ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.46.0-wmf.26 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಪುಟ:ಅದ್ಭುತ ರಾಮಾಯಣ.djvu/೯ 104 18076 317103 156698 2026-05-05T03:34:14Z Shreelatha.Halemane 7642 /* Validated */ 317103 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|'''ಶ್ರೀ'''}} {{center|'''ಅದ್ಭುತ ರಾಮಾಯಣ ಕಥಾಸಾರವು'''.}}. {{gap}}ಭಕ್ತಿಯುಕ್ತನಾದ ಭರದ್ವಾಜಮುನಿಯು ತಮಸಾತೀರದಲ್ಲಿ ತಪ ಸ್ಸು ಮಾಡುತ್ತಿದ್ದ ವಾಲ್ಮೀಕಿಯನ್ನು ಕುರಿತು ಕೃತಾಂಜಲಿಪುಟನಾಗಿ “ಎಲೈ ಮುನಿವರನೆ ! ನೀನು ಶತಕೋಟಿಪ್ರವಿಸ್ತರವಾದ ರಾಮಾಯಣ ವನ್ನು ರಚಿಸಿ ಬ್ರಹ್ಮಲೋಕದಲ್ಲಿ ಪ್ರಕಟಮಾಡಿರುವೆಯ ? ಅದನ್ನು ನಿತ್ಯವೂ ದೇವತೆಗಳೂ, ಭೂದೇವತೆಗಳೂ ಕೇಳಿ ಆನಂದವನ್ನೈದುತ್ತ ಲಿರುವರು. ಆ ರಾಮಾಯಣಗಳೊಳಗೆ ೨೫ ಸಾವಿರ ರಾಮಾಯಣಗಳು ಮಾತ್ರ ಭೂಲೋಕದಲ್ಲಿ ಪ್ರಚಾರವಾಗಿರುವುದರಿಂದ ಅದನ್ನು ನಾವೆಲ್ಲ ರೂ ಕೇಳಿರುವೆವು. ಶತಕೋಟ ವಿಸ್ತ್ರತವಾದ ರಾಮಾಯಣಗಳಲ್ಲಿ ಆವುದನ್ನು ಪಠಿಸಿದರೆ ನಮ್ಮ ಪಾಪಗಳೆಲ್ಲವೂ ಹೋಗಿ ನಾವು ಮುಕ್ತರಾ ಗುವೆವೋ ಅಂತಪ್ಪ ರಾಮಾಯಣವನ್ನು ನನಗೆ ತಿಳಿಸಬೇಕು.” ಎಂದು ವಿನೀತನಾಗಿ ಬೇಡಿಕೊಂಡನು. ಅದನ್ನು ಕೇಳಿ ವಾಲ್ಮೀಕಿಮುನಿಯು ಶತಕೋಟಿ ರಾಮಾಯಣಗಳನ್ನೂ ಕರತಲಾಮಲಕದಂತೆ ಧ್ಯಾನದಿಂದ ನೋಡಿ ಸಾರಭೂತವಾದ ಅದ್ಭುತರಾಮಾಯಣವನ್ನು ಹೇಳತೊಡಗಿದನು. {{gap}}ಎಲೈ ಚಿರಂಜೀವಿಯಾದ ಭರದ್ವಾಜನೆ ! ನೀನೀಗ ನನಗೆ ಒಳ್ಳೆಯ ವಿಷಯವನ್ನು ನೆನಪಿಗೆ ತಂದು ಬಹಳ ಹರ್ಷವನ್ನುಂಟುಮಾಡಿರುತ್ತೀಯೆ. ಶತಕೋಟಿ ರಾಮಾಯಣಗಳೊಳಗೆಲ್ಲಾ ಶ್ರೀರಾಮನ ಚರಿತ್ರೆಯು ಚೆನ್ನಾ ಗಿ ನಿರೂಪಿಸಲ್ಪಟ್ಟಿರುವುದು, ಮನುಷ್ಯಲೋಕದಲ್ಲಿ ಪ್ರಚಾರವಾಗಿ ರುವ ೨೫ ಸಾವಿರ ರಾಮಾಯಣಗಳಲ್ಲಿ ಮನುಷ್ಯರಿಗೆ ತಕ್ಕುದಾದ ರಾ ಮನ ಚರಿತ್ರೆಯು ಮಾತ್ರ ವಿವರವಾಗಿ ವರ್ಣಿಸಲ್ಪಟ್ಟಿರುವುದು, ಸೀತಾ ಮಾಹಾತ್ಮವು ವಿಶೇಷವಾಗಿ ಹೇಳಲ್ಪಟ್ಟಿಲ್ಲ. ಶ್ರೀರಾಮಚರಿತವನ್ನೂ ಪ್ರಕೃತಿಗೆ ಮೂಲಭೂತಳಾದ ಸೀತಾದೇವಿಯ ಮಹಿಮೆಯನ್ನು ಹೇಳು ವೆನು, ಸಾವಧಾನ ಮನಸ್ಕನಾಗಿ ಕೇಳು ? ಇದು ಆಶ್ಚರ್ಯಗಳೊಳಗೆಲ್ಲಾ ಪರಮಾಶ್ಚರ್ಯವಾದುದಲ್ಲದೆ ಲೋಕದಲ್ಲಿ ಗೋಪ್ಯವಾಗಿರುವುದು. ಪ್ರಿಯ<noinclude><references/></noinclude> rhkfvrolq748fofxdgxe3xvhuezzik1 ಪುಟ:ಬನಶಂಕರಿ.pdf/೫ 104 18725 317100 179878 2026-05-05T02:57:20Z Sharanya K H 7593 /* Validated */ 317100 proofread-page text/x-wiki <noinclude><pagequality level="4" user="Sharanya K H" /></noinclude> {{UnderReview|}} --[[User:Gopala Krishna A|ಗೋಪಾಲಕೃಷ್ಣ]] [[User talk:Gopala Krishna A|(ಚರ್ಚೆ)]] ೧೦:೧೮, ೧೫ ನವೆಂಬರ್ ೨೦೧೮ (UTC) '''ಬನಶಂಕರಿ''' - ಕನ್ನಡ ಕಾದಂಬರಿ ಲೇಖಕರು- ನಿರಂಜನ (ಕುಳಕುಂದ ಶಿವರಾಯರು) ಪ್ರಕಾಶಕರು-ತೇಜಶ್ವಿನಿ ನಿರಂಜನ ಕಥಾ ಸಾಹಿತ್ಯ ೭ನೇ ಮುಖ್ಯ ರಸ್ತೆ ಜಯನಗರ -೫೬೦೦೪೧ ಪುಟ ೮+೨೨೦ ಬೆಲೆ-೬-೦೦ ರೂ {{gap}}{{gap}}{{gap}}First Edition 1954 <br> {{gap}}{{gap}}{{gap}}Second Edition 1959<br> {{gap}}{{gap}}Third (Revised) Edition 1976<br> {{gap}}{{gap}}{{gap}}{{gap}}© NIRANJANA {{gap}}{{gap}}{{gap}}{{gap}}ಮುದ್ರಕರು: {{gap}}{{gap}}{{gap}}ಬೃಂದಾವನ ಪ್ರಿಂಟರ್ಸ್ ಅಂಡ್ ಪಬ್ಲಷರ್ಸ್ (ಪ್ರೈ) ಲಿಮಿಟೆಡ್ <br> {{gap}}{{gap}}{{gap}}೧೨/೩12/3 ಲಾಲ್ ಭಾಗ್ ಪೋರ್ಟ್ ರೋಡ್ ಬೆಂಗಳೂರು-560004 <br> Paper used for printing book was made available by the government of India at concessional rate through the Karnataka Publishers and BookSellers Association.<noinclude></noinclude> gq90t9nyitxhtevflu7oqm8t6qu13om ಪುಟ:VISHAALAAKSHI - Niranjana.pdf/೧೧ 104 22497 317170 263065 2026-05-05T09:16:36Z Ashwini Rai K 8475 /* Validated */ 317170 proofread-page text/x-wiki <noinclude><pagequality level="4" user="Ashwini Rai K" /></noinclude><big> {{center|'''೧'''}} </big> {{gap}}ವಿಶ್ವವಿದ್ಯಾನಿಲಯದ ಆಳು ವಿಶಾಲಕ್ಷಿಯ ಮನೆ ಹುಡುಕಿಕೊಂಡು ಬಂದಿದ್ದ. ಅವನ ಸೈಕಲಿನ ಕೊರಳಿನಲ್ಲಿ ಮಾಸಿದ ಚೀಲ ತೂಗಾಡುತ್ತಿತ್ತು. ವಾಹನವನ್ನು ಹಿತ್ತಿಲಗೋಡೆಗೊರಗಿಸಿ, ಪುಟ್ಟದೊಂದು ಪ್ಯಾಕೆಟನ್ನು ಆ ಚೀಲದಿಂದ ಹೊರತೆಗೆದ. ಆ ಕಟ್ಟನ್ನು ಹಿಂಬಾಲಿಸಿತು ಆತನ 'ಡೆಲಿವರಿ' ಪುಸ್ತಕ. {{gap}}ಬಂದುದೇನೆಂಬುದು, ಹೊಸ್ತಿಲಲ್ಲಿ ನಿಂತ ವಿಶಾಲಾಕ್ಷಿಗೆ ಹೊಳೆಯಲೇ ಇಲ್ಲ. ಬರಿಯ ಲಕೋಟೆಯಾಗಿದ್ದರೆ ಊಹೆ ಸುಲಭವಾಗುತ್ತಿತ್ತು. ಆದರೆ ಆಳು ತಂದಿದ್ದುದು ಪ್ಯಾಕೆಟ್ತು - ಸಾಕಷ್ಟು ಗಾತ್ರದ ಪ್ಯಾಕೆಟ್ತು. {{gap}}ಕಾತರ ಬೆರೆತ ಕುತೂಹಲದೊಂದಿಗೆ ಅವಳು ಕೇಳಿದಳು: {{gap}}"ಏನಪ್ಪಾ ಅದು?" {{gap}}ಅದೇನೆಂಬುದನ್ನು ಜವಾನ ತಿಳಿದಿರಬೇಕಾದ ಅಗತ್ಯವೇನೂ ಇರಲಿಲ್ಲ. ಆದರೂ, ವಿಶ್ವವಿದ್ಯಾನಿಲಯದ ಆಗುಹೋಗುಗಳನ್ನೆಲ್ಲ ಚೆನ್ನಾಗಿ ಬಲ್ಲ ಪ್ರಚಂಡ ಆತ. {{gap}}"ಪ್ರಬುದ್ದ ಕರ್ಣಾಟಕ." {{gap}}"ಓ!" {{gap}}ತುಸು ತಡವಾಗಿ ಬಂದಿದ್ದ ಆಶ್ವಯುಜ ಸಂಚಿಕೆ. ತನ್ನ ಲೇಖನ ಪ್ರಕಟವಾಗಿರಬೇಕು ಹಾಗಾದರೆ! {{gap}}ಹಿಂದೆ ನೌಕರಿ ದೊರೆತು ನೇಮಕಪತ್ರ ಬಂದಿದ್ದಾಗ, ಮುಂದೆ ಉತ್ತರ ಭಾರತದಿಂದ ಅಣ್ಣ ಬರೆದ ಮೊದಲ್ ಕಾಗದ ಕೈ ಸೇರಿದ್ದಾಗ ಹೊಡೆದುಕೊಂಡಿದ್ದ ರೀತಿಯಲ್ಲೇ ವಿಶಾಲಾಕ್ಷಿಯ ಎದೆಗುಂಡಿಗೆ ಈಗಲೂ ಡವಡವಿಸಿತು.<noinclude></noinclude> e31mc8cuzaqi8nm8umfsefa85yg1e9m ಪುಟ:VISHAALAAKSHI - Niranjana.pdf/೧೨ 104 22703 317171 311955 2026-05-05T09:17:01Z Ashwini Rai K 8475 /* Validated */ 317171 proofread-page text/x-wiki <noinclude><pagequality level="4" user="Ashwini Rai K" /></noinclude> {{center|ವಿಶಾಲಾಕ್ಷಿ}} {{gap}}ಜವಾನ ಜೇಬಿನಿಂದ ತೆಗೆದುಕೊಟ್ಟ ಪೆನ್ಸಿಲಿನಿಂದಲೇ, 'ಡೆಲಿವರಿ' ಪುಸ್ತಕ ದಲ್ಲಿ ವಿಶಾಲಾಕ್ಷಿ, ತನ್ನ ಹೆಸರಿನೆದುರು ಸಹಿ ಹಾಕಿದಳು, ಅಲ್ಲಿಯೇ ಕಟ್ಟನ್ನು ಒಡೆದು ನೋಡುವ ಆತುರ ಅವಳಿಗೆ, ಆದರೆ, ಆಳಿನೆದುರು ತನ್ನ ತವಕವನ್ನು ತೋರ್ಪಡಿಸುವುದು ಅನುಚಿತವಾಗಿತ್ತು, ಮನಸ್ಸು ಬಿಗಿಹಿಡಿದು, ಕಟ್ಟನ್ನು ಬಿಗಿಯಾಗಿ ಎದೆಗವಚಿಕೊಂಡು ಅವಳು ಅಲ್ಲಿಯೇ ನಿಂತಳು. ಸೈಕಲನ್ನು ಸವಾರಿಗೆ ಸಿದ್ದಗೊಳಿಸುತ್ತ ಜವಾನ ಹೇಳಿದ : ನಿಮ್ಮನ್ನು ಹುಡುಕಿಕೊಂಡು ಮಹಾರಾಣಿ ಕಾಲೇಜಿಗೆ ಹೋಗಿದ್ದೆ.” [ಗಂಡಸರಿಗಾದರೆ 'ತಾವು'; ಹೆಂಗಸರಿಗೆ, ಅದರಲ್ಲೂ ಚಿಕ್ಕವಯಸ್ಸಿನವರಿಗೆ, (ನೀವು' ಸಾಕು ಎಂದು ಅವನ ಅಭಿಮತ.] “ಹೌದೆ? ನಾನೀಗ ಕೆಲಸಕ್ಕೆ ಹೋಗ್ತಾ ಇಲ್ಲ.” “ಹಾಗೇಂತ ಗಿರಿಜಾಬಾಯೋರು ಹೇಳಿದ್ರು, ಎಮ್ಮೆಗೆ ಕುಂತವ್ರೆ ಅಂದ್ರು.” [ಎಂ.ಎ ಗೆ ಕುಳಿತುಕೊಳ್ಳುವ ಹೆಣ್ಣು, ಅವನ ದೃಷ್ಟಿಯಲ್ಲಿ ಯಾವಾಗಲೂ ಅಣಕದ ವಸ್ತು, ಆದರೆ ಈ ವಿಶಾಲಾಕ್ಷಮ್ಮ ಬೆಡಗುಗಾತಿಯಲ್ಲ ಎನ್ನುವುದನ್ನು ಆತ ಬಲ್ಲ.] “ಗಿರಿಜಾಬಾಯಿ ಹೇಳಿದ್ರೇನು ?” {{gap}}ಮನಸಿನಲ್ಲೆ, 'ಎಷ್ಟೊಂದು ದಿವಸವಾಯ್ತು ಅವರನ್ನು ನೋಡಿ' ಎಂದುಕೊಂಡಳು ವಿಶಾಲಾಕ್ಷಿ. ತನ್ನ ಲೇಖನದ ಹಸ್ತಪ್ರತಿಯನ್ನು ಓದಿ ಅವರು ಮೆಚ್ಚಿದ್ದರು, ಈಗ ಅಚ್ಚಿನಲ್ಲಿ ಅದನ್ನು ಕಂಡಾಗ, ಅವರಿಗೆ ಸಂತೋಷವಾಗುವುದು ಖಂಡಿತ. “ಹೂಂ, ...ಬರ್ತೀನಮ್ಮ” “ಆಗಲಪ್ಪಾ.” {{gap}}ವಿಶಾಲಾಕ್ಷಿ ಅವಸರ ಅವಸರವಾಗಿ ಒಳಕ್ಕೋಡಿದಳು, ಕಟ್ಟನ್ನು ಮೇಜಿನ ಮೇಲಿರಿಸಿ, ಬಿಗಿದಿದ್ದ ಟ್ವೈನ್ ದಾರವನ್ನು ಎಳೆದು ಕಡಿದಳು.ಸಂಚಿಕೆಯನ್ನು ಕೈಗೆತ್ತಿಕೊಂಡು ಪುಟ ತಿರುವಿದಳು. ಲೇಖನ ಕಣ್ಣಿಗೆ ಬೀಳಲಿಲ್ಲ ಒಮ್ಮೆಲೆ.. (ಅಚ್ಚಾಗಿಲ್ಲವೇನೋ' ಎಂದುಕೊಂಡಳು ನಿರಾಶಳಾಗುತ್ತ, ಬಳಿಕ, ಹೊದಿಕೆಯ ಒಳಮೈಯಲ್ಲಿ “ವಿಷಯ ಸೂಚಿಕೆ' ಕಂಡಿತು. 'ವಿಷಯ' ಮತ್ತು 'ಲೇಖಕರು'. ಕುವೆಂಪು, ಪು.ತಿ.ನ, ದೇ.ಜ.ಗೌ, ಜಿ ಎಸ್ ಶಿವರುದ್ರಪ್ಪ-ಆ ಅಲ್ಲಿತ್ತು<noinclude></noinclude> 66z37s7fhl5trklw6siskjjn1hhfn4f ಪುಟ:VISHAALAAKSHI - Niranjana.pdf/೧೩ 104 37849 317172 311956 2026-05-05T09:17:45Z Ashwini Rai K 8475 /* Validated */ 317172 proofread-page text/x-wiki <noinclude><pagequality level="4" user="Ashwini Rai K" /></noinclude> {{center|ಪ್ರೇಮಕ್ಕೆ ಕಣ್ಣಿಲ್ಲ }} ಎಸ್, ವಿಶಾಲಾಕ್ಷಿ, ಆಧುನಿಕ ಆಂಗ್ಲ ಕಾವ್ಯದಲ್ಲಿ ಸೌಂದರ್ಯೋಪಾಸನೆ' ಎಂಬ ತಲೆಕಟ್ಟಿನ ಎದುರು, ಪಟಪಟನೆ ರೆಕ್ಕೆ ಬಡಿದು ಹಾರಾಡತೊಡಗಿತು ಹೃದಯದ ಹಕ್ಕಿ, ಪುಟ ಸಂಖ್ಯೆಯ ಆಧಾರದಿಂದ ಲೇಖನವನ್ನೂ ತೆರೆದುನೋಡಿದಳು. ನಡುಗುತ್ತಿದ್ದ ಬೆರಳುಗಳು ಹಾಳೆಗಳನ್ನು ತಿರುವಿದುವು, ಕೊನೆಯಲ್ಲಿ ಬಲ ಮೂಲೆಯಲ್ಲಿ ತನ್ನ ಹೆಸರು-ಸಣ್ಣ ಅಕ್ಷರದಲ್ಲಿ. ಆ ಪುಟವನ್ನು ಮೂಗಿನ ಬಳಿವರೆಗೂ ಒಯ್ದು, ಪುನಃ ಪುನಃ ನೋಡಿದಳು, ಆನಂದೋದ್ವೇಗದಿಂದ ಅಸ್ಥಿರವಾದುವು ಕಾಲುಗಳು, ಹರ್ಷಪುಲಕಿತಳಾಗಿ ವಿಶಾಲಾಕ್ಷಿ ಕುರ್ಚಿಯ ಮೇಲೆ ಕುಸಿಕುಳಿತಳು, {{gap}}ಕೊಠಡಿಯ ಬಾಗಿಲ ಬಳಿಗೆ ಬಂದು, ತಾಯಿ ನಾಗಮ್ಮ ಕೇಳಿದರು : “ಪೋಸ್ಟ್ ಬಂತೆ ವಿಶಾಲಿ ?” “ಇಲ್ಲಮ್ಮ, ಜವಾನ ಬಂದಿದ್ದ-ಕಾಲೇಜಿಂದ.” [ಯೂನಿವರ್ಸಿಟಿಯಿಂದ ಎಂದರೆ ಅರ್ಥವಾಗದು ತಾಯಿಗೆ, ಹೀಗಾಗಿ, 'ಕಾಲೇಜಿನಿಂದ' ಎಂದಳು ಮಗಳು.]. “ಯಾಕೆ ? ಏನು ?” “ಪ್ರಬುದ್ಧ ಕರ್ಣಾಟಕ ತಂದ್ಕೊಟ್ಟ” ಅದೇನೆಂದು ತಿಳಿಯದ ನಾಗಮ್ಮ ಪಿಳಿಪಿಳಿ ನೋಡಿದರು, ಕೈಯಲ್ಲಿ ದ್ದು ದನ್ನು ತೋರಿಸುತ್ತ ವಿಶಾಲಾಕ್ಷಿ ಅಂದಳು : “ಇದು--ಇದರಲ್ಲಿ ನಾನು ಬರೆದಿರೋದು ಅಚ್ಚಾಗಿದೆ.” - {{gap}}“ಅಷ್ಟೇನಾ ?” ಎಂದು ರಾಗವೆಳೆದರು ನಾಗಮ್ಮ, ಹಾಗೆ ಅಚ್ಚಾಗುವುದರಲ್ಲಿ ವಿಶೇಷವೇನೂ ಇಲ್ಲ ಎನ್ನುವಂತೆ, “ರಾಜೂ ಕಾಗದ ಬಂತೇನೋ೦ತಿದ್ದೆ”, ಎನ್ನುತ್ತ ಅವರು ಅಡುಗೆ ಮನೆಯ ಕಡೆಗೆ ನಡೆದರು. {{gap}}ತನ್ನ ಸಂತೋಷದಲ್ಲಿ ಭಾಗಿಯಾಗದೇ ಹೋದ ತಾಯಿಯನ್ನು ಕುರಿತು ಯೋಚಿಸುವುದಕ್ಕೂ ಅವಕಾಶ ದೊರೆಯದಂತೆ, ಮೇಜಿನ ಮೇಲಿಂದ ಬಿಳಿಬಿಳಿ ಯಾದುದೇನೋ ವಿಶಾಲಾಕ್ಷಿಯ ಗಮನವನ್ನು ಸೆಳೆಯಿತು. ಅರೇ ! ನೋಡಿಯೇ ಇರಲಿಲ್ಲ ತಾನು! ಬಿಳಿಯ ಹಾಳೆ ಹೊದಿಸಿದ್ದ ಪುಟ್ಟ ಪುಸ್ತಕಗಳು, ಏನಿವು ? ತನ್ನ ಲೇಖನ, ಪುಸ್ತಕ ರೂಪದಲ್ಲಿ ಅದರ ಪ್ರತಿಗಳು, ಒಂದು, ಎರಡು, ಮೂರು-ಇಪ್ಪತ್ತೈದು ಒಟ್ಟು. ಓ, ಎಷ್ಟು<noinclude></noinclude> 39mqa1pktju819y9vcx1u1u18tf0cqk 317173 317172 2026-05-05T09:18:46Z Ashwini Rai K 8475 317173 proofread-page text/x-wiki <noinclude><pagequality level="4" user="Ashwini Rai K" /></noinclude> {{center|ಪ್ರೇಮಕ್ಕೆ ಕಣ್ಣಿಲ್ಲ }} ಎಸ್, ವಿಶಾಲಾಕ್ಷಿ, ಆಧುನಿಕ ಆಂಗ್ಲ ಕಾವ್ಯದಲ್ಲಿ ಸೌಂದರ್ಯೋಪಾಸನೆ' ಎಂಬ ತಲೆಕಟ್ಟಿನ ಎದುರು, ಪಟಪಟನೆ ರೆಕ್ಕೆ ಬಡಿದು ಹಾರಾಡತೊಡಗಿತು ಹೃದಯದ ಹಕ್ಕಿ, ಪುಟ ಸಂಖ್ಯೆಯ ಆಧಾರದಿಂದ ಲೇಖನವನ್ನೂ ತೆರೆದುನೋಡಿದಳು. ನಡುಗುತ್ತಿದ್ದ ಬೆರಳುಗಳು ಹಾಳೆಗಳನ್ನು ತಿರುವಿದುವು, ಕೊನೆಯಲ್ಲಿ ಬಲ ಮೂಲೆಯಲ್ಲಿ ತನ್ನ ಹೆಸರು-ಸಣ್ಣ ಅಕ್ಷರದಲ್ಲಿ. ಆ ಪುಟವನ್ನು ಮೂಗಿನ ಬಳಿವರೆಗೂ ಒಯ್ದು, ಪುನಃ ಪುನಃ ನೋಡಿದಳು, ಆನಂದೋದ್ವೇಗದಿಂದ ಅಸ್ಥಿರವಾದುವು ಕಾಲುಗಳು, ಹರ್ಷಪುಲಕಿತಳಾಗಿ ವಿಶಾಲಾಕ್ಷಿ ಕುರ್ಚಿಯ ಮೇಲೆ ಕುಸಿಕುಳಿತಳು, {{gap}}ಕೊಠಡಿಯ ಬಾಗಿಲ ಬಳಿಗೆ ಬಂದು, ತಾಯಿ ನಾಗಮ್ಮ ಕೇಳಿದರು : “ಪೋಸ್ಟ್ ಬಂತೆ ವಿಶಾಲಿ ?” “ಇಲ್ಲಮ್ಮ, ಜವಾನ ಬಂದಿದ್ದ-ಕಾಲೇಜಿಂದ.” [ಯೂನಿವರ್ಸಿಟಿಯಿಂದ ಎಂದರೆ ಅರ್ಥವಾಗದು ತಾಯಿಗೆ, ಹೀಗಾಗಿ, 'ಕಾಲೇಜಿನಿಂದ' ಎಂದಳು ಮಗಳು.]. {{gap}}“ಯಾಕೆ ? ಏನು ?” <br /> {{gap}}“ಪ್ರಬುದ್ಧ ಕರ್ಣಾಟಕ ತಂದ್ಕೊಟ್ಟ” {{gap}}ಅದೇನೆಂದು ತಿಳಿಯದ ನಾಗಮ್ಮ ಪಿಳಿಪಿಳಿ ನೋಡಿದರು, ಕೈಯಲ್ಲಿ ದ್ದು ದನ್ನು ತೋರಿಸುತ್ತ ವಿಶಾಲಾಕ್ಷಿ ಅಂದಳು : {{gap}}“ಇದು--ಇದರಲ್ಲಿ ನಾನು ಬರೆದಿರೋದು ಅಚ್ಚಾಗಿದೆ.” {{gap}}“ಅಷ್ಟೇನಾ ?” ಎಂದು ರಾಗವೆಳೆದರು ನಾಗಮ್ಮ, ಹಾಗೆ ಅಚ್ಚಾಗುವುದರಲ್ಲಿ ವಿಶೇಷವೇನೂ ಇಲ್ಲ ಎನ್ನುವಂತೆ, “ರಾಜೂ ಕಾಗದ ಬಂತೇನೋ೦ತಿದ್ದೆ”, ಎನ್ನುತ್ತ ಅವರು ಅಡುಗೆ ಮನೆಯ ಕಡೆಗೆ ನಡೆದರು. {{gap}}ತನ್ನ ಸಂತೋಷದಲ್ಲಿ ಭಾಗಿಯಾಗದೇ ಹೋದ ತಾಯಿಯನ್ನು ಕುರಿತು ಯೋಚಿಸುವುದಕ್ಕೂ ಅವಕಾಶ ದೊರೆಯದಂತೆ, ಮೇಜಿನ ಮೇಲಿಂದ ಬಿಳಿಬಿಳಿ ಯಾದುದೇನೋ ವಿಶಾಲಾಕ್ಷಿಯ ಗಮನವನ್ನು ಸೆಳೆಯಿತು. ಅರೇ ! ನೋಡಿಯೇ ಇರಲಿಲ್ಲ ತಾನು! ಬಿಳಿಯ ಹಾಳೆ ಹೊದಿಸಿದ್ದ ಪುಟ್ಟ ಪುಸ್ತಕಗಳು, ಏನಿವು ? ತನ್ನ ಲೇಖನ, ಪುಸ್ತಕ ರೂಪದಲ್ಲಿ ಅದರ ಪ್ರತಿಗಳು, ಒಂದು, ಎರಡು, ಮೂರು-ಇಪ್ಪತ್ತೈದು ಒಟ್ಟು. ಓ, ಎಷ್ಟು<noinclude></noinclude> c1zo21i94ki0yv7jyb6jz31knmy67ea ಪುಟ:VISHAALAAKSHI - Niranjana.pdf/೧೪ 104 37850 317174 311958 2026-05-05T09:20:06Z Ashwini Rai K 8475 /* Validated */ 317174 proofread-page text/x-wiki <noinclude><pagequality level="4" user="Ashwini Rai K" /></noinclude> {{center|ವಿಶಾಲಾಕ್ಷಿ }} ಗೊಂದು ಪ್ರತಿ, ಅಣ್ಣನಿಗೊಂದು, ಗೆಳತಿಯರಿಗೆಲ್ಲ ಒಂದೊಂದು, ಹೌದು, ಒಂದು ಪ್ರೊಫೆಸರಿಗೆ, " (ಅಲ್ಲಾ, ಇಷ್ಟನ್ನು ಏನು ಮಾಡಲೀಂತ'.... {{gap}}ನಾಗಮ್ಮ ಒಳಗಿನಿಂದ ಕರೆದರು; <br /> {{gap}}“ವಿಶಾಲೀ, ಬರ್ತೀಯೇನೆ ಊಟಕ್ಕೆ?” <br /> {{gap}}“ಬರ್ತೀನಮ್ಮ”{{gap}} {{gap}}ಅಷ್ಟು ಬೇಗನೆ ಉಂಡು ಓಡಬೇಕಾದ ಅಗತ್ಯವಿರಲಿಲ್ಲ. ಆದರೂ ಹತ್ತು ಘಂಟೆಗೇ ಊಟ ಮುಗಿಸುವುದು ಹಲವು ವರ್ಷಗಳಿಂದ ಅಭ್ಯಾಸವಾಗಿತ್ತು. ಇವತ್ತಂತೂ ತರಗತಿ ಇದ್ದುದು ಒಂದೇ ಪೀರಿಯಡ್, ಮಧ್ಯಾಹ್ನದ ಅನಂತರ, ಪಠ್ಯ ಪುಸ್ತಕಗಳ ಗೋಜಿಗಂತೂ ಈಗ ಹೋಗಬೇಕಾದುದಿಲ್ಲ ತಾನು, ಪರೀಕ್ಷೆಗೆ ಅಂಜುವವಳಲ್ಲ ವಿಶಾಲಿ ಈಗ ನರ್ಮದಾ ಹೇಳಿರಲಿಲ್ಲವೆ: 'ಹೇಗಿದ್ದವಳು ಹೇಗಾಗಿಬಿಟ್ಟೆಯಮ್ಮ! ನಂಬೋಕೇ ಆಗೊಲ್ಲ' ಅಂತ ? ಮೂರು ವರ್ಷಗಳ ಅಧ್ಯಾಪಕವೃತ್ತಿ, ಅಪಾರ ಆತ್ಮವಿಶ್ವಾಸವನ್ನು ಅವಳಲ್ಲಿ ತುಂಬಿತ್ತು, ಸಹಪಾಠಿನಿ ಯಾಗಿದ್ದ ಸರಸಿ ಒಮ್ಮೆ ಅಂದಿದ್ದಳು : “ವಿಶಾಲಿ, ಬಹಳ ಜಂಭ ಬಂದ್ವಿಟ್ಟಿದೆ ಕಣೇ ನಿಂಗೆ', ಅದು ಮಾತ್ರ ಸುಳ್ಳು ಸುಳ್ಳು.... ಇಷ್ಟಿದ್ದರೂ ಒಮ್ಮೊಮ್ಮೆ, ಇದ್ದಕ್ಕಿದ್ದಂತೆ, ಎಲ್ಲಿಲ್ಲದ ಕಳವಳ ವಿಶಾಲಾಕ್ಷಿಯ ಮನಸ್ಸನ್ನು ಆವರಿಸುತ್ತಿತ್ತು, ತನಗೆ ಏನೂ ತಿಳಿಯದು-ಎಂಬ ಶಂಕೆ, ತಾನಿನ್ನೂ ಪುಟ್ಟ ಹುಡುಗಿಯೇ-ಎಂಬ ಭಾವನೆ. ಅಣ್ಣ `ರಂಗರಾಜ ನಿಗೆ ತಾನು ಸಾಟಿಯೇ ಅಲ್ಲ, ದಾಮೋದರ ಕಣಿವೆ ಯೋಜನೆಯಿಂದ ಭಿಲಾಯಿಗೆ ಸ್ಥಾನಾಂತರವಾಗಿ ಉದ್ಯೋಗ- ಸ್ವೀಕರಿಸುವುದಕ್ಕೆ ಮುಂಚೆಯೊಮ್ಮೆ. ಊರಿಗೆ ಬಂದಿದ್ದನಲ್ಲ.-ಎಷ್ಟು ದೊಡ್ಡವನಾಗಿ ಕಂಡ ಆಗ! ಸ್ವರ ಬದಲಿತ್ತು. ಠೀವಿಯಿತ್ತು ನುಡಿಯಲ್ಲಿ ನಡೆಯಲ್ಲಿ.ವಯಸ್ಸಿನಲ್ಲಿ ಅಂತರವೇನೋ ಸ್ವಲ್ಪ. ಮೊದಲು ಸಂಪಾದಿಸತೊಡಗಿದುದೂ ತಾನೇ, ಆದರೂ ರಂಗರಾಜ ಮನೆಗೆ ದೊಡ್ಡವನು ಈಗ. “ಆಳವಾಗಿ ಯೋಚಿಸಿದಾಗ ವಿಶಾಲಾಕ್ಷಿಗೆ ಹೊಳೆಯುತ್ತಿತ್ತು-ಅಣ್ಣನಲ್ಲ ತನ್ನಲ್ಲೂ ವಿಶೇಷ ಬದಲಾವಣೆಯಾದುದು ಒಂದು ಘಟನೆಯ ಬಳಿಕ, ತಮ್ಮ ತಂದೆ ತೀರಿಕೊಂಡ ದುರ್ದಿನದ ಬಳಿಕ,ರಂಗರಾಜ ಬರುವವರೆಗೂ ಕಾಯಲಾಗದೆ ಅಂತ್ಯಕ್ರಿಯೆಯನ್ನು ಮುಗಿಸಿ<noinclude></noinclude> sc7mis4i0uxx9dnyk819uboxissmo43 ಪುಟ:ಹಗಲಿರುಳು.djvu/೩೫ 104 38633 317195 293691 2026-05-05T09:53:41Z Ashwini Rai K 8475 /* Validated */ 317195 proofread-page text/x-wiki <noinclude><pagequality level="4" user="Ashwini Rai K" />{{Left|೨೬}}{{center|ಕನ್ನಡ ಕೋಗಿಲೆ, ಮೇ ೧೯೧೮.}} ———————————————————————————</noinclude> ತೇಜಸ್ವಿ:- (ಸದಾಗತಿಯನ್ನು ಇದಿರ್ಗೊ೦ಡು ತಲೆಯನ್ನೊಲೆಯುತ್ತ) ಪ್ರಿಯನೆ, {{gap}}ಇದೇನು ? ಈಗ ನಿನ್ನ ಮೆಯ್ಯ ಬಗೆಯೇ ಬದಲಾಗಿ ಹೋಗಿದೆ. ಅಲ್ಲಲ್ಲಿ {{gap}}ಅಲೆಯುತ್ತಿರುವುದರಿಂದಲೇ ಹೀಗೆ ಚಳಿ ಹಿಡಿದಿರಬಹುದೆ ? ಸದಾ:-ಉ: ಅದೇನೂ ಇಲ್ಲ. ನನ್ನ ಪ್ರಕೃತಿಯೆ ಹಾಗೆ, ತೇಜಸ್ವಿ:- ಪ್ರಕೃತಿ, ಹೇಗಾದರೂ ಬದಲಾಗದು.ಆದಂತೆ ತೋರಿದರೆ, ಅದನ್ನು {{gap}}ವಿಕೃತಿಯೆನ್ನಬೇಕು, ಇರಲಿ, ಹೆಚ್ಚಿನ ಸುದ್ದಿ ಏನು ? ಸದಾ:- ಬೇರೇನೂ ಇಲ್ಲ ; ಆದರೆ, ನಮ್ಮ ಜಲಧರನ ಉಪಾಯದಿಂದಾಗಿ, ಈಗ {{gap}}ಹಗೆಗಳು ನಮ್ಮ ಬಗಲಿಗೆ ಬರುವಂತಿದ್ದಾರೆ. ತೇಜಸ್ವಿ - ಆದುಷ್ಟರು ಹೇಗಿದ್ದರೂ ಹಾಗೆಯೆ, ಹರಡಿದರೂ ಕರಡಿಗೆ {{gap}}ಮುಚ್ಚಿದರೂ ನಾತವೆಂಬುದು ನಾತವೆ. ಆ ವಿಷಯದಲ್ಲಿ ದುಷ್ಟಂ ದೂರೇಣ {{gap}}ವರ್ಜಯೇತ್' ಎಂಬುದೇ ಅಚ್ಚು ಗುಟ್ಟು. ಸದಾಗತಿ:- ನೋಡು, ಇಂಥ ಬಿರುಸು ಯಾರಿಗೂ ಸಲ್ಲದು, ಅವರ ಕಾಲಡಿ ಯಲ್ಲಿ ಸಿಕ್ಕಿಬಿದ್ದಿರುವ ನಮಗಂತೂ, ಅದರ ಮರಿಯ ಬಡಿಯಬಾರದು. ಬಂದಿಯ ಬಾಯಬ್ಬರದಂತೆ, ಈಗಲೂ ನಾವು ಬೊಬ್ಬಿರಿದರೆ ಅ8, ಮೈ ಗೇಣಷ್ಟು, ಮಾತು ಮಾರಷ್ಟು' ಎಂಬ ಮಾತಿಗೆ ತಲೆಬಗ್ಗಿಸಬೇಕಾದೀತು. ಮಾತ್ರವಲ್ಲ , ಈಗಿನ ನಿನ್ನ ಅಲಕ್ಷ್ಯಭಾವವೆಂದರೆ ಹಗೆಗಳಲ್ಲಲ್ಲ ; ನಮ್ಮವರಲ್ಲಿಯೆ, ಹೇಗೆಂದರೆ-ಮಾರಾಳುಗಳು ನಮ್ಮ ಬಿರುಸಿಗೆ ಬಗ್ಗುವುದಿಲ್ಲ, ತಂಪಿಗೆ ಹಿಗುವುದಿಲ್ಲ. ಆದರೆ, ಇದರಿಂದ, ಹೇಗಾದರೂ ಹಗೆಗಳನ್ನು ಹಿಂಗಟ್ಟು ಮುಂಗಟ್ಟು ಮುರಿಯಬೇಕೆಂದು ಪ್ರಯತ್ನಿಸುವ ನಮ್ಮವರ ಉತ್ಸಾಹಬೀಜವು,ಸುಡುನೀರೆರೆದಂತೆ ಕರಿಕಾಗುವುದು. ತೇಜಸ್ವಿ:- ಇದೇನು, ನೀನೀಗ ಹೊಸಬನಾಗಿರುವಂತೆ ತೋರುವುದಲ್ಲ ! ನಮ್ಮ ವರನ್ನು ನಾವು, ಮೊದಲೆ ಹೊಗಳುವುದೆಂದರೆ, ಕಾರ್ಯಸಾಧನೆಯ ಕತ್ತಿಗೆ ಮಣ್ಣು ಹಿಡಿಯಿಸಿದಂತೆಯೆ. ಸ್ತುತಿಸಿದೊಡನೆ, ತನ್ನ ಕೆಲಸಕ್ಕೆ ಮುಗುಳಿ ಇಟ್ಟಾಯಿತೆಂದು ನೆನಸಿ, ಉದ್ಯೋಗದ ಕೈ, ಬೇಡವೆಂದರೂ ಸ್ವಲ್ಪ ಸಡಿಲಾಗುವುದು ಸಾಮಾನ್ಯವಾಗಿ ಪ್ರಕೃತಿ, ಆ ಹೊಗಳಿಕೆ, ಸಫಲವಾದ ಕಾರ್ಯಕ್ಕೆ ಮೇಲುಪುಡಿಯಾದರೆ ಚೆನ್ನಾಗುವುದಲ್ಲದೆ, ಗುಟ್ಟಿನ ಕಾರಣ<noinclude></noinclude> n0mco5r0f9nyvz0ztm6pu9nab8l1x5b 317196 317195 2026-05-05T09:54:55Z Ashwini Rai K 8475 317196 proofread-page text/x-wiki <noinclude><pagequality level="4" user="Ashwini Rai K" />{{Left|೨೬}}{{center|ಕನ್ನಡ ಕೋಗಿಲೆ, ಮೇ ೧೯೧೮.}} ———————————————————————————</noinclude> ತೇಜಸ್ವಿ:- (ಸದಾಗತಿಯನ್ನು ಇದಿರ್ಗೊ೦ಡು ತಲೆಯನ್ನೊಲೆಯುತ್ತ) ಪ್ರಿಯನೆ, {{gap}}ಇದೇನು ? ಈಗ ನಿನ್ನ ಮೆಯ್ಯ ಬಗೆಯೇ ಬದಲಾಗಿ ಹೋಗಿದೆ. ಅಲ್ಲಲ್ಲಿ {{gap}}ಅಲೆಯುತ್ತಿರುವುದರಿಂದಲೇ ಹೀಗೆ ಚಳಿ ಹಿಡಿದಿರಬಹುದೆ ? ಸದಾ:-ಉ: ಅದೇನೂ ಇಲ್ಲ. ನನ್ನ ಪ್ರಕೃತಿಯೆ ಹಾಗೆ, ತೇಜಸ್ವಿ:- ಪ್ರಕೃತಿ, ಹೇಗಾದರೂ ಬದಲಾಗದು.ಆದಂತೆ ತೋರಿದರೆ,{{gap}} ಅದನ್ನು ವಿಕೃತಿಯೆನ್ನಬೇಕು, ಇರಲಿ, ಹೆಚ್ಚಿನ ಸುದ್ದಿ ಏನು ? ಸದಾ:- ಬೇರೇನೂ ಇಲ್ಲ ; ಆದರೆ, ನಮ್ಮ ಜಲಧರನ ಉಪಾಯದಿಂದಾಗಿ,{{gap}} ಈಗ ಹಗೆಗಳು ನಮ್ಮ ಬಗಲಿಗೆ ಬರುವಂತಿದ್ದಾರೆ. ತೇಜಸ್ವಿ - ಆದುಷ್ಟರು ಹೇಗಿದ್ದರೂ ಹಾಗೆಯೆ, ಹರಡಿದರೂ ಕರಡಿಗೆ {{gap}}ಮುಚ್ಚಿದರೂ ನಾತವೆಂಬುದು ನಾತವೆ. ಆ ವಿಷಯದಲ್ಲಿ ದುಷ್ಟಂ ದೂರೇಣ {{gap}}ವರ್ಜಯೇತ್' ಎಂಬುದೇ ಅಚ್ಚು ಗುಟ್ಟು. ಸದಾಗತಿ:- ನೋಡು, ಇಂಥ ಬಿರುಸು ಯಾರಿಗೂ ಸಲ್ಲದು, ಅವರ ಕಾಲಡಿ ಯಲ್ಲಿ ಸಿಕ್ಕಿಬಿದ್ದಿರುವ ನಮಗಂತೂ, ಅದರ ಮರಿಯ ಬಡಿಯಬಾರದು. ಬಂದಿಯ ಬಾಯಬ್ಬರದಂತೆ, ಈಗಲೂ ನಾವು ಬೊಬ್ಬಿರಿದರೆ ಅ8, ಮೈ ಗೇಣಷ್ಟು, ಮಾತು ಮಾರಷ್ಟು' ಎಂಬ ಮಾತಿಗೆ ತಲೆಬಗ್ಗಿಸಬೇಕಾದೀತು. ಮಾತ್ರವಲ್ಲ , ಈಗಿನ ನಿನ್ನ ಅಲಕ್ಷ್ಯಭಾವವೆಂದರೆ ಹಗೆಗಳಲ್ಲಲ್ಲ ; ನಮ್ಮವರಲ್ಲಿಯೆ, ಹೇಗೆಂದರೆ-ಮಾರಾಳುಗಳು ನಮ್ಮ ಬಿರುಸಿಗೆ ಬಗ್ಗುವುದಿಲ್ಲ, ತಂಪಿಗೆ ಹಿಗುವುದಿಲ್ಲ. ಆದರೆ, ಇದರಿಂದ, ಹೇಗಾದರೂ ಹಗೆಗಳನ್ನು ಹಿಂಗಟ್ಟು ಮುಂಗಟ್ಟು ಮುರಿಯಬೇಕೆಂದು ಪ್ರಯತ್ನಿಸುವ ನಮ್ಮವರ ಉತ್ಸಾಹಬೀಜವು,ಸುಡುನೀರೆರೆದಂತೆ ಕರಿಕಾಗುವುದು. ತೇಜಸ್ವಿ:- ಇದೇನು, ನೀನೀಗ ಹೊಸಬನಾಗಿರುವಂತೆ ತೋರುವುದಲ್ಲ ! ನಮ್ಮ ವರನ್ನು ನಾವು, ಮೊದಲೆ ಹೊಗಳುವುದೆಂದರೆ, ಕಾರ್ಯಸಾಧನೆಯ ಕತ್ತಿಗೆ ಮಣ್ಣು ಹಿಡಿಯಿಸಿದಂತೆಯೆ. ಸ್ತುತಿಸಿದೊಡನೆ, ತನ್ನ ಕೆಲಸಕ್ಕೆ ಮುಗುಳಿ ಇಟ್ಟಾಯಿತೆಂದು ನೆನಸಿ, ಉದ್ಯೋಗದ ಕೈ, ಬೇಡವೆಂದರೂ ಸ್ವಲ್ಪ ಸಡಿಲಾಗುವುದು ಸಾಮಾನ್ಯವಾಗಿ ಪ್ರಕೃತಿ, ಆ ಹೊಗಳಿಕೆ, ಸಫಲವಾದ ಕಾರ್ಯಕ್ಕೆ ಮೇಲುಪುಡಿಯಾದರೆ ಚೆನ್ನಾಗುವುದಲ್ಲದೆ, ಗುಟ್ಟಿನ ಕಾರಣ<noinclude></noinclude> th9r0coqwzg932iffx1t6ebcir6unml ಪುಟ:ಹಗಲಿರುಳು.djvu/೩೬ 104 38634 317197 293692 2026-05-05T09:55:30Z Ashwini Rai K 8475 /* Validated */ 317197 proofread-page text/x-wiki <noinclude><pagequality level="4" user="Ashwini Rai K" />{{center|ಹಗಲಿರುಳು.}}{{Right|೨೭.}}</noinclude> ಕ್ಕಲ್ಲ.ಒಪ್ಪವೆಂಬುದು ಬಂಗಾರದ ತೊಡವಿಗೆ ; ಕರಗಿಸುವ ಕೋವೆಗಾಗಲಿ, ಅದರೊಳಗಣ ಹೊನ್ನಿನ ರಸಕ್ಕಾಗಲಿ, ಕೊಡತಿಗೆಗಾಗಲಿ ಅದೊಪ್ಪುವುದೆ ? ಕಾಲಗತಿಯಿಂದ ಆ ಕಾರಣವು ಸಫಲವಾಗದಿದ್ದಲ್ಲಿ, ನೆರೆಮನೆ ದೋಸೆಗೆ ಕಾಯಿಹಾಲು ಹಿಂಡಿದಂತೆ, ಬರಿದಾಗುವುದಲ್ಲದೆ, ಆ ಹೊಗಳಿಕೆಯ ಮೇರೆಗೆ ತೆಗಳಿಕೆ, ತನ್ನ ಬಣ್ಣವನ್ನು ಬಳಿವುದು. “ನಾವೀಗ, ಹಗೆಗಳನ್ನು ಸಂಧಿಗೆ ಒಪ್ಪಿಸಿದ್ದೇವೆ, ಅದರಿಂದ, ಅದೊಂದು ಕಾರ್ಯವು ನೆರವೇರಿತಲ್ಲವೆ ? ಆ ಕಾರ್ಯಕ್ಕೆ ತಕ್ಕ ಸ್ತುತಿಪಾಠವಾದರೂ ಆಗಬೇಡವೆ ?” ಎಂದು ಕೇಳಬಹುದು, ಆದರೆ, ಒಪ್ಪಿದ ಮಾತ್ರದಿಂದ ಕಾರ್ಯವಾಗಲಿಲ್ಲ ಅದು ಕಾರ್ಯಾ೦ಗವು ಅಂಥ ಕಾರ್ಯಾಂಗಗಳೂ, ಸಂಪೂರ್ಣ ಕಾರ್ಯಕ್ಕೆ ಕಾರಣಗಳಾಗುತ್ತವೆ. ಏನು, ಗೋಡೆ ಮೆತ್ತಿದರೆ ಮನೆಗಟ್ಟಿದಂತಾಯಿತೆ ? ನಮ್ಮಂಥವರ ಮಾತಿನ ಮೊಗ್ಗೆಗೆ ದೃಢನಿಶ್ಚಯವೆ ಬಿತ್ತು, ದೃಢನಿಶ್ಚಯಕ್ಕೆ ಮನಸ್ಯಕ್ತಿಯ ಮೂಲವು. ಮನಶ್ಯಗೆ ಆರ್ಯನ ಬೋಧನೆ ತಿಳಿನೀರು. ಇಷ್ಟು ಅನುಕೂಲತೆಯುಳ್ಳ ಆ ಮೊಗ್ಗೆ ಹುಚ್ಚು ಹೂ ಬಿಟ್ಟು ಕೆಲಸದ ಮಿಡಿ ಮೊಳೆಯಲಿಕ್ಕಿಲ್ಲ ವೆಂಬ ನಿನ್ನ ಎಣಿಕೆಗೆ ಏನು ಹೇಳಲಿ ! [ಈಗ ಸದಾಗತಿಗೆ ಮಾತು ಮುಟ್ಟಿತು, ಏನೇನೋ ಯೋಚಿಸುತ್ತ ಅತ್ತಿತ್ತ ಒಲೆದಾಡತೊಡಗಿದನು. ತೇಜಸ್ವಿಯ ನಕ್ಕು ಆಲೋಚಿಸಿ ಶಿರ್ರ ಕಂಪನದೊಡನೆ ಹೀಗೆ ಹೇಳುತ್ತಾನೆ.] ತೇಜಸ್ವಿ – ಪ್ರಿಯನೆ, ನನ್ನ ಈ ಮಾತಿಗೆ ಬೇಸರಪಡಬೇಡ. ಗೆಳೆಯರಾಡುವ ಎಳ್ಳಷ್ಟಾದ ಸಿಡಿನುಡಿಯ, ತಾವರೆಗೆ ಬಿಸಿಲಿನಂತೆ, ಸಂತಸಕ್ಕೆ ಕಾರಣ ವಾಗುವುದಲ್ಲ ವೆ? ಹುಂ, ತಿಳಿದವರಲ್ಲಿ ಬಿಚ್ಚಿಬಿಡಿಸಿ ಬಿತ್ತರಿಸುವುದೇಕೆ ? ಹೇಳು ;ಹಗೆಗಳು ನಮ್ಮ ಬಗಲಿಗೆ ಬರುವಂತೆ, ನೀವು ಹೂಡಿದ ಹಣಿಕೆ ಹೇಗೆ ? ಸದಾಗತಿ:- (ಬೇಸರದಿಂದ) ಸುಟ್ಟವು ತಿಂದರೆ ಸಾಕು : ಗುಳ ಲೆಕ್ಕವೇಕೆ ? ಎಂದಲ್ಲವೆ ನಿನ್ನ ಅಮೌಲಾಭಿಪ್ರಾಯವು ? ಅದರಿಂದ, ನಮ್ಮ ಆ ಉಪಾಯದ ಪರಿಮಳಕ್ಕೆ ಮೂಗರಳಿಸುವುದೇಕೆ ? ತೇಜಸ್ವಿ:- (ನಕ್ಕು) ಓಹೋ, ನಿನ್ನಲ್ಲಿ, ಬೇಸರದ ಬೇರೂರಿ ಹೋಗಿದೆ. ಪ್ರಾಣ ಪ್ರಿಯರಲ್ಲಿಯೂ ಇಂಥ ಮುನಿಸಾದರೆ, ಇನ್ನು, ಸವಿಯೊಸರುವ ಪ್ರೇಮ<noinclude></noinclude> dkg0xda3ez8chr8czgxyyi86mt8hskk ಪುಟ:ಅದ್ಭುತ ರಾಮಾಯಣ.djvu/೧ 104 40939 317096 103157 2026-05-05T02:41:56Z Sharanya K H 7593 /* Proofread */ 317096 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ಅದ್ಭುತ ರಾಮಾಯಣ.djvu/೮ 104 40946 317102 103164 2026-05-05T03:06:18Z Shreelatha.Halemane 7642 /* Proofread */ 317102 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|'''ಪೀಠಿಕೆ'''}} ಈ ಅದ್ಭುತರಾಮಾಯಣವು ಹೆಸುರಿಗೆತಕ್ಕಂತೆ ಓದುತೋದುತ ಆಶ್ಚರ್ಯವನ್ನು ಉಂಟುಮಾಡವುದು. ಪ್ರಾರಂಭಿಸಿದರೆ ಕೊನೆಯವರೆಗೂ ಓದಿನೋಡಬೇಕೆಂಬ ಆಶೆಯನ್ನು ಹುಟ್ಟಿಸುತ್ತದೆ. ", ಹಳಗನ್ನಡದಲ್ಲಿ ಅದ್ಭ್ಹುತರಾಮಾಯಣವು ರಸಲ್ಪಟ್ಟಿದ್ದರೂ, ಹಳೆಗನ್ನಡದ ಪರಿಚಯ ಇಲ್ಲದವರಿಗಾಗಿ ಸಂಸ್ಕೃತದ ಮೂಲವನ್ನುಇಟ್ಟಿಕೊಂಡು ಹೊಸಕನ್ನಡಕ್ಕೆ ತರ್ಜುಮೆ ಮಾಡಲ್ಪಟ್ಟಿರುವುದು.ಇದರಲ್ಲಿ (13 ಅಧ್ಯಾಯಗಳಿವೆ. ಸಂಸ್ಕೃತದಲ್ಲಿರುವ ಸೀತಾಸಹಸ್ರನಾಮವೆಂಬ ಶ್ಲೋಕರೂಪವನ್ನು ಬಿಟ್ಟು ಉಳಿದ ಭಾಗವನ್ನು ಪರಿವರ್ತಿಸಿದೆ. ಈ ಪ್ರಸ್ತಕದಲ್ಲಿ ನಾರದರಸಂಗಿತ ವಿದ್ಯಾಭ್ಯಾಸವೂ, ವೇದಾಂತರಹಸ್ಯಗಳೂ ಹೇಳಲ್ಪಟ್ಟಿರುವವು. ವಾಚಕರಿಗೆ ತುಂಬಾ ಅನುಕೂಲವಾಗಿರು ವಂತೆ ಸುಲಭಶೈಲಿಯಲ್ಲಿ ಬರೆಯಲ್ಪಟ್ಟಿರುವುದು, ಇದನ್ನು ರಚಿಸಿ, ಶಾನೆ ದಿನಗಳಾದವು. ಈಗ ಇದರ ಪ್ರಕಾಶಕ್ಕೆ ಅವಕಾಶವನ್ನು ಕಲ್ಪಿಸಿಕೊಟ್ಟ ವಿದ್ಯಾನಂದ ಸಂಪಾದಕರು ಬ್ರ!! ಆದಿನಾರಾಯಣ ಶಾಸ್ತ್ರಿಗಳಿಗೆ ತುಂಬಾ ಕೃತಜ್ಞನಾಗಿರುವೆನು. ಭಾಷಾಭಿಮಾನಿಗಳು ಇದಕ್ಕೆ ಉದಾರಾಶ್ರಯನ್ನು ಕೊಟ್ಟು ಪ್ರೋತ್ಸಾಹಿಸಬೇಕಲ್ಲದೆ ಪ್ರಾಜ್ಞರು ದಯವಿಟ್ಟು ದೋಷವಿದ್ದರೆ ತಿದ್ದಿಕೊಳ್ಳಲು ನನಗೆ ಆಜ್ಞಾಪಿಸಬೇಕಾಗಿ ಪ್ರಾರ್ಥನೆ, {{Left|18-8-1914}}18-8-1914 ). {{Left|ಅನೆಕಲ್ |}} {{Left|ಆನಂದ ಸಂ|| ಶ್ರಾವಣ ಒ|| ದ್ವಾದಶಿ}} {{Right|ಸಜ್ಜನರ ಎಥೇಯನಾದ ವೆ ೦ಕ ಟಿ ಸು ಬೃ ಯ್ಯ,}} {{Right|ಮುಖ್ಯೋಪಾಧ್ಯಾಯ}}<noinclude></noinclude> bn7cwx9ouwh95mg1uiesucyygxc789q 317116 317102 2026-05-05T05:51:36Z Ashwini Rai K 8475 /* Validated */ 317116 proofread-page text/x-wiki <noinclude><pagequality level="4" user="Ashwini Rai K" /></noinclude>{{center|'''ಪೀಠಿಕೆ'''}} ಈ ಅದ್ಭುತರಾಮಾಯಣವು ಹೆಸುರಿಗೆತಕ್ಕಂತೆ ಓದುತೋದುತ ಆಶ್ಚರ್ಯವನ್ನು ಉಂಟುಮಾಡವುದು. ಪ್ರಾರಂಭಿಸಿದರೆ ಕೊನೆಯವರೆಗೂ ಓದಿನೋಡಬೇಕೆಂಬ ಆಶೆಯನ್ನು ಹುಟ್ಟಿಸುತ್ತದೆ. ", ಹಳಗನ್ನಡದಲ್ಲಿ ಅದ್ಭ್ಹುತರಾಮಾಯಣವು ರಸಲ್ಪಟ್ಟಿದ್ದರೂ, ಹಳೆಗನ್ನಡದ ಪರಿಚಯ ಇಲ್ಲದವರಿಗಾಗಿ ಸಂಸ್ಕೃತದ ಮೂಲವನ್ನುಇಟ್ಟಿಕೊಂಡು ಹೊಸಕನ್ನಡಕ್ಕೆ ತರ್ಜುಮೆ ಮಾಡಲ್ಪಟ್ಟಿರುವುದು.ಇದರಲ್ಲಿ (13 ಅಧ್ಯಾಯಗಳಿವೆ. ಸಂಸ್ಕೃತದಲ್ಲಿರುವ ಸೀತಾಸಹಸ್ರನಾಮವೆಂಬ ಶ್ಲೋಕರೂಪವನ್ನು ಬಿಟ್ಟು ಉಳಿದ ಭಾಗವನ್ನು ಪರಿವರ್ತಿಸಿದೆ. ಈ ಪ್ರಸ್ತಕದಲ್ಲಿ ನಾರದರಸಂಗಿತ ವಿದ್ಯಾಭ್ಯಾಸವೂ, ವೇದಾಂತರಹಸ್ಯಗಳೂ ಹೇಳಲ್ಪಟ್ಟಿರುವವು. ವಾಚಕರಿಗೆ ತುಂಬಾ ಅನುಕೂಲವಾಗಿರು ವಂತೆ ಸುಲಭಶೈಲಿಯಲ್ಲಿ ಬರೆಯಲ್ಪಟ್ಟಿರುವುದು, ಇದನ್ನು ರಚಿಸಿ, ಶಾನೆ ದಿನಗಳಾದವು. ಈಗ ಇದರ ಪ್ರಕಾಶಕ್ಕೆ ಅವಕಾಶವನ್ನು ಕಲ್ಪಿಸಿಕೊಟ್ಟ ವಿದ್ಯಾನಂದ ಸಂಪಾದಕರು ಬ್ರ!! ಆದಿನಾರಾಯಣ ಶಾಸ್ತ್ರಿಗಳಿಗೆ ತುಂಬಾ ಕೃತಜ್ಞನಾಗಿರುವೆನು. ಭಾಷಾಭಿಮಾನಿಗಳು ಇದಕ್ಕೆ ಉದಾರಾಶ್ರಯನ್ನು ಕೊಟ್ಟು ಪ್ರೋತ್ಸಾಹಿಸಬೇಕಲ್ಲದೆ ಪ್ರಾಜ್ಞರು ದಯವಿಟ್ಟು ದೋಷವಿದ್ದರೆ ತಿದ್ದಿಕೊಳ್ಳಲು ನನಗೆ ಆಜ್ಞಾಪಿಸಬೇಕಾಗಿ ಪ್ರಾರ್ಥನೆ, {{Left|18-8-1914}} {{Left|ಅನೆಕಲ್ |}} {{Left|ಆನಂದ ಸಂ|| ಶ್ರಾವಣ ಒ|| ದ್ವಾದಶಿ}} {{Right|ಸಜ್ಜನರ ಎಥೇಯನಾದ ವೆ ೦ಕ ಟಿ ಸು ಬೃ ಯ್ಯ,}} {{Right|ಮುಖ್ಯೋಪಾಧ್ಯಾಯ}}<noinclude></noinclude> b2g1ti0pnqrx8hkou0wm76v0g9gq3zr 317117 317116 2026-05-05T05:51:57Z Ashwini Rai K 8475 317117 proofread-page text/x-wiki <noinclude><pagequality level="4" user="Ashwini Rai K" /></noinclude>{{center|'''ಪೀಠಿಕೆ'''}} {{gap}}ಈ ಅದ್ಭುತರಾಮಾಯಣವು ಹೆಸುರಿಗೆತಕ್ಕಂತೆ ಓದುತೋದುತ ಆಶ್ಚರ್ಯವನ್ನು ಉಂಟುಮಾಡವುದು. ಪ್ರಾರಂಭಿಸಿದರೆ ಕೊನೆಯವರೆಗೂ ಓದಿನೋಡಬೇಕೆಂಬ ಆಶೆಯನ್ನು ಹುಟ್ಟಿಸುತ್ತದೆ. ", ಹಳಗನ್ನಡದಲ್ಲಿ ಅದ್ಭ್ಹುತರಾಮಾಯಣವು ರಸಲ್ಪಟ್ಟಿದ್ದರೂ, ಹಳೆಗನ್ನಡದ ಪರಿಚಯ ಇಲ್ಲದವರಿಗಾಗಿ ಸಂಸ್ಕೃತದ ಮೂಲವನ್ನುಇಟ್ಟಿಕೊಂಡು ಹೊಸಕನ್ನಡಕ್ಕೆ ತರ್ಜುಮೆ ಮಾಡಲ್ಪಟ್ಟಿರುವುದು.ಇದರಲ್ಲಿ (13 ಅಧ್ಯಾಯಗಳಿವೆ. ಸಂಸ್ಕೃತದಲ್ಲಿರುವ ಸೀತಾಸಹಸ್ರನಾಮವೆಂಬ ಶ್ಲೋಕರೂಪವನ್ನು ಬಿಟ್ಟು ಉಳಿದ ಭಾಗವನ್ನು ಪರಿವರ್ತಿಸಿದೆ. ಈ ಪ್ರಸ್ತಕದಲ್ಲಿ ನಾರದರಸಂಗಿತ ವಿದ್ಯಾಭ್ಯಾಸವೂ, ವೇದಾಂತರಹಸ್ಯಗಳೂ ಹೇಳಲ್ಪಟ್ಟಿರುವವು. ವಾಚಕರಿಗೆ ತುಂಬಾ ಅನುಕೂಲವಾಗಿರು ವಂತೆ ಸುಲಭಶೈಲಿಯಲ್ಲಿ ಬರೆಯಲ್ಪಟ್ಟಿರುವುದು, ಇದನ್ನು ರಚಿಸಿ, ಶಾನೆ ದಿನಗಳಾದವು. ಈಗ ಇದರ ಪ್ರಕಾಶಕ್ಕೆ ಅವಕಾಶವನ್ನು ಕಲ್ಪಿಸಿಕೊಟ್ಟ ವಿದ್ಯಾನಂದ ಸಂಪಾದಕರು ಬ್ರ!! ಆದಿನಾರಾಯಣ ಶಾಸ್ತ್ರಿಗಳಿಗೆ ತುಂಬಾ ಕೃತಜ್ಞನಾಗಿರುವೆನು. ಭಾಷಾಭಿಮಾನಿಗಳು ಇದಕ್ಕೆ ಉದಾರಾಶ್ರಯನ್ನು ಕೊಟ್ಟು ಪ್ರೋತ್ಸಾಹಿಸಬೇಕಲ್ಲದೆ ಪ್ರಾಜ್ಞರು ದಯವಿಟ್ಟು ದೋಷವಿದ್ದರೆ ತಿದ್ದಿಕೊಳ್ಳಲು ನನಗೆ ಆಜ್ಞಾಪಿಸಬೇಕಾಗಿ ಪ್ರಾರ್ಥನೆ, {{Left|18-8-1914}} {{Left|ಅನೆಕಲ್ |}} {{Left|ಆನಂದ ಸಂ|| ಶ್ರಾವಣ ಒ|| ದ್ವಾದಶಿ}} {{Right|ಸಜ್ಜನರ ಎಥೇಯನಾದ ವೆ ೦ಕ ಟಿ ಸು ಬೃ ಯ್ಯ,}} {{Right|ಮುಖ್ಯೋಪಾಧ್ಯಾಯ}}<noinclude></noinclude> t5xldyhv72jxu0m5ikrnk1ouhj6o1u5 ಪುಟ:ಅದ್ಭುತ ರಾಮಾಯಣ.djvu/೧೦ 104 40947 317101 103165 2026-05-05T02:57:41Z Shreelatha.Halemane 7642 /* Proofread */ 317101 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೨}}{{center|ವಿದ್ಯಾನಂದ}} ಶಿಷ್ಯನಾದ ನಿನಗೆ ಮಾತ್ರ ನಾನುಪದೇಶಿಸುವೆನು, ಜಾನಕಿಯು ಸೃಷ್ಟಿ. ಗೆ ಮೂಲಭೂತಳು, ತಪಸ್ಸಿಗೆ ಸಿದ್ಧಿಯಂತೆಯ ಪಾತಿವ್ರತ್ಯಕ್ಕೆ ಮೂರ್ತಿಯಾಗಿಯೂ ಇರುವಳು, ಬ್ರಹ್ಮವಾದಿಗಳವಳನ್ನು ವಿದ್ಯೆಯೆಂದೂ ಅವಿದ್ಯೆಯೆಂದೂ ತಿಳಿಯುವರು, ಸೀತೆಯು ಗುಣಾತೀತಳಾಗಿಯೂ ಗುಣಾತ್ಮಕಳಾಗಿಯೂ ಇರುತ್ತಾಳೆ. ಈ ಚರಾಚರರೂಪವಾದ ಪ್ರಪಂಚವೆಲ್ಲವೂ ಅವಳ ವಿಲಾಸದಿಂದಲೇ ಉಂಟಾಗಿದೆ, ತತ್ರದರ್ಶಿಗ೪ಾದ ಯೋಗಿಗಳು ಸೀತಾಸಾಕ್ಷಾತ್ಕಾರದಿಂದಲೇ ತಮ್ಮ ಹೃದ್ಗ್ರಂಥಿಯನ್ನು ವಿಘಟಿಸಿ ಮುಕ್ತರಾಗುವರು. ಆ ಸೀತೆಯು, ಧರ್ಮಚ್ಯುತಿಯುಂಟಾದಕಾಲದಲ್ಲಿ ಪ್ರಕೃತಿಸಂಭವಳಾಗೊಗೆದು, ಲೋಕವನ್ನುದ್ದರಿಸುವಳು. ರಾಮನು ಸಾಕ್ಷಾತ್ಪರಂಜ್ಯೋತಿಯಾಗಿಯೂ ಪರಮಪುರುಷನಾಗಿಯೂ ಇರುವನು. ಸೀತಾರಾವರಿಗೆ ಆಕಾರದಲ್ಲಿ ಸ್ವಲ್ಪವೂ ಭೇದವೇ ಇಲ್ಲ. ರಾಮನೇ ಸೀತೆಯು, ಸೀತೆಯೇ ರಾಮಭದ್ರನು. ಅವರಿಬ್ಬರಿಗೂ ಅಣುಮಾತ್ರವೂ ಭೇದವಿಲ್ಲ. ಸತ್ಪುರುಷರು ಈ ತತ್ವವನ್ನು ತಿಳಿದು ಸಂಸಾರವನ್ನು ದಾಟಿ ಮೃತ್ಯುವಕ್ರದಿಂದ ಬಿಡುಗಡೆಯನ್ನು ಹೊಂದಿ ಮುಕ್ತರಾಗಿರುವರು. ರಾಮನು ಆಚಾರನಾಗಿಯೂ, ನಿತ್ಯನಾಗಿಯೂ, ಸರ್ವಸಾಕ್ಷಿಯಾಗಿಯೂ, ಸರ್ವಾಂತರ್ಯಾಮಿಯಾಗಿಯೂ, ಸರ್ವಲೋಕ ಕರ್ತನಾಗಿಯೂ ಇರುವನು. ಆ ರಾಮಚಂದ್ರನು ಕಾಲಿಲ್ಲದೆ ನಡೆಯು ಬಲ್ಲನು, ಕೈಗಳಿಲ್ಲದೆ ಹಿಡಿಯಬಲ್ಲನು, ಕಣ್ಣುಗಳಿಲ್ಲದೆ ನೋಡಬಲ್ಲನು, ಕಿವಿಯಿಲ್ಲದೆ ಕೇಳಬಲ್ಲನು, ಅವನು ಪ್ರಪಂಚವನ್ನೆಲ್ಲಾ ತಿಳಿದಿರುವನು, ಅವನನ್ನು ತಿಳಿದವರು ಯಾರೂ ಇಲ್ಲ, ಆತನನ್ನು ಪುರಾಣಪುರುಷನೆಂದು ಹೇಳುವರು ಇಂತಪ್ಪ ಸೀತಾರಾಮ ಜನ್ಮವನ್ನೆತ್ತಲು ಹೇತುವನ್ನು ಹೇಳುವೆನು ಕೇಳು ? ರೂಪವಿಹೀನರಾದ ಅವರು ರೂಪವನ್ನೆತ್ತಿ ಮನುಷ್ಯರಿಗೆ ಅನುಗ್ರಹವನ್ನು ಮಾಡುವುದಕ್ಕಾಗಿ ಈರೀತಿ ವಿಲಾಸವುಳ್ಳವರಾಗಿದ್ದಾರೆ. ಈ ರಾಮಾಯಣವನ್ನು ವಿಪ್ರರೋದಿದರೆ ವಾಗ್ಮಿಗಳಾಗು ವರು, ಕ್ಷತ್ರಿಯರೋದಿದರೆ ಚಕ್ರವರ್ತಿಗಳಾಗುವರು, ವೈಶ್ಯರೋದಿದರೆ ಸುಕೃತಶಾಲಿಗಳಾಗುವರು, ಶೂದ್ರರೋದಿದರೆ ಪೂಜ್ಯರಾಗುವರು. {{center|ಮೊದಲನೆಯ ಅಧ್ಯಾಯವು ಮುಗಿದುದು,}}<noinclude></noinclude> 0xnxhy0a58yn0htfl1mcumnjpa0ikh1 317109 317101 2026-05-05T04:28:12Z Shreesha Sharma 7840 /* Validated */ 317109 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೨}}{{center|ವಿದ್ಯಾನಂದ}} ಶಿಷ್ಯನಾದ ನಿನಗೆ ಮಾತ್ರ ನಾನುಪದೇಶಿಸುವೆನು, ಜಾನಕಿಯು ಸೃಷ್ಟಿ. ಗೆ ಮೂಲಭೂತಳು, ತಪಸ್ಸಿಗೆ ಸಿದ್ಧಿಯಂತೆಯ ಪಾತಿವ್ರತ್ಯಕ್ಕೆ ಮೂರ್ತಿಯಾಗಿಯೂ ಇರುವಳು, ಬ್ರಹ್ಮವಾದಿಗಳವಳನ್ನು ವಿದ್ಯೆಯೆಂದೂ ಅವಿದ್ಯೆಯೆಂದೂ ತಿಳಿಯುವರು, ಸೀತೆಯು ಗುಣಾತೀತಳಾಗಿಯೂ ಗುಣಾತ್ಮಕಳಾಗಿಯೂ ಇರುತ್ತಾಳೆ. ಈ ಚರಾಚರರೂಪವಾದ ಪ್ರಪಂಚವೆಲ್ಲವೂ ಅವಳ ವಿಲಾಸದಿಂದಲೇ ಉಂಟಾಗಿದೆ, ತತ್ರದರ್ಶಿಗ೪ಾದ ಯೋಗಿಗಳು ಸೀತಾಸಾಕ್ಷಾತ್ಕಾರದಿಂದಲೇ ತಮ್ಮ ಹೃದ್ಗ್ರಂಥಿಯನ್ನು ವಿಘಟಿಸಿ ಮುಕ್ತರಾಗುವರು. ಆ ಸೀತೆಯು, ಧರ್ಮಚ್ಯುತಿಯುಂಟಾದಕಾಲದಲ್ಲಿ ಪ್ರಕೃತಿಸಂಭವಳಾಗೊಗೆದು, ಲೋಕವನ್ನುದ್ದರಿಸುವಳು. ರಾಮನು ಸಾಕ್ಷಾತ್ಪರಂಜ್ಯೋತಿಯಾಗಿಯೂ ಪರಮಪುರುಷನಾಗಿಯೂ ಇರುವನು. ಸೀತಾರಾವರಿಗೆ ಆಕಾರದಲ್ಲಿ ಸ್ವಲ್ಪವೂ ಭೇದವೇ ಇಲ್ಲ. ರಾಮನೇ ಸೀತೆಯು, ಸೀತೆಯೇ ರಾಮಭದ್ರನು. ಅವರಿಬ್ಬರಿಗೂ ಅಣುಮಾತ್ರವೂ ಭೇದವಿಲ್ಲ. ಸತ್ಪುರುಷರು ಈ ತತ್ವವನ್ನು ತಿಳಿದು ಸಂಸಾರವನ್ನು ದಾಟಿ ಮೃತ್ಯುವಕ್ರದಿಂದ ಬಿಡುಗಡೆಯನ್ನು ಹೊಂದಿ ಮುಕ್ತರಾಗಿರುವರು. ರಾಮನು ಆಚಾರನಾಗಿಯೂ, ನಿತ್ಯನಾಗಿಯೂ, ಸರ್ವಸಾಕ್ಷಿಯಾಗಿಯೂ, ಸರ್ವಾಂತರ್ಯಾಮಿಯಾಗಿಯೂ, ಸರ್ವಲೋಕ ಕರ್ತನಾಗಿಯೂ ಇರುವನು. ಆ ರಾಮಚಂದ್ರನು ಕಾಲಿಲ್ಲದೆ ನಡೆಯು ಬಲ್ಲನು, ಕೈಗಳಿಲ್ಲದೆ ಹಿಡಿಯಬಲ್ಲನು, ಕಣ್ಣುಗಳಿಲ್ಲದೆ ನೋಡಬಲ್ಲನು, ಕಿವಿಯಿಲ್ಲದೆ ಕೇಳಬಲ್ಲನು, ಅವನು ಪ್ರಪಂಚವನ್ನೆಲ್ಲಾ ತಿಳಿದಿರುವನು, ಅವನನ್ನು ತಿಳಿದವರು ಯಾರೂ ಇಲ್ಲ, ಆತನನ್ನು ಪುರಾಣಪುರುಷನೆಂದು ಹೇಳುವರು ಇಂತಪ್ಪ ಸೀತಾರಾಮ ಜನ್ಮವನ್ನೆತ್ತಲು ಹೇತುವನ್ನು ಹೇಳುವೆನು ಕೇಳು ? ರೂಪವಿಹೀನರಾದ ಅವರು ರೂಪವನ್ನೆತ್ತಿ ಮನುಷ್ಯರಿಗೆ ಅನುಗ್ರಹವನ್ನು ಮಾಡುವುದಕ್ಕಾಗಿ ಈರೀತಿ ವಿಲಾಸವುಳ್ಳವರಾಗಿದ್ದಾರೆ. ಈ ರಾಮಾಯಣವನ್ನು ವಿಪ್ರರೋದಿದರೆ ವಾಗ್ಮಿಗಳಾಗು ವರು, ಕ್ಷತ್ರಿಯರೋದಿದರೆ ಚಕ್ರವರ್ತಿಗಳಾಗುವರು, ವೈಶ್ಯರೋದಿದರೆ ಸುಕೃತಶಾಲಿಗಳಾಗುವರು, ಶೂದ್ರರೋದಿದರೆ ಪೂಜ್ಯರಾಗುವರು. {{center|ಮೊದಲನೆಯ ಅಧ್ಯಾಯವು ಮುಗಿದುದು,}}<noinclude></noinclude> kveef4fxkd7p52wsk7qi8udckmmbcq6 ಪುಟ:ಅದ್ಭುತ ರಾಮಾಯಣ.djvu/೧೧ 104 40948 317104 103166 2026-05-05T03:41:23Z Shreelatha.Halemane 7642 /* Proofread */ 317104 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|'''ಅದ್ಭುತ ರಾಮಾಯಣ ಕಥಾಸಾರವು'''.}}{{Right|೩}} {{center|ಎರಡನೆಯ ಅಧ್ಯಾಯವು. }} {{gap}}ಎಲೈ ಭರದ್ವಾಜನೆ ! ಶ್ರೀರಾಮಚಂದ್ರನು ಇಕ್ಶ್ವಾಕುಕುಲದಲ್ಲಿ ಹುಟ್ಟುವುದಕ್ಕೂ, ಮಹಾದೇವಿಯಾದ ಸೀತೆಯು ಭೂಮಿಯಲ್ಲಿ ಜನಿಸುವುದಕ್ಕೂ ಕಾರಣವನ್ನು ಹೇಳುವೆನು ಕೇಳು ? ಆದರೆ ಮೊದಲು ಶ್ರೀರಾಮನ ಕಥೆಯನ್ನುಪಕ್ರಮಿಸುವೆನು.ಅಂಬರೀಷನ ಉಪಾಖ್ಯಾನಕ್ಕಾಕರವಾದ ಪುರುಷೋತ್ತಮನ ಮಹಿಮೆಯು ಸರ್ವಪಾಪವನ್ನೂ ಹೋಗಲಾಡಿಸುವುದು.ಅಂಬರೀಷನ ತಾಯಿಯಾದ ತ್ರಿಶಂಕುವಿನ ಭಾರ್ಯೆಯು ಸರ್ವಲಕ್ಷಣಸಂಪನ್ನೆಯಾಗಿಯೂ ಶೀಲವತಿಯಾಗಿಯೂ ಇರುತ್ತಿದ್ದಳು. ಆಕೆಯ, ಯೋಗನಿದ್ರೆಯನ್ನು ಹೊಂದಿ ಶೇಷಪಂಕದಲ್ಲಿ ಪವಡಿಸಿದ್ದ ಸರ್ವದೇವನಮಸ್ಕೃತನಾದ ನಾರಾಯಣನನ್ನು ತಮೋಗುಣದಿಂದ ಕಾಲ ರುದ್ರನೆಂದೂ, ರಜೋಗುಣದಿಂದ ಬ್ರಹ್ಮನೆಂದೂ, ಸತ್ವಗುಣದಿಂದ ವಿಷ್ಣುವೆಂದೂ ತಿಳಿದು ಮನೋವಾಕ್ಕಾಯಗಳಿಂದರ್ಚಿಸುತ್ತಿದ್ದಳು. ಹೂವಿನ ಮಾಲೆಗಳನ್ನು ತಾನೇಕಟ್ಟಿ ದೇವರಿಗೊಪ್ಪಿಸುತ್ತಿದ್ದಳು. ಗಂಧವನ್ನು ತೆಗೆಯುವುದೂ, ಧೂಪದ್ರವ್ಯಗಳನ್ನರೆಯುವದೂ ಮುಂತಾದ ಕೆಲಸವನ್ನು ತಾನೇ ಮಾಡುತ್ತಿದ್ದಳು. ಆ ಪದ್ಮಾವತಿಯು, “ನಾರಾಯಣ ಅನಂತ''? ಎಂದು ನುಡಿಯುತ್ತ ಹತ್ತು ಸಾವಿರ ವರ್ಷಗಳು ತದ್ಗತವಾದ ಮನಸ್ಸುಳ್ಳವಳಾಗಿ ಗೋವಿಂದನನ್ನು ಗಂಧಪುಷ್ಪಾದಿಗಳಿಂದ ಪೂಜಿಸುತ್ತಿದಳು. ವಿಷ್ಣುಭಕ್ತರಾಗಿಯೂ ಪಾಪವರ್ಜಿತರಾಗಿಯೂ ಇದ್ದ ಮಹಾನುಭಾ ವರಿಗೆ ಧನಧಾನ್ಯರತ್ನಾದಿಗಳನ್ನಿತ್ತು ಅವರನ್ನು ಸಂತೋಷಪಡಿಸುತ್ತಿದ್ದಳು. ಒಮ್ಮೆಯಾಪದ್ಮಾವತೀದೇವಿಯು ದ್ವಾದಶಿಯ ದಿವಸ ಉಪವಾಸವನ್ನು ಮಾಡಿ, ಪತಿಯೊಡನೆ ಹರಿಯಮುಂದೆ ಪವಡಿಸಿರಲು, ಆಗ ಪುರುಷೋತ್ತಮನು ಸ್ವಪ್ನದಲ್ಲಿ ಬಂದು-ಎಲೌ ಸ್ತ್ರೀಯೆ ! ನನ್ನಿಂದ ನಿನಗಾಗಬೇಕಾದುದೇನು ? ಹೇಳು ?” ಎಂದು ಪ್ರಶ್ನೆ ಮಾಡಿದನು. ಅದಕ್ಕವಳು“ಎಲೈ ಸ್ವಾಮಿಯೇ ! ನಿನ್ನಲ್ಲಿ ಭಕ್ತಿಯುಳ್ಳವನಾಗಿಯೂ, ಚಕ್ರವರ್ತಿಯಾಗಿಯೂ, ಸರ್ವಕರ್ಮ ನಿರತನಾಗಿಯೂ ಶುಚಿಯಾಗಿಯೂ ಇರುವ ಮಗನೊಬ್ಬನನ್ನು ಕೊಡು ?” ಎಂದು ಬೇಡಿಕೊಂಡಳು. ನಾರಾಯಣನು ಹಾಗೆಯೇ<noinclude></noinclude> c2minm5c8k21ocdqkqoczd545lqzccm 317110 317104 2026-05-05T04:28:23Z Shreesha Sharma 7840 /* Validated */ 317110 proofread-page text/x-wiki <noinclude><pagequality level="4" user="Shreesha Sharma" /></noinclude>{{center|'''ಅದ್ಭುತ ರಾಮಾಯಣ ಕಥಾಸಾರವು'''.}}{{Right|೩}} {{center|ಎರಡನೆಯ ಅಧ್ಯಾಯವು. }} {{gap}}ಎಲೈ ಭರದ್ವಾಜನೆ ! ಶ್ರೀರಾಮಚಂದ್ರನು ಇಕ್ಶ್ವಾಕುಕುಲದಲ್ಲಿ ಹುಟ್ಟುವುದಕ್ಕೂ, ಮಹಾದೇವಿಯಾದ ಸೀತೆಯು ಭೂಮಿಯಲ್ಲಿ ಜನಿಸುವುದಕ್ಕೂ ಕಾರಣವನ್ನು ಹೇಳುವೆನು ಕೇಳು ? ಆದರೆ ಮೊದಲು ಶ್ರೀರಾಮನ ಕಥೆಯನ್ನುಪಕ್ರಮಿಸುವೆನು.ಅಂಬರೀಷನ ಉಪಾಖ್ಯಾನಕ್ಕಾಕರವಾದ ಪುರುಷೋತ್ತಮನ ಮಹಿಮೆಯು ಸರ್ವಪಾಪವನ್ನೂ ಹೋಗಲಾಡಿಸುವುದು.ಅಂಬರೀಷನ ತಾಯಿಯಾದ ತ್ರಿಶಂಕುವಿನ ಭಾರ್ಯೆಯು ಸರ್ವಲಕ್ಷಣಸಂಪನ್ನೆಯಾಗಿಯೂ ಶೀಲವತಿಯಾಗಿಯೂ ಇರುತ್ತಿದ್ದಳು. ಆಕೆಯ, ಯೋಗನಿದ್ರೆಯನ್ನು ಹೊಂದಿ ಶೇಷಪಂಕದಲ್ಲಿ ಪವಡಿಸಿದ್ದ ಸರ್ವದೇವನಮಸ್ಕೃತನಾದ ನಾರಾಯಣನನ್ನು ತಮೋಗುಣದಿಂದ ಕಾಲ ರುದ್ರನೆಂದೂ, ರಜೋಗುಣದಿಂದ ಬ್ರಹ್ಮನೆಂದೂ, ಸತ್ವಗುಣದಿಂದ ವಿಷ್ಣುವೆಂದೂ ತಿಳಿದು ಮನೋವಾಕ್ಕಾಯಗಳಿಂದರ್ಚಿಸುತ್ತಿದ್ದಳು. ಹೂವಿನ ಮಾಲೆಗಳನ್ನು ತಾನೇಕಟ್ಟಿ ದೇವರಿಗೊಪ್ಪಿಸುತ್ತಿದ್ದಳು. ಗಂಧವನ್ನು ತೆಗೆಯುವುದೂ, ಧೂಪದ್ರವ್ಯಗಳನ್ನರೆಯುವದೂ ಮುಂತಾದ ಕೆಲಸವನ್ನು ತಾನೇ ಮಾಡುತ್ತಿದ್ದಳು. ಆ ಪದ್ಮಾವತಿಯು, “ನಾರಾಯಣ ಅನಂತ''? ಎಂದು ನುಡಿಯುತ್ತ ಹತ್ತು ಸಾವಿರ ವರ್ಷಗಳು ತದ್ಗತವಾದ ಮನಸ್ಸುಳ್ಳವಳಾಗಿ ಗೋವಿಂದನನ್ನು ಗಂಧಪುಷ್ಪಾದಿಗಳಿಂದ ಪೂಜಿಸುತ್ತಿದಳು. ವಿಷ್ಣುಭಕ್ತರಾಗಿಯೂ ಪಾಪವರ್ಜಿತರಾಗಿಯೂ ಇದ್ದ ಮಹಾನುಭಾ ವರಿಗೆ ಧನಧಾನ್ಯರತ್ನಾದಿಗಳನ್ನಿತ್ತು ಅವರನ್ನು ಸಂತೋಷಪಡಿಸುತ್ತಿದ್ದಳು. ಒಮ್ಮೆಯಾಪದ್ಮಾವತೀದೇವಿಯು ದ್ವಾದಶಿಯ ದಿವಸ ಉಪವಾಸವನ್ನು ಮಾಡಿ, ಪತಿಯೊಡನೆ ಹರಿಯಮುಂದೆ ಪವಡಿಸಿರಲು, ಆಗ ಪುರುಷೋತ್ತಮನು ಸ್ವಪ್ನದಲ್ಲಿ ಬಂದು-ಎಲೌ ಸ್ತ್ರೀಯೆ ! ನನ್ನಿಂದ ನಿನಗಾಗಬೇಕಾದುದೇನು ? ಹೇಳು ?” ಎಂದು ಪ್ರಶ್ನೆ ಮಾಡಿದನು. ಅದಕ್ಕವಳು“ಎಲೈ ಸ್ವಾಮಿಯೇ ! ನಿನ್ನಲ್ಲಿ ಭಕ್ತಿಯುಳ್ಳವನಾಗಿಯೂ, ಚಕ್ರವರ್ತಿಯಾಗಿಯೂ, ಸರ್ವಕರ್ಮ ನಿರತನಾಗಿಯೂ ಶುಚಿಯಾಗಿಯೂ ಇರುವ ಮಗನೊಬ್ಬನನ್ನು ಕೊಡು ?” ಎಂದು ಬೇಡಿಕೊಂಡಳು. ನಾರಾಯಣನು ಹಾಗೆಯೇ<noinclude></noinclude> oktd75obfizi6dx1zze9simxrcim7s7 ಪುಟ:ಅದ್ಭುತ ರಾಮಾಯಣ.djvu/೧೨ 104 40949 317105 103167 2026-05-05T03:48:53Z Shreelatha.Halemane 7642 /* Proofread */ 317105 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೪}}{{center|ವಿದ್ಯಾನಂದ}} ಆಗಲೆಂದು ಆಕೆಗೊಂದು ಫಲವನ್ನು ಕೊಟ್ಟನು, ಆಕೆಯು ಎಚ್ಚೆತ್ತ ಮೇಲೂ ಫಲವನ್ನು ನೋಡಿ ಪತಿಗೆ ಸಂಗತಿಯೆಲ್ಲವನ್ನೂ ಬಿನ್ನೈ ಸಿ ಆ ಹಣ್ಣನ್ನು ತಿಂದಳು, ಕೆಲವು ಕಾಲಕಳೆದಮೇಲೆ ಆಕೆಯು ವಾಸುದೇವನ ಅನುರಕ್ತನಾಗಿರುವ ಯೋಗ್ಯನಾದ ಮಗನೊಬ್ಬನನ್ನು ಪಡೆದಳು. ಆ ತ್ರಿಶಂಕುರಾಜನು ಮಗನು ಹುಟ್ಟಿದನು ಎಂದು ಕೇಳಿ, ಸಂತೋಷವನ್ನು ತಾಳಿ, ಆ ಮಗನಿಗೆ ಜಾತಕರಾದಿ ಸಂಸ್ಕಾರವನ್ನು ಬ್ರಾಹ್ಮಣರಿಂದ ಮಾಡಿಸಿ ಅಂಬರೀಷನೆಂದು ಹೆಸರಿಟ್ಟನು. {{gap}}ಕಾಲಕ್ರಮೇಣ ಆ ಮಗನು ಬೆಳೆಯುತ್ತ ಬರಲಾಗಿ ಅವನ ತಂದೆಯು ದೇವೆಂದ್ರನೋಲಗದ ಚಾವಡಿಯನ್ನೇರಿದನು. ತರುವಾಯ ಪುರದ ಪ್ರಮುಖರೆಲ್ಲರೂ ಸೇರಿ ಆ ಬಾಲಕನಿಗೆ ಪಟ್ಟಗಟ್ಟಿದರು. ಆ ಅಂಬರೀಷನು ಮಂತ್ರಿಗಳವಶಕ್ಕೆ ರಾಜ್ಯಾಧಿಪತ್ಯವನ್ನೊಪ್ಪಿಸಿ, ತಾನು ತಪಸ್ಸು ಮಾಡಲುಪಕ್ರಮಿಸಿ,ಹೃತ್ಪುಂಡರೀಕ ಮಧ್ಯಸ್ಥನಾಗಿಯೂ, ಸೂರ್ಯಮಂಡಲಮಧ್ಯವರ್ತಿಯಾಗಿಯೂ ಶಂಖ ಚಕ್ರ ಗದಾಪದ್ಮಗಳನ್ನು ನಾಲ್ಕು ಭುಜದಲ್ಲಿಯೂ ಧರಿಸಿಕೊಂಡು, ಶುದ್ಧವಾದ ಅಪರಂಜಿಯಂತೆ ಪ್ರಕಾಶಿಸುವವನಾಗಿಯೂ, ಬ್ರಹ್ಮ ವಿಷ್ಣು ಶಿವಾತ್ಮಕನಾಗಿಯೂ, ಪೀತಾಂಬರಧಾರಿಯಾಗಿಯೂ ಶ್ರೀವತ್ಸವಕ್ಷನಾಗಿಯ ಆರುವ ಪುರುಷೋತ್ತಮನಾದ ವಿಷ್ಣುವನ್ನು ಧ್ಯಾನಮಾಡುತ್ತಿದ್ದನು. ಬಳಿಕ ಭಕ್ತಾನುಗ್ರಹತತ್ಪರನಾದ ವಿಷ್ಣುವನ್ನು ಗರುಡಾರೂಢನಾಗಿ ಸರ್ವದೇವತೆಗಳಿಂದಲೂ ಹೊಗಳಿಸಿಕೊಳ್ಳುತ್ತ ಬಂದು ಭಕ್ತ ಮನೋಭಾವವನ್ನು ಭಾವಿಸಲೆಳಸಿ ತನ್ನ ವಾಹನವಾದ ಗರುಡನನ್ನು ಐರಾವತವನ್ನಾಗಿ ಮಾಡಿ, ತಾನು ಇಂದ್ರನಾಗಿ ಅದರ ಮೇಲೆ ಕುಳಿತುಕೊಂಡು, ರಾಯನ ಸಮಿಾಪವನ್ನೈದಿ._ಎಲೈ ರಾಜೇಂದ್ರನೆ ! ಇಂದ್ರನಾದ ನಾನು ಬಂದಿರುವೆನು ನಿನಗೇನು ಬೇಕು ? “ಎಲೈ ಚಕ್ರವರ್ತಿಯೆ ! ನಿನ್ನನ್ನು ಕಾಪಾಡಲು ಸಿದ್ಧನಾಗಿರುವೆನು ಎಂದು ನುಡಿದನು, ಅದಕ್ಕೆ ಅಂಬರೀಷನು._ಎಲೈ ಇಂದ್ರನೇ! ನಾನು ವಿಷ್ಣುಭಕ್ತಯುಕ್ತನಾಗಿರುವೆನು. ನಿನ್ನನ್ನು ಕುರಿತು ತಪಸ್ಸು ಮಾಡಿದವನಲ್ಲ. ನೀನು ಕೊಡುವ ವರವನ್ನು ನಾನು ಒಪ್ಪುವನೂ ಅಲ್ಲ.ನಿನ್ನನ್ನು ನಾನು ಮೆಚ್ಚಿಸಿದವನೂ ಅಲ್ಲ ; ನೀನು ಬಂದ ದಾರಿಯನ್ನು ಹಿಡಿದು<noinclude></noinclude> 0m4ka5pmfg1ylkelzp53dsxd4o0khn3 317111 317105 2026-05-05T04:28:35Z Shreesha Sharma 7840 /* Validated */ 317111 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೪}}{{center|ವಿದ್ಯಾನಂದ}} ಆಗಲೆಂದು ಆಕೆಗೊಂದು ಫಲವನ್ನು ಕೊಟ್ಟನು, ಆಕೆಯು ಎಚ್ಚೆತ್ತ ಮೇಲೂ ಫಲವನ್ನು ನೋಡಿ ಪತಿಗೆ ಸಂಗತಿಯೆಲ್ಲವನ್ನೂ ಬಿನ್ನೈ ಸಿ ಆ ಹಣ್ಣನ್ನು ತಿಂದಳು, ಕೆಲವು ಕಾಲಕಳೆದಮೇಲೆ ಆಕೆಯು ವಾಸುದೇವನ ಅನುರಕ್ತನಾಗಿರುವ ಯೋಗ್ಯನಾದ ಮಗನೊಬ್ಬನನ್ನು ಪಡೆದಳು. ಆ ತ್ರಿಶಂಕುರಾಜನು ಮಗನು ಹುಟ್ಟಿದನು ಎಂದು ಕೇಳಿ, ಸಂತೋಷವನ್ನು ತಾಳಿ, ಆ ಮಗನಿಗೆ ಜಾತಕರಾದಿ ಸಂಸ್ಕಾರವನ್ನು ಬ್ರಾಹ್ಮಣರಿಂದ ಮಾಡಿಸಿ ಅಂಬರೀಷನೆಂದು ಹೆಸರಿಟ್ಟನು. {{gap}}ಕಾಲಕ್ರಮೇಣ ಆ ಮಗನು ಬೆಳೆಯುತ್ತ ಬರಲಾಗಿ ಅವನ ತಂದೆಯು ದೇವೆಂದ್ರನೋಲಗದ ಚಾವಡಿಯನ್ನೇರಿದನು. ತರುವಾಯ ಪುರದ ಪ್ರಮುಖರೆಲ್ಲರೂ ಸೇರಿ ಆ ಬಾಲಕನಿಗೆ ಪಟ್ಟಗಟ್ಟಿದರು. ಆ ಅಂಬರೀಷನು ಮಂತ್ರಿಗಳವಶಕ್ಕೆ ರಾಜ್ಯಾಧಿಪತ್ಯವನ್ನೊಪ್ಪಿಸಿ, ತಾನು ತಪಸ್ಸು ಮಾಡಲುಪಕ್ರಮಿಸಿ,ಹೃತ್ಪುಂಡರೀಕ ಮಧ್ಯಸ್ಥನಾಗಿಯೂ, ಸೂರ್ಯಮಂಡಲಮಧ್ಯವರ್ತಿಯಾಗಿಯೂ ಶಂಖ ಚಕ್ರ ಗದಾಪದ್ಮಗಳನ್ನು ನಾಲ್ಕು ಭುಜದಲ್ಲಿಯೂ ಧರಿಸಿಕೊಂಡು, ಶುದ್ಧವಾದ ಅಪರಂಜಿಯಂತೆ ಪ್ರಕಾಶಿಸುವವನಾಗಿಯೂ, ಬ್ರಹ್ಮ ವಿಷ್ಣು ಶಿವಾತ್ಮಕನಾಗಿಯೂ, ಪೀತಾಂಬರಧಾರಿಯಾಗಿಯೂ ಶ್ರೀವತ್ಸವಕ್ಷನಾಗಿಯ ಆರುವ ಪುರುಷೋತ್ತಮನಾದ ವಿಷ್ಣುವನ್ನು ಧ್ಯಾನಮಾಡುತ್ತಿದ್ದನು. ಬಳಿಕ ಭಕ್ತಾನುಗ್ರಹತತ್ಪರನಾದ ವಿಷ್ಣುವನ್ನು ಗರುಡಾರೂಢನಾಗಿ ಸರ್ವದೇವತೆಗಳಿಂದಲೂ ಹೊಗಳಿಸಿಕೊಳ್ಳುತ್ತ ಬಂದು ಭಕ್ತ ಮನೋಭಾವವನ್ನು ಭಾವಿಸಲೆಳಸಿ ತನ್ನ ವಾಹನವಾದ ಗರುಡನನ್ನು ಐರಾವತವನ್ನಾಗಿ ಮಾಡಿ, ತಾನು ಇಂದ್ರನಾಗಿ ಅದರ ಮೇಲೆ ಕುಳಿತುಕೊಂಡು, ರಾಯನ ಸಮಿಾಪವನ್ನೈದಿ._ಎಲೈ ರಾಜೇಂದ್ರನೆ ! ಇಂದ್ರನಾದ ನಾನು ಬಂದಿರುವೆನು ನಿನಗೇನು ಬೇಕು ? “ಎಲೈ ಚಕ್ರವರ್ತಿಯೆ ! ನಿನ್ನನ್ನು ಕಾಪಾಡಲು ಸಿದ್ಧನಾಗಿರುವೆನು ಎಂದು ನುಡಿದನು, ಅದಕ್ಕೆ ಅಂಬರೀಷನು._ಎಲೈ ಇಂದ್ರನೇ! ನಾನು ವಿಷ್ಣುಭಕ್ತಯುಕ್ತನಾಗಿರುವೆನು. ನಿನ್ನನ್ನು ಕುರಿತು ತಪಸ್ಸು ಮಾಡಿದವನಲ್ಲ. ನೀನು ಕೊಡುವ ವರವನ್ನು ನಾನು ಒಪ್ಪುವನೂ ಅಲ್ಲ.ನಿನ್ನನ್ನು ನಾನು ಮೆಚ್ಚಿಸಿದವನೂ ಅಲ್ಲ ; ನೀನು ಬಂದ ದಾರಿಯನ್ನು ಹಿಡಿದು<noinclude></noinclude> oks2zy43tyxdki7cjbscfcezn97z5my ಪುಟ:ಅದ್ಭುತ ರಾಮಾಯಣ.djvu/೧೩ 104 40950 317106 103168 2026-05-05T04:14:24Z Shreelatha.Halemane 7642 /* Proofread */ 317106 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೫}}{{Right|ಅದ್ಭುತ ರಾಮಾಯಣ ಕಥಾಸರವು.}} ಹೋಗು ? ನನಗೆ ನಾರಾಯಣನೇ ನಾಥನು, ಹೊರಡು ! ಹೊರಡು !! ನೀವಿಲ್ಲಿದ್ದು ಇನ್ನು ನನಗೆ ತಪೋವಿಘ್ನವನ್ನು ಮಾಡಬೇಡ, ಎಂದು ಹೇಳಿದನು.“ತರುವಾಯ ಹರಿಯು ನಿಜರೂಪವನ್ನು ತೋರಿಸಿ ಶಂಖಚಕ್ರ ಗದಾಧಾರಿಯಾಗಿ ಗರುಡನನ್ನೇರಿ ಎರಡನೆಯ ಅಂಜನಾದ್ರಿಯಂತೆ ಕಂಗೊಳಿಸುತ್ತ ದೇವ ಗಂಧರ್ವರಿಂದ ಹೊಗಳಿಸಿಕೊಳ್ಳುತ್ತ ಪ್ರತ್ಯಕ್ಷನಾದನು. ಅದನ್ನು ನೋಡಿ ರಾಜನು ದೇವರನ್ನು ನಮಿಸಿ, ಹರ್ಷವನ್ನು ಹೊಂದಿ “ಎಲೈ ಲೋಕನಾಥನೆ ! ಪ್ರಸನ್ನನಾಗು, ನಾನು ನಿನ್ನ ಮರೆಯನ್ನೈದಿರುವೆನು, ನೀನುದ್ಧರಿಸು ? ಅನ್ಯಥಾ ನನಗೆ ರಕ್ಷಕರಿಲ್ಲ,, ಎಂದು ಬಹಳ ವಾಗಿ ಸ್ತುತಿಸಿ 'ಬೇಡಿಕೊಂಡನು. ಬಳಿಕ ವಿಷ್ಣುವು ಪ್ರಸನ್ನನಾಗಿ “ಎಲೈ ರಾಜನೆ ! ನಿನಗೆ ಬೇಕಾದುದೇನು ? ನೀನು ನನಗೆ ಪರಮಭಕ್ತನಾಗಿರುವೆ, ಬೇಕಾದುದನ್ನೆಲ್ಲಾ ನಿನಗೆ ಕೊಡುವೆನು” ಎಂದು ಹೇಳಿದನು. ಅಂಬರೀಷನದನ್ನು ಕೇಳಿ ಮುದವನ್ನು ಹೊಂದಿ, “ಎಲೈ ನಾರಾಯಣನೆ! ನೀನು ಪ್ರಸನ್ನನಾಗಿರುವಾಗ ನನಗೆ ಏನುತಾನೇ ಕಡಮೆಯಾಗಿರುವುದು, ನನ್ನ ಬುದ್ದಿಯು ಯಾವಾಗಲೂ ನಿನ್ನ ಚಿಂತನೆಯಲ್ಲಿಯೇ ವರ್ತಿಸುವಂತೆ ಅನುಗ್ರಹಿಸು ? ನಾನು ಜನರನ್ನು ವಿಷ್ಣು ಭಕ್ತಿಯುಕ್ತರನ್ನು ಮಾಡಿ ರಕ್ಷಿಸುತ್ತ ಬರುವಂತೆಯೂ, ಯಜ್ಞ ಹೋವಾದಿಗಳಿಂದ ದೇವತೆಗಳನ್ನು ತೃಪ್ತಿಗೊಳಿಸುವಂತೆಯೂ, ವೈಷ್ಣವರನ್ನು ಕಾಪಾಡುತ್ತ ವೈರಿಗಳನ್ನಿರಿಯುವಂತೆಯೂ, ನನಗೆ ಅನುಗ್ರಹಿಸಬೇಕು ಎಂದು ಕೇಳಿಕೊಂಡನು. ಅದನ್ನು ಕೇಳಿ ವಿಷ್ಣುವು ಹಾಗೆಯೇ ಆಗಲೆಂದು ಹೇಳ-ಎಲೈ ರಾಜನೆ ! ಈ ಸುದರ್ಶನ ಚಕ್ರವು, ಪೂರ್ವದಲ್ಲಿ ರುದ್ರನ ಪ್ರಭಾವದಿಂದ ನನಗೆ ಲಭ್ಯವಾಯಿತು. ಇದರಿಂದ ಋಷಿಕಾ ಪಾದಿದುಃಖವೂ, ಶತ್ರು ರೋಗಾದಿ ಭಯಗಳೂ, ನಾಶವಾಗುವುವು, ಎಂದು ಹೇಳಿ ಚಕ್ರವನ್ನು ರಾಜನಿಗೆ ಕೊಟ್ಟು ಅಲ್ಲಿಯೇ ಅದೃಶ್ಯನಾದನು. ಆಮೇಲೆ ಅರಸನು ಸಂತುಷ್ಟನಾಗಿ ನಾರಾಯಣನನ್ನು ನಮಿಸಿ ತನ್ನ ರಾಜಧಾನಿಯಾದ ಅಯೋಧ್ಯೆಗೆ ಬಂದು ರಾಜ್ಯವನ್ನು ಸುಖವಾಗಿ ಕಾಪಾಡಿಕೊಂಡಿದ್ದನು. ಬ್ರಾಹ್ಮಣಾದಿ ವರ್ಣಚತು ಷ್ಟಯಗಳೂ, ತಮ್ಮ ತಮ್ಮ ವೃತ್ತಿಗಳನ್ನು ಮೀರುತ್ತಿರಲಿಲ್ಲ. ರಾಜನು<noinclude></noinclude> ncjlyfrrw11i7p3rfdstfkc3vbfgo8x 317112 317106 2026-05-05T04:28:46Z Shreesha Sharma 7840 /* Validated */ 317112 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೫}}{{Right|ಅದ್ಭುತ ರಾಮಾಯಣ ಕಥಾಸರವು.}} ಹೋಗು ? ನನಗೆ ನಾರಾಯಣನೇ ನಾಥನು, ಹೊರಡು ! ಹೊರಡು !! ನೀವಿಲ್ಲಿದ್ದು ಇನ್ನು ನನಗೆ ತಪೋವಿಘ್ನವನ್ನು ಮಾಡಬೇಡ, ಎಂದು ಹೇಳಿದನು.“ತರುವಾಯ ಹರಿಯು ನಿಜರೂಪವನ್ನು ತೋರಿಸಿ ಶಂಖಚಕ್ರ ಗದಾಧಾರಿಯಾಗಿ ಗರುಡನನ್ನೇರಿ ಎರಡನೆಯ ಅಂಜನಾದ್ರಿಯಂತೆ ಕಂಗೊಳಿಸುತ್ತ ದೇವ ಗಂಧರ್ವರಿಂದ ಹೊಗಳಿಸಿಕೊಳ್ಳುತ್ತ ಪ್ರತ್ಯಕ್ಷನಾದನು. ಅದನ್ನು ನೋಡಿ ರಾಜನು ದೇವರನ್ನು ನಮಿಸಿ, ಹರ್ಷವನ್ನು ಹೊಂದಿ “ಎಲೈ ಲೋಕನಾಥನೆ ! ಪ್ರಸನ್ನನಾಗು, ನಾನು ನಿನ್ನ ಮರೆಯನ್ನೈದಿರುವೆನು, ನೀನುದ್ಧರಿಸು ? ಅನ್ಯಥಾ ನನಗೆ ರಕ್ಷಕರಿಲ್ಲ,, ಎಂದು ಬಹಳ ವಾಗಿ ಸ್ತುತಿಸಿ 'ಬೇಡಿಕೊಂಡನು. ಬಳಿಕ ವಿಷ್ಣುವು ಪ್ರಸನ್ನನಾಗಿ “ಎಲೈ ರಾಜನೆ ! ನಿನಗೆ ಬೇಕಾದುದೇನು ? ನೀನು ನನಗೆ ಪರಮಭಕ್ತನಾಗಿರುವೆ, ಬೇಕಾದುದನ್ನೆಲ್ಲಾ ನಿನಗೆ ಕೊಡುವೆನು” ಎಂದು ಹೇಳಿದನು. ಅಂಬರೀಷನದನ್ನು ಕೇಳಿ ಮುದವನ್ನು ಹೊಂದಿ, “ಎಲೈ ನಾರಾಯಣನೆ! ನೀನು ಪ್ರಸನ್ನನಾಗಿರುವಾಗ ನನಗೆ ಏನುತಾನೇ ಕಡಮೆಯಾಗಿರುವುದು, ನನ್ನ ಬುದ್ದಿಯು ಯಾವಾಗಲೂ ನಿನ್ನ ಚಿಂತನೆಯಲ್ಲಿಯೇ ವರ್ತಿಸುವಂತೆ ಅನುಗ್ರಹಿಸು ? ನಾನು ಜನರನ್ನು ವಿಷ್ಣು ಭಕ್ತಿಯುಕ್ತರನ್ನು ಮಾಡಿ ರಕ್ಷಿಸುತ್ತ ಬರುವಂತೆಯೂ, ಯಜ್ಞ ಹೋವಾದಿಗಳಿಂದ ದೇವತೆಗಳನ್ನು ತೃಪ್ತಿಗೊಳಿಸುವಂತೆಯೂ, ವೈಷ್ಣವರನ್ನು ಕಾಪಾಡುತ್ತ ವೈರಿಗಳನ್ನಿರಿಯುವಂತೆಯೂ, ನನಗೆ ಅನುಗ್ರಹಿಸಬೇಕು ಎಂದು ಕೇಳಿಕೊಂಡನು. ಅದನ್ನು ಕೇಳಿ ವಿಷ್ಣುವು ಹಾಗೆಯೇ ಆಗಲೆಂದು ಹೇಳ-ಎಲೈ ರಾಜನೆ ! ಈ ಸುದರ್ಶನ ಚಕ್ರವು, ಪೂರ್ವದಲ್ಲಿ ರುದ್ರನ ಪ್ರಭಾವದಿಂದ ನನಗೆ ಲಭ್ಯವಾಯಿತು. ಇದರಿಂದ ಋಷಿಕಾ ಪಾದಿದುಃಖವೂ, ಶತ್ರು ರೋಗಾದಿ ಭಯಗಳೂ, ನಾಶವಾಗುವುವು, ಎಂದು ಹೇಳಿ ಚಕ್ರವನ್ನು ರಾಜನಿಗೆ ಕೊಟ್ಟು ಅಲ್ಲಿಯೇ ಅದೃಶ್ಯನಾದನು. ಆಮೇಲೆ ಅರಸನು ಸಂತುಷ್ಟನಾಗಿ ನಾರಾಯಣನನ್ನು ನಮಿಸಿ ತನ್ನ ರಾಜಧಾನಿಯಾದ ಅಯೋಧ್ಯೆಗೆ ಬಂದು ರಾಜ್ಯವನ್ನು ಸುಖವಾಗಿ ಕಾಪಾಡಿಕೊಂಡಿದ್ದನು. ಬ್ರಾಹ್ಮಣಾದಿ ವರ್ಣಚತು ಷ್ಟಯಗಳೂ, ತಮ್ಮ ತಮ್ಮ ವೃತ್ತಿಗಳನ್ನು ಮೀರುತ್ತಿರಲಿಲ್ಲ. ರಾಜನು<noinclude></noinclude> psf5p5lyhs1yrwplu6b215tmev2glkh ಪುಟ:ಅದ್ಭುತ ರಾಮಾಯಣ.djvu/೧೪ 104 40951 317107 103169 2026-05-05T04:20:52Z Shreelatha.Halemane 7642 /* Proofread */ 317107 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೬}}{{center|ವಿದ್ಯಾನಂದ }} ಅಶ್ವಮೇಧ ಮೊದಲಾದ ಅನೇಕ ಯಜ್ಞಗಳನ್ನು ಮಾಡಿ, ಸಮುದ್ರಮಧ್ಯೆ ಇರುವ ದೇಶವನ್ನೆಲ್ಲಾ ಒಂದೇ ಪೊಳಲಿನಂತ ಕಾಪಾಡುತ್ತಿದ್ದನು. ರಾಜ್ಯ ಎಲ್ಲವೂ ವಿಷ್ಣು ಭಕ್ತಿಮಯವಾಯಿತು, ಮನೆಮನೆಯಲ್ಲಿಯೂ ಹರಿನಾಮಸ್ಮರಣೆಯೂ, ಬ್ರಾಹ್ಮಣರ ಮನೆಯಲ್ಲಿ ವೇದಘೋಷವೂ ತುಂಬಿ ತುಳುಕಾಡುತ್ತಿತ್ತು, ಅವನ ರಾಜ್ಯದಲ್ಲಿ ಕ್ಷಾಮಡಾಮರ ಮೊದಲಾದ ಬಾಧೆಗಳಾವುವೂ ತಲೆಹಾಕುತ್ತಿರಲಿಲ್ಲ, ಪ್ರಜೆಗಳಲ್ಲರೂ ನೆಮ್ಮದಿಯಾಗಿ ನಲಿಯುತ್ತಿದ್ದರು. {{center|ಎರಡನೆಯ ಅಧ್ಯಾಯವು ಮುಗಿದುದು}} {{center|'''ಮೂರನೆಯ ಅಧ್ಯಾಯವು'''.}} {{gap}}ಹೀಗಿರಲಾಗಿ ಅಂಬರೀಷನಿಗೆ ಸರ್ವಲಕ್ಷಣ ಸಂಪನ್ನೆಯಾಗಿಯೂ ಶೀ. ಲವತಿಯಾಗಿಯೂ ಇರುವ ಮಗಳೊಬ್ಬಳು ಜನಿಸಿದಳು. ಅವಳಿಗೆ ರಾಜನು ಶ್ರೀಮತಿಯೆಂಬ ಹೆಸರನ್ನಿಟ್ಟು ಬಹಳ ವೈಭವದಿಂದ ನಾಮಕರಣವನ್ನು ಮಾಡಿದನು. ಆ ಬಾಲೆಯು ತಂದೆಯನ್ನು ಮೆಚ್ಚಿಸುತ್ತ ದಿನೇದಿನೇ ಬೆಳೆಯುತ್ತಿದ್ದಳು. ಒಮ್ಮೆ ದೇವಮುನಿಯಾದ ನಾರದನೂ, ಶ್ರೇಷ್ಠನಾದ ಪರ್ವತನೂ ಅಂಬರೀಷನ ಮನೆಗೈಯ್ತಂದರು. ಆ ರಾಜನಾಮುನಿಗಳನ್ನು ವಿಧಿವಿಧಾನದಿಂದರ್ಚಿಸಿ ಕುಶಲಪ್ರಷ್ನೆಗಳಿಂದ ಸಂತೋಷಗೊಳಿಸಿದನು. {{gap}}ಆಗ ನಾರದನು ರಾಜನ ಪಕ್ಕದಲ್ಲಿದ್ದ ಬಾಲಕಿಯನ್ನು ನೋಡಿ ಆಶ್ಚರ್ಯಯುಕ್ತ ನಾಗಿ ಎಲೈ ರಾಜನೆ| ಮಹಾಭಾಗನೆ |ಈ ಹುಡುಗಿಯಾರು? ದೇವಕನ್ನಿಕೆಯಂತಿರುವಳು ಎಂದು ಪ್ರಶ್ನೆ ಮಾಡಿದನು, ಆಮಾತನ್ನು ಕೇಳಿ ರಾಯನ್ನು,-ಎಲೈ ವಿಭುವೆ ? ಈ ಹುಡುಗಿಯು ನನ್ನ ಮಗಳು,ಅವಳಿಗೆ ಶ್ರೀಮತಿಯೆಂಬ ಹೆಸರಿಟ್ಟರುವೆನು.ಈ ಬಾಲೆಯು ಮದುವಗೆ ನೆರೆದಿದ್ದಾಳೆ. ನಾನು ತಕ್ಕವನಾದ ವರನನ್ನು ನೋಡುತ್ತಿದ್ದೇನೆ, ಎಂದು ಬಿನ್ನವಿಸಿದನು. ಈ ಮಾತನ್ನು ಕೇಳಿ ನಾರದನು ತಾನು ಆ ಕನ್ನಿಕೆ<noinclude></noinclude> md9dvuwyu2q9m583sdg12oqsc6mzcyf 317113 317107 2026-05-05T04:28:56Z Shreesha Sharma 7840 /* Validated */ 317113 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೬}}{{center|ವಿದ್ಯಾನಂದ }} ಅಶ್ವಮೇಧ ಮೊದಲಾದ ಅನೇಕ ಯಜ್ಞಗಳನ್ನು ಮಾಡಿ, ಸಮುದ್ರಮಧ್ಯೆ ಇರುವ ದೇಶವನ್ನೆಲ್ಲಾ ಒಂದೇ ಪೊಳಲಿನಂತ ಕಾಪಾಡುತ್ತಿದ್ದನು. ರಾಜ್ಯ ಎಲ್ಲವೂ ವಿಷ್ಣು ಭಕ್ತಿಮಯವಾಯಿತು, ಮನೆಮನೆಯಲ್ಲಿಯೂ ಹರಿನಾಮಸ್ಮರಣೆಯೂ, ಬ್ರಾಹ್ಮಣರ ಮನೆಯಲ್ಲಿ ವೇದಘೋಷವೂ ತುಂಬಿ ತುಳುಕಾಡುತ್ತಿತ್ತು, ಅವನ ರಾಜ್ಯದಲ್ಲಿ ಕ್ಷಾಮಡಾಮರ ಮೊದಲಾದ ಬಾಧೆಗಳಾವುವೂ ತಲೆಹಾಕುತ್ತಿರಲಿಲ್ಲ, ಪ್ರಜೆಗಳಲ್ಲರೂ ನೆಮ್ಮದಿಯಾಗಿ ನಲಿಯುತ್ತಿದ್ದರು. {{center|ಎರಡನೆಯ ಅಧ್ಯಾಯವು ಮುಗಿದುದು}} {{center|'''ಮೂರನೆಯ ಅಧ್ಯಾಯವು'''.}} {{gap}}ಹೀಗಿರಲಾಗಿ ಅಂಬರೀಷನಿಗೆ ಸರ್ವಲಕ್ಷಣ ಸಂಪನ್ನೆಯಾಗಿಯೂ ಶೀ. ಲವತಿಯಾಗಿಯೂ ಇರುವ ಮಗಳೊಬ್ಬಳು ಜನಿಸಿದಳು. ಅವಳಿಗೆ ರಾಜನು ಶ್ರೀಮತಿಯೆಂಬ ಹೆಸರನ್ನಿಟ್ಟು ಬಹಳ ವೈಭವದಿಂದ ನಾಮಕರಣವನ್ನು ಮಾಡಿದನು. ಆ ಬಾಲೆಯು ತಂದೆಯನ್ನು ಮೆಚ್ಚಿಸುತ್ತ ದಿನೇದಿನೇ ಬೆಳೆಯುತ್ತಿದ್ದಳು. ಒಮ್ಮೆ ದೇವಮುನಿಯಾದ ನಾರದನೂ, ಶ್ರೇಷ್ಠನಾದ ಪರ್ವತನೂ ಅಂಬರೀಷನ ಮನೆಗೈಯ್ತಂದರು. ಆ ರಾಜನಾಮುನಿಗಳನ್ನು ವಿಧಿವಿಧಾನದಿಂದರ್ಚಿಸಿ ಕುಶಲಪ್ರಷ್ನೆಗಳಿಂದ ಸಂತೋಷಗೊಳಿಸಿದನು. {{gap}}ಆಗ ನಾರದನು ರಾಜನ ಪಕ್ಕದಲ್ಲಿದ್ದ ಬಾಲಕಿಯನ್ನು ನೋಡಿ ಆಶ್ಚರ್ಯಯುಕ್ತ ನಾಗಿ ಎಲೈ ರಾಜನೆ| ಮಹಾಭಾಗನೆ |ಈ ಹುಡುಗಿಯಾರು? ದೇವಕನ್ನಿಕೆಯಂತಿರುವಳು ಎಂದು ಪ್ರಶ್ನೆ ಮಾಡಿದನು, ಆಮಾತನ್ನು ಕೇಳಿ ರಾಯನ್ನು,-ಎಲೈ ವಿಭುವೆ ? ಈ ಹುಡುಗಿಯು ನನ್ನ ಮಗಳು,ಅವಳಿಗೆ ಶ್ರೀಮತಿಯೆಂಬ ಹೆಸರಿಟ್ಟರುವೆನು.ಈ ಬಾಲೆಯು ಮದುವಗೆ ನೆರೆದಿದ್ದಾಳೆ. ನಾನು ತಕ್ಕವನಾದ ವರನನ್ನು ನೋಡುತ್ತಿದ್ದೇನೆ, ಎಂದು ಬಿನ್ನವಿಸಿದನು. ಈ ಮಾತನ್ನು ಕೇಳಿ ನಾರದನು ತಾನು ಆ ಕನ್ನಿಕೆ<noinclude></noinclude> 2sm1r37ih5431qq2wiiqmec9l34r7n0 ಪುಟ:ಅದ್ಭುತ ರಾಮಾಯಣ.djvu/೧೫ 104 40952 317108 103170 2026-05-05T04:26:59Z Shreelatha.Halemane 7642 /* Proofread */ 317108 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಅದ್ಭುತ ರಾಮಾಯಣ ಕಥಾಸಾರವು,}}{{Right|೭}} ಯನ್ನು ಮದುವೆಯಾಗಬೇಕಂದುಮನಸ್ಸಿನಲ್ಲಿ ಬಹಳವಾಗಿ ಕುತೂಹಲವುಳ್ಳವ ವನಾದನು.ಹಾಗೆಯೇ ಪವತನಿಗೂ ಶ್ರೀಮತಿಯನ್ನು ಮದುವೆಯಾಗಬೇಕೆಂಬ ಕೋರಿಕೆಯು ಬಗೆಯಲ್ಲಿ ಬೇರೂರಿತು. ನಾರದನು ರಾಜನನ್ನು ರಹಸ್ಯವಾಗಿ ಕರೆದು-ಎಲೈ ರಾಜನೆ ! ನಿನ್ನ ಮಗಳನ್ನು ನನಗೆ ಕೊ ಟ್ಟು ನನ್ನನ್ನು ಗೃಹಸ್ಥನನ್ನಾಗಿ ಮಾಡು ಎಂದು ತನ್ನ ಮನೋಗತವನ್ನು ತಿಳಿಸಿದನು. ಪರ್ವತನೂ ಇದೇಮೇರೆಗೆ ಏಕಾಂತದಲ್ಲಿ-.ಎಲೈ ರಾಜನೆ ! ನಿನ್ನ ಮಗಳನ್ನು ನನಗೆ ಕೊಟ್ಟು ಮದುವೆ ಮಾಡು ಎಂದು ರಾಯನಿಗೆ ಸೂಚಿಸಿದನು. ಬಳಿಕ ರಾಯನು ಮುನಿಗಳೀರ್ವರ ಮನೊಭಿಪ್ರಾಯವನ್ನು ತಿಳಿದು--ಎಲೈ ಪೂಜ್ಯರಿರಾ ! ನೀವಿಬ್ಬರೂ ನನ್ನ ಮಗಳನ್ನು ಮದುವೆಯಾಗಲು ಬಯಸಿರುವಿರಿ ? ಇದಕ್ಕೆ ನಾನೇನುಹೇಳಲಿ !ಮಾ ನ್ಯರಾದ ನೀವು ನನ್ನದೊಂದು ಪ್ರಾರ್ಥನೆಯನ್ನು ನೆರವೇರಿಸಿ ಕೊಡಿ, ನಿಮ್ಮಿಬ್ಬರಲ್ಲಿ ಯಾರನ್ನು ನನ್ನ ಮಗಳೊಪ್ಪುವಳೂ ಅವರಿಗೆ ಅವಳನ್ನು ಕೊಟ್ಟು ಮದುವೆ ಮಾಡುವೆನು. ಇದುವಿನಾ ನನಗೆ ಬೇರೆ ಶಕ್ತಿಯಿಲ್ಲ ವೆಂದು ಅವರ ಸಂಗಡ ಹೇಳಿದನು. {{gap}}ಅದಕ್ಕವರು ''ಹಾಗೆಯೇ ಆಗಲಿ ! ನಾಳೆ ಬೆಳಗ್ಗೆ ಬರುವವು,ಎಂದು ಹೇಳಿ ಮನದಲ್ಲಿ ಸಂತೋಷವನ್ನೈದುತ್ತ ವಿಷ್ಣು ಲೋಕಕ್ಕೆ ತೆರಳಿದರು. ನಾರದನು ವಿಷ್ಣುಲೋಕದಲ್ಲಿ ಶ್ರೀಕೃಷ್ಣನನ್ನು ಕಂಡು ಅವನಡಿ ದಾವರೆಗೆ ಮಣಿದು,- ಎಲೈ, ನಾಥನೆ! ರಹಸ್ಯವಾದ ಕಾರ್ಯವೊಂದುಂಟು. ಅದನ್ನರಿಕೆ ಮಾಡುವೆನು. ಕೈಗೂಡುವಂತೆ ಮಾಡಿಕೊಡಬೇಕು ಎಂದು ಬೇಡಿದನು. ಅದನ್ನು ಕೇಳಿ ನಾರಾಯಣನು ನಕ್ಕು 'ಎಲೈ ಮುನಿಯೆ ! ನಿನ್ನ ಮನೋಭಿಪ್ರಾಯವನ್ನು ಹೇಳು ?” ಎಂದು ಕೇಳಿದನು. ಆ ಮೇಲೆ ನಾರದನು_''ಎಲೈ ಪರಮಾತ್ಮನೆ ! ನಿನಗೆ ಪರಮ ಭಕ್ತನಾ ಗಿರುವ ಅಂಬರೀಷನೆಂಬ ರಾಯನೊಬ್ಬನಿರುವನಷ್ಟೇ? ಅವನಿಗೆ ಶ್ರೀಮತಿಯೆಂಬ ಮಗಳೊಬ್ಬಳಿರುವಳು. ಅವಳ ಚೆಲುವಿಕೆಯನ್ನು ನೋಡಿ, ನಾನವಳನ್ನು ಮದುವೆಯಾಗಬೇಕೆಂದು ಬಯಸಿದೆನು, ನನ್ನಂತೆಯೇ ನಿನ್ನ ಕೃಷ್ಣನಾದ ಪರ್ವತನೂ ಆ ಬಾಲೆಯನ್ನು ನೋಡಿ ತಾನೂ ಅವಳನ್ನು ಮದುವೆಯಾಗಬೇಕೆಂದು ಆಸ ಪಟ್ಟನು. ಹೀಗೆ ನಾವಿಬ್ಬರೂ ಆಶಿಸು<noinclude></noinclude> j7r84aevlonem223njcyhnc009hxcy2 317114 317108 2026-05-05T04:29:06Z Shreesha Sharma 7840 /* Validated */ 317114 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಅದ್ಭುತ ರಾಮಾಯಣ ಕಥಾಸಾರವು,}}{{Right|೭}} ಯನ್ನು ಮದುವೆಯಾಗಬೇಕಂದುಮನಸ್ಸಿನಲ್ಲಿ ಬಹಳವಾಗಿ ಕುತೂಹಲವುಳ್ಳವ ವನಾದನು.ಹಾಗೆಯೇ ಪವತನಿಗೂ ಶ್ರೀಮತಿಯನ್ನು ಮದುವೆಯಾಗಬೇಕೆಂಬ ಕೋರಿಕೆಯು ಬಗೆಯಲ್ಲಿ ಬೇರೂರಿತು. ನಾರದನು ರಾಜನನ್ನು ರಹಸ್ಯವಾಗಿ ಕರೆದು-ಎಲೈ ರಾಜನೆ ! ನಿನ್ನ ಮಗಳನ್ನು ನನಗೆ ಕೊ ಟ್ಟು ನನ್ನನ್ನು ಗೃಹಸ್ಥನನ್ನಾಗಿ ಮಾಡು ಎಂದು ತನ್ನ ಮನೋಗತವನ್ನು ತಿಳಿಸಿದನು. ಪರ್ವತನೂ ಇದೇಮೇರೆಗೆ ಏಕಾಂತದಲ್ಲಿ-.ಎಲೈ ರಾಜನೆ ! ನಿನ್ನ ಮಗಳನ್ನು ನನಗೆ ಕೊಟ್ಟು ಮದುವೆ ಮಾಡು ಎಂದು ರಾಯನಿಗೆ ಸೂಚಿಸಿದನು. ಬಳಿಕ ರಾಯನು ಮುನಿಗಳೀರ್ವರ ಮನೊಭಿಪ್ರಾಯವನ್ನು ತಿಳಿದು--ಎಲೈ ಪೂಜ್ಯರಿರಾ ! ನೀವಿಬ್ಬರೂ ನನ್ನ ಮಗಳನ್ನು ಮದುವೆಯಾಗಲು ಬಯಸಿರುವಿರಿ ? ಇದಕ್ಕೆ ನಾನೇನುಹೇಳಲಿ !ಮಾ ನ್ಯರಾದ ನೀವು ನನ್ನದೊಂದು ಪ್ರಾರ್ಥನೆಯನ್ನು ನೆರವೇರಿಸಿ ಕೊಡಿ, ನಿಮ್ಮಿಬ್ಬರಲ್ಲಿ ಯಾರನ್ನು ನನ್ನ ಮಗಳೊಪ್ಪುವಳೂ ಅವರಿಗೆ ಅವಳನ್ನು ಕೊಟ್ಟು ಮದುವೆ ಮಾಡುವೆನು. ಇದುವಿನಾ ನನಗೆ ಬೇರೆ ಶಕ್ತಿಯಿಲ್ಲ ವೆಂದು ಅವರ ಸಂಗಡ ಹೇಳಿದನು. {{gap}}ಅದಕ್ಕವರು ''ಹಾಗೆಯೇ ಆಗಲಿ ! ನಾಳೆ ಬೆಳಗ್ಗೆ ಬರುವವು,ಎಂದು ಹೇಳಿ ಮನದಲ್ಲಿ ಸಂತೋಷವನ್ನೈದುತ್ತ ವಿಷ್ಣು ಲೋಕಕ್ಕೆ ತೆರಳಿದರು. ನಾರದನು ವಿಷ್ಣುಲೋಕದಲ್ಲಿ ಶ್ರೀಕೃಷ್ಣನನ್ನು ಕಂಡು ಅವನಡಿ ದಾವರೆಗೆ ಮಣಿದು,- ಎಲೈ, ನಾಥನೆ! ರಹಸ್ಯವಾದ ಕಾರ್ಯವೊಂದುಂಟು. ಅದನ್ನರಿಕೆ ಮಾಡುವೆನು. ಕೈಗೂಡುವಂತೆ ಮಾಡಿಕೊಡಬೇಕು ಎಂದು ಬೇಡಿದನು. ಅದನ್ನು ಕೇಳಿ ನಾರಾಯಣನು ನಕ್ಕು 'ಎಲೈ ಮುನಿಯೆ ! ನಿನ್ನ ಮನೋಭಿಪ್ರಾಯವನ್ನು ಹೇಳು ?” ಎಂದು ಕೇಳಿದನು. ಆ ಮೇಲೆ ನಾರದನು_''ಎಲೈ ಪರಮಾತ್ಮನೆ ! ನಿನಗೆ ಪರಮ ಭಕ್ತನಾ ಗಿರುವ ಅಂಬರೀಷನೆಂಬ ರಾಯನೊಬ್ಬನಿರುವನಷ್ಟೇ? ಅವನಿಗೆ ಶ್ರೀಮತಿಯೆಂಬ ಮಗಳೊಬ್ಬಳಿರುವಳು. ಅವಳ ಚೆಲುವಿಕೆಯನ್ನು ನೋಡಿ, ನಾನವಳನ್ನು ಮದುವೆಯಾಗಬೇಕೆಂದು ಬಯಸಿದೆನು, ನನ್ನಂತೆಯೇ ನಿನ್ನ ಕೃಷ್ಣನಾದ ಪರ್ವತನೂ ಆ ಬಾಲೆಯನ್ನು ನೋಡಿ ತಾನೂ ಅವಳನ್ನು ಮದುವೆಯಾಗಬೇಕೆಂದು ಆಸ ಪಟ್ಟನು. ಹೀಗೆ ನಾವಿಬ್ಬರೂ ಆಶಿಸು<noinclude></noinclude> 2ortivrldqg1isx279wpt4s4vp2sb4z ಪುಟ:ಅದ್ಭುತ ರಾಮಾಯಣ.djvu/೧೬ 104 40953 317118 225015 2026-05-05T05:54:22Z Ashwini Rai K 8475 /* Proofread */ 317118 proofread-page text/x-wiki <noinclude><pagequality level="3" user="Ashwini Rai K" /></noinclude>{{gap}}'''ವಿದ್ಯಾನಂದ''' --------------------------------------------- ವುದನ್ನು ಕಂಡು ರಾಯನು_ಎಲೈ ಮುನಿಗಳಿರಾ! ಕೇಳಿ! ನಿಮ್ಮಿ ಬ್ಬರಲ್ಲಿ ಯಾರು ಲಾಯಕ್ಷರಾಗಿರುವಿರೋ ಅವರನ್ನು ನನ್ನ ಮಗ ಳು ವರಿಸುವಳು, ನಾನವರಿಗೆ ಅವಳನ್ನು ಕೊಟ್ಟು ವಿವಾಹ ಮಾಡುವ ನು? ಎಂದು ಹೇಳಿದ್ದಾನೆ. ನಾನದನ್ನು ಕೇಳಿ ಹಾಗೆಯೇ ಆಗಲಿ ನಾ ಳಬೆಳಗ್ಗೆ ಬರುವೆನು ಎಂದು ಹೇಳಿ ನಿನ್ನ ಹತ್ತಿರಕ್ಕೆ ಬಂದೆನು, ಎ ಲೈ ಜಗನ್ನಾಥನೆ ! ನೀನು ನನಗೆ ಹಿತವನ್ನುಂಟುಮಾಡಬೇಕು. ನೀನು ನನ್ನಲ್ಲಿ ಅಕ್ಕರೆಯುಳ್ಳವನಾದರೆ ಆ ಪರತನ ಮುಖವು ಆ ಬಾಲೆಯ ದೃ ಸ್ಮಿಗೆ ಮಾತ್ರ ಕಪಿಯಂತೆ ಕಾಣುವಹಾಗೂ, ಇನ್ನೆಲ್ಲರಿಗೂ ಯಥಾಸ್ಥಿತ ವಾಗಿ ತೋರುವಂತೆಯ ಅನುಗ್ರಹಿಸಬೇಕೆಂದು ಬೇಡಿಕೊಂಡನು. ಅದಕ್ಕೆ ವಿಷ್ಣುವು ನಕ್ಕು ಹಾಗೆಯೇ ಆಗಲಿ! ನಿನ್ನ ಕೋರಿಕೆಯನ್ನು ನೆರವೇರಿಸಿ ಕೊಡುವೆನು ನೀನು ಹೋಗು ! ಎಂದು ಹೇಳಿ ಅವನನ್ನು ಕಳುಹಿಸಿಕೊಟ್ಟನು. ಆ ಮಾತನ್ನು ಕೇಳಿ ನಾರದನು ಸಂತುಷ್ಟನಾಗಿ ಗೋವಿಂದನಿಗೆ ವಂದನೆಯನ್ನು ಗೈದು, ನನ್ನಿಷ್ಟ್ಯವು ಕೈಗೂಡಿತಂದು ಮ ನದಲ್ಲಿ ನಲಿಯುತ್ತ ಅಯೋಧ್ಯೆಗೆ ತೆರಳಿದನು. ನಾರದನು ಹೊರಟುಹೋದ ಕೂಡಲೆ ಪರತನೂ ಬಂದು, ಮಾಧ ವನಡಿಗೆರಗಿ ರಹಸ್ಯವಾಗಿ ನಾರದನ ವರ್ತಮಾನವನ್ನು ತಿಳಿಸಿ, ತನಗೆ ಶ್ರೀಮತಿಯಲ್ಲಿರುವ ಅಭಿರುಚಿಯನ್ನು ಹೇಳೆ-ಎಳ್ಳೆ ಜಗತ್ಪತಿಯೆ ! ಶ್ರೀಮತಿಯು ನೋಡಿದರೆ ನಾರದನ ಮುಖವು ಕರಡಿಯ ಮುಖದಹಾಗೆ ಇರುವಂತೆ ಮಾಡು, ಮತ್ತಾರದೃಷ್ಟಿಗೂ ಹಾಗೆ ಕಾಣಿಸಲಾಗದು?? ಎಂದು ದೇವರನ್ನು ಕುರಿತು ಪ್ರಾರ್ಥಿಸಿಕೊಂಡನು. ಅದನ್ನು ಕೇಳಿ ನಾರಾಯಣನು -'ಎಲೈ ಮುನಿಯೆ ! ನೀನು, ಹೇಳಿದ ಹಾಗೆಯೇ ಆ ಗಲಿ ಬೇಗಹೋಗು ? ಎಂದು ಹೇಳಿ ಪರತನನ್ನು ಕಳುಹಿಸಿದನು. ತ ರುವಾಯ ಆ ಪರತನು ಶಿಘ್ರವಾಗಿ ಅಯೋಧ್ಯೆಗೆ ಬಂದು ಸೇರಿದನು, ಬಳಿಕ ಮುನಿಗಳಿಬ್ಬರೂ ಒಂದರೆಂಬ ಸಮಾಚಾರವನ್ನು ತಿಳಿದು, ರಾಯನು,-ಅಯೋಧ್ಯಾ ಪಟ್ಟಣವನ್ನು ಬಗೆಬಗೆಯಾದ ತೋರಣಗಳ೦ ದಲೂ, ಬಾವುಟಗಳಿಂದಲೂ ಅಲಂಕರಿಸುವಂತೆ ಅಪ್ಪಣೆ ಮಾಡಿದನು. ಪಟ್ಟಣದ ಬೀದಿಗಳಲ್ಲಿ ಅರಳುಗಳನ್ನೂ ಹೂಗಳನ್ನೂ ಎರಚಿ<noinclude></noinclude> 7nxh98xsff3esl1g0l0a0d4bb0zxlx7 317119 317118 2026-05-05T05:54:56Z Ashwini Rai K 8475 317119 proofread-page text/x-wiki <noinclude><pagequality level="3" user="Ashwini Rai K" /></noinclude>{{gap}}{{gap}}{{gap}}'''ವಿದ್ಯಾನಂದ''' --------------------------------------------- ವುದನ್ನು ಕಂಡು ರಾಯನು_ಎಲೈ ಮುನಿಗಳಿರಾ! ಕೇಳಿ! ನಿಮ್ಮಿ ಬ್ಬರಲ್ಲಿ ಯಾರು ಲಾಯಕ್ಷರಾಗಿರುವಿರೋ ಅವರನ್ನು ನನ್ನ ಮಗ ಳು ವರಿಸುವಳು, ನಾನವರಿಗೆ ಅವಳನ್ನು ಕೊಟ್ಟು ವಿವಾಹ ಮಾಡುವ ನು? ಎಂದು ಹೇಳಿದ್ದಾನೆ. ನಾನದನ್ನು ಕೇಳಿ ಹಾಗೆಯೇ ಆಗಲಿ ನಾ ಳಬೆಳಗ್ಗೆ ಬರುವೆನು ಎಂದು ಹೇಳಿ ನಿನ್ನ ಹತ್ತಿರಕ್ಕೆ ಬಂದೆನು, ಎ ಲೈ ಜಗನ್ನಾಥನೆ ! ನೀನು ನನಗೆ ಹಿತವನ್ನುಂಟುಮಾಡಬೇಕು. ನೀನು ನನ್ನಲ್ಲಿ ಅಕ್ಕರೆಯುಳ್ಳವನಾದರೆ ಆ ಪರತನ ಮುಖವು ಆ ಬಾಲೆಯ ದೃ ಸ್ಮಿಗೆ ಮಾತ್ರ ಕಪಿಯಂತೆ ಕಾಣುವಹಾಗೂ, ಇನ್ನೆಲ್ಲರಿಗೂ ಯಥಾಸ್ಥಿತ ವಾಗಿ ತೋರುವಂತೆಯ ಅನುಗ್ರಹಿಸಬೇಕೆಂದು ಬೇಡಿಕೊಂಡನು. ಅದಕ್ಕೆ ವಿಷ್ಣುವು ನಕ್ಕು ಹಾಗೆಯೇ ಆಗಲಿ! ನಿನ್ನ ಕೋರಿಕೆಯನ್ನು ನೆರವೇರಿಸಿ ಕೊಡುವೆನು ನೀನು ಹೋಗು ! ಎಂದು ಹೇಳಿ ಅವನನ್ನು ಕಳುಹಿಸಿಕೊಟ್ಟನು. ಆ ಮಾತನ್ನು ಕೇಳಿ ನಾರದನು ಸಂತುಷ್ಟನಾಗಿ ಗೋವಿಂದನಿಗೆ ವಂದನೆಯನ್ನು ಗೈದು, ನನ್ನಿಷ್ಟ್ಯವು ಕೈಗೂಡಿತಂದು ಮ ನದಲ್ಲಿ ನಲಿಯುತ್ತ ಅಯೋಧ್ಯೆಗೆ ತೆರಳಿದನು. ನಾರದನು ಹೊರಟುಹೋದ ಕೂಡಲೆ ಪರತನೂ ಬಂದು, ಮಾಧ ವನಡಿಗೆರಗಿ ರಹಸ್ಯವಾಗಿ ನಾರದನ ವರ್ತಮಾನವನ್ನು ತಿಳಿಸಿ, ತನಗೆ ಶ್ರೀಮತಿಯಲ್ಲಿರುವ ಅಭಿರುಚಿಯನ್ನು ಹೇಳೆ-ಎಳ್ಳೆ ಜಗತ್ಪತಿಯೆ ! ಶ್ರೀಮತಿಯು ನೋಡಿದರೆ ನಾರದನ ಮುಖವು ಕರಡಿಯ ಮುಖದಹಾಗೆ ಇರುವಂತೆ ಮಾಡು, ಮತ್ತಾರದೃಷ್ಟಿಗೂ ಹಾಗೆ ಕಾಣಿಸಲಾಗದು?? ಎಂದು ದೇವರನ್ನು ಕುರಿತು ಪ್ರಾರ್ಥಿಸಿಕೊಂಡನು. ಅದನ್ನು ಕೇಳಿ ನಾರಾಯಣನು -'ಎಲೈ ಮುನಿಯೆ ! ನೀನು, ಹೇಳಿದ ಹಾಗೆಯೇ ಆ ಗಲಿ ಬೇಗಹೋಗು ? ಎಂದು ಹೇಳಿ ಪರತನನ್ನು ಕಳುಹಿಸಿದನು. ತ ರುವಾಯ ಆ ಪರತನು ಶಿಘ್ರವಾಗಿ ಅಯೋಧ್ಯೆಗೆ ಬಂದು ಸೇರಿದನು, ಬಳಿಕ ಮುನಿಗಳಿಬ್ಬರೂ ಒಂದರೆಂಬ ಸಮಾಚಾರವನ್ನು ತಿಳಿದು, ರಾಯನು,-ಅಯೋಧ್ಯಾ ಪಟ್ಟಣವನ್ನು ಬಗೆಬಗೆಯಾದ ತೋರಣಗಳ೦ ದಲೂ, ಬಾವುಟಗಳಿಂದಲೂ ಅಲಂಕರಿಸುವಂತೆ ಅಪ್ಪಣೆ ಮಾಡಿದನು. ಪಟ್ಟಣದ ಬೀದಿಗಳಲ್ಲಿ ಅರಳುಗಳನ್ನೂ ಹೂಗಳನ್ನೂ ಎರಚಿ<noinclude></noinclude> q8pp206d5fgb0jyfwmsi9rkiqw8rhkd 317124 317119 2026-05-05T06:11:33Z Shreesha Sharma 7840 /* Validated */ 317124 proofread-page text/x-wiki <noinclude><pagequality level="4" user="Shreesha Sharma" /></noinclude>{{center|'''ವಿದ್ಯಾನಂದ'''}} --------------------------------------------- ವುದನ್ನು ಕಂಡು ರಾಯನು_ಎಲೈ ಮುನಿಗಳಿರಾ! ಕೇಳಿ! ನಿಮ್ಮಿ ಬ್ಬರಲ್ಲಿ ಯಾರು ಲಾವಣ್ಯಯುಕ್ತರಾಗಿರುವಿರೋ ಅವರನ್ನು ನನ್ನ ಮಗ ಳು ವರಿಸುವಳು. ನಾನವರಿಗೆ ಅವಳನ್ನು ಕೊಟ್ಟು ವಿವಾಹ ಮಾಡುವೆ ನು? ಎಂದು ಹೇಳಿದ್ದಾನೆ. ನಾನದನ್ನು ಕೇಳಿ ಹಾಗೆಯೇ ಆಗಲಿ ನಾ ಳೆ ಬೆಳಗ್ಗೆ ಬರುವೆನು ಎಂದು ಹೇಳಿ ನಿನ್ನ ಹತ್ತಿರಕ್ಕೆ ಬಂದೆನು. ಎ ಲೈ ಜಗನ್ನಾಥನೆ ! ನೀನು ನನಗೆ ಹಿತವನ್ನುಂಟುಮಾಡಬೇಕು. ನೀನು ನನ್ನಲ್ಲಿ ಅಕ್ಕರೆಯುಳ್ಳವನಾದರೆ ಆ ಪರ್ವತನ ಮುಖವು ಆ ಬಾಲೆಯ ದೃ ಷ್ಟಿಗೆ ಮಾತ್ರ ಕಪಿಯಂತೆ ಕಾಣುವಹಾಗೂ, ಇನ್ನೆಲ್ಲರಿಗೂ ಯಥಾಸ್ಥಿತ ವಾಗಿ ತೋರುವಂತೆಯೂ ಅನುಗ್ರಹಿಸಬೇಕೆಂದು ಬೇಡಿಕೊಂಡನು. ಅದಕ್ಕೆ ವಿಷ್ಣುವು ನಕ್ಕು ಹಾಗೆಯೇ ಆಗಲಿ! ನಿನ್ನ ಕೋರಿಕೆಯನ್ನು ನೆರವೇರಿಸಿ ಕೊಡುವೆನು ನೀನು ಹೋಗು ! ಎಂದು ಹೇಳಿ ಅವನನ್ನು ಕಳುಹಿಸಿಕೊಟ್ಟನು. ಆ ಮಾತನ್ನು ಕೇಳಿ ನಾರದನು ಸಂತುಷ್ಟನಾಗಿ ಗೋವಿಂದನಿಗೆ ವಂದನೆಯನ್ನು ಗೈದು, ನನ್ನಿಷ್ಟವು ಕೈಗೂಡಿತೆಂದು ಮ ನದಲ್ಲಿ ನಲಿಯುತ್ತ ಅಯೋಧ್ಯೆಗೆ ತೆರಳಿದನು. {{gap}}ನಾರದನು ಹೊರಟುಹೋದ ಕೂಡಲೆ ಪರ್ವತನೂ ಬಂದು, ಮಾಧ ವನಡಿಗೆರಗಿ ರಹಸ್ಯವಾಗಿ ನಾರದನ ವರ್ತಮಾನವನ್ನು ತಿಳಿಸಿ, ತನಗೆ ಶ್ರೀಮತಿಯಲ್ಲಿರುವ ಅಭಿರುಚಿಯನ್ನು ಹೇಳಿ-ಎಲೈ ಜಗತ್ಪತಿಯೆ ! ಶ್ರೀಮತಿಯು ನೋಡಿದರೆ ನಾರದನ ಮುಖವು ಕರಡಿಯ ಮುಖದಹಾಗೆ ಇರುವಂತೆ ಮಾಡು, ಮತ್ತಾರದೃಷ್ಟಿಗೂ ಹಾಗೆ ಕಾಣಿಸಲಾಗದು? ಎಂದು ದೇವರನ್ನು ಕುರಿತು ಪ್ರಾರ್ಥಿಸಿಕೊಂಡನು. ಅದನ್ನು ಕೇಳಿ ನಾರಾಯಣನು -'ಎಲೈ ಮುನಿಯೆ ! ನೀನು, ಹೇಳಿದ ಹಾಗೆಯೇ ಆ ಗಲಿ ಬೇಗಹೋಗು ? ಎಂದು ಹೇಳಿ ಪರ್ವತನನ್ನು ಕಳುಹಿಸಿದನು. ತ ರುವಾಯ ಆ ಪರ್ವತನು ಶೀಘ್ರವಾಗಿ ಅಯೋಧ್ಯೆಗೆ ಬಂದು ಸೇರಿದನು. ಬಳಿಕ ಮುನಿಗಳಿಬ್ಬರೂ ಬಂದರೆಂಬ ಸಮಾಚಾರವನ್ನು ತಿಳಿದು, ರಾಯನು,-ಅಯೋಧ್ಯಾ ಪಟ್ಟಣವನ್ನು ಬಗೆಬಗೆಯಾದ ತೋರಣಗಳಿಂ ದಲೂ, ಬಾವುಟಗಳಿಂದಲೂ ಅಲಂಕರಿಸುವಂತೆ ಅಪ್ಪಣೆ ಮಾಡಿದನು. ಪಟ್ಟಣದ ಬೀದಿಗಳಲ್ಲಿ ಅರಳುಗಳನ್ನೂ ಹೂಗಳನ್ನೂ ಎರಚಿ<noinclude></noinclude> fsr12g2myzjn4pghutj6p5zsuiv9l8d ಪುಟ:ಅದ್ಭುತ ರಾಮಾಯಣ.djvu/೧೭ 104 40954 317128 103172 2026-05-05T06:17:08Z Shreesha Sharma 7840 /* Proofread */ 317128 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಅದ್ಭುತ ರಾಮಾಯಣ}}{{Right|೯}} ಚಿತ್ರವಿಚಿತ್ರವಾಗಿ ಅಲಂಕರಿಸಿದರು, ಸ್ತ್ರೀಯರು ತಮ್ಮ ತಮ್ಮ ಮನೆಯ ಬಾಗಿಲುಗಳಲ್ಲಿ ರಂಗವಲ್ಲಿಗಳಿಂದ ಹಸೆಗಳನ್ನು ಬರೆದು ರಮ್ಯವಾಗಿರುವಂತೆ ಅಲಂಕರಿಸಿದರು. ದಿವ್ಯವಾದ ಧೂಪಗಳು ಕೇರಿಕೇರಿಗಳಲ್ಲಿಯೂ ಘಮಘಮಿಸುತ್ತಿದ್ದುವು, ರಾಜಸಭೆಯನ್ನು ಚಿತ್ರವಿಚಿತ್ರ ವಾದ ನಿರ್ಮಾಣಕೌಶಲ್ಯದಿಂದ ಮನೋಹರವಾಗಿ ಅಲಂಕರಿಸಿದರು. ಬಹು ಬೆಲೆಯುಳ್ಳ ರತ್ನಗಂಬಳಿಗಳಿಂದ ಸಭಾಸ್ಥಾನದ ನೆಲವನ್ನೆಲ್ಲಾ ಮುಚ್ಚಿದರು. ಅವುಗಳಮೇಲೆ ಭದ್ರಾಸನಗಳು ಕಂಗೊಳಿಸುತ್ತಿದ್ದವು. ಆ ಸಭೆಗೆ ನಾನಾ ದೇಶಗಳಿಂದಲೂ ರಾಜಕುಮಾರರು ಬಂದು ಭದ್ರಪೀಠಗಳಲ್ಲಿ ಮೆರೆಯುತ್ತಿದ್ದರು. ಶ್ರೀಮತಿಎಂಬ ರಾಜಕುಮಾರಿಯು ಸರ್ವಾಭರಣ ಭೂಷಿತಳಾಗಿ ಸಾಕ್ಷಾತ್ ಲಕ್ಷ್ಮಿ ಯಂತೆ ಪ್ರಕಾಶಿಸುತ್ತ ಬಂದು ಆ ಸಭಾ ಮಂದಿರವನ್ನು ಪ್ರವೇಶಿಸಿದಳು. ಆ ಬಾಲೆಯ ಬಡನಡು ಹಿಡಿಯಲ್ಲಿ ಹಿಡಿಯುವಷ್ಟಿದ್ದುದರಿಂದ ಬಳಕುತ್ತಿತ್ತು.ಅವಳ ಪಕ್ಕದಲ್ಲಿ ಗೆಳತಿಯರೆಲ್ಲರೂ ಬಂದು ಸೇರಿದರು. ರಾಜಸಭೆಯು ಸೊಗಸಾದ ಮೇಲುಕಟ್ಟುಗ ಳಿಂದಲೂ ರತ್ನಗಳಿಂದಲೂ ಅಲಂಕೃತವಾಗಿ ಪರಿಮಳವನ್ನು ದಿಕ್ಕುದಿಕ್ಕಿ ನಲ್ಲಿಯೂ ಎರಚುತ್ತಿತ್ತು. ಆ ಸಮಯಕ್ಕೆ ಸರಿಯಾಗಿ ದೇವಮುನಿಯಾದ ನಾರದನೂ, ಪೂಜ್ಯನಾದ ಪರ್ವತನೂ ಬಂದು ನೆರೆದರು. {{center|ಮೂರನೆಯ ಅಧ್ಯಾಯವು ಮುಗಿದುದು.}} {{center|'''ನಾಲ್ಕನೆಯ ಅಧ್ಯಾಯವು'''.}} ತರುವಾಯ ರಾಜನು ಪರ್ವತನಾರದರು ಬಂದುದನ್ನು ನೋಡಿ ಸಂಭ್ರಾಂತನಾಗಿ ಪೀಠವನ್ನು ತೋರಿಸಿ ಅವರಿಗೆ ಸತ್ಕಾರಮಾಡಿದನು. ನಿತ್ಯಜ್ಞಾನಿಗಳೊಳಗೆ ಶ್ರೇಷ್ಠರಾದ ಆ ಮುನಿಗಳಿಬ್ಬರೂ ಕನ್ಯಾರ್ಥಿಗಳಾಗಿ ಸಿಂಹಪೀಠವನ್ನಲಂಕರಿಸಿದರು. ಆಗ ಶ್ರೀಮತಿಯು ಬಂದು, ಆ ಮುನಿಗಳಡಿದಾವರೆಗೆರಗಿ ನಿಂತಿದ್ದಳು, ಅಂಬರೀಷನು-“ ಎಲೌ ಮಗಳೇ ! ಇವರಿಬ್ಬರಲ್ಲಿ ನೀನಾರನ್ನು ಮೆಚ್ಚುವದೋ ಅವನಿಗೆ ಯಥಾವಿಧಿಯಾಗಿ ಪುಷ್ಪಮಾಲೆಯನು ಹಾಕು ” ಎಂದು ತನ್ನ ಮಗಳಿಗೆ ಹೇಳಿದನು.<noinclude></noinclude> cu8xhlq75iq1k85q0nhxuo3wfivfgp5 317144 317128 2026-05-05T07:34:22Z Shreelatha.Halemane 7642 /* Validated */ 317144 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಅದ್ಭುತ ರಾಮಾಯಣ}}{{Right|೯}} ಚಿತ್ರವಿಚಿತ್ರವಾಗಿ ಅಲಂಕರಿಸಿದರು, ಸ್ತ್ರೀಯರು ತಮ್ಮ ತಮ್ಮ ಮನೆಯ ಬಾಗಿಲುಗಳಲ್ಲಿ ರಂಗವಲ್ಲಿಗಳಿಂದ ಹಸೆಗಳನ್ನು ಬರೆದು ರಮ್ಯವಾಗಿರುವಂತೆ ಅಲಂಕರಿಸಿದರು. ದಿವ್ಯವಾದ ಧೂಪಗಳು ಕೇರಿಕೇರಿಗಳಲ್ಲಿಯೂ ಘಮಘಮಿಸುತ್ತಿದ್ದುವು, ರಾಜಸಭೆಯನ್ನು ಚಿತ್ರವಿಚಿತ್ರ ವಾದ ನಿರ್ಮಾಣಕೌಶಲ್ಯದಿಂದ ಮನೋಹರವಾಗಿ ಅಲಂಕರಿಸಿದರು. ಬಹು ಬೆಲೆಯುಳ್ಳ ರತ್ನಗಂಬಳಿಗಳಿಂದ ಸಭಾಸ್ಥಾನದ ನೆಲವನ್ನೆಲ್ಲಾ ಮುಚ್ಚಿದರು. ಅವುಗಳಮೇಲೆ ಭದ್ರಾಸನಗಳು ಕಂಗೊಳಿಸುತ್ತಿದ್ದವು. ಆ ಸಭೆಗೆ ನಾನಾ ದೇಶಗಳಿಂದಲೂ ರಾಜಕುಮಾರರು ಬಂದು ಭದ್ರಪೀಠಗಳಲ್ಲಿ ಮೆರೆಯುತ್ತಿದ್ದರು. ಶ್ರೀಮತಿಎಂಬ ರಾಜಕುಮಾರಿಯು ಸರ್ವಾಭರಣ ಭೂಷಿತಳಾಗಿ ಸಾಕ್ಷಾತ್ ಲಕ್ಷ್ಮಿ ಯಂತೆ ಪ್ರಕಾಶಿಸುತ್ತ ಬಂದು ಆ ಸಭಾ ಮಂದಿರವನ್ನು ಪ್ರವೇಶಿಸಿದಳು. ಆ ಬಾಲೆಯ ಬಡನಡು ಹಿಡಿಯಲ್ಲಿ ಹಿಡಿಯುವಷ್ಟಿದ್ದುದರಿಂದ ಬಳಕುತ್ತಿತ್ತು.ಅವಳ ಪಕ್ಕದಲ್ಲಿ ಗೆಳತಿಯರೆಲ್ಲರೂ ಬಂದು ಸೇರಿದರು. ರಾಜಸಭೆಯು ಸೊಗಸಾದ ಮೇಲುಕಟ್ಟುಗ ಳಿಂದಲೂ ರತ್ನಗಳಿಂದಲೂ ಅಲಂಕೃತವಾಗಿ ಪರಿಮಳವನ್ನು ದಿಕ್ಕುದಿಕ್ಕಿ ನಲ್ಲಿಯೂ ಎರಚುತ್ತಿತ್ತು. ಆ ಸಮಯಕ್ಕೆ ಸರಿಯಾಗಿ ದೇವಮುನಿಯಾದ ನಾರದನೂ, ಪೂಜ್ಯನಾದ ಪರ್ವತನೂ ಬಂದು ನೆರೆದರು. {{center|ಮೂರನೆಯ ಅಧ್ಯಾಯವು ಮುಗಿದುದು.}} {{center|'''ನಾಲ್ಕನೆಯ ಅಧ್ಯಾಯವು'''.}} {{gap}}ತರುವಾಯ ರಾಜನು ಪರ್ವತನಾರದರು ಬಂದುದನ್ನು ನೋಡಿ ಸಂಭ್ರಾಂತನಾಗಿ ಪೀಠವನ್ನು ತೋರಿಸಿ ಅವರಿಗೆ ಸತ್ಕಾರಮಾಡಿದನು. ನಿತ್ಯಜ್ಞಾನಿಗಳೊಳಗೆ ಶ್ರೇಷ್ಠರಾದ ಆ ಮುನಿಗಳಿಬ್ಬರೂ ಕನ್ಯಾರ್ಥಿಗಳಾಗಿ ಸಿಂಹಪೀಠವನ್ನಲಂಕರಿಸಿದರು. ಆಗ ಶ್ರೀಮತಿಯು ಬಂದು, ಆ ಮುನಿಗಳಡಿದಾವರೆಗೆರಗಿ ನಿಂತಿದ್ದಳು, ಅಂಬರೀಷನು-“ ಎಲೌ ಮಗಳೇ ! ಇವರಿಬ್ಬರಲ್ಲಿ ನೀನಾರನ್ನು ಮೆಚ್ಚುವದೋ ಅವನಿಗೆ ಯಥಾವಿಧಿಯಾಗಿ ಪುಷ್ಪಮಾಲೆಯನು ಹಾಕು ” ಎಂದು ತನ್ನ ಮಗಳಿಗೆ ಹೇಳಿದನು.<noinclude></noinclude> 55xxcrj54nf5ki7xf4aw998rlerqisb ಪುಟ:ಅದ್ಭುತ ರಾಮಾಯಣ.djvu/೧೮ 104 40955 317133 103173 2026-05-05T06:24:44Z Shreesha Sharma 7840 /* Proofread */ 317133 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೧೦}}{{center|ವಿದ್ಯಾನಂದ}} ರಾಯನಾಡಿದ ನುಡಿಯನ್ನು ಕೇಳಿ ಅ ಕನ್ನೆಯು ಮಾಲೆಯೊಂದನ್ನು ಬೇಗ ತರಿಸಿ ತನ್ನ ಕೈಯಲ್ಲಿ ಹಿಡಿದುಕೊಂಡು ಸುಮ್ಮನೆ ನಿಂತಿದ್ದಳು. ಅದನ್ನು ನೋಡಿ ರಾಜನು ಎಲೌ ವತ್ಸೆ ! ಏಕೆ ಸುಮ್ಮನಿರುವೆ. ಇವರಲ್ಲಾರಾದರೊಬ್ಬರಿಗೆ ಮಾಲೆಯನ್ನು ಹಾಕು. ಸಾವಕಾಶವೇಕೆ ? ಎಂದು ನುಡಿದನು. ಆ ಮಾತನ್ನು ಕೇಳಿ ಆ ಬಾಲಕಿಯು ಗಡಗಡನೆ ನಡುಗುತ್ತ ತನ್ನ ತಂದೆಯೊಡನೆ ಎಲೈ ತಂದೆಯೆ ! ಇವರಲ್ಲೊಬ್ಬನಮುಖವು ಕಪಿಯ ಮುಖದ ಹಾಗೆ ಇದೆ, ಮತ್ತೊಬ್ಬನದು ಕರಡಿಯ ಮುಖದಹಾಗಿರುವುದು ಇವರಿಬ್ಬರೂ ಪೂಜ್ಯರಾದ ಪರ್ವತನಾರದರಂತೆ ಕಾಣುವುದಿಲ್ಲ, ಇವರಿಬ್ಬರ ನಡುವೆ ಹದಿನಾರುವರುಷದ ಹುಡುಗನೊಬ್ಬನು ಕಂಗೊಳಿಸುತ್ತಿರುವನು. ಅವನು ಸರ್ವಾಭರಣಭೂಷಿತನಾಗಿಯೂ, ಆಗಸೆಯ ಹೂವಿನಂತ ಶರೀರಕಾಂತಿಯುಳ್ಳವನಾಗಿಯೂ ಇರುವನು, ಅವನ ಬಾಹುಗಳು ಮೊಣಕಾಲವರೆಗೂ ಚಾಚಿಕೊಂಡಿರುವುವು. ಕಣ್ಣುಗಳು ಕಿವಿಯವರೆಗೂ ಪ್ರಸರಿಸಿರುವುವು., ಎದೆಯು ವಿಶಾಲವಾಗಿರುವುದು, ಕೈಗಳು ಕಮಲಗಳಂತೆಯೂ, ಮುಖವು ತಾವರೆಯಂತೆಯೂ, ನೇತ್ರಗಳು ಇಂದೀವರಗಳಂತೆಯೂ ಪ್ರಕಾಶಿಸುವುವು, ಪಾದಗಳು ಪದ್ಮಗಳನ್ನಲೆಗಳಯುತ್ತಿರುವುವು, ನಾಭಿಯಲ್ಲಿ ಪದ್ಮವಿರುವುದು, ಲಕ್ಷ್ಮಿಯು ಎಡೆಬಿಡದೆ ಆ ಪುರುಷನನ್ನು ವ್ಯಾಪಿಸಿಕೊಂಡಿರುವಳು, ಹಲ್ಲುಗಳು ಸಾಲುಮಲ್ಲಿಗೆಯ ಮೊಗ್ಗುಗಳನ್ನು ಹಳಿಯುತ್ತಿರುವವು. ಆ ಪುರುಷನು ನನ್ನನ್ನು ನೋಡಿ ತನ್ನ ಬಲಗೈಯನ್ನು ಮುಂದಕ್ಕೆ ಚಾಚಿಕೊಂಡು ಪ್ರಚ್ಛನ್ನನಾಗಿರುವನು, ಎಂದು ಹೇಳಿದಳು. ಅದನ್ನು ಕೇಳಿ ನಾರದನು ಸಂಶಯಾವಿಷ್ಟನಾಗಿ ಎಲೌ ಬಾಲೆ ! ಆ ಪುರುಷನಿಗೆ ಬಾಹುಗಳೆಷ್ಟಿರುವುವು ? ನಿಜವಾಗಿಯೂ ಹೇಳು, ಎಂದು ಪ್ರಶ್ನೆ ಮಾಡಿದನು. ಆ ಕನ್ನಿಕೆಯು ವಿಸ್ಮಿತಳಾಗಿ ಎರಡು ಬಾಹುಗಳು ಮಾತ್ರ ಕಾಣುವುವು ಎಂದುತ್ತರಕೊಟ್ಟಳು, ಆಮೇಲೆ ಪರ್ವತನು ಅವನ ವಕ್ಷಸ್ಥಲದಲ್ಲಿರುವದೇನು, ಕೈಯಲ್ಲಿ ಏನನ್ನು ಹಿಡಿದಿರುವನು ? ಹೇಳು ಎಂದು ಕನ್ನಿಕೆಯನ್ನು ಕೇಳಿದನು. ಆ ಹುಡುಗಿಯು ಮುನಿ ಯೊಡನೆ ಎಲೈ ಪೂಜ್ಯನೆ! ಆ ಪುರುಷನೆದೆಯಲ್ಲಿ ಮಿಂಚಿನಂತ ಮಿನುಗುವ<noinclude></noinclude> 5avcmj422ecosnc20vxq4ykzn2qx0wd 317145 317133 2026-05-05T07:34:36Z Shreelatha.Halemane 7642 /* Validated */ 317145 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೧೦}}{{center|ವಿದ್ಯಾನಂದ}} ರಾಯನಾಡಿದ ನುಡಿಯನ್ನು ಕೇಳಿ ಅ ಕನ್ನೆಯು ಮಾಲೆಯೊಂದನ್ನು ಬೇಗ ತರಿಸಿ ತನ್ನ ಕೈಯಲ್ಲಿ ಹಿಡಿದುಕೊಂಡು ಸುಮ್ಮನೆ ನಿಂತಿದ್ದಳು. ಅದನ್ನು ನೋಡಿ ರಾಜನು ಎಲೌ ವತ್ಸೆ ! ಏಕೆ ಸುಮ್ಮನಿರುವೆ. ಇವರಲ್ಲಾರಾದರೊಬ್ಬರಿಗೆ ಮಾಲೆಯನ್ನು ಹಾಕು. ಸಾವಕಾಶವೇಕೆ ? ಎಂದು ನುಡಿದನು. ಆ ಮಾತನ್ನು ಕೇಳಿ ಆ ಬಾಲಕಿಯು ಗಡಗಡನೆ ನಡುಗುತ್ತ ತನ್ನ ತಂದೆಯೊಡನೆ ಎಲೈ ತಂದೆಯೆ ! ಇವರಲ್ಲೊಬ್ಬನಮುಖವು ಕಪಿಯ ಮುಖದ ಹಾಗೆ ಇದೆ, ಮತ್ತೊಬ್ಬನದು ಕರಡಿಯ ಮುಖದಹಾಗಿರುವುದು ಇವರಿಬ್ಬರೂ ಪೂಜ್ಯರಾದ ಪರ್ವತನಾರದರಂತೆ ಕಾಣುವುದಿಲ್ಲ, ಇವರಿಬ್ಬರ ನಡುವೆ ಹದಿನಾರುವರುಷದ ಹುಡುಗನೊಬ್ಬನು ಕಂಗೊಳಿಸುತ್ತಿರುವನು. ಅವನು ಸರ್ವಾಭರಣಭೂಷಿತನಾಗಿಯೂ, ಆಗಸೆಯ ಹೂವಿನಂತ ಶರೀರಕಾಂತಿಯುಳ್ಳವನಾಗಿಯೂ ಇರುವನು, ಅವನ ಬಾಹುಗಳು ಮೊಣಕಾಲವರೆಗೂ ಚಾಚಿಕೊಂಡಿರುವುವು. ಕಣ್ಣುಗಳು ಕಿವಿಯವರೆಗೂ ಪ್ರಸರಿಸಿರುವುವು., ಎದೆಯು ವಿಶಾಲವಾಗಿರುವುದು, ಕೈಗಳು ಕಮಲಗಳಂತೆಯೂ, ಮುಖವು ತಾವರೆಯಂತೆಯೂ, ನೇತ್ರಗಳು ಇಂದೀವರಗಳಂತೆಯೂ ಪ್ರಕಾಶಿಸುವುವು, ಪಾದಗಳು ಪದ್ಮಗಳನ್ನಲೆಗಳಯುತ್ತಿರುವುವು, ನಾಭಿಯಲ್ಲಿ ಪದ್ಮವಿರುವುದು, ಲಕ್ಷ್ಮಿಯು ಎಡೆಬಿಡದೆ ಆ ಪುರುಷನನ್ನು ವ್ಯಾಪಿಸಿಕೊಂಡಿರುವಳು, ಹಲ್ಲುಗಳು ಸಾಲುಮಲ್ಲಿಗೆಯ ಮೊಗ್ಗುಗಳನ್ನು ಹಳಿಯುತ್ತಿರುವವು. ಆ ಪುರುಷನು ನನ್ನನ್ನು ನೋಡಿ ತನ್ನ ಬಲಗೈಯನ್ನು ಮುಂದಕ್ಕೆ ಚಾಚಿಕೊಂಡು ಪ್ರಚ್ಛನ್ನನಾಗಿರುವನು, ಎಂದು ಹೇಳಿದಳು. {{gap}}ಅದನ್ನು ಕೇಳಿ ನಾರದನು ಸಂಶಯಾವಿಷ್ಟನಾಗಿ ಎಲೌ ಬಾಲೆ ! ಆ ಪುರುಷನಿಗೆ ಬಾಹುಗಳೆಷ್ಟಿರುವುವು ? ನಿಜವಾಗಿಯೂ ಹೇಳು, ಎಂದು ಪ್ರಶ್ನೆ ಮಾಡಿದನು. ಆ ಕನ್ನಿಕೆಯು ವಿಸ್ಮಿತಳಾಗಿ ಎರಡು ಬಾಹುಗಳು ಮಾತ್ರ ಕಾಣುವುವು ಎಂದುತ್ತರಕೊಟ್ಟಳು, ಆಮೇಲೆ ಪರ್ವತನು ಅವನ ವಕ್ಷಸ್ಥಲದಲ್ಲಿರುವದೇನು, ಕೈಯಲ್ಲಿ ಏನನ್ನು ಹಿಡಿದಿರುವನು ? ಹೇಳು ಎಂದು ಕನ್ನಿಕೆಯನ್ನು ಕೇಳಿದನು. ಆ ಹುಡುಗಿಯು ಮುನಿ ಯೊಡನೆ ಎಲೈ ಪೂಜ್ಯನೆ! ಆ ಪುರುಷನೆದೆಯಲ್ಲಿ ಮಿಂಚಿನಂತ ಮಿನುಗುವ<noinclude></noinclude> 0tn8z0kuphgk1yziy6gveeimr5jxlnt ಪುಟ:ಅದ್ಭುತ ರಾಮಾಯಣ.djvu/೧೯ 104 40956 317136 103174 2026-05-05T06:37:58Z Shreesha Sharma 7840 /* Proofread */ 317136 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಅದ್ಭುತ ರಾಮಾಯಣ}}{{Right|೧೧}} ಮಾಲೆಯೊಂದು ಕಣ್ಣಿಗೆ ಕಾಣುತ್ತದೆ, ಕೈಯ್ಯಲ್ಲಿ ಗದೆಯನ್ನು ಹಿಡಿದಿರುವನು; ಎಂದು ಬಿನ್ನೈಸಿದಳು, ಅನಂತರ ಈ ಮಾತನ್ನು ಕೇಳಿ ಆ ಮುನಿಗಳು ಅಂತರಂಗದಲ್ಲಿಯೇ ಚಿಂತಿಸತೊಡಗಿದರು. ನಾರದನು ಇದು ಯಾರದೋ ಮಾಯೆಯಾಗಿರಬೇಕು, ವಿಷ್ಣುವೇ ಮಾಯಾವಿಯಾಗಿ ಕಳ್ಳತನದಿಂದ ಬಂದಿರಬೇಕು, ಹಾಗಲ್ಲದಿದ್ದರೆ ನನ್ನ ಮುಖವು ಕರಡಿಯ ಮುಖದ ಹಾಗೆ ಕಾಣಲು ಕಾರಣವೇನು ?"ಎಂದು ಮನಸ್ಸಿನಲ್ಲಿಯೇ ಚಿಂತಿಸುತ್ತಿದ್ದನು. ನಾರದನ ಮುಖವು ಹಾಗೆ ಕಾಣುವುದೇನೋ ಯುಕ್ತ. ನನ್ನ ಮುಖವು ವಾನರ ಮುಖದ ಹಾಗೆ ಹೇಗೆ ಆಯಿತಂದು ಪರ್ವತನು ಬಹಳವಾಗಿ ಯೋಚಿಸುತ್ತಿದ್ದನು. ತರುವಾಯ ರಾಜನು ಆ ಮುನಿವರರಿಗೆ ಮಣಿದು, ಎಲೈ ಪೂಜ್ಯರಿರಾ! ನೀವು ಕನ್ಯಾರ್ಥಿಗಳಾಗಿ ಬಂದಿದ್ದರೂ ಬುದ್ದಿ ವೈಕಲ್ಯದಿಂದ ಏಕೆ ಸುಮ್ಮನೆ ಕುಳಿತಿರುವಿರಿ ಎಂದು ಕೇಳಿಕೊಂಡನು. ಅದಕ್ಕವರು- “ನೀನೇ ನಮಗೆ ವೈಕಲ್ಯವ ನ್ನುಂಟುಮಾಡಿರಬೇಕೇ ವಿನಾ ನಾವು ಬೇರೆ ಎಂದಿಗೂ ವೈಕಲ್ಯವನ್ನುಂಟುಮಾಡಿರಬೇಕೇ ವಿನಾ ನಾವು ಬೇರೀಂದಿಗೂವೈಕಲ್ಯನೈದಲಾರೆವು. ನಮ್ಮಿಬ್ಬರಲ್ಲಿ ಯಾರನ್ನಾದರೂ ಈ ಬಾಲೆಯು ವರಿಸಬಹುದು” ಎಂದು ರಾಯನ ಸಂಗಡ ಹೇಳಿದರು. ಆಮೇಲಾಕನ್ನೆಯು ದೈವವನ್ನು ನೆನೆದು, ತಂದೆಯ ಅನುಮತಿಯನ್ನು ಮೀರಲಾಗದೆಂದೂ, ಮುನಿಗಳು ಶಾಪಕೊಟ್ಟಾರೆಂದೂ ಹೆದರಿ ಆ ಮಾಲೆಯನ್ನು ಕೈಗೆ ತೆಗೆದುಕೊಂಡು, ಮುನಿಗಳಿಗೆ ಹಾಕಲು ಮುಂದಕ್ಕೆಡಿಯನ್ನಿಟ್ಟು ಆ ಮುನಿಗಳ ಮಧ್ಯೆ ಮೊದಲಿನಂತೆ ಇದ್ದ ಪುರುಷನನನ್ನು ನೋಡಿ ಅವನ ಕಂಠಕ್ಕೇ ಮಾಲೆಯನ್ನು ಹಾಕಿದಳು. ತರುವಾಯ ಆ ಬಾಲೆಯು ಅಲ್ಲಿರುವ ಜನಗಳ ದೃಷ್ಟಿಗೆ ಗೋಚರಳಾಗಲೇ ಇಲ್ಲ. ಅಲ್ಲಿದ್ದವರೆಲ್ಲರೂ “ಇದೇನಾಶ್ಚರ್ಯ” ಎಂದು ಕಲಕಲ ಶಬ್ದ ಮಾಡತೊಡಗಿ ದರು. ಆ ಬಾಲೆಯನ್ನು ಕರೆದುಕೊಂಡು ಹರಿಯು ತನ್ನ ಸ್ಥಾನಕ್ಕೆ ತೆರಳಿದನು. ಆ ರಾಜಪುತ್ರಿಯು ಪರಮಾತ್ಮನನ್ನೇ ಪತಿಯಾಗಿ ಪಡೆಯಬೇಕೆಂದು ತಪಸ್ಸು ಮಾಡಿದ್ದಳಾದುದರಿಂದ ಅವಳು ಹರಿಯನ್ನೇ ಮದುವೆಯಾದಳು. ಆಮೇಲೆ ಆ ಮುನಿಗಳಿಬ್ಬರೂ ಖಿನ್ನರಾಗಿ ವಾಸುದೇವನನ್ನು ನೋಡಲು ಹರಿಲೋಕಕ್ಕೆ ಹೊರಟು ಹೋದರು. ಇವರು ಬಂದ<noinclude></noinclude> j6do7g7zaho8lwbk5vd5n7qq357b24a 317146 317136 2026-05-05T07:34:50Z Shreelatha.Halemane 7642 /* Validated */ 317146 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಅದ್ಭುತ ರಾಮಾಯಣ}}{{Right|೧೧}} ಮಾಲೆಯೊಂದು ಕಣ್ಣಿಗೆ ಕಾಣುತ್ತದೆ, ಕೈಯ್ಯಲ್ಲಿ ಗದೆಯನ್ನು ಹಿಡಿದಿರುವನು; ಎಂದು ಬಿನ್ನೈಸಿದಳು, ಅನಂತರ ಈ ಮಾತನ್ನು ಕೇಳಿ ಆ ಮುನಿಗಳು ಅಂತರಂಗದಲ್ಲಿಯೇ ಚಿಂತಿಸತೊಡಗಿದರು. ನಾರದನು ಇದು ಯಾರದೋ ಮಾಯೆಯಾಗಿರಬೇಕು, ವಿಷ್ಣುವೇ ಮಾಯಾವಿಯಾಗಿ ಕಳ್ಳತನದಿಂದ ಬಂದಿರಬೇಕು, ಹಾಗಲ್ಲದಿದ್ದರೆ ನನ್ನ ಮುಖವು ಕರಡಿಯ ಮುಖದ ಹಾಗೆ ಕಾಣಲು ಕಾರಣವೇನು ?"ಎಂದು ಮನಸ್ಸಿನಲ್ಲಿಯೇ ಚಿಂತಿಸುತ್ತಿದ್ದನು. ನಾರದನ ಮುಖವು ಹಾಗೆ ಕಾಣುವುದೇನೋ ಯುಕ್ತ. ನನ್ನ ಮುಖವು ವಾನರ ಮುಖದ ಹಾಗೆ ಹೇಗೆ ಆಯಿತಂದು ಪರ್ವತನು ಬಹಳವಾಗಿ ಯೋಚಿಸುತ್ತಿದ್ದನು. ತರುವಾಯ ರಾಜನು ಆ ಮುನಿವರರಿಗೆ ಮಣಿದು, ಎಲೈ ಪೂಜ್ಯರಿರಾ! ನೀವು ಕನ್ಯಾರ್ಥಿಗಳಾಗಿ ಬಂದಿದ್ದರೂ ಬುದ್ದಿ ವೈಕಲ್ಯದಿಂದ ಏಕೆ ಸುಮ್ಮನೆ ಕುಳಿತಿರುವಿರಿ ಎಂದು ಕೇಳಿಕೊಂಡನು. ಅದಕ್ಕವರು- “ನೀನೇ ನಮಗೆ ವೈಕಲ್ಯವ ನ್ನುಂಟುಮಾಡಿರಬೇಕೇ ವಿನಾ ನಾವು ಬೇರೆ ಎಂದಿಗೂ ವೈಕಲ್ಯವನ್ನುಂಟುಮಾಡಿರಬೇಕೇ ವಿನಾ ನಾವು ಬೇರೀಂದಿಗೂವೈಕಲ್ಯನೈದಲಾರೆವು. ನಮ್ಮಿಬ್ಬರಲ್ಲಿ ಯಾರನ್ನಾದರೂ ಈ ಬಾಲೆಯು ವರಿಸಬಹುದು” ಎಂದು ರಾಯನ ಸಂಗಡ ಹೇಳಿದರು. {{gap}}ಆಮೇಲಾಕನ್ನೆಯು ದೈವವನ್ನು ನೆನೆದು, ತಂದೆಯ ಅನುಮತಿಯನ್ನು ಮೀರಲಾಗದೆಂದೂ, ಮುನಿಗಳು ಶಾಪಕೊಟ್ಟಾರೆಂದೂ ಹೆದರಿ ಆ ಮಾಲೆಯನ್ನು ಕೈಗೆ ತೆಗೆದುಕೊಂಡು, ಮುನಿಗಳಿಗೆ ಹಾಕಲು ಮುಂದಕ್ಕೆಡಿಯನ್ನಿಟ್ಟು ಆ ಮುನಿಗಳ ಮಧ್ಯೆ ಮೊದಲಿನಂತೆ ಇದ್ದ ಪುರುಷನನನ್ನು ನೋಡಿ ಅವನ ಕಂಠಕ್ಕೇ ಮಾಲೆಯನ್ನು ಹಾಕಿದಳು. ತರುವಾಯ ಆ ಬಾಲೆಯು ಅಲ್ಲಿರುವ ಜನಗಳ ದೃಷ್ಟಿಗೆ ಗೋಚರಳಾಗಲೇ ಇಲ್ಲ. ಅಲ್ಲಿದ್ದವರೆಲ್ಲರೂ “ಇದೇನಾಶ್ಚರ್ಯ” ಎಂದು ಕಲಕಲ ಶಬ್ದ ಮಾಡತೊಡಗಿ ದರು. ಆ ಬಾಲೆಯನ್ನು ಕರೆದುಕೊಂಡು ಹರಿಯು ತನ್ನ ಸ್ಥಾನಕ್ಕೆ ತೆರಳಿದನು. ಆ ರಾಜಪುತ್ರಿಯು ಪರಮಾತ್ಮನನ್ನೇ ಪತಿಯಾಗಿ ಪಡೆಯಬೇಕೆಂದು ತಪಸ್ಸು ಮಾಡಿದ್ದಳಾದುದರಿಂದ ಅವಳು ಹರಿಯನ್ನೇ ಮದುವೆಯಾದಳು. ಆಮೇಲೆ ಆ ಮುನಿಗಳಿಬ್ಬರೂ ಖಿನ್ನರಾಗಿ ವಾಸುದೇವನನ್ನು ನೋಡಲು ಹರಿಲೋಕಕ್ಕೆ ಹೊರಟು ಹೋದರು. ಇವರು ಬಂದ<noinclude></noinclude> 5rxvrhnblbqb5zvanu05e4kgy4dw2nm ಪುಟ:ಅದ್ಭುತ ರಾಮಾಯಣ.djvu/೨೦ 104 40957 317137 103175 2026-05-05T06:50:09Z Shreesha Sharma 7840 /* Proofread */ 317137 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೧೨}}{{center|ವಿದ್ಯಾನಂದ}} ರೆಂಬ ಸಂಗತಿಯನ್ನರಿತು ಹರಿಯು ಶ್ರೀಮತಿಯೊಡನೆ ಎಲೌ ರಮಣಿಯೇ, ಆ ಮುನಿಗಳಿಬ್ಬರೂ ಇಲ್ಲಿಗೆ ಬಂದಿದ್ದಾರೆ, ನೀನುಮಾತ್ರ ಇಲ್ಲಿಯೇ ಪ್ರಚ್ಛನ್ನಳಾಗಿರು ? ಎಂದು ಹೇಳಲಾಕೆಯು ತನ್ನ ಆಕಾರವನ್ನು ಮರೆ ಮಾಡಿಕೊಂಡಳು. ನಾರದನು ಬಂದು ಹರಿಯಡಿಗೆ ವಂದಿಸಿ-ಎಲೌ ಪೂಜ್ಯನೆ! ಈಗ ನೀನು ಪರ್ವತನ ವಿಷಯದಲ್ಲಿಯೂ ನನ್ನ ವಿಷಯದಲ್ಲಿಯೂ ಮಾಡಿದ ಮೋಸವೇನು ? ಎಲೈ ಗೋವಿಂದನೆ ! ನೀನೇ ತಂತ್ರಮಾಡಿ ಆ ಬಾಲೆಯನ್ನು ಅಪಹರಿಸಿಕೊಂಡು ಬಂದಿರುವೆಯಲ್ಲದೆ ಮತ್ತೆ ಬೇರೆ ಇಲ್ಲ” ಎಂದು ಹೇಳಿದನು. ಅದನ್ನು ಕೇಳಿ ನಾರಾಯಣನು--ಕೈಗಳಿಂದ ಕಿವಿಗಳನ್ನು ಮುಚ್ಚಿಕೊಂಡು ಶಿವ ! ಶಿವ !! ಎನ್ನುತ್ತ ಪೂಜ್ಯನೆ ! ನೀನು ಹೇಳಿದುದೇನು ?