153 (306) || 133 (399) || 3165 || '''3255'''
|-
| 4 || [[Special:Contributions/Sharanya K H|Sharanya K H]] || 0 || 0 || 3046 (3064) || 0 || 0 || 3032 || 16 (32) || 1 (3) || 3085 || '''3064'''
|-
| 5 || [[Special:Contributions/Ashwini Rai K|Ashwini Rai K]] || 0 || 0 || 286 (596) || 0 || 0 || 70 || 54 (108) || 157 (471) || 361 || '''596'''
|-
| 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553'''
|-
| 7 || [[Special:Contributions/A826|A826]] || 10740 || 0 || 182 (224) || 24 || 0 || 3 || 2 (4) || 25 (75) || 10957 || '''245'''
|-
| 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221'''
|-
| 9 || [[Special:Contributions/Anzx-ooo|Anzx-ooo]] || 2 || 0 || 58 (130) || 0 || 0 || 0 || 8 (16) || 42 (126) || 88 || '''132'''
|-
| 10 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109'''
|-
| 11 || [[Special:Contributions/Vikashegde|Vikashegde]] || 0 || 0 || 27 (48) || 0 || 0 || 0 || 11 (22) || 8 (24) || 32 || '''48'''
|-
| 12 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44'''
|-
| 13 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31'''
|-
| 14 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7'''
|-
| 15 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4'''
|-
| 16 || [[Special:Contributions/Hariprasad Shetty10|Hariprasad Shetty10]] || 0 || 0 || 3 (3) || 0 || 0 || 0 || 0 (0) || 0 (0) || 12 || '''3'''
|-
| 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3'''
|-
| 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1'''
|-
| 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1'''
|-
| 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1'''
|-
| 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1'''
|-
| 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1'''
|-
| 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|}
<noinclude>
<syntaxhighlight lang="python" line copy=1>
#!/usr/bin/env python3
import requests
import time
from datetime import datetime, timezone, timedelta
from collections import defaultdict
import re
START_DATE = datetime(2026, 4, 18, 18, 0, 1, tzinfo=timezone.utc)
END_DATE = datetime(2026, 6, 3, 23, 59, 59, tzinfo=timezone.utc)
TARGET_NAMESPACES = [0, 102, 104, 106, 114]
NAMESPACE_NAMES = {
0: "ಮುಖ್ಯ",
102: "ಕರ್ತೃ",
104: "ಪುಟ",
106: "ಪರಿವಿಡಿ",
114: "ಅನುವಾದ"
}
# Scoring rules for namespace 104
SCORING_RULES = {
'page_creation': 1, # New page creation
'proofread': 2, # Edit summary contains "/* Proofread */"
'validation': 3, # Edit summary contains "/* Validated */"
'regular_edit': 1 # Regular edit in namespace 104
}
WIKI_URL = "https://kn.wikisource.org/w/api.php"
DATA_GENERATION_TIME = datetime.now(timezone.utc)
# Convert to IST for display
IST = timezone(timedelta(hours=5, minutes=30))
DATA_GENERATION_TIME_IST = DATA_GENERATION_TIME.astimezone(IST)
START_DATE_IST = START_DATE.astimezone(IST)
END_DATE_IST = END_DATE.astimezone(IST)
# User to exclude from namespace 0 (set their points to zero)
EXCLUDED_USER = "A826"
EXCLUDED_NAMESPACE = 0
def get_namespace_name(ns):
return NAMESPACE_NAMES.get(ns, f"Namespace {ns}")
def fetch_all_edits():
user_namespace_stats = defaultdict(lambda: defaultdict(set)) # Track unique pages per namespace for scoring
user_scores = defaultdict(lambda: defaultdict(int)) # Track scores by user and namespace
user_edit_details = defaultdict(list) # Store edit details for debugging
user_total_edits = defaultdict(int) # Track total number of edits per user (including duplicates)
user_namespace_edit_counts = defaultdict(lambda: defaultdict(int)) # Track total edit counts per namespace
# Track specific edit types in namespace 104
user_ns104_stats = defaultdict(lambda: {
'creations': 0,
'proofreads': 0,
'validations': 0,
'regular': 0,