*ಹೀಗೆ ಸ್ಟೇಚ್ಛೆಯಾಗಿ ಮಾತನಾಡುವುದು ಮುನಿವೃತ್ತಿಗೆ ತಕ್ಕುದಲ್ಲ; ಎಂದು ಹೇಳಿದನು. ನಾರದನು:--ಎಲೈ ವಾಸುದೇವನೆ ! ಹಾಗಾದರೆ ನನ್ನ ಮುಖವು ಕರಡಿಯ ಮುಖದಂತೆ ಹೇಗೆ ಆಯಿತು ? ವಾಸುದೇವ:-(ಬುದ್ದಿವಂತಿಕೆಯಿಂದ ಯೋಚಿಸಿ) ಎಲೈ ಮುನಿಯೇ ನೀನು ಪರ್ವತನ ಮುಖವನ್ನು ಶ್ರೀಮತಿಗೆ ಮಾತ್ರ ಕಪಿಮುಖದಂತೆ ಕಾಣುವಹಾಗೆ ಮಾಡೆಂದು ರಹಸ್ಯವಾಗಿ ಹೇಗೆ ಹೇಳಿದೆಯೋ ಹಾಗೆಯೇ ಪರ್ವತನೂ ಕೂಡ ನಾರದನ ಮುಖವು ರಾಜಬಾಲೆಗೆ ಕರಡಿಯ ಮುಖದಹಾಗೆ ಕಾಣಲಿ” ಎಂದು ಕೇಳಿಕೊಂಡನು. ನಾನು ಭಕ್ತಾಧೀನನಾದುದರಿಂದ ನಿಮ್ಮಿಬ್ಬರಿಷ್ಟದಂತೆ ನೆರವೇರಿಸಿಕೊಟ್ಟೆನು. ನಾನೇ ಸ್ವಚ್ಛೆಯಿಂದ ಮಾಡಿ ನಿಮ್ಮ ಪ್ರಿಯವನ್ನು ಹೋಗಲಾಡಿಸಲಿಲ್ಲ. ನನಗೆ ಭಕ್ತರಾಗಿ ಯಾರು ಏನನ್ನು ಕೇಳುವರೋ ಅವರಿಗದನ್ನು ಕೊಡುವುದು ನನ್ನ ಕೆಲಸ. ಈ ವಿಷಯದಲ್ಲಿ ನನ್ನ ತಪ್ಪಾಗಲಿ ನಿಮ್ಮ ತಪ್ಪಾಗಲಿ ಯಾವುದೂ ಇಲ್ಲ. ಎಲೈ ಪರ್ವತನಾರದರೆ ! ನಾನು ನಿಮಗೆ ಸತ್ಯವಾಗಿಯೂ ಪ್ರಿಯವನ್ನೇ ಮಾಡಿದ್ದೇನೆ, ಈ ವಿಷಯದಲ್ಲಿ ಬೇಕಾದರೆ ಆಯುಧವನ್ನು ಹಿಡಿದು ಪ್ರಮಾಣಮಾಡುವೆನು. ನಾರದನು-ಎಲೈ ದೇವನೇ ; ಹಾಗಾದರೆ ನಮ್ಮಿಬ್ಬರ ಮಧ್ಯೆ<noinclude></noinclude> 68jqzhkaf9ogbarus9894csrf1639if 317147 317137 2026-05-05T07:35:21Z Shreelatha.Halemane 7642 /* Validated */ 317147 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೧೨}}{{center|ವಿದ್ಯಾನಂದ}} ರೆಂಬ ಸಂಗತಿಯನ್ನರಿತು ಹರಿಯು ಶ್ರೀಮತಿಯೊಡನೆ ಎಲೌ ರಮಣಿಯೇ, ಆ ಮುನಿಗಳಿಬ್ಬರೂ ಇಲ್ಲಿಗೆ ಬಂದಿದ್ದಾರೆ, ನೀನುಮಾತ್ರ ಇಲ್ಲಿಯೇ ಪ್ರಚ್ಛನ್ನಳಾಗಿರು ? ಎಂದು ಹೇಳಲಾಕೆಯು ತನ್ನ ಆಕಾರವನ್ನು ಮರೆ ಮಾಡಿಕೊಂಡಳು. {{gap}}ನಾರದನು ಬಂದು ಹರಿಯಡಿಗೆ ವಂದಿಸಿ-ಎಲೌ ಪೂಜ್ಯನೆ! ಈಗ ನೀನು ಪರ್ವತನ ವಿಷಯದಲ್ಲಿಯೂ ನನ್ನ ವಿಷಯದಲ್ಲಿಯೂ ಮಾಡಿದ ಮೋಸವೇನು ? ಎಲೈ ಗೋವಿಂದನೆ ! ನೀನೇ ತಂತ್ರಮಾಡಿ ಆ ಬಾಲೆಯನ್ನು ಅಪಹರಿಸಿಕೊಂಡು ಬಂದಿರುವೆಯಲ್ಲದೆ ಮತ್ತೆ ಬೇರೆ ಇಲ್ಲ” ಎಂದು ಹೇಳಿದನು. ಅದನ್ನು ಕೇಳಿ ನಾರಾಯಣನು--ಕೈಗಳಿಂದ ಕಿವಿಗಳನ್ನು ಮುಚ್ಚಿಕೊಂಡು ಶಿವ ! ಶಿವ !! ಎನ್ನುತ್ತ ಪೂಜ್ಯನೆ ! ನೀನು ಹೇಳಿದುದೇನು ?*ಹೀಗೆ ಸ್ಟೇಚ್ಛೆಯಾಗಿ ಮಾತನಾಡುವುದು ಮುನಿವೃತ್ತಿಗೆ ತಕ್ಕುದಲ್ಲ; ಎಂದು ಹೇಳಿದನು. {{gap}}ನಾರದನು:--ಎಲೈ ವಾಸುದೇವನೆ ! ಹಾಗಾದರೆ ನನ್ನ ಮುಖವು ಕರಡಿಯ ಮುಖದಂತೆ ಹೇಗೆ ಆಯಿತು ? {{gap}}ವಾಸುದೇವ:-(ಬುದ್ದಿವಂತಿಕೆಯಿಂದ ಯೋಚಿಸಿ) ಎಲೈ ಮುನಿಯೇ ನೀನು ಪರ್ವತನ ಮುಖವನ್ನು ಶ್ರೀಮತಿಗೆ ಮಾತ್ರ ಕಪಿಮುಖದಂತೆ ಕಾಣುವಹಾಗೆ ಮಾಡೆಂದು ರಹಸ್ಯವಾಗಿ ಹೇಗೆ ಹೇಳಿದೆಯೋ ಹಾಗೆಯೇ ಪರ್ವತನೂ ಕೂಡ ನಾರದನ ಮುಖವು ರಾಜಬಾಲೆಗೆ ಕರಡಿಯ ಮುಖದಹಾಗೆ ಕಾಣಲಿ” ಎಂದು ಕೇಳಿಕೊಂಡನು. ನಾನು ಭಕ್ತಾಧೀನನಾದುದರಿಂದ ನಿಮ್ಮಿಬ್ಬರಿಷ್ಟದಂತೆ ನೆರವೇರಿಸಿಕೊಟ್ಟೆನು. ನಾನೇ ಸ್ವಚ್ಛೆಯಿಂದ ಮಾಡಿ ನಿಮ್ಮ ಪ್ರಿಯವನ್ನು ಹೋಗಲಾಡಿಸಲಿಲ್ಲ. ನನಗೆ ಭಕ್ತರಾಗಿ ಯಾರು ಏನನ್ನು ಕೇಳುವರೋ ಅವರಿಗದನ್ನು ಕೊಡುವುದು ನನ್ನ ಕೆಲಸ. ಈ ವಿಷಯದಲ್ಲಿ ನನ್ನ ತಪ್ಪಾಗಲಿ ನಿಮ್ಮ ತಪ್ಪಾಗಲಿ ಯಾವುದೂ ಇಲ್ಲ. ಎಲೈ ಪರ್ವತನಾರದರೆ ! ನಾನು ನಿಮಗೆ ಸತ್ಯವಾಗಿಯೂ ಪ್ರಿಯವನ್ನೇ ಮಾಡಿದ್ದೇನೆ, ಈ ವಿಷಯದಲ್ಲಿ ಬೇಕಾದರೆ ಆಯುಧವನ್ನು ಹಿಡಿದು ಪ್ರಮಾಣಮಾಡುವೆನು. {{gap}}ನಾರದನು-ಎಲೈ ದೇವನೇ ; ಹಾಗಾದರೆ ನಮ್ಮಿಬ್ಬರ ಮಧ್ಯೆ<noinclude></noinclude> 0uw4otah805msb56hdmozo9ywkas44g ಪುಟ:ಅದ್ಭುತ ರಾಮಾಯಣ.djvu/೨೧ 104 40958 317138 103176 2026-05-05T06:55:16Z Shreesha Sharma 7840 /* Proofread */ 317138 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಅದ್ಭುತ ರಾಮಾಯಣ}}{{Right|೧೩}} ಬಂದು ದ್ವಿಭುಜನಾಗಿ ಧನುಸ್ಸಿನಿಂದ ಕೂಡಿ ಆ ಬಾಲೆಯನ್ನು ಹೊತ್ತುಕೊಂಡು ಹೋದನಲ್ಲಾ ! ಅವನಾರು? ನಾರಾಯಣ-ಎಲೈ ದ್ವಿಜರಿರಾ ! ಮಾಯಾವಿಗಳಾದ ಮಹಾತ್ಮರು ಜಗತ್ತಿನಲ್ಲಿ ಬಹಳ ಮಂದಿಗಳಿದಾರೆ. ಅವರಲ್ಲಿ ಯಾರೋ ಅವಳನ್ನಪಹರಿಸಿರಬಹುದು, ನಾನು ನಿತ್ಯವೂ ಚಕ್ರಪಾಣಿಯಾಗಿರುವೆನು. ನನಗೆ ಭುಜಗಳು ನಾಲ್ಕಿವೆ. ನಾನೆಂದಿಗೂ ಸುಳ್ಳು ಹೇಳುವನಲ್ಲ. ಈ ವಿಷಯವು ನಿಮಗೇ ಗೊತ್ತಿರುವುದು, ಅದನ್ನು ಕೇಳಿ ಮುನಿಗಳಿಬ್ಬರೂ ದೇವರನ್ನು ವಂದಿಸಿ ಹೃಷ್ಟಮಾನಸರಾಗಿ “ಎಲೈ ದೇವನೇ ! ಈ ವಿಷಯದಲ್ಲಿ ನಿನ್ನ ತಪ್ಪೇನೂ ಇಲ್ಲ ; ನೀನು ಜಗತ್ಪತಿಯಾಗಿರುವೆ. ಈ ಮೋಸಕೃತ್ಯ ವು ರಾಯನದೇ ಆಗಿರಬಹುದು, ಅವನೇ ಮಾಯೆಯನ್ನೇನಾದರೂ ಉಂ ಟುಮಾಡಿದನೋ, ಎಂದು ಹೇಳಿ ಅಲ್ಲಿಂದ ಹೊರಟು ಅಂಬರೀಷನ ಹತ್ತಿರಕ್ಕೆ ಬಂದು ಎಲೈ ರಾಜನೆ ! ಪರ್ವತನಾರದರಾದ ನಾವಿಬ್ಬರೂ ಇಲ್ಲಿಗೇಕೆ ಬಂದೆವು, ನಮ್ಮನ್ನು ಕರೆಯಿಸಿ ಕನ್ನೆಯನ್ನು ಮತ್ತೊಬ್ಬರಿಗೆ ಕೊಡಬಹುದೆ ? ಎಲೋ ಮೂಢನೆ ! ನಿನಗೆ ತಮಸ್ಸುಂಟಾಗಲಿ. ನೀನದರಿಂದ ನಿನ್ನನ್ನು ತಿಳಿಯಲಾರದೆ ಹೋಗುವೆ, ಎಂದು ಆ ಮುನಿಗಳು ಶಾಪವನ್ನು ಕೊಟ್ಟೊಡನೆಯೇ ತಮೋರಾಶಿಯು ಮುಂದೆ ಬಂದು ನಿಂತಿತು. ಕೂಡಲೇ ರಾಜನಕಡೆ ವಿಷ್ಣುಚಕ್ರವೂ ಬಂದೊದಗಿತು. ಚಕ್ರವು ಕತ್ತಲೆಯನ್ನಟ್ಟಿ ಬರಲು ಆ ಕತ್ತಲೆಯು ಮುನಿಗಳ ಹತ್ತಿರಕ್ಕೆ ಹೋಯಿತು. ಅವರು ಅದನ್ನು ನೋಡಿ ಗಡಗಡನೆ ನಡುಗುತ್ತ, ಓಡಿಹೋದರು. ಆದರೂ ಹಿಂದುಗಡೆ ಚಕ್ರವು ಕತ್ತಲೆಯನ್ನು ತರುಮಿಕೊಂಡೇ ಬರುತ್ತಿತ್ತು, ಮುನಿಗಳು ಕಾಲಿನ ವೇಗವನ್ನು ಮತ್ತಷ್ಟು ಬಲವಾಡಿದರು. ಆದರೂ ತಪ್ಪಿಸಿಕೊಳ್ಳುವುದಕ್ಕಾಗಲಿಲ್ಲ. ತರುವಾಯ ಆ ಮುನಿಗಳು ನಮಗೆ ಇಗ ಕನ್ಯಾಸಿದ್ದಿ ಯು ಚೆನ್ನಾಗಿ ನೆರವೇರಿತೆಂದು ಪಲಾಯನ ಮಾಡುತ್ತ ಚಕ್ರವಾಳ ಪರ್ವತದವರೆಗೂ ಹೋದರು. ಅಲ್ಲಿಗೂ ಅದು ಅವರನ್ನು ಬಿಡಲಿಲ್ಲ. ಅವರು ದಾರಿಯಲ್ಲಿ ಹೆದಗರುತ್ತಾ ಗೋವಿಂದನೆ ! ಕಾಪಾಡು ! ಕಾಪಾಡು !! ಎಂದನ್ನುತ್ತ ವಿಷ್ಣು ಲೋಕವನ್ನು ಕುರಿತೋಡಿದರು, ಅಲ್ಲಿಗೆ ಹೋಗಿ, ನಾರಾಯಣ ! ಜಗತ್ಪತೆ ! ವಾಸುದೇವ ! ಹೃ<noinclude></noinclude> gelxga3ebehmpw58klht7f59ezwbj8z 317148 317138 2026-05-05T07:35:44Z Shreelatha.Halemane 7642 /* Validated */ 317148 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಅದ್ಭುತ ರಾಮಾಯಣ}}{{Right|೧೩}} ಬಂದು ದ್ವಿಭುಜನಾಗಿ ಧನುಸ್ಸಿನಿಂದ ಕೂಡಿ ಆ ಬಾಲೆಯನ್ನು ಹೊತ್ತುಕೊಂಡು ಹೋದನಲ್ಲಾ ! ಅವನಾರು? {{gap}}ನಾರಾಯಣ-ಎಲೈ ದ್ವಿಜರಿರಾ ! ಮಾಯಾವಿಗಳಾದ ಮಹಾತ್ಮರು ಜಗತ್ತಿನಲ್ಲಿ ಬಹಳ ಮಂದಿಗಳಿದಾರೆ. ಅವರಲ್ಲಿ ಯಾರೋ ಅವಳನ್ನಪಹರಿಸಿರಬಹುದು, ನಾನು ನಿತ್ಯವೂ ಚಕ್ರಪಾಣಿಯಾಗಿರುವೆನು. ನನಗೆ ಭುಜಗಳು ನಾಲ್ಕಿವೆ. ನಾನೆಂದಿಗೂ ಸುಳ್ಳು ಹೇಳುವನಲ್ಲ. ಈ ವಿಷಯವು ನಿಮಗೇ ಗೊತ್ತಿರುವುದು, ಅದನ್ನು ಕೇಳಿ ಮುನಿಗಳಿಬ್ಬರೂ ದೇವರನ್ನು ವಂದಿಸಿ ಹೃಷ್ಟಮಾನಸರಾಗಿ “ಎಲೈ ದೇವನೇ ! ಈ ವಿಷಯದಲ್ಲಿ ನಿನ್ನ ತಪ್ಪೇನೂ ಇಲ್ಲ ; ನೀನು ಜಗತ್ಪತಿಯಾಗಿರುವೆ. ಈ ಮೋಸಕೃತ್ಯ ವು ರಾಯನದೇ ಆಗಿರಬಹುದು, ಅವನೇ ಮಾಯೆಯನ್ನೇನಾದರೂ ಉಂ ಟುಮಾಡಿದನೋ, ಎಂದು ಹೇಳಿ ಅಲ್ಲಿಂದ ಹೊರಟು ಅಂಬರೀಷನ ಹತ್ತಿರಕ್ಕೆ ಬಂದು ಎಲೈ ರಾಜನೆ ! ಪರ್ವತನಾರದರಾದ ನಾವಿಬ್ಬರೂ ಇಲ್ಲಿಗೇಕೆ ಬಂದೆವು, ನಮ್ಮನ್ನು ಕರೆಯಿಸಿ ಕನ್ನೆಯನ್ನು ಮತ್ತೊಬ್ಬರಿಗೆ ಕೊಡಬಹುದೆ ? ಎಲೋ ಮೂಢನೆ ! ನಿನಗೆ ತಮಸ್ಸುಂಟಾಗಲಿ. ನೀನದರಿಂದ ನಿನ್ನನ್ನು ತಿಳಿಯಲಾರದೆ ಹೋಗುವೆ, ಎಂದು ಆ ಮುನಿಗಳು ಶಾಪವನ್ನು ಕೊಟ್ಟೊಡನೆಯೇ ತಮೋರಾಶಿಯು ಮುಂದೆ ಬಂದು ನಿಂತಿತು. ಕೂಡಲೇ ರಾಜನಕಡೆ ವಿಷ್ಣುಚಕ್ರವೂ ಬಂದೊದಗಿತು. ಚಕ್ರವು ಕತ್ತಲೆಯನ್ನಟ್ಟಿ ಬರಲು ಆ ಕತ್ತಲೆಯು ಮುನಿಗಳ ಹತ್ತಿರಕ್ಕೆ ಹೋಯಿತು. ಅವರು ಅದನ್ನು ನೋಡಿ ಗಡಗಡನೆ ನಡುಗುತ್ತ, ಓಡಿಹೋದರು. ಆದರೂ ಹಿಂದುಗಡೆ ಚಕ್ರವು ಕತ್ತಲೆಯನ್ನು ತರುಮಿಕೊಂಡೇ ಬರುತ್ತಿತ್ತು, ಮುನಿಗಳು ಕಾಲಿನ ವೇಗವನ್ನು ಮತ್ತಷ್ಟು ಬಲವಾಡಿದರು. ಆದರೂ ತಪ್ಪಿಸಿಕೊಳ್ಳುವುದಕ್ಕಾಗಲಿಲ್ಲ. ತರುವಾಯ ಆ ಮುನಿಗಳು ನಮಗೆ ಇಗ ಕನ್ಯಾಸಿದ್ದಿ ಯು ಚೆನ್ನಾಗಿ ನೆರವೇರಿತೆಂದು ಪಲಾಯನ ಮಾಡುತ್ತ ಚಕ್ರವಾಳ ಪರ್ವತದವರೆಗೂ ಹೋದರು. ಅಲ್ಲಿಗೂ ಅದು ಅವರನ್ನು ಬಿಡಲಿಲ್ಲ. ಅವರು ದಾರಿಯಲ್ಲಿ ಹೆದಗರುತ್ತಾ ಗೋವಿಂದನೆ ! ಕಾಪಾಡು ! ಕಾಪಾಡು !! ಎಂದನ್ನುತ್ತ ವಿಷ್ಣು ಲೋಕವನ್ನು ಕುರಿತೋಡಿದರು, ಅಲ್ಲಿಗೆ ಹೋಗಿ, ನಾರಾಯಣ ! ಜಗತ್ಪತೆ ! ವಾಸುದೇವ ! ಹೃ<noinclude></noinclude> oub0zh2fqpm2zqy1fpoos8n99wgbar4 ಪುಟ:ಅದ್ಭುತ ರಾಮಾಯಣ.djvu/೨೨ 104 40959 317139 103177 2026-05-05T06:56:19Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 317139 proofread-page text/x-wiki <noinclude><pagequality level="1" user="Shreesha Sharma" /></noinclude> {{Left|೧೪}}{{center|ವಿದ್ಯಾನಂದ}} ಈಗ! ಪದ್ಮನಾಭ ! ಜನಾರ್ದನ ! ಪುಂಡರೀಕಾಕ್ಷ! ನೀನು ನಮ ಗೊಡೆಯನಾಗಿರುವ ಕಾಪಾಡು! ಕಾಪಾಡು! ಎಂದು ಮರಕೂಕ್ಕ ರು.. ಆಮೇಲೆ ನಾರಾಯಣನು ಭಕ್ತರನ್ನು ಕಾಡಲು ಕತ್ತಲೆಯ ನ್ಯೂ ಚಕ್ರವನ್ನೂ ತಡೆದುಕೊಂಡು, ಆಂಬರೀಷನು ಹೇಗೆ ನನಗೆ ಮು ಖ್ಯ ಭಕ್ತನೋ ಹಾಗೆಯೇ ಈ ಮುನಿಗಳೂ ಭಕ್ತರಾಗಿದ್ದಾರೆ, ರಾಜನಿಗೆ ಹಿತವಾಗುವಂತ ಇವರಿಬ್ಬರಿಗೂ ಹಿತವನ್ನುಂಟುಮಾಡಬೇಕೆಂದೆಳಸಿ ಆ ಮುನಿಗಳಿಬ್ಬರನ್ನೂ ಬರಮಾಡಿಕೊಂಡು ಮಾತಿನಿಂದವರನ್ನು ಬೆರಗು ಮಾಡುತ್ತ ಎಲೆ ಮುನಿಗಳ ! ನನ್ನ ಮಾತನ್ನು ಸ್ವಲ್ಪ ಲಾಲಿಸಿ ? ನನಗಾ ಗಿಯೇ ನೀವು ನನ್ನ ಭಕ್ತನನ್ನು ಕಾಪಾಡಬೇಕು, ಈ ಚಕ್ರವು ಅಪ ರಾಧಿಯಾಗಿರುವುದು, ಸಾಧುಗಳು ಯಾವಾಗಲೂ ಕ್ಷಮಾಶೀಲರಾದುದರಿಂದ ಇದನ್ನು ಮನ್ನಿಸಬೇಕು, ಎಂದು ಕೇಳಿಕೊಂಡನು. ತರುವಾಯ ಆ ಮುನಿಗಳು ಅದೆಲ್ಲವೂ ವಿಷ್ಣುವಿನ ಮಾಯದಂ ದು ತಿಳಿದು, ಅವನ ಮೇಲೆ ಸಿಟ್ಟು ಮಾಡಿಕೊಂಡು ಎಲೆ ಮಧುಸೂಧ ನನೆ! ನೀನು ಮೋಸಮಾಡಿ ಶ್ರೀಮತಿಯನ್ನು ಯಾವ ಆಕಾರದಿಂದ ಬಂದು ಅಪಹರಿಸಿದೆಯೋ ಅದೇ ಆಕಾರದಿಂದಲೇ ಅಂಬರೀಷನ ವಂಶೀ ಯನಾದ ದಶರಥನಲ್ಲಿ ಜನಿಸು ? ಶ್ರೀಮತಿಯು ಭೂಪುತ್ರಿಯಾಗಿ ಜನಿ ಸರಿ, ಅವಳನ್ನು ವಿದೇಹರಾಜನು ಕೈ ಕೊಂಡು, ಕಾಪಾಡುವನು, ಆಗಿ ನೀಚನಾದ ರಹಸನೊಬ್ಬನು ಲೋಕಕಂಟಕನಾಗಿ ಹುಟ್ಟುವನು. ನೀ. ನು ಶ್ರೀಮತಿಯನ್ನು ರಾಕ್ಷಸಧರದಿಂದ ಅಪಹರಿಸಿದಂತೆ ನಿನ್ನ ಹೆಂಡತಿ ಯಾದ ಸೀತೆಯನ್ನು ಉಕಸನು ಗುಚ್ಚಾಗಿ ಅಪಹರಿಸುವನು, ನಾವು ಶ್ರೀಮತಿಗಾಗಿ ಹೇಗೆ ದುಗುಡವನ್ನು ತಾಳಿದೆವೋ ಹಾಗೆಯೇ ನೀನೂ ದುಃಖ ವನ್ನು ಅನುಭವಿಸು, ಎಂದು ನಾರಾಯಣನಿಗೆ ಶಾಪವನ್ನಿತ್ತರು. ನಾರಾಯಣನು--(ಅದನ್ನು ಕೇಳಿ) ಅಂಬರೀಷನ ವದಲ್ಲಿ ಶ್ರೀ ಮಂತನಾಗಿಯೂ ಧಾರಿ ಕನಾಗಿಯೂ ಇರುವ ದಶರಥಮಹಾರಾಯನು ಜನಿಸುವನಮ್ಮ ? ಅವನಿಗೆ ನಾನು ರಾಮನೆಂಬ ಹೆಸರಿನಿಂದ ದೊಡ್ಡಪ್ಪ ಗನಾಗಿ ಜನ್ಮವನ್ನತ್ತುವನು ಅಲ್ಲಿ ನನಗೆ ದಕ್ಷಿಣಬಾಹುವಾಗಿ ಭರತನೂ ನಾಮಬಾಹುವಾಗಿ ಶತ್ರುಘನೂ ಜನಿಸಲಿ, ಆದಿಶೇಷನು 'ಕಣನಾಗಿ<noinclude></noinclude> 4lo6xibwetov73p4iquga885fw3l6iy 317140 317139 2026-05-05T06:56:28Z Shreesha Sharma 7840 /* Proofread */ 317140 proofread-page text/x-wiki <noinclude><pagequality level="3" user="Shreesha Sharma" /></noinclude> {{Left|೧೪}}{{center|ವಿದ್ಯಾನಂದ}} ಈಗ! ಪದ್ಮನಾಭ ! ಜನಾರ್ದನ ! ಪುಂಡರೀಕಾಕ್ಷ! ನೀನು ನಮ ಗೊಡೆಯನಾಗಿರುವ ಕಾಪಾಡು! ಕಾಪಾಡು! ಎಂದು ಮರಕೂಕ್ಕ ರು.. ಆಮೇಲೆ ನಾರಾಯಣನು ಭಕ್ತರನ್ನು ಕಾಡಲು ಕತ್ತಲೆಯ ನ್ಯೂ ಚಕ್ರವನ್ನೂ ತಡೆದುಕೊಂಡು, ಆಂಬರೀಷನು ಹೇಗೆ ನನಗೆ ಮು ಖ್ಯ ಭಕ್ತನೋ ಹಾಗೆಯೇ ಈ ಮುನಿಗಳೂ ಭಕ್ತರಾಗಿದ್ದಾರೆ, ರಾಜನಿಗೆ ಹಿತವಾಗುವಂತ ಇವರಿಬ್ಬರಿಗೂ ಹಿತವನ್ನುಂಟುಮಾಡಬೇಕೆಂದೆಳಸಿ ಆ ಮುನಿಗಳಿಬ್ಬರನ್ನೂ ಬರಮಾಡಿಕೊಂಡು ಮಾತಿನಿಂದವರನ್ನು ಬೆರಗು ಮಾಡುತ್ತ ಎಲೆ ಮುನಿಗಳ ! ನನ್ನ ಮಾತನ್ನು ಸ್ವಲ್ಪ ಲಾಲಿಸಿ ? ನನಗಾ ಗಿಯೇ ನೀವು ನನ್ನ ಭಕ್ತನನ್ನು ಕಾಪಾಡಬೇಕು, ಈ ಚಕ್ರವು ಅಪ ರಾಧಿಯಾಗಿರುವುದು, ಸಾಧುಗಳು ಯಾವಾಗಲೂ ಕ್ಷಮಾಶೀಲರಾದುದರಿಂದ ಇದನ್ನು ಮನ್ನಿಸಬೇಕು, ಎಂದು ಕೇಳಿಕೊಂಡನು. ತರುವಾಯ ಆ ಮುನಿಗಳು ಅದೆಲ್ಲವೂ ವಿಷ್ಣುವಿನ ಮಾಯದಂ ದು ತಿಳಿದು, ಅವನ ಮೇಲೆ ಸಿಟ್ಟು ಮಾಡಿಕೊಂಡು ಎಲೆ ಮಧುಸೂಧ ನನೆ! ನೀನು ಮೋಸಮಾಡಿ ಶ್ರೀಮತಿಯನ್ನು ಯಾವ ಆಕಾರದಿಂದ ಬಂದು ಅಪಹರಿಸಿದೆಯೋ ಅದೇ ಆಕಾರದಿಂದಲೇ ಅಂಬರೀಷನ ವಂಶೀ ಯನಾದ ದಶರಥನಲ್ಲಿ ಜನಿಸು ? ಶ್ರೀಮತಿಯು ಭೂಪುತ್ರಿಯಾಗಿ ಜನಿ ಸರಿ, ಅವಳನ್ನು ವಿದೇಹರಾಜನು ಕೈ ಕೊಂಡು, ಕಾಪಾಡುವನು, ಆಗಿ ನೀಚನಾದ ರಹಸನೊಬ್ಬನು ಲೋಕಕಂಟಕನಾಗಿ ಹುಟ್ಟುವನು. ನೀ. ನು ಶ್ರೀಮತಿಯನ್ನು ರಾಕ್ಷಸಧರದಿಂದ ಅಪಹರಿಸಿದಂತೆ ನಿನ್ನ ಹೆಂಡತಿ ಯಾದ ಸೀತೆಯನ್ನು ಉಕಸನು ಗುಚ್ಚಾಗಿ ಅಪಹರಿಸುವನು, ನಾವು ಶ್ರೀಮತಿಗಾಗಿ ಹೇಗೆ ದುಗುಡವನ್ನು ತಾಳಿದೆವೋ ಹಾಗೆಯೇ ನೀನೂ ದುಃಖ ವನ್ನು ಅನುಭವಿಸು, ಎಂದು ನಾರಾಯಣನಿಗೆ ಶಾಪವನ್ನಿತ್ತರು. ನಾರಾಯಣನು--(ಅದನ್ನು ಕೇಳಿ) ಅಂಬರೀಷನ ವದಲ್ಲಿ ಶ್ರೀ ಮಂತನಾಗಿಯೂ ಧಾರಿ ಕನಾಗಿಯೂ ಇರುವ ದಶರಥಮಹಾರಾಯನು ಜನಿಸುವನಮ್ಮ ? ಅವನಿಗೆ ನಾನು ರಾಮನೆಂಬ ಹೆಸರಿನಿಂದ ದೊಡ್ಡಪ್ಪ ಗನಾಗಿ ಜನ್ಮವನ್ನತ್ತುವನು ಅಲ್ಲಿ ನನಗೆ ದಕ್ಷಿಣಬಾಹುವಾಗಿ ಭರತನೂ ನಾಮಬಾಹುವಾಗಿ ಶತ್ರುಘನೂ ಜನಿಸಲಿ, ಆದಿಶೇಷನು 'ಕಣನಾಗಿ<noinclude></noinclude> cxzvqd9bjizl8trh46cgx07rme2xcwo 317149 317140 2026-05-05T07:47:14Z Shreelatha.Halemane 7642 /* Validated */ 317149 proofread-page text/x-wiki <noinclude><pagequality level="4" user="Shreelatha.Halemane" /></noinclude> {{Left|೧೪}}{{center|ವಿದ್ಯಾನಂದ}} ಷೀಕೇಶ! ಪದ್ಮನಾಭ ! ಜನಾರ್ದನ ! ಪುಂಡರೀಕಾಕ್ಷ! ನೀನು ನಮಗೊಡೆಯನಾಗಿರುವೆ ಕಾಪಾಡು! ಕಾಪಾಡು! ಎಂದು ಮೊರೆಹೊಕ್ಕರು.ಆಮೇಲೆ ನಾರಾಯಣನು ಭಕ್ತರನ್ನು ಕಾಡಲು ಕತ್ತಲೆಯನ್ನೂ ಚಕ್ರವನ್ನೂ ತಡೆದುಕೊಂಡು, ಆಂಬರೀಷನು ಹೇಗೆ ನನಗೆ ಮುಖ್ಯ ಭಕ್ತನೋ ಹಾಗೆಯೇ ಈ ಮುನಿಗಳೂ ಭಕ್ತರಾಗಿದ್ದಾರೆ, ರಾಜನಿಗೆ ಹಿತವಾಗುವಂತ ಇವರಿಬ್ಬರಿಗೂ ಹಿತವನ್ನುಂಟುಮಾಡಬೇಕೆಂದೆಳಸಿ ಆ ಮುನಿಗಳಿಬ್ಬರನ್ನೂ ಬರಮಾಡಿಕೊಂಡು ಮಾತಿನಿಂದವರನ್ನು ಬೆರಗು ಮಾಡುತ್ತ ಎಲೈ ಮುನಿಗಳೇ ! ನನ್ನ ಮಾತನ್ನು ಸ್ವಲ್ಪ ಲಾಲಿಸಿ ? ನನಗಾಗಿಯೇ ನೀವು ನನ್ನ ಭಕ್ತನನ್ನು ಕಾಪಾಡಬೇಕು. ಈ ಚಕ್ರವು ಅಪರಾಧಿಯಾಗಿರುವುದು. ಸಾಧುಗಳು ಯಾವಾಗಲೂ ಕ್ಷಮಾಶೀಲರಾದುದರಿಂದ ಇದನ್ನು ಮನ್ನಿಸಬೇಕು, ಎಂದು ಕೇಳಿಕೊಂಡನು. ತರುವಾಯ ಆ ಮುನಿಗಳು ಅದೆಲ್ಲವೂ ವಿಷ್ಣುವಿನ ಮಾಯೆಯೆಂದು ತಿಳಿದು, ಅವನ ಮೇಲೆ ಸಿಟ್ಟು ಮಾಡಿಕೊಂಡು ಎಲೈ ಮಧುಸೂಧನನೆ! ನೀನು ಮೋಸಮಾಡಿ ಶ್ರೀಮತಿಯನ್ನು ಯಾವ ಆಕಾರದಿಂದ ಬಂದು ಅಪಹರಿಸಿದೆಯೋ ಅದೇ ಆಕಾರದಿಂದಲೇ ಅಂಬರೀಷನ ವಂಶೀಯನಾದ ದಶರಥನಲ್ಲಿ ಜನಿಸು ? ಶ್ರೀಮತಿಯು ಭೂಪುತ್ರಿಯಾಗಿ ಜನಿಸಲಿ, ಅವಳನ್ನು ವಿದೇಹರಾಜನು ಕೈ ಕೊಂಡು, ಕಾಪಾಡುವನು, ಆಗಿ ನೀಚನಾದ ರಾಕ್ಷಸನೊಬ್ಬನು ಲೋಕಕಂಟಕನಾಗಿ ಹುಟ್ಟುವನು. ನೀನು ಶ್ರೀಮತಿಯನ್ನು ರಾಕ್ಷಸಧರ್ಮದಿಂದ ಅಪಹರಿಸಿದಂತೆ ನಿನ್ನ ಹೆಂಡತಿಯಾದ ಸೀತೆಯನ್ನು ರಾಕ್ಷಸನು ಗುಟ್ಟಾಗಿ ಅಪಹರಿಸುವನು.ನಾವು ಶ್ರೀಮತಿಗಾಗಿ ಹೇಗೆ ದುಗುಡವನ್ನು ತಾಳಿದೆವೋ ಹಾಗೆಯೇ ನೀನೂ ದುಃಖ ವನ್ನು ಅನುಭವಿಸು. ಎಂದು ನಾರಾಯಣನಿಗೆ ಶಾಪವನ್ನಿತ್ತರು. ನಾರಾಯಣನು--(ಅದನ್ನು ಕೇಳಿ) ಅಂಬರೀಷನ ವಂಶದಲ್ಲಿ ಶ್ರೀ ಮಂತನಾಗಿಯೂ ಧಾರ್ಮಿಕನಾಗಿಯೂ ಇರುವ ದಶರಥಮಹಾರಾಯನು ಜನಿಸುವನಷ್ಟೆ ? ಅವನಿಗೆ ನಾನು ರಾಮನೆಂಬ ಹೆಸರಿನಿಂದ ದೊಡ್ಡಪ್ಪಗನಾಗಿ ಜನ್ಮವನ್ನೆತ್ತುವೆನು. ಅಲ್ಲಿ ನನಗೆ ದಕ್ಷಿಣಬಾಹುವಾಗಿ ಭರತನೂ ನಾಮಬಾಹುವಾಗಿ ಶತ್ರುಘ್ಹ್ನನೂ ಜನಿಸಲಿ, ಆದಿಶೇಷನು ಲಕ್ಷ್ಮಣನಾಗಿ<noinclude></noinclude> oyagnhe6iscjibw0mwmzfqlwar0u6h0 ಪುಟ:ಅದ್ಭುತ ರಾಮಾಯಣ.djvu/೨೩ 104 40960 317141 103178 2026-05-05T06:57:06Z Shreesha Sharma 7840 /* Proofread */ 317141 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಅದ್ಭುತ ರಾಮಯಣ}}{{Right|೧೫}} ಜನಿಸಲಿ, ಎಲೆ ಚಕ್ರವೇ ಮುನಿದವು ಅನ್ಯಥಾ ಆಗತಕ್ಕುದಲ್ಲ, ಹೋ ಗು ಮುನಿಶಾಪದಿಂದ ಬಂದ ತಮೋರಾಕಿದೆ, ನಾನು ರಾಮನಾದಾಗ ನೀನು ನನ್ನಲ್ಲಿಗೆ ಬಾ, ಈಗ ರಾಜನನ್ನು ಬಿಟ್ಟು ತೊಲಗು ! ಎಲ್ಕೆ ಮುನಿಗಳ ನಿಮ್ಮನ್ನೂ ಬಿಟ್ಟು ಹೋಗಲಿ, ಎಂದು ಹೇಳಿದನು. ಹೀಗೆ ಹೇ. ಳುತ್ತಲೇ ಆ ತಮಸ್ಸು ನಾಶವಾಯಿತು. ಭಕ್ತರಕಣನಾದ ನಾರಾಯಣ ನ ಆತ್ಮಾರ್ಥವಾದ ಚಕ್ರವು ಮೊದಲಿದ್ದಂತೆಯೇ ಇದ್ದಿತು, ಮುನಿಶ್ರೀ ಸ್ಥರು ಭಯವನ್ನು ಕಳೆದುಕೊಂಡು ಗೋವಿಂದನಿಗೆ ವಂದನೆಯನ್ನು ಗೈದು ಶೋಕದಿಂದ ತೃಪ್ತರಾಗಿ ಹೊರಟುಹೋಗುತ್ತ ಒಬ್ಬರಿಗೊಬ್ಬರು ಇನ್ನುಮೇಲೆ ನಾವು ಕನ್ಯಾಪರಿಗ್ರಹವನ್ನೆಂದಿಗೂ ಮಾಡಬಾರದು, ಎಂದು ಪ್ರತಿಜ್ಞೆ ಮಾಡಿಕೊಂಡು ಧ್ಯಾನಪರರಾಗಿ ಪೂವ್ವದಂತ ನಿಯಮದಲ್ಲಿದ್ದರು, ಆ ಅಂಬರೀಷರಾಜನು ಭೂಮಿಯನ್ನು ಪಾಲಿಸಿ ನೃತ್ಯ ಜ್ಞಾತಿಗಳೊಡನೆ ವಿಷ್ಣುಲೋಕದಲ್ಲಿ ವಾಸವಾಗಿದ್ದನು, ಅಂಬರೀಷನಿಗೂ ಆ ದೇವಮುನಿ ಗಳಿಬ್ಬರಿಗೂ ಗೌರವವುಂಟಾಗಲು ರಾಮನು ದಶರಥಪುತ್ರನಾಗಿ ಜನಿಸಿ ತಮಸ್ಸಿನಿಂದ ಲುಪ್ತವಾದ ಬುದ್ಧಿಯುಳ್ಳವನಾದನು. ಒಮ್ಮೊಮ್ಮೆ ಈ ರವಶದಿಂದ ಆತ್ಮಸ್ಕೃತಿಯೂ ಉಂಟಾಗುತ್ತಿತ್ತು, ಮಹಾಬಾಹುವಾ ದ ಶ್ರೀರಾಮನು ಪರಿಪೂರ್ಣಕಾಮನಾದರೂ ಅಪೂರ್ಣ ಕಾಮನಂತ ನಟಿಸುತ್ತಿದ್ದನು, ಪ್ರಭುಗಳ ಈ ವರ್ತನವು ಭಕ್ತಾನುಗ್ರಹಾರ್ಥವಲ್ಲದೆ ಬೇರೆಯಲ್ಲ. ಮಾಯೆಯನ್ನು ಮಾಡಿದುದರಿಂದ ಪರಮೇಶ್ವರನು ಮನ ಏಜನ್ಮವನ್ನೆತ್ತಬೇಕಾಯಿತು, ಆದಕಾರಣ ವಿದ್ವಾಂಸರು ರೋಷವ ನ್ನು ತಿಳಿದು ಮಾಯೆಯನ್ನು ಮಾಡಬಾರದು, ಎಲೆ ಮುನಿಯ | ಈ ರೀತಿಯಾಗಿ ರಾಮನ ಜನ್ಮಕ್ಕೆ ಕಾರಣವನ್ನು ಅಂಬರೀಷನ ಮಹಾತ್ಮ ಯನ್ನೂ ಹರಿಯ ಮಾಯೆಯನ್ನೂ ನಿನಗೆ ತಿಳಿಸಿರುವನು, ಆರಾದರೂ ಈ ಹರಿಯ ಮಾಯಾವಿತ್ವವನ್ನು ಕೇಳಿದರೂ ಸರಿಯೇ ಓದಿದರೂ ಸರಿ ಯೇ ಅವರು ಮಾಯಾರಹಿತರಾಗಿ ವಿಷ್ಣುಲೋಕವನ್ನೆ ದುವರು. ಅಲ್ಲದೆ ರಾಮನ ಜನ್ಮವನ್ನು ಯಾರು ಭಕ್ತಿಯಿಂದ ಕೇಳುತ್ತಾರೋ ಅಥವಾ ಪಠಿ ಸುತ್ತಾರೋ ಅವರೆಂದಿಗೂ ಯಮನಿಗೆ ಭಯಪಡಬೇಕಾದುದಿಲ್ಲ, ಅವರು ಪರಮೇಶ್ವರನ ಗೃಹಕ್ಕೆ ಅತಿಥಿಗಳಾಗುವರು, ನಾಲ್ಕನೆಯ ಅಧ್ಯಾಯವು ಮುಗಿದುದು,<noinclude></noinclude> sja67towmcfyzj741q89bu2qpg7nkfe 317150 317141 2026-05-05T07:53:44Z Shreelatha.Halemane 7642 /* Validated */ 317150 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಅದ್ಭುತ ರಾಮಯಣ}}{{Right|೧೫}} ಜನಿಸಲಿ. ಎಲೆ ಚಕ್ರವೇ ಮುನಿಶಾಪವು ಅನ್ಯಥಾ ಆಗತಕ್ಕುದಲ್ಲ, ಹೋಗು ಮುನಿಶಾಪದಿಂದ ಬಂದ ತಮೋರಾಶಿಯೆ, ನಾನು ರಾಮನಾದಾಗ ನೀನು ನನ್ನಲ್ಲಿಗೆ ಬಾ, ಈಗ ರಾಜನನ್ನು ಬಿಟ್ಟು ತೊಲಗು ! ಎಲೈ ಮುನಿಗಳೇ ನಿಮ್ಮನ್ನೂ ಬಿಟ್ಟು ಹೋಗಲಿ, ಎಂದು ಹೇಳಿದನು. ಹೀಗೆ ಹೇಳುತ್ತಲೇ ಆ ತಮಸ್ಸು ನಾಶವಾಯಿತು. ಭಕ್ತರಕ್ಷಣನಾದ ನಾರಾಯಣನ ಆತ್ಮಾರ್ಥವಾದ ಚಕ್ರವು ಮೊದಲಿದ್ದಂತೆಯೇ ಇದ್ದಿತು. ಮುನಿಶ್ರೇಷ್ಟರು ಭಯವನ್ನು ಕಳೆದುಕೊಂಡು ಗೋವಿಂದನಿಗೆ ವಂದನೆಯನ್ನು ಗೈದು ಶೋಕದಿಂದ ತೃಪ್ತರಾಗಿ ಹೊರಟುಹೋಗುತ್ತ ಒಬ್ಬರಿಗೊಬ್ಬರು ಇನ್ನುಮೇಲೆ ನಾವು ಕನ್ಯಾಪರಿಗ್ರಹವನ್ನೆಂದಿಗೂ ಮಾಡಬಾರದು, ಎಂದು ಪ್ರತಿಜ್ಞೆ ಮಾಡಿಕೊಂಡು ಧ್ಯಾನಪರರಾಗಿ ಪೂರ್ವದಂತೆ ನಿಯಮದಲ್ಲಿದ್ದರು. ಆ ಅಂಬರೀಷರಾಜನು ಭೂಮಿಯನ್ನು ಪಾಲಿಸಿ ನೃತ್ಯ ಜ್ಞಾತಿಗಳೊಡನೆ ವಿಷ್ಣುಲೋಕದಲ್ಲಿ ವಾಸವಾಗಿದ್ದನು, ಅಂಬರೀಷನಿಗೂ ಆ ದೇವಮುನಿ ಗಳಿಬ್ಬರಿಗೂ ಗೌರವವುಂಟಾಗಲು ರಾಮನು ದಶರಥಪುತ್ರನಾಗಿ ಜನಿಸಿ ತಮಸ್ಸಿನಿಂದ ಲುಪ್ತವಾದ ಬುದ್ಧಿಯುಳ್ಳವನಾದನು. ಒಮ್ಮೊಮ್ಮೆ ಕಾರ್ಯವಶದಿಂದ ಆತ್ಮಸ್ಮೃತಿಯೂ ಉಂಟಾಗುತ್ತಿತ್ತು. ಮಹಾಬಾಹುವಾದ ಶ್ರೀರಾಮನು ಪರಿಪೂರ್ಣಕಾಮನಾದರೂ ಅಪೂರ್ಣ ಕಾಮನಂತೆ ನಟಿಸುತ್ತಿದ್ದನು. ಪ್ರಭುಗಳ ಈ ವರ್ತನವು ಭಕ್ತಾನುಗ್ರಹಾರ್ಥವಲ್ಲದೆ ಬೇರೆಯಲ್ಲ. ಮಾಯೆಯನ್ನು ಮಾಡಿದುದರಿಂದ ಪರಮೇಶ್ವರನು ಮನುಷ್ಯ ಜನ್ಮವನ್ನೆತ್ತಬೇಕಾಯಿತು. ಆದಕಾರಣ ವಿದ್ವಾಂಸರು ರೋಷವನ್ನು ತಿಳಿದು ಮಾಯೆಯನ್ನು ಮಾಡಬಾರದು, ಎಲೈ ಮುನಿಯೇ | ಈ ರೀತಿಯಾಗಿ ರಾಮನ ಜನ್ಮಕ್ಕೆ ಕಾರಣವನ್ನು ಅಂಬರೀಷನ ಮಹಾತ್ಮೆಯನ್ನೂ ಹರಿಯ ಮಾಯೆಯನ್ನೂ ನಿನಗೆ ತಿಳಿಸಿರುವೆನು. ಆರಾದರೂ ಈ ಹರಿಯ ಮಾಯಾವಿತ್ವವನ್ನು ಕೇಳಿದರೂ ಸರಿಯೇ ಓದಿದರೂ ಸರಿಯೇ ಅವರು ಮಾಯಾರಹಿತರಾಗಿ ವಿಷ್ಣುಲೋಕವನ್ನೈದುವರು. ಅಲ್ಲದೆ ರಾಮನ ಜನ್ಮವನ್ನು ಯಾರು ಭಕ್ತಿಯಿಂದ ಕೇಳುತ್ತಾರೋ ಅಥವಾ ಪಠಿಸುತ್ತಾರೋ ಅವರೆಂದಿಗೂ ಯಮನಿಗೆ ಭಯಪಡಬೇಕಾದುದಿಲ್ಲ.ಅವರು ಪರಮೇಶ್ವರನ ಗೃಹಕ್ಕೆ ಅತಿಥಿಗಳಾಗುವರು. {{center|ನಾಲ್ಕನೆಯ ಅಧ್ಯಾಯವು ಮುಗಿದುದು,}}<noinclude></noinclude> 66t75500ds2ra1h62jrimlpd9vkudl4 ಪುಟ:ಅದ್ಭುತ ರಾಮಾಯಣ.djvu/೨೪ 104 40961 317142 103179 2026-05-05T06:58:08Z Shreesha Sharma 7840 /* Proofread */ 317142 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಅದ್ಭುತ ರಾಮಾಯಣ}}{{Right|೧೬}} ಸತಿಯೊಡನೆ ಕೂಡಿ ಗಾನಹಿಂದಭಿನotಸುತ್ತ ಆಸ್ಟಿಯೇ ವಾಸವಾಗಿರು ತಿದ್ದನು. ಕಶಸ್ಸತಿಯಲ್ಲಿ ಜನಿಸಿದ ಐವತ್ತು ಮಂದಿ ಬ್ರಾಹ್ಮಣರು ಹರಿ ನಕ್ಕೋಸ್ಕರ ಬಂದು ಪೂಜ್ಯನಾದ ಕೌಕಸಿಗೆ ಸಹಾಯಕರಾಗಿ : ಜೀ ಕಾದ ಕೆಲಸಗಳ ಮಾಕೊದು ಗಾನವ್ಯಾ ತತ್ವವನ್ನು ತಿಳಿದು ಗಾನವನ್ನು ಲಾಲಿಸುತ್ತ ಸು!.ವಾಗಿ ಅಲ್ಲಿಯೇ ಇರುತ್ತಿದ್ದ.. ಆಗ ಆ ಕೌಶಿಕನ ಗಾನವು ಜಗತ್ಯಾತವಾಗುತ್ತ ಬಂದಿತ.. ಕ೧ ಸೀತದ ರಾಜನು ಆ ವರ್ತಮಾನವನ್ನು ಕೇಳಿ ವಿಸ್ತು ಸ್ಥಳಕ್ಕೆ ಬಂದು-"ಎಳ್ಳಿ ಕೆ? ಶಿಕನೇ : ಈ ಕಿಸ್ಮತ್‌೧ಗಳೊಡನೆ ಕೂಡಿ - ನನ್ನ ಎಷಯವಾಗಿ ಗಾನಮಾಡು ? ಕುಶಸ್ಟಲ ಸಿವಾಗದ ಈ ವಿಪ್ರರೆಲ್ಲರೂ ಕೇ ?” ಎಂದು ಕೌಶಿಕಗೆ ಹೇಳ'ದನು. ಅದನ್ನು ಕೇಳಿ ಕೌಶಿಕನು ತೊರೆ ಯನ್ನು ಮೃದುವಾದ ಮಾತಿನಿಂದ ಸಂತೈಸುತ್ತ ಮಹಾರಾಜನ : ನನ ತುದಿನಾಲಿಗೆಯಲ್ಲಿ ಸದ್ಯದಾನೇಣಿಯು ಇರುವಲ್ಲ, ಹರಿಯನ್ನು ನಾ ಇಂದ್ರನೇ ಮುಂತಾದ ಯಾವ ದೇವತೆಗಳ - ಸ್ತುತಿಸುವುದ ಇಲ್ಲ. ಮಾತಾಡಿಸುವುದೂ ಇಲ್ಲವೆಂದು ಹೇಳಿದ. ಹೀಗೆ ಕೌಶಿಕ ಗುರುವು ಹೇಳಲು ರಾಜನು ಅವನ ಕಿಸ್ಮಹತ ರಕ್ಕೆ ಹೋಗಿ ನನ್ನನಿಸದವಾಗಿ) ನನಾಡಿ ಎಂದು ಕೇಳಕೊಂರ್ಡ ಅವರ ಶಿಷ್ಯರಾ ವಸ-ಗೌತಮ-ಅರುಣಿ-ಸಾರಸ್ವತ-ತ್ಯ ತಿಕವಾದ ಚಿತ್ರಮಾಲಾ ಇವರೂ ಆ ಮಾತನ್ನು ಕೇy ಕೌಶಿಕನ ಹೇಳಿದಂತೆಯೇ ಎಲೈ ಅರಸೇ : ನನ್ನ ಕಿವಿಗೆ ಹರಿಾನವನ್ನು'ದು ಮಾನ rಾನ ನ್ನು ಕೇಳಲೊಲ್ಲವು. ಆದುದರಿಂದ ನಾವು ಸಿನ್ನ ಕೀರ್ತಿಯನ್ನು ಕೇಳುವ ರೂ ಅಲ್ಲ, ಹೊಗಳವರೂ ಅಲ್ಲವೆಂದವಸಿಗೆ ಉತ್ತರವರು, ಆ ನಾ ತನ್ನ ಕೇಳಿ ರಾಯಣ, ಕೋಪವನ್ನು ತಾ...' ತಸ್ಯ.೦ದೆ ಬ೦ದ ಸೇವಕರಿಗೆ - ಎಲ್ಯ ಸೀವ ಇನ್ನ ಒಸಯವಾಗಿ ಸ್ವಲ್ಪ rಾನವಾ ? ಈ ಬ್ರಾಹ್ಮಣರು ಹೇಗೆ ಕೇಳುವ ನೋಡೋಣ' ಲಾಜ್‌ಪಿ ಸಲ: ಆ ನೃತ್ಯರು ರಾಯರ ಮಾತನ್ನು ಕೇಳಿ ಆ ಜನಗಳ ಸುತ್ತಲೂ ಜನ ವಿಷಯವಾಗಿ ಗಾನಮಾಡತೊಡಗಿದರು. ಆ ಬ್ರಾಹ್ಮಣರೆಲ್ಲರೂ ತನ್ನ ಕಿವಿಗಳನ್ನು ಮುಚ್ಚಿಕೊಂಡು ನನಗೆ ದುಃಖಿಸುತ್ತ ಕಾಸ್ಮ<noinclude></noinclude> bm939594lgzn1c35ykyhapolt88rxcv 317151 317142 2026-05-05T08:09:23Z Shreelatha.Halemane 7642 /* Validated */ 317151 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಅದ್ಭುತ ರಾಮಾಯಣ}}{{Right|೧೬}} ಸತಿಯೊಡನೆ ಕೂಡಿ ಗಾನದಿಂದಭಿನಯಿಸುತ್ತ ಅಲ್ಲಿಯೇ ವಾಸವಾಗಿರುತ್ತಿದ್ದನು. ಕುಶಸ್ಥಲಿಯಲ್ಲಿ ಜನಿಸಿದ ಐವತ್ತು ಮಂದಿ ಬ್ರಾಹ್ಮಣರು ಹರಿ ಗಾನಕ್ಕೋಸ್ಕರ ಬಂದು ಪೂಜ್ಯನಾದ ಕೌಶಿಕನಿಗೆ ಸಹಾಯಕರಾಗಿ ಬೇಕಾದ ಕೆಲಸಗಳನ್ನು ಮಾಡಿಕೊಡುತ್ತ ಗಾನವಿಧ್ಯಾ ತತ್ವವನ್ನು ತಿಳಿದು ಗಾನವನ್ನು ಲಾಲಿಸುತ್ತ ಸುಖವಾಗಿ ಅಲ್ಲಿಯೇ ಇರುತ್ತಿದ್ದರು. ಆಗ ಆ ಕೌಶಿಕನ ಗಾನವು ಜಗದ್ವಿಖ್ಯಾವಾಗುತ್ತ ಬಂದಿತು. ಕಳಿಂಗ ದೇಶದ ರಾಜನು ಆ ವರ್ತಮಾನವನ್ನು ಕೇಳಿ ವಿಷ್ಣು ಸ್ಥಳಕ್ಕೆ ಬಂದು-"ಎಲೈ ಕೌಶಿಕನೇ ಈ ಶಿಷ್ಯಗಣಗಳೊಡನೆ ಕೂಡಿ - ನನ್ನ ವಿಷಯವಾಗಿ ಗಾನಮಾಡು ? ಕುಶಸ್ಥಲ ನಿವಾಸಿಗಳಾದ ಈ ವಿಪ್ರರೆಲ್ಲರೂ ಕೇಳಲಿ ?” ಎಂದು ಕೌಶಿಕನಿಗೆ ಹೇಳಿದನು. ಅದನ್ನು ಕೇಳಿ ಕೌಶಿಕನು ದೊರೆಯನ್ನು ಮೃದುವಾದ ಮಾತಿನಿಂದ ಸಂತೈಸುತ್ತ ಮಹಾರಾಜನ ನನ ತುದಿನಾಲಿಗೆಯಲ್ಲಿ ಸರ್ವದಾವಾಣಿಯು ಇರುವುದಿಲ್ಲ, ಹರಿಯನ್ನುವಿನಾ ಇಂದ್ರನೇ ಮುಂತಾದ ಯಾವ ದೇವತೆಗಳನ್ನೂ - ಸ್ತುತಿಸುವುದೂ ಇಲ್ಲ. ಮಾತಾಡಿಸುವುದೂ ಇಲ್ಲವೆಂದು ಹೇಳಿದನು. ಹೀಗೆ ಕೌಶಿಕ ಗುರುವು ಹೇಳಲು ರಾಜನು ಅವನ ಶಿಷ್ಯರಹತರಕ್ಕೆ ಹೋಗಿ ನನ್ನ ವಿಷ್ಯಯವಾಗಿ ಗಾನಮಾಡಿರಿ ಎಂದು ಕೇಳಿಕೊಂಡನು. ಅವನ ಶಿಷ್ಯರಾದ ವಸಿಷ್ಟ-ಗೌತಮ-ಅರುಣಿ-ಸಾರಸ್ವತ-ವೈಶ್ಯ ಶಿಶುವಾದ ಚಿತ್ರಮಾಲಾ ಇವರೂ ಆ ಮಾತನ್ನು ಕೇಳಿ ಕೌಶಿಕನು ಹೇಳಿದಂತೆಯೇ ಎಲೈ ಅರಸೇ : ನಮ್ಮ ಕಿವಿಗಳು ಹರಿನಾಮವನ್ನುಳಿದು ಮತ್ತಾವ ಗಾನವನ್ನೂ ಕೇಳಲೊಲ್ಲವು. ಆದುದರಿಂದ ನಾವು ನಿನ್ನ ಕೀರ್ತಿಯನ್ನು ಕೇಳುವರೂ ಅಲ್ಲ, ಹೊಗಳವರೂ ಅಲ್ಲವೆಂದವನಿಗೆ ಉತ್ತರವನ್ನಿತ್ತರು. ಆ ಮಾತನ್ನ ಕೇಳಿ ರಾಯನು, ಕೋಪವನ್ನು ತಾಳಿ...' ತನ್ನ ಮುಂದೆ ಬ೦ದ ಸೇವಕರಿಗೆ - ಎಲೈ ನೀವು ನನ್ನ ವಿಷಯವಾಗಿ ಸ್ವಲ್ಪ ಗಾನಮಾಡಿ ? ಈ ಬ್ರಾಹ್ಮಣರು ಹೇಗೆ ಕೇಳುವುದಿಲ್ಲವೋ ನೋಡೋಣ' ಎಂದಾಜ್ನಾಪಿಸಲು ಆ ಭ್ರುತ್ಯರು ರಾಯರ ಮಾತನ್ನು ಕೇಳಿ ಆ ಜನಗಳ ಸುತ್ತಲೂ ಜನ ವಿಷಯವಾಗಿ ಗಾನಮಾಡತೊಡಗಿದರು. ಆ ಬ್ರಾಹ್ಮಣರೆಲ್ಲರೂ ತನ್ನ ಕಿವಿಗಳನ್ನು ಮುಚ್ಚಿಕೊಂಡು ಗಾನವೃತ್ತಿಗೆ ದುಃಖಿಸುತ್ತ ಕಾಸ<noinclude></noinclude> m5tc9lmdxwve3qgck5d89evnm9liuev ಪುಟ:ಅದ್ಭುತ ರಾಮಾಯಣ.djvu/೨೫ 104 40962 317143 103180 2026-05-05T06:59:46Z Shreesha Sharma 7840 /* Proofread */ 317143 proofread-page text/x-wiki <noinclude><pagequality level="3" user="Shreesha Sharma" /></noinclude>+ ಅದ್ಭುತ ರಾಮಾ ಸತಿಯೊಡನ ಕೂ ಾನದ ಸುತ್ತ ಅಲ್ಲ ವಾಸವಾಗಿದೆ. ತಿದ್ದನು. ಕುಶಸ್ಥತಿಯಲ್ಲಿ ಜನಿಸಿದ ಐವತ್ತು ಮಲ ಬ್ರಾಹ್ಮಣರು ಹು ಗಾನಕ್ಕೋಸ್ಕರ ಬಂದ ಪೂಜ್ಯನಾದ ಕೌಕರಿಗೆ ಸವಾದಕರಾ: ದೇ ಕಾದ ಕೆಲಸಗಳನ್ನು ಮಾಡಿ ಕೊಡುತ್ತ ನ ತತ್ವವನ್ನು ತಿಳಿದ ಗಾನವನ್ನು ಲಾಲಿಸುತ್ತ ಸ.ವಾಗಿ ಅಲ್ಲಿಯೇ ಇರುತ್ತಿದ್ದ ಕೌಶಿಕನ ಗಾನವ ಜಖ್ಯಾತವಾಗುತ್ತ ಬಂದಿತ.. ರಾಜನು ಆ ವರ್ತಮಾನವನ್ನು ಕೇಳಿ ನಿ ಕನೇ ! ಈ ನಮಾಡು : ಕುಶ ಬಂದು 8 UR ಈ ದೇಶದ ಕೌ ಗಡನ ಕ: ಸೀನ. ನನ್ನ ವಿಷಯವಾ ವಾಸಿಗ ದ ಈ ಏಲ್ಲರೂ ಕೇಳ " ಎಂದು ಕೌಶಿಕನಿಗೆ ಹೇಳದನು. ಅದನ್ನು ಕೇಳ ಕೌಂಕ ದೊರೆ ಯನ್ನು ಮೃದುವಾದ ಮಾತಿಸಿಂದ ಸಂತೈಸುತ್ತ ಮಹಾರಾಜನ ! ನನ ತನಾರಿಗೆಯಲ್ಲಿ ಸತ್ವವಾದು ಇರುವದಿಲ್ಲ, ಹರಿದ ನಿನಾ ಇಂದ್ರನ ಮುಂತಾದ ಯಾವ ದೇವತೆಗಳ ನಾನೂ ಸ್ವತಿಸುವುದೂ ಇಲ್ಲ. ಮಾತನಾಡಿಸುವುದೂ ಇಲ್ಲವೆಂದು ದೇ ದನ ನಸ ಗೆ ಕೌಟಕ ರುವು ಹೇಳಲು. ರಾಜನ ಅವನ ಶಿರಹತ ರಕ್ಕೆ ಹೋ ನನ್ನವಿಸಿದ ನಮಾಡಿ ಎಂದು ಕೇಳಿಕೊಂಡನು. ಹೋಗೆ ಅವನ ರಾದ ಗೌತಮ-ರ-ಸಾರಸ್ವತ, ಕುವಾದ ಚಿತ್ರಮಾಲಾ ಇವರೂ ಆ ಮಾತನ್ನು ಕೇ– ಕೌಶಿಕ ಹೇಳಿದಂತೆ ಎ ಅಸೇ ! ನಮ್ಮ ಕಿವಿಗಳ ಹುಗಾನವನ್ನು ಮತ್ತಾವ ನವ ನ್ನು ಕೇಳಲೊಲ್ಲವು. ಆದುದರಿಂದ ನಾವು ನಿನ್ನ ಕೀರ್ತಿಯನ್ನು ಕೇಳುವ ರೂ ಅಲ್ಲ, ದೊಗಳುವರೂ ಅಲ್ಲವೆಂದವನಿಗೆ ಉತ್ತರನರ. ಆ ನಾ ತನ್ನ ಕೆಲ ರಾಯನು. ಕೋಪವನ್ನು ರಾಜ್ಯ ತನ್ನ w ಬದ ಸೇವಕರಿಗೆ – ಎ ನೀನ ನನ್ನ ನಿಸದವಾ ಸ್ವಲ್ಪ ನ ? ಈ ಬ್ರಾಹ್ಮಣರು ದೇಗೆ ಕೇಳ ನಾ ನೋಡೋ.” ಎಂದಾಜ್ಞಾನಿ ಸಲ, ಆ ನೃತ್ಯರು ರಾಜನ ಮಾತನ್ನು ಕೇ! ಆ ಜನಗಳ ಸುತ್ತಲೂ ಈ ಜನ ವಿನಯವಾಗಿ ಗಾನಮಾಡತೊಡಗಿದರು. ಆ ರೆಲ್ಲರೂ ತನ್ನು ಕಿಸಿಗಳನ್ನು ಮುಚ್ಚಿಕೊಂಡು ಇವತ್ತಿಗೆ ದಸುತ್ತ ಕಾಸ<noinclude></noinclude> 1qffywfw9fyld8aunu3nsslp3cj0fwd ಪುಟ:ಅದ್ಭುತ ರಾಮಾಯಣ.djvu/೨೬ 104 40963 317199 103181 2026-05-05T10:42:13Z Shreelatha.Halemane 7642 /* Proofread */ 317199 proofread-page text/x-wiki <noinclude><pagequality level="3" user="Shreelatha.Halemane" /></noinclude> {{Left|೧೮}}{{center|ವಿದ್ಯಾನಂದ}} ಗಳಿಂದಲೂ ಶಂಕುಗಳಿಂದಲೂ ಪ್ರತಿಯೊಬ್ಬರೂ ತಮ್ಮ ಕಿವಿಗಳನ್ನೊಡೆದು ಕೊಂಡರು. ಕೌಶಿಕ ಮೊದಲಾದವರು ಆ ರಾಜನ ಮನೋವೃತ್ತಿಯನ್ನರಿತುಎಲೈ ಈ ರಾಜನು ತನ್ನ ಗಾನದವಿಸಯವಾಗಿ ಏಕೆ ನಿರ್ಬಂಧ ಮಾಡುವನು. ಇದಕ್ಕಾಗಿ ನಾವೆಲ್ಲರೂ ನಾಲಿಗೆಯನ್ನು ಕೊಯ್ದುಕೊಳ್ಳುವ ಎಂದು ನಿಶ್ಚಯಿಸಿ ಹಾಗೆಯೇ ಮಾಡಿದರು. ತರುವಾಯ ರಾಜನು ಕ್ರುದ್ಧನಾಗಿ ಅವರ ವಿಪ್ತಾದಿಗಳನ್ನು ತಾನು ಸೇರಿಸಿಕೊಂಡು, ನಮ್ಮ ದೇಶದಲ್ಲಿ ನೀವಿರಲೇಕೂಡದೆಂದು ಅವರನ್ನು ಹೊರಡಿಸಿದನು. ಅವರು ಆ ದೇಶವನ್ನು ಬಿಟ್ಟು ಉತ್ತರ ದಿಕ್ಕಿಗೆ ಹೋಗಿ ಕೆಲವು ಕಾಲವಿದ್ದು ಬಳಿಕ ಕಾಲವಶರಾದರು. ಯಮನು, ತನ್ನ ರಾಜಧಾನಿಗೆ ಅವರು ಬಂದುದನ್ನು ನೋಡಿ, ಏನು ಮಾಡಲಿ ಎಂದು ಬಹಳವಾಗಿ ಚಿಂತಿಸ ಹತ್ತಿದನು.ಆಗ ಬ್ರಹ್ಮನು ಬಂದು ವಿಸ್ಮಿತನಾಗಿ ಆ ದಿಕ್ಪಾಲಕರೊಡನೆ ಎಲೈ ದೇವತೆಗಳಿರಾ! ಕೌಶಿಕಾದ ದ್ವಿಜರು ವಾಸುದೇವ ಪರಾಯಣರಾಗಿ ಗಾನ ಯೋಗದಿಂದ ಹರಿಯನ್ನು ಸ್ತುತಿಸುತ್ತ ಕಾಲವನ್ನು ಕಳೆಯುತ್ತಿದ್ದರು.ನೀವು ದೇವತ್ವವನ್ನು ಬಯಸುವರಾದರೆ ಅವರನ್ನು ಮನ್ನಣೆಯ ಮೂಲಕ ಬರಮಾಡಿ ಕೊಳ್ಳಿರಿ ? ಎಂದುಹೇಳಿದನು. ಅದನ್ನು ಕೇಳಿ ಲೋಕ ಪಾಲಕರು ಕೌತುಕಾವಿಷ್ಟರಾಗಿ “ಹೇ ಕೌಶಿಕನೆ! ಮಾಲತಿಯೆ! ಪದ್ಮಾಕ್ಷನ ಎಂದು ಕೂಗುತ್ತ ಬಂದು ಅವರನ್ನಂತರಿಕ್ಷ ಮಾರ್ಗದಲ್ಲಿಯೇ ? ಕರೆದು ಕೊಂಡು ಹೋಗುತ್ತ ಕ್ಷಣಮಾತ್ರದಲ್ಲಿ ಬ್ರಹ್ಮಲೋಕವನ್ನು ಸೇರಿದರು. ಆ ಬ್ರಹ್ಮಲೋಕದಲ್ಲಿ ಪಿತಾಮಹನು, ಕೌಶಿಕಾದಿಗಳು ಬಂದುದನ್ನು ನೋಡಿ, ಅಭ್ಯುತ್ಥಾನದಿಂದ ಸನ್ಮಾನಮಾಡಿ ಸ್ವಾಗತ ಪೂರ್ವಕವಾಗಿ ಅವರನ್ನು ಪೂಜಿಸಿದನು. ಆಗ ಅಲ್ಲಿ ಬಹಳ ಕೋಲಾಹಲವುಂಟಾಯಿತು. ಪೂಜ್ಯ ನಾದ ಹಿರಣ್ಯಗರ್ಭನು ಆ ದೇವತೆಗಳನ್ನು ನಿವಾರಿಸಿ ಕೌಶಿಕ ಮೊದಲಾದವರನ್ನು ತನ್ನ ಸಂಗಡ ಕರೆದುಕೊಂಡು ಹರಿಯನ್ನು ನೆನಯುತ್ತ ಹೊರಟು ವಿಷ್ಣುಲೋಕವನ್ನು ಸೇರಿಸಿದನು. ಅಲ್ಲಿ ದೇವನಾದ ನಾರಾಯಣ ನು-ಜ್ಞಾನಯೋಗದಿಂದ ವಿಷ್ಣುಭಕ್ತಿ ಪರಾಯಣರಾಗಿರುವ ಶ್ವೇತ ದ್ವೀಪ ಸಿವಾಸಿಗಳಿಂದಲೂ, ನಾರಾಯಣನಿಗೆ ಸಮಾನರಾಗಿ ಚತುರ್ಬಾಹುಗಳನ್ನು ಹೊಂದಿ ನಿಮ್ಮ ಚಿಹ್ನೆಗಳಿಂದೆಸೆಯುವ ನಿಷ್ಕಲರಾದ ಎಷ್ಟ<noinclude></noinclude> 9v7ihpbs8v2vusjfdkyshjjs3hhj511 317202 317199 2026-05-05T11:15:37Z Shreesha Sharma 7840 /* Validated */ 317202 proofread-page text/x-wiki <noinclude><pagequality level="4" user="Shreesha Sharma" /></noinclude> {{Left|೧೮}}{{center|ವಿದ್ಯಾನಂದ}} ಗಳಿಂದಲೂ ಶಂಕುಗಳಿಂದಲೂ ಪ್ರತಿಯೊಬ್ಬರೂ ತಮ್ಮ ಕಿವಿಗಳನ್ನೊಡೆದು ಕೊಂಡರು. ಕೌಶಿಕ ಮೊದಲಾದವರು ಆ ರಾಜನ ಮನೋವೃತ್ತಿಯನ್ನರಿತುಎಲೈ ಈ ರಾಜನು ತನ್ನ ಗಾನದವಿಸಯವಾಗಿ ಏಕೆ ನಿರ್ಬಂಧ ಮಾಡುವನು. ಇದಕ್ಕಾಗಿ ನಾವೆಲ್ಲರೂ ನಾಲಿಗೆಯನ್ನು ಕೊಯ್ದುಕೊಳ್ಳುವ ಎಂದು ನಿಶ್ಚಯಿಸಿ ಹಾಗೆಯೇ ಮಾಡಿದರು. ತರುವಾಯ ರಾಜನು ಕ್ರುದ್ಧನಾಗಿ ಅವರ ವಿಪ್ತಾದಿಗಳನ್ನು ತಾನು ಸೇರಿಸಿಕೊಂಡು, ನಮ್ಮ ದೇಶದಲ್ಲಿ ನೀವಿರಲೇಕೂಡದೆಂದು ಅವರನ್ನು ಹೊರಡಿಸಿದನು. {{gap}}ಅವರು ಆ ದೇಶವನ್ನು ಬಿಟ್ಟು ಉತ್ತರ ದಿಕ್ಕಿಗೆ ಹೋಗಿ ಕೆಲವು ಕಾಲವಿದ್ದು ಬಳಿಕ ಕಾಲವಶರಾದರು. ಯಮನು, ತನ್ನ ರಾಜಧಾನಿಗೆ ಅವರು ಬಂದುದನ್ನು ನೋಡಿ, ಏನು ಮಾಡಲಿ ಎಂದು ಬಹಳವಾಗಿ ಚಿಂತಿಸ ಹತ್ತಿದನು.ಆಗ ಬ್ರಹ್ಮನು ಬಂದು ವಿಸ್ಮಿತನಾಗಿ ಆ ದಿಕ್ಪಾಲಕರೊಡನೆ ಎಲೈ ದೇವತೆಗಳಿರಾ! ಕೌಶಿಕಾದ ದ್ವಿಜರು ವಾಸುದೇವ ಪರಾಯಣರಾಗಿ ಗಾನ ಯೋಗದಿಂದ ಹರಿಯನ್ನು ಸ್ತುತಿಸುತ್ತ ಕಾಲವನ್ನು ಕಳೆಯುತ್ತಿದ್ದರು.ನೀವು ದೇವತ್ವವನ್ನು ಬಯಸುವರಾದರೆ ಅವರನ್ನು ಮನ್ನಣೆಯ ಮೂಲಕ ಬರಮಾಡಿ ಕೊಳ್ಳಿರಿ ? ಎಂದುಹೇಳಿದನು. ಅದನ್ನು ಕೇಳಿ ಲೋಕ ಪಾಲಕರು ಕೌತುಕಾವಿಷ್ಟರಾಗಿ “ಹೇ ಕೌಶಿಕನೆ! ಮಾಲತಿಯೆ! ಪದ್ಮಾಕ್ಷನ ಎಂದು ಕೂಗುತ್ತ ಬಂದು ಅವರನ್ನಂತರಿಕ್ಷ ಮಾರ್ಗದಲ್ಲಿಯೇ ? ಕರೆದು ಕೊಂಡು ಹೋಗುತ್ತ ಕ್ಷಣಮಾತ್ರದಲ್ಲಿ ಬ್ರಹ್ಮಲೋಕವನ್ನು ಸೇರಿದರು. ಆ ಬ್ರಹ್ಮಲೋಕದಲ್ಲಿ ಪಿತಾಮಹನು, ಕೌಶಿಕಾದಿಗಳು ಬಂದುದನ್ನು ನೋಡಿ, ಅಭ್ಯುತ್ಥಾನದಿಂದ ಸನ್ಮಾನಮಾಡಿ ಸ್ವಾಗತ ಪೂರ್ವಕವಾಗಿ ಅವರನ್ನು ಪೂಜಿಸಿದನು. ಆಗ ಅಲ್ಲಿ ಬಹಳ ಕೋಲಾಹಲವುಂಟಾಯಿತು. ಪೂಜ್ಯ ನಾದ ಹಿರಣ್ಯಗರ್ಭನು ಆ ದೇವತೆಗಳನ್ನು ನಿವಾರಿಸಿ ಕೌಶಿಕ ಮೊದಲಾದವರನ್ನು ತನ್ನ ಸಂಗಡ ಕರೆದುಕೊಂಡು ಹರಿಯನ್ನು ನೆನಯುತ್ತ ಹೊರಟು ವಿಷ್ಣುಲೋಕವನ್ನು ಸೇರಿಸಿದನು. ಅಲ್ಲಿ ದೇವನಾದ ನಾರಾಯಣ ನು-ಜ್ಞಾನಯೋಗದಿಂದ ವಿಷ್ಣುಭಕ್ತಿ ಪರಾಯಣರಾಗಿರುವ ಶ್ವೇತ ದ್ವೀಪ ಸಿವಾಸಿಗಳಿಂದಲೂ, ನಾರಾಯಣನಿಗೆ ಸಮಾನರಾಗಿ ಚತುರ್ಬಾಹುಗಳನ್ನು ಹೊಂದಿ ನಿಮ್ಮ ಚಿಹ್ನೆಗಳಿಂದೆಸೆಯುವ ನಿಷ್ಕಲರಾದ ಎಷ್ಟ<noinclude></noinclude> bemsmodji8gz1jhaib61lfvgshll627 ಪುಟ:ಅದ್ಭುತ ರಾಮಾಯಣ.djvu/೨೭ 104 40964 317200 103182 2026-05-05T10:57:02Z Shreelatha.Halemane 7642 /* Proofread */ 317200 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಅದ್ಭುತ ರಾಮಾಯಣ}}{{Right|೧೯}} ತ್ತೆಂಟು ಸಾವಿರ ಮಂದಿ ಭಕ್ತರಿಂದಲೂ, ನಾರದಾದಿಗಳಿಂದಲೂ, ಸನಕಾದಿಗಳಿಂದಲೂ ಅನೇಕ ಭೂತ ನಿವಹಗಳಿಂದಲೂ ಸೇವಿಸಿಕೊಳ್ಳುತ್ತ, ಸಹಸ್ರ ದ್ವಾರದಿಂದಕೂಡಿ ಸಹಪ್ರಯೋಜನ ವಿಸ್ತಾರವಾಗಿರುವ ಮಣಿಖಚಿತವಾದ ವಿಮಾನದೊಳಗೆ ಭದ್ರತೀರದಲ್ಲಿ ಕುಳಿತುಕೊಂಡು, ಲೋಕ ಕಾರ್ಯ ಪ್ರಸಕ್ತರಾದವರಲ್ಲಿ ದೃಷ್ಟಿಯನ್ನು ಇಟ್ಟು ಕೊಂಡು ಕ೦ಗೊಳಿಸುತ್ತಿದ್ದನು. ಆಗ ಪೂಜ್ಯನಾದ ಬ್ರಹ್ಮನು ಕೌಶಿಕಾದಿಗಳಿಂದ ಕೂಡಿ ಅಲ್ಲಿಗೆ ಹೋಗಿ ಭಗವಂತನನ್ನು ವಂದಿಸಿ ಮುಂದೆ ನಿಂದು ಬಗೆಬಗೆಯಾಗಿ ಸ್ತುತಿಸಿದನು. ಪ್ರಭುವಾದ ನಾರಾಯಣನು ಅವರೆಲ್ಲರನ್ನೂ ಕ್ರಮವಾಗಿನೋಡಿ “ಎಲೈ ಕೌಶಿಕನೇ ! ಎಂದು ಕರೆಯುವ ಸಮಯಕ್ಕೆ ಸರಿಯಾಗಿ ದೊಡ್ಡದಾದ ಜಯಘೋಷವೊಂದುಂಟಾಯಿತು. ಆಗ ವಿಶ್ವಾತ್ಮನಾದ ವಿಷ್ಣುವು ಬ್ರಹ್ಮನೊಡನೆ” “” ಕೌಶಿಕನ ಹಿತದಲ್ಲಿ ನಿರತರಾಗಿದ್ದ ಕುಶಸ್ಥಲನಿವಾಸಿಗಳಾದ ವಿಪ್ರರೂ ನನ್ನ ಕೀರ್ತಿಯನ್ನು ಕೇಳುವುದರಲ್ಲಿ ಆಸಕ್ತರಾಗಿ, ಗಾನವಿದ್ಯಾ ತತ್ವವನ್ನು ತಿಳಿದು ಅನನ್ಯ ಭಕ್ತರಾಗಿದ್ದುದರಿಂದ ಅವರು ಸಾಧ್ಯರೆಂಬ ದೇವತೆಗಳಾಗುವಂತೆ ಅವರಿಗೆ ವರವನ್ನು ಕೊಟ್ವಿರುವೆನು. ಕೌಶಿಕನು ಮಾತ್ರ ನನ್ನ ಪಕ್ಕದಲ್ಲಿಯೇ ಇರಲಿ,ಎಂದು ಹೇಳಿ ಬಳಿಕ ಕೌಶಿಕನೊಡನೆ - ಎಲೈ ಮಹಾ ಪ್ರಾಜ್ನನೇ! ನೀನು ಶಿಷ್ಯರೊಡನೆ ಕೂಡಿ ದಿಗ್ಬಲನೆಂಬ ಹೆಸರಿನಿಂದ ಗಣಾಧಿಪತ್ಯವನ್ನು ಹೊಂದಿ ನಾನೆಲ್ಲಿರುವೆನೋ ನೀನು ಅಲ್ಲಿಯೇ ಇರು” ಎಂದು ಹೇಳಿದನು. ಆಮೇಲೆ ಮಾಲನನೊಡನೆ-“ಎಲೈ ಮಾಲವನೆ ನೀನು ನನ್ನ ಲೋಕದಲ್ಲಿ ಹೆಂಡತಿಯಾದ ಮಾಲತಿಯೊಡಗೂಡಿ, ದಿವ್ಯರೂಪಧರನಾಗಿ ಗಾನವನ್ನುಕೇಳುತ್ತ ನಿತ್ಯ ತೃಪ್ತನಾಗಿ, ಆಕಲ್ಪಾಂತದವರೆಗೂ ವಾಸಮಾಡುತ್ತಿರು ಎಂದೂ ಬಳಿಕ ಪದ್ಮಾಕ್ಶನೊಡನೆ, “ಎಲೈ ಪದ್ಮಾಕ್ಷನೇ! ನೀನು ಕುಬೇರನಾಗು, ಧನಗಳಿಗೆ ಒಡೆಯನಾಗಿದ್ದುಕೊಂಡು ಬೇಕಾದಷ್ಟು ಭೋಗಗಳನ್ನು ಹೊಂದು ಎಂದು ಹೇಳಿದನು. ಆಮೇಲೆ ಹರಿಯು ಬ್ರಹ್ಮನನ್ನು ಕುರಿತು-ಎಲೈ ಪಿತಾಮಹನೆ! ಕೌಶಿಕನು ಗಣಾಧಿಪನಾದನು. ಅವನನ್ನು ಗಣಗಳು ಸಂತೋಷಪಡಿಸುವರು, ಇವನು ನನ್ನ ಸಾಲೋಕ್ಯವನ್ನು ಬೇಗಹೊಂದಿದನು. ಈಬ್ರಾಹ್ಮಣರು ನನ್ನ ಭಕ್ತ<noinclude></noinclude> 28zoj2wz2x47pmbj4v8egojy7pqufrl 317203 317200 2026-05-05T11:15:50Z Shreesha Sharma 7840 /* Validated */ 317203 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಅದ್ಭುತ ರಾಮಾಯಣ}}{{Right|೧೯}} ತ್ತೆಂಟು ಸಾವಿರ ಮಂದಿ ಭಕ್ತರಿಂದಲೂ, ನಾರದಾದಿಗಳಿಂದಲೂ, ಸನಕಾದಿಗಳಿಂದಲೂ ಅನೇಕ ಭೂತ ನಿವಹಗಳಿಂದಲೂ ಸೇವಿಸಿಕೊಳ್ಳುತ್ತ, ಸಹಸ್ರ ದ್ವಾರದಿಂದಕೂಡಿ ಸಹಪ್ರಯೋಜನ ವಿಸ್ತಾರವಾಗಿರುವ ಮಣಿಖಚಿತವಾದ ವಿಮಾನದೊಳಗೆ ಭದ್ರತೀರದಲ್ಲಿ ಕುಳಿತುಕೊಂಡು, ಲೋಕ ಕಾರ್ಯ ಪ್ರಸಕ್ತರಾದವರಲ್ಲಿ ದೃಷ್ಟಿಯನ್ನು ಇಟ್ಟು ಕೊಂಡು ಕ೦ಗೊಳಿಸುತ್ತಿದ್ದನು. ಆಗ ಪೂಜ್ಯನಾದ ಬ್ರಹ್ಮನು ಕೌಶಿಕಾದಿಗಳಿಂದ ಕೂಡಿ ಅಲ್ಲಿಗೆ ಹೋಗಿ ಭಗವಂತನನ್ನು ವಂದಿಸಿ ಮುಂದೆ ನಿಂದು ಬಗೆಬಗೆಯಾಗಿ ಸ್ತುತಿಸಿದನು. ಪ್ರಭುವಾದ ನಾರಾಯಣನು ಅವರೆಲ್ಲರನ್ನೂ ಕ್ರಮವಾಗಿನೋಡಿ “ಎಲೈ ಕೌಶಿಕನೇ ! ಎಂದು ಕರೆಯುವ ಸಮಯಕ್ಕೆ ಸರಿಯಾಗಿ ದೊಡ್ಡದಾದ ಜಯಘೋಷವೊಂದುಂಟಾಯಿತು. ಆಗ ವಿಶ್ವಾತ್ಮನಾದ ವಿಷ್ಣುವು ಬ್ರಹ್ಮನೊಡನೆ” “” ಕೌಶಿಕನ ಹಿತದಲ್ಲಿ ನಿರತರಾಗಿದ್ದ ಕುಶಸ್ಥಲನಿವಾಸಿಗಳಾದ ವಿಪ್ರರೂ ನನ್ನ ಕೀರ್ತಿಯನ್ನು ಕೇಳುವುದರಲ್ಲಿ ಆಸಕ್ತರಾಗಿ, ಗಾನವಿದ್ಯಾ ತತ್ವವನ್ನು ತಿಳಿದು ಅನನ್ಯ ಭಕ್ತರಾಗಿದ್ದುದರಿಂದ ಅವರು ಸಾಧ್ಯರೆಂಬ ದೇವತೆಗಳಾಗುವಂತೆ ಅವರಿಗೆ ವರವನ್ನು ಕೊಟ್ವಿರುವೆನು. ಕೌಶಿಕನು ಮಾತ್ರ ನನ್ನ ಪಕ್ಕದಲ್ಲಿಯೇ ಇರಲಿ,ಎಂದು ಹೇಳಿ ಬಳಿಕ ಕೌಶಿಕನೊಡನೆ - ಎಲೈ ಮಹಾ ಪ್ರಾಜ್ನನೇ! ನೀನು ಶಿಷ್ಯರೊಡನೆ ಕೂಡಿ ದಿಗ್ಬಲನೆಂಬ ಹೆಸರಿನಿಂದ ಗಣಾಧಿಪತ್ಯವನ್ನು ಹೊಂದಿ ನಾನೆಲ್ಲಿರುವೆನೋ ನೀನು ಅಲ್ಲಿಯೇ ಇರು” ಎಂದು ಹೇಳಿದನು. ಆಮೇಲೆ ಮಾಲನನೊಡನೆ-“ಎಲೈ ಮಾಲವನೆ ನೀನು ನನ್ನ ಲೋಕದಲ್ಲಿ ಹೆಂಡತಿಯಾದ ಮಾಲತಿಯೊಡಗೂಡಿ, ದಿವ್ಯರೂಪಧರನಾಗಿ ಗಾನವನ್ನುಕೇಳುತ್ತ ನಿತ್ಯ ತೃಪ್ತನಾಗಿ, ಆಕಲ್ಪಾಂತದವರೆಗೂ ವಾಸಮಾಡುತ್ತಿರು ಎಂದೂ ಬಳಿಕ ಪದ್ಮಾಕ್ಶನೊಡನೆ, “ಎಲೈ ಪದ್ಮಾಕ್ಷನೇ! ನೀನು ಕುಬೇರನಾಗು, ಧನಗಳಿಗೆ ಒಡೆಯನಾಗಿದ್ದುಕೊಂಡು ಬೇಕಾದಷ್ಟು ಭೋಗಗಳನ್ನು ಹೊಂದು ಎಂದು ಹೇಳಿದನು. {{gap}}ಆಮೇಲೆ ಹರಿಯು ಬ್ರಹ್ಮನನ್ನು ಕುರಿತು-ಎಲೈ ಪಿತಾಮಹನೆ! ಕೌಶಿಕನು ಗಣಾಧಿಪನಾದನು. ಅವನನ್ನು ಗಣಗಳು ಸಂತೋಷಪಡಿಸುವರು, ಇವನು ನನ್ನ ಸಾಲೋಕ್ಯವನ್ನು ಬೇಗಹೊಂದಿದನು. ಈಬ್ರಾಹ್ಮಣರು ನನ್ನ ಭಕ್ತ<noinclude></noinclude> rfbxb58tlbr19cymeqzyzi3s6xiaw37 ಪುಟ:ಅದ್ಭುತ ರಾಮಾಯಣ.djvu/೨೮ 104 40965 317201 103183 2026-05-05T11:14:29Z Shreelatha.Halemane 7642 /* Proofread */ 317201 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೨೦}}{{center|ವಿದ್ಯಾನಂದ }} ರಾಗಿ ಒಬ್ಬರಿಗೊಬ್ಬರು ಗೋಟಗಳಿಂದ ಗೋತ್ರ ಛಿದ್ರವನ್ನು ಮುಚ್ಚಿಕೊಂಡು ನಾವು ಹರಿಯ ಕೀರ್ತನೆಯನ್ನು ವಿನಾ ಇನ್ನೊಂದನ್ನು ಕೇಳುವುದಿಲ್ಲ ಎಂದು ಹೇಳಿದುದರಿಂದ ಅವರು ಮಹಾವ್ರತವನ್ನು ಧರಿಸಿ ದೇವತ್ವವನ್ನು ಹೊಂದಿ ನನ್ನ ಸಾನ್ನಿಧ್ಯವನ್ನು ಪಡೆದರು. ಮಾಲವನೂ ಭಾರ್ಯೆಯೊಡನೆ ಕ್ಷೇತ್ರವನ್ನು ಪರಿಶುದ್ಧ ಮಾಡಿ ನಮ್ಮ ಭಕ್ತಿಯನ್ನು ತಿಳಿದು ಗಾನವನ್ನು ಕೇಳುತ್ತಿದ್ದುದರಿಂದ ಅವನೂ ಶಾಶ್ವತವಾದ ನನ್ನ ಲೋಕವನ್ನು ಹೊಂದಿದನು ಕೌಶಿಕನಿಗೆ ಅನ್ನವನ್ನಿಟ್ಟ ಪದ್ಮಾಕ್ಷನು ಧನೇಶನಾದನು ಎಂದು ತಿಳಿಸಿ ನಾನು ಅಲ್ಲಿ ಸಮಸ್ತಲೋಕ ಪೂಜಿತನಾಗಿ ಭಕ್ತರನ್ನು. ಸಲಹುತ್ತಿದ್ದನು. {{center|ಐದನೆಯ ಅಧ್ಯಾಯವು ಮುಗಿದುದು}} {{center|ಆರನೆಯ ಅಧ್ಯಾಯವು}} ಆಕ್ಷಣದಲ್ಲಿಯೇ ಕೌಶಿಕನ ಸಂತೋಷಾರ್ಥವಾಗಿ ಮಹಾ ಮಡೋತ್ಸವವೊಂದು ನಡೆಯಿತು. ಆ ಉತ್ಸವಕ್ಕೆ ವೀಣಾಗಾನವನ್ನು ತಿಳಿದಿದ್ದ ಗಾಯಕರೆಲ್ಲರೂ ಬಂದಿದ್ದರು. ಆ ವೀಣಾನಾದವನ್ನೂ ಗಾನವನ್ನೂ ಕೇಳುವ ಕೌತುಕದಿಂದ ಕೋಟಿಮಂದಿ ಚೇಟಯರೂ ಅಲ್ಲಿ ನೆರೆದಿದ್ದರು. ಆಗ ಲಕ್ಷ್ಮಿಯು ವಿಷ್ಣು ಪರಿಗ್ರಹದೊಡನೆ ಕೂಡಿ ಗಾನಮಾಡುತ್ತ ಬಂದಳು. ಅಲ್ಲಿ ಸಾವಿರಾರುಮಂದಿ ದೇವತೆಗಳು ಕೈಯಲ್ಲಿ ಬೆತ್ತವನ್ನು ಪಿಡಿದು ಗದ್ದಲ ವಿಲ್ಲದಹಾಗೆ ನಿಂತುಕೊಂಡಿದ್ದರು. ಆಮದೋತ್ಸವ ದರ್ಕನಕ್ಕಾಗಿ ಬ್ರಹ್ಮಾದಿ ದೇವತೆಗಳ ದೊಡ್ಡ ಗುಂಪುಗಳೊಂದಾಗುತ್ತಲೊಂದು ಸಂಭ್ರಮದಿಂದ ಬಂದು ಮೇಲೆ ಮೇಲೆ ಬೀಳುತ್ತಿರುವುದನ್ನು ನೋಡಿ ಚೇಟಗಳೂ ಗಣಾಧಿಪರೂ ಕೋಪವುಳ್ಳವರಾಗಿ ದೊಣ್ಣೆಗಳನ್ನು ಪಿಡಿದುಕೊಂಡು ಆ ಗುಂಪನ್ನೂ ಮುನಿಪೋತ್ತಮರನ್ನೂ ಒಳಕ್ಕೆ ಹೋಗದಹಾಗೆ ನಿವಾರಿಸುತ್ತಲೂ, ಸಮೀಪಕ್ಕೆ ಬಂದವರನ್ನು ದೂರಕ್ಕೆ ಕಳುಹಿಸುತ್ತ ಇದ್ದರು. ಹೀಗೆ ನಿವಾರಿಸುವುದನ್ನು ಕಂಡು ಅಲ್ಲಿದ್ದವರೆಲ್ಲರೂ “ ದೊರೆಗಳಾ ಇದಿರಿಗೆ ನಾನಾರು ” ಎಂದುಕೊಂಡು ಬ್ರಹ್ಮನೊಡನೆ ಕೂಡಿ ಹೊರಕ್ಕೆ<noinclude></noinclude> fv4etb5auyhfvs2sqfp6c6isngc879j 317204 317201 2026-05-05T11:16:08Z Shreesha Sharma 7840 /* Validated */ 317204 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೨೦}}{{center|ವಿದ್ಯಾನಂದ }} ರಾಗಿ ಒಬ್ಬರಿಗೊಬ್ಬರು ಗೋಟಗಳಿಂದ ಗೋತ್ರ ಛಿದ್ರವನ್ನು ಮುಚ್ಚಿಕೊಂಡು ನಾವು ಹರಿಯ ಕೀರ್ತನೆಯನ್ನು ವಿನಾ ಇನ್ನೊಂದನ್ನು ಕೇಳುವುದಿಲ್ಲ ಎಂದು ಹೇಳಿದುದರಿಂದ ಅವರು ಮಹಾವ್ರತವನ್ನು ಧರಿಸಿ ದೇವತ್ವವನ್ನು ಹೊಂದಿ ನನ್ನ ಸಾನ್ನಿಧ್ಯವನ್ನು ಪಡೆದರು. ಮಾಲವನೂ ಭಾರ್ಯೆಯೊಡನೆ ಕ್ಷೇತ್ರವನ್ನು ಪರಿಶುದ್ಧ ಮಾಡಿ ನಮ್ಮ ಭಕ್ತಿಯನ್ನು ತಿಳಿದು ಗಾನವನ್ನು ಕೇಳುತ್ತಿದ್ದುದರಿಂದ ಅವನೂ ಶಾಶ್ವತವಾದ ನನ್ನ ಲೋಕವನ್ನು ಹೊಂದಿದನು ಕೌಶಿಕನಿಗೆ ಅನ್ನವನ್ನಿಟ್ಟ ಪದ್ಮಾಕ್ಷನು ಧನೇಶನಾದನು ಎಂದು ತಿಳಿಸಿ ನಾನು ಅಲ್ಲಿ ಸಮಸ್ತಲೋಕ ಪೂಜಿತನಾಗಿ ಭಕ್ತರನ್ನು. ಸಲಹುತ್ತಿದ್ದನು. {{center|ಐದನೆಯ ಅಧ್ಯಾಯವು ಮುಗಿದುದು}} {{center|ಆರನೆಯ ಅಧ್ಯಾಯವು}} {{gap}}ಆಕ್ಷಣದಲ್ಲಿಯೇ ಕೌಶಿಕನ ಸಂತೋಷಾರ್ಥವಾಗಿ ಮಹಾ ಮಡೋತ್ಸವವೊಂದು ನಡೆಯಿತು. ಆ ಉತ್ಸವಕ್ಕೆ ವೀಣಾಗಾನವನ್ನು ತಿಳಿದಿದ್ದ ಗಾಯಕರೆಲ್ಲರೂ ಬಂದಿದ್ದರು. ಆ ವೀಣಾನಾದವನ್ನೂ ಗಾನವನ್ನೂ ಕೇಳುವ ಕೌತುಕದಿಂದ ಕೋಟಿಮಂದಿ ಚೇಟಯರೂ ಅಲ್ಲಿ ನೆರೆದಿದ್ದರು. ಆಗ ಲಕ್ಷ್ಮಿಯು ವಿಷ್ಣು ಪರಿಗ್ರಹದೊಡನೆ ಕೂಡಿ ಗಾನಮಾಡುತ್ತ ಬಂದಳು. ಅಲ್ಲಿ ಸಾವಿರಾರುಮಂದಿ ದೇವತೆಗಳು ಕೈಯಲ್ಲಿ ಬೆತ್ತವನ್ನು ಪಿಡಿದು ಗದ್ದಲ ವಿಲ್ಲದಹಾಗೆ ನಿಂತುಕೊಂಡಿದ್ದರು. ಆಮದೋತ್ಸವ ದರ್ಕನಕ್ಕಾಗಿ ಬ್ರಹ್ಮಾದಿ ದೇವತೆಗಳ ದೊಡ್ಡ ಗುಂಪುಗಳೊಂದಾಗುತ್ತಲೊಂದು ಸಂಭ್ರಮದಿಂದ ಬಂದು ಮೇಲೆ ಮೇಲೆ ಬೀಳುತ್ತಿರುವುದನ್ನು ನೋಡಿ ಚೇಟಗಳೂ ಗಣಾಧಿಪರೂ ಕೋಪವುಳ್ಳವರಾಗಿ ದೊಣ್ಣೆಗಳನ್ನು ಪಿಡಿದುಕೊಂಡು ಆ ಗುಂಪನ್ನೂ ಮುನಿಪೋತ್ತಮರನ್ನೂ ಒಳಕ್ಕೆ ಹೋಗದಹಾಗೆ ನಿವಾರಿಸುತ್ತಲೂ, ಸಮೀಪಕ್ಕೆ ಬಂದವರನ್ನು ದೂರಕ್ಕೆ ಕಳುಹಿಸುತ್ತ ಇದ್ದರು. ಹೀಗೆ ನಿವಾರಿಸುವುದನ್ನು ಕಂಡು ಅಲ್ಲಿದ್ದವರೆಲ್ಲರೂ “ ದೊರೆಗಳಾ ಇದಿರಿಗೆ ನಾನಾರು ” ಎಂದುಕೊಂಡು ಬ್ರಹ್ಮನೊಡನೆ ಕೂಡಿ ಹೊರಕ್ಕೆ<noinclude></noinclude> ddmayi617zi0oo410hcftnbcdpuur2n ಪುಟ:ಮನಮಂಥನ.pdf/೩೦೦ 104 62747 316932 316765 2026-05-04T13:46:11Z Shreelatha.Halemane 7642 316932 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೨೮೨}}{{Right|ಮನಮಂಥನ}} ಮೈಯಿಗೆ ಶಾಖವು ಹರಿದು ಬರುವುದು ಕಾಣಿಸುವುದಿಲ್ಲ. ಆದರೆ ಶಾಖವು ಹರಿದು ಬಂದಿರಲೇಬೇಕು. ಶಾಖವು ಒಂದು ರೀತಿಯ ಶಕ್ತಿ. {{gap}}ಕುದುರೆಯ ಲಾಳದಂತಿರುವ ಮ್ಯಾಗ್ನೆಟ್ಟನ್ನಿಟ್ಟು, ಅದರ ಮೇಲೆ ಕಾಗದವನ್ನು ಹರಡಿ, ಕಾಗದದ ಮೇಲೆ ಕಬ್ಬಿಣದ ಹುಡಿಯನ್ನು ಉದುರಿಸಿದರೆ, ಹುಡಿಯು ಒಂದು ವಿಚಿತ್ರವಾದ ರೇಖಾ ಚಿತ್ರವನ್ನು ರಚಿಸಿಕೊಳ್ಳುತ್ತದೆ. ಲಾಳವಿರುವ ಎರಡೂ ಪಕ್ಕಗಳಲ್ಲಿ ಹುಡಿಯು ರಂಗೋಲಿಯನ್ನಿಟ್ಟಂತಾಗುತ್ತದೆ. ಲಾಳದ ಎರಡು ತುದಿಗಳಲ್ಲೂ ಮೀಸೆ ಕಟ್ಟಿಕೊಳ್ಳುತ್ತದೆ. ಮ್ಯಾಗ್ನೆಟಿಕ್‌ನ ಆಯಸ್ಕಾಂತ ಶಕ್ತಿಯು ಕಬ್ಬಿಣದ ಹುಡಿಯನ್ನು ಈ ರೀತಿ ಚೆಲ್ಲಾಡಿಸುತ್ತದೆ. ಮ್ಯಾಗ್ನೆಟ್ಟಿನ ಶಕ್ತಿಯು ಒಂದು ತೆರನಾದುದು. {{gap}}ಇಲೆಕ್ಟಿಕ್ ಸ್ಟವ್‌ನಲ್ಲಿ, ಸ್ವಿಚ್ ಹಾಕಿದ ಮೇಲೆ, ಕೆಂಪಗೆ ಲೋಹದ ಸುರುಳಿಗಳು ಕಾಯುತ್ತವೆ. ಉತ್ಪತ್ತಿಯಾದ ಆ ಶಾಖದಿಂದ ಅಡಿಗೆಯನ್ನು ಬೇಯಿಸಬಹುದು. ಆ ಇಲೆಕ್ಟಿಕ್ ಶಕ್ತಿಯನ್ನು ತೆಳು ತಂತಿಗಳಿರುವ ಬಲ್ಲಿನಲ್ಲಿ ಹರಿಯ ಬಿಟ್ಟರೆ, ಬೆಳಕು ಹರಡುತ್ತದೆ. ಶಾಖವನ್ನೂ ಬೆಳಕನ್ನೂ ಹಾಗೂ ಮ್ಯಾಗ್ನೆಟಿಕ್ ಪ್ರತಿಕ್ರಿಯೆಗಳನ್ನೂ, ಇಲೆಕ್ಲಿಸಿಟಿಯು ಸಾಧಿಸುತ್ತದೆ. ಇಲೆಕ್ಟಿಸಿಟಿಯೂ ಒಂದು ವಿಧವಾದ ಶಕ್ತಿ. {{gap}}ಗುರುತ್ವಾಕರ್ಷಣೆಯೂ ಒಂದು ತೆರನ ಶಕ್ತಿ. {{gap}}ಕಂತ್ರಿ ನಾಯಿಯ ಕಡೆಗೆ ಹುಡುಗನು ಕಲ್ಲನ್ನೆಸೆಯುತ್ತಾನೆ. ಅವನ ತೋಳ್ಳಲದಿಂದ ಎಸೆದ ಕಲ್ಲು ರಭಸದಿಂದ ಸ್ವಲ್ಪ ದೂರ ಸಾಗುತ್ತದೆ. ತೋಳ್ಳಲವು ಒಂದು ವಿಧದ ಶಕ್ತಿ. ಫಿಸಿಕಲ್ ಶಕ್ತಿ. {{gap}}ಇವೆಲ್ಲ ತೆರನ ಶಕ್ತಿಗಳು, ಆಮೂಲಾಗ್ರವಾಗಿ ವಿಜ್ಞಾನಿಗಳಿಂದ ಅಭ್ಯಸಿಸಲ್ಪಟ್ಟಿವೆ. ಇವುಗಳ ಗುಣಗಳು ಎಣಿಸಲ್ಪಟ್ಟಿವೆ, ಗುಣಿಸಲ್ಪಟ್ಟಿವೆ. ಹಾಗಾಗಿ ಮಾನವನ ಹತೋಟಿಗೆ ಒಳಗಾಗಿವೆ. ಅವನ ಬಾಳನ್ನು ಸುಖಮಯವಾಗಿಸಿವೆ ; ಅವನ ದೈಹಿಕ ಶ್ರಮವನ್ನು ಬಹುಪಾಲು ನಿವಾರಿಸಿವೆ. {{gap}}ಇತ್ತಿಂದೀಚೆಗೆ ಅಣುವನ್ನು ಬಿರಿಸಿದರೆ ಆಪಾರಶಕ್ತಿಯು ಹೊರ ಹೊಮ್ಮುತ್ತದೆ ಎಂಬುದನ್ನು ಕಂಡು ಹಿಡಿದರು. ಈ ಶಕ್ತಿಯನ್ನು ಶಾಖವನ್ನಾಗಿ ಪರಿವರ್ತಿಸಿ ಏನೆಲ್ಲವನ್ನೂ ಸುಟ್ಟು ಹಾಕಬಹುದು. ಇಲೆಕ್ಟಿಕ್ ಶಕ್ತಿಯನ್ನಾಗಿ ಪರಿವರ್ತಿಸಿ ಬಳಸಿಕೊಳ್ಳಲೂಬಹುದು. ಅಟಾಮಿಕ್ ಶಕ್ತಿಯೂ ನಿಖರವಾಗಿ ಅಳೆಯಲ್ಪಡಬಹುದು. ಹೈಡೋಜನ್ನಿನ ಎರಡು ಅಣುಗಳನ್ನು ಬೆಸೆದರೆ, ಆಗಲೂ ಶಕ್ತಿಯು ಅಪಾರವಾಗಿ ಹೊರ ಹೊಮ್ಮುತ್ತದೆ. ಪ್ಯೂಷನ್ ಬಾಂಬ್ ಎಂಬ<noinclude></noinclude> aq9shdpin0raks604noujnonbhvfrss ಪುಟ:ಮನಮಂಥನ.pdf/೩೦೧ 104 62748 316916 314466 2026-05-04T12:58:27Z Shreesha Sharma 7840 /* Proofread */ 316916 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಮನಸ್ಸಿನ ಸ್ವರೂಪ}}{{Right|೨೮೩}} ರಾಕ್ಷಸ ಆಯುಧವು ಈ ರೀತಿಯದು. ಇದೂ ವೈಜ್ಞಾನಿಕನ ಅಳತೆಗೆ ನಿಖರವಾಗಿ ಸಿಕ್ಕಿದೆ. ಆದರೆ ಇವೆಲ್ಲಾ ಶಕ್ತಿಗಳು, ಮನಸ್ಸು ಎಂಬ ಶಕ್ತಿಗಿಂತ ಪ್ರತ್ಯೇಕವಾಗಿವೆ. ಮನಸ್ಸು ಒಂದು ತೆರನ ಶಕ್ತಿ ಎಂದು ತಿಳಿದಿದ್ದರೂ, ವೈಜ್ಞಾನಿಕ ಗಣಿತ ಶಾಸ್ತ್ರದ ಅಧ್ಯಯನಕ್ಕೆ ಇನ್ನೂ ಒಳಪಟ್ಟಿಲ್ಲ. ಅಂದರೆ ಮನಸ್ಸು ಎಂಬ ಶಕ್ತಿಯ ನಿಖರವಾದ ಪರಿಚಯವು ಇನ್ನೂ ಸಾಧ್ಯವಾಗಿಲ್ಲ. ನಮ್ಮ ನಾಡಿನ ಪೂರ್ವಿಕ ಮನನಿಗರು, ಮನಸ್ಸನ್ನು 'ಚಿತ್ರ' ಎಂದು ಹೆಸರಿಸಿದ್ದರು. ಚೈತನ್ಯ ಎಂಬ ಪದವು ಶಕ್ತಿ ಎನ್ನುವ ಅರ್ಥವನ್ನೂ ಮೂಡಿಸುತ್ತದೆ. ಚಿತ್ರ ಪದದಿಂದ ಹುಟ್ಟಿ ಬಂದಿದೆ. ಚಿತ್ರ ಎನ್ನುವ ಪದವನ್ನು ಇನ್ನೂ ಹೆಚ್ಚು ಗೂಡಾರ್ಥದಲ್ಲಿ ಬಳಸುತ್ತಿದ್ದರು. ಅದನ್ನು ಮುಂದಿನ ಅಧ್ಯಾಯಗಳಲ್ಲಿ ತಿಳಿಯಲು ಯತ್ನಿಸೋಣ. ಅಜ್ಜಯ್ಯನ ಮನೆಗೆ ರಜೆಯಲ್ಲಿ ಹೋಗಲೆತ್ನಿಸಿದಾಗ, ನನ್ನ ಮನಸ್ಸಿನಲ್ಲಿ ಮೂಡಿದ ಯೋಚನೆಗಳನ್ನು, ಮನಸ್ಸಿನ ಪರಿವರ್ತನೆಗಳು, ಎಂದು ಹೇಳಬಹುದು. ಚಪ್ಪಲಿಯನ್ನು ಮೆಟ್ಟಿಕೊಂಡು ಹೋಗಬಾರದು ಎಂಬ ಯೋಚನೆಯು ಮೂಡಿದಾಗ ಆ ಕ್ಷಣಾಂಶ ಮನಸ್ಸು ಚಪ್ಪಲಿಯಿಂದ ತುಂಬಿಕೊಂಡಿತು. ಚಪ್ಪಲಿಯೇ ಪೂರ್ಣವಾಗಿ ಪ್ರತಿಬಿಂಬಿಸಿತ್ತು. ಮನಸ್ಸಿನಲ್ಲಿ, ಎನ್ನಲೂಬಹುದು. ಮರುಕ್ಷಣ ಹೂಗಳ ಯೋಚನೆಯು ಮೂಡಿತು. ಕ್ಷಣಾಂಶ ಮನಸ್ಸು ಹೂವಿನಿಂದ ತುಂಬಿತ್ತು. ಹೂವೇ ಆಗಿತ್ತು ಎಂದರೂ ಅಡ್ಡಿಯಿಲ್ಲ. ಯೋಚಿಸುವಾಗ ಮನಸ್ಸಿನಲ್ಲಿ ಉಂಟಾಗುವ ಪರಿವರ್ತನೆಗಳನ್ನು 'ವೃತ್ತಿ' ಎಂದು ಕರೆಯುತ್ತಿದ್ದರು. ಕಣ್ಣಿಗೆ ಕಂಡುಬಂದ ಚೆಂದದ ಹೂವು, ಮನಸ್ಸಿನಲ್ಲಿ ಪ್ರತಿಬಿಂಬಿತವಾಗಿ ಕ್ಷಣಾಂಶ ಮನಸ್ಸು ಆ ಹೂವೇ ಆಗಿರುತ್ತದೆ. ಕಿವಿಗಳ ಮೂಲಕ ಕೇಳಿಸಿದುದೂ ಹಾಗೆಯೇ ಪಂಚೇಂದ್ರಿಯಗಳ ಮೂಲಕ ಮನಸ್ಸಿಗೆ ತಲುಪಿದ ಎಲ್ಲವೂ ಪ್ರತಿಕ್ರಿಯೆಯನ್ನು ಮೂಡಿಸುತ್ತವೆ. ಹೊರಲೋಕದಿಂದ ಪ್ರತಿಕ್ಷಣವೂ ಪಂಚೇಂದ್ರಿಯಗಳಲ್ಲಿ ಯಾವುದಾದರೂ ಒಂದರಿಂದ ಮನಸ್ಸು ಕೆಣಕಲ್ಪಡುತ್ತದೆ. ಮನಸೂ ಪ್ರತಿಕ್ರಿಯೆಯನ್ನು ಹೂಡುತ್ತವೆ. ಆದಕಾರಣ ಮನಸ್ಸು ಒಮ್ಮೆ ಅತ್ತ, ಮತ್ತೊಮ್ಮೆ ಇತ್ತ, ಕೆಲವೊಮ್ಮೆ ಸುತ್ತ ಎಳೆದಾಡಲ್ಪಡುತ್ತಿರುತ್ತದೆ. ಚಿತ್ರ ವೃತ್ತಿಗಳು ಅಡ್ಡಾದಿಡ್ಡಿಯಾಗಿ ನಡೆಯುತ್ತವೆ. ಚಿತ್ತ ವೃತ್ತಿಯನ್ನು ನಿರೋಧಿಸುವುದೇ ಯೋಗ ಎಂದರು, ಪತಂಜಲಿ ಋಷಿಗಳು. ಈ ವಿಷಯವು ಬಾಳು ಹಸನಾಗಲಿಚ್ಛಿಸುವವರಿಗೆ, ಅಮೂಲ್ಯವಾದುದು. ಮುಂದೆ ಬರುವ ಅಧ್ಯಾಯಗಳಲ್ಲಿ ಇದನ್ನು ಹೆಚ್ಚು ವಿವರವಾಗಿ ಪರಿಶೀಲಿಸೋಣ. *****<noinclude></noinclude> jnelx08qqxtsb5pyh23e4qemvqlbmzi 316933 316916 2026-05-04T13:46:39Z Shreelatha.Halemane 7642 /* Validated */ 316933 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಮನಸ್ಸಿನ ಸ್ವರೂಪ}}{{Right|೨೮೩}} ರಾಕ್ಷಸ ಆಯುಧವು ಈ ರೀತಿಯದು. ಇದೂ ವೈಜ್ಞಾನಿಕನ ಅಳತೆಗೆ ನಿಖರವಾಗಿ ಸಿಕ್ಕಿದೆ. {{gap}}ಆದರೆ ಇವೆಲ್ಲಾ ಶಕ್ತಿಗಳು, ಮನಸ್ಸು ಎಂಬ ಶಕ್ತಿಗಿಂತ ಪ್ರತ್ಯೇಕವಾಗಿವೆ. ಮನಸ್ಸು ಒಂದು ತೆರನ ಶಕ್ತಿ ಎಂದು ತಿಳಿದಿದ್ದರೂ, ವೈಜ್ಞಾನಿಕ ಗಣಿತ ಶಾಸ್ತ್ರದ ಅಧ್ಯಯನಕ್ಕೆ ಇನ್ನೂ ಒಳಪಟ್ಟಿಲ್ಲ. ಅಂದರೆ ಮನಸ್ಸು ಎಂಬ ಶಕ್ತಿಯ ನಿಖರವಾದ ಪರಿಚಯವು ಇನ್ನೂ ಸಾಧ್ಯವಾಗಿಲ್ಲ. {{gap}}ನಮ್ಮ ನಾಡಿನ ಪೂರ್ವಿಕ ಮನನಿಗರು, ಮನಸ್ಸನ್ನು 'ಚಿತ್ರ' ಎಂದು ಹೆಸರಿಸಿದ್ದರು. ಚೈತನ್ಯ ಎಂಬ ಪದವು ಶಕ್ತಿ ಎನ್ನುವ ಅರ್ಥವನ್ನೂ ಮೂಡಿಸುತ್ತದೆ. ಚಿತ್ರ ಪದದಿಂದ ಹುಟ್ಟಿ ಬಂದಿದೆ. ಚಿತ್ರ ಎನ್ನುವ ಪದವನ್ನು ಇನ್ನೂ ಹೆಚ್ಚು ಗೂಡಾರ್ಥದಲ್ಲಿ ಬಳಸುತ್ತಿದ್ದರು. ಅದನ್ನು ಮುಂದಿನ ಅಧ್ಯಾಯಗಳಲ್ಲಿ ತಿಳಿಯಲು ಯತ್ನಿಸೋಣ. {{gap}}ಅಜ್ಜಯ್ಯನ ಮನೆಗೆ ರಜೆಯಲ್ಲಿ ಹೋಗಲೆತ್ನಿಸಿದಾಗ, ನನ್ನ ಮನಸ್ಸಿನಲ್ಲಿ ಮೂಡಿದ ಯೋಚನೆಗಳನ್ನು, ಮನಸ್ಸಿನ ಪರಿವರ್ತನೆಗಳು, ಎಂದು ಹೇಳಬಹುದು. ಚಪ್ಪಲಿಯನ್ನು ಮೆಟ್ಟಿಕೊಂಡು ಹೋಗಬಾರದು ಎಂಬ ಯೋಚನೆಯು ಮೂಡಿದಾಗ ಆ ಕ್ಷಣಾಂಶ ಮನಸ್ಸು ಚಪ್ಪಲಿಯಿಂದ ತುಂಬಿಕೊಂಡಿತು. ಚಪ್ಪಲಿಯೇ ಪೂರ್ಣವಾಗಿ ಪ್ರತಿಬಿಂಬಿಸಿತ್ತು. ಮನಸ್ಸಿನಲ್ಲಿ, ಎನ್ನಲೂಬಹುದು. ಮರುಕ್ಷಣ ಹೂಗಳ ಯೋಚನೆಯು ಮೂಡಿತು. ಕ್ಷಣಾಂಶ ಮನಸ್ಸು ಹೂವಿನಿಂದ ತುಂಬಿತ್ತು. ಹೂವೇ ಆಗಿತ್ತು ಎಂದರೂ ಅಡ್ಡಿಯಿಲ್ಲ. ಯೋಚಿಸುವಾಗ ಮನಸ್ಸಿನಲ್ಲಿ ಉಂಟಾಗುವ ಪರಿವರ್ತನೆಗಳನ್ನು 'ವೃತ್ತಿ' ಎಂದು ಕರೆಯುತ್ತಿದ್ದರು. ಕಣ್ಣಿಗೆ ಕಂಡುಬಂದ ಚೆಂದದ ಹೂವು, ಮನಸ್ಸಿನಲ್ಲಿ ಪ್ರತಿಬಿಂಬಿತವಾಗಿ ಕ್ಷಣಾಂಶ ಮನಸ್ಸು ಆ ಹೂವೇ ಆಗಿರುತ್ತದೆ. ಕಿವಿಗಳ ಮೂಲಕ ಕೇಳಿಸಿದುದೂ ಹಾಗೆಯೇ ಪಂಚೇಂದ್ರಿಯಗಳ ಮೂಲಕ ಮನಸ್ಸಿಗೆ ತಲುಪಿದ ಎಲ್ಲವೂ ಪ್ರತಿಕ್ರಿಯೆಯನ್ನು ಮೂಡಿಸುತ್ತವೆ. ಹೊರಲೋಕದಿಂದ ಪ್ರತಿಕ್ಷಣವೂ ಪಂಚೇಂದ್ರಿಯಗಳಲ್ಲಿ ಯಾವುದಾದರೂ ಒಂದರಿಂದ ಮನಸ್ಸು ಕೆಣಕಲ್ಪಡುತ್ತದೆ. ಮನಸೂ ಪ್ರತಿಕ್ರಿಯೆಯನ್ನು ಹೂಡುತ್ತವೆ. ಆದಕಾರಣ ಮನಸ್ಸು ಒಮ್ಮೆ ಅತ್ತ, ಮತ್ತೊಮ್ಮೆ ಇತ್ತ, ಕೆಲವೊಮ್ಮೆ ಸುತ್ತ ಎಳೆದಾಡಲ್ಪಡುತ್ತಿರುತ್ತದೆ. ಚಿತ್ರ ವೃತ್ತಿಗಳು ಅಡ್ಡಾದಿಡ್ಡಿಯಾಗಿ ನಡೆಯುತ್ತವೆ. ಚಿತ್ತ ವೃತ್ತಿಯನ್ನು ನಿರೋಧಿಸುವುದೇ ಯೋಗ ಎಂದರು, ಪತಂಜಲಿ ಋಷಿಗಳು. ಈ ವಿಷಯವು ಬಾಳು ಹಸನಾಗಲಿಚ್ಛಿಸುವವರಿಗೆ, ಅಮೂಲ್ಯವಾದುದು. ಮುಂದೆ ಬರುವ ಅಧ್ಯಾಯಗಳಲ್ಲಿ ಇದನ್ನು ಹೆಚ್ಚು ವಿವರವಾಗಿ ಪರಿಶೀಲಿಸೋಣ. *****<noinclude></noinclude> 4djkdhdnwugamumnmf8uki4k6x7q9kg ಪುಟ:ಮನಮಂಥನ.pdf/೩೦೨ 104 62749 316917 314468 2026-05-04T12:59:49Z Shreesha Sharma 7840 /* Proofread */ 316917 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೨೮೪}}{{Right|ಮನಮಂಥನ}} ಮನಸ್ಸು ಮತ್ತು ದೇಹದ ಸಮನ್ವಯಗೊಂಡ ಒಕ್ಕೂಟವೇ ಬಾಳಿನ ಜೀವಾಳ ಎಂದೆವು. ಮನಸ್ಸು ಒಂದು ವಿಧವಾದ ಶಕ್ತಿ ಅಥವಾ ಚೈತನ್ಯ ಎಂದೆವು. ದೇಹವು ಒಂದು ವಸ್ತು ಎನ್ನುವುದು ಸ್ವತಃಸಿದ್ಧ. ಮನಸ್ಸಿಗೂ ದೇಹಕ್ಕೂ ಇರುವ ವ್ಯತ್ಯಾಸಗಳಲ್ಲಿ ಇದು ಹಿರಿದಾದುದು. ಇದಲ್ಲದೇ ಇತರ ವ್ಯತ್ಯಾಸಗಳು ಇರುವುವೇ? ಅಥವಾ ಸಮಾನ ಗುಣಗಳು ಇರುವುದೇ? ಪರಿಶೀಲಿಸೋಣ. ೧. ದೇಹದ ಹೊರಮೈಯಲ್ಲಿ ಕವಚವಿದ್ದಂತೆ ಚರ್ಮವು ಇದೆ. ಕವಚದಂತೆ ರಕ್ಷಣೆಯನ್ನು ನೀಡುತ್ತದೆ. ಮನುಷ್ಯನಲ್ಲಿ ಚರ್ಮದ ರಕ್ಷಣಾ ಕವಚವು ಅಷ್ಟೇನೂ ದೃಢವಾದುದಲ್ಲ. ಆನೆ, ಫೇಂಡಾಮೃಗ, ಎಮ್ಮೆಗಳು ಇಂತಹ ಪ್ರಾಣಿಗಳಲ್ಲಿ ಚರ್ಮವು ಗುರಾಣಿಯಂತೆ ರಕ್ಷಣೆಯನ್ನು ಕೊಡುತ್ತದೆ. ಗಿಡ ಮರಗಳ ಮುಳ್ಳಿನಿಂದ ಈ ಪ್ರಾಣಿಗಳನ್ನು ಪಾರುಮಾಡುತ್ತದೆ. ಮನುಷ್ಯನ ಚರ್ಮವು ತೆಳುವಾಗಿದೆ. ಆ ಪ್ರಾಣಿಗಳ ಚರ್ಮದಂತೆ ರಕ್ಷಣೆಯನ್ನು ನೀಡುವುದಿಲ್ಲ. ಆದರೂ ಅಂಗೈ ಮತ್ತು ಅಂಗಾಲುಗಳ ಮೇಲಿರುವ ಚರ್ಮವು ದಪ್ಪನಾಗಿ ದೃಢವಾಗಿರುತ್ತದೆ. ಹಿಡಿಯುವಾಗ ಮತ್ತು ನಡೆಯುವಾಗ, ಅಂಗೈ ಮತ್ತು ಅಂಗಾಲುಗಳಿಗೆ ಹೆಚ್ಚು ಅಘಾತವಾಗುತ್ತದೆ. ಆದುದರಿಂದಲೇ ಪ್ರಕೃತಿಯು ಅವುಗಳನ್ನು ದಪ್ಪವನ್ನಾಗಿ ನಿರ್ಮಿಸಿದೆ. ಮೈಯಿನ ಮಿಕ್ಕ ಭಾಗಗಳಲ್ಲಿ ಚರ್ಮವು ತೆಳುವಾಗಿರುತ್ತದೆ. ಆದರೂ ರಕ್ಷಣೆಯನ್ನು ನೀಡುತ್ತದೆ. ಉದಾಹರಣೆಗೆ, ಬೆಳಗೆದ್ದು ಮುಖ ಕ್ಷೌರವನ್ನು ಮಾಡಿಕೊಳ್ಳುವಾಗ, ಸೊಂಟಮೀಂಟುವ ಯಾವುದೋ ರೇಡಿಯೋ ಹಾಡನ್ನು ಕೇಳಿಸಿಕೊಂಡಾಗ, ಬೇ ಹುಷಾರಾಗಿ ಕೆನ್ನೆಯನ್ನು ತುಸು ಹೆರೆದುಕೊಂಡೆವು, ಎನ್ನಿ, ಎಷ್ಟು ಉರಿ ಮತ್ತು ನೋವಾಗುತ್ತೆ! ಅಲ್ಲದೆ ಗಾಬರಿಯಾಗುವಂತೆ ರಕ್ತವು ಸುರಿಯಲಾರಂಭಿಸುತ್ತದೆ. ಅಂದರೆ ತೆಳು ಚರ್ಮವಾದರೂ ದೇಹಕ್ಕೆ ರಕ್ಷಣೆಯನ್ನು ಒದಗಿಸುತ್ತದೆ. ಚರ್ಮವು ಸ್ಪರ್ಶೇಂದ್ರಿಯ. ಅದರ ವರ್ಣವು ಮತ್ತು ಕಾಂತಿಯು ಇತರರ ಮನಸ್ಸನ್ನು ಆಕರ್ಷಿಸುತ್ತದೆ. ಅಥವಾ ಬೇಸರವನ್ನು ಮೂಡಿಸುತ್ತದೆ. ಇಂತಹವೇ ಇತರ ಗುಣಗಳು, ದೇಹಕ್ಕೆ ಅಗತ್ಯವಾದ ಕೆಲಸಗಳು ಚರ್ಮದ ಹೊಣೆಯಾಗಿರುತ್ತವೆ. ಆದರೆ ಚರ್ಮದ ವಿಶ್ಲೇಷಣೆಯು ಇಲ್ಲಿ ಅಪಕೃತ. ದೇಹಕ್ಕೆ ರಕ್ಷಣೆಯನ್ನು ಕೊಡುವ ಒಂದು ಕವಚ ಎಂಬುದೇ ಸಾಕು. ದೇಹದ ಹೊರಗೆ ಚರ್ಮವಿದ್ದಂತೆ, ದೇಹದ ಒಳಗಡೆಯಲ್ಲಿ ಮ್ಯೂಕಸ್ ಮೆಂಬ್ರೇನ್ ಎನ್ನುವ ತೆಳುವಾದ ಅಂತಃಪೊರೆಯು ಇದೆ. ದೇಹದಲ್ಲಿನ ವಿವಿಧ ಅಂಗಗಳಿಗೆ ಕವಚವಾಗಿದೆ. ಬಾಯಿಯಲ್ಲಿ ಮ್ಯೂಕಸ್ ಮೆಂಬ್ರೇನ್ ಇದೆ ಎನ್ನುವುದು<noinclude></noinclude> muqrzyxmwwm216sego8hjxt2k8ka1ry 316934 316917 2026-05-04T13:47:06Z Shreelatha.Halemane 7642 /* Validated */ 316934 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೨೮೪}}{{Right|ಮನಮಂಥನ}} {{gap}}ಮನಸ್ಸು ಮತ್ತು ದೇಹದ ಸಮನ್ವಯಗೊಂಡ ಒಕ್ಕೂಟವೇ ಬಾಳಿನ ಜೀವಾಳ ಎಂದೆವು. ಮನಸ್ಸು ಒಂದು ವಿಧವಾದ ಶಕ್ತಿ ಅಥವಾ ಚೈತನ್ಯ ಎಂದೆವು. ದೇಹವು ಒಂದು ವಸ್ತು ಎನ್ನುವುದು ಸ್ವತಃಸಿದ್ಧ. ಮನಸ್ಸಿಗೂ ದೇಹಕ್ಕೂ ಇರುವ ವ್ಯತ್ಯಾಸಗಳಲ್ಲಿ ಇದು ಹಿರಿದಾದುದು. ಇದಲ್ಲದೇ ಇತರ ವ್ಯತ್ಯಾಸಗಳು ಇರುವುವೇ? ಅಥವಾ ಸಮಾನ ಗುಣಗಳು ಇರುವುದೇ? ಪರಿಶೀಲಿಸೋಣ. {{gap}}೧. ದೇಹದ ಹೊರಮೈಯಲ್ಲಿ ಕವಚವಿದ್ದಂತೆ ಚರ್ಮವು ಇದೆ. ಕವಚದಂತೆ ರಕ್ಷಣೆಯನ್ನು ನೀಡುತ್ತದೆ. ಮನುಷ್ಯನಲ್ಲಿ ಚರ್ಮದ ರಕ್ಷಣಾ ಕವಚವು ಅಷ್ಟೇನೂ ದೃಢವಾದುದಲ್ಲ. ಆನೆ, ಫೇಂಡಾಮೃಗ, ಎಮ್ಮೆಗಳು ಇಂತಹ ಪ್ರಾಣಿಗಳಲ್ಲಿ ಚರ್ಮವು ಗುರಾಣಿಯಂತೆ ರಕ್ಷಣೆಯನ್ನು ಕೊಡುತ್ತದೆ. ಗಿಡ ಮರಗಳ ಮುಳ್ಳಿನಿಂದ ಈ ಪ್ರಾಣಿಗಳನ್ನು ಪಾರುಮಾಡುತ್ತದೆ. {{gap}}ಮನುಷ್ಯನ ಚರ್ಮವು ತೆಳುವಾಗಿದೆ. ಆ ಪ್ರಾಣಿಗಳ ಚರ್ಮದಂತೆ ರಕ್ಷಣೆಯನ್ನು ನೀಡುವುದಿಲ್ಲ. ಆದರೂ ಅಂಗೈ ಮತ್ತು ಅಂಗಾಲುಗಳ ಮೇಲಿರುವ ಚರ್ಮವು ದಪ್ಪನಾಗಿ ದೃಢವಾಗಿರುತ್ತದೆ. ಹಿಡಿಯುವಾಗ ಮತ್ತು ನಡೆಯುವಾಗ, ಅಂಗೈ ಮತ್ತು ಅಂಗಾಲುಗಳಿಗೆ ಹೆಚ್ಚು ಅಘಾತವಾಗುತ್ತದೆ. ಆದುದರಿಂದಲೇ ಪ್ರಕೃತಿಯು ಅವುಗಳನ್ನು ದಪ್ಪವನ್ನಾಗಿ ನಿರ್ಮಿಸಿದೆ. ಮೈಯಿನ ಮಿಕ್ಕ ಭಾಗಗಳಲ್ಲಿ ಚರ್ಮವು ತೆಳುವಾಗಿರುತ್ತದೆ. ಆದರೂ ರಕ್ಷಣೆಯನ್ನು ನೀಡುತ್ತದೆ. ಉದಾಹರಣೆಗೆ, ಬೆಳಗೆದ್ದು ಮುಖ ಕ್ಷೌರವನ್ನು ಮಾಡಿಕೊಳ್ಳುವಾಗ, ಸೊಂಟಮೀಂಟುವ ಯಾವುದೋ ರೇಡಿಯೋ ಹಾಡನ್ನು ಕೇಳಿಸಿಕೊಂಡಾಗ, ಬೇ ಹುಷಾರಾಗಿ ಕೆನ್ನೆಯನ್ನು ತುಸು ಹೆರೆದುಕೊಂಡೆವು, ಎನ್ನಿ, ಎಷ್ಟು ಉರಿ ಮತ್ತು ನೋವಾಗುತ್ತೆ! ಅಲ್ಲದೆ ಗಾಬರಿಯಾಗುವಂತೆ ರಕ್ತವು ಸುರಿಯಲಾರಂಭಿಸುತ್ತದೆ. ಅಂದರೆ ತೆಳು ಚರ್ಮವಾದರೂ ದೇಹಕ್ಕೆ ರಕ್ಷಣೆಯನ್ನು ಒದಗಿಸುತ್ತದೆ. {{gap}}ಚರ್ಮವು ಸ್ಪರ್ಶೇಂದ್ರಿಯ. ಅದರ ವರ್ಣವು ಮತ್ತು ಕಾಂತಿಯು ಇತರರ ಮನಸ್ಸನ್ನು ಆಕರ್ಷಿಸುತ್ತದೆ. ಅಥವಾ ಬೇಸರವನ್ನು ಮೂಡಿಸುತ್ತದೆ. ಇಂತಹವೇ ಇತರ ಗುಣಗಳು, ದೇಹಕ್ಕೆ ಅಗತ್ಯವಾದ ಕೆಲಸಗಳು ಚರ್ಮದ ಹೊಣೆಯಾಗಿರುತ್ತವೆ. ಆದರೆ ಚರ್ಮದ ವಿಶ್ಲೇಷಣೆಯು ಇಲ್ಲಿ ಅಪಕೃತ. ದೇಹಕ್ಕೆ ರಕ್ಷಣೆಯನ್ನು ಕೊಡುವ ಒಂದು ಕವಚ ಎಂಬುದೇ ಸಾಕು. {{gap}}ದೇಹದ ಹೊರಗೆ ಚರ್ಮವಿದ್ದಂತೆ, ದೇಹದ ಒಳಗಡೆಯಲ್ಲಿ ಮ್ಯೂಕಸ್ ಮೆಂಬ್ರೇನ್ ಎನ್ನುವ ತೆಳುವಾದ ಅಂತಃಪೊರೆಯು ಇದೆ. ದೇಹದಲ್ಲಿನ ವಿವಿಧ ಅಂಗಗಳಿಗೆ ಕವಚವಾಗಿದೆ. ಬಾಯಿಯಲ್ಲಿ ಮ್ಯೂಕಸ್ ಮೆಂಬ್ರೇನ್ ಇದೆ ಎನ್ನುವುದು<noinclude></noinclude> l3s4bqc30zhbs76lfomi13j8lf2yt2h ಪುಟ:ಮನಮಂಥನ.pdf/೩೦೩ 104 62750 316918 314469 2026-05-04T13:00:52Z Shreesha Sharma 7840 /* Proofread */ 316918 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಮನಸ್ಸಿನ ಸ್ವರೂಪ}}{{Right|೨೮೫}} ಜನರಿಗೆ ತಿಳಿಯದೆ ಇರಬಹುದು. ಆದರೆ ಅದು ತುಸು ಹರಿದು ಬಾಯಿ ಹುಣ್ಣಾದರೆ, ಉಪ್ಪಿನ ಕಾಯಂತಿರಲಿ, ತಿಳಿಸಾರನ್ನವನ್ನೂ ತಿನ್ನಲಾಗುವುದಿಲ್ಲ. ಉರಿ ಮತ್ತು ಯಾತನೆ ಅಷ್ಟಾಗುತ್ತದೆ. ಮೂಗಿನ ಒಳಗಡೆಯೂ ರಕ್ಷಿಸುವ ಮ್ಯೂಕಸ್ ಮೆಂಬ್ರೇನ್ ಇದೆ. ಮೆಣಸಿನಕಾಯಿನ ಘಾಟು ಮೂಗಿಗೆ ಅಕಸ್ಮಾತ್ ಬಡಿದರೆ, ಮೂಗಿನೊಳಗೆ ಕಾಣಿಸಿಕೊಳ್ಳುವ ಉರಿಯು, ಮ್ಯೂಕಸ್ ಮೆಂಬ್ರೇನ್ ರೇಗಿದೆ, ಎನ್ನುವುದನ್ನು ತಿಳಿಸುತ್ತದೆ. ಇವುಗಳಿಂದ ದೇಹದ ಒಳಭಾಗಗಳ ರಕ್ಷಣೆಗೆ ಮೂಕಸ್ ಮೆಂಬ್ರೇನ್ ಪ್ರಭಾವಿ ಪಾತ್ರವನ್ನು ವಹಿಸುತ್ತದೆ ಎಂದು ಸುಲಭವಾಗಿ ತಿಳಿಯಬಹುದು. ದೇಹದ ರಕ್ಷಣೆಗೆ, ಹೊರಗಡೆ ಚರ್ಮ, ಒಳಗೆ ಮ್ಯೂಕಸ್ ಮೆಂಬ್ರೇನ್, ಇರುವಂತೆ, ಮನಸ್ಸಿಗೆ ಯಾವುದಾದರೂ ಕವಚವಿದೆಯೇ ? ಇಲ್ಲ. ವಸ್ತುವಿಗೆ ರಕ್ಷಣಾ ಕವಚವನ್ನು ತೊಡಿಸಬಹುದು. ಆದರೆ ಶಕ್ತಿ ಅಥವಾ ಚೈತನ್ಯದಂತಹುದಕ್ಕೆ, ಕವಚವನ್ನು ತೊಡಿಸುವುದು ಸಾಧ್ಯವಿಲ್ಲ. ರಕ್ಷಿಸುವ ಕವಚವನ್ನು ಮನಸ್ಸೇ ಆಗಿಂದಾಗ್ಗೆ,ಅಗತ್ಯ ಬಿದ್ದಾಗ, ಸಾಧ್ಯವಾದಾಗ ನಿರ್ಮಿಸಿಕೊಳ್ಳಬೇಕು. ೨ ಮಾನವನು ಹಿಂಡು ಜೀವಿ. ಇತರರ ಸಂಪರ್ಕವು ಮತ್ತು ಸಹಾಯವು ದಿನದಿನದ ಬಾಳಿಗೆ ಅವಶ್ಯಕ. ಆದುದರಿಂದ ಪರಸ್ಪರ ಆಕರ್ಷಣೆಯು, ಅನಾಕರ್ಷಣೆಯು ಉಂಟಾಗಬೇಕು. ಲೈಂಗಿಕ ದೃಷ್ಟಿಯಿಂದ ಮಾತ್ರ ಇದನ್ನು ಹೇಳುತ್ತಿಲ್ಲ. ಅದಕ್ಕೆ ಹೊರತಾದ ಮಾನವರಲ್ಲಿ ಉಂಟಾಗುವ ಪರಸ್ಪರ ಆಕರ್ಷಣೆ, ವಿಶ್ವಾಸ, ಗೌರವ ಇತ್ಯಾದಿಗಳನ್ನು ಸೂಚಿಸುತ್ತಿದ್ದೇನೆ. ಇಂತಹ ಆಕರ್ಷಣೆಯು ದೇಹದ ಅಚ್ಚುಕಟ್ಟು, ರೂಪು ರೇಷೆಗಳನ್ನು ಕುರಿತುದಲ್ಲ. ವ್ಯಕ್ತಿಯ ನಡವಳಿಕೆ, ಬುದ್ಧಿವಂತಿಕೆ, ಅನುಕಂಪ, ಇತ್ಯಾದಿಗಳಿಂದ ಆಕರ್ಷಣೆಯು, ಮತ್ತು ವಿಶ್ವಾಸ ಗೌರವಗಳು ಉಂಟಾಗುತ್ತವೆ. ಇವುಗಳೆಲ್ಲವೂ ವ್ಯಕ್ತಿಯ ಮನಸ್ಸಿನಿಂದ ಪ್ರಚೋದಿತವಾದುವು. ಆದಕಾರಣ ಮನಸ್ಸು ಮಾನವನ ಪರಸ್ಪರ ಆಕರ್ಷಣೆಗೆ ಮೂಲವಾದುದು ಎಂದನ್ನಬಹುದು. ಎರಡು ದೇಶಗಳು ಪರಸ್ಪರ ವೈರತ್ವವನ್ನು ಪ್ರಕಟಿಸುತ್ತಿರಬಹುದು. ಆದರೂ ಒಂದು ರಾಷ್ಟ್ರದ ಮೇಧಾವಿ ವಿಜ್ಞಾನಿಗಳನ್ನು, ಉತ್ತಮ ಕಲಾಕಾರರನ್ನೂ, ವೈರಿ ರಾಷ್ಟ್ರದ ವಿಜ್ಞಾನಿಗಳು ಮತ್ತು ಕಲಾಕಾರರು ಮೆಚ್ಚಿಕೊಳ್ಳುತ್ತಾರೆ, ಗೌರವಿಸುತ್ತಾರೆ. ವೈಯಕ್ತಿಕವಾಗಿ ಭೇಟಿಯಾದಾಗ, ಆತ್ಮೀಯರಾಗುತ್ತಾರೆ. ದೇಹದಿಂದ ಇಂತಹ ಆತ್ಮೀಯತೆಯನ್ನು ಸಾಧಿಸಲು ಆಗುವುದಿಲ್ಲ. ಮನಸ್ಸಿನಿಂದಲೇ ಸಾಧ್ಯ.<noinclude></noinclude> ktp5o2umx95xlfn73t60zgpcw6kdwxe 316935 316918 2026-05-04T13:47:33Z Shreelatha.Halemane 7642 /* Validated */ 316935 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಮನಸ್ಸಿನ ಸ್ವರೂಪ}}{{Right|೨೮೫}} ಜನರಿಗೆ ತಿಳಿಯದೆ ಇರಬಹುದು. ಆದರೆ ಅದು ತುಸು ಹರಿದು ಬಾಯಿ ಹುಣ್ಣಾದರೆ, ಉಪ್ಪಿನ ಕಾಯಂತಿರಲಿ, ತಿಳಿಸಾರನ್ನವನ್ನೂ ತಿನ್ನಲಾಗುವುದಿಲ್ಲ. ಉರಿ ಮತ್ತು ಯಾತನೆ ಅಷ್ಟಾಗುತ್ತದೆ. {{gap}}ಮೂಗಿನ ಒಳಗಡೆಯೂ ರಕ್ಷಿಸುವ ಮ್ಯೂಕಸ್ ಮೆಂಬ್ರೇನ್ ಇದೆ. ಮೆಣಸಿನಕಾಯಿನ ಘಾಟು ಮೂಗಿಗೆ ಅಕಸ್ಮಾತ್ ಬಡಿದರೆ, ಮೂಗಿನೊಳಗೆ ಕಾಣಿಸಿಕೊಳ್ಳುವ ಉರಿಯು, ಮ್ಯೂಕಸ್ ಮೆಂಬ್ರೇನ್ ರೇಗಿದೆ, ಎನ್ನುವುದನ್ನು ತಿಳಿಸುತ್ತದೆ. {{gap}}ಇವುಗಳಿಂದ ದೇಹದ ಒಳಭಾಗಗಳ ರಕ್ಷಣೆಗೆ ಮೂಕಸ್ ಮೆಂಬ್ರೇನ್ ಪ್ರಭಾವಿ ಪಾತ್ರವನ್ನು ವಹಿಸುತ್ತದೆ ಎಂದು ಸುಲಭವಾಗಿ ತಿಳಿಯಬಹುದು. {{gap}}ದೇಹದ ರಕ್ಷಣೆಗೆ, ಹೊರಗಡೆ ಚರ್ಮ, ಒಳಗೆ ಮ್ಯೂಕಸ್ ಮೆಂಬ್ರೇನ್, ಇರುವಂತೆ, ಮನಸ್ಸಿಗೆ ಯಾವುದಾದರೂ ಕವಚವಿದೆಯೇ ? ಇಲ್ಲ. ವಸ್ತುವಿಗೆ ರಕ್ಷಣಾ ಕವಚವನ್ನು ತೊಡಿಸಬಹುದು. ಆದರೆ ಶಕ್ತಿ ಅಥವಾ ಚೈತನ್ಯದಂತಹುದಕ್ಕೆ, ಕವಚವನ್ನು ತೊಡಿಸುವುದು ಸಾಧ್ಯವಿಲ್ಲ. ರಕ್ಷಿಸುವ ಕವಚವನ್ನು ಮನಸ್ಸೇ ಆಗಿಂದಾಗ್ಗೆ,ಅಗತ್ಯ ಬಿದ್ದಾಗ, ಸಾಧ್ಯವಾದಾಗ ನಿರ್ಮಿಸಿಕೊಳ್ಳಬೇಕು. {{gap}}೨ ಮಾನವನು ಹಿಂಡು ಜೀವಿ. ಇತರರ ಸಂಪರ್ಕವು ಮತ್ತು ಸಹಾಯವು ದಿನದಿನದ ಬಾಳಿಗೆ ಅವಶ್ಯಕ. ಆದುದರಿಂದ ಪರಸ್ಪರ ಆಕರ್ಷಣೆಯು, ಅನಾಕರ್ಷಣೆಯು ಉಂಟಾಗಬೇಕು. ಲೈಂಗಿಕ ದೃಷ್ಟಿಯಿಂದ ಮಾತ್ರ ಇದನ್ನು ಹೇಳುತ್ತಿಲ್ಲ. ಅದಕ್ಕೆ ಹೊರತಾದ ಮಾನವರಲ್ಲಿ ಉಂಟಾಗುವ ಪರಸ್ಪರ ಆಕರ್ಷಣೆ, ವಿಶ್ವಾಸ, ಗೌರವ ಇತ್ಯಾದಿಗಳನ್ನು ಸೂಚಿಸುತ್ತಿದ್ದೇನೆ. ಇಂತಹ ಆಕರ್ಷಣೆಯು ದೇಹದ ಅಚ್ಚುಕಟ್ಟು, ರೂಪು ರೇಷೆಗಳನ್ನು ಕುರಿತುದಲ್ಲ. ವ್ಯಕ್ತಿಯ ನಡವಳಿಕೆ, ಬುದ್ಧಿವಂತಿಕೆ, ಅನುಕಂಪ, ಇತ್ಯಾದಿಗಳಿಂದ ಆಕರ್ಷಣೆಯು, ಮತ್ತು ವಿಶ್ವಾಸ ಗೌರವಗಳು ಉಂಟಾಗುತ್ತವೆ. ಇವುಗಳೆಲ್ಲವೂ ವ್ಯಕ್ತಿಯ ಮನಸ್ಸಿನಿಂದ ಪ್ರಚೋದಿತವಾದುವು. ಆದಕಾರಣ ಮನಸ್ಸು ಮಾನವನ ಪರಸ್ಪರ ಆಕರ್ಷಣೆಗೆ ಮೂಲವಾದುದು ಎಂದನ್ನಬಹುದು. {{gap}}ಎರಡು ದೇಶಗಳು ಪರಸ್ಪರ ವೈರತ್ವವನ್ನು ಪ್ರಕಟಿಸುತ್ತಿರಬಹುದು. ಆದರೂ ಒಂದು ರಾಷ್ಟ್ರದ ಮೇಧಾವಿ ವಿಜ್ಞಾನಿಗಳನ್ನು, ಉತ್ತಮ ಕಲಾಕಾರರನ್ನೂ, ವೈರಿ ರಾಷ್ಟ್ರದ ವಿಜ್ಞಾನಿಗಳು ಮತ್ತು ಕಲಾಕಾರರು ಮೆಚ್ಚಿಕೊಳ್ಳುತ್ತಾರೆ, ಗೌರವಿಸುತ್ತಾರೆ. ವೈಯಕ್ತಿಕವಾಗಿ ಭೇಟಿಯಾದಾಗ, ಆತ್ಮೀಯರಾಗುತ್ತಾರೆ. ದೇಹದಿಂದ ಇಂತಹ ಆತ್ಮೀಯತೆಯನ್ನು ಸಾಧಿಸಲು ಆಗುವುದಿಲ್ಲ. ಮನಸ್ಸಿನಿಂದಲೇ ಸಾಧ್ಯ.<noinclude></noinclude> jsaihckp5186dayt77e6q8r5oyg19hs ಪುಟ:ಮನಮಂಥನ.pdf/೩೦೪ 104 62751 316919 314470 2026-05-04T13:01:45Z Shreesha Sharma 7840 /* Proofread */ 316919 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೨೮೬}}{{Right|ಮನಮಂಥನ}} ೩. ವಯಸ್ಸು ಆದಂತೆಲ್ಲಾ ಮುಪ್ಪು ಅಡರುವುದನ್ನು ಎಲ್ಲರೂ ಕಂಡಿದ್ದಾರೆ, ಚರ್ಮವು ಸುಕ್ಕುಗಟ್ಟಿ, ಕಾಂತಿಹೀನವಾಗುವುದು ; ಕೂದಲೂ ನರೆಯುವುದು, ಕಣ್ಣು, ಕಿವಿಗಳು ಮಂದವಾಗುತ್ತಾ ಹೋಗುವುದು, ಇತ್ಯಾದಿಗಳೆಲ್ಲವೂ ಮುದ್ದು ಮೂಡುತ್ತಿರುವುದರ ಲಕ್ಷಣಗಳು. ಆದರೆ ದೇಹದೊಂದಿಗೆ ಜನಿಸಿದ ಮನಸ್ಸು, ದೇಹಕ್ಕೆ ಮುಪ್ಪು ಮೂಡುವುದರ, ಸರಿಸಮನಾಗಿ ಅರಳು ಮರುಳಾಗುತ್ತದೆಯೇ ? ಇಲ್ಲ. ಅರವತ್ತು ಎಪ್ಪತ್ತು ವರ್ಷಗಳಾದರೂ ದೇಹವು ಶಿಥಿಲವಾಗಿರದೆ ಸಾಕಷ್ಟು ದೃಢವಾಗಿರಬಹುದು. ಆದರೆ ಮನಸ್ಸು ಚುರುಕುತನವನ್ನು ಐವತ್ತರ ಪ್ರಾಯದಿಂದ ಕಳೆದುಕೊಳ್ಳಲಾರಂಭಿಸಬಹುದು. ತಪ್ರೀತಿ, ದೇಹವು ಐವತ್ತು ಅರವತ್ತಕ್ಕೆ ಶಿಥಿಲವಾಗತೊಡಗಿದರೂ, ಎಂಬತ್ತು ತೊಂಬತ್ತಕ್ಕೆ ತುಂಬಾ ಶಿಥಿಲವಾದರೂ ಅವರುಗಳ ಮನಸ್ಸು ಅತ್ಯಂತ ಚುರುಕಾಗಿ ಉಳಿದಿರಬಹುದು. ದೇಹ ಮತ್ತು ಮನಸ್ಸು ಒಂದಕ್ಕೊಂದು ಅಗತ್ಯ ಸಂಬಂಧವನ್ನು ನಿಕಟವಾಗಿ ಹೊಂದಿದ್ದರೂ ವಿವಿಧ ರೀತಿಯಲ್ಲಿ, ಬೇರೆ ಬೇರೆ ಕಾಲಗಳಲ್ಲಿ, ಭಿನ್ನವಾದ ಗತಿಯಲ್ಲಿ ಮುಪ್ಪನ್ನು ಪಡೆಯುತ್ತವೆ. ೪. ಆಜನ್ಮಸಿದ್ಧವಾಗಿ ಪಡೆದ ಜಾಣತನದಿಂದ, ಮನಸ್ಸು ದೇಹದ ಮುಖ್ಯ ಕಾರ್ಯಕ್ರಮಗಳನ್ನು ನಡೆಸುತ್ತದೆ. ಆಳ ಮನಸ್ಸಿನಲ್ಲಿ ಪ್ರತಿಷ್ಠಿತವಾಗಿರುವ ಜನ್ಮ ಜನ್ಮಾಂತರಗಳ ಸ್ಮರಣೆಯು ಮನಸ್ಸಿನ ಹುಟ್ಟು ಜಾಣತನಕ್ಕೆ ಮೂಲಾಧಾರ. ಪ್ರಕೃತ ಜನ್ಮದಲ್ಲಿ ಮನಸ್ಸು ಅಭಿವೃದ್ಧಿ ಹೊಂದುತ್ತದೆ, ಲೋಕಾನುಭವವನ್ನು ಪಡೆಯುವುದರ ಮೂಲಕ. ಆದರೆ ಮನಸ್ಸನ್ನು ನಡೆಸುವ ಆಂತರಿಕವಾದ ಚೈತನ್ಯವಾವುದಾದರೂ ಇದೆಯೇ ? ಬಲ್ಲವರಿಂದ ಕಲಿತು, ಮಾಡುವವರನ್ನು ನೋಡಿ ಕಲಿತು, ಆಲೋಚನೆಯನ್ನು ಮಾಡಿ ಅರಿತು, ಲೋಕಾನುಭವವನ್ನು ಪಡೆಯುತ್ತದೆ, ಮನಸ್ಸು. ಅಭಿವೃದ್ಧಿ ಹೊಂದುತ್ತದೆ. ಇದು ಎಲ್ಲರಿಗೂ ಸುಲಭವಾಗಿ ತಿಳಿಯುವ ವಿಷಯ. ಆದರೆ ಮನಸ್ಸಿನ ಅಂತರಾಳದಲ್ಲಿ ಎಲ್ಲೋ ಒಂದು ಶಕ್ತಿ ಇದೆ, ಅಥವಾ ಚೈತನ್ಯವು ಅಡಗಿದೆ. ಅವ್ಯಕ್ತವಾಗಿ ಆ ಚೈತನ್ಯವು ಮನಸ್ಸನ್ನು ನಡೆಸುತ್ತದೆ, ಎಂದು ಊಹಿಸಲು ಸಾಕಷ್ಟು ಸಾಕ್ಷ್ಯಗಳಿವೆ. ಪ್ರಮಾಣಗಳು ದೊರಕುತ್ತವೆ. ದೇಹದ ಮೇಲೆ ಹತೋಟಿಯನ್ನು ಮನಸ್ಸು ಹೊಂದಿರುವಂತೆ ಮನಸ್ಸಿನ ಮೇಲೆ ಪ್ರಭಾವೀ ಹತೋಟಿಯನ್ನು ಆಂತರಿಕವಾದ ಮತ್ತೆ ಯಾವುದೋ ಚೈತನ್ಯವು ಪಡೆದಿದೆ. ೫. ದೇಹವು ಮಲಿನಗೊಳ್ಳುವುದನ್ನೂ ಕಂಡಿದ್ದೇವೆ. ಬೆವರು ಸುರಿದು,<noinclude></noinclude> lz6tk5640bngr6sjy6sst17f2hid3ho 316936 316919 2026-05-04T13:48:08Z Shreelatha.Halemane 7642 /* Validated */ 316936 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೨೮೬}}{{Right|ಮನಮಂಥನ}} {{gap}}೩. ವಯಸ್ಸು ಆದಂತೆಲ್ಲಾ ಮುಪ್ಪು ಅಡರುವುದನ್ನು ಎಲ್ಲರೂ ಕಂಡಿದ್ದಾರೆ, ಚರ್ಮವು ಸುಕ್ಕುಗಟ್ಟಿ, ಕಾಂತಿಹೀನವಾಗುವುದು ; ಕೂದಲೂ ನರೆಯುವುದು, ಕಣ್ಣು, ಕಿವಿಗಳು ಮಂದವಾಗುತ್ತಾ ಹೋಗುವುದು, ಇತ್ಯಾದಿಗಳೆಲ್ಲವೂ ಮುದ್ದು ಮೂಡುತ್ತಿರುವುದರ ಲಕ್ಷಣಗಳು. {{gap}}ಆದರೆ ದೇಹದೊಂದಿಗೆ ಜನಿಸಿದ ಮನಸ್ಸು, ದೇಹಕ್ಕೆ ಮುಪ್ಪು ಮೂಡುವುದರ, ಸರಿಸಮನಾಗಿ ಅರಳು ಮರುಳಾಗುತ್ತದೆಯೇ ? ಇಲ್ಲ. ಅರವತ್ತು ಎಪ್ಪತ್ತು ವರ್ಷಗಳಾದರೂ ದೇಹವು ಶಿಥಿಲವಾಗಿರದೆ ಸಾಕಷ್ಟು ದೃಢವಾಗಿರಬಹುದು. ಆದರೆ ಮನಸ್ಸು ಚುರುಕುತನವನ್ನು ಐವತ್ತರ ಪ್ರಾಯದಿಂದ ಕಳೆದುಕೊಳ್ಳಲಾರಂಭಿಸಬಹುದು. ತಪ್ರೀತಿ, ದೇಹವು ಐವತ್ತು ಅರವತ್ತಕ್ಕೆ ಶಿಥಿಲವಾಗತೊಡಗಿದರೂ, ಎಂಬತ್ತು ತೊಂಬತ್ತಕ್ಕೆ ತುಂಬಾ ಶಿಥಿಲವಾದರೂ ಅವರುಗಳ ಮನಸ್ಸು ಅತ್ಯಂತ ಚುರುಕಾಗಿ ಉಳಿದಿರಬಹುದು. ದೇಹ ಮತ್ತು ಮನಸ್ಸು ಒಂದಕ್ಕೊಂದು ಅಗತ್ಯ ಸಂಬಂಧವನ್ನು ನಿಕಟವಾಗಿ ಹೊಂದಿದ್ದರೂ ವಿವಿಧ ರೀತಿಯಲ್ಲಿ, ಬೇರೆ ಬೇರೆ ಕಾಲಗಳಲ್ಲಿ, ಭಿನ್ನವಾದ ಗತಿಯಲ್ಲಿ ಮುಪ್ಪನ್ನು ಪಡೆಯುತ್ತವೆ. {{gap}}೪. ಆಜನ್ಮಸಿದ್ಧವಾಗಿ ಪಡೆದ ಜಾಣತನದಿಂದ, ಮನಸ್ಸು ದೇಹದ ಮುಖ್ಯ ಕಾರ್ಯಕ್ರಮಗಳನ್ನು ನಡೆಸುತ್ತದೆ. ಆಳ ಮನಸ್ಸಿನಲ್ಲಿ ಪ್ರತಿಷ್ಠಿತವಾಗಿರುವ ಜನ್ಮ ಜನ್ಮಾಂತರಗಳ ಸ್ಮರಣೆಯು ಮನಸ್ಸಿನ ಹುಟ್ಟು ಜಾಣತನಕ್ಕೆ ಮೂಲಾಧಾರ. ಪ್ರಕೃತ ಜನ್ಮದಲ್ಲಿ ಮನಸ್ಸು ಅಭಿವೃದ್ಧಿ ಹೊಂದುತ್ತದೆ, ಲೋಕಾನುಭವವನ್ನು ಪಡೆಯುವುದರ ಮೂಲಕ. {{gap}}ಆದರೆ ಮನಸ್ಸನ್ನು ನಡೆಸುವ ಆಂತರಿಕವಾದ ಚೈತನ್ಯವಾವುದಾದರೂ ಇದೆಯೇ ? ಬಲ್ಲವರಿಂದ ಕಲಿತು, ಮಾಡುವವರನ್ನು ನೋಡಿ ಕಲಿತು, ಆಲೋಚನೆಯನ್ನು ಮಾಡಿ ಅರಿತು, ಲೋಕಾನುಭವವನ್ನು ಪಡೆಯುತ್ತದೆ, ಮನಸ್ಸು. ಅಭಿವೃದ್ಧಿ ಹೊಂದುತ್ತದೆ. ಇದು ಎಲ್ಲರಿಗೂ ಸುಲಭವಾಗಿ ತಿಳಿಯುವ ವಿಷಯ. ಆದರೆ ಮನಸ್ಸಿನ ಅಂತರಾಳದಲ್ಲಿ ಎಲ್ಲೋ ಒಂದು ಶಕ್ತಿ ಇದೆ, ಅಥವಾ ಚೈತನ್ಯವು ಅಡಗಿದೆ. ಅವ್ಯಕ್ತವಾಗಿ ಆ ಚೈತನ್ಯವು ಮನಸ್ಸನ್ನು ನಡೆಸುತ್ತದೆ, ಎಂದು ಊಹಿಸಲು ಸಾಕಷ್ಟು ಸಾಕ್ಷ್ಯಗಳಿವೆ. ಪ್ರಮಾಣಗಳು ದೊರಕುತ್ತವೆ. ದೇಹದ ಮೇಲೆ ಹತೋಟಿಯನ್ನು ಮನಸ್ಸು ಹೊಂದಿರುವಂತೆ ಮನಸ್ಸಿನ ಮೇಲೆ ಪ್ರಭಾವೀ ಹತೋಟಿಯನ್ನು ಆಂತರಿಕವಾದ ಮತ್ತೆ ಯಾವುದೋ ಚೈತನ್ಯವು ಪಡೆದಿದೆ. {{gap}}೫. ದೇಹವು ಮಲಿನಗೊಳ್ಳುವುದನ್ನೂ ಕಂಡಿದ್ದೇವೆ. ಬೆವರು ಸುರಿದು,<noinclude></noinclude> q13mfr7bius2pm217lm0nqb0q8bkig0 ಪುಟ:ಮನಮಂಥನ.pdf/೩೦೫ 104 62752 316920 314471 2026-05-04T13:02:44Z Shreesha Sharma 7840 /* Proofread */ 316920 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಮನಸ್ಸಿನ ಸ್ವರೂಪ}}{{Right|೨೮೭}} ಒಣಗಿ ಮೈ ಅಂಟಾದಾಗ, ಸೋಪನ್ನು ತಿಕ್ಕಿ ಸ್ನಾನವನ್ನು ಮಾಡಿದರೆ, ಮೈಗೆ ಎಷ್ಟೋ ಹಗುರವಾಗುತ್ತದೆ, ಮತ್ತು ಮನಸೂ ಪ್ರಫುಲ್ಲವಾಗುತ್ತದೆ. ಕಲಿಯುವುದು, ಅಥವಾ ಕಲಿಸುವುದು ಎಂದು ಮನಸ್ಸಿನ ಕಾರ್ಯಗಳನ್ನು ವಿಂಗಡಿಸಬಹುದು, ಸ್ಕೂಲವಾಗಿ, ಮನಸ್ಸು, ಪ್ರಫುಲ್ಲವಾದಾಗ, ಈ ಎರಡೂ ತರಹ ಕಾರ್ಯಗಳನ್ನು ಚುರುಕಾಗಿ ನಡೆಸುತ್ತದೆ. ದೇಹದೊಳಗೆ, ಪ್ರಕೃತಿಯ ರೀತ್ಯಾ ವಿಸರ್ಜಿಸಬೇಕಾದ ಜಲ ಮಲಗಳಂತಹ ಮಲಿನಗಳು ಹೆಚ್ಚಾಗಿ ತುಂಬಿಕೊಂಡರೆ, ಬಾಧೆಯನ್ನುಂಟುಮಾಡಲಾರಂಭಿಸಿದರೆ, ಆಗ ಮನಸ್ಸು ಚುರುಕಾಗಿರುವುದಿಲ್ಲ. ಅವುಗಳನ್ನು ಸಾಫಾಗಿ, ಸಂಪೂರ್ಣವಾಗಿ ವಿಸರ್ಜಿಸಿದ ನಂತರ, ದೇಹವು ಖುಷಿಯಾಗುವುದಿರಲಿ ; ಮನಸೂ ಹಗುರಾಗುತ್ತದೆ. ಚುರುಕಾಗುತ್ತದೆ. ಯಶಸ್ವಿಯಾಗಿ, ಶ್ರಮವಿಲ್ಲದೆ ತನ್ನ ಕಾರ್ಯಗಳನ್ನು ನಡೆಸುತ್ತದೆ. ಶ್ವಾಸಕೋಶಗಳಲ್ಲಿ ಕಫವು ಕಟ್ಟಿದಾಗಲೂ ಇದೇ ರೀತಿ ದೇಹವು ಬಾಧಿಸಲ್ಪಡುತ್ತದೆ. ಮನಸೂ ಮುಜುಗರದಿಂದ ತಲ್ಲಣಿಸುತ್ತದೆ. ಕಫವು ಸಡಿಲವಾಗಿ, ಕೆಮ್ಮು ಮೂಡಿ ಹೊರಕ್ಕೆ ಉಗಿಯಲ್ಪಟ್ಟರೆ, ನಂತರ ದೇಹವು ಸಂತಸವನ್ನು ಪಡೆಯುತ್ತದೆ, ಮನಸ್ಸು ನೆಮ್ಮದಿಯಾಗುತ್ತದೆ. ದೇಹವು ಹಲವಾರು ರೀತಿಯಲ್ಲಿ ಮಲಿನಗೊಳ್ಳಬಹುದು. ಹಲವಾರು ಅಂಗಗಳೂ ಕಲುಷಿತಗೊಳ್ಳಬಹುದು. ಹಲ್ಲು, ವಸಡು, ಕಿವಿ, ಕಣ್ಣು ಇತ್ಯಾದಿ ಇತ್ಯಾದಿ ; ಬೇನೆಯಿಂದ ಮಲಿನಗೊಳ್ಳಬಹುದು. ದುರಭ್ಯಾಸಗಳಿಂದ ಕೆಡಬಹುದು. ದೇಹದ ಎಲ್ಲಾ ಅಂಗಗಳೂ ಯಾವ ಕ್ಷಣದಲ್ಲಿಯೂ ಪರಿಶುದ್ಧವಾಗಿದೆ ಎಂದನ್ನಬರುವುದಿಲ್ಲ. ಆದುದರಿಂದಲೇ, 'ದೇಹಕ್ಕೆ ಮಡಿ ಇಲ್ಲ; ಆತ್ಮಕ್ಕೆ ಮೈಲಿಗೆಯಿಲ್ಲ'ಎಂಬ ಗಾದೆಯನ್ನು ನುಡಿದರು. ದೇಹವು ಮಲಿನವಾದಂತೆ ಮನಸ್ಸು ಮಲಿನವಾಗುತ್ತದೆಯೇ? ಮನಸ್ಸು ಒಂದು ತೆರನ ಶಕ್ತಿ, ಶಕ್ತಿಯು ಮಲಿನವಾಗುವುದಿಲ್ಲ. ಶಕ್ತಿಯನ್ನು ದುರುಪಯೋಗ ಪಡಿಸಿಕೊಂಡರೆ, ಆಗ ದುಷ್ಪರಿಣಾಮಗಳಾಗುತ್ತವೆ. ಆಗ ಪರಿಣಾಮಗಳು ಕೆಟ್ಟು ದಾದರೆ, ಮಲಿನವಾಯಿತು ಎನ್ನಬೇಕು. ಮನಸ್ಸನ್ನು ಸದುಪಯೋಗಪಡಿಸಿಕೊಂಡರೆ, ಸತ್ಪರಿಣಾಮಗಳಾಗುತ್ತವೆ. ಮಲಿನತೆಯು ಇರುವುದಿಲ್ಲ, ಎನ್ನಬಹುದು. ಹಣ್ಣನ್ನು ಹೆಚ್ಚಲು ಚಾಕುವನ್ನು ಬಳಸಿಕೊಳ್ಳುತ್ತೇವೆ. ಚಾಕುವಿನ ಸದುಪಯೋಗವಿದು. ಆದರೆ ಅದೇ ಚಾಕುವನ್ನು ಇನ್ನೊಬ್ಬನಿಗೆ ಇರಿಯಲೂ ಉಪಯೋಗಿಸಬಹುದು. ಚಾಕುವಿನ ದುರುಪಯೋಗವಿದು. ಚಾಕುವು ಎರಡೂ ಉಪಯೋಗಗಳಲ್ಲಿ ಪಾತ್ರವನ್ನು ವಹಿಸಿದರೂ, ಸ್ವಂತ ಪ್ರಚೋದನೆಯಿಂದ ಹಾಗೆ<noinclude></noinclude> 3zgdigrmlmmz3emdpi3km27m5h738tt 316937 316920 2026-05-04T13:48:39Z Shreelatha.Halemane 7642 /* Validated */ 316937 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಮನಸ್ಸಿನ ಸ್ವರೂಪ}}{{Right|೨೮೭}} ಒಣಗಿ ಮೈ ಅಂಟಾದಾಗ, ಸೋಪನ್ನು ತಿಕ್ಕಿ ಸ್ನಾನವನ್ನು ಮಾಡಿದರೆ, ಮೈಗೆ ಎಷ್ಟೋ ಹಗುರವಾಗುತ್ತದೆ, ಮತ್ತು ಮನಸೂ ಪ್ರಫುಲ್ಲವಾಗುತ್ತದೆ. ಕಲಿಯುವುದು, ಅಥವಾ ಕಲಿಸುವುದು ಎಂದು ಮನಸ್ಸಿನ ಕಾರ್ಯಗಳನ್ನು ವಿಂಗಡಿಸಬಹುದು, ಸ್ಕೂಲವಾಗಿ, ಮನಸ್ಸು, ಪ್ರಫುಲ್ಲವಾದಾಗ, ಈ ಎರಡೂ ತರಹ ಕಾರ್ಯಗಳನ್ನು ಚುರುಕಾಗಿ ನಡೆಸುತ್ತದೆ. {{gap}}ದೇಹದೊಳಗೆ, ಪ್ರಕೃತಿಯ ರೀತ್ಯಾ ವಿಸರ್ಜಿಸಬೇಕಾದ ಜಲ ಮಲಗಳಂತಹ ಮಲಿನಗಳು ಹೆಚ್ಚಾಗಿ ತುಂಬಿಕೊಂಡರೆ, ಬಾಧೆಯನ್ನುಂಟುಮಾಡಲಾರಂಭಿಸಿದರೆ, ಆಗ ಮನಸ್ಸು ಚುರುಕಾಗಿರುವುದಿಲ್ಲ. ಅವುಗಳನ್ನು ಸಾಫಾಗಿ, ಸಂಪೂರ್ಣವಾಗಿ ವಿಸರ್ಜಿಸಿದ ನಂತರ, ದೇಹವು ಖುಷಿಯಾಗುವುದಿರಲಿ ; ಮನಸೂ ಹಗುರಾಗುತ್ತದೆ. ಚುರುಕಾಗುತ್ತದೆ. ಯಶಸ್ವಿಯಾಗಿ, ಶ್ರಮವಿಲ್ಲದೆ ತನ್ನ ಕಾರ್ಯಗಳನ್ನು ನಡೆಸುತ್ತದೆ. {{gap}}ಶ್ವಾಸಕೋಶಗಳಲ್ಲಿ ಕಫವು ಕಟ್ಟಿದಾಗಲೂ ಇದೇ ರೀತಿ ದೇಹವು ಬಾಧಿಸಲ್ಪಡುತ್ತದೆ. ಮನಸೂ ಮುಜುಗರದಿಂದ ತಲ್ಲಣಿಸುತ್ತದೆ. ಕಫವು ಸಡಿಲವಾಗಿ, ಕೆಮ್ಮು ಮೂಡಿ ಹೊರಕ್ಕೆ ಉಗಿಯಲ್ಪಟ್ಟರೆ, ನಂತರ ದೇಹವು ಸಂತಸವನ್ನು ಪಡೆಯುತ್ತದೆ, ಮನಸ್ಸು ನೆಮ್ಮದಿಯಾಗುತ್ತದೆ. {{gap}}ದೇಹವು ಹಲವಾರು ರೀತಿಯಲ್ಲಿ ಮಲಿನಗೊಳ್ಳಬಹುದು. ಹಲವಾರು ಅಂಗಗಳೂ ಕಲುಷಿತಗೊಳ್ಳಬಹುದು. ಹಲ್ಲು, ವಸಡು, ಕಿವಿ, ಕಣ್ಣು ಇತ್ಯಾದಿ ಇತ್ಯಾದಿ ; ಬೇನೆಯಿಂದ ಮಲಿನಗೊಳ್ಳಬಹುದು. ದುರಭ್ಯಾಸಗಳಿಂದ ಕೆಡಬಹುದು. ದೇಹದ ಎಲ್ಲಾ ಅಂಗಗಳೂ ಯಾವ ಕ್ಷಣದಲ್ಲಿಯೂ ಪರಿಶುದ್ಧವಾಗಿದೆ ಎಂದನ್ನಬರುವುದಿಲ್ಲ. ಆದುದರಿಂದಲೇ, 'ದೇಹಕ್ಕೆ ಮಡಿ ಇಲ್ಲ; ಆತ್ಮಕ್ಕೆ ಮೈಲಿಗೆಯಿಲ್ಲ'ಎಂಬ ಗಾದೆಯನ್ನು ನುಡಿದರು. {{gap}}ದೇಹವು ಮಲಿನವಾದಂತೆ ಮನಸ್ಸು ಮಲಿನವಾಗುತ್ತದೆಯೇ? ಮನಸ್ಸು ಒಂದು ತೆರನ ಶಕ್ತಿ, ಶಕ್ತಿಯು ಮಲಿನವಾಗುವುದಿಲ್ಲ. ಶಕ್ತಿಯನ್ನು ದುರುಪಯೋಗ ಪಡಿಸಿಕೊಂಡರೆ, ಆಗ ದುಷ್ಪರಿಣಾಮಗಳಾಗುತ್ತವೆ. ಆಗ ಪರಿಣಾಮಗಳು ಕೆಟ್ಟು ದಾದರೆ, ಮಲಿನವಾಯಿತು ಎನ್ನಬೇಕು. ಮನಸ್ಸನ್ನು ಸದುಪಯೋಗಪಡಿಸಿಕೊಂಡರೆ, ಸತ್ಪರಿಣಾಮಗಳಾಗುತ್ತವೆ. ಮಲಿನತೆಯು ಇರುವುದಿಲ್ಲ, ಎನ್ನಬಹುದು. {{gap}}ಹಣ್ಣನ್ನು ಹೆಚ್ಚಲು ಚಾಕುವನ್ನು ಬಳಸಿಕೊಳ್ಳುತ್ತೇವೆ. ಚಾಕುವಿನ ಸದುಪಯೋಗವಿದು. ಆದರೆ ಅದೇ ಚಾಕುವನ್ನು ಇನ್ನೊಬ್ಬನಿಗೆ ಇರಿಯಲೂ ಉಪಯೋಗಿಸಬಹುದು. ಚಾಕುವಿನ ದುರುಪಯೋಗವಿದು. ಚಾಕುವು ಎರಡೂ ಉಪಯೋಗಗಳಲ್ಲಿ ಪಾತ್ರವನ್ನು ವಹಿಸಿದರೂ, ಸ್ವಂತ ಪ್ರಚೋದನೆಯಿಂದ ಹಾಗೆ<noinclude></noinclude> 0p9bk4yfo7xzek77hjihsj8nkibptnu ಪುಟ:ಮನಮಂಥನ.pdf/೩೦೬ 104 62753 316921 314472 2026-05-04T13:07:59Z Shreesha Sharma 7840 /* Proofread */ 316921 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೨೮೮}}{{Right|ಮನಮಂಥನ}} ಮಾಡುವುದಿಲ್ಲ. ಅದು ಬಳಸುವವನ ಕೇವಲ ಆಯುಧ. ಒಂದು ರೀತಿಯಲ್ಲಿ ಮನಸೂ ಚಾಕುವಿನಂತೆಯೇ, ಸದುಪಯೋಗಕ್ಕೂ ಅಣಿಯಾಗುತ್ತದೆ, ದುರುಪಯೋಗಕ್ಕೂ ಸಿದ್ಧವಾಗಿರುತ್ತದೆ. ಸದುಪಯೋಗ ಮತ್ತು ದುರುಪಯೋಗ, ಇವೆರಡೂ ಮನಸ್ಸಿನ ಹಲವಾರು ಅಂಶಗಳಿಂದ ನಡೆಯುತ್ತವೆ. ಮನಸ್ಸಿನ ಅಂತರಿಕ ಅಂಶವೊಂದು ಅದನ್ನು ಚೈತನ್ಯ ಎಂದು ಕರೆಯಬಹುದು,-ಅದು ಸತ್ ಉಪಯೋಗ, ಒಳ್ಳೆಯ ಉಪಯೋಗಕ್ಕೆ ಮಾತ್ರ ಪ್ರಚೋದಕವಾಗಿರುತ್ತದೆ. ಆದರೆ ಮನಸ್ಸಿನ ಇತರ ಅಂಶಗಳು, ಚೈತನ್ಯದ ಅಂಶವನ್ನು ಅಡಗಿಸಿರುತ್ತವೆ. ಅಥವಾ ಕಾಣದಂತೆ ಕೆಂಡವನ್ನು ಬೂದಿಯು ಮುಚ್ಚಿಡುವಂತೆ ಹುದುಗಿಸಿಡುತ್ತದೆ. ಆದುದರಿಂದ ಇತರ ಅಂಶಗಳು ಮನಸ್ಸನ್ನು ದುಷ್ಟ ಅಥವಾ ಅನಿಷ್ಟ ಪರಿಣಾಮಗಳಾಗುವಂತೆ ನಡೆಸುತ್ತವೆ. ಮನಸ್ಸು ಮತ್ತು ಅದರೊಳಗೆ ಅಂತರ್ಗತವಾಗಿರುವ ಚೈತನ್ಯ ಇವೆರಡೂ ಸ್ವಾಭಾವಿಕವಾಗಿ ಮಲಿನವಾಗಿರುವುದಿಲ್ಲ. ಎಳೆಯ ಮಗುವಿನ ಮನಸ್ಸಿನಂತೆ, ನಿರ್ಮಲವಾಗಿರುತ್ತದೆ. ಪ್ರಪಂಚದ ಅರಿವನ್ನು ಪಡೆಯುವ ಮಹಾ ಕುತೂಹಲವೂ ಇರುತ್ತದೆ. ಬೆಳೆಯತೊಡಗಿದಾಗ 'ತನ್ನ' ಎಂಬ ಸ್ವತಂತ್ರವಾದ, ಇತರರ ನೆರವಿಲ್ಲದೇ ಬಾಳುವ ಆಸೆಯಿಂದ ಕಾಮ ಕ್ರೋಧಾದಿ ಮಿತ್ರ ಷಡ್ವರ್ಗಗಳನ್ನು ಅಭಿವೃದ್ಧಿಸಿಕೊಳ್ಳುತ್ತದೆ. ಈ ತನಕ ಮನಸ್ಸಿನಲ್ಲಿ ಅಂತರ್ಗತವಾಗಿರುವ ಸತ್ ಉಪಯೋಗದ ಚೈತನ್ಯವು ಪ್ರಭಾವೀಯುತವಾಗಿ ಮಗುವಿನ ಮನಸ್ಸನ್ನು ನಡಸುತ್ತದೆ ಆದುದರಿಂದಲೇ ಎಲ್ಲ ಮಕ್ಕಳೂ, ದೊಡ್ಡವರಿಗೆ ಮುದ್ದಾಗಿ ಕಾಣಬರುವುದು. ಸತ್ ಚೈತನ್ಯವು ಮಕ್ಕಳ ಮನಸ್ಸನ್ನು ಅನಿರ್ಬಂಧಿತವಾಗಿ ನಡೆಸುವುದರಿಂದ, ಮಕ್ಕಳ ನಡವಳಿಕೆಯು ಹಿರಿಯರಿಗೆ ಅಪ್ಯಾಯಮಾನವಾಗಿರುತ್ತದೆ. ಬಾಳಿನಲ್ಲಿ, ಸ್ಪರ್ಧಾಬಾಳಿನಲ್ಲಿ ಸ್ವತಂತ್ರವಾಗಿ, ತನ್ನ ಕಾಲುಗಳ ಮೇಲೆ ನಿಲ್ಲಬೇಕಾದಾಗ, ಮಿತ್ರ ಷಡ್ವರ್ಗಗಳು, ಮಂಕು ಬೂದಿಯನ್ನು, ಸತ್-ಚೈತನ್ಯಾಂಶದ ಸುತ್ತಲೂ ಭದ್ರವಾಗಿ ಹರಡಿ ಅರಿ-ಷಡ್ವರ್ಗಗಳಾಗುತ್ತವೆ. ಅರಿ ಎಂದರೆ ಶತ್ರು, ಯಾರಿಗೆ ಶತ್ರು? ವ್ಯಕ್ತಿಯು ಈ ಲೋಕದಲ್ಲಿ ಈ ಬಾಳಿನಲ್ಲಿ ಸ್ಪರ್ಧಾಪೂರಿತ ಸಮಾಜದಲ್ಲಿ ಬಾಳ ಬೇಕಾದಾಗ, ಎಲ್ಲರಿಗಿಂತಲೂ ಎತ್ತರವಾಗಿ ತಲೆಯನ್ನು ಎತ್ತತೊಡಗುವಾಗ, ಅರಿಷಡ್ವರ್ಗಗಳು, ನೆರವಾಗುತ್ತವೆ. ಅಂದರೆ ವ್ಯಕ್ತಿಗೆ ಹೇಗೆ ಶತ್ರುವಾಯಿತು? ಶತ್ರುವಾಗಲಿಲ್ಲ. ಲೌಕಿಕ ಬಾಳಿಗೆ ಅಗತ್ಯವಾಯಿತು. ಆದರೆ ಸಂಘದ ದೃಷ್ಟಿಯಿಂದ ಮಿತ್ರನೂ ಆಗಲಿಲ್ಲ, ಕಾರಣ, ಸತ್ ಚೈತನ್ಯದ ಅಂಶದ ಮೇಲೆ, ಮಂಕು ಬೂದಿಯು ಧಂಡಿಯಾಗಿ ತುಂಬಿಕೊಂಡಿರುತ್ತದೆ. ಅಹಂ-ಕಾರವೆಂಬ ಮಂಕುಬೂದಿ.<noinclude></noinclude> 0civxcw8uxvcp00seid9voc1rugnaky 316938 316921 2026-05-04T13:48:58Z Shreelatha.Halemane 7642 /* Validated */ 316938 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೨೮೮}}{{Right|ಮನಮಂಥನ}} ಮಾಡುವುದಿಲ್ಲ. ಅದು ಬಳಸುವವನ ಕೇವಲ ಆಯುಧ. {{gap}}ಒಂದು ರೀತಿಯಲ್ಲಿ ಮನಸೂ ಚಾಕುವಿನಂತೆಯೇ, ಸದುಪಯೋಗಕ್ಕೂ ಅಣಿಯಾಗುತ್ತದೆ, ದುರುಪಯೋಗಕ್ಕೂ ಸಿದ್ಧವಾಗಿರುತ್ತದೆ. ಸದುಪಯೋಗ ಮತ್ತು ದುರುಪಯೋಗ, ಇವೆರಡೂ ಮನಸ್ಸಿನ ಹಲವಾರು ಅಂಶಗಳಿಂದ ನಡೆಯುತ್ತವೆ. ಮನಸ್ಸಿನ ಅಂತರಿಕ ಅಂಶವೊಂದು ಅದನ್ನು ಚೈತನ್ಯ ಎಂದು ಕರೆಯಬಹುದು,-ಅದು ಸತ್ ಉಪಯೋಗ, ಒಳ್ಳೆಯ ಉಪಯೋಗಕ್ಕೆ ಮಾತ್ರ ಪ್ರಚೋದಕವಾಗಿರುತ್ತದೆ. ಆದರೆ ಮನಸ್ಸಿನ ಇತರ ಅಂಶಗಳು, ಚೈತನ್ಯದ ಅಂಶವನ್ನು ಅಡಗಿಸಿರುತ್ತವೆ. ಅಥವಾ ಕಾಣದಂತೆ ಕೆಂಡವನ್ನು ಬೂದಿಯು ಮುಚ್ಚಿಡುವಂತೆ ಹುದುಗಿಸಿಡುತ್ತದೆ. ಆದುದರಿಂದ ಇತರ ಅಂಶಗಳು ಮನಸ್ಸನ್ನು ದುಷ್ಟ ಅಥವಾ ಅನಿಷ್ಟ ಪರಿಣಾಮಗಳಾಗುವಂತೆ ನಡೆಸುತ್ತವೆ. {{gap}}ಮನಸ್ಸು ಮತ್ತು ಅದರೊಳಗೆ ಅಂತರ್ಗತವಾಗಿರುವ ಚೈತನ್ಯ ಇವೆರಡೂ ಸ್ವಾಭಾವಿಕವಾಗಿ ಮಲಿನವಾಗಿರುವುದಿಲ್ಲ. ಎಳೆಯ ಮಗುವಿನ ಮನಸ್ಸಿನಂತೆ, ನಿರ್ಮಲವಾಗಿರುತ್ತದೆ. ಪ್ರಪಂಚದ ಅರಿವನ್ನು ಪಡೆಯುವ ಮಹಾ ಕುತೂಹಲವೂ ಇರುತ್ತದೆ. ಬೆಳೆಯತೊಡಗಿದಾಗ 'ತನ್ನ' ಎಂಬ ಸ್ವತಂತ್ರವಾದ, ಇತರರ ನೆರವಿಲ್ಲದೇ ಬಾಳುವ ಆಸೆಯಿಂದ ಕಾಮ ಕ್ರೋಧಾದಿ ಮಿತ್ರ ಷಡ್ವರ್ಗಗಳನ್ನು ಅಭಿವೃದ್ಧಿಸಿಕೊಳ್ಳುತ್ತದೆ. ಈ ತನಕ ಮನಸ್ಸಿನಲ್ಲಿ ಅಂತರ್ಗತವಾಗಿರುವ ಸತ್ ಉಪಯೋಗದ ಚೈತನ್ಯವು ಪ್ರಭಾವೀಯುತವಾಗಿ ಮಗುವಿನ ಮನಸ್ಸನ್ನು ನಡಸುತ್ತದೆ ಆದುದರಿಂದಲೇ ಎಲ್ಲ ಮಕ್ಕಳೂ, ದೊಡ್ಡವರಿಗೆ ಮುದ್ದಾಗಿ ಕಾಣಬರುವುದು. ಸತ್ ಚೈತನ್ಯವು ಮಕ್ಕಳ ಮನಸ್ಸನ್ನು ಅನಿರ್ಬಂಧಿತವಾಗಿ ನಡೆಸುವುದರಿಂದ, ಮಕ್ಕಳ ನಡವಳಿಕೆಯು ಹಿರಿಯರಿಗೆ ಅಪ್ಯಾಯಮಾನವಾಗಿರುತ್ತದೆ. ಬಾಳಿನಲ್ಲಿ, ಸ್ಪರ್ಧಾಬಾಳಿನಲ್ಲಿ ಸ್ವತಂತ್ರವಾಗಿ, ತನ್ನ ಕಾಲುಗಳ ಮೇಲೆ ನಿಲ್ಲಬೇಕಾದಾಗ, ಮಿತ್ರ ಷಡ್ವರ್ಗಗಳು, ಮಂಕು ಬೂದಿಯನ್ನು, ಸತ್-ಚೈತನ್ಯಾಂಶದ ಸುತ್ತಲೂ ಭದ್ರವಾಗಿ ಹರಡಿ ಅರಿ-ಷಡ್ವರ್ಗಗಳಾಗುತ್ತವೆ. ಅರಿ ಎಂದರೆ ಶತ್ರು, ಯಾರಿಗೆ ಶತ್ರು? ವ್ಯಕ್ತಿಯು ಈ ಲೋಕದಲ್ಲಿ ಈ ಬಾಳಿನಲ್ಲಿ ಸ್ಪರ್ಧಾಪೂರಿತ ಸಮಾಜದಲ್ಲಿ ಬಾಳ ಬೇಕಾದಾಗ, ಎಲ್ಲರಿಗಿಂತಲೂ ಎತ್ತರವಾಗಿ ತಲೆಯನ್ನು ಎತ್ತತೊಡಗುವಾಗ, ಅರಿಷಡ್ವರ್ಗಗಳು, ನೆರವಾಗುತ್ತವೆ. ಅಂದರೆ ವ್ಯಕ್ತಿಗೆ ಹೇಗೆ ಶತ್ರುವಾಯಿತು? ಶತ್ರುವಾಗಲಿಲ್ಲ. ಲೌಕಿಕ ಬಾಳಿಗೆ ಅಗತ್ಯವಾಯಿತು. ಆದರೆ ಸಂಘದ ದೃಷ್ಟಿಯಿಂದ ಮಿತ್ರನೂ ಆಗಲಿಲ್ಲ, ಕಾರಣ, ಸತ್ ಚೈತನ್ಯದ ಅಂಶದ ಮೇಲೆ, ಮಂಕು ಬೂದಿಯು ಧಂಡಿಯಾಗಿ ತುಂಬಿಕೊಂಡಿರುತ್ತದೆ. ಅಹಂ-ಕಾರವೆಂಬ ಮಂಕುಬೂದಿ.<noinclude></noinclude> dfpq5tjzztnuqy34kjw2r9q1tk4uz90 ಪುಟ:ಮನಮಂಥನ.pdf/೩೦೭ 104 62754 316922 314473 2026-05-04T13:12:27Z Shreesha Sharma 7840 /* Proofread */ 316922 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಮನಸ್ಸಿನ ಸ್ವರೂಪ}}{{Right|೨೮೯}} {{gap}}ಅಂದರೆ 'ಶತ್ರು' ಎಂದು ಷಡ್ವರ್ಗಗಳನ್ನು ಹಿರಿಯರು ಹೆಸರಿಸಿದರೇಕೆ? {{gap}}ಮನಸ್ಸನ್ನು ನಿರ್ಮಲವಾಗಿ ನಡೆಸುವ, ಮನಸ್ಸಿನ ಒಂದು ಭಾಗದಲ್ಲಿ ಅಂತರ್ಗತವಾಗಿರುವ ಸತ್ ಚೈತನ್ಯದ ಅಂಶವನ್ನು ; ಸ್ವತಂತ್ರವಾಗಿ ಬಾಳುವ ಹೆಬ್ಬಯಕೆಯಿಂದ, ಈ ಷಡ್ವರ್ಗಗಳು ಅದುಮಿ, ಅಮುಕಿ, ಮುಚ್ಚಿಡುವುದರಿಂದ; ಮಂಕು ಬೂದಿಯಿಂದ ಮರೆಮಾಚುವುದರಿಂದ ಸ್ಪರ್ಧಾಬಾಳಿನ ದ್ವಂದ್ವರೂಪದ ಮಾಯಾ ಸ್ವತಂತ್ರವನ್ನು, ಇದೇ ಸತ್ಯ, ಇದೇ ಶಾಶ್ವತ ಎಂದು ನಂಬಿಕೆಯನ್ನು ಹುಟ್ಟಿಸಿ ಬೆಳೆಸುವುದರಿಂದ, ಯಾವ ಸತ್ ಚೈತನ್ಯದ ಅಂಶವು, ಮನಸ್ಸಿನ ಅಂತರಾಳದಲ್ಲಿ, ಅವಿನಾಶಿಯಾಗಿ, ಆನಂದಮಯವಾಗಿ, ಮಕ್ಕಳನ್ನು ಕೇಕೇ ಹಾಕುವಂತೆ ನಡೆಸುತ್ತ, ಕಾಲಾತೀತವಾಗಿರುವುದೋ, ಸಾವಿನ ಭಯವೇ ಇಲ್ಲದಿರುವುದೋ, ಸನಾತನವಾದ, ಪುರಾತನವಾದ, ಜೀವದ ಪ್ರಾಣರೂಪವೋ, ಅದನ್ನು ಮಂಕುಬೂದಿಯ ಮುಸುಕಿನಿಂದ, ಸಂಪೂರ್ಣವಾಗಿ, ಅಥವಾ ಹೆಚ್ಚು ಕಡಿಮೆ ಸಂಪೂರ್ಣವಾಗಿ, ಮುಚ್ಚಿಬಿಡುವುದರಿಂದ. {{gap}}ಈ ಎಲ್ಲ ಕಾರಣಗಳಿಂದ ಷಡ್ವರ್ಗಗಳನ್ನು ; ಬಾಳನ್ನು ಅನುಭವಿಸಿ, ಮನನ ಮಾಡಿದ ಋಷಿಗಳು, 'ಅರಿಷಡ್ವರ್ಗ'ಗಳು ಎಂದು ನುಡಿದರು. {{gap}}ಮನಸ್ಸು ಎಂಬುದು ಶಕ್ತಿಯಾದರೂ, ಅರಿಷಡ್ವರ್ಗಗಳಿಂದ ಪ್ರಭಾವಿತವಾದಾಗ, ಮಲಿನವಾಗಬಹುದು ಎಂದು ನಿರ್ಧರಿಸಬಹುದು. ದೇಹದ ಮಲಿನತೆಯೂ, ಮನಸ್ಸಿನ ಮಲಿನತೆಯೂ, ಪ್ರಕೃತಿಯ ಕಾರ್ಯಕ್ರಮದಲ್ಲಿ ಅನಿವಾರ್ಯ ಎನ್ನಬಹುದು. {{gap}}೬. ದೇಹ ಮತ್ತು ಮನಸ್ಸಿನ ಪರಸ್ಪರ ಸಂಬಂಧವನ್ನು ದಿನದಿನದ ಅನುಭವಗಳ ದೃಷ್ಟಿಯಿಂದಲೂ ನೋಡಬಹುದು. {{gap}}(ಅ) ಜ್ವರವು ಉಗ್ರವಾಗಿ ಬಂದಾಗ ರೋಗಿಗೆ ಸನ್ನಿ ಬಡಿದಂತಾಗುತ್ತದೆ. ಮಾನ, ಅವಮಾನ, ಕೆಟ್ಟ ಮಾತು, ಒಳ್ಳೆಯ ಮಾತು ಇವುಗಳನ್ನು ತಾತ್ಕಾಲಿಕವಾಗಿ ಮರೆತು, ಬಡಬಡಿಸುತ್ತಾನೆ. ಕರಪಲ ಮಾಡುತ್ತಾನೆ, ಜ್ವರವು ಉಗ್ರವಾದಾಗ, ಬೇನೆಯ ತೀವ್ರ ವಿಷಯವು ಮೆದುಳಿಗೆ ಅಧಿಕ ಪ್ರಮಾಣದಲ್ಲಿ ಹರಡಿ ಮೆದುಳಿನ ಚಟುವಟಿಕೆಯಿಂದ ಉಂಟಾಗುವ ಮನಸ್ಸು ಎರಿಬಿರಿಯಾಗುತ್ತದೆ. ಬೇನೆಯು ಗುಣವಾದ ಮೇಲೆ ಮನಸ್ಸು ಸ್ವಾಸ್ಥ್ಯಸ್ಥಿತಿಯನ್ನು ಮರಳಿ ಪಡೆಯುತ್ತದೆ. ಅಂದರೆ ದೇಹದಲ್ಲಾಗುವ ಉಗ್ರ ವ್ಯತ್ಯಾಸಗಳು, ಮನಸ್ಸಿನ ಮೇಲೆ ಪ್ರಭಾವವನ್ನು ಹೂಡುತ್ತದೆ.<noinclude></noinclude> 6t16rk44l3s33lihyqzmrgju5rthk14 316939 316922 2026-05-04T13:49:27Z Shreelatha.Halemane 7642 /* Validated */ 316939 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಮನಸ್ಸಿನ ಸ್ವರೂಪ}}{{Right|೨೮೯}} {{gap}}ಅಂದರೆ 'ಶತ್ರು' ಎಂದು ಷಡ್ವರ್ಗಗಳನ್ನು ಹಿರಿಯರು ಹೆಸರಿಸಿದರೇಕೆ? {{gap}}ಮನಸ್ಸನ್ನು ನಿರ್ಮಲವಾಗಿ ನಡೆಸುವ, ಮನಸ್ಸಿನ ಒಂದು ಭಾಗದಲ್ಲಿ ಅಂತರ್ಗತವಾಗಿರುವ ಸತ್ ಚೈತನ್ಯದ ಅಂಶವನ್ನು ; ಸ್ವತಂತ್ರವಾಗಿ ಬಾಳುವ ಹೆಬ್ಬಯಕೆಯಿಂದ, ಈ ಷಡ್ವರ್ಗಗಳು ಅದುಮಿ, ಅಮುಕಿ, ಮುಚ್ಚಿಡುವುದರಿಂದ; ಮಂಕು ಬೂದಿಯಿಂದ ಮರೆಮಾಚುವುದರಿಂದ ಸ್ಪರ್ಧಾಬಾಳಿನ ದ್ವಂದ್ವರೂಪದ ಮಾಯಾ ಸ್ವತಂತ್ರವನ್ನು, ಇದೇ ಸತ್ಯ, ಇದೇ ಶಾಶ್ವತ ಎಂದು ನಂಬಿಕೆಯನ್ನು ಹುಟ್ಟಿಸಿ ಬೆಳೆಸುವುದರಿಂದ, ಯಾವ ಸತ್ ಚೈತನ್ಯದ ಅಂಶವು, ಮನಸ್ಸಿನ ಅಂತರಾಳದಲ್ಲಿ, ಅವಿನಾಶಿಯಾಗಿ, ಆನಂದಮಯವಾಗಿ, ಮಕ್ಕಳನ್ನು ಕೇಕೇ ಹಾಕುವಂತೆ ನಡೆಸುತ್ತ, ಕಾಲಾತೀತವಾಗಿರುವುದೋ, ಸಾವಿನ ಭಯವೇ ಇಲ್ಲದಿರುವುದೋ, ಸನಾತನವಾದ, ಪುರಾತನವಾದ, ಜೀವದ ಪ್ರಾಣರೂಪವೋ, ಅದನ್ನು ಮಂಕುಬೂದಿಯ ಮುಸುಕಿನಿಂದ, ಸಂಪೂರ್ಣವಾಗಿ, ಅಥವಾ ಹೆಚ್ಚು ಕಡಿಮೆ ಸಂಪೂರ್ಣವಾಗಿ, ಮುಚ್ಚಿಬಿಡುವುದರಿಂದ. {{gap}}ಈ ಎಲ್ಲ ಕಾರಣಗಳಿಂದ ಷಡ್ವರ್ಗಗಳನ್ನು ; ಬಾಳನ್ನು ಅನುಭವಿಸಿ, ಮನನ ಮಾಡಿದ ಋಷಿಗಳು, 'ಅರಿಷಡ್ವರ್ಗ'ಗಳು ಎಂದು ನುಡಿದರು. {{gap}}ಮನಸ್ಸು ಎಂಬುದು ಶಕ್ತಿಯಾದರೂ, ಅರಿಷಡ್ವರ್ಗಗಳಿಂದ ಪ್ರಭಾವಿತವಾದಾಗ, ಮಲಿನವಾಗಬಹುದು ಎಂದು ನಿರ್ಧರಿಸಬಹುದು. ದೇಹದ ಮಲಿನತೆಯೂ, ಮನಸ್ಸಿನ ಮಲಿನತೆಯೂ, ಪ್ರಕೃತಿಯ ಕಾರ್ಯಕ್ರಮದಲ್ಲಿ ಅನಿವಾರ್ಯ ಎನ್ನಬಹುದು. {{gap}}೬. ದೇಹ ಮತ್ತು ಮನಸ್ಸಿನ ಪರಸ್ಪರ ಸಂಬಂಧವನ್ನು ದಿನದಿನದ ಅನುಭವಗಳ ದೃಷ್ಟಿಯಿಂದಲೂ ನೋಡಬಹುದು. {{gap}}(ಅ) ಜ್ವರವು ಉಗ್ರವಾಗಿ ಬಂದಾಗ ರೋಗಿಗೆ ಸನ್ನಿ ಬಡಿದಂತಾಗುತ್ತದೆ. ಮಾನ, ಅವಮಾನ, ಕೆಟ್ಟ ಮಾತು, ಒಳ್ಳೆಯ ಮಾತು ಇವುಗಳನ್ನು ತಾತ್ಕಾಲಿಕವಾಗಿ ಮರೆತು, ಬಡಬಡಿಸುತ್ತಾನೆ. ಕರಪಲ ಮಾಡುತ್ತಾನೆ, ಜ್ವರವು ಉಗ್ರವಾದಾಗ, ಬೇನೆಯ ತೀವ್ರ ವಿಷಯವು ಮೆದುಳಿಗೆ ಅಧಿಕ ಪ್ರಮಾಣದಲ್ಲಿ ಹರಡಿ ಮೆದುಳಿನ ಚಟುವಟಿಕೆಯಿಂದ ಉಂಟಾಗುವ ಮನಸ್ಸು ಎರಿಬಿರಿಯಾಗುತ್ತದೆ. ಬೇನೆಯು ಗುಣವಾದ ಮೇಲೆ ಮನಸ್ಸು ಸ್ವಾಸ್ಥ್ಯಸ್ಥಿತಿಯನ್ನು ಮರಳಿ ಪಡೆಯುತ್ತದೆ. ಅಂದರೆ ದೇಹದಲ್ಲಾಗುವ ಉಗ್ರ ವ್ಯತ್ಯಾಸಗಳು, ಮನಸ್ಸಿನ ಮೇಲೆ ಪ್ರಭಾವವನ್ನು ಹೂಡುತ್ತದೆ.<noinclude></noinclude> lrigjvqk3zqmg33085lrpr4pgvk2728 ಪುಟ:ಮನಮಂಥನ.pdf/೩೦೮ 104 62755 316923 314475 2026-05-04T13:13:30Z Shreesha Sharma 7840 /* Proofread */ 316923 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೨೯೦}}{{Right|ಮನಮಂಥನ}} ಜ್ವರವು ಉಗ್ರವಾದರೆ, ಕೆಲವೇ ದಿನಗಳಲ್ಲಿ ವಾಸಿಯಾಗುತ್ತದೆ. ಅಥವಾ ಮಾರಕವಾಗುತ್ತದೆ. ಆದರೆ ಜ್ವರವು ಉಗ್ರವಾದರೆ, ಸ್ವಲ್ಪವೇ ಆಗಿದ್ದರೆ, ಹಾಗೂ ತಿಂಗಳಾನುಗಟ್ಟಲೆ ಕಾಡುವಂತಹುದಾದರೆ, ಆಗ ಅಂತಹ ಜ್ವರದ ನಂಜು ಅಲ್ಪ ಪ್ರಮಾಣದಲ್ಲಿರುತ್ತದೆ. ಮೆದುಳಿನ ಮೇಲೆ ಅಂತಹ ಅಲ್ಪ ನಂಜು ಪ್ರಚೋದಕವಾಗುತ್ತದೆ. ಅಂದರೆ ಮನಸೂ ಚುರುಕಾಗಿ ಕೆಲಸ ಮಾಡುತ್ತದೆ. ಸ್ಫೂರ್ತಿಯನ್ನು ಪ್ರಚೋದಿಸುತ್ತದೆ. (ಆ) ಜ್ವರವು ಉಗ್ರವಾದಾಗ, ಅಥವಾ ಸೌಮ್ಯವಾಗಿದ್ದಾಗ, ಸನ್ನಿ ಅಥವಾ ಸ್ಫೂರ್ತಿ, ಇವುಗಳು ಕಾಣಬರುತ್ತವೆ. ಅದೇ ರೀತಿಯಲ್ಲಿ ಮಾದಕ ಪದಾರ್ಥಗಳೂ ಮನಸ್ಸಿನ ಮೇಲೆ, ಪ್ರಭಾವವನ್ನು ಬೀರುತ್ತವೆ. ಅಲ್ಪ ಪ್ರಮಾಣದಲ್ಲಿ, ನಿಧಾನವಾಗಿ ಸೇವಿಸಿದಾಗ, ಮನಸ್ಸು ಚುರುಕಾಗುತ್ತದೆ. ಸ್ಫೂರ್ತಿಯೂ ಹೆಚ್ಚುತ್ತದೆ. ಹೆಚ್ಚು ಪ್ರಮಾಣದಲ್ಲಿ ಗಟಗಟನೆ ಇಳಿಸಿದರೆ, ಮನಸ್ಸು ಸನ್ನಿಬಡಿದಂತಾಗುತ್ತದೆ. ಮಾನ ಅವಮಾನ, ಸಭ್ಯ, ಅಸಭ್ಯ ; ಇತ್ಯಾದಿಗಳನ್ನು ಮರೆಯುವುದಲ್ಲದೆ, ವಾಸ್ತವಿಕತೆಯನ್ನೂ ಮರೆಯುತ್ತದೆ. ಎಂತೆಂತದೋ ವಿಕಾರಿ ಭ್ರಮೆಗಳು ಅವನನ್ನು ಕಾಡುತ್ತವೆ. ಅದಕ್ಕನುಗುಣವಾಗಿ ಅವನ ನಡತೆ, ಮಾತು. ಎಲ್ಲರಲ್ಲಿಯೂ ಮಾದಕ ದ್ರವ್ಯಗಳ ಫಲಿತಾಂಶವು ಒಂದೇ ರೀತಿಯಲ್ಲಿ ಇರುತ್ತದೆ ಎನ್ನಲಾಗದು. ಸ್ಫೂರ್ತಿಯು ಸಹಜವಾಗಿದ್ದ ಕೆಲವರು, Confessions of an opium eater ; ತೆರನಾದ ಉತ್ತಮ ಪುಸ್ತಕಗಳನ್ನು ಬರೆಯುತ್ತಾರೆ. ಉಳಿದಂತೆ ಬಹು ಸಂಖ್ಯಾತರು ಮಾದಕ ದ್ರವ್ಯಗಳನ್ನು ಸೇವಿಸಿದಾಗ, ಅಸಭ್ಯ ತೆರನಾಗಿ ತೂರಾಡುತ್ತಾರೆ, ಹುಚ್ಚರಂತೆ ಆಡುತ್ತಾರೆ. ದೈನಂದಿನ ಸಾಮಾನ್ಯ ಅನುಭವದಲ್ಲಿ ವಿಫುಲವಾಗಿ ಈ ಗುಣವನ್ನು ಕಾಣಬಹುದು, ಅಭ್ಯಾಸಕ್ಕೆ ತಕ್ಕಂತೆ ಮೂರು ನಾಲ್ಕು, ಕುಡಿದು ಬಂದ ಸಂಗೀತಗಾರ ಅಥವಾ ನಟ ; ಅಥವಾ, ಹರಿಕಥೆಯ ದಾಸ ; ಇವರುಗಳ ಕೌಶ್ಯಲವು ಅತ್ಯಂತ ಸ್ಫೂರ್ತಿಯಿಂದಿದ್ದು, ಸಭಿಕರ ಮನಸ್ಸನ್ನು ಸೆರೆ ಹಿಡಿಯುತ್ತದೆ. ಕಲಾಕಾರರಲ್ಲಿ ಇಂತಹ ಪ್ರವೃತ್ತಿಯು ಸಾಮಾನ್ಯ ಎನ್ನುವಷ್ಟು ಉದಾಹರಣೆಗಳು ಕಾಣಬರುತ್ತವೆ. ಆದರೆ ಪಡಖಾನೆಯಿಂದ ಗುಂಪು ಗುಂಪಾಗಿ ಸಂಜೆಯಾದ ಮೇಲೆ ಹಿಂತಿರುಗುವ ಬಹು ಸಂಖ್ಯಾತರನ್ನು ನೋಡಿ! ಇಲ್ಲದ ರಸ್ತೆಯಲ್ಲಿ ಅಡ್ಡಾಡುತ್ತಾ, ಅಸಭ್ಯ ಮಾತುಗಳನ್ನು ಹಾಡುಗಳು ಎಂದು ಭ್ರಮಿಸುತ್ತ, ತೂರಾಡುವವರು, ಷಹರಿನಲ್ಲಿ ಪ್ರತಿ ಸಂಜೆಯೂ ಹೇರಳವಾಗಿ ಕಾಣಿಸುತ್ತಾರೆ. ಅಯ್ಯೋ ಪಾಪ ಎಂದನಿಸುತ್ತದೆ, ನೋಡಿದವರಿಗೆ ಒಮ್ಮೊಮ್ಮೆ ನೋಡಿದವರಲ್ಲಿ ಕೆಲವರಿಗಾದರೂ ಮಾತ್ಸರ್ಯವು<noinclude></noinclude> 9b4we5phuwbvn0q3o97ynshlom5ve2a 316940 316923 2026-05-04T13:49:51Z Shreelatha.Halemane 7642 /* Validated */ 316940 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೨೯೦}}{{Right|ಮನಮಂಥನ}} ಜ್ವರವು ಉಗ್ರವಾದರೆ, ಕೆಲವೇ ದಿನಗಳಲ್ಲಿ ವಾಸಿಯಾಗುತ್ತದೆ. ಅಥವಾ ಮಾರಕವಾಗುತ್ತದೆ. {{gap}}ಆದರೆ ಜ್ವರವು ಉಗ್ರವಾದರೆ, ಸ್ವಲ್ಪವೇ ಆಗಿದ್ದರೆ, ಹಾಗೂ ತಿಂಗಳಾನುಗಟ್ಟಲೆ ಕಾಡುವಂತಹುದಾದರೆ, ಆಗ ಅಂತಹ ಜ್ವರದ ನಂಜು ಅಲ್ಪ ಪ್ರಮಾಣದಲ್ಲಿರುತ್ತದೆ. ಮೆದುಳಿನ ಮೇಲೆ ಅಂತಹ ಅಲ್ಪ ನಂಜು ಪ್ರಚೋದಕವಾಗುತ್ತದೆ. ಅಂದರೆ ಮನಸೂ ಚುರುಕಾಗಿ ಕೆಲಸ ಮಾಡುತ್ತದೆ. ಸ್ಫೂರ್ತಿಯನ್ನು ಪ್ರಚೋದಿಸುತ್ತದೆ. {{gap}}(ಆ) ಜ್ವರವು ಉಗ್ರವಾದಾಗ, ಅಥವಾ ಸೌಮ್ಯವಾಗಿದ್ದಾಗ, ಸನ್ನಿ ಅಥವಾ ಸ್ಫೂರ್ತಿ, ಇವುಗಳು ಕಾಣಬರುತ್ತವೆ. ಅದೇ ರೀತಿಯಲ್ಲಿ ಮಾದಕ ಪದಾರ್ಥಗಳೂ ಮನಸ್ಸಿನ ಮೇಲೆ, ಪ್ರಭಾವವನ್ನು ಬೀರುತ್ತವೆ. ಅಲ್ಪ ಪ್ರಮಾಣದಲ್ಲಿ, ನಿಧಾನವಾಗಿ ಸೇವಿಸಿದಾಗ, ಮನಸ್ಸು ಚುರುಕಾಗುತ್ತದೆ. ಸ್ಫೂರ್ತಿಯೂ ಹೆಚ್ಚುತ್ತದೆ. ಹೆಚ್ಚು ಪ್ರಮಾಣದಲ್ಲಿ ಗಟಗಟನೆ ಇಳಿಸಿದರೆ, ಮನಸ್ಸು ಸನ್ನಿಬಡಿದಂತಾಗುತ್ತದೆ. ಮಾನ ಅವಮಾನ, ಸಭ್ಯ, ಅಸಭ್ಯ ; ಇತ್ಯಾದಿಗಳನ್ನು ಮರೆಯುವುದಲ್ಲದೆ, ವಾಸ್ತವಿಕತೆಯನ್ನೂ ಮರೆಯುತ್ತದೆ. ಎಂತೆಂತದೋ ವಿಕಾರಿ ಭ್ರಮೆಗಳು ಅವನನ್ನು ಕಾಡುತ್ತವೆ. ಅದಕ್ಕನುಗುಣವಾಗಿ ಅವನ ನಡತೆ, ಮಾತು. ಎಲ್ಲರಲ್ಲಿಯೂ ಮಾದಕ ದ್ರವ್ಯಗಳ ಫಲಿತಾಂಶವು ಒಂದೇ ರೀತಿಯಲ್ಲಿ ಇರುತ್ತದೆ ಎನ್ನಲಾಗದು. ಸ್ಫೂರ್ತಿಯು ಸಹಜವಾಗಿದ್ದ ಕೆಲವರು, Confessions of an opium eater ; ತೆರನಾದ ಉತ್ತಮ ಪುಸ್ತಕಗಳನ್ನು ಬರೆಯುತ್ತಾರೆ. ಉಳಿದಂತೆ ಬಹು ಸಂಖ್ಯಾತರು ಮಾದಕ ದ್ರವ್ಯಗಳನ್ನು ಸೇವಿಸಿದಾಗ, ಅಸಭ್ಯ ತೆರನಾಗಿ ತೂರಾಡುತ್ತಾರೆ, ಹುಚ್ಚರಂತೆ ಆಡುತ್ತಾರೆ. {{gap}}ದೈನಂದಿನ ಸಾಮಾನ್ಯ ಅನುಭವದಲ್ಲಿ ವಿಫುಲವಾಗಿ ಈ ಗುಣವನ್ನು ಕಾಣಬಹುದು, ಅಭ್ಯಾಸಕ್ಕೆ ತಕ್ಕಂತೆ ಮೂರು ನಾಲ್ಕು, ಕುಡಿದು ಬಂದ ಸಂಗೀತಗಾರ ಅಥವಾ ನಟ ; ಅಥವಾ, ಹರಿಕಥೆಯ ದಾಸ ; ಇವರುಗಳ ಕೌಶ್ಯಲವು ಅತ್ಯಂತ ಸ್ಫೂರ್ತಿಯಿಂದಿದ್ದು, ಸಭಿಕರ ಮನಸ್ಸನ್ನು ಸೆರೆ ಹಿಡಿಯುತ್ತದೆ. ಕಲಾಕಾರರಲ್ಲಿ ಇಂತಹ ಪ್ರವೃತ್ತಿಯು ಸಾಮಾನ್ಯ ಎನ್ನುವಷ್ಟು ಉದಾಹರಣೆಗಳು ಕಾಣಬರುತ್ತವೆ. ಆದರೆ ಪಡಖಾನೆಯಿಂದ ಗುಂಪು ಗುಂಪಾಗಿ ಸಂಜೆಯಾದ ಮೇಲೆ ಹಿಂತಿರುಗುವ ಬಹು ಸಂಖ್ಯಾತರನ್ನು ನೋಡಿ! ಇಲ್ಲದ ರಸ್ತೆಯಲ್ಲಿ ಅಡ್ಡಾಡುತ್ತಾ, ಅಸಭ್ಯ ಮಾತುಗಳನ್ನು ಹಾಡುಗಳು ಎಂದು ಭ್ರಮಿಸುತ್ತ, ತೂರಾಡುವವರು, ಷಹರಿನಲ್ಲಿ ಪ್ರತಿ ಸಂಜೆಯೂ ಹೇರಳವಾಗಿ ಕಾಣಿಸುತ್ತಾರೆ. ಅಯ್ಯೋ ಪಾಪ ಎಂದನಿಸುತ್ತದೆ, ನೋಡಿದವರಿಗೆ ಒಮ್ಮೊಮ್ಮೆ ನೋಡಿದವರಲ್ಲಿ ಕೆಲವರಿಗಾದರೂ ಮಾತ್ಸರ್ಯವು<noinclude></noinclude> 2473xbtdw8htzl9wjdeqbev8sfplqxf ಪುಟ:ಮನಮಂಥನ.pdf/೩೦೯ 104 62756 316924 314476 2026-05-04T13:14:13Z Shreesha Sharma 7840 /* Proofread */ 316924 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಮನಸ್ಸಿನ ಸ್ವರೂಪ}}{{Right|೨೯೧}} ಉಂಟಾಗುತ್ತದೆ, ಕ್ಷಣಕಾಲ. ಅಂದರೆ ಸಭ್ಯ ರೀತಿಯಲ್ಲಿ, ಶಿಸ್ತಿನ ಬಾಳನ್ನು ದೃಢತೆಯಿಂದ ಸಾಧಿಸುವ, ಸಮಾಜದಲ್ಲಿ ಸೈ ಎಂದನಿಸಿಕೊಂಡ ಸಾಧುಗಳಲ್ಲಿ ಕೂಡ, ಸಮಾಜದ ಕಟ್ಟುಪಾಡುಗಳನ್ನು ಅಲ್ಲಗಳೆದ, ದುರಭ್ಯಾಸಿಗಳನ್ನು ಕಂಡು, ಮರುಕವೂ, ಜತೆಯಲ್ಲಿ ಮಾತ್ಸಲ್ಯದ ಅಂಚೂ, ಎರಡೂ ಕಾಣಬರುತ್ತವೆ. ಮಾತ್ಸಲ್ಯವನ್ನು ಅರಿ-ಷಡ್ವರ್ಗದ-ಒಂದನ್ನು ಬಲಿಹಾಕಲು, ಅಂತಹವರಿಗೆ ಸ್ಫೂರ್ತಿಯು ಹೆಡೆಯೆತ್ತಿ ಆಡತೊಡಗುತ್ತದೆ. ಆಗ ಮಾತ್ಸರವು ಮರುಕದ ಹಿನ್ನೆಲೆಯಲ್ಲಿ, ಅನುಕಂಪದ ಪರದೆಯ ಮುಂದೆ, 'ಯೆಂಡ್ಕುಡುಕ' ರತ್ನವಾಗುತ್ತದೆ. ಕುಡಿಯದೇ ಇದ್ದರೂ, ಕುಡಿದವರಿಗಿಂತ ಅತ್ಯಮೋಘವಾಗಿ ಸ್ಫೂರ್ತಿಯನ್ನು ಪಡೆದು ಅಮರರಾಗುತ್ತಾರೆ; ಚಿರಂಜೀವಿಗಳಾಗುತ್ತಾರೆ. ಸಹಸ್ರಮಂದಿ ಕುಡಿಯುವವರನ್ನು, ಕುಡಿದು ನರಳುವವರನ್ನು ಕಂಡು, ಮರುಕದಿಂದ ನುಡಿಯುವವನು, ಮಾತ್ಸಲ್ಯದಿಂದ ಕ್ಷಣಾಂಶ ಪ್ರಚೋದಿತನಾಗಿ, 'ಪುರುಷಾಯ ಶಾಶ್ವತ' ನಾಗುತ್ತಾನೆ. ಮರುಕದ ಮಹಾ ಪ್ರತೀಕನಾಗುತ್ತಾನೆ. 'ಮಹಾ ಕರುಣಿ' ಯಾಗುತ್ತಾನೆ. ಮಾದಕ ದ್ರವ್ಯಗಳಿಂದ ಮನಸ್ಸು ಈ ವಿಪರೀತಗಳನ್ನು ಅನುಭವಿಸುತ್ತದೆ; ನಡವಳಿಕೆಯಲ್ಲಿ ತೋರಗೊಡುತ್ತದೆ ಆದರೆ ಸಾಮಾನ್ಯವಾಗಿ ಉಣ್ಣುವ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೆ ಮನಸ್ಸಿನ ಚುರುಕು, ಕಡಿಮೆಯಾಗುವುದೂ ಉಂಟು. ಅವರೆಕಾಯಿ ಉಪ್ಪಿಟ್ಟಿಗೆ ಆ್ಯಂಡಿ ಮೊಸರನ್ನು ಕಲಸಿ ಗಡದ್ದಾಗಿ ತಿಂದರೆ, ಅನಂತರ ಮನಸ್ಸು ಜಡವಾಗುತ್ತದೆ. ಓದಲು ಮಾದಕ ಪದಾರ್ಥಗಳನ್ನು ಸೇವಿಸಿದಂತೆ ಆಗುತ್ತದೆ. ಆದರೆ ಮೊದಮೊದಲ ಹಂತದಲ್ಲಿ ಮನಸ್ಸು ಚುರುಕೇನೂ ಆಗುವುದಿಲ್ಲ. ತೆಪ್ಪಗೆ ಬಿದ್ದುಕೊಳ್ಳೋಣ ಎನಿಸುತ್ತದೆ. ಸಾಮಾನ್ಯವಾಗಿ ಸಭ್ಯಸ್ಥರೂ ಸೇವಿಸುವ ಕಾಫಿ, ಟೀ, ಇತ್ಯಾದಿ ಪಾನೀಯಗಳು, ಮನಸ್ಸಿನ ಚುರುಕನ್ನು ಹೆಚ್ಚಿಸುತ್ತದೆ. ಪರೀಕ್ಷೆಗೆಂದು ಓದುವವರಿಗೆ ಇದು ಸ್ವಯಂ ವೇದ್ಯ. ಜಲ, ಮಲ ವಿಸರ್ಜನೆಯಲ್ಲಿ ಕಸಿವಿಸಿಗೊಂಡಿರುವವನು, ತನ್ನ ಮನಸ್ಸನ್ನು ಸಹಜರೀತಿಯಲ್ಲಿ ನಡೆಸಲಾರ. ಅಂತಹವನ ಮನಸ್ಸು ಸ್ವಲ್ಪ ಮಟ್ಟಿಗೆ ವಕ್ರವಾಗಿಯೇ ನಡೆಯುತ್ತದೆ. ಎಲ್ಲದರಲ್ಲಿಯೂ ಎಲ್ಲರಲ್ಲಿಯೂ ತಪ್ಪುಗಳನ್ನೇ ಗಮನಿಸುತ್ತಾನೆ. ಮುಖವನ್ನು ಸಿಂಡರಿಸಿಕೊಂಡು ವಿನಾಕಾರಣ ರೇಗುತ್ತಾನೆ. ವಿಸರ್ಜನಾ ಕ್ರಮಗಳು ಸುಸೂತ್ರವಾಗಿದ್ದಾಗ, ಅದೇ ಮನುಷ್ಯ ನಗುನಗುತಲಿದ್ದು, ಎಲ್ಲದರಲ್ಲಿಯೂ ಒಪ್ಪನ್ನೇ ಕಾಣುತ್ತಾನೆ. ಆಗ ಅವನ ಮನಸ್ಸು ಹಗುರ ; ಚುರುಕಾಗಿ ಕೆಲಸ ಮಾಡುತ್ತಾನೆ.<noinclude></noinclude> d09ww2pfb1abg72jkpl8vf66kr7jkan 316941 316924 2026-05-04T13:50:10Z Shreelatha.Halemane 7642 /* Validated */ 316941 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಮನಸ್ಸಿನ ಸ್ವರೂಪ}}{{Right|೨೯೧}} ಉಂಟಾಗುತ್ತದೆ, ಕ್ಷಣಕಾಲ. ಅಂದರೆ ಸಭ್ಯ ರೀತಿಯಲ್ಲಿ, ಶಿಸ್ತಿನ ಬಾಳನ್ನು ದೃಢತೆಯಿಂದ ಸಾಧಿಸುವ, ಸಮಾಜದಲ್ಲಿ ಸೈ ಎಂದನಿಸಿಕೊಂಡ ಸಾಧುಗಳಲ್ಲಿ ಕೂಡ, ಸಮಾಜದ ಕಟ್ಟುಪಾಡುಗಳನ್ನು ಅಲ್ಲಗಳೆದ, ದುರಭ್ಯಾಸಿಗಳನ್ನು ಕಂಡು, ಮರುಕವೂ, ಜತೆಯಲ್ಲಿ ಮಾತ್ಸಲ್ಯದ ಅಂಚೂ, ಎರಡೂ ಕಾಣಬರುತ್ತವೆ. ಮಾತ್ಸಲ್ಯವನ್ನು ಅರಿ-ಷಡ್ವರ್ಗದ-ಒಂದನ್ನು ಬಲಿಹಾಕಲು, ಅಂತಹವರಿಗೆ ಸ್ಫೂರ್ತಿಯು ಹೆಡೆಯೆತ್ತಿ ಆಡತೊಡಗುತ್ತದೆ. ಆಗ ಮಾತ್ಸರವು ಮರುಕದ ಹಿನ್ನೆಲೆಯಲ್ಲಿ, ಅನುಕಂಪದ ಪರದೆಯ ಮುಂದೆ, 'ಯೆಂಡ್ಕುಡುಕ' ರತ್ನವಾಗುತ್ತದೆ. ಕುಡಿಯದೇ ಇದ್ದರೂ, ಕುಡಿದವರಿಗಿಂತ ಅತ್ಯಮೋಘವಾಗಿ ಸ್ಫೂರ್ತಿಯನ್ನು ಪಡೆದು ಅಮರರಾಗುತ್ತಾರೆ; ಚಿರಂಜೀವಿಗಳಾಗುತ್ತಾರೆ. ಸಹಸ್ರಮಂದಿ ಕುಡಿಯುವವರನ್ನು, ಕುಡಿದು ನರಳುವವರನ್ನು ಕಂಡು, ಮರುಕದಿಂದ ನುಡಿಯುವವನು, ಮಾತ್ಸಲ್ಯದಿಂದ ಕ್ಷಣಾಂಶ ಪ್ರಚೋದಿತನಾಗಿ, 'ಪುರುಷಾಯ ಶಾಶ್ವತ' ನಾಗುತ್ತಾನೆ. ಮರುಕದ ಮಹಾ ಪ್ರತೀಕನಾಗುತ್ತಾನೆ. 'ಮಹಾ ಕರುಣಿ' ಯಾಗುತ್ತಾನೆ. {{gap}}ಮಾದಕ ದ್ರವ್ಯಗಳಿಂದ ಮನಸ್ಸು ಈ ವಿಪರೀತಗಳನ್ನು ಅನುಭವಿಸುತ್ತದೆ; ನಡವಳಿಕೆಯಲ್ಲಿ ತೋರಗೊಡುತ್ತದೆ ಆದರೆ ಸಾಮಾನ್ಯವಾಗಿ ಉಣ್ಣುವ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೆ ಮನಸ್ಸಿನ ಚುರುಕು, ಕಡಿಮೆಯಾಗುವುದೂ ಉಂಟು. ಅವರೆಕಾಯಿ ಉಪ್ಪಿಟ್ಟಿಗೆ ಆ್ಯಂಡಿ ಮೊಸರನ್ನು ಕಲಸಿ ಗಡದ್ದಾಗಿ ತಿಂದರೆ, ಅನಂತರ ಮನಸ್ಸು ಜಡವಾಗುತ್ತದೆ. ಓದಲು ಮಾದಕ ಪದಾರ್ಥಗಳನ್ನು ಸೇವಿಸಿದಂತೆ ಆಗುತ್ತದೆ. ಆದರೆ ಮೊದಮೊದಲ ಹಂತದಲ್ಲಿ ಮನಸ್ಸು ಚುರುಕೇನೂ ಆಗುವುದಿಲ್ಲ. ತೆಪ್ಪಗೆ ಬಿದ್ದುಕೊಳ್ಳೋಣ ಎನಿಸುತ್ತದೆ. ಸಾಮಾನ್ಯವಾಗಿ ಸಭ್ಯಸ್ಥರೂ ಸೇವಿಸುವ ಕಾಫಿ, ಟೀ, ಇತ್ಯಾದಿ ಪಾನೀಯಗಳು, ಮನಸ್ಸಿನ ಚುರುಕನ್ನು ಹೆಚ್ಚಿಸುತ್ತದೆ. ಪರೀಕ್ಷೆಗೆಂದು ಓದುವವರಿಗೆ ಇದು ಸ್ವಯಂ ವೇದ್ಯ. {{gap}}ಜಲ, ಮಲ ವಿಸರ್ಜನೆಯಲ್ಲಿ ಕಸಿವಿಸಿಗೊಂಡಿರುವವನು, ತನ್ನ ಮನಸ್ಸನ್ನು ಸಹಜರೀತಿಯಲ್ಲಿ ನಡೆಸಲಾರ. ಅಂತಹವನ ಮನಸ್ಸು ಸ್ವಲ್ಪ ಮಟ್ಟಿಗೆ ವಕ್ರವಾಗಿಯೇ ನಡೆಯುತ್ತದೆ. ಎಲ್ಲದರಲ್ಲಿಯೂ ಎಲ್ಲರಲ್ಲಿಯೂ ತಪ್ಪುಗಳನ್ನೇ ಗಮನಿಸುತ್ತಾನೆ. ಮುಖವನ್ನು ಸಿಂಡರಿಸಿಕೊಂಡು ವಿನಾಕಾರಣ ರೇಗುತ್ತಾನೆ. ವಿಸರ್ಜನಾ ಕ್ರಮಗಳು ಸುಸೂತ್ರವಾಗಿದ್ದಾಗ, ಅದೇ ಮನುಷ್ಯ ನಗುನಗುತಲಿದ್ದು, ಎಲ್ಲದರಲ್ಲಿಯೂ ಒಪ್ಪನ್ನೇ ಕಾಣುತ್ತಾನೆ. ಆಗ ಅವನ ಮನಸ್ಸು ಹಗುರ ; ಚುರುಕಾಗಿ ಕೆಲಸ ಮಾಡುತ್ತಾನೆ.<noinclude></noinclude> 0jmkv626bh6zdrh5wii1ws26lhd58sl ಪುಟ:ಮನಮಂಥನ.pdf/೩೧೦ 104 62757 316928 314477 2026-05-04T13:22:22Z Shreesha Sharma 7840 /* Proofread */ 316928 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೨೯೨}}{{Right|ಮನಮಂಥನ}} ಅಂದರೆ ದೇಹದ ವಿಧವಿಧ ಸ್ಥಿತಿಗಳು ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮವನ್ನುಂಟುಮಾಡುತ್ತದೆ ಎಂಬುದು ಸ್ಪಷ್ಟವಾಯಿತು. ಅದೇ ರೀತಿಯಲ್ಲಿ ಮನಸ್ಸಿನಲ್ಲಾಗುವ ಆತಂಕ, ದುಃಖ, ಸುಖ, ಇತ್ಯಾದಿಗಳು ದೇಹದ ಮೇಲೆ ಪರಿಣಾಮವನ್ನುಂಟುಮಾಡುತ್ತದೆಯೇ ? ಖಂಡಿತವಾಗಿಯೂ ಹೌದು. ದಿನವೆಲ್ಲಾ ದೇಹಶ್ರಮದಿಂದ ದುಡಿದು ಬಂದ ಕಾರ್ಖಾನೆಯ ಕೆಲಸಗಾರ, ಮನೆಗೆ ಹಿಂತಿರುಗುವಾಗ 'ಸರ್ವಂಭಕ್ಷಯಾಮಿ' ಎನ್ನುವಂತೆ ಹಸಿದಿರುತ್ತಾನೆ. ಆದರೆ ಮನೆಗೆ ಬಂದಾಗ ಮಗುವಿಗೆ ಕೆಂಡಾಮಂಡಲ ಜ್ವರ ಬಂದಿದ್ದರೆ, ಊಟವನ್ನು ಮಾಡುವುದೇ ಇಲ್ಲ. ತೌರಿಗೆ ಹೆಂಡತಿಯು ಹೋದಾಗ, ಮೊದಲ ಹೆರಿಗೆಗೆ, ಅಡಿಗೆ ಮನೆಯಲ್ಲಿ ಒಬ್ಬನೇ ಕೂತು ಊಟಮಾಡುವಾಗ, ಎರಡೇ ತುತ್ತಿಗೆ ಸಾಕು ಎನಿಸುತ್ತದೆ. ಹಸಿವು ಮುಚ್ಚಿಹೋಗುತ್ತದೆ. ತೌರಿಂದ ಹೆಂಡತಿಯು ಹಿಂತಿರುಗಿದ ಮೇಲೆ ಝಝಣದ, ಹಿನ್ನೆಲೆಯಲ್ಲಿ ಆಕೆಯು ಉಪ್ಪಿಲ್ಲದ ಅಡಿಗೆಯನ್ನು ಬಡಿಸಿದರೂ, ನಾಲ್ಕು ತುತ್ತು ಹೆಚ್ಚು ತಿನ್ನುತ್ತಾನೆ. ವರಮಾನ ತೆರಿಗೆಯ ಲೆಕ್ಕವನ್ನು ನಂಬುವಂತೆ ಬರೆಯಲು ಕುಳಿತ ಸಾಹುಕಾರನಿಗೆ, ಹಸಿವಾಗುವುದೇ ಇಲ್ಲ. ಹೆಂಡತಿಯ ಕಾಟಕ್ಕೆ ಎರಡು ರೊಟ್ಟಿಯನ್ನು ತಿಂದು ಮುಗಿಸಿ, ಕಟ್ಟುಕತೆಯನ್ನು ಲೆಕ್ಕದಲ್ಲಿ ಹೇಗೆ ಬರೆದು ನಂಬಿಸಬಹುದು ಎಂಬ ಆತಂಕದಲ್ಲಿ ಮಗ್ನನಾಗಿರುತ್ತಾನೆ. ಚುನಾವಣೆಗಳಲ್ಲಿ ಠೇವಣಿ ಹಣವನ್ನು ಕಳೆದುಕೊಂಡ ಅಭ್ಯರ್ಥಿಯು ಒಂದೆರಡು ವಾರ ತದನಂತರ ಊಟವನ್ನು ಮಾಡುತ್ತಾನಾದರೂ, ಸವಿಯುವುದಿಲ್ಲ. ಮನಸ್ಸು ಕಹಿಯಾದಂತೆ, ಆಗ ಅವನ ನಾಲಿಗೆಯೂ ಕಹಿಯಿಂದ ಲೇಪಿಸಿದಂತಾಗುತ್ತದೆ. ಕಾಮಾತುರನಾದವನು, ಇಷ್ಟಾರ್ಥವು ಲಭಿಸಿ ಕಾರ್ಯಗತವಾಗುವ ತನಕ, ಅನ್ನ ನೀರುಗಳನ್ನು ನಿರ್ಲಕ್ಷಿಸಿ ಕೃಶನಾಗುತ್ತಾನೆ, ಕ್ಷಯಿಸುತ್ತಾನೆ, ಕೃಷ್ಣಪಕ್ಷದ ಚಂದಿರನಂತೆ. ದೀಪಾವಳಿಗೆಂದು ಮೊದಲ ಬಾರಿಗೆ ಬಂದ ಅಳಿಯನಿಗೆ, ಅತ್ತೆಯು ಬಡಿಸಿದ ಪರಮಾನ್ನದ ಮೇಲೆ ದೃಷ್ಟಿಯೂ ಇರುವುದಿಲ್ಲ. ಪಿಶಾಚಿ, ದೆವ್ವ, ಭೂತ, ಇತ್ಯಾದಿ ಜಾನಪದ ನಂಬಿಕೆಗಳಲ್ಲಿ ಮಾನಸಿಕ ಅಲ್ಲೋಲಕಲ್ಲೋಲದಿಂದ, ದೇಹದ ಮೇಲೆ ಆಗುವ ಪರಿಣಾಮಗಳನ್ನು ಸ್ಪಷ್ಟವಾಗಿ ಕಾಣಬಹುದು. ಮೋಹಿನಿ ಎನ್ನುವ, ಬಿಳಿ ಸೀರೆಯನ್ನುಟ್ಟು, ಬಿಳಿ ಸೆರಗನ್ನು ಹಾರಿಸುತ್ತ, ಕಪ್ಪಂಕತ್ತಲೆಯಲ್ಲಿ ಬೆಳ್ಳಂಬೆಳದಿಂಗಳನ್ನು ಹರಡುತ್ತ, ಪಿಶಾಚಿಯು ಅರೆಗೋಚರವಾಗಿ ತೇಲಾಡುತ್ತದಂತೆ. ಕಾಮಾತುರನಾದ, ಆದರೂ ಸಮಾಜದ ಕಟ್ಟುಪಾಡುಗಳಿಗೆ<noinclude></noinclude> eud87ptu2na96erj8kbheh1sjl2pjvx 316943 316928 2026-05-04T13:50:39Z Shreelatha.Halemane 7642 /* Validated */ 316943 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೨೯೨}}{{Right|ಮನಮಂಥನ}} ಅಂದರೆ ದೇಹದ ವಿಧವಿಧ ಸ್ಥಿತಿಗಳು ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮವನ್ನುಂಟುಮಾಡುತ್ತದೆ ಎಂಬುದು ಸ್ಪಷ್ಟವಾಯಿತು. {{gap}}ಅದೇ ರೀತಿಯಲ್ಲಿ ಮನಸ್ಸಿನಲ್ಲಾಗುವ ಆತಂಕ, ದುಃಖ, ಸುಖ, ಇತ್ಯಾದಿಗಳು ದೇಹದ ಮೇಲೆ ಪರಿಣಾಮವನ್ನುಂಟುಮಾಡುತ್ತದೆಯೇ ? ಖಂಡಿತವಾಗಿಯೂ ಹೌದು. {{gap}}ದಿನವೆಲ್ಲಾ ದೇಹಶ್ರಮದಿಂದ ದುಡಿದು ಬಂದ ಕಾರ್ಖಾನೆಯ ಕೆಲಸಗಾರ, ಮನೆಗೆ ಹಿಂತಿರುಗುವಾಗ 'ಸರ್ವಂಭಕ್ಷಯಾಮಿ' ಎನ್ನುವಂತೆ ಹಸಿದಿರುತ್ತಾನೆ. ಆದರೆ ಮನೆಗೆ ಬಂದಾಗ ಮಗುವಿಗೆ ಕೆಂಡಾಮಂಡಲ ಜ್ವರ ಬಂದಿದ್ದರೆ, ಊಟವನ್ನು ಮಾಡುವುದೇ ಇಲ್ಲ. ತೌರಿಗೆ ಹೆಂಡತಿಯು ಹೋದಾಗ, ಮೊದಲ ಹೆರಿಗೆಗೆ, ಅಡಿಗೆ ಮನೆಯಲ್ಲಿ ಒಬ್ಬನೇ ಕೂತು ಊಟಮಾಡುವಾಗ, ಎರಡೇ ತುತ್ತಿಗೆ ಸಾಕು ಎನಿಸುತ್ತದೆ. ಹಸಿವು ಮುಚ್ಚಿಹೋಗುತ್ತದೆ. ತೌರಿಂದ ಹೆಂಡತಿಯು ಹಿಂತಿರುಗಿದ ಮೇಲೆ ಝಝಣದ, ಹಿನ್ನೆಲೆಯಲ್ಲಿ ಆಕೆಯು ಉಪ್ಪಿಲ್ಲದ ಅಡಿಗೆಯನ್ನು ಬಡಿಸಿದರೂ, ನಾಲ್ಕು ತುತ್ತು ಹೆಚ್ಚು ತಿನ್ನುತ್ತಾನೆ. ವರಮಾನ ತೆರಿಗೆಯ ಲೆಕ್ಕವನ್ನು ನಂಬುವಂತೆ ಬರೆಯಲು ಕುಳಿತ ಸಾಹುಕಾರನಿಗೆ, ಹಸಿವಾಗುವುದೇ ಇಲ್ಲ. ಹೆಂಡತಿಯ ಕಾಟಕ್ಕೆ ಎರಡು ರೊಟ್ಟಿಯನ್ನು ತಿಂದು ಮುಗಿಸಿ, ಕಟ್ಟುಕತೆಯನ್ನು ಲೆಕ್ಕದಲ್ಲಿ ಹೇಗೆ ಬರೆದು ನಂಬಿಸಬಹುದು ಎಂಬ ಆತಂಕದಲ್ಲಿ ಮಗ್ನನಾಗಿರುತ್ತಾನೆ. ಚುನಾವಣೆಗಳಲ್ಲಿ ಠೇವಣಿ ಹಣವನ್ನು ಕಳೆದುಕೊಂಡ ಅಭ್ಯರ್ಥಿಯು ಒಂದೆರಡು ವಾರ ತದನಂತರ ಊಟವನ್ನು ಮಾಡುತ್ತಾನಾದರೂ, ಸವಿಯುವುದಿಲ್ಲ. ಮನಸ್ಸು ಕಹಿಯಾದಂತೆ, ಆಗ ಅವನ ನಾಲಿಗೆಯೂ ಕಹಿಯಿಂದ ಲೇಪಿಸಿದಂತಾಗುತ್ತದೆ. {{gap}}ಕಾಮಾತುರನಾದವನು, ಇಷ್ಟಾರ್ಥವು ಲಭಿಸಿ ಕಾರ್ಯಗತವಾಗುವ ತನಕ, ಅನ್ನ ನೀರುಗಳನ್ನು ನಿರ್ಲಕ್ಷಿಸಿ ಕೃಶನಾಗುತ್ತಾನೆ, ಕ್ಷಯಿಸುತ್ತಾನೆ, ಕೃಷ್ಣಪಕ್ಷದ ಚಂದಿರನಂತೆ. ದೀಪಾವಳಿಗೆಂದು ಮೊದಲ ಬಾರಿಗೆ ಬಂದ ಅಳಿಯನಿಗೆ, ಅತ್ತೆಯು ಬಡಿಸಿದ ಪರಮಾನ್ನದ ಮೇಲೆ ದೃಷ್ಟಿಯೂ ಇರುವುದಿಲ್ಲ. {{gap}}ಪಿಶಾಚಿ, ದೆವ್ವ, ಭೂತ, ಇತ್ಯಾದಿ ಜಾನಪದ ನಂಬಿಕೆಗಳಲ್ಲಿ ಮಾನಸಿಕ ಅಲ್ಲೋಲಕಲ್ಲೋಲದಿಂದ, ದೇಹದ ಮೇಲೆ ಆಗುವ ಪರಿಣಾಮಗಳನ್ನು ಸ್ಪಷ್ಟವಾಗಿ ಕಾಣಬಹುದು. {{gap}}ಮೋಹಿನಿ ಎನ್ನುವ, ಬಿಳಿ ಸೀರೆಯನ್ನುಟ್ಟು, ಬಿಳಿ ಸೆರಗನ್ನು ಹಾರಿಸುತ್ತ, ಕಪ್ಪಂಕತ್ತಲೆಯಲ್ಲಿ ಬೆಳ್ಳಂಬೆಳದಿಂಗಳನ್ನು ಹರಡುತ್ತ, ಪಿಶಾಚಿಯು ಅರೆಗೋಚರವಾಗಿ ತೇಲಾಡುತ್ತದಂತೆ. ಕಾಮಾತುರನಾದ, ಆದರೂ ಸಮಾಜದ ಕಟ್ಟುಪಾಡುಗಳಿಗೆ<noinclude></noinclude> j9myb5mn4b0enp9eb7fiymy4kufdzrf ಪುಟ:ಮನಮಂಥನ.pdf/೩೧೧ 104 62758 316927 314478 2026-05-04T13:17:15Z Shreesha Sharma 7840 /* Proofread */ 316927 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಮನಸ್ಸಿನ ಸ್ವರೂಪ}}{{Right|೨೯೩}} ಬಿಗಿಯಲ್ಪಟ್ಟ ಯುವಕನು ಈ ಪಿಶಾಚಿಯನ್ನು ಕಾಣುತ್ತಾನಂತೆ. ಅದನ್ನು ಕಂಡು ಬೆಬ್ಬರಗಾಗುತ್ತಾನಂತೆ. ಆಗ ಮೋಹಿನಿಯೇ ಗೆಜ್ಜೆಗಳನ್ನು ಕುಣಿಸುತ್ತಾ, ಹೆಜ್ಜೆಗಳನ್ನು ಮುಂದುಮುಂದಕ್ಕೆ ಹಾಕಿ, ಚೆಂದೊಳ್ಳಿ ಯುವಕನನ್ನು ಅಪ್ಪಿಕೊಳ್ಳುತ್ತದಂತೆ. ಅಪ್ಪಿಕೊಂಡು, ಅವನ ಸತ್ವವನ್ನೇ ಹೀರಿಬಿಡುತ್ತದಂತೆ. ಅನಂತರ ವಾಸ್ತವಿಕ ಪ್ರಪಂಚದಲ್ಲಿ, ಅವನ ಮಾನ ಮರ್ಯಾದೆಗಳು ಸುರಕ್ಷಿತವಾಗಿರುತ್ತದಂತೆ. ಆದರೆ ಅವನ ದೇಹವು, ಕ್ಷೀಣವಾಗಿ, ಸತ್ವವು ಕರಗುತ್ತಾ ನೀರಾಗುತ್ತದಂತೆ. ಮೋಹಿನೀ ಪಿಶಾಚಿಯು ಹಿಡಿದು ಅದುಮಿಕೊಂಡರೆ ಯವ್ವನದ ಯುವಕನು ಕ್ಷಯಿಸುವನಂತೆ. ಅಸುರರಿಗೆ, ಪುರಾಣದ ಕತೆಗಳಲ್ಲಿ, ಮೋಹಿನಿಯು ಮೋಸಗೊಳಿಸುವುದನ್ನು ಇಲ್ಲಿ ನೆನಪು ಮಾಡಿಕೊಂಡು, ಪುರಾಣದ ಕತೆಗಳೂ, ಜನರಲ್ಲಿ ರೂಢಿತವಾದ ಪಿಶಾಚಿಗಳ ನಂಬಿಕೆಗಳಿಗೂ, ಇಂದಿನ ಮಾನವ ಮನಸ್ಸಿನ ಅರಿವನ್ನು ಪಡೆಯಲು ಶ್ರದ್ಧೆಯಿಂದ ಶ್ರಮಿಸಿದ ಮನೋವಿಜ್ಞಾನಿಗಳ, ತಾತ್ಕಾಲಿಕ ನಿರ್ಧಾರಕ್ಕೂ, ನಂಟು ಮತ್ತು ಗಂಟು ಇರುವುದನ್ನು ಸ್ಪಷ್ಟವಾಗಿ ಕಾಣಬಹುದು. ದೆವ್ವ ಹಿಡಿದಿದೆ, ಪಿಶಾಚಿಯು ಮೆಟ್ಟಿಕೊಂಡಿದೆ, ಎಂದು ಕರೆಯಲ್ಪಡುವ ರೋಗಿಗಳು, ನಡವಳಿಕೆಯಲ್ಲಿ ವಿಪರೀತವಾದ ಹಾಗೂ ಅಭಾಸವಾದ ವರ್ತನೆಯನ್ನು ಕಾಣಿಸುತ್ತಾರೆ. ಕೆಲವರು ಬಕಾಸುರನಂತೆ ಮೇಲಿಂದ ಮೇಲೆ ತಿನ್ನುತ್ತಲೇ ಇರುತ್ತಾರೆ. ಧಾಂಡಿಗರಂತೆ ಹೊರವಾಗಿ ಬೆಳೆಯುತ್ತಾರೆ. ಯಾವ ನಿರ್ದಿಷ್ಟ ಕೆಲಸವನ್ನೂ ಮಾಡುವುದಿಲ್ಲ, ಹುಚ್ಚುನಾಯಿಯಂತೆ ಅಲೆದಾಡುತ್ತಾರೆ. ಅವರ ಆ ಕ್ಷಣದ ಇಷ್ಟಕ್ಕೆ ವಿರುದ್ಧವಾಗಿ ಯಾರಾದರೂ ತಡೆ ಹಾಕಿದರೆ, ಹುಚ್ಚಾಪಟ್ಟೆ ರೇಗುತ್ತಾರೆ, ಅಥವಾ ಬೆಪ್ಪು ಬಡಿದವರಂತೆ ಮೂಲೆ ಹಿಡಿಯುತ್ತಾರೆ, ಅಥವಾ ಹಾಸಿಗೆಯಲ್ಲಿ ಉರುಟಿಕೊಂಡಿರುತ್ತಾರೆ. ಮತ್ತೆ ಕೆಲವು ಪಿಶಾಚಿ ಮೆಟ್ಟಿದವರು, ಆಹಾರದ ಮೇಲೆ ನಿರ್ಲಕ್ಷ್ಯವನ್ನು ತೋರಿಸುತ್ತಾರೆ, ಕೃಶರಾಗುತ್ತಾರೆ. ಪಿಶಾಚಿಗಳು, ದೆವ್ವಗಳು, ಭೂತಗಳು ಇವು ಅಮರಿಕೊಂಡಿವೆ ಎಂದು ಜನರು ಹೇಳುವುದು, ಮಾನಸಿಕ ಪಲ್ಲಟವಾದವರನ್ನು ಕುರಿತು. ದೆವ್ವವು ಹಿಡಿದಿದೆ ಎಂದಾಗ ನಮ್ಮ ಹತೋಟಿಯಲ್ಲಿರದೆ ಇತರ ಯಾವುದೋ ಅಗೋಚರವಾದ ದುಷ್ಟಶಕ್ತಿಯು, ಹೊರಗಿನಿಂದ ಬಂದು ರೋಗಿಯನ್ನು ಕಾಡಿ ನಡೆಸುತ್ತದೆ ಎಂದು ಭಾವಿಸುತ್ತೇವೆ. ರೋಗಿಯ ತಪ್ಪು ಇದರಲ್ಲೇನೂ ಇಲ್ಲ. ಆದರೆ ಮಾನಸಿಕ ರೋಗವು ಬಡಿದಿದೆ ಎಂದಾಗ, ಅಂತಹ ರೋಗಿಯ ಮನಸ್ಸು ಸಧೃಡವಾಗಿಲ್ಲ, ಆದಕಾರಣ ಪಲ್ಲಟವಾಯಿತು ಎಂಬ ಅರ್ಥವು ಬರುತ್ತದೆ. ರೋಗಿಯ ಸ್ವಂತ ಲೋಪದೋಷಗಳಿಂದ ಹೀಗಾಯಿತು ಎಂದರೆ ರೋಗಿಗೆ<noinclude></noinclude> 7l1pkmnvrir8xxntdi2te3srdchpiyf 316944 316927 2026-05-04T13:51:01Z Shreelatha.Halemane 7642 /* Validated */ 316944 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಮನಸ್ಸಿನ ಸ್ವರೂಪ}}{{Right|೨೯೩}} ಬಿಗಿಯಲ್ಪಟ್ಟ ಯುವಕನು ಈ ಪಿಶಾಚಿಯನ್ನು ಕಾಣುತ್ತಾನಂತೆ. ಅದನ್ನು ಕಂಡು ಬೆಬ್ಬರಗಾಗುತ್ತಾನಂತೆ. ಆಗ ಮೋಹಿನಿಯೇ ಗೆಜ್ಜೆಗಳನ್ನು ಕುಣಿಸುತ್ತಾ, ಹೆಜ್ಜೆಗಳನ್ನು ಮುಂದುಮುಂದಕ್ಕೆ ಹಾಕಿ, ಚೆಂದೊಳ್ಳಿ ಯುವಕನನ್ನು ಅಪ್ಪಿಕೊಳ್ಳುತ್ತದಂತೆ. ಅಪ್ಪಿಕೊಂಡು, ಅವನ ಸತ್ವವನ್ನೇ ಹೀರಿಬಿಡುತ್ತದಂತೆ. ಅನಂತರ ವಾಸ್ತವಿಕ ಪ್ರಪಂಚದಲ್ಲಿ, ಅವನ ಮಾನ ಮರ್ಯಾದೆಗಳು ಸುರಕ್ಷಿತವಾಗಿರುತ್ತದಂತೆ. ಆದರೆ ಅವನ ದೇಹವು, ಕ್ಷೀಣವಾಗಿ, ಸತ್ವವು ಕರಗುತ್ತಾ ನೀರಾಗುತ್ತದಂತೆ. ಮೋಹಿನೀ ಪಿಶಾಚಿಯು ಹಿಡಿದು ಅದುಮಿಕೊಂಡರೆ ಯವ್ವನದ ಯುವಕನು ಕ್ಷಯಿಸುವನಂತೆ. {{gap}}ಅಸುರರಿಗೆ, ಪುರಾಣದ ಕತೆಗಳಲ್ಲಿ, ಮೋಹಿನಿಯು ಮೋಸಗೊಳಿಸುವುದನ್ನು ಇಲ್ಲಿ ನೆನಪು ಮಾಡಿಕೊಂಡು, ಪುರಾಣದ ಕತೆಗಳೂ, ಜನರಲ್ಲಿ ರೂಢಿತವಾದ ಪಿಶಾಚಿಗಳ ನಂಬಿಕೆಗಳಿಗೂ, ಇಂದಿನ ಮಾನವ ಮನಸ್ಸಿನ ಅರಿವನ್ನು ಪಡೆಯಲು ಶ್ರದ್ಧೆಯಿಂದ ಶ್ರಮಿಸಿದ ಮನೋವಿಜ್ಞಾನಿಗಳ, ತಾತ್ಕಾಲಿಕ ನಿರ್ಧಾರಕ್ಕೂ, ನಂಟು ಮತ್ತು ಗಂಟು ಇರುವುದನ್ನು ಸ್ಪಷ್ಟವಾಗಿ ಕಾಣಬಹುದು. {{gap}}ದೆವ್ವ ಹಿಡಿದಿದೆ, ಪಿಶಾಚಿಯು ಮೆಟ್ಟಿಕೊಂಡಿದೆ, ಎಂದು ಕರೆಯಲ್ಪಡುವ ರೋಗಿಗಳು, ನಡವಳಿಕೆಯಲ್ಲಿ ವಿಪರೀತವಾದ ಹಾಗೂ ಅಭಾಸವಾದ ವರ್ತನೆಯನ್ನು ಕಾಣಿಸುತ್ತಾರೆ. ಕೆಲವರು ಬಕಾಸುರನಂತೆ ಮೇಲಿಂದ ಮೇಲೆ ತಿನ್ನುತ್ತಲೇ ಇರುತ್ತಾರೆ. ಧಾಂಡಿಗರಂತೆ ಹೊರವಾಗಿ ಬೆಳೆಯುತ್ತಾರೆ. ಯಾವ ನಿರ್ದಿಷ್ಟ ಕೆಲಸವನ್ನೂ ಮಾಡುವುದಿಲ್ಲ, ಹುಚ್ಚುನಾಯಿಯಂತೆ ಅಲೆದಾಡುತ್ತಾರೆ. ಅವರ ಆ ಕ್ಷಣದ ಇಷ್ಟಕ್ಕೆ ವಿರುದ್ಧವಾಗಿ ಯಾರಾದರೂ ತಡೆ ಹಾಕಿದರೆ, ಹುಚ್ಚಾಪಟ್ಟೆ ರೇಗುತ್ತಾರೆ, ಅಥವಾ ಬೆಪ್ಪು ಬಡಿದವರಂತೆ ಮೂಲೆ ಹಿಡಿಯುತ್ತಾರೆ, ಅಥವಾ ಹಾಸಿಗೆಯಲ್ಲಿ ಉರುಟಿಕೊಂಡಿರುತ್ತಾರೆ. ಮತ್ತೆ ಕೆಲವು ಪಿಶಾಚಿ ಮೆಟ್ಟಿದವರು, ಆಹಾರದ ಮೇಲೆ ನಿರ್ಲಕ್ಷ್ಯವನ್ನು ತೋರಿಸುತ್ತಾರೆ, ಕೃಶರಾಗುತ್ತಾರೆ. {{gap}}ಪಿಶಾಚಿಗಳು, ದೆವ್ವಗಳು, ಭೂತಗಳು ಇವು ಅಮರಿಕೊಂಡಿವೆ ಎಂದು ಜನರು ಹೇಳುವುದು, ಮಾನಸಿಕ ಪಲ್ಲಟವಾದವರನ್ನು ಕುರಿತು. ದೆವ್ವವು ಹಿಡಿದಿದೆ ಎಂದಾಗ ನಮ್ಮ ಹತೋಟಿಯಲ್ಲಿರದೆ ಇತರ ಯಾವುದೋ ಅಗೋಚರವಾದ ದುಷ್ಟಶಕ್ತಿಯು, ಹೊರಗಿನಿಂದ ಬಂದು ರೋಗಿಯನ್ನು ಕಾಡಿ ನಡೆಸುತ್ತದೆ ಎಂದು ಭಾವಿಸುತ್ತೇವೆ. ರೋಗಿಯ ತಪ್ಪು ಇದರಲ್ಲೇನೂ ಇಲ್ಲ. ಆದರೆ ಮಾನಸಿಕ ರೋಗವು ಬಡಿದಿದೆ ಎಂದಾಗ, ಅಂತಹ ರೋಗಿಯ ಮನಸ್ಸು ಸಧೃಡವಾಗಿಲ್ಲ, ಆದಕಾರಣ ಪಲ್ಲಟವಾಯಿತು ಎಂಬ ಅರ್ಥವು ಬರುತ್ತದೆ. ರೋಗಿಯ ಸ್ವಂತ ಲೋಪದೋಷಗಳಿಂದ ಹೀಗಾಯಿತು ಎಂದರೆ ರೋಗಿಗೆ<noinclude></noinclude> k1mut8bb3mixhxc67vizve6824gcias ಪುಟ:ಮನಮಂಥನ.pdf/೩೧೨ 104 62759 316926 314479 2026-05-04T13:16:21Z Shreesha Sharma 7840 /* Proofread */ 316926 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೨೯೪}}{{Right|ಮನಮಂಥನ}} ಅವಮಾನವಾದಂತಾಗುತ್ತದೆ. ಹೀನಾಯ ಮನೋಭಾವವು ರೋಗಿಯ ಮನಸ್ಸಿನಲ್ಲಿ ಉಂಟಾಗುತ್ತದೆ. ರೋಗಿಯ ಮನೆಯ ನೆಂಟರಿಗೂ, ಇದೊಂದು ಅಪಕೀರ್ತಿ ಎಂದನಿಸುತ್ತದೆ. ಪ್ರಾಯಶಃ ಈ ಕಾರಣದಿಂದ, ಮಾನಸಿಕ ಪಲ್ಲಟಗಳ ಒಂದು ಹಂತದಲ್ಲಿ, ಅವನ್ನು ದೆವ್ವ ಹಿಡಿದಿದೆ ಎಂದನ್ನುತ್ತಿದ್ದರೇನೋ ! ಆಗ ಅಪಕೀರ್ತಿಯ ಸೋಂಕು ಮನೆತನಕ್ಕೆ ಬಡಿಯುವುದಿಲ್ಲವಲ್ಲ ! ಒಂದು ಹಂತವನ್ನು ಮೀರಿದರೆ, ಮಾನಸಿಕ ಪಲ್ಲಟದಿಂದಾಗಿ ರೋಗಿಯು ಮನೆಯವರಿಗೆ ಮತ್ತು ಸುತ್ತಲಿನ ಸಮಾಜಕ್ಕೆ ಕಂಟಕವಾಗುತ್ತಾನೆಯೋ, ಆಗ ಹುಚ್ಚು ಬೆಪ್ಪು ಶಿವಲೀಲೆಯು ಹಿಡಿದಿದೆ ಎಂದನ್ನುತ್ತಿದ್ದರು. ಪರೀಕ್ಷೆಯ ಆತಂಕವು ಹೆಚ್ಚಾಗಿರುತ್ತದೆ. ಮದುವೆಗೆ ನೆರೆದ ಹುಡುಗಿಯನ್ನು ಗಂಡಿನವರು ಬಂದು ನೋಡುತ್ತಾರೆ ಎಂದಾಗ ಹೆಣ್ಣಿನಲ್ಲಿ ಆತಂಕವು ಉಲ್ಬಣವಾಗುತ್ತದೆ. ಕೆಟ್ಟ ಕನಸು ಬಿದ್ದು ನಿದ್ರೆಯನ್ನು ಕೆಡಿಸಿ ಎಚ್ಚರಗೊಳಿಸಿದಾಗ, ಭಯವಾಗಿರುತ್ತದೆ. ಇಂತಹ ಮಾನಸಿಕ ಉದ್ವೇಗವಾದಾಗ, ಹೃದಯವು ನಗಾರಿಯಂತೆ ಡಬ ಡಬ ಹೊಡೆದುಕೊಳ್ಳುತ್ತದೆ. ಇಂತಹವರು ತಮಗೆ ಹೃದಯದ ಬೇನೆಯು ಆರಂಭವಾಗಿರಬಹುದು ಎಂದು ಶಂಕಿಸುತ್ತಾರೆ. ಸಂದೇಹವೇ ಹೃದಯದ ಡಬಡಬವನ್ನು ಇನ್ನೂ ಹೆಚ್ಚಿಸುತ್ತದೆ. ಪರೀಕ್ಷೆಗೆಂದು ವ್ಯಾಸಂಗ ಮಾಡುತ್ತಿರುವವನಿಗೆ, ಆತಂಕದಿಂದ ಹೃದಯವು ಡಬಡಬ ಮಾಡಿದರೆ ಚಿಕಿತ್ಸೆಗೆಂದು ವೈದ್ಯನ ಬಳಿಗೆ ಹೋಗುತ್ತಾನೆ. ಪರೀಕ್ಷೆಯ ಸಮಯದಲ್ಲಿ ಕಾಯಿಲೆಯು ಬಂತು, ಚಿಕಿತ್ಸೆಯನ್ನು ಪಡೆದೆ. ವ್ಯಾಸಂಗವನ್ನು ಮಾಡಲಾಗಲಿಲ್ಲ, ಎಂಬ ಸಬೂಬನ್ನು ನಪಾಸಾದಾಗ ಹೇಳಿಕೊಂಡು, ಮನಸ್ಸಿಗೆ ಸ್ವಲ್ಪ ಸಮಾಧಾನವನ್ನು ಪಡೆಯಬಹುದು. ಮನೋದೈಹಿಕ ಬೇನೆಗಳು, ಮಾನಸಿಕ ತಳಮಳದ ಸಮಾಧಾನಕ್ಕೆ, ಪ್ರಕೃತಿಯು ಹೂಡುವ ಉಪಾಯ, ಪ್ರಕೃತಿಯ ಇಂತಹ ಉಪಾಯವೇ ಹಿಸ್ಟಿರಿಯಾ ಬೇನೆಗೆ ಮೂಲಭೂತ ಕಾರಣ. ವಸ್ತುವಾದ ದೇಹಕ್ಕೂ, ಶಕ್ತಿಯಾದ ಮನಸ್ಸಿಗೂ ನಿಕಟ ಸಂಬಂಧವಿರುವುದನ್ನು ತಿಳಿದೆವು, ಹಚ್ಚಹಸಿರು ಬಳ್ಳಿಯನ್ನು ನೋಡಿದಾಗ, ಅದರಲ್ಲಿ ಕಂಗೊಳಿಸುವ ವರ್ಣವರ್ಣದ ಹೂವನ್ನು ನೋಡಿದಾಗ, ಒಂದು ಇನ್ನೊಂದನ್ನು ಹೇಗೆ ಹುಟ್ಟಿ ಬೆಳೆಸಿತು ಎಂದು ಆಶ್ಚರ್ಯವಾಗುತ್ತದೆ. ಹೂವು ಪಕ್ವವಾಗಿ, ನಂತರ ಕಾಯಾಗಿ, ಹಣ್ಣಾಗಿ, ಬೀಜಗಳನ್ನು ಉತ್ಪಾದಿಸಿ ಎಲ್ಲೆಲ್ಲೂ ಹರಡುತ್ತದೆ. ಅನುಕೂಲವಾದ ನೆಲದಲ್ಲಿ ಬೀಜವು ಬಿದ್ದು, ಮೊಳಕೆಯನ್ನು ಹೂಡಿ, ಬಳ್ಳಿಯು ಬೆಳೆಯಲಾರಂಭಿಸುತ್ತದೆ. ಬಳ್ಳಿ, ಹೂವು ಇವುಗಳ ಪರಸ್ಪರ ಸಂಬಂಧವೇ,<noinclude></noinclude> 2w69z0u8xejuglzhpwvyre2kfnioemk 316945 316926 2026-05-04T13:51:20Z Shreelatha.Halemane 7642 /* Validated */ 316945 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೨೯೪}}{{Right|ಮನಮಂಥನ}} ಅವಮಾನವಾದಂತಾಗುತ್ತದೆ. ಹೀನಾಯ ಮನೋಭಾವವು ರೋಗಿಯ ಮನಸ್ಸಿನಲ್ಲಿ ಉಂಟಾಗುತ್ತದೆ. ರೋಗಿಯ ಮನೆಯ ನೆಂಟರಿಗೂ, ಇದೊಂದು ಅಪಕೀರ್ತಿ ಎಂದನಿಸುತ್ತದೆ. ಪ್ರಾಯಶಃ ಈ ಕಾರಣದಿಂದ, ಮಾನಸಿಕ ಪಲ್ಲಟಗಳ ಒಂದು ಹಂತದಲ್ಲಿ, ಅವನ್ನು ದೆವ್ವ ಹಿಡಿದಿದೆ ಎಂದನ್ನುತ್ತಿದ್ದರೇನೋ ! ಆಗ ಅಪಕೀರ್ತಿಯ ಸೋಂಕು ಮನೆತನಕ್ಕೆ ಬಡಿಯುವುದಿಲ್ಲವಲ್ಲ ! ಒಂದು ಹಂತವನ್ನು ಮೀರಿದರೆ, ಮಾನಸಿಕ ಪಲ್ಲಟದಿಂದಾಗಿ ರೋಗಿಯು ಮನೆಯವರಿಗೆ ಮತ್ತು ಸುತ್ತಲಿನ ಸಮಾಜಕ್ಕೆ ಕಂಟಕವಾಗುತ್ತಾನೆಯೋ, ಆಗ ಹುಚ್ಚು ಬೆಪ್ಪು ಶಿವಲೀಲೆಯು ಹಿಡಿದಿದೆ ಎಂದನ್ನುತ್ತಿದ್ದರು. {{gap}}ಪರೀಕ್ಷೆಯ ಆತಂಕವು ಹೆಚ್ಚಾಗಿರುತ್ತದೆ. ಮದುವೆಗೆ ನೆರೆದ ಹುಡುಗಿಯನ್ನು ಗಂಡಿನವರು ಬಂದು ನೋಡುತ್ತಾರೆ ಎಂದಾಗ ಹೆಣ್ಣಿನಲ್ಲಿ ಆತಂಕವು ಉಲ್ಬಣವಾಗುತ್ತದೆ. ಕೆಟ್ಟ ಕನಸು ಬಿದ್ದು ನಿದ್ರೆಯನ್ನು ಕೆಡಿಸಿ ಎಚ್ಚರಗೊಳಿಸಿದಾಗ, ಭಯವಾಗಿರುತ್ತದೆ. ಇಂತಹ ಮಾನಸಿಕ ಉದ್ವೇಗವಾದಾಗ, ಹೃದಯವು ನಗಾರಿಯಂತೆ ಡಬ ಡಬ ಹೊಡೆದುಕೊಳ್ಳುತ್ತದೆ. ಇಂತಹವರು ತಮಗೆ ಹೃದಯದ ಬೇನೆಯು ಆರಂಭವಾಗಿರಬಹುದು ಎಂದು ಶಂಕಿಸುತ್ತಾರೆ. ಸಂದೇಹವೇ ಹೃದಯದ ಡಬಡಬವನ್ನು ಇನ್ನೂ ಹೆಚ್ಚಿಸುತ್ತದೆ. {{gap}}ಪರೀಕ್ಷೆಗೆಂದು ವ್ಯಾಸಂಗ ಮಾಡುತ್ತಿರುವವನಿಗೆ, ಆತಂಕದಿಂದ ಹೃದಯವು ಡಬಡಬ ಮಾಡಿದರೆ ಚಿಕಿತ್ಸೆಗೆಂದು ವೈದ್ಯನ ಬಳಿಗೆ ಹೋಗುತ್ತಾನೆ. ಪರೀಕ್ಷೆಯ ಸಮಯದಲ್ಲಿ ಕಾಯಿಲೆಯು ಬಂತು, ಚಿಕಿತ್ಸೆಯನ್ನು ಪಡೆದೆ. ವ್ಯಾಸಂಗವನ್ನು ಮಾಡಲಾಗಲಿಲ್ಲ, ಎಂಬ ಸಬೂಬನ್ನು ನಪಾಸಾದಾಗ ಹೇಳಿಕೊಂಡು, ಮನಸ್ಸಿಗೆ ಸ್ವಲ್ಪ ಸಮಾಧಾನವನ್ನು ಪಡೆಯಬಹುದು. ಮನೋದೈಹಿಕ ಬೇನೆಗಳು, ಮಾನಸಿಕ ತಳಮಳದ ಸಮಾಧಾನಕ್ಕೆ, ಪ್ರಕೃತಿಯು ಹೂಡುವ ಉಪಾಯ, ಪ್ರಕೃತಿಯ ಇಂತಹ ಉಪಾಯವೇ ಹಿಸ್ಟಿರಿಯಾ ಬೇನೆಗೆ ಮೂಲಭೂತ ಕಾರಣ. {{gap}}ವಸ್ತುವಾದ ದೇಹಕ್ಕೂ, ಶಕ್ತಿಯಾದ ಮನಸ್ಸಿಗೂ ನಿಕಟ ಸಂಬಂಧವಿರುವುದನ್ನು ತಿಳಿದೆವು, ಹಚ್ಚಹಸಿರು ಬಳ್ಳಿಯನ್ನು ನೋಡಿದಾಗ, ಅದರಲ್ಲಿ ಕಂಗೊಳಿಸುವ ವರ್ಣವರ್ಣದ ಹೂವನ್ನು ನೋಡಿದಾಗ, ಒಂದು ಇನ್ನೊಂದನ್ನು ಹೇಗೆ ಹುಟ್ಟಿ ಬೆಳೆಸಿತು ಎಂದು ಆಶ್ಚರ್ಯವಾಗುತ್ತದೆ. ಹೂವು ಪಕ್ವವಾಗಿ, ನಂತರ ಕಾಯಾಗಿ, ಹಣ್ಣಾಗಿ, ಬೀಜಗಳನ್ನು ಉತ್ಪಾದಿಸಿ ಎಲ್ಲೆಲ್ಲೂ ಹರಡುತ್ತದೆ. ಅನುಕೂಲವಾದ ನೆಲದಲ್ಲಿ ಬೀಜವು ಬಿದ್ದು, ಮೊಳಕೆಯನ್ನು ಹೂಡಿ, ಬಳ್ಳಿಯು ಬೆಳೆಯಲಾರಂಭಿಸುತ್ತದೆ. ಬಳ್ಳಿ, ಹೂವು ಇವುಗಳ ಪರಸ್ಪರ ಸಂಬಂಧವೇ,<noinclude></noinclude> lgt0dk668iddlsutjg743jyjni2bcga ಪುಟ:ಮನಮಂಥನ.pdf/೩೧೩ 104 62760 316925 314481 2026-05-04T13:15:15Z Shreesha Sharma 7840 /* Proofread */ 316925 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಮನಸ್ಸಿನ ಸ್ವರೂಪ}}{{Right|೨೯೫}} ದೇಹ ಮತ್ತು ಮನಸ್ಸಿಗೂ ಇದೆ ಎಂದು ಸ್ಕೂಲವಾಗಿ ಹೇಳಬಹುದು. ಏಕೆಂದರೆ ಮನಸ್ಸಿನ ಸತ್-ಚೈತನ್ಯಾಂಶದಿಂದ ವಿಶಾಲವಾಗಿ ಹರಡಬಹುದು. ಮನಸ್ಸಿನ ಒಂದು ಅವಸ್ಥೆಯು ಧ್ಯಾನ ಎಂಬುದು. ಧ್ಯಾನವು ದೇಹದ ಮೇಲೆ ಪವಾಡದಂತೆ ಪರಿಣಾಮವನ್ನುಂಟುಮಾಡುವುದಕ್ಕೆ ಸಾಕ್ಷ್ಯಗಳಿವೆ. ಲೂರ್ಡ್ಸ್ ಎಂಬ ಯಾತ್ರಾಸ್ಥಳದಲ್ಲಿ, ಕ್ಷಯರೋಗದಿಂದ ಉಗ್ರ ರೀತಿಯಲ್ಲಿ ನರಳುತ್ತಿದ್ದ ರೋಗಿಯನ್ನು ಕರೆದೊಯ್ದಾಗ, ರೋಗಿಗೆ ಕೆಲವೇ ತಾಸುಗಳಲ್ಲಿ ಪೂರ್ಣವಾಗಿ ಗುಣವಾಯಿತು. ಇನ್ನೇನು, ಕೆಲವು ದಿನಗಳಲ್ಲಿ ಸಾಯುತ್ತಾಳೆ, ಎಂದು ವೈದ್ಯರು ನಿರ್ಧರಿಸಿದ್ದ ರೋಗಿಯೂ, ಪವಾಡದಂತೆ ಕೆಲವೇ ತಾಸುಗಳಲ್ಲಿ ಗುಣವಾದುದು, ಧ್ಯಾನಮಂದಿರದ ಪ್ರಭಾವದಿಂದ ಎಂದು ಒಪ್ಪಿಕೊಳ್ಳಬೇಕು. ನೊಬೆಲ್ ವಿಜೇತ ಕೀರ್ತಿಶೇಷ ಅಲೆಕ್ಸಿಸ್ ಕ್ಯಾರಲ್, ಈ ಪವಾಡವನ್ನು ವಿವರಿಸಿದ್ದಾನೆ. ಧ್ಯಾನದಿಂದ, ತನ್ನ ದೇಹದ ಮೇಲೆ ಪರಿಣಾಮವಾಗುವುದನ್ನು ಒಪ್ಪಬಹುದು. ಆದರೆ ಧ್ಯಾನ ಮಂದಿರದಲ್ಲಿ ಇತರ ರೋಗಿಗಳ, ನಂಬಿಕೆಯೂ ಇರದ ರೋಗಿಗಳ ದೇಹದ ಮೇಲೆ ತೀವ್ರವಾಗಿ ಉತ್ತಮ ಫಲಿತಾಂಶವು ದೊರೆಯುತ್ತದೆ, ಎನ್ನುವುದನ್ನು ಒಪ್ಪಲು ಬಲು ಕಷ್ಟ. ಆದರೆ ಇಂತಹ ಪವಾಡಗಳು ಆಗಿಯೇ ಇವೆ ; ಆಗುತ್ತಲೂ ಇವೆ-ಹೇಗೆ ಎಂಬುದು ಇಂದಿನ ಮನೋವೈಜ್ಞಾನಿಕ ಹಂತದಲ್ಲಿ ತಿಳಿಯದೆ ಇದ್ದರೂ ಹೀಗೆ ಆಗುತ್ತದೆ ಎಂಬುದನ್ನು ನಂಬಲೇಬೇಕು. ಪ್ರತ್ಯಕ್ಷ ಪ್ರಮಾಣವು ಇಂತಹ ಪವಾಡವು ಆದರೆ ಇಂತಹ ಉತ್ತಮ ಪರಿಣಾಮವು ಧ್ಯಾನಮಂದಿರಕ್ಕೆ ಹೋದವರಿಗೆಲ್ಲಾ ಲಭಿಸುವುದಿಲ್ಲ. ಏಕೆ ಎಂಬುದು ಯಾರಿಗೂ ತಿಳಿದಿಲ್ಲ. ಹೇಗೆ ಎಂಬುದು ತಿಳಿದ ಮೇಲೆ ಏಕೆ ಎಂದು ಯೋಚಿಸಲು ಸಾಧ್ಯ. ಧ್ಯಾನಾವಸ್ಥೆಯಲ್ಲಿ, ಮನಸ್ಸನ್ನು ಅವ್ಯಕ್ತವಾಗಿ ನಡೆಸುವ, ಮನಸ್ಸಿನ ಒಂದು ಅಂಶವಾದ ಸತ್ ಚೈತನ್ಯದಿಂದ, ಇಂತಹ ಪವಾಡಗಳು ನಡೆಯುತ್ತವೆ ಎಂದು, ಇಂದಿನ ವೈಜ್ಞಾನಿಕ ಹಂತದಲ್ಲಿ ವಿಚಾರಪರರು ಊಹಿಸಬಹುದು. ಇದರ ವಿವರಗಳನ್ನು ಮುಂದಿನ ಅಧ್ಯಾಯಗಳಲ್ಲಿ ತಿಳಿಯೋಣ. '''ಸ್ಥಾವರ ಮತ್ತು ಜಂಗಮ''' ರೇಷನ್ ಅಂಗಡಿಯ ಬಳಿಯಲ್ಲಿ ಎರಡು ಗಂಟೆ ಕ್ಯೂ ನಿಂತು, ನಂತರ ಅಂಗಡಿಯವರ ಔದಾರದಿಂದ ಎರಡು ವಾರಗಳ ಕೋಟಾವನ್ನು ಒಟ್ಟಿಗೆ ಪಡೆದೆ. ಅಷ್ಟನ್ನೂ ಹೊತ್ತುಕೊಂಡು ಮನೆಯ ಕಡೆಗೆ ಹೊರಟೆ. ರೇಷನ್ ಅಂಗಡಿಯಿಂದ ನನ್ನ ಮನೆಗೆ ಮೂರು ಕಿಲೋಮೀಟರ್ ದೂರವಿದೆ. ಆದರೆ ಭಾರವನ್ನು<noinclude></noinclude> 6iad45ya1jknf5fd0fvtqfts0fxpnip 316946 316925 2026-05-04T13:51:43Z Shreelatha.Halemane 7642 /* Validated */ 316946 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಮನಸ್ಸಿನ ಸ್ವರೂಪ}}{{Right|೨೯೫}} ದೇಹ ಮತ್ತು ಮನಸ್ಸಿಗೂ ಇದೆ ಎಂದು ಸ್ಕೂಲವಾಗಿ ಹೇಳಬಹುದು. ಏಕೆಂದರೆ ಮನಸ್ಸಿನ ಸತ್-ಚೈತನ್ಯಾಂಶದಿಂದ ವಿಶಾಲವಾಗಿ ಹರಡಬಹುದು. {{gap}}ಮನಸ್ಸಿನ ಒಂದು ಅವಸ್ಥೆಯು ಧ್ಯಾನ ಎಂಬುದು. ಧ್ಯಾನವು ದೇಹದ ಮೇಲೆ ಪವಾಡದಂತೆ ಪರಿಣಾಮವನ್ನುಂಟುಮಾಡುವುದಕ್ಕೆ ಸಾಕ್ಷ್ಯಗಳಿವೆ. ಲೂರ್ಡ್ಸ್ ಎಂಬ ಯಾತ್ರಾಸ್ಥಳದಲ್ಲಿ, ಕ್ಷಯರೋಗದಿಂದ ಉಗ್ರ ರೀತಿಯಲ್ಲಿ ನರಳುತ್ತಿದ್ದ ರೋಗಿಯನ್ನು ಕರೆದೊಯ್ದಾಗ, ರೋಗಿಗೆ ಕೆಲವೇ ತಾಸುಗಳಲ್ಲಿ ಪೂರ್ಣವಾಗಿ ಗುಣವಾಯಿತು. ಇನ್ನೇನು, ಕೆಲವು ದಿನಗಳಲ್ಲಿ ಸಾಯುತ್ತಾಳೆ, ಎಂದು ವೈದ್ಯರು ನಿರ್ಧರಿಸಿದ್ದ ರೋಗಿಯೂ, ಪವಾಡದಂತೆ ಕೆಲವೇ ತಾಸುಗಳಲ್ಲಿ ಗುಣವಾದುದು, ಧ್ಯಾನಮಂದಿರದ ಪ್ರಭಾವದಿಂದ ಎಂದು ಒಪ್ಪಿಕೊಳ್ಳಬೇಕು. ನೊಬೆಲ್ ವಿಜೇತ ಕೀರ್ತಿಶೇಷ ಅಲೆಕ್ಸಿಸ್ ಕ್ಯಾರಲ್, ಈ ಪವಾಡವನ್ನು ವಿವರಿಸಿದ್ದಾನೆ. ಧ್ಯಾನದಿಂದ, ತನ್ನ ದೇಹದ ಮೇಲೆ ಪರಿಣಾಮವಾಗುವುದನ್ನು ಒಪ್ಪಬಹುದು. ಆದರೆ ಧ್ಯಾನ ಮಂದಿರದಲ್ಲಿ ಇತರ ರೋಗಿಗಳ, ನಂಬಿಕೆಯೂ ಇರದ ರೋಗಿಗಳ ದೇಹದ ಮೇಲೆ ತೀವ್ರವಾಗಿ ಉತ್ತಮ ಫಲಿತಾಂಶವು ದೊರೆಯುತ್ತದೆ, ಎನ್ನುವುದನ್ನು ಒಪ್ಪಲು ಬಲು ಕಷ್ಟ. ಆದರೆ ಇಂತಹ ಪವಾಡಗಳು ಆಗಿಯೇ ಇವೆ ; ಆಗುತ್ತಲೂ ಇವೆ-ಹೇಗೆ ಎಂಬುದು ಇಂದಿನ ಮನೋವೈಜ್ಞಾನಿಕ ಹಂತದಲ್ಲಿ ತಿಳಿಯದೆ ಇದ್ದರೂ ಹೀಗೆ ಆಗುತ್ತದೆ ಎಂಬುದನ್ನು ನಂಬಲೇಬೇಕು. ಪ್ರತ್ಯಕ್ಷ ಪ್ರಮಾಣವು ಇಂತಹ ಪವಾಡವು ಆದರೆ ಇಂತಹ ಉತ್ತಮ ಪರಿಣಾಮವು ಧ್ಯಾನಮಂದಿರಕ್ಕೆ ಹೋದವರಿಗೆಲ್ಲಾ ಲಭಿಸುವುದಿಲ್ಲ. ಏಕೆ ಎಂಬುದು ಯಾರಿಗೂ ತಿಳಿದಿಲ್ಲ. ಹೇಗೆ ಎಂಬುದು ತಿಳಿದ ಮೇಲೆ ಏಕೆ ಎಂದು ಯೋಚಿಸಲು ಸಾಧ್ಯ. {{gap}}ಧ್ಯಾನಾವಸ್ಥೆಯಲ್ಲಿ, ಮನಸ್ಸನ್ನು ಅವ್ಯಕ್ತವಾಗಿ ನಡೆಸುವ, ಮನಸ್ಸಿನ ಒಂದು ಅಂಶವಾದ ಸತ್ ಚೈತನ್ಯದಿಂದ, ಇಂತಹ ಪವಾಡಗಳು ನಡೆಯುತ್ತವೆ ಎಂದು, ಇಂದಿನ ವೈಜ್ಞಾನಿಕ ಹಂತದಲ್ಲಿ ವಿಚಾರಪರರು ಊಹಿಸಬಹುದು. ಇದರ ವಿವರಗಳನ್ನು ಮುಂದಿನ ಅಧ್ಯಾಯಗಳಲ್ಲಿ ತಿಳಿಯೋಣ. '''ಸ್ಥಾವರ ಮತ್ತು ಜಂಗಮ''' {{gap}}ರೇಷನ್ ಅಂಗಡಿಯ ಬಳಿಯಲ್ಲಿ ಎರಡು ಗಂಟೆ ಕ್ಯೂ ನಿಂತು, ನಂತರ ಅಂಗಡಿಯವರ ಔದಾರದಿಂದ ಎರಡು ವಾರಗಳ ಕೋಟಾವನ್ನು ಒಟ್ಟಿಗೆ ಪಡೆದೆ. ಅಷ್ಟನ್ನೂ ಹೊತ್ತುಕೊಂಡು ಮನೆಯ ಕಡೆಗೆ ಹೊರಟೆ. ರೇಷನ್ ಅಂಗಡಿಯಿಂದ ನನ್ನ ಮನೆಗೆ ಮೂರು ಕಿಲೋಮೀಟರ್ ದೂರವಿದೆ. ಆದರೆ ಭಾರವನ್ನು<noinclude></noinclude> lpo8nfymtiugc9x44vwvfj4yvlncmlw ಪುಟ:ಮನಮಂಥನ.pdf/೩೧೪ 104 62761 316948 314486 2026-05-04T13:52:50Z Shreelatha.Halemane 7642 /* Proofread */ 316948 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೨೯೬}}{{Right|ಮನಮಂಥನ}} ಹೊತ್ತು ನಡೆಯುವಾಗ ಆರು ಹರಿದಾರಿ ನಡೆದಂತೆ ದಣಿವಾಗುತ್ತದೆ. ಅರ್ಧದಾರಿ ನಡೆದಿದ್ದೆ. ಅಲ್ಲೊಂದು ಅಶ್ವತ್ಥ ಕಟ್ಟೆ ಇದೆ. ಅದನ್ನು ಕಂಡಾಗ ಸ್ವಲ್ಪ ಹೊತ್ತು ಕುಳಿತುಕೊಂಡು ವಿಶ್ರಮಿಸಿಕೊಳ್ಳೋಣ ಎನಿಸಿತು; ಕುದುರೆಯನ್ನು ಕಂಡು ಕಾಲು ನೋವು ಕಾಣಿಸಿಕೊಳ್ಳುವಂತೆ. ಸಾಮಾನಿನ ಗಂಟನ್ನಿಳಿಸಿ, ಕಟ್ಟೆಯ ಮೇಲಿಟ್ಟು, ಷರಟಿನ ಗುಂಡಿಯನ್ನು ಬಿಚ್ಚಿ, ಹಾಯಂತ, ನಾಗರಕಲ್ಲನ್ನು ಒರಗಿಕೊಂಡು ಕುಳಿತೆ. ಹಗೂರು ಗಾಳಿಯು ಬೀಸುತ್ತಿತ್ತು. ಅಶ್ವತ್ಥಮರದ ಎಲೆಗಳು ನನಗೆ ಚಾಮರಸೇವೆಯನ್ನು ಮಾಡಿದವು. ದಣಿವು ಕಡಿಮೆಯಾಯಿತು. ತಲೆಯೆತ್ತಿ ಮರವನ್ನು ನೋಡಿದೆ. ಅದನ್ನು ಕಂಡು ಸ್ವಲ್ಪ ಹೊಟ್ಟೆಕಿಚ್ಚಾಯಿತು, ಆಗಂದುಕೊಂಡೆ: {{gap}}'ಲೋ ಮರವೇ ! ನೀನೇ ಪುಣ್ಯವಂತ. ನೀನು ರಾಜಾ. ಇದ್ದಲ್ಲೇ ಇದ್ದು ಮೆರೆಯುತ್ತಿ, ಅಗತ್ಯವಾದ ಆಹಾರವೆಲ್ಲವೂ ನಿನ್ನ ಬಳಿಗೆ ಹರಿದುಬರುತ್ತದೆ. ಹಾಗೂ ಬೀಸಿ ಬರುತ್ತದೆ. ನಿಂತ ನೆಲದಿಂದ ಆಹಾರವನ್ನು ಮತ್ತು ನೀರನ್ನು ದೌಲತ್ತಿನಿಂದ ಹೀರಿಕೊಳ್ಳುತ್ತಿ. ಬೀಸುವ ಗಾಳಿಯಿಂದ ಅಗತ್ಯವಾದುದನ್ನು ಸೆಳೆದುಕೊಳ್ಳುತ್ತಿ. ನಿನ್ನ ಕಂಡರೆ ಮಾತ್ಸಯ್ಯ' ನನಗೆ. {{gap}}“ನನ್ನ ಪಾಡು ನೋಡು, ಹೆಂಡತಿ ಮಕ್ಕಳ ಕಾಟಕ್ಕೋಸ್ಕರ, ಮತ್ತು ಹೊಟ್ಟೆ ಪಾಡಿಗಾಗಿ ದಿನ ಮೂಡಿದರೆ ನಾಯಿಯಂತೆ ಅಂಡಲೆಯಬೇಕು. ಸಂಪಾದಿಸಿ ರೇಷನ್ ಅಂಗಡಿಗೆ ಹೋಗಿ, ಹಣ ಕೊಟ್ಟರೂ ಭಿಕ್ಷೆ ಬೇಡುವಂತೆ, ಕೈಚಾಚಬೇಕು, ಭಾರದ ಗಂಟನ್ನು ಕತ್ತೆಯಂತೆ ಹೊತ್ತು ಮನೆಗೆ ಹೋಗಬೇಕು. ಅಲ್ಲಿ 'ಇಷ್ಟೇನೇ ತಂದಿದ್ದು' ಎಂಬ ಮೂದಲಿಸುವ ಮಾತುಗಳನ್ನು ಕೇಳಬೇಕು. ರೇಗಿ ಉತ್ತರ ಕೊಡಬೇಕು. ಮಾತಿಗೆ ಮಾತು ಬೆಳೆದು ಎಲ್ಲರ ಮನಸೂ ಕಸಿವಿಸಿಯಾಗುತ್ತದೆ. ನೀನೋ ಮಹಾತ್ಮ ಮೌನಿ, ಯಾರನ್ನೂ ನೀನನ್ನುವುದಿಲ್ಲ. ನಿನ್ನನ್ನು ಕುರಿತು ಯಾರು ಅಂದುಕೊಂಡರೂ ನಿನಗೆ ಕೇಳಿಸುವುದೇ ಇಲ್ಲ. ಆದುದರಿಂದಲೇ ಏನೋ ಮೌನಿಯಾಗಿದ್ದ. ನಮ್ಮಂತಹವರನ್ನು ಕಂಡರೆ ಬಿಸುಸುಯ್ಯುತ್ತೀ. ನಿನ್ನ ಅನುಕಂಪವೆಲ್ಲಾ ಅಷ್ಟರಲ್ಲೇ ತೀರಿತು. ನಿಜವಾಗಲೂ ಮಹಾತ್ಮ ನೀನು.' {{gap}}ಹೀಗೆಂದು ಗಟ್ಟಿಯಾಗಿ ಹೇಳಲಿಲ್ಲ. ಆಜೂಬಾಜೂ ಯಾರೂ ಇಲ್ಲದ್ದರಿಂದ ಗಟ್ಟಿಯಾಗಿ ಹೇಳಿದ್ದರೂ ಅಸೆಂಬ್ಲಿಗಳ ಭಾಷಣದಂತೆ, ಯಾರ ಕಿವಿಗೂ ಬೀಳುತ್ತಿರಲಿಲ್ಲ. ಕೇವಲ ಅರಣ್ಯರೋದನವಾಗುತ್ತಿತ್ತು, ಸ್ವಲ್ಪ ಹೊತ್ತಿನ ಮೇಲೆ ಮನೆಗೆ ಹಿಂತಿರುಗಿದೆ. ಹೆಂಡತಿಯೊಡನೆ ಯಥಾಪ್ರಕಾರ ಗೊಣಗಾಡುತ್ತ ಊಟ ಮಾಡಿದೆ.<noinclude></noinclude> pd0f8qkqqbnm1fwccfzdjcjahal3ok1 316993 316948 2026-05-04T14:25:10Z Shreesha Sharma 7840 /* Validated */ 316993 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೨೯೬}}{{Right|ಮನಮಂಥನ}} ಹೊತ್ತು ನಡೆಯುವಾಗ ಆರು ಹರಿದಾರಿ ನಡೆದಂತೆ ದಣಿವಾಗುತ್ತದೆ. ಅರ್ಧದಾರಿ ನಡೆದಿದ್ದೆ. ಅಲ್ಲೊಂದು ಅಶ್ವತ್ಥ ಕಟ್ಟೆ ಇದೆ. ಅದನ್ನು ಕಂಡಾಗ ಸ್ವಲ್ಪ ಹೊತ್ತು ಕುಳಿತುಕೊಂಡು ವಿಶ್ರಮಿಸಿಕೊಳ್ಳೋಣ ಎನಿಸಿತು; ಕುದುರೆಯನ್ನು ಕಂಡು ಕಾಲು ನೋವು ಕಾಣಿಸಿಕೊಳ್ಳುವಂತೆ. ಸಾಮಾನಿನ ಗಂಟನ್ನಿಳಿಸಿ, ಕಟ್ಟೆಯ ಮೇಲಿಟ್ಟು, ಷರಟಿನ ಗುಂಡಿಯನ್ನು ಬಿಚ್ಚಿ, ಹಾಯಂತ, ನಾಗರಕಲ್ಲನ್ನು ಒರಗಿಕೊಂಡು ಕುಳಿತೆ. ಹಗೂರು ಗಾಳಿಯು ಬೀಸುತ್ತಿತ್ತು. ಅಶ್ವತ್ಥಮರದ ಎಲೆಗಳು ನನಗೆ ಚಾಮರಸೇವೆಯನ್ನು ಮಾಡಿದವು. ದಣಿವು ಕಡಿಮೆಯಾಯಿತು. ತಲೆಯೆತ್ತಿ ಮರವನ್ನು ನೋಡಿದೆ. ಅದನ್ನು ಕಂಡು ಸ್ವಲ್ಪ ಹೊಟ್ಟೆಕಿಚ್ಚಾಯಿತು, ಆಗಂದುಕೊಂಡೆ: {{gap}}'ಲೋ ಮರವೇ ! ನೀನೇ ಪುಣ್ಯವಂತ. ನೀನು ರಾಜಾ. ಇದ್ದಲ್ಲೇ ಇದ್ದು ಮೆರೆಯುತ್ತಿ, ಅಗತ್ಯವಾದ ಆಹಾರವೆಲ್ಲವೂ ನಿನ್ನ ಬಳಿಗೆ ಹರಿದುಬರುತ್ತದೆ. ಹಾಗೂ ಬೀಸಿ ಬರುತ್ತದೆ. ನಿಂತ ನೆಲದಿಂದ ಆಹಾರವನ್ನು ಮತ್ತು ನೀರನ್ನು ದೌಲತ್ತಿನಿಂದ ಹೀರಿಕೊಳ್ಳುತ್ತಿ. ಬೀಸುವ ಗಾಳಿಯಿಂದ ಅಗತ್ಯವಾದುದನ್ನು ಸೆಳೆದುಕೊಳ್ಳುತ್ತಿ. ನಿನ್ನ ಕಂಡರೆ ಮಾತ್ಸಯ್ಯ' ನನಗೆ. {{gap}}“ನನ್ನ ಪಾಡು ನೋಡು, ಹೆಂಡತಿ ಮಕ್ಕಳ ಕಾಟಕ್ಕೋಸ್ಕರ, ಮತ್ತು ಹೊಟ್ಟೆ ಪಾಡಿಗಾಗಿ ದಿನ ಮೂಡಿದರೆ ನಾಯಿಯಂತೆ ಅಂಡಲೆಯಬೇಕು. ಸಂಪಾದಿಸಿ ರೇಷನ್ ಅಂಗಡಿಗೆ ಹೋಗಿ, ಹಣ ಕೊಟ್ಟರೂ ಭಿಕ್ಷೆ ಬೇಡುವಂತೆ, ಕೈಚಾಚಬೇಕು, ಭಾರದ ಗಂಟನ್ನು ಕತ್ತೆಯಂತೆ ಹೊತ್ತು ಮನೆಗೆ ಹೋಗಬೇಕು. ಅಲ್ಲಿ 'ಇಷ್ಟೇನೇ ತಂದಿದ್ದು' ಎಂಬ ಮೂದಲಿಸುವ ಮಾತುಗಳನ್ನು ಕೇಳಬೇಕು. ರೇಗಿ ಉತ್ತರ ಕೊಡಬೇಕು. ಮಾತಿಗೆ ಮಾತು ಬೆಳೆದು ಎಲ್ಲರ ಮನಸೂ ಕಸಿವಿಸಿಯಾಗುತ್ತದೆ. ನೀನೋ ಮಹಾತ್ಮ ಮೌನಿ, ಯಾರನ್ನೂ ನೀನನ್ನುವುದಿಲ್ಲ. ನಿನ್ನನ್ನು ಕುರಿತು ಯಾರು ಅಂದುಕೊಂಡರೂ ನಿನಗೆ ಕೇಳಿಸುವುದೇ ಇಲ್ಲ. ಆದುದರಿಂದಲೇ ಏನೋ ಮೌನಿಯಾಗಿದ್ದ. ನಮ್ಮಂತಹವರನ್ನು ಕಂಡರೆ ಬಿಸುಸುಯ್ಯುತ್ತೀ. ನಿನ್ನ ಅನುಕಂಪವೆಲ್ಲಾ ಅಷ್ಟರಲ್ಲೇ ತೀರಿತು. ನಿಜವಾಗಲೂ ಮಹಾತ್ಮ ನೀನು.' {{gap}}ಹೀಗೆಂದು ಗಟ್ಟಿಯಾಗಿ ಹೇಳಲಿಲ್ಲ. ಆಜೂಬಾಜೂ ಯಾರೂ ಇಲ್ಲದ್ದರಿಂದ ಗಟ್ಟಿಯಾಗಿ ಹೇಳಿದ್ದರೂ ಅಸೆಂಬ್ಲಿಗಳ ಭಾಷಣದಂತೆ, ಯಾರ ಕಿವಿಗೂ ಬೀಳುತ್ತಿರಲಿಲ್ಲ. ಕೇವಲ ಅರಣ್ಯರೋದನವಾಗುತ್ತಿತ್ತು, ಸ್ವಲ್ಪ ಹೊತ್ತಿನ ಮೇಲೆ ಮನೆಗೆ ಹಿಂತಿರುಗಿದೆ. ಹೆಂಡತಿಯೊಡನೆ ಯಥಾಪ್ರಕಾರ ಗೊಣಗಾಡುತ್ತ ಊಟ ಮಾಡಿದೆ.<noinclude></noinclude> czgnmptkd5ktzrbpz947i3aap3wclcy ಪುಟ:ಮನಮಂಥನ.pdf/೩೧೫ 104 62762 316949 314487 2026-05-04T13:53:57Z Shreelatha.Halemane 7642 /* Proofread */ 316949 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಮನಸ್ಸಿನ ಸ್ವರೂಪ}}{{Right|೨೯೭}} ಎಲಡಿಕೆಯನ್ನು ವರಾಂಡಾದಲ್ಲಿ ಜಗಿಯುತ್ತಾ ಕುಳಿತೆ ಒಂಟಿಯಾಗಿ ಮನಸ್ಸು ವಿಚಾರ ಮಾಡತೊಡಗಿತು. '''ಚರ, ಸ್ಥಿರ''' ಜೀವಂತ ವಸ್ತುಗಳಲ್ಲಿ ಎರಡು ವ್ಯತಿರಿಕ್ತವಾದ ಭಾಗಗಳನ್ನು ಕಾಣಬಹುದು. ಒಂದು ಮರದಂತೆ ಇದ್ದಲ್ಲೇ ಬೆಳೆದು, ಬೀಜಗಳನ್ನು ಹರಡಿ ವೃದ್ಧಿಯಾಗುತ್ತಾ ಇರುವ ಸಸ್ಯವರ್ಗ. ನೆಲಸಿದಲ್ಲೇ ನನ್ನ ಬಾಳಿಗೆ ಅಗತ್ಯವಾದ ಆಹಾರಗಳನ್ನು ನೆಲದಿಂದೂ ಸುತ್ತಲೂ ಬೀಸುವ ಗಾಳಿಯಿಂದಲೂ ದಕ್ಕಿಸಿಕೊಂಡು, ಬದುಕುತ್ತದೆ, ಜೀವಿಸುತ್ತದೆ. ಒಂದು ದೃಷ್ಟಿಯಿಂದ ಇದೇ ಚೆನ್ನು ಎನ್ನಿಸುತ್ತದೆ. ಎರಡನೆಯದು ಪ್ರಾಣಿವರ್ಗ, ಆಹಾರ ಸಂಪಾದನೆಗಾಗಲೀ ಊಟವನ್ನು ಅಡುಗಿಸುವುದಕ್ಕಾಗಲೀ, ಪ್ರಾಣಿಗಳು ಎಲ್ಲೆಲ್ಲೂ ಅಡ್ಡಾಡಬೇಕು, ಒದ್ದಾಡಬೇಕು ; ಕೂಟದ ಅಮಲೇರಿದಾಗ, ತನ್ನವರೊಂದಿಗೆ ಕಾದಾಡಬೇಕು, ಕುಸ್ತಿ ಮಾಡಬೇಕು. ಆ ಉನ್ಮಾದದಲ್ಲಿ ತನ್ನ ಪ್ರಾಣವನ್ನು ಕಳೆದುಕೊಳ್ಳಲೂಬಹುದು. ಮುಖ್ಯವಾದ ಈ ಎರಡು ಪ್ರೇರಕಗಳಿಂದ ಊಟ ಮತ್ತು ಕೂಟ-ಎಲ್ಲಿಯೋ ಹುಟ್ಟಿ, ಎಲ್ಲಿಯೋ ಬೆಳೆದು, ಎಲ್ಲಿಯೋ ಗೋರಿಯಾಗಬೇಕು. ಪ್ರಾಣಿಗಳಲ್ಲಿ ಅತ್ಯುತ್ತಮನೆಂದು ಕೊಂಡಿರುವ ಮಾನವನು ಕೂಡ, 'ಗುರುಗಳಾಣತಿಯಂತೆ ಚರಿಸುತಿಹನು, ಇರಲಾಗದು ಎರಡು ದಿನವು ಒಂದೆಡೆಯೊಳು.' ಅವನು ಕೂಡ ಇತರ ಪ್ರಾಣಿಗಳೂ ದೇಹವನ್ನು ಪರದಾಡಿಸುವಂತೆ ತನ್ನ ಮನಸ್ಸನ್ನು ಯದ್ವಾತದ್ವಾ ಪರದಾಡಿಸುತ್ತಾನೆ. ಜೀವಂತ ವಸ್ತುಗಳ ಮುಖ್ಯವಾದ ಈ ಎರಡು ಭಾಗಗಳನ್ನು ಕಂಡಾಗ, 'ನಮ್ಮಂತೆ ಗೋಳು ಕರೆಯಿಲ್ಲದೆ ನಿಮ್ಮ ರಂಗ ಅಂತ ಮರಗಿಡಗಳಂತೆ ಇದ್ದಲ್ಲೇ ಮೋಜು ಮಾಡುವುದು ಚೆನ್ನ' ಎಂದು ಮಾನವನಿಗೆ ಅನಿಸುತ್ತದೆ. ಸಸ್ಯವರ್ಗವನ್ನು ಸ್ಥಾವರ ಎಂದರು. ಪ್ರಾಣಿವರ್ಗವನ್ನು ಜಂಗಮ ಎಂದರು. ಪ್ರಕೃತಿಯ ಪ್ರಗತಿಯ ಒಂದು ಹಂತದಲ್ಲಿ, ಮಾನವನ ವಿಚಾರಪರ ಮನಸ್ಸು ಅದ್ಭುತವಾಗಿ ಬೆಳೆಯತೊಡಗಿತು. ಅದನ್ನು ಬೆಳೆಸಿಕೊಳ್ಳುತ್ತಾ, ಮಾನವನು ಪ್ರಕೃತಿಯನ್ನೇ ಹತೋಟಿಯಲ್ಲಿಡತೊಡಗಿದ. ಪ್ರಾಣಿಗಳಲ್ಲಿ ಅತ್ಯಂತ ನಿಸ್ಸಹಾಯಕ ಪ್ರಾಣಿ ಎಂದರೆ, ಕಾಡುಮನುಷ್ಯ ಆದಿಮಾನವ. ಆನೆಯು ತನ್ನ ಘನಪ್ರಮಾಣ, ಅದರಿಂದಾಗಿ ಲಭಿಸಿದ ಬಲದಿಂದ,<noinclude></noinclude> rm0prdgzfvswcnsqmg08j5775y6khw0 316992 316949 2026-05-04T14:24:54Z Shreesha Sharma 7840 /* Validated */ 316992 proofread-page text/x-wiki <noinclude><pagequality level="4" user="Shreesha Sharma" /></noinclude>{{Left|ಮನಸ್ಸಿನ ಸ್ವರೂಪ}}{{Right|೨೯೭}} {{gap}}ಎಲಡಿಕೆಯನ್ನು ವರಾಂಡಾದಲ್ಲಿ ಜಗಿಯುತ್ತಾ ಕುಳಿತೆ ಒಂಟಿಯಾಗಿ ಮನಸ್ಸು ವಿಚಾರ ಮಾಡತೊಡಗಿತು. '''ಚರ, ಸ್ಥಿರ''' {{gap}}ಜೀವಂತ ವಸ್ತುಗಳಲ್ಲಿ ಎರಡು ವ್ಯತಿರಿಕ್ತವಾದ ಭಾಗಗಳನ್ನು ಕಾಣಬಹುದು. ಒಂದು ಮರದಂತೆ ಇದ್ದಲ್ಲೇ ಬೆಳೆದು, ಬೀಜಗಳನ್ನು ಹರಡಿ ವೃದ್ಧಿಯಾಗುತ್ತಾ ಇರುವ ಸಸ್ಯವರ್ಗ. ನೆಲಸಿದಲ್ಲೇ ನನ್ನ ಬಾಳಿಗೆ ಅಗತ್ಯವಾದ ಆಹಾರಗಳನ್ನು ನೆಲದಿಂದೂ ಸುತ್ತಲೂ ಬೀಸುವ ಗಾಳಿಯಿಂದಲೂ ದಕ್ಕಿಸಿಕೊಂಡು, ಬದುಕುತ್ತದೆ, ಜೀವಿಸುತ್ತದೆ. ಒಂದು ದೃಷ್ಟಿಯಿಂದ ಇದೇ ಚೆನ್ನು ಎನ್ನಿಸುತ್ತದೆ. {{gap}}ಎರಡನೆಯದು ಪ್ರಾಣಿವರ್ಗ, ಆಹಾರ ಸಂಪಾದನೆಗಾಗಲೀ ಊಟವನ್ನು ಅಡುಗಿಸುವುದಕ್ಕಾಗಲೀ, ಪ್ರಾಣಿಗಳು ಎಲ್ಲೆಲ್ಲೂ ಅಡ್ಡಾಡಬೇಕು, ಒದ್ದಾಡಬೇಕು ; ಕೂಟದ ಅಮಲೇರಿದಾಗ, ತನ್ನವರೊಂದಿಗೆ ಕಾದಾಡಬೇಕು, ಕುಸ್ತಿ ಮಾಡಬೇಕು. ಆ ಉನ್ಮಾದದಲ್ಲಿ ತನ್ನ ಪ್ರಾಣವನ್ನು ಕಳೆದುಕೊಳ್ಳಲೂಬಹುದು. ಮುಖ್ಯವಾದ ಈ ಎರಡು ಪ್ರೇರಕಗಳಿಂದ ಊಟ ಮತ್ತು ಕೂಟ-ಎಲ್ಲಿಯೋ ಹುಟ್ಟಿ, ಎಲ್ಲಿಯೋ ಬೆಳೆದು, ಎಲ್ಲಿಯೋ ಗೋರಿಯಾಗಬೇಕು. ಪ್ರಾಣಿಗಳಲ್ಲಿ ಅತ್ಯುತ್ತಮನೆಂದು ಕೊಂಡಿರುವ ಮಾನವನು ಕೂಡ, 'ಗುರುಗಳಾಣತಿಯಂತೆ ಚರಿಸುತಿಹನು, ಇರಲಾಗದು ಎರಡು ದಿನವು ಒಂದೆಡೆಯೊಳು.' ಅವನು ಕೂಡ ಇತರ ಪ್ರಾಣಿಗಳೂ ದೇಹವನ್ನು ಪರದಾಡಿಸುವಂತೆ ತನ್ನ ಮನಸ್ಸನ್ನು ಯದ್ವಾತದ್ವಾ ಪರದಾಡಿಸುತ್ತಾನೆ. {{gap}}ಜೀವಂತ ವಸ್ತುಗಳ ಮುಖ್ಯವಾದ ಈ ಎರಡು ಭಾಗಗಳನ್ನು ಕಂಡಾಗ, 'ನಮ್ಮಂತೆ ಗೋಳು ಕರೆಯಿಲ್ಲದೆ ನಿಮ್ಮ ರಂಗ ಅಂತ ಮರಗಿಡಗಳಂತೆ ಇದ್ದಲ್ಲೇ ಮೋಜು ಮಾಡುವುದು ಚೆನ್ನ' ಎಂದು ಮಾನವನಿಗೆ ಅನಿಸುತ್ತದೆ. ಸಸ್ಯವರ್ಗವನ್ನು ಸ್ಥಾವರ ಎಂದರು. ಪ್ರಾಣಿವರ್ಗವನ್ನು ಜಂಗಮ ಎಂದರು. {{gap}}ಪ್ರಕೃತಿಯ ಪ್ರಗತಿಯ ಒಂದು ಹಂತದಲ್ಲಿ, ಮಾನವನ ವಿಚಾರಪರ ಮನಸ್ಸು ಅದ್ಭುತವಾಗಿ ಬೆಳೆಯತೊಡಗಿತು. ಅದನ್ನು ಬೆಳೆಸಿಕೊಳ್ಳುತ್ತಾ, ಮಾನವನು ಪ್ರಕೃತಿಯನ್ನೇ ಹತೋಟಿಯಲ್ಲಿಡತೊಡಗಿದ. {{gap}}ಪ್ರಾಣಿಗಳಲ್ಲಿ ಅತ್ಯಂತ ನಿಸ್ಸಹಾಯಕ ಪ್ರಾಣಿ ಎಂದರೆ, ಕಾಡುಮನುಷ್ಯ ಆದಿಮಾನವ. ಆನೆಯು ತನ್ನ ಘನಪ್ರಮಾಣ, ಅದರಿಂದಾಗಿ ಲಭಿಸಿದ ಬಲದಿಂದ,<noinclude></noinclude> pe2twsbiisb0eolx7eesshvwff5nujo ಪುಟ:ಮನಮಂಥನ.pdf/೩೧೬ 104 62763 316950 314488 2026-05-04T13:54:50Z Shreelatha.Halemane 7642 /* Proofread */ 316950 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೨೯೮}}{{Right|ಮನಮಂಥನ}} ಕಾಡುಪ್ರಾಣಿಗಳ ಸ್ಪರ್ಧಾಜೀವನದಲ್ಲಿ ಬದುಕಿ ಉಳಿಯಲು ಸಾಧ್ಯವಾಯಿತು. ಸಿಂಹ ಮತ್ತು ಹುಲಿಗಳು, ತಮ್ಮ ದೇಹಬಲದಿಂದ, ಹಾಗೂ ಚುರುಕು ವೇಗದಿಂದ, ತಮ್ಮ ಇರುವಿಕೆಯನ್ನು ಮುಂದುವರೆಸಿಕೊಂಡವು. ಹುಲ್ಲೇ, ಚಿಗರೆ, ಕುದುರೆ ಮುಂತಾದುವು ಅತಿವೇಗದ ಓಡುವಿಕೆಯನ್ನು ಸಾಧಿಸಿಕೊಂಡು, ತಮ್ಮ ವಂಶಗಳನ್ನು ಉಳಿಸಿಕೊಂಡವು. ಪಕ್ಷಿಗಳು ಎತ್ತರದಲ್ಲಿ ಹಾರಾಡುವುದರಿಂದ, ನೆಲದ ಮೇಲೆ ಜೀವಿಸುವ ಶತ್ರು ಪ್ರಾಣಿಗಳಿಂದ, ರಕ್ಷಣೆಯನ್ನು ಪಡೆದವು. ಆದರೆ ಆಹಾರಕ್ಕಾಗಿ ಭೂಮಿಗೆ ಇಳಿಯಬೇಕಾಯಿತು. ಸಂಸಾರವನ್ನು ನಡೆಸಿ, ವಂಶಾಭಿವೃದ್ಧಿಯನ್ನು ಮುಂದುವರೆಸಲು, ಮರಗಳಲ್ಲಿ ಗೂಡನ್ನು ಕಟ್ಟಿಕೊಳ್ಳಬೇಕಾಯಿತು. ಉರಗಗಳು ನೆಲದಮೇಲೆ ಹರಿದಾಡುತ್ತ, ಎಲೆಬಳ್ಳಿಗಳ, ಕಲ್ಲುಮಣ್ಣುಗಳ, ಮರೆಯಲ್ಲಿ ರಕ್ಷಣೆಯನ್ನು ಪಡೆಯುತ್ತ ಬಾಳಿ ಬದುಕುತ್ತಿದ್ದುವು. ಪಕ್ಷಿಗಳು ಅಂದರೆ ಖಗಗಳು ! ಉರಗಗಳು ಎಂದರೆ ಹರಿದಾಡುವುವು, ಇವೆರಡೂ ಜೀವದ ಒಂದೇ ಕಿರುರೆಂಬೆಯಿಂದ ಕವಲೊಡೆದು ಬಾಳತೊಡಗಿದುವು. ಹುಟ್ಟುವಾಗ ಅಣ್ಣತಮ್ಮಂದಿರು ಬೆಳೆದ ಮೇಲೆ ದಾಯಾದಿಗಳು ಎನ್ನುವ ಗಾದೆಗೆ, ಖಗ-ಉರಗಗಳು ಒಂದು ಪುರಾತನ ನಿದರ್ಶನ ಪಕ್ಷಿಗಳು ಹಾವುಗಳನ್ನು ಕಂಡಾಗ, ದಕ್ಕಿಸಿಕೊಳ್ಳುತ್ತವೆ, ನವಿಲು, ಗರುಡ ಇತ್ಯಾದಿಗಳು ಭಾರೀ ಹಾವುಗಳನ್ನೂ ಕುಕ್ಕಿ ಕೊಂದು ಉಣ್ಣುತ್ತವೆ. ಪಕ್ಷಿಗಳು ಮರಗಳಲ್ಲಿ ಗೂಡನ್ನು ಕಟ್ಟಿಕೊಂಡು, ಮೊಟ್ಟೆಯನ್ನಿಟ್ಟಾಗ, ಉರಗಗಳು ಮರವನ್ನೇರಿ, ಶತ್ರುಗಳಾದ ಪಕ್ಷಿಗಳ ಮೊಟ್ಟೆಗಳನ್ನು ಕಬಳಿಸುತ್ತವೆ. ಕತ್ತೆಗಳಂತೆ, ಕುದುರೆಗಳಂತೆ ಮನುಷ್ಯನು ಹಿಂಗಾಲುಗಳಿಂದ ಒದ್ದು ಶತ್ರುವನ್ನು ಕುಂಟಿಸಲಾರ ; ಹುಲಿಗಳಂತೆ ಸಿಂಹಗಳಂತೆ ಕಳ್ಳತನದಲ್ಲಿ ಹಿಂಬಾಲಿಸಿ, ಛಂಗಿಸಿ ಒಂದೇ ಏಟಿಗೆ ದನವನ್ನು ಕೊಂದು ಆಹಾರವನ್ನು ಪಡೆಯಲಾರ ; ಹದ್ದುಗಳಂತೆ ತೀಕ್ಷ್ಯ ದೃಷ್ಟಿಯನ್ನು ಪಡೆದು, ನೆಲದ ಮೇಲೆ ನಡೆಯುವ ಪ್ರಾಣಿಯನ್ನು ಕಂಡು, ವಾಯುವೇಗದಿಂದ ಇಳಿದುಬಂದು, ಕಾಲುಗಳಲ್ಲಿ ಅದನ್ನು ಹಿಡಿದು, ಸಂತ ತಿರುಗಿ ಆಕಾಶದತ್ತ ಹಾರಿ ಹೋಗಲಾರ, ಇತ್ಯಾದಿ ಇತ್ಯಾದಿ. ಆದರೆ ನಿಸ್ಸಹಾಯಕನಾಗಿದ್ದ ಆದಿಮಾನವನು ತನ್ನ ವಿಚಾರಪರ ಮನಸ್ಸನ್ನು ಅಮೋಘವಾಗಿ ಬೆಳೆಸಿಕೊಂಡು, ಯಂತ್ರವನ್ನು ರಚಿಸಿದ್ದಾನೆ. ಇಂದು ಅವನು ಗಿಡಗಳ ದೃಷ್ಟಿಗಿಂತ, ಲಕ್ಷಲಕ್ಷ ಪಾಲು ಹೆಚ್ಚು ಚುರುಕಾದ ದೃಷ್ಟಿಯನ್ನು ಮೈಕ್ರೋ ಸ್ಕೋಪ್, ಮತ್ತು ಟೆಲಿಸ್ಕೋಪುಗಳ ಮೂಲಕ ಸಾಧಿಸಿಕೊಂಡಿದ್ದಾನೆ. ವಿಮಾನಗಳನ್ನು ಸೃಷ್ಟಿಸಿ, ರಣಹದ್ದುಗಳಿಗಿಂತ ಸಾವಿರಾರು ಪಾಲು ವೇಗವಾಗಿ ಹಾರಬಲ್ಲವನಾಗಿದ್ದಾನೆ. ದೂರವಾಣಿ ಯಂತ್ರಗಳ ಸಹಾಯದಿಂದ ತನ್ನ ಕಿವಿಯ<noinclude></noinclude> 19rdvb0o953okjyy43i2nkfxhzv9evb 316991 316950 2026-05-04T14:24:23Z Shreesha Sharma 7840 /* Validated */ 316991 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೨೯೮}}{{Right|ಮನಮಂಥನ}} ಕಾಡುಪ್ರಾಣಿಗಳ ಸ್ಪರ್ಧಾಜೀವನದಲ್ಲಿ ಬದುಕಿ ಉಳಿಯಲು ಸಾಧ್ಯವಾಯಿತು. ಸಿಂಹ ಮತ್ತು ಹುಲಿಗಳು, ತಮ್ಮ ದೇಹಬಲದಿಂದ, ಹಾಗೂ ಚುರುಕು ವೇಗದಿಂದ, ತಮ್ಮ ಇರುವಿಕೆಯನ್ನು ಮುಂದುವರೆಸಿಕೊಂಡವು. ಹುಲ್ಲೇ, ಚಿಗರೆ, ಕುದುರೆ ಮುಂತಾದುವು ಅತಿವೇಗದ ಓಡುವಿಕೆಯನ್ನು ಸಾಧಿಸಿಕೊಂಡು, ತಮ್ಮ ವಂಶಗಳನ್ನು ಉಳಿಸಿಕೊಂಡವು. ಪಕ್ಷಿಗಳು ಎತ್ತರದಲ್ಲಿ ಹಾರಾಡುವುದರಿಂದ, ನೆಲದ ಮೇಲೆ ಜೀವಿಸುವ ಶತ್ರು ಪ್ರಾಣಿಗಳಿಂದ, ರಕ್ಷಣೆಯನ್ನು ಪಡೆದವು. ಆದರೆ ಆಹಾರಕ್ಕಾಗಿ ಭೂಮಿಗೆ ಇಳಿಯಬೇಕಾಯಿತು. ಸಂಸಾರವನ್ನು ನಡೆಸಿ, ವಂಶಾಭಿವೃದ್ಧಿಯನ್ನು ಮುಂದುವರೆಸಲು, ಮರಗಳಲ್ಲಿ ಗೂಡನ್ನು ಕಟ್ಟಿಕೊಳ್ಳಬೇಕಾಯಿತು. ಉರಗಗಳು ನೆಲದಮೇಲೆ ಹರಿದಾಡುತ್ತ, ಎಲೆಬಳ್ಳಿಗಳ, ಕಲ್ಲುಮಣ್ಣುಗಳ, ಮರೆಯಲ್ಲಿ ರಕ್ಷಣೆಯನ್ನು ಪಡೆಯುತ್ತ ಬಾಳಿ ಬದುಕುತ್ತಿದ್ದುವು. ಪಕ್ಷಿಗಳು ಅಂದರೆ ಖಗಗಳು ! ಉರಗಗಳು ಎಂದರೆ ಹರಿದಾಡುವುವು, ಇವೆರಡೂ ಜೀವದ ಒಂದೇ ಕಿರುರೆಂಬೆಯಿಂದ ಕವಲೊಡೆದು ಬಾಳತೊಡಗಿದುವು. ಹುಟ್ಟುವಾಗ ಅಣ್ಣತಮ್ಮಂದಿರು ಬೆಳೆದ ಮೇಲೆ ದಾಯಾದಿಗಳು ಎನ್ನುವ ಗಾದೆಗೆ, ಖಗ-ಉರಗಗಳು ಒಂದು ಪುರಾತನ ನಿದರ್ಶನ ಪಕ್ಷಿಗಳು ಹಾವುಗಳನ್ನು ಕಂಡಾಗ, ದಕ್ಕಿಸಿಕೊಳ್ಳುತ್ತವೆ, ನವಿಲು, ಗರುಡ ಇತ್ಯಾದಿಗಳು ಭಾರೀ ಹಾವುಗಳನ್ನೂ ಕುಕ್ಕಿ ಕೊಂದು ಉಣ್ಣುತ್ತವೆ. ಪಕ್ಷಿಗಳು ಮರಗಳಲ್ಲಿ ಗೂಡನ್ನು ಕಟ್ಟಿಕೊಂಡು, ಮೊಟ್ಟೆಯನ್ನಿಟ್ಟಾಗ, ಉರಗಗಳು ಮರವನ್ನೇರಿ, ಶತ್ರುಗಳಾದ ಪಕ್ಷಿಗಳ ಮೊಟ್ಟೆಗಳನ್ನು ಕಬಳಿಸುತ್ತವೆ. {{gap}}ಕತ್ತೆಗಳಂತೆ, ಕುದುರೆಗಳಂತೆ ಮನುಷ್ಯನು ಹಿಂಗಾಲುಗಳಿಂದ ಒದ್ದು ಶತ್ರುವನ್ನು ಕುಂಟಿಸಲಾರ ; ಹುಲಿಗಳಂತೆ ಸಿಂಹಗಳಂತೆ ಕಳ್ಳತನದಲ್ಲಿ ಹಿಂಬಾಲಿಸಿ, ಛಂಗಿಸಿ ಒಂದೇ ಏಟಿಗೆ ದನವನ್ನು ಕೊಂದು ಆಹಾರವನ್ನು ಪಡೆಯಲಾರ ; ಹದ್ದುಗಳಂತೆ ತೀಕ್ಷ್ಯ ದೃಷ್ಟಿಯನ್ನು ಪಡೆದು, ನೆಲದ ಮೇಲೆ ನಡೆಯುವ ಪ್ರಾಣಿಯನ್ನು ಕಂಡು, ವಾಯುವೇಗದಿಂದ ಇಳಿದುಬಂದು, ಕಾಲುಗಳಲ್ಲಿ ಅದನ್ನು ಹಿಡಿದು, ಸಂತ ತಿರುಗಿ ಆಕಾಶದತ್ತ ಹಾರಿ ಹೋಗಲಾರ, ಇತ್ಯಾದಿ ಇತ್ಯಾದಿ. {{gap}}ಆದರೆ ನಿಸ್ಸಹಾಯಕನಾಗಿದ್ದ ಆದಿಮಾನವನು ತನ್ನ ವಿಚಾರಪರ ಮನಸ್ಸನ್ನು ಅಮೋಘವಾಗಿ ಬೆಳೆಸಿಕೊಂಡು, ಯಂತ್ರವನ್ನು ರಚಿಸಿದ್ದಾನೆ. ಇಂದು ಅವನು ಗಿಡಗಳ ದೃಷ್ಟಿಗಿಂತ, ಲಕ್ಷಲಕ್ಷ ಪಾಲು ಹೆಚ್ಚು ಚುರುಕಾದ ದೃಷ್ಟಿಯನ್ನು ಮೈಕ್ರೋ ಸ್ಕೋಪ್, ಮತ್ತು ಟೆಲಿಸ್ಕೋಪುಗಳ ಮೂಲಕ ಸಾಧಿಸಿಕೊಂಡಿದ್ದಾನೆ. ವಿಮಾನಗಳನ್ನು ಸೃಷ್ಟಿಸಿ, ರಣಹದ್ದುಗಳಿಗಿಂತ ಸಾವಿರಾರು ಪಾಲು ವೇಗವಾಗಿ ಹಾರಬಲ್ಲವನಾಗಿದ್ದಾನೆ. ದೂರವಾಣಿ ಯಂತ್ರಗಳ ಸಹಾಯದಿಂದ ತನ್ನ ಕಿವಿಯ<noinclude></noinclude> fmffgte5qj83r6y1vozogstsdyvnq1x ಪುಟ:ಮನಮಂಥನ.pdf/೩೧೭ 104 62764 316951 314489 2026-05-04T13:55:51Z Shreelatha.Halemane 7642 /* Proofread */ 316951 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಮನಸ್ಸಿನ ಸ್ವರೂಪ}}{{Right|೨೯೯}} ಚುರುಕನ್ನು ಅತ್ಯಂತ ಪರಿಣಾಮಕಾರಿಯಾಗಿ ಹೆಚ್ಚಿಸಿಕೊಂಡಿದ್ದಾನೆ. ತಿಮಿಂಗಿಲಗಳಿಗಿಂತಲೂ ಬಹಳ ದೊಡ್ಡದಾದ ಹಡಗುಗಳನ್ನು ಕಟ್ಟಿ ವೇಗವಾಗಿ ಸಮುದ್ರದಮೇಲೆ ಸಂಚರಿಸ ತೊಡಗಿದ್ದಾನೆ. ಗುರುತ್ವಾಕರ್ಷಣ ಶಕ್ತಿಯಿಂದ ಜಿಗಿದು ತೂಕ ರಹಿತ ಸ್ಥಿತಿಯಲ್ಲಿರುವುದನ್ನು ಸಾಧಿಸಿದ್ದಾನೆ. Whatever goes up must come down ಎಂದು ಮೊದಲು ಗಾದೆಯನ್ನು ಕಟ್ಟಿದ್ದರು. ಈಗ whatever goes up may become a satellite ಎನ್ನಬಹುದು. ಮನಸ್ಸಿನ ವಿಚಾರಪರಭಾಗದ ಅದ್ಭುತ ಪ್ರಗತಿಯಿಂದಾಗಿ, ಇಂದಿನ ಮಾನವನು ಭೂಮಿಯ ಮೇಲಿನ ಇತರ ಜೀವಿಗಳ ಮೇಲೆ ಹಾಗೂ ಪ್ರಕೃತಿಯ ಮೇಲೆ ಕೂಡ ಸ್ವಲ್ಪಮಟ್ಟಿಗೆ ಹತೋಟಿಯನ್ನು ಪಡೆದುಕೊಂಡಿದ್ದಾನೆ. ಮಾನವನು ಜಂಗಮ ಪ್ರಾಣಿ. ಇಂದಿನ ಅತ್ಯದ್ಭುತ ಸಾಧನೆಗಳನ್ನು ಕರಗತ ಮಾಡಿಕೊಟ್ಟ ಅವನ ವಿಚಾರಪರ ಮನಸೂ ಜಂಗಮವೇ, ಅದೂ ಪರದಾಡುತ್ತಿರುತ್ತದೆ, ಅವನ ಪ್ರಾಣಿಸ್ವಭಾವಕ್ಕನುಗುಣವಾಗಿ ಮನುಷ್ಯನು ಸ್ಥಾವರ ಸ್ಥಿತಿಗೆ ಬರುವುದುಂಟೇ? ಉಂಟು. ಹಣ್ಣು ಹಣ್ಣು ಮುಪ್ಪು ಮೂಡಿದ ಮೇಲೆ ಮನೆಗೊಂದು ಮುದಿಕೊರಡಾಗುತ್ತಾನೆ. ಅವನ ದೇಹವು ಬಹುಮಟ್ಟಿಗೆ ಸ್ಥಾವರ ಸ್ಥಿತಿಗೆ ಬಂದರೂ, ಅವನ ಮನಸ್ಸು, ಅರಳುಮರುಳಾಗಿದ್ದರೂ ಪರದಾಡುತ್ತದೆ. ಚಿಂತಾಕ್ರಾಂತವಾಗಿ ಪರದಾಡುತ್ತದೆ. ಅಂದರೆ ದೇಹವು ಸ್ಥಾವರ ಸ್ಥಿತಿಗೆ ಕಾಲಗತಿಯಲ್ಲಿ ಬಂದರೂ, ಮನಸ್ಸು ಅದಕ್ಕನುಗುಣವಾಗಿ ತೆಪ್ಪಗಿರುವುದಿಲ್ಲ. ಮನಸ್ಸನ್ನು ಚಂಚಲತೆಯಿಂದ ಪಾರುಮಾಡಿ, ಜಂಗಮ ಸ್ಥಿತಿಯಿಂದ ಮುಂದೂಡಿ, ಶೂನ್ಯ ಸಂಪಾದನೆಯನ್ನು ಎಂದರೆ, ಸಮಾಧಿಸ್ಥಿತಿಯನ್ನು ಪಡೆಯಬೇಕಾದರೆ, ಧಾರಣ ಧ್ಯಾನಗಳನ್ನು ಮನಸ್ಸು ಅಭ್ಯಸಿಸಬೇಕು. ಆಗ ಮನಸ್ಸು ಸ್ಥಾವರವಾಗಲು ಸಾಧ್ಯ ಧಾರಣಾ ಧ್ಯಾನಗಳು ತೋರ ಮನಸ್ಸಿನಿಂದ The conscious Mind ನಿಂದ ಅಭ್ಯಸಿಸಲ್ಪಡುತ್ತದೆ. ಆಳ ಮನಸ್ಸಿನ ಪದರಗಳು ಕಾಣುವುದಿಲ್ಲ. ಸಮಾಧಿ ಸ್ಥಿತಿಯಲ್ಲಾದರೋ, ಆಳಮನಸ್ಸಿನ ಪದರಗಳೆಲ್ಲವೂ ಸ್ಪಷ್ಟವಾಗಿ, ನಿಖರವಾಗಿ, ಸಾಕ್ಷಾತ್ ಆಗುತ್ತದೆ ಎಂದು ಅಂತಹ ಅನುಭವವನ್ನು ಸವಿದವರು ಹೇಳಿದ್ದಾರೆ. ನಂಬದಿರಲು ನಮಗೆ ಅಧಿಕಾರವಿಲ್ಲ. ಯೋಗ್ಯತೆಯೂ ಇಲ್ಲ. ಸ್ಥಾವರ ಸ್ಥಿತಿಗೆ ಮನಸ್ಸನ್ನು ಬಿಗಿಹಿಡಿದು ತಂದು, ಅಲ್ಲಿ ಸುಭದ್ರವಾಗಿ ನಿಲ್ಲಿಸಬೇಕಾದರೆ, ಚಿತ್ರ ವಿಚಿತ್ರವಾದ ವಿಧವಿಧವಾದ ಕಾಮನೆಗಳು ಸೆಳೆಯದಂತೆ ಜಾಗರೂಕರಾಗಬೇಕು. ಸಂಸಾರದಲ್ಲಿದ್ದವರಿಗೆ ಆಸೆ ಆಕಾಂಕ್ಷೆಗಳಿಗೆ ಮಿತಿಯೇ<noinclude></noinclude> 9k2j7yuo3ikd2clgxpc7pyimrbksm9p 316990 316951 2026-05-04T14:23:58Z Shreesha Sharma 7840 /* Validated */ 316990 proofread-page text/x-wiki <noinclude><pagequality level="4" user="Shreesha Sharma" /></noinclude>{{Left|ಮನಸ್ಸಿನ ಸ್ವರೂಪ}}{{Right|೨೯೯}} ಚುರುಕನ್ನು ಅತ್ಯಂತ ಪರಿಣಾಮಕಾರಿಯಾಗಿ ಹೆಚ್ಚಿಸಿಕೊಂಡಿದ್ದಾನೆ. ತಿಮಿಂಗಿಲಗಳಿಗಿಂತಲೂ ಬಹಳ ದೊಡ್ಡದಾದ ಹಡಗುಗಳನ್ನು ಕಟ್ಟಿ ವೇಗವಾಗಿ ಸಮುದ್ರದಮೇಲೆ ಸಂಚರಿಸ ತೊಡಗಿದ್ದಾನೆ. ಗುರುತ್ವಾಕರ್ಷಣ ಶಕ್ತಿಯಿಂದ ಜಿಗಿದು ತೂಕ ರಹಿತ ಸ್ಥಿತಿಯಲ್ಲಿರುವುದನ್ನು ಸಾಧಿಸಿದ್ದಾನೆ. Whatever goes up must come down ಎಂದು ಮೊದಲು ಗಾದೆಯನ್ನು ಕಟ್ಟಿದ್ದರು. ಈಗ whatever goes up may become a satellite ಎನ್ನಬಹುದು. ಮನಸ್ಸಿನ ವಿಚಾರಪರಭಾಗದ ಅದ್ಭುತ ಪ್ರಗತಿಯಿಂದಾಗಿ, ಇಂದಿನ ಮಾನವನು ಭೂಮಿಯ ಮೇಲಿನ ಇತರ ಜೀವಿಗಳ ಮೇಲೆ ಹಾಗೂ ಪ್ರಕೃತಿಯ ಮೇಲೆ ಕೂಡ ಸ್ವಲ್ಪಮಟ್ಟಿಗೆ ಹತೋಟಿಯನ್ನು ಪಡೆದುಕೊಂಡಿದ್ದಾನೆ. {{gap}}ಮಾನವನು ಜಂಗಮ ಪ್ರಾಣಿ. ಇಂದಿನ ಅತ್ಯದ್ಭುತ ಸಾಧನೆಗಳನ್ನು ಕರಗತ ಮಾಡಿಕೊಟ್ಟ ಅವನ ವಿಚಾರಪರ ಮನಸೂ ಜಂಗಮವೇ, ಅದೂ ಪರದಾಡುತ್ತಿರುತ್ತದೆ, ಅವನ ಪ್ರಾಣಿಸ್ವಭಾವಕ್ಕನುಗುಣವಾಗಿ {{gap}}ಮನುಷ್ಯನು ಸ್ಥಾವರ ಸ್ಥಿತಿಗೆ ಬರುವುದುಂಟೇ? ಉಂಟು. ಹಣ್ಣು ಹಣ್ಣು ಮುಪ್ಪು ಮೂಡಿದ ಮೇಲೆ ಮನೆಗೊಂದು ಮುದಿಕೊರಡಾಗುತ್ತಾನೆ. ಅವನ ದೇಹವು ಬಹುಮಟ್ಟಿಗೆ ಸ್ಥಾವರ ಸ್ಥಿತಿಗೆ ಬಂದರೂ, ಅವನ ಮನಸ್ಸು, ಅರಳುಮರುಳಾಗಿದ್ದರೂ ಪರದಾಡುತ್ತದೆ. ಚಿಂತಾಕ್ರಾಂತವಾಗಿ ಪರದಾಡುತ್ತದೆ. ಅಂದರೆ ದೇಹವು ಸ್ಥಾವರ ಸ್ಥಿತಿಗೆ ಕಾಲಗತಿಯಲ್ಲಿ ಬಂದರೂ, ಮನಸ್ಸು ಅದಕ್ಕನುಗುಣವಾಗಿ ತೆಪ್ಪಗಿರುವುದಿಲ್ಲ. ಮನಸ್ಸನ್ನು ಚಂಚಲತೆಯಿಂದ ಪಾರುಮಾಡಿ, ಜಂಗಮ ಸ್ಥಿತಿಯಿಂದ ಮುಂದೂಡಿ, ಶೂನ್ಯ ಸಂಪಾದನೆಯನ್ನು ಎಂದರೆ, ಸಮಾಧಿಸ್ಥಿತಿಯನ್ನು ಪಡೆಯಬೇಕಾದರೆ, ಧಾರಣ ಧ್ಯಾನಗಳನ್ನು ಮನಸ್ಸು ಅಭ್ಯಸಿಸಬೇಕು. ಆಗ ಮನಸ್ಸು ಸ್ಥಾವರವಾಗಲು ಸಾಧ್ಯ {{gap}}ಧಾರಣಾ ಧ್ಯಾನಗಳು ತೋರ ಮನಸ್ಸಿನಿಂದ The conscious Mind ನಿಂದ ಅಭ್ಯಸಿಸಲ್ಪಡುತ್ತದೆ. ಆಳ ಮನಸ್ಸಿನ ಪದರಗಳು ಕಾಣುವುದಿಲ್ಲ. ಸಮಾಧಿ ಸ್ಥಿತಿಯಲ್ಲಾದರೋ, ಆಳಮನಸ್ಸಿನ ಪದರಗಳೆಲ್ಲವೂ ಸ್ಪಷ್ಟವಾಗಿ, ನಿಖರವಾಗಿ, ಸಾಕ್ಷಾತ್ ಆಗುತ್ತದೆ ಎಂದು ಅಂತಹ ಅನುಭವವನ್ನು ಸವಿದವರು ಹೇಳಿದ್ದಾರೆ. ನಂಬದಿರಲು ನಮಗೆ ಅಧಿಕಾರವಿಲ್ಲ. ಯೋಗ್ಯತೆಯೂ ಇಲ್ಲ. {{gap}}ಸ್ಥಾವರ ಸ್ಥಿತಿಗೆ ಮನಸ್ಸನ್ನು ಬಿಗಿಹಿಡಿದು ತಂದು, ಅಲ್ಲಿ ಸುಭದ್ರವಾಗಿ ನಿಲ್ಲಿಸಬೇಕಾದರೆ, ಚಿತ್ರ ವಿಚಿತ್ರವಾದ ವಿಧವಿಧವಾದ ಕಾಮನೆಗಳು ಸೆಳೆಯದಂತೆ ಜಾಗರೂಕರಾಗಬೇಕು. ಸಂಸಾರದಲ್ಲಿದ್ದವರಿಗೆ ಆಸೆ ಆಕಾಂಕ್ಷೆಗಳಿಗೆ ಮಿತಿಯೇ<noinclude></noinclude> hlmj2fa1hitbzxrhzpqwa8mvxqusj5e ಪುಟ:ಮನಮಂಥನ.pdf/೩೧೮ 104 62765 316952 314490 2026-05-04T13:57:11Z Shreelatha.Halemane 7642 /* Proofread */ 316952 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೩೦೦}}{{Right|ಮನಮಂಥನ}} ಇರುವುದಿಲ್ಲ. ಸಂಸಾರದಲ್ಲಿ ಬೇರೂರಿ ಮರಗಳಂತೆ ಸ್ಥಾವರವಾಗಿರುತ್ತಾರೆ. ಆದರೆ ಮನಸ್ಸು ಪರದಾಡುತ್ತಿರುತ್ತದೆ ; ಸಂಸಾರದ ವಿಷಯಗಳನ್ನು ಕುರಿತು. ಯಾವ ವೈಯ್ಯಕ್ತಿಕ ಆಸೆ ಆಕಾಂಕ್ಷೆಗಳೂ ಇಲ್ಲದೆ, ಲೋಕಕಲ್ಯಾಣದ ನಿಸ್ವಾರ್ಥಿ ಆಸೆಯೊಂದನ್ನು ಮಾತ್ರ ಹೊಂದಿರುವ ಕೆಲವರನ್ನು ಮನಸ್ಸನ್ನು ನಡೆಸುವ ಸತ್-ಚೈತನ್ಯದ ಅಂಶವನ್ನು ಅರಿಯಲೆತ್ನಿಸುವವರನ್ನು ಸಂನ್ಯಾಸಿಗಳು, ಜಂಗಮರು, ಎಂದು ಸಮಾಜವು ಗೌರವಿಸುತ್ತದೆ. ಇದ್ದ ಊರಲ್ಲಿ ಹೆಚ್ಚುದಿನಗಳು ಇವರುಗಳು ಇರಬಾರದು ಎಂದು ನಿಯಮವನ್ನು ಮಾಡಿದರು. ಯಾವುದರೊಂದಿಗೂ ಅಂಟಿಕೊಳ್ಳಬಾರದೆಂದು. ಸಸ್ಯ ವರ್ಗವು ಸ್ಥಾವರ ಎಂದೆವು. ಇದ್ದಲ್ಲೇ ಬೇರೂರಿ ಜೀವಮಾನವನ್ನೂ ಕಳೆಯುತ್ತದೆ ಎಂದೆವು. ಸಸ್ಯಗಳಿಗೆ ಮನಸ್ಸು ಇದೆಯೇ? ಇದ್ದರೆ ಪ್ರಾಣಿಗಳಲ್ಲಿರುವಂತೆ ವಿಚಾರಪರ ಮನಸ್ಸು ಇದೆಯೇ? ಇದ್ದರೆ ಸಸ್ಯಗಳ ಮನಸ ಜಂಗಮವಾಗಿರಬೇಕಲ್ಲವೇ? ಮರಗಿಡಗಳಿಗೂ ಮನುಷ್ಯಪ್ರಾಣಿಗೂ ಇರುವ ಹಿರಿಯ ವ್ಯತ್ಯಾಸವನ್ನು ಈ ಪ್ರಶ್ನೆಗಳ ಉತ್ತರಗಳಿಂದ ನಿರ್ಧರಿಸಬಹುದು. ಸಸ್ಯಗಳಲ್ಲಿ, ಅವುಗಳ ಒಡಲಿನ ಕೆಲಸಕಾರ್ಯಗಳನ್ನು ಒಗ್ಗೂಡಿಸಲು, ಸಮನ್ವಯಿಸಲು, ಮನಸ್ಸಿನಂತಹ ಶಕ್ತಿಯೊಂದು ಇರಲೇಬೇಕು. ಹೊರವಲಯದಲ್ಲಿ ನಡೆಯುತ್ತಿರುವ ವ್ಯತ್ಯಾಸಗಳಿಗೆ ಸಸ್ಯವು ಪ್ರತಿಕ್ರಿಯೆಯನ್ನು ಹೂಡಬೇಕು. ಇಂದ್ರಿಯಗಳು ಪ್ರಾಣಿಗಳಲ್ಲಿರುವಂತೆ, ಹೊರವಲಯದ ವಿಷಯವನ್ನು ಮರಗಳಿಗೆ ತಿಳಿಸಲು, ಇಂದ್ರಿಯಗಳಂತೆ ಸುದ್ದಿಯನ್ನು ಕೊಡುವ ಅಂಗಗಳಿರಬೇಕು. ಇವುಗಳಿಂದ ಬಂದ ಸುದ್ದಿಯನ್ನು ಕ್ರೋಡೀಕರಿಸಿ ಜರಡಿ ಹಿಡಿದು ಯಾವ ಸುದ್ದಿಗೆ ಪ್ರತಿಕ್ರಿಯೆಯನ್ನು ಹೂಡಬೇಕು ಎಂದು ನಿರ್ಧರಿಸುವ ವ್ಯವಸ್ಥೆಯು ಇರಬೇಕು. ಈ ವ್ಯವಸ್ಥೆಯು ಮನಸ್ಸಿನಂತೆ. ಆದರೆ ವಿಚಾರವನ್ನು, ಸ್ಮರಣೆಗಳ ನೆರವಿನಿಂದ ಮಾಡುವ Brain-Cortexನ ತರಹ ವ್ಯವಸ್ಥೆಯು ಸಸ್ಯವರ್ಗದಲ್ಲಿ ಇರುವಂತೆ ಕಂಡುಬರುವುದಿಲ್ಲ. ಪ್ರಾಯಶಃ ಸ್ಥಾವರ ಜೀವಿಗಳಲ್ಲಿ, Brain-Cortex ತರಹ ಬೆಳವಣಿಗೆಯು ಅಗತ್ಯವಿರುವುದಿಲ್ಲವೇನೋ? ಪ್ರಚೋದನೆ ಇದ್ದರೆ ವೃದ್ಧಿ ; ಅಭಿವೃದ್ಧಿ. ಇದ್ದಲ್ಲೇ ಭದ್ರವಾಗಿದ್ದರೆ, ಪ್ರಚೋದನೆಯು ಇರುವುದಿಲ್ಲ. ಬೆಳಕು, ಸಸ್ಯಗಳನ್ನು ತನ್ನ ಕಡೆಗೆ ವಾಲಿಸಿಕೊಳ್ಳುತ್ತದೆ. ಶಬ್ದವು, ವಿಹಿತವಾದ ಸಂಗೀತದಂತಿದ್ದರೆ, ಸಸ್ಯಗಳ ಬೆಳವಣಿಗೆಗೆ ಸಹಾಯವಾಗುತ್ತದೆಯಂತೆ. ಕೀರ್ತಿಶೇಷ<noinclude></noinclude> 956j7byjpzhmpcakl98fkj7f1l6quo3 316988 316952 2026-05-04T14:23:33Z Shreesha Sharma 7840 /* Validated */ 316988 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೩೦೦}}{{Right|ಮನಮಂಥನ}} ಇರುವುದಿಲ್ಲ. ಸಂಸಾರದಲ್ಲಿ ಬೇರೂರಿ ಮರಗಳಂತೆ ಸ್ಥಾವರವಾಗಿರುತ್ತಾರೆ. ಆದರೆ ಮನಸ್ಸು ಪರದಾಡುತ್ತಿರುತ್ತದೆ ; ಸಂಸಾರದ ವಿಷಯಗಳನ್ನು ಕುರಿತು. ಯಾವ ವೈಯ್ಯಕ್ತಿಕ ಆಸೆ ಆಕಾಂಕ್ಷೆಗಳೂ ಇಲ್ಲದೆ, ಲೋಕಕಲ್ಯಾಣದ ನಿಸ್ವಾರ್ಥಿ ಆಸೆಯೊಂದನ್ನು ಮಾತ್ರ ಹೊಂದಿರುವ ಕೆಲವರನ್ನು ಮನಸ್ಸನ್ನು ನಡೆಸುವ ಸತ್-ಚೈತನ್ಯದ ಅಂಶವನ್ನು ಅರಿಯಲೆತ್ನಿಸುವವರನ್ನು ಸಂನ್ಯಾಸಿಗಳು, ಜಂಗಮರು, ಎಂದು ಸಮಾಜವು ಗೌರವಿಸುತ್ತದೆ. ಇದ್ದ ಊರಲ್ಲಿ ಹೆಚ್ಚುದಿನಗಳು ಇವರುಗಳು ಇರಬಾರದು ಎಂದು ನಿಯಮವನ್ನು ಮಾಡಿದರು. ಯಾವುದರೊಂದಿಗೂ ಅಂಟಿಕೊಳ್ಳಬಾರದೆಂದು. {{gap}}ಸಸ್ಯ ವರ್ಗವು ಸ್ಥಾವರ ಎಂದೆವು. ಇದ್ದಲ್ಲೇ ಬೇರೂರಿ ಜೀವಮಾನವನ್ನೂ ಕಳೆಯುತ್ತದೆ ಎಂದೆವು. ಸಸ್ಯಗಳಿಗೆ ಮನಸ್ಸು ಇದೆಯೇ? ಇದ್ದರೆ ಪ್ರಾಣಿಗಳಲ್ಲಿರುವಂತೆ ವಿಚಾರಪರ ಮನಸ್ಸು ಇದೆಯೇ? ಇದ್ದರೆ ಸಸ್ಯಗಳ ಮನಸ ಜಂಗಮವಾಗಿರಬೇಕಲ್ಲವೇ? ಮರಗಿಡಗಳಿಗೂ ಮನುಷ್ಯಪ್ರಾಣಿಗೂ ಇರುವ ಹಿರಿಯ ವ್ಯತ್ಯಾಸವನ್ನು ಈ ಪ್ರಶ್ನೆಗಳ ಉತ್ತರಗಳಿಂದ ನಿರ್ಧರಿಸಬಹುದು. {{gap}}ಸಸ್ಯಗಳಲ್ಲಿ, ಅವುಗಳ ಒಡಲಿನ ಕೆಲಸಕಾರ್ಯಗಳನ್ನು ಒಗ್ಗೂಡಿಸಲು, ಸಮನ್ವಯಿಸಲು, ಮನಸ್ಸಿನಂತಹ ಶಕ್ತಿಯೊಂದು ಇರಲೇಬೇಕು. ಹೊರವಲಯದಲ್ಲಿ ನಡೆಯುತ್ತಿರುವ ವ್ಯತ್ಯಾಸಗಳಿಗೆ ಸಸ್ಯವು ಪ್ರತಿಕ್ರಿಯೆಯನ್ನು ಹೂಡಬೇಕು. ಇಂದ್ರಿಯಗಳು ಪ್ರಾಣಿಗಳಲ್ಲಿರುವಂತೆ, ಹೊರವಲಯದ ವಿಷಯವನ್ನು ಮರಗಳಿಗೆ ತಿಳಿಸಲು, ಇಂದ್ರಿಯಗಳಂತೆ ಸುದ್ದಿಯನ್ನು ಕೊಡುವ ಅಂಗಗಳಿರಬೇಕು. ಇವುಗಳಿಂದ ಬಂದ ಸುದ್ದಿಯನ್ನು ಕ್ರೋಡೀಕರಿಸಿ ಜರಡಿ ಹಿಡಿದು ಯಾವ ಸುದ್ದಿಗೆ ಪ್ರತಿಕ್ರಿಯೆಯನ್ನು ಹೂಡಬೇಕು ಎಂದು ನಿರ್ಧರಿಸುವ ವ್ಯವಸ್ಥೆಯು ಇರಬೇಕು. ಈ ವ್ಯವಸ್ಥೆಯು ಮನಸ್ಸಿನಂತೆ. {{gap}}ಆದರೆ ವಿಚಾರವನ್ನು, ಸ್ಮರಣೆಗಳ ನೆರವಿನಿಂದ ಮಾಡುವ Brain-Cortexನ ತರಹ ವ್ಯವಸ್ಥೆಯು ಸಸ್ಯವರ್ಗದಲ್ಲಿ ಇರುವಂತೆ ಕಂಡುಬರುವುದಿಲ್ಲ. ಪ್ರಾಯಶಃ ಸ್ಥಾವರ ಜೀವಿಗಳಲ್ಲಿ, Brain-Cortex ತರಹ ಬೆಳವಣಿಗೆಯು ಅಗತ್ಯವಿರುವುದಿಲ್ಲವೇನೋ? ಪ್ರಚೋದನೆ ಇದ್ದರೆ ವೃದ್ಧಿ ; ಅಭಿವೃದ್ಧಿ. ಇದ್ದಲ್ಲೇ ಭದ್ರವಾಗಿದ್ದರೆ, ಪ್ರಚೋದನೆಯು ಇರುವುದಿಲ್ಲ. {{gap}}ಬೆಳಕು, ಸಸ್ಯಗಳನ್ನು ತನ್ನ ಕಡೆಗೆ ವಾಲಿಸಿಕೊಳ್ಳುತ್ತದೆ. ಶಬ್ದವು, ವಿಹಿತವಾದ ಸಂಗೀತದಂತಿದ್ದರೆ, ಸಸ್ಯಗಳ ಬೆಳವಣಿಗೆಗೆ ಸಹಾಯವಾಗುತ್ತದೆಯಂತೆ. ಕೀರ್ತಿಶೇಷ<noinclude></noinclude> r1rdr32fnsvxmdwu6zp2k4uadjmg276 ಪುಟ:ಮನಮಂಥನ.pdf/೩೧೯ 104 62766 316953 314491 2026-05-04T13:58:36Z Shreelatha.Halemane 7642 /* Proofread */ 316953 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಮನಸ್ಸಿನ ಸ್ವರೂಪ}}{{Right|೩೦೧}} ಜಗದೀಶ್‌ಚಂದ್ರ ಬೋಸ್ ಅವರು, ಅತ್ಯಂತ ಸೂಕ್ಷ್ಮವಾದ ಯಂತ್ರಗಳನ್ನು ಅಣಿಮಾಡಿ, ಗಿಡಗಳಿಗೆ ಮನಸ್ಸಿನಂತಹ ಶಕ್ತಿಯು ನೆರವಾಗುತ್ತದೆ ಎಂದು ಪ್ರಯೋಗಗಳನ್ನು ನಡೆಸಿ ಸಿದ್ಧಾಂತ ಮಾಡಿದರು. ಸಸ್ಯವರ್ಗದಲ್ಲಿ ಇರಬಹುದಾದ ಅಂತಹ ಮನಸ್ಸಿನಂತಿರುವ ಶಕ್ತಿಯು, ಪ್ರಾಣಿಗಳಿಗೆ ಹೋಲಿಸಲ್ಪಟ್ಟರೆ ಶೈಶವಾಸ್ಥೆಯಲ್ಲಿದೆ ಎನ್ನಬೇಕು. ಅಂದಮೇಲೆ ಸ್ಥಾವರ ಸಸ್ಯಗಳಲ್ಲಿ, ಮನಸ್ಸಿನಂತಿರುವ ಶಕ್ತಿಯು ಇದ್ದರೆ, ಅದು ಶೈಶವಾವಸ್ಥೆಯಲ್ಲಿದ್ದು, ಸ್ಥಾವರವಾಗಿರುತ್ತದೆ, ಜಂಗಮವಾಗಿರುವುದಿಲ್ಲ ಎನ್ನಬಹುದು. ಇಂದಿನ ಮಾನವನ ಪ್ರಗತಿಹೊಂದಿದ ಅದ್ಭುತವಾದ ಮನಸ್ಸಿಗೂ, ಸಸ್ಯ ವರ್ಗದಲ್ಲಿರಬಹುದಾದ ಮನಸ್ಸಿನಂತಹ ಶಕ್ತಿಗೂ, ಅರ್ಥಾರ್ಥಕ ಸಂಬಂಧವಿಲ್ಲ. '''ಆಲಯ ಮತ್ತು ಬಯಲು''' ನನ್ನ ದೇಹ ಮತ್ತು ಮನಸ್ಸುಗಳ ಒಕ್ಕೂಟವನ್ನು 'ನಾನು' ಎಂದು ದೃಢವಾಗಿ ನಂಬಿದ್ದೇನೆ. ದೇಹಕ್ಕೆ ಗಡಿಯಿದೆ, ಮಿತಿ ಇದೆ. ಅದರ ಸುತ್ತಲೂ ಇರುವ ಪರಿಸರದಿಂದ ಸುದ್ದಿಗಳನ್ನು ಪಡೆದು, ನಾನು ಸುರಕ್ಷಿತವಾಗಿರಲು ಸುಖಪಡಲು ಹಾಗೂ ದುಃಖವಾಗದಂತೆ ಜಾಗರೂಕನಾಗಲು ಪ್ರಯತ್ನಿಸುತ್ತೇನೆ. ನಿಖರವಾದ ಗಡಿರೇಖೆಗಳಿರುವ, ನನ್ನ ದೇಹ ಮತ್ತು ಮನಸ್ಸಿನ ಒಕ್ಕೂಟವನ್ನು 'ಆಲಯ' ಎಂದು ಹತ್ತು ಹನ್ನೆರಡನೆಯ ಶತಮಾನದಲ್ಲಿ ಮನನಿಗರು ಕರೆಯುತ್ತಿದ್ದರು. ನಾನು ಎಂದುಕೊಳ್ಳುವ ಆಲಯದ ಗಡಿರೇಖೆಗಳನ್ನು ದೇಹದ ದೃಷ್ಟಿಯಿಂದ ವಿಸ್ತರಿಸಿಕೊಳ್ಳುವುದು ಅಲ್ಪಸ್ವಲ್ಪ ಮಾತ್ರ ಧಡಿಯರಾಗುವುದರಿಂದ ಸಾಧ್ಯ. ಆದರೆ ಮನಸ್ಸಿನ ದೃಷ್ಟಿಯಿಂದ ಸುಲಭವಾಗಿ ವಿಸ್ತರಿಸಿಕೊಳ್ಳಬಹುದು. ಸುರಕ್ಷಿತವಾಗಿ ಇರಲು ಕಟ್ಟಿಕೊಂಡ ನಾಲ್ಕೂ ಗೋಡೆಗಳಿಂದ ಆವೃತವಾದ ಮನೆಯನ್ನು ನನ್ನ ಆಲಯ ಎಂದುಕೊಳ್ಳುತ್ತೇನೆ. 'ನಾನು' ಆಲಯವೆಂಬ ಕಲ್ಪನೆಯು, ಈಗ ವಿಶಾಲಗೊಂಡು, ನನ್ನ ಮನೆಯನ್ನೂ ಒಳಗೊಂಡಿತು, ಏಕೆ ? ಮನಸ್ಸು ಹಾಗೆ ಅಂದುಕೊಂಡುದರಿಂದ, ಸ್ವಾರ್ಥದಿಂದ ಪ್ರಚೋದಿತವಾದರೂ, ಮನಸ್ಸು ವಿಶಾಲವಾಯಿತು, ಆಲಯವು ತುಸು ಹಿರಿದಾಯಿತು. ನನ್ನ ಗ್ರಾಮ ನನ್ನ ಊರು ಎಂಬ ಭಾವನೆಯು ನಂತರ ಮನಸ್ಸಿನಲ್ಲಿ ಉಂಟಾಯಿತು. ಅಂದರೆ ಮನಸ್ಸಿನಿಂದಾಗಿ ಆಲಯವು ಮತ್ತೂ ವಿಶಾಲಗೊಂಡಿತು. ನನ್ನದೇಶ, ನನ್ನ ರಾಷ್ಟ್ರ ಎಂಬ ಭಾವನೆಯು ಮನಸ್ಸಿನಲ್ಲಿ ಬೇರೂರಿದಾಗ, ನನ್ನ ಆಲಯದ ಗಡಿಯು ಅಪಾರವಾಗಿ ವಿಸ್ತರಿಸಿತು. ಭೂಲೋಕವೇ ನನ್ನದು ಎಂಬ ಭಾವನೆಯು ಆನಂತರ ಬೆಳೆಯ<noinclude></noinclude> 8lx6cwtx01bctjy3hm1b0flbzqav6if 316987 316953 2026-05-04T14:22:57Z Shreesha Sharma 7840 /* Validated */ 316987 proofread-page text/x-wiki <noinclude><pagequality level="4" user="Shreesha Sharma" /></noinclude>{{Left|ಮನಸ್ಸಿನ ಸ್ವರೂಪ}}{{Right|೩೦೧}} ಜಗದೀಶ್‌ಚಂದ್ರ ಬೋಸ್ ಅವರು, ಅತ್ಯಂತ ಸೂಕ್ಷ್ಮವಾದ ಯಂತ್ರಗಳನ್ನು ಅಣಿಮಾಡಿ, ಗಿಡಗಳಿಗೆ ಮನಸ್ಸಿನಂತಹ ಶಕ್ತಿಯು ನೆರವಾಗುತ್ತದೆ ಎಂದು ಪ್ರಯೋಗಗಳನ್ನು ನಡೆಸಿ ಸಿದ್ಧಾಂತ ಮಾಡಿದರು. ಸಸ್ಯವರ್ಗದಲ್ಲಿ ಇರಬಹುದಾದ ಅಂತಹ ಮನಸ್ಸಿನಂತಿರುವ ಶಕ್ತಿಯು, ಪ್ರಾಣಿಗಳಿಗೆ ಹೋಲಿಸಲ್ಪಟ್ಟರೆ ಶೈಶವಾಸ್ಥೆಯಲ್ಲಿದೆ ಎನ್ನಬೇಕು. {{gap}}ಅಂದಮೇಲೆ ಸ್ಥಾವರ ಸಸ್ಯಗಳಲ್ಲಿ, ಮನಸ್ಸಿನಂತಿರುವ ಶಕ್ತಿಯು ಇದ್ದರೆ, ಅದು ಶೈಶವಾವಸ್ಥೆಯಲ್ಲಿದ್ದು, ಸ್ಥಾವರವಾಗಿರುತ್ತದೆ, ಜಂಗಮವಾಗಿರುವುದಿಲ್ಲ ಎನ್ನಬಹುದು. ಇಂದಿನ ಮಾನವನ ಪ್ರಗತಿಹೊಂದಿದ ಅದ್ಭುತವಾದ ಮನಸ್ಸಿಗೂ, ಸಸ್ಯ ವರ್ಗದಲ್ಲಿರಬಹುದಾದ ಮನಸ್ಸಿನಂತಹ ಶಕ್ತಿಗೂ, ಅರ್ಥಾರ್ಥಕ ಸಂಬಂಧವಿಲ್ಲ. '''ಆಲಯ ಮತ್ತು ಬಯಲು''' {{gap}}ನನ್ನ ದೇಹ ಮತ್ತು ಮನಸ್ಸುಗಳ ಒಕ್ಕೂಟವನ್ನು 'ನಾನು' ಎಂದು ದೃಢವಾಗಿ ನಂಬಿದ್ದೇನೆ. ದೇಹಕ್ಕೆ ಗಡಿಯಿದೆ, ಮಿತಿ ಇದೆ. ಅದರ ಸುತ್ತಲೂ ಇರುವ ಪರಿಸರದಿಂದ ಸುದ್ದಿಗಳನ್ನು ಪಡೆದು, ನಾನು ಸುರಕ್ಷಿತವಾಗಿರಲು ಸುಖಪಡಲು ಹಾಗೂ ದುಃಖವಾಗದಂತೆ ಜಾಗರೂಕನಾಗಲು ಪ್ರಯತ್ನಿಸುತ್ತೇನೆ. ನಿಖರವಾದ ಗಡಿರೇಖೆಗಳಿರುವ, ನನ್ನ ದೇಹ ಮತ್ತು ಮನಸ್ಸಿನ ಒಕ್ಕೂಟವನ್ನು 'ಆಲಯ' ಎಂದು ಹತ್ತು ಹನ್ನೆರಡನೆಯ ಶತಮಾನದಲ್ಲಿ ಮನನಿಗರು ಕರೆಯುತ್ತಿದ್ದರು. {{gap}}ನಾನು ಎಂದುಕೊಳ್ಳುವ ಆಲಯದ ಗಡಿರೇಖೆಗಳನ್ನು ದೇಹದ ದೃಷ್ಟಿಯಿಂದ ವಿಸ್ತರಿಸಿಕೊಳ್ಳುವುದು ಅಲ್ಪಸ್ವಲ್ಪ ಮಾತ್ರ ಧಡಿಯರಾಗುವುದರಿಂದ ಸಾಧ್ಯ. ಆದರೆ ಮನಸ್ಸಿನ ದೃಷ್ಟಿಯಿಂದ ಸುಲಭವಾಗಿ ವಿಸ್ತರಿಸಿಕೊಳ್ಳಬಹುದು. ಸುರಕ್ಷಿತವಾಗಿ ಇರಲು ಕಟ್ಟಿಕೊಂಡ ನಾಲ್ಕೂ ಗೋಡೆಗಳಿಂದ ಆವೃತವಾದ ಮನೆಯನ್ನು ನನ್ನ ಆಲಯ ಎಂದುಕೊಳ್ಳುತ್ತೇನೆ. 'ನಾನು' ಆಲಯವೆಂಬ ಕಲ್ಪನೆಯು, ಈಗ ವಿಶಾಲಗೊಂಡು, ನನ್ನ ಮನೆಯನ್ನೂ ಒಳಗೊಂಡಿತು, ಏಕೆ ? ಮನಸ್ಸು ಹಾಗೆ ಅಂದುಕೊಂಡುದರಿಂದ, ಸ್ವಾರ್ಥದಿಂದ ಪ್ರಚೋದಿತವಾದರೂ, ಮನಸ್ಸು ವಿಶಾಲವಾಯಿತು, ಆಲಯವು ತುಸು ಹಿರಿದಾಯಿತು. ನನ್ನ ಗ್ರಾಮ ನನ್ನ ಊರು ಎಂಬ ಭಾವನೆಯು ನಂತರ ಮನಸ್ಸಿನಲ್ಲಿ ಉಂಟಾಯಿತು. ಅಂದರೆ ಮನಸ್ಸಿನಿಂದಾಗಿ ಆಲಯವು ಮತ್ತೂ ವಿಶಾಲಗೊಂಡಿತು. ನನ್ನದೇಶ, ನನ್ನ ರಾಷ್ಟ್ರ ಎಂಬ ಭಾವನೆಯು ಮನಸ್ಸಿನಲ್ಲಿ ಬೇರೂರಿದಾಗ, ನನ್ನ ಆಲಯದ ಗಡಿಯು ಅಪಾರವಾಗಿ ವಿಸ್ತರಿಸಿತು. ಭೂಲೋಕವೇ ನನ್ನದು ಎಂಬ ಭಾವನೆಯು ಆನಂತರ ಬೆಳೆಯ<noinclude></noinclude> 7tq6nqbzx08fd0g2b7pccghbnoljr3f ಪುಟ:ಮನಮಂಥನ.pdf/೩೨೦ 104 62767 316957 314492 2026-05-04T14:00:42Z Shreelatha.Halemane 7642 /* Proofread */ 316957 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೩೦೨}}{{Right|ಮನಮಂಥನ}} ತೊಡಗಿತು. One world is my world ಎಂಬ ಭಾವನೆಯು ಉಂಟಾದಾಗ, ನನ್ನ ಆಲಯದ ಗಡಿಯು ಭೂಮಂಡಲದ ಗಡಿಯಾಯಿತು. ಬ್ರಹ್ಮಾಂಡದಲ್ಲಿ, ಭೂಮಂಡಲದ ಹೊರಗಿರುವುದೆಲ್ಲಾ ಬಯಲು ಎಂದಾಯಿತು. ದೇಹವನ್ನು ನನ್ನ ಅಲಯ ಎಂದುಕೊಂಡ ಮನಸ್ಸು, ಅಮಿತವಾಗಿ ವಿಸ್ತರಿಕೊಂಡು ಬ್ರಹ್ಮಾಂಡವು ನನ್ನದು ಎಂದು ಅರಿತುಕೊಂಡರೆ, ಅನಂತರ ಬಯಲಾವುದು? ಆಲಯವು ಯಾವುದು? ಗುರುತಿಸಲು ಗಡಿಯೇ ಇರದಿದ್ದರೆ, ಆಲಯವು ಮತ್ತು ಬಯಲು ಎರಡೂ ಒಂದೇ. ಮನಸ್ಸಿನ ಭಾವನೆಯು ಆಲಯ ಮತ್ತು ಬಯಲು ಎನ್ನುವ ವಿಂಗಡಣೆಯನ್ನು ಮಾಡಿಕೊಂಡಿದೆ. ಮನಸ್ಸನ್ನು ವಿಶಾಲಗೊಳಿಸುವ ಇಂತಹ ಭಾವನೆಯು, ಮನಸ್ಸಿನ ಸತ್-ಚೈತನ್ಯ ಎಂಬ ಭಾಗದಿಂದ ಸಾಧ್ಯವಾಗುತ್ತದೆ. {{gap}}ಬಯಲು ಆಲಯದೊಳಗೊ, ಆಲಯವು ಬಯಲೊಳಗೊ {{gap}}ಬಯಲು ಆಲಯವೆರಡು ನಿನ್ನೊಳಗೊ ದೇವಾ ! ಎಂದು ದಾಸವರ್ಯರು, ಅತಿಮಾನವ ಸ್ಥಿತಿಯಲ್ಲಿದ್ದಾಗ, ಅವರ ಮನಸ್ಸಿನ ಸತ್ ಚೈತನ್ಯಾಂಶವು ಪ್ರಜ್ವಲಿಸುತ್ತಿದ್ದಾಗ, ನುಡಿದುದರಿಂದ, ಆ ವಾಕ್ಯಗಳು ಚಿರಂ- ಜೀವಿಯಾಗಿವೆ. {{gap}}ಬಯಲರೂಹು ಮಾಡ ಬಲ್ಲಾತನೆ ಶರಣನು {{gap}}ಆ ರೂಪ ಬಯಲ ಮಾಡಬಲ್ಲಾತನೆ ಲಿಂಗಾನುಭವಿ {{gap}}ಈ ಉಭಯ ವೊಂದಾದರೆ ನಿಮ್ಮಲ್ಲಿ ತೆರಹುಂಟೆ {{gap}}ಕೂಡಲ ಸಂಗಮ ದೇವಾ ಎಂದು ಸಂತ ಬಸವಣ್ಣನವರು ನುಡಿದುದೂ, ಹೀಗೆಯೇನೇ. ದೇಹ-ಮನಸ್ಸಿನ ಒಕ್ಕೂಟವನ್ನು ಆಲಯ ಎಂದು ನಾನು ಅಂದುಕೊಂಡಾಗ ನನ್ನ ಹೊರಗೆ ಸುತ್ತಲೂ ಇರುವ ಪರಿಸರವನ್ನು ಬಯಲು ಎಂದುಕೊಳ್ಳುತ್ತೇನೆ. ಬಯಲಿನ ಅರಿವನ್ನು ಪಡೆಯಲು ಪಂಚೇಂದ್ರಿಯಗಳನ್ನು ; ವಿಚಾರಪರ ಮನಸ್ಸನ್ನೂ ಮತ್ತು ಸ್ಮರಣಾ ನೆರವನ್ನು ಪಡೆಯುತ್ತೇನೆ. ಆಲಯದಲ್ಲಿ ನಡೆಯುವ ವಿಷಯಗಳನ್ನು, ಅಂದರೆ ನನ್ನ ದೇಹ-ಮನಸ್ಸಿನ ಒಕ್ಕೂಟದಲ್ಲಿ ನಡೆಯುವ ವ್ಯವಹಾರಗಳನ್ನು ದೇಹಶಾಸ್ತ್ರದ ಅಧ್ಯಯನದಿಂದ ತಿಳಿಯುತ್ತೇನೆ. ಹಾಗೂ ಮನಃಶಾಸ್ತ್ರದ ಮನಃಶಾಸ್ತ್ರದ ಅಧ್ಯಯನದಿಂದಲೂ ತಿಳಿಯಲೆತ್ನಿಸುತ್ತೇನೆ. ಮನಸ್ಸಿನ ಸತ್-ಚೈತನ್ಯದ ಅಂಶವು ವೈಜ್ಞಾನಿಕ ಸಂಶೋಧನೆಗೆ ಇಂದಿನ ಹಂತದಲ್ಲಿ ಸುಲಭವಾಗಿ ಸಿಕ್ಕುವುದಿಲ್ಲ. ಆದರೂ ಆ ಅಂಶದ ಅರಿವು ಸ್ವಲ್ಪಮಟ್ಟಿಗಾದರೂ ತಿಳಿಯುತ್ತದೆ. ಈ ವಿಷಯವನ್ನು<noinclude></noinclude> 94vnc2cem7m5boyf8konbd8box7hh8v 316986 316957 2026-05-04T14:22:32Z Shreesha Sharma 7840 /* Validated */ 316986 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೩೦೨}}{{Right|ಮನಮಂಥನ}} ತೊಡಗಿತು. One world is my world ಎಂಬ ಭಾವನೆಯು ಉಂಟಾದಾಗ, ನನ್ನ ಆಲಯದ ಗಡಿಯು ಭೂಮಂಡಲದ ಗಡಿಯಾಯಿತು. ಬ್ರಹ್ಮಾಂಡದಲ್ಲಿ, ಭೂಮಂಡಲದ ಹೊರಗಿರುವುದೆಲ್ಲಾ ಬಯಲು ಎಂದಾಯಿತು. {{gap}}ದೇಹವನ್ನು ನನ್ನ ಅಲಯ ಎಂದುಕೊಂಡ ಮನಸ್ಸು, ಅಮಿತವಾಗಿ ವಿಸ್ತರಿಕೊಂಡು ಬ್ರಹ್ಮಾಂಡವು ನನ್ನದು ಎಂದು ಅರಿತುಕೊಂಡರೆ, ಅನಂತರ ಬಯಲಾವುದು? ಆಲಯವು ಯಾವುದು? ಗುರುತಿಸಲು ಗಡಿಯೇ ಇರದಿದ್ದರೆ, ಆಲಯವು ಮತ್ತು ಬಯಲು ಎರಡೂ ಒಂದೇ. ಮನಸ್ಸಿನ ಭಾವನೆಯು ಆಲಯ ಮತ್ತು ಬಯಲು ಎನ್ನುವ ವಿಂಗಡಣೆಯನ್ನು ಮಾಡಿಕೊಂಡಿದೆ. ಮನಸ್ಸನ್ನು ವಿಶಾಲಗೊಳಿಸುವ ಇಂತಹ ಭಾವನೆಯು, ಮನಸ್ಸಿನ ಸತ್-ಚೈತನ್ಯ ಎಂಬ ಭಾಗದಿಂದ ಸಾಧ್ಯವಾಗುತ್ತದೆ. {{gap}}ಬಯಲು ಆಲಯದೊಳಗೊ, ಆಲಯವು ಬಯಲೊಳಗೊ {{gap}}ಬಯಲು ಆಲಯವೆರಡು ನಿನ್ನೊಳಗೊ ದೇವಾ ! {{gap}}ಎಂದು ದಾಸವರ್ಯರು, ಅತಿಮಾನವ ಸ್ಥಿತಿಯಲ್ಲಿದ್ದಾಗ, ಅವರ ಮನಸ್ಸಿನ ಸತ್ ಚೈತನ್ಯಾಂಶವು ಪ್ರಜ್ವಲಿಸುತ್ತಿದ್ದಾಗ, ನುಡಿದುದರಿಂದ, ಆ ವಾಕ್ಯಗಳು ಚಿರಂ- ಜೀವಿಯಾಗಿವೆ. {{gap}}ಬಯಲರೂಹು ಮಾಡ ಬಲ್ಲಾತನೆ ಶರಣನು {{gap}}ಆ ರೂಪ ಬಯಲ ಮಾಡಬಲ್ಲಾತನೆ ಲಿಂಗಾನುಭವಿ {{gap}}ಈ ಉಭಯ ವೊಂದಾದರೆ ನಿಮ್ಮಲ್ಲಿ ತೆರಹುಂಟೆ {{gap}}ಕೂಡಲ ಸಂಗಮ ದೇವಾ ಎಂದು ಸಂತ ಬಸವಣ್ಣನವರು ನುಡಿದುದೂ, ಹೀಗೆಯೇನೇ. {{gap}}ದೇಹ-ಮನಸ್ಸಿನ ಒಕ್ಕೂಟವನ್ನು ಆಲಯ ಎಂದು ನಾನು ಅಂದುಕೊಂಡಾಗ ನನ್ನ ಹೊರಗೆ ಸುತ್ತಲೂ ಇರುವ ಪರಿಸರವನ್ನು ಬಯಲು ಎಂದುಕೊಳ್ಳುತ್ತೇನೆ. ಬಯಲಿನ ಅರಿವನ್ನು ಪಡೆಯಲು ಪಂಚೇಂದ್ರಿಯಗಳನ್ನು ; ವಿಚಾರಪರ ಮನಸ್ಸನ್ನೂ ಮತ್ತು ಸ್ಮರಣಾ ನೆರವನ್ನು ಪಡೆಯುತ್ತೇನೆ. ಆಲಯದಲ್ಲಿ ನಡೆಯುವ ವಿಷಯಗಳನ್ನು, ಅಂದರೆ ನನ್ನ ದೇಹ-ಮನಸ್ಸಿನ ಒಕ್ಕೂಟದಲ್ಲಿ ನಡೆಯುವ ವ್ಯವಹಾರಗಳನ್ನು ದೇಹಶಾಸ್ತ್ರದ ಅಧ್ಯಯನದಿಂದ ತಿಳಿಯುತ್ತೇನೆ. ಹಾಗೂ ಮನಃಶಾಸ್ತ್ರದ ಮನಃಶಾಸ್ತ್ರದ ಅಧ್ಯಯನದಿಂದಲೂ ತಿಳಿಯಲೆತ್ನಿಸುತ್ತೇನೆ. ಮನಸ್ಸಿನ ಸತ್-ಚೈತನ್ಯದ ಅಂಶವು ವೈಜ್ಞಾನಿಕ ಸಂಶೋಧನೆಗೆ ಇಂದಿನ ಹಂತದಲ್ಲಿ ಸುಲಭವಾಗಿ ಸಿಕ್ಕುವುದಿಲ್ಲ. ಆದರೂ ಆ ಅಂಶದ ಅರಿವು ಸ್ವಲ್ಪಮಟ್ಟಿಗಾದರೂ ತಿಳಿಯುತ್ತದೆ. ಈ ವಿಷಯವನ್ನು<noinclude></noinclude> tm8f97gxf05zqli5aejaskq0kcf5lkf ಪುಟ:ಮನಮಂಥನ.pdf/೩೨೧ 104 62768 316960 314493 2026-05-04T14:04:20Z Shreelatha.Halemane 7642 /* Proofread */ 316960 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಮನಸ್ಸಿನ ಸ್ವರೂಪ}}{{Right|೩೦೩}} ಮುಂದೆ ವಿವರವಾಗಿ ತಿಳಿಯುವ; ಮನಃಶಾಸ್ತ್ರದ ವೈಜ್ಞಾನಿಕ ಪ್ರಗತಿಯೊಂದಿಗೆ, ಸಮನ್ವಯ ಮಾಡಿಕೊಂಡು. 