'proofread_score': 0, # Track proofread score separately
'validation_score': 0 # Track validation score separately
})
start_iso = START_DATE.strftime('%Y-%m-%dT%H:%M:%SZ')
end_iso = END_DATE.strftime('%Y-%m-%dT%H:%M:%SZ')
print("=" * 80)
print("KANNADA WIKISOURCE EDIT SCORING TOOL")
print("=" * 80)
print(f"Start (UTC): {START_DATE.strftime('%Y-%m-%d %H:%M:%S')}")
print(f"Start (IST): {START_DATE_IST.strftime('%Y-%m-%d %H:%M:%S')}")
print(f"End (UTC): {END_DATE.strftime('%Y-%m-%d %H:%M:%S')}")
print(f"End (IST): {END_DATE_IST.strftime('%Y-%m-%d %H:%M:%S')}")
print(f"Generated (UTC): {DATA_GENERATION_TIME.strftime('%Y-%m-%d %H:%M:%S')}")
print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}")
print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}")
print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})")
print(f"Scoring in namespace 104 (ಪುಟ):")
print(f" - Page creation: {SCORING_RULES['page_creation']} point")
print(f" - Proofread (/* Proofread */): {SCORING_RULES['proofread']} points")
print(f" - Validation (/* Validated */): {SCORING_RULES['validation']} points")
print(f" - Regular edit: {SCORING_RULES['regular_edit']} point")
print("-" * 80)
params = {
'action': 'query',
'list': 'recentchanges',
'rcstart': end_iso,
'rcend': start_iso,
'rcnamespace': '|'.join(str(ns) for ns in TARGET_NAMESPACES),
'rcprop': 'title|user|timestamp|ids|comment|flags',
'rctype': 'edit|new',
'rclimit': '500',
'format': 'json'
}
total_edits = 0
excluded_edits = 0
continue_token = None
page_count = 0
while True:
if continue_token:
params['rccontinue'] = continue_token
try:
response = requests.get(WIKI_URL, params=params, timeout=30)
data = response.json()
if 'query' not in data or 'recentchanges' not in data['query']:
break
changes = data['query']['recentchanges']
page_count += 1
print(f"Batch {page_count}... ({len(changes)} edits)")
for change in changes:
user = change.get('user', 'Unknown')
title = change.get('title', '')
ns = change.get('ns', 0)
comment = change.get('comment', '')
is_new = change.get('type') == 'new'
# Increment total edit count for this user (every edit counts)
user_total_edits[user] += 1
total_edits += 1
user_namespace_edit_counts[user][ns] += 1
# Set points to zero for A826 in namespace 0
if ns == EXCLUDED_NAMESPACE and user == EXCLUDED_USER:
score = 0
# Track unique page for scoring purposes (still counts as 0 points)
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
excluded_edits += 1
continue
if ns in TARGET_NAMESPACES:
# Calculate score for this edit
score = 0
if ns == 104: # Special scoring for namespace 104
if is_new:
# Page creation
score = SCORING_RULES['page_creation']
user_ns104_stats[user]['creations'] += 1
user_edit_details[user].append(f"Created page: {title} (+{score})")
elif '/* Validated */' in comment:
# Validation edit
score = SCORING_RULES['validation']
user_ns104_stats[user]['validations'] += 1
user_ns104_stats[user]['validation_score'] += score
user_edit_details[user].append(f"Validated: {title} (+{score})")
elif '/* Proofread */' in comment:
# Proofread edit
score = SCORING_RULES['proofread']
user_ns104_stats[user]['proofreads'] += 1
user_ns104_stats[user]['proofread_score'] += score
user_edit_details[user].append(f"Proofread: {title} (+{score})")
else:
# Regular edit
score = SCORING_RULES['regular_edit']
user_ns104_stats[user]['regular'] += 1
user_edit_details[user].append(f"Regular edit: {title} (+{score})")
else:
# For other namespaces, count each unique page as 1 point
score = 1
# Track unique pages per namespace for scoring
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
if total_edits % 500 == 0:
print(f" Processed {total_edits} edits...")