'ನಾನು' ಎಂದುಕೊಳ್ಳುವ ನಂಬಿಕೆಯನ್ನು ದೃಢಪಡಿಸುವುದು ಮನಸ್ಸಿನ ಒಂದು ಮುಖ್ಯ ಅಂಶ ಎಂದೆವು. ಮನಸ್ಸಿನ ಈ ಅಂಶವು ಶೈಶವಾವಸ್ಥೆಯಲ್ಲಿ ಅತ್ಯಲ್ಪವಾಗಿರುತ್ತದೆ. ಬಾಲ್ಯದಲ್ಲಿ ಅಭಿವೃದ್ಧಿಗೊಳ್ಳುತ್ತದೆ. ಪ್ರಾಯದಲ್ಲಿ ಹೊರವಾಗುತ್ತದೆ. ಮುಪ್ಪಿನಲ್ಲಿ ಬೆಳೆಯದೆ ಇದ್ದರೂ, ಪ್ರಾಯದಲ್ಲಿ ಇದ್ದಂತೆಯೇ ಉಳಿಯುತ್ತದೆ. ದೇಹದ ಒಳಗಿನ ಕಾರ್ಯಕ್ರಮಗಳನ್ನು, ನಾಡಿಯ ಬಡಿತ, ಉಸಿರಾಡುವಿಕೆ, ಮುಂತಾದುವನ್ನು ಮನಸ್ಸಿನ ಈ ಅಂಶವು ವ್ಯವಸ್ಥೆ ಮಾಡುತ್ತದೆ. Walter B carnon ಎಂಬ ಪ್ರಸಿದ್ಧ ದೇಹ ಶಾಸ್ತ್ರಜ್ಞನು, "The wisdom of the body.” ಎಂಬ ಪುಸ್ತಕದಲ್ಲಿ, ಮನಸ್ಸಿನ ಈ ಅಂಶವು, Visceral Brainl ಅಂಶವು, ದೇಹದ ಸಕಲ ವಿಧವಿಧವಾದ ಕಾರ್ಯಗಳನ್ನೂ ಹೇಗೆ ಜಾಣತನದಿಂದ ವಿಚಾರಪರ ಮನಸ್ಸಿನ ಅಂಕೆ ಮತ್ತು ಶಿಕ್ಷೆಗೆ ಹೊರತಾಗಿ, ಸುಸೂತ್ರವಾಗಿ ನಡೆಸುತ್ತದೆ ಎಂಬುದನ್ನು ವಿವರಿಸಿದ್ದಾನೆ. ಸ್ವತಂತ್ರ ಚಾಲಿತ ನರ ಸಮೂಹಗಳಿಂದ (Autonomic nervous system and the limbic system,) ದೇಹದೊಳಗಿನ ಸಹಸ್ರಾರು ವಿಧವಿಧವಾದ ಕಾರ್ಯಗಳನ್ನು ಸುಸೂತ್ರವಾಗಿ ಸಮನ್ವಯಿಸುತ್ತದೆ ಎಂಬುದನ್ನು ವರ್ಣಿಸಿದ್ದಾನೆ. ಹಸಿವಾಯಿತು ಎನ್ನಿ. ಮನೆಯಲ್ಲಿ ಮಾಡಿಟ್ಟಿದ್ದ ಅಡಿಗೆಯನ್ನು ತಿನ್ನುತ್ತೇವೆ. ಮಸಲಾ ಅಡಿಗೆ ಮಾಡಿದ ಪಾತ್ರೆಯಲ್ಲಿ ಕಲಾಯಿಯು ಇರಲಿಲ್ಲ. ಆಗ ತಾಮ್ರದ ಲವಣಾಂಶಗಳು ಅಡಿಗೆಯಲ್ಲಿ ಮಿಶ್ರಿತವಾಗುತ್ತವೆ. ಮೈಲುತುತ್ತ ಮತ್ತು ಅಂತಹ ವಿಷ ಪದಾರ್ಥಗಳು ಅಡಿಗೆಯಲ್ಲಿ ಸೇರಲು ಸಾಧ್ಯ. ಉಂಡ ಮೇಲೆ ಆ ವಿಷ ಪದಾರ್ಥಗಳು ಹೊಟ್ಟೆಗೆ ಸೇರಿದೆ ಎಂಬುದು ನಮ್ಮ ಮನಸ್ಸಿಗೆ ತಿಳಿದಿರುವುದಿಲ್ಲ. ಆದರೆ ಹೊಟ್ಟೆಗೆ ಅವುಗಳ ಗುರುತು ಸಿಗುತ್ತದೆ. ದೇಹಕ್ಕೆ ಇವು ಒಳ್ಳೆಯದಲ್ಲ ಎಂದು ದೇಹದ ಹುಟ್ಟು ಜಾಣತನವು ತಿಳಿಸುತ್ತದೆ. ಆಗ ಹೊಟ್ಟೆಯು, ತನ್ನಲ್ಲಿದ್ದುದನ್ನು ವಾಂತಿಯನ್ನು ಮಾಡಿಸಿ ಹೊರದೂಡುತ್ತದೆ. ವಾಂತಿಯನ್ನು ಮಾಡಬೇಕು ಎಂಬ ಆಸೆಯೇನೂ ವ್ಯಕ್ತಿಗೆ ಇರುವುದಿಲ್ಲ. ಅಂತಹ ಯೋಚನೆಯೂ ಬಂದಿರುವುದಿಲ್ಲ.ದೇಹದ ಆಜನ್ಮ ಜಾಣೆಯು, ಇಂತಹ ವಿಷ ನಿವಾರಣಾ ಕ್ರಮವನ್ನು, ತನ್ನಂತಾನಾಗಿಯೇ ಹೂಡುತ್ತದೆ. ಇಂತಹ ಸ್ವಯಂ ಸಂರಕ್ಷಣಾ ಕ್ರಮಗಳನ್ನು ದೇಹವು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ಅತಿ ಸೂಕ್ಷ್ಮವಾಗಿ ಹಾಗೂ<noinclude></noinclude> je2s1hfzili4er0tedlfc3ocyrvh197 316985 316960 2026-05-04T14:22:05Z Shreesha Sharma 7840 /* Validated */ 316985 proofread-page text/x-wiki <noinclude><pagequality level="4" user="Shreesha Sharma" /></noinclude>{{Left|ಮನಸ್ಸಿನ ಸ್ವರೂಪ}}{{Right|೩೦೩}} ಮುಂದೆ ವಿವರವಾಗಿ ತಿಳಿಯುವ; ಮನಃಶಾಸ್ತ್ರದ ವೈಜ್ಞಾನಿಕ ಪ್ರಗತಿಯೊಂದಿಗೆ, ಸಮನ್ವಯ ಮಾಡಿಕೊಂಡು. {{gap}}'ನಾನು' ಎಂದುಕೊಳ್ಳುವ ನಂಬಿಕೆಯನ್ನು ದೃಢಪಡಿಸುವುದು ಮನಸ್ಸಿನ ಒಂದು ಮುಖ್ಯ ಅಂಶ ಎಂದೆವು. ಮನಸ್ಸಿನ ಈ ಅಂಶವು ಶೈಶವಾವಸ್ಥೆಯಲ್ಲಿ ಅತ್ಯಲ್ಪವಾಗಿರುತ್ತದೆ. ಬಾಲ್ಯದಲ್ಲಿ ಅಭಿವೃದ್ಧಿಗೊಳ್ಳುತ್ತದೆ. ಪ್ರಾಯದಲ್ಲಿ ಹೊರವಾಗುತ್ತದೆ. ಮುಪ್ಪಿನಲ್ಲಿ ಬೆಳೆಯದೆ ಇದ್ದರೂ, ಪ್ರಾಯದಲ್ಲಿ ಇದ್ದಂತೆಯೇ ಉಳಿಯುತ್ತದೆ. {{gap}}ದೇಹದ ಒಳಗಿನ ಕಾರ್ಯಕ್ರಮಗಳನ್ನು, ನಾಡಿಯ ಬಡಿತ, ಉಸಿರಾಡುವಿಕೆ, ಮುಂತಾದುವನ್ನು ಮನಸ್ಸಿನ ಈ ಅಂಶವು ವ್ಯವಸ್ಥೆ ಮಾಡುತ್ತದೆ. {{gap}}Walter B carnon ಎಂಬ ಪ್ರಸಿದ್ಧ ದೇಹ ಶಾಸ್ತ್ರಜ್ಞನು, "The wisdom of the body.” ಎಂಬ ಪುಸ್ತಕದಲ್ಲಿ, ಮನಸ್ಸಿನ ಈ ಅಂಶವು, Visceral Brainl ಅಂಶವು, ದೇಹದ ಸಕಲ ವಿಧವಿಧವಾದ ಕಾರ್ಯಗಳನ್ನೂ ಹೇಗೆ ಜಾಣತನದಿಂದ ವಿಚಾರಪರ ಮನಸ್ಸಿನ ಅಂಕೆ ಮತ್ತು ಶಿಕ್ಷೆಗೆ ಹೊರತಾಗಿ, ಸುಸೂತ್ರವಾಗಿ ನಡೆಸುತ್ತದೆ ಎಂಬುದನ್ನು ವಿವರಿಸಿದ್ದಾನೆ. ಸ್ವತಂತ್ರ ಚಾಲಿತ ನರ ಸಮೂಹಗಳಿಂದ (Autonomic nervous system and the limbic system,) ದೇಹದೊಳಗಿನ ಸಹಸ್ರಾರು ವಿಧವಿಧವಾದ ಕಾರ್ಯಗಳನ್ನು ಸುಸೂತ್ರವಾಗಿ ಸಮನ್ವಯಿಸುತ್ತದೆ ಎಂಬುದನ್ನು ವರ್ಣಿಸಿದ್ದಾನೆ. {{gap}}ಹಸಿವಾಯಿತು ಎನ್ನಿ. ಮನೆಯಲ್ಲಿ ಮಾಡಿಟ್ಟಿದ್ದ ಅಡಿಗೆಯನ್ನು ತಿನ್ನುತ್ತೇವೆ. ಮಸಲಾ ಅಡಿಗೆ ಮಾಡಿದ ಪಾತ್ರೆಯಲ್ಲಿ ಕಲಾಯಿಯು ಇರಲಿಲ್ಲ. ಆಗ ತಾಮ್ರದ ಲವಣಾಂಶಗಳು ಅಡಿಗೆಯಲ್ಲಿ ಮಿಶ್ರಿತವಾಗುತ್ತವೆ. ಮೈಲುತುತ್ತ ಮತ್ತು ಅಂತಹ ವಿಷ ಪದಾರ್ಥಗಳು ಅಡಿಗೆಯಲ್ಲಿ ಸೇರಲು ಸಾಧ್ಯ. ಉಂಡ ಮೇಲೆ ಆ ವಿಷ ಪದಾರ್ಥಗಳು ಹೊಟ್ಟೆಗೆ ಸೇರಿದೆ ಎಂಬುದು ನಮ್ಮ ಮನಸ್ಸಿಗೆ ತಿಳಿದಿರುವುದಿಲ್ಲ. ಆದರೆ ಹೊಟ್ಟೆಗೆ ಅವುಗಳ ಗುರುತು ಸಿಗುತ್ತದೆ. ದೇಹಕ್ಕೆ ಇವು ಒಳ್ಳೆಯದಲ್ಲ ಎಂದು ದೇಹದ ಹುಟ್ಟು ಜಾಣತನವು ತಿಳಿಸುತ್ತದೆ. ಆಗ ಹೊಟ್ಟೆಯು, ತನ್ನಲ್ಲಿದ್ದುದನ್ನು ವಾಂತಿಯನ್ನು ಮಾಡಿಸಿ ಹೊರದೂಡುತ್ತದೆ. ವಾಂತಿಯನ್ನು ಮಾಡಬೇಕು ಎಂಬ ಆಸೆಯೇನೂ ವ್ಯಕ್ತಿಗೆ ಇರುವುದಿಲ್ಲ. ಅಂತಹ ಯೋಚನೆಯೂ ಬಂದಿರುವುದಿಲ್ಲ.ದೇಹದ ಆಜನ್ಮ ಜಾಣೆಯು, ಇಂತಹ ವಿಷ ನಿವಾರಣಾ ಕ್ರಮವನ್ನು, ತನ್ನಂತಾನಾಗಿಯೇ ಹೂಡುತ್ತದೆ. ಇಂತಹ ಸ್ವಯಂ ಸಂರಕ್ಷಣಾ ಕ್ರಮಗಳನ್ನು ದೇಹವು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ಅತಿ ಸೂಕ್ಷ್ಮವಾಗಿ ಹಾಗೂ<noinclude></noinclude> 0cnplpmp4ux6slwrzrkyjlwcr52l2hh ಪುಟ:ಮನಮಂಥನ.pdf/೩೨೨ 104 62769 316961 314494 2026-05-04T14:06:10Z Shreelatha.Halemane 7642 /* Proofread */ 316961 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೩೦೪}}{{Right|ಮನಮಂಥನ}} ವಿವರವಾಗಿ ದೇಹ ಶಾಸ್ತ್ರಜ್ಞರು ಸಂಶೋಧನೆಗಳನ್ನು ನಡೆಸಿ, ನಿಖರವಾಗಿ ನಿರ್ಧರಿಸಿದ್ದಾರೆ. ಇಂತಹ ವಿಜ್ಞಾನವನ್ನು ಆಲಯದ ವಿಜ್ಞಾನ ಎಂದರೂ ತಪ್ಪಲ್ಲ. ಮನಸ್ಸಿನ ಈ ಅಂಶವು ದೇಹದ ಸಹಜ ಜಾಣತನಕ್ಕೆ ಸಂಬಂಧವನ್ನು ನಿಕಟವಾಗಿ ಹೊಂದಿದೆ. ಮನಸ್ಸಿನ ಇನ್ನೊಂದು ಪ್ರಮುಖ ಅಂಶವು ವಿಚಾರಪರತೆಯನ್ನು ನಡೆಸುತ್ತದೆ. Cortical Activity ಎಂಬುದಿದು. ಸ್ಮರಣೆಯನ್ನು ಉಳಿಸಿಕೊಂಡು ಅಳಿಯದಂತೆ ಕಾಪಾಡಿಕೊಂಡು ಬರುವ ಮನಸ್ಸಿನ ಮುಖ್ಯಾಂಶವೊಂದು, ಮೆದುಳಿನ ಒಂದು ಭಾಗದಲ್ಲಿ ವ್ಯವಸ್ಥಿತವಾಗಿದೆ. ಇವೆಲ್ಲವನ್ನೂ ಪ್ರಚೋದಿಸುವ, ಹಾಗೂ ನಡೆಸುವ, ಸತ್-ಚೈತನ್ಯಾಂಶವೂ ಮೆದುಳಿನಲ್ಲಿ ಪ್ರತಿಷ್ಠಿತವಾಗಿದೆ. ವಿಚಾರಪರ ಮನಸ್ಸು ಭಾವನಾಪರ ಮನಸ್ಸಿನಿಂದ ಸಮಾನ್ಯವಾಗಿ ಪ್ರಚೋದಿತವಾಗುತ್ತದೆ. ಯಾರಾದರೂ ನಮ್ಮನ್ನು ಅಲ್ಲಗಳೆದರೆ, ನಮಗಿಂತ ಸೆಣಕಲಾಗಿದ್ದರೆ, ಅವರನ್ನು ತದುಕಿಬಿಡು ಎಂದು ವಿಚಾರಪರ ಮನಸ್ಸು ನಿರ್ಧರಿಸುತ್ತದೆ. ನಮಗಿಂತ ಧಡಿಯರಾಗಿದ್ದರೆ, ಸದ್ಯಕ್ಕೆ ತೆಪ್ಪಗಿರು, ಅವಕಾಶವು ದೊರೆತಾಗ ಎಲ್ಲರೆದುರಿಗೂ ಅವರ ಮಾನವನ್ನು ಜಾಲಾಡಿ ಬಿಡೋಣ ಎಂದು ತೀರ್ಮಾನಿಸುತ್ತದೆ. ವಿಚಾರಪರ ಮನಸ್ಸು ಭಾವನಾಪರ ಮನಸ್ಸಿನ ಭಾಗದ ಮೇಲೆ ಗುರುತರವಾದ ಹತೋಟಿಯನ್ನು ಹೊಂದಿಲ್ಲ. ತುಸು ಮಟ್ಟಿಗೆ ಮಾತ್ರ ಪ್ರಭಾವವನ್ನು ಬೀರುತ್ತದೆ. ಹೀಗಿಲ್ಲದೆ ಇದ್ದರೆ, ಕೋಪವು ಉಕ್ಕೇರಿದಾಗ ತನ್ನ ಮೂಗನ್ನೆ ಕತ್ತರಿಸಿಕೊಳ್ಳುತ್ತಿದ್ದ ಇಂದಿನ ಮಾನವ. ಈಗ ತನ್ನ ತಲೆಯನ್ನು ಮಾತ್ರ ಚಚ್ಚಿಕೊಳ್ಳುತ್ತಾನೆ. ಆದರೆ ಹೆಚ್ಚು ಆಘಾತವಾಗದಂತೆ, ಚಚ್ಚಿಕೊಳ್ಳುತ್ತಾನೆ. ಅದೂ ಇತರರನ್ನು ಹೆದರಿಸುವುದಕ್ಕೆ ಮಾತ್ರ. ಮನಸ್ಸಿನಲ್ಲಿ ವಿಧವಿಧವಾದ ಕಾರ್ಯಗಳಿಗೆ ಮೀಸಲಾದ ಹಲವಾರು ಮುಖ್ಯ ಅಂಶಗಳನ್ನು ಗಮನಿಸಿದೆವು. ಈ ಎಲ್ಲ ಕಾರ್ಯಗಳನ್ನೂ ಸಮನ್ವಯಿಸಿ ನಡೆಸುವ ಸತ್-ಚೈತನ್ಯವೆಂಬ ಅಂಶವು ಬಲು ಪ್ರಾಮುಖ್ಯವಾದುದು ಎಂಬುದನ್ನೂ ಗಮನಿಸಿದೆವು. '''ಮನಸ್ಸು ಎಲ್ಲಿದೆ''' ಮೆದುಳಿನಲ್ಲಿ ಮನಸ್ಸು ಕಾರ್ಯವನ್ನು ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಮನಸ್ಸು ಹಲವಾರು ರೀತಿಗಳಲ್ಲಿ ಕಾರ್ಯವನ್ನು ಮಾಡುತ್ತದೆ ಎನ್ನುವುದನ್ನು ಸ್ಕೂಲವಾಗಿ ಅರಿತಿದ್ದಾಯಿತು. ಮೆದುಳಿನ ವಿವಿಧ ಭಾಗಗಳು,<noinclude></noinclude> iex1zox0nqb09u6pp9nlc9yej0tasxi 316984 316961 2026-05-04T14:21:39Z Shreesha Sharma 7840 /* Validated */ 316984 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೩೦೪}}{{Right|ಮನಮಂಥನ}} ವಿವರವಾಗಿ ದೇಹ ಶಾಸ್ತ್ರಜ್ಞರು ಸಂಶೋಧನೆಗಳನ್ನು ನಡೆಸಿ, ನಿಖರವಾಗಿ ನಿರ್ಧರಿಸಿದ್ದಾರೆ. ಇಂತಹ ವಿಜ್ಞಾನವನ್ನು ಆಲಯದ ವಿಜ್ಞಾನ ಎಂದರೂ ತಪ್ಪಲ್ಲ. {{gap}}ಮನಸ್ಸಿನ ಈ ಅಂಶವು ದೇಹದ ಸಹಜ ಜಾಣತನಕ್ಕೆ ಸಂಬಂಧವನ್ನು ನಿಕಟವಾಗಿ ಹೊಂದಿದೆ. ಮನಸ್ಸಿನ ಇನ್ನೊಂದು ಪ್ರಮುಖ ಅಂಶವು ವಿಚಾರಪರತೆಯನ್ನು ನಡೆಸುತ್ತದೆ. Cortical Activity ಎಂಬುದಿದು. ಸ್ಮರಣೆಯನ್ನು ಉಳಿಸಿಕೊಂಡು ಅಳಿಯದಂತೆ ಕಾಪಾಡಿಕೊಂಡು ಬರುವ ಮನಸ್ಸಿನ ಮುಖ್ಯಾಂಶವೊಂದು, ಮೆದುಳಿನ ಒಂದು ಭಾಗದಲ್ಲಿ ವ್ಯವಸ್ಥಿತವಾಗಿದೆ. ಇವೆಲ್ಲವನ್ನೂ ಪ್ರಚೋದಿಸುವ, ಹಾಗೂ ನಡೆಸುವ, ಸತ್-ಚೈತನ್ಯಾಂಶವೂ ಮೆದುಳಿನಲ್ಲಿ ಪ್ರತಿಷ್ಠಿತವಾಗಿದೆ. {{gap}}ವಿಚಾರಪರ ಮನಸ್ಸು ಭಾವನಾಪರ ಮನಸ್ಸಿನಿಂದ ಸಮಾನ್ಯವಾಗಿ ಪ್ರಚೋದಿತವಾಗುತ್ತದೆ. ಯಾರಾದರೂ ನಮ್ಮನ್ನು ಅಲ್ಲಗಳೆದರೆ, ನಮಗಿಂತ ಸೆಣಕಲಾಗಿದ್ದರೆ, ಅವರನ್ನು ತದುಕಿಬಿಡು ಎಂದು ವಿಚಾರಪರ ಮನಸ್ಸು ನಿರ್ಧರಿಸುತ್ತದೆ. ನಮಗಿಂತ ಧಡಿಯರಾಗಿದ್ದರೆ, ಸದ್ಯಕ್ಕೆ ತೆಪ್ಪಗಿರು, ಅವಕಾಶವು ದೊರೆತಾಗ ಎಲ್ಲರೆದುರಿಗೂ ಅವರ ಮಾನವನ್ನು ಜಾಲಾಡಿ ಬಿಡೋಣ ಎಂದು ತೀರ್ಮಾನಿಸುತ್ತದೆ. {{gap}}ವಿಚಾರಪರ ಮನಸ್ಸು ಭಾವನಾಪರ ಮನಸ್ಸಿನ ಭಾಗದ ಮೇಲೆ ಗುರುತರವಾದ ಹತೋಟಿಯನ್ನು ಹೊಂದಿಲ್ಲ. ತುಸು ಮಟ್ಟಿಗೆ ಮಾತ್ರ ಪ್ರಭಾವವನ್ನು ಬೀರುತ್ತದೆ. ಹೀಗಿಲ್ಲದೆ ಇದ್ದರೆ, ಕೋಪವು ಉಕ್ಕೇರಿದಾಗ ತನ್ನ ಮೂಗನ್ನೆ ಕತ್ತರಿಸಿಕೊಳ್ಳುತ್ತಿದ್ದ ಇಂದಿನ ಮಾನವ. ಈಗ ತನ್ನ ತಲೆಯನ್ನು ಮಾತ್ರ ಚಚ್ಚಿಕೊಳ್ಳುತ್ತಾನೆ. ಆದರೆ ಹೆಚ್ಚು ಆಘಾತವಾಗದಂತೆ, ಚಚ್ಚಿಕೊಳ್ಳುತ್ತಾನೆ. ಅದೂ ಇತರರನ್ನು ಹೆದರಿಸುವುದಕ್ಕೆ ಮಾತ್ರ. {{gap}}ಮನಸ್ಸಿನಲ್ಲಿ ವಿಧವಿಧವಾದ ಕಾರ್ಯಗಳಿಗೆ ಮೀಸಲಾದ ಹಲವಾರು ಮುಖ್ಯ ಅಂಶಗಳನ್ನು ಗಮನಿಸಿದೆವು. ಈ ಎಲ್ಲ ಕಾರ್ಯಗಳನ್ನೂ ಸಮನ್ವಯಿಸಿ ನಡೆಸುವ ಸತ್-ಚೈತನ್ಯವೆಂಬ ಅಂಶವು ಬಲು ಪ್ರಾಮುಖ್ಯವಾದುದು ಎಂಬುದನ್ನೂ ಗಮನಿಸಿದೆವು. '''ಮನಸ್ಸು ಎಲ್ಲಿದೆ''' {{gap}}ಮೆದುಳಿನಲ್ಲಿ ಮನಸ್ಸು ಕಾರ್ಯವನ್ನು ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಮನಸ್ಸು ಹಲವಾರು ರೀತಿಗಳಲ್ಲಿ ಕಾರ್ಯವನ್ನು ಮಾಡುತ್ತದೆ ಎನ್ನುವುದನ್ನು ಸ್ಕೂಲವಾಗಿ ಅರಿತಿದ್ದಾಯಿತು. ಮೆದುಳಿನ ವಿವಿಧ ಭಾಗಗಳು,<noinclude></noinclude> 0dw1pjmiruvu8pk0o5qe4icqf2wv8ge ಪುಟ:ಮನಮಂಥನ.pdf/೩೨೩ 104 62770 316962 314495 2026-05-04T14:07:15Z Shreelatha.Halemane 7642 /* Proofread */ 316962 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಮನಸ್ಸಿನ ಸ್ವರೂಪ}}{{Right|೩೦೫}} ಒಂದಲ್ಲ ಒಂದು ರೀತಿಯಲ್ಲಿ, ಮನಸ್ಸಿನ ಒಂದೊಂದು ತೆರನ ಕಾರ್ಯದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ ಮನಸ್ಸು ಕಾರ್ಯ ಮಾಡುವಾಗ ಮೆದುಳಿನ ವಿವಿಧ ಭಾಗಗಳು ಸಂಪರ್ಕವನ್ನು ಹೊಂದಬೇಕು. ಯೋಚನೆಯನ್ನು ಮಾಡುವಾಗ, ವಿಚಾರಪರ ಮನಸ್ಸು, ಸ್ಮರಣಾವಿಭಾಗದೊಂದಿಗೆ ಸಂಬಂಧವನ್ನು ಪಡೆಯಬೇಕು. ವಿಚಾರಪರ ಮನಸ್ಸು ಮೆದುಳಿನ ಕಾರ್ಟೆಕ್ಸ್ ಮತ್ತು ಮುಂಭಾಗಗಳಲ್ಲಿ ಬಹಳಷ್ಟು ಕೇಂದ್ರೀಕೃತವಾಗಿದೆ. ಸ್ಮರಣೆಯು ಮೆದುಳಿನ ಪಕ್ಕಗಳಲ್ಲಿ ಅಚ್ಚಾಗಿರುತ್ತದೆ. ಮೆದುಳಿನ ಈ ಎರಡೂ ಭಾಗಗಳು-ನಿಕಟ ಸಂಪರ್ಕವನ್ನು ಹೊಂದಿರುವುದು ಅತ್ಯಗತ್ಯ. ಇದು ಯಾವ ರೀತಿಯಲ್ಲಿ ನಡೆಯುತ್ತದೆ ? ಮೆದುಳಿನ ಪ್ರತಿಯೊಂದು ಸೆಲ್ಯೂ, ಇತರ ಸೆಲ್ಲುಗಳಿಂದ ಸುತ್ತುವರಿಯಲ್ಪಟ್ಟಿದೆ. ಪ್ರತಿ ಒಂದು ಸೆಲ್ಲೂ ತನ್ನಲ್ಲಿರುವ ದ್ರವದಲ್ಲಿ ಆಗುವ ರಸಾಯನಿಕ ವ್ಯತ್ಯಾಸಗಳಿಂದ, ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿಕೊಳ್ಳುತ್ತದೆ. ವಿದ್ಯುತ್‌ಶಕ್ತಿಯು ಸೆಲ್ಲಿನಿಂದ ಸೆಲ್ಲಿಗೆ ಹರಡುತ್ತದೆ. ಹರಡುವಾಗ ಇಂತದೇ ಮಾರ್ಗದಲ್ಲಿ ವಿದ್ಯತ್‌ಶಕ್ತಿಯು ಹರಿಯಬೇಕು ಎಂಬುದು ಜನ್ಮತಾಳಿದಾಗ ನಿರ್ಧಾರವಾಗಿರುತ್ತದೆ. ಹುಟ್ಟಿದ ಮೇಲೆ ಬಾಳಿನ ಅನುಭವಗಳಿಂದ ಕಲಿಯುವಾಗ ಇತರ ಮಾರ್ಗಗಳು ಮೆದುಳಿನಲ್ಲಿ ಅಣಿಗೊಳ್ಳುತ್ತವೆ. ತುಂಬಾ ಪ್ರಚಂಡನೆಂದೆನಿಸಿಕೊಂಡವನ ಮೆದುಳಿನಲ್ಲಿ ಇಂತಹ ಸಂಪರ್ಕ ಮಾರ್ಗಗಳು ಬಹಳಷ್ಟು ಸಂಖ್ಯೆಯಲ್ಲಿರುತ್ತವೆ. ಸಾಮಾನ್ಯನಿಗಿಂತ ಸಹಸ್ರಾರು ಪಾಲು ಹೆಚ್ಚಾಗಿರುತ್ತವೆ. ಪ್ರಚಂಡತನದ (genius) ಅಸ್ತಿಭಾರವು ಇದು. ಹೀಗಾಗಿರದಿದ್ದರೆ ಒಂದು ಸೆಲ್ಲು ಸುತ್ತಲಿರುವ ಯಾವುದಾದರೂ ಸೆಲ್ಲಿನ ಸಂಪರ್ಕ ಪಡೆಯಬಹುದು. ಆಗ ಮನಸ್ಸು ಅಲ್ಲೋಲಕಲ್ಲೋಲವಾಗುತ್ತದೆ. ಪ್ರಚಂಡತನವಾಗಲೀ ಜಾಣತನವಾಗಲಿ, ಅಥವಾ ಸಾಮಾನ್ಯ ಚುರುಕಾಗಲಿ, ಯಾವುದೂ ಸಾಧ್ಯವಾಗುತ್ತಿರಲಿಲ್ಲ. ಮೆದುಳಿನ ಸೆಲ್ಲು ವಿದ್ಯುತ್‌ ಶಕ್ತಿಯನ್ನು, ರಾಸಾಯನಿಕ ಮಾರ್ಪಾಡುಗಳಿಂದ ಉತ್ಪಾದಿಸುತ್ತದೆ ಎಂದೆವು. ಈ ಕಾರ್ಯಕ್ರಮವು ಮೋಟಾರ್ ಕಾರುಗಳಲ್ಲಿರುವ ಬ್ಯಾಟರಿಗಳಂತೆ, ಬ್ಯಾಟರಿಗಳಲ್ಲಿ ದ್ರವವು ಒಂದು ಸ್ಥಿತಿಯಲ್ಲಿರುತ್ತದೆ. ಛಾರ್ಜ್ ಮಾಡಿದಾಗ ದ್ರವದಲ್ಲಿರುವ, ಎಲೆಕ್ಟೋಲೈಟ್ ವಸ್ತುಗಳು ಬೇರೆ ಬೇರೆಯಾಗುತ್ತವೆ. ಕೆಲವು ಒಂದು ಕಡೆಗೆ, ಮತ್ತೆ ಉಳಿದುವು ಮತ್ತೊಂದು ಕಡೆಗೆ, ಬ್ಯಾಟರಿಯಿಂದ ವಿದ್ಯುತ್‌ ಶಕ್ತಿಯು ಹೊರಕ್ಕೆ ಹರಿಯತೊಡಗಿದಾಗ, ಎಲೆಕ್ಟೋಲೈಟ್ ವಸ್ತುಗಳು ಮೊದಲಿದ್ದ ಸ್ಥಿತಿಗೆ ಹಿಂತಿರುಗುತ್ತವೆ. ಇದರಂತೆಯೇ ಮೆದುಳಿನ ಸೆಲ್ಲುಗಳ<noinclude></noinclude> 58l4c86n1b2tcj1sskco2u7lcpnqa9h 316982 316962 2026-05-04T14:20:58Z Shreesha Sharma 7840 /* Validated */ 316982 proofread-page text/x-wiki <noinclude><pagequality level="4" user="Shreesha Sharma" /></noinclude>{{Left|ಮನಸ್ಸಿನ ಸ್ವರೂಪ}}{{Right|೩೦೫}} ಒಂದಲ್ಲ ಒಂದು ರೀತಿಯಲ್ಲಿ, ಮನಸ್ಸಿನ ಒಂದೊಂದು ತೆರನ ಕಾರ್ಯದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ ಮನಸ್ಸು ಕಾರ್ಯ ಮಾಡುವಾಗ ಮೆದುಳಿನ ವಿವಿಧ ಭಾಗಗಳು ಸಂಪರ್ಕವನ್ನು ಹೊಂದಬೇಕು. ಯೋಚನೆಯನ್ನು ಮಾಡುವಾಗ, ವಿಚಾರಪರ ಮನಸ್ಸು, ಸ್ಮರಣಾವಿಭಾಗದೊಂದಿಗೆ ಸಂಬಂಧವನ್ನು ಪಡೆಯಬೇಕು. ವಿಚಾರಪರ ಮನಸ್ಸು ಮೆದುಳಿನ ಕಾರ್ಟೆಕ್ಸ್ ಮತ್ತು ಮುಂಭಾಗಗಳಲ್ಲಿ ಬಹಳಷ್ಟು ಕೇಂದ್ರೀಕೃತವಾಗಿದೆ. ಸ್ಮರಣೆಯು ಮೆದುಳಿನ ಪಕ್ಕಗಳಲ್ಲಿ ಅಚ್ಚಾಗಿರುತ್ತದೆ. ಮೆದುಳಿನ ಈ ಎರಡೂ ಭಾಗಗಳು-ನಿಕಟ ಸಂಪರ್ಕವನ್ನು ಹೊಂದಿರುವುದು ಅತ್ಯಗತ್ಯ. ಇದು ಯಾವ ರೀತಿಯಲ್ಲಿ ನಡೆಯುತ್ತದೆ ? {{gap}}ಮೆದುಳಿನ ಪ್ರತಿಯೊಂದು ಸೆಲ್ಯೂ, ಇತರ ಸೆಲ್ಲುಗಳಿಂದ ಸುತ್ತುವರಿಯಲ್ಪಟ್ಟಿದೆ. ಪ್ರತಿ ಒಂದು ಸೆಲ್ಲೂ ತನ್ನಲ್ಲಿರುವ ದ್ರವದಲ್ಲಿ ಆಗುವ ರಸಾಯನಿಕ ವ್ಯತ್ಯಾಸಗಳಿಂದ, ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿಕೊಳ್ಳುತ್ತದೆ. ವಿದ್ಯುತ್‌ಶಕ್ತಿಯು ಸೆಲ್ಲಿನಿಂದ ಸೆಲ್ಲಿಗೆ ಹರಡುತ್ತದೆ. ಹರಡುವಾಗ ಇಂತದೇ ಮಾರ್ಗದಲ್ಲಿ ವಿದ್ಯತ್‌ಶಕ್ತಿಯು ಹರಿಯಬೇಕು ಎಂಬುದು ಜನ್ಮತಾಳಿದಾಗ ನಿರ್ಧಾರವಾಗಿರುತ್ತದೆ. ಹುಟ್ಟಿದ ಮೇಲೆ ಬಾಳಿನ ಅನುಭವಗಳಿಂದ ಕಲಿಯುವಾಗ ಇತರ ಮಾರ್ಗಗಳು ಮೆದುಳಿನಲ್ಲಿ ಅಣಿಗೊಳ್ಳುತ್ತವೆ. ತುಂಬಾ ಪ್ರಚಂಡನೆಂದೆನಿಸಿಕೊಂಡವನ ಮೆದುಳಿನಲ್ಲಿ ಇಂತಹ ಸಂಪರ್ಕ ಮಾರ್ಗಗಳು ಬಹಳಷ್ಟು ಸಂಖ್ಯೆಯಲ್ಲಿರುತ್ತವೆ. ಸಾಮಾನ್ಯನಿಗಿಂತ ಸಹಸ್ರಾರು ಪಾಲು ಹೆಚ್ಚಾಗಿರುತ್ತವೆ. ಪ್ರಚಂಡತನದ (genius) ಅಸ್ತಿಭಾರವು ಇದು. ಹೀಗಾಗಿರದಿದ್ದರೆ ಒಂದು ಸೆಲ್ಲು ಸುತ್ತಲಿರುವ ಯಾವುದಾದರೂ ಸೆಲ್ಲಿನ ಸಂಪರ್ಕ ಪಡೆಯಬಹುದು. ಆಗ ಮನಸ್ಸು ಅಲ್ಲೋಲಕಲ್ಲೋಲವಾಗುತ್ತದೆ. ಪ್ರಚಂಡತನವಾಗಲೀ ಜಾಣತನವಾಗಲಿ, ಅಥವಾ ಸಾಮಾನ್ಯ ಚುರುಕಾಗಲಿ, ಯಾವುದೂ ಸಾಧ್ಯವಾಗುತ್ತಿರಲಿಲ್ಲ. {{gap}}ಮೆದುಳಿನ ಸೆಲ್ಲು ವಿದ್ಯುತ್‌ ಶಕ್ತಿಯನ್ನು, ರಾಸಾಯನಿಕ ಮಾರ್ಪಾಡುಗಳಿಂದ ಉತ್ಪಾದಿಸುತ್ತದೆ ಎಂದೆವು. ಈ ಕಾರ್ಯಕ್ರಮವು ಮೋಟಾರ್ ಕಾರುಗಳಲ್ಲಿರುವ ಬ್ಯಾಟರಿಗಳಂತೆ, ಬ್ಯಾಟರಿಗಳಲ್ಲಿ ದ್ರವವು ಒಂದು ಸ್ಥಿತಿಯಲ್ಲಿರುತ್ತದೆ. ಛಾರ್ಜ್ ಮಾಡಿದಾಗ ದ್ರವದಲ್ಲಿರುವ, ಎಲೆಕ್ಟೋಲೈಟ್ ವಸ್ತುಗಳು ಬೇರೆ ಬೇರೆಯಾಗುತ್ತವೆ. ಕೆಲವು ಒಂದು ಕಡೆಗೆ, ಮತ್ತೆ ಉಳಿದುವು ಮತ್ತೊಂದು ಕಡೆಗೆ, ಬ್ಯಾಟರಿಯಿಂದ ವಿದ್ಯುತ್‌ ಶಕ್ತಿಯು ಹೊರಕ್ಕೆ ಹರಿಯತೊಡಗಿದಾಗ, ಎಲೆಕ್ಟೋಲೈಟ್ ವಸ್ತುಗಳು ಮೊದಲಿದ್ದ ಸ್ಥಿತಿಗೆ ಹಿಂತಿರುಗುತ್ತವೆ. ಇದರಂತೆಯೇ ಮೆದುಳಿನ ಸೆಲ್ಲುಗಳ<noinclude></noinclude> 5sujlqpdra25tbdmt5kynofy0gjg678 ಪುಟ:ಮನಮಂಥನ.pdf/೩೨೪ 104 62771 316964 314496 2026-05-04T14:08:19Z Shreelatha.Halemane 7642 /* Proofread */ 316964 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೩೦೬}}{{Right|ಮನಮಂಥನ}} ವಿದ್ಯುತ್‌ ಕಾರ್ಯಕ್ರಮವೂ ಕೂಡ. ಅಂದರೆ ಮೆದುಳಿನ ಸೆಲ್ ಆಗಲೀ ಬ್ಯಾಟರಿಯ ಸೆಲ್ ಆಗಲಿ, ವಿದ್ಯುತ್ ಪ್ರವಾಹಕ್ಕೆ ಎಷ್ಟುಮುಖ್ಯವೋ, ಸೆಲೆಗಳಲ್ಲಿರುವ ದ್ರವವೂ ಅಷ್ಟೇ ಮುಖ್ಯ. ಈ ದ್ರವದಲ್ಲಿ ತುಂಬಾ ವ್ಯತ್ಯಾಸವಾದರೆ ಕಾರ್ ಬ್ಯಾಟರಿಯ ಆಯಸ್ಸು ಮುಗಿಯಿತು. ಬೇರೆ ಬ್ಯಾಟರಿಯನ್ನು ಬಳಸಬೇಕು. ಮೆದುಳಿನ ಸೆಲ್ಲುಗಳ ದ್ರವದಲ್ಲಿಯೂ ಹಾಗೆಯೇ. ಕೆಲವು ಬೇನೆಗಳಲ್ಲಿ ಥೈರಾಯ್ಡ್ ಗ್ರಂಥಿಗಳು ಸಾಕಷ್ಟು ಹಾರ್ಮೋನನ್ನು ಉತ್ಪಾದಿಸಲಾಗುವುದಿಲ್ಲ, ಮೆದುಳಿನ ಸೆಲ್ಲುಗಳ ಒಳಗೆ ಹಾಗೂ ಹೊರಗೆ ಇರುವ ದ್ರವದಲ್ಲಿ ಥೈರಾಯ್ಡ್ ಹಾರ್ಮೋನು ತುಂಬಾ ಕಡಿಮೆ ಪ್ರಮಾಣದಲ್ಲಿರುತ್ತದೆ. ಅಂತಹವರ ಮನಸ್ಸು ಅತಿಮಂದವಾಗಿ ಕಾರ್ಯಮಾಡುತ್ತದೆ. ಮಂಕರಂತೆಯೇ ಇವರ ಮನಸ್ಸಿನ ಕೆಲಸ, ಈ ಬೇನೆಯವರನ್ನು ಕ್ರೆಟೆನ್ಸ್ ಎಂದು ಕರೆಯುತ್ತಾರೆ. ಮೆದುಳಿನ ಸೆಲ್ಲುಗಳ ರಚನೆಯು ಲಕ್ಷಣವಾಗಿರಬೇಕು. ಅವುಗಳಲ್ಲಿರುವ ದ್ರವಗಳು ಸರಿಯಾಗಿರಬೇಕು, ಸೆಲ್ಲುಗಳನ್ನು ತೋಯಿಸುವ ದ್ರವವೂ ಅಣಿಯಾಗಿರಬೇಕು. ಆಗ ಮನಸ್ಸು ಲಕ್ಷಣವಾಗಿ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಏಕೆಂದರೆ ಮೆದುಳು ಆಗ ಸ್ವಾಸ್ಥ್ಯದಿಂದಿರುತ್ತದೆ. ಮೆದುಳಿನ ಕಾರ್ಯಕ್ರಮವನ್ನು ತಿಳಿದಾಯಿತು. ಆದರೆ ಅದರ ಘನಪ್ರಮಾಣವನ್ನು ಮನಸ್ಸಿನ ಕಾರ್ಯಕ್ರಮಗಳಿಗೆ ಅನ್ವಯಿಸಬಹುದೇ ? ದಡೂತಿ ಮೆದುಳಿದ್ದವರ ಮನಸ್ಸು ಅತಿ ಚುರುಕಾಗಿ ಕೆಲಸವನ್ನು ಮಾಡುತ್ತದೆಯೇ? ದಪ್ಪ ತಲೆಯಿರುವವರನ್ನು ಪ್ರಚಂಡರು ಅನ್ನಬಹುದೇ? ಕಿರುತಲೆಯವರನ್ನು ಮತಿಹೀನರು ಎನ್ನುವುದೇ? ಸ್ವಾರಸ್ಯವಾದ ಪ್ರಶ್ನೆಗಳು. ಮಾನವನ ಭವಿಷ್ಯವನ್ನು ಕುರಿತು ಲೇವಡಿ ಮಾಡುವ ವ್ಯಂಗ್ಯ ಚಿತ್ರಕಾರರು ರೇಖಿಸುವ ಚಿತ್ರಗಳನ್ನು ನೋಡಿ, ದೇಹವು ತುಂಬಾ ಸೆಣಕಲಾಗಿದ್ದು ಭಾರೀ ಕುಂಬಳಕಾಯನಂತಹ ತಲೆಯನ್ನು ಹೊತ್ತ ರೇಖಾಚಿತ್ರವನ್ನು ಬರೆದು ಹತ್ತು ಸಹಸ್ರ ವರ್ಷಗಳಾದ ಮೇಲೆ, ಪ್ರಗತಿ ಹೊಂದಿದ ಮಾನವನು ಹೀಗಿರುತ್ತಾನೆ ಎಂದು ಸೂಚಿಸುತ್ತಾರೆ. ಮನಸ್ಸಿನ ಪ್ರಚಂಡ ಪ್ರಗತಿಯಿಂದ, ದೇಹದ ಅಗತ್ಯವು ಬಹಳಷ್ಟು ಕಡಿಮೆಯಾಗುತ್ತದೆ ಎಂದು ಅವರು ಭವಿಷ್ಯವನ್ನು ಊಹಿಸಿದ್ದಾರೆ. ಮಿದುಳಿನ ಪ್ರಮಾಣಕ್ಕೂ, ಅಂದರೆ ಅಳತೆ ಮತ್ತು ತೂಕಕ್ಕೂ, ಮನಸ್ಸಿನ ಹಿರಿಮೆಯ ಚೂಟಿಗೂ ಇವರು ಗಂಟು ಹಾಕುತ್ತಾರೆ. ವ್ಯಂಗ್ಯವೆಂದು ಕಾಣಿಸಿದರೂ, ಇದರಲ್ಲಿ ತುಸು ಸತ್ಯಾಂಶವಿದೆ.<noinclude></noinclude> 5lx3o2i1b5vtz9ql6weib5yiswuhfrm 316981 316964 2026-05-04T14:20:41Z Shreesha Sharma 7840 /* Validated */ 316981 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೩೦೬}}{{Right|ಮನಮಂಥನ}} ವಿದ್ಯುತ್‌ ಕಾರ್ಯಕ್ರಮವೂ ಕೂಡ. ಅಂದರೆ ಮೆದುಳಿನ ಸೆಲ್ ಆಗಲೀ ಬ್ಯಾಟರಿಯ ಸೆಲ್ ಆಗಲಿ, ವಿದ್ಯುತ್ ಪ್ರವಾಹಕ್ಕೆ ಎಷ್ಟುಮುಖ್ಯವೋ, ಸೆಲೆಗಳಲ್ಲಿರುವ ದ್ರವವೂ ಅಷ್ಟೇ ಮುಖ್ಯ. {{gap}}ಈ ದ್ರವದಲ್ಲಿ ತುಂಬಾ ವ್ಯತ್ಯಾಸವಾದರೆ ಕಾರ್ ಬ್ಯಾಟರಿಯ ಆಯಸ್ಸು ಮುಗಿಯಿತು. ಬೇರೆ ಬ್ಯಾಟರಿಯನ್ನು ಬಳಸಬೇಕು. ಮೆದುಳಿನ ಸೆಲ್ಲುಗಳ ದ್ರವದಲ್ಲಿಯೂ ಹಾಗೆಯೇ. ಕೆಲವು ಬೇನೆಗಳಲ್ಲಿ ಥೈರಾಯ್ಡ್ ಗ್ರಂಥಿಗಳು ಸಾಕಷ್ಟು ಹಾರ್ಮೋನನ್ನು ಉತ್ಪಾದಿಸಲಾಗುವುದಿಲ್ಲ, ಮೆದುಳಿನ ಸೆಲ್ಲುಗಳ ಒಳಗೆ ಹಾಗೂ ಹೊರಗೆ ಇರುವ ದ್ರವದಲ್ಲಿ ಥೈರಾಯ್ಡ್ ಹಾರ್ಮೋನು ತುಂಬಾ ಕಡಿಮೆ ಪ್ರಮಾಣದಲ್ಲಿರುತ್ತದೆ. ಅಂತಹವರ ಮನಸ್ಸು ಅತಿಮಂದವಾಗಿ ಕಾರ್ಯಮಾಡುತ್ತದೆ. ಮಂಕರಂತೆಯೇ ಇವರ ಮನಸ್ಸಿನ ಕೆಲಸ, ಈ ಬೇನೆಯವರನ್ನು ಕ್ರೆಟೆನ್ಸ್ ಎಂದು ಕರೆಯುತ್ತಾರೆ. {{gap}}ಮೆದುಳಿನ ಸೆಲ್ಲುಗಳ ರಚನೆಯು ಲಕ್ಷಣವಾಗಿರಬೇಕು. ಅವುಗಳಲ್ಲಿರುವ ದ್ರವಗಳು ಸರಿಯಾಗಿರಬೇಕು, ಸೆಲ್ಲುಗಳನ್ನು ತೋಯಿಸುವ ದ್ರವವೂ ಅಣಿಯಾಗಿರಬೇಕು. ಆಗ ಮನಸ್ಸು ಲಕ್ಷಣವಾಗಿ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಏಕೆಂದರೆ ಮೆದುಳು ಆಗ ಸ್ವಾಸ್ಥ್ಯದಿಂದಿರುತ್ತದೆ. {{gap}}ಮೆದುಳಿನ ಕಾರ್ಯಕ್ರಮವನ್ನು ತಿಳಿದಾಯಿತು. ಆದರೆ ಅದರ ಘನಪ್ರಮಾಣವನ್ನು ಮನಸ್ಸಿನ ಕಾರ್ಯಕ್ರಮಗಳಿಗೆ ಅನ್ವಯಿಸಬಹುದೇ ? ದಡೂತಿ ಮೆದುಳಿದ್ದವರ ಮನಸ್ಸು ಅತಿ ಚುರುಕಾಗಿ ಕೆಲಸವನ್ನು ಮಾಡುತ್ತದೆಯೇ? ದಪ್ಪ ತಲೆಯಿರುವವರನ್ನು ಪ್ರಚಂಡರು ಅನ್ನಬಹುದೇ? ಕಿರುತಲೆಯವರನ್ನು ಮತಿಹೀನರು ಎನ್ನುವುದೇ? ಸ್ವಾರಸ್ಯವಾದ ಪ್ರಶ್ನೆಗಳು. {{gap}}ಮಾನವನ ಭವಿಷ್ಯವನ್ನು ಕುರಿತು ಲೇವಡಿ ಮಾಡುವ ವ್ಯಂಗ್ಯ ಚಿತ್ರಕಾರರು ರೇಖಿಸುವ ಚಿತ್ರಗಳನ್ನು ನೋಡಿ, ದೇಹವು ತುಂಬಾ ಸೆಣಕಲಾಗಿದ್ದು ಭಾರೀ ಕುಂಬಳಕಾಯನಂತಹ ತಲೆಯನ್ನು ಹೊತ್ತ ರೇಖಾಚಿತ್ರವನ್ನು ಬರೆದು ಹತ್ತು ಸಹಸ್ರ ವರ್ಷಗಳಾದ ಮೇಲೆ, ಪ್ರಗತಿ ಹೊಂದಿದ ಮಾನವನು ಹೀಗಿರುತ್ತಾನೆ ಎಂದು ಸೂಚಿಸುತ್ತಾರೆ. ಮನಸ್ಸಿನ ಪ್ರಚಂಡ ಪ್ರಗತಿಯಿಂದ, ದೇಹದ ಅಗತ್ಯವು ಬಹಳಷ್ಟು ಕಡಿಮೆಯಾಗುತ್ತದೆ ಎಂದು ಅವರು ಭವಿಷ್ಯವನ್ನು ಊಹಿಸಿದ್ದಾರೆ. {{gap}}ಮಿದುಳಿನ ಪ್ರಮಾಣಕ್ಕೂ, ಅಂದರೆ ಅಳತೆ ಮತ್ತು ತೂಕಕ್ಕೂ, ಮನಸ್ಸಿನ ಹಿರಿಮೆಯ ಚೂಟಿಗೂ ಇವರು ಗಂಟು ಹಾಕುತ್ತಾರೆ. ವ್ಯಂಗ್ಯವೆಂದು ಕಾಣಿಸಿದರೂ, ಇದರಲ್ಲಿ ತುಸು ಸತ್ಯಾಂಶವಿದೆ.<noinclude></noinclude> 3w8bwer9ekxdup043tq0cnacmlb148u ಪುಟ:ಮನಮಂಥನ.pdf/೩೨೫ 104 62772 316965 314497 2026-05-04T14:09:13Z Shreelatha.Halemane 7642 /* Proofread */ 316965 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಮನಸ್ಸಿನ ಸ್ವರೂಪ}}{{Right|೩೦೭}} ಪ್ರಕೃತಿಯಲ್ಲಿ, ಜಂಗಮ ಜೀವಿಗಳು ಎಂದರೆ ಪ್ರಾಣಿವರ್ಗವು ಸಾಧಿಸಿರುವ ಪ್ರಗತಿಯ ಚರಿತ್ರೆಯನ್ನು ತಿಳಿದುಕೊಂಡರೆ, ಲೇವಡಿ ಮಾಡಿ ವ್ಯಂಗ್ಯ ಚಿತ್ರ ಕಾರರು, ಅಪಹಾಸ್ಯವನ್ನು ಮಾಡಲಿಲ್ಲ ಎನಿಸುತ್ತದೆ. ಲಕ್ಷಾಂತರ ವರ್ಷಗಳ ಹಿಂದೆ ಪ್ರಪಂಚದಲ್ಲಿ ಡಿನೋಸಾರಸ್ ಜಾತಿಯ ದಡೂತಿಯಾಗಿದ್ದ ಉರಗಗಳಿದ್ದುವು. ಈಗ ಕಾಣಬರುವ ಹಲ್ಲಿ, ಓತಿಕ್ಯಾತ, ಇತ್ಯಾದಿಗಳಂತಿದ್ದ ಭಾರೀ ಮೃಗಗಳು, ಹಿಂಗಾಲಿನ ಮೇಲೆ ಇವು ಕುಳಿತು, ಮೈಯನ್ನು ಎತ್ತಿದರೆ, ಅವುಗಳ ಮುಂಗಾಲು ನೆಲದಿಂದ ೬೦-೭೦ ಅಡಿಗಳಷ್ಟು ಎತ್ತರದಲ್ಲಿರುತ್ತಿದ್ದುವು. ಶ್ರವಣಬೆಳಗೊಳದ ಅಚ್ಚರಿಯನ್ನು ತರುವ ಗೊಮ್ಮಟಗಿಂತಲೂ ಹೆಚ್ಚು ಎತ್ತರದಲ್ಲಿರುತ್ತಿದ್ದುವು. ನೂರಾರು ಟನ್ ತೂಕವಿದ್ದ ಈ ಪ್ರಾಣಿಗಳ ತಲೆಯು, ಒಂದು ತೆಂಗಿನ ಕಾಯಿನ ಗಾತ್ರದಷ್ಟೇ ಇರುತ್ತಿತ್ತು. ತಲೆಯೊಳಗಿರುವ ಮೆದುಳೂ ಅಷ್ಟೇ ಸಣ್ಣದಾಗಿತ್ತು. ಇಂತಹ ಭಾರೀಪ್ರಮಾಣದ ಉರಗಗಳು, ಪ್ರಕೃತಿಯ ಪ್ರಗತಿಯಲ್ಲಿ ಹೇಳ ಹೆಸರಿಲ್ಲದೆ ನಾಶವಾಗಿಹೋದುವು. ಆದರೆ ಅದೇ ಕಾಲದಲ್ಲಿದ್ದ ಜಿರಳೆಗಳು, ಚಿಕ್ಕದೇಹಕ್ಕೆ ಸಾಕಷ್ಟಾದ ಪುಟ್ಟ ಮೆದುಳನ್ನು ಹೊಂದಿವೆ. ದೇಹವನ್ನು ಅತಿ ಹೊರವಾಗಿ ಅವು ಬೆಳಸಿಕೊಳ್ಳಲಿಲ್ಲ. ಜಿರಳೆಗಳು ಇಂದೂ ಪ್ರಕೃತಿಯಲ್ಲಿ ಉಳಿದಿವೆ. ನಮ್ಮನ್ನು ಕಾಡಿ, ನಮ್ಮ ಊಟ ತಿಂಡಿ ಬಟ್ಟೆಗಳನ್ನು ಹೊಲಸು ಮಾಡುತ್ತಿವೆ ! ಜಿರಳೆಗಳು ಜನ್ಮತಾಳಿದ್ದು ಮುನ್ನೂರಕ್ಕೂ ಹೆಚ್ಚು ಬಿಲಿಯನ್ ವರ್ಷಗಳು ಎಂದು ಅಂದಾಜು ಮಾಡಿದ್ದಾರೆ. ಘಟಾನುಗಟಿ ಪ್ರಾಣಿಗಳ ವಂಶವು ಹಾಳಾಗಿ ಹೋಗಿದ್ದರೂ, ಜಿರಳೆಗಳು ಉಳಿದೇ ಇವೆ. ಡಿ. ಡಿ. ಟಿ. ಯನ್ನು ತಿಂದು ಈಗೀಗ ಅರಗಿಸಿಕೊಂಡು ವೃದ್ಧಿಯಾಗುತ್ತಿವೆ. ಅಂದರೆ ಮೆದುಳಿನ ಪ್ರಮಾಣವು ದೇಹದ ಪ್ರಮಾಣಕ್ಕೆ ಅನುಕೂಲವಾಗಿರಬೇಕು. ಹಾಗಲ್ಲದೆ ಮೆದುಳಿನ ಪ್ರಮಾಣವು ಅತಿ ಸ್ವಲ್ಪವಾಗಿ, ದೇಹವು ಅತಿ ದಡೂತಿಯಾದರೆ, ಕಾಲಾನುಕಾಲದಲ್ಲಿ ನಿರ್ವಂಶವಾಗುತ್ತವೆ. ಪ್ರಾಯಶಃ ಅದೇ ರೀತಿಯಲ್ಲಿ ಮೆದುಳು ಅತ್ಯಮೋಘವಾಗಿ ಬೆಳೆದರೆ, ದೇಹವು ಅತ್ಯಲ್ಪ ಪ್ರಮಾಣಕ್ಕೆ ಕ್ಷಯಿಸಿದರೆ, ಆಗಲೂ ಕಾಲಾನುಕಾಲದಲ್ಲಿ ಮಾನವ ಪ್ರಾಣಿಯು ಉಳಿಯುವುದು ಅಸಂಭವ. ಈಗಿನ ಪ್ರಮಾಣಕ್ಕಿಂತ ಮೆದುಳು ಹತ್ತಾರುಪಾಲು ಹೆಚ್ಚಾಗಲು ಸಾಧ್ಯ. ಆಗ ದೇಹವೂ ಅಷ್ಟಾಗಿ ಕ್ಷಯಿಸಿರುವುದಿಲ್ಲ. ಅಂತಹ ಮಾನವ ಹತ್ತು ಹದಿನೈದು ಸಾವಿರ ವರ್ಷಗಳಲ್ಲಿ ಕಾಣಬರಬಹುದು. ಇಂದಿನ ಮಾನವನಿಗಿಂತ, ಅವನ ಮೇಧಾ ಶಕ್ತಿಯು ಬಹುಪಾಲು ಅಧಿಕವಾಗಿರುತ್ತದೆ. ಇತರ ಪ್ರಾಣಿಗಳ ಮೆದುಳಿನ ತೂಕಕ್ಕಿಂತ ಮನುಷ್ಯನ ಮೆದುಳಿನ ತೂಕವು<noinclude></noinclude> 834dgwqzq736swoue3lut4hbppp9ame 316980 316965 2026-05-04T14:20:11Z Shreesha Sharma 7840 /* Validated */ 316980 proofread-page text/x-wiki <noinclude><pagequality level="4" user="Shreesha Sharma" /></noinclude>{{Left|ಮನಸ್ಸಿನ ಸ್ವರೂಪ}}{{Right|೩೦೭}} {{gap}}ಪ್ರಕೃತಿಯಲ್ಲಿ, ಜಂಗಮ ಜೀವಿಗಳು ಎಂದರೆ ಪ್ರಾಣಿವರ್ಗವು ಸಾಧಿಸಿರುವ ಪ್ರಗತಿಯ ಚರಿತ್ರೆಯನ್ನು ತಿಳಿದುಕೊಂಡರೆ, ಲೇವಡಿ ಮಾಡಿ ವ್ಯಂಗ್ಯ ಚಿತ್ರ ಕಾರರು, ಅಪಹಾಸ್ಯವನ್ನು ಮಾಡಲಿಲ್ಲ ಎನಿಸುತ್ತದೆ. {{gap}}ಲಕ್ಷಾಂತರ ವರ್ಷಗಳ ಹಿಂದೆ ಪ್ರಪಂಚದಲ್ಲಿ ಡಿನೋಸಾರಸ್ ಜಾತಿಯ ದಡೂತಿಯಾಗಿದ್ದ ಉರಗಗಳಿದ್ದುವು. ಈಗ ಕಾಣಬರುವ ಹಲ್ಲಿ, ಓತಿಕ್ಯಾತ, ಇತ್ಯಾದಿಗಳಂತಿದ್ದ ಭಾರೀ ಮೃಗಗಳು, ಹಿಂಗಾಲಿನ ಮೇಲೆ ಇವು ಕುಳಿತು, ಮೈಯನ್ನು ಎತ್ತಿದರೆ, ಅವುಗಳ ಮುಂಗಾಲು ನೆಲದಿಂದ ೬೦-೭೦ ಅಡಿಗಳಷ್ಟು ಎತ್ತರದಲ್ಲಿರುತ್ತಿದ್ದುವು. ಶ್ರವಣಬೆಳಗೊಳದ ಅಚ್ಚರಿಯನ್ನು ತರುವ ಗೊಮ್ಮಟಗಿಂತಲೂ ಹೆಚ್ಚು ಎತ್ತರದಲ್ಲಿರುತ್ತಿದ್ದುವು. ನೂರಾರು ಟನ್ ತೂಕವಿದ್ದ ಈ ಪ್ರಾಣಿಗಳ ತಲೆಯು, ಒಂದು ತೆಂಗಿನ ಕಾಯಿನ ಗಾತ್ರದಷ್ಟೇ ಇರುತ್ತಿತ್ತು. ತಲೆಯೊಳಗಿರುವ ಮೆದುಳೂ ಅಷ್ಟೇ ಸಣ್ಣದಾಗಿತ್ತು. ಇಂತಹ ಭಾರೀಪ್ರಮಾಣದ ಉರಗಗಳು, ಪ್ರಕೃತಿಯ ಪ್ರಗತಿಯಲ್ಲಿ ಹೇಳ ಹೆಸರಿಲ್ಲದೆ ನಾಶವಾಗಿಹೋದುವು. {{gap}}ಆದರೆ ಅದೇ ಕಾಲದಲ್ಲಿದ್ದ ಜಿರಳೆಗಳು, ಚಿಕ್ಕದೇಹಕ್ಕೆ ಸಾಕಷ್ಟಾದ ಪುಟ್ಟ ಮೆದುಳನ್ನು ಹೊಂದಿವೆ. ದೇಹವನ್ನು ಅತಿ ಹೊರವಾಗಿ ಅವು ಬೆಳಸಿಕೊಳ್ಳಲಿಲ್ಲ. ಜಿರಳೆಗಳು ಇಂದೂ ಪ್ರಕೃತಿಯಲ್ಲಿ ಉಳಿದಿವೆ. ನಮ್ಮನ್ನು ಕಾಡಿ, ನಮ್ಮ ಊಟ ತಿಂಡಿ ಬಟ್ಟೆಗಳನ್ನು ಹೊಲಸು ಮಾಡುತ್ತಿವೆ ! ಜಿರಳೆಗಳು ಜನ್ಮತಾಳಿದ್ದು ಮುನ್ನೂರಕ್ಕೂ ಹೆಚ್ಚು ಬಿಲಿಯನ್ ವರ್ಷಗಳು ಎಂದು ಅಂದಾಜು ಮಾಡಿದ್ದಾರೆ. ಘಟಾನುಗಟಿ ಪ್ರಾಣಿಗಳ ವಂಶವು ಹಾಳಾಗಿ ಹೋಗಿದ್ದರೂ, ಜಿರಳೆಗಳು ಉಳಿದೇ ಇವೆ. ಡಿ. ಡಿ. ಟಿ. ಯನ್ನು ತಿಂದು ಈಗೀಗ ಅರಗಿಸಿಕೊಂಡು ವೃದ್ಧಿಯಾಗುತ್ತಿವೆ. ಅಂದರೆ ಮೆದುಳಿನ ಪ್ರಮಾಣವು ದೇಹದ ಪ್ರಮಾಣಕ್ಕೆ ಅನುಕೂಲವಾಗಿರಬೇಕು. ಹಾಗಲ್ಲದೆ ಮೆದುಳಿನ ಪ್ರಮಾಣವು ಅತಿ ಸ್ವಲ್ಪವಾಗಿ, ದೇಹವು ಅತಿ ದಡೂತಿಯಾದರೆ, ಕಾಲಾನುಕಾಲದಲ್ಲಿ ನಿರ್ವಂಶವಾಗುತ್ತವೆ. ಪ್ರಾಯಶಃ ಅದೇ ರೀತಿಯಲ್ಲಿ ಮೆದುಳು ಅತ್ಯಮೋಘವಾಗಿ ಬೆಳೆದರೆ, ದೇಹವು ಅತ್ಯಲ್ಪ ಪ್ರಮಾಣಕ್ಕೆ ಕ್ಷಯಿಸಿದರೆ, ಆಗಲೂ ಕಾಲಾನುಕಾಲದಲ್ಲಿ ಮಾನವ ಪ್ರಾಣಿಯು ಉಳಿಯುವುದು ಅಸಂಭವ. {{gap}}ಈಗಿನ ಪ್ರಮಾಣಕ್ಕಿಂತ ಮೆದುಳು ಹತ್ತಾರುಪಾಲು ಹೆಚ್ಚಾಗಲು ಸಾಧ್ಯ. ಆಗ ದೇಹವೂ ಅಷ್ಟಾಗಿ ಕ್ಷಯಿಸಿರುವುದಿಲ್ಲ. ಅಂತಹ ಮಾನವ ಹತ್ತು ಹದಿನೈದು ಸಾವಿರ ವರ್ಷಗಳಲ್ಲಿ ಕಾಣಬರಬಹುದು. ಇಂದಿನ ಮಾನವನಿಗಿಂತ, ಅವನ ಮೇಧಾ ಶಕ್ತಿಯು ಬಹುಪಾಲು ಅಧಿಕವಾಗಿರುತ್ತದೆ. {{gap}}ಇತರ ಪ್ರಾಣಿಗಳ ಮೆದುಳಿನ ತೂಕಕ್ಕಿಂತ ಮನುಷ್ಯನ ಮೆದುಳಿನ ತೂಕವು<noinclude></noinclude> 58ga3pwa8gstxssznfqhmir7gw4r8g8 ಪುಟ:ಮನಮಂಥನ.pdf/೩೨೬ 104 62773 316977 314498 2026-05-04T14:18:45Z Shreelatha.Halemane 7642 /* Proofread */ 316977 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೩೦೮}}{{Right|ಮನಮಂಥನ}} ತುಂಬಾ ಹೆಚ್ಚಾಗಿದೆ. ಗಂಡಸರ ಮೈ ತೂಕವು ಹೆಂಗಸರ ಮೈ ತೂಕಕ್ಕಿಂತ, ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಗಂಡಸಿನ ಮೆದುಳಿನ ತೂಕವು ಹೆಂಗಸರ ಮೆದುಳಿಗಿಂತ ತುಸು ಹೆಚ್ಚು ತೂಕವಿರುತ್ತದೆ. ಆದರೆ ತೂಕವೊಂದೇ ಮನಸ್ಸಿನ ಚುರುಕಿಗೆ ಕಾರಣವಲ್ಲ. ಮೆದುಳಿನ ಮೇಲ್ಮನ ವಿಸ್ತಾರವು, ತೂಕಕ್ಕಿಂತ ಹೆಚ್ಚು ಪ್ರಾಮುಖ್ಯವಾದುದು. ಈ ದೃಷ್ಟಿಯಿಂದಲೂ ಹೆಂಗಸಿನ ಮೆದುಳಿನ ಮೇಲ್ ಮೈಯಿನ ವಿಸ್ತಾರವು ಗಂಡಸಿಗಿಂತ ಕಡಿಮೆ. ಆದುದರಿಂದಲೇ ಏನೋ ಗಂಡಸರು ಹೆಚ್ಚು ವಿಚಾರಪ್ರಿಯರು, ಹೆಂಗಸರು ಭಾವನಾಪ್ರಿಯರು ಎಂದು ಸಾಮಾನ್ಯವಾಗಿ ಹೇಳುವುದು, ಹೆಂಗರುಳು ಎನ್ನುವುದು ಹೆಂಗಸಿನ ಭಾವನಾಧಿಕ್ಯವನ್ನು ಸೂಚಿಸುತ್ತದೆ. ಮಾನವರಲ್ಲಿ ಗಂಡು ಹೆಣ್ಣು ಎಂಬ ಭಿನ್ನತೆಯು ಸಾಕಷ್ಟು ಸ್ಪಷ್ಟವಾಗಿ ಕಂಡರೂ ಹೆಂಗಸಿನ ಸ್ವಭಾವವು ಗಂಡಸಿನಲ್ಲೂ ಸ್ವಲ್ಪಮಟ್ಟಿಗೆ ಕಾಣಬರುತ್ತದೆ. ಅದೇ ರೀತಿಯಲ್ಲಿ ಗಂಡಸಿನ ಸ್ವಭಾವವು ಹೆಂಗಸರಲ್ಲಿಯೂ ಸ್ವಲ್ಪಮಟ್ಟಿಗೆ ಇದ್ದೇ ಇರುತ್ತದೆ. ದೇಹದ ರಚನೆಯಲ್ಲೂ ಈ ಅಂಶವು ಕಾಣಿಸುತ್ತದೆ. 'ಸ್ವಲ್ಪಮಟ್ಟಿಗೆ' ಎಂದೆವಲ್ಲ ; ಅದು ಹೆಚ್ಚು ಕಡಿಮೆಯಾಗಬಹುದು. ಆದುದರಿಂದ ಹೆಣ್ಣಕ್ಸ್ ಎಂದು ಮೂದಲಿಸಲ್ಪಡುವ ಗಂಡಸರು ಇರುತ್ತಾರೆ. ಗಂಡುಬೀರಿಗಳು ಎಂದು ಮೆರೆಯುವ ಹೆಂಗಸರೂ ಇರುತ್ತಾರೆ. ಈ ವಿಷಯವನ್ನು ಸಮರ್ಥಿಸಲು ನಿದರ್ಶನಗಳು ಅಗತ್ಯ. ಮಾನವನ ಮನಸ್ಸನ್ನು ವಿಶ್ಲೇಷಿಸುವಾಗ, ಉಭಯ ಮಿಶ್ರವಾದ ಈ ಅಂಶವನ್ನು ಗಮನಿಸಬೇಕು. ಮನಸ್ಸಿನ ಚಟುವಟಿಕೆಗಳು ಮನುಷ್ಯನ ನಡವಳಿಕೆಗಳನ್ನು ನಿರ್ಧರಿಸುತ್ತವೆ. ಅಂದಮೇಲೆ ಅವನು ಹೀಗೇಕೆ ನಡೆದುಕೊಳ್ಳುತ್ತಾನೆ ! ಇವಳು ಹೀಗೇಕೆ ಪರದಾಡುತ್ತಾಳೆ, ಎನ್ನುವುದನ್ನು ಅರ್ಥಮಾಡಿಕೊಳ್ಳುವಾಗ, ನಮ್ಮನ್ನು ನಾವು ಅರ್ಥಮಾಡಿಕೊಳ್ಳುವುದೂ ಉಪಯುಕ್ತ. ಗಂಡು ಮತ್ತು ಹೆಣ್ಣಿನ ಮಿಶ್ರ ಸ್ವಭಾವದ ಮನಸ್ಸು ನಮ್ಮಲ್ಲೂ ಇದ್ದೇ ಇದೆಯಲ್ಲ, ಯಾವ ಪ್ರಮಾಣದಲ್ಲಿ ಮಿಶ್ರವಾಗಿದೆ ಎಂಬುದನ್ನು ಅರಿಯಬೇಕು.<noinclude></noinclude> 1mha4prbdd4i69z9n83ya7d2slpbmjx 316978 316977 2026-05-04T14:19:25Z Shreesha Sharma 7840 /* Validated */ 316978 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೩೦೮}}{{Right|ಮನಮಂಥನ}} ತುಂಬಾ ಹೆಚ್ಚಾಗಿದೆ. ಗಂಡಸರ ಮೈ ತೂಕವು ಹೆಂಗಸರ ಮೈ ತೂಕಕ್ಕಿಂತ, ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಗಂಡಸಿನ ಮೆದುಳಿನ ತೂಕವು ಹೆಂಗಸರ ಮೆದುಳಿಗಿಂತ ತುಸು ಹೆಚ್ಚು ತೂಕವಿರುತ್ತದೆ. ಆದರೆ ತೂಕವೊಂದೇ ಮನಸ್ಸಿನ ಚುರುಕಿಗೆ ಕಾರಣವಲ್ಲ. ಮೆದುಳಿನ ಮೇಲ್ಮನ ವಿಸ್ತಾರವು, ತೂಕಕ್ಕಿಂತ ಹೆಚ್ಚು ಪ್ರಾಮುಖ್ಯವಾದುದು. ಈ ದೃಷ್ಟಿಯಿಂದಲೂ ಹೆಂಗಸಿನ ಮೆದುಳಿನ ಮೇಲ್ ಮೈಯಿನ ವಿಸ್ತಾರವು ಗಂಡಸಿಗಿಂತ ಕಡಿಮೆ. ಆದುದರಿಂದಲೇ ಏನೋ ಗಂಡಸರು ಹೆಚ್ಚು ವಿಚಾರಪ್ರಿಯರು, ಹೆಂಗಸರು ಭಾವನಾಪ್ರಿಯರು ಎಂದು ಸಾಮಾನ್ಯವಾಗಿ ಹೇಳುವುದು, ಹೆಂಗರುಳು ಎನ್ನುವುದು ಹೆಂಗಸಿನ ಭಾವನಾಧಿಕ್ಯವನ್ನು ಸೂಚಿಸುತ್ತದೆ. {{gap}}ಮಾನವರಲ್ಲಿ ಗಂಡು ಹೆಣ್ಣು ಎಂಬ ಭಿನ್ನತೆಯು ಸಾಕಷ್ಟು ಸ್ಪಷ್ಟವಾಗಿ ಕಂಡರೂ ಹೆಂಗಸಿನ ಸ್ವಭಾವವು ಗಂಡಸಿನಲ್ಲೂ ಸ್ವಲ್ಪಮಟ್ಟಿಗೆ ಕಾಣಬರುತ್ತದೆ. ಅದೇ ರೀತಿಯಲ್ಲಿ ಗಂಡಸಿನ ಸ್ವಭಾವವು ಹೆಂಗಸರಲ್ಲಿಯೂ ಸ್ವಲ್ಪಮಟ್ಟಿಗೆ ಇದ್ದೇ ಇರುತ್ತದೆ. ದೇಹದ ರಚನೆಯಲ್ಲೂ ಈ ಅಂಶವು ಕಾಣಿಸುತ್ತದೆ. 'ಸ್ವಲ್ಪಮಟ್ಟಿಗೆ' ಎಂದೆವಲ್ಲ ; ಅದು ಹೆಚ್ಚು ಕಡಿಮೆಯಾಗಬಹುದು. ಆದುದರಿಂದ ಹೆಣ್ಣಕ್ಸ್ ಎಂದು ಮೂದಲಿಸಲ್ಪಡುವ ಗಂಡಸರು ಇರುತ್ತಾರೆ. ಗಂಡುಬೀರಿಗಳು ಎಂದು ಮೆರೆಯುವ ಹೆಂಗಸರೂ ಇರುತ್ತಾರೆ. ಈ ವಿಷಯವನ್ನು ಸಮರ್ಥಿಸಲು ನಿದರ್ಶನಗಳು ಅಗತ್ಯ. ಮಾನವನ ಮನಸ್ಸನ್ನು ವಿಶ್ಲೇಷಿಸುವಾಗ, ಉಭಯ ಮಿಶ್ರವಾದ ಈ ಅಂಶವನ್ನು ಗಮನಿಸಬೇಕು. ಮನಸ್ಸಿನ ಚಟುವಟಿಕೆಗಳು ಮನುಷ್ಯನ ನಡವಳಿಕೆಗಳನ್ನು ನಿರ್ಧರಿಸುತ್ತವೆ. ಅಂದಮೇಲೆ ಅವನು ಹೀಗೇಕೆ ನಡೆದುಕೊಳ್ಳುತ್ತಾನೆ ! ಇವಳು ಹೀಗೇಕೆ ಪರದಾಡುತ್ತಾಳೆ, ಎನ್ನುವುದನ್ನು ಅರ್ಥಮಾಡಿಕೊಳ್ಳುವಾಗ, ನಮ್ಮನ್ನು ನಾವು ಅರ್ಥಮಾಡಿಕೊಳ್ಳುವುದೂ ಉಪಯುಕ್ತ. ಗಂಡು ಮತ್ತು ಹೆಣ್ಣಿನ ಮಿಶ್ರ ಸ್ವಭಾವದ ಮನಸ್ಸು ನಮ್ಮಲ್ಲೂ ಇದ್ದೇ ಇದೆಯಲ್ಲ, ಯಾವ ಪ್ರಮಾಣದಲ್ಲಿ ಮಿಶ್ರವಾಗಿದೆ ಎಂಬುದನ್ನು ಅರಿಯಬೇಕು.<noinclude></noinclude> nm53dftxj9v1w6x7bt5xzozmglk0ocu ಪುಟ:ಮನಮಂಥನ.pdf/೩೨೭ 104 62774 316976 314500 2026-05-04T14:17:54Z Shreelatha.Halemane 7642 /* Proofread */ 316976 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|'''೩. ಮೆದುಳಿನ ಪ್ರಮುಖ ಭಾಗಗಳು'''}} '''ಮೆದುಳಿನ ಅವತಾರ''' ಎರೆಹುಳು ಅಥವಾ ಮಣ್ಣುಹುಳು, ಕಂಬಳಿಹುಳು, ಜಂತುಹುಳು ಮುಂತಾದ ಹುಳುಗಳಲ್ಲಿ ಬೆನ್ನುಮೂಳೆಯು ಇರುವುದಿಲ್ಲ. ಎಲುಬಿನ ಚಿಪ್ಪಿನಿಂದ ರಕ್ಷಿತವಾದ ತಲೆಯೂ ಇರುವುದಿಲ್ಲ. ಇವು ಜೀವಿಗಳು ಜಂಗಮ ಅಥವಾ ಸಂಚರಿಸುವ ಪ್ರಾಣಿಗಳು, ಇವುಗಳ ದೇಹದಲ್ಲಿ ಹಲವಾರು ಅಂಗಗಳು ಇರುತ್ತವೆ. ಅವುಗಳ ಕಾರ್ಯಗಳನ್ನು ಸಮನ್ವಯಗೊಳಿಸಿ, ಸುಸೂತ್ರವಾಗಿ ನಡೆಸಲು ಒಂದು ವ್ಯವಸ್ಥೆಯು ಇರಬೇಕು. ಅವುಗಳ ಬೆನ್ನಿನ ಭಾಗದ ಕೆಳಗೆ ತಲೆಯಿಂದ ಬಾಲದ ತನಕ ನರಗಳ ಸಮೂಹವೊಂದು ಉದ್ದಕ್ಕೂ ಹರಡಿದೆ. ಅದೇ ಸಮನ್ವಯ ವ್ಯವಸ್ಥೆ. ಪ್ರಕೃತಿಯ ಪ್ರಗತಿಯಲ್ಲಿ, ಇದು ಸ್ಪೆನಲ್ ಕಾರ್ಡ್‌ಆಯಿತು. ಅದು ಮುಖ್ಯವಾದ ಅಂಗವಾದ್ದರಿಂದ,ಎಲುಬಿನ ರಕ್ಷಾ ಪಂಜರವನ್ನು ಪ್ರಕೃತಿಯು ರಚಿಸಿತು. ಪ್ರಗತಿಯು ಮುನ್ನಡೆದಾಗ, ಸ್ಪೆನಲ್ ಕಾರ್ಡ್ ಕೂಡ ಅಭಿವೃದ್ಧಿಯನ್ನು ತಲೆಯ ಕಡೆ ಸಾಧಿಸಿಕೊಂಡಿತು. ಆಗ ಮೆದುಳಿನ ಬುಡವು ಅವತರಿಸಿತು. ಇಲ್ಲಿ ಬಾಳಿಗೆ ಅಗತ್ಯವಾದ ಭಾವನಾ ಕೇಂದ್ರಗಳು ವ್ಯವಸ್ಥಿತವಾದವು. ಕೋಪವು ಉಕ್ಕಿದರೆ ತಾನೇ ವೈರಿಯನ್ನು ಸದೆಬಡಿಯಲು ಸಾಧ್ಯ. ಆಗ ವೀರರಂತೆ ಕಾದಾಡಬಹುದು. ಭಯಾನಕವಾಗಿ ಘರ್ಜಿಸಿ ಚದರಿಸಬಹುದು. ನಿದ್ರೆಯನ್ನು ವ್ಯವಸ್ಥೆಗೊಳಿಸುವ ಕೇಂದ್ರಗಳು ಮೆದುಳ ಬುಡದಲ್ಲಿವೆ, ಕಾಮೋದ್ರೇಕಿಸುವ, ನರಕೇಂದ್ರಗಳು ಆ ಮೆದುಳ ಬುಡದ ಬಳಿಯಲ್ಲಿವೆ. ಈ ಕೇಂದ್ರಗಳು ಕೆರಳಿದಾಗ ಹುಟ್ಟುಭಯವು ಇರದಾಗುತ್ತದೆ. ಕಾಮೋದ್ರೇಕಿತವಾದ ಕೋಣನು, ಅಡ್ಡಬಂದ ಚಿರತೆಯನ್ನು ಬಡಿದು ಕೊಲ್ಲಲು ತೊಡಗುತ್ತದೆ. ಕಾಮೋದ್ರೇಕವಿರದ ಸ್ಥಿತಿಯಲ್ಲಿ ಕೋಣನು ಓಡಿಹೋಗತೊಡಗುತ್ತದೆ. ಆದರೆ ಬೆದೆಗೆ ಬಂದ ಎಮ್ಮೆಯನ್ನು ಒಲಿಸಿಕೊಳ್ಳ ತೊಡಗಿದಾಗ, ಚಿರತೆಯು ಬಂದರೂ, ಅವರೊಡನೆ ಕಾದಾಡುತ್ತದೆ. ಪ್ರಾಣ ಭಯವೂ ಆಗ ಕೋಣನನ್ನು ತಡೆಯುವುದಿಲ್ಲ. ಇಂತಹ ಹಲವಾರು ಭಾವನಾ ಕೇಂದ್ರಗಳು, ಪ್ರಾಣಿಗಳಲ್ಲಿಯೂ ಇವೆ. ಮನುಷ್ಯ ಪ್ರಾಣಿಯಲ್ಲಿಯೂ ಇದೆ.<noinclude></noinclude> 1aqqqs9va5t9o142nulc06fcrikbi1m 316994 316976 2026-05-04T14:25:38Z Shreesha Sharma 7840 /* Validated */ 316994 proofread-page text/x-wiki <noinclude><pagequality level="4" user="Shreesha Sharma" /></noinclude>{{center|'''೩. ಮೆದುಳಿನ ಪ್ರಮುಖ ಭಾಗಗಳು'''}} '''ಮೆದುಳಿನ ಅವತಾರ''' {{gap}}ಎರೆಹುಳು ಅಥವಾ ಮಣ್ಣುಹುಳು, ಕಂಬಳಿಹುಳು, ಜಂತುಹುಳು ಮುಂತಾದ ಹುಳುಗಳಲ್ಲಿ ಬೆನ್ನುಮೂಳೆಯು ಇರುವುದಿಲ್ಲ. ಎಲುಬಿನ ಚಿಪ್ಪಿನಿಂದ ರಕ್ಷಿತವಾದ ತಲೆಯೂ ಇರುವುದಿಲ್ಲ. ಇವು ಜೀವಿಗಳು ಜಂಗಮ ಅಥವಾ ಸಂಚರಿಸುವ ಪ್ರಾಣಿಗಳು, ಇವುಗಳ ದೇಹದಲ್ಲಿ ಹಲವಾರು ಅಂಗಗಳು ಇರುತ್ತವೆ. ಅವುಗಳ ಕಾರ್ಯಗಳನ್ನು ಸಮನ್ವಯಗೊಳಿಸಿ, ಸುಸೂತ್ರವಾಗಿ ನಡೆಸಲು ಒಂದು ವ್ಯವಸ್ಥೆಯು ಇರಬೇಕು. ಅವುಗಳ ಬೆನ್ನಿನ ಭಾಗದ ಕೆಳಗೆ ತಲೆಯಿಂದ ಬಾಲದ ತನಕ ನರಗಳ ಸಮೂಹವೊಂದು ಉದ್ದಕ್ಕೂ ಹರಡಿದೆ. ಅದೇ ಸಮನ್ವಯ ವ್ಯವಸ್ಥೆ. {{gap}}ಪ್ರಕೃತಿಯ ಪ್ರಗತಿಯಲ್ಲಿ, ಇದು ಸ್ಪೆನಲ್ ಕಾರ್ಡ್‌ಆಯಿತು. ಅದು ಮುಖ್ಯವಾದ ಅಂಗವಾದ್ದರಿಂದ,ಎಲುಬಿನ ರಕ್ಷಾ ಪಂಜರವನ್ನು ಪ್ರಕೃತಿಯು ರಚಿಸಿತು. ಪ್ರಗತಿಯು ಮುನ್ನಡೆದಾಗ, ಸ್ಪೆನಲ್ ಕಾರ್ಡ್ ಕೂಡ ಅಭಿವೃದ್ಧಿಯನ್ನು ತಲೆಯ ಕಡೆ ಸಾಧಿಸಿಕೊಂಡಿತು. ಆಗ ಮೆದುಳಿನ ಬುಡವು ಅವತರಿಸಿತು. ಇಲ್ಲಿ ಬಾಳಿಗೆ ಅಗತ್ಯವಾದ ಭಾವನಾ ಕೇಂದ್ರಗಳು ವ್ಯವಸ್ಥಿತವಾದವು. ಕೋಪವು ಉಕ್ಕಿದರೆ ತಾನೇ ವೈರಿಯನ್ನು ಸದೆಬಡಿಯಲು ಸಾಧ್ಯ. ಆಗ ವೀರರಂತೆ ಕಾದಾಡಬಹುದು. ಭಯಾನಕವಾಗಿ ಘರ್ಜಿಸಿ ಚದರಿಸಬಹುದು. ನಿದ್ರೆಯನ್ನು ವ್ಯವಸ್ಥೆಗೊಳಿಸುವ ಕೇಂದ್ರಗಳು ಮೆದುಳ ಬುಡದಲ್ಲಿವೆ, ಕಾಮೋದ್ರೇಕಿಸುವ, ನರಕೇಂದ್ರಗಳು ಆ ಮೆದುಳ ಬುಡದ ಬಳಿಯಲ್ಲಿವೆ. ಈ ಕೇಂದ್ರಗಳು ಕೆರಳಿದಾಗ ಹುಟ್ಟುಭಯವು ಇರದಾಗುತ್ತದೆ. ಕಾಮೋದ್ರೇಕಿತವಾದ ಕೋಣನು, ಅಡ್ಡಬಂದ ಚಿರತೆಯನ್ನು ಬಡಿದು ಕೊಲ್ಲಲು ತೊಡಗುತ್ತದೆ. ಕಾಮೋದ್ರೇಕವಿರದ ಸ್ಥಿತಿಯಲ್ಲಿ ಕೋಣನು ಓಡಿಹೋಗತೊಡಗುತ್ತದೆ. ಆದರೆ ಬೆದೆಗೆ ಬಂದ ಎಮ್ಮೆಯನ್ನು ಒಲಿಸಿಕೊಳ್ಳ ತೊಡಗಿದಾಗ, ಚಿರತೆಯು ಬಂದರೂ, ಅವರೊಡನೆ ಕಾದಾಡುತ್ತದೆ. ಪ್ರಾಣ ಭಯವೂ ಆಗ ಕೋಣನನ್ನು ತಡೆಯುವುದಿಲ್ಲ. ಇಂತಹ ಹಲವಾರು ಭಾವನಾ ಕೇಂದ್ರಗಳು, ಪ್ರಾಣಿಗಳಲ್ಲಿಯೂ ಇವೆ. ಮನುಷ್ಯ ಪ್ರಾಣಿಯಲ್ಲಿಯೂ ಇದೆ.<noinclude></noinclude> f4m905l9ov82wt1opee3hh95rypdaeb ಪುಟ:ಮನಮಂಥನ.pdf/೩೨೮ 104 62775 316975 314501 2026-05-04T14:17:02Z Shreelatha.Halemane 7642 /* Proofread */ 316975 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೩೧೦}}{{Right|ಮನಮಂಥನ}} ಒಂದು ಮೂಲಭೂತ ವ್ಯತ್ಯಾಸವನ್ನು ಇಲ್ಲಿ ಗಮನಿಸಬಹುದು. ನಗು ಮತ್ತು ಅಳು, ಲಜ್ಜೆ ಮತ್ತು ನಾಚಿಕೆ ಇತ್ಯಾದಿ ಭಾವನಾ ಪ್ರದರ್ಶನಗಳು ಮನುಷ್ಯ ಪ್ರಾಣಿಯಲ್ಲಿ ಮಾತ್ರ ಕಂಡುಬರುತ್ತವೆ. ಇತರ ಯಾವ ಪ್ರಾಣಿಗಳಲ್ಲೂ ಇರುವುದಿಲ್ಲ. ಮನುಷ್ಯ ಪ್ರಾಣಿಯಲ್ಲಿ ಮೆದುಳಿನ ಕಾರ್ಟೆಕ್ಸ್ ಭಾಗವು ಹೊರವಾಗಿ ಬೆಳೆದಿದೆ. ವಿಚಾರಪರತೆಯು ಮತ್ತು ಸ್ಮರಣೆ; ಇವು ಹೊಸ ಪ್ರಭಾವವನ್ನು ಬೀರಿ ಭಾವನಾ ಕೇಂದ್ರಗಳಲ್ಲಿ ನೂತನವಾದ, ಮತ್ತು ನವ್ಯವಾದ ಭಾವನಾ ಪ್ರದರ್ಶನಗಳನ್ನು ಸೃಷ್ಟಿಸಿದೆ. ಶೋಕ, ಹಾಸ್ಯ, ಅದ್ಭುತ, ಇತ್ಯಾದಿ ರಸಾನುಭಾವವು ಮನುಷ್ಯ ಪ್ರಾಣಿಯಲ್ಲಿ ಮಾತ್ರ ಕಾಣಬರುತ್ತದೆ. ಭಾವನಾ ಕೇಂದ್ರಗಳಲ್ಲದೆ, ಬಾಳಿಗೆ ಅತ್ಯಗತ್ಯವಾದ ಇತರ ಕೇಂದ್ರಗಳು, ಮೆದುಳಿನ ಬುಡದಲ್ಲಿವೆ. ಉಸಿರಾಡುವುದರ ಕಾರ್ಯವನ್ನು ದೇಹಕ್ಕೆ ಅಗತ್ಯವಾದ ರೀತಿಯಲ್ಲಿ ನಿಯಂತ್ರಿಸುವುದು; ಅದೇ ರೀತಿ, ದೇಹದ ಶಾಖವನ್ನು ಹದವಾಗಿರಿಸುವುದು; ರಕ್ತಸಂಚಾರವು ದೇಹದಲ್ಲಿ ಅತ್ಯಗತ್ಯ ಕಾರ್ಯಗಳಿಗೆ ಮೀಸಲಾದ ನರಕೇಂದ್ರಗಳು, ಮೆದುಳಿನ ಬುಡದಲ್ಲಿವೆ. ಪ್ರಾಣಿಗಳಲ್ಲಿಯೂ, ಮನುಷ್ಯ ಪ್ರಾಣಿಗಳಲ್ಲಿಯೂ, ಈ ವ್ಯವಸ್ಥೆಯು ಸುಮಾರು ಪಾಲು ಒಂದೇ ರೀತಿಯಲ್ಲಿದೆ. ಲಕ್ಷಾಂತರ ವರ್ಷಗಳ ಪ್ರಗತಿಯು ಸಾಧಿಸಿದಾಗ, ಮೆದುಳಿನ ಕಾರ್ಟೆಕ್ಸ್ ಭಾಗವು, ನಾಯಿಕೊಡೆಯಂತೆ, ಬುಡದ ಸುತ್ತಲೂ ಮತ್ತು ಮೇಲುಗಡೆಯೂ ಹೊರವಾಗಿ ಹರಡತೊಡಗಿತು. ಮಾನವನ ವಿಚಾರಪರ ಮನಸ್ಸು ಈ ಭಾಗದಲ್ಲಿ ಅತಿ ಚುರುಕಾಗಿ ಕಾರ್ಯವನ್ನು ಮಾಡಲಾರಂಭಿಸಿತು. ಸ್ಮರಣೆಯ ನೆರವು ವಿಚಾರಕ್ಕೆ ಅಗತ್ಯವಾದುದರಿಂದ, ಸ್ಮರಣಾವಿಭಾಗವೂ ಅಭಿವೃದ್ಧಿಸಿತು. ಇವೆರಡಕ್ಕೂ ನಿಕಟ ಸಂಬಂಧವಿರುವುದರಿಂದ, ಪರಸ್ಪರವಾಗಿ ಎರಡೂ ಭಾಗಗಳು ಅಭಿವೃದ್ಧಿಯನ್ನು ಅಮೋಘವಾಗಿ ಸಾಧಿಸಿಕೊಂಡುವು. ಇದನ್ನು ಸೆರಿಬಂ ಎಂದು ಕೆರೆಯುತ್ತಾರೆ. ತಲೆಯ ಹಿಂಭಾಗದಲ್ಲಿ ಮತ್ತೊಂದು ಭಾಗವಿದೆ. ಸೆರಿಬೆಲ್ಲಂ ಎಂದು ಇದರ ಹೆಸರು. ನಾಲ್ಕು ಕಾಲುಗಳ ಪ್ರಾಣಿಯು ದೇಹದ ತೂಕವನ್ನು ಭದ್ರವಾಗಿ ನಾಲ್ಕೂ ಪಾದಗಳ ಮೇಲೆ ಹಾಕುತ್ತದೆ. ನಾಲ್ಕು ಕಾಲುಗಳಿದ್ದ ಮೇಜಿನಂತೆ, ಸುಭದ್ರವಾಗಿರುತ್ತದೆ. ಆದರೆ ಎರಡು ಕಾಲುಗಳ ಮೇಲೆ ನಡೆಯತೊಡಗಿದಾಗ ದೇಹದ ತೂಕವನ್ನು ಸರಿಯಾಗಿ ಹಂಚಬೇಕು, ಕಾಲುಗಳ ಮೇಲೆ ಅಷ್ಟೇ ಅಲ್ಲದೆ ನಡೆಯುವಾಗ, ಓಡುವಾಗ ಮುಗ್ಗರಿಸಬಹುದು. ಆಗ ಸಮತೋಲನವನ್ನು<noinclude></noinclude> h1rvjkthagyx4g16qwg5g23ghwp0rob 316996 316975 2026-05-04T14:26:01Z Shreesha Sharma 7840 /* Validated */ 316996 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೩೧೦}}{{Right|ಮನಮಂಥನ}} {{gap}}ಒಂದು ಮೂಲಭೂತ ವ್ಯತ್ಯಾಸವನ್ನು ಇಲ್ಲಿ ಗಮನಿಸಬಹುದು. ನಗು ಮತ್ತು ಅಳು, ಲಜ್ಜೆ ಮತ್ತು ನಾಚಿಕೆ ಇತ್ಯಾದಿ ಭಾವನಾ ಪ್ರದರ್ಶನಗಳು ಮನುಷ್ಯ ಪ್ರಾಣಿಯಲ್ಲಿ ಮಾತ್ರ ಕಂಡುಬರುತ್ತವೆ. ಇತರ ಯಾವ ಪ್ರಾಣಿಗಳಲ್ಲೂ ಇರುವುದಿಲ್ಲ. ಮನುಷ್ಯ ಪ್ರಾಣಿಯಲ್ಲಿ ಮೆದುಳಿನ ಕಾರ್ಟೆಕ್ಸ್ ಭಾಗವು ಹೊರವಾಗಿ ಬೆಳೆದಿದೆ. ವಿಚಾರಪರತೆಯು ಮತ್ತು ಸ್ಮರಣೆ; ಇವು ಹೊಸ ಪ್ರಭಾವವನ್ನು ಬೀರಿ ಭಾವನಾ ಕೇಂದ್ರಗಳಲ್ಲಿ ನೂತನವಾದ, ಮತ್ತು ನವ್ಯವಾದ ಭಾವನಾ ಪ್ರದರ್ಶನಗಳನ್ನು ಸೃಷ್ಟಿಸಿದೆ. ಶೋಕ, ಹಾಸ್ಯ, ಅದ್ಭುತ, ಇತ್ಯಾದಿ ರಸಾನುಭಾವವು ಮನುಷ್ಯ ಪ್ರಾಣಿಯಲ್ಲಿ ಮಾತ್ರ ಕಾಣಬರುತ್ತದೆ. {{gap}}ಭಾವನಾ ಕೇಂದ್ರಗಳಲ್ಲದೆ, ಬಾಳಿಗೆ ಅತ್ಯಗತ್ಯವಾದ ಇತರ ಕೇಂದ್ರಗಳು, ಮೆದುಳಿನ ಬುಡದಲ್ಲಿವೆ. ಉಸಿರಾಡುವುದರ ಕಾರ್ಯವನ್ನು ದೇಹಕ್ಕೆ ಅಗತ್ಯವಾದ ರೀತಿಯಲ್ಲಿ ನಿಯಂತ್ರಿಸುವುದು; ಅದೇ ರೀತಿ, ದೇಹದ ಶಾಖವನ್ನು ಹದವಾಗಿರಿಸುವುದು; ರಕ್ತಸಂಚಾರವು ದೇಹದಲ್ಲಿ ಅತ್ಯಗತ್ಯ ಕಾರ್ಯಗಳಿಗೆ ಮೀಸಲಾದ ನರಕೇಂದ್ರಗಳು, ಮೆದುಳಿನ ಬುಡದಲ್ಲಿವೆ. ಪ್ರಾಣಿಗಳಲ್ಲಿಯೂ, ಮನುಷ್ಯ ಪ್ರಾಣಿಗಳಲ್ಲಿಯೂ, ಈ ವ್ಯವಸ್ಥೆಯು ಸುಮಾರು ಪಾಲು ಒಂದೇ ರೀತಿಯಲ್ಲಿದೆ. {{gap}}ಲಕ್ಷಾಂತರ ವರ್ಷಗಳ ಪ್ರಗತಿಯು ಸಾಧಿಸಿದಾಗ, ಮೆದುಳಿನ ಕಾರ್ಟೆಕ್ಸ್ ಭಾಗವು, ನಾಯಿಕೊಡೆಯಂತೆ, ಬುಡದ ಸುತ್ತಲೂ ಮತ್ತು ಮೇಲುಗಡೆಯೂ ಹೊರವಾಗಿ ಹರಡತೊಡಗಿತು. ಮಾನವನ ವಿಚಾರಪರ ಮನಸ್ಸು ಈ ಭಾಗದಲ್ಲಿ ಅತಿ ಚುರುಕಾಗಿ ಕಾರ್ಯವನ್ನು ಮಾಡಲಾರಂಭಿಸಿತು. ಸ್ಮರಣೆಯ ನೆರವು ವಿಚಾರಕ್ಕೆ ಅಗತ್ಯವಾದುದರಿಂದ, ಸ್ಮರಣಾವಿಭಾಗವೂ ಅಭಿವೃದ್ಧಿಸಿತು. ಇವೆರಡಕ್ಕೂ ನಿಕಟ ಸಂಬಂಧವಿರುವುದರಿಂದ, ಪರಸ್ಪರವಾಗಿ ಎರಡೂ ಭಾಗಗಳು ಅಭಿವೃದ್ಧಿಯನ್ನು ಅಮೋಘವಾಗಿ ಸಾಧಿಸಿಕೊಂಡುವು. ಇದನ್ನು ಸೆರಿಬಂ ಎಂದು ಕೆರೆಯುತ್ತಾರೆ. {{gap}}ತಲೆಯ ಹಿಂಭಾಗದಲ್ಲಿ ಮತ್ತೊಂದು ಭಾಗವಿದೆ. ಸೆರಿಬೆಲ್ಲಂ ಎಂದು ಇದರ ಹೆಸರು. ನಾಲ್ಕು ಕಾಲುಗಳ ಪ್ರಾಣಿಯು ದೇಹದ ತೂಕವನ್ನು ಭದ್ರವಾಗಿ ನಾಲ್ಕೂ ಪಾದಗಳ ಮೇಲೆ ಹಾಕುತ್ತದೆ. ನಾಲ್ಕು ಕಾಲುಗಳಿದ್ದ ಮೇಜಿನಂತೆ, ಸುಭದ್ರವಾಗಿರುತ್ತದೆ. ಆದರೆ ಎರಡು ಕಾಲುಗಳ ಮೇಲೆ ನಡೆಯತೊಡಗಿದಾಗ ದೇಹದ ತೂಕವನ್ನು ಸರಿಯಾಗಿ ಹಂಚಬೇಕು, ಕಾಲುಗಳ ಮೇಲೆ ಅಷ್ಟೇ ಅಲ್ಲದೆ ನಡೆಯುವಾಗ, ಓಡುವಾಗ ಮುಗ್ಗರಿಸಬಹುದು. ಆಗ ಸಮತೋಲನವನ್ನು<noinclude></noinclude> l8bs9072u4icgta7z9fofhab9qfwtgx ಪುಟ:ಮನಮಂಥನ.pdf/೩೨೯ 104 62776 316974 314505 2026-05-04T14:15:41Z Shreelatha.Halemane 7642 /* Proofread */ 316974 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಮೆದುಳಿನ ಪ್ರಮುಖ ಭಾಗಗಳು}}{{Right|೩೧೧}} ಸಾಧಿಸಬೇಕು. ಇಲ್ಲದಿದ್ದರೆ ಬಿದ್ದು ಪೆಟ್ಟು ಮಾಡಿಕೊಳ್ಳಬೇಕು. ನರ್ತಕಿಯರು, ಮತ್ತು ಸರ್ಕಸ್ ಮಾಡುವವರು ದೇಹದ ಸಮತೋಲನವನ್ನು ಎಷ್ಟು ಅದ್ಭುತವಾಗಿ ಅಣಿ ಮಾಡಿಕೊಂಡಿದ್ದಾರೆ, ನೋಡಿ. ಹೇಗೆ ಎಷ್ಟು ಬಾಗಿದರೂ ಬೀಳುವುದಿಲ್ಲ. ಅತ್ಯಾಶ್ಚರ್ಯಕರವಾಗಿ ದೇಹದ ಸಮತೋಲನವನ್ನು ಸಾಧಿಸುವುದು, ಸರಿಬೆಲ್ಲಂ ಇನ ಕಾರ್ಯ. ದೊಂಬರಾಟವನ್ನು ನೋಡಿಲ್ಲವೇ? ನೆಟ್ಟಗೆ ನಿಲ್ಲಿಸಿದ ಬೊಂಬಿನ ತುದಿಯ ಮೇಲೆ ದೊಂಬರವನು ಮಲಗಿ ತಿರುಗುವುದಿಲ್ಲವೆ, ಬೊಂಬಿನ ಮೇಲೆ ಹೊಟ್ಟೆಯನ್ನು ಮಾತ್ರ ಇರಿಸಿಕೊಂಡು, ಆಶ್ಚರ್ಯವಾಗುವುದಿಲ್ಲವೇ ? ಸರಿಬೆಲ್ಲಂ ಇನ ಚಾಕಚಕ್ಯತೆಯಿಂದ ಇದು ಸಾಧ್ಯವಾಗಿದೆ. ಪ್ರಮುಖವಾದ ಈ ಮೂರು ಭಾಗಗಳು ಒಂದರೊಂದಿಗೆ ಉಳಿದುವು ಸಮನ್ವಯಿಸಿಕೊಂಡು ಹೇಗೆ ಕೆಲಸವನ್ನು ಮಾಡುತ್ತದೆ ಎಂಬುದನ್ನು ನಿದರ್ಶನದೊಂದಿಗೆ ತಿಳಿಯುವುದು ಸುಲಭ. ಪಕ್ಕದ ಮನೆಯ ಸೀಬೆ ಮರದಲ್ಲಿ ದೋರಗಾಯಿಯೊಂದು ಕಾಣಿಸುತ್ತದೆ. ಹುಡುಗನ ಕಣ್ಣು ಅದನ್ನು ನೋಡುತ್ತದೆ. ದೋರಗಾಯಿನ ಜತೆಗೆ ಉಪ್ಪು ಹಾಕಿಕೊಂಡು ಹಿಂದೊಮ್ಮೆ ಖುಷಿಯಿಂದ ತಿಂದದ್ದು ಸ್ಮರಣೆಗೆ ಬರುತ್ತದೆ. ಸೀಬೆಕಾಯಿಯನ್ನು ಕಂಡಾಗ, ಪಂಚೇಂದ್ರಿಯಗಳಲ್ಲಿ ಒಂದಾದ ಕಣ್ಣಿನ ಮೂಲಕ, ಸೆರಿಬ್ರಂ ಇನಲ್ಲಿರುವ ದೃಷ್ಟಿಯ ಕೇಂದ್ರಗಳಿಗೆ ಸುದ್ದಿಯು ಮುಟ್ಟುತ್ತದೆ. ಅಲ್ಲಿಂದ ಸ್ಮರಣಾ ಭಾಗಕ್ಕೆ ಈ ಸುದ್ದಿಯ ಒಂದು ಪ್ರತಿಯು ಹೋಗುತ್ತದೆ. ಹಿಂದೆ ಸೀಬೆಕಾಯಿಯನ್ನು ಉಪ್ಪಿನ ಜತೆಗೆ ತಿಂದು ಸುಖಪಟ್ಟಿದುದರ ಸ್ಮರಣೆಯು ಪ್ರಚೋದಿತವಾಗುತ್ತದೆ. ಪ್ರಚೋದಿತವಾದ ಸ್ಮರಣೆಯು, ತಿರುಗಿ ತಿನ್ನಬೇಕು ಎನ್ನುವ ಆಸೆಯನ್ನು ಹುಟ್ಟಿಸುತ್ತದೆ. ಆಸೆಯು ಹುಡುಗನನ್ನು ಕೆರಳಿಸುತ್ತದೆ. ಅವನ ಸರಿಬ್ರಂ ಇನಲ್ಲಿರುವ ವಿಚಾರ ಪರ ಮನಸ್ಸು ಹೀಗೆ ಹೀಗೆ ಮಾಡಿದರೆ ದೋರಗಾಯಿ ಸಿಗಬಹುದು ಎಂದು ನಿರ್ಧರಿಸುತ್ತದೆ. ಕಾಪೌಂಡ್ ಗೋಡೆಯನ್ನು ಹತ್ತುತ್ತಾನೆ. ಹತ್ತುವಾಗ ಮತ್ತು ಹತ್ತಿ ಗೋಡೆಯ ಮೇಲೆ ನಿಂತುಕೊಂಡಾಗ ಅವನ ಸೆರಿಬೆಲ್ಲಂ ಬಹಳ ಚಾಕಚಕ್ಯತೆಯಿಂದ, ಕೆಳಕ್ಕೆ ಬೀಳದಂತೆ ಅವನನ್ನು ಕಾಪಾಡುತ್ತದೆ. ಗೋಡೆಯ ಅಂಚಿನಲ್ಲಿ ನಿಂತು, ಮರದ ಕೊಂಬೆಯತ್ತ ವಾಲಿಕೊಂಡು, ಅದನ್ನು ಬಗ್ಗಿಸಿ, ಕಾಯಿಯನ್ನು ಕೀಳುವಾಗ ಕೆಳಕ್ಕೆ ಬೀಳಲು, ಎಷ್ಟೆಲ್ಲಾ ಅವಕಾಶವಿರುತ್ತದೆ. ಸೆರಿಬೆಲ್ಲಂ ಇನ ಜಾಣತನದ ನಿರ್ವಹಣೆಯಿಂದ, ಹುಡುಗ ಕೆಳಕ್ಕೆ ಬೀಳುವುದಿಲ್ಲ. ದುಡುಕಿದರೆ ಗೊತ್ತೆ ಇದೆ, ದುಢುಂ ಎಂದು ಬಿದ್ದು ಮಂಡಿಯನ್ನು ತರಚಿಕೊಳ್ಳುತ್ತಾನೆ, ಅಥವಾ<noinclude></noinclude> 7gkr32d999yrijsqbrngvp1u5cc777x 316998 316974 2026-05-04T14:26:22Z Shreesha Sharma 7840 /* Validated */ 316998 proofread-page text/x-wiki <noinclude><pagequality level="4" user="Shreesha Sharma" /></noinclude>{{Left|ಮೆದುಳಿನ ಪ್ರಮುಖ ಭಾಗಗಳು}}{{Right|೩೧೧}} ಸಾಧಿಸಬೇಕು. ಇಲ್ಲದಿದ್ದರೆ ಬಿದ್ದು ಪೆಟ್ಟು ಮಾಡಿಕೊಳ್ಳಬೇಕು. ನರ್ತಕಿಯರು, ಮತ್ತು ಸರ್ಕಸ್ ಮಾಡುವವರು ದೇಹದ ಸಮತೋಲನವನ್ನು ಎಷ್ಟು ಅದ್ಭುತವಾಗಿ ಅಣಿ ಮಾಡಿಕೊಂಡಿದ್ದಾರೆ, ನೋಡಿ. ಹೇಗೆ ಎಷ್ಟು ಬಾಗಿದರೂ ಬೀಳುವುದಿಲ್ಲ. ಅತ್ಯಾಶ್ಚರ್ಯಕರವಾಗಿ ದೇಹದ ಸಮತೋಲನವನ್ನು ಸಾಧಿಸುವುದು, ಸರಿಬೆಲ್ಲಂ ಇನ ಕಾರ್ಯ. ದೊಂಬರಾಟವನ್ನು ನೋಡಿಲ್ಲವೇ? ನೆಟ್ಟಗೆ ನಿಲ್ಲಿಸಿದ ಬೊಂಬಿನ ತುದಿಯ ಮೇಲೆ ದೊಂಬರವನು ಮಲಗಿ ತಿರುಗುವುದಿಲ್ಲವೆ, ಬೊಂಬಿನ ಮೇಲೆ ಹೊಟ್ಟೆಯನ್ನು ಮಾತ್ರ ಇರಿಸಿಕೊಂಡು, ಆಶ್ಚರ್ಯವಾಗುವುದಿಲ್ಲವೇ ? ಸರಿಬೆಲ್ಲಂ ಇನ ಚಾಕಚಕ್ಯತೆಯಿಂದ ಇದು ಸಾಧ್ಯವಾಗಿದೆ. {{gap}}ಪ್ರಮುಖವಾದ ಈ ಮೂರು ಭಾಗಗಳು ಒಂದರೊಂದಿಗೆ ಉಳಿದುವು ಸಮನ್ವಯಿಸಿಕೊಂಡು ಹೇಗೆ ಕೆಲಸವನ್ನು ಮಾಡುತ್ತದೆ ಎಂಬುದನ್ನು ನಿದರ್ಶನದೊಂದಿಗೆ ತಿಳಿಯುವುದು ಸುಲಭ. {{gap}}ಪಕ್ಕದ ಮನೆಯ ಸೀಬೆ ಮರದಲ್ಲಿ ದೋರಗಾಯಿಯೊಂದು ಕಾಣಿಸುತ್ತದೆ. ಹುಡುಗನ ಕಣ್ಣು ಅದನ್ನು ನೋಡುತ್ತದೆ. ದೋರಗಾಯಿನ ಜತೆಗೆ ಉಪ್ಪು ಹಾಕಿಕೊಂಡು ಹಿಂದೊಮ್ಮೆ ಖುಷಿಯಿಂದ ತಿಂದದ್ದು ಸ್ಮರಣೆಗೆ ಬರುತ್ತದೆ. ಸೀಬೆಕಾಯಿಯನ್ನು ಕಂಡಾಗ, ಪಂಚೇಂದ್ರಿಯಗಳಲ್ಲಿ ಒಂದಾದ ಕಣ್ಣಿನ ಮೂಲಕ, ಸೆರಿಬ್ರಂ ಇನಲ್ಲಿರುವ ದೃಷ್ಟಿಯ ಕೇಂದ್ರಗಳಿಗೆ ಸುದ್ದಿಯು ಮುಟ್ಟುತ್ತದೆ. ಅಲ್ಲಿಂದ ಸ್ಮರಣಾ ಭಾಗಕ್ಕೆ ಈ ಸುದ್ದಿಯ ಒಂದು ಪ್ರತಿಯು ಹೋಗುತ್ತದೆ. ಹಿಂದೆ ಸೀಬೆಕಾಯಿಯನ್ನು ಉಪ್ಪಿನ ಜತೆಗೆ ತಿಂದು ಸುಖಪಟ್ಟಿದುದರ ಸ್ಮರಣೆಯು ಪ್ರಚೋದಿತವಾಗುತ್ತದೆ. ಪ್ರಚೋದಿತವಾದ ಸ್ಮರಣೆಯು, ತಿರುಗಿ ತಿನ್ನಬೇಕು ಎನ್ನುವ ಆಸೆಯನ್ನು ಹುಟ್ಟಿಸುತ್ತದೆ. {{gap}}ಆಸೆಯು ಹುಡುಗನನ್ನು ಕೆರಳಿಸುತ್ತದೆ. ಅವನ ಸರಿಬ್ರಂ ಇನಲ್ಲಿರುವ ವಿಚಾರ ಪರ ಮನಸ್ಸು ಹೀಗೆ ಹೀಗೆ ಮಾಡಿದರೆ ದೋರಗಾಯಿ ಸಿಗಬಹುದು ಎಂದು ನಿರ್ಧರಿಸುತ್ತದೆ. ಕಾಪೌಂಡ್ ಗೋಡೆಯನ್ನು ಹತ್ತುತ್ತಾನೆ. ಹತ್ತುವಾಗ ಮತ್ತು ಹತ್ತಿ ಗೋಡೆಯ ಮೇಲೆ ನಿಂತುಕೊಂಡಾಗ ಅವನ ಸೆರಿಬೆಲ್ಲಂ ಬಹಳ ಚಾಕಚಕ್ಯತೆಯಿಂದ, ಕೆಳಕ್ಕೆ ಬೀಳದಂತೆ ಅವನನ್ನು ಕಾಪಾಡುತ್ತದೆ. ಗೋಡೆಯ ಅಂಚಿನಲ್ಲಿ ನಿಂತು, ಮರದ ಕೊಂಬೆಯತ್ತ ವಾಲಿಕೊಂಡು, ಅದನ್ನು ಬಗ್ಗಿಸಿ, ಕಾಯಿಯನ್ನು ಕೀಳುವಾಗ ಕೆಳಕ್ಕೆ ಬೀಳಲು, ಎಷ್ಟೆಲ್ಲಾ ಅವಕಾಶವಿರುತ್ತದೆ. ಸೆರಿಬೆಲ್ಲಂ ಇನ ಜಾಣತನದ ನಿರ್ವಹಣೆಯಿಂದ, ಹುಡುಗ ಕೆಳಕ್ಕೆ ಬೀಳುವುದಿಲ್ಲ. ದುಡುಕಿದರೆ ಗೊತ್ತೆ ಇದೆ, ದುಢುಂ ಎಂದು ಬಿದ್ದು ಮಂಡಿಯನ್ನು ತರಚಿಕೊಳ್ಳುತ್ತಾನೆ, ಅಥವಾ<noinclude></noinclude> aanw677rhuh3s3qq8ko3kry56487f6y ಪುಟ:ಮನಮಂಥನ.pdf/೩೩೦ 104 62777 316972 314507 2026-05-04T14:14:38Z Shreelatha.Halemane 7642 /* Proofread */ 316972 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೩೧೨}}{{Right|ಮನಮಂಥನ}} ಕೈಯನ್ನೋ ಕಾಲನ್ನೋ ಮುರಿದುಕೊಳ್ಳುತ್ತಾನೆ. ಪಂಚೇಂದ್ರಿಯಗಳಿಂದ ಸೆರಿಬ್ರಂ ಇಗೆ ಸುದ್ದಿಯು ತಲಪುವುದು. ಅಲ್ಲಿಂದ ಸ್ಮರಣಾ ವಿಭಾಗಕ್ಕೂ ವಿಚಾರಪರ ಮನಸ್ಸಿಗೂ ಸುದ್ದಿಯು ಸಾಗಿ, ಆಸೆಯು ಹುಟ್ಟುವುದು. ಆಸೆಯ ಪೂರೈಕೆಗೆ ಅಗತ್ಯವಾದ ಕಾರ್ಯಕ್ರಮವನ್ನು ಸೆರಿಬೆಲ್ಲಂ ಇನ ನೆರವಿನಿಂದ ಸುಬಂ ನಡೆಸುವುದು. ಇವೆಲ್ಲವೂ ಸುಸೂತ್ರವಾಗಿ ನಡೆಯುತ್ತವೆ. ವಿವಿಧವಾದ ಈ ಭಾಗಗಳಲ್ಲಿ ಸುದ್ದಿ ಸಂಪರ್ಕವು ಅಣಿಯಾಗಿರಬೇಕು. ನಿಖರವಾದ ಸಂಪರ್ಕವನ್ನು ಆಗುಮಾಡಲು ನರಗಳು ವಿಫುಲವಾಗಿ, ಹತ್ತೂ ಕಡೆಗಳಿಗೂ, ಹರಡಿಕೊಂಡಿರುತ್ತವೆ. ದೇಹವನ್ನು ಡಿಸೆಕ್ಸ್ ಮಾಡುವಾಗ ಕಣ್ಣಿಗೆ ನರಗಳು ಕಾಣಿಸುತ್ತವೆ. ಇಂತಹ ಒಂದೊಂದು ನರದಲ್ಲೂ ಸೂಕ್ಷ್ಮವಾದ ಸಾವಿರಾರು ಎಳೆಗಳು ಇರುತ್ತವೆ. ಒಂದೊಂದು ಎಳೆಯೂ ಎರಡು ವಿಶಿಷ್ಟ ಕೇಂದ್ರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಅಂದರೆ ಕಣ್ಣಿಗೆ ಕಾಣಿಸುವ ನರಗಳೂ ಟೆಲಿಫೋನ್ ಕೇಬಲುಗಳಿದ್ದಂತೆ. ಒಂದೇ ಕೇಬಲಿನಂತೆ ಕಾಣಿಸಿದರೂ, ಹಲವಾರು ಬೇರೆ ಬೇರೆ ನಂಬರುಗಳಿಗೆ ಸಂಪರ್ಕವನ್ನು ಕಲ್ಪಿಸುವ ತಂತಿಗಳು ಇರುತ್ತವೆ. ಅದೇ ತರಹಾನೇ ನರಗಳೂ ಕೂಡ ಕಾಣಿಸುವ ನರಕ್ಕೆ ಪೆಟ್ಟು ಬಿದ್ದರೆ, ಎಲ್ಲಾ ಎಳೆಗಳೂ ತುಂಡಾಗದೆ ಇರಬಹುದು. ಕೆಲವು ಎಳೆಗಳು ತುಂಡಾಗಿ, ಸಂಬಂಧಪಟ್ಟ ಕೇಂದ್ರಗಳು, ಕಾರ್ಯವನ್ನು ಮಾಡಲಾಗದೆ ಇರಬಹುದು. ಆದರೆ ಮತ್ತೆ ಕೆಲವು ಎಳೆಗಳು ಉಳಿದುಕೊಂಡೂ ಇರಬಹುದು. ಅವುಗಳಿಗೆ ಸಂಬಂಧಪಟ್ಟ ಕಾರ್ಯಗಳು ಮುಂದುವರೆಯುತ್ತವೆ. ವಿಚಾರಪರ ಮನಸ್ಸಿರುವ ಸೆರಿಬ್ರಂ ಇಗೂ, ಸ್ಮರಣಾ ಕೇಂದ್ರಗಳಿಗೂ, ನಿಕಟಸಂಪರ್ಕವನ್ನು ಕಲ್ಪಿಸುವ ಕೋಟ್ಯಾಂತರ ಮಾರ್ಗಗಳಿರುತ್ತವೆ. ಆದರೆ ಮಾನವನ ಸಾಮಾನ್ಯ ಬಾಳಿನಲ್ಲಿ, ಲಕ್ಷಾಂತರ ಮಾರ್ಗಗಳು ಮಾತ್ರ ಉಪಯೋಗಿಸಲ್ಪಡುತ್ತವೆ. ಕಲಿಕೆಯಿಂದ, ಅಭ್ಯಾಸದಿಂದ, ಇಂತಹ ಮಾರ್ಗಗಳ ಸಂಖ್ಯೆಯನ್ನು ಬಹಳ ಪಾಲು ಹೆಚ್ಚಿಸಬಹುದು. ಅತಿ ಜಾಣರು, ಪ್ರಚಂಡರು, ಎನಿಸಿಕೊಂಡವರಲ್ಲಿ ಹೀಗೆ ಆಗಿರುತ್ತದೆ. ಮನಸ್ಸು ಸಮರ್ಪಕವಾಗಿ ಕೆಲಸವನ್ನು ಮಾಡದೆ ಇದ್ದಾಗ, ಮೆದುಳಿನಲ್ಲಿ ಸಂಪರ್ಕಮಾರ್ಗಗಳು ತುಂಡಾಗಿರಬಹುದು ಎಂದು ಊಹಿಸಬಹುದಾದರೂ, ಮೆದುಳನ್ನು ಪರೀಕ್ಷಿಸಿದಾಗ ಯಾವ ವ್ಯತ್ಯಾಸವೂ ಕಾಣಿಸುವುದಿಲ್ಲ. ಅಂದರೆ ಈಗ ಬಳಕೆಯಲ್ಲಿರುವ ಅತಿ ಸೂಕ್ಷ್ಮದರ್ಶಿಗಳಿಂದಲೂ ಯಾವ ಎಳೆಗಳು ಒಂದು ಸಣ್ಣ ನರದಲ್ಲಿ ಕೆಟ್ಟಿವೆ ಎಂಬುದು ಗೋಚರವಾಗದೆ ಇರಬಹುದು.<noinclude></noinclude> ppa4pran1c4i02naou3gb86sktqtbtr 316999 316972 2026-05-04T14:26:43Z Shreesha Sharma 7840 /* Validated */ 316999 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೩೧೨}}{{Right|ಮನಮಂಥನ}} ಕೈಯನ್ನೋ ಕಾಲನ್ನೋ ಮುರಿದುಕೊಳ್ಳುತ್ತಾನೆ. {{gap}}ಪಂಚೇಂದ್ರಿಯಗಳಿಂದ ಸೆರಿಬ್ರಂ ಇಗೆ ಸುದ್ದಿಯು ತಲಪುವುದು. ಅಲ್ಲಿಂದ ಸ್ಮರಣಾ ವಿಭಾಗಕ್ಕೂ ವಿಚಾರಪರ ಮನಸ್ಸಿಗೂ ಸುದ್ದಿಯು ಸಾಗಿ, ಆಸೆಯು ಹುಟ್ಟುವುದು. ಆಸೆಯ ಪೂರೈಕೆಗೆ ಅಗತ್ಯವಾದ ಕಾರ್ಯಕ್ರಮವನ್ನು ಸೆರಿಬೆಲ್ಲಂ ಇನ ನೆರವಿನಿಂದ ಸುಬಂ ನಡೆಸುವುದು. ಇವೆಲ್ಲವೂ ಸುಸೂತ್ರವಾಗಿ ನಡೆಯುತ್ತವೆ. {{gap}}ವಿವಿಧವಾದ ಈ ಭಾಗಗಳಲ್ಲಿ ಸುದ್ದಿ ಸಂಪರ್ಕವು ಅಣಿಯಾಗಿರಬೇಕು. ನಿಖರವಾದ ಸಂಪರ್ಕವನ್ನು ಆಗುಮಾಡಲು ನರಗಳು ವಿಫುಲವಾಗಿ, ಹತ್ತೂ ಕಡೆಗಳಿಗೂ, ಹರಡಿಕೊಂಡಿರುತ್ತವೆ. ದೇಹವನ್ನು ಡಿಸೆಕ್ಸ್ ಮಾಡುವಾಗ ಕಣ್ಣಿಗೆ ನರಗಳು ಕಾಣಿಸುತ್ತವೆ. ಇಂತಹ ಒಂದೊಂದು ನರದಲ್ಲೂ ಸೂಕ್ಷ್ಮವಾದ ಸಾವಿರಾರು ಎಳೆಗಳು ಇರುತ್ತವೆ. ಒಂದೊಂದು ಎಳೆಯೂ ಎರಡು ವಿಶಿಷ್ಟ ಕೇಂದ್ರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಅಂದರೆ ಕಣ್ಣಿಗೆ ಕಾಣಿಸುವ ನರಗಳೂ ಟೆಲಿಫೋನ್ ಕೇಬಲುಗಳಿದ್ದಂತೆ. ಒಂದೇ ಕೇಬಲಿನಂತೆ ಕಾಣಿಸಿದರೂ, ಹಲವಾರು ಬೇರೆ ಬೇರೆ ನಂಬರುಗಳಿಗೆ ಸಂಪರ್ಕವನ್ನು ಕಲ್ಪಿಸುವ ತಂತಿಗಳು ಇರುತ್ತವೆ. ಅದೇ ತರಹಾನೇ ನರಗಳೂ ಕೂಡ ಕಾಣಿಸುವ ನರಕ್ಕೆ ಪೆಟ್ಟು ಬಿದ್ದರೆ, ಎಲ್ಲಾ ಎಳೆಗಳೂ ತುಂಡಾಗದೆ ಇರಬಹುದು. ಕೆಲವು ಎಳೆಗಳು ತುಂಡಾಗಿ, ಸಂಬಂಧಪಟ್ಟ ಕೇಂದ್ರಗಳು, ಕಾರ್ಯವನ್ನು ಮಾಡಲಾಗದೆ ಇರಬಹುದು. ಆದರೆ ಮತ್ತೆ ಕೆಲವು ಎಳೆಗಳು ಉಳಿದುಕೊಂಡೂ ಇರಬಹುದು. ಅವುಗಳಿಗೆ ಸಂಬಂಧಪಟ್ಟ ಕಾರ್ಯಗಳು ಮುಂದುವರೆಯುತ್ತವೆ. {{gap}}ವಿಚಾರಪರ ಮನಸ್ಸಿರುವ ಸೆರಿಬ್ರಂ ಇಗೂ, ಸ್ಮರಣಾ ಕೇಂದ್ರಗಳಿಗೂ, ನಿಕಟಸಂಪರ್ಕವನ್ನು ಕಲ್ಪಿಸುವ ಕೋಟ್ಯಾಂತರ ಮಾರ್ಗಗಳಿರುತ್ತವೆ. ಆದರೆ ಮಾನವನ ಸಾಮಾನ್ಯ ಬಾಳಿನಲ್ಲಿ, ಲಕ್ಷಾಂತರ ಮಾರ್ಗಗಳು ಮಾತ್ರ ಉಪಯೋಗಿಸಲ್ಪಡುತ್ತವೆ. ಕಲಿಕೆಯಿಂದ, ಅಭ್ಯಾಸದಿಂದ, ಇಂತಹ ಮಾರ್ಗಗಳ ಸಂಖ್ಯೆಯನ್ನು ಬಹಳ ಪಾಲು ಹೆಚ್ಚಿಸಬಹುದು. ಅತಿ ಜಾಣರು, ಪ್ರಚಂಡರು, ಎನಿಸಿಕೊಂಡವರಲ್ಲಿ ಹೀಗೆ ಆಗಿರುತ್ತದೆ. {{gap}}ಮನಸ್ಸು ಸಮರ್ಪಕವಾಗಿ ಕೆಲಸವನ್ನು ಮಾಡದೆ ಇದ್ದಾಗ, ಮೆದುಳಿನಲ್ಲಿ ಸಂಪರ್ಕಮಾರ್ಗಗಳು ತುಂಡಾಗಿರಬಹುದು ಎಂದು ಊಹಿಸಬಹುದಾದರೂ, ಮೆದುಳನ್ನು ಪರೀಕ್ಷಿಸಿದಾಗ ಯಾವ ವ್ಯತ್ಯಾಸವೂ ಕಾಣಿಸುವುದಿಲ್ಲ. ಅಂದರೆ ಈಗ ಬಳಕೆಯಲ್ಲಿರುವ ಅತಿ ಸೂಕ್ಷ್ಮದರ್ಶಿಗಳಿಂದಲೂ ಯಾವ ಎಳೆಗಳು ಒಂದು ಸಣ್ಣ ನರದಲ್ಲಿ ಕೆಟ್ಟಿವೆ ಎಂಬುದು ಗೋಚರವಾಗದೆ ಇರಬಹುದು.<noinclude></noinclude> lit5x8wxse8bl2zw25sap7f9l4gva4l ಪುಟ:ಮನಮಂಥನ.pdf/೩೩೧ 104 62778 316971 314508 2026-05-04T14:13:43Z Shreelatha.Halemane 7642 /* Proofread */ 316971 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಮೆದುಳಿನ ಪ್ರಮುಖ ಭಾಗಗಳು}}{{Right|೩೧೩}} ನರಗಳ ಎಳೆಗಳು ಸಂಪರ್ಕವನ್ನು ಸಾಧಿಸುತ್ತಿಲ್ಲ ಎಂದಾಗ, ಅವು ತುಂಡಾಗಿರಲೇಬೇಕು ಎಂದು ಹೇಳುವಂತಿಲ್ಲ. ಏಕೆಂದರೆ ಅವುಗಳ ರಾಸಾಯನಿಕ ಸ್ಥಿತಿಯು ಕ್ಷಣ ಕ್ಷಣಕ್ಕೂ ಒಂದು ಇತಿಮಿತಿಯಲ್ಲಿ ವ್ಯತ್ಯಾಸವನ್ನು ಹೊಂದುತ್ತಿರುತ್ತದೆ. ನರಗಳಲ್ಲಿ ವಿದ್ಯುತ್‌ ಹರಿಯುವಾಗ ಹೀಗಾಗಬೇಕಾದುದು ಸಮಂಜಸ. ಮೆದುಳಿನ ವಿವರಗಳನ್ನು ತಿಳಿದುಕೊಳ್ಳಲು, ಈ ರೀತಿ, ಕಣ್ಣಿಗೆ ಕಂಡ ಹಾಗೆ ಭಾಗಗಳನ್ನು ಮಾಡಿ ಅಧ್ಯಯನವನ್ನು ಮಾಡುತ್ತಾರೆ. ಆದರೆ ಮೆದುಳು ಕಾರ್ಯಗತವಾಗಿರುವಾಗ ಸಂಬಂಧಿಸಿದ ಎಲ್ಲಾ ಭಾಗಗಳ ಸುಸೂತ್ರ ಸಮನ್ವಯದಿಂದ, ಊಟಮಾಡುವವನಿಗೆ, ಅನ್ನ ಸಾರು, ಅನ್ನ ಹುಳಿ, ಮೊಸರನ್ನ, ಚಟ್ಟಿ ಎಂಬುದೇ ಪ್ರಾಮುಖ್ಯವಾದುದು. ಆದರೆ ಅಡಿಗೆಯನ್ನು ಮಾಡುವವನಿಗೆ, ಅನ್ನವೇ ಬೇರೆ, ಅದರ ಅಡಿಗೆಯೇ ಒಂದು ರೀತಿ, ಸಾರು ಬೇರೆ, ಅದರ ಅಡಿಗೆಯು ಮತ್ತೊಂದು ರೀತಿ. ಹುಳಿ ಮತ್ತು ಅದರ ಅಡಿಗೆಯೇ ಬೇರೊಂದು ತರಹ, ಮನಸ್ಸನ್ನು ಉಪಯೋಗಿಸಿಕೊಳ್ಳುವಾಗ ಊಟವನ್ನು ಮಾಡಿದಂತೆ. ಮನಸ್ಸನ್ನು ವಿಶ್ಲೇಷಿಸಿ, ಅದರ ಕಾರ್ಯಕ್ರಮವನ್ನು ವಿವರವಾಗಿ ತಿಳಿಯುವಾಗ, ಅಡಿಗೆಯವನಂತಾಗಬೇಕು. ಈ ವ್ಯತ್ಯಾಸವನ್ನು ಗಮನಿಸಬೇಕು. ಇಷ್ಟು ಅನ್ನಕ್ಕೆ ಅಷ್ಟು ಸಾರನ್ನು ಹಾಕಿ ಕಲಸಿ ಕೊಳ್ಳಬೇಕು, ಎನ್ನುವುದು ಉಣ್ಣುವವನ ಅಭಿರುಚಿಗೆ ತಕ್ಕಂತೆ. ಇದರ ಕಲ್ಪನೆಯು ಕೂಡ ಅಡಿಗೆಯವನಿಗೆ ಇರುವುದಿಲ್ಲ. ಅದೇ ರೀತಿಯಲ್ಲಿ ಅಡಿಗೆಯನ್ನು ಮಾಡುವವನ ಕೆಲಸಗಳ ಕಲ್ಪನೆಯು ಉಣ್ಣುವವನಿಗೆ ಇರಬೇಕಾಗಿಲ್ಲ. ಮನಸ್ಸಿನ ಕೆಲಸವೂ ಹೀಗೆಯೇ. ಮನಸ್ಸನ್ನು ಉಪಯೋಗಿಸುವವನು ತನ್ನ ಅಭಿರುಚಿಗೆ ತಕ್ಕಂತೆ ಬಳಸಿಕೊಳ್ಳುತ್ತಾನೆ. ಆದರೆ ಮನಃಶಾಸ್ತ್ರಜ್ಞರು ಅಡಿಗೆಯವರಂತೆ. ಮನಸ್ಸನ್ನು ವಿಶ್ಲೇಷಿಸುವುದು ಮಾತ್ರವಲ್ಲದೆ, ಅಭಿರುಚಿಯನ್ನೂ ತಿಳಿದು ಅಳತೆಮಾಡಲೂ ಕೂಡ ಪ್ರಯತ್ನಿಸುತ್ತಾರೆ. Aptitude tests ಎನ್ನುವುದು, ಈ ರೀತಿಯವು. ಆದರೆ ಈ ವಿಷಯದಲ್ಲಿ, ಈಗಿನ ವೈಜ್ಞಾನಿಕ ಹಂತದಲ್ಲಿ ಊಹಾಪೋಹಗಳು ತಾಂಡವವಾಡುತ್ತಿವೆಯೇ ವಿನಹಾ, ನಿಖರವಾದ ಸಿದ್ಧಾಂತಗಳಲ್ಲ. ಆದರೂ ವ್ಯಕ್ತಿಯ ಅಭಿರುಚಿಯನ್ನು ಸಾಕಷ್ಟುಮಟ್ಟಿಗೆ ತಿಳಿಯಬಹುದು. ಉದಾಹರಣೆಗೆ :- 'ರಾಮಯ್ಯನವರು ಮನೆಯಲ್ಲಿದ್ದಾರೆಯೇ ನೋಡಿಕೊಂಡು ಬಾ' ಎಂದು ಯಜಮಾನರು ಜವರನಿಗೆ ಹೇಳಿದರು. ಜವರ ಹೋಗಿ ಬಂದ 'ಆಯ್ಯನವರು ಮನೆಯಾಗಿಲ್ಲ, ಬುದ್ಧಿ !” ಎಂದು ಹೇಳಿದ. ಎಂಟು ವರ್ಷದ ಮಗ ಕಿಟ್ಟುವನ್ನು ಕರೆದು 'ರಾಮಯ್ಯನವರು ಮನೇಲಿದ್ದಾರೆಯೆ ? ನೋಡಿಕೊಂಡು ಬಾ' ಎಂದರು.<noinclude></noinclude> 8f1d0bnie6q796kjp4yco67rhf2katd 317000 316971 2026-05-04T14:27:06Z Shreesha Sharma 7840 /* Validated */ 317000 proofread-page text/x-wiki <noinclude><pagequality level="4" user="Shreesha Sharma" /></noinclude>{{Left|ಮೆದುಳಿನ ಪ್ರಮುಖ ಭಾಗಗಳು}}{{Right|೩೧೩}} {{gap}}ನರಗಳ ಎಳೆಗಳು ಸಂಪರ್ಕವನ್ನು ಸಾಧಿಸುತ್ತಿಲ್ಲ ಎಂದಾಗ, ಅವು ತುಂಡಾಗಿರಲೇಬೇಕು ಎಂದು ಹೇಳುವಂತಿಲ್ಲ. ಏಕೆಂದರೆ ಅವುಗಳ ರಾಸಾಯನಿಕ ಸ್ಥಿತಿಯು ಕ್ಷಣ ಕ್ಷಣಕ್ಕೂ ಒಂದು ಇತಿಮಿತಿಯಲ್ಲಿ ವ್ಯತ್ಯಾಸವನ್ನು ಹೊಂದುತ್ತಿರುತ್ತದೆ. ನರಗಳಲ್ಲಿ ವಿದ್ಯುತ್‌ ಹರಿಯುವಾಗ ಹೀಗಾಗಬೇಕಾದುದು ಸಮಂಜಸ. {{gap}}ಮೆದುಳಿನ ವಿವರಗಳನ್ನು ತಿಳಿದುಕೊಳ್ಳಲು, ಈ ರೀತಿ, ಕಣ್ಣಿಗೆ ಕಂಡ ಹಾಗೆ ಭಾಗಗಳನ್ನು ಮಾಡಿ ಅಧ್ಯಯನವನ್ನು ಮಾಡುತ್ತಾರೆ. ಆದರೆ ಮೆದುಳು ಕಾರ್ಯಗತವಾಗಿರುವಾಗ ಸಂಬಂಧಿಸಿದ ಎಲ್ಲಾ ಭಾಗಗಳ ಸುಸೂತ್ರ ಸಮನ್ವಯದಿಂದ, ಊಟಮಾಡುವವನಿಗೆ, ಅನ್ನ ಸಾರು, ಅನ್ನ ಹುಳಿ, ಮೊಸರನ್ನ, ಚಟ್ಟಿ ಎಂಬುದೇ ಪ್ರಾಮುಖ್ಯವಾದುದು. ಆದರೆ ಅಡಿಗೆಯನ್ನು ಮಾಡುವವನಿಗೆ, ಅನ್ನವೇ ಬೇರೆ, ಅದರ ಅಡಿಗೆಯೇ ಒಂದು ರೀತಿ, ಸಾರು ಬೇರೆ, ಅದರ ಅಡಿಗೆಯು ಮತ್ತೊಂದು ರೀತಿ. ಹುಳಿ ಮತ್ತು ಅದರ ಅಡಿಗೆಯೇ ಬೇರೊಂದು ತರಹ, ಮನಸ್ಸನ್ನು ಉಪಯೋಗಿಸಿಕೊಳ್ಳುವಾಗ ಊಟವನ್ನು ಮಾಡಿದಂತೆ. ಮನಸ್ಸನ್ನು ವಿಶ್ಲೇಷಿಸಿ, ಅದರ ಕಾರ್ಯಕ್ರಮವನ್ನು ವಿವರವಾಗಿ ತಿಳಿಯುವಾಗ, ಅಡಿಗೆಯವನಂತಾಗಬೇಕು. ಈ ವ್ಯತ್ಯಾಸವನ್ನು ಗಮನಿಸಬೇಕು. ಇಷ್ಟು ಅನ್ನಕ್ಕೆ ಅಷ್ಟು ಸಾರನ್ನು ಹಾಕಿ ಕಲಸಿ ಕೊಳ್ಳಬೇಕು, ಎನ್ನುವುದು ಉಣ್ಣುವವನ ಅಭಿರುಚಿಗೆ ತಕ್ಕಂತೆ. ಇದರ ಕಲ್ಪನೆಯು ಕೂಡ ಅಡಿಗೆಯವನಿಗೆ ಇರುವುದಿಲ್ಲ. ಅದೇ ರೀತಿಯಲ್ಲಿ ಅಡಿಗೆಯನ್ನು ಮಾಡುವವನ ಕೆಲಸಗಳ ಕಲ್ಪನೆಯು ಉಣ್ಣುವವನಿಗೆ ಇರಬೇಕಾಗಿಲ್ಲ. ಮನಸ್ಸಿನ ಕೆಲಸವೂ ಹೀಗೆಯೇ. ಮನಸ್ಸನ್ನು ಉಪಯೋಗಿಸುವವನು ತನ್ನ ಅಭಿರುಚಿಗೆ ತಕ್ಕಂತೆ ಬಳಸಿಕೊಳ್ಳುತ್ತಾನೆ. ಆದರೆ ಮನಃಶಾಸ್ತ್ರಜ್ಞರು ಅಡಿಗೆಯವರಂತೆ. ಮನಸ್ಸನ್ನು ವಿಶ್ಲೇಷಿಸುವುದು ಮಾತ್ರವಲ್ಲದೆ, ಅಭಿರುಚಿಯನ್ನೂ ತಿಳಿದು ಅಳತೆಮಾಡಲೂ ಕೂಡ ಪ್ರಯತ್ನಿಸುತ್ತಾರೆ. Aptitude tests ಎನ್ನುವುದು, ಈ ರೀತಿಯವು. ಆದರೆ ಈ ವಿಷಯದಲ್ಲಿ, ಈಗಿನ ವೈಜ್ಞಾನಿಕ ಹಂತದಲ್ಲಿ ಊಹಾಪೋಹಗಳು ತಾಂಡವವಾಡುತ್ತಿವೆಯೇ ವಿನಹಾ, ನಿಖರವಾದ ಸಿದ್ಧಾಂತಗಳಲ್ಲ. ಆದರೂ ವ್ಯಕ್ತಿಯ ಅಭಿರುಚಿಯನ್ನು ಸಾಕಷ್ಟುಮಟ್ಟಿಗೆ ತಿಳಿಯಬಹುದು. ಉದಾಹರಣೆಗೆ :- {{gap}}'ರಾಮಯ್ಯನವರು ಮನೆಯಲ್ಲಿದ್ದಾರೆಯೇ ನೋಡಿಕೊಂಡು ಬಾ' ಎಂದು ಯಜಮಾನರು ಜವರನಿಗೆ ಹೇಳಿದರು. ಜವರ ಹೋಗಿ ಬಂದ 'ಆಯ್ಯನವರು ಮನೆಯಾಗಿಲ್ಲ, ಬುದ್ಧಿ !” ಎಂದು ಹೇಳಿದ. ಎಂಟು ವರ್ಷದ ಮಗ ಕಿಟ್ಟುವನ್ನು ಕರೆದು 'ರಾಮಯ್ಯನವರು ಮನೇಲಿದ್ದಾರೆಯೆ ? ನೋಡಿಕೊಂಡು ಬಾ' ಎಂದರು.<noinclude></noinclude> 3uxcjycjynz9yubd0nrdzigwpxd72ac ಪುಟ:ಮನಮಂಥನ.pdf/೩೩೨ 104 62779 316969 314510 2026-05-04T14:12:34Z Shreelatha.Halemane 7642 /* Proofread */ 316969 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೩೧೪}}{{Right|ಮನಮಂಥನ}} ಕಿಟ್ಟು ಹೋಗಿ ಬಂದ. 'ರಾಮಯ್ಯನವರು ಭತ್ತ ತರುಕ್ಕೆ ಅಂತ ಮೂರುದಿನಗಳ ಹಿಂದೆ ಹಳ್ಳಿಗೆ ಹೋದರು, ಇನ್ನೊಂದು ವಾರದ ನಂತರ ಭತ್ತವನ್ನು ತೆಗೆದುಕೊಂಡು ಹಿಂತಿರುಗುವ ನಿರೀಕ್ಷೆಯಿದೆಯಂತೆ' ಎಂದು ವರದಿ ಒಪ್ಪಿಸಿದ. ಜವರನ ಮನಸ್ಸು ಕೆಲಸ ಮಾಡುತ್ತಿತ್ತು. ರಾಮಯ್ಯನವರು, ಅವರಿರುವ ಮನೆ, ಇವೆರಡರ ಸ್ಮರಣೆಯು ಲಕ್ಷಣವಾಗಿತ್ತು. ಯಜಮಾನರು, ಹೇಳಿದ ಮಾತುಗಳೂ ಕೇಳಿಸಿತ್ತು, ತಿಳಿದಿತ್ತು. ರಾಮಯ್ಯನವರ ಮನೆಗೆ ಹೋದ. ಇದಾರೆಯೇ ಅಂತ ಕೇಳಿದ. ಇಲ್ಲ ಎಂದು ಉತ್ತರ ಬಂತು. ಹಿಂತಿರುಗಿದ. ಕಿಟ್ಟುವಿಗೆ ಎಂಟೇ ವರ್ಷ ವಯಸ್ಸು ಜವರನಿಗಿಂತ ಮೂವತ್ತು ವರ್ಷ ಚಿಕ್ಕವನು. ಅವನ ಮನಸೂ ಕೆಲಸಮಾಡುತ್ತಿತ್ತು. ರಾಮಯ್ಯನವರು, ಅವರ ಮನೆ ಎರಡರ ಸ್ಮರಣೆಯು ಅವನಿಗೂ ಇತ್ತು. ತಂದೆಯು ಹೇಳಿದುದು ಅವನಿಗೂ ಕೇಳಿಸಿತ್ತು. ಅರ್ಥವೂ ಆಗಿತ್ತು. ರಾಮಯ್ಯನವರು ಮನೆಯಲ್ಲಿಲ್ಲ ಎಂದು ಮನೆಯವರು ಹೇಳಿದಾಗ ಅವನ ಮನಸ್ಸಿನಲ್ಲಿ ತುಸು ಕುತೂಹಲವು ಕೆರಳಿತು. ಎಲ್ಲಿಗೆ ಹೋಗಿದ್ದಾರೆ, ಊರಿನಲ್ಲಿದ್ದಾರೆಯೇ ? ಇಲ್ಲದಿದ್ದರೆ ಯಾವಾಗ ಬರುತ್ತಾರೆ, ಇವೆಲ್ಲ ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಪಡೆದಿದ್ದ. ರಾಮಯ್ಯನವರನ್ನು ಅಪ್ಪ ಕಾಣಬೇಕು. ಯಾವುದೋ ಮಾತನಾಡಬೇಕು, ಇಲ್ಲದೆ ಇದ್ದರೆ ಅವರಿದಾರೆಯೇ ನೋಡಿ ಕೊಂಡು ಬಾ ಎಂದು ಕಳುಹಿಸುತ್ತಿರಲಿಲ್ಲ. ಇಷ್ಟೆಲ್ಲಾ ಯೋಚನೆಗಳನ್ನು ಕಿಟ್ಟು ಮಾಡಿ ವಿವರವಾದ ಉತ್ತರವನ್ನು ಪಡೆದಿದ್ದ. ಯೋಚಿಸುವ ಶಕ್ತಿಯು, ವಯಸ್ಸಿಗೆ ಅನುಗುಣವಾಗಿ ಬೆಳೆಯುವುದಿಲ್ಲ. ಜವರನಿಗೆ ಎಷ್ಟೇ ಹೇಳಿಕೊಟ್ಟರೂ ಸ್ವಂತವಾಗಿ ಆಲೋಚಿಸುವ ಯೋಗ್ಯತೆಯು ಬರುವುದೇ ಇಲ್ಲ. ಜವರನಿಗೆ ಕಲಿಸಹೋಗುವುದು ಗೋರ್ಕಲ್ಲಮೇಲೆ ಮಳೆಯು ಸುರಿದಂತೆ. ಹುಟ್ಟುವಾಗ, ತಾಯ್ತಂದೆಯರಿಂದ ವಂಶಾನುಗತವಾಗಿ ಬಂದಿರುವ ಒಂದು ಅಂಶವು ಯೋಚಿಸುವ ಪ್ರವೃತ್ತಿಗೆ ಮುಖ್ಯ ಕಾರಣವಾಗುತ್ತದೆ. ಈ ಅಂಶವನ್ನು ಅಭಿವೃದ್ಧಿಸುವುದು ವಿದ್ಯಾಭ್ಯಾಸದ ಧೈಯ. ವಿದ್ಯಾಭ್ಯಾಸದ, ಅಥವಾ ಕಲಿಯುವಿಕೆಯ ಅವಕಾಶವು ಇರದಿದ್ದರೆ, ಈ ಅಂಶವು ಬೂದಿ ಮುಚ್ಚಿದ ಕೆಂಡದಂತೆ, ನಶಿಸುತ್ತಾ ಹೋಗಬಹುದು. ಈ ಶತಮಾನದಲ್ಲಿ ಐನ್‌ಸ್ಟೈನ್ ಮಹಾಶಯನು ಪ್ರಪಂಚದ ಅತ್ಯುನ್ನತ ಕುಶಾಗ್ರಮತಿಯೆಂದು ಹೇಳಬಹುದು. ಇಡೀ ಮಾನವನ ಜ್ಞಾನ ಭಂಡಾರಕ್ಕೆ ಆತನು ಅರ್ಪಿಸಿದ ಕಾಣಿಕೆಯು ಅತ್ಯಮೂಲ್ಯವಾದುದು. ಪ್ರಚಂಡ ಬುದ್ಧಿಯಿಂದಾಗಿ ಆತ ಸಿದ್ಧಾಂತವನ್ನು ಪ್ರಕಟಿಸಿದ. ಭೌತಶಾಸ್ತ್ರದ ಇಂದಿನ ಪ್ರಗಲ್ಪವಾದ ಪ್ರಗತಿಗೆ<noinclude></noinclude> gplnd5ggdmrr88p6r3b79zq5atdtebx 317001 316969 2026-05-04T14:27:32Z Shreesha Sharma 7840 /* Validated */ 317001 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೩೧೪}}{{Right|ಮನಮಂಥನ}} ಕಿಟ್ಟು ಹೋಗಿ ಬಂದ. 'ರಾಮಯ್ಯನವರು ಭತ್ತ ತರುಕ್ಕೆ ಅಂತ ಮೂರುದಿನಗಳ ಹಿಂದೆ ಹಳ್ಳಿಗೆ ಹೋದರು, ಇನ್ನೊಂದು ವಾರದ ನಂತರ ಭತ್ತವನ್ನು ತೆಗೆದುಕೊಂಡು ಹಿಂತಿರುಗುವ ನಿರೀಕ್ಷೆಯಿದೆಯಂತೆ' ಎಂದು ವರದಿ ಒಪ್ಪಿಸಿದ. {{gap}}ಜವರನ ಮನಸ್ಸು ಕೆಲಸ ಮಾಡುತ್ತಿತ್ತು. ರಾಮಯ್ಯನವರು, ಅವರಿರುವ ಮನೆ, ಇವೆರಡರ ಸ್ಮರಣೆಯು ಲಕ್ಷಣವಾಗಿತ್ತು. ಯಜಮಾನರು, ಹೇಳಿದ ಮಾತುಗಳೂ ಕೇಳಿಸಿತ್ತು, ತಿಳಿದಿತ್ತು. ರಾಮಯ್ಯನವರ ಮನೆಗೆ ಹೋದ. ಇದಾರೆಯೇ ಅಂತ ಕೇಳಿದ. ಇಲ್ಲ ಎಂದು ಉತ್ತರ ಬಂತು. ಹಿಂತಿರುಗಿದ. {{gap}}ಕಿಟ್ಟುವಿಗೆ ಎಂಟೇ ವರ್ಷ ವಯಸ್ಸು ಜವರನಿಗಿಂತ ಮೂವತ್ತು ವರ್ಷ ಚಿಕ್ಕವನು. ಅವನ ಮನಸೂ ಕೆಲಸಮಾಡುತ್ತಿತ್ತು. ರಾಮಯ್ಯನವರು, ಅವರ ಮನೆ ಎರಡರ ಸ್ಮರಣೆಯು ಅವನಿಗೂ ಇತ್ತು. ತಂದೆಯು ಹೇಳಿದುದು ಅವನಿಗೂ ಕೇಳಿಸಿತ್ತು. ಅರ್ಥವೂ ಆಗಿತ್ತು. ರಾಮಯ್ಯನವರು ಮನೆಯಲ್ಲಿಲ್ಲ ಎಂದು ಮನೆಯವರು ಹೇಳಿದಾಗ ಅವನ ಮನಸ್ಸಿನಲ್ಲಿ ತುಸು ಕುತೂಹಲವು ಕೆರಳಿತು. ಎಲ್ಲಿಗೆ ಹೋಗಿದ್ದಾರೆ, ಊರಿನಲ್ಲಿದ್ದಾರೆಯೇ ? ಇಲ್ಲದಿದ್ದರೆ ಯಾವಾಗ ಬರುತ್ತಾರೆ, ಇವೆಲ್ಲ ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಪಡೆದಿದ್ದ. ರಾಮಯ್ಯನವರನ್ನು ಅಪ್ಪ ಕಾಣಬೇಕು. ಯಾವುದೋ ಮಾತನಾಡಬೇಕು, ಇಲ್ಲದೆ ಇದ್ದರೆ ಅವರಿದಾರೆಯೇ ನೋಡಿ ಕೊಂಡು ಬಾ ಎಂದು ಕಳುಹಿಸುತ್ತಿರಲಿಲ್ಲ. ಇಷ್ಟೆಲ್ಲಾ ಯೋಚನೆಗಳನ್ನು ಕಿಟ್ಟು ಮಾಡಿ ವಿವರವಾದ ಉತ್ತರವನ್ನು ಪಡೆದಿದ್ದ. {{gap}}ಯೋಚಿಸುವ ಶಕ್ತಿಯು, ವಯಸ್ಸಿಗೆ ಅನುಗುಣವಾಗಿ ಬೆಳೆಯುವುದಿಲ್ಲ. ಜವರನಿಗೆ ಎಷ್ಟೇ ಹೇಳಿಕೊಟ್ಟರೂ ಸ್ವಂತವಾಗಿ ಆಲೋಚಿಸುವ ಯೋಗ್ಯತೆಯು ಬರುವುದೇ ಇಲ್ಲ. ಜವರನಿಗೆ ಕಲಿಸಹೋಗುವುದು ಗೋರ್ಕಲ್ಲಮೇಲೆ ಮಳೆಯು ಸುರಿದಂತೆ. ಹುಟ್ಟುವಾಗ, ತಾಯ್ತಂದೆಯರಿಂದ ವಂಶಾನುಗತವಾಗಿ ಬಂದಿರುವ ಒಂದು ಅಂಶವು ಯೋಚಿಸುವ ಪ್ರವೃತ್ತಿಗೆ ಮುಖ್ಯ ಕಾರಣವಾಗುತ್ತದೆ. ಈ ಅಂಶವನ್ನು ಅಭಿವೃದ್ಧಿಸುವುದು ವಿದ್ಯಾಭ್ಯಾಸದ ಧೈಯ. ವಿದ್ಯಾಭ್ಯಾಸದ, ಅಥವಾ ಕಲಿಯುವಿಕೆಯ ಅವಕಾಶವು ಇರದಿದ್ದರೆ, ಈ ಅಂಶವು ಬೂದಿ ಮುಚ್ಚಿದ ಕೆಂಡದಂತೆ, ನಶಿಸುತ್ತಾ ಹೋಗಬಹುದು. {{gap}}ಈ ಶತಮಾನದಲ್ಲಿ ಐನ್‌ಸ್ಟೈನ್ ಮಹಾಶಯನು ಪ್ರಪಂಚದ ಅತ್ಯುನ್ನತ ಕುಶಾಗ್ರಮತಿಯೆಂದು ಹೇಳಬಹುದು. ಇಡೀ ಮಾನವನ ಜ್ಞಾನ ಭಂಡಾರಕ್ಕೆ ಆತನು ಅರ್ಪಿಸಿದ ಕಾಣಿಕೆಯು ಅತ್ಯಮೂಲ್ಯವಾದುದು. ಪ್ರಚಂಡ ಬುದ್ಧಿಯಿಂದಾಗಿ ಆತ ಸಿದ್ಧಾಂತವನ್ನು ಪ್ರಕಟಿಸಿದ. ಭೌತಶಾಸ್ತ್ರದ ಇಂದಿನ ಪ್ರಗಲ್ಪವಾದ ಪ್ರಗತಿಗೆ<noinclude></noinclude> sclo0jl1iy95o3ukeyx27zjop5104vy ಪುಟ:ಮನಮಂಥನ.pdf/೩೩೩ 104 62780 316968 314511 2026-05-04T14:11:42Z Shreelatha.Halemane 7642 /* Proofread */ 316968 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಮೆದುಳಿನ ಪ್ರಮುಖ ಭಾಗಗಳು}}{{Right|೩೧೫}} ಆತನ ಸಿದ್ಧಾಂತವು ಭದ್ರವಾದ ತಳಹದಿಯಾಯಿತು. ಆದರೆ ಹಿಂದೆ ನಡೆದ ಹತ್ತನೆಯ ಶತಮಾನದಲ್ಲಿ, ಇಂತಹ ಪ್ರಚಂಡ ಬುದ್ಧಿ ಇದ್ದವರು ಇರಲೇ ಇಲ್ಲವೇ ? ಇದ್ದೇ ಇರಬೇಕು. ಆದರೆ ಭೌತಶಾಸ್ತ್ರದ ಪ್ರಗತಿಯು ಆ ಶತಮಾನದಲ್ಲಿ ಶೈಶವಾಸ್ಥೆಯಲ್ಲಿತ್ತು. ಆದಕಾರಣ ಅಂತಹ ಪ್ರಚಂಡನು ಇದ್ದಿದ್ದರೂ, ಅವನ ಚುರುಕು ಬುದ್ಧಿಯು ಅಮೋಘವಾಗಿ ವಿಕಸಿಸಲು ಸಾಧ್ಯವಾಗಲಿಲ್ಲ. ಆದರೆ ಈ ಶತಮಾನದ ವೇಳೆಗೆ ಭೌತಶಾಸ್ತ್ರದ ಜ್ಞಾನ ಭಂಡಾರವು ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದ್ದಿತು. ಐನ್‌ಸ್ಟೈನನ ಮನಸ್ಸು ವಿಕಸಿಸಲು ಅವಕಾಶವು ಬಹಳಷ್ಟು ಇತ್ತು. ಇಂದಿನವರೆವಿಗೂ ಪ್ರಪಂಚದಲ್ಲೆಲ್ಲಾ ಅತ್ಯಂತ ಮೇಧಾವಿಯಾಗಿದ್ದವನು, ಬಲು ಪ್ರಚಂಡನಾಗಿದ್ದವನು, ಎಂದರೆ ಲಿಯೋನಾಡೊ ಡ ವಿಂಚಿ. ಶಿಲ್ಪ ಕಲೆಯಲ್ಲಾಗಲೀ, ವರ್ಣಚಿತ್ರರಚನೆಯಲ್ಲಾಗಲೀ, ವಿಜ್ಞಾನದಲ್ಲಾಗಲೀ, ಆತ ಸಾಧಿಸಿದ ಔನ್ನತ್ಯವು, ಮಿಕ್ಕ ಯಾರಿಂದಲೂ ಆಗಿಲ್ಲ, ಎಂದು ಪ್ರಚಂಡರು ಎನಿಸಿಕೊಂಡ ಹಲವಾರು ಜನರು ನುಡಿದಿದ್ದಾರೆ. ಆದರೆ ಭೌತವಿಜ್ಞಾನದಲ್ಲಿ ಆತನಿಗೆ ತಿಳಿದುದಕ್ಕಿಂತ ಹೆಚ್ಚಾಗಿ, ಇಂದಿನ ಕಾಲೇಜುಗಳ ಭೌತ ವಿದ್ಯಾರ್ಥಿಗಳು ಕಲಿತುಕೊಂಡಿದ್ದಾರೆ. ಏಳನೆಯ ಶತಮಾನದಲ್ಲಿ ಆದಿಶಂಕರಾಚಾರ್ಯರು ಬರೆದು ಪ್ರಚಾರಕ್ಕೆ ತಂದ ಸಿದ್ಧಾಂತವು ಇಂದೂ ಪ್ರಪಂಚದ ಹಲವಾರು ಬುದ್ಧಿ ಜೀವಿಗಳ ಮನ್ನಣೆಯನ್ನು ಪಡೆದಿದೆ. ಆದರೆ ಅವರು ಬಾಳಿದ ಕಾಲದಲ್ಲಿ, ನಮ್ಮ ರಾಷ್ಟ್ರದಲ್ಲಿ, ಆತ್ಮಜ್ಞಾನದ ಅರಿವು ಬುದ್ಧಿಜೀವಿಗಳ ಏಕೈಕ ಗುರಿಯಾಗಿತ್ತು. ಆದರೆ ಆದಿಶಂಕರರು ಈಗ ಬದುಕಿದ್ದಿದ್ದರೆ, ರಸಾಯನ ಅಥವಾ ಭೌತಶಾಸ್ತ್ರದ ಅಧ್ಯಯನವನ್ನು ಮಾಡಿದ್ದಿದ್ದರೆ ನೋಬೆಲ್ ಪಾರಿತೋಷಕವು ಹಲವಾರುಬಾರಿ ನಮ್ಮ ದೇಶಕ್ಕೆ ದೊರೆಯುತ್ತಿತ್ತು. ಸಾರಾಂಶವೇನೆಂದರೆ ಪ್ರಚಂಡ ಬುದ್ಧಿ ಇದ್ದರೂ, ಅದು ವಿಕಸಿಸಿ ಫಲಪ್ರದವಾಗಬೇಕಾದರೆ, ಆ ಕಾಲದ ಜ್ಞಾನ ಭಂಡಾರವು ತಳಹದಿಯಾಗುತ್ತದೆ; ಅದನ್ನು ಅನ್ವಯಿಸಿಕೊಂಡು, ಅವರುಗಳು ನವ್ಯ ಸಿದ್ಧಾಂತಗಳನ್ನು ಕಟ್ಟಬೇಕು. ಇಂದಿಗೂ ಆಫ್ರಿಕಾದ ಹಿಂದುಳಿದ ಜನಾಂಗಗಳಲ್ಲಿ, ನ್ಯೂಟನ್‌, ಐನ್‌ಸ್ಟೈನ್‌ರಂತಹ ಪ್ರಚಂಡಮತಿಗಳಿರಬೇಕು. ಆದರೆ ಅವರ ಪ್ರಚಂಡ ಬುದ್ಧಿಯು, ಬಿಲ್ಲು ಬಾಣಗಳನ್ನು ನವೀನಗೊಳಿಸುವುದರಲ್ಲಿ ಮುಕ್ತಾಯಗೊಳ್ಳುತ್ತಿರಬಹುದು. ಆದರೆ ಮನಸ್ಸಿನಲ್ಲಿ ಆಲೋಚನಾ ಶಕ್ತಿಯು ಚುರುಕಾಗಿರಬೇಕಾದರೆ, ವಂಶಾನುಗತವಾಗಿ ನಡೆದುಬಂದ ಗುಣವು ಅಗತ್ಯ. ಅಷ್ಟೇ ಅಗತ್ಯವಾದುದು, ಆ ಕಾಲದ ಮಾನವನ ಜ್ಞಾನ<noinclude></noinclude> d60v5c20dw5izlwp9eeh104xo5afxiv 317002 316968 2026-05-04T14:27:57Z Shreesha Sharma 7840 /* Validated */ 317002 proofread-page text/x-wiki <noinclude><pagequality level="4" user="Shreesha Sharma" /></noinclude>{{Left|ಮೆದುಳಿನ ಪ್ರಮುಖ ಭಾಗಗಳು}}{{Right|೩೧೫}} ಆತನ ಸಿದ್ಧಾಂತವು ಭದ್ರವಾದ ತಳಹದಿಯಾಯಿತು. {{gap}}ಆದರೆ ಹಿಂದೆ ನಡೆದ ಹತ್ತನೆಯ ಶತಮಾನದಲ್ಲಿ, ಇಂತಹ ಪ್ರಚಂಡ ಬುದ್ಧಿ ಇದ್ದವರು ಇರಲೇ ಇಲ್ಲವೇ ? ಇದ್ದೇ ಇರಬೇಕು. ಆದರೆ ಭೌತಶಾಸ್ತ್ರದ ಪ್ರಗತಿಯು ಆ ಶತಮಾನದಲ್ಲಿ ಶೈಶವಾಸ್ಥೆಯಲ್ಲಿತ್ತು. ಆದಕಾರಣ ಅಂತಹ ಪ್ರಚಂಡನು ಇದ್ದಿದ್ದರೂ, ಅವನ ಚುರುಕು ಬುದ್ಧಿಯು ಅಮೋಘವಾಗಿ ವಿಕಸಿಸಲು ಸಾಧ್ಯವಾಗಲಿಲ್ಲ. ಆದರೆ ಈ ಶತಮಾನದ ವೇಳೆಗೆ ಭೌತಶಾಸ್ತ್ರದ ಜ್ಞಾನ ಭಂಡಾರವು ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದ್ದಿತು. ಐನ್‌ಸ್ಟೈನನ ಮನಸ್ಸು ವಿಕಸಿಸಲು ಅವಕಾಶವು ಬಹಳಷ್ಟು ಇತ್ತು. {{gap}}ಇಂದಿನವರೆವಿಗೂ ಪ್ರಪಂಚದಲ್ಲೆಲ್ಲಾ ಅತ್ಯಂತ ಮೇಧಾವಿಯಾಗಿದ್ದವನು, ಬಲು ಪ್ರಚಂಡನಾಗಿದ್ದವನು, ಎಂದರೆ ಲಿಯೋನಾಡೊ ಡ ವಿಂಚಿ. ಶಿಲ್ಪ ಕಲೆಯಲ್ಲಾಗಲೀ, ವರ್ಣಚಿತ್ರರಚನೆಯಲ್ಲಾಗಲೀ, ವಿಜ್ಞಾನದಲ್ಲಾಗಲೀ, ಆತ ಸಾಧಿಸಿದ ಔನ್ನತ್ಯವು, ಮಿಕ್ಕ ಯಾರಿಂದಲೂ ಆಗಿಲ್ಲ, ಎಂದು ಪ್ರಚಂಡರು ಎನಿಸಿಕೊಂಡ ಹಲವಾರು ಜನರು ನುಡಿದಿದ್ದಾರೆ. ಆದರೆ ಭೌತವಿಜ್ಞಾನದಲ್ಲಿ ಆತನಿಗೆ ತಿಳಿದುದಕ್ಕಿಂತ ಹೆಚ್ಚಾಗಿ, ಇಂದಿನ ಕಾಲೇಜುಗಳ ಭೌತ ವಿದ್ಯಾರ್ಥಿಗಳು ಕಲಿತುಕೊಂಡಿದ್ದಾರೆ. {{gap}}ಏಳನೆಯ ಶತಮಾನದಲ್ಲಿ ಆದಿಶಂಕರಾಚಾರ್ಯರು ಬರೆದು ಪ್ರಚಾರಕ್ಕೆ ತಂದ ಸಿದ್ಧಾಂತವು ಇಂದೂ ಪ್ರಪಂಚದ ಹಲವಾರು ಬುದ್ಧಿ ಜೀವಿಗಳ ಮನ್ನಣೆಯನ್ನು ಪಡೆದಿದೆ. ಆದರೆ ಅವರು ಬಾಳಿದ ಕಾಲದಲ್ಲಿ, ನಮ್ಮ ರಾಷ್ಟ್ರದಲ್ಲಿ, ಆತ್ಮಜ್ಞಾನದ ಅರಿವು ಬುದ್ಧಿಜೀವಿಗಳ ಏಕೈಕ ಗುರಿಯಾಗಿತ್ತು. ಆದರೆ ಆದಿಶಂಕರರು ಈಗ ಬದುಕಿದ್ದಿದ್ದರೆ, ರಸಾಯನ ಅಥವಾ ಭೌತಶಾಸ್ತ್ರದ ಅಧ್ಯಯನವನ್ನು ಮಾಡಿದ್ದಿದ್ದರೆ ನೋಬೆಲ್ ಪಾರಿತೋಷಕವು ಹಲವಾರುಬಾರಿ ನಮ್ಮ ದೇಶಕ್ಕೆ ದೊರೆಯುತ್ತಿತ್ತು. {{gap}}ಸಾರಾಂಶವೇನೆಂದರೆ ಪ್ರಚಂಡ ಬುದ್ಧಿ ಇದ್ದರೂ, ಅದು ವಿಕಸಿಸಿ ಫಲಪ್ರದವಾಗಬೇಕಾದರೆ, ಆ ಕಾಲದ ಜ್ಞಾನ ಭಂಡಾರವು ತಳಹದಿಯಾಗುತ್ತದೆ; ಅದನ್ನು ಅನ್ವಯಿಸಿಕೊಂಡು, ಅವರುಗಳು ನವ್ಯ ಸಿದ್ಧಾಂತಗಳನ್ನು ಕಟ್ಟಬೇಕು. ಇಂದಿಗೂ ಆಫ್ರಿಕಾದ ಹಿಂದುಳಿದ ಜನಾಂಗಗಳಲ್ಲಿ, ನ್ಯೂಟನ್‌, ಐನ್‌ಸ್ಟೈನ್‌ರಂತಹ ಪ್ರಚಂಡಮತಿಗಳಿರಬೇಕು. ಆದರೆ ಅವರ ಪ್ರಚಂಡ ಬುದ್ಧಿಯು, ಬಿಲ್ಲು ಬಾಣಗಳನ್ನು ನವೀನಗೊಳಿಸುವುದರಲ್ಲಿ ಮುಕ್ತಾಯಗೊಳ್ಳುತ್ತಿರಬಹುದು. ಆದರೆ ಮನಸ್ಸಿನಲ್ಲಿ ಆಲೋಚನಾ ಶಕ್ತಿಯು ಚುರುಕಾಗಿರಬೇಕಾದರೆ, ವಂಶಾನುಗತವಾಗಿ ನಡೆದುಬಂದ ಗುಣವು ಅಗತ್ಯ. ಅಷ್ಟೇ ಅಗತ್ಯವಾದುದು, ಆ ಕಾಲದ ಮಾನವನ ಜ್ಞಾನ<noinclude></noinclude> dgtecjdljvazoneytm3qhbrui1o6ram ಪುಟ:ಮನಮಂಥನ.pdf/೩೩೪ 104 62781 316967 314512 2026-05-04T14:10:36Z Shreelatha.Halemane 7642 /* Proofread */ 316967 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೩೧೬}}{{Right|ಮನಮಂಥನ}} ಭಂಡಾರ. ಮಾನವನ ಮಾನಸಿಕ ಆರೋಗ್ಯವನ್ನು ತಿಳಿದುಕೊಳ್ಳುವಾಗ, ಮನಸ್ಸಿನ ಈ ಗುಣವನ್ನು ಮರೆಯಬಾರದು. ಮನಸ್ಸಿನ ಅನಾರೋಗ್ಯಕ್ಕೂ, ಅದರ ಪರಿಹಾರ ಕ್ರಮಕ್ಕೂ, ಇಂತಹ ತಿಳಿವಳಿಕೆಯು ಅತ್ಯಗತ್ಯ. ಮನಸ್ಸಿನ ಕಾರ್ಯಕ್ರಮವನ್ನು ತಿಳಿಯುವಾಗ, ಮನುಷ್ಯನ ಹಲವಾರು ಸ್ವಾಭಾವಿಕವಾದ ಅವಸ್ಥೆಗಳನ್ನೂ ಗಮನಿಸಬೇಕು. ಬಾಲ್ಯ, ಕೌಮಾರ, ಯೌವನ ವಾರ್ಧಕ್ಯ ಎಂದು ನಾಲ್ಕು ಮುಖ್ಯವಾದ ಅವಸ್ಥೆಗಳನ್ನು ಮನುಷ್ಯನು ಸ್ವಾಭಾವಿಕವಾಗಿ,ಒಂದಾದ ಮೇಲೊಂದರಂತೆ ಅನುಭವಿಸಬೇಕು. ಆಕಸ್ಮಿಕಕ್ಕೆ ಗುರಿಯಾಗಿ ಸಾಯದೆ ಇದ್ದರೆ, ಮನಸ್ಸಿನ ಚಟುವಟಿಕೆಗಳು, ಈ ಅವಸ್ಥೆಗಳಿಗೆ ಅನ್ವಯವಾಗಿರುತ್ತವೆ.ಆದಕಾರಣ ಮನಸ್ಸನ್ನು ವಿಶ್ಲೇಷಿಸುವಾಗ, ಈ ವಿಂಗಡನೆಯನ್ನು ಬಳಸಿಕೊಳ್ಳುವುದು ಉಪಯುಕ್ತ.<noinclude></noinclude> s7lzuwf5mk7mgx05s2aq7gl00p2xotc 317003 316967 2026-05-04T14:28:15Z Shreesha Sharma 7840 /* Validated */ 317003 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೩೧೬}}{{Right|ಮನಮಂಥನ}} ಭಂಡಾರ. {{gap}}ಮಾನವನ ಮಾನಸಿಕ ಆರೋಗ್ಯವನ್ನು ತಿಳಿದುಕೊಳ್ಳುವಾಗ, ಮನಸ್ಸಿನ ಈ ಗುಣವನ್ನು ಮರೆಯಬಾರದು. ಮನಸ್ಸಿನ ಅನಾರೋಗ್ಯಕ್ಕೂ, ಅದರ ಪರಿಹಾರ ಕ್ರಮಕ್ಕೂ, ಇಂತಹ ತಿಳಿವಳಿಕೆಯು ಅತ್ಯಗತ್ಯ. {{gap}}ಮನಸ್ಸಿನ ಕಾರ್ಯಕ್ರಮವನ್ನು ತಿಳಿಯುವಾಗ, ಮನುಷ್ಯನ ಹಲವಾರು ಸ್ವಾಭಾವಿಕವಾದ ಅವಸ್ಥೆಗಳನ್ನೂ ಗಮನಿಸಬೇಕು. ಬಾಲ್ಯ, ಕೌಮಾರ, ಯೌವನ ವಾರ್ಧಕ್ಯ ಎಂದು ನಾಲ್ಕು ಮುಖ್ಯವಾದ ಅವಸ್ಥೆಗಳನ್ನು ಮನುಷ್ಯನು ಸ್ವಾಭಾವಿಕವಾಗಿ,ಒಂದಾದ ಮೇಲೊಂದರಂತೆ ಅನುಭವಿಸಬೇಕು. ಆಕಸ್ಮಿಕಕ್ಕೆ ಗುರಿಯಾಗಿ ಸಾಯದೆ ಇದ್ದರೆ, ಮನಸ್ಸಿನ ಚಟುವಟಿಕೆಗಳು, ಈ ಅವಸ್ಥೆಗಳಿಗೆ ಅನ್ವಯವಾಗಿರುತ್ತವೆ.ಆದಕಾರಣ ಮನಸ್ಸನ್ನು ವಿಶ್ಲೇಷಿಸುವಾಗ, ಈ ವಿಂಗಡನೆಯನ್ನು ಬಳಸಿಕೊಳ್ಳುವುದು ಉಪಯುಕ್ತ.<noinclude></noinclude> eh5f208z158uoe8azuhllzzu203q3op ಪುಟ:ಮನಮಂಥನ.pdf/೩೩೬ 104 62783 317005 314515 2026-05-04T14:29:36Z Shreesha Sharma 7840 /* Proofread */ 317005 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೩೧೮}}{{Right|ಮನಮಂಥನ}} ಹೊಟ್ಟೆ ತುಂಬಿತು, ಮಗುವು ಮಂದಸ್ಮಿತ ಬಾಲಕೃಷ್ಣ, ಅದರ ಮನಸ್ಸು ಪ್ರತಿಕ್ರಿಯೆಯನ್ನು ಹೂಡುವುದು, ಎರಡೇ ಮಾರ್ಗಗಳಲ್ಲಿ. ಒಂದು ಅಳು ಮತ್ತು ರಂಪ. ಇನ್ನೊಂದು ನಗು ಮತ್ತು ಬಾಲಲೀಲೆ. ಇವೆರಡನ್ನು ಬಿಟ್ಟು ಸ್ವಯಂಪ್ರೇರಿತವಾಗಿ ಮತ್ತೇನನ್ನೂ ಮಾಡಲೂ ತಿಳಿಯದು. ಎಳೆಯ ಮಗುವಿನ ಮನಸ್ಸು ಹೇಗಿರುತ್ತದೆ ಎಂಬುದನ್ನು ಅದರ ನಡವಳಿಕೆಯಿಂದ ನಾವು ಊಹಿಸಬೇಕೇ ವಿನಹಾ, ಯಾವ ಮಗುವೂ ತಾನೇ ಹೇಳುವುದಿಲ್ಲ. ಹಲವಾರು ಎಳೆಯ ಮಕ್ಕಳ ನಡವಳಿಕೆಯನ್ನು ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡಿ, ಅಭ್ಯಾಸವನ್ನು ಅಥವಾ ಅಧ್ಯಯನವನ್ನು ಮಾಡಿ ; ಹಲ ಕೆಲವು ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಿ, ಅನಂತರ ಮನೋವಿಜ್ಞಾನಿಗಳು ಊಹಿಸಿ ನಿರ್ಧರಿಸಬೇಕು. ಊಹೆಯಿಂದ ನಿರ್ಧರಿಸುವಾಗ, ಇದೇ ಸತ್ಯವಾದುದು ಎಂದು ಖಡಾಖಂಡಿತವಾಗಿ ಹೇಳಬರುವುದಿಲ್ಲ. ಆದರೂ ಬಹಳ ಪಾಲು ಸರಿಯಾದುದು ಎಂದು ಒಪ್ಪಿಕೊಳ್ಳಬೇಕು. ಈ ಕುಂದುಗಳನ್ನು ಗಮನದಲ್ಲಿಟ್ಟುಕೊಂಡು ಎಳೆಯ ಮಗುವಿನ ಮನಸ್ಸು ಹೇಗಿರುತ್ತದೆ ? ಯಾವ ರೀತಿಯಲ್ಲಿ ಅಭಿವೃದ್ಧಿಯಾಗುತ್ತದೆ ಎಂಬುದನ್ನು ತಿಳಿಯೋಣ. ಎಳೆಯ ಮಗುವಿನಲ್ಲಿ ಅಳು ಮತ್ತು ನಗು ಇವೆರಡನ್ನು ಮಾತ್ರ ಕಾಣುತ್ತೇವೆ. ಎಳೆಯ ಮಗು ಎಂದಾಗ ಸುಮಾರು ಆರೇಳು ತಿಂಗಳೊಳಗಿನ ಮಗು ಎಂದು ಸ್ಕೂಲವಾಗಿ ಹೇಳಬಹುದು. ಅಳುವು, ಮಗುವು ಹುಟ್ಟುವಾಗ ಪ್ರಾರಂಭವಾಗುತ್ತದೆ. ತಾಯ ಗರ್ಭದಲ್ಲಿದ್ದಾಗ ಮಗುವಿನ ಶ್ವಾಸಕೋಶಗಳು ಯಾವ ಉಸಿರಾಟವನ್ನೂ ಮಾಡಬೇಕಾಗಿಲ್ಲ. ಜನನವಾದ ಮೇಲೆ ಉಸಿರಾಡಬೇಕು. ಸುಪ್ತವಾಗಿದ್ದ ಮೊಗ್ಗಿನಂತೆ ಮುದುಡಿಕೊಂಡಿದ್ದ ಶ್ವಾಸಕೋಶಗಳನ್ನು ಅರಳಿಸಬೇಕು. ಅನಂತರ ಬದುಕಿಗೆ ಅತ್ಯಗತ್ಯವಾದ ಉಸಿರಾಡುವಿಕೆಯನ್ನು ನಡೆಸಲು ಸಾಧ್ಯ. ಹುಟ್ಟಿದ ಕೂಡಲೇ ಮಗುವು ಅಳುವುದು, ಶ್ವಾಸಕೋಶಗಳನ್ನು ಅರಳಿಸುವ, ಪ್ರಯತ್ನ. ಆನಂತರ ಆಳುವಿನ ಮೂಲಕವೇ ಮಗುವು, ತನ್ನ ಹಸಿವನ್ನಾಗಲೀ, ಇತರ ಬಾಧೆಗಳನ್ನಾಗಲೀ, ತಾಯಂದಿರಿಗೆ ತಿಳಿಸುವ ಭಾಷೆಯಾಗಿರುತ್ತದೆ. ಸುಮಾರು ಮೂರು ತಿಂಗಳು ಬೆಳೆದ ಬಳಿಕ ಎಳೆಯ ಮಗುವು ನಗಲಾರಂಭಿಸುತ್ತದೆ. ಮನ ಮೋಹಕವಾದ ನಗೆ, ಬಂಜೆಯನ್ನು ಕೂಡ ಬರಸೆಳೆವ ಮಾದಕ ನಗೆ ಅಳು ಮತ್ತು ನಗು, ಎರಡೂ ಭಾವನಾ ಪ್ರದರ್ಶನಗಳು. ಇವೆರಡರ ಕೇಂದ್ರಗಳು ಮೆದುಳಿನ ಬುಡದಲ್ಲಿ ಇರುತ್ತವೆ. ದೊಡ್ಡವರಲ್ಲಿಯೂ ಇದೇ ವ್ಯವಸ್ಥೆ ಇರುತ್ತದೆ. ಆದರೆ ಮೆದುಳು ಅಭಿವೃದ್ಧಿ ಹೊಂದಿದ ದೊಡ್ಡವರಲ್ಲಿ ಬಹಳಷ್ಟು<noinclude></noinclude> si4r1zghvbigzarenz70aksat3myjtm 317027 317005 2026-05-04T14:47:21Z Shreelatha.Halemane 7642 /* Validated */ 317027 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೩೧೮}}{{Right|ಮನಮಂಥನ}} ಹೊಟ್ಟೆ ತುಂಬಿತು, ಮಗುವು ಮಂದಸ್ಮಿತ ಬಾಲಕೃಷ್ಣ, ಅದರ ಮನಸ್ಸು ಪ್ರತಿಕ್ರಿಯೆಯನ್ನು ಹೂಡುವುದು, ಎರಡೇ ಮಾರ್ಗಗಳಲ್ಲಿ. ಒಂದು ಅಳು ಮತ್ತು ರಂಪ. ಇನ್ನೊಂದು ನಗು ಮತ್ತು ಬಾಲಲೀಲೆ. ಇವೆರಡನ್ನು ಬಿಟ್ಟು ಸ್ವಯಂಪ್ರೇರಿತವಾಗಿ ಮತ್ತೇನನ್ನೂ ಮಾಡಲೂ ತಿಳಿಯದು. {{gap}}ಎಳೆಯ ಮಗುವಿನ ಮನಸ್ಸು ಹೇಗಿರುತ್ತದೆ ಎಂಬುದನ್ನು ಅದರ ನಡವಳಿಕೆಯಿಂದ ನಾವು ಊಹಿಸಬೇಕೇ ವಿನಹಾ, ಯಾವ ಮಗುವೂ ತಾನೇ ಹೇಳುವುದಿಲ್ಲ. ಹಲವಾರು ಎಳೆಯ ಮಕ್ಕಳ ನಡವಳಿಕೆಯನ್ನು ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡಿ, ಅಭ್ಯಾಸವನ್ನು ಅಥವಾ ಅಧ್ಯಯನವನ್ನು ಮಾಡಿ ; ಹಲ ಕೆಲವು ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಿ, ಅನಂತರ ಮನೋವಿಜ್ಞಾನಿಗಳು ಊಹಿಸಿ ನಿರ್ಧರಿಸಬೇಕು. ಊಹೆಯಿಂದ ನಿರ್ಧರಿಸುವಾಗ, ಇದೇ ಸತ್ಯವಾದುದು ಎಂದು ಖಡಾಖಂಡಿತವಾಗಿ ಹೇಳಬರುವುದಿಲ್ಲ. ಆದರೂ ಬಹಳ ಪಾಲು ಸರಿಯಾದುದು ಎಂದು ಒಪ್ಪಿಕೊಳ್ಳಬೇಕು. ಈ ಕುಂದುಗಳನ್ನು ಗಮನದಲ್ಲಿಟ್ಟುಕೊಂಡು ಎಳೆಯ ಮಗುವಿನ ಮನಸ್ಸು ಹೇಗಿರುತ್ತದೆ ? ಯಾವ ರೀತಿಯಲ್ಲಿ ಅಭಿವೃದ್ಧಿಯಾಗುತ್ತದೆ ಎಂಬುದನ್ನು ತಿಳಿಯೋಣ. {{gap}}ಎಳೆಯ ಮಗುವಿನಲ್ಲಿ ಅಳು ಮತ್ತು ನಗು ಇವೆರಡನ್ನು ಮಾತ್ರ ಕಾಣುತ್ತೇವೆ. ಎಳೆಯ ಮಗು ಎಂದಾಗ ಸುಮಾರು ಆರೇಳು ತಿಂಗಳೊಳಗಿನ ಮಗು ಎಂದು ಸ್ಕೂಲವಾಗಿ ಹೇಳಬಹುದು. ಅಳುವು, ಮಗುವು ಹುಟ್ಟುವಾಗ ಪ್ರಾರಂಭವಾಗುತ್ತದೆ. ತಾಯ ಗರ್ಭದಲ್ಲಿದ್ದಾಗ ಮಗುವಿನ ಶ್ವಾಸಕೋಶಗಳು ಯಾವ ಉಸಿರಾಟವನ್ನೂ ಮಾಡಬೇಕಾಗಿಲ್ಲ. ಜನನವಾದ ಮೇಲೆ ಉಸಿರಾಡಬೇಕು. ಸುಪ್ತವಾಗಿದ್ದ ಮೊಗ್ಗಿನಂತೆ ಮುದುಡಿಕೊಂಡಿದ್ದ ಶ್ವಾಸಕೋಶಗಳನ್ನು ಅರಳಿಸಬೇಕು. ಅನಂತರ ಬದುಕಿಗೆ ಅತ್ಯಗತ್ಯವಾದ ಉಸಿರಾಡುವಿಕೆಯನ್ನು ನಡೆಸಲು ಸಾಧ್ಯ. ಹುಟ್ಟಿದ ಕೂಡಲೇ ಮಗುವು ಅಳುವುದು, ಶ್ವಾಸಕೋಶಗಳನ್ನು ಅರಳಿಸುವ, ಪ್ರಯತ್ನ. ಆನಂತರ ಆಳುವಿನ ಮೂಲಕವೇ ಮಗುವು, ತನ್ನ ಹಸಿವನ್ನಾಗಲೀ, ಇತರ ಬಾಧೆಗಳನ್ನಾಗಲೀ, ತಾಯಂದಿರಿಗೆ ತಿಳಿಸುವ ಭಾಷೆಯಾಗಿರುತ್ತದೆ. ಸುಮಾರು ಮೂರು ತಿಂಗಳು ಬೆಳೆದ ಬಳಿಕ ಎಳೆಯ ಮಗುವು ನಗಲಾರಂಭಿಸುತ್ತದೆ. ಮನ ಮೋಹಕವಾದ ನಗೆ, ಬಂಜೆಯನ್ನು ಕೂಡ ಬರಸೆಳೆವ ಮಾದಕ ನಗೆ {{gap}}ಅಳು ಮತ್ತು ನಗು, ಎರಡೂ ಭಾವನಾ ಪ್ರದರ್ಶನಗಳು. ಇವೆರಡರ ಕೇಂದ್ರಗಳು ಮೆದುಳಿನ ಬುಡದಲ್ಲಿ ಇರುತ್ತವೆ. ದೊಡ್ಡವರಲ್ಲಿಯೂ ಇದೇ ವ್ಯವಸ್ಥೆ ಇರುತ್ತದೆ. ಆದರೆ ಮೆದುಳು ಅಭಿವೃದ್ಧಿ ಹೊಂದಿದ ದೊಡ್ಡವರಲ್ಲಿ ಬಹಳಷ್ಟು<noinclude></noinclude> dii9308gf4ae50ib8yc0bvxpupe1hs6 ಪುಟ:ಮನಮಂಥನ.pdf/೩೩೭ 104 62784 317007 314516 2026-05-04T14:30:26Z Shreesha Sharma 7840 /* Proofread */ 317007 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೧೯}} ವ್ಯತ್ಯಾಸವಿರುತ್ತದೆ, ಭಾವನಾಪ್ರದರ್ಶನದಲ್ಲಿ, ಅದನ್ನು ವಿವರವಾಗಿ ಮುಂದೆ ತಿಳಿಯೋಣ. ಏಳೆಂಟು ತಿಂಗಳುಗಳಾದ ಮೇಲೆ ಮಗುವು ತೆವಳಲು ಹಾಗೂ ಅಂಬೆಗಾಲಿಟ್ಟು ನಡೆಯಲು ಕಲಿಯುತ್ತದೆ. ಈ ತನಕ ಒಂದು ರೀತಿಯಲ್ಲಿ 'ಸ್ಥಾವರ'ವಾಗಿದ್ದ ಮಗುವು ಈಗ 'ಜಂಗಮ' ವಾಗತೊಡಗುತ್ತದೆ. ಚಲಿಸಲು, ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುವುದನ್ನು ಕಲಿಯುತ್ತದೆ. ಈ ಕಲಿಕೆಗೆ ಅನುಗುಣವಾಗಿ ಮಗುವಿನ ಮೆದುಳು ಬೆಳೆಯತೊಡಗುತ್ತದೆ. ಅಡಿಗೆಯ ಮನೆಯಲ್ಲಿ ಒಂದು ಕಡೆ ದಟ್ಟದ ಮೇಲೆ ಮಲಗಿ ನಿದ್ರಿಸುತ್ತಿದ್ದ ಮಗುವಿಗೆ ಎಚ್ಚರವಾಗುತ್ತದೆ. ಕಣ್ಣು ಬಿಟ್ಟು ನೋಡುತ್ತದೆ. ತಾಯಿಯು ಒಲೆಯ ಮುಂದೆ ಕುಳಿತಿರುವುದನ್ನು ಕಾಣುತ್ತದೆ. ಆಕೆಯ ಬಳಿಗೆ ತೆವಳಿಕೊಂಡು ಹೋಗುತ್ತದೆ. ತಾಯಿ ಎನ್ನುವ ಕಲ್ಪನೆಯು ಮಗುವಿಗೆ ಇರದಿದ್ದರೂ, ಪರಿಚಿತ ಮುಖ, ಹಾಲೂಡಿಸುವ ವ್ಯಕ್ತಿ ಎಂಬುದು, ಸ್ಮರಣೆಯಲ್ಲಿ ಅಚ್ಚಾಗಿರುತ್ತದೆ. ಎಂದರೆ ಮಗುವಿನ ಮೆದುಳಿನಲ್ಲಿ ಸಮರಣಾ ಕೇಂದ್ರಗಳು ಪ್ರಚೋದಿತವಾಗಿವೆ ; ಕೆಲಸ ಮಾಡಲು ಆರಂಭಿಸಿವೆ ಎಂದು ನಿರ್ಧರಿಸಬಹುದು. ಸರ್ಪದಂತೆ ತೆವಳುವುದನ್ನು ನೋಡಿದಾಗ, ಚತುಷ್ಪಾದಿಯಂತೆ ಅಂಬೆಗಾಲಿಟ್ಟು ಮುಂದುವರೆಯುವಾಗ, ಈ ತೆರನ ಚಲನವನ್ನು ಆಗಮಾಡಿಕೊಡುವ ಮೆದುಳಿನ ಕಾರ್ಟೆಕ್ಸ್ ವಿಭಾಗವು, ವೃದ್ಧಿಯಾಗುತ್ತಿದೆ ಎನ್ನುವುದು ಸ್ಪಷ್ಟ ಅಂತೆಯೇ ಪರಿಚಿತವಾದ ತಾಯಿಯ ಬಳಿಗೆ ಹೋಗಬೇಕು ಎಂದು ಆಲೋಚನೆಯೂ ಮಗುವಿನ ಮನಸ್ಸಿನಲ್ಲಿ ನಡೆದಿದೆ, ಎಂಬುದೂ ಸ್ಪಷ್ಟವಾಗಿದೆ. ಆದರೆ ಹುಟ್ಟಿದ ಒಂದು ವರ್ಷದಲ್ಲಿ ಮನಸ್ಸಿನ ಮೂರೂ ಪ್ರಮುಖವಾದ ಚಟುವಟಿಕೆಗಳನ್ನು ಗುರುತಿಸಬಹುದು. ಎಳೆಯ ಮಗುವು ಬೆಳೆಯುತ್ತಾ ಬೆಳೆಯುತ್ತಾ, ಹನ್ನೆರಡು ಹದಿನಾಲ್ಕು ತಿಂಗಳ ವಯಸ್ಸಿನಲ್ಲಿ ಎರಡು ಕಾಲುಗಳ ಮೇಲೆ ನಿಂತು, ತಾರಾಡುತ್ತ ತೂರಾಡುತ್ತ ನಡೆಯಲಾರಂಭಿಸುತ್ತದೆ. ಇನ್ನು ಕೆಲವು ತಿಂಗಳುಗಳಲ್ಲಿ ಸಾಕಷ್ಟು ಲಕ್ಷಣವಾಗಿ ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಾಕುತ್ತ, ಅಡ್ಡ ಕಂಡ ಹೊಸಿಲನ್ನು ದಾಟುತ್ತದೆ. ಅಂದರೆ ಮೆದುಳಿನ ಸೆರಿಬೆಲ್ಲಂ ಭಾಗವೂ ಸುಸೂತ್ರವಾಗಿ ಅಭಿವೃದ್ಧಿಯಾಗಿದೆ, ಆಗುತ್ತಿದೆ ಎಂದು ನಿರ್ಧರಿಸಬಹುದು. ಈ ವೇಳೆಗಾಗಲೇ, ಅಮ್ಮ ಅಪ್ಪ ಎಂಬ ಮಾತುಗಳನ್ನಾಡಲೂ ತೊಡಗುತ್ತದೆ. ಮನೆಯಲ್ಲಿರುವ ಹಿರಿಯರು ಮಾತನಾಡುವುದನ್ನು ಕಂಡು, ಅನುಕರಿಸತೊಡಗುತ್ತದೆ.<noinclude></noinclude> 82o0lixrkh35bnpecu0ctu8o4k83x32 317028 317007 2026-05-04T14:47:50Z Shreelatha.Halemane 7642 /* Validated */ 317028 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೧೯}} ವ್ಯತ್ಯಾಸವಿರುತ್ತದೆ, ಭಾವನಾಪ್ರದರ್ಶನದಲ್ಲಿ, ಅದನ್ನು ವಿವರವಾಗಿ ಮುಂದೆ ತಿಳಿಯೋಣ. {{gap}}ಏಳೆಂಟು ತಿಂಗಳುಗಳಾದ ಮೇಲೆ ಮಗುವು ತೆವಳಲು ಹಾಗೂ ಅಂಬೆಗಾಲಿಟ್ಟು ನಡೆಯಲು ಕಲಿಯುತ್ತದೆ. ಈ ತನಕ ಒಂದು ರೀತಿಯಲ್ಲಿ 'ಸ್ಥಾವರ'ವಾಗಿದ್ದ ಮಗುವು ಈಗ 'ಜಂಗಮ' ವಾಗತೊಡಗುತ್ತದೆ. ಚಲಿಸಲು, ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುವುದನ್ನು ಕಲಿಯುತ್ತದೆ. ಈ ಕಲಿಕೆಗೆ ಅನುಗುಣವಾಗಿ ಮಗುವಿನ ಮೆದುಳು ಬೆಳೆಯತೊಡಗುತ್ತದೆ. ಅಡಿಗೆಯ ಮನೆಯಲ್ಲಿ ಒಂದು ಕಡೆ ದಟ್ಟದ ಮೇಲೆ ಮಲಗಿ ನಿದ್ರಿಸುತ್ತಿದ್ದ ಮಗುವಿಗೆ ಎಚ್ಚರವಾಗುತ್ತದೆ. ಕಣ್ಣು ಬಿಟ್ಟು ನೋಡುತ್ತದೆ. ತಾಯಿಯು ಒಲೆಯ ಮುಂದೆ ಕುಳಿತಿರುವುದನ್ನು ಕಾಣುತ್ತದೆ. ಆಕೆಯ ಬಳಿಗೆ ತೆವಳಿಕೊಂಡು ಹೋಗುತ್ತದೆ. ತಾಯಿ ಎನ್ನುವ ಕಲ್ಪನೆಯು ಮಗುವಿಗೆ ಇರದಿದ್ದರೂ, ಪರಿಚಿತ ಮುಖ, ಹಾಲೂಡಿಸುವ ವ್ಯಕ್ತಿ ಎಂಬುದು, ಸ್ಮರಣೆಯಲ್ಲಿ ಅಚ್ಚಾಗಿರುತ್ತದೆ. ಎಂದರೆ ಮಗುವಿನ ಮೆದುಳಿನಲ್ಲಿ ಸಮರಣಾ ಕೇಂದ್ರಗಳು ಪ್ರಚೋದಿತವಾಗಿವೆ ; ಕೆಲಸ ಮಾಡಲು ಆರಂಭಿಸಿವೆ ಎಂದು ನಿರ್ಧರಿಸಬಹುದು. {{gap}}ಸರ್ಪದಂತೆ ತೆವಳುವುದನ್ನು ನೋಡಿದಾಗ, ಚತುಷ್ಪಾದಿಯಂತೆ ಅಂಬೆಗಾಲಿಟ್ಟು ಮುಂದುವರೆಯುವಾಗ, ಈ ತೆರನ ಚಲನವನ್ನು ಆಗಮಾಡಿಕೊಡುವ ಮೆದುಳಿನ ಕಾರ್ಟೆಕ್ಸ್ ವಿಭಾಗವು, ವೃದ್ಧಿಯಾಗುತ್ತಿದೆ ಎನ್ನುವುದು ಸ್ಪಷ್ಟ ಅಂತೆಯೇ ಪರಿಚಿತವಾದ ತಾಯಿಯ ಬಳಿಗೆ ಹೋಗಬೇಕು ಎಂದು ಆಲೋಚನೆಯೂ ಮಗುವಿನ ಮನಸ್ಸಿನಲ್ಲಿ ನಡೆದಿದೆ, ಎಂಬುದೂ ಸ್ಪಷ್ಟವಾಗಿದೆ. ಆದರೆ ಹುಟ್ಟಿದ ಒಂದು ವರ್ಷದಲ್ಲಿ ಮನಸ್ಸಿನ ಮೂರೂ ಪ್ರಮುಖವಾದ ಚಟುವಟಿಕೆಗಳನ್ನು ಗುರುತಿಸಬಹುದು. {{gap}}ಎಳೆಯ ಮಗುವು ಬೆಳೆಯುತ್ತಾ ಬೆಳೆಯುತ್ತಾ, ಹನ್ನೆರಡು ಹದಿನಾಲ್ಕು ತಿಂಗಳ ವಯಸ್ಸಿನಲ್ಲಿ ಎರಡು ಕಾಲುಗಳ ಮೇಲೆ ನಿಂತು, ತಾರಾಡುತ್ತ ತೂರಾಡುತ್ತ ನಡೆಯಲಾರಂಭಿಸುತ್ತದೆ. ಇನ್ನು ಕೆಲವು ತಿಂಗಳುಗಳಲ್ಲಿ ಸಾಕಷ್ಟು ಲಕ್ಷಣವಾಗಿ ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಾಕುತ್ತ, ಅಡ್ಡ ಕಂಡ ಹೊಸಿಲನ್ನು ದಾಟುತ್ತದೆ. ಅಂದರೆ ಮೆದುಳಿನ ಸೆರಿಬೆಲ್ಲಂ ಭಾಗವೂ ಸುಸೂತ್ರವಾಗಿ ಅಭಿವೃದ್ಧಿಯಾಗಿದೆ, ಆಗುತ್ತಿದೆ ಎಂದು ನಿರ್ಧರಿಸಬಹುದು. {{gap}}ಈ ವೇಳೆಗಾಗಲೇ, ಅಮ್ಮ ಅಪ್ಪ ಎಂಬ ಮಾತುಗಳನ್ನಾಡಲೂ ತೊಡಗುತ್ತದೆ. ಮನೆಯಲ್ಲಿರುವ ಹಿರಿಯರು ಮಾತನಾಡುವುದನ್ನು ಕಂಡು, ಅನುಕರಿಸತೊಡಗುತ್ತದೆ.<noinclude></noinclude> omg2xc6p1yj453crc22vfdq764ryxqh ಪುಟ:ಮನಮಂಥನ.pdf/೩೩೮ 104 62785 317009 314518 2026-05-04T14:31:17Z Shreesha Sharma 7840 /* Proofread */ 317009 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೩೨೦}}{{Right|ಮನಮಂಥನ}} ಮೊದಮೊದಲು ಮಾತುಗಳ ಅನುಕರಣೆಯು ಪುರಾತನ ಭಾಷೆಯಂತಿರುತ್ತದೆ. ಬೆಳೆಯುತ್ತಾ ಹೋದಂತೆಲ್ಲಾ ಪುರಾತನ ಭಾಷೆಯು ನೂತನ ಭಾಷೆಯಾಗುತ್ತದೆ. ಅಮ್ಮ ಅಪ್ಪ, ಇವುಗಳು ಮಮ್ಮಿ ಡ್ಯಾಡಿಗಳಾಗತೊಡಗುತ್ತವೆ. ಎಳೆಯ ಮಗುವಾಗಿದ್ದಾಗ ತಾಯಿಯು 'ಆ ಅನ್ನು' ಎಂದು ಹೇಳಿ ಔಷಧಿಯನ್ನು ನೀರಿದಲ್ಲಿ ಕದರಿ ಕುಡಿಸುತ್ತಾಳೆ, ಅಗತ್ಯ ಬಿದ್ದಾಗ, ಮಗುವಿನ ಮನಸ್ಸಿನಲ್ಲಿ ಕೆಲಕಾಲ ಕುಡಿಯುವುದೆಲ್ಲವೂ 'ಆನು' ಎಂದು ಸ್ಥಿರವಾಗುತ್ತದೆ. ಪುರಾತನ ಭಾಷೆಯ ರೀತಿ ಇದು. ಆನಂತರ ನೀರನ್ನು ಕುಡಿಯಬೇಕಾದಾಗ ಮಗುವು 'ಆನು, ಅನು ಎನ್ನುತ್ತದೆ. ನೀರನ್ನು ನೀಡಿದರೆ ನಗಲು ಆರಂಭಿಸುತ್ತದೆ. 'ಆ ಅನ್ನು' ಎನ್ನುವುದು ಮಗುವಿನ ಆ ವಯಸ್ಸಿನಲ್ಲಿ 'ಆನು' ಆಗಿರುತ್ತದೆ. ಕುಡಿಯುವ ಪದಾರ್ಥ ಎಂಬ ಅರ್ಥ, ಅದಕ್ಕೆ. ಇದೇ ರೀತಿಯಲ್ಲಿ ಹಿರಿಯರನ್ನು ಅನುಕರಣೆ ಮಾಡುತ್ತ ತನ್ನ ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳುತ್ತದೆ. ಹಾಗೂ ಶಬ್ದ ಸಂಪತ್ತನ್ನು ಹೆಚ್ಚು ಮಾಡಿಕೊಳ್ಳುತ್ತದೆ. ಮೂರನೆಯ ವರ್ಷದಿಂದ ಆರನೆಯ ವರ್ಷದವರೆಗೆ, ಕೇಳಿಸಿದುದನ್ನು ಆಡಲು ಕಲಿಯಲು ಮುಖ್ಯವಾದ ವಯಸ್ಸು ಕೇಳಿಸಿದುದನ್ನು ಅರ್ಥಮಾಡಿಕೊಂಡು ಸ್ಮರಣೆಯಲ್ಲಿಟ್ಟುಕೊಳ್ಳುವುದು ; ಮತ್ತು ಅದರಂತೆಯೇ ಮಾತನಾಡುವುದು, ಈ ಕೆಲಸಗಳಿಗೆ ಮೆದುಳಿನ ಒಂದು ಭಾಗವು ಮೀಸಲಾಗಿರುತ್ತದೆ. Speech Brain ಎಂದು ಅನ್ವರ್ಥವಾಗಿ ಈ ಭಾಗವನ್ನು ಕರೆಯುತ್ತಾರೆ. ಕಂಡುದನ್ನು ತೋಚಿದಂತೆ ಬರೆಯ ತೊಡಗುವುದೂ ಮೆದುಳಿನ ಈ ಭಾಗದಿಂದ ನಿರ್ವಹಿಸಲ್ಪಡುತ್ತದೆ. ಮೂರು ಅಥವಾ ನಾಲ್ಕು ವರ್ಷ ವಯಸ್ಸಿನ ಮಕ್ಕಳು ಚಿತ್ರ ಬರೆಯುವುದನ್ನು ನೋಡಿ ! ಮರಗಳ ಚಿತ್ರ ಮನುಷ್ಯರ ಕಡ್ಡಿ ಚಿತ್ರ ಹಕ್ಕಿಯ ಚಿತ್ರ, ಇತ್ಯಾದಿಗಳು ಹಿರಿಯರ ಕಣ್ಣಿಗೆ ನಗುವನ್ನು ಮೂಡಿಸಿದರೂ, ಬರೆದ ಮಕ್ಕಳ ಕಣ್ಣುಗಳಿಗೆ ಬಲು ಚೆಲುವಾಗಿರುತ್ತವೆ. ಮಾನಸಿಕ ರೋಗಗಳು ತಗಲಿರುವ ಕೆಲವರು ಮಕ್ಕಳಂತೆಯೇ ಚಿತ್ರಗಳನ್ನು ಬರೆಯುತ್ತಾರೆ ; ಪ್ರಯೋಗಾ ಪರೀಕ್ಷೆಗಳನ್ನು ಮಾಡಿದಾಗ, ಬರೆದ ಚಿತ್ರಗಳ ಸ್ವರೂಪವನ್ನು ನೋಡಿ, ಮಾನಸಿಕ ಬೇನೆಯು ಯಾವ ತೆರನಾದುದು ಎಂಬುದನ್ನು ಊಹಿಸಬಹುದು. ಆರು ವರ್ಷದ ವಯಸ್ಸು ಮುಗಿಯುವ ವೇಳೆಗೆ, ಮಗುವಿನ ಮೆದುಳಿನಲ್ಲಿ ಈ ಭಾಗವು ಸಂಪೂರ್ಣವಾಗಿ ವೃದ್ಧಿಯಾಗಿರುತ್ತದೆ. ಅಂದರೆ ಮೆದುಳಿನ ಆ ಭಾಗವು ಸುಸೂತ್ರವಾಗಿ, ಒಂದಕ್ಕೊಂದನ್ನು ಅನ್ವಯಿಸಿಕೊಂಡು<noinclude></noinclude> 1bp2d0s3lovjeven5i98xg6hqnxhbpu 317029 317009 2026-05-04T14:48:24Z Shreelatha.Halemane 7642 /* Validated */ 317029 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೩೨೦}}{{Right|ಮನಮಂಥನ}} ಮೊದಮೊದಲು ಮಾತುಗಳ ಅನುಕರಣೆಯು ಪುರಾತನ ಭಾಷೆಯಂತಿರುತ್ತದೆ. ಬೆಳೆಯುತ್ತಾ ಹೋದಂತೆಲ್ಲಾ ಪುರಾತನ ಭಾಷೆಯು ನೂತನ ಭಾಷೆಯಾಗುತ್ತದೆ. {{gap}}ಅಮ್ಮ ಅಪ್ಪ, ಇವುಗಳು ಮಮ್ಮಿ ಡ್ಯಾಡಿಗಳಾಗತೊಡಗುತ್ತವೆ. ಎಳೆಯ ಮಗುವಾಗಿದ್ದಾಗ ತಾಯಿಯು 'ಆ ಅನ್ನು' ಎಂದು ಹೇಳಿ ಔಷಧಿಯನ್ನು ನೀರಿದಲ್ಲಿ ಕದರಿ ಕುಡಿಸುತ್ತಾಳೆ, ಅಗತ್ಯ ಬಿದ್ದಾಗ, ಮಗುವಿನ ಮನಸ್ಸಿನಲ್ಲಿ ಕೆಲಕಾಲ ಕುಡಿಯುವುದೆಲ್ಲವೂ 'ಆನು' ಎಂದು ಸ್ಥಿರವಾಗುತ್ತದೆ. ಪುರಾತನ ಭಾಷೆಯ ರೀತಿ ಇದು. ಆನಂತರ ನೀರನ್ನು ಕುಡಿಯಬೇಕಾದಾಗ ಮಗುವು 'ಆನು, ಅನು ಎನ್ನುತ್ತದೆ. ನೀರನ್ನು ನೀಡಿದರೆ ನಗಲು ಆರಂಭಿಸುತ್ತದೆ. 'ಆ ಅನ್ನು' ಎನ್ನುವುದು ಮಗುವಿನ ಆ ವಯಸ್ಸಿನಲ್ಲಿ 'ಆನು' ಆಗಿರುತ್ತದೆ. ಕುಡಿಯುವ ಪದಾರ್ಥ ಎಂಬ ಅರ್ಥ, ಅದಕ್ಕೆ. ಇದೇ ರೀತಿಯಲ್ಲಿ ಹಿರಿಯರನ್ನು ಅನುಕರಣೆ ಮಾಡುತ್ತ ತನ್ನ ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳುತ್ತದೆ. ಹಾಗೂ ಶಬ್ದ ಸಂಪತ್ತನ್ನು ಹೆಚ್ಚು ಮಾಡಿಕೊಳ್ಳುತ್ತದೆ. {{gap}}ಮೂರನೆಯ ವರ್ಷದಿಂದ ಆರನೆಯ ವರ್ಷದವರೆಗೆ, ಕೇಳಿಸಿದುದನ್ನು ಆಡಲು ಕಲಿಯಲು ಮುಖ್ಯವಾದ ವಯಸ್ಸು ಕೇಳಿಸಿದುದನ್ನು ಅರ್ಥಮಾಡಿಕೊಂಡು ಸ್ಮರಣೆಯಲ್ಲಿಟ್ಟುಕೊಳ್ಳುವುದು ; ಮತ್ತು ಅದರಂತೆಯೇ ಮಾತನಾಡುವುದು, ಈ ಕೆಲಸಗಳಿಗೆ ಮೆದುಳಿನ ಒಂದು ಭಾಗವು ಮೀಸಲಾಗಿರುತ್ತದೆ. Speech Brain ಎಂದು ಅನ್ವರ್ಥವಾಗಿ ಈ ಭಾಗವನ್ನು ಕರೆಯುತ್ತಾರೆ. ಕಂಡುದನ್ನು ತೋಚಿದಂತೆ ಬರೆಯ ತೊಡಗುವುದೂ ಮೆದುಳಿನ ಈ ಭಾಗದಿಂದ ನಿರ್ವಹಿಸಲ್ಪಡುತ್ತದೆ. {{gap}}ಮೂರು ಅಥವಾ ನಾಲ್ಕು ವರ್ಷ ವಯಸ್ಸಿನ ಮಕ್ಕಳು ಚಿತ್ರ ಬರೆಯುವುದನ್ನು ನೋಡಿ ! ಮರಗಳ ಚಿತ್ರ ಮನುಷ್ಯರ ಕಡ್ಡಿ ಚಿತ್ರ ಹಕ್ಕಿಯ ಚಿತ್ರ, ಇತ್ಯಾದಿಗಳು ಹಿರಿಯರ ಕಣ್ಣಿಗೆ ನಗುವನ್ನು ಮೂಡಿಸಿದರೂ, ಬರೆದ ಮಕ್ಕಳ ಕಣ್ಣುಗಳಿಗೆ ಬಲು ಚೆಲುವಾಗಿರುತ್ತವೆ. {{gap}}ಮಾನಸಿಕ ರೋಗಗಳು ತಗಲಿರುವ ಕೆಲವರು ಮಕ್ಕಳಂತೆಯೇ ಚಿತ್ರಗಳನ್ನು ಬರೆಯುತ್ತಾರೆ ; ಪ್ರಯೋಗಾ ಪರೀಕ್ಷೆಗಳನ್ನು ಮಾಡಿದಾಗ, ಬರೆದ ಚಿತ್ರಗಳ ಸ್ವರೂಪವನ್ನು ನೋಡಿ, ಮಾನಸಿಕ ಬೇನೆಯು ಯಾವ ತೆರನಾದುದು ಎಂಬುದನ್ನು ಊಹಿಸಬಹುದು. {{gap}}ಆರು ವರ್ಷದ ವಯಸ್ಸು ಮುಗಿಯುವ ವೇಳೆಗೆ, ಮಗುವಿನ ಮೆದುಳಿನಲ್ಲಿ ಈ ಭಾಗವು ಸಂಪೂರ್ಣವಾಗಿ ವೃದ್ಧಿಯಾಗಿರುತ್ತದೆ. ಅಂದರೆ ಮೆದುಳಿನ ಆ ಭಾಗವು ಸುಸೂತ್ರವಾಗಿ, ಒಂದಕ್ಕೊಂದನ್ನು ಅನ್ವಯಿಸಿಕೊಂಡು<noinclude></noinclude> oumlqol5pu3045ts7lakdyld2calm7a ಪುಟ:ಮನಮಂಥನ.pdf/೩೩೯ 104 62786 317011 314519 2026-05-04T14:32:15Z Shreesha Sharma 7840 /* Proofread */ 317011 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೨೧}} ಕಾರ್ಯಮಾಡುವಂತಾಗುತ್ತದೆ. ಕಾರ್ಯವನ್ನು ಮಾಡುವ ಮನಸ್ಸಿನ ಈ ಯಂತ್ರವು ಅಣಿಯಾಯಿತು ಎನ್ನಬೇಕು. ಅನಂತರ ಆಜೀವ ಪರ್ಯಂತ ಎಂತೆಂತಹುದನ್ನೋ ಕೇಳಬೇಕು. ಅವುಗಳನ್ನೆಲ್ಲಾ ಅನುಕರಣೆ ಮಾಡಿ, ಅಥವಾ ತುಸು ಬದಲಾಯಿಸಿ ಆಡಬಹುದು. ಕಿವಿಗಳ ಮೂಲಕ ಜ್ಞಾನ ಭಂಡಾರವನ್ನು, ಮಗುವು, ಮತ್ತು ಬೆಳೆದ ವ್ಯಕ್ತಿಯೂ, ದಿನದಿನವೂ ಹೆಚ್ಚಿಸಿಕೊಳ್ಳುತ್ತದೆ. ಕಲಿತುದನ್ನು ಮಾತನಾಡಿ ಹೇಳಬಹುದು, ಅಥವಾ ಬರೆದು ತೋರಿಸಬಹುದು. ಅದೇ ರೀತಿಯಲ್ಲಿ ನೋಡಿ ಓಡಿ ಕಲಿತುದನ್ನು ಭಾಷಣ ಮಾಡಿ ಇತರರಿಗೆ ತಿಳಿಸಬಹುದು. ಈ ಕಾರಣಗಳಿಂದ ಮೆದುಳಿನ Speech Brain ಭಾಗವು, ನೋಡುವುದು, ಬರೆಯುವುದು, ಕೇಳುವುದು, ಆಡುವುದು, ಇವೆಲ್ಲಾ ಕಾರ್ಯಗಳನ್ನು ಅನ್ವಯಿಸಿ ನಡೆಸಲು ಮೀಸಲಾಗಿದೆ. ಈ ಅವಧಿಯಲ್ಲಿ ತಾನು, ತನ್ನ ಲಂಗ, ತನ್ನ ಷರ್ಟು, ತನ್ನ ಪೆಟ್ಟಿಗೆ, ತನ್ನ ಬೊಂಬೆ, ತನ್ನ ಪುಸ್ತಕ, ಇತ್ಯಾದಿ ಇತ್ಯಾದಿಯಾಗಿ ತನ್ನತನವನ್ನು, ಬೆಳೆಸಿ ಕೊಂಡಿರುತ್ತವೆ. ತನ್ನ ಆಹಾರವನ್ನು ತಾನೇ ಸಂಪಾದಿಸಿಕೊಳ್ಳಲು ಸಾಧ್ಯವಿರದಿದ್ದರೂ, ಅಡಿಗೆಯ ಮನೆಗೆ ಕಳ್ಳತನದಲ್ಲಿ ಹೋಗಿ ಕೋಡುಬಳೆ ಚಕ್ಕುಲಿಗಳನ್ನು ಗಿಟ್ಟಿಸಿಕೊಂಡು ತಿನ್ನುವಷ್ಟು ಸ್ವಾವಲಂಬಿಯಾಗಿರುತ್ತದೆ. ಬಾಲಕೃಷ್ಣನು ಈಗ ಕಳ್ಳಕೃಷ್ಣನಾಗಿ, ಮೆರೆಯತೊಡಗುತ್ತಾನೆ. ಹಾಲನ್ನು ಕರೆದು ಹೆಪ್ಪಿಟ್ಟು, ಮೊಸರು ಮಾಡಿ, ಕಡೆದು ಬೆಣ್ಣೆಯನ್ನು ತೆಗೆಯುವ ವಯಸ್ಸಾಗಲೀ ಅನುಭವವಾಗಲೀ ಬಾಲಕೃಷ್ಣನಿಗೆ ಇರುವುದಿಲ್ಲ. ಆದರೆ ಹಾಲನ್ನು ಕರೆಯುತ್ತಿರುವ ಗೋಪಿಯರನ್ನು ಕಾಡಿಬೇಡಿ, ಕಣ್ಣು ಮರೆಸಿ ಹಾಲನ್ನು ಕುಡಿಯುತ್ತಾನೆ. ಮೊಸರನ್ನು ಕುಡಿಯುತ್ತಿರುವ, ಹಸಿರು ಪಟ್ಟಿಯನ್ನುಟ್ಟ ಗೋಪಿಯರನ್ನು ಗೋಳಾಡಿಸಿ ಬೆಣ್ಣೆಯನ್ನು ಗಿಟ್ಟಿಸಿಕೊಂಡು ಮೆಲ್ಲುತ್ತಾನೆ. ತಾಯಿ ಯಶೋದೆಯನ್ನನಕ ಮರುಳುಮಾಡಿ ಬೆಣ್ಣೆ ಹಾಲುಗಳನ್ನು ಲಪಟಾಯಿಸುತ್ತಾನೆ. ಭಾಗವತನ ಬಾಲ ಕೃಷ್ಣನ ಆಟವನ್ನು ಬೆಳೆಯುತ್ತಿರುವ ಬಾಲಕರಲ್ಲಿಯೂ ಕಣ್ಣಾರ ಕಾಣಬಹುದು ಈಗಲೂ, ಕಂತೆ ಪುರಾಣ ಎನ್ನಿಸಿಕೊಂಡ ಕತೆಗಳಲ್ಲಿ ಇಂದಿನ ಜನರ ಸಂತೆ ಜೀವನದ ಸ್ಪಷ್ಟ ಚಿತ್ರಗಳನ್ನು ಕಾಣಬಹುದು. 'ತನ್ನ' ತನವನ್ನು, ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸಲ್ಯ ಇತ್ಯಾದಿ ಮಿತ್ರ ಷಡ್ವರ್ಗದಿಂದ ಮಗುವು ಬೆಳೆಸಿಕೊಂಡು, ಮಗುವು ಬಾಲಕನಾಗುತ್ತಾನೆ. ಈ ವಯಸ್ಸಿಗೆ 'ನಾನು,' 'ನನ್ನದು' ಎನ್ನುವ ಕಲ್ಪನೆಯು ಬಾಲಕನ ಮನಸ್ಸಿನಲ್ಲಿ ಪ್ರತಿಷ್ಠಿತವಾಗಿರುತ್ತದೆ. Ego-Concept ಎಂದು ಈ ಮಾನಸಿಕ<noinclude></noinclude> br1u88vz26vmrw4gfz7419eowt8fd8l 317030 317011 2026-05-04T14:51:06Z Shreelatha.Halemane 7642 /* Validated */ 317030 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೨೧}} ಕಾರ್ಯಮಾಡುವಂತಾಗುತ್ತದೆ. ಕಾರ್ಯವನ್ನು ಮಾಡುವ ಮನಸ್ಸಿನ ಈ ಯಂತ್ರವು ಅಣಿಯಾಯಿತು ಎನ್ನಬೇಕು. ಅನಂತರ ಆಜೀವ ಪರ್ಯಂತ ಎಂತೆಂತಹುದನ್ನೋ ಕೇಳಬೇಕು. ಅವುಗಳನ್ನೆಲ್ಲಾ ಅನುಕರಣೆ ಮಾಡಿ, ಅಥವಾ ತುಸು ಬದಲಾಯಿಸಿ ಆಡಬಹುದು. ಕಿವಿಗಳ ಮೂಲಕ ಜ್ಞಾನ ಭಂಡಾರವನ್ನು, ಮಗುವು, ಮತ್ತು ಬೆಳೆದ ವ್ಯಕ್ತಿಯೂ, ದಿನದಿನವೂ ಹೆಚ್ಚಿಸಿಕೊಳ್ಳುತ್ತದೆ. ಕಲಿತುದನ್ನು ಮಾತನಾಡಿ ಹೇಳಬಹುದು, ಅಥವಾ ಬರೆದು ತೋರಿಸಬಹುದು. ಅದೇ ರೀತಿಯಲ್ಲಿ ನೋಡಿ ಓಡಿ ಕಲಿತುದನ್ನು ಭಾಷಣ ಮಾಡಿ ಇತರರಿಗೆ ತಿಳಿಸಬಹುದು. {{gap}}ಈ ಕಾರಣಗಳಿಂದ ಮೆದುಳಿನ Speech Brain ಭಾಗವು, ನೋಡುವುದು, ಬರೆಯುವುದು, ಕೇಳುವುದು, ಆಡುವುದು, ಇವೆಲ್ಲಾ ಕಾರ್ಯಗಳನ್ನು ಅನ್ವಯಿಸಿ ನಡೆಸಲು ಮೀಸಲಾಗಿದೆ. {{gap}}ಈ ಅವಧಿಯಲ್ಲಿ ತಾನು, ತನ್ನ ಲಂಗ, ತನ್ನ ಷರ್ಟು, ತನ್ನ ಪೆಟ್ಟಿಗೆ, ತನ್ನ ಬೊಂಬೆ, ತನ್ನ ಪುಸ್ತಕ, ಇತ್ಯಾದಿ ಇತ್ಯಾದಿಯಾಗಿ ತನ್ನತನವನ್ನು, ಬೆಳೆಸಿ ಕೊಂಡಿರುತ್ತವೆ. ತನ್ನ ಆಹಾರವನ್ನು ತಾನೇ ಸಂಪಾದಿಸಿಕೊಳ್ಳಲು ಸಾಧ್ಯವಿರದಿದ್ದರೂ, ಅಡಿಗೆಯ ಮನೆಗೆ ಕಳ್ಳತನದಲ್ಲಿ ಹೋಗಿ ಕೋಡುಬಳೆ ಚಕ್ಕುಲಿಗಳನ್ನು ಗಿಟ್ಟಿಸಿಕೊಂಡು ತಿನ್ನುವಷ್ಟು ಸ್ವಾವಲಂಬಿಯಾಗಿರುತ್ತದೆ. ಬಾಲಕೃಷ್ಣನು ಈಗ ಕಳ್ಳಕೃಷ್ಣನಾಗಿ, ಮೆರೆಯತೊಡಗುತ್ತಾನೆ. ಹಾಲನ್ನು ಕರೆದು ಹೆಪ್ಪಿಟ್ಟು, ಮೊಸರು ಮಾಡಿ, ಕಡೆದು ಬೆಣ್ಣೆಯನ್ನು ತೆಗೆಯುವ ವಯಸ್ಸಾಗಲೀ ಅನುಭವವಾಗಲೀ ಬಾಲಕೃಷ್ಣನಿಗೆ ಇರುವುದಿಲ್ಲ. ಆದರೆ ಹಾಲನ್ನು ಕರೆಯುತ್ತಿರುವ ಗೋಪಿಯರನ್ನು ಕಾಡಿಬೇಡಿ, ಕಣ್ಣು ಮರೆಸಿ ಹಾಲನ್ನು ಕುಡಿಯುತ್ತಾನೆ. ಮೊಸರನ್ನು ಕುಡಿಯುತ್ತಿರುವ, ಹಸಿರು ಪಟ್ಟಿಯನ್ನುಟ್ಟ ಗೋಪಿಯರನ್ನು ಗೋಳಾಡಿಸಿ ಬೆಣ್ಣೆಯನ್ನು ಗಿಟ್ಟಿಸಿಕೊಂಡು ಮೆಲ್ಲುತ್ತಾನೆ. ತಾಯಿ ಯಶೋದೆಯನ್ನನಕ ಮರುಳುಮಾಡಿ ಬೆಣ್ಣೆ ಹಾಲುಗಳನ್ನು ಲಪಟಾಯಿಸುತ್ತಾನೆ. ಭಾಗವತನ ಬಾಲ ಕೃಷ್ಣನ ಆಟವನ್ನು ಬೆಳೆಯುತ್ತಿರುವ ಬಾಲಕರಲ್ಲಿಯೂ ಕಣ್ಣಾರ ಕಾಣಬಹುದು ಈಗಲೂ, ಕಂತೆ ಪುರಾಣ ಎನ್ನಿಸಿಕೊಂಡ ಕತೆಗಳಲ್ಲಿ ಇಂದಿನ ಜನರ ಸಂತೆ ಜೀವನದ ಸ್ಪಷ್ಟ ಚಿತ್ರಗಳನ್ನು ಕಾಣಬಹುದು. {{gap}}'ತನ್ನ' ತನವನ್ನು, ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸಲ್ಯ ಇತ್ಯಾದಿ ಮಿತ್ರ ಷಡ್ವರ್ಗದಿಂದ ಮಗುವು ಬೆಳೆಸಿಕೊಂಡು, ಮಗುವು ಬಾಲಕನಾಗುತ್ತಾನೆ. ಈ ವಯಸ್ಸಿಗೆ 'ನಾನು,' 'ನನ್ನದು' ಎನ್ನುವ ಕಲ್ಪನೆಯು ಬಾಲಕನ ಮನಸ್ಸಿನಲ್ಲಿ ಪ್ರತಿಷ್ಠಿತವಾಗಿರುತ್ತದೆ. Ego-Concept ಎಂದು ಈ ಮಾನಸಿಕ<noinclude></noinclude> 5sklo7jevz7wulnq8i1mb50b839q29n ಪುಟ:ಮನಮಂಥನ.pdf/೩೪೦ 104 62787 317012 314520 2026-05-04T14:33:12Z Shreesha Sharma 7840 /* Proofread */ 317012 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೩೨೨}}{{Right|ಮನಮಂಥನ}} ಕಲ್ಪನೆಯನ್ನು ಹೆಸರಿಸಿದ್ದಾರೆ. ಬಾಲ್ಯದ ಈ ವಯಸ್ಸಿನಲ್ಲಿ, ಹಸಿವು ಬಾಯಾರಿಕೆಗಳು, ಶೈಶವದಲ್ಲಿದ್ದಂತೆಯೇ ಕಾಡುತ್ತವೆ. ಆದರೆ ಶೈಶವದಲ್ಲಿ ಇವುಗಳನ್ನು ತೀರಿಸಿಕೊಳ್ಳಲು ಅಳುವೊಂದೇ ಸಾಧನವಾಗಿತ್ತು. ಈಗ, ಕ್ರೋಧ ಪ್ರದರ್ಶನದಿಂದ, ಹಟಮಾಡಿ, ಚಂಡಿ ಹಿಡಿದು, ಸಿಕ್ಕಿದುದನ್ನೆಲ್ಲಾ ಒಡೆದು ಹರಿದು, ತನಗೆ ಇಷ್ಟವಾದ ಬಿಸ್ಕತ್ ಅಥವಾ ಸೀದೇ ಕಾಯಿಗಳನ್ನು ಗಿಟ್ಟಿಸಿಕೊಳ್ಳುತ್ತಾನೆ. ಆಹಾರವು ಈಗ ಊಟ ತಿಂಡಿ ಎಂದು ಪರಿವರ್ತನೆಯಾಗತೊಡಗುತ್ತದೆ. ರುಚಿ, ಇಷ್ಟ, ಇವೆಲ್ಲವೂ ಅಗತ್ಯವಾದ ಆಹಾರದೊಂದಿಗೆ ಕೂಡಿಕೊಂಡರೆ, ಊಟ, ತಿಂಡಿಗಳಾಗುತ್ತವೆ. ತುಂಬಾ ಹಸಿವಾದಾಗ, ಬಡತನದಿಂದ, ಬಯಸಿದ್ದು ದೊರಕದೆ ಇದ್ದಾಗ, ಸಿಕ್ಕಿದುದನ್ನು ಮುಕ್ಕಿ ಬಾಲಕನು ತೃಪ್ತಿಗೊಳ್ಳುತ್ತಾನೆ. ಸ್ವಲ್ಪ ಮಟ್ಟಿಗೆ ಹಸಿವಾದಾಗ ಇಷ್ಟಪಟ್ಟ ರುಚಿಯಾದ ತಿಂಡಿಯು ದೊರಕುವಂತಿದ್ದರೆ, ಅದಕ್ಕಾಗಿ ಹಟ ಹಿಡಿಯುತ್ತಾನೆ, ತಾಯಿ ಕೊಟ್ಟಿದುದನ್ನು ತಿನ್ನುವುದೇ ಇಲ್ಲ. ತನಗೆ ಬೇಕಾದುದು, ತನಗೆ ಇಷ್ಟವಾದುದು,ಇವುಗಳನ್ನು ಪಟ್ಟು ಹಿಡಿದು ಗಮನಿಸುತ್ತಾನೆ. EGO ಈಗ ಸ್ಥಿರವಾಗತೊಡಗುತ್ತದೆ. ಮನೆಯಲ್ಲಿ ಹಿರಿಯರ ನಡವಳಿಕೆಯನ್ನು ಬಾಲಕನು ನೋಡುತ್ತಿರುತ್ತಾನೆ. ಅದರಂತೆಯೇ ತಾನೂ ಆಡತೊಡಗುತ್ತಾನೆ. ಮಾಡತೊಡಗುತ್ತಾನೆ. 'ಇದು ಮಡಿ, ಮುಟ್ಟಬೇಡ' 'ಕೈಕಾಲುಗಳನ್ನು ತೊಳೆದುಕೊಂಡು ಊಟಕ್ಕೆ ಕುಳಿತುಕೋ' 'ಎಂಜಲ ಕೈಯಲ್ಲಿ ಏನನ್ನೂ ಮುಟ್ಟಬಾರದು' ಇತ್ಯಾದಿ ಶಿಕ್ಷಣವನ್ನು ಪಡೆಯುತ್ತಾನೆ. ಆಗ ಅವನ ಮನಸ್ಸಿನಲ್ಲಿ, ಅನುಭವದಿಂದ ಮೂಡಿ ಬಂದ, ನಿರ್ಧಾರವು ರೂಪುಗೊಳ್ಳುತ್ತದೆ. 'ಹೀಗೆ ಮಾಡಿದರೆ ತಪ್ಪು, ಹಿರಿಯರು ಶಿಕ್ಷಿಸುತ್ತಾರೆ, ರೇಗುತ್ತಾರೆ. ಬದಲು ಹಾಗೆ ನಡೆದುಕೊಂಡರೆ ಹಿರಿಯರು ಮೆಚ್ಚುತ್ತಾರೆ, ಆದರಿಸುತ್ತಾರೆ, ಹೊಗಳುತ್ತಾರೆ. ಇದು ಹಿರಿಯರಿಗೆ ಒಪ್ಪುವ ಮಾರ್ಗ' ಎಂದು ಬಾಲಕನು ಅರಿತುಕೊಳ್ಳುತ್ತಾನೆ. 'ತಪ್ಪು ಒಪ್ಪು ; ಪಾಪ ಪುಣ್ಯ ; ಒಳ್ಳೆಯದು ಕೆಟ್ಟದ್ದು ; ಸನ್ಮಾರ್ಗ ದುರ್ಮಾರ್ಗ ;' ಇಂತಹ ಕಲ್ಪನೆಗಳು ಬಾಲಕನ ಮನಸ್ಸಿನಲ್ಲಿ ಬೇರೂರಿ ಬೆಳೆಯುವುದನ್ನು Building the Super-EGO ಎಂದನ್ನುತ್ತಾರೆ. ಬಾಲಕನ ದೇಹವು ಸಾಕಷ್ಟು ಹೊರವಾಗಿ ಬೆಳೆಯುತ್ತಿರುತ್ತದೆ. ದೇಹಕ್ಕೆ ಅಗತ್ಯವಾದ, ಹಾಗೂ ಮನಸ್ಸಿನಲ್ಲಿ ಆ ವೇಳೆಗೆ ಬೆಳೆದು ಬಂದ ರುಚಿಗೆ ಅನುಗುಣವಾಗಿ, ಊಟ ತಿಂಡಿಗಳನ್ನು, ಬಾಲಕನ ಮನಸ್ಸು ಸ್ವಾಭಾವಿಕವಾಗಿ ಬಯಸುತ್ತದೆ. 'ಉಳಿದ ಬಾಲಕರಿಗಿಂತ ಅಂದವಾದ ಉಡುಪನ್ನು ನಾನು ಧರಿಸಿ ಮೆರೆಯಬೇಕು ; ಆಟದಲ್ಲಾಗಲೀ ಪಾಠದಲ್ಲಾಗಲೀ ಸಹಪಾಠಿಗಳಿಗಿಂತ<noinclude></noinclude> b8knfgm2orjfax4i0ilmbkx6clnnrx8 317031 317012 2026-05-04T14:51:30Z Shreelatha.Halemane 7642 /* Validated */ 317031 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೩೨೨}}{{Right|ಮನಮಂಥನ}} ಕಲ್ಪನೆಯನ್ನು ಹೆಸರಿಸಿದ್ದಾರೆ. {{gap}}ಬಾಲ್ಯದ ಈ ವಯಸ್ಸಿನಲ್ಲಿ, ಹಸಿವು ಬಾಯಾರಿಕೆಗಳು, ಶೈಶವದಲ್ಲಿದ್ದಂತೆಯೇ ಕಾಡುತ್ತವೆ. ಆದರೆ ಶೈಶವದಲ್ಲಿ ಇವುಗಳನ್ನು ತೀರಿಸಿಕೊಳ್ಳಲು ಅಳುವೊಂದೇ ಸಾಧನವಾಗಿತ್ತು. ಈಗ, ಕ್ರೋಧ ಪ್ರದರ್ಶನದಿಂದ, ಹಟಮಾಡಿ, ಚಂಡಿ ಹಿಡಿದು, ಸಿಕ್ಕಿದುದನ್ನೆಲ್ಲಾ ಒಡೆದು ಹರಿದು, ತನಗೆ ಇಷ್ಟವಾದ ಬಿಸ್ಕತ್ ಅಥವಾ ಸೀದೇ ಕಾಯಿಗಳನ್ನು ಗಿಟ್ಟಿಸಿಕೊಳ್ಳುತ್ತಾನೆ. ಆಹಾರವು ಈಗ ಊಟ ತಿಂಡಿ ಎಂದು ಪರಿವರ್ತನೆಯಾಗತೊಡಗುತ್ತದೆ. ರುಚಿ, ಇಷ್ಟ, ಇವೆಲ್ಲವೂ ಅಗತ್ಯವಾದ ಆಹಾರದೊಂದಿಗೆ ಕೂಡಿಕೊಂಡರೆ, ಊಟ, ತಿಂಡಿಗಳಾಗುತ್ತವೆ. ತುಂಬಾ ಹಸಿವಾದಾಗ, ಬಡತನದಿಂದ, ಬಯಸಿದ್ದು ದೊರಕದೆ ಇದ್ದಾಗ, ಸಿಕ್ಕಿದುದನ್ನು ಮುಕ್ಕಿ ಬಾಲಕನು ತೃಪ್ತಿಗೊಳ್ಳುತ್ತಾನೆ. ಸ್ವಲ್ಪ ಮಟ್ಟಿಗೆ ಹಸಿವಾದಾಗ ಇಷ್ಟಪಟ್ಟ ರುಚಿಯಾದ ತಿಂಡಿಯು ದೊರಕುವಂತಿದ್ದರೆ, ಅದಕ್ಕಾಗಿ ಹಟ ಹಿಡಿಯುತ್ತಾನೆ, ತಾಯಿ ಕೊಟ್ಟಿದುದನ್ನು ತಿನ್ನುವುದೇ ಇಲ್ಲ. ತನಗೆ ಬೇಕಾದುದು, ತನಗೆ ಇಷ್ಟವಾದುದು,ಇವುಗಳನ್ನು ಪಟ್ಟು ಹಿಡಿದು ಗಮನಿಸುತ್ತಾನೆ. EGO ಈಗ ಸ್ಥಿರವಾಗತೊಡಗುತ್ತದೆ. {{gap}}ಮನೆಯಲ್ಲಿ ಹಿರಿಯರ ನಡವಳಿಕೆಯನ್ನು ಬಾಲಕನು ನೋಡುತ್ತಿರುತ್ತಾನೆ. ಅದರಂತೆಯೇ ತಾನೂ ಆಡತೊಡಗುತ್ತಾನೆ. ಮಾಡತೊಡಗುತ್ತಾನೆ. 'ಇದು ಮಡಿ, ಮುಟ್ಟಬೇಡ' 'ಕೈಕಾಲುಗಳನ್ನು ತೊಳೆದುಕೊಂಡು ಊಟಕ್ಕೆ ಕುಳಿತುಕೋ' 'ಎಂಜಲ ಕೈಯಲ್ಲಿ ಏನನ್ನೂ ಮುಟ್ಟಬಾರದು' ಇತ್ಯಾದಿ ಶಿಕ್ಷಣವನ್ನು ಪಡೆಯುತ್ತಾನೆ. ಆಗ ಅವನ ಮನಸ್ಸಿನಲ್ಲಿ, ಅನುಭವದಿಂದ ಮೂಡಿ ಬಂದ, ನಿರ್ಧಾರವು ರೂಪುಗೊಳ್ಳುತ್ತದೆ. 'ಹೀಗೆ ಮಾಡಿದರೆ ತಪ್ಪು, ಹಿರಿಯರು ಶಿಕ್ಷಿಸುತ್ತಾರೆ, ರೇಗುತ್ತಾರೆ. ಬದಲು ಹಾಗೆ ನಡೆದುಕೊಂಡರೆ ಹಿರಿಯರು ಮೆಚ್ಚುತ್ತಾರೆ, ಆದರಿಸುತ್ತಾರೆ, ಹೊಗಳುತ್ತಾರೆ. ಇದು ಹಿರಿಯರಿಗೆ ಒಪ್ಪುವ ಮಾರ್ಗ' ಎಂದು ಬಾಲಕನು ಅರಿತುಕೊಳ್ಳುತ್ತಾನೆ. 'ತಪ್ಪು ಒಪ್ಪು ; ಪಾಪ ಪುಣ್ಯ ; ಒಳ್ಳೆಯದು ಕೆಟ್ಟದ್ದು ; ಸನ್ಮಾರ್ಗ ದುರ್ಮಾರ್ಗ ;' ಇಂತಹ ಕಲ್ಪನೆಗಳು ಬಾಲಕನ ಮನಸ್ಸಿನಲ್ಲಿ ಬೇರೂರಿ ಬೆಳೆಯುವುದನ್ನು Building the Super-EGO ಎಂದನ್ನುತ್ತಾರೆ. {{gap}}ಬಾಲಕನ ದೇಹವು ಸಾಕಷ್ಟು ಹೊರವಾಗಿ ಬೆಳೆಯುತ್ತಿರುತ್ತದೆ. ದೇಹಕ್ಕೆ ಅಗತ್ಯವಾದ, ಹಾಗೂ ಮನಸ್ಸಿನಲ್ಲಿ ಆ ವೇಳೆಗೆ ಬೆಳೆದು ಬಂದ ರುಚಿಗೆ ಅನುಗುಣವಾಗಿ, ಊಟ ತಿಂಡಿಗಳನ್ನು, ಬಾಲಕನ ಮನಸ್ಸು ಸ್ವಾಭಾವಿಕವಾಗಿ ಬಯಸುತ್ತದೆ. 'ಉಳಿದ ಬಾಲಕರಿಗಿಂತ ಅಂದವಾದ ಉಡುಪನ್ನು ನಾನು ಧರಿಸಿ ಮೆರೆಯಬೇಕು ; ಆಟದಲ್ಲಾಗಲೀ ಪಾಠದಲ್ಲಾಗಲೀ ಸಹಪಾಠಿಗಳಿಗಿಂತ<noinclude></noinclude> lhf6rcbhjhcgr4n4m5fsdqd5pwvzstq ಪುಟ:ಮನಮಂಥನ.pdf/೩೪೧ 104 62788 317013 314521 2026-05-04T14:34:04Z Shreesha Sharma 7840 /* Proofread */ 317013 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೨೩}} ಮುಂದುವರೆಯಬೇಕು, ಅವರನ್ನು ಸೋಲಿಸಿ ಜಯಗಳಿಸಬೇಕು' ಎಂದು ಅವನ ಮನಸ್ಸು ಆಶಿಸುತ್ತದೆ. ಇವೆಲ್ಲಾ ಕಾಮ್ಯವಾದುವುಗಳು. ಆಜನ್ಮಸಿದ್ಧವಾಗಿ, ಜನ್ಮ ಜನ್ಮಾಂತರಗಳಿಂದ ದೊರೆತ ಪ್ರಕೃತಿಯ ಸ್ವಭಾವ, ತನಗೆ ರುಚಿ ಕಂಡ, ತನ್ನ ಇಷ್ಟಗಳನ್ನು ಈಡೇರಿಸುವ, ಯಾವುದನ್ನಾದರೂ ಪಡೆಯಲೇಬೇಕು ಎಂದು ಬಾಲಕನ ಮನಸ್ಸಿನಲ್ಲಿ ಹುಟ್ಟಾಸೆಯು ಇದ್ದೇ ಇರುತ್ತದೆ. ಇದನ್ನು ಎಂದು ID ಕರೆಯುತ್ತಾರೆ. ಪ್ರಾಣಿಗಳಲ್ಲಿ ಬಾಲಕನಲ್ಲಿದ್ದಂತೆಯೇ ID ಬಲಯುತವಾಗಿರುವ ಮನಸ್ಸಿನ ಒಂದು ಶಕ್ತಿ. ಸಾರಾಂಶವೇನೆಂದರೆ, ಬಾಲಕನ ಮನಸ್ಸಿನಲ್ಲಿ : ID ಎಂಬ ಶಕ್ತಿಯು ಸ್ವಂತ ಕಾವ್ಯಗಳನ್ನು ಈಡೇರಿಸು ಎಂದು ಜುಲುಂ ಮಾಡುವ, ಸಾಕಷ್ಟು ಪುರಾತನವಾದ, ಪ್ರೇರಕವಾಗಿದೆ. ID ಇನ ಇಷ್ಟಗಳನ್ನು ಈಡೇರಿಸುವ ಶಕ್ತಿಯು, ಬಾಲಕನ ಮನಸ್ಸಿನಲ್ಲಿ 'ನಾನು' ; 'ನನ್ನ ಇಷ್ಟ' ಎಂಬ EGO ಕಲ್ಪನೆಯನ್ನು ತನ್ನತ್ತ ಸೆಳೆಯುತ್ತದೆ. EGO ಕಲ್ಪನೆಯು ID ಇನ ಅಹವಾಲುಗಳನ್ನು ಪೂರೈಸಿದರೆ, ತೃಪ್ತಿಗೊಂಡು ID ತೆಪ್ಪಗಾಗುತ್ತದೆ. ಆಗ EGO ವಿಗೂ ನೆಮ್ಮದಿಯಾಗುತ್ತದೆ. ತನ್ನ ಇಷ್ಟದಂತೆ ನಡೆದುಕೊಂಡರೆ, ಹಿರಿಯರು ಬಾಲಕನು ತಪ್ಪು ಮಾಡಿದ ಎಂದು ಶಿಕ್ಷಿಸುತ್ತಾರೆ. ಅವರು ಒಪ್ಪುವಂತೆ ನಡೆದುಕೊಂಡರೆ ಹಿರಿಯರು ಮೆಚ್ಚುತ್ತಾರೆ; ಎನ್ನುವ Super-Ego ಕಲ್ಪನೆಯು ಬಾಲಕನ ಮನಸ್ಸಿನಲ್ಲಿ ಬೇರೂರತೊಡಗುತ್ತದೆ. ದೃಢವಾಗತೊಡಗುತ್ತದೆ. ತಾನಿರುವ ಪರಿಸರದ ಹಿತಕ್ಕಾಗಿ, ಹಾಗೂ ನೆಮ್ಮದಿಗಾಗಿ, 'ತನ್ನ' ಇಷ್ಟಗಳ ಈಡೇರಿಕೆಯನ್ನು ತಡೆಹಿಡಿಯುವುದು, ಅಥವಾ ಸದೆ ಬಡಿಯುವುದು, Super-Ego ವಿನ ಕಾರ ಮಾನವನ ಮನಸ್ಸಿನಲ್ಲಿ ಬೆಳೆದು ಬಂದ ಈ ಶಕ್ತಿಯನ್ನು ಸತ್-ಚೈತನ್ಯಾಂಶ ಎಂದೂ ಹೇಳಬಹುದು. Super-Ego ವನ್ನು ಸತ್- ಚೈತನ್ಯಾಂಶವೆಂದು ಕರೆದಾಗ, EGO ವನ್ನು ರಜೋ ಪ್ರಧಾನವಾದ ಕಾರ್ಯ ಪ್ರೇರಕ ಎಂದೂ ಹೇಳಬಹುದು. ಅದೇ ರೀತಿಯಲ್ಲಿ ID ಶಕ್ತಿಯನ್ನು ತಮಸ್ಸಿನ ಸೆಳೆತವೆಂದೂ ಹೇಳಬಹುದು. ಮನಸ್ಸಿನ ಸತ್-ಚೈತನ್ಯಾಂಶವು 'ತನ್ನ' ತನವನ್ನು ಪರಿಸರದ ಹಿತಕ್ಕಾಗಿ ಬಲಿಕೊಡುವುದಕ್ಕೆ ಪ್ರಬಲವಾದ ಪ್ರೇರಕವಾಗಿರುತ್ತದೆ. 'ತನ್ನ ತನವನ್ನು ಕರಗಿಸತೊಡಗುತ್ತದೆ. ಈ ಲೋಕದ, ಈ ಜನ್ಮದ ಬಾಳಿಗೆ ಅಗತ್ಯವಾದ ಕಾರ್ಯಗಳನ್ನು ಮಾಡುವ ರಜೋ ಪ್ರಧಾನವಾದ ಮನಸ್ಸಿನ ಶಕ್ತಿಯನ್ನು Ego ಎಂದನ್ನಬಹುದು. ಇದರಿಂದಲೇ ಲೌಕಿಕ ಬಾಳು.<noinclude></noinclude> 1fcv1olor8rsunyr321tw0ekr5s2sip 317032 317013 2026-05-04T14:51:56Z Shreelatha.Halemane 7642 /* Validated */ 317032 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೨೩}} ಮುಂದುವರೆಯಬೇಕು, ಅವರನ್ನು ಸೋಲಿಸಿ ಜಯಗಳಿಸಬೇಕು' ಎಂದು ಅವನ ಮನಸ್ಸು ಆಶಿಸುತ್ತದೆ. ಇವೆಲ್ಲಾ ಕಾಮ್ಯವಾದುವುಗಳು. ಆಜನ್ಮಸಿದ್ಧವಾಗಿ, ಜನ್ಮ ಜನ್ಮಾಂತರಗಳಿಂದ ದೊರೆತ ಪ್ರಕೃತಿಯ ಸ್ವಭಾವ, ತನಗೆ ರುಚಿ ಕಂಡ, ತನ್ನ ಇಷ್ಟಗಳನ್ನು ಈಡೇರಿಸುವ, ಯಾವುದನ್ನಾದರೂ ಪಡೆಯಲೇಬೇಕು ಎಂದು ಬಾಲಕನ ಮನಸ್ಸಿನಲ್ಲಿ ಹುಟ್ಟಾಸೆಯು ಇದ್ದೇ ಇರುತ್ತದೆ. ಇದನ್ನು ಎಂದು ID ಕರೆಯುತ್ತಾರೆ. ಪ್ರಾಣಿಗಳಲ್ಲಿ ಬಾಲಕನಲ್ಲಿದ್ದಂತೆಯೇ ID ಬಲಯುತವಾಗಿರುವ ಮನಸ್ಸಿನ ಒಂದು ಶಕ್ತಿ. ಸಾರಾಂಶವೇನೆಂದರೆ, ಬಾಲಕನ ಮನಸ್ಸಿನಲ್ಲಿ : ID ಎಂಬ ಶಕ್ತಿಯು ಸ್ವಂತ ಕಾವ್ಯಗಳನ್ನು ಈಡೇರಿಸು ಎಂದು ಜುಲುಂ ಮಾಡುವ, ಸಾಕಷ್ಟು ಪುರಾತನವಾದ, ಪ್ರೇರಕವಾಗಿದೆ. {{gap}}ID ಇನ ಇಷ್ಟಗಳನ್ನು ಈಡೇರಿಸುವ ಶಕ್ತಿಯು, ಬಾಲಕನ ಮನಸ್ಸಿನಲ್ಲಿ 'ನಾನು' ; 'ನನ್ನ ಇಷ್ಟ' ಎಂಬ EGO ಕಲ್ಪನೆಯನ್ನು ತನ್ನತ್ತ ಸೆಳೆಯುತ್ತದೆ. EGO ಕಲ್ಪನೆಯು ID ಇನ ಅಹವಾಲುಗಳನ್ನು ಪೂರೈಸಿದರೆ, ತೃಪ್ತಿಗೊಂಡು ID ತೆಪ್ಪಗಾಗುತ್ತದೆ. ಆಗ EGO ವಿಗೂ ನೆಮ್ಮದಿಯಾಗುತ್ತದೆ. {{gap}}ತನ್ನ ಇಷ್ಟದಂತೆ ನಡೆದುಕೊಂಡರೆ, ಹಿರಿಯರು ಬಾಲಕನು ತಪ್ಪು ಮಾಡಿದ ಎಂದು ಶಿಕ್ಷಿಸುತ್ತಾರೆ. ಅವರು ಒಪ್ಪುವಂತೆ ನಡೆದುಕೊಂಡರೆ ಹಿರಿಯರು ಮೆಚ್ಚುತ್ತಾರೆ; ಎನ್ನುವ Super-Ego ಕಲ್ಪನೆಯು ಬಾಲಕನ ಮನಸ್ಸಿನಲ್ಲಿ ಬೇರೂರತೊಡಗುತ್ತದೆ. ದೃಢವಾಗತೊಡಗುತ್ತದೆ. ತಾನಿರುವ ಪರಿಸರದ ಹಿತಕ್ಕಾಗಿ, ಹಾಗೂ ನೆಮ್ಮದಿಗಾಗಿ, 'ತನ್ನ' ಇಷ್ಟಗಳ ಈಡೇರಿಕೆಯನ್ನು ತಡೆಹಿಡಿಯುವುದು, ಅಥವಾ ಸದೆ ಬಡಿಯುವುದು, Super-Ego ವಿನ ಕಾರ ಮಾನವನ ಮನಸ್ಸಿನಲ್ಲಿ ಬೆಳೆದು ಬಂದ ಈ ಶಕ್ತಿಯನ್ನು ಸತ್-ಚೈತನ್ಯಾಂಶ ಎಂದೂ ಹೇಳಬಹುದು. Super-Ego ವನ್ನು ಸತ್- ಚೈತನ್ಯಾಂಶವೆಂದು ಕರೆದಾಗ, EGO ವನ್ನು ರಜೋ ಪ್ರಧಾನವಾದ ಕಾರ್ಯ ಪ್ರೇರಕ ಎಂದೂ ಹೇಳಬಹುದು. ಅದೇ ರೀತಿಯಲ್ಲಿ ID ಶಕ್ತಿಯನ್ನು ತಮಸ್ಸಿನ ಸೆಳೆತವೆಂದೂ ಹೇಳಬಹುದು. {{gap}}ಮನಸ್ಸಿನ ಸತ್-ಚೈತನ್ಯಾಂಶವು 'ತನ್ನ' ತನವನ್ನು ಪರಿಸರದ ಹಿತಕ್ಕಾಗಿ ಬಲಿಕೊಡುವುದಕ್ಕೆ ಪ್ರಬಲವಾದ ಪ್ರೇರಕವಾಗಿರುತ್ತದೆ. 'ತನ್ನ ತನವನ್ನು ಕರಗಿಸತೊಡಗುತ್ತದೆ. {{gap}}ಈ ಲೋಕದ, ಈ ಜನ್ಮದ ಬಾಳಿಗೆ ಅಗತ್ಯವಾದ ಕಾರ್ಯಗಳನ್ನು ಮಾಡುವ ರಜೋ ಪ್ರಧಾನವಾದ ಮನಸ್ಸಿನ ಶಕ್ತಿಯನ್ನು Ego ಎಂದನ್ನಬಹುದು. ಇದರಿಂದಲೇ ಲೌಕಿಕ ಬಾಳು.<noinclude></noinclude> sqkkz3ou8hhbwp4y0mjbcehh8590pwf ಪುಟ:ಮನಮಂಥನ.pdf/೩೪೨ 104 62789 317015 314522 2026-05-04T14:34:59Z Shreesha Sharma 7840 /* Proofread */ 317015 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೩೨೪}}{{Right|ಮನಮಂಥನ}} ಇದ್ದಂತೆ ಇದ್ದರೆ ಆಯಿತು ; ಮುಂದಿನ ಯೋಚನೆಯೇ ಬೇಡ ; ಇದ್ದರೂ ಆಯಿತು, ಹೋದರೂ ಆಯಿತು ಎಂದು ಯೋಚಿಸುವ ಗೋಜೂ ಇರದ, ಮನಸ್ಸಿನ ತಮಃಶಕ್ತಿಯನ್ನು ID ಎಂದನ್ನಬಹುದು. ದೇಹ ಮತ್ತು ಅದಕ್ಕೆ ನಿಕಟವಾದ ಸಂಬಂಧವನ್ನು ಪಡೆದ ಮನಸ್ಸಿನ ಅಂಶ, ಇವೆರಡರ ಒಕ್ಕೂಟವನ್ನು ID ಒತ್ತಾಯ ಪೂರ್ವಕವಾಗಿ ಪ್ರೇರಿಸುತ್ತದೆ. IDನಲ್ಲಿ ಹುದುಗಿ ಸುಪ್ತವಾಗಿರುವ ಕಾಮ ಪ್ರವೃತ್ತನೆಯು ಬಾಲಕರಲ್ಲಿ ಕೂಡ ಅತ್ಯಂತ ಪ್ರಭಾವಯುತವಾಗಿರುತ್ತದೆ ಎಂದು ಫ್ರಾಯ್ಡ್ ಸಿದ್ಧಾಂತ ಮಾಡಿದ. ಆದರೆ ಬಹು ಮಂದಿ ಮನೋವಿಜ್ಞಾನಿಗಳು ಈ ಸಿದ್ಧಾಂತವನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಭಾಗವತದ ಬಾಲಕೃಷ್ಣನ ಕಾಮ ಲೀಲೆಗಳು ಫ್ರಾಯ್ಡನ ಸಿದ್ಧಾಂತಕ್ಕೆ ಸ್ವಲ್ಪ ಮಟ್ಟಿಗೆ ಬೆಂಬಲವನ್ನು ನೀಡುತ್ತದೆಯೇನೋ? ಎನ್ನಿಸುತ್ತದೆ. ಕಾಮದಿಂದ ಪ್ರಚೋದಿತವಾದ ಬಾಲ ಲೀಲೆಗಳೇ ವಿನಹಾ ವಯಸ್ಕರ ಕಾಮ ಕೇಳಿಗಳಲ್ಲ ಎಂಬುದನ್ನು ಗಮನಿಸಬೇಕು. ಬಾಲಕನಲ್ಲಿ ಮನಸ್ಸಿನ ಮೂರು ಅಂಶಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ೧. ID ಎಂಬ, ತಮೋಗುಣ ಪ್ರಧಾನವಾದ, ಹಾಗೂ ಪುರಾತನವಾದ ಒಂದು ಅಂಶ. ದೇಹ ಮತ್ತು ಅದಕ್ಕೆ ನಿಕಟವಾಗಿ ಸಂಬಂಧಿಸಿದ ಮನಸ್ಸಿನ ಅಂಶ, ಇವು ID ಇನ ಪ್ರಭಾವಕ್ಕೆ ತುತ್ತಾಗಿವೆ. ೨.EGO, 'ನಾನು' ಎಂದು ಮನಸ್ಸು ಕಲ್ಪಿಸಿಕೊಂಡ ಅಂಶ. ಈ ಅಂಶವೇ ಮನಸ್ಸಿನ ನೇತೃತ್ವದಲ್ಲಿ ದೇಹದಿಂದ ಕಾವ್ಯ ಸಾಧನೆಗಳನ್ನು ನಡೆಸುವುದು Executive ಇದ್ದಂತೆ, ರಜೋಗುಣ ಪ್ರಧಾನವಾದುದು. ೩.Super-Egoಅಥವಾ ಮನಸ್ಸಿನ ಸತ್-ಚೈತನಾಂಶ, EGO, ಅಥವಾ 'ತನ್ನ'ತನವು ID ಇನ ಸ್ಟೇಚ್ಛಾ ಪ್ರವೃತ್ತಿಯನ್ನು ತಹಬಂದಿಯಲ್ಲಿರುವ, ಮನಸ್ಸಿನಲ್ಲಿ ರೂಢಿತವಾದ ಶಕ್ತಿ ಅಥವಾ ಕಲ್ಪನೆ ; ಸುತ್ತಲಿನ ಸಮಾಜದ ಹಿತವನ್ನು ರಕ್ಷಿಸಿ, ಆ ಮೂಲಕ ಸಮಾಜವು ವ್ಯಕ್ತಿಗೆ ರಕ್ಷಣೆಯನ್ನು ನೀಡುವಂತೆ ಮಾಡುವ ಶಕ್ತಿ. ಬಾಲಕರಲ್ಲಿ ಕಾಣಬರುವ ಮನಸ್ಸಿನ ಮುಖ್ಯವಾದ ಈ ಮೂರು ಕಾರ್ಯ ಕ್ರಮಗಳು ಪರಾವಲಂಬಿಯಾಗಿರುವಾಗ ಹೀಗಿರುತ್ತದೆ. ಸ್ವಾವಲಂಬಿಯಾಗಿ, ಬಾಲಕನು ಪ್ರೌಢನಾದ ಮೇಲೆ ಮನಸ್ಸಿನ ಕಾರ್ಯ ಕ್ರಮಗಳು ಹೇಗೆ ಪರಿವರ್ತನೆಯನ್ನು ಹೊಂದುತ್ತವೆ?<noinclude></noinclude> 50s5cppljsibcepdpua8bwviqqk7nb4 317033 317015 2026-05-04T14:52:49Z Shreelatha.Halemane 7642 /* Validated */ 317033 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೩೨೪}}{{Right|ಮನಮಂಥನ}} {{gap}}ಇದ್ದಂತೆ ಇದ್ದರೆ ಆಯಿತು ; ಮುಂದಿನ ಯೋಚನೆಯೇ ಬೇಡ ; ಇದ್ದರೂ ಆಯಿತು, ಹೋದರೂ ಆಯಿತು ಎಂದು ಯೋಚಿಸುವ ಗೋಜೂ ಇರದ, ಮನಸ್ಸಿನ ತಮಃಶಕ್ತಿಯನ್ನು ID ಎಂದನ್ನಬಹುದು. ದೇಹ ಮತ್ತು ಅದಕ್ಕೆ ನಿಕಟವಾದ ಸಂಬಂಧವನ್ನು ಪಡೆದ ಮನಸ್ಸಿನ ಅಂಶ, ಇವೆರಡರ ಒಕ್ಕೂಟವನ್ನು ID ಒತ್ತಾಯ ಪೂರ್ವಕವಾಗಿ ಪ್ರೇರಿಸುತ್ತದೆ. {{gap}}IDನಲ್ಲಿ ಹುದುಗಿ ಸುಪ್ತವಾಗಿರುವ ಕಾಮ ಪ್ರವೃತ್ತನೆಯು ಬಾಲಕರಲ್ಲಿ ಕೂಡ ಅತ್ಯಂತ ಪ್ರಭಾವಯುತವಾಗಿರುತ್ತದೆ ಎಂದು ಫ್ರಾಯ್ಡ್ ಸಿದ್ಧಾಂತ ಮಾಡಿದ. ಆದರೆ ಬಹು ಮಂದಿ ಮನೋವಿಜ್ಞಾನಿಗಳು ಈ ಸಿದ್ಧಾಂತವನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಭಾಗವತದ ಬಾಲಕೃಷ್ಣನ ಕಾಮ ಲೀಲೆಗಳು ಫ್ರಾಯ್ಡನ ಸಿದ್ಧಾಂತಕ್ಕೆ ಸ್ವಲ್ಪ ಮಟ್ಟಿಗೆ ಬೆಂಬಲವನ್ನು ನೀಡುತ್ತದೆಯೇನೋ? ಎನ್ನಿಸುತ್ತದೆ. ಕಾಮದಿಂದ ಪ್ರಚೋದಿತವಾದ ಬಾಲ ಲೀಲೆಗಳೇ ವಿನಹಾ ವಯಸ್ಕರ ಕಾಮ ಕೇಳಿಗಳಲ್ಲ ಎಂಬುದನ್ನು ಗಮನಿಸಬೇಕು. {{gap}}ಬಾಲಕನಲ್ಲಿ ಮನಸ್ಸಿನ ಮೂರು ಅಂಶಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ೧. ID ಎಂಬ, ತಮೋಗುಣ ಪ್ರಧಾನವಾದ, ಹಾಗೂ ಪುರಾತನವಾದ ಒಂದು ಅಂಶ. ದೇಹ ಮತ್ತು ಅದಕ್ಕೆ ನಿಕಟವಾಗಿ ಸಂಬಂಧಿಸಿದ ಮನಸ್ಸಿನ ಅಂಶ, ಇವು ID ಇನ ಪ್ರಭಾವಕ್ಕೆ ತುತ್ತಾಗಿವೆ. {{gap}}೨.EGO, 'ನಾನು' ಎಂದು ಮನಸ್ಸು ಕಲ್ಪಿಸಿಕೊಂಡ ಅಂಶ. ಈ ಅಂಶವೇ ಮನಸ್ಸಿನ ನೇತೃತ್ವದಲ್ಲಿ ದೇಹದಿಂದ ಕಾವ್ಯ ಸಾಧನೆಗಳನ್ನು ನಡೆಸುವುದು Executive ಇದ್ದಂತೆ, ರಜೋಗುಣ ಪ್ರಧಾನವಾದುದು. {{gap}}೩.Super-Egoಅಥವಾ ಮನಸ್ಸಿನ ಸತ್-ಚೈತನಾಂಶ, EGO, ಅಥವಾ 'ತನ್ನ'ತನವು ID ಇನ ಸ್ಟೇಚ್ಛಾ ಪ್ರವೃತ್ತಿಯನ್ನು ತಹಬಂದಿಯಲ್ಲಿರುವ, ಮನಸ್ಸಿನಲ್ಲಿ ರೂಢಿತವಾದ ಶಕ್ತಿ ಅಥವಾ ಕಲ್ಪನೆ ; ಸುತ್ತಲಿನ ಸಮಾಜದ ಹಿತವನ್ನು ರಕ್ಷಿಸಿ, ಆ ಮೂಲಕ ಸಮಾಜವು ವ್ಯಕ್ತಿಗೆ ರಕ್ಷಣೆಯನ್ನು ನೀಡುವಂತೆ ಮಾಡುವ ಶಕ್ತಿ. {{gap}}ಬಾಲಕರಲ್ಲಿ ಕಾಣಬರುವ ಮನಸ್ಸಿನ ಮುಖ್ಯವಾದ ಈ ಮೂರು ಕಾರ್ಯ ಕ್ರಮಗಳು ಪರಾವಲಂಬಿಯಾಗಿರುವಾಗ ಹೀಗಿರುತ್ತದೆ. {{gap}}ಸ್ವಾವಲಂಬಿಯಾಗಿ, ಬಾಲಕನು ಪ್ರೌಢನಾದ ಮೇಲೆ ಮನಸ್ಸಿನ ಕಾರ್ಯ ಕ್ರಮಗಳು ಹೇಗೆ ಪರಿವರ್ತನೆಯನ್ನು ಹೊಂದುತ್ತವೆ?<noinclude></noinclude> 8dac47nxgqqtk81zymh0ujakcij0cq5 ಪುಟ:ಮನಮಂಥನ.pdf/೩೪೩ 104 62790 317022 314523 2026-05-04T14:42:23Z Shreesha Sharma 7840 /* Proofread */ 317022 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೨೫}} '''ಯೌವನ ಅಥವಾ ಪ್ರೌಢ ವಯಸ್ಸಿನವರಲ್ಲಿ ಮನಸ್ಸಿನ ಕಾರ್ಯಕ್ರಮ.''' ಯಾವುದಾದರೂ ಮದುವೆಯ ಮನೆಯಲ್ಲಿ ಹದಿಮೂರು ಹದಿನಾಲ್ಕು ವಯಸ್ಸಿನ ಹುಡುಗರೂ ಹುಡುಗಿಯರೂ ಬೇಕಾಬಿಟ್ಟಿಯಾಗಿ ಆಡಿಕೊಂಡಿರುತ್ತಾರೆ. ಅವರುಗಳ ಕಣ್ಣಿಗೆ ಇವನು ಗಡವಾ, ಇವನೊಂದಿಗೆ ಆಡುವುದಿಲ್ಲ, ಅವರೊಂದಿಗೆ ಆಡಲು ಇವನಿಗೂ ಇಷ್ಟವಿರುವುದಿಲ್ಲ. ಏಕೆಂದರೆ ನಾನು ಬೆಳೆದಿದ್ದೇನೆ. ಈಗ ದೊಡ್ಡವ ಎಂಬ ಭಾವನೆಯು ಉಂಟಾಗುತ್ತದೆ. ಚಡ್ಡಿಯ ಬದಲು ಪಂಚೆಯನ್ನೋ ಅಥವಾ ಪೈಜಾಮಗಳನ್ನೋ ಧರಿಸಲು ಶುರುಮಾಡಿರುತ್ತಾನೆ. ದೊಡ್ಡವರು ಕೂತಿರುವೆಡೆಗೆ ಹೋಗಿ, ತಾನೂ ಅವರ ಮಾತುಕತೆಗಳಲ್ಲಿ ತಲೆ ಹಾಕತೊಡಗುತ್ತಾನೆ. 'ಅಧಿಕ ಪ್ರಸಂಗಿ ; ದೊಡ್ಡವರ ಮಾತಿನಲ್ಲಿ ತಲೆ ಹಾಕಬೇಡ ; ಹುಡುಗರ ಜತೆಗೆ ಆಡಿಕೋ ಹೋಗು' ಎಂದು ಬೈಸಿಕೊಂಡು, ಮನಸ್ಸು ಚಿಕ್ಕದು ಮಾಡಿಕೊಂಡು, ಬೇರೆಡೆಗೆ ಸಾಗುತ್ತನೆ. ಸಮ ವಯಸ್ಕರು ಸಿಗದಿದ್ದರೆ ನಾಯಿಪಾಡೇ ಅವನದು. ಮದುವೆಯ ಗಿಜಿಗಿಜಿಯಲ್ಲಿ ಅವ ಒಂಟಿ. ಈ ರೀತಿಯಲ್ಲಿ ಆರಂಭವಾಗುತ್ತದೆ ಯುವಕನ ವಯಸ್ಸು, ಪೌಗಂಡ ವಯಸ್ಸು 'ತನ್ನ ತನವು, EGO ವು ಸಾಕಷ್ಟು ಬೆಳೆದಿರುತ್ತದೆ. ದೇಹವೂ ಹೊರವಾಗಿರುತ್ತದೆ. ತಾಯ್ತಂದೆಯರು, ಮತ್ತು ಮನೆಯ ಇತರರು ಬಾಲ್ಯದಲ್ಲಿ, ಮುದ್ದು ಮಾಡುವಂತೆ, ಈಗ ಮಾಡುವುದಿಲ್ಲ. ದೊಡ್ಡವರು ಇವನನ್ನು ಗೌರವಿಸುವುದೂ ಇಲ್ಲ. ಮರ್ಯಾದೆಯಿಂದ ಇತರರನ್ನು ಮಾತನಾಡಿಸುವಂತೆ, ಮಾತನಾಡಿಸುವುದೂ ಇಲ್ಲ. ಹೀಗಾಗಿ ಬಾಲ್ಯದ ಅದರವೂ ತಪ್ಪಿತು ; ಬೆಳೆದವರ ಸದರವೂ ಸಿಗಲಿಲ್ಲ. ಯುವಕನ EGOವಿಗೆ ಪೆಟ್ಟು ಬೀಳುತ್ತಲೇ ಇರುತ್ತದೆ. ID ಇನ ಕಾವ್ಯಗಳು ಈ ವಯಸ್ಸಿನಲ್ಲಿ, ಬಾಲ್ಯದಲ್ಲಿದ್ದಂತೆ ಸುಪ್ತವಾಗಿರುವುದಿಲ್ಲ. ಸ್ಪಷ್ಟವಾಗತೊಡಗುತ್ತವೆ. ಅವುಗಳನ್ನು ಈಡೇರಿಸಲು, EGO ವಿಗೆ ಸಾಕಷ್ಟು ಲೋಕಾನುಭವವಾಗಲೀ, ಅಗತ್ಯವಾದಷ್ಟು ಸ್ವಯಂಶಕ್ತಿಯಾಗಲೀ ಯುವಕನಲ್ಲಿರುವುದಿಲ್ಲ. ಪೆಟ್ಟುಗಳನ್ನು ಪರಿಸರದಿಂದ ಪಡೆಯುತ್ತಿರುವ EGO ವನ್ನು, ಅವನ ID ಈಗ ಕೆಣಕತೊಡಗುತ್ತದೆ. 'ಲೇ, EGO! ಪುರಾತನವಾದ ನನ್ನ ಭುಜಗಳ ಮೇಲೆ ನೀನು ಕುಳಿತಿರುವೆ. ನಿನಗೆ ಸಾಕಷ್ಟು ಅವಮಾನವಾಗಿದೆ, ಗಾಯಗಳಾಗಿವೆ. ನನ್ನ ಮಾತನ್ನು ಕೇಳು. ನಿನ್ನ ಹಿರಿಮೆಯನ್ನು ಸಾಧಿಸಿಕೋ, ಬಂಡೆದ್ದು ಹೋರಾಡಿಯಾದರೂ ಎಲ್ಲರಿಗಿಂತಲೂ ತಲೆಯನ್ನು ಹೆಚ್ಚು ಎತ್ತರ ನಿಲ್ಲಿಸು. ಹಾಗೆ ನೀನು ಮಾಡದೆ ಇದ್ದರೆ, ಹೇಳ ಹೆಸರಿಲ್ಲದ ಹಾಗೆ, ನಿನ್ನನ್ನು ತುಳಿದುಬಿಡುತ್ತಾರೆ ; ತಲೆಯೆತ್ತಲು, ಸ್ವಾವಲಂಬಿಯಾಗಲು, ಮುದಿಯಾದರೂ<noinclude></noinclude> 0y7bq25036aqm10q9ms8rwqtxk0pp25 317034 317022 2026-05-04T14:56:08Z Shreelatha.Halemane 7642 /* Validated */ 317034 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೨೫}} '''ಯೌವನ ಅಥವಾ ಪ್ರೌಢ ವಯಸ್ಸಿನವರಲ್ಲಿ ಮನಸ್ಸಿನ ಕಾರ್ಯಕ್ರಮ.''' {{gap}}ಯಾವುದಾದರೂ ಮದುವೆಯ ಮನೆಯಲ್ಲಿ ಹದಿಮೂರು ಹದಿನಾಲ್ಕು ವಯಸ್ಸಿನ ಹುಡುಗರೂ ಹುಡುಗಿಯರೂ ಬೇಕಾಬಿಟ್ಟಿಯಾಗಿ ಆಡಿಕೊಂಡಿರುತ್ತಾರೆ. ಅವರುಗಳ ಕಣ್ಣಿಗೆ ಇವನು ಗಡವಾ, ಇವನೊಂದಿಗೆ ಆಡುವುದಿಲ್ಲ, ಅವರೊಂದಿಗೆ ಆಡಲು ಇವನಿಗೂ ಇಷ್ಟವಿರುವುದಿಲ್ಲ. ಏಕೆಂದರೆ ನಾನು ಬೆಳೆದಿದ್ದೇನೆ. ಈಗ ದೊಡ್ಡವ ಎಂಬ ಭಾವನೆಯು ಉಂಟಾಗುತ್ತದೆ. ಚಡ್ಡಿಯ ಬದಲು ಪಂಚೆಯನ್ನೋ ಅಥವಾ ಪೈಜಾಮಗಳನ್ನೋ ಧರಿಸಲು ಶುರುಮಾಡಿರುತ್ತಾನೆ. ದೊಡ್ಡವರು ಕೂತಿರುವೆಡೆಗೆ ಹೋಗಿ, ತಾನೂ ಅವರ ಮಾತುಕತೆಗಳಲ್ಲಿ ತಲೆ ಹಾಕತೊಡಗುತ್ತಾನೆ. 'ಅಧಿಕ ಪ್ರಸಂಗಿ ; ದೊಡ್ಡವರ ಮಾತಿನಲ್ಲಿ ತಲೆ ಹಾಕಬೇಡ ; ಹುಡುಗರ ಜತೆಗೆ ಆಡಿಕೋ ಹೋಗು' ಎಂದು ಬೈಸಿಕೊಂಡು, ಮನಸ್ಸು ಚಿಕ್ಕದು ಮಾಡಿಕೊಂಡು, ಬೇರೆಡೆಗೆ ಸಾಗುತ್ತನೆ. ಸಮ ವಯಸ್ಕರು ಸಿಗದಿದ್ದರೆ ನಾಯಿಪಾಡೇ ಅವನದು. ಮದುವೆಯ ಗಿಜಿಗಿಜಿಯಲ್ಲಿ ಅವ ಒಂಟಿ. {{gap}}ಈ ರೀತಿಯಲ್ಲಿ ಆರಂಭವಾಗುತ್ತದೆ ಯುವಕನ ವಯಸ್ಸು, ಪೌಗಂಡ ವಯಸ್ಸು 'ತನ್ನ ತನವು, EGO ವು ಸಾಕಷ್ಟು ಬೆಳೆದಿರುತ್ತದೆ. ದೇಹವೂ ಹೊರವಾಗಿರುತ್ತದೆ. ತಾಯ್ತಂದೆಯರು, ಮತ್ತು ಮನೆಯ ಇತರರು ಬಾಲ್ಯದಲ್ಲಿ, ಮುದ್ದು ಮಾಡುವಂತೆ, ಈಗ ಮಾಡುವುದಿಲ್ಲ. ದೊಡ್ಡವರು ಇವನನ್ನು ಗೌರವಿಸುವುದೂ ಇಲ್ಲ. ಮರ್ಯಾದೆಯಿಂದ ಇತರರನ್ನು ಮಾತನಾಡಿಸುವಂತೆ, ಮಾತನಾಡಿಸುವುದೂ ಇಲ್ಲ. ಹೀಗಾಗಿ ಬಾಲ್ಯದ ಅದರವೂ ತಪ್ಪಿತು ; ಬೆಳೆದವರ ಸದರವೂ ಸಿಗಲಿಲ್ಲ. ಯುವಕನ EGOವಿಗೆ ಪೆಟ್ಟು ಬೀಳುತ್ತಲೇ ಇರುತ್ತದೆ. {{gap}}ID ಇನ ಕಾವ್ಯಗಳು ಈ ವಯಸ್ಸಿನಲ್ಲಿ, ಬಾಲ್ಯದಲ್ಲಿದ್ದಂತೆ ಸುಪ್ತವಾಗಿರುವುದಿಲ್ಲ. ಸ್ಪಷ್ಟವಾಗತೊಡಗುತ್ತವೆ. ಅವುಗಳನ್ನು ಈಡೇರಿಸಲು, EGO ವಿಗೆ ಸಾಕಷ್ಟು ಲೋಕಾನುಭವವಾಗಲೀ, ಅಗತ್ಯವಾದಷ್ಟು ಸ್ವಯಂಶಕ್ತಿಯಾಗಲೀ ಯುವಕನಲ್ಲಿರುವುದಿಲ್ಲ. ಪೆಟ್ಟುಗಳನ್ನು ಪರಿಸರದಿಂದ ಪಡೆಯುತ್ತಿರುವ EGO ವನ್ನು, ಅವನ ID ಈಗ ಕೆಣಕತೊಡಗುತ್ತದೆ. 'ಲೇ, EGO! ಪುರಾತನವಾದ ನನ್ನ ಭುಜಗಳ ಮೇಲೆ ನೀನು ಕುಳಿತಿರುವೆ. ನಿನಗೆ ಸಾಕಷ್ಟು ಅವಮಾನವಾಗಿದೆ, ಗಾಯಗಳಾಗಿವೆ. ನನ್ನ ಮಾತನ್ನು ಕೇಳು. ನಿನ್ನ ಹಿರಿಮೆಯನ್ನು ಸಾಧಿಸಿಕೋ, ಬಂಡೆದ್ದು ಹೋರಾಡಿಯಾದರೂ ಎಲ್ಲರಿಗಿಂತಲೂ ತಲೆಯನ್ನು ಹೆಚ್ಚು ಎತ್ತರ ನಿಲ್ಲಿಸು. ಹಾಗೆ ನೀನು ಮಾಡದೆ ಇದ್ದರೆ, ಹೇಳ ಹೆಸರಿಲ್ಲದ ಹಾಗೆ, ನಿನ್ನನ್ನು ತುಳಿದುಬಿಡುತ್ತಾರೆ ; ತಲೆಯೆತ್ತಲು, ಸ್ವಾವಲಂಬಿಯಾಗಲು, ಮುದಿಯಾದರೂ<noinclude></noinclude> ecb8ycr0arewp3y4kayeka3qqobb8bm ಪುಟ:ಮನಮಂಥನ.pdf/೩೪೪ 104 62791 317021 314524 2026-05-04T14:41:18Z Shreesha Sharma 7840 /* Proofread */ 317021 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೩೨೬}}{{Right|ಮನಮಂಥನ}} ಬಲಿತಿರುವ ಸಮಾಜದ ಗೃಧಗಳು ಅವಕಾಶವನ್ನು ಕೊಡುವುದಿಲ್ಲ ; ಎಂದು ಹುಷಾರು ಕೊಡುತ್ತಾ ಹೀಯಾಳಿಸುತ್ತದೆ. EGO ಈಗ ಉಳಿಯಬೇಕಾದರೆ ತಿರುಗಿಬೀಳಲೇ ಬೇಕು. ಬಂಡಾಯವೇಳಲೇಬೇಕು. ಯುವಕರ ಬಂಡಾಯವೇಳುವ ಪ್ರವೃತ್ತಿಯು ಈ ರೀತಿಯಲ್ಲಿ ಆರಂಭಿಸುತ್ತದೆ. ಯುವಕನು ಈ ವೇಳೆಗೆ ಶಾಲೆಗಳಲ್ಲಿ ಹಲವಾರು ವರ್ಷಗಳು ವ್ಯಾಸಂಗವನ್ನು ಮಾಡಿರುತ್ತಾನೆ, ಹೈಸ್ಕೂಲಿನ ಹೊರ ಹೊಸಿಲನ್ನು ದಾಟುವಂತಾಗುತ್ತಿದ್ದಾನೆ. ಮೃಗಗಳನ್ನೂ, ಪಕ್ಷಿಗಳನ್ನೂ ಸಿನಿಮಾಗಳನ್ನೂ ನೋಡಿ, ಕೂತೂಹಲದಿಂದ ಬಾಳಿನ ಪಾಠಗಳನ್ನು ಅಲ್ಪ ಸ್ವಲ್ಪ ಅರಿತಿರುತ್ತಾನೆ. ಅಂದರೆ ಅವನ ಕಾವ್ಯ ಪ್ರವೃತ್ತಿಗಳಿಗೆ ತಂಪೆರೆಯುವ ಕಾರ್ಯಕ್ರಮಗಳನ್ನು ತಿಳಿದಿರುತ್ತಾನೆ. ಬಾಲ್ಯದ ಕಾಮಲೀಲೆಗಳು, ಯುವಕನಲ್ಲಿ ಕಾಮ ಕೇಳಿಯಾಡಲು, ಸಿದ್ಧವಾಗತೊಡಗಿರುತ್ತವೆ. ಯಶೋದೆಯು ಆಡಿಸಿದ ಬಾಲಕೃಷ್ಣನು, ಈಗ ಜಗವನ್ನು ಉದ್ಧರಿಸುವ, ಸಂತಾನದ ಪರಂಪರೆಯನ್ನು ಅವ್ಯಾಹತವಾಗಿ ಮುಂದುವರೆಸುವ, ಕಾಮಕೃಷ್ಣ ನಾಗುತ್ತಾನೆ, ಕಾಮಕೃಷ್ಣನಾಗಲು ಯತ್ನಿಸುತ್ತಾನೆ. ಅತ್ಯಂತ ಪ್ರಭಾವಿಯಾದ ಈ ಪ್ರೇರಣೆಯು ಯುವಕನನ್ನು ಜಗ್ಗಿ ಆಡಿ, ನಡೆಸುತ್ತದೆ ಚಿತ್ರ ವಿಚಿತ್ರ ರೀತಿಗಳಲ್ಲಿ. ಪುರಾತನವಾದ ಈ ಪ್ರವೃತ್ತಿಯು ಬಾಳಿಗೆ ಅತ್ಯಗತ್ಯವಾಗಿದ್ದರೂ, ಸ್ಟೇಚ್ಛಾ ವೃತ್ತಿಯಾದರೆ ಸಮಾಜದ ಭದ್ರತೆಯನ್ನು ಸಡಿಲಗೊಳಿಸುತ್ತದೆ. ಆದಕಾರಣ ಸಮಾಜದ ಅನುಭಾವೀ ಗೃಧಗಳು, ಯುವಕರನ್ನು ತಹಬಂದಿಯಲ್ಲಿಡಲು ಶತ ಪ್ರಯತ್ನವನ್ನು ಮಾಡುತ್ತಾರೆ. ಸರ್ವಪ್ರಯತ್ನವನ್ನೂ ಮಾಡುತ್ತಾರೆ. ಕಿರಿಯರು ಮತ್ತು ಹಿರಿಯರು, ಇವರುಗಳ ನಡುವೆ ನಡೆಯುವ ಝಂಝಾಟಕ್ಕೆ ವಿಭಿನ್ನವಾದ ದೃಷ್ಟಿಕೋನಗಳು ಕಾರಣ. ಕಿರಿಯರ ID ಹುಮ್ಮಸ್ಸಿನ ಪ್ರಭಾವ ಒಂದು ಕಡೆ, ಹಿರಿಯರ Super-Ego, ಪ್ರಭಾವ ಮತ್ತೊಂದು ಕಡೆ. ಹೀಗೆ ಪ್ರತಿ ವೃತ್ತಿಯಲ್ಲೂ ಕಂಡುಬರುವ ಜಗ್ಗಾಟವು ಸಮಾಜದಲ್ಲಿಯೂ ಕಾಣಬರುತ್ತದೆ. ಸಮಾಜ ಎಂದರೆ ವ್ಯಕ್ತಿಯ ಸುತ್ತಲೂ ಇರುವ ಪರಿಸರ. ಮನೆಯಲ್ಲಿ ಪ್ರಾರಂಭವಾಗುತ್ತದೆ. ತಾಯಿಯ ರಕ್ಷಣೆ ತಂದೆಯ ಶಿಕ್ಷಣ, ಇವುಗಳಿಂದ ಬಾಲಕನ ಸಮಾಜವು ಶುರುವಾಗುತ್ತದೆ. ಶಾಲೆಗೆ ಸೇರಿದ ಬಾಲಕನಿಗೆ, ಕಲಿಸುವ ಮಾಸ್ತರು ತಂದೆಯ ಪ್ರತಿಬಿಂಬವಾಗುತ್ತಾರೆ. ಆನಂತರ ಬೆಳೆದ ಯುವಕನು ಸಮಾಜದ ಗಣ್ಯ ವ್ಯಕ್ತಿಗಳನ್ನು ತಂದೆಯ ಪ್ರತಿಬಿಂಬವನ್ನಾಗಿಸಿಕೊಳ್ಳುತ್ತಾನೆ. Father Image ಈ ರೀತಿ ಹರಡುತ್ತದೆ. ಸಮಾಜದ ಹತ್ತೂ ಮಂದಿಗೆ ಅನ್ವಯಿಸಿಕೊಳ್ಳುತ್ತದೆ.<noinclude></noinclude> s7n3ljsab33lvpditp3tymkv1pnk8cq 317035 317021 2026-05-04T14:56:36Z Shreelatha.Halemane 7642 /* Validated */ 317035 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೩೨೬}}{{Right|ಮನಮಂಥನ}} ಬಲಿತಿರುವ ಸಮಾಜದ ಗೃಧಗಳು ಅವಕಾಶವನ್ನು ಕೊಡುವುದಿಲ್ಲ ; ಎಂದು ಹುಷಾರು ಕೊಡುತ್ತಾ ಹೀಯಾಳಿಸುತ್ತದೆ. EGO ಈಗ ಉಳಿಯಬೇಕಾದರೆ ತಿರುಗಿಬೀಳಲೇ ಬೇಕು. ಬಂಡಾಯವೇಳಲೇಬೇಕು. ಯುವಕರ ಬಂಡಾಯವೇಳುವ ಪ್ರವೃತ್ತಿಯು ಈ ರೀತಿಯಲ್ಲಿ ಆರಂಭಿಸುತ್ತದೆ. {{gap}}ಯುವಕನು ಈ ವೇಳೆಗೆ ಶಾಲೆಗಳಲ್ಲಿ ಹಲವಾರು ವರ್ಷಗಳು ವ್ಯಾಸಂಗವನ್ನು ಮಾಡಿರುತ್ತಾನೆ, ಹೈಸ್ಕೂಲಿನ ಹೊರ ಹೊಸಿಲನ್ನು ದಾಟುವಂತಾಗುತ್ತಿದ್ದಾನೆ. ಮೃಗಗಳನ್ನೂ, ಪಕ್ಷಿಗಳನ್ನೂ ಸಿನಿಮಾಗಳನ್ನೂ ನೋಡಿ, ಕೂತೂಹಲದಿಂದ ಬಾಳಿನ ಪಾಠಗಳನ್ನು ಅಲ್ಪ ಸ್ವಲ್ಪ ಅರಿತಿರುತ್ತಾನೆ. ಅಂದರೆ ಅವನ ಕಾವ್ಯ ಪ್ರವೃತ್ತಿಗಳಿಗೆ ತಂಪೆರೆಯುವ ಕಾರ್ಯಕ್ರಮಗಳನ್ನು ತಿಳಿದಿರುತ್ತಾನೆ. ಬಾಲ್ಯದ ಕಾಮಲೀಲೆಗಳು, ಯುವಕನಲ್ಲಿ ಕಾಮ ಕೇಳಿಯಾಡಲು, ಸಿದ್ಧವಾಗತೊಡಗಿರುತ್ತವೆ. {{gap}}ಯಶೋದೆಯು ಆಡಿಸಿದ ಬಾಲಕೃಷ್ಣನು, ಈಗ ಜಗವನ್ನು ಉದ್ಧರಿಸುವ, ಸಂತಾನದ ಪರಂಪರೆಯನ್ನು ಅವ್ಯಾಹತವಾಗಿ ಮುಂದುವರೆಸುವ, ಕಾಮಕೃಷ್ಣ ನಾಗುತ್ತಾನೆ, ಕಾಮಕೃಷ್ಣನಾಗಲು ಯತ್ನಿಸುತ್ತಾನೆ. ಅತ್ಯಂತ ಪ್ರಭಾವಿಯಾದ ಈ ಪ್ರೇರಣೆಯು ಯುವಕನನ್ನು ಜಗ್ಗಿ ಆಡಿ, ನಡೆಸುತ್ತದೆ ಚಿತ್ರ ವಿಚಿತ್ರ ರೀತಿಗಳಲ್ಲಿ. {{gap}}ಪುರಾತನವಾದ ಈ ಪ್ರವೃತ್ತಿಯು ಬಾಳಿಗೆ ಅತ್ಯಗತ್ಯವಾಗಿದ್ದರೂ, ಸ್ಟೇಚ್ಛಾ ವೃತ್ತಿಯಾದರೆ ಸಮಾಜದ ಭದ್ರತೆಯನ್ನು ಸಡಿಲಗೊಳಿಸುತ್ತದೆ. ಆದಕಾರಣ ಸಮಾಜದ ಅನುಭಾವೀ ಗೃಧಗಳು, ಯುವಕರನ್ನು ತಹಬಂದಿಯಲ್ಲಿಡಲು ಶತ ಪ್ರಯತ್ನವನ್ನು ಮಾಡುತ್ತಾರೆ. ಸರ್ವಪ್ರಯತ್ನವನ್ನೂ ಮಾಡುತ್ತಾರೆ. {{gap}}ಕಿರಿಯರು ಮತ್ತು ಹಿರಿಯರು, ಇವರುಗಳ ನಡುವೆ ನಡೆಯುವ ಝಂಝಾಟಕ್ಕೆ ವಿಭಿನ್ನವಾದ ದೃಷ್ಟಿಕೋನಗಳು ಕಾರಣ. ಕಿರಿಯರ ID ಹುಮ್ಮಸ್ಸಿನ ಪ್ರಭಾವ ಒಂದು ಕಡೆ, ಹಿರಿಯರ Super-Ego, ಪ್ರಭಾವ ಮತ್ತೊಂದು ಕಡೆ. ಹೀಗೆ ಪ್ರತಿ ವೃತ್ತಿಯಲ್ಲೂ ಕಂಡುಬರುವ ಜಗ್ಗಾಟವು ಸಮಾಜದಲ್ಲಿಯೂ ಕಾಣಬರುತ್ತದೆ. {{gap}}ಸಮಾಜ ಎಂದರೆ ವ್ಯಕ್ತಿಯ ಸುತ್ತಲೂ ಇರುವ ಪರಿಸರ. ಮನೆಯಲ್ಲಿ ಪ್ರಾರಂಭವಾಗುತ್ತದೆ. ತಾಯಿಯ ರಕ್ಷಣೆ ತಂದೆಯ ಶಿಕ್ಷಣ, ಇವುಗಳಿಂದ ಬಾಲಕನ ಸಮಾಜವು ಶುರುವಾಗುತ್ತದೆ. ಶಾಲೆಗೆ ಸೇರಿದ ಬಾಲಕನಿಗೆ, ಕಲಿಸುವ ಮಾಸ್ತರು ತಂದೆಯ ಪ್ರತಿಬಿಂಬವಾಗುತ್ತಾರೆ. ಆನಂತರ ಬೆಳೆದ ಯುವಕನು ಸಮಾಜದ ಗಣ್ಯ ವ್ಯಕ್ತಿಗಳನ್ನು ತಂದೆಯ ಪ್ರತಿಬಿಂಬವನ್ನಾಗಿಸಿಕೊಳ್ಳುತ್ತಾನೆ. Father Image ಈ ರೀತಿ ಹರಡುತ್ತದೆ. ಸಮಾಜದ ಹತ್ತೂ ಮಂದಿಗೆ ಅನ್ವಯಿಸಿಕೊಳ್ಳುತ್ತದೆ.<noinclude></noinclude> gsb722skezh3y02hp02jjrjp82apir1 ಪುಟ:ಮನಮಂಥನ.pdf/೩೪೫ 104 62792 317020 314526 2026-05-04T14:38:03Z Shreesha Sharma 7840 /* Proofread */ 317020 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೨೭}} ಇವರುಗಳಲ್ಲಿ ಯಾರಮೇಲಾದರೂ ಯುವಕನು ತಿರುಗಿ ಬೀಳುತ್ತಾನೆ. ವನ್ಯ ಮೃಗಗಳಲ್ಲಿ ಯುವಕ ಮೃಗವು ಬಂಡೇಳುವುದನ್ನು ಪ್ರತ್ಯಕ್ಷವಾಗಿ ಕಾಣಬಹುದು. ಹಿಂಡಿನ ನಾಯಕನಾದ ಸಲಗನು ಮುಪ್ಪಾದರೆ, ಅದನ್ನು ಹಿಂಡಿನಲ್ಲಿರುವ ಹೋರಿ ಆನೆಯು ಬಡಿದುಹಾಕಿ, ತಾನೇ ಯಜಮಾನನಾಗುತ್ತದೆ. ಮುಪ್ಪಿಗರನ್ನು ಮೂಲೆಗೆ ಹಾಕಿ, ಬಂಡೆದ್ದು ಹೋರಾಡಿ ಯಾಜಮಾನ್ಯವನ್ನು ವಹಿಸಿಕೊಳ್ಳುವುದು ಯೌವನದ ಸ್ವಾಭಾವಿಕ ಪ್ರವೃತ್ತಿ. ಪ್ರಕೃತಿ ಸಹಜವಾದ ಈ ನಡವಳಿಕೆಯು ಮನುಷ್ಯರಲ್ಲಿ ವನ್ಯಮೃಗಗಳಲ್ಲಿದ್ದಂತೆ ಕಾಣಬರುವುದಿಲ್ಲ. ಏಕೆಂದರೆ ಮನುಷ್ಯನ ಬೆಳವಣಿಗೆಯಲ್ಲಿ ದೇಹಕ್ಕಿಂತ ಮಿಗಿಲಾಗಿ ಮನಸ್ಸು ಅಭಿವೃದ್ಧಿಯಾಗಿರುತ್ತದೆ. ಮನಸ್ಸಿನಲ್ಲಿ ಸತ್-ಚೈತನ್ಯಾಂಶವು, ಬಾಲ್ಯದಿಂದಲೂ ಸಾಕಷ್ಟು ದೃಢವಾಗಿ ರೂಢಿಸಲ್ಪಟ್ಟಿರುತ್ತದೆ. Super-Ego ಪ್ರಬಲವಾದ ಶಕ್ತಿಯಾಗಿರುತ್ತದೆ. ಬಾಲ್ಯದಲ್ಲಿ ಅಕ್ಷರಾಭ್ಯಾಸವನ್ನು ಮಾಡಿಸುವಾಗ, ಶ್ರೀಓನಾಮವನ್ನು ಕಲಿಸುವಾಗ ಏನೇನನ್ನೆಲ್ಲಾ ಕಲಿಸಿ ನನ್ನ ಬಾಳನ್ನು ಹಸನುಗೊಳಿಸುತ್ತಾರೆ. ಎಷ್ಟು ಆದರದಿಂದ ನನ್ನ ಭವಿಷ್ಯವನ್ನು ಸುಗಮ ಮಾಡಲು ಹಾತೊರೆಯುತ್ತಾರೆ ಎಂದು ಬಾಲಕನು ಅಂದುಕೊಳ್ಳುತ್ತಾನೆ. 'ಮಾತೃದೇವೋಭವ ; ಪಿತೃ ದೇವೋಭವ ; ಆಚಾರ್ಯ ದೇವೋಭವ' ಎಂಬ ಪಾಠಗಳನ್ನು ಕಲಿಸಿದಾಗ, ಶತಾಂಶ ಸತ್ಯ ಅವುಗಳು ಎಂದು ತಿಳಿಯುತ್ತಾನೆ. ನಿಸ್ಸಂದೇಹವಾಗಿ ನಂಬುತ್ತಾನೆ. ಬಾಲಕನ ಮನಸ್ಸನ್ನು Brain-wash ಮಾಡಲು ಬಾಲ್ಯದ ಪಾಶಗಳು ನಾಂದಿಯಾಗುತ್ತವೆ. ಮಕ್ಕಳ ಶಾಲೆಗಳಲ್ಲಿ, ಮೆಚ್ಚಿ ನುಡಿದ ಮಾಸ್ತರ ಹೊಗಳಿಕೆಗಳು ಮಕ್ಕಳ ಅಹಂಕಾರವನ್ನು ಅಭಿವೃದ್ಧಿಸುವುದಲ್ಲದೇ, ಮಾಸ್ತರು ನನ್ನ ಹಿತ ಚಿಂತಕರು, ಅವರ ಆಶೀರ್ವಾದದಿಂದ ನನ್ನ ಬಾಳು ಹಿತಮಯವಾಗಬೇಕು ಎಂಬ ದೃಢ ನಂಬಿಕೆಯನ್ನೂ ಮೂಡಿಸುತ್ತದೆ. ಹಿರಿಯರ ಆಶೀರ್ವಾದವೇ ನನ್ನ ರಕ್ಷಾ ಕವಚ ಎಂದುಕೊಂಡ ಬಾಲಕನು. ಆನಂತರ ಎಷ್ಟೇ ವರ್ಷಗಳಾಗಲೀ, ಸಾಯುವ ತನಕ ಇದನ್ನು ನಂಬುತ್ತಾನೆ. ಬಾಳ ಅನುಭವದಲ್ಲಿ ವ್ಯಕ್ತಿರಿಕ್ತವಾದ ಸಾಕ್ಷ್ಯಗಳು ಎಷ್ಟೇ ದೊರಕಿದರೂ ಬಾಲ್ಯದ ನಂಬಿಕೆಗಳನ್ನು, ಹಿರಿಯರ ಆಶೀರ್ವಾದದ ರಕ್ಷಾ ಗುಣವನ್ನು, ಅವ ಬಿಟ್ಟುಕೊಡುವುದಿಲ್ಲ. ಭದ್ರವಾಗಿ ಕಟ್ಟಿಕೊಂಡೇ ಇರುತ್ತಾನೆ, 'ತನ್ನ' ತನದೊಂದಿಗೆ. ಬಾಲಕನು ಯುವಕನಾದಾಗ, ಮೃಗಗಳೆಲ್ಲದರಲ್ಲಿಯೂ ಇರುವಂತೆ, ಮುದಿ ಹಿರಿಯರ ವಿರುದ್ಧ ಬಂಡೇಳುವ ಪ್ರವೃತ್ತಿಯು ಹೆಡೆಯೆತ್ತುತ್ತದೆ. ಆದರೆ ಬಾಲ್ಯದಿಂದ<noinclude></noinclude> mvi7cztn2w5xnlolst2t1k481bcxz1k 317036 317020 2026-05-04T14:57:14Z Shreelatha.Halemane 7642 /* Validated */ 317036 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೨೭}} ಇವರುಗಳಲ್ಲಿ ಯಾರಮೇಲಾದರೂ ಯುವಕನು ತಿರುಗಿ ಬೀಳುತ್ತಾನೆ. {{gap}}ವನ್ಯ ಮೃಗಗಳಲ್ಲಿ ಯುವಕ ಮೃಗವು ಬಂಡೇಳುವುದನ್ನು ಪ್ರತ್ಯಕ್ಷವಾಗಿ ಕಾಣಬಹುದು. ಹಿಂಡಿನ ನಾಯಕನಾದ ಸಲಗನು ಮುಪ್ಪಾದರೆ, ಅದನ್ನು ಹಿಂಡಿನಲ್ಲಿರುವ ಹೋರಿ ಆನೆಯು ಬಡಿದುಹಾಕಿ, ತಾನೇ ಯಜಮಾನನಾಗುತ್ತದೆ. ಮುಪ್ಪಿಗರನ್ನು ಮೂಲೆಗೆ ಹಾಕಿ, ಬಂಡೆದ್ದು ಹೋರಾಡಿ ಯಾಜಮಾನ್ಯವನ್ನು ವಹಿಸಿಕೊಳ್ಳುವುದು ಯೌವನದ ಸ್ವಾಭಾವಿಕ ಪ್ರವೃತ್ತಿ. {{gap}}ಪ್ರಕೃತಿ ಸಹಜವಾದ ಈ ನಡವಳಿಕೆಯು ಮನುಷ್ಯರಲ್ಲಿ ವನ್ಯಮೃಗಗಳಲ್ಲಿದ್ದಂತೆ ಕಾಣಬರುವುದಿಲ್ಲ. ಏಕೆಂದರೆ ಮನುಷ್ಯನ ಬೆಳವಣಿಗೆಯಲ್ಲಿ ದೇಹಕ್ಕಿಂತ ಮಿಗಿಲಾಗಿ ಮನಸ್ಸು ಅಭಿವೃದ್ಧಿಯಾಗಿರುತ್ತದೆ. ಮನಸ್ಸಿನಲ್ಲಿ ಸತ್-ಚೈತನ್ಯಾಂಶವು, ಬಾಲ್ಯದಿಂದಲೂ ಸಾಕಷ್ಟು ದೃಢವಾಗಿ ರೂಢಿಸಲ್ಪಟ್ಟಿರುತ್ತದೆ. Super-Ego ಪ್ರಬಲವಾದ ಶಕ್ತಿಯಾಗಿರುತ್ತದೆ. {{gap}}ಬಾಲ್ಯದಲ್ಲಿ ಅಕ್ಷರಾಭ್ಯಾಸವನ್ನು ಮಾಡಿಸುವಾಗ, ಶ್ರೀಓನಾಮವನ್ನು ಕಲಿಸುವಾಗ ಏನೇನನ್ನೆಲ್ಲಾ ಕಲಿಸಿ ನನ್ನ ಬಾಳನ್ನು ಹಸನುಗೊಳಿಸುತ್ತಾರೆ. ಎಷ್ಟು ಆದರದಿಂದ ನನ್ನ ಭವಿಷ್ಯವನ್ನು ಸುಗಮ ಮಾಡಲು ಹಾತೊರೆಯುತ್ತಾರೆ ಎಂದು ಬಾಲಕನು ಅಂದುಕೊಳ್ಳುತ್ತಾನೆ. 'ಮಾತೃದೇವೋಭವ ; ಪಿತೃ ದೇವೋಭವ ; ಆಚಾರ್ಯ ದೇವೋಭವ' ಎಂಬ ಪಾಠಗಳನ್ನು ಕಲಿಸಿದಾಗ, ಶತಾಂಶ ಸತ್ಯ ಅವುಗಳು ಎಂದು ತಿಳಿಯುತ್ತಾನೆ. ನಿಸ್ಸಂದೇಹವಾಗಿ ನಂಬುತ್ತಾನೆ. {{gap}}ಬಾಲಕನ ಮನಸ್ಸನ್ನು Brain-wash ಮಾಡಲು ಬಾಲ್ಯದ ಪಾಶಗಳು ನಾಂದಿಯಾಗುತ್ತವೆ. ಮಕ್ಕಳ ಶಾಲೆಗಳಲ್ಲಿ, ಮೆಚ್ಚಿ ನುಡಿದ ಮಾಸ್ತರ ಹೊಗಳಿಕೆಗಳು ಮಕ್ಕಳ ಅಹಂಕಾರವನ್ನು ಅಭಿವೃದ್ಧಿಸುವುದಲ್ಲದೇ, ಮಾಸ್ತರು ನನ್ನ ಹಿತ ಚಿಂತಕರು, ಅವರ ಆಶೀರ್ವಾದದಿಂದ ನನ್ನ ಬಾಳು ಹಿತಮಯವಾಗಬೇಕು ಎಂಬ ದೃಢ ನಂಬಿಕೆಯನ್ನೂ ಮೂಡಿಸುತ್ತದೆ. ಹಿರಿಯರ ಆಶೀರ್ವಾದವೇ ನನ್ನ ರಕ್ಷಾ ಕವಚ ಎಂದುಕೊಂಡ ಬಾಲಕನು. ಆನಂತರ ಎಷ್ಟೇ ವರ್ಷಗಳಾಗಲೀ, ಸಾಯುವ ತನಕ ಇದನ್ನು ನಂಬುತ್ತಾನೆ. ಬಾಳ ಅನುಭವದಲ್ಲಿ ವ್ಯಕ್ತಿರಿಕ್ತವಾದ ಸಾಕ್ಷ್ಯಗಳು ಎಷ್ಟೇ ದೊರಕಿದರೂ ಬಾಲ್ಯದ ನಂಬಿಕೆಗಳನ್ನು, ಹಿರಿಯರ ಆಶೀರ್ವಾದದ ರಕ್ಷಾ ಗುಣವನ್ನು, ಅವ ಬಿಟ್ಟುಕೊಡುವುದಿಲ್ಲ. ಭದ್ರವಾಗಿ ಕಟ್ಟಿಕೊಂಡೇ ಇರುತ್ತಾನೆ, 'ತನ್ನ' ತನದೊಂದಿಗೆ. {{gap}}ಬಾಲಕನು ಯುವಕನಾದಾಗ, ಮೃಗಗಳೆಲ್ಲದರಲ್ಲಿಯೂ ಇರುವಂತೆ, ಮುದಿ ಹಿರಿಯರ ವಿರುದ್ಧ ಬಂಡೇಳುವ ಪ್ರವೃತ್ತಿಯು ಹೆಡೆಯೆತ್ತುತ್ತದೆ. ಆದರೆ ಬಾಲ್ಯದಿಂದ<noinclude></noinclude> 4bw8n4j5ng5v57c9nl4wr0quniujct7 ಪುಟ:ಮನಮಂಥನ.pdf/೩೪೬ 104 62793 317018 314527 2026-05-04T14:37:06Z Shreesha Sharma 7840 /* Proofread */ 317018 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೩೨೮}}{{Right|ಮನಮಂಥನ}} Brain-wash ಮಾಡಿಸಿಕೊಂಡು, ಆ ಮೂಲಕ Super-Ego ಅಥವಾ ಸತ್ ಚೈತನ್ಯಾಂಶವನ್ನು ಬೆಳೆಸಿಕೊಂಡ ಯುವಕನು, ಹೋರಿ ಆನೆಯಂತೆ ಮುದಿ ಸಲಗನನ್ನು ಹೊಡೆದು ಬಡೆದು ಕೋರೆ ಕೊಂಬುಗಳಿಂದ ತಿವಿದು ಓಡಿಸುವುದಿಲ್ಲ. ಆದರೆ ಮುದಿ ಸಲಗನಿಗೆ Sentimental ಆಗಿ ಆದರದಿಂದ, ದೈಹಿಕ ರಕ್ಷಣೆಯನ್ನು ನೀಡುತ್ತಾನೆ. ಮಾನಸಿಕವಾಗಿ, ಮುಪ್ಪಿನ ಹಿರಿಯರು ಅರಳುಮರುಳಿನಿಂದ ನೀಡಿದ ಸಲಹೆಗಳನ್ನು ಮತ್ತು ಉಪದೇಶಗಳನ್ನು ತೃಣೀಕರಿಸಿ, ಅವರುಗಳಿಗೆ ಮನೋಘಾತವನ್ನು, ಮಾನಸಿಕ ಗಾಯಗಳನ್ನೂ ಲಕ್ಷಣವಾಗಿ ಮಾಡುತ್ತಾನೆ ಮಾನಸಿಕ ಈ ಹೋರಾಟದಲ್ಲಿ ಹಿರಿಯ ಮುದುಕರು ಸೋತು ಮಾನಸಿಕವಾಗಿ ಮದುಡಿಕೊಳ್ಳುತ್ತಾರೆ. ಹರಿಯುತ್ತಿರುವ ಸಾವಿರಕಾಲನ್ನು ಹಂಚಿಕಡ್ಡಿಯಿಂದ ಚುಚ್ಚಿದರೆ, ಅದು ಸುರುಳು ಸುತ್ತಿಕೊಂಡು ಮುಂದೆ ಹೋಗದೆ ಹಿಂದಕ್ಕೂ ಸಾಗದೆ ಮುದುಡಿಕೊಳ್ಳುವುದಿಲ್ಲವೇ, ಹಾಗೆ ಹಿರಿಯ ಮುದುಕರ ಮನಸ್ಸು ಸುರುಳಿ ಸುತ್ತಿ ಮುದುಡಿಕೊಳ್ಳುತ್ತದೆ. ಹೀಗೆ ಮಾಡುವಾಗ, ಯುವಕನಿಗೆ, ಮೊದಮೊದಲು ಸಾಕಷ್ಟು ಶಕ್ತಿಯಿರುವುದಿಲ್ಲ. ಆದರೆ ಅದೇ ಮನೋಧರ್ಮವಿರುವ, ಸಮ ವಯಸ್ಕರು, ಸುಮಾರು ಸಂಖ್ಯೆಯಲ್ಲಿ ಜತೆಗೂಡಿದಾಗ, 'ಸಂಘಶಕ್ತಿಃ ಕಲೌಯುಗೇ' ಆಗುತ್ತದೆ. ಸಂಘದ ಶಕ್ತಿಯು ; Co-operative ಪ್ರವೃತ್ತಿಯು ಪರಬಲವಾಗುತ್ತದೆ. ಆಗ ಜಂಗಮ ಜೀವಿಗಳ ಸ್ವಾಭಾವಿಕವಾದ ಮುನ್ನಡೆಗೆ ಅಗತ್ಯವಾದ, ಹಿರಿಯರ ವಿರುದ್ಧ ಬಂಡೇಳುವ ಸಾಹಸ ಪ್ರಯತ್ನವು ಯಶಸ್ವಿಯಾಗಲು ಸುಲಭ ಸಾವಿರಾರು ಯುವಕರು ಜತೆಗೂಡಿ ಸಂಪ್ರದಾಯದ ಕಾನೂನು ಕಟ್ಟಲೆಗಳನ್ನು ಮುರಿಯುವಾಗ, ಗುಂಪಿನಲ್ಲಿ ಗೋವಿಂದ ಎಂತಾಗುತ್ತದೆ. ವ್ಯಕ್ತಿಯ Super Ego ಅಥವಾ ಸತ್- ಚೈತನ್ಯಾಂಶದ ಅಣತಿಯು, ಗುಂಪಿನಲ್ಲಿರುವಾಗ, ತುಂಬಾ ಕಡಿಮೆಯಾಗಿರುತ್ತದೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಗುಂಪಿನಲ್ಲಿದ್ದರೆ ಸುಲಭ. ಮನಸ್ಸ ಆಗ ಉದ್ವೇಗದ ಸ್ಥಿತಿಯಲ್ಲಿರುತ್ತದೆ. ಆಗುಹೋಗುಗಳನ್ನು ಸಾವಧಾನವಾಗಿ ಯೋಚಿಸಲು ವ್ಯವಧಾನವಿರುವುದಿಲ್ಲ. ಸಮಾಜಛಿದ್ರಕ ಕಾರ್ಯಗಳನ್ನು ಮಾಡುತ್ತಿದ್ದೇನೆ ಎನ್ನುವ ಯೋಚನೆಯೂ ಅವನ ಮನಸ್ಸಿನಲ್ಲಿ ಆಗ ಸುಳಿಯುವುದಿಲ್ಲ. ಸಂಪ್ರದಾಯಸ್ಥರ ವಿರುದ್ಧ ಈ ರೀತಿ ಬಂಡೇಳುವಾಗ, ಕೆಚ್ಚಿನಿಂದ ಹೋರಾಡುವಾಗ, ತಪ್ಪು ಮಾಡುತ್ತಿದ್ದೇವೆ ಎನ್ನುವ ಸಂಶಯವು ಉಂಟಾಗುವುದಿಲ್ಲ. ಆ ನಂತರ ಪಶ್ಚಾತ್ತಾಪವೂ ಇರುವುದಿಲ್ಲ. ಹಳೆಯ ನೀರನ್ನು ತೆಗೆದುಹಾಕಿದ ಮೇಲೆ ತಾನೇ ಹೊಸ ನೀರು ತುಂಬಿಕೊಳ್ಳಲು ಅವಕಾಶವಿರುವುದು. ಹೆಚ್ಚು<noinclude></noinclude> eu5q5dhrob4rq9cxio5ekpo9ou1lei7 317037 317018 2026-05-04T14:57:35Z Shreelatha.Halemane 7642 /* Validated */ 317037 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೩೨೮}}{{Right|ಮನಮಂಥನ}} Brain-wash ಮಾಡಿಸಿಕೊಂಡು, ಆ ಮೂಲಕ Super-Ego ಅಥವಾ ಸತ್ ಚೈತನ್ಯಾಂಶವನ್ನು ಬೆಳೆಸಿಕೊಂಡ ಯುವಕನು, ಹೋರಿ ಆನೆಯಂತೆ ಮುದಿ ಸಲಗನನ್ನು ಹೊಡೆದು ಬಡೆದು ಕೋರೆ ಕೊಂಬುಗಳಿಂದ ತಿವಿದು ಓಡಿಸುವುದಿಲ್ಲ. ಆದರೆ ಮುದಿ ಸಲಗನಿಗೆ Sentimental ಆಗಿ ಆದರದಿಂದ, ದೈಹಿಕ ರಕ್ಷಣೆಯನ್ನು ನೀಡುತ್ತಾನೆ. ಮಾನಸಿಕವಾಗಿ, ಮುಪ್ಪಿನ ಹಿರಿಯರು ಅರಳುಮರುಳಿನಿಂದ ನೀಡಿದ ಸಲಹೆಗಳನ್ನು ಮತ್ತು ಉಪದೇಶಗಳನ್ನು ತೃಣೀಕರಿಸಿ, ಅವರುಗಳಿಗೆ ಮನೋಘಾತವನ್ನು, ಮಾನಸಿಕ ಗಾಯಗಳನ್ನೂ ಲಕ್ಷಣವಾಗಿ ಮಾಡುತ್ತಾನೆ ಮಾನಸಿಕ ಈ ಹೋರಾಟದಲ್ಲಿ ಹಿರಿಯ ಮುದುಕರು ಸೋತು ಮಾನಸಿಕವಾಗಿ ಮದುಡಿಕೊಳ್ಳುತ್ತಾರೆ. ಹರಿಯುತ್ತಿರುವ ಸಾವಿರಕಾಲನ್ನು ಹಂಚಿಕಡ್ಡಿಯಿಂದ ಚುಚ್ಚಿದರೆ, ಅದು ಸುರುಳು ಸುತ್ತಿಕೊಂಡು ಮುಂದೆ ಹೋಗದೆ ಹಿಂದಕ್ಕೂ ಸಾಗದೆ ಮುದುಡಿಕೊಳ್ಳುವುದಿಲ್ಲವೇ, ಹಾಗೆ ಹಿರಿಯ ಮುದುಕರ ಮನಸ್ಸು ಸುರುಳಿ ಸುತ್ತಿ ಮುದುಡಿಕೊಳ್ಳುತ್ತದೆ. {{gap}}ಹೀಗೆ ಮಾಡುವಾಗ, ಯುವಕನಿಗೆ, ಮೊದಮೊದಲು ಸಾಕಷ್ಟು ಶಕ್ತಿಯಿರುವುದಿಲ್ಲ. ಆದರೆ ಅದೇ ಮನೋಧರ್ಮವಿರುವ, ಸಮ ವಯಸ್ಕರು, ಸುಮಾರು ಸಂಖ್ಯೆಯಲ್ಲಿ ಜತೆಗೂಡಿದಾಗ, 'ಸಂಘಶಕ್ತಿಃ ಕಲೌಯುಗೇ' ಆಗುತ್ತದೆ. ಸಂಘದ ಶಕ್ತಿಯು ; Co-operative ಪ್ರವೃತ್ತಿಯು ಪರಬಲವಾಗುತ್ತದೆ. ಆಗ ಜಂಗಮ ಜೀವಿಗಳ ಸ್ವಾಭಾವಿಕವಾದ ಮುನ್ನಡೆಗೆ ಅಗತ್ಯವಾದ, ಹಿರಿಯರ ವಿರುದ್ಧ ಬಂಡೇಳುವ ಸಾಹಸ ಪ್ರಯತ್ನವು ಯಶಸ್ವಿಯಾಗಲು ಸುಲಭ ಸಾವಿರಾರು ಯುವಕರು ಜತೆಗೂಡಿ ಸಂಪ್ರದಾಯದ ಕಾನೂನು ಕಟ್ಟಲೆಗಳನ್ನು ಮುರಿಯುವಾಗ, ಗುಂಪಿನಲ್ಲಿ ಗೋವಿಂದ ಎಂತಾಗುತ್ತದೆ. ವ್ಯಕ್ತಿಯ Super Ego ಅಥವಾ ಸತ್- ಚೈತನ್ಯಾಂಶದ ಅಣತಿಯು, ಗುಂಪಿನಲ್ಲಿರುವಾಗ, ತುಂಬಾ ಕಡಿಮೆಯಾಗಿರುತ್ತದೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಗುಂಪಿನಲ್ಲಿದ್ದರೆ ಸುಲಭ. ಮನಸ್ಸ ಆಗ ಉದ್ವೇಗದ ಸ್ಥಿತಿಯಲ್ಲಿರುತ್ತದೆ. ಆಗುಹೋಗುಗಳನ್ನು ಸಾವಧಾನವಾಗಿ ಯೋಚಿಸಲು ವ್ಯವಧಾನವಿರುವುದಿಲ್ಲ. ಸಮಾಜಛಿದ್ರಕ ಕಾರ್ಯಗಳನ್ನು ಮಾಡುತ್ತಿದ್ದೇನೆ ಎನ್ನುವ ಯೋಚನೆಯೂ ಅವನ ಮನಸ್ಸಿನಲ್ಲಿ ಆಗ ಸುಳಿಯುವುದಿಲ್ಲ. {{gap}}ಸಂಪ್ರದಾಯಸ್ಥರ ವಿರುದ್ಧ ಈ ರೀತಿ ಬಂಡೇಳುವಾಗ, ಕೆಚ್ಚಿನಿಂದ ಹೋರಾಡುವಾಗ, ತಪ್ಪು ಮಾಡುತ್ತಿದ್ದೇವೆ ಎನ್ನುವ ಸಂಶಯವು ಉಂಟಾಗುವುದಿಲ್ಲ. ಆ ನಂತರ ಪಶ್ಚಾತ್ತಾಪವೂ ಇರುವುದಿಲ್ಲ. ಹಳೆಯ ನೀರನ್ನು ತೆಗೆದುಹಾಕಿದ ಮೇಲೆ ತಾನೇ ಹೊಸ ನೀರು ತುಂಬಿಕೊಳ್ಳಲು ಅವಕಾಶವಿರುವುದು. ಹೆಚ್ಚು<noinclude></noinclude> p4nb8ki4mw82bpv019afns3qsjvod4p ಪುಟ:ಮನಮಂಥನ.pdf/೩೪೭ 104 62794 317016 314528 2026-05-04T14:35:58Z Shreesha Sharma 7840 /* Proofread */ 317016 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೨೯}} ಉತ್ಕೃಷ್ಟವಾದ, ನವ ಸಮಾಜವನ್ನು ಸೃಷ್ಟಿಸುತ್ತೇವೆ, ಸ್ವಾರ್ಥಿ ಸಂಪ್ರದಾಯಸ್ಥರನ್ನು ಮೂಲೆಗೆ ನೂಕಲೇ ಬೇಕು ಎನ್ನುವ ಹುಮ್ಮನಸ್ಸು ಪ್ರಬಲವಾಗಿರುತ್ತದೆ. ಪ್ರಪಂಚದ ಎಲ್ಲಾ ಕಡೆಗಳಲ್ಲೂ ಕಾಣಬರುವ ಯುವಕ ಅಂದೋಳನಗಳು, ಪ್ರಕೃತಿ ಸಹಜವಾದ ಬಂಡೇಳುವ ಪ್ರವೃತ್ತಿ. The angry young men : The young turks : ಪ್ರಗತಿಶೀಲರು-ಕ್ರಾಂತಿಕಾರಿಗಳು-ಇವೆಲ್ಲವೂ ಸಂಪ್ರದಾಯಸ್ಥ ಸಮಾಜದ ವಿರುದ್ಧ ಬಂಡೇಳುವವರ ಗುಂಪುಗಳು, Father Image ಇನ ವಿರುದ್ಧ ಹೋರಾಡುವ ಈ ಹಲವಾರು ಹೆಸರಿನ ಗುಂಪಿನವರು Step-Father ವಿರುದ್ಧ ಹೋರಾಡುತ್ತಿದ್ದೇವೆ ಎಂದುಕೊಂಡಿರಲೂಬಹುದು. ಸಂಪ್ರದಾಯಸ್ಥರ ವಿರುದ್ಧ ಬಂಡೇಳುವ ಪ್ರಕೃತಿ ಸಹಜವಾದ ಯುವಕ ಪ್ರವೃತ್ತಿಯು ಗುಂಪು ಕಟ್ಟಿಕೊಂಡಾಗ ಮಾತ್ರ ಸಾಧ್ಯ. ಕಾಡಿನಲ್ಲಿ ಹುಲಿಯು ಎರಡೋ ಮೂರೋ ಸೀಳುನಾಯಿಗಳು ಎದುರು ಸಿಕ್ಕಾಗ ಸುಲಭವಾಗಿ ಅವನ್ನು ಸದೆ ಬಡಿದು ಕೊಲ್ಲುತ್ತದೆ. ಆದರೆ ಸೀಳುನಾಯಿಗಳ ಹಿಂಡಿಗೆ ಹುಲಿಯು ಸಿಕ್ಕಿಬಿದ್ದರೆ ಹುಲಿಯನ್ನು ಛಿದ್ರಛಿದ್ರ ಮಾಡುತ್ತದೆ, ಕಲಿಯುಗದಲ್ಲಿ ಶಕ್ತಿಯು ಸಂಘಗಳಲ್ಲಿ ಮಾತ್ರ ಪ್ರಬಲವಾಗಿರಲು ಸಾಧ್ಯ ತಾತ್ಕಾಲಿಕವಾಗಿ, ಸಂಘಗಳನ್ನು ಕಟ್ಟಲಾಗದಿದ್ದಾಗ, ಯುವಕನು ಯಾವ ರೀತಿಯಲ್ಲಿ ಬಂಡೇಳಲು ಸಾಧ್ಯ? ಒಂಟಿಯಾಗಿ ಏನು ಮಾಡುತ್ತಾನೆ? ಬಾಲಕನಾಗಿದ್ದಾಗ, ಮನೆಯಲ್ಲಿ ಮತ್ತು ಶಾಲೆಯಲ್ಲಿ Super-Egoವು- ಅಂದರೆ ಮನಸ್ಸಿನಲ್ಲಿ ರೂಢಿಸಿ ಬೆಳೆಸಲ್ಪಟ್ಟ ಸತ್-ಚೈತನ್ಯಾಂಶವು ದೃಢವಾಗಿದ್ದರೆ, ಆಗ ಯುವಕನು ಧೈಯವಾದಿಯಾಗುತ್ತಾನೆ. ತನ್ನ Id ಇನ ಕಾವ್ಯ ಪ್ರೇರಣೆಗಳನ್ನು ಬದಿಗಿರಿಸಿ, ತನ್ನ ಸುಖವನ್ನು ಮತ್ತು ಲೌಕಿಕ ಭವಿಷ್ಯವನ್ನೂ ಅಲ್ಲಗಳೆಯುತ್ತಾನೆ. ಸಮಾಜದ ದೀನದಲಿತರ ನೆರವಿಗೆ ಹಿಂದು ಮುಂದು ನೋಡದೆ ನುಗ್ಗುತ್ತಾನೆ. ಧೈಯ ಸಾಧನೆಯು, ಮತ್ತು ಆ ದಿಸೆಯಲ್ಲಿ ನಡೆಸುವ ಸ್ವಪ್ರಯತ್ನಗಳು, ಅವನ Ego ವಿಗೆ ತಂಪೆರೆಯುತ್ತವೆ, ಸಂತಸವನ್ನು ನೀಡುತ್ತವೆ. Super-Ego ವು ಸಾಕಷ್ಟು ದೃಢವಾಗಿ ಬೆಳೆಯದೆ ಇದ್ದರೆ, ಆಗ ಯುವಕನ Ego ವು Id ಇನ ಪ್ರಭಾವಕ್ಕೆ ತಲೆಬಾಗುತ್ತದೆ. ಕಾವ್ಯವಸ್ತುಗಳನ್ನು ಪಡೆಯಲು ಯತ್ನಿಸುತ್ತಾನೆ. ಯೌವನದಲ್ಲಿ ಲೋಕಾನುಭವವು ಸಾಲದುದರಿಂದ, ನಡೆಸಿದ ಪ್ರಯತ್ನಗಳು ಕಾವ್ಯಗಳನ್ನು ದೊರಕಿಸಿ ಕೊಡದೆ ಇರಬಹುದು. ಆಗ ಯುವಕನ Ego ವಿಗೆ ಕಸವಿಸಿಯು ಹೆಚ್ಚಾಗುತ್ತದೆ. ಇದನ್ನು ಸಮಾಧಾನ ಪಡಿಸಲು ಅವನು ಕಳ್ಳತನದಿಂದ ಕಾಮ್ಯಗಳನ್ನು ಪಡೆಯಲು ಯತ್ನಿಸುತ್ತಾನೆ. ಅಪರಾಧಗಳನ್ನು<noinclude></noinclude> 24q8i5u6hjzkbp6hne9xioa0ytfadwz 317038 317016 2026-05-04T14:58:08Z Shreelatha.Halemane 7642 /* Validated */ 317038 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೨೯}} ಉತ್ಕೃಷ್ಟವಾದ, ನವ ಸಮಾಜವನ್ನು ಸೃಷ್ಟಿಸುತ್ತೇವೆ, ಸ್ವಾರ್ಥಿ ಸಂಪ್ರದಾಯಸ್ಥರನ್ನು ಮೂಲೆಗೆ ನೂಕಲೇ ಬೇಕು ಎನ್ನುವ ಹುಮ್ಮನಸ್ಸು ಪ್ರಬಲವಾಗಿರುತ್ತದೆ. {{gap}}ಪ್ರಪಂಚದ ಎಲ್ಲಾ ಕಡೆಗಳಲ್ಲೂ ಕಾಣಬರುವ ಯುವಕ ಅಂದೋಳನಗಳು, ಪ್ರಕೃತಿ ಸಹಜವಾದ ಬಂಡೇಳುವ ಪ್ರವೃತ್ತಿ. The angry young men : The young turks : ಪ್ರಗತಿಶೀಲರು-ಕ್ರಾಂತಿಕಾರಿಗಳು-ಇವೆಲ್ಲವೂ ಸಂಪ್ರದಾಯಸ್ಥ ಸಮಾಜದ ವಿರುದ್ಧ ಬಂಡೇಳುವವರ ಗುಂಪುಗಳು, Father Image ಇನ ವಿರುದ್ಧ ಹೋರಾಡುವ ಈ ಹಲವಾರು ಹೆಸರಿನ ಗುಂಪಿನವರು Step-Father ವಿರುದ್ಧ ಹೋರಾಡುತ್ತಿದ್ದೇವೆ ಎಂದುಕೊಂಡಿರಲೂಬಹುದು. {{gap}}ಸಂಪ್ರದಾಯಸ್ಥರ ವಿರುದ್ಧ ಬಂಡೇಳುವ ಪ್ರಕೃತಿ ಸಹಜವಾದ ಯುವಕ ಪ್ರವೃತ್ತಿಯು ಗುಂಪು ಕಟ್ಟಿಕೊಂಡಾಗ ಮಾತ್ರ ಸಾಧ್ಯ. ಕಾಡಿನಲ್ಲಿ ಹುಲಿಯು ಎರಡೋ ಮೂರೋ ಸೀಳುನಾಯಿಗಳು ಎದುರು ಸಿಕ್ಕಾಗ ಸುಲಭವಾಗಿ ಅವನ್ನು ಸದೆ ಬಡಿದು ಕೊಲ್ಲುತ್ತದೆ. ಆದರೆ ಸೀಳುನಾಯಿಗಳ ಹಿಂಡಿಗೆ ಹುಲಿಯು ಸಿಕ್ಕಿಬಿದ್ದರೆ ಹುಲಿಯನ್ನು ಛಿದ್ರಛಿದ್ರ ಮಾಡುತ್ತದೆ, ಕಲಿಯುಗದಲ್ಲಿ ಶಕ್ತಿಯು ಸಂಘಗಳಲ್ಲಿ ಮಾತ್ರ ಪ್ರಬಲವಾಗಿರಲು ಸಾಧ್ಯ ತಾತ್ಕಾಲಿಕವಾಗಿ, {{gap}}ಸಂಘಗಳನ್ನು ಕಟ್ಟಲಾಗದಿದ್ದಾಗ, ಯುವಕನು ಯಾವ ರೀತಿಯಲ್ಲಿ ಬಂಡೇಳಲು ಸಾಧ್ಯ? ಒಂಟಿಯಾಗಿ ಏನು ಮಾಡುತ್ತಾನೆ? {{gap}}ಬಾಲಕನಾಗಿದ್ದಾಗ, ಮನೆಯಲ್ಲಿ ಮತ್ತು ಶಾಲೆಯಲ್ಲಿ Super-Egoವು- ಅಂದರೆ ಮನಸ್ಸಿನಲ್ಲಿ ರೂಢಿಸಿ ಬೆಳೆಸಲ್ಪಟ್ಟ ಸತ್-ಚೈತನ್ಯಾಂಶವು ದೃಢವಾಗಿದ್ದರೆ, ಆಗ ಯುವಕನು ಧೈಯವಾದಿಯಾಗುತ್ತಾನೆ. ತನ್ನ Id ಇನ ಕಾವ್ಯ ಪ್ರೇರಣೆಗಳನ್ನು ಬದಿಗಿರಿಸಿ, ತನ್ನ ಸುಖವನ್ನು ಮತ್ತು ಲೌಕಿಕ ಭವಿಷ್ಯವನ್ನೂ ಅಲ್ಲಗಳೆಯುತ್ತಾನೆ. ಸಮಾಜದ ದೀನದಲಿತರ ನೆರವಿಗೆ ಹಿಂದು ಮುಂದು ನೋಡದೆ ನುಗ್ಗುತ್ತಾನೆ. ಧೈಯ ಸಾಧನೆಯು, ಮತ್ತು ಆ ದಿಸೆಯಲ್ಲಿ ನಡೆಸುವ ಸ್ವಪ್ರಯತ್ನಗಳು, ಅವನ Ego ವಿಗೆ ತಂಪೆರೆಯುತ್ತವೆ, ಸಂತಸವನ್ನು ನೀಡುತ್ತವೆ. {{gap}}Super-Ego ವು ಸಾಕಷ್ಟು ದೃಢವಾಗಿ ಬೆಳೆಯದೆ ಇದ್ದರೆ, ಆಗ ಯುವಕನ Ego ವು Id ಇನ ಪ್ರಭಾವಕ್ಕೆ ತಲೆಬಾಗುತ್ತದೆ. ಕಾವ್ಯವಸ್ತುಗಳನ್ನು ಪಡೆಯಲು ಯತ್ನಿಸುತ್ತಾನೆ. ಯೌವನದಲ್ಲಿ ಲೋಕಾನುಭವವು ಸಾಲದುದರಿಂದ, ನಡೆಸಿದ ಪ್ರಯತ್ನಗಳು ಕಾವ್ಯಗಳನ್ನು ದೊರಕಿಸಿ ಕೊಡದೆ ಇರಬಹುದು. ಆಗ ಯುವಕನ Ego ವಿಗೆ ಕಸವಿಸಿಯು ಹೆಚ್ಚಾಗುತ್ತದೆ. ಇದನ್ನು ಸಮಾಧಾನ ಪಡಿಸಲು ಅವನು ಕಳ್ಳತನದಿಂದ ಕಾಮ್ಯಗಳನ್ನು ಪಡೆಯಲು ಯತ್ನಿಸುತ್ತಾನೆ. ಅಪರಾಧಗಳನ್ನು<noinclude></noinclude> 97bvborea0t1nkpoui7vsrcc5xbv18s ಪುಟ:ಮನಮಂಥನ.pdf/೩೪೮ 104 62795 317023 314529 2026-05-04T14:43:16Z Shreesha Sharma 7840 /* Proofread */ 317023 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೩೩೦}}{{Right|ಮನಮಂಥನ}} ಮಾಡತೊಡಗುತ್ತಾನೆ. ಹಲವಾರು ಯುವಕರಲ್ಲಿ ಅಪರಾಧಗಳನ್ನು ಗುಪ್ತವಾಗಿ ಮಾಡುವುದು ಅಭ್ಯಾಸವಾಗಿ ಬಿಡುತ್ತದೆ. Habitual offenders ಇವರುಗಳು, ಸಮಾಜದ ಕಟ್ಟಲೆ ಕಾನೂನುಗಳನ್ನು ಕಳ್ಳತನದಲ್ಲಿ ವಿರೋಧಿಸುವುದೂ, ಬಂಡೇಳುವ ಪ್ರವೃತ್ತಿಯ ಒಂದು ಮುಖ. Super-Ego ಸಾಕಷ್ಟು ದೃಢವಾಗಿ ಬೆಳೆದಿದೆ, ಅನ್ನಿ, ಧೈಯವಾದಿಯಾಗು ಎಂದು ಸತ್-ಚೈತನ್ಯಾಂಶವು ಪ್ರೇರಿಸುತ್ತದೆ. ಆದರೆ ಸಮಸಮವಾಗಿ Id ಇನ ತಮಃ-ಪ್ರಭಾವವು ಕೂಡ Ego ವನ್ನು ಮೈಚಾಚಿ ಕರೆಯುತ್ತಿದೆ, ಅನ್ನಿ. ಯುವಕನ ಮನಸ್ಸು ಇತ್ತ ಅತ್ತ ಜಗ್ಗಾಡಲ್ಪಡುತ್ತದೆ. ಲೋಕದ ವಾಸ್ತವಿಕತೆಯ ಅರಿವು ಯುವಕರಲ್ಲಿ ಅಗತ್ಯವಾದಷ್ಟು ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮನಸ್ಸು ಜಗ್ಗಾಟವನ್ನು ತಡೆಯಲಾರದೆ, ತನ್ನದೇ ಆದ ಅವಾಸ್ತವಿಕ ಪ್ರಪಂಚವೊಂದನ್ನು ಸೃಷ್ಟಿಸಿಕೊಂಡು, ಆ ಲೋಕದಲ್ಲಿ ನೆಮ್ಮದಿಯಿಂದಿರುತ್ತದೆ. ಹೀಗಾದಾಗ ಹುಚ್ಚು ಹಿಡಿಯುತ್ತಿದೆ, Insight intoReality ಶೂನ್ಯವಾಗಿದೆ, ಎಂದನ್ನುತ್ತಾರೆ. ಇಂತಹ ನತದೃಷ್ಟ ಯುವಕರ ಮನಸ್ಸು ಛಿದ್ರವಾಗಿರುತ್ತದೆ. ಒಂದು ಭಾಗವು ಅವಾಸ್ತವಿಕ ಪ್ರಪಂಚದಲ್ಲಿ ವಿಹರಿಸುತ್ತದೆ. ಇನ್ನೊಂದು ಭಾಗವು ವಾಸ್ತವಿಕವಾದ ಪ್ರಪಂಚದಲ್ಲಿ ಬಾಲಂಗೋಚಿ ಇಲ್ಲದ ಗಾಳಿಪಟದಂತೆ ಸ್ಟೇಚ್ಛೆಯಾಗಿ ಲಾಗ ಹಾಕುತ್ತಿರುತ್ತದೆ. Schizo-Phrenia, ಎಂದನ್ನುತ್ತಾರೆ, ಹೀಗಾದಾಗ, Schizoಎಂದರೆ ಛಿದ್ರವಾದುದು Phrenia ಎಂದರೆ ಮನಸ್ಸು. ಹೈಸ್ಕೂಲುಗಳಲ್ಲಿ ಅತ್ಯಂತ ಯಶಸ್ವಿಯಾಗಿ ಪ್ಯಾಸು ಮಾಡಿರುತ್ತಾರೆ. ಹೇಳಿ ಕೊಟ್ಟ ಪಾಠಗಳನ್ನು ಲಕ್ಷಣವಾಗಿ ಅರ್ಥಮಾಡಿಕೊಂಡು, ಪರೀಕ್ಷೆಯಲ್ಲಿ ಒಪ್ಪಿಸಿದರೆ, ಹೈಸ್ಕೂಲಿನಲ್ಲಿ ಯಶಸ್ವಿಯಾಗಿ ಪಾಸಾಗಬಹುದು. ಸ್ವಂತವಾಗಿ ಯೋಚಿಸಲು ಹೆಚ್ಚು ಅಗತ್ಯವಿರುವುದಿಲ್ಲ. ಬಾಲಕನು ಯುವಕನಾಗಿ ಕಾಲೇಜಿಗೆ ಬಂದರೆ, ಅಲ್ಲಿನ ವಿದ್ಯಾಭ್ಯಾಸದ ರೀತಿಯೇ ಬೇರೆ. ಕಾಲೇಜುಗಳಲ್ಲೂ ಪಾಠವನ್ನು ಕಲಿಸುತ್ತಾರೆ. ಆದರೆ ಅದಕ್ಕಿಂತಲೂ ಮುಖ್ಯವಾದುದು, ವಿದ್ಯಾರ್ಥಿಯು ಸ್ವಂತವಾಗಿ ಆಲೋಚಿಸುವುದನ್ನು ಪ್ರೇರೇಪಿಸುವುದು, 'ಧೀಯೋ ಯೋನಃ ಪ್ರಚೋದಯಾತ್", ಧೀಃ ಶಕ್ತಿಯನ್ನು ವಿಚಾರಪರ ಮನಸ್ಸನ್ನು, ಪ್ರಚೋದಿಸುವುದು, ಕಾಲೇಜಿನ ಹಂತದ ಶಿಕ್ಷಣದ ತಿರುಳು. ಸ್ವಂತವಾಗಿ ಆಲೋಚಿಸುವಾಗ, ತನ್ನಲ್ಲಿರುವ ಕುಂದುಗಳು ಮತ್ತು ಲೋಪಗಳು ಕಾಣಬರುತ್ತವೆ. ಎಸ್. ಎಸ್. ಎಲ್. ಸಿ. ಯಲ್ಲಿ ಬ್ಯಾಂಕ್ ಪಡೆದೆ, ಇಲ್ಲಿ ಸೆಕೆಂಡ್ ಕ್ಲಾಸ್‌ ಕೂಡ ಬರಲಿಲ್ಲ. ಎಂದೆನ್ನುವ ಕೊರಗು ಕಾಣತೊಡಗುತ್ತದೆ.<noinclude></noinclude> 0zosfvnfhetiw6timn82aogf56icoch 317039 317023 2026-05-04T14:58:34Z Shreelatha.Halemane 7642 /* Validated */ 317039 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೩೩೦}}{{Right|ಮನಮಂಥನ}} ಮಾಡತೊಡಗುತ್ತಾನೆ. ಹಲವಾರು ಯುವಕರಲ್ಲಿ ಅಪರಾಧಗಳನ್ನು ಗುಪ್ತವಾಗಿ ಮಾಡುವುದು ಅಭ್ಯಾಸವಾಗಿ ಬಿಡುತ್ತದೆ. Habitual offenders ಇವರುಗಳು, ಸಮಾಜದ ಕಟ್ಟಲೆ ಕಾನೂನುಗಳನ್ನು ಕಳ್ಳತನದಲ್ಲಿ ವಿರೋಧಿಸುವುದೂ, ಬಂಡೇಳುವ ಪ್ರವೃತ್ತಿಯ ಒಂದು ಮುಖ. {{gap}}Super-Ego ಸಾಕಷ್ಟು ದೃಢವಾಗಿ ಬೆಳೆದಿದೆ, ಅನ್ನಿ, ಧೈಯವಾದಿಯಾಗು ಎಂದು ಸತ್-ಚೈತನ್ಯಾಂಶವು ಪ್ರೇರಿಸುತ್ತದೆ. ಆದರೆ ಸಮಸಮವಾಗಿ Id ಇನ ತಮಃ-ಪ್ರಭಾವವು ಕೂಡ Ego ವನ್ನು ಮೈಚಾಚಿ ಕರೆಯುತ್ತಿದೆ, ಅನ್ನಿ. ಯುವಕನ ಮನಸ್ಸು ಇತ್ತ ಅತ್ತ ಜಗ್ಗಾಡಲ್ಪಡುತ್ತದೆ. ಲೋಕದ ವಾಸ್ತವಿಕತೆಯ ಅರಿವು ಯುವಕರಲ್ಲಿ ಅಗತ್ಯವಾದಷ್ಟು ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮನಸ್ಸು ಜಗ್ಗಾಟವನ್ನು ತಡೆಯಲಾರದೆ, ತನ್ನದೇ ಆದ ಅವಾಸ್ತವಿಕ ಪ್ರಪಂಚವೊಂದನ್ನು ಸೃಷ್ಟಿಸಿಕೊಂಡು, ಆ ಲೋಕದಲ್ಲಿ ನೆಮ್ಮದಿಯಿಂದಿರುತ್ತದೆ. ಹೀಗಾದಾಗ ಹುಚ್ಚು ಹಿಡಿಯುತ್ತಿದೆ, Insight intoReality ಶೂನ್ಯವಾಗಿದೆ, ಎಂದನ್ನುತ್ತಾರೆ. ಇಂತಹ ನತದೃಷ್ಟ ಯುವಕರ ಮನಸ್ಸು ಛಿದ್ರವಾಗಿರುತ್ತದೆ. ಒಂದು ಭಾಗವು ಅವಾಸ್ತವಿಕ ಪ್ರಪಂಚದಲ್ಲಿ ವಿಹರಿಸುತ್ತದೆ. ಇನ್ನೊಂದು ಭಾಗವು ವಾಸ್ತವಿಕವಾದ ಪ್ರಪಂಚದಲ್ಲಿ ಬಾಲಂಗೋಚಿ ಇಲ್ಲದ ಗಾಳಿಪಟದಂತೆ ಸ್ಟೇಚ್ಛೆಯಾಗಿ ಲಾಗ ಹಾಕುತ್ತಿರುತ್ತದೆ. Schizo-Phrenia, ಎಂದನ್ನುತ್ತಾರೆ, ಹೀಗಾದಾಗ, Schizoಎಂದರೆ ಛಿದ್ರವಾದುದು Phrenia ಎಂದರೆ ಮನಸ್ಸು. {{gap}}ಹೈಸ್ಕೂಲುಗಳಲ್ಲಿ ಅತ್ಯಂತ ಯಶಸ್ವಿಯಾಗಿ ಪ್ಯಾಸು ಮಾಡಿರುತ್ತಾರೆ. ಹೇಳಿ ಕೊಟ್ಟ ಪಾಠಗಳನ್ನು ಲಕ್ಷಣವಾಗಿ ಅರ್ಥಮಾಡಿಕೊಂಡು, ಪರೀಕ್ಷೆಯಲ್ಲಿ ಒಪ್ಪಿಸಿದರೆ, ಹೈಸ್ಕೂಲಿನಲ್ಲಿ ಯಶಸ್ವಿಯಾಗಿ ಪಾಸಾಗಬಹುದು. ಸ್ವಂತವಾಗಿ ಯೋಚಿಸಲು ಹೆಚ್ಚು ಅಗತ್ಯವಿರುವುದಿಲ್ಲ. ಬಾಲಕನು ಯುವಕನಾಗಿ ಕಾಲೇಜಿಗೆ ಬಂದರೆ, ಅಲ್ಲಿನ ವಿದ್ಯಾಭ್ಯಾಸದ ರೀತಿಯೇ ಬೇರೆ. ಕಾಲೇಜುಗಳಲ್ಲೂ ಪಾಠವನ್ನು ಕಲಿಸುತ್ತಾರೆ. ಆದರೆ ಅದಕ್ಕಿಂತಲೂ ಮುಖ್ಯವಾದುದು, ವಿದ್ಯಾರ್ಥಿಯು ಸ್ವಂತವಾಗಿ ಆಲೋಚಿಸುವುದನ್ನು ಪ್ರೇರೇಪಿಸುವುದು, 'ಧೀಯೋ ಯೋನಃ ಪ್ರಚೋದಯಾತ್", ಧೀಃ ಶಕ್ತಿಯನ್ನು ವಿಚಾರಪರ ಮನಸ್ಸನ್ನು, ಪ್ರಚೋದಿಸುವುದು, ಕಾಲೇಜಿನ ಹಂತದ ಶಿಕ್ಷಣದ ತಿರುಳು. {{gap}}ಸ್ವಂತವಾಗಿ ಆಲೋಚಿಸುವಾಗ, ತನ್ನಲ್ಲಿರುವ ಕುಂದುಗಳು ಮತ್ತು ಲೋಪಗಳು ಕಾಣಬರುತ್ತವೆ. ಎಸ್. ಎಸ್. ಎಲ್. ಸಿ. ಯಲ್ಲಿ ಬ್ಯಾಂಕ್ ಪಡೆದೆ, ಇಲ್ಲಿ ಸೆಕೆಂಡ್ ಕ್ಲಾಸ್‌ ಕೂಡ ಬರಲಿಲ್ಲ. ಎಂದೆನ್ನುವ ಕೊರಗು ಕಾಣತೊಡಗುತ್ತದೆ.<noinclude></noinclude> p1ypcs92gpc7hdzxqgrjegyizzi3id9 ಪುಟ:ಮನಮಂಥನ.pdf/೩೪೯ 104 62796 317024 314530 2026-05-04T14:44:09Z Shreesha Sharma 7840 /* Proofread */ 317024 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೩೧}} ಇದು ವಿಪರೀತವಾದಾಗ ಮನಸ್ಸು ಛಿದ್ರವಾಗುತ್ತದೆ. ಕಾಲೇಜಿನ ಹಂತದಲ್ಲಿ ಹೀಗಾಗಬಹುದು. ಅದಕ್ಕಿಂತಲೂ ಹೆಚ್ಚಾಗಿ, ಪ್ರೌಢ ವಿದ್ಯಾಭ್ಯಾಸಕ್ಕೆ, ಎಂ.ಎಸ್‌ಸಿ ; ಪಿಎಚ್.ಡಿ. ಗಳಿಗೆ ಸೇರಿದಾಗ ಆಗಬಹುದು. ಎಷ್ಟು ಜಾಣ ಹುಡುಗ, ಎಂತಹ ಬುದ್ಧಿವಂತ, ಅವನಿಗೆ ಹುಚ್ಚು ಹಿಡಿಯುವುದು ಹೇಗೆ ಸಾಧ್ಯ? ಎಂದು ಕಂಡವರು ಅಚ್ಚರಿ ಪಡುತ್ತಾರೆ. ಆಲೋಚನೆಯನ್ನು ಸ್ವಂತವಾಗಿ ಮಾಡುವುದಕ್ಕೆ ವಿಚಾರಪರ ಮನಸ್ಸು ಇನ್ನೂ ಪಕ್ವವಾಗಿರುವುದಿಲ್ಲ. ಅಪಕ್ವವಾದ ಮನಸ್ಸು ಸುಲಭವಾಗಿ ಪಲ್ಲಟವಾಗುತ್ತದೆ. ಆದುದರಿಂದ ಶಿಕ್ಷಣತಜ್ಞರು, ಇಂತಹ ವಯಸ್ಸು ಮುಗಿದ ಮೇಲೆ ಮಾತ್ರ ಇಂತಹ ಪರೀಕ್ಷೆಗೆ ಕೂಡಬಹುದು ಎಂದು ನಿರ್ಧರಿಸುವುದು. ಯಾವನೋ ಒಬ್ಬ ಪ್ರಚಂಡ, ಹದಿನೈದನೇ ವಯಸ್ಸಿನಲ್ಲಿ ಆರು ಚಿನ್ನದ ಪದಕಗಳನ್ನು ಪಡೆದು, ಬಿ. ಎಸ್‌ಸಿ. ಅನರ್ಸ್ ಪ್ಯಾಸು ಮಾಡಿದ, ಆದುದರಿಂದ ವಯಸ್ಸಿನ ಇತಿಮಿತಿಯನ್ನು ಹಾಕಿ, ಜಾಣ ಹುಡುಗರನ್ನು ಮುಂದಿನ ಪರೀಕ್ಷೆಗೆ ಕೂಡಲು ಅವಕಾಶವನ್ನು ತಪ್ಪಿಸಬಾರದು ಎಂದು ಜನರು ಅನ್ನುವುದುಂಟು. ಒಬ್ಬ ಪ್ರಚಂಡನು ಮಾಡಿದುದನ್ನು ನೋಡಿದವರು, ಮಾನಸಿಕ ಆಸ್ಪತ್ರೆಗಳಿಗೆ ಹೋಗಿ ಜಾಣ ಯುವಕರ, ಯಶಸ್ವಿಯಾಗಿ ಎಳೆ ವಯಸ್ಸಿನ ಇತಿಮಿತಿಯನ್ನು ಹಾಕಿ, ಜಾಣ ಹುಡುಗರನ್ನು ಮುಂದಿನ ಪರೀಕ್ಷೆಗೆ ಕೂಡಲು ಅವಕಾಶವನ್ನು ತಪ್ಪಿಸಬಾರದು ಎಂದು ಜನರು ಅನ್ನುವುದುಂಟು. ಒಬ್ಬ ಪ್ರಚಂಡನು ಮಾಡಿದುದನ್ನು ನೋಡಿದವರು, ಮಾನಸಿಕ ಆಸ್ಪತ್ರೆಗಳಿಗೆ ಹೋಗಿ ಜಾಣ ಯುವಕರ, ಯಶಸ್ವಿಯಾಗಿ ಎಳೆ ವಯಸ್ಸಿನಲ್ಲಿ ಪ್ಯಾಸು ಮಾಡಿ, ತದನಂತರ ಅಪಕ್ವಮನಸ್ಸಿನಿಂದಾಗಿ, ಆಸ್ಪತ್ರೆಗೆ ಸೇರಿರುವುದನ್ನು ಕಣ್ಣಾರ ಕಾಣಬೇಕು ! ಕಾಲೇಜಿಗೆ ಹೋಗಿ ಓದುವ ಜವ್ವನದ ತರುಣಿಯರಲ್ಲಿ ಇದೇ ಪರಿಸ್ಥಿತಿಯು ಇರುತ್ತದೆ. ಕಾಲೇಜಿನ ಡಿಗ್ರಿ ಪಡೆದು ಮದುವೆಯಾಗಿ ಗಂಡನ ಮನೆಗೆ ಹೋದಾಗ, ಅಪಕ್ವ ಮನಸ್ಸಿದ್ದವರು ; Inature Minds – ಮಾನಸಿಕ ಅಲ್ಪಸ್ವಲ್ಪ ಪಲ್ಲಟಕ್ಕೆ ತುತ್ತಾಗುತ್ತಾರೆ. ಅತ್ತೆಯ ಕಾಟ ಎಂದು ಹಿಂದೆ ಹೇಳುತ್ತಿದ್ದುದು. ಅಪಕ್ವ ಮನಸ್ಸಿನ ಸೊಸೆಯು ಮನೆಗೆ ಬಂದುದರಿಂದ ಅಪಕ್ವವಾದ ಮನಸ್ಸಿದ್ದರೆ, ಸ್ವಾಭಿಮಾನವೂ, ನಾನು ಓದಿದವಳು ಎನ್ನುವ ಹೆಮ್ಮೆಯೂ ಬಲವಾಗಿರುತ್ತದೆ. ಆದುದರಿಂದ ಇತರರು ಹೇಳಿದಂತೆ ಕೇಳುವುದಿಲ್ಲ. ಆದರೆ ತಾವೇ ಯೋಚಿಸಿ ವಿಹಿತವಾಗಿ ಕೆಲಸವನ್ನು ಮಾಡಲೂ ಆಗುವುದಿಲ್ಲ. ಆಗ ಮಾನಸಿಕ ಪಲ್ಲಟವು ಅಲ್ಪ ಹಂತದಲ್ಲಿ ಅಥವಾ ಹೆಚ್ಚು ಹಂತದಲ್ಲಿ ಕಾಣಿಸಿಕೊಳ್ಳುತ್ತದೆ. ಸೂಕ್ತ ಚಿಕಿತ್ಸೆಯನ್ನು ಮೊದಲ<noinclude></noinclude> tqw1f90jxm9pyhmr61fwgy71dwxxzgh 317040 317024 2026-05-04T14:59:01Z Shreelatha.Halemane 7642 /* Validated */ 317040 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೩೧}} ಇದು ವಿಪರೀತವಾದಾಗ ಮನಸ್ಸು ಛಿದ್ರವಾಗುತ್ತದೆ. {{gap}}ಕಾಲೇಜಿನ ಹಂತದಲ್ಲಿ ಹೀಗಾಗಬಹುದು. ಅದಕ್ಕಿಂತಲೂ ಹೆಚ್ಚಾಗಿ, ಪ್ರೌಢ ವಿದ್ಯಾಭ್ಯಾಸಕ್ಕೆ, ಎಂ.ಎಸ್‌ಸಿ ; ಪಿಎಚ್.ಡಿ. ಗಳಿಗೆ ಸೇರಿದಾಗ ಆಗಬಹುದು. {{gap}}ಎಷ್ಟು ಜಾಣ ಹುಡುಗ, ಎಂತಹ ಬುದ್ಧಿವಂತ, ಅವನಿಗೆ ಹುಚ್ಚು ಹಿಡಿಯುವುದು ಹೇಗೆ ಸಾಧ್ಯ? ಎಂದು ಕಂಡವರು ಅಚ್ಚರಿ ಪಡುತ್ತಾರೆ. ಆಲೋಚನೆಯನ್ನು ಸ್ವಂತವಾಗಿ ಮಾಡುವುದಕ್ಕೆ ವಿಚಾರಪರ ಮನಸ್ಸು ಇನ್ನೂ ಪಕ್ವವಾಗಿರುವುದಿಲ್ಲ. ಅಪಕ್ವವಾದ ಮನಸ್ಸು ಸುಲಭವಾಗಿ ಪಲ್ಲಟವಾಗುತ್ತದೆ. ಆದುದರಿಂದ ಶಿಕ್ಷಣತಜ್ಞರು, ಇಂತಹ ವಯಸ್ಸು ಮುಗಿದ ಮೇಲೆ ಮಾತ್ರ ಇಂತಹ ಪರೀಕ್ಷೆಗೆ ಕೂಡಬಹುದು ಎಂದು ನಿರ್ಧರಿಸುವುದು. ಯಾವನೋ ಒಬ್ಬ ಪ್ರಚಂಡ, ಹದಿನೈದನೇ ವಯಸ್ಸಿನಲ್ಲಿ ಆರು ಚಿನ್ನದ ಪದಕಗಳನ್ನು ಪಡೆದು, ಬಿ. ಎಸ್‌ಸಿ. ಅನರ್ಸ್ ಪ್ಯಾಸು ಮಾಡಿದ, ಆದುದರಿಂದ ವಯಸ್ಸಿನ ಇತಿಮಿತಿಯನ್ನು ಹಾಕಿ, ಜಾಣ ಹುಡುಗರನ್ನು ಮುಂದಿನ ಪರೀಕ್ಷೆಗೆ ಕೂಡಲು ಅವಕಾಶವನ್ನು ತಪ್ಪಿಸಬಾರದು ಎಂದು ಜನರು ಅನ್ನುವುದುಂಟು. ಒಬ್ಬ ಪ್ರಚಂಡನು ಮಾಡಿದುದನ್ನು ನೋಡಿದವರು, ಮಾನಸಿಕ ಆಸ್ಪತ್ರೆಗಳಿಗೆ ಹೋಗಿ ಜಾಣ ಯುವಕರ, ಯಶಸ್ವಿಯಾಗಿ ಎಳೆ ವಯಸ್ಸಿನ ಇತಿಮಿತಿಯನ್ನು ಹಾಕಿ, ಜಾಣ ಹುಡುಗರನ್ನು ಮುಂದಿನ ಪರೀಕ್ಷೆಗೆ ಕೂಡಲು ಅವಕಾಶವನ್ನು ತಪ್ಪಿಸಬಾರದು ಎಂದು ಜನರು ಅನ್ನುವುದುಂಟು. ಒಬ್ಬ ಪ್ರಚಂಡನು ಮಾಡಿದುದನ್ನು ನೋಡಿದವರು, ಮಾನಸಿಕ ಆಸ್ಪತ್ರೆಗಳಿಗೆ ಹೋಗಿ ಜಾಣ ಯುವಕರ, ಯಶಸ್ವಿಯಾಗಿ ಎಳೆ ವಯಸ್ಸಿನಲ್ಲಿ ಪ್ಯಾಸು ಮಾಡಿ, ತದನಂತರ ಅಪಕ್ವಮನಸ್ಸಿನಿಂದಾಗಿ, ಆಸ್ಪತ್ರೆಗೆ ಸೇರಿರುವುದನ್ನು ಕಣ್ಣಾರ ಕಾಣಬೇಕು ! {{gap}}ಕಾಲೇಜಿಗೆ ಹೋಗಿ ಓದುವ ಜವ್ವನದ ತರುಣಿಯರಲ್ಲಿ ಇದೇ ಪರಿಸ್ಥಿತಿಯು ಇರುತ್ತದೆ. ಕಾಲೇಜಿನ ಡಿಗ್ರಿ ಪಡೆದು ಮದುವೆಯಾಗಿ ಗಂಡನ ಮನೆಗೆ ಹೋದಾಗ, ಅಪಕ್ವ ಮನಸ್ಸಿದ್ದವರು ; Inature Minds – ಮಾನಸಿಕ ಅಲ್ಪಸ್ವಲ್ಪ ಪಲ್ಲಟಕ್ಕೆ ತುತ್ತಾಗುತ್ತಾರೆ. ಅತ್ತೆಯ ಕಾಟ ಎಂದು ಹಿಂದೆ ಹೇಳುತ್ತಿದ್ದುದು. ಅಪಕ್ವ ಮನಸ್ಸಿನ ಸೊಸೆಯು ಮನೆಗೆ ಬಂದುದರಿಂದ ಅಪಕ್ವವಾದ ಮನಸ್ಸಿದ್ದರೆ, ಸ್ವಾಭಿಮಾನವೂ, ನಾನು ಓದಿದವಳು ಎನ್ನುವ ಹೆಮ್ಮೆಯೂ ಬಲವಾಗಿರುತ್ತದೆ. ಆದುದರಿಂದ ಇತರರು ಹೇಳಿದಂತೆ ಕೇಳುವುದಿಲ್ಲ. ಆದರೆ ತಾವೇ ಯೋಚಿಸಿ ವಿಹಿತವಾಗಿ ಕೆಲಸವನ್ನು ಮಾಡಲೂ ಆಗುವುದಿಲ್ಲ. ಆಗ ಮಾನಸಿಕ ಪಲ್ಲಟವು ಅಲ್ಪ ಹಂತದಲ್ಲಿ ಅಥವಾ ಹೆಚ್ಚು ಹಂತದಲ್ಲಿ ಕಾಣಿಸಿಕೊಳ್ಳುತ್ತದೆ. ಸೂಕ್ತ ಚಿಕಿತ್ಸೆಯನ್ನು ಮೊದಲ<noinclude></noinclude> c4a4dyjmy2r0exiiu4eyp52st3yew3o ಪುಟ:ಮನಮಂಥನ.pdf/೩೫೦ 104 62797 317025 314532 2026-05-04T14:45:01Z Shreesha Sharma 7840 /* Proofread */ 317025 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೩೩೨}}{{Right|ಮನಮಂಥನ}} ಹಂತದಲ್ಲಿ ನೀಡಿದರೆ ಮಾನಸಿಕ ನೆಮ್ಮದಿಯು ದೊರೆಯುತ್ತದೆ. ಆದರೆ ಅತ್ತೆ ಮಾವನಾಗಲೀ, ಗಂಡನಾಗಲೀ, ಅಂಕೆ ಶಿಕ್ಷೆಗೆ ಒಳಪಡಿಸಿದರೆ ಸರಿಹೋಗುತ್ತಾಳೆ, ಇದಕ್ಕೆಲ್ಲಾ ಹುಚ್ಚಾಸ್ಪತ್ರೆಗೆ ಹೋಗಿ ಮನೆಯ ಮಾನವನ್ನು ಕಳೆದುಕೊಳ್ಳುವುದೇ? ಎಂದುಕೊಳ್ಳುತ್ತಾರೆ. ಮಾನಸಿಕ ಪಲ್ಲಟವು ಅನಂತರ ವಿಪರೀತವಾಗಬಹುದು. ಚಿಕಿತ್ಸೆಗೆ ಬಗ್ಗುವ ಮಟ್ಟವನ್ನು ಮೀರಬಹುದು. ಅಪಕ್ವ ಮನಸ್ಸು ಎಂದು ಯುವಕನಿಗಾಗಲೀ, ಯುವತಿಗಾಗಲೀ ಹೇಳಿದರೆ, ಅವರು ಒಪ್ಪುತ್ತಾರೆಯೇ? ಬಂಡೇಳುತ್ತಾರೆ. ಬಂಡೇಳುವುದೂ ಅಪಕ್ವ ಮನಸ್ಸಿನ ಒಂದು ಚಿಹ್ನೆ: ಈ ದೃಷ್ಟಿಯಿಂದ ಯೌವನದಲ್ಲಿ ಅಪಕ್ವ ಮನಸ್ಸು ಹೆಚ್ಚಾಗಿ ಕಾಣಬರುತ್ತದೆ. ಆದರೆ ವಯಸ್ಸು ಮೂಡಿದಂತೆಲ್ಲಾ ಮನಸೂ ಪಕ್ವವಾಗುತ್ತದೆ ಎಂದುಕೊಳ್ಳಬಾರದು. ಪಂಚಾಂಗದ ಪ್ರಕಾರ ವಯಸ್ಸಿಗೂ, ಮನಸ್ಸಿನ ಪರಿಪಕ್ವತೆಯ ಗತಿಗೂ, ಬಹಳಷ್ಟು ಜನರಲ್ಲಿ ಅನ್ವಯವು ಇರುವುದಿಲ್ಲ. ಆದಕಾರಣ, ಯುವಕರಲ್ಲಿ ಕಾಣಸಿಗುವ ಮಾನಸಿಕ ಪಲ್ಲಟಗಳು, ಬೆಳೆದ ವಯಸ್ಸಿನವರಲ್ಲಿ ಕೂಡ ಇರುತ್ತದೆ. ಆದರೆ ಪ್ರಚೋದಿಸುವ ಕಾರಣಗಳು ಬೇರೆ ಬೇರೆಯಾಗಿರುತ್ತವೆ. ವಾಸ್ತವಿಕತೆಯ ಅರಿವನ್ನು ಮೂಡಿಸುವ ಸಂಸಾರ ಮತ್ತು ಸಮಾಜದ ಹಲವಾರು ಕಟ್ಟುನಿಟ್ಟುಗಳು ಇರುವುದರಿಂದ ಮಾನಸಿಕ ಪಲ್ಲಟಗಳು ಯುವಕರಲ್ಲಿದ್ದಂತೆ ವಿಪರೀತವಾಗುವುದಿಲ್ಲ. ವಯಸ್ಕರಲ್ಲಿ ಮನಸ್ಸಿನ ಕಾರ್ಯಕ್ರಮಗಳು ಹೇಗೆ ಇರುತ್ತವೆಂಬುದನ್ನು ಮುಂದೆ ತಿಳಿಯೋಣ. '''ವಯಸ್ಕರಲ್ಲಿ ಮನಸ್ಸಿನ ಕಾರ್ಯಕ್ರಮ''' ರಾಮನಾಥಯ್ಯ ಎಂಬ ಸ್ನೇಹಿತನಿದ್ದಾನೆ. ತುಂಬಾ ಚೂಟಿ, ನಾಲಿಗೆಯೂ ಹರಿತ, ಯೋಚನೆಗಳು ಮಿಂಚಿನ ಬಳ್ಳಿಯಂತೆ ಮೂಡುತ್ತವೆ. ಅವುಗಳನ್ನು ಮಿರುಗುವ ಮಾತುಗಳಲ್ಲಿ ಕೇಳುವವರಿಗೆ ನಾಟುವಂತೆ ತಡಬಡವಿಲ್ಲದೆ ಆಡುತ್ತಾನೆ. ಅವನೊಂದಿಗೆ ಮಾತನಾಡುವುದೆಂದರೆ ನನಗೆ ಬಲು ಮೋಜು, ತಾಸು ತಾಸುಗಳನ್ನು ಹರಟೆಯಲ್ಲಿ ಕಳೆಯುತ್ತಿದ್ದೆವು. ಎಂಟ್ರೆನ್ಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಅವ ಪಾಸಾದ. ನಾನೂ ಪಾಸಾದೆ, ಎನ್ನುವುದಕ್ಕಿಂತ ನಪಾಸಾಗಲಿಲ್ಲ ಎಂದರೆ ಸರಿಯಾದೀತು. ಅವನ ತಂದೆಯು, ಅದೇನು ಅವಸರವೋ, ಆಗ ಸತ್ತುಹೋದ. ತಮ್ಮಂದಿರು ತಂಗಿಯರು ಮತ್ತು ತಾಯಿಯನ್ನು ಸಾಕುವ ಹೊಣೆಗಾರಿಕೆಯು ರಾಮನಾಥಯ್ಯನ ಮೇಲೆ ಹದಿನಾರನೇ ವಯಸ್ಸಿನಲ್ಲಿ ಬಿತ್ತು. ಆದಕಾರಣ ಓದನ್ನು ಮುಂದುವರೆಸಲಿಲ್ಲ. ಸರ್ಕಾರಿ ಕಚೇರಿಯಲ್ಲಿ ಕ್ಲಾರ್ಕ್‌ ಆಗಿ ಕೆಲಸಕ್ಕೆ ಸೇರಿಕೊಂಡ.<noinclude></noinclude> re96c5n45cjtd28eru1e962rc9xl6lf 317026 317025 2026-05-04T14:46:06Z Shreelatha.Halemane 7642 /* Validated */ 317026 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೩೩೨}}{{Right|ಮನಮಂಥನ}} ಹಂತದಲ್ಲಿ ನೀಡಿದರೆ ಮಾನಸಿಕ ನೆಮ್ಮದಿಯು ದೊರೆಯುತ್ತದೆ. ಆದರೆ ಅತ್ತೆ ಮಾವನಾಗಲೀ, ಗಂಡನಾಗಲೀ, ಅಂಕೆ ಶಿಕ್ಷೆಗೆ ಒಳಪಡಿಸಿದರೆ ಸರಿಹೋಗುತ್ತಾಳೆ, ಇದಕ್ಕೆಲ್ಲಾ ಹುಚ್ಚಾಸ್ಪತ್ರೆಗೆ ಹೋಗಿ ಮನೆಯ ಮಾನವನ್ನು ಕಳೆದುಕೊಳ್ಳುವುದೇ? ಎಂದುಕೊಳ್ಳುತ್ತಾರೆ. ಮಾನಸಿಕ ಪಲ್ಲಟವು ಅನಂತರ ವಿಪರೀತವಾಗಬಹುದು. ಚಿಕಿತ್ಸೆಗೆ ಬಗ್ಗುವ ಮಟ್ಟವನ್ನು ಮೀರಬಹುದು. {{gap}}ಅಪಕ್ವ ಮನಸ್ಸು ಎಂದು ಯುವಕನಿಗಾಗಲೀ, ಯುವತಿಗಾಗಲೀ ಹೇಳಿದರೆ, ಅವರು ಒಪ್ಪುತ್ತಾರೆಯೇ? ಬಂಡೇಳುತ್ತಾರೆ. ಬಂಡೇಳುವುದೂ ಅಪಕ್ವ ಮನಸ್ಸಿನ ಒಂದು ಚಿಹ್ನೆ: ಈ ದೃಷ್ಟಿಯಿಂದ ಯೌವನದಲ್ಲಿ ಅಪಕ್ವ ಮನಸ್ಸು ಹೆಚ್ಚಾಗಿ ಕಾಣಬರುತ್ತದೆ. ಆದರೆ ವಯಸ್ಸು ಮೂಡಿದಂತೆಲ್ಲಾ ಮನಸೂ ಪಕ್ವವಾಗುತ್ತದೆ ಎಂದುಕೊಳ್ಳಬಾರದು. ಪಂಚಾಂಗದ ಪ್ರಕಾರ ವಯಸ್ಸಿಗೂ, ಮನಸ್ಸಿನ ಪರಿಪಕ್ವತೆಯ ಗತಿಗೂ, ಬಹಳಷ್ಟು ಜನರಲ್ಲಿ ಅನ್ವಯವು ಇರುವುದಿಲ್ಲ. ಆದಕಾರಣ, ಯುವಕರಲ್ಲಿ ಕಾಣಸಿಗುವ ಮಾನಸಿಕ ಪಲ್ಲಟಗಳು, ಬೆಳೆದ ವಯಸ್ಸಿನವರಲ್ಲಿ ಕೂಡ ಇರುತ್ತದೆ. ಆದರೆ ಪ್ರಚೋದಿಸುವ ಕಾರಣಗಳು ಬೇರೆ ಬೇರೆಯಾಗಿರುತ್ತವೆ. ವಾಸ್ತವಿಕತೆಯ ಅರಿವನ್ನು ಮೂಡಿಸುವ ಸಂಸಾರ ಮತ್ತು ಸಮಾಜದ ಹಲವಾರು ಕಟ್ಟುನಿಟ್ಟುಗಳು ಇರುವುದರಿಂದ ಮಾನಸಿಕ ಪಲ್ಲಟಗಳು ಯುವಕರಲ್ಲಿದ್ದಂತೆ ವಿಪರೀತವಾಗುವುದಿಲ್ಲ. ವಯಸ್ಕರಲ್ಲಿ ಮನಸ್ಸಿನ ಕಾರ್ಯಕ್ರಮಗಳು ಹೇಗೆ ಇರುತ್ತವೆಂಬುದನ್ನು ಮುಂದೆ ತಿಳಿಯೋಣ. '''ವಯಸ್ಕರಲ್ಲಿ ಮನಸ್ಸಿನ ಕಾರ್ಯಕ್ರಮ''' {{gap}}ರಾಮನಾಥಯ್ಯ ಎಂಬ ಸ್ನೇಹಿತನಿದ್ದಾನೆ. ತುಂಬಾ ಚೂಟಿ, ನಾಲಿಗೆಯೂ ಹರಿತ, ಯೋಚನೆಗಳು ಮಿಂಚಿನ ಬಳ್ಳಿಯಂತೆ ಮೂಡುತ್ತವೆ. ಅವುಗಳನ್ನು ಮಿರುಗುವ ಮಾತುಗಳಲ್ಲಿ ಕೇಳುವವರಿಗೆ ನಾಟುವಂತೆ ತಡಬಡವಿಲ್ಲದೆ ಆಡುತ್ತಾನೆ. ಅವನೊಂದಿಗೆ ಮಾತನಾಡುವುದೆಂದರೆ ನನಗೆ ಬಲು ಮೋಜು, ತಾಸು ತಾಸುಗಳನ್ನು ಹರಟೆಯಲ್ಲಿ ಕಳೆಯುತ್ತಿದ್ದೆವು. ಎಂಟ್ರೆನ್ಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಅವ ಪಾಸಾದ. ನಾನೂ ಪಾಸಾದೆ, ಎನ್ನುವುದಕ್ಕಿಂತ ನಪಾಸಾಗಲಿಲ್ಲ ಎಂದರೆ ಸರಿಯಾದೀತು. ಅವನ ತಂದೆಯು, ಅದೇನು ಅವಸರವೋ, ಆಗ ಸತ್ತುಹೋದ. ತಮ್ಮಂದಿರು ತಂಗಿಯರು ಮತ್ತು ತಾಯಿಯನ್ನು ಸಾಕುವ ಹೊಣೆಗಾರಿಕೆಯು ರಾಮನಾಥಯ್ಯನ ಮೇಲೆ ಹದಿನಾರನೇ ವಯಸ್ಸಿನಲ್ಲಿ ಬಿತ್ತು. ಆದಕಾರಣ ಓದನ್ನು ಮುಂದುವರೆಸಲಿಲ್ಲ. ಸರ್ಕಾರಿ ಕಚೇರಿಯಲ್ಲಿ ಕ್ಲಾರ್ಕ್‌ ಆಗಿ ಕೆಲಸಕ್ಕೆ ಸೇರಿಕೊಂಡ.<noinclude></noinclude> bt5kfpts7q03lxj1dvj55txhvoovv13 ಪುಟ:ಮನಮಂಥನ.pdf/೩೫೧ 104 62798 317205 314603 2026-05-05T11:36:14Z Shreesha Sharma 7840 /* Proofread */ 317205 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೩೩}} ಕಾಲೇಜಿನಲ್ಲಿ ಓದನ್ನು ಮುಂದುವರೆಸುವ ಅವಕಾಶವು ನನಗೆ ದೊರೆಯಿತು. ನಂತರ ಮೆಡಿಕಲ್ ಓದುವುದೂ ಸಾಧ್ಯವಾಯಿತು. ಕಾಲೇಜು, ಓದು, ಈ ತಕರಾರುಗಳಲ್ಲಿ ರಾಮನಾಥಯ್ಯನ ಸಂಪರ್ಕವು ಬಹಳ ಕಡಿಮೆಯಾಯಿತು. ಹಲವಾರು ವರ್ಷಗಳಾದ ಮೇಲೆ, ಕಾರಿನಲ್ಲಿ ಹೋಗುತ್ತಿದ್ದಾಗ, ಹಾದಿಯ ಬಳಿಯಲ್ಲಿ ಅವ ನಿಂತಿದ್ದುದು ಕಾಣಿಸಿತು. ಅವನ ಬಳಿ ಕಾರನ್ನು ನಿಲ್ಲಿಸಿದೆ. ಎಲ್ಲಿಗೆ ಹೋಗಬೇಕೋ, ಹೇಳು ಅಲ್ಲಿಗೆ ಕರೆದುಕೊಂಡು ಹೋಗಿ ತಲಪಿಸುತ್ತೇನೆ. ಬಸ್ಸಿಗೆ ಕೊಡುವ ಛಾರ್ಜನ್ನು ನನಗೆ ಕೊಡು ಎಂದು ಕೇಳುವುದಿಲ್ಲ. ಧೈರ್ಯವಾಗಿ ಬಂದು ಕೂತುಕೋ ಎಂದನ್ನುತ್ತಾ ಬಾಗಿಲನ್ನು ತೆಗೆದೆ. ಕಾರಿನೊಳಗೆ ಕೂತುಕೊಂಡ. 