if 'continue' in data and 'rccontinue' in data['continue']:
continue_token = data['continue']['rccontinue']
time.sleep(0.5)
else:
print("Finished fetching all edits!")
break
except Exception as e:
print(f"Error: {e}")
break
print("-" * 80)
print(f"Batches: {page_count}")
print(f"Total edits fetched: {total_edits}")
print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}")
print(f"Users with edits: {len(user_total_edits)}")
# Summary of total edits per user
print("\nTotal edits per user (including duplicates):")
print("-" * 60)
for user in sorted(user_total_edits.items(), key=lambda x: x[1], reverse=True)[:20]:
print(f" {user[0]}: {user[1]} edits")
print("=" * 80)
return (user_namespace_stats, user_scores, user_ns104_stats,
user_total_edits, total_edits, user_namespace_edit_counts)
def generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts):
table_data = []
for user in user_total_edits.keys():
# Calculate total points (sum of scores from all namespaces)
total_points = sum(user_scores[user].values())
# Get unique page counts per namespace
ns_unique_pages = {}
for ns in TARGET_NAMESPACES:
ns_pages = user_namespace_stats[user].get(ns, set())
ns_unique_pages[ns] = len(ns_pages)
# Get total edit counts per namespace (including duplicates)
ns_total_edits = user_namespace_edit_counts.get(user, {})
# Get namespace 104 detailed stats
ns104_stats = user_ns104_stats.get(user, {
'creations': 0,
'proofreads': 0,
'validations': 0,
'regular': 0,
'proofread_score': 0,
'validation_score': 0
})
table_data.append({
'user': user,
'total_score': total_points,
'total_edits': user_total_edits.get(user, 0),
'ns0_edits': ns_total_edits.get(0, 0), # Show total edits, not unique pages
'ns102_edits': ns_total_edits.get(102, 0),
'ns104_unique': ns_unique_pages.get(104, 0),
'ns104_score': user_scores[user].get(104, 0),
'ns106_edits': ns_total_edits.get(106, 0),
'ns114_edits': ns_total_edits.get(114, 0),
'creations': ns104_stats['creations'],
'proofreads': ns104_stats['proofreads'],
'proofread_score': ns104_stats['proofread_score'],
'validations': ns104_stats['validations'],
'validation_score': ns104_stats['validation_score']
})
table_data = [row for row in table_data if row['total_score'] > 0 or row['total_edits'] > 0]
table_data.sort(key=lambda x: x['total_score'], reverse=True)
if not table_data:
return "No edits found in the specified date range."
wikitable = []
wikitable.append('{| class="wikitable sortable" style="text-align:center; width:100%; font-size:90%; color: blue;"')
wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>')
# Updated header with combined columns for proofread and validation
header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು']
wikitable.append(' '.join(header_cols))
for idx, row in enumerate(table_data, start=1):
user = row['user']
# Always use Special:Contributions link
user_link = f"[[Special:Contributions/{user}|{user}]]"
# Show both unique page count and weighted score for namespace 104
ns104_display = f"{row['ns104_unique']} ({row['ns104_score']})"
# Combine proofread count and score into one column
proofread_display = f"{row['proofreads']} ({row['proofread_score']})"
# Combine validation count and score into one column
validation_display = f"{row['validations']} ({row['validation_score']})"
wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''")
wikitable.append('|}')
return '\n'.join(wikitable)
def main():
(user_namespace_stats, user_scores, user_ns104_stats,
user_total_edits, total_competition_edits, user_namespace_edit_counts) = fetch_all_edits()
if not user_total_edits:
print("\nNo data retrieved.")
return
output = generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts)
print("\n" + "=" * 80)
print("WIKITABLE OUTPUT (Copy this entire section):")
print("=" * 80)
print(output)
print("=" * 80)
if __name__ == "__main__":
main()
</syntaxhighlight>
</noinclude>
[[ವರ್ಗ:ವಿಕಿಸೋರ್ಸ್೨೦]]
jpotky8unmgtjk7yhk0k6jj9hqmnmxz