'ಆಸ್ಪತ್ರೆಗೆ ನೀನು ಹೋಗುತ್ತಾ ಇರಬಹುದು. ಎದುರಿನಲ್ಲೇ ಮಾರ್ಕೆಟ್, ಅಲ್ಲಿಗೆ ಹೋಗ್ತಾ ಇದ್ದೀನಿ. ಅಂದರೆ ನಿನಗೆ ಹೆಚ್ಚು ತೊಂದರೆಯಾಗುವುದಿಲ್ಲ. ಬಸ್ ಛಾರ್ಜ್ ನೀನು ಕೇಳುವಂತಿಲ್ಲ. ಏಕೆಂದರೆ ಪೋಲೀಸ್ ಇಂತಹ ಕಾನೂನಿನ ಪ್ರಕಾರ ಲೈಸೆನ್ಸ್ ಪಡೆಯದೆ, ಬಾಡಿಗೆಗೆ ಕಾರನ್ನು ಉಪಯೋಗಿಸಿದರೆ, ನಿನಗೆ ಶಿಕ್ಷೆ ಆಗುತ್ತೆ ಎಂದ.' 'ನಲವತ್ತರ ಮುಪ್ಪಲ್ಲೋ ನಿನಗೆ, ಆದರೂ ನಾಲಿಗೆಯ ಹುಳಿ ಮಾತಿಗೆ, ಮುಪ್ಪೇ ಬಂದಿಲ್ಲವಲ್ಲೋ' ಎಂದೆ. ನಂತರ ಯೋಗಕ್ಷೇಮವನ್ನು ವಿಚಾರಿಸಿದೆ. ತಮ್ಮಂದಿರು ತಂಗಿಯರು, ಅವರನ್ನು ಒಂದು ರೀತಿಯಲ್ಲಿ ಸೆಟಲ್ ಮಾಡಿದ್ದಾಯಿತು. ಕಚೇರಿಯ ಸರ್ಕಾರೀ ಪರೀಕ್ಷೆಗಳನ್ನು ಪ್ಯಾಸುಮಾಡಿ ಈಗ ಸೂಪರಿಂಟೆಂಡೆಂಟ್, ಆಗಿದ್ದೇನೆ. ನನ್ನ ಕೈ ಕೆಳಗೆ ಆರು ಗ್ರಾಜುಯೇಟುಗಳು ಕ್ಲಾರ್ಕ್‌ಗಳಾಗಿದ್ದಾರೆ. ಅದೇ ನನಗೆ ಸಂತೋಷ' ಎಂದ. 'ಅಷ್ಟೇನೇ ಸಂತೋಷ ! ಹೆಂಡತಿ ಮಕ್ಕಳು ಇತ್ಯಾದಿ ಸಂತೋಷಗಳು ? ಎಂದೆ. ಅವೆಲ್ಲಾ ಸಂತೋಷವನ್ನು ನೀಡುವಂತಹುದಲ್ಲ. ನನಗೆ ಮಾಡಬೇಕಾದ ಕರ್ತವ್ಯ ಅನುಭವಿಸಲೇಬೇಕಾದ ಪ್ರಾರಬ್ಧ ಎಂದ. 'ಇದೇನೋ ಹೀಗಂತಿ : ರಸಿಕಾಗ್ರೇಸರ ನೀನು. ಹೈಸ್ಕೂಲು ಕಾಂಪೌಂಡಿನಲ್ಲಿ ರಾಸಕ್ರೀಡೆಯನ್ನು ಆಡುತ್ತಿದ್ದ ರಾಸಭಗಳನ್ನು ಕುರಿತು ಭಾವಗೀತೆಯನ್ನು ಬರೆದವನಲ್ಲವೇನೋ?' ಇಷ್ಟರಲ್ಲೇ ಏನು ಬಂತೋ ವೇದಾಂತ, ಪ್ರಾರಬ್ಧ ಇತ್ಯಾದಿ : ಈಗ ಸೂಪರಿಂಟೆಂಡೆಂಟ್, ಅಂದಮೇಲೆ ಕೈ ತುಂಬಾ ಸಂಬಳ ಬರುತ್ತಿರಬೇಕು. ಈ ವಯಸ್ಸಿನಲ್ಲೇ ಮಜಾ ಮಾಡಬೇಕು, ಅತಿಯಾದ ಉದ್ವೇಗವಿಲ್ಲದೆ' ಎಂದೆ. 'ನನ್ನ ಹೆಂಡತಿಗೆ ಮೂರು ವರ್ಷಗಳಿಂದಲೂ ಕ್ಷಯ. ಸ್ಯಾನಿಟೇರಿಯಂನಲ್ಲಿ ಸೇರಿಸಿದ್ದೇನೆ. ಬಂದ ಸಂಬಳ ಬರಬಹುದಾದ ಇನ್ನಿಮೆಂಟ್ ಇವೆಲ್ಲವೂ ಔಷಧಿ ಪಥ್ಯಕ್ಕೆ ಸಾಲುವುದಿಲ್ಲ' ಎಂದ.<noinclude></noinclude> ffvse8r3nwyvfxcfhk5vbap150hzqai 317219 317205 2026-05-05T11:49:09Z Shreelatha.Halemane 7642 /* Validated */ 317219 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೩೩}} ಕಾಲೇಜಿನಲ್ಲಿ ಓದನ್ನು ಮುಂದುವರೆಸುವ ಅವಕಾಶವು ನನಗೆ ದೊರೆಯಿತು. ನಂತರ ಮೆಡಿಕಲ್ ಓದುವುದೂ ಸಾಧ್ಯವಾಯಿತು. ಕಾಲೇಜು, ಓದು, ಈ ತಕರಾರುಗಳಲ್ಲಿ ರಾಮನಾಥಯ್ಯನ ಸಂಪರ್ಕವು ಬಹಳ ಕಡಿಮೆಯಾಯಿತು. {{gap}}ಹಲವಾರು ವರ್ಷಗಳಾದ ಮೇಲೆ, ಕಾರಿನಲ್ಲಿ ಹೋಗುತ್ತಿದ್ದಾಗ, ಹಾದಿಯ ಬಳಿಯಲ್ಲಿ ಅವ ನಿಂತಿದ್ದುದು ಕಾಣಿಸಿತು. ಅವನ ಬಳಿ ಕಾರನ್ನು ನಿಲ್ಲಿಸಿದೆ. ಎಲ್ಲಿಗೆ ಹೋಗಬೇಕೋ, ಹೇಳು ಅಲ್ಲಿಗೆ ಕರೆದುಕೊಂಡು ಹೋಗಿ ತಲಪಿಸುತ್ತೇನೆ. ಬಸ್ಸಿಗೆ ಕೊಡುವ ಛಾರ್ಜನ್ನು ನನಗೆ ಕೊಡು ಎಂದು ಕೇಳುವುದಿಲ್ಲ. ಧೈರ್ಯವಾಗಿ ಬಂದು ಕೂತುಕೋ ಎಂದನ್ನುತ್ತಾ ಬಾಗಿಲನ್ನು ತೆಗೆದೆ. ಕಾರಿನೊಳಗೆ ಕೂತುಕೊಂಡ. 'ಆಸ್ಪತ್ರೆಗೆ ನೀನು ಹೋಗುತ್ತಾ ಇರಬಹುದು. ಎದುರಿನಲ್ಲೇ ಮಾರ್ಕೆಟ್, ಅಲ್ಲಿಗೆ ಹೋಗ್ತಾ ಇದ್ದೀನಿ. ಅಂದರೆ ನಿನಗೆ ಹೆಚ್ಚು ತೊಂದರೆಯಾಗುವುದಿಲ್ಲ. ಬಸ್ ಛಾರ್ಜ್ ನೀನು ಕೇಳುವಂತಿಲ್ಲ. ಏಕೆಂದರೆ ಪೋಲೀಸ್ ಇಂತಹ ಕಾನೂನಿನ ಪ್ರಕಾರ ಲೈಸೆನ್ಸ್ ಪಡೆಯದೆ, ಬಾಡಿಗೆಗೆ ಕಾರನ್ನು ಉಪಯೋಗಿಸಿದರೆ, ನಿನಗೆ ಶಿಕ್ಷೆ ಆಗುತ್ತೆ ಎಂದ.' {{gap}}'ನಲವತ್ತರ ಮುಪ್ಪಲ್ಲೋ ನಿನಗೆ, ಆದರೂ ನಾಲಿಗೆಯ ಹುಳಿ ಮಾತಿಗೆ, ಮುಪ್ಪೇ ಬಂದಿಲ್ಲವಲ್ಲೋ' ಎಂದೆ. ನಂತರ ಯೋಗಕ್ಷೇಮವನ್ನು ವಿಚಾರಿಸಿದೆ. ತಮ್ಮಂದಿರು ತಂಗಿಯರು, ಅವರನ್ನು ಒಂದು ರೀತಿಯಲ್ಲಿ ಸೆಟಲ್ ಮಾಡಿದ್ದಾಯಿತು. ಕಚೇರಿಯ ಸರ್ಕಾರೀ ಪರೀಕ್ಷೆಗಳನ್ನು ಪ್ಯಾಸುಮಾಡಿ ಈಗ ಸೂಪರಿಂಟೆಂಡೆಂಟ್, ಆಗಿದ್ದೇನೆ. ನನ್ನ ಕೈ ಕೆಳಗೆ ಆರು ಗ್ರಾಜುಯೇಟುಗಳು ಕ್ಲಾರ್ಕ್‌ಗಳಾಗಿದ್ದಾರೆ. ಅದೇ ನನಗೆ ಸಂತೋಷ' ಎಂದ. 'ಅಷ್ಟೇನೇ ಸಂತೋಷ ! ಹೆಂಡತಿ ಮಕ್ಕಳು ಇತ್ಯಾದಿ ಸಂತೋಷಗಳು ? ಎಂದೆ. ಅವೆಲ್ಲಾ ಸಂತೋಷವನ್ನು ನೀಡುವಂತಹುದಲ್ಲ. ನನಗೆ ಮಾಡಬೇಕಾದ ಕರ್ತವ್ಯ ಅನುಭವಿಸಲೇಬೇಕಾದ ಪ್ರಾರಬ್ಧ ಎಂದ. 'ಇದೇನೋ ಹೀಗಂತಿ : ರಸಿಕಾಗ್ರೇಸರ ನೀನು. ಹೈಸ್ಕೂಲು ಕಾಂಪೌಂಡಿನಲ್ಲಿ ರಾಸಕ್ರೀಡೆಯನ್ನು ಆಡುತ್ತಿದ್ದ ರಾಸಭಗಳನ್ನು ಕುರಿತು ಭಾವಗೀತೆಯನ್ನು ಬರೆದವನಲ್ಲವೇನೋ?' ಇಷ್ಟರಲ್ಲೇ ಏನು ಬಂತೋ ವೇದಾಂತ, ಪ್ರಾರಬ್ಧ ಇತ್ಯಾದಿ : ಈಗ ಸೂಪರಿಂಟೆಂಡೆಂಟ್, ಅಂದಮೇಲೆ ಕೈ ತುಂಬಾ ಸಂಬಳ ಬರುತ್ತಿರಬೇಕು. ಈ ವಯಸ್ಸಿನಲ್ಲೇ ಮಜಾ ಮಾಡಬೇಕು, ಅತಿಯಾದ ಉದ್ವೇಗವಿಲ್ಲದೆ' ಎಂದೆ. 'ನನ್ನ ಹೆಂಡತಿಗೆ ಮೂರು ವರ್ಷಗಳಿಂದಲೂ ಕ್ಷಯ. ಸ್ಯಾನಿಟೇರಿಯಂನಲ್ಲಿ ಸೇರಿಸಿದ್ದೇನೆ. ಬಂದ ಸಂಬಳ ಬರಬಹುದಾದ ಇನ್ನಿಮೆಂಟ್ ಇವೆಲ್ಲವೂ ಔಷಧಿ ಪಥ್ಯಕ್ಕೆ ಸಾಲುವುದಿಲ್ಲ' ಎಂದ.<noinclude></noinclude> j9nfxkiwesggqt1xr5006jstujz65ud ಪುಟ:ಮನಮಂಥನ.pdf/೩೫೨ 104 62799 317206 314604 2026-05-05T11:37:03Z Shreesha Sharma 7840 /* Proofread */ 317206 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೩೩೪}}{{Right|ಮನಮಂಥನ}} ಮಾರ್ಕೆಟ್ ಬಳಿಗೆ ಬಂದಿದ್ದೆವು. 'ಇಲ್ಲಿ ಇಳಿಸಿ ಬಿಡಪ್ಪಾ, ನೆಟ್ಟಗೆ ನೀನು ಆಸ್ಪತ್ರೆಗೆ ಹೋಗಬಹುದು, ಬಡ ಸ್ನೇಹಿತನನ್ನು ಮರೆಯದೆ ಇದ್ದುದ್ದಕ್ಕಾಗಿ ವಂದನೆಗಳು ಕಣೋ' ಎಂದ. ವಯಸ್ಕರಿಗೆ ರಾಮನಾಥಯ್ಯನಿಗೆ ಆದಂತೆ, ಲೋಕದ ಕಠಿಣ ಪಾಠಗಳು ವಾಸ್ತವಿಕ ಅರಿವನ್ನು ಮರೆಯದಂತೆ ಮಾಡಿಕೊಡುತ್ತವೆ. ಒಂದಲ್ಲ ಒಂದು ರೀತಿಯಲ್ಲಿ ಹೊಣೆಗಾರಿಕೆಯು ಹೆಚ್ಚಾಗುತ್ತದೆ. ಇವನ್ನು ಪೂರೈಸಲು ಸುಳ್ಳನ್ನು ಹೇಳಬೇಕಾಗುತ್ತದೆ. ನಾನು, ನನ್ನ ಸಂಸಾರ, ಇವೆಲ್ಲಾ ನನ್ನ ಜವಾಬ್ದಾರಿ ; ಎಂದು ವಯಸ್ಕನ Ego ಭದ್ರವಾದ ಕೋಟೆಯನ್ನು ಕಟ್ಟಿರುತ್ತದೆ. ತನಗೆ ಕಾಮ್ಯವಾದ ವಸ್ತುಗಳು, ತನ್ನ ಜವಾಬ್ದಾರಿಗೆ ಒಳಪಟ್ಟ ಎಲ್ಲರಿಗೂ ದೊರಕಿಸಿಕೊಡಬೇಕು ಎಂದು ಅಂದುಕೊಳ್ಳುತ್ತಾನೆ. ಇವೆಲ್ಲವೂ ತಮೋಗುಣ ಪ್ರಧಾನವಾದ Id ಇನ ಪ್ರಭಾವೀ ಸೆಳೆತಗಳು. ಇವುಗಳನ್ನು ಈಡೇರಿಸುವುದು ತನ್ನ ಕರ್ತವ್ಯ ಎಂದು ಕೊಳ್ಳುವಾಗ, ಅವನ Super-Ego, ಅಥವಾ ಮನಸ್ಸಿನ ಸತ್-ಚೈತನ್ಯಾಂಶವು, ಪ್ರೇರಕವಾಗಿರುತ್ತದೆ. ತಾನು ಎನ್ನುವುದು ಈಗ ತನ್ನ ಸಂಸಾರ, ಬಳಗ, ಎಂದು ವಿಶಾಲಗೊಳ್ಳತೊಡಗುತ್ತದೆ. ಮುಂದೆ ವಿಶ್ವ-ಕುಟುಂಬ ಎನ್ನುವ ಧೈಯದತ್ತ ಇದು ಮೊದಲ ಹೆಜ್ಜೆ ಎಂದರೆ ತಪ್ಪಲ್ಲ. ಬಾಲ್ಯದಲ್ಲಿ ಕಲಿತ ಆದರ್ಶಗಳನ್ನು, ಮತ್ತು ಯುವಕನಾಗಿದ್ದಾಗ ಆದರ್ಶಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನಗಳನ್ನು, ವಯಸ್ಕರ ವಾಸ್ತವಿಕ ಅರಿವು ತುಂಡುಮಾಡುತ್ತದೆ. ಬಾಲ್ಯ ಮತ್ತು ಯೌವನದ ಧೈಯಗಳು ಕೇವಲ ಗಗನ ಕುಸುಮಗಳು. ಮರ್ತ್ಯ ಲೋಕದಲ್ಲಿ ಮಜವಾಗಿ ಬಾಳಬೇಕಾದರೆ, ಮೋಸವೇ ಗಾಂಡೀವ ; ಸುಳ್ಳೇ ಪಾಶುಪತಾಸ್ತ್ರ; ನಂಬಿಸಿ ನುಣ್ಣಗೆ ಮಾಡುವುದು ಭಾರ್ಗವಾಸ್ತ ಎಂದು ತಿಳಿಯುತ್ತಾನೆ. ಪತ್ತೆಯಾಗದಂತೆ ಇವೆಲ್ಲವನ್ನೂ ಮಾಡುವುದು, ವಯಸ್ಕರ ವಿಚಾರಪರ ಮನಸ್ಸಿನ ಕುಶಲತೆ. ಲೋಕಾನುಭವವು, ಅಂದರೆ ಅನುಭವಗಳಿಂದ ಪಾಠವನ್ನು ಕಲಿತಾಗ ವಿಚಾರಪರ ಮನಸ್ಸಿನ ಕುಶಲತೆಯನ್ನು ಅಭಿವೃದ್ಧಿಸುತ್ತದೆ. ಲೌಕಿಕ ಜೀವನದ ವಾಸ್ತವಿಕತೆಯನ್ನು ವಯಸ್ಕನು ಪೂರ್ಣವಾಗಿ ಅರಿತ ಮೇಲೆ, ಭಾವನಾಪರವಾಗಿ, ವಿಚಾರವನ್ನು ಸಾಕಷ್ಟು ಮಾಡದೆ, ಯಾವುದಕ್ಕೂ ಮುನ್ನುಗ್ಗುವುದಿಲ್ಲ. ಯೌವನದಲ್ಲಿ ದೇಹವು Elasticity ಯನ್ನು ಪಡೆದಿರುತ್ತದೆ. ಆದಕಾರಣ ಸಾಹಸದ ಕೆಲಸಗಳನ್ನು ಮಾಡಲು ಶಕ್ತನಾಗಿರುತ್ತಾನೆ. ಕ್ರೀಡಾಪಟುಗಳೂ ಜಗತ್ತಿನ ಚಾಂಪಿಯನ್ನರಾಗುವುದು ಈ ವಯಸ್ಸಿನಲ್ಲಿಯೇ. ದೇಹದಂತೆ ಮನಸ್ಸ<noinclude></noinclude> pbnbhbwssvtt30m1msr89weulaz0fu8 317220 317206 2026-05-05T11:49:41Z Shreelatha.Halemane 7642 /* Validated */ 317220 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೩೩೪}}{{Right|ಮನಮಂಥನ}} {{gap}}ಮಾರ್ಕೆಟ್ ಬಳಿಗೆ ಬಂದಿದ್ದೆವು. 'ಇಲ್ಲಿ ಇಳಿಸಿ ಬಿಡಪ್ಪಾ, ನೆಟ್ಟಗೆ ನೀನು ಆಸ್ಪತ್ರೆಗೆ ಹೋಗಬಹುದು, ಬಡ ಸ್ನೇಹಿತನನ್ನು ಮರೆಯದೆ ಇದ್ದುದ್ದಕ್ಕಾಗಿ ವಂದನೆಗಳು ಕಣೋ' ಎಂದ. {{gap}}ವಯಸ್ಕರಿಗೆ ರಾಮನಾಥಯ್ಯನಿಗೆ ಆದಂತೆ, ಲೋಕದ ಕಠಿಣ ಪಾಠಗಳು ವಾಸ್ತವಿಕ ಅರಿವನ್ನು ಮರೆಯದಂತೆ ಮಾಡಿಕೊಡುತ್ತವೆ. ಒಂದಲ್ಲ ಒಂದು ರೀತಿಯಲ್ಲಿ ಹೊಣೆಗಾರಿಕೆಯು ಹೆಚ್ಚಾಗುತ್ತದೆ. ಇವನ್ನು ಪೂರೈಸಲು ಸುಳ್ಳನ್ನು ಹೇಳಬೇಕಾಗುತ್ತದೆ. ನಾನು, ನನ್ನ ಸಂಸಾರ, ಇವೆಲ್ಲಾ ನನ್ನ ಜವಾಬ್ದಾರಿ ; ಎಂದು ವಯಸ್ಕನ Ego ಭದ್ರವಾದ ಕೋಟೆಯನ್ನು ಕಟ್ಟಿರುತ್ತದೆ. ತನಗೆ ಕಾಮ್ಯವಾದ ವಸ್ತುಗಳು, ತನ್ನ ಜವಾಬ್ದಾರಿಗೆ ಒಳಪಟ್ಟ ಎಲ್ಲರಿಗೂ ದೊರಕಿಸಿಕೊಡಬೇಕು ಎಂದು ಅಂದುಕೊಳ್ಳುತ್ತಾನೆ. ಇವೆಲ್ಲವೂ ತಮೋಗುಣ ಪ್ರಧಾನವಾದ Id ಇನ ಪ್ರಭಾವೀ ಸೆಳೆತಗಳು. ಇವುಗಳನ್ನು ಈಡೇರಿಸುವುದು ತನ್ನ ಕರ್ತವ್ಯ ಎಂದು ಕೊಳ್ಳುವಾಗ, ಅವನ Super-Ego, ಅಥವಾ ಮನಸ್ಸಿನ ಸತ್-ಚೈತನ್ಯಾಂಶವು, ಪ್ರೇರಕವಾಗಿರುತ್ತದೆ. ತಾನು ಎನ್ನುವುದು ಈಗ ತನ್ನ ಸಂಸಾರ, ಬಳಗ, ಎಂದು ವಿಶಾಲಗೊಳ್ಳತೊಡಗುತ್ತದೆ. ಮುಂದೆ ವಿಶ್ವ-ಕುಟುಂಬ ಎನ್ನುವ ಧೈಯದತ್ತ ಇದು ಮೊದಲ ಹೆಜ್ಜೆ ಎಂದರೆ ತಪ್ಪಲ್ಲ. {{gap}}ಬಾಲ್ಯದಲ್ಲಿ ಕಲಿತ ಆದರ್ಶಗಳನ್ನು, ಮತ್ತು ಯುವಕನಾಗಿದ್ದಾಗ ಆದರ್ಶಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನಗಳನ್ನು, ವಯಸ್ಕರ ವಾಸ್ತವಿಕ ಅರಿವು ತುಂಡುಮಾಡುತ್ತದೆ. ಬಾಲ್ಯ ಮತ್ತು ಯೌವನದ ಧೈಯಗಳು ಕೇವಲ ಗಗನ ಕುಸುಮಗಳು. ಮರ್ತ್ಯ ಲೋಕದಲ್ಲಿ ಮಜವಾಗಿ ಬಾಳಬೇಕಾದರೆ, ಮೋಸವೇ ಗಾಂಡೀವ ; ಸುಳ್ಳೇ ಪಾಶುಪತಾಸ್ತ್ರ; ನಂಬಿಸಿ ನುಣ್ಣಗೆ ಮಾಡುವುದು ಭಾರ್ಗವಾಸ್ತ ಎಂದು ತಿಳಿಯುತ್ತಾನೆ. ಪತ್ತೆಯಾಗದಂತೆ ಇವೆಲ್ಲವನ್ನೂ ಮಾಡುವುದು, ವಯಸ್ಕರ ವಿಚಾರಪರ ಮನಸ್ಸಿನ ಕುಶಲತೆ. ಲೋಕಾನುಭವವು, ಅಂದರೆ ಅನುಭವಗಳಿಂದ ಪಾಠವನ್ನು ಕಲಿತಾಗ ವಿಚಾರಪರ ಮನಸ್ಸಿನ ಕುಶಲತೆಯನ್ನು ಅಭಿವೃದ್ಧಿಸುತ್ತದೆ. {{gap}}ಲೌಕಿಕ ಜೀವನದ ವಾಸ್ತವಿಕತೆಯನ್ನು ವಯಸ್ಕನು ಪೂರ್ಣವಾಗಿ ಅರಿತ ಮೇಲೆ, ಭಾವನಾಪರವಾಗಿ, ವಿಚಾರವನ್ನು ಸಾಕಷ್ಟು ಮಾಡದೆ, ಯಾವುದಕ್ಕೂ ಮುನ್ನುಗ್ಗುವುದಿಲ್ಲ. ಯೌವನದಲ್ಲಿ ದೇಹವು Elasticity ಯನ್ನು ಪಡೆದಿರುತ್ತದೆ. ಆದಕಾರಣ ಸಾಹಸದ ಕೆಲಸಗಳನ್ನು ಮಾಡಲು ಶಕ್ತನಾಗಿರುತ್ತಾನೆ. ಕ್ರೀಡಾಪಟುಗಳೂ ಜಗತ್ತಿನ ಚಾಂಪಿಯನ್ನರಾಗುವುದು ಈ ವಯಸ್ಸಿನಲ್ಲಿಯೇ. ದೇಹದಂತೆ ಮನಸ್ಸ<noinclude></noinclude> lsofuwnjv7ne7trr2xu71ce26edqrpd ಪುಟ:ಮನಮಂಥನ.pdf/೩೫೩ 104 62800 317207 314605 2026-05-05T11:37:53Z Shreesha Sharma 7840 /* Proofread */ 317207 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೩೫}} ಯುವಕರಲ್ಲಿ ಅತ್ಯುತ್ಸಾಹದಿಂದ ತುಂಬಿರುತ್ತದೆ. ಉದಾತ್ತ ಧೈಯಗಳಿಂದಲೂ ಪ್ರೇರೇಪಿಸಲ್ಪಡುತ್ತದೆ. ಆಗುಹೋಗುಗಳನ್ನು ಸಾಕಷ್ಟು ವಿಚಾರ ಮಾಡದೆ ಹರೆಯದ ಹೋರಿಯಂತೆ ಮುನ್ನುಗ್ಗುತ್ತಾರೆ. ಮಹಾಭಾರತದ ಅಭಿಮನ್ಯುವು ಉತ್ತಮ ನಿದರ್ಶನ. ಸಮರವಿದ್ಯೆಯನ್ನು ಲಕ್ಷಣವಾಗಿ ಕಲಿತಿದ್ದ. ಉತ್ಸಾಹವಿತ್ತು, ದೇಹಕ್ಕೆ ಹುಮ್ಮನ್ನೂ ಇತ್ತು. ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ ಯಾರೂ ಇರದಿದ್ದಾಗ, ತಾನೇ ಶತ್ರುವಿನ ಚಕ್ರವ್ಯೂಹವನ್ನು ಭೇದಿಸಿ ಒಳ ನುಗ್ಗಿದ. ಒಳಕ್ಕೆ ಹೋದವನು ಸುರಕ್ಷಿತವಾಗಿ ಹಿಂದಕ್ಕೆ ಬರಲು ಸಾಧ್ಯವೇ ? ಸಾಧ್ಯವಾದರೆ ಯಾವ ರೀತಿಯನ್ನು ಅನುಸರಿಸಬೇಕು, ಎಂದವನಿಗೆ ವಿಚಾರ ಮಾಡುವಷ್ಟು ತಾಳ್ಮೆಯಿರಲಿಲ್ಲ. ಮುನ್ನುಗ್ಗಿದ. ಸಿಕ್ಕಿಹಾಕಿಕೊಂಡ, ಅಸುವನ್ನು ಬಲಿಕೊಟ್ಟ. ವಯಸ್ಕರಾದರೋ, ಯಾವುದನ್ನು ಮಾಡಬೇಕಾದರೂ, ತಮ್ಮ ಯೋಗ್ಯತೆಗೆ ಮತ್ತು ಕಲಿಕೆಗೆ ತಕ್ಕಂತೆ, ವಿಚಾರವನ್ನು ಮಾಡುತ್ತಾರೆ. ಮುಂದೆ ಹೀಗಾಗಬಹುದೋ ಹಾಗಾಗಬಹುದೋ ಎಂದು ಯೋಚಿಸುತ್ತಾರೆ. ಅನಂತರ ನಿರ್ಧಾರವನ್ನು ಮಾಡಿ ಕಾರ್ಯೋನ್ಮುಖರಾಗುತ್ತಾರೆ. ಭಾವನಾಪರವಶತೆಯು, ವಿಚಾರಪರತೆಯು ಹೆಚ್ಚಾದಂತೆಲ್ಲಾ ಮನಸ್ಸಿನಲ್ಲಿ ಕ್ಷೀಣವಾಗುತ್ತದೆ. Sentiment is in inverse proportion to Reasoning; in its pull on the mind ; ಎನ್ನಬಹುದು. “ಅಪ್ಪ ಅಳೆದೂ ಸುರಿದೂ ನೋಡುತ್ತಾರೆ. ಮಗ ಅಂತಃಕರಣದಿಂದ ಜಟ್ಟಂತ ಮಾಡುತ್ತಾನೆ' ಎಂದು ಮನೆಯಾಕೆಯು ಗಂಡನನ್ನು ಶ್ಲಾಘಿಸಿದರೂ, ಯುವಕ ಮಗನನ್ನು ಮೆಚ್ಚುತ್ತಾಳೆ. ಹೆಂಗರುಳು ವಿಚಾರಪರತೆಗೆ ಸೊಪ್ಪು ಹಾಕುವುದಿಲ್ಲ. ಪ್ರಕೃತಿನಿಯಮದಲ್ಲಿ ಹೆಣ್ಣು ಭಾವನಾ ಪ್ರೇರಿತೆ ; Emotional, ಗಂಡು ವಿಚಾರ ಪ್ರೇರಿತ, Rationally Motional, ಆದುದರಿಂದ ತಾಯಿಯು ಯುವಕ ಮಗನನ್ನು ಹೆಚ್ಚು ಮೆಚ್ಚುವುದು. ಇಬ್ಬರಿಗೂ ವಯಸ್ಸಿನ ಅಂತರವಿದ್ದರೂ, Sentiment ಮತ್ತು Emotion ಇವುಗಳಲ್ಲಿ ಇಬ್ಬರಿಗೂ ಸಮಾನ ಧರ್ಮವಿರುತ್ತದೆ. ತಾದಾತ್ತ್ವವಿರುತ್ತದೆ. ಫ್ರಾಯ್ಲಿನ ಈಡಿಪಸ್ ಕಾಂಪ್ಲೆಕ್ಷನ್ನು ಗಣನೆಗೆ ತೆಗೆದುಕೊಳ್ಳದೇ ಇದ್ದರೂ, ತಾಯಿ ಮಗನ ಪರಸ್ಪರ ಮೆಚ್ಚುಗೆಯನ್ನು ಅರ್ಥಮಾಡಿಕೊಳ್ಳಬಹುದು. ಇದು ವಯಸ್ಸಿನೊಡನೆ ಅನ್ವಯಿಸಿರುತ್ತದೆ, ಎಂಬುದನ್ನು ಮರೆಯಬಾರದು. ಯುವಕ ಮಗನು ವಯಸ್ಕನಾದ ಮೇಲೆ, ಭಾವನಾ ಪ್ರೇರಣೆಯು ಕಡಿಮೆಯಾಗತೊಡಗಿದಂತೆ, ತಾಯಿಯ ತಾದಾತ್ಮದ ಅಚ್ಚುಮೆಚ್ಚು ಕಡಿಮೆಯಾಗುತ್ತದೆ. ಆ ವಯಸ್ಸಿನಲ್ಲಿ ವಯಸ್ಕ ಮಗನು ತನ್ನ ಜೀವನಕ್ಕೆ ಅಗತ್ಯವಾದುದರಿಂದ, ಅಚ್ಚುಮೆಚ್ಚು ಹೋಗಿ ಕೃತಜ್ಞತಾಪೂರ್ವಕ ಆದರವು ಬಹಳಷ್ಟು<noinclude></noinclude> 26rmrzgdonzsj97e953gs8e4dr4j7a4 317221 317207 2026-05-05T11:49:59Z Shreelatha.Halemane 7642 /* Validated */ 317221 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೩೫}} ಯುವಕರಲ್ಲಿ ಅತ್ಯುತ್ಸಾಹದಿಂದ ತುಂಬಿರುತ್ತದೆ. ಉದಾತ್ತ ಧೈಯಗಳಿಂದಲೂ ಪ್ರೇರೇಪಿಸಲ್ಪಡುತ್ತದೆ. ಆಗುಹೋಗುಗಳನ್ನು ಸಾಕಷ್ಟು ವಿಚಾರ ಮಾಡದೆ ಹರೆಯದ ಹೋರಿಯಂತೆ ಮುನ್ನುಗ್ಗುತ್ತಾರೆ. ಮಹಾಭಾರತದ ಅಭಿಮನ್ಯುವು ಉತ್ತಮ ನಿದರ್ಶನ. ಸಮರವಿದ್ಯೆಯನ್ನು ಲಕ್ಷಣವಾಗಿ ಕಲಿತಿದ್ದ. ಉತ್ಸಾಹವಿತ್ತು, ದೇಹಕ್ಕೆ ಹುಮ್ಮನ್ನೂ ಇತ್ತು. ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ ಯಾರೂ ಇರದಿದ್ದಾಗ, ತಾನೇ ಶತ್ರುವಿನ ಚಕ್ರವ್ಯೂಹವನ್ನು ಭೇದಿಸಿ ಒಳ ನುಗ್ಗಿದ. ಒಳಕ್ಕೆ ಹೋದವನು ಸುರಕ್ಷಿತವಾಗಿ ಹಿಂದಕ್ಕೆ ಬರಲು ಸಾಧ್ಯವೇ ? ಸಾಧ್ಯವಾದರೆ ಯಾವ ರೀತಿಯನ್ನು ಅನುಸರಿಸಬೇಕು, ಎಂದವನಿಗೆ ವಿಚಾರ ಮಾಡುವಷ್ಟು ತಾಳ್ಮೆಯಿರಲಿಲ್ಲ. ಮುನ್ನುಗ್ಗಿದ. ಸಿಕ್ಕಿಹಾಕಿಕೊಂಡ, ಅಸುವನ್ನು ಬಲಿಕೊಟ್ಟ. {{gap}}ವಯಸ್ಕರಾದರೋ, ಯಾವುದನ್ನು ಮಾಡಬೇಕಾದರೂ, ತಮ್ಮ ಯೋಗ್ಯತೆಗೆ ಮತ್ತು ಕಲಿಕೆಗೆ ತಕ್ಕಂತೆ, ವಿಚಾರವನ್ನು ಮಾಡುತ್ತಾರೆ. ಮುಂದೆ ಹೀಗಾಗಬಹುದೋ ಹಾಗಾಗಬಹುದೋ ಎಂದು ಯೋಚಿಸುತ್ತಾರೆ. ಅನಂತರ ನಿರ್ಧಾರವನ್ನು ಮಾಡಿ ಕಾರ್ಯೋನ್ಮುಖರಾಗುತ್ತಾರೆ. ಭಾವನಾಪರವಶತೆಯು, ವಿಚಾರಪರತೆಯು ಹೆಚ್ಚಾದಂತೆಲ್ಲಾ ಮನಸ್ಸಿನಲ್ಲಿ ಕ್ಷೀಣವಾಗುತ್ತದೆ. Sentiment is in inverse proportion to Reasoning; in its pull on the mind ; ಎನ್ನಬಹುದು. {{gap}}“ಅಪ್ಪ ಅಳೆದೂ ಸುರಿದೂ ನೋಡುತ್ತಾರೆ. ಮಗ ಅಂತಃಕರಣದಿಂದ ಜಟ್ಟಂತ ಮಾಡುತ್ತಾನೆ' ಎಂದು ಮನೆಯಾಕೆಯು ಗಂಡನನ್ನು ಶ್ಲಾಘಿಸಿದರೂ, ಯುವಕ ಮಗನನ್ನು ಮೆಚ್ಚುತ್ತಾಳೆ. ಹೆಂಗರುಳು ವಿಚಾರಪರತೆಗೆ ಸೊಪ್ಪು ಹಾಕುವುದಿಲ್ಲ. ಪ್ರಕೃತಿನಿಯಮದಲ್ಲಿ ಹೆಣ್ಣು ಭಾವನಾ ಪ್ರೇರಿತೆ ; Emotional, ಗಂಡು ವಿಚಾರ ಪ್ರೇರಿತ, Rationally Motional, ಆದುದರಿಂದ ತಾಯಿಯು ಯುವಕ ಮಗನನ್ನು ಹೆಚ್ಚು ಮೆಚ್ಚುವುದು. ಇಬ್ಬರಿಗೂ ವಯಸ್ಸಿನ ಅಂತರವಿದ್ದರೂ, Sentiment ಮತ್ತು Emotion ಇವುಗಳಲ್ಲಿ ಇಬ್ಬರಿಗೂ ಸಮಾನ ಧರ್ಮವಿರುತ್ತದೆ. ತಾದಾತ್ತ್ವವಿರುತ್ತದೆ. ಫ್ರಾಯ್ಲಿನ ಈಡಿಪಸ್ ಕಾಂಪ್ಲೆಕ್ಷನ್ನು ಗಣನೆಗೆ ತೆಗೆದುಕೊಳ್ಳದೇ ಇದ್ದರೂ, ತಾಯಿ ಮಗನ ಪರಸ್ಪರ ಮೆಚ್ಚುಗೆಯನ್ನು ಅರ್ಥಮಾಡಿಕೊಳ್ಳಬಹುದು. ಇದು ವಯಸ್ಸಿನೊಡನೆ ಅನ್ವಯಿಸಿರುತ್ತದೆ, ಎಂಬುದನ್ನು ಮರೆಯಬಾರದು. ಯುವಕ ಮಗನು ವಯಸ್ಕನಾದ ಮೇಲೆ, ಭಾವನಾ ಪ್ರೇರಣೆಯು ಕಡಿಮೆಯಾಗತೊಡಗಿದಂತೆ, ತಾಯಿಯ ತಾದಾತ್ಮದ ಅಚ್ಚುಮೆಚ್ಚು ಕಡಿಮೆಯಾಗುತ್ತದೆ. ಆ ವಯಸ್ಸಿನಲ್ಲಿ ವಯಸ್ಕ ಮಗನು ತನ್ನ ಜೀವನಕ್ಕೆ ಅಗತ್ಯವಾದುದರಿಂದ, ಅಚ್ಚುಮೆಚ್ಚು ಹೋಗಿ ಕೃತಜ್ಞತಾಪೂರ್ವಕ ಆದರವು ಬಹಳಷ್ಟು<noinclude></noinclude> qkb25c7wwfioeq7oqm2c1kjh35f47ps ಪುಟ:ಮನಮಂಥನ.pdf/೩೫೪ 104 62801 317208 314606 2026-05-05T11:38:37Z Shreesha Sharma 7840 /* Proofread */ 317208 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೩೩೬}}{{Right|ಮನಮಂಥನ}} ಕಾಣಿಸಿಕೊಳ್ಳುತ್ತದೆ. ಮುದಿತಾಯಿಯು ವಯಸ್ಕ ಮಗನನ್ನು ಆದರಕ್ಕಿಂತ ಹೆಚ್ಚಾಗಿ ಗೌರವಿಸುತ್ತಾಳೆ. ಸಮವಯಸ್ಕರೊಂದಿಗೆ ಮಗನ ಬಗ್ಗೆ ಹೆಮ್ಮೆಯಿಂದ ಬಡಾಯಿ ಕೊಚ್ಚುತ್ತಾಳೆ. ಆದರೆ EmotionalAttachment ಅಥವಾ ಭಾವನಾ ಬಂಧನವು ಸಡಿಲಗೊಳ್ಳುತ್ತದೆ. ವಾಸ್ತವಿಕ ಅರಿವು, ವಯಸ್ಕನಲ್ಲಿ ಸ್ಪಷ್ಟವಾದಾಗ, Reality Principal ಅನ್ನು ಅವ ತಿಳಿದುಕೊಂಡಿದ್ದಾನೆ, ಎನ್ನಬಹುದು. ಅದಕ್ಕೆ ಮುಂಚೆ ಕೇವಲ Pleasure Principle ಅನ್ನು ಅವ ಅನುಭವಿಸುತ್ತಿದ್ದ. ಬಾಲ್ಯದಲ್ಲಿ ಹಾಗೂ ಯೌವನದಲ್ಲಿ, Pleasure Principle, ಅಥವಾ ಸುಖದ ಅನ್ವೇಷಣೆಯು ಪ್ರಮುಖವಾಗಿರುತ್ತದೆ. ಸುಖವು, ತಮೋಪ್ರಧಾನವಾದ Id ಇನ ಬೇಡಿಕೆಗಳನ್ನು ಪೂರೈಸುವುದರಿಂದ ದೊರೆಯಬಹುದು. ಹಾಗೂ ಸತ್-ಚೈತನ್ಯ ಪ್ರಧಾನವಾದ Super - Ego ವಿಗೆ, ತೃಪ್ತಿಯನ್ನೀಯುವ, ಧೈಯ ಪ್ರಯತ್ನವೂ ಆಗಿರಬಹುದು. ಆದರ್ಶ ಸಾಧನೆಯ ಯೋಚನೆಯು ಮತ್ತು, ಪ್ರಯತ್ನವೂ ಆಗಿರಬಹುದು. ಇವೆರಡೂ ವಾಸ್ತವಿಕ ಲೋಕದಲ್ಲಿ ಇದ್ದೇ ಇರುತ್ತವೆ. ಆದರೆ Super Ego ಅಥವಾ ಸತ್-ಚೈತನ್ಯಾಂಶವು, ಕನಸಿನಂತೆ ಸಿನಿಮೀಯವಾಗಿರುತ್ತದೆ. ಈ ವ್ಯತ್ಯಾಸವನ್ನು ವಯಸ್ಕನು ಹಂತ ಹಂತವಾಗಿ ತಿಳಿದುಕೊಳ್ಳುತ್ತಾನೆ. Pleasure Principle ಅಥವಾ ಸುಖದ ಪ್ರೇರಣೆಯು ಬಲು ಚೆನ್ನ ಬಹಳ ಹಿತ ಎಂದುಕೊಂಡಿದ್ದವನು, ಲೌಕಿಕ ಜೀವನದ ವಾಸ್ತವಿಕವಾದ ಕಠೋರ ಸತ್ಯವನ್ನು ಅರಿಯುತ್ತಾನೆ. ಕಷ್ಟ ನಷ್ಟ ; ನೋವು ಸಂಕಟ ; ಮಾನ ಅವಮಾನ ; ಇವೆಲ್ಲವನ್ನೂ ಅನುಭವಿಸುತ್ತಾನೆ. ಆಗ Super - Ego ಅಥವಾ ಸತ್-ಚೈತನ್ಯಾಂಶವು ಬರಿಯ ಕನಸು ಎಂದಂದುಕೊಳ್ಳುತ್ತಾನೆ. ಅದನ್ನು ಮನಸ್ಸಿನ ಮೂಲೆಗೆ ತಳ್ಳಿ ಹಾಕುತ್ತಾನೆ. Reality Principle, ಅಥವಾ ವಾಸ್ತವಿಕವಾದ ಲೌಕಿಕ ಪ್ರೇರಣೆಯು ಬಾಳಿಗೆ ಅತ್ಯಗತ್ಯವಾದುದು. ಇದೇ ಸತ್ಯ; ಇದೇ ಹಿತ, ಎಂದು ಅಂದುಕೊಳ್ಳುತ್ತಾನೆ. ಮಾನಸಿಕ ಕಾರ್ಯಕ್ರಮಗಳನ್ನು ವಿಶ್ಲೇಷಿಸತೊಡಗಿದ, ಚಾರ್ವಾಕರು ಈ ನಿರ್ಧಾರವನ್ನು ಮಾಡಿದರು. ಮುಂದುವರೆಯಲು ಅವರಿಗೆ ಆಗ ಯೋಗ್ಯತೆಯು ಇರಲಿಲ್ಲ. 'ಋಣಂ ಕೃತ್ವಾ ಧೃತಂ ಪಿಬೇತ್' ಎಂದರು. ಸಾಲವನ್ನು ಮಾಡಿಯಾದರೂ, ಅದನ್ನು ಮುಂದೆ ತೀರಿಸುವ ಬಗೆ ಹೇಗೆ ಎಂದು ಯೋಚನೆಯನ್ನು ಮಾಡದೆ, ಘಮಘಮಿಸುವ ತುಪ್ಪವನ್ನು ಗಿಟ್ಟಿಸಿಕೊಳ್ಳಿ ; ತಿನ್ನಿ: ಸುಖಪಡಿ ಇದೇ ಹಿತದ ಬಾಳಿನ ಮರ್ಮ ಎಂದು ತೀರ್ಮಾನಿಸಿದರು. ಭವಿಷ್ಯದ<noinclude></noinclude> mwebmum9lhv4gjxcm6ww4gx7hph8422 317222 317208 2026-05-05T11:50:33Z Shreelatha.Halemane 7642 /* Validated */ 317222 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೩೩೬}}{{Right|ಮನಮಂಥನ}} ಕಾಣಿಸಿಕೊಳ್ಳುತ್ತದೆ. ಮುದಿತಾಯಿಯು ವಯಸ್ಕ ಮಗನನ್ನು ಆದರಕ್ಕಿಂತ ಹೆಚ್ಚಾಗಿ ಗೌರವಿಸುತ್ತಾಳೆ. ಸಮವಯಸ್ಕರೊಂದಿಗೆ ಮಗನ ಬಗ್ಗೆ ಹೆಮ್ಮೆಯಿಂದ ಬಡಾಯಿ ಕೊಚ್ಚುತ್ತಾಳೆ. ಆದರೆ EmotionalAttachment ಅಥವಾ ಭಾವನಾ ಬಂಧನವು ಸಡಿಲಗೊಳ್ಳುತ್ತದೆ. {{gap}}ವಾಸ್ತವಿಕ ಅರಿವು, ವಯಸ್ಕನಲ್ಲಿ ಸ್ಪಷ್ಟವಾದಾಗ, Reality Principal ಅನ್ನು ಅವ ತಿಳಿದುಕೊಂಡಿದ್ದಾನೆ, ಎನ್ನಬಹುದು. ಅದಕ್ಕೆ ಮುಂಚೆ ಕೇವಲ Pleasure Principle ಅನ್ನು ಅವ ಅನುಭವಿಸುತ್ತಿದ್ದ. ಬಾಲ್ಯದಲ್ಲಿ ಹಾಗೂ ಯೌವನದಲ್ಲಿ, Pleasure Principle, ಅಥವಾ ಸುಖದ ಅನ್ವೇಷಣೆಯು ಪ್ರಮುಖವಾಗಿರುತ್ತದೆ. ಸುಖವು, ತಮೋಪ್ರಧಾನವಾದ Id ಇನ ಬೇಡಿಕೆಗಳನ್ನು ಪೂರೈಸುವುದರಿಂದ ದೊರೆಯಬಹುದು. ಹಾಗೂ ಸತ್-ಚೈತನ್ಯ ಪ್ರಧಾನವಾದ Super - Ego ವಿಗೆ, ತೃಪ್ತಿಯನ್ನೀಯುವ, ಧೈಯ ಪ್ರಯತ್ನವೂ ಆಗಿರಬಹುದು. ಆದರ್ಶ ಸಾಧನೆಯ ಯೋಚನೆಯು ಮತ್ತು, ಪ್ರಯತ್ನವೂ ಆಗಿರಬಹುದು. ಇವೆರಡೂ ವಾಸ್ತವಿಕ ಲೋಕದಲ್ಲಿ ಇದ್ದೇ ಇರುತ್ತವೆ. ಆದರೆ Super Ego ಅಥವಾ ಸತ್-ಚೈತನ್ಯಾಂಶವು, ಕನಸಿನಂತೆ ಸಿನಿಮೀಯವಾಗಿರುತ್ತದೆ. {{gap}}ಈ ವ್ಯತ್ಯಾಸವನ್ನು ವಯಸ್ಕನು ಹಂತ ಹಂತವಾಗಿ ತಿಳಿದುಕೊಳ್ಳುತ್ತಾನೆ. Pleasure Principle ಅಥವಾ ಸುಖದ ಪ್ರೇರಣೆಯು ಬಲು ಚೆನ್ನ ಬಹಳ ಹಿತ ಎಂದುಕೊಂಡಿದ್ದವನು, ಲೌಕಿಕ ಜೀವನದ ವಾಸ್ತವಿಕವಾದ ಕಠೋರ ಸತ್ಯವನ್ನು ಅರಿಯುತ್ತಾನೆ. ಕಷ್ಟ ನಷ್ಟ ; ನೋವು ಸಂಕಟ ; ಮಾನ ಅವಮಾನ ; ಇವೆಲ್ಲವನ್ನೂ ಅನುಭವಿಸುತ್ತಾನೆ. ಆಗ Super - Ego ಅಥವಾ ಸತ್-ಚೈತನ್ಯಾಂಶವು ಬರಿಯ ಕನಸು ಎಂದಂದುಕೊಳ್ಳುತ್ತಾನೆ. ಅದನ್ನು ಮನಸ್ಸಿನ ಮೂಲೆಗೆ ತಳ್ಳಿ ಹಾಕುತ್ತಾನೆ. {{gap}}Reality Principle, ಅಥವಾ ವಾಸ್ತವಿಕವಾದ ಲೌಕಿಕ ಪ್ರೇರಣೆಯು ಬಾಳಿಗೆ ಅತ್ಯಗತ್ಯವಾದುದು. ಇದೇ ಸತ್ಯ; ಇದೇ ಹಿತ, ಎಂದು ಅಂದುಕೊಳ್ಳುತ್ತಾನೆ. {{gap}}ಮಾನಸಿಕ ಕಾರ್ಯಕ್ರಮಗಳನ್ನು ವಿಶ್ಲೇಷಿಸತೊಡಗಿದ, ಚಾರ್ವಾಕರು ಈ ನಿರ್ಧಾರವನ್ನು ಮಾಡಿದರು. ಮುಂದುವರೆಯಲು ಅವರಿಗೆ ಆಗ ಯೋಗ್ಯತೆಯು ಇರಲಿಲ್ಲ. 'ಋಣಂ ಕೃತ್ವಾ ಧೃತಂ ಪಿಬೇತ್' ಎಂದರು. ಸಾಲವನ್ನು ಮಾಡಿಯಾದರೂ, ಅದನ್ನು ಮುಂದೆ ತೀರಿಸುವ ಬಗೆ ಹೇಗೆ ಎಂದು ಯೋಚನೆಯನ್ನು ಮಾಡದೆ, ಘಮಘಮಿಸುವ ತುಪ್ಪವನ್ನು ಗಿಟ್ಟಿಸಿಕೊಳ್ಳಿ ; ತಿನ್ನಿ: ಸುಖಪಡಿ ಇದೇ ಹಿತದ ಬಾಳಿನ ಮರ್ಮ ಎಂದು ತೀರ್ಮಾನಿಸಿದರು. ಭವಿಷ್ಯದ<noinclude></noinclude> fzbbnds3uorgvuoz03mlj82031y49g2 ಪುಟ:ಮನಮಂಥನ.pdf/೩೫೫ 104 62802 317209 314607 2026-05-05T11:39:23Z Shreesha Sharma 7840 /* Proofread */ 317209 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೩೭}} ಯಾವ ಕಾಳಜಿಯೂ ಅವರನ್ನು ಕಾಡಲಿಲ್ಲ. ಸಾಲವನ್ನು ಮಾಡಿ ತುಪ್ಪವನ್ನು ಮೆಲ್ಲುವುದು ಹಿತವಾಗಿರಬಹುದು. ಅನಂತರ ಸಾಲ ಕೊಟ್ಟವನು ಬಂದು ಕಾಡತೊಡಗಿದಾಗ, ತುಪ್ಪವನ್ನು ಜತೆಗೆ ರಕ್ತವನ್ನೂ ಕೂಡ ಕಕ್ಕಬೇಕಾಗುತ್ತದೆ. ಲೌಕಿಕ ಜೀವನದಲ್ಲಿ ಇಂತಹ ಅನುಭವಗಳು ಸಾಮಾನ್ಯ. ಸಮಾಜದ ಭದ್ರತೆಗಾಗಲೀ, ವ್ಯಕ್ತಿಯ ನೆಮ್ಮದಿಗಾಗಲೀ, ಚಾರ್ವಾಕರ ಉಪದೇಶವು ವಿರೋಧವಾಗುತ್ತದೆ, ಆಭಾಸವನ್ನುಂಟುಮಾಡುತ್ತದೆ. Reality Principle ಎಂಬುದು ತಾತ್ಕಾಲಿಕವಾದುದು ಎಂದರ್ಥ ಮಾಡಬಾರದು. ಲೌಕಿಕದ ಬಾಳನ್ನು ಸಂಪೂರ್ಣವಾಗಿ ಗಮನಿಸಬೇಕು. ಈ ವಿಷಯವನ್ನು ಏಕೆ ಉಲ್ಲೇಖಿಸಿದೆ ಎಂದರೆ, ಹಿರಿಯ ಮನನಿಗರು ಹಲವರು, ಮನಸ್ಸಿನ ನೆಮ್ಮದಿಯನ್ನು ಪಡೆಯಲು, ನಿನ್ನೆಯದೆಲ್ಲವನ್ನೂ ಮರೆತು ಬಿಡಬೇಕು; ನಾಳೆಯದರ ಚಿಂತೆಯನ್ನೂ ಮಾಡಬಾರದು. ಇಂದಿನ ಯೋಚನೆಯು ಮಾತ್ರ ಇಂದಿಗಿರಬೇಕು ಎಂದು ಉಪದೇಶಿಸಿದ್ದಾರೆ. ಪರಂಪರಾನುಗತವಾಗಿ ಬೆಳೆದು ಬಂದಿರುವ ಅನುಭವಗಳಿಂದ ಪಾಠಗಳನ್ನು ಕಲಿತು ಪ್ರವೃದ್ಧಿಸಿರುವ, ಮಾನವನ ಮನಸ್ಸು ಹಿಂದಿನದೆಲ್ಲವನ್ನೂ ಮರೆತುಬಿಡಬೇಕು ; ದಿನ ಬೆಳಿಗ್ಗೆ ನಿದ್ರೆಯಿಂದ ಎದ್ದಾಗ, ಈಗ ತಾನೆ ಹುಟ್ಟಿದೆ ಎಂದುಕೊಳ್ಳಬೇಕು ಎಂದರೆ, ಇದು ಸಾಧ್ಯವೇ ? ಎಂದು ಸಂದೇಹವುಂಟಾಗುತ್ತದೆ. ಇಂತಹ ಹಿರಿಯ ಮನನಿಗರು ನುಡಿದ ಉಪದೇಶದಲ್ಲಿ ಅಂತರ್ಗಭಿ್ರತವಾದ ಮತ್ತೆ ಯಾವುದೋ ಗೂಡಾರ್ಥವಿರಬೇಕು! ವಯಸ್ಕರ ಮನಸ್ಸಿನಲ್ಲಿ Pleasure Principle, ಸುಖಾನ್ವೇಷಣೆಯ ಸೆಳೆತವು, Reality Principle, ವಾಸ್ತವಿಕ ಅರಿವಿನಿಂದ, ತಹಬಂದಿಯಲ್ಲಿರುತ್ತದೆ. Super- Ego ಅಥವಾ ಸತ್-ಚೈತನ್ಯಾಂಶವು ವಾಸ್ತವಿಕ ಅರಿವಿನಿಂದ, ಬಲಹೀನವಾಗುತ್ತದೆ. ನನ್ನ ಗೋಳು, ನನ್ನ ಬಾಳು, ನನಗೇ ಸಾಕಷ್ಟು ಸಂಕಟವನ್ನೀಯುತ್ತಿರುವುದರಿಂದ, ನೆರೆಹೊರೆಯವರ ಅಥವಾ ಸಮಾಜದ ಗೋಳುಕರೆಗೆ ಅಥವಾ ಉದ್ಧಾರಕ್ಕೆ ನಾನೇಕೆ ಒದ್ದಾಡಲಿ, ಎಂಬ ಮನೋಭಾವವು ಬೆಳೆಯುತ್ತದೆ. ಸಮಾಜವನ್ನು ಅಥವಾ ಲೋಕವನ್ನು ಉತ್ತಮಗೊಳಿಸುತ್ತೇನೆ ಎಂಬ ಧೈಯವು ಯೌವನದಲ್ಲಿ ಬರಸೆಳೆಯುತ್ತದೆ. ಆದರೆ ವಯಸ್ಕರಲ್ಲಿ ನನ್ನ ಪಾಡನ್ನು ಉತ್ತಮಪಡಿಸಿಕೊಂಡರೆ, ಅಥವಾ ಈಗಿರುವ ಮಟ್ಟದಲ್ಲಿಯಾದರೂ ಕಾಪಾಡಿಕೊಂಡರೆ ಸಾಕು ಎನ್ನುವಂತಾಗುತ್ತದೆ. ಲೋಕವನ್ನು ಅಥವಾ ಸಮಾಜವನ್ನು ಉದ್ಧರಿಸತೊಡಗುವ ತೆವಲು ಹಿಡಿದವರು ಏನನ್ನು ಬೇಕಾದರೂ ಮಾಡಿಕೊಳ್ಳಲಿ. ಅವರವರ ಹುಚ್ಚು ಅವರಿಗೆ ಆನಂದ ; ಎಂದು ತೆಪ್ಪಗಿರುತ್ತಾರೆ.<noinclude></noinclude> eeqimd77547b52t7v4qv89k1qojcdz8 317223 317209 2026-05-05T11:51:11Z Shreelatha.Halemane 7642 /* Validated */ 317223 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೩೭}} ಯಾವ ಕಾಳಜಿಯೂ ಅವರನ್ನು ಕಾಡಲಿಲ್ಲ. {{gap}}ಸಾಲವನ್ನು ಮಾಡಿ ತುಪ್ಪವನ್ನು ಮೆಲ್ಲುವುದು ಹಿತವಾಗಿರಬಹುದು. ಅನಂತರ ಸಾಲ ಕೊಟ್ಟವನು ಬಂದು ಕಾಡತೊಡಗಿದಾಗ, ತುಪ್ಪವನ್ನು ಜತೆಗೆ ರಕ್ತವನ್ನೂ ಕೂಡ ಕಕ್ಕಬೇಕಾಗುತ್ತದೆ. ಲೌಕಿಕ ಜೀವನದಲ್ಲಿ ಇಂತಹ ಅನುಭವಗಳು ಸಾಮಾನ್ಯ. ಸಮಾಜದ ಭದ್ರತೆಗಾಗಲೀ, ವ್ಯಕ್ತಿಯ ನೆಮ್ಮದಿಗಾಗಲೀ, ಚಾರ್ವಾಕರ ಉಪದೇಶವು ವಿರೋಧವಾಗುತ್ತದೆ, ಆಭಾಸವನ್ನುಂಟುಮಾಡುತ್ತದೆ. {{gap}}Reality Principle ಎಂಬುದು ತಾತ್ಕಾಲಿಕವಾದುದು ಎಂದರ್ಥ ಮಾಡಬಾರದು. ಲೌಕಿಕದ ಬಾಳನ್ನು ಸಂಪೂರ್ಣವಾಗಿ ಗಮನಿಸಬೇಕು. ಈ ವಿಷಯವನ್ನು ಏಕೆ ಉಲ್ಲೇಖಿಸಿದೆ ಎಂದರೆ, ಹಿರಿಯ ಮನನಿಗರು ಹಲವರು, ಮನಸ್ಸಿನ ನೆಮ್ಮದಿಯನ್ನು ಪಡೆಯಲು, ನಿನ್ನೆಯದೆಲ್ಲವನ್ನೂ ಮರೆತು ಬಿಡಬೇಕು; ನಾಳೆಯದರ ಚಿಂತೆಯನ್ನೂ ಮಾಡಬಾರದು. ಇಂದಿನ ಯೋಚನೆಯು ಮಾತ್ರ ಇಂದಿಗಿರಬೇಕು ಎಂದು ಉಪದೇಶಿಸಿದ್ದಾರೆ. ಪರಂಪರಾನುಗತವಾಗಿ ಬೆಳೆದು ಬಂದಿರುವ ಅನುಭವಗಳಿಂದ ಪಾಠಗಳನ್ನು ಕಲಿತು ಪ್ರವೃದ್ಧಿಸಿರುವ, ಮಾನವನ ಮನಸ್ಸು ಹಿಂದಿನದೆಲ್ಲವನ್ನೂ ಮರೆತುಬಿಡಬೇಕು ; ದಿನ ಬೆಳಿಗ್ಗೆ ನಿದ್ರೆಯಿಂದ ಎದ್ದಾಗ, ಈಗ ತಾನೆ ಹುಟ್ಟಿದೆ ಎಂದುಕೊಳ್ಳಬೇಕು ಎಂದರೆ, ಇದು ಸಾಧ್ಯವೇ ? ಎಂದು ಸಂದೇಹವುಂಟಾಗುತ್ತದೆ. ಇಂತಹ ಹಿರಿಯ ಮನನಿಗರು ನುಡಿದ ಉಪದೇಶದಲ್ಲಿ ಅಂತರ್ಗಭಿ್ರತವಾದ ಮತ್ತೆ ಯಾವುದೋ ಗೂಡಾರ್ಥವಿರಬೇಕು! {{gap}}ವಯಸ್ಕರ ಮನಸ್ಸಿನಲ್ಲಿ Pleasure Principle, ಸುಖಾನ್ವೇಷಣೆಯ ಸೆಳೆತವು, Reality Principle, ವಾಸ್ತವಿಕ ಅರಿವಿನಿಂದ, ತಹಬಂದಿಯಲ್ಲಿರುತ್ತದೆ. Super- Ego ಅಥವಾ ಸತ್-ಚೈತನ್ಯಾಂಶವು ವಾಸ್ತವಿಕ ಅರಿವಿನಿಂದ, ಬಲಹೀನವಾಗುತ್ತದೆ. ನನ್ನ ಗೋಳು, ನನ್ನ ಬಾಳು, ನನಗೇ ಸಾಕಷ್ಟು ಸಂಕಟವನ್ನೀಯುತ್ತಿರುವುದರಿಂದ, ನೆರೆಹೊರೆಯವರ ಅಥವಾ ಸಮಾಜದ ಗೋಳುಕರೆಗೆ ಅಥವಾ ಉದ್ಧಾರಕ್ಕೆ ನಾನೇಕೆ ಒದ್ದಾಡಲಿ, ಎಂಬ ಮನೋಭಾವವು ಬೆಳೆಯುತ್ತದೆ. ಸಮಾಜವನ್ನು ಅಥವಾ ಲೋಕವನ್ನು ಉತ್ತಮಗೊಳಿಸುತ್ತೇನೆ ಎಂಬ ಧೈಯವು ಯೌವನದಲ್ಲಿ ಬರಸೆಳೆಯುತ್ತದೆ. ಆದರೆ ವಯಸ್ಕರಲ್ಲಿ ನನ್ನ ಪಾಡನ್ನು ಉತ್ತಮಪಡಿಸಿಕೊಂಡರೆ, ಅಥವಾ ಈಗಿರುವ ಮಟ್ಟದಲ್ಲಿಯಾದರೂ ಕಾಪಾಡಿಕೊಂಡರೆ ಸಾಕು ಎನ್ನುವಂತಾಗುತ್ತದೆ. ಲೋಕವನ್ನು ಅಥವಾ ಸಮಾಜವನ್ನು ಉದ್ಧರಿಸತೊಡಗುವ ತೆವಲು ಹಿಡಿದವರು ಏನನ್ನು ಬೇಕಾದರೂ ಮಾಡಿಕೊಳ್ಳಲಿ. ಅವರವರ ಹುಚ್ಚು ಅವರಿಗೆ ಆನಂದ ; ಎಂದು ತೆಪ್ಪಗಿರುತ್ತಾರೆ.<noinclude></noinclude> bq7tbwe0vnxxrqgzjy3n7wpcxjxemo4 ಪುಟ:ಮನಮಂಥನ.pdf/೩೫೬ 104 62803 317210 314608 2026-05-05T11:40:34Z Shreesha Sharma 7840 /* Proofread */ 317210 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೩೩೮}}{{Right|ಮನಮಂಥನ}} ವಾಸ್ತವಿಕ ಅರಿವಿನ ದೆಸೆಯಿಂದ, ತನ್ನ ಸಂಸಾರದ ಜವಾಬ್ದಾರಿಯಿಂದಾಗಿ, ವಯಸ್ಕರು, ತಮ್ಮ ದೇಹಾರೋಗ್ಯದ ಬಗೆಗೆ ಕಾತರರಾಗಿರುತ್ತಾರೆ. ನಡುವಯಸ್ಸಿನಲ್ಲಿ ಗೊಟಕ್ ಎಂದರೆ, ಹೆಂಡತಿ ಮಕ್ಕಳು ಬೀದಿಪಾಲಾಗುತ್ತಾರಲ್ಲ ಎಂಬ ಆತಂಕವು ಹಿರಿದಾಗಿ ಕಾಡುತ್ತದೆ. ಹೆಂಗಸರಲ್ಲನಕ, ನಮ್ಮ ಸಂಸ್ಕೃತಿಯಲ್ಲಿ, ನನ್ನ ಮಕ್ಕಳು ಬಲತಾಯಿಯ ಕಾಟವನ್ನು ಅನುಭವಿಸಬೇಕಾಗುತ್ತದಲ್ಲ ಎಂದು ಆತಂಕಪಡುತ್ತಾರೆ. ತಾಕಿದ ಬೇನೆಯು ಮನಸ್ಸಿನ ಈ ಆತಂಕದಿಂದ, ಉಲ್ಬಣಗೊಳ್ಳುತ್ತದೆ. ದೇಹವು ತುಸು ಅನಾರೋಗ್ಯವಾದರೆ ಆತಂಕವು ಪ್ರಾರಂಭವಾಗಿ, ಭಯದಲ್ಲಿ ಪರ್ಯವಸಾನವಾಗಬಹುದು. ಭಯವು ಮನಸ್ಸಿನ ಕಾರ್ಯಗಳನ್ನು ಪಲ್ಲಟಗೊಳಿಸುತ್ತದೆ. ಧೈರ್ಯವು ಕುಗ್ಗುತ್ತದೆ, ಯಾವುದಾದರೂ ಹೊಸ ಉದ್ಯಮವನ್ನು ಅಥವಾ ಕೆಲಸವನ್ನು ಮಾಡಬೇಕಾದರೆ ಧೈರ್ಯವು ಅಗತ್ಯ. ಮಸಲಾ ನಷ್ಟವಾದರೂ ಮುಂದೆ ಸರಿಪಡಿಸಿಕೊಳ್ಳಬಹುದು ಎನ್ನುವ ಕೆಚ್ಚು ಇದ್ದರೆ, ಹೊಸ ಕೆಲಸವನ್ನು ಮಾಡಲು ಯತ್ನಿಸಬಹುದು. ಒಳಗೆ ಸಂದೇಹದ ಪುಕ್ಕಲು ಇದ್ದರೂ, ಆಸೆಯಿಂದ ಉದ್ರೇಕಿತನಾಗಿ ವಯಸ್ಕನು ಹೊಸ ಜಾಡನ್ನು ಹಿಡಿದರೆ, ಯಶಸ್ವಿಯಾಗುವುದೂ ಕಷ್ಟ, ಅನುಮಾನವೇ ಕುತ್ತಾಗುತ್ತದೆ. ಈ ಕಾರಣದಿಂದಾಗಿ, ಯುವಕರು ಧೈರ್ಯದಿಂದ ಮುನ್ನುಗ್ಗುವ ಪ್ರವೃತ್ತಿಯು, ವಯಸ್ಕರಲ್ಲಿ ಬಲು ಪಾಲು ಕಾಣಬರುವುದಿಲ್ಲ. Generation gap ಎನ್ನುವುದಕ್ಕೆ ಈ ವಿಷಯವು ಪುಷ್ಟಿಯನ್ನು ಕೊಡುತ್ತದೆ. ವಯಸ್ಕರು ಎಂದಾಗ ಪಂಚಾಂಗದ ಪ್ರಕಾರ ಇಷ್ಟು ವಯಸ್ಸಾದವರು ಎಂದು ಸಾಮಾನ್ಯವಾಗಿ ಹೇಳುವುದಾದರೂ ಮಾನಸಿಕವಾಗಿ ಎಷ್ಟು ಬೆಳೆದಿದ್ದಾರೆ ಎನ್ನುವುದು ಮುಖ್ಯ. ಅರವತ್ತು ವಯಸ್ಸಿನ ಮುದಿಯ ಹದಿನೆಂಟರ ಹೋರಿಯಂತೆ ನಡೆದುಕೊಳ್ಳುವುದೂ ಉಂಟು. ಈ ನಗೆಪಾಟಲ ದೃಶ್ಯವನ್ನು ಸಮಾಜದಲ್ಲಿ ಕಾಣುತ್ತೇವೆ, ಅಲ್ಲವೇ? ಒಟ್ಟಿನಲ್ಲಿ ವಯಸ್ಕರ ಮನಸ್ಸು, ಸ್ವಾವಲಂಬಿಗಳಾದುದರಿಂದ, ಸ್ವಾರ್ಥವೂ ಆಗಿರುತ್ತದೆ. ಸಹಜವಾದ ಅನುಕಂಪವು ಸ್ವಾರ್ಥದಿಂದ ಬಹಳಷ್ಟು ಮರೆಯಾಗಿರುತ್ತದೆ. ಈ ರೀತಿ ವಯಸ್ಕರಲ್ಲಿ Id ಅಥವಾ ತಮೋಗುಣಪ್ರಧಾನವಾದ ಕಾವ್ಯಗಳು ಪ್ರಬಲವಾಗಿದ್ದರೂ, ಯುವಕರಲ್ಲಿದ್ದಂತೆ ಉನ್ಮಾದಾವಸ್ಥೆಗೆ ಹೋಗುವುದಿಲ್ಲ. Ego, ನಾನು ಎಂದುಕೊಳ್ಳುವ ಮನಸ್ಸಿನ ಕಲ್ಪನೆಯನ್ನು ಅತಿ ಹುಚ್ಚಾಗಿ ಚೆಲ್ಲಾಡಿಸುವುದಿಲ್ಲ.ಆಹಾರ, ನಿದ್ರಾ, ಭಯ, ಕಾಮ ಎಲ್ಲವೂ ವಯಸ್ಕರಲ್ಲಿ ರಸಿಕತೆಯ ಮೆರಗನ್ನು<noinclude></noinclude> dmrlwy6odtsjb2cmgwddw1edksg6xtq 317224 317210 2026-05-05T11:51:45Z Shreelatha.Halemane 7642 /* Validated */ 317224 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೩೩೮}}{{Right|ಮನಮಂಥನ}} {{gap}}ವಾಸ್ತವಿಕ ಅರಿವಿನ ದೆಸೆಯಿಂದ, ತನ್ನ ಸಂಸಾರದ ಜವಾಬ್ದಾರಿಯಿಂದಾಗಿ, ವಯಸ್ಕರು, ತಮ್ಮ ದೇಹಾರೋಗ್ಯದ ಬಗೆಗೆ ಕಾತರರಾಗಿರುತ್ತಾರೆ. ನಡುವಯಸ್ಸಿನಲ್ಲಿ ಗೊಟಕ್ ಎಂದರೆ, ಹೆಂಡತಿ ಮಕ್ಕಳು ಬೀದಿಪಾಲಾಗುತ್ತಾರಲ್ಲ ಎಂಬ ಆತಂಕವು ಹಿರಿದಾಗಿ ಕಾಡುತ್ತದೆ. ಹೆಂಗಸರಲ್ಲನಕ, ನಮ್ಮ ಸಂಸ್ಕೃತಿಯಲ್ಲಿ, ನನ್ನ ಮಕ್ಕಳು ಬಲತಾಯಿಯ ಕಾಟವನ್ನು ಅನುಭವಿಸಬೇಕಾಗುತ್ತದಲ್ಲ ಎಂದು ಆತಂಕಪಡುತ್ತಾರೆ. ತಾಕಿದ ಬೇನೆಯು ಮನಸ್ಸಿನ ಈ ಆತಂಕದಿಂದ, ಉಲ್ಬಣಗೊಳ್ಳುತ್ತದೆ. ದೇಹವು ತುಸು ಅನಾರೋಗ್ಯವಾದರೆ ಆತಂಕವು ಪ್ರಾರಂಭವಾಗಿ, ಭಯದಲ್ಲಿ ಪರ್ಯವಸಾನವಾಗಬಹುದು. ಭಯವು ಮನಸ್ಸಿನ ಕಾರ್ಯಗಳನ್ನು ಪಲ್ಲಟಗೊಳಿಸುತ್ತದೆ. ಧೈರ್ಯವು ಕುಗ್ಗುತ್ತದೆ, ಯಾವುದಾದರೂ ಹೊಸ ಉದ್ಯಮವನ್ನು ಅಥವಾ ಕೆಲಸವನ್ನು ಮಾಡಬೇಕಾದರೆ ಧೈರ್ಯವು ಅಗತ್ಯ. ಮಸಲಾ ನಷ್ಟವಾದರೂ ಮುಂದೆ ಸರಿಪಡಿಸಿಕೊಳ್ಳಬಹುದು ಎನ್ನುವ ಕೆಚ್ಚು ಇದ್ದರೆ, ಹೊಸ ಕೆಲಸವನ್ನು ಮಾಡಲು ಯತ್ನಿಸಬಹುದು. ಒಳಗೆ ಸಂದೇಹದ ಪುಕ್ಕಲು ಇದ್ದರೂ, ಆಸೆಯಿಂದ ಉದ್ರೇಕಿತನಾಗಿ ವಯಸ್ಕನು ಹೊಸ ಜಾಡನ್ನು ಹಿಡಿದರೆ, ಯಶಸ್ವಿಯಾಗುವುದೂ ಕಷ್ಟ, ಅನುಮಾನವೇ ಕುತ್ತಾಗುತ್ತದೆ. ಈ ಕಾರಣದಿಂದಾಗಿ, ಯುವಕರು ಧೈರ್ಯದಿಂದ ಮುನ್ನುಗ್ಗುವ ಪ್ರವೃತ್ತಿಯು, ವಯಸ್ಕರಲ್ಲಿ ಬಲು ಪಾಲು ಕಾಣಬರುವುದಿಲ್ಲ. Generation gap ಎನ್ನುವುದಕ್ಕೆ ಈ ವಿಷಯವು ಪುಷ್ಟಿಯನ್ನು ಕೊಡುತ್ತದೆ. {{gap}}ವಯಸ್ಕರು ಎಂದಾಗ ಪಂಚಾಂಗದ ಪ್ರಕಾರ ಇಷ್ಟು ವಯಸ್ಸಾದವರು ಎಂದು ಸಾಮಾನ್ಯವಾಗಿ ಹೇಳುವುದಾದರೂ ಮಾನಸಿಕವಾಗಿ ಎಷ್ಟು ಬೆಳೆದಿದ್ದಾರೆ ಎನ್ನುವುದು ಮುಖ್ಯ. ಅರವತ್ತು ವಯಸ್ಸಿನ ಮುದಿಯ ಹದಿನೆಂಟರ ಹೋರಿಯಂತೆ ನಡೆದುಕೊಳ್ಳುವುದೂ ಉಂಟು. ಈ ನಗೆಪಾಟಲ ದೃಶ್ಯವನ್ನು ಸಮಾಜದಲ್ಲಿ ಕಾಣುತ್ತೇವೆ, ಅಲ್ಲವೇ? {{gap}}ಒಟ್ಟಿನಲ್ಲಿ ವಯಸ್ಕರ ಮನಸ್ಸು, ಸ್ವಾವಲಂಬಿಗಳಾದುದರಿಂದ, ಸ್ವಾರ್ಥವೂ ಆಗಿರುತ್ತದೆ. ಸಹಜವಾದ ಅನುಕಂಪವು ಸ್ವಾರ್ಥದಿಂದ ಬಹಳಷ್ಟು ಮರೆಯಾಗಿರುತ್ತದೆ. {{gap}}ಈ ರೀತಿ ವಯಸ್ಕರಲ್ಲಿ Id ಅಥವಾ ತಮೋಗುಣಪ್ರಧಾನವಾದ ಕಾವ್ಯಗಳು ಪ್ರಬಲವಾಗಿದ್ದರೂ, ಯುವಕರಲ್ಲಿದ್ದಂತೆ ಉನ್ಮಾದಾವಸ್ಥೆಗೆ ಹೋಗುವುದಿಲ್ಲ. Ego, ನಾನು ಎಂದುಕೊಳ್ಳುವ ಮನಸ್ಸಿನ ಕಲ್ಪನೆಯನ್ನು ಅತಿ ಹುಚ್ಚಾಗಿ ಚೆಲ್ಲಾಡಿಸುವುದಿಲ್ಲ.ಆಹಾರ, ನಿದ್ರಾ, ಭಯ, ಕಾಮ ಎಲ್ಲವೂ ವಯಸ್ಕರಲ್ಲಿ ರಸಿಕತೆಯ ಮೆರಗನ್ನು<noinclude></noinclude> l1mt4kst7mjxfdwtssfvr22nznnvt1u ಪುಟ:ಮನಮಂಥನ.pdf/೩೫೭ 104 62804 317211 314609 2026-05-05T11:41:17Z Shreesha Sharma 7840 /* Proofread */ 317211 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೩೯}} ಮೂಡಿಸಿ, ಕಾಡುತ್ತವೆ. ಇಂತಹ ಊಟವೇ ಬೇಕು. ಈ ರೀತಿಯಲ್ಲಿ ಬಡಿಸಬೇಕು, ಎಂದು ವಯಸ್ಕನು ಹಾತೊರೆಯುತ್ತಾನೆ. ಸ್ವಾವಲಂಬಿಯಾಗಿರುತ್ತಾನೆ, ಸಂಪಾದಿಸುತ್ತಾನೆ. ಅಂದ ಮೇಲೆ ಸ್ವಾರ್ಥವೂ ಅಧಿಕವಾಗಿರುತ್ತದೆ. ಇದೇ ಆಗಬೇಕು ಎನ್ನುವ ಹಟ ಹೆಚ್ಚಾಗುತ್ತದೆ. ನಿದ್ರೆ ಮಾಡುವಾಗಲೂ ಹಾಗೆಯೆ, ಹಾಸಿಗೆಯು ಹೀಗಿರಬೇಕು, ದಿಂಬು ಇಷ್ಟು ಎತ್ತರವಿರಬೇಕು ಎಂದು ಆಶಿಸುತ್ತಾನೆ. ಕ್ಯಾಂಪಿನಲ್ಲಿ ಯುವಕರು ಜಮಖಾನದ ಮೇಲೆ ಮಲಗಿ ಸುಖವಾಗಿ ನಿದ್ರಿಸುವಂತೆ ವಯಸ್ಕರು ಮಾಡಲಾರರು. ಭಯದ ವಿಷಯವನ್ನು ಆಗಲೇ ಪ್ರಸ್ತಾಪಿಸಲಾಗಿದೆ. ಕಾಮದ ವಿಷಯದಲ್ಲಿಯೂ ವಯಸ್ಕರ ರಸಿಕತೆಯೇ ಬೇರೆ. ಯುವಕರ ಅವಸರವೇ ಬೇರೆ. Ego ಅಥವಾ ನಾನು ಎಂದುಕೊಳ್ಳುವ ಮನಸ್ಸಿನ ಅಂಶವು ಪ್ರಬಲವಾಗಿರುತ್ತದೆ. ಅನುಕಂಪದಿಂದ ಹರಡಿದ ಧೈಯವಾದಿ ಆದರ್ಶಗಳು, ಯುವಕರನ್ನು ಪ್ರೇರಿಸುವಂತೆ, ವಯಸ್ಕರನ್ನು ಸೆಳೆದು ನಡೆಸುವುದಿಲ್ಲ 'ನಾನು' ಎಂದುಕೊಳ್ಳುವ ಮಮಕಾರದ ಕೋಟೆಯು ವಯಸ್ಕರಲ್ಲಿ ಸದೃಢವಾಗುತ್ತದೆ. ಆದಕಾರಣ ಸ್ವಾರ್ಥವು ವಯಸ್ಕರಲ್ಲಿ ಅತಿಯಾಗಿರುತ್ತದೆ. ಲೋಕಾನುಭವವು ಹೆಚ್ಚಾಗಿರುವುದರಿಂದ, ಸ್ವಾರ್ಥಕ್ಕಾಗಿ ಮಾಡುವ ಕೆಲಸ ಕಾರ್ಯಗಳಿಗೆ, ಪರಾರ್ಥಕ್ಕಾಗಿ ಮಾಡುತ್ತಿದ್ದಾರೆ, ಎನ್ನುವ ನಂಬಿಕೆಯನ್ನು ಇತರರಲ್ಲಿ ಮೂಡಿಸುತ್ತಾರೆ. ಮಮಕಾರದ ಕೋಟೆಯು ಭದ್ರವಾಗತೊಡಗುವುದರಿಂದ, ಹೊನ್ನು, ಹೆಣ್ಣು, ಮಣ್ಣು ; ಇವುಗಳಿಗಿಂತ ಸಮಾಜದಲ್ಲಿ ಮನ್ನಣೆಯನ್ನು ಪಡೆಯಬೇಕು ; ಗಣ್ಯ ಎಂದೆನಿಸಿಕೊಳ್ಳಬೇಕು. ಎನ್ನುವ ಹಂಬಲವು ಅತಿಯಾಗಿರುತ್ತದೆ, ಸಾರ್ವಜನಿಕ ಸಭೆಯಲ್ಲಿ ಅಗ್ರಪಂಸ್ತೆಯಲ್ಲಿ ತನ್ನನ್ನು ಕೂರಿಸಲಿಲ್ಲ ಎನ್ನುವ ಕೊರಗು ವಯಸ್ಕರನ್ನು ಕಾಡುವಂತೆ ಯುವಕರನ್ನು ಕಾಡುವುದಿಲ್ಲ. ಆದುದರಿಂದ ಡಿ.ವಿ.ಜಿ. ಯವರು 'ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಯ ; ಚಿನ್ನದಾತುರಕಿಂತ ಹೆಣ್ಣು ಗಂಡೊಲವು; ಮನ್ನಣೆಯದಾಹವೀಯೆಲ್ಲಕಂ ತೀಕ್ಷ್ಯತಮ ; ತಿನ್ನುವುದದಾತ್ಮವನೆ ಮಂಕು ತಿಮ್ಮ' ಎಂದು ನುಡಿದರು. ಮನ್ನಣೆಯ ದಾಹವು ತೀಕ್ಷ್ಯತಮವಾಗಿ, ಆತ್ಮವನು ಎಂದರೆ ಸತ್-ಚೈತನ್ಯಾಂಶವಾದ Super-Egoವನ್ನು ಮರೆಮಾಚಿ ಬಿಡುವುದು. ಇದು ವಯಸ್ಕರಲ್ಲಿ ಕಾಣಬರುವ ಪ್ರವೃತ್ತಿ. ಎಲ್ಲ ನಾಲ್ಕು ಆತುರಗಳು ಎಲ್ಲರಲ್ಲಿಯೂ ಕಂಡುಬಂದರೂ, ಬಾಲ್ಯದಲ್ಲಿ ಅನ್ನದಾತುರವು ಹೆಚ್ಚು. ಯೌವನದಲ್ಲಿ ಹೆಣ್ಣು- ಗಂಡೊಲವು ವಯಸ್ಕರಲ್ಲಿ, ಚಿನ್ನ ಅದಕ್ಕೂ ಮಿಗಿಲಾಗಿ ಮನ್ನಣೆಯ ಆತುರವು ಹೆಚ್ಚು.<noinclude></noinclude> fvjop6d76md3sxpkboatpudqg93bo2h 317225 317211 2026-05-05T11:52:47Z Shreelatha.Halemane 7642 /* Validated */ 317225 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೩೯}} ಮೂಡಿಸಿ, ಕಾಡುತ್ತವೆ. ಇಂತಹ ಊಟವೇ ಬೇಕು. ಈ ರೀತಿಯಲ್ಲಿ ಬಡಿಸಬೇಕು, ಎಂದು ವಯಸ್ಕನು ಹಾತೊರೆಯುತ್ತಾನೆ. ಸ್ವಾವಲಂಬಿಯಾಗಿರುತ್ತಾನೆ, ಸಂಪಾದಿಸುತ್ತಾನೆ. ಅಂದ ಮೇಲೆ ಸ್ವಾರ್ಥವೂ ಅಧಿಕವಾಗಿರುತ್ತದೆ. ಇದೇ ಆಗಬೇಕು ಎನ್ನುವ ಹಟ ಹೆಚ್ಚಾಗುತ್ತದೆ. ನಿದ್ರೆ ಮಾಡುವಾಗಲೂ ಹಾಗೆಯೆ, ಹಾಸಿಗೆಯು ಹೀಗಿರಬೇಕು, ದಿಂಬು ಇಷ್ಟು ಎತ್ತರವಿರಬೇಕು ಎಂದು ಆಶಿಸುತ್ತಾನೆ. ಕ್ಯಾಂಪಿನಲ್ಲಿ ಯುವಕರು ಜಮಖಾನದ ಮೇಲೆ ಮಲಗಿ ಸುಖವಾಗಿ ನಿದ್ರಿಸುವಂತೆ ವಯಸ್ಕರು ಮಾಡಲಾರರು. ಭಯದ ವಿಷಯವನ್ನು ಆಗಲೇ ಪ್ರಸ್ತಾಪಿಸಲಾಗಿದೆ. ಕಾಮದ ವಿಷಯದಲ್ಲಿಯೂ ವಯಸ್ಕರ ರಸಿಕತೆಯೇ ಬೇರೆ. ಯುವಕರ ಅವಸರವೇ ಬೇರೆ. {{gap}}Ego ಅಥವಾ ನಾನು ಎಂದುಕೊಳ್ಳುವ ಮನಸ್ಸಿನ ಅಂಶವು ಪ್ರಬಲವಾಗಿರುತ್ತದೆ. ಅನುಕಂಪದಿಂದ ಹರಡಿದ ಧೈಯವಾದಿ ಆದರ್ಶಗಳು, ಯುವಕರನ್ನು ಪ್ರೇರಿಸುವಂತೆ, ವಯಸ್ಕರನ್ನು ಸೆಳೆದು ನಡೆಸುವುದಿಲ್ಲ 'ನಾನು' ಎಂದುಕೊಳ್ಳುವ ಮಮಕಾರದ ಕೋಟೆಯು ವಯಸ್ಕರಲ್ಲಿ ಸದೃಢವಾಗುತ್ತದೆ. ಆದಕಾರಣ ಸ್ವಾರ್ಥವು ವಯಸ್ಕರಲ್ಲಿ ಅತಿಯಾಗಿರುತ್ತದೆ. ಲೋಕಾನುಭವವು ಹೆಚ್ಚಾಗಿರುವುದರಿಂದ, ಸ್ವಾರ್ಥಕ್ಕಾಗಿ ಮಾಡುವ ಕೆಲಸ ಕಾರ್ಯಗಳಿಗೆ, ಪರಾರ್ಥಕ್ಕಾಗಿ ಮಾಡುತ್ತಿದ್ದಾರೆ, ಎನ್ನುವ ನಂಬಿಕೆಯನ್ನು ಇತರರಲ್ಲಿ ಮೂಡಿಸುತ್ತಾರೆ. ಮಮಕಾರದ ಕೋಟೆಯು ಭದ್ರವಾಗತೊಡಗುವುದರಿಂದ, ಹೊನ್ನು, ಹೆಣ್ಣು, ಮಣ್ಣು ; ಇವುಗಳಿಗಿಂತ ಸಮಾಜದಲ್ಲಿ ಮನ್ನಣೆಯನ್ನು ಪಡೆಯಬೇಕು ; ಗಣ್ಯ ಎಂದೆನಿಸಿಕೊಳ್ಳಬೇಕು. ಎನ್ನುವ ಹಂಬಲವು ಅತಿಯಾಗಿರುತ್ತದೆ, ಸಾರ್ವಜನಿಕ ಸಭೆಯಲ್ಲಿ ಅಗ್ರಪಂಸ್ತೆಯಲ್ಲಿ ತನ್ನನ್ನು ಕೂರಿಸಲಿಲ್ಲ ಎನ್ನುವ ಕೊರಗು ವಯಸ್ಕರನ್ನು ಕಾಡುವಂತೆ ಯುವಕರನ್ನು ಕಾಡುವುದಿಲ್ಲ. ಆದುದರಿಂದ ಡಿ.ವಿ.ಜಿ. ಯವರು 'ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಯ ; ಚಿನ್ನದಾತುರಕಿಂತ ಹೆಣ್ಣು ಗಂಡೊಲವು; ಮನ್ನಣೆಯದಾಹವೀಯೆಲ್ಲಕಂ ತೀಕ್ಷ್ಯತಮ ; ತಿನ್ನುವುದದಾತ್ಮವನೆ ಮಂಕು ತಿಮ್ಮ' ಎಂದು ನುಡಿದರು. ಮನ್ನಣೆಯ ದಾಹವು ತೀಕ್ಷ್ಯತಮವಾಗಿ, ಆತ್ಮವನು ಎಂದರೆ ಸತ್-ಚೈತನ್ಯಾಂಶವಾದ Super-Egoವನ್ನು ಮರೆಮಾಚಿ ಬಿಡುವುದು. ಇದು ವಯಸ್ಕರಲ್ಲಿ ಕಾಣಬರುವ ಪ್ರವೃತ್ತಿ. ಎಲ್ಲ ನಾಲ್ಕು ಆತುರಗಳು ಎಲ್ಲರಲ್ಲಿಯೂ ಕಂಡುಬಂದರೂ, ಬಾಲ್ಯದಲ್ಲಿ ಅನ್ನದಾತುರವು ಹೆಚ್ಚು. ಯೌವನದಲ್ಲಿ ಹೆಣ್ಣು- ಗಂಡೊಲವು ವಯಸ್ಕರಲ್ಲಿ, ಚಿನ್ನ ಅದಕ್ಕೂ ಮಿಗಿಲಾಗಿ ಮನ್ನಣೆಯ ಆತುರವು ಹೆಚ್ಚು.<noinclude></noinclude> de95z1lhdx1535as7sids7fvcg1kky5 ಪುಟ:ಮನಮಂಥನ.pdf/೩೫೮ 104 62805 317212 314610 2026-05-05T11:41:59Z Shreesha Sharma 7840 /* Proofread */ 317212 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೩೪೦}}{{Right|ಮನಮಂಥನ}} Super-Ego ಅಥವಾ ಸತ್-ಚೈತನ್ಯಾಂಶವು ವಯಸ್ಕರಲ್ಲಿ ಅತಿ ಮಂದವಾಗಿರುತ್ತದೆ. ಆದರೂ ಇದ್ದೇ ಇರುತ್ತದೆ. 'ನಾನು' ಎಂದುಕೊಳ್ಳುವ Egoವನ್ನು ಚುಚ್ಚುತ್ತಲೇ ಇರುತ್ತದೆ. ಸ್ವಾರ್ಥಕ್ಕಾಗಿ, ಸ್ಪರ್ಧಾ ಸಮಾಜದಲ್ಲಿ ಅಗತ್ಯವಾಗಿ ನಡೆಸಬೇಕಾದ, ಮೋಸ, ತಟವಟ, ಸುಳ್ಳು, ಚಾಡಿ ; ಇತ್ಯಾದಿಗಳನ್ನು ಮಾಡಿರುತ್ತಾನೆ. ಆ ರೀತಿ Ego ವನ್ನು ಹಿತವಾಗಿಸುತ್ತಾನೆ. ಆದರೆ ಹಾಗೆ ಮಾಡಿದ್ದು ವಿಹಿತವಲ್ಲ ಎನ್ನುವ ಅಪರಾಧ ಮನೋಭಾವವು ಕುಕ್ಕುತ್ತಲೇ ಇರುತ್ತದೆ. ಒಳಗೇ ಕುಕ್ಕುತ್ತಿರುವ ಈ ಕಾಟವನ್ನು ತಪ್ಪಿಸಿಕೊಳ್ಳಲು ವಯಸ್ಕರು, ದೇವರು ದಿಂಡರು ; ಭಕ್ತಿಭಜನೆ; ತೀರ್ಥಯಾತ್ರೆ ; ದಾನ ಧರ್ಮ ; ಇತ್ಯಾದಿಗಳಲ್ಲಿ ನಿರತರಾಗುತ್ತಾರೆ. ಸ್ವಲ್ಪ ಸಮಾಧಾನವನ್ನು ಪಡೆಯುತ್ತಾರೆ. ಉಲ್ಬಣವಾದ ಬೇನೆಯು ಮನೆಯಲ್ಲಿ ಕಾಣಿಸಿಕೊಂಡ ಕೂಡಲೇ ಮನೆದೇವರಿಗೆ ಮುಡುಪು ಕಟ್ಟಿಡುತ್ತಾರೆ. ಈ ಕಿರುಲಂಚದಿಂದ ಮನೆದೇವರು ತೃಪ್ತನಾಗಿ ಬೇನೆಯನ್ನು ವಾಸಿಮಾಡುತ್ತಾನೆ ಎಂದೇನಲ್ಲ. ಹಾಗೆ ಮುಡುಪನ್ನು ಕಟ್ಟಿಟ್ಟರೆ, ವಯಸ್ಕರ ಮತ್ತು ಮನೆಯ ಮುದುಕರ ಮನಸ್ಸಿನ ಆತಂಕವು ಸ್ವಲ್ಪ ಶಮನವಾಗುತ್ತದೆ. ಈ ಕಾರಣದಿಂದ, ಮುಡುಪು ಕಟ್ಟಿಡುವುದನ್ನು ಕಂಡು ಅನುಭಾವೀ ವೈದ್ಯರುಗಳು ಮೂದಲಿಸುವುದಿಲ್ಲ. ಮನೆಯವರ ಮನಸ್ಸಿಗೆ ನೆಮ್ಮದಿಯು ದೊರೆಯುವಂತಾಗುವುದು ಮುಖ್ಯ. ಮನೆ ದೇವರಿಗೆ ಮುಡುಪು ಕಟ್ಟಿಡುವುದರಿಂದ ನೆಮ್ಮದಿಯು ಉಂಟಾಗುವುದಾದರೆ, ನಿರುಪದ್ರವಿಯಾದ ಆ ಕಾರ್ಯವನ್ನು ಏಕೆ ಮಾಡಬಾರದು ? ಮನಸ್ಸಿಗೆ ಆತಂಕವು ಹೆಚ್ಚಿದಾಗ, ತುಸು ನೆಮ್ಮದಿಯನ್ನು ಕೆಲವರಿಗೆ ನೀಡುವ ಇಂತಹ ಆಚರಣೆಯನ್ನು ಮೂಢನಂಬಿಕೆ ಎಂದು ಇತರರು ಹೀಯಾಳಿಸಬಹುದು. ಹೀಗೆ ಹೀಯಾಳಿಸುವವರು ಮೂಢರೋ ಏನೋ ಎಂಬ ಸಂಶಯವು ಬಂದರೆ ಆಶ್ಚರ್ಯವಲ್ಲ. ಇಂತಹ ಆಚರಣೆಗಳನ್ನು ಬಾಲ್ಯದಲ್ಲಿ ಕಂಡಿರುತ್ತೇವೆ. ಯೌವನದ ಉತ್ಸಾಹದಲ್ಲಿ ಪ್ರಾಮುಖ್ಯತೆಯನ್ನು ಕೊಡುವುದಿಲ್ಲ. ವಯಸ್ಕರಾದಾಗ ಬಾಳಿನ ಝಂಝಾಟದಲ್ಲಿ ಮೈಮನಗಳನ್ನು ತರಚಿಕೊಂಡಾಗ, ಬಾಲ್ಯದಲ್ಲಿ ಕಂಡಿದ್ದ, ಆಚರಣೆಗಳನ್ನು ನಡೆಸುತ್ತೇವೆ. ಆತಂಕವು ಮೂಡಿದಾಗ ಮನಸ್ಸಿನ ವಿಚಾರಪರ ಅಂಶವು ತೆಪ್ಪಗಾಗುತ್ತದೆ. Super-Ego ಅಥವಾ ಸತ್-ಚೈತನ್ಯಾಂಶ ಪ್ರಭಾವದಿಂದ, ಭಕ್ತಿ ಮತ್ತು ಮೂಢನಂಬಿಕೆಗಳು ಉಂಟಾಗಬಹುದು ಎನಿಸುತ್ತದೆ. ಏಕೆಂದರೆ ಆಗ ವಿಚಾರಪರ ಮನಸ್ಸಿನ ಅಂಶವು, 'ನಾನು' ಸೋತೆ. ಕಲಿತಿರುವ ಜ್ಞಾನದಿಂದ, ಮುಂದೆ ಏನನ್ನೂ ಮಾಡಲಾರೆ. ಮುಂದೆ ಆಗಬಹುದಾದುದನ್ನು ಅನುಭವಿಸಲೇ ಬೇಕು. ಆದರೆ<noinclude></noinclude> 89e993kyqtded98liay45konfahd1nt 317226 317212 2026-05-05T11:53:20Z Shreelatha.Halemane 7642 /* Validated */ 317226 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೩೪೦}}{{Right|ಮನಮಂಥನ}} {{gap}}Super-Ego ಅಥವಾ ಸತ್-ಚೈತನ್ಯಾಂಶವು ವಯಸ್ಕರಲ್ಲಿ ಅತಿ ಮಂದವಾಗಿರುತ್ತದೆ. ಆದರೂ ಇದ್ದೇ ಇರುತ್ತದೆ. 'ನಾನು' ಎಂದುಕೊಳ್ಳುವ Egoವನ್ನು ಚುಚ್ಚುತ್ತಲೇ ಇರುತ್ತದೆ. ಸ್ವಾರ್ಥಕ್ಕಾಗಿ, ಸ್ಪರ್ಧಾ ಸಮಾಜದಲ್ಲಿ ಅಗತ್ಯವಾಗಿ ನಡೆಸಬೇಕಾದ, ಮೋಸ, ತಟವಟ, ಸುಳ್ಳು, ಚಾಡಿ ; ಇತ್ಯಾದಿಗಳನ್ನು ಮಾಡಿರುತ್ತಾನೆ. ಆ ರೀತಿ Ego ವನ್ನು ಹಿತವಾಗಿಸುತ್ತಾನೆ. ಆದರೆ ಹಾಗೆ ಮಾಡಿದ್ದು ವಿಹಿತವಲ್ಲ ಎನ್ನುವ ಅಪರಾಧ ಮನೋಭಾವವು ಕುಕ್ಕುತ್ತಲೇ ಇರುತ್ತದೆ. ಒಳಗೇ ಕುಕ್ಕುತ್ತಿರುವ ಈ ಕಾಟವನ್ನು ತಪ್ಪಿಸಿಕೊಳ್ಳಲು ವಯಸ್ಕರು, ದೇವರು ದಿಂಡರು ; ಭಕ್ತಿಭಜನೆ; ತೀರ್ಥಯಾತ್ರೆ ; ದಾನ ಧರ್ಮ ; ಇತ್ಯಾದಿಗಳಲ್ಲಿ ನಿರತರಾಗುತ್ತಾರೆ. ಸ್ವಲ್ಪ ಸಮಾಧಾನವನ್ನು ಪಡೆಯುತ್ತಾರೆ. ಉಲ್ಬಣವಾದ ಬೇನೆಯು ಮನೆಯಲ್ಲಿ ಕಾಣಿಸಿಕೊಂಡ ಕೂಡಲೇ ಮನೆದೇವರಿಗೆ ಮುಡುಪು ಕಟ್ಟಿಡುತ್ತಾರೆ. ಈ ಕಿರುಲಂಚದಿಂದ ಮನೆದೇವರು ತೃಪ್ತನಾಗಿ ಬೇನೆಯನ್ನು ವಾಸಿಮಾಡುತ್ತಾನೆ ಎಂದೇನಲ್ಲ. ಹಾಗೆ ಮುಡುಪನ್ನು ಕಟ್ಟಿಟ್ಟರೆ, ವಯಸ್ಕರ ಮತ್ತು ಮನೆಯ ಮುದುಕರ ಮನಸ್ಸಿನ ಆತಂಕವು ಸ್ವಲ್ಪ ಶಮನವಾಗುತ್ತದೆ. ಈ ಕಾರಣದಿಂದ, ಮುಡುಪು ಕಟ್ಟಿಡುವುದನ್ನು ಕಂಡು ಅನುಭಾವೀ ವೈದ್ಯರುಗಳು ಮೂದಲಿಸುವುದಿಲ್ಲ. ಮನೆಯವರ ಮನಸ್ಸಿಗೆ ನೆಮ್ಮದಿಯು ದೊರೆಯುವಂತಾಗುವುದು ಮುಖ್ಯ. ಮನೆ ದೇವರಿಗೆ ಮುಡುಪು ಕಟ್ಟಿಡುವುದರಿಂದ ನೆಮ್ಮದಿಯು ಉಂಟಾಗುವುದಾದರೆ, ನಿರುಪದ್ರವಿಯಾದ ಆ ಕಾರ್ಯವನ್ನು ಏಕೆ ಮಾಡಬಾರದು ? {{gap}}ಮನಸ್ಸಿಗೆ ಆತಂಕವು ಹೆಚ್ಚಿದಾಗ, ತುಸು ನೆಮ್ಮದಿಯನ್ನು ಕೆಲವರಿಗೆ ನೀಡುವ ಇಂತಹ ಆಚರಣೆಯನ್ನು ಮೂಢನಂಬಿಕೆ ಎಂದು ಇತರರು ಹೀಯಾಳಿಸಬಹುದು. ಹೀಗೆ ಹೀಯಾಳಿಸುವವರು ಮೂಢರೋ ಏನೋ ಎಂಬ ಸಂಶಯವು ಬಂದರೆ ಆಶ್ಚರ್ಯವಲ್ಲ. ಇಂತಹ ಆಚರಣೆಗಳನ್ನು ಬಾಲ್ಯದಲ್ಲಿ ಕಂಡಿರುತ್ತೇವೆ. ಯೌವನದ ಉತ್ಸಾಹದಲ್ಲಿ ಪ್ರಾಮುಖ್ಯತೆಯನ್ನು ಕೊಡುವುದಿಲ್ಲ. ವಯಸ್ಕರಾದಾಗ ಬಾಳಿನ ಝಂಝಾಟದಲ್ಲಿ ಮೈಮನಗಳನ್ನು ತರಚಿಕೊಂಡಾಗ, ಬಾಲ್ಯದಲ್ಲಿ ಕಂಡಿದ್ದ, ಆಚರಣೆಗಳನ್ನು ನಡೆಸುತ್ತೇವೆ. ಆತಂಕವು ಮೂಡಿದಾಗ ಮನಸ್ಸಿನ ವಿಚಾರಪರ ಅಂಶವು ತೆಪ್ಪಗಾಗುತ್ತದೆ. {{gap}}Super-Ego ಅಥವಾ ಸತ್-ಚೈತನ್ಯಾಂಶ ಪ್ರಭಾವದಿಂದ, ಭಕ್ತಿ ಮತ್ತು ಮೂಢನಂಬಿಕೆಗಳು ಉಂಟಾಗಬಹುದು ಎನಿಸುತ್ತದೆ. ಏಕೆಂದರೆ ಆಗ ವಿಚಾರಪರ ಮನಸ್ಸಿನ ಅಂಶವು, 'ನಾನು' ಸೋತೆ. ಕಲಿತಿರುವ ಜ್ಞಾನದಿಂದ, ಮುಂದೆ ಏನನ್ನೂ ಮಾಡಲಾರೆ. ಮುಂದೆ ಆಗಬಹುದಾದುದನ್ನು ಅನುಭವಿಸಲೇ ಬೇಕು. ಆದರೆ<noinclude></noinclude> e4vivygr0yqye4tqm7jy89rh32owsdx ಪುಟ:ಮನಮಂಥನ.pdf/೩೬೦ 104 62807 317213 314612 2026-05-05T11:43:03Z Shreesha Sharma 7840 /* Proofread */ 317213 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೩೪೨}}{{Right|ಮನಮಂಥನ}} ನಾಲ್ಕು-ನಾನು ಮತ್ತು ನನ್ನ ವಿಹಿತವನ್ನು ನಾನೇ ಸಾಧಿಸಿಕೊಳ್ಳಬೇಕು. ಯಾವ ಹೊರಗಿನದೂ, ನನ್ನ ನೆರವಿಗೆ ಬರುವುದಿಲ್ಲ. ಆದಕಾರಣ ನನ್ನನ್ನು ನಾನು ನಿಸ್ಸಂಶಯವಾಗಿ ನಂಬಬೇಕು. ಹೀಗೆ ನಂಬಬೇಕಾದರೆ 'ನಾನು' ಎನ್ನುವುದು ಯಾವುದು? ಅದರ ಸ್ವರೂಪವೇನು ? ಲಕ್ಷಣಗಳೇನು ? ಎಂಬುದನ್ನು ವಿಚಾರಪರ ಮನಸ್ಸಿನಿಂದ ಅರಿತುಕೊಳ್ಳಬೇಕು, ಹೀಗೆ ವಿಚಾರಪರ ಮನಸ್ಸನ್ನು ಅತ್ಯದ್ಭುತವಾಗಿ ಬಳಸಿ, 'ಅದೇ ನಾನು' ಎಂದು ನಿರ್ಧರಿಸುವ ಅಲ್ಪಸಂಖ್ಯಾತರು ಕೆಲವರು. ಅದು ಮತ್ತು ನಾನು ಎಂಬ ಭೇದವನ್ನು ಅಳಿಸುವವರು. ಐದು-ನಾನು ನನ್ನ ಹಿತಕ್ಕಾಗಿ ಯತ್ನಿಸುತ್ತೇನೆ. ಅದೂ ನನ್ನ ಹಿತವನ್ನು ಕರುಣಿಸುತ್ತದೆ. ನನಗೂ 'ಅದ'ಕ್ಕೂ ನಿಕಟವಾದ ಗಂಟು ಮತ್ತು ನೆಂಟು ಇದೆ. ಆದರೆ ನಾನು 'ಅದು' ಆಗಲಸಾಧ್ಯ. ಆದಕಾರಣ 'ಅದು' ವನ್ನು ಎಂದೆಂದಿಗೂ ನಂಬಿ ಈ ಜನ್ಮದ ಬಾಳನ್ನು ಆದಷ್ಟು ಹಿತವಾಗಿ ನಡೆಸಿಕೊಳ್ಳಬೇಕು ; ಎಂದು ತೀರ್ಮಾನಿಸುವವರು ಕೆಲವರು. ವಯಸ್ಕರ ಮನಸ್ಸಿನ ಕಾರ್ಯಕ್ರಮದಲ್ಲಿ ಏನೆಲ್ಲಾ ವೈವಿಧ್ಯ ! '''ಮುಪ್ಪಿನಲ್ಲಿ ಮನಸ್ಸಿನ ಕಾರ್ಯಕ್ರಮ''' ಮುಪ್ಪಿನಲ್ಲಿ ದೇಹದಾರ್ಡ್ಯವು ಇಳಿಮುಖವಾಗಿರುತ್ತದೆ. ತಿನ್ನಬೇಕು ಎನ್ನುವ ಚಪಲವು ಉಳಿದಿದ್ದರೂ, ತಿಂದ ಮೇಲೆ ಜೀರ್ಣವಾಗದೆ ನರಳಬೇಕಾಗುತ್ತದಲ್ಲ ಎನ್ನುವ ಭಯವು ತಡೆಯುತ್ತದೆ. ಇದರಂತೆಯೇ ಇತರ ಕಾವ್ಯಗಳು, ದೇಹವು ಶಕ್ತಿಯನ್ನು ಕಳೆದುಕೊಳ್ಳುವಂತೆ, ಮನಸೂ ಚುರುಕನ್ನು ಸಾಮಾನ್ಯವಾಗಿ ಕಳೆದುಕೊಳ್ಳುತ್ತದೆ. ತುಂಬಾ ವಿರಳವಾಗಿ ಕೆಲವರ ಮನಸ್ಸು ಮುಪ್ಪಿನಲ್ಲಿ ಕೂಡ ಚುರುಕಾಗಿರುವುದುಂಟು. Id ಇನ ಕಾವ್ಯಗಳ ಸೆಳೆತವು, ದೇಹದ ನಿರ್ಬಲತೆಯಿಂದಾಗಿ, ಕಡಿಮೆಯಾಗುತ್ತ ಹೋಗುತ್ತದೆ. ಆದರೆ ಯೌವನ ಮತ್ತು ವಯಸ್ಕನಾಗಿದ್ದಾಗ ಅನುಭವಿಸಿದ ಕಾವ್ಯ ಕಾರ್ಯಗಳ ನೆನಪು ಹಸಿರಾಗಿ ಉಳಿದಿರುತ್ತದೆ. ಅವುಗಳ ಸ್ಮರಣೆಯು ಮುಪ್ಪಿನಲ್ಲಿ ತುಂಬಾ ಸುಖವನ್ನು ನೀಡುತ್ತದೆ. ತುರುಬು ನೆನಸಿಕೊಳ್ಳುವುದಕ್ಕಿಂತ ಇತರ ಯಾವುದು ತಾನೇ ಹೆಚ್ಚು ಹಿತವಾಗಿರುತ್ತದೆ ! ಮುಪ್ಪಿನಲ್ಲಿ. ಕೆಲವು ಮುಪ್ಪಿಗರಲ್ಲಿ Id ಇನ ಕಾವ್ಯ ಪ್ರೇರಕಗಳು ಸ್ಮರಣೆಯಿಂದ ತೃಪ್ತಿಗೊಳ್ಳುವುದಿಲ್ಲ. ಆದರೆ ನಿರ್ಬಲವಾದ ದೇಹವು ಆಶಿಸಿದಂತೆ ಆಡಲು<noinclude></noinclude> p90f7decl2hrtuadufkau99hx15ppkq 317227 317213 2026-05-05T11:54:04Z Shreelatha.Halemane 7642 /* Validated */ 317227 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೩೪೨}}{{Right|ಮನಮಂಥನ}} {{gap}}ನಾಲ್ಕು-ನಾನು ಮತ್ತು ನನ್ನ ವಿಹಿತವನ್ನು ನಾನೇ ಸಾಧಿಸಿಕೊಳ್ಳಬೇಕು. ಯಾವ ಹೊರಗಿನದೂ, ನನ್ನ ನೆರವಿಗೆ ಬರುವುದಿಲ್ಲ. ಆದಕಾರಣ ನನ್ನನ್ನು ನಾನು ನಿಸ್ಸಂಶಯವಾಗಿ ನಂಬಬೇಕು. ಹೀಗೆ ನಂಬಬೇಕಾದರೆ 'ನಾನು' ಎನ್ನುವುದು ಯಾವುದು? ಅದರ ಸ್ವರೂಪವೇನು ? ಲಕ್ಷಣಗಳೇನು ? ಎಂಬುದನ್ನು ವಿಚಾರಪರ ಮನಸ್ಸಿನಿಂದ ಅರಿತುಕೊಳ್ಳಬೇಕು, ಹೀಗೆ ವಿಚಾರಪರ ಮನಸ್ಸನ್ನು ಅತ್ಯದ್ಭುತವಾಗಿ ಬಳಸಿ, 'ಅದೇ ನಾನು' ಎಂದು ನಿರ್ಧರಿಸುವ ಅಲ್ಪಸಂಖ್ಯಾತರು ಕೆಲವರು. ಅದು ಮತ್ತು ನಾನು ಎಂಬ ಭೇದವನ್ನು ಅಳಿಸುವವರು. {{gap}}ಐದು-ನಾನು ನನ್ನ ಹಿತಕ್ಕಾಗಿ ಯತ್ನಿಸುತ್ತೇನೆ. ಅದೂ ನನ್ನ ಹಿತವನ್ನು ಕರುಣಿಸುತ್ತದೆ. ನನಗೂ 'ಅದ'ಕ್ಕೂ ನಿಕಟವಾದ ಗಂಟು ಮತ್ತು ನೆಂಟು ಇದೆ. ಆದರೆ ನಾನು 'ಅದು' ಆಗಲಸಾಧ್ಯ. ಆದಕಾರಣ 'ಅದು' ವನ್ನು ಎಂದೆಂದಿಗೂ ನಂಬಿ ಈ ಜನ್ಮದ ಬಾಳನ್ನು ಆದಷ್ಟು ಹಿತವಾಗಿ ನಡೆಸಿಕೊಳ್ಳಬೇಕು ; ಎಂದು ತೀರ್ಮಾನಿಸುವವರು ಕೆಲವರು. {{gap}}ವಯಸ್ಕರ ಮನಸ್ಸಿನ ಕಾರ್ಯಕ್ರಮದಲ್ಲಿ ಏನೆಲ್ಲಾ ವೈವಿಧ್ಯ ! '''ಮುಪ್ಪಿನಲ್ಲಿ ಮನಸ್ಸಿನ ಕಾರ್ಯಕ್ರಮ''' {{gap}}ಮುಪ್ಪಿನಲ್ಲಿ ದೇಹದಾರ್ಡ್ಯವು ಇಳಿಮುಖವಾಗಿರುತ್ತದೆ. ತಿನ್ನಬೇಕು ಎನ್ನುವ ಚಪಲವು ಉಳಿದಿದ್ದರೂ, ತಿಂದ ಮೇಲೆ ಜೀರ್ಣವಾಗದೆ ನರಳಬೇಕಾಗುತ್ತದಲ್ಲ ಎನ್ನುವ ಭಯವು ತಡೆಯುತ್ತದೆ. ಇದರಂತೆಯೇ ಇತರ ಕಾವ್ಯಗಳು, ದೇಹವು ಶಕ್ತಿಯನ್ನು ಕಳೆದುಕೊಳ್ಳುವಂತೆ, ಮನಸೂ ಚುರುಕನ್ನು ಸಾಮಾನ್ಯವಾಗಿ ಕಳೆದುಕೊಳ್ಳುತ್ತದೆ. ತುಂಬಾ ವಿರಳವಾಗಿ ಕೆಲವರ ಮನಸ್ಸು ಮುಪ್ಪಿನಲ್ಲಿ ಕೂಡ ಚುರುಕಾಗಿರುವುದುಂಟು. {{gap}}Id ಇನ ಕಾವ್ಯಗಳ ಸೆಳೆತವು, ದೇಹದ ನಿರ್ಬಲತೆಯಿಂದಾಗಿ, ಕಡಿಮೆಯಾಗುತ್ತ ಹೋಗುತ್ತದೆ. ಆದರೆ ಯೌವನ ಮತ್ತು ವಯಸ್ಕನಾಗಿದ್ದಾಗ ಅನುಭವಿಸಿದ ಕಾವ್ಯ ಕಾರ್ಯಗಳ ನೆನಪು ಹಸಿರಾಗಿ ಉಳಿದಿರುತ್ತದೆ. ಅವುಗಳ ಸ್ಮರಣೆಯು ಮುಪ್ಪಿನಲ್ಲಿ ತುಂಬಾ ಸುಖವನ್ನು ನೀಡುತ್ತದೆ. ತುರುಬು ನೆನಸಿಕೊಳ್ಳುವುದಕ್ಕಿಂತ ಇತರ ಯಾವುದು ತಾನೇ ಹೆಚ್ಚು ಹಿತವಾಗಿರುತ್ತದೆ ! ಮುಪ್ಪಿನಲ್ಲಿ. {{gap}}ಕೆಲವು ಮುಪ್ಪಿಗರಲ್ಲಿ Id ಇನ ಕಾವ್ಯ ಪ್ರೇರಕಗಳು ಸ್ಮರಣೆಯಿಂದ ತೃಪ್ತಿಗೊಳ್ಳುವುದಿಲ್ಲ. ಆದರೆ ನಿರ್ಬಲವಾದ ದೇಹವು ಆಶಿಸಿದಂತೆ ಆಡಲು<noinclude></noinclude> 78ub8uidys3mj2tt1e3lichobaomniu ಪುಟ:ಮನಮಂಥನ.pdf/೩೬೧ 104 62808 317214 314613 2026-05-05T11:43:59Z Shreesha Sharma 7840 /* Proofread */ 317214 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೪೩}} ಸಮರ್ಥವಾಗಿರುವುದಿಲ್ಲ. ಜತೆಗೆ ಸಮಾಜದಲ್ಲಿ ಸ್ವಲ್ಪಮಟ್ಟಿಗೆ ಮನ್ನಣೆಯನ್ನೂ ಪಡೆದಿರುತ್ತಾನೆ. ಆದಕಾರಣ, ಮನ್ನಣೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಯಾವುದನ್ನು Id ಇನ ಪ್ರೇರಣೆಯಿಂದ ಮಾಡಿದರೂ, ಗುಪ್ತವಾಗಿ ಮಾಡುತ್ತಾನೆ. ರಸ್ತೆಯಂಚಿನಲ್ಲಿ, ಚರಂಡಿಯ ಪಕ್ಕದಲ್ಲಿ, ಸಂಜೆಯ ಹೊತ್ತಿನ ವೇಳೆಗೆ ಬೋಂಡಾ ಮತ್ತು ವಡೆಗಳನ್ನು ಕರಿಯುವ ಅಂಗಡಿಗಳಿರುವುದಿಲ್ಲವೆ ? ಅವುಗಳ ಘಮಘಮವು ರಸ್ತೆಯಲ್ಲಿ ಪಸರಿಸುತ್ತದೆ. ಆದರೆ ತುಸು ಮನ್ನಣೆಯನ್ನು ಸಮಾಜದಲ್ಲಿ ಗಳಿಸಿಕೊಂಡ, ವಿಶ್ರಾಂತಿವೇತನವನ್ನು ಪಡೆದ ಬಡ ಶಾಲಾ ಮಾಸ್ತರು ಅಂತಹ ಅಂಗಡಿಗಳ ಬಳಿಯಲ್ಲಿ ನಿಂತು, ಬೋಂಡಾವನ್ನು ಕೊಂಡು ತಿನ್ನಲು ಹಿಂತೆಗೆಯುತ್ತಾನೆ. ಆದರೆ ಆಸೆಯು ಬಿಡದು. ಮೊಮ್ಮಕ್ಕಳ ನೆಪವನ್ನು ಹೂಡಿ, ಅವರಿಗೋಸ್ಕರ ಎಂದು ಹೇಳಿಕೊಂಡು, ಕೊಳ್ಳುತ್ತಾನೆ. "ತುಂಬಾ ಖಾರ ಇಲ್ಲವಲ್ಲಪ್ಪಾ ಮೊಮ್ಮಗು ಕೇಳಿತು,' ಎಂದು ಅಂಗಡಿಯವನಿಗೆ ಹೇಳುತ್ತಾನೆ. ಅಂಗಡಿಯವರು ನಂಬುವುದಿಲ್ಲ ಎಂದು ಮಾಸ್ತರಿಗೂ ಗೊತ್ತು. ಆದರೂ ತನಗೆ ತಾನೇ ಮೋಸ ಮಾಡಿಕೊಂಡು, ಪೊಟ್ಟಣವನ್ನು ಕಟ್ಟಿಸಿಕೊಂಡು, ಪಾರ್ಕಿನ ನಿರ್ಜನ ಮೂಲೆಯಲ್ಲಿ ತಿನ್ನುತ್ತಾನೆ. ಕಟ್ಟಿದ ಕಾಗದದಲ್ಲಿ ಬಾಯೊರೆಸಿಕೊಂಡು, ಕಣ್ಣು ಮುಚ್ಚಿಕೊಂಡು ಹಾಲು ಕುಡಿದ ಬೆಕ್ಕಿನಂತೆ ಮನೆಗೆ ಹಿಂತಿರುತ್ತಾನೆ. ಕಾಮದ ವಿಷಯದಲ್ಲನಕ ಅವನ ನಡವಳಿಕೆಯು ಅತಿ ವಿಚಿತ್ರವಾಗಿರುತ್ತದೆ. ಭಗವದ್ಗೀತೆಯ ಪುಸ್ತಕದ ರಟ್ಟಿನಲ್ಲಿ ವಾತ್ಸಾಯನನ ಚಿತ್ರಗಳನ್ನು ಮರೆಮಾಚಿಟ್ಟುಕೊಂಡು ಕಳ್ಳತನದಲ್ಲಿ ನೋಡುತ್ತಾನೆ. ಹೆಂಗಸರು ಸ್ನಾನ ಮಾಡುವ ಕೆರೆಯ ಪಕ್ಕದ ತುಳಸಿವನದಲ್ಲಿ ಕುಳಿತು, ಜಪ ಮಾಡಲು ಕುಳಿತಿರುತ್ತಾನೆ. ಅರೆಮುಚ್ಚಿದ ಕಣ್ಣು, ಸ್ನಾನ ಮಾಡುವವರ ಮೇಲೆ ಹರಿದಿರುತ್ತದೆ. ಮೂರನೆಯ ಮಹಡಿಯಲ್ಲಿರುವ ಷಹರಿನ ಮುದುಕ, ಎದುರು ಮನೆಯ ಎರಡನೆಯ ಮಹಡಿಯ ಕಿಟಕಿಯನ್ನು ವೀಕ್ಷಿಸುತ್ತಾನೆ. ಆ ಕಿಟಕಿಯಲ್ಲಿ ಕಂಡುದುದು ಅವನ Id ಅನ್ನು, ಯಾವ ತೆರನ ದೇಹದ ಪ್ರಯಾಸವೂ ಇರದೆ, ಶಮನಗೊಳಿಸುತ್ತದೆ. Voyuerism ಎನ್ನುವ ಇಂತಹ ನಡವಳಿಕೆಗಳು ಮುಪ್ಪಿಗರಲ್ಲಿ ಹೆಚ್ಚಾಗಿರುತ್ತದೆ. ಅಂದರೆ ಇತರ ಯುವಕರಲ್ಲಿ ಅಥವಾ ವಯಸ್ಕರಲ್ಲಿ ಇರುವುದಿಲ್ಲ ಎಂದೇನೂ ಅಲ್ಲ. ಆದರೆ ಮುದುಕರಲ್ಲಿ ಇಂತಹವರ ಸಂಖ್ಯೆಯು ಬಹಳಷ್ಟು ಹೆಚ್ಚಾಗಿರುತ್ತದೆ. 'ಎಳೆಯ ಬಾಲಕಿಯರ ಮೇಲೆ ಅತ್ಯಾಚಾರ' ಎಂಬ ಶಿರೋನಾಮೆಯಲ್ಲಿ ಪ್ರಕಟವಾಗುವ ಪತ್ರಿಕಾ ಸುದ್ದಿಗಳಲ್ಲಿ ಮುಪ್ಪಿಗರು ಹೆಚ್ಚು ಪಾತ್ರವನ್ನು ವಹಿಸಿರುತ್ತಾರೆ. ಅಂದರೆ, ಮುಪ್ಪಿನಲ್ಲಿ Id ಇನ ಪ್ರಭಾವವು, ದೇಹದ ಶಿಥಿಲತೆಯಿಂದ<noinclude></noinclude> 8ek68fapoybaz1xe0jbpkz1fcp7yff7 317228 317214 2026-05-05T11:54:31Z Shreelatha.Halemane 7642 /* Validated */ 317228 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೪೩}} ಸಮರ್ಥವಾಗಿರುವುದಿಲ್ಲ. ಜತೆಗೆ ಸಮಾಜದಲ್ಲಿ ಸ್ವಲ್ಪಮಟ್ಟಿಗೆ ಮನ್ನಣೆಯನ್ನೂ ಪಡೆದಿರುತ್ತಾನೆ. ಆದಕಾರಣ, ಮನ್ನಣೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಯಾವುದನ್ನು Id ಇನ ಪ್ರೇರಣೆಯಿಂದ ಮಾಡಿದರೂ, ಗುಪ್ತವಾಗಿ ಮಾಡುತ್ತಾನೆ. {{gap}}ರಸ್ತೆಯಂಚಿನಲ್ಲಿ, ಚರಂಡಿಯ ಪಕ್ಕದಲ್ಲಿ, ಸಂಜೆಯ ಹೊತ್ತಿನ ವೇಳೆಗೆ ಬೋಂಡಾ ಮತ್ತು ವಡೆಗಳನ್ನು ಕರಿಯುವ ಅಂಗಡಿಗಳಿರುವುದಿಲ್ಲವೆ ? ಅವುಗಳ ಘಮಘಮವು ರಸ್ತೆಯಲ್ಲಿ ಪಸರಿಸುತ್ತದೆ. ಆದರೆ ತುಸು ಮನ್ನಣೆಯನ್ನು ಸಮಾಜದಲ್ಲಿ ಗಳಿಸಿಕೊಂಡ, ವಿಶ್ರಾಂತಿವೇತನವನ್ನು ಪಡೆದ ಬಡ ಶಾಲಾ ಮಾಸ್ತರು ಅಂತಹ ಅಂಗಡಿಗಳ ಬಳಿಯಲ್ಲಿ ನಿಂತು, ಬೋಂಡಾವನ್ನು ಕೊಂಡು ತಿನ್ನಲು ಹಿಂತೆಗೆಯುತ್ತಾನೆ. ಆದರೆ ಆಸೆಯು ಬಿಡದು. ಮೊಮ್ಮಕ್ಕಳ ನೆಪವನ್ನು ಹೂಡಿ, ಅವರಿಗೋಸ್ಕರ ಎಂದು ಹೇಳಿಕೊಂಡು, ಕೊಳ್ಳುತ್ತಾನೆ. "ತುಂಬಾ ಖಾರ ಇಲ್ಲವಲ್ಲಪ್ಪಾ ಮೊಮ್ಮಗು ಕೇಳಿತು,' ಎಂದು ಅಂಗಡಿಯವನಿಗೆ ಹೇಳುತ್ತಾನೆ. ಅಂಗಡಿಯವರು ನಂಬುವುದಿಲ್ಲ ಎಂದು ಮಾಸ್ತರಿಗೂ ಗೊತ್ತು. ಆದರೂ ತನಗೆ ತಾನೇ ಮೋಸ ಮಾಡಿಕೊಂಡು, ಪೊಟ್ಟಣವನ್ನು ಕಟ್ಟಿಸಿಕೊಂಡು, ಪಾರ್ಕಿನ ನಿರ್ಜನ ಮೂಲೆಯಲ್ಲಿ ತಿನ್ನುತ್ತಾನೆ. ಕಟ್ಟಿದ ಕಾಗದದಲ್ಲಿ ಬಾಯೊರೆಸಿಕೊಂಡು, ಕಣ್ಣು ಮುಚ್ಚಿಕೊಂಡು ಹಾಲು ಕುಡಿದ ಬೆಕ್ಕಿನಂತೆ ಮನೆಗೆ ಹಿಂತಿರುತ್ತಾನೆ. {{gap}}ಕಾಮದ ವಿಷಯದಲ್ಲನಕ ಅವನ ನಡವಳಿಕೆಯು ಅತಿ ವಿಚಿತ್ರವಾಗಿರುತ್ತದೆ. ಭಗವದ್ಗೀತೆಯ ಪುಸ್ತಕದ ರಟ್ಟಿನಲ್ಲಿ ವಾತ್ಸಾಯನನ ಚಿತ್ರಗಳನ್ನು ಮರೆಮಾಚಿಟ್ಟುಕೊಂಡು ಕಳ್ಳತನದಲ್ಲಿ ನೋಡುತ್ತಾನೆ. ಹೆಂಗಸರು ಸ್ನಾನ ಮಾಡುವ ಕೆರೆಯ ಪಕ್ಕದ ತುಳಸಿವನದಲ್ಲಿ ಕುಳಿತು, ಜಪ ಮಾಡಲು ಕುಳಿತಿರುತ್ತಾನೆ. ಅರೆಮುಚ್ಚಿದ ಕಣ್ಣು, ಸ್ನಾನ ಮಾಡುವವರ ಮೇಲೆ ಹರಿದಿರುತ್ತದೆ. ಮೂರನೆಯ ಮಹಡಿಯಲ್ಲಿರುವ ಷಹರಿನ ಮುದುಕ, ಎದುರು ಮನೆಯ ಎರಡನೆಯ ಮಹಡಿಯ ಕಿಟಕಿಯನ್ನು ವೀಕ್ಷಿಸುತ್ತಾನೆ. ಆ ಕಿಟಕಿಯಲ್ಲಿ ಕಂಡುದುದು ಅವನ Id ಅನ್ನು, ಯಾವ ತೆರನ ದೇಹದ ಪ್ರಯಾಸವೂ ಇರದೆ, ಶಮನಗೊಳಿಸುತ್ತದೆ. Voyuerism ಎನ್ನುವ ಇಂತಹ ನಡವಳಿಕೆಗಳು ಮುಪ್ಪಿಗರಲ್ಲಿ ಹೆಚ್ಚಾಗಿರುತ್ತದೆ. ಅಂದರೆ ಇತರ ಯುವಕರಲ್ಲಿ ಅಥವಾ ವಯಸ್ಕರಲ್ಲಿ ಇರುವುದಿಲ್ಲ ಎಂದೇನೂ ಅಲ್ಲ. ಆದರೆ ಮುದುಕರಲ್ಲಿ ಇಂತಹವರ ಸಂಖ್ಯೆಯು ಬಹಳಷ್ಟು ಹೆಚ್ಚಾಗಿರುತ್ತದೆ. 'ಎಳೆಯ ಬಾಲಕಿಯರ ಮೇಲೆ ಅತ್ಯಾಚಾರ' ಎಂಬ ಶಿರೋನಾಮೆಯಲ್ಲಿ ಪ್ರಕಟವಾಗುವ ಪತ್ರಿಕಾ ಸುದ್ದಿಗಳಲ್ಲಿ ಮುಪ್ಪಿಗರು ಹೆಚ್ಚು ಪಾತ್ರವನ್ನು ವಹಿಸಿರುತ್ತಾರೆ. ಅಂದರೆ, ಮುಪ್ಪಿನಲ್ಲಿ Id ಇನ ಪ್ರಭಾವವು, ದೇಹದ ಶಿಥಿಲತೆಯಿಂದ<noinclude></noinclude> 1k2oj3eu0l8o63rii6yweqcsi0ckjm6 ಪುಟ:ಮನಮಂಥನ.pdf/೩೬೨ 104 62809 317215 314614 2026-05-05T11:44:49Z Shreesha Sharma 7840 /* Proofread */ 317215 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೩೪೪}}{{Right|ಮನಮಂಥನ}} ಕಡಿಮೆಯಾಗಿದ್ದರೂ, ನಾಶವಾಗಿರುವುದಿಲ್ಲ, ಸಾಮಾನ್ಯವಾಗಿ ಹಳೆಯ ಸುಖದಾಯಕ ನೆನಪುಗಳನ್ನು ಮೆಲಕುಹಾಕುತ್ತ Id ಸಮಾಧಾನವನ್ನು ಹೊಂದುತ್ತದೆ. ಆದರೆ ಮತ್ತೆ ಕೆಲವರಲ್ಲಿ, ವಿಚಿತ್ರವಾದ ಮತ್ತು ಅಸಹ್ಯವೂ ಆದ ನಡವಳಿಕೆಗಳನ್ನು ಪ್ರೇರಿಸುತ್ತದೆ. ಇಂತಹ ಮುದುಕರಲ್ಲಿ ಮನಸ್ಸಿನ ಸತ್-ಚೈತನ್ಯಾಂಶವು, Super- Ego ವು ಬಹಳ ಮಂದವಾಗಿರುತ್ತದೆ, ಸಡಿಲವಾಗಿಯೂ ಇರುತ್ತದೆ. ಆದುದರಿಂದ ಅವರುಗಳ ಮನಸ್ಸು ಯದ್ವಾತದ್ವಾ ನಡೆಯುತ್ತದೆ. ಮಾನಸಿಕ ಪಲ್ಲಟವು ಇಂತಹುದೇ. ಸಮಾಜ ವಿಚ್ಛಿದ್ರಕ ಕಾರ್ಯಗಳನ್ನು ಮಾನಸಿಕ ಪಲ್ಲಟವಾದವರು ನಡೆಸುತ್ತಾರೆ. ಮುಪ್ಪು ಅಡರಿರುವ ಅಪರಾಧಿಗಳನ್ನು ಕಂಡಾಗ, ಅವರುಗಳ ಮನಸ್ಸಿನಲ್ಲಿರುವ ಭೂತಗಳು ರೀತಿ ಚೇಷ್ಟೆಯನ್ನು ಮಾಡಿಸುತ್ತವೆ ಎಂಬುದನ್ನು ಮರೆಯಬಾರದು. ಮಾನವನ ಪ್ರಗತಿ ಹೊಂದಿದ ಮನಸ್ಸಿನಲ್ಲಿ Id ಎಂಬುದು ಅತ್ಯಗತ್ಯವಾದ ಅದ್ಭುತವಾದ ಭೂತ, ಪಿಶಾಚಿ, ಬ್ರಹ್ಮರಾಕ್ಷಸ, ಹಾಗೂ ಮೋಹಿನಿ ದೆವ್ವ, ಅವು ಆಡಿಸಿದಂತೆ ಮಾನವನು ಚೆಲ್ಲಾಡುತ್ತಾನೆ. ರಕ್ಷಣೆಯಿತ್ತ ಸಮಾಜವನ್ನು ಹುಚ್ಚನಂತೆ, ತುಂಡರಿಸಲು ಯತ್ನಿಸುತ್ತಾನೆ. ಪ್ರಗತಿ ಹೊಂದುತ್ತಿರುವ ಮಾನವನ ಮನಸ್ಸಿನಲ್ಲಿ ಸತ್-ಚೈತನ್ಯಾಂಶವೂ Super-Ego ವೂ ವೃದ್ಧಿಸುತ್ತವೆ. ಅಭಿವೃದ್ಧಿಸುತ್ತವೆ. ಇವನ್ನು ದೇವತೆಗಳು, ಸುರರು, ಆಮೃತರು, ಎನ್ನಬಹುದು. ಈ ಶಕ್ತಿಗಳೂ ಅತ್ಯಗತ್ಯ, ಉದ್ಧಾರಕ್ಕೆ. ಇವೂ ಅದ್ಭುತ. ಇವಕ್ಕೆ ಸಮಾಜದ ಹಿತ ವಿಹಿತ ಸಾಧನೆಯೇ ಧ್ಯೇಯ ಮತ್ತು ಆಶಯ. ಈ ಸುರರು, ಸಾಕಷ್ಟು ಪ್ರಬಲವಾಗಿ, ಮಾನವನ ಮನಸ್ಸಿನಲ್ಲಿ, ಹುಟ್ಟಿದಂದಿನಿಂದಲೂ ರೂಢಿಸಲ್ಪಡದಿದ್ದರೆ, ಬೆಳೆಯದೆ ಇದ್ದರೆ, ಆಗ Id ಇನ, ತಮೋಗುಣದ ಪ್ರಭಾವವು ಹೆಡೆಯೆತ್ತುತ್ತದೆ. Ego ವನ್ನು ಪಿಶಾಚಿಗಳಂತೆ ಜಗ್ಗಾಡಿಸುತ್ತವೆ. Egoವಿಗೆ ದೇಹವೇ ಉತ್ಸವ ವಿಗ್ರಹ. ಮೂಲವಿಗ್ರಹವು, ಗರ್ಭಗುಡಿಯಲ್ಲಿ ಸುರಕ್ಷಿತವಾಗಿರಲಿ, ದೇಹದಿಂದಲೇ ಅದನ್ನು ನಡೆಸುವ ಮನಸ್ಸಿನಿಂದಲೇ, ತಾನು ಸಮಾಜದಲ್ಲಿ ಪ್ರತಿಷ್ಠಿತನಾಗುವುದು, ಎಂದು Ego ಅಂಶವು, -ಮಮಕಾರವು ನಿರ್ಧರಿಸುತ್ತದೆ. ದೇಹವು ಕ್ಷೀಣವಾದಾಗ, Super- Ego ಬೆಳೆಯದೆ ಇದ್ದಾಗ, Id ಇನ ತಮೋಪ್ರಧಾನವಾದ ದೆವ್ವಗಳು, ಪಿಶಾಚಿಗಳು. ಬ್ರಹ್ಮರಾಕ್ಷಸರು, ಕಾಡಿ ಕೆಡವುತ್ತಾರೆ. ಮದವೇರಿದ ಸಲಗನು ತನ್ನ ತಲೆಯ ಮೇಲೆ ಮಣ್ಣನ್ನು ಎರಚಿಕೊಳ್ಳುವಂತೆ, ತನ್ನ ನಾಶವನ್ನು ತಾನೇ ಮಾಡಿಕೊಳ್ಳುವಂತೆ Super-Egoವು ಲಕ್ಷಣವಾಗಿ ಬೆಳೆಯದೇ ಇದ್ದವರು, ದೇಹವು ಶಿಥಿಲಗೊಂಡು Ego ವು ಧೃತಿಗೆಟ್ಟಾಗ ತಮ್ಮ ನಾಶವನ್ನು ತಾವೇ ಮಾಡಿಕೊಳ್ಳುತ್ತಾರೆ, ತಾವು<noinclude></noinclude> 7pq8xepu2n9fui6jxpwhuflut5gtzta 317229 317215 2026-05-05T11:54:50Z Shreelatha.Halemane 7642 /* Validated */ 317229 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೩೪೪}}{{Right|ಮನಮಂಥನ}} ಕಡಿಮೆಯಾಗಿದ್ದರೂ, ನಾಶವಾಗಿರುವುದಿಲ್ಲ, ಸಾಮಾನ್ಯವಾಗಿ ಹಳೆಯ ಸುಖದಾಯಕ ನೆನಪುಗಳನ್ನು ಮೆಲಕುಹಾಕುತ್ತ Id ಸಮಾಧಾನವನ್ನು ಹೊಂದುತ್ತದೆ. ಆದರೆ ಮತ್ತೆ ಕೆಲವರಲ್ಲಿ, ವಿಚಿತ್ರವಾದ ಮತ್ತು ಅಸಹ್ಯವೂ ಆದ ನಡವಳಿಕೆಗಳನ್ನು ಪ್ರೇರಿಸುತ್ತದೆ. ಇಂತಹ ಮುದುಕರಲ್ಲಿ ಮನಸ್ಸಿನ ಸತ್-ಚೈತನ್ಯಾಂಶವು, Super- Ego ವು ಬಹಳ ಮಂದವಾಗಿರುತ್ತದೆ, ಸಡಿಲವಾಗಿಯೂ ಇರುತ್ತದೆ. ಆದುದರಿಂದ ಅವರುಗಳ ಮನಸ್ಸು ಯದ್ವಾತದ್ವಾ ನಡೆಯುತ್ತದೆ. ಮಾನಸಿಕ ಪಲ್ಲಟವು ಇಂತಹುದೇ. ಸಮಾಜ ವಿಚ್ಛಿದ್ರಕ ಕಾರ್ಯಗಳನ್ನು ಮಾನಸಿಕ ಪಲ್ಲಟವಾದವರು ನಡೆಸುತ್ತಾರೆ. ಮುಪ್ಪು ಅಡರಿರುವ ಅಪರಾಧಿಗಳನ್ನು ಕಂಡಾಗ, ಅವರುಗಳ ಮನಸ್ಸಿನಲ್ಲಿರುವ ಭೂತಗಳು ರೀತಿ ಚೇಷ್ಟೆಯನ್ನು ಮಾಡಿಸುತ್ತವೆ ಎಂಬುದನ್ನು ಮರೆಯಬಾರದು. {{gap}}ಮಾನವನ ಪ್ರಗತಿ ಹೊಂದಿದ ಮನಸ್ಸಿನಲ್ಲಿ Id ಎಂಬುದು ಅತ್ಯಗತ್ಯವಾದ ಅದ್ಭುತವಾದ ಭೂತ, ಪಿಶಾಚಿ, ಬ್ರಹ್ಮರಾಕ್ಷಸ, ಹಾಗೂ ಮೋಹಿನಿ ದೆವ್ವ, ಅವು ಆಡಿಸಿದಂತೆ ಮಾನವನು ಚೆಲ್ಲಾಡುತ್ತಾನೆ. ರಕ್ಷಣೆಯಿತ್ತ ಸಮಾಜವನ್ನು ಹುಚ್ಚನಂತೆ, ತುಂಡರಿಸಲು ಯತ್ನಿಸುತ್ತಾನೆ. ಪ್ರಗತಿ ಹೊಂದುತ್ತಿರುವ ಮಾನವನ ಮನಸ್ಸಿನಲ್ಲಿ ಸತ್-ಚೈತನ್ಯಾಂಶವೂ Super-Ego ವೂ ವೃದ್ಧಿಸುತ್ತವೆ. ಅಭಿವೃದ್ಧಿಸುತ್ತವೆ. ಇವನ್ನು ದೇವತೆಗಳು, ಸುರರು, ಆಮೃತರು, ಎನ್ನಬಹುದು. ಈ ಶಕ್ತಿಗಳೂ ಅತ್ಯಗತ್ಯ, ಉದ್ಧಾರಕ್ಕೆ. ಇವೂ ಅದ್ಭುತ. ಇವಕ್ಕೆ ಸಮಾಜದ ಹಿತ ವಿಹಿತ ಸಾಧನೆಯೇ ಧ್ಯೇಯ ಮತ್ತು ಆಶಯ. {{gap}}ಈ ಸುರರು, ಸಾಕಷ್ಟು ಪ್ರಬಲವಾಗಿ, ಮಾನವನ ಮನಸ್ಸಿನಲ್ಲಿ, ಹುಟ್ಟಿದಂದಿನಿಂದಲೂ ರೂಢಿಸಲ್ಪಡದಿದ್ದರೆ, ಬೆಳೆಯದೆ ಇದ್ದರೆ, ಆಗ Id ಇನ, ತಮೋಗುಣದ ಪ್ರಭಾವವು ಹೆಡೆಯೆತ್ತುತ್ತದೆ. Ego ವನ್ನು ಪಿಶಾಚಿಗಳಂತೆ ಜಗ್ಗಾಡಿಸುತ್ತವೆ. Egoವಿಗೆ ದೇಹವೇ ಉತ್ಸವ ವಿಗ್ರಹ. ಮೂಲವಿಗ್ರಹವು, ಗರ್ಭಗುಡಿಯಲ್ಲಿ ಸುರಕ್ಷಿತವಾಗಿರಲಿ, ದೇಹದಿಂದಲೇ ಅದನ್ನು ನಡೆಸುವ ಮನಸ್ಸಿನಿಂದಲೇ, ತಾನು ಸಮಾಜದಲ್ಲಿ ಪ್ರತಿಷ್ಠಿತನಾಗುವುದು, ಎಂದು Ego ಅಂಶವು, -ಮಮಕಾರವು ನಿರ್ಧರಿಸುತ್ತದೆ. ದೇಹವು ಕ್ಷೀಣವಾದಾಗ, Super- Ego ಬೆಳೆಯದೆ ಇದ್ದಾಗ, Id ಇನ ತಮೋಪ್ರಧಾನವಾದ ದೆವ್ವಗಳು, ಪಿಶಾಚಿಗಳು. ಬ್ರಹ್ಮರಾಕ್ಷಸರು, ಕಾಡಿ ಕೆಡವುತ್ತಾರೆ. ಮದವೇರಿದ ಸಲಗನು ತನ್ನ ತಲೆಯ ಮೇಲೆ ಮಣ್ಣನ್ನು ಎರಚಿಕೊಳ್ಳುವಂತೆ, ತನ್ನ ನಾಶವನ್ನು ತಾನೇ ಮಾಡಿಕೊಳ್ಳುವಂತೆ Super-Egoವು ಲಕ್ಷಣವಾಗಿ ಬೆಳೆಯದೇ ಇದ್ದವರು, ದೇಹವು ಶಿಥಿಲಗೊಂಡು Ego ವು ಧೃತಿಗೆಟ್ಟಾಗ ತಮ್ಮ ನಾಶವನ್ನು ತಾವೇ ಮಾಡಿಕೊಳ್ಳುತ್ತಾರೆ, ತಾವು<noinclude></noinclude> lf96xqas87ieor32kc5ccdqhzsdu08r ಪುಟ:ಮನಮಂಥನ.pdf/೩೬೩ 104 62810 317216 314615 2026-05-05T11:45:42Z Shreesha Sharma 7840 /* Proofread */ 317216 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೪೫}} ಮೆರೆಯಬೇಕೆಂದಿರುವ ಸಮಾಜದಲ್ಲಿ ಅವಮಾನಿತರಾಗಿ ಕಂಗೆಡುತ್ತಾರೆ. ಮುಪ್ಪಿನಲ್ಲಿ Ego ವಿನ ಮೆರೆಯುವಿಕೆಯು ವಯಸ್ಕರಲ್ಲಿದ್ದಂತೆ ಪ್ರಬಲವಾಗಿರುವುದಿಲ್ಲ. ಏಕೆಂದರೆ Ego ಮೆರೆಯಬೇಕಾದರೆ ದೇಹವು ದೃಢವಾಗಿರಬೇಕು. ವಿಚಾರಪರ ಮನಸ್ಸು ಅತಿ ಚುರುಕಾಗಿರಬೇಕು. ಸ್ಮರಣೆಯೂ ಅಚ್ಚಳಿಯದೆ ಉಳಿದು ಅಗತ್ಯವಾದಾಗ ಜಟ್ಟಂತ ನೆನಪಾಗಬೇಕು. ಮುಪ್ಪಿನಲ್ಲಿ ದೇಹವು ಶಿಥಿಲವಾಗುತ್ತದೆ. ತಲೆಯ ಕೂದಲುಗಳು ನರೆಯತೊಡಗಿ, ಕಡೆಗೆ ಅವಾದರೂ ಇದ್ದರೆ ಸಾಕು. ಭಟ್ಟ ತಲೆಯಾಗದಿದ್ದರೆ ಸಾಕಪ್ಪ ; ಎನ್ನುವಂತಾಗಿರುತ್ತದೆ. ಕಣ್ಣುಗಳು ತುಸು ಮಂದವಾಗತೊಡಗುತ್ತವೆ. `ಆ! ಏನಂದೆ' ಎಂದು ಪುನಃ ಕೇಳುವಷ್ಟು ಕಿವುಡು ಶುರುವಾಗುತ್ತದೆ. ನುಣುಪಾಗಿದ್ದ ಕಾಂತಿಯುತವಾಗಿದ್ದ ಚರ್ಮವು ಕಾಂತಿಹೀನವಾಗಿ ಸುಕ್ಕು ಸುಕ್ಕಾಗತೊಡಗುತ್ತದೆ. ನಾಲಿಗೆಯು ಚಪಲದಿಂದ ಉದ್ರೇಕಿತವಾದರೂ, ಆ ವಯಸ್ಸಿನಲ್ಲಿ ಹಲ್ಲುಗಳು ತಾಸವನ್ನು ಕೊಡಲಾರಂಭಿಸಿರುವುದರಿಂದ, ಅಗಿದು ರುಚಿ ನೋಡಿ ಸುಖ ಪಡುವಂತಿರುವುದಿಲ್ಲ. ಅಜೀರ್ಣದ ಭಯದಿಂದ ನಿಶ್ಚಿಂತೆಯಿಂದ ತೃಪ್ತಿಯಾಗುವಂತೆ ತಿನ್ನಲೂ ಆಗುವುದಿಲ್ಲ. ಪಂಚೇಂದ್ರಿಯಗಳು ಕ್ಷೀಣವಾಗುತ್ತಹೋದರೆ, ಮೆದುಳೂ ಶಿಥಿಲವಾಗುತ್ತದೆ. ವಿಚಾರಪರ ಮನಸ್ಸಿನ ಚುರುಕು ಕಡಿಮೆಯಾಗುತ್ತದೆ. ಸ್ಮರಣೆಯೂ ಬೇಕೆನಿಸಿದಾಗ ಮರುಕಳಿಸುವುದಿಲ್ಲ. ಹೀಗಾಗಿ Ego ವು ತನ್ನ ಪ್ರದರ್ಶನವನ್ನು ಮಾಡಿಕೊಳ್ಳಲು ಅವಕಾಶವು ಕಡಿಮೆಯಾಗುತ್ತದೆ. ಈ ವಯಸ್ಸಿನಲ್ಲಿ, ಬಾಳಿನಲ್ಲಿ ಹೇಗೆಲ್ಲಾ ಮುಂದುವರೆಯಬಹುದಾಗಿತ್ತು. ಆದರೆ ಯಾವುಯಾವುದೋ ಕಾರಣಗಳಿಂದ, ಇನ್ನೇನು ಫಲಿಸಿಯೇ ಬಿಡುತ್ತದೆ ಎನ್ನುವಾಗ, ಠೋಕರ್ ತಿಂದುದರ ಕಹಿ ಸ್ಮರಣೆಗಳು ಕಾಡುತ್ತವೆ. ವಿಧಿಲಿಖಿತ ; ನನ್ನ ದುರದೃಷ್ಟ : ಪೂರ್ವಜನ್ಮದ ಕರ್ಮ ; ಎಂದೆಲ್ಲಾ ಹೇಳಿಕೊಂಡು ಸಮಾಧಾನವನ್ನು ಮಾಡಿಕೊಳ್ಳುತ್ತಾನೆ. ವಯಸ್ಕನಾಗಿದ್ದಾಗ, ನಾನು ಕಡಿದು ಕಟ್ಟಿ ಹಾಕುತ್ತೇನೆ ಎನ್ನುವ ಕೆಚ್ಚು Ego ಎಗಿರುತ್ತದೆ. ಆದರೆ ಮುಪ್ಪಿನಲ್ಲಿ Ego ವಿಗೆ ಅಂತಹ ಕೆಚ್ಚು ಇರುವುದಿಲ್ಲ. ಇತರ ಅವ್ಯಕ್ತವಾದ ಶಕ್ತಿಗಳು Ego ದ ಪ್ರಯತ್ನಗಳನ್ನು ಕುಂಠಿಸುತ್ತವೆ. 'ನಾನು' ತಲೆ ಚಚ್ಚಿಕೊಂಡರೂ ಬಯಸಿದಂತೆ ಬಾಳಲು ಸಾಧ್ಯವಾಗುವುದಿಲ್ಲ ಎನ್ನುವ ಅರಿವು ಮೂಡಿರುತ್ತದೆ. ಇದರ ಜತೆಗೆ, ಮುಪ್ಪಿನಲ್ಲಿ ರೋಗಗಳು ಕಾಣಿಸಿಕೊಂಡಿರುತ್ತವೆ. ರಕ್ತದ ಒತ್ತಡ; ಸಕ್ಕರೆ ಬೇನೆ, ಕೀಲುಗಳ ನೋವು : ಇತ್ಯಾದಿ ಇತ್ಯಾದಿಗಳು ಪ್ರಾರಂಭವಾಗಿರುತ್ತವೆ. ಬಂದಿರುವ ರೋಗಗಳಿಗಿಂತ, ಬರಬಹುದಾದ ರೋಗಗಳ<noinclude></noinclude> gdm71we22znui1gkob2qsz61851ah9a 317230 317216 2026-05-05T11:55:11Z Shreelatha.Halemane 7642 /* Validated */ 317230 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೪೫}} ಮೆರೆಯಬೇಕೆಂದಿರುವ ಸಮಾಜದಲ್ಲಿ ಅವಮಾನಿತರಾಗಿ ಕಂಗೆಡುತ್ತಾರೆ. {{gap}}ಮುಪ್ಪಿನಲ್ಲಿ Ego ವಿನ ಮೆರೆಯುವಿಕೆಯು ವಯಸ್ಕರಲ್ಲಿದ್ದಂತೆ ಪ್ರಬಲವಾಗಿರುವುದಿಲ್ಲ. ಏಕೆಂದರೆ Ego ಮೆರೆಯಬೇಕಾದರೆ ದೇಹವು ದೃಢವಾಗಿರಬೇಕು. ವಿಚಾರಪರ ಮನಸ್ಸು ಅತಿ ಚುರುಕಾಗಿರಬೇಕು. ಸ್ಮರಣೆಯೂ ಅಚ್ಚಳಿಯದೆ ಉಳಿದು ಅಗತ್ಯವಾದಾಗ ಜಟ್ಟಂತ ನೆನಪಾಗಬೇಕು. ಮುಪ್ಪಿನಲ್ಲಿ ದೇಹವು ಶಿಥಿಲವಾಗುತ್ತದೆ. ತಲೆಯ ಕೂದಲುಗಳು ನರೆಯತೊಡಗಿ, ಕಡೆಗೆ ಅವಾದರೂ ಇದ್ದರೆ ಸಾಕು. ಭಟ್ಟ ತಲೆಯಾಗದಿದ್ದರೆ ಸಾಕಪ್ಪ ; ಎನ್ನುವಂತಾಗಿರುತ್ತದೆ. ಕಣ್ಣುಗಳು ತುಸು ಮಂದವಾಗತೊಡಗುತ್ತವೆ. `ಆ! ಏನಂದೆ' ಎಂದು ಪುನಃ ಕೇಳುವಷ್ಟು ಕಿವುಡು ಶುರುವಾಗುತ್ತದೆ. ನುಣುಪಾಗಿದ್ದ ಕಾಂತಿಯುತವಾಗಿದ್ದ ಚರ್ಮವು ಕಾಂತಿಹೀನವಾಗಿ ಸುಕ್ಕು ಸುಕ್ಕಾಗತೊಡಗುತ್ತದೆ. ನಾಲಿಗೆಯು ಚಪಲದಿಂದ ಉದ್ರೇಕಿತವಾದರೂ, ಆ ವಯಸ್ಸಿನಲ್ಲಿ ಹಲ್ಲುಗಳು ತಾಸವನ್ನು ಕೊಡಲಾರಂಭಿಸಿರುವುದರಿಂದ, ಅಗಿದು ರುಚಿ ನೋಡಿ ಸುಖ ಪಡುವಂತಿರುವುದಿಲ್ಲ. ಅಜೀರ್ಣದ ಭಯದಿಂದ ನಿಶ್ಚಿಂತೆಯಿಂದ ತೃಪ್ತಿಯಾಗುವಂತೆ ತಿನ್ನಲೂ ಆಗುವುದಿಲ್ಲ. ಪಂಚೇಂದ್ರಿಯಗಳು ಕ್ಷೀಣವಾಗುತ್ತಹೋದರೆ, ಮೆದುಳೂ ಶಿಥಿಲವಾಗುತ್ತದೆ. ವಿಚಾರಪರ ಮನಸ್ಸಿನ ಚುರುಕು ಕಡಿಮೆಯಾಗುತ್ತದೆ. ಸ್ಮರಣೆಯೂ ಬೇಕೆನಿಸಿದಾಗ ಮರುಕಳಿಸುವುದಿಲ್ಲ. ಹೀಗಾಗಿ Ego ವು ತನ್ನ ಪ್ರದರ್ಶನವನ್ನು ಮಾಡಿಕೊಳ್ಳಲು ಅವಕಾಶವು ಕಡಿಮೆಯಾಗುತ್ತದೆ. {{gap}}ಈ ವಯಸ್ಸಿನಲ್ಲಿ, ಬಾಳಿನಲ್ಲಿ ಹೇಗೆಲ್ಲಾ ಮುಂದುವರೆಯಬಹುದಾಗಿತ್ತು. ಆದರೆ ಯಾವುಯಾವುದೋ ಕಾರಣಗಳಿಂದ, ಇನ್ನೇನು ಫಲಿಸಿಯೇ ಬಿಡುತ್ತದೆ ಎನ್ನುವಾಗ, ಠೋಕರ್ ತಿಂದುದರ ಕಹಿ ಸ್ಮರಣೆಗಳು ಕಾಡುತ್ತವೆ. ವಿಧಿಲಿಖಿತ ; ನನ್ನ ದುರದೃಷ್ಟ : ಪೂರ್ವಜನ್ಮದ ಕರ್ಮ ; ಎಂದೆಲ್ಲಾ ಹೇಳಿಕೊಂಡು ಸಮಾಧಾನವನ್ನು ಮಾಡಿಕೊಳ್ಳುತ್ತಾನೆ. ವಯಸ್ಕನಾಗಿದ್ದಾಗ, ನಾನು ಕಡಿದು ಕಟ್ಟಿ ಹಾಕುತ್ತೇನೆ ಎನ್ನುವ ಕೆಚ್ಚು Ego ಎಗಿರುತ್ತದೆ. ಆದರೆ ಮುಪ್ಪಿನಲ್ಲಿ Ego ವಿಗೆ ಅಂತಹ ಕೆಚ್ಚು ಇರುವುದಿಲ್ಲ. ಇತರ ಅವ್ಯಕ್ತವಾದ ಶಕ್ತಿಗಳು Ego ದ ಪ್ರಯತ್ನಗಳನ್ನು ಕುಂಠಿಸುತ್ತವೆ. 'ನಾನು' ತಲೆ ಚಚ್ಚಿಕೊಂಡರೂ ಬಯಸಿದಂತೆ ಬಾಳಲು ಸಾಧ್ಯವಾಗುವುದಿಲ್ಲ ಎನ್ನುವ ಅರಿವು ಮೂಡಿರುತ್ತದೆ. {{gap}}ಇದರ ಜತೆಗೆ, ಮುಪ್ಪಿನಲ್ಲಿ ರೋಗಗಳು ಕಾಣಿಸಿಕೊಂಡಿರುತ್ತವೆ. ರಕ್ತದ ಒತ್ತಡ; ಸಕ್ಕರೆ ಬೇನೆ, ಕೀಲುಗಳ ನೋವು : ಇತ್ಯಾದಿ ಇತ್ಯಾದಿಗಳು ಪ್ರಾರಂಭವಾಗಿರುತ್ತವೆ. ಬಂದಿರುವ ರೋಗಗಳಿಗಿಂತ, ಬರಬಹುದಾದ ರೋಗಗಳ<noinclude></noinclude> 3glf8lq9gaehr5i0kkpifwfenp4icca ಪುಟ:ಮನಮಂಥನ.pdf/೩೬೪ 104 62811 317217 314616 2026-05-05T11:47:30Z Shreesha Sharma 7840 /* Proofread */ 317217 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೩೪೬}}{{Right|ಮನಮಂಥನ}} ಭಯವು ಕಾಡುತ್ತದೆ. ಆ ಸ್ನೇಹಿತನು ಅರ್ಬುದ ರೋಗದಿಂದ ತುಂಬ ನರಳಿ ಸತ್ತ, ಆ ಗೆಳೆಯನಿಗೆ ಲಕ್ವಾ ಬಡಿದು, ನಾಯಿಪಾಡನ್ನು ಅನುಭವಿಸುತ್ತಿದ್ದಾನೆ. ಪಾಪ, ನನ್ನ ಸ್ನೇಹಿತನ ಕಣ್ಣುಗಳೆರಡೂ ಆಪರೇಷನ್ ಆದನಂತರ, ಇಂಗಿಯೇ ಹೋದುವಂತೆ ; ಹೀಗೆ ಸುತ್ತಲೂ ನಡೆದ ಘಟನೆಗಳನ್ನು ಕಂಡು, ನನಗೂ ಹಾಗೆ ಆಗುತ್ತೇನೋ ಎನ್ನುವ ಭಯವು ಮುತ್ತುತ್ತದೆ, ಕಾಡುತ್ತದೆ. ನರಳಿ ಸಾಯುವ ಕಾಲವು ಹತ್ತಿರ ಹತ್ತಿರವಾಗುತ್ತಿದೆ ಎನ್ನುವ ವಾಸ್ತವಿಕತೆಯು ಸ್ಪಷ್ಟವಾಗತೊಡಗುತ್ತದೆ. ಬಯಸಿದಂತೆ ಬಾಳಲು ಹೇಗೆ ಸಾಧ್ಯವಿಲ್ಲವೋ, ಬಯಸಿದಂತೆ ಸಾಯುವುದೂ ಸಾಧ್ಯವಿಲ್ಲ ಎಂಬುದೂ ತಿಳಿದಿರುತ್ತದೆ. ಇವೆಲ್ಲಾ ಕಾರಣಗಳಿಂದ Ego ಎಂಬ ಕಲ್ಪನೆಯು ಸ್ವಲ್ಪ ಸ್ವಲ್ಪವಾಗಿ ಕರಗತೊಡಗುತ್ತದೆ. ಆದರೂ ಜೀವವಿರುವ ತನಕ ಅದೂ ಇರಬೇಕಲ್ಲ, ಇರುತ್ತದೆ. ಆದರೆ ಭವಿಷ್ಯದ ಕನಸುಗಳನ್ನು ಕಟ್ಟುತ್ತಾ ಮೆರೆಯುವುದಿಲ್ಲ. Ego ಅಥವಾ ಮಮಕಾರವು ಕರಗುತ್ತ ಅಥವಾ ಕಡಿಮೆಯಾಗುತ್ತ ಹೋಗುವುದರಿಂದ ದೇಹದ ವಿಷಯದಲ್ಲಿ ಮನಸ್ಸು ಸ್ವಲ್ಪ ಉದಾಸೀನವಾಗ ತೊಡಗುತ್ತದೆ. ಮೂವತ್ತರ ಯೌವನದಲ್ಲಿ ಕಣ್ಣಿಗೆ ತುಸು ಬೇರೆಯಾದರೆ, ದೃಷ್ಟಿಯು ಎಲ್ಲಿ ಇಂಗಿ ಹೋಗುತ್ತೋ ಎಂದು ಕಾತರನಾಗುತ್ತಾನೆ. ಹತ್ತೂ ವೈದ್ಯರ ಬಳಿಗೆ ಹೋಗಿ ಚಿಕಿತ್ಸೆಯನ್ನು ಪಡೆಯುತ್ತಾನೆ. ಆದರೆ ಆರೇಳು ದಶಕಗಳು ಮೀರಿದ ಮುದುಕನಿಗೆ ದೃಷ್ಟಿಯು ಕಣ್ಣ ಪೊರೆಯಿಂದ ಮಂದವಾದರೆ, ತತ್‌ಕ್ಷಣ ಚಿಕಿತ್ಸೆಗೆ ಹೋಗುವುದಿಲ್ಲ. ಆಗ ಸ್ವಂತ ಅಗತ್ಯಗಳಿಗೆ ಸಾಕಾದಷ್ಟು ದೃಷ್ಟಿಯು ಇನ್ನೂ ಇದೆಯಲ್ಲ ; ಸಿನಿಮಾಕ್ಕೆ ಹೋಗುವುದು ಸಾಧ್ಯವಿಲ್ಲ ; ಬೇಡವೇ ಬೇಡ ; ನಾಟಕಗಳನ್ನು ನೋಡಲು ಆಗುವುದಿಲ್ಲ ; ನೋಡದೆ ಇದ್ದರೆ ಕಳೆದುಕೊಂಡಿದ್ದೇನು? ಈ ರೀತಿ ಮನಸ್ಸು ನಡೆಯ ತೊಡಗುತ್ತದೆ. ಕಡೆಗೊಮ್ಮೆ ಆಪರೇಷನ್ ಮಾಡಿಸಲು ನಿರ್ಧರಿಸಿದಾಗ, ಶಸ್ತ್ರ ಚಿಕಿತ್ಸೆಯ ಭಯವು ವಯಸ್ಕರಲ್ಲಿದ್ದಂತೆ ಅತಿಯಾಗಿರುವುದಿಲ್ಲ. ಈಗಲೂ ಕಣ್ಣು ಕುರುಡು ; ಮಸಲಾ ಆಪರೇಷನ್ ಸಫಲವಾಗದೆ ಇದ್ದರೆ, ಮೊದಲಿದ್ದ ಕುರುಡು ಮುಂದುವರೆಯುತ್ತದೆ. ಕಳೆದು ಕೊಳ್ಳುವುದಾದರೂ ಏನನ್ನು? ದೃಷ್ಟಿಯು ಪುನಃ ಬರಬಹುದು ಎಂಬ ಆಸೆಯನ್ನು, ಅಷ್ಟೇ ತಾನೆ ? ಎನ್ನುವ ಉದಾಸೀನ ಭಾವನೆಯು ಉಂಟಾಗುತ್ತದೆ. ವಯಸ್ಕರಲ್ಲಿ ಕಂಡುಬರುವ ಬೇನೆಯ ಕಾತರಗಳು, ಮುಪ್ಪಿನಲ್ಲಿ ಕಡಿಮೆಯಾಗಿರುತ್ತವೆ. ಬೇನೆಯ ಫಲವಾಗಿ ಮುಂದೆ ಬೃಹನ್ನಳೆಯಾಗಬಹುದು ಎಂದು ವಯಸ್ಕನಿಗೆ ತಿಳಿದರೆ, ಆತಂಕವು ಅತಿ ಹೆಚ್ಚಾಗಿ<noinclude></noinclude> 5g1vihsoiia8iwi4afhzq1jriagmozn 317231 317217 2026-05-05T11:56:13Z Shreelatha.Halemane 7642 /* Validated */ 317231 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೩೪೬}}{{Right|ಮನಮಂಥನ}} ಭಯವು ಕಾಡುತ್ತದೆ. ಆ ಸ್ನೇಹಿತನು ಅರ್ಬುದ ರೋಗದಿಂದ ತುಂಬ ನರಳಿ ಸತ್ತ, ಆ ಗೆಳೆಯನಿಗೆ ಲಕ್ವಾ ಬಡಿದು, ನಾಯಿಪಾಡನ್ನು ಅನುಭವಿಸುತ್ತಿದ್ದಾನೆ. ಪಾಪ, ನನ್ನ ಸ್ನೇಹಿತನ ಕಣ್ಣುಗಳೆರಡೂ ಆಪರೇಷನ್ ಆದನಂತರ, ಇಂಗಿಯೇ ಹೋದುವಂತೆ ; ಹೀಗೆ ಸುತ್ತಲೂ ನಡೆದ ಘಟನೆಗಳನ್ನು ಕಂಡು, ನನಗೂ ಹಾಗೆ ಆಗುತ್ತೇನೋ ಎನ್ನುವ ಭಯವು ಮುತ್ತುತ್ತದೆ, ಕಾಡುತ್ತದೆ. ನರಳಿ ಸಾಯುವ ಕಾಲವು ಹತ್ತಿರ ಹತ್ತಿರವಾಗುತ್ತಿದೆ ಎನ್ನುವ ವಾಸ್ತವಿಕತೆಯು ಸ್ಪಷ್ಟವಾಗತೊಡಗುತ್ತದೆ. ಬಯಸಿದಂತೆ ಬಾಳಲು ಹೇಗೆ ಸಾಧ್ಯವಿಲ್ಲವೋ, ಬಯಸಿದಂತೆ ಸಾಯುವುದೂ ಸಾಧ್ಯವಿಲ್ಲ ಎಂಬುದೂ ತಿಳಿದಿರುತ್ತದೆ. {{gap}}ಇವೆಲ್ಲಾ ಕಾರಣಗಳಿಂದ Ego ಎಂಬ ಕಲ್ಪನೆಯು ಸ್ವಲ್ಪ ಸ್ವಲ್ಪವಾಗಿ ಕರಗತೊಡಗುತ್ತದೆ. ಆದರೂ ಜೀವವಿರುವ ತನಕ ಅದೂ ಇರಬೇಕಲ್ಲ, ಇರುತ್ತದೆ. ಆದರೆ ಭವಿಷ್ಯದ ಕನಸುಗಳನ್ನು ಕಟ್ಟುತ್ತಾ ಮೆರೆಯುವುದಿಲ್ಲ. {{gap}}Ego ಅಥವಾ ಮಮಕಾರವು ಕರಗುತ್ತ ಅಥವಾ ಕಡಿಮೆಯಾಗುತ್ತ ಹೋಗುವುದರಿಂದ ದೇಹದ ವಿಷಯದಲ್ಲಿ ಮನಸ್ಸು ಸ್ವಲ್ಪ ಉದಾಸೀನವಾಗ ತೊಡಗುತ್ತದೆ. {{gap}}ಮೂವತ್ತರ ಯೌವನದಲ್ಲಿ ಕಣ್ಣಿಗೆ ತುಸು ಬೇರೆಯಾದರೆ, ದೃಷ್ಟಿಯು ಎಲ್ಲಿ ಇಂಗಿ ಹೋಗುತ್ತೋ ಎಂದು ಕಾತರನಾಗುತ್ತಾನೆ. ಹತ್ತೂ ವೈದ್ಯರ ಬಳಿಗೆ ಹೋಗಿ ಚಿಕಿತ್ಸೆಯನ್ನು ಪಡೆಯುತ್ತಾನೆ. ಆದರೆ ಆರೇಳು ದಶಕಗಳು ಮೀರಿದ ಮುದುಕನಿಗೆ ದೃಷ್ಟಿಯು ಕಣ್ಣ ಪೊರೆಯಿಂದ ಮಂದವಾದರೆ, ತತ್‌ಕ್ಷಣ ಚಿಕಿತ್ಸೆಗೆ ಹೋಗುವುದಿಲ್ಲ. ಆಗ ಸ್ವಂತ ಅಗತ್ಯಗಳಿಗೆ ಸಾಕಾದಷ್ಟು ದೃಷ್ಟಿಯು ಇನ್ನೂ ಇದೆಯಲ್ಲ ; ಸಿನಿಮಾಕ್ಕೆ ಹೋಗುವುದು ಸಾಧ್ಯವಿಲ್ಲ ; ಬೇಡವೇ ಬೇಡ ; ನಾಟಕಗಳನ್ನು ನೋಡಲು ಆಗುವುದಿಲ್ಲ ; ನೋಡದೆ ಇದ್ದರೆ ಕಳೆದುಕೊಂಡಿದ್ದೇನು? ಈ ರೀತಿ ಮನಸ್ಸು ನಡೆಯ ತೊಡಗುತ್ತದೆ. ಕಡೆಗೊಮ್ಮೆ ಆಪರೇಷನ್ ಮಾಡಿಸಲು ನಿರ್ಧರಿಸಿದಾಗ, ಶಸ್ತ್ರ ಚಿಕಿತ್ಸೆಯ ಭಯವು ವಯಸ್ಕರಲ್ಲಿದ್ದಂತೆ ಅತಿಯಾಗಿರುವುದಿಲ್ಲ. ಈಗಲೂ ಕಣ್ಣು ಕುರುಡು ; ಮಸಲಾ ಆಪರೇಷನ್ ಸಫಲವಾಗದೆ ಇದ್ದರೆ, ಮೊದಲಿದ್ದ ಕುರುಡು ಮುಂದುವರೆಯುತ್ತದೆ. ಕಳೆದು ಕೊಳ್ಳುವುದಾದರೂ ಏನನ್ನು? ದೃಷ್ಟಿಯು ಪುನಃ ಬರಬಹುದು ಎಂಬ ಆಸೆಯನ್ನು, ಅಷ್ಟೇ ತಾನೆ ? ಎನ್ನುವ ಉದಾಸೀನ ಭಾವನೆಯು ಉಂಟಾಗುತ್ತದೆ. ವಯಸ್ಕರಲ್ಲಿ ಕಂಡುಬರುವ ಬೇನೆಯ ಕಾತರಗಳು, ಮುಪ್ಪಿನಲ್ಲಿ ಕಡಿಮೆಯಾಗಿರುತ್ತವೆ. ಬೇನೆಯ ಫಲವಾಗಿ ಮುಂದೆ ಬೃಹನ್ನಳೆಯಾಗಬಹುದು ಎಂದು ವಯಸ್ಕನಿಗೆ ತಿಳಿದರೆ, ಆತಂಕವು ಅತಿ ಹೆಚ್ಚಾಗಿ<noinclude></noinclude> gfiytq7kn325avwtw66zql36b7tk3iu ಪುಟ:ಮನಮಂಥನ.pdf/೩೬೫ 104 62812 317218 314617 2026-05-05T11:48:17Z Shreesha Sharma 7840 /* Proofread */ 317218 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೪೭}} ಅವ ಆತ್ಮಹತ್ಯೆಯನ್ನೂ ಮಾಡಿಕೊಳ್ಳಬಹುದು. ಆದರೆ ಮುದುಕರಲ್ಲಿ ಹೀಗಾದರೆ, ಕಾತರಕ್ಕೆ ಅವಕಾಶವೇ ಇರುವುದಿಲ್ಲ. ಅಗತ್ಯವೂ ಇರುವುದಿಲ್ಲ. ಬಾಲಕರಲ್ಲಿ Ego ವನ್ನು ಪ್ರಚೋದಿಸುವ ಉತ್ಕಟಾಕಾಂಕ್ಷೆಯು ಸಮಾಜದಲ್ಲಿ ತಾನು ಸ್ವಾವಲಂಬಿಯಾಗಬೇಕು ಎನ್ನುವ ಆಸೆ, ಯೌವನದಲ್ಲಿ ಹಾಗೂ ವಯಸ್ಕರಲ್ಲಿ, ಕಾಮ ಮತ್ತು ಇತರ ಹೆಬ್ಬಯಕೆಗಳು Ego ವನ್ನು ಒದ್ದು ಜಗ್ಗಿ ನಡೆಸುತ್ತವೆ, ಮುದುಕರಲ್ಲಿ ಉದಾಸೀನತೆಯೂ, ಬೇಸರವೂ, Egoವನ್ನು ನಡೆಸುತ್ತದೆ. ಹೆಬ್ಬಯಕೆಗಳು ಮುದುಕರಲ್ಲಿ ಇರವುದಿಲ್ಲ ಎಂದಲ್ಲ. ಆದರೆ ನಮ್ಮ ಕಾಲ ಮುಗಿಯಿತು; ನಮ್ಮ ಮಕ್ಕಳ ಬಾಳಿನಲ್ಲಿ, ನಮ್ಮ ಇಷ್ಟಾರ್ಥಗಳ ಸಾಫಲ್ಯವನ್ನು ಕಂಡು ಸುಖಪಡೋಣ ಎಂಬ ಹೆಬ್ಬಯಕೆಗಳು ಇರುತ್ತವೆ. ಅಂದರೆ Ambition ಅಥವಾ ಹೆಬ್ಬಯಕೆಗಳು, ತಮ್ಮ ಸ್ವಂತ ಬಾಳಿಗೆ ಅನ್ವಯಿಸುತ್ತವೆ. ಸ್ವಾರ್ಥವು, ಸ್ವಲ್ಪಮಟ್ಟಿಗಾದರೂ ಈ ರೀತಿಯಲ್ಲಿ ಪರಾರ್ಥಕ್ಕೆ ಹರಡುತ್ತದೆ ಎನ್ನಬಹುದು. ಮುದುಕರಲ್ಲಿ Ego ವು ಹುಡಿಯಾಗತೊಡಗುತ್ತದೆ, ದೃಢವಾಗಿ ಉಳದಿರುವುದಿಲ್ಲ, ಎನ್ನುವುದಕ್ಕೆ ಮುದುಕರ ಮತ್ತೊಂದು ಸಾಮಾನ್ಯ ನಡವಳಿಕೆಯ ಸಾಕ್ಷ್ಯ ನೀಡುತ್ತದೆ. ವಯಸ್ಕರಲ್ಲಿ ವಿಚಾರಪರ ಮನಸ್ಸು ಯಶಸ್ವಿಯಾಗಿ ಕಾರ್ಯವನ್ನು ಮಾಡುತ್ತದೆ. ಆದರೆ ಭಾವನಾ ಪ್ರದರ್ಶನಗಳನ್ನು ಅವರು ಕಾಣಿಸುವುದಿಲ್ಲ. ಸದೃಢವಾದ ಅವರ Ego ಕೋಟೆಯು, ಭಾವನಾ ಪ್ರದರ್ಶನಗಳು ಬಹಿರಂಗವಾಗಿ ಆಗದಂತೆ ತಡೆ ಹಿಡಿಯುತ್ತದೆ. ಮುಪ್ಪಿನಲ್ಲಿಯಾದರೆ, ಹೃದಯಸ್ಪರ್ಶಿಯಾದ ಕೃತಜ್ಞತೆಯ ಒಂದು ಮಾತನ್ನು ಮಗನೋ, ಶಿಷ್ಯನೋ, ತಂದೆಗೋ, ಗುರುವಿಗೋ, ಹೇಳಿದರೆ ಮುದುಕರು ಬಹಿರಂಗವಾಗಿ, ಯಾವ ಅಡೆ ತಡೆಯೂ ಇಲ್ಲದೆ ಕಣ್ಣೀರು ಹಾಕುತ್ತಾರೆ. ಬಾಲಕರು ಗೋವಿನ ಕತೆಯನ್ನು ಕೇಳಿದಾಗ ಸಹಜವಾದ ಅನುಕಂಪದಿಂದ ಅಳುವಂತೆ, ಮುದುಕರೂ ವಿಶ್ವಾಸದ ಮಾತುಗಳನ್ನು ಕೇಳಿದರೆ ಆನಂದಬಾಷ್ಪವನ್ನು ಸುಲಭವಾಗಿ ಸುರಿಸುತ್ತಾರೆ. ದುಃಖವಾದ ಸುದ್ದಿಯನ್ನು ಕೇಳಿದರೆ ಅತ್ತುಬಿಡುತ್ತಾರೆ, ಮುಪ್ಪಿಗೂ ಮಗುತನಕ್ಕೂ ಬಹಳಷ್ಟು ಹೋಲಿಕೆಗಳಿರುತ್ತವೆ. ಆದುದರಿಂದ ಮುಪ್ಪನ್ನು ಎರಡನೆಯ ಬಾಲ್ಯ ಅಥವಾ ಮಗುತನ ಎನ್ನುವುದು. ತಂದೆ ತಾಯಿಯರಿಗಿಂತ, ಅಜ್ಜ ಅಜ್ಜಿಯರನ್ನು, ಮೊಮ್ಮಕ್ಕಳು ಸದರದಿಂದ ತಬ್ಬಿಕೊಳ್ಳುತ್ತವೆ. ಕಾರಣ, ಸಮಾನವಾದ ಮನೋಧರ್ಮ ಬೆಳೆಯುತ್ತಿರುವ ಬಾಲಕರ ಮನಸ್ಸು ; ಇಳಿಯುತ್ತಿರುವ ಮುದುಕರ ಮನಸ್ಸು ಒಂದು ಹಂತದಲ್ಲಿ ಸಮಾನವಾಗಿರುತ್ತದೆ ಎನ್ನಬಹುದು. ಮುದುಕರಲ್ಲಿ Egoವು ಹುಡಿಯಾಗತೊಡಗುವುದರಿಂದ, ಉದಾಸೀನತೆಯು,<noinclude></noinclude> 8dmryb616jxl5grjfwokbzaa8dheohn 317232 317218 2026-05-05T11:56:43Z Shreelatha.Halemane 7642 /* Validated */ 317232 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೪೭}} ಅವ ಆತ್ಮಹತ್ಯೆಯನ್ನೂ ಮಾಡಿಕೊಳ್ಳಬಹುದು. ಆದರೆ ಮುದುಕರಲ್ಲಿ ಹೀಗಾದರೆ, ಕಾತರಕ್ಕೆ ಅವಕಾಶವೇ ಇರುವುದಿಲ್ಲ. ಅಗತ್ಯವೂ ಇರುವುದಿಲ್ಲ. {{gap}}ಬಾಲಕರಲ್ಲಿ Ego ವನ್ನು ಪ್ರಚೋದಿಸುವ ಉತ್ಕಟಾಕಾಂಕ್ಷೆಯು ಸಮಾಜದಲ್ಲಿ ತಾನು ಸ್ವಾವಲಂಬಿಯಾಗಬೇಕು ಎನ್ನುವ ಆಸೆ, ಯೌವನದಲ್ಲಿ ಹಾಗೂ ವಯಸ್ಕರಲ್ಲಿ, ಕಾಮ ಮತ್ತು ಇತರ ಹೆಬ್ಬಯಕೆಗಳು Ego ವನ್ನು ಒದ್ದು ಜಗ್ಗಿ ನಡೆಸುತ್ತವೆ, ಮುದುಕರಲ್ಲಿ ಉದಾಸೀನತೆಯೂ, ಬೇಸರವೂ, Egoವನ್ನು ನಡೆಸುತ್ತದೆ. ಹೆಬ್ಬಯಕೆಗಳು ಮುದುಕರಲ್ಲಿ ಇರವುದಿಲ್ಲ ಎಂದಲ್ಲ. ಆದರೆ ನಮ್ಮ ಕಾಲ ಮುಗಿಯಿತು; ನಮ್ಮ ಮಕ್ಕಳ ಬಾಳಿನಲ್ಲಿ, ನಮ್ಮ ಇಷ್ಟಾರ್ಥಗಳ ಸಾಫಲ್ಯವನ್ನು ಕಂಡು ಸುಖಪಡೋಣ ಎಂಬ ಹೆಬ್ಬಯಕೆಗಳು ಇರುತ್ತವೆ. ಅಂದರೆ Ambition ಅಥವಾ ಹೆಬ್ಬಯಕೆಗಳು, ತಮ್ಮ ಸ್ವಂತ ಬಾಳಿಗೆ ಅನ್ವಯಿಸುತ್ತವೆ. ಸ್ವಾರ್ಥವು, ಸ್ವಲ್ಪಮಟ್ಟಿಗಾದರೂ ಈ ರೀತಿಯಲ್ಲಿ ಪರಾರ್ಥಕ್ಕೆ ಹರಡುತ್ತದೆ ಎನ್ನಬಹುದು. {{gap}}ಮುದುಕರಲ್ಲಿ Ego ವು ಹುಡಿಯಾಗತೊಡಗುತ್ತದೆ, ದೃಢವಾಗಿ ಉಳದಿರುವುದಿಲ್ಲ, ಎನ್ನುವುದಕ್ಕೆ ಮುದುಕರ ಮತ್ತೊಂದು ಸಾಮಾನ್ಯ ನಡವಳಿಕೆಯ ಸಾಕ್ಷ್ಯ ನೀಡುತ್ತದೆ. ವಯಸ್ಕರಲ್ಲಿ ವಿಚಾರಪರ ಮನಸ್ಸು ಯಶಸ್ವಿಯಾಗಿ ಕಾರ್ಯವನ್ನು ಮಾಡುತ್ತದೆ. ಆದರೆ ಭಾವನಾ ಪ್ರದರ್ಶನಗಳನ್ನು ಅವರು ಕಾಣಿಸುವುದಿಲ್ಲ. ಸದೃಢವಾದ ಅವರ Ego ಕೋಟೆಯು, ಭಾವನಾ ಪ್ರದರ್ಶನಗಳು ಬಹಿರಂಗವಾಗಿ ಆಗದಂತೆ ತಡೆ ಹಿಡಿಯುತ್ತದೆ. ಮುಪ್ಪಿನಲ್ಲಿಯಾದರೆ, ಹೃದಯಸ್ಪರ್ಶಿಯಾದ ಕೃತಜ್ಞತೆಯ ಒಂದು ಮಾತನ್ನು ಮಗನೋ, ಶಿಷ್ಯನೋ, ತಂದೆಗೋ, ಗುರುವಿಗೋ, ಹೇಳಿದರೆ ಮುದುಕರು ಬಹಿರಂಗವಾಗಿ, ಯಾವ ಅಡೆ ತಡೆಯೂ ಇಲ್ಲದೆ ಕಣ್ಣೀರು ಹಾಕುತ್ತಾರೆ. ಬಾಲಕರು ಗೋವಿನ ಕತೆಯನ್ನು ಕೇಳಿದಾಗ ಸಹಜವಾದ ಅನುಕಂಪದಿಂದ ಅಳುವಂತೆ, ಮುದುಕರೂ ವಿಶ್ವಾಸದ ಮಾತುಗಳನ್ನು ಕೇಳಿದರೆ ಆನಂದಬಾಷ್ಪವನ್ನು ಸುಲಭವಾಗಿ ಸುರಿಸುತ್ತಾರೆ. ದುಃಖವಾದ ಸುದ್ದಿಯನ್ನು ಕೇಳಿದರೆ ಅತ್ತುಬಿಡುತ್ತಾರೆ, ಮುಪ್ಪಿಗೂ ಮಗುತನಕ್ಕೂ ಬಹಳಷ್ಟು ಹೋಲಿಕೆಗಳಿರುತ್ತವೆ. ಆದುದರಿಂದ ಮುಪ್ಪನ್ನು ಎರಡನೆಯ ಬಾಲ್ಯ ಅಥವಾ ಮಗುತನ ಎನ್ನುವುದು. ತಂದೆ ತಾಯಿಯರಿಗಿಂತ, ಅಜ್ಜ ಅಜ್ಜಿಯರನ್ನು, ಮೊಮ್ಮಕ್ಕಳು ಸದರದಿಂದ ತಬ್ಬಿಕೊಳ್ಳುತ್ತವೆ. ಕಾರಣ, ಸಮಾನವಾದ ಮನೋಧರ್ಮ ಬೆಳೆಯುತ್ತಿರುವ ಬಾಲಕರ ಮನಸ್ಸು ; ಇಳಿಯುತ್ತಿರುವ ಮುದುಕರ ಮನಸ್ಸು ಒಂದು ಹಂತದಲ್ಲಿ ಸಮಾನವಾಗಿರುತ್ತದೆ ಎನ್ನಬಹುದು. {{gap}}ಮುದುಕರಲ್ಲಿ Egoವು ಹುಡಿಯಾಗತೊಡಗುವುದರಿಂದ, ಉದಾಸೀನತೆಯು,<noinclude></noinclude> grxxfctm7p7tya5k19d7xw8eexifn4r ಪುಟ:ಮನಮಂಥನ.pdf/೩೬೬ 104 62813 317233 314618 2026-05-05T11:58:20Z Shreelatha.Halemane 7642 /* Proofread */ 317233 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೩೪೮}}{{Right|ಮನಮಂಥನ}} ಮತ್ತು ಬೇಸರವು ಹೆಚ್ಚಾಗುತ್ತದೆ. ಯಾವುದರಲ್ಲಿ ಉದಾಸೀನತೆ ? ಯಾವ ವಿಷಯದಲ್ಲಿ ಬೇಸರವು ? ಲೌಕಿಕವಾದ, ಈ ಬಾಳಿನ ವಿಷಯಗಳಲ್ಲಿ ಉದಾಸೀನತೆ, ಮತ್ತು ಬೇಸರ. ಆದರೆ Ego ವು ಕೃಶವಾಗುವಾಗ ಈ ಲೋಕದ ಹೊರಗಿರುವ, ಇರಬಹುದಾದ ವಿಷಯಗಳಲ್ಲಿ ಆಸಕ್ತಿಯು ಪ್ರಬಲವಾಗುತ್ತದೆ. ಭಜನೆ, ಹರಿಕತೆ, ತೀರ್ಥಯಾತ್ರೆ ದೇವಸ್ಥಾನ, ಪ್ರವಚನ, ಮತ ಸಂಬಂಧವಾದ ಪುಸ್ತಕಗಳು, ಇವೆಲ್ಲವೂ ಮುದುಕನ ಆಸಕ್ತಿಯನ್ನು ಸೆರೆಹಿಡಿಯುತ್ತವೆ. ಇದು ಏಕೆ ಮತ್ತು ಹೇಗೆ? ಮುಪ್ಪಿನಲ್ಲಿ Super-Ego ಯಾವ ರೀತಿಯ ಪ್ರಭಾವನ್ನು ಬೀರುತ್ತದೆ, ಎಂಬುದನ್ನು ಅರಿಯುವ ಶೈಶವದಿಂದ ಪ್ರಾರಂಭವಾಗಿ ಬಾಲ್ಯ ಮತ್ತು ಕೌಮಾರ ವಯಸ್ಸುಗಳಲ್ಲಿ Super-Ego ಅಥವಾ ಮನಸ್ಸಿನ ಸತ್-ಚೈತನ್ಯಾಂಶವು ರೂಢಿಸಲ್ಪಡುತ್ತದೆ ದೃಢವಾಗತೊಡಗುತ್ತದೆ ಎಂಬುದನ್ನು ತಿಳಿದೆವು. ಹುಟ್ಟಿದ ಮನೆಯಲ್ಲಿ, ಕಲಿತ ಶಾಲೆಯಲ್ಲಿ ; ಜೀವಿಸುತ್ತಿರುವ ಸಮಾಜದಲ್ಲಿ ; Super- Ego ವನ್ನು ಬೆಳಸುವ ಪಾಠಗಳನ್ನು ಕಲಿಯುತ್ತಾನೆ. ಹಿರಿಯರ ಅನುಕರಣೆಯಿಂದ; ದೊಡ್ಡವರ ಮೆಚ್ಚುಗೆಯನ್ನು ಪಡೆಯಬೇಕೆಂಬ ಸಹಜ ಹಂಬಲದಿಂದ, ಹಾಗೂ ಶಿಕ್ಷೆಯನ್ನು ತಪ್ಪಿಸಿಕೊಳ್ಳಬೇಕು ಎಂಬ ಸಹಜ ಪ್ರವೃತ್ತಿಯಿಂದ, ಶಿಕ್ಷಣವನ್ನು ಪಡೆಯುತ್ತಾನೆ. ತಾನು ಬದುಕಿ ಬಾಳಬೇಕಾದ ಸಮಾಜವು ಬಿಗಿಯಾಗಿಯೂ ದೃಢವಾಗಿಯೂ ಇದ್ದರೆ, ಆಗ ಅದು ತನಗೆ ರಕ್ಷಣೆಯನ್ನು ನೀಡುತ್ತದೆ ಎಂಬುದನ್ನು ತಿಳಿಯುತ್ತಾನೆ. ಸಮಾಜವು ದೃಢವಾಗಿರಬೇಕಾದರೆ, ತನ್ನ ಪಾತ್ರವನ್ನು ಹೊಣೆಗಾರಿಕೆಯಿಂದ ನಿರ್ವಹಿಸಬೇಕು ಎಂಬುದನ್ನು ಅರಿಯುತ್ತಾನೆ. ವ್ಯಕ್ತಿಯ ಮನಸ್ಸು, ಇದನ್ನು ಅರಿತಾಗ ಅದರಂತೆ ಅವ ನಡೆದುಕೊಂಡಾಗ Super-Ego ಅಥವಾ ಮನಸ್ಸಿನ ಸತ್-ಚೈತನ್ಯಾಂಶವು ಪ್ರಬಲವಾಗಿದೆ ಎಂದನ್ನಬಹುದು. ವ್ಯಕ್ತಿಯ Id ಮತ್ತು Ego ಅಥವಾ ತಮೋ ಮತ್ತು ರಜೋಗುಣಗಳ ಮೇಲೆ ಶಿಕ್ಷಿಸುವ ಶಕ್ತಿಯನ್ನು ಹತೋಟಿಯಲ್ಲಿಟ್ಟುಕೊಳ್ಳುವ ಸಾಮರ್ಥ್ಯವನ್ನೂ. Super-Ego ಸಂಪಾದಿಸಿಕೊಳ್ಳುತ್ತದೆ. ಹಾಗಾದಾಗ ಸಮಾಜ ವಿಚ್ಛಿದ್ರಕವಾದ, ಹಾಗೂ ಕೇವಲ ಸ್ವಾರ್ಥಿಯಾದ Id-Ego ಒಕ್ಕೂಟದ ಸ್ವಚ್ಛಾ ಪ್ರವೃತ್ತಿಯನ್ನು ಕಟ್ಟು ನಿಟ್ಟಿನಲ್ಲಿಡಬಹುದು. ಆದುದರಿಂದ Super-Ego ವನ್ನು ಮನಸ್ಸಿನ ಸತ್ ಚೈತನ್ಯಾಂಶ ಎಂದು ಕರೆಯುವುದು. ಸಮಾಜದ ಭದ್ರತೆಯನ್ನು ರಕ್ಷಿಸುವುದೇ ಇದರ ಧ್ಯೇಯ. ಮುಪ್ಪಿನಲ್ಲಿ ದೇಹವು ಶಿಥಿಲವಾಗಿರುತ್ತದೆ. ಆದಕಾರಣ Id-Ego ಒಕ್ಕೂಟದ,<noinclude></noinclude> 0zdwgc02k6547wzxjjyegps4sordgku ಪುಟ:ನನ್ನ ನಲ್ಲ.pdf/೩೩ 104 75430 317042 291462 2026-05-04T15:04:46Z Shreelatha.Halemane 7642 317042 proofread-page text/x-wiki <noinclude><pagequality level="3" user="Shreelatha.Halemane" />{{Left|೧೦}}{{Right|ನನ್ನ ನಲ್ಲ}}</noinclude>ಹರಳು-ಮುತ್ತಿನ ರಾಶಿ ಸೆರೆಸೊರೆ ಮುಗಿಲಲ್ಲಿ ಅಂತರದೊಳೆತ್ತಿ ತೇಲಿಸುವ ಶಕ್ತಿ| ಹೊರಳಿ ನೋಡೆನ್ನ ಸ್ಥಿತಿ ಸೂರ್ಯಚಂದ್ರರ ಕಣ್ಣು ತೆರೆದು ನೋಡೆನ್ನ ಗತಿ ಹೇಳೆ ಯುಕ್ತಿ ||೧೧|| ತೀರ ಸನಿಯೆಂದರೂ ತೀರ ದೂರದೊಳಿರುವ ಸಾವಿರಜ್ಜಿದ ಗಾವುದಂಗಳಾಚೆ | ತೋರಿ ನಗೆಬೀರಿ ನೀನೇನು ಹೇಳುವಿ ಚಿಕ್ಕೆ ಏನೆಂದು ಭಾವಿಸಲಿದೇನು ಸೂಚಿ ?||೧೨|| ತೊರಲಾರದ ಗಾಳಿ ತಟ್ಟಿ ತಿಳಿಸುವಿಯೇನು ಯಾವ ನಾಡಿನ ಸೀಮೆ ಸುಳಿದು ಬಂದೆ ? ಮೀರಿತೆನ್ನಯ ತಾಪ ಆರಿಸೆನ್ನಯ ತಂದೆ ನನ್ನರಾಯನ ಸುದ್ದಿ ಸಾರು ಇಂದೆ||೧೩|| ಹಗಲು ನೆರಳಿನ ನಾರಿ ಮುಗಿಲು ಮುಚ್ಚಿದ ನಾರಿ ಇರುಳಲ್ಲಿ ಕಗ್ಗಕತ್ತಲೆಯ ನಾರಿ | ಮಿಗಿಲು ಮಾಟದ ನಾರಿ ತೋರೆ ನಲ್ಲನ ದಾರಿ ಕಾಳಿ ಕಿಂಕಾಳಿ ನೀ ಮರುಕದೋರಿ||೧೪|| ನಿದ್ರಿಸುವ ಕತ್ತಲೆಯೆ ಕನಸಿಡುವ ತಿಳಿಬೆಳಕೆ ಜಾಗ್ರತದ ಕಿಚ್ಚೆ ನೀನಾರೆ ಹೇಳು ನಿದ್ರೆಬಾರದೆ ನಿಂತು ಸೋತು ಸಣ್ಣಾಗಿಹೆನು ರಾಜರಾಜನ ಠಾವ ತೋರಿಸೇಳು||೧೫|| ಕಣ್ಣು ಮುಚ್ಚಲು ಮಣ್ಣು ಕಣ್ಣು ಬಿಚ್ಚಲು ಬಣ್ಣ ಕಣ್ಣಿನಾಚೆಯ ನಿನ್ನ ರೂಪವರಿಯೆ | ಹಣ್ಣಾದೆ ಸುಣ್ಣಾದೆ ಸಣ್ಣಾದೆ ಕಳವಳಿಸಿ ಮರೆತು ಮಲಗಿದ ದೊರೆಯ ತೋರೆ ಸಿರಿಯ||೧೬||<noinclude></noinclude> dlc8fepavfwujfpoljf5jh4pvikdr4i 317049 317042 2026-05-04T16:33:31Z Pragathi. BH 7585 /* Validated */ 317049 proofread-page text/x-wiki <noinclude><pagequality level="4" user="Pragathi. BH" />{{Left|೧೦}}{{Right|ನನ್ನ ನಲ್ಲ}}</noinclude>ಹರಳು-ಮುತ್ತಿನ ರಾಶಿ ಸೆರೆಸೊರೆ ಮುಗಿಲಲ್ಲಿ ಅಂತರದೊಳೆತ್ತಿ ತೇಲಿಸುವ ಶಕ್ತಿ| ಹೊರಳಿ ನೋಡೆನ್ನ ಸ್ಥಿತಿ ಸೂರ್ಯಚಂದ್ರರ ಕಣ್ಣು ತೆರೆದು ನೋಡೆನ್ನ ಗತಿ ಹೇಳೆ ಯುಕ್ತಿ ||೧೧|| ತೀರ ಸನಿಯೆಂದರೂ ತೀರ ದೂರದೊಳಿರುವ ಸಾವಿರಜ್ಜಿದ ಗಾವುದಂಗಳಾಚೆ | ತೋರಿ ನಗೆಬೀರಿ ನೀನೇನು ಹೇಳುವಿ ಚಿಕ್ಕೆ ಏನೆಂದು ಭಾವಿಸಲಿದೇನು ಸೂಚಿ ?||೧೨|| ತೊರಲಾರದ ಗಾಳಿ ತಟ್ಟಿ ತಿಳಿಸುವಿಯೇನು ಯಾವ ನಾಡಿನ ಸೀಮೆ ಸುಳಿದು ಬಂದೆ ? ಮೀರಿತೆನ್ನಯ ತಾಪ ಆರಿಸೆನ್ನಯ ತಂದೆ ನನ್ನರಾಯನ ಸುದ್ದಿ ಸಾರು ಇಂದೆ||೧೩|| ಹಗಲು ನೆರಳಿನ ನಾರಿ ಮುಗಿಲು ಮುಚ್ಚಿದ ನಾರಿ ಇರುಳಲ್ಲಿ ಕಗ್ಗಕತ್ತಲೆಯ ನಾರಿ | ಮಿಗಿಲು ಮಾಟದ ನಾರಿ ತೋರೆ ನಲ್ಲನ ದಾರಿ ಕಾಳಿ ಕಿಂಕಾಳಿ ನೀ ಮರುಕದೋರಿ||೧೪|| ನಿದ್ರಿಸುವ ಕತ್ತಲೆಯೆ ಕನಸಿಡುವ ತಿಳಿಬೆಳಕೆ ಜಾಗ್ರತದ ಕಿಚ್ಚೆ ನೀನಾರೆ ಹೇಳು ನಿದ್ರೆಬಾರದೆ ನಿಂತು ಸೋತು ಸಣ್ಣಾಗಿಹೆನು ರಾಜರಾಜನ ಠಾವ ತೋರಿಸೇಳು||೧೫|| ಕಣ್ಣು ಮುಚ್ಚಲು ಮಣ್ಣು ಕಣ್ಣು ಬಿಚ್ಚಲು ಬಣ್ಣ ಕಣ್ಣಿನಾಚೆಯ ನಿನ್ನ ರೂಪವರಿಯೆ | ಹಣ್ಣಾದೆ ಸುಣ್ಣಾದೆ ಸಣ್ಣಾದೆ ಕಳವಳಿಸಿ ಮರೆತು ಮಲಗಿದ ದೊರೆಯ ತೋರೆ ಸಿರಿಯ||೧೬||<noinclude></noinclude> gtomxn9qm6d73f0ohja2nj83g3b5bpl 317051 317049 2026-05-04T16:35:01Z Pragathi. BH 7585 317051 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೦|right=ನನ್ನ ನಲ್ಲ}}</noinclude><poem> ಹರಳು-ಮುತ್ತಿನ ರಾಶಿ ಸೆರೆಸೊರೆ ಮುಗಿಲಲ್ಲಿ ಅಂತರದೊಳೆತ್ತಿ ತೇಲಿಸುವ ಶಕ್ತಿ| ಹೊರಳಿ ನೋಡೆನ್ನ ಸ್ಥಿತಿ ಸೂರ್ಯಚಂದ್ರರ ಕಣ್ಣು ತೆರೆದು ನೋಡೆನ್ನ ಗತಿ ಹೇಳೆ ಯುಕ್ತಿ ||೧೧|| ತೀರ ಸನಿಯೆಂದರೂ ತೀರ ದೂರದೊಳಿರುವ ಸಾವಿರಜ್ಜಿದ ಗಾವುದಂಗಳಾಚೆ | ತೋರಿ ನಗೆಬೀರಿ ನೀನೇನು ಹೇಳುವಿ ಚಿಕ್ಕೆ ಏನೆಂದು ಭಾವಿಸಲಿದೇನು ಸೂಚಿ ?||೧೨|| ತೊರಲಾರದ ಗಾಳಿ ತಟ್ಟಿ ತಿಳಿಸುವಿಯೇನು ಯಾವ ನಾಡಿನ ಸೀಮೆ ಸುಳಿದು ಬಂದೆ ? ಮೀರಿತೆನ್ನಯ ತಾಪ ಆರಿಸೆನ್ನಯ ತಂದೆ ನನ್ನರಾಯನ ಸುದ್ದಿ ಸಾರು ಇಂದೆ||೧೩|| ಹಗಲು ನೆರಳಿನ ನಾರಿ ಮುಗಿಲು ಮುಚ್ಚಿದ ನಾರಿ ಇರುಳಲ್ಲಿ ಕಗ್ಗಕತ್ತಲೆಯ ನಾರಿ | ಮಿಗಿಲು ಮಾಟದ ನಾರಿ ತೋರೆ ನಲ್ಲನ ದಾರಿ ಕಾಳಿ ಕಿಂಕಾಳಿ ನೀ ಮರುಕದೋರಿ||೧೪|| ನಿದ್ರಿಸುವ ಕತ್ತಲೆಯೆ ಕನಸಿಡುವ ತಿಳಿಬೆಳಕೆ ಜಾಗ್ರತದ ಕಿಚ್ಚೆ ನೀನಾರೆ ಹೇಳು ನಿದ್ರೆಬಾರದೆ ನಿಂತು ಸೋತು ಸಣ್ಣಾಗಿಹೆನು ರಾಜರಾಜನ ಠಾವ ತೋರಿಸೇಳು||೧೫|| ಕಣ್ಣು ಮುಚ್ಚಲು ಮಣ್ಣು ಕಣ್ಣು ಬಿಚ್ಚಲು ಬಣ್ಣ ಕಣ್ಣಿನಾಚೆಯ ನಿನ್ನ ರೂಪವರಿಯೆ | ಹಣ್ಣಾದೆ ಸುಣ್ಣಾದೆ ಸಣ್ಣಾದೆ ಕಳವಳಿಸಿ ಮರೆತು ಮಲಗಿದ ದೊರೆಯ ತೋರೆ ಸಿರಿಯ||೧೬|| </poem><noinclude></noinclude> 5mppiavpi8wb4z12c6lf54qat4zr01n ಪುಟ:ನನ್ನ ನಲ್ಲ.pdf/೩೪ 104 75431 317060 291463 2026-05-04T16:46:34Z Pragathi. BH 7585 /* Validated */ 317060 proofread-page text/x-wiki <noinclude><pagequality level="4" user="Pragathi. BH" />{{Left|ನನ್ನ ನಲ್ಲ}} {{Right|೧೧}}</noinclude><poem> ಕಣ್ಣ ಕಿಂಡಿಯ ಒಳಗೆ ಹಣಿಕೆ ಹಾಕುವ ಜಾಣಿ ಒಳಗೆ ಜೀವದ ಬೆನ್ನು ಬಡಿವ ಜಾಣೀ | ಕಣ್ಣುಗಾಣದೆ ನಾನು ಕೊರಿ ಸಂಕಟಬಡುವೆ ಚೆಲುವ ಚೆನ್ನಗನೆಡೆಯ ತೋರೆ ರಾಣೇ||೧೭|| ತರುವೆ ನೀ ಹೇಳೆನಗೆ ಮರವೆ ನೀ ಹೇಳೆನಗೆ ಕಲ್ಲೆ ಕೊರಡೇ ನೆಲೆಯ ಹೇಳಿರೆನಗೆ | ಮೊರೆವ “ಕಾಮಾರ್ತಾಹಿ ಪ್ರಕೃತಿ ಕೃಪಣಾಶ್ವೇತ ನಾಚೇತನೇಷು” ವೆಂಬಂತೆ ನಿಮಗೆ||೧೮|| ನನ್ನ ಕಣ್ಣೀರಿನಲಿ ಕಲ್ಲು ಕರಗುತಲಿಹುದು ನನ್ನೊಡನೆ ದಿಕ್ಕು ದನಿಗುಡತಲಿಹುದು | ನನ್ನ ನಿಟ್ಟುಸಿರಿನಲಿ ಬನವು ಬಾಡುತಲಿಹುದು ಕರುಳೆಂಬ ಕರುಳೇಕೆ ಕರಗಬಹುದು||೧೯|| ಬರುವದೇನುಂಟೊಮ್ಮೆ ಬರುವಕಾಲಕೆ ಬಹುದು ಬಯಕೆ ಬರುವದರ ಕಣ್ಸನ್ನೆ ಕಾಣೋ । ಅರಿಯದಾ ಹವಣಿಕೆಯು ಜೀವಜೀವನ ಲೀಲೆ ದೇವದೇವನ ಗೂಢ ವಿಧಿಯು ಕಾಣೋ||೨೦|| {{center|'''೪ನೇ ಎಸಳು'''}} ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ ನಿಶ್ಯಬ್ದವಿದ್ದರೂ ಮೌನವಲ್ಲ | ನಿಸ್ಸೀಮ ನಿಸ್ಸೀಮ ಸೀಮದಲೆ ನಿಸ್ಸೀಮ ನಿಸ್ಸೀಮವೆಂದರೂ ಶೂನ್ಯವಲ್ಲ||೧|| </poem><noinclude></noinclude> k79ezyzyt33x6cx8cdtidc3bbfqq5v5 317061 317060 2026-05-04T16:47:23Z Pragathi. BH 7585 317061 proofread-page text/x-wiki <noinclude><pagequality level="4" user="Pragathi. BH" />{{rh|center=|left=ನನ್ನ ನಲ್ಲ|right=೧೧}}</noinclude><poem> ಕಣ್ಣ ಕಿಂಡಿಯ ಒಳಗೆ ಹಣಿಕೆ ಹಾಕುವ ಜಾಣಿ ಒಳಗೆ ಜೀವದ ಬೆನ್ನು ಬಡಿವ ಜಾಣೀ | ಕಣ್ಣುಗಾಣದೆ ನಾನು ಕೊರಿ ಸಂಕಟಬಡುವೆ ಚೆಲುವ ಚೆನ್ನಗನೆಡೆಯ ತೋರೆ ರಾಣೇ||೧೭|| ತರುವೆ ನೀ ಹೇಳೆನಗೆ ಮರವೆ ನೀ ಹೇಳೆನಗೆ ಕಲ್ಲೆ ಕೊರಡೇ ನೆಲೆಯ ಹೇಳಿರೆನಗೆ | ಮೊರೆವ “ಕಾಮಾರ್ತಾಹಿ ಪ್ರಕೃತಿ ಕೃಪಣಾಶ್ವೇತ ನಾಚೇತನೇಷು” ವೆಂಬಂತೆ ನಿಮಗೆ||೧೮|| ನನ್ನ ಕಣ್ಣೀರಿನಲಿ ಕಲ್ಲು ಕರಗುತಲಿಹುದು ನನ್ನೊಡನೆ ದಿಕ್ಕು ದನಿಗುಡತಲಿಹುದು | ನನ್ನ ನಿಟ್ಟುಸಿರಿನಲಿ ಬನವು ಬಾಡುತಲಿಹುದು ಕರುಳೆಂಬ ಕರುಳೇಕೆ ಕರಗಬಹುದು||೧೯|| ಬರುವದೇನುಂಟೊಮ್ಮೆ ಬರುವಕಾಲಕೆ ಬಹುದು ಬಯಕೆ ಬರುವದರ ಕಣ್ಸನ್ನೆ ಕಾಣೋ । ಅರಿಯದಾ ಹವಣಿಕೆಯು ಜೀವಜೀವನ ಲೀಲೆ ದೇವದೇವನ ಗೂಢ ವಿಧಿಯು ಕಾಣೋ||೨೦|| {{center|'''೪ನೇ ಎಸಳು'''}} ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ ನಿಶ್ಯಬ್ದವಿದ್ದರೂ ಮೌನವಲ್ಲ | ನಿಸ್ಸೀಮ ನಿಸ್ಸೀಮ ಸೀಮದಲೆ ನಿಸ್ಸೀಮ ನಿಸ್ಸೀಮವೆಂದರೂ ಶೂನ್ಯವಲ್ಲ||೧|| </poem><noinclude></noinclude> nh5yv6lp46bhoyc9no76voi4tefc7xn ಪುಟ:ನನ್ನ ನಲ್ಲ.pdf/೩೫ 104 75432 317062 291465 2026-05-04T16:47:42Z Pragathi. BH 7585 /* Validated */ 317062 proofread-page text/x-wiki <noinclude><pagequality level="4" user="Pragathi. BH" />{{Left|೧೨}}{{Right|ನನ್ನ ನಲ್ಲ}}</noinclude> ಬಂತು ಬಂತೆಲೆ ಬಂತು ಬಂತು ಘನಸಿರಿ ಬಂತು ಬಂತೆಂದರೂ ಇದ್ದುದಿದ್ದೇ ಇತ್ತು ! ಬಂತು ಬೆಳಗೆಂಬಂತೆ ಬಂತು ಹೊಳೆ ಬಂದಂತೆ ಇದ್ದದ್ದೆ ತುಂಬಿ ತುಳುತುಳುಕುತಿತ್ತು||೨|| ತುಂಬಿಬಂದಿತು ಕಾಂತಿ ತುಂಬಿಬಂದಿತು ಶಾಂತಿ ತುಂಬಿ ದ್ಯಾವಾಪೃಥಿವಿ ಜೀವ ತುಂಬಿ | ತುಂಬಿತುಳುಕಿತು ಪೊಳ್ಳು ತುಂಬಿತುಳುಕಿತು ಜೊಳ್ಳು ಜಡದೊಡಲ ಜಗಜೀವ ಜ್ಯೋತಿ ತುಂಬಿ||೩|| ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ ನಿಶ್ಯಬ್ದವಿದ್ದರೂ ಮೌನವಲ್ಲ | ನಿಸ್ಸೀಮ ನಿಸ್ಸೀಮ ಸೀಮದಲೆ ನಿಸ್ಸಿಮ ನಿಸ್ಸೀಮವೆಂದರೂ ಶೂನ್ಯವಲ್ಲ||೪|| ದಣಿದು ಮಲಗಿದ ಗಾಳಿ ಮಿಸುಕಲಾರದ ನಸುಕು ದಣಿವಾರಿ ಜೀವ ತಣಿದೇಳ್ವ ನಸುಕು | ಕುಣಿದಪ್ಪಿ ಮರಬಳ್ಳಿ ಬಿಂಕುಬೀರುವ ನಸುಕು ಒಳಹೊರಗೆ ಶಾಂತಿ ಸುರಿಸುರಿವ ನಸುಕು||೫|| ನಿದ್ದೆ ಹರಿಯುವ ಹೊತ್ತು ನಸುಕು ಹರಿಯುವ ಹೊತ್ತು ರಸವಂತಿ ಹೊಳೆಯಾಗಿ ಹರಿವ ಹೊತ್ತು | ಮುದ್ದು ಬೀರುವ ಹೊತ್ತು ಬೇಸರಾರುವ ಹೊತ್ತು ಬಾಸಿಗದ ಸಿಂಗಾರಿ ಬರುವ ಹೊತ್ತು||೬|| ನಸುಬಣ್ಣದಾ ನೆಲವು ಕಿಸುಬಣ್ಣದಾ ದಿಕ್ಕು ನೊರೆಬಣ್ಣ ಮುಗಿಲಸಿರಿಗೇನು ಅಲ್ಲಿ| ಹಸಕು ಕಸುಕಿನ ಹಸುರು ಹಣ್ಣಿನಾ ಹೊಸ ಹಳದಿ ನಸುಕಿನಾ ನೀಲ ಮುಂಜಾವಿನಲ್ಲಿ||೭||<noinclude></noinclude> m9kqrgcjihv8e9l2z2lm8y4zehr3ov1 317063 317062 2026-05-04T16:50:26Z Pragathi. BH 7585 317063 proofread-page text/x-wiki <noinclude><pagequality level="4" user="Pragathi. BH" />{{Left|೧೨}}{{Right|ನನ್ನ ನಲ್ಲ}}</noinclude><poem> ಬಂತು ಬಂತೆಲೆ ಬಂತು ಬಂತು ಘನಸಿರಿ ಬಂತು ಬಂತೆಂದರೂ ಇದ್ದುದಿದ್ದೇ ಇತ್ತು ! ಬಂತು ಬೆಳಗೆಂಬಂತೆ ಬಂತು ಹೊಳೆ ಬಂದಂತೆ ಇದ್ದದ್ದೆ ತುಂಬಿ ತುಳುತುಳುಕುತಿತ್ತು||೨|| ತುಂಬಿಬಂದಿತು ಕಾಂತಿ ತುಂಬಿಬಂದಿತು ಶಾಂತಿ ತುಂಬಿ ದ್ಯಾವಾಪೃಥಿವಿ ಜೀವ ತುಂಬಿ | ತುಂಬಿತುಳುಕಿತು ಪೊಳ್ಳು ತುಂಬಿತುಳುಕಿತು ಜೊಳ್ಳು ಜಡದೊಡಲ ಜಗಜೀವ ಜ್ಯೋತಿ ತುಂಬಿ||೩|| ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ ನಿಶ್ಯಬ್ದವಿದ್ದರೂ ಮೌನವಲ್ಲ | ನಿಸ್ಸೀಮ ನಿಸ್ಸೀಮ ಸೀಮದಲೆ ನಿಸ್ಸೀಮ ನಿಸ್ಸೀಮವೆಂದರೂ ಶೂನ್ಯವಲ್ಲ||೪|| ದಣಿದು ಮಲಗಿದ ಗಾಳಿ ಮಿಸುಕಲಾರದ ನಸುಕು ದಣಿವಾರಿ ಜೀವ ತಣಿದೇಳ್ವ ನಸುಕು | ಕುಣಿದಪ್ಪಿ ಮರಬಳ್ಳಿ ಬಿಂಕುಬೀರುವ ನಸುಕು ಒಳಹೊರಗೆ ಶಾಂತಿ ಸುರಿಸುರಿವ ನಸುಕು||೫|| ನಿದ್ದೆ ಹರಿಯುವ ಹೊತ್ತು ನಸುಕು ಹರಿಯುವ ಹೊತ್ತು ರಸವಂತಿ ಹೊಳೆಯಾಗಿ ಹರಿವ ಹೊತ್ತು | ಮುದ್ದು ಬೀರುವ ಹೊತ್ತು ಬೇಸರಾರುವ ಹೊತ್ತು ಬಾಸಿಗದ ಸಿಂಗಾರಿ ಬರುವ ಹೊತ್ತು||೬|| ನಸುಬಣ್ಣದಾ ನೆಲವು ಕಿಸುಬಣ್ಣದಾ ದಿಕ್ಕು ನೊರೆಬಣ್ಣ ಮುಗಿಲಸಿರಿಗೇನು ಅಲ್ಲಿ| ಹಸಕು ಕಸುಕಿನ ಹಸುರು ಹಣ್ಣಿನಾ ಹೊಸ ಹಳದಿ ನಸುಕಿನಾ ನೀಲ ಮುಂಜಾವಿನಲ್ಲಿ||೭|| </poem><noinclude></noinclude> hjrkkfgptgmn3r5pjv7vffwoa9uudgy 317064 317063 2026-05-04T16:51:01Z Pragathi. BH 7585 317064 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೨|right=ನನ್ನ ನಲ್ಲ}}</noinclude><poem> ಬಂತು ಬಂತೆಲೆ ಬಂತು ಬಂತು ಘನಸಿರಿ ಬಂತು ಬಂತೆಂದರೂ ಇದ್ದುದಿದ್ದೇ ಇತ್ತು ! ಬಂತು ಬೆಳಗೆಂಬಂತೆ ಬಂತು ಹೊಳೆ ಬಂದಂತೆ ಇದ್ದದ್ದೆ ತುಂಬಿ ತುಳುತುಳುಕುತಿತ್ತು||೨|| ತುಂಬಿಬಂದಿತು ಕಾಂತಿ ತುಂಬಿಬಂದಿತು ಶಾಂತಿ ತುಂಬಿ ದ್ಯಾವಾಪೃಥಿವಿ ಜೀವ ತುಂಬಿ | ತುಂಬಿತುಳುಕಿತು ಪೊಳ್ಳು ತುಂಬಿತುಳುಕಿತು ಜೊಳ್ಳು ಜಡದೊಡಲ ಜಗಜೀವ ಜ್ಯೋತಿ ತುಂಬಿ||೩|| ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ ನಿಶ್ಯಬ್ದವಿದ್ದರೂ ಮೌನವಲ್ಲ | ನಿಸ್ಸೀಮ ನಿಸ್ಸೀಮ ಸೀಮದಲೆ ನಿಸ್ಸೀಮ ನಿಸ್ಸೀಮವೆಂದರೂ ಶೂನ್ಯವಲ್ಲ||೪|| ದಣಿದು ಮಲಗಿದ ಗಾಳಿ ಮಿಸುಕಲಾರದ ನಸುಕು ದಣಿವಾರಿ ಜೀವ ತಣಿದೇಳ್ವ ನಸುಕು | ಕುಣಿದಪ್ಪಿ ಮರಬಳ್ಳಿ ಬಿಂಕುಬೀರುವ ನಸುಕು ಒಳಹೊರಗೆ ಶಾಂತಿ ಸುರಿಸುರಿವ ನಸುಕು||೫|| ನಿದ್ದೆ ಹರಿಯುವ ಹೊತ್ತು ನಸುಕು ಹರಿಯುವ ಹೊತ್ತು ರಸವಂತಿ ಹೊಳೆಯಾಗಿ ಹರಿವ ಹೊತ್ತು | ಮುದ್ದು ಬೀರುವ ಹೊತ್ತು ಬೇಸರಾರುವ ಹೊತ್ತು ಬಾಸಿಗದ ಸಿಂಗಾರಿ ಬರುವ ಹೊತ್ತು||೬|| ನಸುಬಣ್ಣದಾ ನೆಲವು ಕಿಸುಬಣ್ಣದಾ ದಿಕ್ಕು ನೊರೆಬಣ್ಣ ಮುಗಿಲಸಿರಿಗೇನು ಅಲ್ಲಿ| ಹಸಕು ಕಸುಕಿನ ಹಸುರು ಹಣ್ಣಿನಾ ಹೊಸ ಹಳದಿ ನಸುಕಿನಾ ನೀಲ ಮುಂಜಾವಿನಲ್ಲಿ||೭|| </poem><noinclude></noinclude> cro71yjk0mto31jpxq36fr3i6pr4lau ಪುಟ:ನನ್ನ ನಲ್ಲ.pdf/೩೬ 104 75433 317065 291466 2026-05-04T16:58:38Z Pragathi. BH 7585 317065 proofread-page text/x-wiki <noinclude><pagequality level="3" user="Shreelatha.Halemane" />{{Left|ನನ್ನ ನಲ್ಲ}}{{Right|೧೩}}</noinclude><poem> ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ {{gap}}ನಿಶ್ಯಬ್ದವಿದ್ದರೂ ಮೌನವಲ್ಲ | ನಿಸ್ಸೀಮ ನಿಸ್ಸೀಮ ಸೀಮದಲೆ ನಿಸ್ಸೀಮ {{gap}}ನಿಸ್ಸೀಮವೆಂದರೂ ಶೂನ್ಯವಲ್ಲ||೮|| ಬಣ್ಣದಾ ಹಣ್ಣುಗಳ ತಿಂದು ತೇಗಲುಬಹುದು {{gap}}ಚಿತ್ರದಾ ಮಲ್ಲಿಗೆಯ ಮೂಸಬಹುದು ಮಣ್ಣುಗೊಂಬೆಯ ಮೆಚ್ಚಿ ಮಾತನಾಡಿಸಬಹುದು {{gap}}ಹೊಗೆಯ ಹೊಳೆ ಈವಾಗ ಈಸಬಹುದು||೯|| ಮನದ ಮಂದಾರವನು ಮೂಸಲಾರೆವು ನಾವು {{gap}}ಕನಸಿನಾ ಕಲ್ಹಾರ ಮೂಸದಿಹೆವೇ ? ಮನದ ಮಂಜಿನ ಮಡುವ ಕನಸು ಕಲ್ಲಾಗಿಸದೆ {{gap}}ಮನಸು ಕನಸಾದಲ್ಲಿ ಮುಸುಕಿನಿರವೇ ?||೧೦|| ಹಗಲುಗನಸಿನ ಸವಿಯು ಇರುಳುಗನಸಿಗೆ ಬಹುದೆ? {{gap}}ಇರುಳಿನದು ಇಲ್ಲದಾ ಸಂತೆ ಕಾಣೋ | ನಗುನಗುತಲೂ ಕನಸು ನೋಡನೋಡುತ ಕನಸು {{gap}}ಬಿಸಿಲಲ್ಲೆ ಬೆಳತಿಗೆಯ ಗುಂತಿ ಕಾಣೋ||೧೧|| ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ {{gap}}ನಿಶ್ಯಬ್ದವಿದ್ದರೂ ಮೌನವಲ್ಲ | ನಿಸ್ಸೀಮ ನಿಸ್ಸೀಮ ಸೀಮದಲೆ ನಿಸ್ಸೀಮ {{gap}}ನಿಸ್ಸೀಮವೆಂದರೂ ಶೂನ್ಯವಲ್ಲ||೧೨|| ಸುತ್ತುಮುತ್ತಲೂ ಸ್ಪರ್ಶ ಒಳಗು ಹೊರಗೂ ಸ್ಪರ್ಶ {{gap}}ಕೆಳಗು ಮೇಲೂ ಸ್ಪರ್ಶ ಮಧುರ ಸ್ಪರ್ಶ | ಅತ್ತ ಹೊರಳಲು ಸ್ಪರ್ಶ ಇತ್ತ ಹೊರಳಲು ಸ್ಪರ್ಶ {{gap}}ಎತ್ತೆತ್ತಲೂ ಸ್ಪರ್ಶ ದಿವ್ಯ ಸ್ಪರ್ಶ||೧೩|| </poem><noinclude></noinclude> rs55s3whbr5igl9fqf2vk0r7t4c0wcu 317066 317065 2026-05-04T16:58:50Z Pragathi. BH 7585 /* Validated */ 317066 proofread-page text/x-wiki <noinclude><pagequality level="4" user="Pragathi. BH" />{{Left|ನನ್ನ ನಲ್ಲ}}{{Right|೧೩}}</noinclude><poem> ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ {{gap}}ನಿಶ್ಯಬ್ದವಿದ್ದರೂ ಮೌನವಲ್ಲ | ನಿಸ್ಸೀಮ ನಿಸ್ಸೀಮ ಸೀಮದಲೆ ನಿಸ್ಸೀಮ {{gap}}ನಿಸ್ಸೀಮವೆಂದರೂ ಶೂನ್ಯವಲ್ಲ||೮|| ಬಣ್ಣದಾ ಹಣ್ಣುಗಳ ತಿಂದು ತೇಗಲುಬಹುದು {{gap}}ಚಿತ್ರದಾ ಮಲ್ಲಿಗೆಯ ಮೂಸಬಹುದು ಮಣ್ಣುಗೊಂಬೆಯ ಮೆಚ್ಚಿ ಮಾತನಾಡಿಸಬಹುದು {{gap}}ಹೊಗೆಯ ಹೊಳೆ ಈವಾಗ ಈಸಬಹುದು||೯|| ಮನದ ಮಂದಾರವನು ಮೂಸಲಾರೆವು ನಾವು {{gap}}ಕನಸಿನಾ ಕಲ್ಹಾರ ಮೂಸದಿಹೆವೇ ? ಮನದ ಮಂಜಿನ ಮಡುವ ಕನಸು ಕಲ್ಲಾಗಿಸದೆ {{gap}}ಮನಸು ಕನಸಾದಲ್ಲಿ ಮುಸುಕಿನಿರವೇ ?||೧೦|| ಹಗಲುಗನಸಿನ ಸವಿಯು ಇರುಳುಗನಸಿಗೆ ಬಹುದೆ? {{gap}}ಇರುಳಿನದು ಇಲ್ಲದಾ ಸಂತೆ ಕಾಣೋ | ನಗುನಗುತಲೂ ಕನಸು ನೋಡನೋಡುತ ಕನಸು {{gap}}ಬಿಸಿಲಲ್ಲೆ ಬೆಳತಿಗೆಯ ಗುಂತಿ ಕಾಣೋ||೧೧|| ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ {{gap}}ನಿಶ್ಯಬ್ದವಿದ್ದರೂ ಮೌನವಲ್ಲ | ನಿಸ್ಸೀಮ ನಿಸ್ಸೀಮ ಸೀಮದಲೆ ನಿಸ್ಸೀಮ {{gap}}ನಿಸ್ಸೀಮವೆಂದರೂ ಶೂನ್ಯವಲ್ಲ||೧೨|| ಸುತ್ತುಮುತ್ತಲೂ ಸ್ಪರ್ಶ ಒಳಗು ಹೊರಗೂ ಸ್ಪರ್ಶ {{gap}}ಕೆಳಗು ಮೇಲೂ ಸ್ಪರ್ಶ ಮಧುರ ಸ್ಪರ್ಶ | ಅತ್ತ ಹೊರಳಲು ಸ್ಪರ್ಶ ಇತ್ತ ಹೊರಳಲು ಸ್ಪರ್ಶ {{gap}}ಎತ್ತೆತ್ತಲೂ ಸ್ಪರ್ಶ ದಿವ್ಯ ಸ್ಪರ್ಶ||೧೩|| </poem><noinclude></noinclude> 2yde0ts20pwmn7gza2ayq4u2nsqkbul 317067 317066 2026-05-04T16:59:39Z Pragathi. BH 7585 317067 proofread-page text/x-wiki <noinclude><pagequality level="4" user="Pragathi. BH" />{{rh|center=|left=ನನ್ನ ನಲ್ಲ|right=೧೩}}</noinclude><poem> ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ {{gap}}ನಿಶ್ಯಬ್ದವಿದ್ದರೂ ಮೌನವಲ್ಲ | ನಿಸ್ಸೀಮ ನಿಸ್ಸೀಮ ಸೀಮದಲೆ ನಿಸ್ಸೀಮ {{gap}}ನಿಸ್ಸೀಮವೆಂದರೂ ಶೂನ್ಯವಲ್ಲ||೮|| ಬಣ್ಣದಾ ಹಣ್ಣುಗಳ ತಿಂದು ತೇಗಲುಬಹುದು {{gap}}ಚಿತ್ರದಾ ಮಲ್ಲಿಗೆಯ ಮೂಸಬಹುದು ಮಣ್ಣುಗೊಂಬೆಯ ಮೆಚ್ಚಿ ಮಾತನಾಡಿಸಬಹುದು {{gap}}ಹೊಗೆಯ ಹೊಳೆ ಈವಾಗ ಈಸಬಹುದು||೯|| ಮನದ ಮಂದಾರವನು ಮೂಸಲಾರೆವು ನಾವು {{gap}}ಕನಸಿನಾ ಕಲ್ಹಾರ ಮೂಸದಿಹೆವೇ ? ಮನದ ಮಂಜಿನ ಮಡುವ ಕನಸು ಕಲ್ಲಾಗಿಸದೆ {{gap}}ಮನಸು ಕನಸಾದಲ್ಲಿ ಮುಸುಕಿನಿರವೇ ?||೧೦|| ಹಗಲುಗನಸಿನ ಸವಿಯು ಇರುಳುಗನಸಿಗೆ ಬಹುದೆ? {{gap}}ಇರುಳಿನದು ಇಲ್ಲದಾ ಸಂತೆ ಕಾಣೋ | ನಗುನಗುತಲೂ ಕನಸು ನೋಡನೋಡುತ ಕನಸು {{gap}}ಬಿಸಿಲಲ್ಲೆ ಬೆಳತಿಗೆಯ ಗುಂತಿ ಕಾಣೋ||೧೧|| ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ {{gap}}ನಿಶ್ಯಬ್ದವಿದ್ದರೂ ಮೌನವಲ್ಲ | ನಿಸ್ಸೀಮ ನಿಸ್ಸೀಮ ಸೀಮದಲೆ ನಿಸ್ಸೀಮ {{gap}}ನಿಸ್ಸೀಮವೆಂದರೂ ಶೂನ್ಯವಲ್ಲ||೧೨|| ಸುತ್ತುಮುತ್ತಲೂ ಸ್ಪರ್ಶ ಒಳಗು ಹೊರಗೂ ಸ್ಪರ್ಶ {{gap}}ಕೆಳಗು ಮೇಲೂ ಸ್ಪರ್ಶ ಮಧುರ ಸ್ಪರ್ಶ | ಅತ್ತ ಹೊರಳಲು ಸ್ಪರ್ಶ ಇತ್ತ ಹೊರಳಲು ಸ್ಪರ್ಶ {{gap}}ಎತ್ತೆತ್ತಲೂ ಸ್ಪರ್ಶ ದಿವ್ಯ ಸ್ಪರ್ಶ||೧೩|| </poem><noinclude></noinclude> p99clcgbis7kv5kllcmpeiijs5saznq ಪುಟ:ನನ್ನ ನಲ್ಲ.pdf/೩೭ 104 75434 317068 291467 2026-05-04T17:03:00Z Pragathi. BH 7585 /* Validated */ 317068 proofread-page text/x-wiki <noinclude><pagequality level="4" user="Pragathi. BH" />{{Left|೧೪}}{{Right|ನನ್ನ ನಲ್ಲ}}</noinclude><poem> ಹೇಳಿ ತಿಳಿಯದ ಸ್ಪರ್ಶ ಕೇಳಿ ತಿಳಿಯದ ಸ್ಪರ್ಶ {{gap}}ಉಂಡು ಉಸುರುವ ಸ್ಪರ್ಶ ಕಂಡ ಸ್ಪರ್ಶ | ಗೋಳಿಡುವ ಜೀವಕ್ಕೆ ಸಂಜೀವನದ ಸ್ಪರ್ಶ {{gap}}ರಂಜನೆಯ ಕತೆಯಲ್ಲಿ ರೋಮಹರ್ಷ||೧೪|| ಸಾಲದಾಯಿತು ಚಿತ್ತ ತುಂಬಿ ರಸ ತುಳುಕಿತ್ತು {{gap}}ಸಾಕುಸಾಕಾಯಿತ್ತು ಸ್ಪರ್ಶಪಾನ । ತೇಲಿ ನಡೆಯಿತು ಜೀವ ಮೇಲಮೇಲಕೆ ಮತ್ತೆ {{gap}}ಕೇಳುಕೇಳುತೆ ದಿವ್ಯ ಸ್ಪರ್ಶ ತಾನ||೧೫|| ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ {{gap}}ನಿಶ್ಯಬ್ದವಿದ್ದರೂ ಮೌನವಲ್ಲ ! ನಿಸ್ಸೀಮ ನಿಸ್ಸೀಮ ಸೀಮದಲೆ ನಿಸ್ಸೀಮ {{gap}}ನಿಸ್ಸೀಮವೆಂದರೂ ಶೂನ್ಯವಲ್ಲ||೧೬|| ಜೀವದೇಹದೊಳೆಲ್ಲಿ ಮೈಬಗೆದು ನೋಡಿದರೆ {{gap}}ಅಲ್ಲೇನು ಅಸ್ಥಿಮಾಂಸಗಳ ಗೂಡು | ದೇವಜಗದೊಳಗೆಲ್ಲಿ ಮುಗಿಲೇರಿ ನೋಡಿದರೆ {{gap}}ಅಲ್ಲೇನು ಗ್ರಹತಾರಕೆಗಳ ಬೀಡು||೧೭|| ಜಗದ ಜೀವವ ದೇವ ಜಗವೆ ದೇವನ ದೇಹ {{gap}}ಜೀವವಿರದಲ್ಲಿ ಜೀವನದ ಸೆಲೆಯೇ ? ಜಗದಾತ್ಮ ಜಗದೀಶ ಆತ್ಮಗಳ ಮೂಲಾತ್ಮ {{gap}}ಪರಮಾತ್ಮ ನಿನಗೊಂದು ಬೇರೆ ನೆಲೆಯೇ ?||೧೮|| ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ {{gap}}ನಿಶ್ಯಬ್ದವಿದ್ದರೂ ಮೌನವಲ್ಲ | ನಿಸ್ಸೀಮ ನಿಸ್ಸೀಮ ಸೀಮದಲೆ ನಿಸ್ಸೀಮ {{gap}}ನಿಸ್ಸೀಮವೆಂದರೂ ಶೂನ್ಯವಲ್ಲ||೧೯|| </poem><noinclude></noinclude> nhzk3y2eelkjluhvx7muktgdrkqfuqo 317069 317068 2026-05-04T17:03:37Z Pragathi. BH 7585 317069 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೪|right=ನನ್ನ ನಲ್ಲ}}</noinclude><poem> ಹೇಳಿ ತಿಳಿಯದ ಸ್ಪರ್ಶ ಕೇಳಿ ತಿಳಿಯದ ಸ್ಪರ್ಶ {{gap}}ಉಂಡು ಉಸುರುವ ಸ್ಪರ್ಶ ಕಂಡ ಸ್ಪರ್ಶ | ಗೋಳಿಡುವ ಜೀವಕ್ಕೆ ಸಂಜೀವನದ ಸ್ಪರ್ಶ {{gap}}ರಂಜನೆಯ ಕತೆಯಲ್ಲಿ ರೋಮಹರ್ಷ||೧೪|| ಸಾಲದಾಯಿತು ಚಿತ್ತ ತುಂಬಿ ರಸ ತುಳುಕಿತ್ತು {{gap}}ಸಾಕುಸಾಕಾಯಿತ್ತು ಸ್ಪರ್ಶಪಾನ । ತೇಲಿ ನಡೆಯಿತು ಜೀವ ಮೇಲಮೇಲಕೆ ಮತ್ತೆ {{gap}}ಕೇಳುಕೇಳುತೆ ದಿವ್ಯ ಸ್ಪರ್ಶ ತಾನ||೧೫|| ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ {{gap}}ನಿಶ್ಯಬ್ದವಿದ್ದರೂ ಮೌನವಲ್ಲ ! ನಿಸ್ಸೀಮ ನಿಸ್ಸೀಮ ಸೀಮದಲೆ ನಿಸ್ಸೀಮ {{gap}}ನಿಸ್ಸೀಮವೆಂದರೂ ಶೂನ್ಯವಲ್ಲ||೧೬|| ಜೀವದೇಹದೊಳೆಲ್ಲಿ ಮೈಬಗೆದು ನೋಡಿದರೆ {{gap}}ಅಲ್ಲೇನು ಅಸ್ಥಿಮಾಂಸಗಳ ಗೂಡು | ದೇವಜಗದೊಳಗೆಲ್ಲಿ ಮುಗಿಲೇರಿ ನೋಡಿದರೆ {{gap}}ಅಲ್ಲೇನು ಗ್ರಹತಾರಕೆಗಳ ಬೀಡು||೧೭|| ಜಗದ ಜೀವವ ದೇವ ಜಗವೆ ದೇವನ ದೇಹ {{gap}}ಜೀವವಿರದಲ್ಲಿ ಜೀವನದ ಸೆಲೆಯೇ ? ಜಗದಾತ್ಮ ಜಗದೀಶ ಆತ್ಮಗಳ ಮೂಲಾತ್ಮ {{gap}}ಪರಮಾತ್ಮ ನಿನಗೊಂದು ಬೇರೆ ನೆಲೆಯೇ ?||೧೮|| ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ {{gap}}ನಿಶ್ಯಬ್ದವಿದ್ದರೂ ಮೌನವಲ್ಲ | ನಿಸ್ಸೀಮ ನಿಸ್ಸೀಮ ಸೀಮದಲೆ ನಿಸ್ಸೀಮ {{gap}}ನಿಸ್ಸೀಮವೆಂದರೂ ಶೂನ್ಯವಲ್ಲ||೧೯|| </poem><noinclude></noinclude> p371217ft683hirh6umjolmkgkjztn0 ಪುಟ:ನನ್ನ ನಲ್ಲ.pdf/೩೮ 104 75435 317070 291468 2026-05-04T17:06:00Z Pragathi. BH 7585 /* Validated */ 317070 proofread-page text/x-wiki <noinclude><pagequality level="4" user="Pragathi. BH" />{{Left|ನನ್ನ ನಲ್ಲ}}{{Right|೧೫}}</noinclude> ಬರುವದೇನುಂಟೊಮ್ಮೆ ಬರುವ ಕಾಲಕೆ ಬಹುದು {{gap}}ಬಯಕೆ ಬರುವದರ ಕಣ್ಸನ್ನೇ ಕಾಣೋ | ಅರಿಯದಾ ಹವಣಿಕೆಯು ಜೀವಜೀವನ ಲೀಲೆ {{gap}}ದೇವದೇವನ ಗೂಢ ವಿಧಿಯು ಕಾಣೋ||೨೦|| {{center|೫ನೇ ಎಸಳು}} ತಂದೆ ನೀ ಕಣ್ತೆರೆದರಂದಿಗರುಣೋದಯವು {{gap}}ಮುಂದೆ ಸೂರ್ಯೋದಯದ ಚಿಂತೆಯಿಲ್ಲ | ಹಿಂದೆ ಕತ್ತಲೆಯಲ್ಲಿ ಕಂಗೆಟ್ಟು ಕೊರಗಿದೆನು {{gap}}ಇಂದೊಳಗು ಹೊರಗು ಬೆಳಗಾಯಿತಲ್ಲ||೧|| ಈಸುದಿನ ಕಂಡಿದ್ದೆ ಬಾಗಿಲಿಲ್ಲದ ಕೋಟೆ {{gap}}ಇಂದು ಬಾಗಿಲುಕೋಟೆಯಾಯಿತಲ್ಲ | ಈಸೀಸಿ ದಣಿದಣಿದು ಕೊನೆಗೆ ದಂಡೆಯ ಕಂಡ {{gap}}ಇಂತು ದೇವನ ರಾಜ್ಯ ಲಭಿಸಿತಲ್ಲ||೨|| ತಲೆಯ ಮೇಲಿನ ಗುಡ್ಡ ತೆಳಗೆ ತಾನಿಳಿಯಿತ್ತು {{gap}}ಕಂಗೆಡಿಸುವಾ ಕಾಡು ಕಿತ್ತಿತಯ್ಯಾ | ಬಲುದಿನದ ಕಾಲೊಡಕು ಕಳಚಿ ಹೋಯಿತ್ತಯ್ಯ {{gap}}ಹರಸಿದಾ ಹರಕೆ ಕೈಗೂಡಿತಯ್ಯಾ||೩|| ಉರಿವ ಕಿಚ್ಚಿನ ಕೊಂಡ ಹರಿವ ಹೊಳೆಯಾಯಿತ್ತು {{gap}}ಕೊರೆವ ಕರಗಸ ಕೊರಳಸರವಾಯಿತು | ಪರಿಪರಿಯ ಬಸುರ ಬೇನೆಯ ತಾಪತಡಿಯಲ್ಲ {{gap}}ಹಡೆವ ಹಿರಿಹಿಗ್ಗಿನಲಿ ಮರವಾಯಿತು.||೪|| ನಟ್ಟ ಮುಳ್ಳಿಂತೊಮ್ಮೆ ಕಿತ್ತಿ ಹೋಯಿತ್ತಯ್ಯ {{gap}}ಪಟ್ಟ ಪರಿಪರಿ ಕಷ್ಟ ಫಲಿಸಿತಯ್ಯ | ಬೆಟ್ಟಕ್ಕೆ ಕಲ್ಲು ಹೊತ್ತಂತಿತ್ತು ಬಾಳುವೆಯು {{gap}}ಕೊರಡಿನೊಳೆ ಕೊನರು ಫಲ ಫಲಿಸಿತಯ್ಯ||೫||<noinclude></noinclude> lffb9siae7rqj7dxqzvtlyfijq97ixu 317071 317070 2026-05-04T17:07:04Z Pragathi. BH 7585 317071 proofread-page text/x-wiki <noinclude><pagequality level="4" user="Pragathi. BH" />{{Left|ನನ್ನ ನಲ್ಲ}}{{Right|೧೫}}</noinclude><poem> ಬರುವದೇನುಂಟೊಮ್ಮೆ ಬರುವ ಕಾಲಕೆ ಬಹುದು {{gap}}ಬಯಕೆ ಬರುವದರ ಕಣ್ಸನ್ನೇ ಕಾಣೋ | ಅರಿಯದಾ ಹವಣಿಕೆಯು ಜೀವಜೀವನ ಲೀಲೆ {{gap}}ದೇವದೇವನ ಗೂಢ ವಿಧಿಯು ಕಾಣೋ||೨೦|| {{center|೫ನೇ ಎಸಳು}} ತಂದೆ ನೀ ಕಣ್ತೆರೆದರಂದಿಗರುಣೋದಯವು {{gap}}ಮುಂದೆ ಸೂರ್ಯೋದಯದ ಚಿಂತೆಯಿಲ್ಲ | ಹಿಂದೆ ಕತ್ತಲೆಯಲ್ಲಿ ಕಂಗೆಟ್ಟು ಕೊರಗಿದೆನು {{gap}}ಇಂದೊಳಗು ಹೊರಗು ಬೆಳಗಾಯಿತಲ್ಲ||೧|| ಈಸುದಿನ ಕಂಡಿದ್ದೆ ಬಾಗಿಲಿಲ್ಲದ ಕೋಟೆ {{gap}}ಇಂದು ಬಾಗಿಲುಕೋಟೆಯಾಯಿತಲ್ಲ | ಈಸೀಸಿ ದಣಿದಣಿದು ಕೊನೆಗೆ ದಂಡೆಯ ಕಂಡ {{gap}}ಇಂತು ದೇವನ ರಾಜ್ಯ ಲಭಿಸಿತಲ್ಲ||೨|| ತಲೆಯ ಮೇಲಿನ ಗುಡ್ಡ ತೆಳಗೆ ತಾನಿಳಿಯಿತ್ತು {{gap}}ಕಂಗೆಡಿಸುವಾ ಕಾಡು ಕಿತ್ತಿತಯ್ಯಾ | ಬಲುದಿನದ ಕಾಲೊಡಕು ಕಳಚಿ ಹೋಯಿತ್ತಯ್ಯ {{gap}}ಹರಸಿದಾ ಹರಕೆ ಕೈಗೂಡಿತಯ್ಯಾ||೩|| ಉರಿವ ಕಿಚ್ಚಿನ ಕೊಂಡ ಹರಿವ ಹೊಳೆಯಾಯಿತ್ತು {{gap}}ಕೊರೆವ ಕರಗಸ ಕೊರಳಸರವಾಯಿತು | ಪರಿಪರಿಯ ಬಸುರ ಬೇನೆಯ ತಾಪತಡಿಯಲ್ಲ {{gap}}ಹಡೆವ ಹಿರಿಹಿಗ್ಗಿನಲಿ ಮರವಾಯಿತು.||೪|| ನಟ್ಟ ಮುಳ್ಳಿಂತೊಮ್ಮೆ ಕಿತ್ತಿ ಹೋಯಿತ್ತಯ್ಯ {{gap}}ಪಟ್ಟ ಪರಿಪರಿ ಕಷ್ಟ ಫಲಿಸಿತಯ್ಯ | ಬೆಟ್ಟಕ್ಕೆ ಕಲ್ಲು ಹೊತ್ತಂತಿತ್ತು ಬಾಳುವೆಯು {{gap}}ಕೊರಡಿನೊಳೆ ಕೊನರು ಫಲ ಫಲಿಸಿತಯ್ಯ||೫|| </poem><noinclude></noinclude> tq2uivdvagxrf9iolhed9o0n08rkiut ಪುಟ:ನನ್ನ ನಲ್ಲ.pdf/೩೯ 104 75436 317075 291469 2026-05-04T17:10:34Z Pragathi. BH 7585 /* Validated */ 317075 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೬|right=ನನ್ನ ನಲ್ಲ}}</noinclude><poem> ಜೀವದಲ್ಲೆನಿಸಿದ್ದು ಬುದ್ಧಿಗೊಡಮೂಡಿದ್ದೆ {{gap}}ಭಾವಯೋಗದ ಸಿದ್ಧಿ ಬೇರೆಯಿಹುದೇ ? ಮಾವುತನ ಗೋಚರಣೆ ಮದಗಜನ ಆಚರಣೆ {{gap}}ಮೇಳವಿಸದಿರೆ ಗೊತ್ತುಗಾಣಬಹುದೆ ?||೬|| ಮನವು ಕುಣಿದೇನು ಫಲ ತನುವು ನೆಲಹಿಡಿದಿರಲು {{gap}}ಹೋಗಬೇಕೆಂದಲ್ಲಿ ಹೋಗಬಹುದೇ ? ಅನಿಸಿಕೆಗೆ ಫಲವುಂಟೆ ಎಣಿಕೆಗೊಪ್ಪುವ ತನಕ {{gap}}ಸಾಗಬೇಕೆಂದಂತೆ ಸಾಗಬಹುದೇ ?||೭|| ಒಲವು ತಾನೊಂದು ಕಡೆ ಓಟವಿನ್ನೊಂದು ಕಡೆ {{gap}}ನೋಟವೆಲ್ಲಾ ಬಿಟ್ಟು ಬೇರೆ ಕಡೆಗೆ 1 ಗೆಲವು ತಾನೆಲ್ಲಿಯದೊ ನೆಲೆಯೆ ಹತ್ತದ ಬಳಿಕ {{gap}}ಪ್ರಾಣಸಂಕವೊಂದೆ ಕಟ್ಟಕಡೆಗೆ||೮|| ಒಂದು ಕಾಲೊಂದು ಕಡೆಗಿನ್ನೊಂದು ಬೇರೆ ಕಡೆ- {{gap}}ಗಿಂಥ ಪರಿಯಲಿ ಹೆಜ್ಜೆ ಹಾಕಬಹುದೇ? ಒಂದಾಗಿ ಭಾವಬುದ್ಧಿಗಳು ಮುಂದರಿವನಕ {{gap}}ಜೀವನಕೆ ಜೀವ ಜೀವಾಳವಿಹುದೇ?||೯|| ಅನಿಸಿದನಿಸಿಕೆಯನ್ನೆ ದಿಟವೆಂದು ನಂಬುವರೆ {{gap}}ಅನಿಸಿಕೆಯ ತಳಹದಿಯೆ ಗಟ್ಟಿಯಿಲ್ಲ ! ಮನದ ಮನನದ ಸೂಕ್ಷ್ಮ ಸಂಸ್ಕಾರದನಿಸಿಕೆಯು {{gap}}ಮನನಕ್ಕೆ ಸತ್ಯದಾ ಭೆಟ್ಟಿಯಿಲ್ಲ||೧೦|| ಸತ್ಯವೋ ಮೀಥ್ಯವೋ ಯಾವದೂ ಅರಿಯದಲೆ {{gap}}ಕೇಳಿಕೆಯ ನೆರೆನಂಬಿ ನೆನೆಯುತಿರಲು | ಸತ್ಯವೆಂದೆನಿಸುವದು ಸತ್ಯವಲ್ಲದ ಮಾತು {{gap}}ಶ್ರದ್ಧೆಯಾ ಸತ್ಯಕ್ಕೆ ಇಷ್ಟೆ ಹುರುಳು||೧೧|| </poem><noinclude></noinclude> llfptszgyi9gvxv63m8ijqe6rza9gnz ಪುಟ:ನನ್ನ ನಲ್ಲ.pdf/೪೦ 104 75437 317076 291470 2026-05-04T17:13:03Z Pragathi. BH 7585 /* Validated */ 317076 proofread-page text/x-wiki <noinclude><pagequality level="4" user="Pragathi. BH" />{{rh|center=|left=ನನ್ನ ನಲ್ಲ|right=೧೭}}</noinclude><poem> ತರ್ಕಿಸಿದ ಕಲ್ಪನೆಯ ದಿಟವೆಂದು ನಂಬುವರೆ {{gap}}ತರ್ಕಕ್ಕೆ ನಿಷ್ಠೆಯಾ ನೆಲೆಯೆ ಇಲ್ಲ | ತರ್ಕಕ್ಕೆ ಹೊಸತರ್ಕ ಹೊಡದೋಡಿಸುವದಯ್ಯ {{gap}}ತರ್ಕದಾ ಸತ್ಯಕ್ಕೆ ಮೋರೆಯಿಲ್ಲ||೧೨|| ಭಾವಬುದ್ಧಿಗಳೆರಡೆ ತಿಳುವಳಿಕೆಗಾಧಾರ {{gap}}ಭಾವಕ್ಕೆ ಬುದ್ಧಿಯೇ ಬಾಹ್ಯ ನೇತ್ರ | ಭಾವಕೊಲಿಯದ ಬುದ್ಧಿ ಬುದ್ಧಿಗೊಲಿಯದ ಭಾವ {{gap}}ಇಲ್ಲೆ ಕಾಣಯ್ಯ ಸಂದೇಹ ಸೂತ್ರ||೧೩|| ಯುಕ್ತಿಗದು ಯುಕ್ತವೆಂದೆನಿಸಿದ್ದೆ ಅನಿಸಿಕೆಯು {{gap}}ಅನಿಸಿಕೆಗೆ ಯುಕ್ತವಾದದ್ದೆ ಯುಕ್ತಿ! ಶಕ್ತಿಯಿಲ್ಲೆರಡರೊಳಗೊಂದು ಬಿದ್ದೊಂದಕ್ಕೆ {{gap}}ನೆರೆತು ಬೆರೆತಲ್ಲಿ ಜೀವನದ ಶಕ್ತಿ||೧೪|| ಬೀಜದಿಂದಲೆ ಬಳ್ಳಿ ಬಳ್ಳಿಯಿಂದಲೆ ಬೀಜ {{gap}}ಭಾವಬುದ್ಧಿಗಳ ಪರಿಯಿಂಥದಯ್ಯ | ಸೋಜಿಗದ ಮಾತೇನು? “ತಿಳಿಯುವುದು ತೀರುತಲೆ {{gap}}ತಿಳಿವು ಮೈದಾಳುವದು" ಸತ್ಯವಯ್ಯಾ||೧೫|| ಬಗೆಬಗೆಯ ಘಟನೆಗಳನೊಂದೊಂದೆ ನಿಶ್ಚಯಿಸಿ [[Category:]]ಒಂದೊಂದಕೊಂದೊಂದು ಅರ್ಥಯಿಸುತಾ | ಜಗದ ನಿಚ್ಚಣಿಕೆಯನು ತತ್ತರಿಸುತೇರುವೆವು {{gap}}ಒಂದರಿಂದತ್ತಿ ಅಡಿಯೊಂದಕಿಡುತ||೧೬|| ಅನಿಸಿಕೆಯ ಮರ್ಯಾದೆ ಗುಣಿಸುತ್ತ ಸಾಗುವುದೆ {{gap}}ಅನುಭವದ ಅಧ್ಯಾತ್ಮಯೋಗವಯ್ಯಾ | ಎಣಿಸಿಕೆಯ ಹರಿಗಡಿದು ಅನಿಸಿಕೆಯ ಝರಿಯೊಡೆದು {{gap}}ಶಾಂತಿಯೊಡಮೂಡಿದ್ದ ಸಿದ್ಧಿಯಯ್ಯಾ||೧೭|| </poem><noinclude></noinclude> 0chmx6f2qwdnosh7zgxyuw7o1ghc8vd ಪುಟ:ನನ್ನ ನಲ್ಲ.pdf/೪೧ 104 75438 317077 291824 2026-05-04T17:13:56Z Pragathi. BH 7585 /* Validated */ 317077 proofread-page text/x-wiki <noinclude><pagequality level="4" user="Pragathi. BH" />{{Left|೧೮}}{{Right|ನನ್ನ ನಲ್ಲ}}</noinclude><poem> ಬುದ್ಧಿಭಾವದ ಸೀಮೆ ಇಲ್ಲಿಗಾಯಿತ್ತಯ್ಯ ಮುಂದೆ ದೇವನ ದಿವ್ಯ ರಾಜ್ಯವಯ್ಯಾ | ಇದ್ದಷ್ಟು ಹಮ್ಮೆಲ್ಲ ಹಣ್ಣುಹಣ್ಣಾಗುತಲೆ ಕೈಮುಗಿದು ಶರಣು ಶರಣೆಂಬುದಯ್ಯಾ ||೧೮|| “ಬುದ್ಧಿಯೇ ಬಾಧಕವು ಬುದ್ಧಿಯೇ ಸಾಧಕವು” ಬುದ್ಧಿಯೇ ಮಾನವನ ಭಿತ್ತಿಯಯ್ಯಾ | ಬುದ್ಧಿಯಿಂದಲೆ ಭಾವ ಬೀಳುತ್ತೇಳುತ ಸಾಗಿ ನಿಷ್ಠೆ ನಿಬ್ಬೆರಗಾಗಿ ನಿಲುವದಯ್ಯಾ ||೧೯|| “ಆದಿಯಾಧಾರ ಘನಘನವೇಧಿಸುವುದೆ ಮನ ಮನವು ಮಹದಲ್ಲಿ ನಿಂತದ್ದೆ ಭಕ್ತಿ” | ಓದುವಾದಗಳೆಲ್ಲ ಶಕ್ತಿಯುಕ್ತಿಗಳೆಲ್ಲ ಮುಗಿದು ನಿಜನಿಂತದ್ದೆ ಭಾವಮುಕ್ತಿ||೨೦|| ಬರುವದೇನುಂಟೊಮ್ಮೆ ಬರುವಕಾಲಕೆ ಬಹುದು ಬಯಕೆ ಬರುವದರ ಕಣ್ಣನ್ನೆ ಕಾಣೋ । ಅರಿಯದಾ ಹವಣಿಕೆಯು ಜೀವಜೀವನ ಲೀಲೆ ದೇವದೇವನ ಗೂಢ ವಿಧಿಯು ಕಾಣೋ||೧೦೧|| {{center|'''ಕೊನೆಯ ನುಡಿ'''}} “ಮೊಲೆಯ ಮೇಲಿರ್ದ ಯೋಗಿಗಳುಂಟು ಲೋಕದಲಿ ಶಿಲೆಯ ಮೇಲಿರುತಿರುವ ಮೋಹಿಯುಂಟು” | “ಬಳಸಿದಾ ಬ್ರಹ್ಮಾಚಾರಿತ್ವ ಉಂಡುಪವಾಸ” ನಮಗಿದೇ ಇಂದು ಬೇಕಾದ ಗಂಟು || {{center|ಓಂ ಶಾನ್ತಿಃ ಶಾನ್ತಿಃ ಶಾನ್ತಿಃ}} {{center|——————}} </poem><noinclude></noinclude> abfkdpj3xrwgskvp93ifhwgd21289px ಪುಟ:ನನ್ನ ನಲ್ಲ.pdf/೪೨ 104 75439 317078 291873 2026-05-04T17:34:49Z Pragathi. BH 7585 /* Validated */ 317078 proofread-page text/x-wiki <noinclude><pagequality level="4" user="Pragathi. BH" />{{rh|center=|left=ನನ್ನ ನಲ್ಲ|right=೧೯}}</noinclude> '''೨. ಶಾರದೆಗೆ''' <poem> ಮೂಡಲದ ಮಾನವರ ಜೀವನದ ಝರಿಯಾಗಿ ನಾಡೆ ಪಡುವಲರಾದಿ ನಾದವೇದವನೂದಿ ಮೂಡಪಡುವಲ ನಡುವೇ ಮಂಡಿಸಿದ ಮಾದೇವಿ ಶ್ರೀ ಸರಸ್‌ವತಿಯೆ ಶರಣು||೧|| ನಗೆಯ ನೊರೆಯಲಿ ಹಗಲ ಹೆಣೆದು ಹೊತ್ತಿಹ ಹೊಳಹೆ ಮುಗಿಲಲ್ಲಿ ಮುತ್ತುಗಳ ಮೂಡಿಸುವ ಮಂತ್ರವೆ ಜಗಕೆ ಕಣ್ಗಳ ಕೊಟ್ಟ ಕಲನಾದ ಕೌಮುದಿಯೆ ಶಾರದೆಯೆ ಶರಣು ಶರಣು||೨|| ಭಾವವೀಣೆಯ ಮೇಲೆ ಬೆರಲೆಳೆಯುತೆಳೆಯುತ್ತಲೆ ಧಾವಿಸುವದುಲಿವು ತಾನಲೆಗೊಂಡು ಬಾಂದಳಕೆ ಭಾವಿಸುತ್ತಲೆ ಬಯಲ ಬಣ್ಣಿಸುವ ಬಲುಹುಳ್ಳ ಭಾರತಿಯೆ ಶರಣು ಶರಣು||೩|| ಬೆಳದಿಂಗಳನು ಬೆಳಗಿ ಬಿಳುಪುಗೊಳಿಸುವ ಬೆಳಕೆ ಎಳೆಬಿಸಿಲಿಗೊಪ್ಪಿಡುವ ಹೊಳೆವ ತಿಳಿಗಣ್ಣೆರೆಯೆ ತುಳುಕುವೆಣ್ದೆಶೆಗಳಲಿ ನೆಲಮುಗಿಲ ತೇಲಿಸುವ ರಸವತಿಯೆ ಶರಣು ಶರಣು||೪|| ನಾಲ್ಮೊಗನ ನಲ್ಲೆಯೆಂಬೀ ಮೇಲ್ಮೆ ಸಲ್ವುದೇ ಚೆಲ್ವಗಾರ್ತಿಯೆ ನಿನ್ನ ಚೆಲುವ ಚಿಮುಕಿಸಿ ಚೆಲ್ಲಿ ಒಲ್ಮೆಯಲಿ ಪುರುಳಪುಟ್ಟಿಸಿ ಪುಟಿವ ನಾಲ್ಮೊಗದ ನುಡಿವೆಣ್ಣೆ ಶರಣು ಶರಣು||೫|| ನಿನ್ನ ನಾಲಿಗೆಯಲ್ಲಿ ನೆಲೆಗೊಂಡ ನಲ್ನೆಯ್ಯ (ನೀನಿಟ್ಟ ನನೆಗೊನೆಯ ತೆರೆ ಬಾಯ್ದೆರೆಯ ಮುತ್ತಿ) ತಾನುಂಡು ಸವಿಸೂಸಿ ಮೊರೆವ ಕವಿ ಮಧುಕರನ ತಾಯೆ ಚಿತ್ಕಾಯೆ ಶರಣು||೬|| </poem> {{center|———}}<noinclude></noinclude> 1qwq624rs0lewp20tc9jcfignmh8i6a 317079 317078 2026-05-04T17:36:18Z Pragathi. BH 7585 317079 proofread-page text/x-wiki <noinclude><pagequality level="4" user="Pragathi. BH" />{{rh|center=|left=ನನ್ನ ನಲ್ಲ|right=೧೯}}</noinclude> '''೨. ಶಾರದೆಗೆ''' <poem> ಮೂಡಲದ ಮಾನವರ ಜೀವನದ ಝರಿಯಾಗಿ {{gap}}ನಾಡೆ ಪಡುವಲರಾದಿ ನಾದವೇದವನೂದಿ {{gap}}ಮೂಡಪಡುವಲ ನಡುವೇ ಮಂಡಿಸಿದ ಮಾದೇವಿ {{gap}}ಶ್ರೀ ಸರಸ್‌ವತಿಯೆ ಶರಣು||೧|| ನಗೆಯ ನೊರೆಯಲಿ ಹಗಲ ಹೆಣೆದು ಹೊತ್ತಿಹ ಹೊಳಹೆ {{gap}}ಮುಗಿಲಲ್ಲಿ ಮುತ್ತುಗಳ ಮೂಡಿಸುವ ಮಂತ್ರವೆ {{gap}}ಜಗಕೆ ಕಣ್ಗಳ ಕೊಟ್ಟ ಕಲನಾದ ಕೌಮುದಿಯೆ {{gap}}ಶಾರದೆಯೆ ಶರಣು ಶರಣು||೨|| ಭಾವವೀಣೆಯ ಮೇಲೆ ಬೆರಲೆಳೆಯುತೆಳೆಯುತ್ತಲೆ {{gap}}ಧಾವಿಸುವದುಲಿವು ತಾನಲೆಗೊಂಡು ಬಾಂದಳಕೆ {{gap}}ಭಾವಿಸುತ್ತಲೆ ಬಯಲ ಬಣ್ಣಿಸುವ ಬಲುಹುಳ್ಳ {{gap}}ಭಾರತಿಯೆ ಶರಣು ಶರಣು||೩|| ಬೆಳದಿಂಗಳನು ಬೆಳಗಿ ಬಿಳುಪುಗೊಳಿಸುವ ಬೆಳಕೆ {{gap}}ಎಳೆಬಿಸಿಲಿಗೊಪ್ಪಿಡುವ ಹೊಳೆವ ತಿಳಿಗಣ್ಣೆರೆಯೆ {{gap}}ತುಳುಕುವೆಣ್ದೆಶೆಗಳಲಿ ನೆಲಮುಗಿಲ ತೇಲಿಸುವ {{gap}}ರಸವತಿಯೆ ಶರಣು ಶರಣು||೪|| ನಾಲ್ಮೊಗನ ನಲ್ಲೆಯೆಂಬೀ ಮೇಲ್ಮೆ ಸಲ್ವುದೇ {{gap}}ಚೆಲ್ವಗಾರ್ತಿಯೆ ನಿನ್ನ ಚೆಲುವ ಚಿಮುಕಿಸಿ ಚೆಲ್ಲಿ {{gap}}ಒಲ್ಮೆಯಲಿ ಪುರುಳಪುಟ್ಟಿಸಿ ಪುಟಿವ ನಾಲ್ಮೊಗದ {{gap}}ನುಡಿವೆಣ್ಣೆ ಶರಣು ಶರಣು||೫|| ನಿನ್ನ ನಾಲಿಗೆಯಲ್ಲಿ ನೆಲೆಗೊಂಡ ನಲ್ನೆಯ್ಯ {{gap}}(ನೀನಿಟ್ಟ ನನೆಗೊನೆಯ ತೆರೆ ಬಾಯ್ದೆರೆಯ ಮುತ್ತಿ) {{gap}}ತಾನುಂಡು ಸವಿಸೂಸಿ ಮೊರೆವ ಕವಿ ಮಧುಕರನ {{gap}}ತಾಯೆ ಚಿತ್ಕಾಯೆ ಶರಣು||೬|| </poem> {{center|———}}<noinclude></noinclude> ckt83i0oh6b6qhyqdxclb8mjyoh4cnu ಪುಟ:ನನ್ನ ನಲ್ಲ.pdf/೪೩ 104 75440 317080 293844 2026-05-04T17:39:17Z Pragathi. BH 7585 /* Validated */ 317080 proofread-page text/x-wiki <noinclude><pagequality level="4" user="Pragathi. BH" />{{rh|center=|left=೨೦|right=}}ನನ್ನನಲ್ಲ}}</noinclude>{{Left|೩. ಶಿವಶರಣರ ಸವಿನುಡಿಗಳು'''}} <poem> ಮರದೊಳಗೆ ಬೆಂಕಿಯನು | ಉರಿಯದಂತಿರಿಸಿದಮ್ {{gap}}ಬಿತ್ತಿನೊಳು ಗಿಡವನ್ನು |ಗೊತ್ತಾಗದಂತಿಟ್ಟೆ {{gap}}ಸೊಂಪಿನಾ ತುಪ್ಪವನು | ಕಂಪಿಲ್ಲದಂದದಿಂ {{gap}}ನೊರೆವಾಲೊಳಿರಿಸಿರುವ | ದೊರೆಯೆ | ದೊರೆ ನೀನಾರು ? ಜಿಗಿವ ಮಿಂಚಿನ ಬಳ್ಳಿ | ಮುಗಿಲ ಮರೆಗಿರುವಂತೆ {{gap}}ಹೊಳೆವ ಕಂಗಳ ಮರೆಗೆ | ಬೆಳಕು ತಾನಿರುವಂತೆ {{gap}}ಇಲಿದೇರನಯ್ಯನಾ | ನಿಲವು ತಾನಿರ್ಪುದೆ ಹೊಲೆಯರಾ ಬಾವಿಯೊಳು | ಎಲುವೊಂದು ನಟ್ಟಿರಲು {{Right|}}ಹೊಲೆಯೆನುವದೀ ಜಗವು | ಹಲವೆಲುವಿನಿಂದಾದ {{gap}}ಮೆಲುವಂಥ ಬಾಯಿಂದೆ | ಬಲು ಸಟೆಯ ನುಡಿಯಲದು {{gap}}ಹೊಲೆಯರಾ ಬಾವಿಯಿಂ | ಬಲು ಕೀಳು ತಾನಲ್ಲೆ ? ಉರಿಯೊಳಿಹ ಕಪ್ಪುರಕೆ | ಕರಿಯುಂಟೆ ? ಮೃಗಜಲಕೆ {{gap}}ಕೆಸರುಂಟೆ ? ಗಾಳಿಯೊಳು | ಪಸರಿಸಿದ ಪರಿಮಲಕೆ {{gap}}ನೈರ್ಮಲ್ಯವುಂಟೇನೊ ? | ನಿಮ್ಮಡಿಯೊಳಿಂಬಾದ {{gap}}ಕಲಿಗೆ ಭವವುಂಟೆ ? ಕೂ | ಡಲ ಸಂಗಮೇಶ್ವರಾ </poem><noinclude></noinclude> ki0l2408grjx0ibjj46rryong2lbkms 317081 317080 2026-05-04T17:39:41Z Pragathi. BH 7585 317081 proofread-page text/x-wiki <noinclude><pagequality level="4" user="Pragathi. BH" />{{rh|center=|left=೨೦|right=}}ನನ್ನನಲ್ಲ}}</noinclude>{{Left|೩. ಶಿವಶರಣರ ಸವಿನುಡಿಗಳು'''}} <poem> ಮರದೊಳಗೆ ಬೆಂಕಿಯನು | ಉರಿಯದಂತಿರಿಸಿದಮ್ {{gap}}ಬಿತ್ತಿನೊಳು ಗಿಡವನ್ನು |ಗೊತ್ತಾಗದಂತಿಟ್ಟೆ {{gap}}ಸೊಂಪಿನಾ ತುಪ್ಪವನು | ಕಂಪಿಲ್ಲದಂದದಿಂ {{gap}}ನೊರೆವಾಲೊಳಿರಿಸಿರುವ | ದೊರೆಯೆ | ದೊರೆ ನೀನಾರು ? ಜಿಗಿವ ಮಿಂಚಿನ ಬಳ್ಳಿ | ಮುಗಿಲ ಮರೆಗಿರುವಂತೆ {{gap}}ಹೊಳೆವ ಕಂಗಳ ಮರೆಗೆ | ಬೆಳಕು ತಾನಿರುವಂತೆ {{gap}}ಇಲಿದೇರನಯ್ಯನಾ | ನಿಲವು ತಾನಿರ್ಪುದೆ ಹೊಲೆಯರಾ ಬಾವಿಯೊಳು | ಎಲುವೊಂದು ನಟ್ಟಿರಲು {{gap}}ಹೊಲೆಯೆನುವದೀ ಜಗವು | ಹಲವೆಲುವಿನಿಂದಾದ {{gap}}ಮೆಲುವಂಥ ಬಾಯಿಂದೆ | ಬಲು ಸಟೆಯ ನುಡಿಯಲದು {{gap}}ಹೊಲೆಯರಾ ಬಾವಿಯಿಂ | ಬಲು ಕೀಳು ತಾನಲ್ಲೆ ? ಉರಿಯೊಳಿಹ ಕಪ್ಪುರಕೆ | ಕರಿಯುಂಟೆ ? ಮೃಗಜಲಕೆ {{gap}}ಕೆಸರುಂಟೆ ? ಗಾಳಿಯೊಳು | ಪಸರಿಸಿದ ಪರಿಮಲಕೆ {{gap}}ನೈರ್ಮಲ್ಯವುಂಟೇನೊ ? | ನಿಮ್ಮಡಿಯೊಳಿಂಬಾದ {{gap}}ಕಲಿಗೆ ಭವವುಂಟೆ ? ಕೂ | ಡಲ ಸಂಗಮೇಶ್ವರಾ </poem><noinclude></noinclude> o56y85sk2exwgjk1wunl5wl5b34npsg 317082 317081 2026-05-04T17:40:16Z Pragathi. BH 7585 317082 proofread-page text/x-wiki <noinclude><pagequality level="4" user="Pragathi. BH" />{{rh|center=|left=೨೦|right=ನನ್ನನಲ್ಲ}}</noinclude>{{Left|೩. ಶಿವಶರಣರ ಸವಿನುಡಿಗಳು'''}} <poem> ಮರದೊಳಗೆ ಬೆಂಕಿಯನು | ಉರಿಯದಂತಿರಿಸಿದಮ್ {{gap}}ಬಿತ್ತಿನೊಳು ಗಿಡವನ್ನು |ಗೊತ್ತಾಗದಂತಿಟ್ಟೆ {{gap}}ಸೊಂಪಿನಾ ತುಪ್ಪವನು | ಕಂಪಿಲ್ಲದಂದದಿಂ {{gap}}ನೊರೆವಾಲೊಳಿರಿಸಿರುವ | ದೊರೆಯೆ | ದೊರೆ ನೀನಾರು ? ಜಿಗಿವ ಮಿಂಚಿನ ಬಳ್ಳಿ | ಮುಗಿಲ ಮರೆಗಿರುವಂತೆ {{gap}}ಹೊಳೆವ ಕಂಗಳ ಮರೆಗೆ | ಬೆಳಕು ತಾನಿರುವಂತೆ {{gap}}ಇಲಿದೇರನಯ್ಯನಾ | ನಿಲವು ತಾನಿರ್ಪುದೆ ಹೊಲೆಯರಾ ಬಾವಿಯೊಳು | ಎಲುವೊಂದು ನಟ್ಟಿರಲು {{gap}}ಹೊಲೆಯೆನುವದೀ ಜಗವು | ಹಲವೆಲುವಿನಿಂದಾದ {{gap}}ಮೆಲುವಂಥ ಬಾಯಿಂದೆ | ಬಲು ಸಟೆಯ ನುಡಿಯಲದು {{gap}}ಹೊಲೆಯರಾ ಬಾವಿಯಿಂ | ಬಲು ಕೀಳು ತಾನಲ್ಲೆ ? ಉರಿಯೊಳಿಹ ಕಪ್ಪುರಕೆ | ಕರಿಯುಂಟೆ ? ಮೃಗಜಲಕೆ {{gap}}ಕೆಸರುಂಟೆ ? ಗಾಳಿಯೊಳು | ಪಸರಿಸಿದ ಪರಿಮಲಕೆ {{gap}}ನೈರ್ಮಲ್ಯವುಂಟೇನೊ ? | ನಿಮ್ಮಡಿಯೊಳಿಂಬಾದ {{gap}}ಕಲಿಗೆ ಭವವುಂಟೆ ? ಕೂ | ಡಲ ಸಂಗಮೇಶ್ವರಾ </poem><noinclude></noinclude> dvr45coprvnaw3r7aea8lxfmooas7zm ಪುಟ:ನನ್ನ ನಲ್ಲ.pdf/೪೪ 104 75441 317083 293850 2026-05-04T17:42:08Z Pragathi. BH 7585 /* Validated */ 317083 proofread-page text/x-wiki <noinclude><pagequality level="4" user="Pragathi. BH" />{{Left|ನನ್ನ ನಲ್ಲ}}{{Right|೨೧}}</noinclude> {{Left|'''೪. ಧ್ರುವ'''}} “ಬಾರವ್ವ ಜಾಣಿ ! ರಂಗಪೋಗಿ 1 ತಿಂಗಳಾಯಿತೆ" ಎಂಬಂತೆ ಸುನೀತಿದೇವಿ | ನಿದ್ದೆ ತಿಳಿದು ಎದ್ದು ಕುಳಿತಳು | ಸುನೀತಿದೇವಿ | ನಿದ್ದೆ ತಿಳಿದು ಎದ್ದು ಕುಳಿತಳು {{Right|||ಪಲ್ಲವಿ ॥}}||ಪಲ್ಲವಿ ॥ ಎದ್ದು ಕುಳಿತು ಹೊದ್ದ ಸೆರಗ ಸರಿಸಿ ಮುದ್ದು ಮಗನ ಕಡೆಗೆ ಕೈಯ ಚಾಚಿ ಕಾಣದಾದಳು ಮಗನ ಕಡೆಗೆ- ಕೈಯ ಚಾಚಿ ಕಾಣದಾದಳು || ತರಳ ನಿದ್ದೆಗಣ್ಣಿನಲ್ಲಿ ಉರುಳಿ ಮುಂದೆ ಹೋದನೆಂದು ತಿಳಿದು ಸರಿದು ಸರಿದು ನೋಳ್ಳು ನೆಲಕೆ ಕೈಯ- ಸವರಿ ಮಗನ ಕಾಣದಾದಳು || ಏಳುಬೀಳುತೆದ್ದು ದೀಪ ಹಚ್ಚಿ ನಾಲ್ಕು ಮೂಲೆ ನೋಡಿ ಮಗನ ಮೋರೆ ನೋಡದಾದಳು. ಹುಡುಕಿ ಹುಡುಕಿ ಮಗನ ಮೊಗವ ಕಾಣದಾದಳು || ಕಣ್ಣು ತುಂಬ ನೀರು ತಂದು ಕೊರಲ ಸೆರೆಯ ಉಬ್ಬಿಬರಲು<noinclude></noinclude> 8s84pk1eiapktuvy7mf8dvj333g66ht 317084 317083 2026-05-04T17:44:16Z Pragathi. BH 7585 317084 proofread-page text/x-wiki <noinclude><pagequality level="4" user="Pragathi. BH" />{{Left|ನನ್ನ ನಲ್ಲ}}{{Right|೨೧}}</noinclude> {{Left|'''೪. ಧ್ರುವ'''}} “ಬಾರವ್ವ ಜಾಣಿ ! ರಂಗಪೋಗಿ 1 ತಿಂಗಳಾಯಿತೆ" ಎಂಬಂತೆ ಸುನೀತಿದೇವಿ | ನಿದ್ದೆ ತಿಳಿದು ಎದ್ದು ಕುಳಿತಳು | ಸುನೀತಿದೇವಿ | ನಿದ್ದೆ ತಿಳಿದು ಎದ್ದು ಕುಳಿತಳು {{Right|॥ಪಲ್ಲವಿ॥}} ಎದ್ದು ಕುಳಿತು ಹೊದ್ದ ಸೆರಗ ಸರಿಸಿ ಮುದ್ದು ಮಗನ ಕಡೆಗೆ ಕೈಯ ಚಾಚಿ ಕಾಣದಾದಳು ಮಗನ ಕಡೆಗೆ- ಕೈಯ ಚಾಚಿ ಕಾಣದಾದಳು ॥ ತರಳ ನಿದ್ದೆಗಣ್ಣಿನಲ್ಲಿ ಉರುಳಿ ಮುಂದೆ ಹೋದನೆಂದು ತಿಳಿದು ಸರಿದು ಸರಿದು ನೋಳ್ಳು ನೆಲಕೆ ಕೈಯ- ಸವರಿ ಮಗನ ಕಾಣದಾದಳು ॥ ಏಳುಬೀಳುತೆದ್ದು ದೀಪ ಹಚ್ಚಿ ನಾಲ್ಕು ಮೂಲೆ ನೋಡಿ ಮಗನ ಮೋರೆ ನೋಡದಾದಳು. ಹುಡುಕಿ ಹುಡುಕಿ ಮಗನ ಮೊಗವ ಕಾಣದಾದಳು ॥ ಕಣ್ಣು ತುಂಬ ನೀರು ತಂದು ಕೊರಲ ಸೆರೆಯ ಉಬ್ಬಿಬರಲು<noinclude></noinclude> 0bz90mgbcu1caz9nrddy23iudeeyuvu 317085 317084 2026-05-04T17:46:58Z Pragathi. BH 7585 317085 proofread-page text/x-wiki <noinclude><pagequality level="4" user="Pragathi. BH" />{{Left|ನನ್ನ ನಲ್ಲ}}{{Right|೨೧}}</noinclude> {{Left|'''೪. ಧ್ರುವ'''}} “ಬಾರವ್ವ ಜಾಣಿ ! ರಂಗಪೋಗಿ 1 ತಿಂಗಳಾಯಿತೆ" ಎಂಬಂತೆ <poem> ಸುನೀತಿದೇವಿ | ನಿದ್ದೆ ತಿಳಿದು ಎದ್ದು ಕುಳಿತಳು | ಸುನೀತಿದೇವಿ | ನಿದ್ದೆ ತಿಳಿದು ಎದ್ದು ಕುಳಿತಳು {{Right|॥ಪಲ್ಲವಿ॥}} ಎದ್ದು ಕುಳಿತು ಹೊದ್ದ ಸೆರಗ {{gap}}ಸರಿಸಿ ಮುದ್ದು ಮಗನ ಕಡೆಗೆ {{gap}}ಕೈಯ ಚಾಚಿ ಕಾಣದಾದಳು {{gap}}ಮಗನ ಕಡೆಗೆ- {{gap}}ಕೈಯ ಚಾಚಿ ಕಾಣದಾದಳು ॥ ತರಳ ನಿದ್ದೆಗಣ್ಣಿನಲ್ಲಿ {{gap}}ಉರುಳಿ ಮುಂದೆ ಹೋದನೆಂದು {{gap}}ತಿಳಿದು ಸರಿದು ಸರಿದು ನೋಳ್ಪಳು {{gap}}ನೆಲಕೆ ಕೈಯ- {{gap}}ಸವರಿ ಮಗನ ಕಾಣದಾದಳು ॥ ಏಳುಬೀಳುತೆದ್ದು ದೀಪ {{gap}}ಹಚ್ಚಿ ನಾಲ್ಕು ಮೂಲೆ ನೋಡಿ {{gap}}ಮಗನ ಮೋರೆ ನೋಡದಾದಳು. {{gap}}ಹುಡುಕಿ ಹುಡುಕಿ {{gap}}ಮಗನ ಮೊಗವ ಕಾಣದಾದಳು ॥ ಕಣ್ಣು ತುಂಬ ನೀರು ತಂದು {{gap}}ಕೊರಲ ಸೆರೆಯ ಉಬ್ಬಿಬರಲು </poem><noinclude></noinclude> bw27cmhom2o09djou9n9rvs9rvo95s5 ಪುಟ:ನನ್ನ ನಲ್ಲ.pdf/೪೫ 104 75442 317086 293854 2026-05-04T17:50:18Z Pragathi. BH 7585 /* Proofread */ 317086 proofread-page text/x-wiki <noinclude><pagequality level="3" user="Pragathi. BH" />{{Left|೨೨}}{{Right|ನನ್ನ ನಲ್ಲ}}</noinclude> ಹೊರಟು ಮೂಕಳಂತೆ ನಡೆದಳು ಸುನೀತಿ ಎದ್ದು- ಮನೆಯ ಬಿಟ್ಟು ಹೊರಗೆ ನಡೆದಳು ॥ ೪ ತೋಟಪಟ್ಟಿ ಹಳ್ಳಕೊಳ್ಳ ಬಾವಿಕೆರೆಗಲ್ಲಿ ನೋಡಿ ಕೇರಿಕೇರಿ ತಿರುಗಿ ನೋಳ್ಳು ಹಿಂದಕೊಮ್ಮೆ- ಮುಂದಕೊಮ್ಮೆ ಹೊರಳಿ ನೋಳ್ಪಳು ॥ ೫ “ಅಲ್ಲಿ ಇರುವನೇನೋ ತರಳ ? {{gap}}ಇಲ್ಲಿ ಇರುವನೇನೋ ಕಂದ ?” {{gap}}ಎಂದು ಮುಂದುಮುಂದೆ ಹೊರಟಳು {{gap}}“ಬಿಸಿಲುಗುದುರೆ- {{gap}}ಹಿಂದೆ ಚಿಗರಿಯಂತೆ” ನಡೆದಳು ॥ ೬ ಮುಂದೆ ಹೋಗಿ ಮತ್ತೆ ಮನಸಿ ನಲ್ಲಿ 'ಮಗನು ಮನೆಗೆ ಹೋಗಿ ಮಲಗುಕೊಂಡನೇನೋ !” ಎಂದಳು ಜೋಕಾಲಿಯಂತೆ- ತೂಗಲಾಡಿ ಬಾಲೆ ದಣಿದಳು ॥ ೭ *ಸಣ್ಣ ಕೂಸು ಐದು ವರ್ಷ ತುಂಬಲಿಲ್ಲ ಇನ್ನು ತನಕ ಎನ್ನ ಕೂಸು ಎಲ್ಲಿ ಹೋಯಿತು ? ಸಣ್ಣ ಗಿಣಿಯು~ ಕತ್ತಲಲ್ಲಿ ಎತ್ತ ಹಾರಿತು ? ೮<noinclude></noinclude> lf9uovvge85wvtnk6pto34l4g20q4vt ಪುಟ:ನನ್ನ ನಲ್ಲ.pdf/೯೪ 104 75491 317041 312236 2026-05-04T15:03:29Z Shreelatha.Halemane 7642 /* Validated */ 317041 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ನನ್ನ ನಲ್ಲ}}{{Right|೭೧}} “ಇಲ್ಲೆ ಬಿತ್ತು” “ಇಲ್ಲೆ ಬಿತ್ತ!” ಎಲ್ಲರಂದ"ರಿಲ್ಲೆ ಬಿತ್ತು !!” ೬ ಬೇಡದವರ ಮೇಲೆ ಬಿತ್ತು ಬೇಡಿದವರಿಗೆ ಇಲ್ಲ ತುತ್ತು ಹಸಿಯದವರು ಹಲವು ಮಂದಿ ಹಸಿದ ಜನರು ಕೆಲವು ಮಂದಿ ೭ ಹಸಿಯದವಗೆ ಅಮೃತ ವಿಷವು ಹಸಿಯೆ ವಿಷವೆ ಅಮೃತರಸವು ಬಯಸಿದವಗೆ ಬೇವೆ ಬೆಲ್ಲ ಬಯಸದವಗೆ ಮೊದಲೆ ಹೊಲ್ಲ ೮ ಬೇಡದವರ ಮಗ್ಗುಲಲ್ಲೆ ಬೇಡಿಬಯಸುವವರು ಅಲ್ಲೆ ಬೇಡಿದಲ್ಲಿ ಬೀಳಲಿಲ್ಲ ಬೇಡದಲ್ಲಿ ಬಿದ್ದಿತಲ್ಲ ! ೯ ಎಲ್ಲೋ ಬಿದ್ದು ಹೋಗಲಿಲ್ಲ. ಇಲ್ಲೆ ಬಿದ್ದು ತನಗೆ ಇಲ್ಲ !!! ಹಣ್ಣು ಬಿತ್ತು ಹಣ್ಣು ಬಿತ್ತು ಇಂದ್ರವನದ ಹಣ್ಣು ಬಿತ್ತು ! ೧೦<noinclude></noinclude> 4gqg2n8qk7m7sfcwkryz8jjlrcerrwt ಪುಟ:ನನ್ನ ನಲ್ಲ.pdf/೧೩೦ 104 75527 316929 316905 2026-05-04T13:28:11Z Pragathi. BH 7585 316929 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ನನ್ನ ನಲ್ಲ|right=೧೦೭}} '''೩೮. ಅನಾದ್ಯನಂತ''' <poem>ಶಾಶ್ವತ ತಾಯೆ ಅ-ನಂತಾ ತಂದೇ ಸ್ವರೂಪ ನಿಮ್ಮದು ಭವ್ಯವಿದು ವಿಶ್ವಾಂತರ್ಯ ವಿಶ್ವಾಧಾರಾ ಲೀಲೆಯು ನಿಮ್ಮದು ದಿವ್ಯವಿದು {{Right|೧}} {{gap}}ಶಾಶ್ವತ “ಜೀವಂ” ಅನಂತ ಆತ್ಮನು {{gap}}ದೇಹದಲ್ಲೆ ದೇಹಿಗಳಿವರು {{gap}}ವಿಶ್ವದಲ್ಲಿ ಶಿವ-ಶಕ್ತಿಯರಿಬ್ಬರು {{gap}}ಅಗಲದೆ ಎಂದಿಗು ಇದ್ದವರು {{Right|೨}} ಒಬ್ಬನೆ ಎಂಬೆವು ಏಕಂ ತತ್ವಂ ಇಬ್ಬರೆಂಬುದತಿ ಗೂಢವಿದು ಒಬ್ಬನಶಕ್ಯನು ನಾಸ್ತಿಕವಾದಿಗೆ ಇಬ್ಬರ ಬಿಗಿ ಏಕೇಶ್ವರಿಗೂ {{Right|೩}} ಒಬ್ಬನೆ ಇರುತಿರೆ ಏಕಾಕಾರಂ ಏಕದ ಗುಣಿತವು ಏಕೈಕಂ ಇಬ್ಬರ ಕಾರಣ ಅಖಿಳ್ಳೆಶ್ವರಂ ಈರ್ವರಿಂದ ಪೂರ್ಣಾತ್ಪರ್ಣಂ {{Right|೪}} ತಾಯಿಯು ಹೃದಯಂ ತಂದೆಯ ಶೀರ್ಷಂ ಈರ್ವರ ಐಕ್ಯದೊಳೇಕಾಂಗಂ “ಮಾಯಿನಂತು ಮಾ-ಹೇಶ್ವರ"ನೆಂಬುದು ಶ್ವೇತಾಶ್ವರದ ಶ್ರುತಿಯಂಗಂ {{Right|೫}} “ಶಿಶುವಿನ” ಪದ್ಯವು ನಲ್ಮೆಯ ನೆಲೆಯಿದು ಬುದ್ಧಿಗೆ ಚಂದ್ರನ ಚರ್ಚಿತವು ಮಿಸುನಿಗು ಬಣ್ಣಕು ಬೆಸೆದಂತಿರುವಾ ಜನನೀ ಜನಕರ ಸಂಸ್ತವವು {{Right|೬}} </poem><noinclude></noinclude> togwnh8bp1gtfylnnhrvqkowv4wxcle 316930 316929 2026-05-04T13:28:59Z Pragathi. BH 7585 316930 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ನನ್ನ ನಲ್ಲ|right=೧೦೭}} '''೩೮. ಅನಾದ್ಯನಂತ''' <poem>ಶಾಶ್ವತ ತಾಯೆ ಅ-ನಂತಾ ತಂದೇ ಸ್ವರೂಪ ನಿಮ್ಮದು ಭವ್ಯವಿದು ವಿಶ್ವಾಂತರ್ಯ ವಿಶ್ವಾಧಾರಾ ಲೀಲೆಯು ನಿಮ್ಮದು ದಿವ್ಯವಿದು {{Right|೧}} {{gap}}ಶಾಶ್ವತ “ಜೀವಂ” ಅನಂತ ಆತ್ಮನು {{gap}}ದೇಹದಲ್ಲೆ ದೇಹಿಗಳಿವರು {{gap}}ವಿಶ್ವದಲ್ಲಿ ಶಿವ-ಶಕ್ತಿಯರಿಬ್ಬರು {{gap}}ಅಗಲದೆ ಎಂದಿಗು ಇದ್ದವರು {{Right|೨}} ಒಬ್ಬನೆ ಎಂಬೆವು ಏಕಂ ತತ್ವಂ ಇಬ್ಬರೆಂಬುದತಿ ಗೂಢವಿದು ಒಬ್ಬನಶಕ್ಯನು ನಾಸ್ತಿಕವಾದಿಗೆ ಇಬ್ಬರ ಬಿಗಿ ಏಕೇಶ್ವರಿಗೂ {{Right|೩}} {{gap}}ಒಬ್ಬನೆ ಇರುತಿರೆ ಏಕಾಕಾರಂ {{gap}}ಏಕದ ಗುಣಿತವು ಏಕೈಕಂ {{gap}}ಇಬ್ಬರ ಕಾರಣ ಅಖಿಳ್ಳೆಶ್ವರಂ {{gap}}ಈರ್ವರಿಂದ ಪೂರ್ಣಾತ್ಪರ್ಣಂ {{Right|೪}} ತಾಯಿಯು ಹೃದಯಂ ತಂದೆಯ ಶೀರ್ಷಂ ಈರ್ವರ ಐಕ್ಯದೊಳೇಕಾಂಗಂ “ಮಾಯಿನಂತು ಮಾ-ಹೇಶ್ವರ"ನೆಂಬುದು ಶ್ವೇತಾಶ್ವರದ ಶ್ರುತಿಯಂಗಂ {{Right|೫}} {{gap}}“ಶಿಶುವಿನ” ಪದ್ಯವು ನಲ್ಮೆಯ ನೆಲೆಯಿದು {{gap}}ಬುದ್ಧಿಗೆ ಚಂದ್ರನ ಚರ್ಚಿತವು {{gap}}ಮಿಸುನಿಗು ಬಣ್ಣಕು ಬೆಸೆದಂತಿರುವಾ {{gap}}ಜನನೀ ಜನಕರ ಸಂಸ್ತವವು {{Right|೬}} </poem><noinclude></noinclude> gw4lmbce2lbg8in3ue126qzpaizcyfa ಪುಟ:ನನ್ನ ನಲ್ಲ.pdf/೧೩೧ 104 75528 316931 313103 2026-05-04T13:33:08Z Pragathi. BH 7585 /* Validated */ 316931 proofread-page text/x-wiki <noinclude><pagequality level="4" user="Pragathi. BH" /></noinclude>{{Left|೧೦೮}}{{Right|ನನ್ನ ನಲ್ಲ}} '''೩೯. ಕಾವ್ಯಕರ್ಮ''' ಆನಂದಂ ಬ್ರಹ್ಮವೈಸೆ ನೀನರಿಯೆ ರಸೋವೈಸಃ ಕಾವ್ಯಕ್ಕಾಧಾರನೀತಂ ದಿವ್ಯಾತ್ಮಾ ಕೇಳು ಸತ್ಯಂ ೧ ಆನಂದಂ ಬೇಕು ತನ್ನೊಳ್ ಏನಂದಂ ವಾಣಿಯಾಗಳ ಉದ್ರೇಕಂ ಕೇಶಮೂಲಂ ಉದ್ರಿಕ್ತಂ ಕಾವ್ಯ ಬೇಡಾ ೨ ಸತ್ಯಾತ್ಮಾ ಶಾಂತಚಿತ್ತಂ ಅತ್ಯಂತಂ ಸೌಖ್ಯಯುಕ್ತಂ ಇಂತಿಲ್ಲೀ ಸುರಿತ ಕಾವ್ಯಂ ಶಾಂತಾತ್ಮಾ ಸುಜನ ಶ್ರಾವ್ಯಂ ೩ ಚಿಕ್ಕಗನಂ ಭವ್ಯ ಛತ್ರಂ ಹೃತ್ಯುಮುದಂ ರಮ್ಯ ಪೀಠಂ ಸತ್ಯವಿತಾದೇವಿಗಿಂತೋಂ ಚಿಕ್ಕುಸುಮಾರಾಮ ತಾಂ ೪ ಪೇಳ್ವರ್ಗಂ ಭವ್ಯ ಸೌಖ್ಯಂ ಕೇಳರ್ಗಂ ದಿವ್ಯ ಸೌಖ್ಯಂ ಈವರ್ಗ೦ ಕಾವ್ಯಕರ್ಮಂ ಸರ್ವತಂ ಶಾಂತಿಪರ್ವ ೫<noinclude></noinclude> i10knfaw2e220onzyp64jcs1vp3nbhh 316942 316931 2026-05-04T13:50:30Z Pragathi. BH 7585 316942 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=೧೦೮|right=ನನ್ನ ನಲ್ಲ}} '''೩೯. ಕಾವ್ಯಕರ್ಮ''' <poem>ಆನಂದಂ ಬ್ರಹ್ಮವೈಸೆ ನೀನರಿಯೈ ರಸೋವೈಸಃ ಕಾವ್ಯಕ್ಕಾಧಾರನೀತಂ ದಿವ್ಯಾತ್ಮಾ ಕೇಳು ಸತ್ಯಂ {{Right|೧}} ಆನಂದಂ ಬೇಕು ತನ್ನೊಳ್ ಏನಂದಂ ವಾಣಿಯಾಗಳ ಉದ್ರೇಕಂ ಕೇಶಮೂಲಂ ಉದ್ರಿಕ್ತಂ ಕಾವ್ಯ ಬೇಡಾ{{Right|೨}} ಸತ್ಯಾತ್ಮಾ ಶಾಂತಚಿತ್ತಂ ಅತ್ಯಂತಂ ಸೌಖ್ಯಯುಕ್ತಂ ಇಂತಿಲ್ಲೀ ಸುರಿತ ಕಾವ್ಯಂ ಶಾಂತಾತ್ಮಾ ಸುಜನ ಶ್ರಾವ್ಯಂ{{Right|೩}} ಚಿದ್ಗಗನಂ ಭವ್ಯ ಛತ್ರಂ ಹೃತ್ಕುಮುದಂ ರಮ್ಯ ಪೀಠಂ ಸತ್ಯವಿತಾದೇವಿಗಿಂತೋಂ ಚಿತ್ಕುಸುಮಾರಾಮ ತಾಣೋಂ{{Right|೪}} ಪೇಳ್ದರ್ಗಂ ಭವ್ಯ ಸೌಖ್ಯಂ ಕೇಳ್ದರ್ಗಂ ದಿವ್ಯ ಸೌಖ್ಯಂ ಈವರ್ಗ೦ ಕಾವ್ಯಕರ್ಮಂ ಸರ್ವತ್ರಂ ಶಾಂತಿಪರ್ವಂ {{Right|೫}} </poem><noinclude></noinclude> lhyqij4e4mdg2fozz64h2v2rcy2yu9a 316947 316942 2026-05-04T13:52:09Z Pragathi. BH 7585 316947 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=೧೦೮|right=ನನ್ನ ನಲ್ಲ}} '''೩೯. ಕಾವ್ಯಕರ್ಮ''' <poem> {{gap}}ಆನಂದಂ ಬ್ರಹ್ಮವೈಸೆ {{gap}}ನೀನರಿಯೈ ರಸೋವೈಸಃ {{gap}}ಕಾವ್ಯಕ್ಕಾಧಾರನೀತಂ {{gap}}ದಿವ್ಯಾತ್ಮಾ ಕೇಳು ಸತ್ಯಂ {{Right|೧}} ಆನಂದಂ ಬೇಕು ತನ್ನೊಳ್ ಏನಂದಂ ವಾಣಿಯಾಗಳ ಉದ್ರೇಕಂ ಕೇಶಮೂಲಂ ಉದ್ರಿಕ್ತಂ ಕಾವ್ಯ ಬೇಡಾ{{Right|೨}} {{gap}}ಸತ್ಯಾತ್ಮಾ ಶಾಂತಚಿತ್ತಂ {{gap}}ಅತ್ಯಂತಂ ಸೌಖ್ಯಯುಕ್ತಂ {{gap}}ಇಂತಿಲ್ಲೀ ಸುರಿತ ಕಾವ್ಯಂ {{gap}}ಶಾಂತಾತ್ಮಾ ಸುಜನ ಶ್ರಾವ್ಯಂ{{Right|೩}} ಚಿದ್ಗಗನಂ ಭವ್ಯ ಛತ್ರಂ ಹೃತ್ಕುಮುದಂ ರಮ್ಯ ಪೀಠಂ ಸತ್ಯವಿತಾದೇವಿಗಿಂತೋಂ ಚಿತ್ಕುಸುಮಾರಾಮ ತಾಣೋಂ{{Right|೪}} {{gap}}ಪೇಳ್ದರ್ಗಂ ಭವ್ಯ ಸೌಖ್ಯಂ {{gap}}ಕೇಳ್ದರ್ಗಂ ದಿವ್ಯ ಸೌಖ್ಯಂ {{gap}}ಈವರ್ಗಂ ಕಾವ್ಯಕರ್ಮಂ {{gap}}ಸರ್ವತ್ರಂ ಶಾಂತಿಪರ್ವಂ {{Right|೫}} </poem><noinclude></noinclude> 9cmwziyhfq90ndq855hciapplz9neaz ಪುಟ:ನನ್ನ ನಲ್ಲ.pdf/೧೩೨ 104 75529 316954 313104 2026-05-04T13:58:42Z Pragathi. BH 7585 /* Validated */ 316954 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ನನ್ನ ನಲ್ಲ|right=೧೦೯}} '''೪೦. ಯಾಮಿನೀ''' <poem> {{gap}}ಅಂತರ್ಲೀನಂ ವಿಶ್ವಂ {{gap}}ಶಾಂತಂ ಸ್ವಾಂತಂ ಸುಖದಂ {{gap}}ಸರ್ವ ಶಾಂತಾಕಾರಂ {{gap}}ಪರ್ವಂ ಸುಮಹಾಪರ್ವಂ {{Right|೧{} ಯೋಗಾರಾಮ ವಿರಾಮಂ ಯೋಗಾರೂಢಂ ನಿಖಿಲಂ ನಿದ್ರಾಲೋಲಂ ಜೀವಂ ಭದ್ರಂ ಬಾಹ್ಯಾಂತರ್ಯಂ{{Right|೨}} {{gap}}ತಾರಾಕಾಂತಿ ಸುಮಂದಂ {{gap}}ದೂರಂ ನೈಶಾ ಛಂದಂ {{gap}}ಚಂದ್ರ ಶಾಂತಂ ಶೀತಂ {{gap}}ಹಾಕಿದ್ರು ಜೋತ್ಸ್ನಾಪೂರಂ{{Right|೩}} ಸ್ವಪ್ನಂ ದಿವ್ಯಂ ಮಧುರಂ ಪ್ರಾಪ್ತಂ ಪ್ರಾಪ್ಯಂ ಭವ್ಯಂ ಲಬ್ಧಂ ಗುಪ್ತಂ ತಥ್ಯಂ ಸ್ತಬ್ಧಂ ಶಬ್ದಂ ನಿತ್ಯಂ {{Right|೪}} {{gap}}ಗಾಢಂ ಕೃಷ್ಣಂ ಗೂಢಂ {{gap}}ಪ್ರೌಢಂ ಗೋಪನ-ವೃತ್ತಂ {{gap}}ಮಂದ್ರಂ ಕೌಮುದಿ ರಮ್ಯಂ {{gap}}ಬ್ರಿಂದಾಬನ ಸುಖನೃತ್ಯಂ {{Right|೫}}<noinclude></noinclude> h3a8l4h6wwuwj4xlrlwgqmffevchvhu 316955 316954 2026-05-04T13:59:23Z Pragathi. BH 7585 316955 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ನನ್ನ ನಲ್ಲ|right=೧೦೯}} '''೪೦. ಯಾಮಿನೀ''' <poem> {{gap}}ಅಂತರ್ಲೀನಂ ವಿಶ್ವಂ {{gap}}ಶಾಂತಂ ಸ್ವಾಂತಂ ಸುಖದಂ {{gap}}ಸರ್ವ ಶಾಂತಾಕಾರಂ {{gap}}ಪರ್ವಂ ಸುಮಹಾಪರ್ವಂ {{Right|೧{} ಯೋಗಾರಾಮ ವಿರಾಮಂ ಯೋಗಾರೂಢಂ ನಿಖಿಲಂ ನಿದ್ರಾಲೋಲಂ ಜೀವಂ ಭದ್ರಂ ಬಾಹ್ಯಾಂತರ್ಯಂ{{Right|೨}} {{gap}}ತಾರಾಕಾಂತಿ ಸುಮಂದಂ {{gap}}ದೂರಂ ನೈಶಾ ಛಂದಂ {{gap}}ಚಂದ್ರ ಶಾಂತಂ ಶೀತಂ {{gap}}ಹಾಕಿದ್ರು ಜೋತ್ಸ್ನಾಪೂರಂ{{Right|೩}} ಸ್ವಪ್ನಂ ದಿವ್ಯಂ ಮಧುರಂ ಪ್ರಾಪ್ತಂ ಪ್ರಾಪ್ಯಂ ಭವ್ಯಂ ಲಬ್ಧಂ ಗುಪ್ತಂ ತಥ್ಯಂ ಸ್ತಬ್ಧಂ ಶಬ್ದಂ ನಿತ್ಯಂ {{Right|೪}} {{gap}}ಗಾಢಂ ಕೃಷ್ಣಂ ಗೂಢಂ {{gap}}ಪ್ರೌಢಂ ಗೋಪನ-ವೃತ್ತಂ {{gap}}ಮಂದ್ರಂ ಕೌಮುದಿ ರಮ್ಯಂ {{gap}}ಬ್ರಿಂದಾಬನ ಸುಖನೃತ್ಯಂ {{Right|೫}} </poem><noinclude></noinclude> pnjveslf1e5hr9yl5drzl5k5vcy7kky 316956 316955 2026-05-04T13:59:44Z Pragathi. BH 7585 316956 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ನನ್ನ ನಲ್ಲ|right=೧೦೯}} '''೪೦. ಯಾಮಿನೀ''' <poem> {{gap}}ಅಂತರ್ಲೀನಂ ವಿಶ್ವಂ {{gap}}ಶಾಂತಂ ಸ್ವಾಂತಂ ಸುಖದಂ {{gap}}ಸರ್ವ ಶಾಂತಾಕಾರಂ {{gap}}ಪರ್ವಂ ಸುಮಹಾಪರ್ವಂ {{Right|೧}} ಯೋಗಾರಾಮ ವಿರಾಮಂ ಯೋಗಾರೂಢಂ ನಿಖಿಲಂ ನಿದ್ರಾಲೋಲಂ ಜೀವಂ ಭದ್ರಂ ಬಾಹ್ಯಾಂತರ್ಯಂ{{Right|೨}} {{gap}}ತಾರಾಕಾಂತಿ ಸುಮಂದಂ {{gap}}ದೂರಂ ನೈಶಾ ಛಂದಂ {{gap}}ಚಂದ್ರ ಶಾಂತಂ ಶೀತಂ {{gap}}ಹಾಕಿದ್ರು ಜೋತ್ಸ್ನಾಪೂರಂ{{Right|೩}} ಸ್ವಪ್ನಂ ದಿವ್ಯಂ ಮಧುರಂ ಪ್ರಾಪ್ತಂ ಪ್ರಾಪ್ಯಂ ಭವ್ಯಂ ಲಬ್ಧಂ ಗುಪ್ತಂ ತಥ್ಯಂ ಸ್ತಬ್ಧಂ ಶಬ್ದಂ ನಿತ್ಯಂ {{Right|೪}} {{gap}}ಗಾಢಂ ಕೃಷ್ಣಂ ಗೂಢಂ {{gap}}ಪ್ರೌಢಂ ಗೋಪನ-ವೃತ್ತಂ {{gap}}ಮಂದ್ರಂ ಕೌಮುದಿ ರಮ್ಯಂ {{gap}}ಬ್ರಿಂದಾಬನ ಸುಖನೃತ್ಯಂ {{Right|೫}} </poem><noinclude></noinclude> 89smh39mf4t053mn8pb0yvpwhzz958d ಪುಟ:ನನ್ನ ನಲ್ಲ.pdf/೧೩೩ 104 75530 316958 313105 2026-05-04T14:02:02Z Pragathi. BH 7585 /* Validated */ 316958 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=೧೧೦|right=ನನ್ನ ನಲ್ಲ}} '''೪೧. ಜೀವನಸೋಪಾನ''' <poem> ಹಡೆಯವ್ವಾ ತಂಗಿ ಹಡೆಯವ್ವಾ ಹಡೆದವ್ವಾ ಕೇಳು ಹಡೆದವ್ವಾ {{gap}}ಹಡೆಯುವದು ಇಲ್ಲಿ ಹಿರಿ ಕೆಲಸಾ {{gap}}ಬಿಡದು ಇದು ಯಾವದಕು ಸಹಸಾ {{gap}}ಇದರಿಂದ ಜಗವು ಅಕ್ಷಯವು {{gap}}ಅದಕೆಂತೇ ಇದಕೆ ಅತಿ ಛಲವು {{Right|೧}} ನಡೆಯಲ್ವಾ ಅಕ್ಕ ನಡೆಯಪ್ಪಾ ಹಡೆದವ್ವಾ ಕೇಳು ಹಡೆದವ್ವಾ {{gap}}ನಡೆಯುವದು ಬಹಳ ಹಿರಿ ಕಾರ್ಯ {{gap}}ನಡೆಯೆಂದೇ ನುಡಿಯುತಿದೆ ತೂರ್ಯ {{gap}}ನಡೆದರೆಯೇ ಜಗದಿ ಹೊಸಹೊಸದು {{gap}}ನಡೆ ಅದಕೇ ಇದನು ನೀ ತಿಳಿದು {{Right|೨}} ಪಡೆಯವ್ವಾ ತಾಯಿ ಪಡೆಯವ್ವಾ ಹಡೆದವ್ವಾ ಕೇಳು ಹಡೆದವ್ವಾ {{gap}}ಪಡೆವುದರಾ ಸುಖಕೆ ಮಿತಿಯಿಲ್ಲಾ {{gap}}ಪಡೆದವರಾ ಕತೆಗೆ ಇತಿಯಿಲ್ಲಾ {{gap}}ಪಡೆದವರೇ ಜಗದ ತಾರಕರು {{gap}}ಕಡೆತನಕಾ ಇರಲಿ ಈ ಉಸಿರು {{Right|೩}} </poem><noinclude></noinclude> a0ld3q93i5c7dceuh5v4gcqozqtir91 316959 316958 2026-05-04T14:03:46Z Pragathi. BH 7585 316959 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=೧೧೦|right=ನನ್ನ ನಲ್ಲ}} '''೪೧. ಜೀವನಸೋಪಾನ''' <poem> ಹಡೆಯವ್ವಾ ತಂಗಿ ಹಡೆಯವ್ವಾ ಹಡೆದವ್ವಾ ಕೇಳು ಹಡೆದವ್ವಾ {{gap}}ಹಡೆಯುವದು ಇಲ್ಲಿ ಹಿರಿ ಕೆಲಸಾ {{gap}}ಬಿಡದು ಇದು ಯಾವದಕು ಸಹಸಾ {{gap}}ಇದರಿಂದೆ ಜಗವು ಅಕ್ಷಯವು {{gap}}ಅದಕೆಂತೇ ಇದಕೆ ಅತಿ ಛಲವು {{Right|೧}} ನಡೆಯಲ್ವಾ ಅಕ್ಕ ನಡೆಯವ್ವಾ ಹಡೆದವ್ವಾ ಕೇಳು ಹಡೆದವ್ವಾ {{gap}}ನಡೆಯುವದು ಬಹಳ ಹಿರಿ ಕಾರ್ಯ {{gap}}ನಡೆಯೆಂದೇ ನುಡಿಯುತಿದೆ ತೂರ್ಯ {{gap}}ನಡೆದರೆಯೇ ಜಗದಿ ಹೊಸಹೊಸದು {{gap}}ನಡೆ ಅದಕೇ ಇದನು ನೀ ತಿಳಿದು {{Right|೨}} ಪಡೆಯವ್ವಾ ತಾಯಿ ಪಡೆಯವ್ವಾ ಹಡೆದವ್ವಾ ಕೇಳು ಹಡೆದವ್ವಾ {{gap}}ಪಡೆವುದರಾ ಸುಖಕೆ ಮಿತಿಯಿಲ್ಲಾ {{gap}}ಪಡೆದವರಾ ಕತೆಗೆ ಇತಿಯಿಲ್ಲಾ {{gap}}ಪಡೆದವರೇ ಜಗದ ತಾರಕರು {{gap}}ಕಡೆತನಕಾ ಇರಲಿ ಈ ಉಸಿರು {{Right|೩}} </poem><noinclude></noinclude> 6zozftdrjjckjgsmr21h6ifevf9ffir ಪುಟ:ನನ್ನ ನಲ್ಲ.pdf/೧೩೪ 104 75531 316963 313111 2026-05-04T14:07:17Z Pragathi. BH 7585 /* Validated */ 316963 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ನನ್ನ ನಲ್ಲ|right=೧೧೧}} '''೪೨. ಗದ್ದರಣೆ''' <poem> ಬಿಂಕಾ ಬಿಂಕಾ {{gap}}ಬಿಡು ಬಿಡು ಬಿಂಕಾ {{gap}}ಎಲ್ಲಿಯ ಬಿಂಕಾ {{gap}}ಯಾತರ ಬಿಂಕಾ {{gap}}ಬಿಂಕದ ಮಂಕಾ {{gap}}ಬಿಡು ಬಿಡು ಬಿಡು ಬಿಂಕಾ {{gap}}ಏಷಾ ದೈವೀವಾಗನುವದತೀ {{gap}}ಸ್ತನಯಿತ್‌ನುರ್ದಡಡ ಇತೀ {{Right|೧}} ಬಾಯಿಲೆ ಬೀರಾ {{gap}}ಯಾ ಅವತಾರಾ {{gap}}ನೋಡುವೆ ಬಾರಾ {{gap}}ಎಲ್ಲಿದೆ ಧೀರಾ {{gap}}ಘನ ಟಂಕಾರಾ {{gap}}ಬಿಡು ಬಿಡು ಹಂಕಾರಾ {{gap}}ಏಷಾ ದೈವೀವಾಗನುವದತೀ {{gap}}ಸ್ತನಯಿತ್‌ನುರ್ದಡಡ ಇತೀ {{Right|೨}} ರಾವಣ ರಂಕಾ {{gap}}ಎಲ್ಲಿದೆ ಲಂಕಾ {{gap}}ಬಿಲ್ಲಿನ ಟಂಕಾ {{gap}}ಬಿಡಿಸಿತು ಬಿಂಕಾ {{gap}}ರಾಮನ ಡಂಕಾ {{gap}}ಗಡಗಡ ಬಿಡು ಬಿಂಕಾ {{gap}}ಏಷಾ ದೈವೀವಾಗನುವದತೀ {{gap}}ಸ್ತನಯಿತ್‌ನುರ್ದಡಡ ಇತೀ{{Right|೩}} </poem><noinclude></noinclude> gvbmakkreejggjpkjwqxdbyzyf5u5fv ಪುಟ:ನನ್ನ ನಲ್ಲ.pdf/೧೩೫ 104 75532 316966 313129 2026-05-04T14:09:50Z Pragathi. BH 7585 /* Validated */ 316966 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=೧೧೨|right=ನನ್ನ ನಲ್ಲ}} <poem> '''೪೩ ಮಾವಿನಗೊಲ್ಲೆ''' ನಾವು |ದೇವನ ದೇಟಿನ ಕಾಯಿಗಳು ಎಲ್ಲಾ | ಒಂದೇ ದೇಟಿನ ಮಾವುಗಳು {{gap}}ಎಲ್ಲಾ ಪ್ರಾಣಿಗಳು {{gap}}ಎಲ್ಲಾ ವಸ್ತುಗಳು {{gap}}ಎಲ್ಲಾ ಎಲ್ಲಾ ಎಲ್ಲಾ ಎಲ್ಲಾ | ಒಂದೇ ದೇಟಿನ ಮಾವುಗಳು ನಾವು | ದೇವನ ದೇಟಿನ ಕಾಯಿಗಳೂ {{gap}}ಒಂದೋ ಬಲು ಹಿರಿದು {{gap}}ಒಂದೋ ಅತಿ ಕಿರಿದು {{gap}}ಚಿಕ್ಕದು ದೊಡ್ಡದು ಎಲ್ಲಾ ಎಲ್ಲಾ | ಒಂದೇ ದೇಟಿನ ಮಾವುಗಳು ನಾವು | ದೇವನ ದೇಟಿನ ಕಾಯಿಗಳು {{gap}}ಒಂದೋ ಸವಿ ಹಣ್ಣು {{gap}}ಒಂದೋ ಹುಳಿ ಹೀಚು {{gap}}ಹಣ್ಣು ಹೀಚು ಎಲ್ಲಾ ಎಲ್ಲಾ | ಒಂದೇ ದೇಟಿನ ಮಾವುಗಳು ನಾವು | ದೇವನ ದೇಟಿನ ಕಾಯಿಗಳು {{gap}}ಸಂಪ್ರೀತಿಯ ಸುರರು {{gap}}ರೊಚ್ಚಿನ ರಕ್ಕಸರು {{gap}}ಎಲ್ಲಾ ಎಲ್ಲಾ ಎಲ್ಲಾ ಎಲ್ಲಾಽ | ಒಂದೇ ದೇಟಿನ ಮಾವುಗಳು ನಾವು | ದೇವನ ದೇಟಿನ ಕಾಯಿಗಳು </poem><noinclude></noinclude> rmrho5kqlo1agaqzu9ax5stihzzt6l1 ಪುಟ:ನನ್ನ ನಲ್ಲ.pdf/೧೩೬ 104 75533 316970 313130 2026-05-04T14:12:34Z Pragathi. BH 7585 /* Validated */ 316970 proofread-page text/x-wiki <noinclude><pagequality level="4" user="Pragathi. BH" /></noinclude>{{Left|ನನ್ನ ನಲ್ಲ}}{{Right|೧೧೩}} '''೪೪. ಸುಖಜೀವನ''' {{center|೧}} <poem> ತಲಿಮ್ಯಾಲ ಹೊರಿಯೊಂದ | ಬಗಲಾಗ ಕೂಸೊಂದ ಬಂದಾಳ ಬಾಲಿ ಬಂದಾಳ | ಹೊಲದಿಂದ ಬಂದಾಳ{{Right||ಪ|}} ಮಗಳೊಂದು ಮುಂದ ಮುಂದ | ಕೈಯಾಗ ಆಡೊಂದ ಮನಿಯಾಗ ಮರಿಯೊಂದ | ಮರಿಮ್ಯಾಲ ಮನಸೊಂದ ಮನಸೆಲ್ಲ ಮನಿಯಾಗ | ಕೆಲಸೆಲ್ಲ ಹೊಲದಾಗ ಲಗಬಿಗಿ ಬರವುದಕ | ಮರಿ ಬಂದು ಬಾಗಿಲಕ ಕುರಿ ಹೋಗಿ ಮರಿ ನೆಕ್ಕಿ | ತಾ ಶಿಶುವ ಮುದ್ದಿಕ್ಕಿ ಕರಿಗೊಂಬಿ ಕಟಗಿದ | ಮಗಳೋಡಿ ಎತಗೊಂಡ ಕೈಯಾಗ ಕರಿಗೊಂಬಿ | ಮನದಾಗ ಖುಷಿ ತುಂಬಿ ಕುರಿ ಕಚ್ಚಿ ಎಳಿಹುಲ್ಲ | ಮರಿ ಕುಡಿದು ಮಲಿಹಾಲ ಸಂಜೀಯ ಹೊಟ್ಟೆಗಿ | ಮುಂಜಾಳೆ ಮಾಡಿಹಳ ಮಕ್ಕಳು-ಮರಿವುಂಡು | ಚಕ್ಕನೆ ತಾವುಂಡು ಹಾಸೀಗಿ ಹಾಸಗೊಂಡು | ಮೆತ್ತಗೆ ಮಲಕೊಂಡು ಗುರುವೀಗಿ ನೆನದಾಳ | ಹರನೀಗಿ ನೆನಸ್ಯಾಳ ನೆನೆಯೂತ ನೆನಸೂತ | ನಿದ್ದೀಯ ಮಾಡ್ಯಾಳ ನಿದ್ಯಾಗ ಹೊಲವಿಲ್ಲ | ನಿದ್ಯಾಗ ಮನಿಯಿಲ್ಲ ಸುಖನಿದ್ದಿ ಬೆಳೆಯ ಲಿ | ಸವಿಗನಸು ಬೀಳಲಿ {{center|೨}} ಕನಸು ಬಿತ್ತು ಬಾಲೆಗೆ | ಮನಸಿನೊಂದು ದೀವಿಗೆ ಜಡೆಯ ಮುಡಿಯ ತಂದೆಯು | ನೋಡು ಮಗಳೆ ಎಂದನು ಸ್ವಾಮಿ, ಶಿರವ ಬಾಗುವೆ | ಪ್ರೇಮಿ, ಕೈಯ ಮುಗಿಯುವೆ ಹೊಲವು ಮನೆಯು ಯಾರವು 1 ನೆಲವು ಜಲವು ನಿನ್ನವು ಸುಖದ ಶಿಶುವು ಯಾರದು - ಸಕಲ ಜೀವ ನಿನ್ನದು </poem><noinclude></noinclude> rh4cpexd8b6za92lkchigkh5wkeh2mc ಪುಟ:ನನ್ನ ನಲ್ಲ.pdf/೧೩೭ 104 75534 316973 313136 2026-05-04T14:15:10Z Pragathi. BH 7585 /* Validated */ 316973 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=೧೧೪|right=ನನ್ನ ನಲ್ಲ}} <poem> ನಿನ್ನವಲ್ಲವೇತಕೆ | ನೀನೆ ತಂದೆ ಲೋಕಕೆ ನೀನು ಒಡತಿಯಲ್ಲವೆ | ಪ್ರಾಣತೊತ್ತು ಅಲ್ಲವೆ ? ಕೆಲಸ ಗೈವುದಿಲ್ಲವೆ | ಚಲನವಲನ ಬೇಡವೆ ? ಸುಖಕೆ ನಲಿವುದಿಲ್ಲವೆ | ನಿಖಿಲ ಲೀಲೆ ಹೊಲ್ಲವೆ ? ನಾನು ನಿನಗೆ ಮೆಚ್ಚಿದೆ | ಏನು ಬೇಕು ಹೆಚ್ಚಿಗೆ ! </poem><noinclude></noinclude> ag5efes4zj4tcdi8wwwq5oueaoete6q ಪುಟ:ನನ್ನ ನಲ್ಲ.pdf/೧೩೮ 104 75535 316979 313138 2026-05-04T14:20:01Z Pragathi. BH 7585 /* Validated */ 316979 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ನನ್ನ ನಲ್ಲ|right=೧೧೫}} '''೪೫. ದಿವಸ್ಪತಿ''' <poem> ಅಷ್ಟದಳ ಕಮಲವಿದು | ಎಂಟು ದಿಶೆಗಳ ಬೆಡಗು || ನಟ್ಟ ನಡುವಿಳೆ ವಲಯ | ಮೂರು, ಕರ್ಣಿಕೆ ಮೇರು|| ತುಟ್ಟತುದಿಯಲಿ ತೂರ್ಯ | ಮಧ್ಯಮಹದಲ್ಲಿ ಸೂರ್ಯ|| ಸೃಷ್ಟಿಚಕ್ರದ ಚೆಲುವು | ದೇವದೇವನ ನಲಿವು|| ಭೂಹೃದಯ ಕಮಲದಲ | ವಲಯ ಕರ್ಣಿಕೆಗಳಲಿ || ಶ್ರೀಹಂಸ ಸಂಚುಪ | ಪರಿಪರಿಯ ಬೆಡಗಿನಲಿ || ದ್ವಾದಶಾರಂಗಗಳಲಿ | ದ್ವಾದಶಾದಿತ್ಯ ಬರೆ || ದ್ವಾದಶಸ್ಥಿತಿ, ನಾಲ್ಕ || ವಸ್ಥೆ ಭಾವಾಷ್ಟಕವು || ಕರ್ಮಗಳು ಧರ್ಮಗಳು | ಬಗೆಬಗೆಯ ದುಡಿಮೆಗಳು || ನಿರ್ಮಿತಿಗಳೆಡೆಬಿಡದ | ಬಹು ಕಾರ್ಯ ಕಜ್ಜಗಳು || “ಭಾವಗಳು ರಾಗಗಳು | ಬಗೆಬಗೆಯ ಭೋಗಗಳು || ಅವಾವವಲೆಯುವವು || ಮನುಜರೆದೆಯಾಳದೊಳು”|| ಸಾಕ್ಷಿಯೆಲ್ಲಕೆ ಈತ | ದಿವ್ಯ ತೇಜೋವಂತ || ಚಕ್ಷುವೀತನೆ ಜಗಕೆ | ಅದಿತಿ ಮಾತೆಯ ಜಾತ|| ಸವಿತುರ್ವರೇಣ್ಯನೆಂ- | ದಿವನ ಕೊಂಡಾಡುವರು || ನವಮತಿಗೆ ಬೆಳಕೆಂದು | ನಿಮಕ್ಷಿವರರು ನೆನೆಯುವರು || </poem><noinclude></noinclude> sygs3lfpll918t5bhg1wotaxapanblw ಪುಟ:ನನ್ನ ನಲ್ಲ.pdf/೧೩೯ 104 75536 316983 313139 2026-05-04T14:21:21Z Pragathi. BH 7585 /* Validated */ 316983 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=೧೧೬|right=ನನ್ನ ನಲ್ಲ}} '''೪೬. ರಮ್ಯಸೃಷ್ಟಿ''' <poem> ಮಹಾsಕಾಶ ಶಿರದ ಮೇಲೆ ಆಹಾ-ಪೃಥ್ವಿ ರಮ್ಯ ಮುಂದೆ ಬಾನುಭೂಮಿ ಅಪ್ಪಿದಲ್ಲಿ ಏನು ರಮ್ಯ ದೂರದಲ್ಲಿ ಪ್ರಭಾಮಯನು ವಿಭಾಕರನು ನಭಾಂಗಣದಿ ವಿರಾಜಿಪನು ಹಾಲು ಮೋಡ ಅಲ್ಲಿ ಇಲ್ಲಿ ನೀಲಗಗನ ಅಲ್ಲಿ ಇಲ್ಲಿ ಹೊನ್ನ ಬಿಸಿಲು ಸೂಸಿ ಸೂಸಿ ರನ್ನನೆಲದಿ ಹಾಸಿ ಹಾಸಿ ತರುವು ಹಸಿರು ಮರವು ಹಸಿರು ಮೆರೆವ ಹುಲ್ಲು ಹಚ್ಚಹಸಿರು ಮರದ ಸಾಲು ಮೇವ ಮೇಕ ತೆರೆದ ಹಕ್ಕಿ ಏನು ಚೆಲುವು ಎತ್ತು ಎಮ್ಮೆ ಆಡು ಆವು ಚಿತ್ತಗೊಟ್ಟು ಮೇವ ಠೀವು ಹೆಣ್ಣು ಗಂಡು ಕೂಸು ಕುನ್ನಿ ದಿನ್ನಿ ದಿಬ್ಬ ಹಾದಿ ಬೀದಿ ಏನು ಚಂದ ಏನು ಚಲುವು ಏನು ಬೇಕು ಇದಕು ಮಿಗಿಲು ಮಹಾಕಾಶ ಶಿರದ ಮೇಲೆ ಆಹಾ-ಪೃಥ್ವಿ ರಮ್ಯ ಮುಂದೆ ಬಾನುಭೂಮಿ ಅಪ್ಪಿದಲ್ಲಿ ಏನು ರಮ್ಯ ದೂರದಲ್ಲಿ </poem><noinclude></noinclude> o1ei9i0p7c4zzmdzyzsthumocqqnnrp ಪುಟ:ನನ್ನ ನಲ್ಲ.pdf/೧೪೦ 104 75537 316989 313141 2026-05-04T14:23:39Z Pragathi. BH 7585 /* Validated */ 316989 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ನನ್ನ ನಲ್ಲ|right=೧೧೭}} '''೪೭. ಉಷಾದೇವಿ''' <poem> ಬಂದಳು ಉಷೆಯು {{gap}}ಬೆಳಗಿತು ದಿಶೆಯು {{gap}}{{gap}}ಬಣ್ಣಬಣ್ಣಗಳ ಸಂಭಾರಂ {{gap}}{{gap}}{{gap}}ಸುಂದರ ಮೊಗದಲ್ಲಿ {{gap}}{{gap}}{{gap}}{{gap}}ಜರದಂಚಿನ ಸಿರಿ {{gap}}{{gap}}{{gap}}{{gap}}{{gap}}ಪಾಟಲ ವರ್ಣದ {{gap}}{{gap}}{{gap}}{{gap}}{{gap}}{{gap}}ದಿವ್ಯ ಪ್ರೇಮದ ಭಾಂಡಾರಂ ಜರದಂಚಿನ ಸಿರಿ {{gap}}ನೀಲಿಯ ವಸನಕೆ {{gap}}{{gap}}ಒಪ್ಪುವ ನಗೆಹೂ ಅಲ್ಲಲ್ಲಿ {{gap}}{{gap}}{{gap}}ಚರಣವ ಸ್ಪರ್ಶಿಪ {{gap}}{{gap}}{{gap}}ಹಸುರಿನ ಕುತನಿಯ {{gap}}{{gap}}{{gap}}ಹಡದಿಯ ಸಂಭ್ರಮ ಧರೆಯಲ್ಲಿ ಜೀವ ಜಡಂಗಳ {{gap}}ಹಿರಿಹಿಗ್ಗಿನ ಸೆಲೆ {{gap}}{{gap}}ದಿನದ ವಸಂತದ ಸವಿ ಸಿರಿಯು {{gap}}{{gap}}{{gap}}ದೇವ ದಿವಸ್ಪತಿ {{gap}}{{gap}}{{gap}}{{gap}}ಜೀವ ವನಸ್ಪತಿ {{gap}}{{gap}}{{gap}}{{gap}}ಗೆದೆಯೂಡಲು ಕಳಿಸಿದ ಹಿತೆಯು ಬಣ್ಣದ ಜೋಗುಳ {{gap}}ಬಣ್ಣದ ಲಾಲನೆ {{gap}}{{gap}}ಬಣ್ಣಬಣ್ಣದಮೃತದ ಹಾಲು {{gap}}{{gap}}{{gap}}ಕಣ್ಣಳ ತಣಿಸುವ {{gap}}{{gap}}{{gap}}ಬಣ್ಣಳ ಹರಕೆಯು {{gap}}{{gap}}{{gap}}{{gap}}ಮರ್ತ್ಯಕೆ ಅಮರತ್ವದ ಕುಕಿಲು </poem><noinclude></noinclude> n2okbh67ma68q13yze2m5hjodip12qu ಪುಟ:ನನ್ನ ನಲ್ಲ.pdf/೧೪೧ 104 75538 316995 313594 2026-05-04T14:25:38Z Pragathi. BH 7585 316995 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=೧೧೮|right=ನನ್ನ ನಲ್ಲ}} <poem> ಪರಮ ಪ್ರೇಮಮಯಿ {{gap}}ಪರಮ ಪ್ರಕಾಶನ {{gap}}{{gap}}ಪರತರ ಹಿರಿಕೃಪೆಯಾಗಾರಂ {{gap}}{{gap}}{{gap}}ಧರಣಿಗೆ ದಿವವನು {{gap}}{{gap}}{{gap}}{{gap}}ದಿನದಿನ ಸುರಿಸುವ {{gap}}{{gap}}{{gap}}{{gap}}ಆದಿಮಾತೆ ಶಿವೆಸಾಕಾರಂ ತಾಯಿಯ ಪೂಜೆಗೆ {{gap}}ಶಿಶುಗಳ ಸಂಭ್ರಮ {{gap}}ತುಂಬಿದ ಬಗೆ ಸುಮನಸರಾಗಂ {{gap}}{{gap}}{{gap}}ಮಾಯಾ ಮಮತಾ {{gap}}{{gap}}{{gap}}{{gap}}ದಿವ್ಯಾ ತುರತಾ {{gap}}{{gap}}{{gap}}ನವ ನಿರ್ಮಲತಾ ಸುಖಯೋಗಂ ಎಲೆಗಳ ನಲುಗು {{gap}}ಉಲಿಗಳ ಮೊಳಗು {{gap}}ಪ್ರದಕ್ಷಿಣೆಯ ಸವಿಸಂಚಾರಂ {{gap}}{{gap}}{{gap}}ಎಲರಿನ ತಂಪು {{gap}}{{gap}}{{gap}}{{gap}}ಅಲರಿನ ಕಂಪು {{gap}}{{gap}}{{gap}}ಮೆಲ್ಲೆದೆಯಿಂಪು ನಮಸ್ಕಾರಂ </poem><noinclude></noinclude> 7v8c71sjraiuvq991o1s38e3hpvbsmq ಪುಟ:ನನ್ನ ನಲ್ಲ.pdf/೧೪೩ 104 75540 316997 313144 2026-05-04T14:26:09Z Pragathi. BH 7585 /* Validated */ 316997 proofread-page text/x-wiki <noinclude><pagequality level="4" user="Pragathi. BH" /></noinclude>{{Left|೧೨೦}}{{Right|ನನ್ನ ನಲ್ಲ}} '''೪೯. ಶ್ರೀ ಅರವಿಂದರು''' ದಿವ್ಯ ಜೀವನ ದಾತಾರರನು |ಅವನಿಯಲಿ ದಿವ್ಯ ಜೀವನದಾತಾರರನು ||ಪ|| ಕಂಡೆನು | ಸಮರ್ಥ ಶ್ರೀ ಅರವಿಂದರನು||ಅ.ಪ|| ಬುದ್ಧವೀರರೊಲು ಕರುಣಾಪರರು ಕೃಷ್ಣಪ್ರಭುವಿನೊಲು ಸುಪ್ರೇಮಿಕರು ರಾಮಚಂದ್ರನೊಲು ದೃಢನೇಮಿಕರು ! ಯುಗಪ್ರವರ್ತಕರು ೧ ಮೃತ್ಯುವನಾಪೋಷಣ ಗೈದವರು ಅಮೃತ ಜ್ಯೋತಿ ಮುಖದಲ್ಲಿ ತಳೆದವರು ದಿವ್ಯ ಸಮೃದ್ಧಿಗಳನ್ನು ಕೊಡುವವರು | ಕರುಣಾಸಾಗರರು ೨ ದರ್ಶನದಿಂ ಸಂಶಯ ಸುಡುವವರು ಸ್ಪರ್ಶದಿ ಶ್ರದ್ಧೆಯ ನೆಲೆಗೊಳಿಪವರು ಪದರಜದಿಂಪಾವನಗೊಳಿಪವರು |ತ್ರಿಲೋಕತಾರಕರು ೩ ಭವ್ಯರಿವರ ದರ್ಶನ ಗೈದವರು ಪ್ರೇಮಾಮೃತ ಸಾಗರ ಕುಡಿದವರು ಸುರವಾಂಛಿತ ಸಂಧಿಯ ಪಡೆದವರು | ಅಸೀಮಹರ್ಷಿತರು ೪ ಚೈತನ್ಯದ ಕಿಡಿ ಜಾಗ್ರತವಾಗಿ ರೋಮ-ರೋಮದಲಿ ಪ್ರೇಮವು ತಾಗಿ ಜನನ ಮರಣಗಳ ಭೀತಿಯ ನೀಗಿ |ಶಿವದರುಷನವಾಗಿ ೫<noinclude></noinclude> lp78x5v1yx3bcs3nfobobq9u3javoh7 317004 316997 2026-05-04T14:28:34Z Pragathi. BH 7585 317004 proofread-page text/x-wiki <noinclude><pagequality level="4" user="Pragathi. BH" /></noinclude>{{Left|೧೨೦}}{{Right|ನನ್ನ ನಲ್ಲ}} '''೪೯. ಶ್ರೀ ಅರವಿಂದರು''' <poem> ದಿವ್ಯ ಜೀವನ ದಾತಾರರನು |ಅವನಿಯಲಿ ದಿವ್ಯ ಜೀವನದಾತಾರರನು ||ಪ|| ಕಂಡೆನು | ಸಮರ್ಥ ಶ್ರೀ ಅರವಿಂದರನು||ಅ.ಪ|| ಬುದ್ಧವೀರರೊಲು ಕರುಣಾಪರರು ಕೃಷ್ಣಪ್ರಭುವಿನೊಲು ಸುಪ್ರೇಮಿಕರು ರಾಮಚಂದ್ರನೊಲು ದೃಢನೇಮಿಕರು ! ಯುಗಪ್ರವರ್ತಕರು {{Right|೧}} ಮೃತ್ಯುವನಾಪೋಷಣ ಗೈದವರು ಅಮೃತ ಜ್ಯೋತಿ ಮುಖದಲ್ಲಿ ತಳೆದವರು ದಿವ್ಯ ಸಮೃದ್ಧಿಗಳನ್ನು ಕೊಡುವವರು | ಕರುಣಾಸಾಗರರು {{Right|೨}} ದರ್ಶನದಿಂ ಸಂಶಯ ಸುಡುವವರು ಸ್ಪರ್ಶದಿ ಶ್ರದ್ಧೆಯ ನೆಲೆಗೊಳಿಪವರು ಪದರಜದಿಂಪಾವನಗೊಳಿಪವರು |ತ್ರಿಲೋಕತಾರಕರು{{Right|೩}} ಭವ್ಯರಿವರ ದರ್ಶನ ಗೈದವರು ಪ್ರೇಮಾಮೃತ ಸಾಗರ ಕುಡಿದವರು ಸುರವಾಂಛಿತ ಸಂಧಿಯ ಪಡೆದವರು | ಅಸೀಮಹರ್ಷಿತರು{{Right|೪}} ಚೈತನ್ಯದ ಕಿಡಿ ಜಾಗ್ರತವಾಗಿ ರೋಮ-ರೋಮದಲಿ ಪ್ರೇಮವು ತಾಗಿ ಜನನ ಮರಣಗಳ ಭೀತಿಯ ನೀಗಿ |ಶಿವದರುಷನವಾಗಿ {{Right|೫}} </poem><noinclude></noinclude> 8391ia523r18pxpvng13dsf94yx7t5o 317006 317004 2026-05-04T14:30:09Z Pragathi. BH 7585 317006 proofread-page text/x-wiki <noinclude><pagequality level="4" user="Pragathi. BH" /></noinclude>{{Left|೧೨೦}}{{Right|ನನ್ನ ನಲ್ಲ}} '''೪೯. ಶ್ರೀ ಅರವಿಂದರು''' <poem> ದಿವ್ಯ ಜೀವನ ದಾತಾರರನು |ಅವನಿಯಲಿ ದಿವ್ಯ ಜೀವನದಾತಾರರನು {{Right|||ಪ||}} ಕಂಡೆನು | ಸಮರ್ಥ ಶ್ರೀ ಅರವಿಂದರನು {{Right|||ಅ.ಪ||}} ಬುದ್ಧವೀರರೊಲು ಕರುಣಾಪರರು ಕೃಷ್ಣಪ್ರಭುವಿನೊಲು ಸುಪ್ರೇಮಿಕರು ರಾಮಚಂದ್ರನೊಲು ದೃಢನೇಮಿಕರು ! ಯುಗಪ್ರವರ್ತಕರು {{Right|೧}} ಮೃತ್ಯುವನಾಪೋಷಣ ಗೈದವರು ಅಮೃತ ಜ್ಯೋತಿ ಮುಖದಲ್ಲಿ ತಳೆದವರು ದಿವ್ಯ ಸಮೃದ್ಧಿಗಳನ್ನು ಕೊಡುವವರು | ಕರುಣಾಸಾಗರರು {{Right|೨}} ದರ್ಶನದಿಂ ಸಂಶಯ ಸುಡುವವರು ಸ್ಪರ್ಶದಿ ಶ್ರದ್ಧೆಯ ನೆಲೆಗೊಳಿಪವರು ಪದರಜದಿಂಪಾವನಗೊಳಿಪವರು |ತ್ರಿಲೋಕತಾರಕರು{{Right|೩}} ಭವ್ಯರಿವರ ದರ್ಶನ ಗೈದವರು ಪ್ರೇಮಾಮೃತ ಸಾಗರ ಕುಡಿದವರು ಸುರವಾಂಛಿತ ಸಂಧಿಯ ಪಡೆದವರು | ಅಸೀಮಹರ್ಷಿತರು{{Right|೪}} ಚೈತನ್ಯದ ಕಿಡಿ ಜಾಗ್ರತವಾಗಿ ರೋಮ-ರೋಮದಲಿ ಪ್ರೇಮವು ತಾಗಿ ಜನನ ಮರಣಗಳ ಭೀತಿಯ ನೀಗಿ |ಶಿವದರುಷನವಾಗಿ {{Right|೫}} </poem><noinclude></noinclude> a1en8gutv5pcvacaraxpguw3vbfs5e9 317008 317006 2026-05-04T14:31:17Z Pragathi. BH 7585 317008 proofread-page text/x-wiki <noinclude><pagequality level="4" user="Pragathi. BH" /></noinclude>{{Left|೧೨೦}}{{Right|ನನ್ನ ನಲ್ಲ}} '''೪೯. ಶ್ರೀ ಅರವಿಂದರು''' <poem> ದಿವ್ಯ ಜೀವನ ದಾತಾರರನು |ಅವನಿಯಲಿ ದಿವ್ಯ ಜೀವನದಾತಾರರನು ||ಪಂ|| ಕಂಡೆನು | ಸಮರ್ಥ ಶ್ರೀ ಅರವಿಂದರನು ||ಅ.ಪ|| ಬುದ್ಧವೀರರೊಲು ಕರುಣಾಪರರು ಕೃಷ್ಣಪ್ರಭುವಿನೊಲು ಸುಪ್ರೇಮಿಕರು ರಾಮಚಂದ್ರನೊಲು ದೃಢನೇಮಿಕರು ! ಯುಗಪ್ರವರ್ತಕರು {{Right|೧}} ಮೃತ್ಯುವನಾಪೋಷಣ ಗೈದವರು ಅಮೃತ ಜ್ಯೋತಿ ಮುಖದಲ್ಲಿ ತಳೆದವರು ದಿವ್ಯ ಸಮೃದ್ಧಿಗಳನ್ನು ಕೊಡುವವರು | ಕರುಣಾಸಾಗರರು {{Right|೨}} ದರ್ಶನದಿಂ ಸಂಶಯ ಸುಡುವವರು ಸ್ಪರ್ಶದಿ ಶ್ರದ್ಧೆಯ ನೆಲೆಗೊಳಿಪವರು ಪದರಜದಿಂಪಾವನಗೊಳಿಪವರು |ತ್ರಿಲೋಕತಾರಕರು{{Right|೩}} ಭವ್ಯರಿವರ ದರ್ಶನ ಗೈದವರು ಪ್ರೇಮಾಮೃತ ಸಾಗರ ಕುಡಿದವರು ಸುರವಾಂಛಿತ ಸಂಧಿಯ ಪಡೆದವರು | ಅಸೀಮಹರ್ಷಿತರು{{Right|೪}} ಚೈತನ್ಯದ ಕಿಡಿ ಜಾಗ್ರತವಾಗಿ ರೋಮ-ರೋಮದಲಿ ಪ್ರೇಮವು ತಾಗಿ ಜನನ ಮರಣಗಳ ಭೀತಿಯ ನೀಗಿ |ಶಿವದರುಷನವಾಗಿ {{Right|೫}} </poem><noinclude></noinclude> 4cfskjglad47k0b3do1qgoz6m036q23 ಪುಟ:ನನ್ನ ನಲ್ಲ.pdf/೧೪೪ 104 75541 317010 313145 2026-05-04T14:31:49Z Pragathi. BH 7585 /* Validated */ 317010 proofread-page text/x-wiki <noinclude><pagequality level="4" user="Pragathi. BH" /></noinclude>{{Left|ನನ್ನ ನಲ್ಲ}}{{Right|೧೨೧}} '''೫೦. ಪುರುಷೋತ್ತಮ''' ದಿವ್ಯದೃಷ್ಟಿದಾಯಕರನು ! ಕಲಿಯಲಿ ಕಂಡೆನು ಶ್ರೀ ಅರವಿಂದರನು ||ಪ|| ಭಕ್ತಿಮುರಲಿರವ ಬಾಜಿಸಿತು ಸತ್‌ಸಂಗಕ್ಕೆ ಮನ ವೇಧಿಸಿತು ನಾನೆ ಭಾಗ್ಯನೆಂದೆನ್ನಿಸಿತು ೧ ಮೂರುತಿಯಿದು ಮನಹಾರಕವು ಸಿರಸಿರ ಸಮರಸ ಪೂರಕವು ಪುರುಷೋತ್ತಮರವತಾರಕರು ೨ ಜಗದ ತ್ರಿತಾಪ ನಿವಾರಕರು ಮೃತ್ಯುವ ಮುದದಿಂ ಸ್ವಾಹಕರು ಸಹಜದಿ ಶಿವಸುಖದಾಯಕರು ೩<noinclude></noinclude> qc20sof509dlqjksnuh1u2vrlq5ebdd 317014 317010 2026-05-04T14:34:06Z Pragathi. BH 7585 317014 proofread-page text/x-wiki <noinclude><pagequality level="4" user="Pragathi. BH" /></noinclude>{{Left|ನನ್ನ ನಲ್ಲ}}{{Right|೧೨೧}} '''೫೦. ಪುರುಷೋತ್ತಮ''' <poem> {{gap}}ದಿವ್ಯದೃಷ್ಟಿದಾಯಕರನು ! ಕಲಿಯಲಿ {{gap}}ಕಂಡೆನು ಶ್ರೀ ಅರವಿಂದರನು ||ಪ|| ಭಕ್ತಿಮುರಲಿರವ ಬಾಜಿಸಿತು {{gap}}ಸತ್‌ಸಂಗಕ್ಕೆ ಮನ ವೇಧಿಸಿತು {{gap}}ನಾನೆ ಭಾಗ್ಯನೆಂದೆನ್ನಿಸಿತು {{Right|೧}} ಮೂರುತಿಯಿದು ಮನಹಾರಕವು {{gap}}ಸಿರಸಿರ ಸಮರಸ ಪೂರಕವು {{gap}}ಪುರುಷೋತ್ತಮರವತಾರಕರು {{Right|೨}} ಜಗದ ತ್ರಿತಾಪ ನಿವಾರಕರು {{gap}}ಮೃತ್ಯುವ ಮುದದಿಂ ಸ್ವಾಹಕರು {{gap}}ಸಹಜದಿ ಶಿವಸುಖದಾಯಕರು {{Right|೩}} </poem><noinclude></noinclude> kjpbujyauvdd4gs2b5tqxydi5wbau3p ಪುಟ:ನನ್ನ ನಲ್ಲ.pdf/೧೪೫ 104 75542 317017 313146 2026-05-04T14:37:00Z Pragathi. BH 7585 /* Validated */ 317017 proofread-page text/x-wiki <noinclude><pagequality level="4" user="Pragathi. BH" /></noinclude>{{Left|೧೨೨}}{{Right|ನನ್ನ ನಲ್ಲ}} '''೫೧. ಮಾತೆಗೆ ಮೊರೆ''' <poem> ಮನಮಂದಿರದಲಿ ನೀ ಬಾರೇ ಮಾಯಾಳು ಮಾತೇ ||ಪ|| “ಮೀರಾ ಮೀರಾ” ನೆನೆವೆ ನಿರಂತರ ಮುಕ್ತಿಪ್ರದಾಯಕ ಮಾತೆಯ ಮಂತರ ಮೆರೆವೀ ಭಕ್ತಿಯ ನರನರದಲ್ಲಿ ಬೀರೇ | {{gap}}{{gap}}ಮಾಯಾಳು ಮಾತೇ ೧ ಎಲ್ಲಿ ಹರಿವುದೋ ನನ್ನಯ ದೃಷ್ಟಿ ಅಲ್ಲಿ ಕಾಂಬೆ ನಿಮ್ಮಯ ತನುಸೃಷ್ಟಿ ನಿಲ್ಲದೆ ಈ ನಲಿವನು ನೀಡಿರಿ ಧೀರೇ | {{gap}}{{gap}}ಮಾಯಾಳು ಮಾತೇ ೨ "ನಿಮ್ಮ ಧ್ಯಾನದಲಿ ನನ್ನನು ಮರೆವೆ ತನ್ನಯದಿಂ ಗುಣಗಾನದಿ ಬೆರೆವೆ” ಅಮ್ಮಾ, ಈ ದುರ್ಲಭದಶೆಯನು ತಾರೇ | {{gap}}{{gap}}ಮಾಯಾಳು ಮಾತೇ ೩ ಸಮತಾ, ಸ್ಥಿರತಾ, ನವನಿರ್ಮಲತಾ ಶ್ರದ್ಧಾ, ಶಾಂತಿ, ಅತೀ ಸರಳಿತಾ ಕಮನೀಯ ಈ ಗುಣಗಳ ಹೃದಯದಿ ಊರೇ | {{gap}}{{gap}}ಮಾಯಾಳು ಮಾತೇ ೪ ಅಶುದ್ಧಿ ತುಂಬಿದೆ ಅಂತರಂಗದಿ ವಿಶುದ್ಧಗೊಳಿಸಿರಿ ತಾಯೆ ಕರುಣದಿ ಪ್ರಸಿದ್ಧ ಶಿವಪದ ಯೋಗ್ಯ ಜೀವನ ತೋರೇ | {{gap}}{{gap}}ಮಾಯಾಳು ಮಾತೇ ೫ </poem><noinclude></noinclude> k5rc7wxzgyuoc1grmmsaaiify3152p7 317019 317017 2026-05-04T14:37:38Z Pragathi. BH 7585 317019 proofread-page text/x-wiki <noinclude><pagequality level="4" user="Pragathi. BH" /></noinclude>{{Left|೧೨೨}}{{Right|ನನ್ನ ನಲ್ಲ}} '''೫೧. ಮಾತೆಗೆ ಮೊರೆ''' <poem> ಮನಮಂದಿರದಲಿ ನೀ ಬಾರೇ ಮಾಯಾಳು ಮಾತೇ ||ಪ|| “ಮೀರಾ ಮೀರಾ” ನೆನೆವೆ ನಿರಂತರ ಮುಕ್ತಿಪ್ರದಾಯಕ ಮಾತೆಯ ಮಂತರ ಮೆರೆವೀ ಭಕ್ತಿಯ ನರನರದಲ್ಲಿ ಬೀರೇ | {{gap}}{{gap}}ಮಾಯಾಳು ಮಾತೇ ೧ ಎಲ್ಲಿ ಹರಿವುದೋ ನನ್ನಯ ದೃಷ್ಟಿ ಅಲ್ಲಿ ಕಾಂಬೆ ನಿಮ್ಮಯ ತನುಸೃಷ್ಟಿ ನಿಲ್ಲದೆ ಈ ನಲಿವನು ನೀಡಿರಿ ಧೀರೇ | {{gap}}{{gap}}ಮಾಯಾಳು ಮಾತೇ ೨ "ನಿಮ್ಮ ಧ್ಯಾನದಲಿ ನನ್ನನು ಮರೆವೆ ತನ್ನಯದಿಂ ಗುಣಗಾನದಿ ಬೆರೆವೆ” ಅಮ್ಮಾ, ಈ ದುರ್ಲಭದಶೆಯನು ತಾರೇ | {{gap}}{{gap}}ಮಾಯಾಳು ಮಾತೇ ೩ ಸಮತಾ, ಸ್ಥಿರತಾ, ನವನಿರ್ಮಲತಾ ಶ್ರದ್ಧಾ, ಶಾಂತಿ, ಅತೀ ಸರಳಿತಾ ಕಮನೀಯ ಈ ಗುಣಗಳ ಹೃದಯದಿ ಊರೇ | {{gap}}{{gap}}ಮಾಯಾಳು ಮಾತೇ ೪ ಅಶುದ್ಧಿ ತುಂಬಿದೆ ಅಂತರಂಗದಿ ವಿಶುದ್ಧಗೊಳಿಸಿರಿ ತಾಯೆ ಕರುಣದಿ ಪ್ರಸಿದ್ಧ ಶಿವಪದ ಯೋಗ್ಯ ಜೀವನ ತೋರೇ | {{gap}}{{gap}}ಮಾಯಾಳು ಮಾತೇ ೫ </poem><noinclude></noinclude> knxq6adb5flg6g4vg65tqvr4s4f41vt ಪುಟ:ನನ್ನ ನಲ್ಲ.pdf/೧೪೬ 104 75543 317087 313147 2026-05-04T17:54:39Z Pragathi. BH 7585 /* Validated */ 317087 proofread-page text/x-wiki <noinclude><pagequality level="4" user="Pragathi. BH" />{{rh|center=|left=ನನ್ನ ನಲ್ಲ|right=೧೨೩}}</noinclude> '''೫೨. ದಿವ್ಯಮಾತೆ''' <poem> ಮಾತೆ, ನಿಮ್ಮ ಮೂರ್ತಿಯು ಮೋಹನಕಾರಿ ಖ್ಯಾತೆ, ನಿಮ್ಮ ಅಣುರಚನೆಯೆ ಬ್ಯಾರಿ||ಪ| ಮೀರಾರೂಪದಿ ಬಂದಿರಿ ಜಗದಿ ಮೂರುಲೋಕ ತಾರಕಲಿಪಿಪದದಿ ಪ್ರಾಣಕ್ಕು ಮಿಗಿಲೆನಗಿಹಿರಿ ೧ ವಿಶಾಲ ವೃಕ್ಷದ ಸಾಗರದಂತೆ ವಿಶಾಲ ಉತ್ತಮ ಉದಾತ್ತ ಚಿತ್ತೇ ಎಂತು ಮರೆವೆನೆ ಮಾತೋಶ್ರೀ ೨ ದರುಷನ ಮಾತ್ರದಿ ಪಾಪವ ಕಳೆವಿರಿ ನರಾಧಮರನೂ ಉದ್ಧರಿಸುವಿರಿ ಶರಣಾದವರೆ ಸುವಿಚಾರಿ ೩ ಸುರತರುವಿನವೊಲ್ ಇಚ್ಛಿತವಾತೆ ಪರಮ ದಿವ್ಯ ಜೀವನ ಸುವಿಧಾತೆ ನಿಮ್ಮ ಭಕ್ತರೆ ಭಾಗ್ಯಶಾಲಿ ೪ ತಿನ್ನುವೆ ಉಣ್ಣುವ ಅಲೆಯುವೆ ನಲಿಯುವೆ ನೆನೆಯುತ ನಿಮ್ಮನು ಮಲಗುವೆ ಕೂಡುವೆ ಹರಕೆ ಕೊಡಿರಿ ಶಿವರಾರೀ ೫ </poem><noinclude></noinclude> lkqmdxobjlzvq3h3zr8p22fbtoc3teh 317088 317087 2026-05-04T17:56:51Z Pragathi. BH 7585 317088 proofread-page text/x-wiki <noinclude><pagequality level="4" user="Pragathi. BH" />{{rh|center=|left=ನನ್ನ ನಲ್ಲ|right=೧೨೩}}</noinclude> '''೫೨. ದಿವ್ಯಮಾತೆ''' <poem> ಮಾತೆ, ನಿಮ್ಮ ಮೂರ್ತಿಯು ಮೋಹನಕಾರಿ ಖ್ಯಾತೆ, ನಿಮ್ಮ ಅಣುರಚನೆಯೆ ಬ್ಯಾರಿ {{Right|॥ಪ॥}} ಮೀರಾರೂಪದಿ ಬಂದಿರಿ ಜಗದಿ ಮೂರುಲೋಕ ತಾರಕಲಿಪಿಪದದಿ ಪ್ರಾಣಕ್ಕು ಮಿಗಿಲೆನಗಿಹಿರಿ {{Right|೧}} ವಿಶಾಲ ವೃಕ್ಷದ ಸಾಗರದಂತೆ ವಿಶಾಲ ಉತ್ತಮ ಉದಾತ್ತ ಚಿತ್ತೇ ಎಂತು ಮರೆವೆನೆ ಮಾತೋಶ್ರೀ {{Right|೨}} ದರುಷನ ಮಾತ್ರದಿ ಪಾಪವ ಕಳೆವಿರಿ ನರಾಧಮರನೂ ಉದ್ಧರಿಸುವಿರಿ ಶರಣಾದವರೆ ಸುವಿಚಾರಿ {{Right|೩}} ಸುರತರುವಿನವೊಲ್ ಇಚ್ಛಿತವಾತೆ ಪರಮ ದಿವ್ಯ ಜೀವನ ಸುವಿಧಾತೆ ನಿಮ್ಮ ಭಕ್ತರೆ ಭಾಗ್ಯಶಾಲಿ {{Right|೪}} ತಿನ್ನುವೆ ಉಣ್ಣುವ ಅಲೆಯುವೆ ನಲಿಯುವೆ ನೆನೆಯುತ ನಿಮ್ಮನು ಮಲಗುವೆ ಕೂಡುವೆ ಹರಕೆ ಕೊಡಿರಿ ಶಿವರಾರೀ {{Right|೫}} </poem><noinclude></noinclude> baiub6fzghduwo26av1184sqgxqs4on 317089 317088 2026-05-04T17:58:04Z Pragathi. BH 7585 317089 proofread-page text/x-wiki <noinclude><pagequality level="4" user="Pragathi. BH" />{{rh|center=|left=ನನ್ನ ನಲ್ಲ|right=೧೨೩}}</noinclude> '''೫೨. ದಿವ್ಯಮಾತೆ''' <poem> ಮಾತೆ, ನಿಮ್ಮ ಮೂರ್ತಿಯು ಮೋಹನಕಾರಿ ಖ್ಯಾತೆ, ನಿಮ್ಮ ಅಣುರಚನೆಯೆ ಬ್ಯಾರಿ {{Right|॥ಪ॥}} {{gap}}ಮೀರಾರೂಪದಿ ಬಂದಿರಿ ಜಗದಿ {{gap}}ಮೂರುಲೋಕ ತಾರಕಲಿಪಿಪದದಿ {{gap}}ಪ್ರಾಣಕ್ಕು ಮಿಗಿಲೆನಗಿಹಿರಿ {{Right|೧}} {{gap}}ವಿಶಾಲ ವೃಕ್ಷದ ಸಾಗರದಂತೆ {{gap}}ವಿಶಾಲ ಉತ್ತಮ ಉದಾತ್ತ ಚಿತ್ತೇ {{gap}}ಎಂತು ಮರೆವೆನೆ ಮಾತೋಶ್ರೀ {{Right|೨}} {{gap}}ದರುಷನ ಮಾತ್ರದಿ ಪಾಪವ ಕಳೆವಿರಿ {{gap}}ನರಾಧಮರನೂ ಉದ್ಧರಿಸುವಿರಿ {{gap}}ಶರಣಾದವರೆ ಸುವಿಚಾರಿ {{Right|೩}} {{gap}}ಸುರತರುವಿನವೊಲ್ ಇಚ್ಛಿತವಾತೆ {{gap}}ಪರಮ ದಿವ್ಯ ಜೀವನ ಸುವಿಧಾತೆ {{gap}}ನಿಮ್ಮ ಭಕ್ತರೆ ಭಾಗ್ಯಶಾಲಿ {{Right|೪}} {{gap}}ತಿನ್ನುವೆ ಉಣ್ಣುವ ಅಲೆಯುವೆ ನಲಿಯುವೆ {{gap}}ನೆನೆಯುತ ನಿಮ್ಮನು ಮಲಗುವೆ ಕೂಡುವೆ {{gap}}ಹರಕೆ ಕೊಡಿರಿ ಶಿವರಾರೀ {{Right|೫}} </poem><noinclude></noinclude> klpnad0msq7vbe31lu4rqp1mx3txqai ಪುಟ:ನನ್ನ ನಲ್ಲ.pdf/೧೪೭ 104 75544 317090 313148 2026-05-04T18:02:38Z Pragathi. BH 7585 /* Validated */ 317090 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೨೪|right=ನನ್ನ ನಲ್ಲ}}</noinclude> '''೫೩. ಅಗಾಧ ಅಚ್ಚರಿ''' <poem> ನೋಡು ನೋಡು ಮಹಾತಾಯಿಯನೊಲವಿಂ ನಯನಾಂಬುಜದೋಳ್ ನೇಹಸೂಸುತಿಹ {{Right|॥ಪ॥}} ತನುಮನದಣುಗಳ್ ಶೀತಲವಾಗಿಹ {{Right|॥ಅ.ಪ॥}} ತಾಯಿಯು ಕಾಣಲು ತೆರೆವುದು ದೃಷ್ಟಿ ಸುರಿವುದು ಹೃದಯದಿ ಅಮೃತ ವೃಷ್ಟಿ ಕಾಂಬುದು ಆನಂದಮಯ ಸರ್ವಸೃಷ್ಟಿ {{Right|೧}} ಅಗಾಧ ಅಚ್ಚರಿ ಕಣ್ಣಿಲೆ ಕಂಡೆನು ಅನುದಿನ ಹರಿಯುವ ಅಮೃತದ ಸರಿಯನು ಚೌರಾಐಂತಿ ಚಕ್ರವ ಛೇದಿಪ ತಾಯನು {{Right|೨}} ಧರ್ಮಪಂಥಗಳ ಕಲಹ ಕುಸಿಯಿತು. ಮತಾಗ್ರಹಗಳ ಕ್ಷೇಶ ಕಳೆಯಿತು. ರಾಗರೋಷ ಮೇಣ್ ಮೋಹ ತೊಳೆಯಿತು {{Right|೩}} ಜನನಿಯನ್ಯಾರಾರೀಕ್ಷಿಸುತಿಹರೋ ತಪ್ತಹೃದಯಕೆ ಶಾಂತಿಪಡೆವರೋ ದುರ್ಲಭಜೀವನ ಧನಗಳಿಸುವರೋ {{Right|೪}} ತಾಯಿಯನೀಕ್ಷಿಸಿ ಪಾವನನಾಗು ಬಾಳ್ವೆಯ ನೀಡಲು ನೀನಣಿಯಾಗು ಅರಿಯುತ ನೀ ಶಿವಸುಖಕೇ ಸಾಗು {{Right|೫}} </poem><noinclude></noinclude> 5hoqqtg0ohe2fpo77718f6gijr8kqs5 317091 317090 2026-05-04T18:04:57Z Pragathi. BH 7585 317091 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೨೪|right=ನನ್ನ ನಲ್ಲ}}</noinclude> '''೫೩. ಅಗಾಧ ಅಚ್ಚರಿ''' <poem> ನೋಡು ನೋಡು ಮಹಾತಾಯಿಯನೊಲವಿಂ ನಯನಾಂಬುಜದೋಳ್ ನೇಹಸೂಸುತಿಹ {{Right|॥ಪ॥}} ತನುಮನದಣುಗಳ್ ಶೀತಲವಾಗಿಹ {{Right|॥ಅ.ಪ॥}} {{gap}}ತಾಯಿಯು ಕಾಣಲು ತೆರೆವುದು ದೃಷ್ಟಿ {{gap}}ಸುರಿವುದು ಹೃದಯದಿ ಅಮೃತ ವೃಷ್ಟಿ {{gap}}ಕಾಂಬುದು ಆನಂದಮಯ ಸರ್ವಸೃಷ್ಟಿ {{Right|೧}} {{gap}}ಅಗಾಧ ಅಚ್ಚರಿ ಕಣ್ಣಿಲೆ ಕಂಡೆನು {{gap}}ಅನುದಿನ ಹರಿಯುವ ಅಮೃತದ ಸರಿಯನು {{gap}}ಚೌರಾಐಂತಿ ಚಕ್ರವ ಛೇದಿಪ ತಾಯನು {{Right|೨}} {{gap}}ಧರ್ಮಪಂಥಗಳ ಕಲಹ ಕುಸಿಯಿತು. {{gap}}ಮತಾಗ್ರಹಗಳ ಕ್ಷೇಶ ಕಳೆಯಿತು. {{gap}}ರಾಗರೋಷ ಮೇಣ್ ಮೋಹ ತೊಳೆಯಿತು {{Right|೩}} {{gap}}ಜನನಿಯನ್ಯಾರ್ಯಾರೀಕ್ಷಿಸುತಿಹರೋ {{gap}}ತಪ್ತಹೃದಯಕೆ ಶಾಂತಿಪಡೆವರೋ {{gap}}ದುರ್ಲಭಜೀವನ ಧನಗಳಿಸುವರೋ {{Right|೪}} {{gap}}ತಾಯಿಯನೀಕ್ಷಿಸಿ ಪಾವನನಾಗು {{gap}}ಬಾಳ್ವೆಯ ನೀಡಲು ನೀನಣಿಯಾಗು {{gap}}ಅರಿಯುತ ನೀ ಶಿವಸುಖಕೇ ಸಾಗು {{Right|೫}} </poem><noinclude></noinclude> ok1tfw1l2unrz9wg6bxau05at57znqe ಪುಟ:ನನ್ನ ನಲ್ಲ.pdf/೧೪೮ 104 75545 317092 313152 2026-05-04T18:07:46Z Pragathi. BH 7585 /* Validated */ 317092 proofread-page text/x-wiki <noinclude><pagequality level="4" user="Pragathi. BH" />{{rh|center=|left=ನನ್ನ ನಲ್ಲ|right=೧೨೫}}</noinclude> '''೫೪.ಮೀರಾಮಾತೆ''' <poem> ಮೀರಾಮಾತೆ ಮುಕ್ತಿದಾತೆ ತಮಗೆ ಶರಖಬಂದೆನು ಜಪಗೈವೆ ಹಗಲಿರುಳು ತಮ್ಮ ನಾಮವನ್ನು ||ಪ|| ಶ್ರದ್ಧಾಭಕ್ತಿ ವಿದ್ಯಾಕಲೆಗಳ ಐಕ್ಯ ಸಾಧಿಸಿ ಸದ್ಧರ್ಮಮಾರ್ಗವನ್ನು ಪರಮ ಸರಲಗೊಳಿಸಿ ಮುಕ್ತಿದ್ವಾರ ಮಾಡಿರುವಿರಿ ತಾಯಿ ಪಾಂಡಿಚೇರಿಯನು {{Right|೧}} ಸಾಧುಗಳು ಹೇಳಿಹರು ಸಾಯೆ ಸ್ವರ್ಗವು ಆ ಸ್ವರ್ಗಧಾಮ ತಮ್ಮ ಚರಣಗಳಲೆ ವಾಸವು ಆ ಚರಣಗಳಿಗೆ ಅರ್ಪಿಸುವೆನು ಸರ್ವಸ್ವವನು {{Right|೨}} ಗಂಗಾ ಯಮುನಾ ತಾಪಿ ತಮ್ಮ ಅಡಿಯಲಿರುವವು ಶಂಕೆಯಿಲ್ಲದೆ ಸುಧಾರೂಪದಿಂದ ಹರಿವವು ತವಚರಣ ನೆನೆವ ಮನವು ಶಾಂತಿಸರಸಿ ತಾನು {{Right|೩}} ತವರಚನೆಗಳನ್ನು ದೇವತೆಗಳು ವರ್ಣಿಸಿ ತವಶಿಶುಗಳ ಕಷ್ಟಗಳನು ಕಳೆವರೋಡಿಸಿ ತವಚರಣದಲ್ಲಿ ಪಡೆಯಿತೆನ್ನ ಮನ ಶಾಂತಿಯನು {{Right|೪}} ತವದರ್ಶನದಿ ಮನವು ಮಗ್ನವಾಗಿ ಶಿವದಾಯಕ ಸಮತೆಯು ಸಹಜವಾಗಿ ಆದಿವ್ಯಾಧಿ ಉಪಾಧಿಯಿಂ ದಾಂಟಿ ತಾನು {{Right|೫}} </poem><noinclude>* ೪೮ ರಿಂದ ೫೪-ಅನುವಾದಿತ ಪದ್ಯಗಳು.</noinclude> jlgsmarux90tf1apupyf9j6gxoqqx1m ಪುಟ:ನನ್ನ ನಲ್ಲ.pdf/೧೪೯ 104 75546 317093 313159 2026-05-04T18:10:56Z Pragathi. BH 7585 /* Validated */ 317093 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೨೬|right=ನನ್ನ ನಲ್ಲ}}</noinclude>{{Left|೧೨೬}}{{Right|ನನ್ನ ನಲ್ಲ}} '''೫೫. ಕೊಳಗಳ ನಾಡಿನೊಳಗಿಂದ''' (ಪಾಂಡಿಚೇರಿಯಿಂದ ಬರುವಾಗ) ಸುತ್ತಲೆಲ್ಲ ಹಸಿರು ಗುಡ್ಡ {{gap}}ನಡುವೆ ಕನ್ನಡಿಯೊಲು ಕೆರೆಯು {{gap}}ಮೇಲೆ ಹೊಳೆವ ಬಿಳಿಯ ಸೂರ್ಯ {{gap}}ಏನು ರಮ್ಯವೋ, ಆಹಾ, ಏನು........{{Right|೧}} ಕೆರೆಯ ಒಳಗೆ ತೆರೆಯ ಲಹರಿ {{gap}}ತಡಿಗೆ ಭತ್ತ ಪಯಿರು ಲಹರಿ {{gap}}ಹೃದಯದೊಳಗೆ ಭಕ್ತಿ ಲಹರಿ೨ {{gap}}ಏನು ರಮ್ಯವೋ, ಆಹಾ, ಏನು.......{{Right|೨}} ಮುಗಿಲಿನೊಳಗೆ ಬಿಳಿಯ ಮೇಘ {{gap}}ಕೆರೆಗಳೊಳಗೆ ಬಿಳಿಯ ಹಕ್ಕಿ {{gap}}ಮನಸಿನೊಳಗೆ ಬಿಳಿಯ ಹರುಷ {{gap}}ಏನು ರಮ್ಯವೋ, ಆಹಾ, ಏನು…..{{Right|೩}}<noinclude></noinclude> 3ynqviehxrj1i1bu8jm4oeh9l58mi92 317094 317093 2026-05-04T18:11:36Z Pragathi. BH 7585 317094 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೨೬|right=ನನ್ನ ನಲ್ಲ}}</noinclude> '''೫೫. ಕೊಳಗಳ ನಾಡಿನೊಳಗಿಂದ''' (ಪಾಂಡಿಚೇರಿಯಿಂದ ಬರುವಾಗ) <poem> ಸುತ್ತಲೆಲ್ಲ ಹಸಿರು ಗುಡ್ಡ {{gap}}ನಡುವೆ ಕನ್ನಡಿಯೊಲು ಕೆರೆಯು {{gap}}ಮೇಲೆ ಹೊಳೆವ ಬಿಳಿಯ ಸೂರ್ಯ {{gap}}ಏನು ರಮ್ಯವೋ, ಆಹಾ, ಏನು........{{Right|೧}} ಕೆರೆಯ ಒಳಗೆ ತೆರೆಯ ಲಹರಿ {{gap}}ತಡಿಗೆ ಭತ್ತ ಪಯಿರು ಲಹರಿ {{gap}}ಹೃದಯದೊಳಗೆ ಭಕ್ತಿ ಲಹರಿ೨ {{gap}}ಏನು ರಮ್ಯವೋ, ಆಹಾ, ಏನು.......{{Right|೨}} ಮುಗಿಲಿನೊಳಗೆ ಬಿಳಿಯ ಮೇಘ {{gap}}ಕೆರೆಗಳೊಳಗೆ ಬಿಳಿಯ ಹಕ್ಕಿ {{gap}}ಮನಸಿನೊಳಗೆ ಬಿಳಿಯ ಹರುಷ {{gap}}ಏನು ರಮ್ಯವೋ, ಆಹಾ, ಏನು…..{{Right|೩}} </poem><noinclude></noinclude> r0qo43u67lv3m2wef7edavbbge8z76h 317095 317094 2026-05-04T18:12:04Z Pragathi. BH 7585 317095 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೨೬|right=ನನ್ನ ನಲ್ಲ}}</noinclude> '''೫೫. ಕೊಳಗಳ ನಾಡಿನೊಳಗಿಂದ'''<br /> {{gap}}(ಪಾಂಡಿಚೇರಿಯಿಂದ ಬರುವಾಗ) <poem> ಸುತ್ತಲೆಲ್ಲ ಹಸಿರು ಗುಡ್ಡ {{gap}}ನಡುವೆ ಕನ್ನಡಿಯೊಲು ಕೆರೆಯು {{gap}}ಮೇಲೆ ಹೊಳೆವ ಬಿಳಿಯ ಸೂರ್ಯ {{gap}}ಏನು ರಮ್ಯವೋ, ಆಹಾ, ಏನು........{{Right|೧}} ಕೆರೆಯ ಒಳಗೆ ತೆರೆಯ ಲಹರಿ {{gap}}ತಡಿಗೆ ಭತ್ತ ಪಯಿರು ಲಹರಿ {{gap}}ಹೃದಯದೊಳಗೆ ಭಕ್ತಿ ಲಹರಿ೨ {{gap}}ಏನು ರಮ್ಯವೋ, ಆಹಾ, ಏನು.......{{Right|೨}} ಮುಗಿಲಿನೊಳಗೆ ಬಿಳಿಯ ಮೇಘ {{gap}}ಕೆರೆಗಳೊಳಗೆ ಬಿಳಿಯ ಹಕ್ಕಿ {{gap}}ಮನಸಿನೊಳಗೆ ಬಿಳಿಯ ಹರುಷ {{gap}}ಏನು ರಮ್ಯವೋ, ಆಹಾ, ಏನು…..{{Right|೩}} </poem><noinclude></noinclude> 1efd6075peeoayhpz2qjrwlo8o85r8k ಪುಟ:ನನ್ನ ನಲ್ಲ.pdf/೧೫೦ 104 75547 317120 313169 2026-05-05T06:05:00Z Pragathi. BH 7585 /* Validated */ 317120 proofread-page text/x-wiki <noinclude><pagequality level="4" user="Pragathi. BH" />{{rh|center=|left=ನನ್ನ ನಲ್ಲ|right=೧೨೩}}</noinclude> '''೫೬-ಗೆ''' <poem> ದೇವಲೋಕದ ಜಾಣಿ | ಭಾವಲೋಕದ ರಾಣಿ ಯಾವಲೋಕವ ನೋಡಿ ನಕ್ಕುನಲಿವೆ ಭಾವಗೀತಿಯ ಬೆಡಗ | ದೇವಸಂಗೀತದಲ್ಲಿ ಹಾವಭಾವಗಳಿಂದ ಹಾಡಿ ಅಳುವೆ {{Right|೧}} ದೇವಲೋಕದ ನೆನಪು | ಭಾವಲೋಕಕೆ ಬರಲು ಸಾವಿತ್ರಿ ಗಾಯಿತ್ರಿ ನಕ್ಕುನಲಿವೆ ಭಾವಲೋಕದ ಗಾಳಿ | ಜೀವವೇಣುವೆ ತುಂಬೆ ಶ್ರೀವರನ ತಾನಗಳನೆತ್ತಿ ಅಳುವೆ {{Right|೨}} ಭವಭಾವ ದೇವಾದಿ । ಭುವನಂಗಳನು ಹಡೆದ ಶಿವನ ಅಣತಿಯಿಂದ ಅಳುವೆ ನಗುವೆ ಭವದ ಭವಿಗಳು ನಾವು | ಶಿವನ ಶಕ್ತಿಯು ನೀನು ಅವನೆಡೆಗೆ ಬಲೆಬೀಸಿ ನಮ್ಮನೆಳೆವೆ{{Right|೩}} </poem><noinclude></noinclude> aar4oqqk1xtq5ucayozd17yo2l1ktpy 317121 317120 2026-05-05T06:05:52Z Pragathi. BH 7585 317121 proofread-page text/x-wiki <noinclude><pagequality level="4" user="Pragathi. BH" />{{rh|center=|left=ನನ್ನ ನಲ್ಲ|right=೧೨೩}}</noinclude> '''೫೬-ಗೆ''' <poem> ದೇವಲೋಕದ ಜಾಣಿ | ಭಾವಲೋಕದ ರಾಣಿ ಯಾವಲೋಕವ ನೋಡಿ ನಕ್ಕುನಲಿವೆ ಭಾವಗೀತಿಯ ಬೆಡಗ | ದೇವಸಂಗೀತದಲ್ಲಿ ಹಾವಭಾವಗಳಿಂದ ಹಾಡಿ ಅಳುವೆ {{Right|೧}} ದೇವಲೋಕದ ನೆನಪು | ಭಾವಲೋಕಕೆ ಬರಲು ಸಾವಿತ್ರಿ ಗಾಯಿತ್ರಿ ನಕ್ಕುನಲಿವೆ ಭಾವಲೋಕದ ಗಾಳಿ | ಜೀವವೇಣುವೆ ತುಂಬೆ ಶ್ರೀವರನ ತಾನಗಳನೆತ್ತಿ ಅಳುವೆ {{Right|೨}} ಭವಭಾವ ದೇವಾದಿ । ಭುವನಂಗಳನು ಹಡೆದ ಶಿವನ ಅಣತಿಯಿಂದ ಅಳುವೆ ನಗುವೆ ಭವದ ಭವಿಗಳು ನಾವು | ಶಿವನ ಶಕ್ತಿಯು ನೀನು ಅವನೆಡೆಗೆ ಬಲೆಬೀಸಿ ನಮ್ಮನೆಳೆವೆ{{Right|೩}} </poem> {{Right|೩-೧೧-೨೪}}<noinclude></noinclude> lllwz0g79ctsdv04ik5xs2pq2by7u6n 317122 317121 2026-05-05T06:06:44Z Pragathi. BH 7585 317122 proofread-page text/x-wiki <noinclude><pagequality level="4" user="Pragathi. BH" />{{rh|center=|left=ನನ್ನ ನಲ್ಲ|right=೧೨೩}}</noinclude> '''೫೬-ಗೆ''' <poem> ದೇವಲೋಕದ ಜಾಣಿ | ಭಾವಲೋಕದ ರಾಣಿ {{gap}}ಯಾವಲೋಕವ ನೋಡಿ ನಕ್ಕುನಲಿವೆ {{gap}}ಭಾವಗೀತಿಯ ಬೆಡಗ | ದೇವಸಂಗೀತದಲ್ಲಿ {{gap}}ಹಾವಭಾವಗಳಿಂದ ಹಾಡಿ ಅಳುವೆ {{Right|೧}} ದೇವಲೋಕದ ನೆನಪು | ಭಾವಲೋಕಕೆ ಬರಲು {{gap}}ಸಾವಿತ್ರಿ ಗಾಯಿತ್ರಿ ನಕ್ಕುನಲಿವೆ {{gap}}ಭಾವಲೋಕದ ಗಾಳಿ | ಜೀವವೇಣುವೆ ತುಂಬೆ {{gap}}ಶ್ರೀವರನ ತಾನಗಳನೆತ್ತಿ ಅಳುವೆ {{Right|೨}} ಭವಭಾವ ದೇವಾದಿ । ಭುವನಂಗಳನು ಹಡೆದ {{gap}}ಶಿವನ ಅಣತಿಯಿಂದ ಅಳುವೆ ನಗುವೆ {{gap}}ಭವದ ಭವಿಗಳು ನಾವು | ಶಿವನ ಶಕ್ತಿಯು ನೀನು {{gap}}ಅವನೆಡೆಗೆ ಬಲೆಬೀಸಿ ನಮ್ಮನೆಳೆವೆ{{Right|೩}} </poem> {{Right|೩-೧೧-೨೪}}<noinclude></noinclude> dabar085n9op3hwec9ecccwico7qapn ಪುಟ:ನನ್ನ ನಲ್ಲ.pdf/೧೫೧ 104 75548 317123 313170 2026-05-05T06:11:02Z Pragathi. BH 7585 /* Validated */ 317123 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೨೮|right=ನನ್ನ ನಲ್ಲ}}</noinclude> '''೫೭. ಹೂಂ''' <poem> ಮೂರು ಮಂದಿ ಮೂಲ ಗುರುಗಳು ಈ ಚೆನ್ನಮಣಿಗೆ ಮೂರು ಮಂದಿ ಮೂಲ ಗುರುಗಳು ||ಪಲ್ಲ|| {{gap}}ಜಗದೊಳುಂಡು | ಜಗದೊಳುಟ್ಟು {{gap}}ಜಗದೊಳಿದ್ದು | ಜಗವರಿಯದೆ {{gap}}ಮಿಗಿಲು ನಿದ್ದೆಗೆಯ್ಯುತ್ತಿರಲು {{gap}}ತಗಣಿನಾಥನೆಚ್ಚರಿಸಿದ ಮೂರು ಮಂದಿ ಮೂಲ ಗುರುಗಳು | ಈ ಚೆನ್ನಮಣಿಗೆ{{Right|೧}} {{gap}}ಸುಳ್ಳು ಸತ್ಯವೆಂಬುದನ್ನು {{gap}}ಬಳ್ಳುಮಾಡಿ ತೋರದಂತೆ {{gap}}ಒಳ್ಳೆ ಮಬ್ಬುಗತ್ತಲಲ್ಲಿ {{gap}}ಬಳ್ಳಿಯಾಗಿ ಬೆಳೆಯುತಿರಲು {{gap}}ಕೊಳ್ಳದಲ್ಲಿ ಹರಣ ಹಾಕಿ {{gap}}ಸೊಳ್ಳೆದಾಸನೆಬ್ಬಿಸಿದನು ಮೂರು ಮಂದಿ ಮೂಲ ಗುರುಗಳು | ಈ ಚೆನ್ನಮಣಿಗೆ {{Right|೨}} {{gap}}ಭೋಗದಾಗರಕ್ಕೆ ಸಿಕ್ಕು {{gap}}ಸಾಗುವದಕ್ಕೆ ಶಕ್ತಿಗುಂದಿ {{gap}}ಹೋಗ ಹೊರಟ ದಾರಿಯಲ್ಲಿ {{gap}}ತಾಗಿ ಬಾಗಿ ತಂಗುತಿರಲು {{gap}}ರೋಗರಾಯ ತಾನೆ ಬಂದು {{gap}}ಯೋಗಪಥವ ತೋರಿಸಿದನು ಮೂರು ಮಂದಿ ಮೂಲ ಗುರುಗಳು | ಈ ಚೆನ್ನಮಣಿಗೆ{{Right|೩}} </poem><noinclude></noinclude> fy5gcws8yepoil9gb16lsi884jt90nt 317125 317123 2026-05-05T06:12:11Z Pragathi. BH 7585 317125 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೨೮|right=ನನ್ನ ನಲ್ಲ}}</noinclude> '''೫೭. ಹೂಂ''' <poem> ಮೂರು ಮಂದಿ ಮೂಲ ಗುರುಗಳು ಈ ಚೆನ್ನಮಣಿಗೆ ಮೂರು ಮಂದಿ ಮೂಲ ಗುರುಗಳು{{Right|||ಪಲ್ಲ||}} {{gap}}ಜಗದೊಳುಂಡು | ಜಗದೊಳುಟ್ಟು {{gap}}ಜಗದೊಳಿದ್ದು | ಜಗವರಿಯದೆ {{gap}}ಮಿಗಿಲು ನಿದ್ದೆಗೆಯ್ಯುತ್ತಿರಲು {{gap}}ತಗಣಿನಾಥನೆಚ್ಚರಿಸಿದ ಮೂರು ಮಂದಿ ಮೂಲ ಗುರುಗಳು | ಈ ಚೆನ್ನಮಣಿಗೆ{{Right|೧}} {{gap}}ಸುಳ್ಳು ಸತ್ಯವೆಂಬುದನ್ನು {{gap}}ಬಳ್ಳುಮಾಡಿ ತೋರದಂತೆ {{gap}}ಒಳ್ಳೆ ಮಬ್ಬುಗತ್ತಲಲ್ಲಿ {{gap}}ಬಳ್ಳಿಯಾಗಿ ಬೆಳೆಯುತಿರಲು {{gap}}ಕೊಳ್ಳದಲ್ಲಿ ಹರಣ ಹಾಕಿ {{gap}}ಸೊಳ್ಳೆದಾಸನೆಬ್ಬಿಸಿದನು ಮೂರು ಮಂದಿ ಮೂಲ ಗುರುಗಳು | ಈ ಚೆನ್ನಮಣಿಗೆ {{Right|೨}} {{gap}}ಭೋಗದಾಗರಕ್ಕೆ ಸಿಕ್ಕು {{gap}}ಸಾಗುವದಕ್ಕೆ ಶಕ್ತಿಗುಂದಿ {{gap}}ಹೋಗ ಹೊರಟ ದಾರಿಯಲ್ಲಿ {{gap}}ತಾಗಿ ಬಾಗಿ ತಂಗುತಿರಲು {{gap}}ರೋಗರಾಯ ತಾನೆ ಬಂದು {{gap}}ಯೋಗಪಥವ ತೋರಿಸಿದನು ಮೂರು ಮಂದಿ ಮೂಲ ಗುರುಗಳು | ಈ ಚೆನ್ನಮಣಿಗೆ{{Right|೩}} </poem><noinclude></noinclude> np6g1ehskoupgkrri42ja3owmrvwwft 317126 317125 2026-05-05T06:13:06Z Pragathi. BH 7585 317126 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೨೮|right=ನನ್ನ ನಲ್ಲ}}</noinclude> '''೫೭. ಹೂಂ''' <poem> ಮೂರು ಮಂದಿ ಮೂಲ ಗುರುಗಳು ಈ ಚೆನ್ನಮಣಿಗೆ ಮೂರು ಮಂದಿ ಮೂಲ ಗುರುಗಳು||ಪಲ್ಲ|| {{gap}}ಜಗದೊಳುಂಡು | ಜಗದೊಳುಟ್ಟು {{gap}}ಜಗದೊಳಿದ್ದು | ಜಗವರಿಯದೆ {{gap}}ಮಿಗಿಲು ನಿದ್ದೆಗೆಯ್ಯುತ್ತಿರಲು {{gap}}ತಗಣಿನಾಥನೆಚ್ಚರಿಸಿದ ಮೂರು ಮಂದಿ ಮೂಲ ಗುರುಗಳು | ಈ ಚೆನ್ನಮಣಿಗೆ{{Right|೧}} {{gap}}ಸುಳ್ಳು ಸತ್ಯವೆಂಬುದನ್ನು {{gap}}ಬಳ್ಳುಮಾಡಿ ತೋರದಂತೆ {{gap}}ಒಳ್ಳೆ ಮಬ್ಬುಗತ್ತಲಲ್ಲಿ {{gap}}ಬಳ್ಳಿಯಾಗಿ ಬೆಳೆಯುತಿರಲು {{gap}}ಕೊಳ್ಳದಲ್ಲಿ ಹರಣ ಹಾಕಿ {{gap}}ಸೊಳ್ಳೆದಾಸನೆಬ್ಬಿಸಿದನು ಮೂರು ಮಂದಿ ಮೂಲ ಗುರುಗಳು | ಈ ಚೆನ್ನಮಣಿಗೆ {{Right|೨}} {{gap}}ಭೋಗದಾಗರಕ್ಕೆ ಸಿಕ್ಕು {{gap}}ಸಾಗುವದಕ್ಕೆ ಶಕ್ತಿಗುಂದಿ {{gap}}ಹೋಗ ಹೊರಟ ದಾರಿಯಲ್ಲಿ {{gap}}ತಾಗಿ ಬಾಗಿ ತಂಗುತಿರಲು {{gap}}ರೋಗರಾಯ ತಾನೆ ಬಂದು {{gap}}ಯೋಗಪಥವ ತೋರಿಸಿದನು ಮೂರು ಮಂದಿ ಮೂಲ ಗುರುಗಳು | ಈ ಚೆನ್ನಮಣಿಗೆ{{Right|೩}} </poem><noinclude></noinclude> h2m7m6bnw5py6u0fj0t4a6vnh2kt2nj 317127 317126 2026-05-05T06:15:15Z Pragathi. BH 7585 317127 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೨೮|right=ನನ್ನ ನಲ್ಲ}}</noinclude> '''೫೭. ಹೂಂ''' <poem> ಮೂರು ಮಂದಿ ಮೂಲ ಗುರುಗಳು ಈ ಚೆನ್ನಮಣಿಗೆ ಮೂರು ಮಂದಿ ಮೂಲ ಗುರುಗಳು{{Right|॥ಪ॥}} {{gap}}ಜಗದೊಳುಂಡು | ಜಗದೊಳುಟ್ಟು {{gap}}ಜಗದೊಳಿದ್ದು | ಜಗವರಿಯದೆ {{gap}}ಮಿಗಿಲು ನಿದ್ದೆಗೆಯ್ಯುತ್ತಿರಲು {{gap}}ತಗಣಿನಾಥನೆಚ್ಚರಿಸಿದ ಮೂರು ಮಂದಿ ಮೂಲ ಗುರುಗಳು | ಈ ಚೆನ್ನಮಣಿಗೆ{{Right|೧}} {{gap}}ಸುಳ್ಳು ಸತ್ಯವೆಂಬುದನ್ನು {{gap}}ಬಳ್ಳುಮಾಡಿ ತೋರದಂತೆ {{gap}}ಒಳ್ಳೆ ಮಬ್ಬುಗತ್ತಲಲ್ಲಿ {{gap}}ಬಳ್ಳಿಯಾಗಿ ಬೆಳೆಯುತಿರಲು {{gap}}ಕೊಳ್ಳದಲ್ಲಿ ಹರಣ ಹಾಕಿ {{gap}}ಸೊಳ್ಳೆದಾಸನೆಬ್ಬಿಸಿದನು ಮೂರು ಮಂದಿ ಮೂಲ ಗುರುಗಳು | ಈ ಚೆನ್ನಮಣಿಗೆ {{Right|೨}} {{gap}}ಭೋಗದಾಗರಕ್ಕೆ ಸಿಕ್ಕು {{gap}}ಸಾಗುವದಕ್ಕೆ ಶಕ್ತಿಗುಂದಿ {{gap}}ಹೋಗ ಹೊರಟ ದಾರಿಯಲ್ಲಿ {{gap}}ತಾಗಿ ಬಾಗಿ ತಂಗುತಿರಲು {{gap}}ರೋಗರಾಯ ತಾನೆ ಬಂದು {{gap}}ಯೋಗಪಥವ ತೋರಿಸಿದನು ಮೂರು ಮಂದಿ ಮೂಲ ಗುರುಗಳು | ಈ ಚೆನ್ನಮಣಿಗೆ{{Right|೩}} </poem><noinclude></noinclude> brxcawndlwb6a6bdgmpj66pjqo8tl8o ಪುಟ:ನನ್ನ ನಲ್ಲ.pdf/೧೫೨ 104 75549 317129 313171 2026-05-05T06:17:26Z Pragathi. BH 7585 /* Validated */ 317129 proofread-page text/x-wiki <noinclude><pagequality level="4" user="Pragathi. BH" />{{rh|center=|left=ನನ್ನ ನಲ್ಲ|right=೧೨೯}}</noinclude> <poem> {{gap}}ದೇವರಾಯನಾಳುತಿರುವ {{gap}}ದೇವರಾಜ್ಯವೆಮ್ಮ ಭೂಮಿ {{gap}}ದೇವದೂತರಿವರು ಭವಕ {{gap}}ಭಾವಮಂತ್ರ ಬೋಧಿಸುವರು {{gap}}ಸಾವು ನೋವು ಸೂರೆಮಾಡಿ {{gap}}ದೇವನಡಿಗೆ ದಾರಿಯೆಳವ ಮೂರು ಮಂದಿ ಮೂಲ ಗುರುಗಳು| ಈ ಚೆನ್ನಮಣಿಗೆ {{Right|೪}} </poem><noinclude></noinclude> cfjxzi481a2f8uvibqpgh65ysnbidjn ಪುಟ:ನನ್ನ ನಲ್ಲ.pdf/೧೫೩ 104 75550 317130 313175 2026-05-05T06:22:06Z Pragathi. BH 7585 /* Validated */ 317130 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೩೦|right=ನನ್ನ ನಲ್ಲ}}</noinclude>{{Left|೧೩೦}}{{Right|ನನ್ನ ನಲ್ಲ}} '''೫೮. ಶ್ರೀ ಶ್ರೀ ವಿವೇಕಾನಂದರಿಗೆ''' {{gap}}ರಾಗ-ಬಾಗೇಸರಿ, ತಾಲ-ಝಂಪೆ, <poem> ಮೂರು ನಾಮದ ಮುನಿಯೆ | ಮೂರು ಲೋಕದ ಮಣಿಯೆ ಶ್ರೀಂಕಾರವನು ಮೆಟ್ಟಿ | ಓಂಕಾರವನೆ ನುಡಿದು ಭಾರತಿಯ ಬೆಳೆಸವ ಮುಗಿಲಲ್ಲಿ ಮಿನುಗಿಸಿದ {{Right|॥ಅ.ಪ॥}} `ವಿಶ್ವೇಶ್ವರ'ನೆ ನೀನು | ವಿಶ್ವವನು ವಿಸ್ತರಿಸಿ ಸ್ವಸ್ತಿ | ಭಾರತಿಗೆನುತ | ವಿಶ್ವವನು ವ್ಯಾಪಿಸಿದೆ{{Right|೧}} ನರಕುಲವನುದ್ಧರಿಸಿ | ನರಹರಿಯ ಪದತಳಕೆ ಬೆರಿಸಿ ಮೆರೆಸಿದ ಶರಣ | ವರ 'ನರೇಂದ್ರ'ನೇ ಧನ್ಯ {{Right|೨}} 'ಈ' ವಿಷಯಗಳ ತೊರೆದು ! ಆವೊಂದರಲ್ಲಿ ಬೆರೆದು ಶ್ರೀ “ವಿವೇಕಾನಂದ' | ಭೂವಂದ್ಯನಾಗಿರ್ದ {{Right|೩}} ಶುದ್ಧ ಹೇತುವಿನಿಂದ | ಬದ್ಧಕಂಕಣನಾಗು ನಿದ್ದೆಯಿಂದೇಳೆಂದು | ಬುದ್ಧಿಗಲಿಸಿದ ಗುರುವೆ {{Right|೪}} ಮೂಡು ! ನನ್ನೊಳು ಮೂಡು ! ಬಾಡಿಬಳಲುವೆ ನೋಡು! ಕಾಡು ಹಕ್ಕಿಯ ಹಾಡಿ । ಗೋಡು ಬಾ ! ಬಾ ! ಓಡು{{Right|೫}} </poem> {{Right|೧೦_೧೨_೨೩}}<noinclude></noinclude> thtjqols37idrahtecgdgol9f5jp9xu 317131 317130 2026-05-05T06:22:21Z Pragathi. BH 7585 317131 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೩೦|right=ನನ್ನ ನಲ್ಲ}}</noinclude>{{Left|೧೩೦}}{{Right|ನನ್ನ ನಲ್ಲ}} '''೫೮. ಶ್ರೀ ಶ್ರೀ ವಿವೇಕಾನಂದರಿಗೆ'''<br /> {{gap}}ರಾಗ-ಬಾಗೇಸರಿ, ತಾಲ-ಝಂಪೆ, <poem> ಮೂರು ನಾಮದ ಮುನಿಯೆ | ಮೂರು ಲೋಕದ ಮಣಿಯೆ ಶ್ರೀಂಕಾರವನು ಮೆಟ್ಟಿ | ಓಂಕಾರವನೆ ನುಡಿದು ಭಾರತಿಯ ಬೆಳೆಸವ ಮುಗಿಲಲ್ಲಿ ಮಿನುಗಿಸಿದ {{Right|॥ಅ.ಪ॥}} `ವಿಶ್ವೇಶ್ವರ'ನೆ ನೀನು | ವಿಶ್ವವನು ವಿಸ್ತರಿಸಿ ಸ್ವಸ್ತಿ | ಭಾರತಿಗೆನುತ | ವಿಶ್ವವನು ವ್ಯಾಪಿಸಿದೆ{{Right|೧}} ನರಕುಲವನುದ್ಧರಿಸಿ | ನರಹರಿಯ ಪದತಳಕೆ ಬೆರಿಸಿ ಮೆರೆಸಿದ ಶರಣ | ವರ 'ನರೇಂದ್ರ'ನೇ ಧನ್ಯ {{Right|೨}} 'ಈ' ವಿಷಯಗಳ ತೊರೆದು ! ಆವೊಂದರಲ್ಲಿ ಬೆರೆದು ಶ್ರೀ “ವಿವೇಕಾನಂದ' | ಭೂವಂದ್ಯನಾಗಿರ್ದ {{Right|೩}} ಶುದ್ಧ ಹೇತುವಿನಿಂದ | ಬದ್ಧಕಂಕಣನಾಗು ನಿದ್ದೆಯಿಂದೇಳೆಂದು | ಬುದ್ಧಿಗಲಿಸಿದ ಗುರುವೆ {{Right|೪}} ಮೂಡು ! ನನ್ನೊಳು ಮೂಡು ! ಬಾಡಿಬಳಲುವೆ ನೋಡು! ಕಾಡು ಹಕ್ಕಿಯ ಹಾಡಿ । ಗೋಡು ಬಾ ! ಬಾ ! ಓಡು{{Right|೫}} </poem> {{Right|೧೦_೧೨_೨೩}}<noinclude></noinclude> pdzjjkj9h4q30d7cuk26t51kctrtwgv 317132 317131 2026-05-05T06:24:32Z Pragathi. BH 7585 317132 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೩೦|right=ನನ್ನ ನಲ್ಲ}}</noinclude> '''೫೮. ಶ್ರೀ ಶ್ರೀ ವಿವೇಕಾನಂದರಿಗೆ'''<br /> {{gap}}ರಾಗ-ಬಾಗೇಸರಿ, ತಾಲ-ಝಂಪೆ, <poem> ಮೂರು ನಾಮದ ಮುನಿಯೆ | ಮೂರು ಲೋಕದ ಮಣಿಯೆ ಶ್ರೀಂಕಾರವನು ಮೆಟ್ಟಿ | ಓಂಕಾರವನೆ ನುಡಿದು ಭಾರತಿಯ ಬೆಳೆಸವ ಮುಗಿಲಲ್ಲಿ ಮಿನುಗಿಸಿದ {{Right|॥ಅ.ಪ॥}} `ವಿಶ್ವೇಶ್ವರ'ನೆ ನೀನು | ವಿಶ್ವವನು ವಿಸ್ತರಿಸಿ ಸ್ವಸ್ತಿ | ಭಾರತಿಗೆನುತ | ವಿಶ್ವವನು ವ್ಯಾಪಿಸಿದೆ{{Right|೧}} ನರಕುಲವನುದ್ಧರಿಸಿ | ನರಹರಿಯ ಪದತಳಕೆ ಬೆರಿಸಿ ಮೆರೆಸಿದ ಶರಣ | ವರ 'ನರೇಂದ್ರ'ನೇ ಧನ್ಯ {{Right|೨}} 'ಈ' ವಿಷಯಗಳ ತೊರೆದು ! ಆವೊಂದರಲ್ಲಿ ಬೆರೆದು ಶ್ರೀ “ವಿವೇಕಾನಂದ' | ಭೂವಂದ್ಯನಾಗಿರ್ದ {{Right|೩}} ಶುದ್ಧ ಹೇತುವಿನಿಂದ | ಬದ್ಧಕಂಕಣನಾಗು ನಿದ್ದೆಯಿಂದೇಳೆಂದು | ಬುದ್ಧಿಗಲಿಸಿದ ಗುರುವೆ {{Right|೪}} ಮೂಡು ! ನನ್ನೊಳು ಮೂಡು ! ಬಾಡಿಬಳಲುವೆ ನೋಡು! ಕಾಡು ಹಕ್ಕಿಯ ಹಾಡಿ । ಗೋಡು ಬಾ ! ಬಾ ! ಓಡು{{Right|೫}} </poem> {{Right|೧೦_೧೨_೨೩}}<noinclude></noinclude> 2m28mj3o3wotnroshwe79h3ay1wsgkz 317134 317132 2026-05-05T06:25:47Z Pragathi. BH 7585 317134 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೩೦|right=ನನ್ನ ನಲ್ಲ}}</noinclude> '''೫೮. ಶ್ರೀ ಶ್ರೀ ವಿವೇಕಾನಂದರಿಗೆ'''<br /> {{gap}}ರಾಗ-ಬಾಗೇಸರಿ, ತಾಲ-ಝಂಪೆ, <poem> ಮೂರು ನಾಮದ ಮುನಿಯೆ | ಮೂರು ಲೋಕದ ಮಣಿಯೆ ಶ್ರೀಂಕಾರವನು ಮೆಟ್ಟಿ | ಓಂಕಾರವನೆ ನುಡಿದು ಭಾರತಿಯ ಬೆಳೆಸವ ಮುಗಿಲಲ್ಲಿ ಮಿನುಗಿಸಿದ {{Right|॥ಅ.ಪ॥}} {{gap}}`ವಿಶ್ವೇಶ್ವರ'ನೆ ನೀನು | ವಿಶ್ವವನು ವಿಸ್ತರಿಸಿ {{gap}}ಸ್ವಸ್ತಿ | ಭಾರತಿಗೆನುತ | ವಿಶ್ವವನು ವ್ಯಾಪಿಸಿದೆ{{Right|೧}} {{gap}}ನರಕುಲವನುದ್ಧರಿಸಿ | ನರಹರಿಯ ಪದತಳಕೆ {{gap}}ಬೆರಿಸಿ ಮೆರೆಸಿದ ಶರಣ | ವರ 'ನರೇಂದ್ರ'ನೇ ಧನ್ಯ {{Right|೨}} {{gap}}'ಈ' ವಿಷಯಗಳ ತೊರೆದು ! ಆವೊಂದರಲ್ಲಿ ಬೆರೆದು {{gap}}ಶ್ರೀ “ವಿವೇಕಾನಂದ' | ಭೂವಂದ್ಯನಾಗಿರ್ದ {{Right|೩}} {{gap}}ಶುದ್ಧ ಹೇತುವಿನಿಂದ | ಬದ್ಧಕಂಕಣನಾಗು {{gap}}ನಿದ್ದೆಯಿಂದೇಳೆಂದು | ಬುದ್ಧಿಗಲಿಸಿದ ಗುರುವೆ {{Right|೪}} {{gap}}ಮೂಡು ! ನನ್ನೊಳು ಮೂಡು ! ಬಾಡಿಬಳಲುವೆ ನೋಡು! {{gap}}ಕಾಡು ಹಕ್ಕಿಯ ಹಾಡಿ । ಗೋಡು ಬಾ ! ಬಾ ! ಓಡು{{Right|೫}} </poem> {{Right|೧೦_೧೨_೨೩}}<noinclude></noinclude> eib1uqnv4hrdgpx81xd3kz5j364injf ಪುಟ:ನನ್ನ ನಲ್ಲ.pdf/೧೫೪ 104 75551 317135 313188 2026-05-05T06:30:23Z Pragathi. BH 7585 /* Validated */ 317135 proofread-page text/x-wiki <noinclude><pagequality level="4" user="Pragathi. BH" />{{rh|center=|left=ನನ್ನ ನಲ್ಲ|right=೧೩೧}}</noinclude> '''೫೯.ಶ್ರೀ ವಿವೇಕಾನಂದ''' <poem> ಶ್ರೀ ವಿವೇಕಾನಂದ ! ಶರಣು ಶರಣು !! ಶ್ರೀ ವಿವೇಕಾನಂದ ! ಶರಣು ಶರಣು{{Right|೧}} ಶ್ರೀ ವಿವೇಕಾನಂದ ಮೂಡು ಒಡಮೂಡು ಶ್ರೀವಿವೇಕಾನಂದವನು ನೀಡು ! ನೀಡು {{Right|೨}} ಮಿಂಚಿನಂದದಿ ಮೂಡಿ ಮಾಯವಾಗುವರೇ ? ಹಂಚಿಕೆಯ ಕಿರುಗೈಗೆ ನಿಲುಕಿ ಹಾರುವರೇ ? {{Right|೩}} ಆಶೆತೋರಿಸಿ ಹೀಗೆ ದೂರ ಸರಿಯುವರೇ ಆ ಸಣ್ಣ ಗಳಿಗೆಯನು ಮುಚ್ಚಿ ಮರೆಸುವರೇ {{Right|೪}} ನೋಡಿ ನೀಡುವನೆಂದು `ಬಸವ' ಪೇಳಿದನು ಕೂಡಿ ಆಡುವನೆಂದು `ಪಾರ್ಥ' ಹೇಳಿದನು {{Right|೫}} ಸೀತೆ ಹೇಳಿದಳಲ್ಲೊ ನಂಬುನಂಬೆಂದು ಏತರಲಿ ಸಿಕ್ಕುವದೊ ನಿನ್ನ ಇಂದೊಂದು{{Right|೬}} ನೆಲೆಹತ್ತದಂತಾಗಿ ಕಾಲು ಹಾರುವವು ನೆಲೆಯನಲೆದಾಡಿಸುವದೆಂಥದೀ ಸೆಳವು {{Right|೭}} ತುಟಿಯ ಪಿಟುಕಿಸಿ ಏನು ಹೇಳಿ ನೀ ಹೋದೆ ಚಟಕಿಯನು ಹೊಡೆದು ನೀನೇನು ಸೂಚಿಸಿದೆ{{Right|೮}} ಶ್ರೀ ವಿವೇಕಾನಂದ ಮೂಡು-ಒಡಮೂಡು ಶ್ರೀವಿವೇಕಾನಂದವನು ನೀಡು ! ನೀಡು{{Right|೯}} </poem><noinclude></noinclude> d9e6iwfxa4ysym14ndhjl4ecc79e0fy ಪುಟ:ನನ್ನ ನಲ್ಲ.pdf/೧೫೫ 104 75552 317176 313485 2026-05-05T09:33:18Z Pragathi. BH 7585 /* Validated */ 317176 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೩೨|right=ನನ್ನ ನಲ್ಲ}}</noinclude><poem> ಹುಡುಹುಡುಕಿ ದಣಿಯುವದು ನಿನ್ನುಡುಗ ನೋಡು ಅಡಗುವದು ಎಷ್ಟೊತ್ತು ? ಮೂಡು ಒಡಮೂಡು{{Right|೧೦}} ಬಳಲಿ ಆ ಬಳಿಕ ಎಳೆ ಮಗು ತೊಳಲಬಹುದೇ ? ಅಳಿಸಿ ಮಗುವನು ತಾಯಿ ಸುಮ್ಮನಿರಬಹುದೇ ? {{Right|೧೧}} ಬಲು ಬಿಸುಪು ಹೆಚ್ಚಾಗಿ ಹೌಹಾರದಿರಲು ನೆಲಮುಗಿಲನೊಂದಿಸುವ ಮಳೆ ಬಹುದೆ ಮಿಗಿಲು{{Right|೧೨}} ಬಳಲಿಕೆಗೆ ಬೆಚ್ಚಿ ನಾನಳುವವನಲ್ಲ ಬಳಲುತಿರಲೆದೆಗರಗಿ ನೀ ಬರುವೆಯಲ್ಲ {{Right|೧೩}} ಕರೆದರೂ ಬಾರದಲೆ ಮರೆಗಿರುವ ನೀನು ಕರೆಯದೇ ಹುರಿಗೊಂಡು ಆಗ ಬಹೆ ಏನು? {{Right|೧೪}} `ಆಗ' 'ಈಗ'ಗಳ ನಡುವಿರುವ ಆಗಲೊಂದೇ ಆಗಿಹುದು ಅಗಲಿಕೆಯ ಆಗಲು ಬೇರೆ ಮುಂದೆ {{Right|೧೫}} ಈ ಸಂದನಡ್ಡಲಗು ಹತ್ತೆಯಾದಂತೆ ಈಸೊಂದು ಚಿಂತೆಗಳದುಂಟೆ {{Right|೧೬}} ಶ್ರೀವಿವೇಕಾನಂದ ಮೂಡು ಒಡಮೂಡು ಶ್ರೀವಿವೇಕಾನಂದವನು ನೀಡು ! ನೀಡು {{Right|೧೭}} ಆಶೆ ಕಡಿದರು ಕೂಡ ಆಶೆಯನು ಬಿಡದೆ ಏಸೊ ದಿನವಾದರೂ 'ಸೀತೆ' ಬಗೆಗೆಡದೆ {{Right|೧೮}} </poem><noinclude></noinclude> 9zq3qkgr8x5l3hpq1f6u0vtxhugm5m7 ಪುಟ:ನನ್ನ ನಲ್ಲ.pdf/೧೫೬ 104 75553 317194 313488 2026-05-05T09:50:47Z Pragathi. BH 7585 /* Validated */ 317194 proofread-page text/x-wiki <noinclude><pagequality level="4" user="Pragathi. BH" />{{rh|center=|left=ನನ್ನ ನಲ್ಲ|right=೧೩೩}}</noinclude> ಆನಂದರೂಪನ 'ವಿವೇಕ ನಿಧಿಯನ್ನು ತಾನಂದು ಪಡೆದಳಲ್ಲವೆ 'ರಾಮ್‌'ನನ್ನು {{Right|೧೯}} ತನ್ನ ತನುಮನವ ನೀಡಿ 'ರಾಧಿಕಾ' ಕನ್ಯ ಮುನ್ನ ತಾ ಪಡೆದಳಲ್ಲವೆ 'ಕೃಷ್ಣ'ನನ್ನೆ {{Right|೨೦}} ರಾಮನೊಲಿದು ಅಚಲವಾದ ನಂಬುಗೆಗೆ ಶ್ಯಾಮಸುಂದರನೊಲಿದನೈ ಸಮರ್ಪಣೆಗೆ {{Right|೨೧}} ರಾಮಕೃಷ್ಣರು ನಿನ್ನ ಹುಡುಕುತ್ತ ಬಂದು ಈ ಮೃತ್ಯುಲೋಕದಲಿ ಕೈಹಿಡಿದರಂದು {{Right|೨೨}} ಆವ ಮೋಹನ ಮಂತ್ರವಿತ್ತೊ ನಿನ್ನಲ್ಲಿ ಆವೊಂದೆ ಮಂತ್ರವನ್ನೂದೊ ನನ್ನಲ್ಲಿ {{Right|೨೩}} ಆಗ ನನಗೊಂದಿಷ್ಟು ಧೈರ್ಯವಾಗುವದು ಬೇಗ ನಿನ್ನಿಂದೆನಗೆ ಧೈರ್ಯವಾಗುವದು {{Right|೨೪}} ಶ್ರೀ ವಿವೇಕಾನಂದ ಮೂಡು ಒಡಮೂಡು ಶ್ರೀವಿವೇಕಾನಂದವನು ನೀಡು ! ನೀಡು {{Right|೨೫}} ಶ್ರೀ ವಿವೇಕಾನಂದ ಶರಣು ! ಶರಣು !! ಶ್ರೀ ವಿವೇಕಾನಂದ ಶರಣು | ಶರಣು !! {{Right|೨೬}} </poem> {{Right|೧೦-೭-೨೬ (ಗುರುವಾರ)}}<noinclude></noinclude> 9p79uv7wju876t3vxmwupglhc83vvtn ಪುಟ:ಅರಮನೆ.pdf/೩೦ 104 77116 317098 311948 2026-05-05T02:54:28Z Sharanya K H 7593 /* Validated */ 317098 proofread-page text/x-wiki <noinclude><pagequality level="4" user="Sharanya K H" /></noinclude>________________ {{Left|XXX}} {{center|ಪರಿವಿಡಿ}} ಶುಭ ಸಂದೇಶ ಚೆನ್ನುಡಿ ಎರಡು ನುಡಿ ಅಧ್ಯಕ್ಷರ ಮಾತು ಪ್ರಕಾಶಕರ ಮಾತು ಆಯ್ಕೆ ಸಮಿತಿ ಮುನ್ನುಡಿ ಬೇಲ್ದಾರನ ಭಿನ್ನಹ ನೆನಕೆಗಳು XII XXIII XXVIII {{Left|ಅರಮನೆ}} {{Right|೧-೭೧೪}}<noinclude><references/></noinclude> cer6rw7cl73ke7apd95f8qpitb7s1sv ಪುಟ:ಅರಮನೆ.pdf/೩೧ 104 77117 317099 250708 2026-05-05T02:54:49Z Sharanya K H 7593 /* Validated */ 317099 proofread-page text/x-wiki <noinclude><pagequality level="4" user="Sharanya K H" /></noinclude> {{rh|right=xxxi}} {{rh|center='''ಅರಮನೆ'''}}<noinclude><references/></noinclude> qeykdf7ehp3ls0yfdy8klmlh5xza2ua ಪುಟ:ಅರಮನೆ.pdf/೩೨ 104 77118 317055 250760 2026-05-04T16:38:04Z Shreelatha.Halemane 7642 /* Proofread */ 317055 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|'''ಪರ್ವ : ವಂದು'''}} {{gap}}ವಾರದ ಹಿಂದೆಯಷ್ಟೆ ಬೆಳಗುಪ್ಪದ ಜಮಿಂದಾರ್‍ರುಚಿನ್ನೋಬುಳ ರೆಡ್ಡಿಯನ್ನೂ, ಮುಷೂರು ಮಾದಿರೆಡ್ಡಿಯನ್ನೂ ಯೇಕಕಾಲಕ್ಕೆ ಮಣಿಸಿ ಕಡುಪಾದ ವಸ್ತಿವಳಗ ತನ್ನ ಸರೀರದ ಮ್ಯಾಲಿದ್ದ ಪೋಷಾಕನ್ನು ಕಳಚಿ ಕಲೆಟ್ರುಥಾಮಸು ಮನ್ರೋ ಸಾಹೇಬನು ಯದುರಿದ್ದ ನಿಲುಗನ್ನಡಿಯಲ್ಲಿ ನೋಡಿಕೊಳ್ಳುತ ತನ್ನ ಪ್ರತಿಬಿಂಬವನ್ನು ತಾನು ಮೋಹಿಸಿಕೊಳ್ಳುತ್ತಿರುವಾಗ್ಗೆ.. ಸಂಡೂರು ಗೆಡ್ಡೆಯ ಕಾರೀಕ ಸ್ವಾಮಿಯ ಕಾಡಡವಿಯಲ್ಲಿ ಕೂಡ್ಲಿಗಿಯ ಕುಂಪಣಿ ಅಧಿಕಾರಿ ಯಡ್ಡವರ್‍ಡನು ಹುಲಿ ಚಿರತೆಗಳನ್ನು ಶಿಕಾರು ಮಾಡುತಿರುವಾಗ್ಗೆ.. ಪದಭ್ರಷ್ಟಗೊಂಡಿದ್ದ ನಲ್ಲಚರುವಿನ ಗುರುವಪ್ಪನಾಯಕನು, ಹೆಬ್ಬೆಟದ ಪೆದ ತಿಮ್ಮಾರೆಡ್ಡಿಯು, ಹರುವಾಣದ ಹರಿಶ್ಚಂದ್ರರೆಡ್ಡಿಯು ಬೆಳಗಲ್ಲಿನ ಮೋಂಕಾರಪ್ಪನು ಪತ್ತಿಕೊಂಡ ಸಮೀಪದ ಕರಿಯೇಮಲ ದರಣ್ಯೇವ ಗುಪ್ತಜಾಗದಲ್ಲಿ ಕೂಕಂಡು ಕುಂಪಣಿ ಸರಕಾರದ ಕರಾಮತ್ತಿನ ಬಗ್ಗೆ ಚರೆ ಮಾಡುತ್ತಿರುವಾಗ್ಗೆ ಕೇಳಲೂ ಬಾರದ, ಹೇಳಲೂ ಬಾರದ ಸಂಗತಿಗಳನ್ನು ತಮ್ಮ ತಮ್ಮ ಕಾಲುಗಳಿಗೆ ಕಟ್ಟಿಕೊಂಡಿದ್ದ ಪಾರಿವಾಳಗಳು ಕುಂತಳ ಸೀಮೆಯ ವಳಿತದ ರಾಯದುಗ್ಗದಿಂದ ಚಿತ್ರಕಲ್ಲುದುರದ ಕಡೆಗೂ, ಜರುಮಲಿಯಿಂದ ಗುಡೇಕೋಟೆ ಕಡೆಗೂ, ಜಮ್ಮೊಬನಳ್ಳಿಯಿಂದ ಸಿಡೇಗಲ್ಲಿನ ಕಡೆಗೂ ಹಾರುತ ಮುಗುಲ ಬಯಲಲ್ಲಿ ಅಂಡಾವರನವಾಗಿರುವಾಗ್ಗೆ.. ಕೋನಾಪದ ಕೋನಪ್ಪ ನಾಯಕನಿಗೂ, ರಾಜಾಪ್ರದ ರಾಜಪ್ಪ ನಾಯಕನಿಗೂ ಬೊಮ್ಮಕ್ಕನ ರಣಬಯಲಲ್ಲಿ ನಡೆದ ಘನ ಘೋರ ಕಾಳಗದಲ್ಲಿ ಹತ್ತೋರಿಲ್ಲದೆ, ಉಳಿಯೋರಿಲ್ಲದೆ ತಮ್ಮ ತಮ್ಮ ಬೆನ್ನು ಡುಬ್ಬಗಳನ್ನು ಹಗುರ ಮಾಡಿಕೊಂಡಿದ್ದ ನೂರಾರು ಕುದುರೆಗಳು ಯರಡು ಮೂರು ಹರದಾರಿ ದೂರವನ್ನು ಕುಂಟುತ್ತ ತೆವುಳುತ್ತ ಕ್ರಮಿಸಿ ದರವುಜಿ ಕೆರೆಯ ನೀರಿಗೆ ಬಾಯಿ ಅಂಟಿಸಿರುವಾಗ್ಗೆ.. ತಮ್ಮ ರಾಜ ನೆಟಕಲ್ಲಪ್ಪ ನಾಯಕನ ವುಪಟಳಕ್ಕೆ ರೋಸಿ ನೂರಾರು ಮಂದಿ ಪ್ರಜೆಗಳು ಹೆಂಡರು ಮಕ್ಕಳನ್ನು ಕಟ್ಟಿಕೊಂಡು, ಸಾಮಾನು ಸರಂಜಾಮುಗಳನ್ನು ಬಂಡಿಗಳಲ್ಲಿ ಯೇರಿಕೊಂಡು ಮದ್ದಿಕೇರಿ ಗ್ರಾಮದಿಂದ<noinclude><references/></noinclude> 2ihe69pb5n92pqjmq18scz8ovzeq91j 317175 317055 2026-05-05T09:32:26Z Ashwini Rai K 8475 /* Validated */ 317175 proofread-page text/x-wiki <noinclude><pagequality level="4" user="Ashwini Rai K" /></noinclude>{{center|'''ಪರ್ವ : ವಂದು'''}} {{gap}}ವಾರದ ಹಿಂದೆಯಷ್ಟೆ ಬೆಳಗುಪ್ಪದ ಜಮಿಂದಾರ್‍ರುಚಿನ್ನೋಬುಳ ರೆಡ್ಡಿಯನ್ನೂ, ಮುಷೂರು ಮಾದಿರೆಡ್ಡಿಯನ್ನೂ ಯೇಕಕಾಲಕ್ಕೆ ಮಣಿಸಿ ಕಡುಪಾದ ವಸ್ತಿವಳಗ ತನ್ನ ಸರೀರದ ಮ್ಯಾಲಿದ್ದ ಪೋಷಾಕನ್ನು ಕಳಚಿ ಕಲೆಟ್ರುಥಾಮಸು ಮನ್ರೋ ಸಾಹೇಬನು ಯದುರಿದ್ದ ನಿಲುಗನ್ನಡಿಯಲ್ಲಿ ನೋಡಿಕೊಳ್ಳುತ ತನ್ನ ಪ್ರತಿಬಿಂಬವನ್ನು ತಾನು ಮೋಹಿಸಿಕೊಳ್ಳುತ್ತಿರುವಾಗ್ಗೆ.. ಸಂಡೂರು ಗೆಡ್ಡೆಯ ಕಾರೀಕ ಸ್ವಾಮಿಯ ಕಾಡಡವಿಯಲ್ಲಿ ಕೂಡ್ಲಿಗಿಯ ಕುಂಪಣಿ ಅಧಿಕಾರಿ ಯಡ್ಡವರ್‍ಡನು ಹುಲಿ ಚಿರತೆಗಳನ್ನು ಶಿಕಾರು ಮಾಡುತಿರುವಾಗ್ಗೆ.. ಪದಭ್ರಷ್ಟಗೊಂಡಿದ್ದ ನಲ್ಲಚರುವಿನ ಗುರುವಪ್ಪನಾಯಕನು, ಹೆಬ್ಬೆಟದ ಪೆದ ತಿಮ್ಮಾರೆಡ್ಡಿಯು, ಹರುವಾಣದ ಹರಿಶ್ಚಂದ್ರರೆಡ್ಡಿಯು ಬೆಳಗಲ್ಲಿನ ಮೋಂಕಾರಪ್ಪನು ಪತ್ತಿಕೊಂಡ ಸಮೀಪದ ಕರಿಯೇಮಲ ದರಣ್ಯೇವ ಗುಪ್ತಜಾಗದಲ್ಲಿ ಕೂಕಂಡು ಕುಂಪಣಿ ಸರಕಾರದ ಕರಾಮತ್ತಿನ ಬಗ್ಗೆ ಚರೆ ಮಾಡುತ್ತಿರುವಾಗ್ಗೆ ಕೇಳಲೂ ಬಾರದ, ಹೇಳಲೂ ಬಾರದ ಸಂಗತಿಗಳನ್ನು ತಮ್ಮ ತಮ್ಮ ಕಾಲುಗಳಿಗೆ ಕಟ್ಟಿಕೊಂಡಿದ್ದ ಪಾರಿವಾಳಗಳು ಕುಂತಳ ಸೀಮೆಯ ವಳಿತದ ರಾಯದುಗ್ಗದಿಂದ ಚಿತ್ರಕಲ್ಲುದುರದ ಕಡೆಗೂ, ಜರುಮಲಿಯಿಂದ ಗುಡೇಕೋಟೆ ಕಡೆಗೂ, ಜಮ್ಮೊಬನಳ್ಳಿಯಿಂದ ಸಿಡೇಗಲ್ಲಿನ ಕಡೆಗೂ ಹಾರುತ ಮುಗುಲ ಬಯಲಲ್ಲಿ ಅಂಡಾವರನವಾಗಿರುವಾಗ್ಗೆ.. ಕೋನಾಪದ ಕೋನಪ್ಪ ನಾಯಕನಿಗೂ, ರಾಜಾಪ್ರದ ರಾಜಪ್ಪ ನಾಯಕನಿಗೂ ಬೊಮ್ಮಕ್ಕನ ರಣಬಯಲಲ್ಲಿ ನಡೆದ ಘನ ಘೋರ ಕಾಳಗದಲ್ಲಿ ಹತ್ತೋರಿಲ್ಲದೆ, ಉಳಿಯೋರಿಲ್ಲದೆ ತಮ್ಮ ತಮ್ಮ ಬೆನ್ನು ಡುಬ್ಬಗಳನ್ನು ಹಗುರ ಮಾಡಿಕೊಂಡಿದ್ದ ನೂರಾರು ಕುದುರೆಗಳು ಯರಡು ಮೂರು ಹರದಾರಿ ದೂರವನ್ನು ಕುಂಟುತ್ತ ತೆವುಳುತ್ತ ಕ್ರಮಿಸಿ ದರವುಜಿ ಕೆರೆಯ ನೀರಿಗೆ ಬಾಯಿ ಅಂಟಿಸಿರುವಾಗ್ಗೆ.. ತಮ್ಮ ರಾಜ ನೆಟಕಲ್ಲಪ್ಪ ನಾಯಕನ ವುಪಟಳಕ್ಕೆ ರೋಸಿ ನೂರಾರು ಮಂದಿ ಪ್ರಜೆಗಳು ಹೆಂಡರು ಮಕ್ಕಳನ್ನು ಕಟ್ಟಿಕೊಂಡು, ಸಾಮಾನು ಸರಂಜಾಮುಗಳನ್ನು ಬಂಡಿಗಳಲ್ಲಿ ಯೇರಿಕೊಂಡು ಮದ್ದಿಕೇರಿ ಗ್ರಾಮದಿಂದ<noinclude><references/></noinclude> 9cfztgm2mdmk5lc94afwfzb95g8zza3 ಪುಟ:ಅರಮನೆ.pdf/೩೩ 104 77119 317177 293320 2026-05-05T09:33:51Z Ashwini Rai K 8475 /* Validated */ 317177 proofread-page text/x-wiki <noinclude><pagequality level="4" user="Ashwini Rai K" />{{Left|೨}}{{Right|ಅರಮನೆ}}</noinclude>________________ ಜೊನ್ನಗಿರಿ ಪ್ರಾಂತದ ಕಡೇಕ ಗುಳೇ ಹೊಂಟಿರುವಾಗ್ಗೆ.. ಯಿತ್ತ ಕುದುರೆಡವು ಪಟ್ಟಣದ ಅರಮನೇಲಿ ರಾಜಮಾತೆ ಭಮ್ರಮಾಂಬೆಯು ತನ್ನ ಸವತಿ ಮಗ ಕಾಟಯ್ಯ ನಾಯಕನೊಂದಿಗೆ ವಂದು ಕಾಸಿನ ಸರದ ಯಿಷಯದಲ್ಲಿ ಜಗಳವಾಡುತಲಿದ್ದಳು. ತಿರುಪಾಲಯ್ಯ ಶ್ರೇಷಿ«ಯು ತನ್ನ ಮನೆಯ ನೆಲಮಾಳಿಗೆಯೊಳಗೆ ತಾನೊಬ್ಬನೆ ಕೂತುಕೊಂಡು ರಾಣಿ ರೂಪಾಯಿಗಳನ್ನು ಯಣಿಕೆ ಮಾಡುತಲಿದ್ದನು. ಪ್ರಸಿದ್ದ ದೂರುವಿಕರ ವಂಶಸ್ಥನೂ, ಸರಸೂತಿ ದೇವಿಯ ವರಪುತ್ರನೂ ಆಗಿದ್ದಂಥ ಭಟ್ರಾಜು ರಾಮರಾಜುವು ಚುಟುಚುಟು ಗುಟ್ಟುತಲಿದ್ದ ಹೊಗಳಿಕೆಯ ಮಾತುಗಳನ್ನು ತನ್ನ ಗೇಣುದ್ದದ ನಾಲಿಗೆ ಮ್ಯಾಲಿಂದ ಯಕ್ಕಿ ತೆಗೆದು ತಾಳೆಯೋಲೆಯ ಮ್ಯಾಲೆ ಕಟೆದಿಡುತ ಹೊಗಳಿಕೆ, ತೆಗಳಿಕೆಗೆ ಸಂಬಂಧಿಸಿದ ನಿಘಂಟೊಂದನ್ನು ರಚನೆ ಮಾಡುತಲಿದ್ದನು. ಮ್ಯಾಗಳಗೇರಿಯಲ್ಲಿ ವಂದು ಕಸಬಾರಿಗೆ ಯಿಷಯದಲ್ಲಿ ಆಮಾತ್ಯ ಗವುಡಿಕೆ ಸಣಸಿದ್ದಪ್ಪನ ಚತುರ ಪತ್ನಿಯಾದ ಗವುರವನ್ನೂ, ಸೇನಾಧಿಪತಿ ಗೋಯಿಂದಪ್ಪನ ಪಂಚಮ ಪತ್ನಿಯಾದ ಯಂಕಮ್ಮನೂ ತಾಸೊತ್ತಿನಿಂದ ಜಗಳಾಡೀ ಆಡೀ ದಣದು ಅದೇ ಯಿನ್ನು ತಮ್ಮ ತಮ್ಮ ಮನೆಗಳನ್ನು ಸೇರಿಕೊಂಡು ವಟವಟಗುಟ್ಟುತ ಧಮಾರಿಸಿಕೊಳ್ಳುತಲಿದ್ದರು.. ರಣಬಯಲಲ್ಲಿದ್ದ ಹವಾ ಮಹಲೊಳಗೆ ಗೊಂಜಾಡಲರ ಡವಯ್ಯನೂ, ಮ್ಯಾಲಗಿರಿ ತಿಮ್ಮನೂ, ಕಜ್ಜುವೀರಯ್ಯನೂ, ಸಂಧಿಯಿಗ್ರಹಿ ರಾಮಪ್ಪ ಸ್ವಾಮಿಯೂ ತಮ್ಮ ಮುಂದೆ ಚದುರಂಗದ ಪರಿಕರವನ್ನು ಯಿಟ್ಟುಕೊಂಡು ರಾಜಪರಿವಾರದ ಹುದ್ದರಿಗಳಿಗಾಗಿ ಕಾಯುತಲಿದ್ದರು. ದಿನತುಂಬಿದ ಬಸುರೇರು ನೋವು ತಿಂಬುತಲಿದ್ದರು... ನೀರು ತರೋರು ಹೊನ್ನಮ್ಮನ ಹಳ್ಳದಿಂದ ನೀರು ತರುತಲಿದ್ದರು.. ಹೊಲದ ಬದುಕಿಗೆ ಹೋಗೋರು ತಮ್ಮ ತಮ್ಮ ಹೊಲಗಳ ಕಡೀಕೆ ಹೊಂಟಿದ್ದರು.. ನೆಲ ಸಾರಿಸೋರು ನೆಲ ಸಾರಿಸುತಲಿದ್ದರು.. ಕಸ ಗುಡಿಸೋರು ಕಸ ಗುಡಿಸುತಲಿದ್ದರು.. ಹಲ್ಲಿದ್ದೋರು ಹುರಗಡ್ಡಿ ಜಮಡುತಲಿದ್ದರು.. ಹಲ್ಲಿಲ್ಲದೋರು ಜಮೈಕಡ್ಡಿ ನಮಲುತಲಿದ್ದರು. ತಮ್ಮ ತಮ್ಮ ಹೊಟ್ಟೆ ಪ್ರದೇಶವ ಕೆರಕೋತ ಸಿಪಾಯಿಗಳು ಅಲ್ಲೊಬ್ಬರು, ಯಿಲ್ಲೊಬ್ಬರಂತೆ ಗಸ್ತು ತಿರುಗತಲಿದ್ದರು. ಕುದುರೆಡವು ಪಟ್ಟಣದ ವರಮಾನವನ್ನು ವಂದೇ ಮಾತಲ್ಲಿ ಹೇಳಲಕಂದರೆ ಆರು ಮೂರರ ನಡುವೆ ಮಿಸುಕಾಡುತಲಿತ್ತು. ವಂದು ಯೇರಿಕೆ ಯಂಬುದಿರಲಿಲ್ಲ, ಎಂದು ಯಿಳಿಕೆ ಯಂಬುದಿರಲಿಲ್ಲ, ನಿನ್ನೆ ಯಂಬುದಿರಲಿಲ್ಲ, ಯಿಂದು ಯಂಬುದಿರಲಿಲ್ಲ, ನಾಳೆ ಯಂಬು ದಿರಲಿಲ್ಲ. ಮ್ಯಾಲಿದ್ದೋರು ಕೆಳಗಿದ್ದೋರನು<noinclude><references/></noinclude> 96id7cb0vzqunra6oke9htjnx2yv6dz 317178 317177 2026-05-05T09:34:31Z Ashwini Rai K 8475 317178 proofread-page text/x-wiki <noinclude><pagequality level="4" user="Ashwini Rai K" />{{Left|೨}}{{Right|ಅರಮನೆ}}</noinclude> ಜೊನ್ನಗಿರಿ ಪ್ರಾಂತದ ಕಡೇಕ ಗುಳೇ ಹೊಂಟಿರುವಾಗ್ಗೆ.. ಯಿತ್ತ ಕುದುರೆಡವು ಪಟ್ಟಣದ ಅರಮನೇಲಿ ರಾಜಮಾತೆ ಭಮ್ರಮಾಂಬೆಯು ತನ್ನ ಸವತಿ ಮಗ ಕಾಟಯ್ಯ ನಾಯಕನೊಂದಿಗೆ ವಂದು ಕಾಸಿನ ಸರದ ಯಿಷಯದಲ್ಲಿ ಜಗಳವಾಡುತಲಿದ್ದಳು. ತಿರುಪಾಲಯ್ಯ ಶ್ರೇಷಿ«ಯು ತನ್ನ ಮನೆಯ ನೆಲಮಾಳಿಗೆಯೊಳಗೆ ತಾನೊಬ್ಬನೆ ಕೂತುಕೊಂಡು ರಾಣಿ ರೂಪಾಯಿಗಳನ್ನು ಯಣಿಕೆ ಮಾಡುತಲಿದ್ದನು. ಪ್ರಸಿದ್ದ ದೂರುವಿಕರ ವಂಶಸ್ಥನೂ, ಸರಸೂತಿ ದೇವಿಯ ವರಪುತ್ರನೂ ಆಗಿದ್ದಂಥ ಭಟ್ರಾಜು ರಾಮರಾಜುವು ಚುಟುಚುಟು ಗುಟ್ಟುತಲಿದ್ದ ಹೊಗಳಿಕೆಯ ಮಾತುಗಳನ್ನು ತನ್ನ ಗೇಣುದ್ದದ ನಾಲಿಗೆ ಮ್ಯಾಲಿಂದ ಯಕ್ಕಿ ತೆಗೆದು ತಾಳೆಯೋಲೆಯ ಮ್ಯಾಲೆ ಕಟೆದಿಡುತ ಹೊಗಳಿಕೆ, ತೆಗಳಿಕೆಗೆ ಸಂಬಂಧಿಸಿದ ನಿಘಂಟೊಂದನ್ನು ರಚನೆ ಮಾಡುತಲಿದ್ದನು. ಮ್ಯಾಗಳಗೇರಿಯಲ್ಲಿ ವಂದು ಕಸಬಾರಿಗೆ ಯಿಷಯದಲ್ಲಿ ಆಮಾತ್ಯ ಗವುಡಿಕೆ ಸಣಸಿದ್ದಪ್ಪನ ಚತುರ ಪತ್ನಿಯಾದ ಗವುರವನ್ನೂ, ಸೇನಾಧಿಪತಿ ಗೋಯಿಂದಪ್ಪನ ಪಂಚಮ ಪತ್ನಿಯಾದ ಯಂಕಮ್ಮನೂ ತಾಸೊತ್ತಿನಿಂದ ಜಗಳಾಡೀ ಆಡೀ ದಣದು ಅದೇ ಯಿನ್ನು ತಮ್ಮ ತಮ್ಮ ಮನೆಗಳನ್ನು ಸೇರಿಕೊಂಡು ವಟವಟಗುಟ್ಟುತ ಧಮಾರಿಸಿಕೊಳ್ಳುತಲಿದ್ದರು.. ರಣಬಯಲಲ್ಲಿದ್ದ ಹವಾ ಮಹಲೊಳಗೆ ಗೊಂಜಾಡಲರ ಡವಯ್ಯನೂ, ಮ್ಯಾಲಗಿರಿ ತಿಮ್ಮನೂ, ಕಜ್ಜುವೀರಯ್ಯನೂ, ಸಂಧಿಯಿಗ್ರಹಿ ರಾಮಪ್ಪ ಸ್ವಾಮಿಯೂ ತಮ್ಮ ಮುಂದೆ ಚದುರಂಗದ ಪರಿಕರವನ್ನು ಯಿಟ್ಟುಕೊಂಡು ರಾಜಪರಿವಾರದ ಹುದ್ದರಿಗಳಿಗಾಗಿ ಕಾಯುತಲಿದ್ದರು. ದಿನತುಂಬಿದ ಬಸುರೇರು ನೋವು ತಿಂಬುತಲಿದ್ದರು... ನೀರು ತರೋರು ಹೊನ್ನಮ್ಮನ ಹಳ್ಳದಿಂದ ನೀರು ತರುತಲಿದ್ದರು.. ಹೊಲದ ಬದುಕಿಗೆ ಹೋಗೋರು ತಮ್ಮ ತಮ್ಮ ಹೊಲಗಳ ಕಡೀಕೆ ಹೊಂಟಿದ್ದರು.. ನೆಲ ಸಾರಿಸೋರು ನೆಲ ಸಾರಿಸುತಲಿದ್ದರು.. ಕಸ ಗುಡಿಸೋರು ಕಸ ಗುಡಿಸುತಲಿದ್ದರು.. ಹಲ್ಲಿದ್ದೋರು ಹುರಗಡ್ಡಿ ಜಮಡುತಲಿದ್ದರು.. ಹಲ್ಲಿಲ್ಲದೋರು ಜಮೈಕಡ್ಡಿ ನಮಲುತಲಿದ್ದರು. ತಮ್ಮ ತಮ್ಮ ಹೊಟ್ಟೆ ಪ್ರದೇಶವ ಕೆರಕೋತ ಸಿಪಾಯಿಗಳು ಅಲ್ಲೊಬ್ಬರು, ಯಿಲ್ಲೊಬ್ಬರಂತೆ ಗಸ್ತು ತಿರುಗತಲಿದ್ದರು. ಕುದುರೆಡವು ಪಟ್ಟಣದ ವರಮಾನವನ್ನು ವಂದೇ ಮಾತಲ್ಲಿ ಹೇಳಲಕಂದರೆ ಆರು ಮೂರರ ನಡುವೆ ಮಿಸುಕಾಡುತಲಿತ್ತು. ವಂದು ಯೇರಿಕೆ ಯಂಬುದಿರಲಿಲ್ಲ, ಎಂದು ಯಿಳಿಕೆ ಯಂಬುದಿರಲಿಲ್ಲ, ನಿನ್ನೆ ಯಂಬುದಿರಲಿಲ್ಲ, ಯಿಂದು ಯಂಬುದಿರಲಿಲ್ಲ, ನಾಳೆ ಯಂಬು ದಿರಲಿಲ್ಲ. ಮ್ಯಾಲಿದ್ದೋರು ಕೆಳಗಿದ್ದೋರನು<noinclude><references/></noinclude> ft3axtjto66tqllprmrdqnm44s6enc8 ಪುಟ:ಅರಮನೆ.pdf/೩೪ 104 77120 317045 169829 2026-05-04T16:28:02Z Shreelatha.Halemane 7642 /* Proofread */ 317045 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{Left|ಅರಮನೆ}}{{Right|೩}} ನೋಡುತಯಿರಲಿಲ್ಲ, ಕೆಳಗಿದ್ದೋರು ಮ್ಯಾಲಿದೋರನು ನೋಡುತಯಿರಲಿಲ್ಲ... ಹಿಂದಿದ್ದೋರು ಮುಂದಿರನ್ನಾಗಲೀ, ಮುಂದಿರು ಹಿಂದಿದ್ದೋರನ್ನಾಗಲೀ, ಎರಡಕ್ಕಿದೋರು ಬಲಕ್ಕಿದ್ದೋರನ್ನಾಗಲೀ, ಬಲಕ್ಕಿದ್ದೋರು ಯಡಕ್ಕಿದ್ದೋರ ನ್ನಾಗಲೀ ಗಮನಿಕೆ ಮಾಡುತ ಯಿರಲಿಲ್ಲ... ಅವರದ್ದೊಂದು ನಮೂನಿ ಮಟ್ಟಸ ಬದುಕಾಗಿತ್ತು..... {{gap}}ಅಂಥ ಬದುಕು ಹೆಪ್ಪುಗಟ್ಟಿ ಮಲೆತು ನಿಂತಿದ್ದ ಆ ಗ್ರಾಮವು ಪಟ್ಟಣದ ಪೋಷಾಕನ್ನು ಸದಾ ಧಾರಣ ಮಾಡಿರುತಲಿತ್ತು ಕುಂತಳ ಪ್ರಾಂತ ಯಂಬುವ ಮಜ್ಜಿಗೆ ಗುಡಾಣದೊಳಗೆ ಬೆಣ್ಣೆವುಂಡೆಯಂಗೆ ತೇಲಾಡುತ್ತಲಿದ್ದ ಆ ಪಟ್ಟಣದೊಳಗೆ ಆ ವಂದು ಚಣ ಯಾಪಾಟಿ ರುತುಮಾನ ಪರಪಾಟಾಯಿತೆಂದರೆ ಆ ದಿನ ವುದಿಸಿದ್ದೇ ವಯಶಾಖ ಜಾತಿಯ ಮದ್ಯಾಣದ ಸೂರನು ಯೇರುತ ಯೇರುತ ಪ್ರತಿಯೊಬ್ಬರ, ಪ್ರತಿಯೊಂದರ ನೆತ್ತಿ ಮ್ಯಾಲಕ ಬಂದಾತನು ಧಗಧಗನೆ ಸುಡುತಲಿದ್ದ. ತನ್ನ ಬಿಸಿಲ ತೋಳುಗಳಿಂದ ಹೊರಗೆ ಆಡುತಲಿದ್ದ ಮಕ್ಕಳು ಮರಿಗಳನು, ಮಂದಿಯ ಕತ್ತುಗಳನ್ನು ಹಿಡಿದು ಅವರವರ ಮನೆವಳಗಡೆ ತಳ್ಳಿ ಹಾ... ಹೂ ಯಂದು ವುಸುರು ಬಿಡುವಂತೆ ಮಾಡಿದ. ಗಳಗಳಿಗೊಮ್ಮೆ ನೀರು ಕುಡಿಯುವಂತೆ ಮಾಡಿದ. ಸೆಖೆ ತಾಳಲಾರದೆ ಮಂದಿ ತನ್ನನ್ನು ಬಯ್ಯುವಂತೆ ಮಾಡಿದ, ಬಿಸಿಲ ಕೋಲುಗಳಿಂದ ವಬ್ಬೊಬ್ಬರನ್ನು ಬಡಿದು ಹಿಂಸಿಸಿದ. ನೂರಾರು ಬಿಸಿಲುಗುದುರೆಗಳನ್ನು ಬೀದಿ ಬೀದಿ ತುಂಬೆಲ್ಲ, ಬಯಲು ಬಯಲು ತುಂಬೆಲ್ಲ ಅಂಡಲೆಯುವಂತೆ ಮಾಡಿದ. ಯಿಡೀ ಸಮಸ್ತ ಪಟ್ಟಣವನ್ನು ತನ್ನ ಅಗಾಧವಾದ ಮ್ರುಗಜಲದಿಂದ ತೊಯ್ದು ತಪಟ್ಟೆಯಾಗುವಂತೆ ಮಾಡಿದ. ಬಿಸಿಲೆಂಬುವ ಚಕ್ರಾಧಿಪತ್ಯ ಸ್ಥಾಪಿಸಿ ಬಿಸಿ ಯಂಬ ಅಧಿಕಾರವನ್ನು ತಾನು ಚಲಾಯಿಸುತ್ತಿರುವಾಗ್ಗೆ ಅಗಾಧವಾದ ಮವುನ ಬಿತ್ತಿ ಬೆಳೆಯುತ್ತಿರುವಾಗ್ಗೆ.. ಕೊರೆದ ಚಿತ್ರದಂತೆ ಪಟ್ಟಣ ಬಿಕೋ ಅನ್ನುತ್ತಿರುವಾಗ್ಗೆ.. ಥಳಗೇರಿಗಳಗೆಲ್ಲ, ಮಕುಟಪ್ರಾಯದಂತಿದ್ದ ಎಂದು ಥಳಗೇರಿಯ, ಕೆಮ್ಮಿದರೆ ವಂದು ಪುಟ್ಟಿ ಮಣ್ಣುವುದುರಿಸುತಲಿದ್ದ ವಂದು ಮನೆಯ ಅಂಗಳದಲ್ಲಿದ್ದ ಎಂದು ಕಟ್ಟೆಯ ಮ್ಯಾಲ ಬಲಗಾಲನ್ನು ನೆಲಕ್ಕಿಳಿಬಿಟ್ಟು ಯಡಗಾಲ ಪಾದವನ್ನು ತೊಡೆ ಸಂದಿಗಂಟಿಸಿಕೊಂಡು, ಮೊಣಕಾಲ ಚಿಪ್ಪಿನ ಮ್ಯಾಲ ಬಲಗಯ್ಯನ್ನು ವುಟ್ಟೋಕೆ ಚಾಚಿ, ಯಡಗಯ್ಯನ್ನು ತಲೆಗಾನಿಸಿಕೊಂಡು ಬೀದಿಯ ತುದಿಯಲ್ಲಿ ಮೂಡಿ ಮರೆಯಾಗುತಲಿದ್ದ ಬಿಸಿಲುಗುದುರೆಯತ್ತ ದ್ರುಸ್ಸಿ ಅಂಟಿಸಿ ವಡಲೊಳಗಿನ ನೀರು ಅಳ್ಳಾಡದಂಗೆ ಕೂಕಂಡಿದ್ದ...<noinclude><references/></noinclude> qapko5nmkkdw4hubjua2oq28qhzk7aj 317179 317045 2026-05-05T09:34:52Z Ashwini Rai K 8475 /* Validated */ 317179 proofread-page text/x-wiki <noinclude><pagequality level="4" user="Ashwini Rai K" /></noinclude>________________ {{Left|ಅರಮನೆ}}{{Right|೩}} ನೋಡುತಯಿರಲಿಲ್ಲ, ಕೆಳಗಿದ್ದೋರು ಮ್ಯಾಲಿದೋರನು ನೋಡುತಯಿರಲಿಲ್ಲ... ಹಿಂದಿದ್ದೋರು ಮುಂದಿರನ್ನಾಗಲೀ, ಮುಂದಿರು ಹಿಂದಿದ್ದೋರನ್ನಾಗಲೀ, ಎರಡಕ್ಕಿದೋರು ಬಲಕ್ಕಿದ್ದೋರನ್ನಾಗಲೀ, ಬಲಕ್ಕಿದ್ದೋರು ಯಡಕ್ಕಿದ್ದೋರ ನ್ನಾಗಲೀ ಗಮನಿಕೆ ಮಾಡುತ ಯಿರಲಿಲ್ಲ... ಅವರದ್ದೊಂದು ನಮೂನಿ ಮಟ್ಟಸ ಬದುಕಾಗಿತ್ತು..... {{gap}}ಅಂಥ ಬದುಕು ಹೆಪ್ಪುಗಟ್ಟಿ ಮಲೆತು ನಿಂತಿದ್ದ ಆ ಗ್ರಾಮವು ಪಟ್ಟಣದ ಪೋಷಾಕನ್ನು ಸದಾ ಧಾರಣ ಮಾಡಿರುತಲಿತ್ತು ಕುಂತಳ ಪ್ರಾಂತ ಯಂಬುವ ಮಜ್ಜಿಗೆ ಗುಡಾಣದೊಳಗೆ ಬೆಣ್ಣೆವುಂಡೆಯಂಗೆ ತೇಲಾಡುತ್ತಲಿದ್ದ ಆ ಪಟ್ಟಣದೊಳಗೆ ಆ ವಂದು ಚಣ ಯಾಪಾಟಿ ರುತುಮಾನ ಪರಪಾಟಾಯಿತೆಂದರೆ ಆ ದಿನ ವುದಿಸಿದ್ದೇ ವಯಶಾಖ ಜಾತಿಯ ಮದ್ಯಾಣದ ಸೂರನು ಯೇರುತ ಯೇರುತ ಪ್ರತಿಯೊಬ್ಬರ, ಪ್ರತಿಯೊಂದರ ನೆತ್ತಿ ಮ್ಯಾಲಕ ಬಂದಾತನು ಧಗಧಗನೆ ಸುಡುತಲಿದ್ದ. ತನ್ನ ಬಿಸಿಲ ತೋಳುಗಳಿಂದ ಹೊರಗೆ ಆಡುತಲಿದ್ದ ಮಕ್ಕಳು ಮರಿಗಳನು, ಮಂದಿಯ ಕತ್ತುಗಳನ್ನು ಹಿಡಿದು ಅವರವರ ಮನೆವಳಗಡೆ ತಳ್ಳಿ ಹಾ... ಹೂ ಯಂದು ವುಸುರು ಬಿಡುವಂತೆ ಮಾಡಿದ. ಗಳಗಳಿಗೊಮ್ಮೆ ನೀರು ಕುಡಿಯುವಂತೆ ಮಾಡಿದ. ಸೆಖೆ ತಾಳಲಾರದೆ ಮಂದಿ ತನ್ನನ್ನು ಬಯ್ಯುವಂತೆ ಮಾಡಿದ, ಬಿಸಿಲ ಕೋಲುಗಳಿಂದ ವಬ್ಬೊಬ್ಬರನ್ನು ಬಡಿದು ಹಿಂಸಿಸಿದ. ನೂರಾರು ಬಿಸಿಲುಗುದುರೆಗಳನ್ನು ಬೀದಿ ಬೀದಿ ತುಂಬೆಲ್ಲ, ಬಯಲು ಬಯಲು ತುಂಬೆಲ್ಲ ಅಂಡಲೆಯುವಂತೆ ಮಾಡಿದ. ಯಿಡೀ ಸಮಸ್ತ ಪಟ್ಟಣವನ್ನು ತನ್ನ ಅಗಾಧವಾದ ಮ್ರುಗಜಲದಿಂದ ತೊಯ್ದು ತಪಟ್ಟೆಯಾಗುವಂತೆ ಮಾಡಿದ. ಬಿಸಿಲೆಂಬುವ ಚಕ್ರಾಧಿಪತ್ಯ ಸ್ಥಾಪಿಸಿ ಬಿಸಿ ಯಂಬ ಅಧಿಕಾರವನ್ನು ತಾನು ಚಲಾಯಿಸುತ್ತಿರುವಾಗ್ಗೆ ಅಗಾಧವಾದ ಮವುನ ಬಿತ್ತಿ ಬೆಳೆಯುತ್ತಿರುವಾಗ್ಗೆ.. ಕೊರೆದ ಚಿತ್ರದಂತೆ ಪಟ್ಟಣ ಬಿಕೋ ಅನ್ನುತ್ತಿರುವಾಗ್ಗೆ.. ಥಳಗೇರಿಗಳಗೆಲ್ಲ, ಮಕುಟಪ್ರಾಯದಂತಿದ್ದ ಎಂದು ಥಳಗೇರಿಯ, ಕೆಮ್ಮಿದರೆ ವಂದು ಪುಟ್ಟಿ ಮಣ್ಣುವುದುರಿಸುತಲಿದ್ದ ವಂದು ಮನೆಯ ಅಂಗಳದಲ್ಲಿದ್ದ ಎಂದು ಕಟ್ಟೆಯ ಮ್ಯಾಲ ಬಲಗಾಲನ್ನು ನೆಲಕ್ಕಿಳಿಬಿಟ್ಟು ಯಡಗಾಲ ಪಾದವನ್ನು ತೊಡೆ ಸಂದಿಗಂಟಿಸಿಕೊಂಡು, ಮೊಣಕಾಲ ಚಿಪ್ಪಿನ ಮ್ಯಾಲ ಬಲಗಯ್ಯನ್ನು ವುಟ್ಟೋಕೆ ಚಾಚಿ, ಯಡಗಯ್ಯನ್ನು ತಲೆಗಾನಿಸಿಕೊಂಡು ಬೀದಿಯ ತುದಿಯಲ್ಲಿ ಮೂಡಿ ಮರೆಯಾಗುತಲಿದ್ದ ಬಿಸಿಲುಗುದುರೆಯತ್ತ ದ್ರುಸ್ಸಿ ಅಂಟಿಸಿ ವಡಲೊಳಗಿನ ನೀರು ಅಳ್ಳಾಡದಂಗೆ ಕೂಕಂಡಿದ್ದ...<noinclude><references/></noinclude> gqzm5ciq7dxlaiovhshvig7z4jrhnpz ಪುಟ:ಅರಮನೆ.pdf/೩೫ 104 77121 317046 169830 2026-05-04T16:30:25Z Shreelatha.Halemane 7642 /* Proofread */ 317046 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{Left|೪}}{{Right|ಅರಮನೆ}} {{gap}}ಗುಡಿ ಹಿಂದಲ ಮೂಳೆ ಮೋಬಯ್ಯ ಹಂಗೇ ವಂದು ಜೋಂಪು ನಿದ್ದೆ ಹೋದನು. ನಿದ್ದೆ ಹೋದೊಡನೆ ಕಂಡ ಕಣಸಲ್ಲಿ ಹೆಂಗೆಂಗೊ ಆಗತೊಡಗಿತು. ಮೂಡ ಬಾರದ ತರಾವರಿ ಚಿತ್ರಯಿಚಿತ್ರಗಳು ಮೂಡ ತೊಡಗಿರುವಂತೆ.. ಕಾಣಬಾರದ ತರಾವರಿ ಮಂದಿ ಕಾಣತೊಡಗಿರುವಂತೆ.. ಮನಯಂಬುವ ಯಿಸ್ತಾರವಾದ ಜಗುಲಿಯ ಮ್ಯಾಲ ಗುಂಪು ಗುಂಪಾಗಿ ಕೂತು ಅನುಭಾವದ ನೆಲೆಯಲ್ಲಿ ಮಾತನಾಡಲಾರಂಭಿಸಿರುವಂತೆ.. ತನ್ನ ದೇಹ ಯಂಭೋ ದೇಹವು ಗಿರಿಗುಡ್ಡ ಗವ್ವರಗಳಲ್ಲಿ ತಾನೇ ತಾನಾಗಿ ಸುಳಿದಾಡುತ್ತಿರುವಂತೆ.. ಹೆಜ್ಜೆಗೊಂದೊಂದರಂತೆ ಯದುರಾದ ಗಂಟೆ, ಜಾಗಟೆಗಳನ ಭಾರಿಸುತ್ತಿರುವಂತ.. ಶಂಖ ಕಹಳೆ ಊದುತ್ತಿರುವಂತೆ.. ತಾನು ಬಿಡುತ್ತಿರುವ ವಂದೊಂದು ವುಸುರು ಬಿರುಗಾಳಿ ಸುಂಟರುಗಾಳಿಗಳಾಗಿ ಸಂಚರಿಸುತ್ತಿರುವಂತೆ.. ತಾನು ಯಿಡುತ್ತಿರುವ ವಂದೊಂದು ಹೆಜ್ಜೆಗೆ ಭೂಮಾಯಿ ಗಡಗಡ ನಡುಗುತ್ತಿರುವಂತ.. ಕಾಗೆ, ಗುಬ್ಬಿ ಹದ್ದು, ರಣಹದ್ದುಗಳಿವೇ ಮೊದಲಾದ ಪಕ್ಷಿಗಳು ಆಕಾಸದ ತುಂಬೆಲ್ಲ ಅಂಡಾವರನವಾಗಿರುವಂತೆ.. ಹುಲಿ, ಸಿಮ್ಮ ಕರಡಿ, ಕಿರುಬಗಳಿವೇ ಮೊದಲಾದ ಮುಗಗಳು ದಿಕ್ಕಾಪಾಲಾಗಿ ನೋಡುತ್ತಿರುವಂತ.. ತಾನು ತನ್ನ ಸರೀರದಿಂದ ಹೊರಬಿದ್ದು ಬಕ ಬೋರಲಾದಂತೆ. ದಿಗ್ಗನೆದ್ದು ತನ್ನ ಸರೀರದ ಲಗಾಮವನ್ನು ಹಿಡಿದೆಳೆಯುವ ಪ್ರಯತ್ನ ಮಾಡುತ್ತಿರುವಂತೆ ಭಾಸವಾಗತೊಡಗಿತು.... {{gap}}ಕೇಳಲು ನೋಡಿದ, ನೋಡಲು ನೋಡಿದ, ಮಾತಾಡಲು ನೋಡಿದ, ಆದರದು ತನ್ನ ಮಾತು ಕೇಳುತ್ತಿಲ್ಲಯಂದುಕೊಳ್ಳುತ್ತಾನೆ. ಕಣಸೊಳಗೆ ಯಿದ್ದ ಮೋಬಯ್ಯನು, ಅವನ ತೊದಲುವಿಕೆ, ಕನವರಿಕೆಗಳು ವಂದಾ... ಯರಡಾ ಸಿವನೇs.... {{gap}}ತನ್ನ ಕಣ್ಣುಗಳು ತನ್ನ ಸ್ವಾಧೀನದಲ್ಲಿಲ್ಲವಲ್ಲಾಯ್.. ತನ್ನ ಕಿವಿಗಳು ತನ್ನ ಸ್ವಾಧೀನದಲ್ಲಿಲ್ಲ ವಲ್ಲಾ... ತನ್ನ ಬಾಯಿ ತನ್ನ ಸ್ವಾಧೀನದಲ್ಲಿಲ್ಲವಲ್ಲಾ... ತನ್ನ ಸರೀರ ಯಂಬುದು ತನ್ನ ಸ್ವಾಧೀನದಲ್ಲಿಲ್ಲವಲ್ಲಾಯ್.. ತಾನು ಯೇಸು ದಿನಮಾನದಿಂದ ಬದುಕುತ್ತಿದ್ದ ಬದುಕು ಗುರುತು ಸಿಗದಂಗಾಗಯ್ತಲ್ಲಾಂಯ್.. ಯಾದೋ ವಂದು ಅದ್ರುಸ್ಸ ಸಗುತಿ ತನ್ನನ್ನು ತನ್ನ ಸರೀರದಿಂದ ಹೊರದೊಬ್ಬಿದಂಗಾಗಯ್ತಲ್ಲಾಯ್... {{gap}}ಯಿದೆಂಥಾ ಕಣಸಿದ್ದೀತಪ್ಪಾ ಸಿವನೇs.... {{gap}}ತಾನು ತನ್ನ ಸರೀರವನ್ನು ಕಣ ಸೊಳಗಾದರೂ ನೋಡಿಕೊಳ್ಳುವಂಗಾಯಿತಲ್ಲಾ. ಆ ಸರೀರವು ತನ್ನದೆಂದು ನಂಬುವುದೋ,<noinclude><references/></noinclude> b5lv2kxuuyssrjzw339drcaih2y7ph8 317180 317046 2026-05-05T09:37:43Z Ashwini Rai K 8475 /* Validated */ 317180 proofread-page text/x-wiki <noinclude><pagequality level="4" user="Ashwini Rai K" /></noinclude>________________ {{rh|left=೪|center=|right=ಅರಮನೆ}} {{gap}}ಗುಡಿ ಹಿಂದಲ ಮೂಳೆ ಮೋಬಯ್ಯ ಹಂಗೇ ವಂದು ಜೋಂಪು ನಿದ್ದೆ ಹೋದನು. ನಿದ್ದೆ ಹೋದೊಡನೆ ಕಂಡ ಕಣಸಲ್ಲಿ ಹೆಂಗೆಂಗೊ ಆಗತೊಡಗಿತು. ಮೂಡ ಬಾರದ ತರಾವರಿ ಚಿತ್ರಯಿಚಿತ್ರಗಳು ಮೂಡ ತೊಡಗಿರುವಂತೆ.. ಕಾಣಬಾರದ ತರಾವರಿ ಮಂದಿ ಕಾಣತೊಡಗಿರುವಂತೆ.. ಮನಯಂಬುವ ಯಿಸ್ತಾರವಾದ ಜಗುಲಿಯ ಮ್ಯಾಲ ಗುಂಪು ಗುಂಪಾಗಿ ಕೂತು ಅನುಭಾವದ ನೆಲೆಯಲ್ಲಿ ಮಾತನಾಡಲಾರಂಭಿಸಿರುವಂತೆ.. ತನ್ನ ದೇಹ ಯಂಭೋ ದೇಹವು ಗಿರಿಗುಡ್ಡ ಗವ್ವರಗಳಲ್ಲಿ ತಾನೇ ತಾನಾಗಿ ಸುಳಿದಾಡುತ್ತಿರುವಂತೆ.. ಹೆಜ್ಜೆಗೊಂದೊಂದರಂತೆ ಯದುರಾದ ಗಂಟೆ, ಜಾಗಟೆಗಳನ ಭಾರಿಸುತ್ತಿರುವಂತ.. ಶಂಖ ಕಹಳೆ ಊದುತ್ತಿರುವಂತೆ.. ತಾನು ಬಿಡುತ್ತಿರುವ ವಂದೊಂದು ವುಸುರು ಬಿರುಗಾಳಿ ಸುಂಟರುಗಾಳಿಗಳಾಗಿ ಸಂಚರಿಸುತ್ತಿರುವಂತೆ.. ತಾನು ಯಿಡುತ್ತಿರುವ ವಂದೊಂದು ಹೆಜ್ಜೆಗೆ ಭೂಮಾಯಿ ಗಡಗಡ ನಡುಗುತ್ತಿರುವಂತ.. ಕಾಗೆ, ಗುಬ್ಬಿ ಹದ್ದು, ರಣಹದ್ದುಗಳಿವೇ ಮೊದಲಾದ ಪಕ್ಷಿಗಳು ಆಕಾಸದ ತುಂಬೆಲ್ಲ ಅಂಡಾವರನವಾಗಿರುವಂತೆ.. ಹುಲಿ, ಸಿಮ್ಮ ಕರಡಿ, ಕಿರುಬಗಳಿವೇ ಮೊದಲಾದ ಮುಗಗಳು ದಿಕ್ಕಾಪಾಲಾಗಿ ನೋಡುತ್ತಿರುವಂತ.. ತಾನು ತನ್ನ ಸರೀರದಿಂದ ಹೊರಬಿದ್ದು ಬಕ ಬೋರಲಾದಂತೆ. ದಿಗ್ಗನೆದ್ದು ತನ್ನ ಸರೀರದ ಲಗಾಮವನ್ನು ಹಿಡಿದೆಳೆಯುವ ಪ್ರಯತ್ನ ಮಾಡುತ್ತಿರುವಂತೆ ಭಾಸವಾಗತೊಡಗಿತು.... {{gap}}ಕೇಳಲು ನೋಡಿದ, ನೋಡಲು ನೋಡಿದ, ಮಾತಾಡಲು ನೋಡಿದ, ಆದರದು ತನ್ನ ಮಾತು ಕೇಳುತ್ತಿಲ್ಲಯಂದುಕೊಳ್ಳುತ್ತಾನೆ. ಕಣಸೊಳಗೆ ಯಿದ್ದ ಮೋಬಯ್ಯನು, ಅವನ ತೊದಲುವಿಕೆ, ಕನವರಿಕೆಗಳು ವಂದಾ... ಯರಡಾ ಸಿವನೇs.... {{gap}}ತನ್ನ ಕಣ್ಣುಗಳು ತನ್ನ ಸ್ವಾಧೀನದಲ್ಲಿಲ್ಲವಲ್ಲಾಯ್.. ತನ್ನ ಕಿವಿಗಳು ತನ್ನ ಸ್ವಾಧೀನದಲ್ಲಿಲ್ಲ ವಲ್ಲಾ... ತನ್ನ ಬಾಯಿ ತನ್ನ ಸ್ವಾಧೀನದಲ್ಲಿಲ್ಲವಲ್ಲಾ... ತನ್ನ ಸರೀರ ಯಂಬುದು ತನ್ನ ಸ್ವಾಧೀನದಲ್ಲಿಲ್ಲವಲ್ಲಾಯ್.. ತಾನು ಯೇಸು ದಿನಮಾನದಿಂದ ಬದುಕುತ್ತಿದ್ದ ಬದುಕು ಗುರುತು ಸಿಗದಂಗಾಗಯ್ತಲ್ಲಾಂಯ್.. ಯಾದೋ ವಂದು ಅದ್ರುಸ್ಸ ಸಗುತಿ ತನ್ನನ್ನು ತನ್ನ ಸರೀರದಿಂದ ಹೊರದೊಬ್ಬಿದಂಗಾಗಯ್ತಲ್ಲಾಯ್... {{gap}}ಯಿದೆಂಥಾ ಕಣಸಿದ್ದೀತಪ್ಪಾ ಸಿವನೇs.... {{gap}}ತಾನು ತನ್ನ ಸರೀರವನ್ನು ಕಣ ಸೊಳಗಾದರೂ ನೋಡಿಕೊಳ್ಳುವಂಗಾಯಿತಲ್ಲಾ. ಆ ಸರೀರವು ತನ್ನದೆಂದು ನಂಬುವುದೋ,<noinclude><references/></noinclude> oj04d2oi2rfsbniywvzoegmuk73rd97 ಪುಟ:ಅರಮನೆ.pdf/೩೬ 104 77122 317047 169831 2026-05-04T16:31:28Z Shreelatha.Halemane 7642 /* Proofread */ 317047 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{Left|ಅರಮನೆ}}{{Right|೫}} ಬಿಡುವುದೋ, ಅದರೊಳಗ ತಾನಿದ್ದುದಾss ತನ್ನೊಳಗ... ಅದು ಯಿತ್ತೋ, ತಾನು ನೋಡು ನೋಡುವಷ್ಟರೊಳಗss .... {{gap}}ಕಮ್ಮಿ ಕಾಲುಗಳು ತಾವೇ ತಾವಾಗಿ ಬೆಳೆಯಲಾರಂಭಿಸಿದಂತೆ.. ಕಿವಿಗಳು ಮಾರು ಮಾರಗಲ ವಾಗುತ್ತಿರುವಂತೆ ವಂದೊಂದು ಕಲ್ಲೊಳಗ ಸಾವುರ ಸಾವುರ ದೀವಟಿಗೆಗಳ ದಿಬ್ಬಣ ಹೊಂಟಿರುವಂತೆ.. ಬಾಯೆಂಬುದು ಬ್ರುಹತ್ ಕೂಪವಾಗುತ್ತಿರುವಂತೆ.. ಯೋಜನದುದ್ದಗೊಂಡ ಹಣೆ ನಡುವೆ ಯೇಳು ಮಾರಗಲದ ಕುಂಕುಮ ಬೊಟ್ಟೋಂದು ರಾರಾಜಿಸುತ್ತಿರುವಂತೆ.. ತನ್ನ ಕೊರಳೊಳಗಂತೂ ತರಾವರಿss.. {{gap}}ಯಿದೆಂಥಾ ಕಣಸಿದ್ದೀತಪ್ಪಾ ಸಿವನೇ........... {{gap}}ಆ ಯಿರಾಟ್ ರೂಪೀ ತನ್ನ ಸರೀರದೊಳಗೆ ತಾನು ತೂರಿಕೊಳ್ಳುವ ಪ್ರಯತ್ನಗಳನ್ನು ವಂದರ ಮ್ಯಾಲೊಂದರಂತೆ ಕುಂತ ಕುಂತಲ್ಲೆ ಮಾಡಿದನು. ಅದರ ಮ್ಯಾಲಿನ ತನ್ನ ಪರಂಪರಾಗತ ಹಕ್ಕನ್ನು ಬಿಟ್ಟುಕೊಡಬಾರದೆಂಬ ವಂದೇ ಕಾರಣಕ್ಕಾಗಿ.. ಬರಬ್ಯಾಡಪ್ಪಾ ಬರಬ್ಯಾಡ.. ನೀನಲ್ಲೇ ಯಿರು.. ನಾನಿಲ್ಲೇ ಯಿರುತೀನಿ ಯಂದು ಸರೀರ ಅಂಬುವುದೆಂದರೇನು? ಯಿದೇನು ಹೇಳುವ ಮಾತಲ್ಲ ಸಿವನೇ, ಕೇಳುವ ಮಾತಲ್ಲ ಸಿವನೇ.. ಅದರ ಮಾಲಿದ್ದ ಬೆಮರ ಕುಣಿಗಳಿಂದ ಅಗೋಚರ ಹಸ್ತಗಳು ವಡಮೂಡಿ ತನ್ನನ್ನು ಕತ್ತು ಹಿಡಿದು ತಳ್ಳಿದಂಗಾಯ್ತಂತೆ.. ಬಲು ಬ್ಯಾಸರ ಬಂದೀವಯ್ಯ “ಯಾಕೆ ಸರೀರವೇ.. ನನ ಮಾಲ ನೀನು ಮುನುಸಿಕೊಂಡೀ ಯಾಕೆ? ನಾನು ನಿನ್ನೊಳಗ ಯಿರೋದು ನಿಂಗೆ ಬ್ಯಾಡಾಗಂಯೇನು?” ಎಂದು ಕೇಳಿದನಂತೆ.. ಅದಕಿದ್ದು ಅರಮನೆಯೋಪಾದಿಯಲ್ಲಿ ಬೆಳೆಯುತಲಿದ್ದ, ನಿಗಿ ನಿಗಿ ಹೊಳೆಯುತಲಿದ್ದ ಆ ಸರೀರವು ಪಕಪಕ ನಗಾಡಿದಂಗಾಯ್ತಂತೆ.. ನಗಾಡುತ್ತಲೇ “ಯಲಾಮ್ ನರಮಾನ್ನವನೇ ಯೇ ಕ್ಷಣದಿಂದ ಯೀ ಸರೀರವು ಅಂದರೆ ನಾನು ನಿನ್ನದಲ್ಲ... ನಾನು ಸಗುತಿ ಸಾಂಬವಿಯ ವಾಸಕ್ಕೆ ಅಣಿಗೊಂಡಿರುವೆ ಕಣಪ್ಪಾ.. ಆಕೆಯು ತನ್ನ ಸೋದರಿಯರಾದ ಸುಂಕಲೀ, ಚವುಡೀ, ವುಡುಸಲೀ, ಮಾರೀ, ಮಸಣಿಯರೇ ಮೊದಲಾದವರೊಂದಿಗೆ ದಯಮಾಡಿಸ್ಯಾಳ.. ವಬ್ಬೊಬ್ಬರು ವಂದೊಂದು ಮುಗವನ್ನು ವಾಹನ ಮಾಡಿಕೊಂಡು ದಯಮಾಡಿಸವರೆ.. ತಮ ವಂದೊಂದು ಕಯ್ಲಿ ವಂದೊಂದು ಆಯುಧವನ್ನು ಹಿಡಿದುಕೊಂಡವರೆ.. ನಾನಾ ನಮೂನಿ ಪಕ್ಷಿಗಳನ್ನು ತಮ್ಮ ತಮ್ಮ ತುರುಬುಗಳಿಗೆ ಹುದ್ವಿನೋಪಾದಿಯಲ್ಲಿ ಮುಡುದವರೆ.. ಬೀರೇಳು ಲೋಕಗಳಿಗೆ ಕೇಳಿಸುವಂತೆ ನಗಾಡುತವರೆ, ಅಗೋ<noinclude><references/></noinclude> kpv57jrvn64771uiqesh1d190pcv1mp 317181 317047 2026-05-05T09:38:04Z Ashwini Rai K 8475 /* Validated */ 317181 proofread-page text/x-wiki <noinclude><pagequality level="4" user="Ashwini Rai K" /></noinclude>________________ {{Left|ಅರಮನೆ}}{{Right|೫}} ಬಿಡುವುದೋ, ಅದರೊಳಗ ತಾನಿದ್ದುದಾss ತನ್ನೊಳಗ... ಅದು ಯಿತ್ತೋ, ತಾನು ನೋಡು ನೋಡುವಷ್ಟರೊಳಗss .... {{gap}}ಕಮ್ಮಿ ಕಾಲುಗಳು ತಾವೇ ತಾವಾಗಿ ಬೆಳೆಯಲಾರಂಭಿಸಿದಂತೆ.. ಕಿವಿಗಳು ಮಾರು ಮಾರಗಲ ವಾಗುತ್ತಿರುವಂತೆ ವಂದೊಂದು ಕಲ್ಲೊಳಗ ಸಾವುರ ಸಾವುರ ದೀವಟಿಗೆಗಳ ದಿಬ್ಬಣ ಹೊಂಟಿರುವಂತೆ.. ಬಾಯೆಂಬುದು ಬ್ರುಹತ್ ಕೂಪವಾಗುತ್ತಿರುವಂತೆ.. ಯೋಜನದುದ್ದಗೊಂಡ ಹಣೆ ನಡುವೆ ಯೇಳು ಮಾರಗಲದ ಕುಂಕುಮ ಬೊಟ್ಟೋಂದು ರಾರಾಜಿಸುತ್ತಿರುವಂತೆ.. ತನ್ನ ಕೊರಳೊಳಗಂತೂ ತರಾವರಿss.. {{gap}}ಯಿದೆಂಥಾ ಕಣಸಿದ್ದೀತಪ್ಪಾ ಸಿವನೇ........... {{gap}}ಆ ಯಿರಾಟ್ ರೂಪೀ ತನ್ನ ಸರೀರದೊಳಗೆ ತಾನು ತೂರಿಕೊಳ್ಳುವ ಪ್ರಯತ್ನಗಳನ್ನು ವಂದರ ಮ್ಯಾಲೊಂದರಂತೆ ಕುಂತ ಕುಂತಲ್ಲೆ ಮಾಡಿದನು. ಅದರ ಮ್ಯಾಲಿನ ತನ್ನ ಪರಂಪರಾಗತ ಹಕ್ಕನ್ನು ಬಿಟ್ಟುಕೊಡಬಾರದೆಂಬ ವಂದೇ ಕಾರಣಕ್ಕಾಗಿ.. ಬರಬ್ಯಾಡಪ್ಪಾ ಬರಬ್ಯಾಡ.. ನೀನಲ್ಲೇ ಯಿರು.. ನಾನಿಲ್ಲೇ ಯಿರುತೀನಿ ಯಂದು ಸರೀರ ಅಂಬುವುದೆಂದರೇನು? ಯಿದೇನು ಹೇಳುವ ಮಾತಲ್ಲ ಸಿವನೇ, ಕೇಳುವ ಮಾತಲ್ಲ ಸಿವನೇ.. ಅದರ ಮಾಲಿದ್ದ ಬೆಮರ ಕುಣಿಗಳಿಂದ ಅಗೋಚರ ಹಸ್ತಗಳು ವಡಮೂಡಿ ತನ್ನನ್ನು ಕತ್ತು ಹಿಡಿದು ತಳ್ಳಿದಂಗಾಯ್ತಂತೆ.. ಬಲು ಬ್ಯಾಸರ ಬಂದೀವಯ್ಯ “ಯಾಕೆ ಸರೀರವೇ.. ನನ ಮಾಲ ನೀನು ಮುನುಸಿಕೊಂಡೀ ಯಾಕೆ? ನಾನು ನಿನ್ನೊಳಗ ಯಿರೋದು ನಿಂಗೆ ಬ್ಯಾಡಾಗಂಯೇನು?” ಎಂದು ಕೇಳಿದನಂತೆ.. ಅದಕಿದ್ದು ಅರಮನೆಯೋಪಾದಿಯಲ್ಲಿ ಬೆಳೆಯುತಲಿದ್ದ, ನಿಗಿ ನಿಗಿ ಹೊಳೆಯುತಲಿದ್ದ ಆ ಸರೀರವು ಪಕಪಕ ನಗಾಡಿದಂಗಾಯ್ತಂತೆ.. ನಗಾಡುತ್ತಲೇ “ಯಲಾಮ್ ನರಮಾನ್ನವನೇ ಯೇ ಕ್ಷಣದಿಂದ ಯೀ ಸರೀರವು ಅಂದರೆ ನಾನು ನಿನ್ನದಲ್ಲ... ನಾನು ಸಗುತಿ ಸಾಂಬವಿಯ ವಾಸಕ್ಕೆ ಅಣಿಗೊಂಡಿರುವೆ ಕಣಪ್ಪಾ.. ಆಕೆಯು ತನ್ನ ಸೋದರಿಯರಾದ ಸುಂಕಲೀ, ಚವುಡೀ, ವುಡುಸಲೀ, ಮಾರೀ, ಮಸಣಿಯರೇ ಮೊದಲಾದವರೊಂದಿಗೆ ದಯಮಾಡಿಸ್ಯಾಳ.. ವಬ್ಬೊಬ್ಬರು ವಂದೊಂದು ಮುಗವನ್ನು ವಾಹನ ಮಾಡಿಕೊಂಡು ದಯಮಾಡಿಸವರೆ.. ತಮ ವಂದೊಂದು ಕಯ್ಲಿ ವಂದೊಂದು ಆಯುಧವನ್ನು ಹಿಡಿದುಕೊಂಡವರೆ.. ನಾನಾ ನಮೂನಿ ಪಕ್ಷಿಗಳನ್ನು ತಮ್ಮ ತಮ್ಮ ತುರುಬುಗಳಿಗೆ ಹುದ್ವಿನೋಪಾದಿಯಲ್ಲಿ ಮುಡುದವರೆ.. ಬೀರೇಳು ಲೋಕಗಳಿಗೆ ಕೇಳಿಸುವಂತೆ ನಗಾಡುತವರೆ, ಅಗೋ<noinclude><references/></noinclude> jpby4kc1g4sy8lfsym2u7ih8bxbdvrj ಪುಟ:ಅರಮನೆ.pdf/೩೭ 104 77123 317048 169832 2026-05-04T16:33:19Z Shreelatha.Halemane 7642 /* Proofread */ 317048 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{Left|೬}}{{Right|ಅರಮನೆ}} ನೋಡಲ್ಲಿ” ಯಂದು ಬೊಟ್ಟು ಮಾಡಿ ತೋರಿಸಿತೆಂದರೆ ನಂಬುವುದಾ? ನಂಬದಂಗ ಯಿರುವುದಾ? {{gap}}ಯಿದೆಂಥಾ ಕಣಸಿದ್ದೀತಪ್ಪಾ ಸಿವನೇ..... {{gap}}ಯಿವಯ್ಯ ನೋಡಲಾಗಿ ಆ ತಾಯಿಯು {{gap}}ನೆಲಮುಗುಲಿಗೇಕಾಗಿ, ಭೂಮಿಗಾತುರದವಳಾಗಿ, ಗೋಚರ ಮಾಡಿದಳಂತೆ.. ವಂದೊಂದು ಹೆಜ್ಜೆಗೆ ವಂದೊಂದು ಲೋಕವನ್ನಳೆದಳಂತೆ.. ಗುಡುಗು ಸಿಡಿಲುಗಳನ್ನು ತನ್ನ ನಾಲಗೆ ಮ್ಯಾಲ ವಟ್ಟಿ ಕೊಂಡಿದ್ದಳಂತೆ. ಮಿಂಚು ಕೋಲ್ಮೀಂಚುಗಳನ್ನು ತನ್ನ ಕಣ್ಣೆಳಗೆ ಮಡುಗಿದ್ದಳಂತೆ. ಅಷ್ಟ ದಿಗ್ಗಜಗಳ ರಸಾಸ್ವಾದನೆಯನ್ನು ತಾನು ಮಾಡುತ್ತಿದ್ದಳಂತೆ.. ಸಿವನೇ..... {{gap}}ಅಂಥಾ ತಾಯಿಯನ್ನು ತನ್ನ ಕಣಸೊಳಗ ಅದೇ ಮೊದಲ ಸಲ ನೋಡಿದ ವನಾದ ಯವನು ಬೆಕ್ಕಸ ಬೆರಗಾದ ನ೦ತ, ಮೂಕಯಿಸುಮಿತನಾದನಂತೆ.. ಯದೆ ಝಲ್ಲಂದಂಗಾತಂತೆ.. ಕಣ್ಣು ಕುಕ್ಕಿ ದಂಗಾತಂತೆ. ವುಗುಳು ಗಂಟಲ ಹೊಸ್ತಿಲ ಬಳಿ ಮಡುಗಟ್ಟಿ ನಿಂತಂಗಾತಂತೆ.. ಚೂರುಪಾರು ಸಗುತಿಯನ್ನು ನಾಲಗೆಗೆ ತಂದುಕೊಂಡು {{gap}}“ಹಾಂ.. ಹಾಂ... ತಾಯಿ. ತಾಯಿ ಅಂದರ ನೀನೆ ಕಣವ್ಯಾ. ನಿನ್ನ ದರುಸನದಿಂದ ಜಲುಮ ಸಾರಕ ಆಯಿತವ್ವಾ.. ಹೊಕ್ಕೊಳಿಕ್ಕೆ ನಿಂಗೆ ನನ ಸರೀರವೇ ಬೇಕಾಗಿತ್ತೇನವ್ವಾ. ನನ್ನ ಸರೀರದೊಳಗ ಯೇನಂಥ ಸಿರಿ ಸಂಪತ್ತಯ್ತಂತ ಬಂದೀಯವ್ವಾ.. ಯಿದು ಮೊಧೇ ವಂದೊಂದು ಹೆಜ್ಜೆಗೆ ವಂದೊಂದು ಸಬುಧ ಮಾಡುತಯ್ಕೆ.. ಕುಂತರೆ ಯದ್ದೇಳಕಾಗೊಲ್ಲ.. ಯದ್ದರೆ ಕುಂಡಲಕಾಗುತ್ತಿಲ್ಲ. ಜೀವಾತುಮ ಯಂಬುದು ಯಿಲ ಮಿಲನೆ ವದ್ದಾಡುತಯ್ಕೆ. ಯಿದರೊಳಗ ಮಾವುಸಗಿದ್ದ ಮಣ, ರಗುತ ಪಾದೂವರೆ ಯಿದ್ದರ ಮಸ್ತಾದೀತು, ಯಿಂದ್ರಿಯಗಳು ಸವುಕೊಂಡು ಹೋಗ್ಯಾವ, ಯಂಥ ಸರೀರದೊಳಗ ಯೇನು ಅಯಿಭೋಗ ಅಯಿತಂತ ಬಂದೀಯವ್ವಾ. ಹೆಂಗ ವಸ್ತಿ ಯಿರುತೀಯವ್ವಾ.. ಯೇ ನನ್ನ ಮಟ ಮಟ ಮಝಗಿ ಸರೀರದೊಳಗ ಯಾವ ಸುಖನ ಪಡುತೀಯವ್ವಾ..” ಯಂದು ಮುಂತಾಗಿ ಯೇವಯ್ಯ ಮನಾರ ಕೇಳಿಕೊಂಡಿದ್ದಕ್ಕೆ ಸರೀರವು ಪಕಪಕ ನಗಾಡುತ ಹುಚ್ಚಪ್ಪಾ.. ನಾಡ ಹುಚ್ಚಪ್ಪಾ ಅಂದಂಗಾತಂತ, ಮತ್ತ ಯೀತನು.... {{gap}}ನೀ ಹೋಗುತೀನಂದರ ನೀನಿದ್ದಲ್ಲಿಗೆ ಬಂದು ಮಂಡೆ ಕೊಡುತೀನಪ್ಪಾ ಅಂದನಂತೆ.. ಕಂನ್ನು ಮುಗಿತೀನಂದನಂತೆ.. ಕಾಲಿಗೆ ಕಡಕೊಂಡು<noinclude><references/></noinclude> 1ekrb9fz3s2hjoq7d7p9mqrtgwx0b50 317182 317048 2026-05-05T09:38:43Z Ashwini Rai K 8475 /* Validated */ 317182 proofread-page text/x-wiki <noinclude><pagequality level="4" user="Ashwini Rai K" /></noinclude>________________ {{rh|left=೬|center=|right=ಅರಮನೆ}} ನೋಡಲ್ಲಿ” ಯಂದು ಬೊಟ್ಟು ಮಾಡಿ ತೋರಿಸಿತೆಂದರೆ ನಂಬುವುದಾ? ನಂಬದಂಗ ಯಿರುವುದಾ? {{gap}}ಯಿದೆಂಥಾ ಕಣಸಿದ್ದೀತಪ್ಪಾ ಸಿವನೇ..... {{gap}}ಯಿವಯ್ಯ ನೋಡಲಾಗಿ ಆ ತಾಯಿಯು {{gap}}ನೆಲಮುಗುಲಿಗೇಕಾಗಿ, ಭೂಮಿಗಾತುರದವಳಾಗಿ, ಗೋಚರ ಮಾಡಿದಳಂತೆ.. ವಂದೊಂದು ಹೆಜ್ಜೆಗೆ ವಂದೊಂದು ಲೋಕವನ್ನಳೆದಳಂತೆ.. ಗುಡುಗು ಸಿಡಿಲುಗಳನ್ನು ತನ್ನ ನಾಲಗೆ ಮ್ಯಾಲ ವಟ್ಟಿ ಕೊಂಡಿದ್ದಳಂತೆ. ಮಿಂಚು ಕೋಲ್ಮೀಂಚುಗಳನ್ನು ತನ್ನ ಕಣ್ಣೆಳಗೆ ಮಡುಗಿದ್ದಳಂತೆ. ಅಷ್ಟ ದಿಗ್ಗಜಗಳ ರಸಾಸ್ವಾದನೆಯನ್ನು ತಾನು ಮಾಡುತ್ತಿದ್ದಳಂತೆ.. ಸಿವನೇ..... {{gap}}ಅಂಥಾ ತಾಯಿಯನ್ನು ತನ್ನ ಕಣಸೊಳಗ ಅದೇ ಮೊದಲ ಸಲ ನೋಡಿದ ವನಾದ ಯವನು ಬೆಕ್ಕಸ ಬೆರಗಾದ ನ೦ತ, ಮೂಕಯಿಸುಮಿತನಾದನಂತೆ.. ಯದೆ ಝಲ್ಲಂದಂಗಾತಂತೆ.. ಕಣ್ಣು ಕುಕ್ಕಿ ದಂಗಾತಂತೆ. ವುಗುಳು ಗಂಟಲ ಹೊಸ್ತಿಲ ಬಳಿ ಮಡುಗಟ್ಟಿ ನಿಂತಂಗಾತಂತೆ.. ಚೂರುಪಾರು ಸಗುತಿಯನ್ನು ನಾಲಗೆಗೆ ತಂದುಕೊಂಡು {{gap}}“ಹಾಂ.. ಹಾಂ... ತಾಯಿ. ತಾಯಿ ಅಂದರ ನೀನೆ ಕಣವ್ಯಾ. ನಿನ್ನ ದರುಸನದಿಂದ ಜಲುಮ ಸಾರಕ ಆಯಿತವ್ವಾ.. ಹೊಕ್ಕೊಳಿಕ್ಕೆ ನಿಂಗೆ ನನ ಸರೀರವೇ ಬೇಕಾಗಿತ್ತೇನವ್ವಾ. ನನ್ನ ಸರೀರದೊಳಗ ಯೇನಂಥ ಸಿರಿ ಸಂಪತ್ತಯ್ತಂತ ಬಂದೀಯವ್ವಾ.. ಯಿದು ಮೊಧೇ ವಂದೊಂದು ಹೆಜ್ಜೆಗೆ ವಂದೊಂದು ಸಬುಧ ಮಾಡುತಯ್ಕೆ.. ಕುಂತರೆ ಯದ್ದೇಳಕಾಗೊಲ್ಲ.. ಯದ್ದರೆ ಕುಂಡಲಕಾಗುತ್ತಿಲ್ಲ. ಜೀವಾತುಮ ಯಂಬುದು ಯಿಲ ಮಿಲನೆ ವದ್ದಾಡುತಯ್ಕೆ. ಯಿದರೊಳಗ ಮಾವುಸಗಿದ್ದ ಮಣ, ರಗುತ ಪಾದೂವರೆ ಯಿದ್ದರ ಮಸ್ತಾದೀತು, ಯಿಂದ್ರಿಯಗಳು ಸವುಕೊಂಡು ಹೋಗ್ಯಾವ, ಯಂಥ ಸರೀರದೊಳಗ ಯೇನು ಅಯಿಭೋಗ ಅಯಿತಂತ ಬಂದೀಯವ್ವಾ. ಹೆಂಗ ವಸ್ತಿ ಯಿರುತೀಯವ್ವಾ.. ಯೇ ನನ್ನ ಮಟ ಮಟ ಮಝಗಿ ಸರೀರದೊಳಗ ಯಾವ ಸುಖನ ಪಡುತೀಯವ್ವಾ..” ಯಂದು ಮುಂತಾಗಿ ಯೇವಯ್ಯ ಮನಾರ ಕೇಳಿಕೊಂಡಿದ್ದಕ್ಕೆ ಸರೀರವು ಪಕಪಕ ನಗಾಡುತ ಹುಚ್ಚಪ್ಪಾ.. ನಾಡ ಹುಚ್ಚಪ್ಪಾ ಅಂದಂಗಾತಂತ, ಮತ್ತ ಯೀತನು.... {{gap}}ನೀ ಹೋಗುತೀನಂದರ ನೀನಿದ್ದಲ್ಲಿಗೆ ಬಂದು ಮಂಡೆ ಕೊಡುತೀನಪ್ಪಾ ಅಂದನಂತೆ.. ಕಂನ್ನು ಮುಗಿತೀನಂದನಂತೆ.. ಕಾಲಿಗೆ ಕಡಕೊಂಡು<noinclude><references/></noinclude> ddra4bk944qzdtow5kx4bzhuzth5wa5 ಪುಟ:ಅರಮನೆ.pdf/೩೮ 104 77124 317050 169833 2026-05-04T16:34:43Z Shreelatha.Halemane 7642 /* Proofread */ 317050 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{Left|ಅರಮನೆ}}{{Right|೭}} ಬೀಳುತೀನಂದನಂತೆ.. ಅದಲ್ಲದೆ ಮಯ್ಯ ಅಡ್ಡಡ್ಡ ಕುಯ್ದು ಸರಗ ಚೆಲ್ಲುತೀನಪ್ಪಾ ಅಂದನಂತೆ.. ಆಕೆ ನಗು ನಗುತ ತನ್ನ ಸರೀರವ ಪ್ರವೇಸ ಮಾಡಿದೊಡನೆ ತರಗೆಲೆ ಹಂಗ ಹೊಯ್ದಾಡಿ ಬಿಟ್ಟನಂತೆ. ಆ ಅಂಥ ಸರೀರದೊಳಗ ದ್ಯಾವಾನು ದ್ಯಾವತೆಗಳು ಪುಷ್ಪರುಷ್ಟಿ ಕರೆದರಂದರ ಹೆಂಗ ನಂಬಿಕೆ ಬಂದೀತು? {{gap}}ಮೋಬಯ್ಯ... ನಿಂದೇನು ಸರೀರವಾ.. ಪರಂಪೂಕು ಜಮೀನಾ ಅಂತ ಆ ಕಾಲದೊಳಗ ಯಾರಾದರೂ ಕೇಳಿರಲಿಲ್ಲವಾ ಯಂಬ ಅನುಮಾನ ಯೀ ಕಾಲದ ಮಂದಿಗೆ ಬರದಾಂಗ ಯಿರುವುದಾ..? ತನ್ನ ಸರೀರದ ಬಗ್ಗೆ ತಾನೇ ಕಥೆ ಕಟ್ಟಿ ಹೇಳಿರಬೌದಾಯಂಬ ಗುಮಾನಿ ನಡುವೆಯೂ ಮುಂದೇನಾತಂತ ಕೇಳಿಕೋತ ಹೋದರ.... {{gap}}ಆ ವಂದು ಚಣ ಅವಯ್ಯ ತರಗೆಲೆಯಂಥಾಗಿ ತೇಲಾಡಿದನಂತೆ ಸಿವನೇ.. ಹಿಂದಕು ಮುಂದಕು ವಾಲಾಡಿದನಂತೆ.. ಮತ್ತೆ ನಿಸೂರಾಗಿ ಬಾಯಿನ ಮ್ಯಾಲ ಬೊಟ್ಟಿಟ್ಟುಕೊಂಡನಂತೆ.. ತನ್ನಂಥ ದುಡಿದುಂಬುವವರ ಸರೀರದೊಳಗ ವಸ್ತಿ ಮಾಡುವ ಹಕ್ಕನ್ನು ಸಾಂಬವಿಗೆ ಕೊಟ್ಟವರಾರು ಅಂಥ ತನಗ ತಾನ ಸಮುಸಯ ತಾಳಿಕೊಂಡನಂತೆ.. ವಂಚೂರಾರ ವುಪಕಾರ ಸ್ಮರಣೆಯಿಲ್ಲ ನಿನಗೆ ಅಂತ ತನ್ನ ಸರೀರವನ್ನ ತಾನ ತರಾಟೆ ತಗೊಂಡನಂತೆ.. ಹೆಂಡತಿ ಜಗಲೂರಿ ಬಂದು ಯಲ್ಲಯ್ಕೆ ನಿನ್ನ ಸರೀರ ಯಂದು ಕೇಳಿದರ ಯೇನಂತ ಜವಾಬು ಕೊಡುವುದು ಯಂದು ಯಸನವನ್ನೂ ಮಾಡಿದನಂತೆ.... {{gap}}ಅವಯ್ಯನು ಹಗಲು ಗನಸು ಕಾಂಬುತ್ತಿದ್ದ ಹೊತ್ತಿನಲ್ಲಿ.... {{gap}}ಗುಡಿ ಹಿಂದಲ ಮನೆಯಂಗಳದಲ್ಲಿ ನೆಲಮುಗಿಲಿಗೇಕಾಗಿ ಭೂಮಿ ತಾಯಿಗೆ ಛತ್ರಿ ಹಿಡಿದಂತೆ ಬೆಳೆದು ನಿಂತಿದ್ದ ಬೇಯಿನ ಮರವು ಯಂಟೂ ದಿಕ್ಕಿಗೂ ಹೊಯ್ದಾಡಿದಂತೆ.. ವುಫ್ ವುಫ್ ಅಂತಂತೆ ಸಿವನೇ.... {{gap}}ಅತ್ತ ಅರಮನೆಯೊಳಗ ಹಿಡಿಯೋರಿಲ್ಲದ ಅನಾಥವಾಗಿದ್ದ ಬಿದ್ದಿದ್ದ ಪಿಕದಾನಿಯು ನರಳಾಡಿತಂತೆ.. ರಾಜಮಾತೆ ಭಮ್ರಮಾಂಬೆಯ ಬಲಗಣ್ಣು ಹಾರಲಾರಂಭಿಸಿತಂತೆ. ರಾಜಕುಮಾರ ಕಾಟನಾಯಕನ ಯಡದೊಡೆ ಯಡಭುಜ ಹಾರತೊಡಗಿದವಂತ.. ಸೂರಾಮ ವಂಛಣ ಮಂಕಾದನಂತೆ. ಸುತ್ತಮುತ್ತಲಿದ್ದ ನಾಕೂ ಗುಡ್ಡಗಳ ಕಲ್ಲು ಗುಂಡುಗಳು ಜಲಜಲ ಬೆವೆತು ನೀರೊಡೆದವಂತೆ.. ಹಕ್ಕಿ ಪಕ್ಷಿಗಳು ತಮ್ಮ ತಮ್ಮ ಗಂಟಲೊಳಗಿನ ತಂಬೂರಿಗಳನು ಸ್ತುತಿ ಸರಿಪಡಿಸಿ ಕೊಂಡವಂತೆ, ಪಟ್ಟಣದ ಮಂದಿಯ ಮಮ್ಮಿ ಜುಮ್ಮೆಂದಂಗಾಯಿತಂತೆ.. ಹೊರಗೋಡೋಡಿ ಬಂದು ಮುಖಯ ಆಕಾಸ ಮಾರಗದಲ್ಲಿ ಮೂಡಿದ್ದ<noinclude><references/></noinclude> iyzkdcnasu0bq1amizaklc8bb7x4dhi 317183 317050 2026-05-05T09:39:23Z Ashwini Rai K 8475 /* Validated */ 317183 proofread-page text/x-wiki <noinclude><pagequality level="4" user="Ashwini Rai K" /></noinclude>________________ {{rh|left=೭|center=|right=ಅರಮನೆ}} ಬೀಳುತೀನಂದನಂತೆ.. ಅದಲ್ಲದೆ ಮಯ್ಯ ಅಡ್ಡಡ್ಡ ಕುಯ್ದು ಸರಗ ಚೆಲ್ಲುತೀನಪ್ಪಾ ಅಂದನಂತೆ.. ಆಕೆ ನಗು ನಗುತ ತನ್ನ ಸರೀರವ ಪ್ರವೇಸ ಮಾಡಿದೊಡನೆ ತರಗೆಲೆ ಹಂಗ ಹೊಯ್ದಾಡಿ ಬಿಟ್ಟನಂತೆ. ಆ ಅಂಥ ಸರೀರದೊಳಗ ದ್ಯಾವಾನು ದ್ಯಾವತೆಗಳು ಪುಷ್ಪರುಷ್ಟಿ ಕರೆದರಂದರ ಹೆಂಗ ನಂಬಿಕೆ ಬಂದೀತು? {{gap}}ಮೋಬಯ್ಯ... ನಿಂದೇನು ಸರೀರವಾ.. ಪರಂಪೂಕು ಜಮೀನಾ ಅಂತ ಆ ಕಾಲದೊಳಗ ಯಾರಾದರೂ ಕೇಳಿರಲಿಲ್ಲವಾ ಯಂಬ ಅನುಮಾನ ಯೀ ಕಾಲದ ಮಂದಿಗೆ ಬರದಾಂಗ ಯಿರುವುದಾ..? ತನ್ನ ಸರೀರದ ಬಗ್ಗೆ ತಾನೇ ಕಥೆ ಕಟ್ಟಿ ಹೇಳಿರಬೌದಾಯಂಬ ಗುಮಾನಿ ನಡುವೆಯೂ ಮುಂದೇನಾತಂತ ಕೇಳಿಕೋತ ಹೋದರ.... {{gap}}ಆ ವಂದು ಚಣ ಅವಯ್ಯ ತರಗೆಲೆಯಂಥಾಗಿ ತೇಲಾಡಿದನಂತೆ ಸಿವನೇ.. ಹಿಂದಕು ಮುಂದಕು ವಾಲಾಡಿದನಂತೆ.. ಮತ್ತೆ ನಿಸೂರಾಗಿ ಬಾಯಿನ ಮ್ಯಾಲ ಬೊಟ್ಟಿಟ್ಟುಕೊಂಡನಂತೆ.. ತನ್ನಂಥ ದುಡಿದುಂಬುವವರ ಸರೀರದೊಳಗ ವಸ್ತಿ ಮಾಡುವ ಹಕ್ಕನ್ನು ಸಾಂಬವಿಗೆ ಕೊಟ್ಟವರಾರು ಅಂಥ ತನಗ ತಾನ ಸಮುಸಯ ತಾಳಿಕೊಂಡನಂತೆ.. ವಂಚೂರಾರ ವುಪಕಾರ ಸ್ಮರಣೆಯಿಲ್ಲ ನಿನಗೆ ಅಂತ ತನ್ನ ಸರೀರವನ್ನ ತಾನ ತರಾಟೆ ತಗೊಂಡನಂತೆ.. ಹೆಂಡತಿ ಜಗಲೂರಿ ಬಂದು ಯಲ್ಲಯ್ಕೆ ನಿನ್ನ ಸರೀರ ಯಂದು ಕೇಳಿದರ ಯೇನಂತ ಜವಾಬು ಕೊಡುವುದು ಯಂದು ಯಸನವನ್ನೂ ಮಾಡಿದನಂತೆ.... {{gap}}ಅವಯ್ಯನು ಹಗಲು ಗನಸು ಕಾಂಬುತ್ತಿದ್ದ ಹೊತ್ತಿನಲ್ಲಿ.... {{gap}}ಗುಡಿ ಹಿಂದಲ ಮನೆಯಂಗಳದಲ್ಲಿ ನೆಲಮುಗಿಲಿಗೇಕಾಗಿ ಭೂಮಿ ತಾಯಿಗೆ ಛತ್ರಿ ಹಿಡಿದಂತೆ ಬೆಳೆದು ನಿಂತಿದ್ದ ಬೇಯಿನ ಮರವು ಯಂಟೂ ದಿಕ್ಕಿಗೂ ಹೊಯ್ದಾಡಿದಂತೆ.. ವುಫ್ ವುಫ್ ಅಂತಂತೆ ಸಿವನೇ.... {{gap}}ಅತ್ತ ಅರಮನೆಯೊಳಗ ಹಿಡಿಯೋರಿಲ್ಲದ ಅನಾಥವಾಗಿದ್ದ ಬಿದ್ದಿದ್ದ ಪಿಕದಾನಿಯು ನರಳಾಡಿತಂತೆ.. ರಾಜಮಾತೆ ಭಮ್ರಮಾಂಬೆಯ ಬಲಗಣ್ಣು ಹಾರಲಾರಂಭಿಸಿತಂತೆ. ರಾಜಕುಮಾರ ಕಾಟನಾಯಕನ ಯಡದೊಡೆ ಯಡಭುಜ ಹಾರತೊಡಗಿದವಂತ.. ಸೂರಾಮ ವಂಛಣ ಮಂಕಾದನಂತೆ. ಸುತ್ತಮುತ್ತಲಿದ್ದ ನಾಕೂ ಗುಡ್ಡಗಳ ಕಲ್ಲು ಗುಂಡುಗಳು ಜಲಜಲ ಬೆವೆತು ನೀರೊಡೆದವಂತೆ.. ಹಕ್ಕಿ ಪಕ್ಷಿಗಳು ತಮ್ಮ ತಮ್ಮ ಗಂಟಲೊಳಗಿನ ತಂಬೂರಿಗಳನು ಸ್ತುತಿ ಸರಿಪಡಿಸಿ ಕೊಂಡವಂತೆ, ಪಟ್ಟಣದ ಮಂದಿಯ ಮಮ್ಮಿ ಜುಮ್ಮೆಂದಂಗಾಯಿತಂತೆ.. ಹೊರಗೋಡೋಡಿ ಬಂದು ಮುಖಯ ಆಕಾಸ ಮಾರಗದಲ್ಲಿ ಮೂಡಿದ್ದ<noinclude><references/></noinclude> 9ldvtmsas7bvlouqdkoscsyloavg85x ಪುಟ:ಅರಮನೆ.pdf/೩೯ 104 77125 317052 169834 2026-05-04T16:35:32Z Shreelatha.Halemane 7642 /* Proofread */ 317052 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{Left|೮}}{{Right|ಅರಮನೆ}} ಹತ್ತಾರು ಕಾಮನ ಬಿಲ್ಲುಗಳನ್ನು ನೋಡಿ ಮೂಕಯಿಸುಮಿತರಾದರಂತೆ.. ಮಾರಮ್ಮನ ಗುಡಿಯಲಿದ್ದ ನಾಲಗೆಗಳಿಲ್ಲದ ಗಂಟೆಗಳು ಬಡಿದಾಡಿ ನಾದ ಮಾಡಿದವಂತೆ.. ಸಿವನೇ.... {{gap}}ಯಂಥಪ್ಪ ಅಂತೆ ಕಂತೆಗಳನ ನಂಬಲಕಾದೀತಾ.. ನಂಬದೆ ಯಿರಲಕಾದೀತಾ.. ತೊಟ್ಟಿಲೊಳಗ ಕೂಸು ಕಂದಮ್ಮಗಳನ್ನಿಟ್ಟು ಜೋಗುಳ ಪಾಡುವಂಥಾ ಸಾಂಬವಿಯು, ಲಕ್ಷೇಪಲಕ್ಷ ಪಕ್ಷಿಗಳ ಕಣ್ಣುಗಳ ಮೂಲಕ ಬೀರೇಳು ಲೋಕಗಳನ್ನು ಪರಿಪಾಲಿಸುವಂಥಾ ಸಾಂಬವಿಯು ಸದರಿ ಪಟ್ಟಣಕ್ಕೆ ಗುಳೇ ಬರುವುದೆಂದರೇನು? ವಬ್ಬ ಯಕಚಿತ್ ಗುಡಿ ಒಂದಲ ಮೂಳೆ ಮೋಬಯ್ಯನ ಕಣಸೊಳಗೆ ಕಾಣಿಸಿಕೊಳ್ಳುವುದೆಂದರೇನು? ಅವನ ಮುರುಕು ತಡಿಕೆಯಂಥ ಸರೀರದೊಳಗ ವಾಸ ಮಾಡಲಾರಂಭಿಸಿದ ಳೆಂದರೇನು? ಸಿವ.. ಸಿವಾ... ಈ ಸಂಗತಿಯು.... {{gap}}... ನಿಂತವರ ಅಂಗಾಲ ಮೂಲಕ.. ಮಲಿಕ್ಕಂಡಿದ್ದವರ ಬೆನ್ನ ಹುರಿ ಮೂಲಕ. ಕೂಕಂಡಿದ್ದವರ ಅಂಡು ಮೂಲಕ. ಬಕಬಾರಲು ಬಿದ್ದುಕೊಂಡಿದ್ದವರ ಗದ್ದ ಬಾಯಿ ಮೂಲಕ. ಕಯ್ಕ ಮೂರುಕೊಂಡಿದ್ದವರ ಅಂಗಯ್ಯ ಮೂಲಕ ಅವುದೋ ಅಲ್ಲವೋ ಯಂಬಂತೆ.. ಸಬುದವಾಸನೆ ರೂಪಗಂಧಯಿಲ್ಲದೆ ಬಿತ್ತರ ಹರಕೋತ ಹೋತು.. ಯಲ್ಲಾರೊಳಗೂ ಯಂಥದೋ ವಂದು ಅಗೋಚರ ಆನಂದವು, ಅನಿರಚನೀಯ ಭಾವನೆಯು.. ಯಾಕೊ ಮುಲ್ಕಿ ಜುಮ್ಮೆಂದಂಗಾತಂತ ವಬ್ಬರು... ಸಂದು ಸಂದೀಲಿ ಯಂಥದೋ ಹರುದಾಡುತ ಕಚಗುಳಿಯಿಟ್ಟಂಗಾತಂತ ಯಿನ್ನೊಬ್ಬರು.. ಬಟಾ ಬಯಲೊಳಗೆ ಮಂಗಳ ವಾದ್ಯಗಳ ಮೊಳಗು ಕೇಳದಂಗಾತಂತ ಮತ್ತೊಬ್ಬರು.. ಸಿರಿಗಂಧ, ಹೊನ್ನಿ ಜುಮ್ಮಿಯೇ ಮೊದಲಾದ ಕಾಷ್ಟಗಳು ದಹಿಸುತ್ತಿರುವಂಥ ಸುವಾಸನೆಯು ತಮ್ಮ ಮೂಗಿಗೆ ಬಡಿಯಿತಂತ ಮಗುದೊಬ್ಬರು.. ಮೂಗರಿಗೆ ಮಾತಾಡತೀವೆಂಬ ಭಾವನೆ ಬಂತು. ಕಿವುಡ ಕೆಪ್ಪರ ಕಿವಿಗಳನು ಸಬುಧಗಳು ತುಂಬಿದವು. ಹೋಗಲೋ ಆಗಲೋ ಅಂತಿದ ಮುದೇರು ಗಪಂತ ಯದ್ದು ಕೂತರು ಹರೇದ ಹುಡುಗರಂಗೆ.. ಕಜ್ಜಿಪುಳ್ಳಿ ಕಂದಮ್ಮಗಳಂತೂ ಮುಗುಲಿಗೆ ಮುಖ ಮಾಡಿ ಕೇಕೆ ಹಾಕಿದವು.. ಕಾಗೆ ಕೋಗಿಲೆಗಳ, ಕೆಂಭೂತ ನವಿಲುಗಳ, ಯಿರುವೆ ಗೊದ್ದಿಗಗಳ ನಡುವಿನ ತಾರತಮ್ಯ ಅಳಿಯಿತು.. ಅಂಗುಲಂಗುಲ ಅಂಬೆಗಾಲಿಟ್ಟು ದೂರವಳೆಯೋ ಕಂಬಳಿ ಹುಳುಗಳು ಬಣ ಬಣ್ಣದ ಚಿಟ್ಟೆಗಳಾಗಿ ಹಾರಿ ಬಯಲಿಗೆ ಕಸೂತಿ ಹಾಕಿದವಂತೆ....<noinclude><references/></noinclude> g94rvb6363t56wco7zehb0lq46bsam8 317184 317052 2026-05-05T09:40:04Z Ashwini Rai K 8475 /* Validated */ 317184 proofread-page text/x-wiki <noinclude><pagequality level="4" user="Ashwini Rai K" /></noinclude>________________ {{rh|left=೮|center=|right=ಅರಮನೆ}} ಹತ್ತಾರು ಕಾಮನ ಬಿಲ್ಲುಗಳನ್ನು ನೋಡಿ ಮೂಕಯಿಸುಮಿತರಾದರಂತೆ.. ಮಾರಮ್ಮನ ಗುಡಿಯಲಿದ್ದ ನಾಲಗೆಗಳಿಲ್ಲದ ಗಂಟೆಗಳು ಬಡಿದಾಡಿ ನಾದ ಮಾಡಿದವಂತೆ.. ಸಿವನೇ.... {{gap}}ಯಂಥಪ್ಪ ಅಂತೆ ಕಂತೆಗಳನ ನಂಬಲಕಾದೀತಾ.. ನಂಬದೆ ಯಿರಲಕಾದೀತಾ.. ತೊಟ್ಟಿಲೊಳಗ ಕೂಸು ಕಂದಮ್ಮಗಳನ್ನಿಟ್ಟು ಜೋಗುಳ ಪಾಡುವಂಥಾ ಸಾಂಬವಿಯು, ಲಕ್ಷೇಪಲಕ್ಷ ಪಕ್ಷಿಗಳ ಕಣ್ಣುಗಳ ಮೂಲಕ ಬೀರೇಳು ಲೋಕಗಳನ್ನು ಪರಿಪಾಲಿಸುವಂಥಾ ಸಾಂಬವಿಯು ಸದರಿ ಪಟ್ಟಣಕ್ಕೆ ಗುಳೇ ಬರುವುದೆಂದರೇನು? ವಬ್ಬ ಯಕಚಿತ್ ಗುಡಿ ಒಂದಲ ಮೂಳೆ ಮೋಬಯ್ಯನ ಕಣಸೊಳಗೆ ಕಾಣಿಸಿಕೊಳ್ಳುವುದೆಂದರೇನು? ಅವನ ಮುರುಕು ತಡಿಕೆಯಂಥ ಸರೀರದೊಳಗ ವಾಸ ಮಾಡಲಾರಂಭಿಸಿದ ಳೆಂದರೇನು? ಸಿವ.. ಸಿವಾ... ಈ ಸಂಗತಿಯು.... {{gap}}... ನಿಂತವರ ಅಂಗಾಲ ಮೂಲಕ.. ಮಲಿಕ್ಕಂಡಿದ್ದವರ ಬೆನ್ನ ಹುರಿ ಮೂಲಕ. ಕೂಕಂಡಿದ್ದವರ ಅಂಡು ಮೂಲಕ. ಬಕಬಾರಲು ಬಿದ್ದುಕೊಂಡಿದ್ದವರ ಗದ್ದ ಬಾಯಿ ಮೂಲಕ. ಕಯ್ಕ ಮೂರುಕೊಂಡಿದ್ದವರ ಅಂಗಯ್ಯ ಮೂಲಕ ಅವುದೋ ಅಲ್ಲವೋ ಯಂಬಂತೆ.. ಸಬುದವಾಸನೆ ರೂಪಗಂಧಯಿಲ್ಲದೆ ಬಿತ್ತರ ಹರಕೋತ ಹೋತು.. ಯಲ್ಲಾರೊಳಗೂ ಯಂಥದೋ ವಂದು ಅಗೋಚರ ಆನಂದವು, ಅನಿರಚನೀಯ ಭಾವನೆಯು.. ಯಾಕೊ ಮುಲ್ಕಿ ಜುಮ್ಮೆಂದಂಗಾತಂತ ವಬ್ಬರು... ಸಂದು ಸಂದೀಲಿ ಯಂಥದೋ ಹರುದಾಡುತ ಕಚಗುಳಿಯಿಟ್ಟಂಗಾತಂತ ಯಿನ್ನೊಬ್ಬರು.. ಬಟಾ ಬಯಲೊಳಗೆ ಮಂಗಳ ವಾದ್ಯಗಳ ಮೊಳಗು ಕೇಳದಂಗಾತಂತ ಮತ್ತೊಬ್ಬರು.. ಸಿರಿಗಂಧ, ಹೊನ್ನಿ ಜುಮ್ಮಿಯೇ ಮೊದಲಾದ ಕಾಷ್ಟಗಳು ದಹಿಸುತ್ತಿರುವಂಥ ಸುವಾಸನೆಯು ತಮ್ಮ ಮೂಗಿಗೆ ಬಡಿಯಿತಂತ ಮಗುದೊಬ್ಬರು.. ಮೂಗರಿಗೆ ಮಾತಾಡತೀವೆಂಬ ಭಾವನೆ ಬಂತು. ಕಿವುಡ ಕೆಪ್ಪರ ಕಿವಿಗಳನು ಸಬುಧಗಳು ತುಂಬಿದವು. ಹೋಗಲೋ ಆಗಲೋ ಅಂತಿದ ಮುದೇರು ಗಪಂತ ಯದ್ದು ಕೂತರು ಹರೇದ ಹುಡುಗರಂಗೆ.. ಕಜ್ಜಿಪುಳ್ಳಿ ಕಂದಮ್ಮಗಳಂತೂ ಮುಗುಲಿಗೆ ಮುಖ ಮಾಡಿ ಕೇಕೆ ಹಾಕಿದವು.. ಕಾಗೆ ಕೋಗಿಲೆಗಳ, ಕೆಂಭೂತ ನವಿಲುಗಳ, ಯಿರುವೆ ಗೊದ್ದಿಗಗಳ ನಡುವಿನ ತಾರತಮ್ಯ ಅಳಿಯಿತು.. ಅಂಗುಲಂಗುಲ ಅಂಬೆಗಾಲಿಟ್ಟು ದೂರವಳೆಯೋ ಕಂಬಳಿ ಹುಳುಗಳು ಬಣ ಬಣ್ಣದ ಚಿಟ್ಟೆಗಳಾಗಿ ಹಾರಿ ಬಯಲಿಗೆ ಕಸೂತಿ ಹಾಕಿದವಂತೆ....<noinclude><references/></noinclude> 2qcq1qhm1gsr3bpfta5mke9rt79klym ಪುಟ:ಅರಮನೆ.pdf/೪೦ 104 77126 317053 169835 2026-05-04T16:36:25Z Shreelatha.Halemane 7642 /* Proofread */ 317053 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{Left|ಅರಮನೆ}}{{Right|೯}} {{gap}}ಪಟ್ಟಣದ ಹೊರ ವಳಗ ಮಿಷೆಲ್ಲ ಸಂಭವಿಸಲಕ ತೊಂಬಲ ನಮಲಿದಷ್ಟು. ಚಿಲುಮೆಯಿಂದ ವಂದು ಧಮ್ಮು ಯಳೆಯುವಷ್ಟು. ಕಣ್ಣಿಂದೊಂದು ಹನಿ ವುದುರುವಷ್ಟು ವ್ಯಾಳೆ ಹಿಡಿಯಿತಂತೆ.... {{gap}}ಮೋಬಯ್ಯ ದಿಗ್ಗನೆಚ್ಚರಗೊಂಡು ಬೆವರಿನಿಂದ ತೊಯ್ದು ತಪ್ಪಟೆಯಾಗಿದ್ದ ಕಟ್ಟೆ ಮ್ಯಾಲ ಕಣ್ಣುಬಿಟ್ಟು ಪಿಳಿ ಪಿಳಿ ನೋಡಲು ತನ್ನೆದುರಿಗೆ ಅಂಬ್ರಾವತಿ ಪಟ್ಟಣದ ವಂದು ಕೇರಿಯು ಮಯ್ಯ ಚೆಲ್ಲಿಕೊಂಡು ಮಲಗಿರುವಂತೆ ಭಾಸವಾಯಿತು. ತನ್ನೊಂದಿಗೆ ತನ್ನ ಸರೀರವು ಮಾತಾಡಿದಂಗಾತಲ್ಲ.. ತನ್ನ ಸರೀರದೊಳಗೆ ಸಾಂಬವಿಯು ನೆಲೆಸಿದಂತಾತಲ್ಲ.. ಯಂದನಕಂತ ತನ್ನ ಸರೀರದ ಅಂಗಾಂಗಗಳನ್ನು ಮುಟ್ಟು ಮುಟ್ಟಿ ನೋಡಿಕೊಂಡನು. ಮೊದಲೇ ಚಟವುಳ್ಳ ಮನುಷ್ಯನಾದ ತಾನು ಚಿಲುಮೆಯಿಂದ ವಂದೆರಡು ದಮ್ಮು ಮ್ಯಾಲಿಂದ ಮ್ಯಾಲೆ ಯೆಳೆದನು. ಆತನ ಕಣ್ಣಿಂದ ಪುಳಕ್ಕಂತ ವುದುರಿದ ವಂದು ಬಿಂದುವು ನೆಲಕ್ಕೆ ಬಿದ್ದೊಡನೆ ಪಳಪಳ ಹೊಳೆಯುವ ಮುತ್ತಾಗಿ ಮಾರುಪಟ್ಟು ವುರುಳಿಕೋತ ವುರುಳಿಕೋತ ಆಟುದೂರ ಹೋಗಿ ಮುಗಿಲತ್ತ ಜಿಗಿದು ಸೂರನ ಬೆಳಕೊಳಗೆ ಲೀನವಾಯಿತಂತೆ.. ಅದೇ ಗಳಿಗೆ ವಳಗೆ ಆತನ ಸರೀರದಿಂದ ಹಳತಾದ ಭಾವನೆಗಳು ವುತಾರಗೊಂಡವಂತೆ, ಹೊಸತಾದ ಭಾವನೆಗಳು ಸೇರುಪಡೆ ಗೊಂಡವಂತೆ.. ಸಾಂಬವಿ ನೆಲೆಗೊಂಡಿರುವಂಥಾ ತನ್ನ ಸರೀರವು ಹೆಂಗಯೆ? ಯಿದರ ದರುಸನವನ್ನು ತಾನು ಪಡಕೊಳೋದಾದರು ಹೆಂಗೆ? ವಂದಾರ ಕನ್ನೂಡಿಹಳು ತನ್ನ ಆಜೂಬಾಜೂಕಿಲ್ಲವಲ್ಲಾ... ಯಂದು ಹಪಹಪಿಸಿದನಂತೆ.. ಖರೆ ಹೇಳಬೇಕೆಂದರ ಯದುವರೆಗೆ ತನ್ನನ್ನು ತಾನು ಮುಂದೂ ನೋಡಿಕೊಂಡಾತನಲ್ಲ ಮೋಬಯ್ಯ. ಅಂಥ ಹರಕತ್ತು ಯಂದೂ ಯದುರಾಗಿರಲಿಲ್ಲ... ತನ್ನ ಕಸುಬಿಗೆ ಆಶ್ರಯ ನೀಡಿರುವ ಪಿಕದಾನಿಯ ವುಬ್ಬು ತಗ್ಗಿನೊಳಗೆ ಆತ ತನ್ನನ್ನು ತಾನು ನೋಡಿಕೊಂಡಿರೋದುಂಟು. ಆದರೂ ಅದರ ಮಯ್ಯೋಳಗೆ ವಂದು ಕಂಡಿದ್ದರೆ ಯಿನ್ನೊಂದು ಕಂಡಿರಲಿಲ್ಲ. ಹಂಗ ನೋಡಿದರ ಕನ್ನೂಡಿ ಹಳ್ಳುಗಳಿರೋದು ಥಳಗೇರಿಯ ಯಲ್ಲಾರ ಕಣ್ಣುಗಳಲ್ಲಿ ಮಾತ್ರ ಗಂಡನ ಕಣ್ಣುಗಳಲ್ಲಿ ಹೆಂಡತಿಯು, ಹೆಂಡತಿಯ ಕಣ್ಣುಗಳಲ್ಲಿ ಗಂಡನು, ಗಂಡ ಹೆಂಡಿರ ಕಣ್ಣುಗಳಲ್ಲಿ ಮಕ್ಕಳು ಮರಿಗಳು, ಮಕ್ಕಳು ಮರಿಗಳ ಕಣ್ಣುಗಳಲ್ಲಿ ಥಳಗೇರಿಯು, ಥಳಗೇರಿಯ ವಬ್ಬರಾದರೂ ಯಂದೂ ತಮ್ಮ ತಮ್ಮ ನೆಳ್ಳುಗಳಿಗಾಗಿ ಆಸಪಟ್ಟವರಲ್ಲ.. ತಮಗೆ ತಾವು ಯಂದೂ ಮರುಳಾದವರೂ<noinclude><references/></noinclude> o7t5vd8579s6umfoc9pbttkemfdxfhv 317185 317053 2026-05-05T09:40:59Z Ashwini Rai K 8475 /* Validated */ 317185 proofread-page text/x-wiki <noinclude><pagequality level="4" user="Ashwini Rai K" /></noinclude>________________ {{rh|left=ಅರಮನೆ|center=|right=೯}} {{gap}}ಪಟ್ಟಣದ ಹೊರ ವಳಗ ಮಿಷೆಲ್ಲ ಸಂಭವಿಸಲಕ ತೊಂಬಲ ನಮಲಿದಷ್ಟು. ಚಿಲುಮೆಯಿಂದ ವಂದು ಧಮ್ಮು ಯಳೆಯುವಷ್ಟು. ಕಣ್ಣಿಂದೊಂದು ಹನಿ ವುದುರುವಷ್ಟು ವ್ಯಾಳೆ ಹಿಡಿಯಿತಂತೆ.... {{gap}}ಮೋಬಯ್ಯ ದಿಗ್ಗನೆಚ್ಚರಗೊಂಡು ಬೆವರಿನಿಂದ ತೊಯ್ದು ತಪ್ಪಟೆಯಾಗಿದ್ದ ಕಟ್ಟೆ ಮ್ಯಾಲ ಕಣ್ಣುಬಿಟ್ಟು ಪಿಳಿ ಪಿಳಿ ನೋಡಲು ತನ್ನೆದುರಿಗೆ ಅಂಬ್ರಾವತಿ ಪಟ್ಟಣದ ವಂದು ಕೇರಿಯು ಮಯ್ಯ ಚೆಲ್ಲಿಕೊಂಡು ಮಲಗಿರುವಂತೆ ಭಾಸವಾಯಿತು. ತನ್ನೊಂದಿಗೆ ತನ್ನ ಸರೀರವು ಮಾತಾಡಿದಂಗಾತಲ್ಲ.. ತನ್ನ ಸರೀರದೊಳಗೆ ಸಾಂಬವಿಯು ನೆಲೆಸಿದಂತಾತಲ್ಲ.. ಯಂದನಕಂತ ತನ್ನ ಸರೀರದ ಅಂಗಾಂಗಗಳನ್ನು ಮುಟ್ಟು ಮುಟ್ಟಿ ನೋಡಿಕೊಂಡನು. ಮೊದಲೇ ಚಟವುಳ್ಳ ಮನುಷ್ಯನಾದ ತಾನು ಚಿಲುಮೆಯಿಂದ ವಂದೆರಡು ದಮ್ಮು ಮ್ಯಾಲಿಂದ ಮ್ಯಾಲೆ ಯೆಳೆದನು. ಆತನ ಕಣ್ಣಿಂದ ಪುಳಕ್ಕಂತ ವುದುರಿದ ವಂದು ಬಿಂದುವು ನೆಲಕ್ಕೆ ಬಿದ್ದೊಡನೆ ಪಳಪಳ ಹೊಳೆಯುವ ಮುತ್ತಾಗಿ ಮಾರುಪಟ್ಟು ವುರುಳಿಕೋತ ವುರುಳಿಕೋತ ಆಟುದೂರ ಹೋಗಿ ಮುಗಿಲತ್ತ ಜಿಗಿದು ಸೂರನ ಬೆಳಕೊಳಗೆ ಲೀನವಾಯಿತಂತೆ.. ಅದೇ ಗಳಿಗೆ ವಳಗೆ ಆತನ ಸರೀರದಿಂದ ಹಳತಾದ ಭಾವನೆಗಳು ವುತಾರಗೊಂಡವಂತೆ, ಹೊಸತಾದ ಭಾವನೆಗಳು ಸೇರುಪಡೆ ಗೊಂಡವಂತೆ.. ಸಾಂಬವಿ ನೆಲೆಗೊಂಡಿರುವಂಥಾ ತನ್ನ ಸರೀರವು ಹೆಂಗಯೆ? ಯಿದರ ದರುಸನವನ್ನು ತಾನು ಪಡಕೊಳೋದಾದರು ಹೆಂಗೆ? ವಂದಾರ ಕನ್ನೂಡಿಹಳು ತನ್ನ ಆಜೂಬಾಜೂಕಿಲ್ಲವಲ್ಲಾ... ಯಂದು ಹಪಹಪಿಸಿದನಂತೆ.. ಖರೆ ಹೇಳಬೇಕೆಂದರ ಯದುವರೆಗೆ ತನ್ನನ್ನು ತಾನು ಮುಂದೂ ನೋಡಿಕೊಂಡಾತನಲ್ಲ ಮೋಬಯ್ಯ. ಅಂಥ ಹರಕತ್ತು ಯಂದೂ ಯದುರಾಗಿರಲಿಲ್ಲ... ತನ್ನ ಕಸುಬಿಗೆ ಆಶ್ರಯ ನೀಡಿರುವ ಪಿಕದಾನಿಯ ವುಬ್ಬು ತಗ್ಗಿನೊಳಗೆ ಆತ ತನ್ನನ್ನು ತಾನು ನೋಡಿಕೊಂಡಿರೋದುಂಟು. ಆದರೂ ಅದರ ಮಯ್ಯೋಳಗೆ ವಂದು ಕಂಡಿದ್ದರೆ ಯಿನ್ನೊಂದು ಕಂಡಿರಲಿಲ್ಲ. ಹಂಗ ನೋಡಿದರ ಕನ್ನೂಡಿ ಹಳ್ಳುಗಳಿರೋದು ಥಳಗೇರಿಯ ಯಲ್ಲಾರ ಕಣ್ಣುಗಳಲ್ಲಿ ಮಾತ್ರ ಗಂಡನ ಕಣ್ಣುಗಳಲ್ಲಿ ಹೆಂಡತಿಯು, ಹೆಂಡತಿಯ ಕಣ್ಣುಗಳಲ್ಲಿ ಗಂಡನು, ಗಂಡ ಹೆಂಡಿರ ಕಣ್ಣುಗಳಲ್ಲಿ ಮಕ್ಕಳು ಮರಿಗಳು, ಮಕ್ಕಳು ಮರಿಗಳ ಕಣ್ಣುಗಳಲ್ಲಿ ಥಳಗೇರಿಯು, ಥಳಗೇರಿಯ ವಬ್ಬರಾದರೂ ಯಂದೂ ತಮ್ಮ ತಮ್ಮ ನೆಳ್ಳುಗಳಿಗಾಗಿ ಆಸಪಟ್ಟವರಲ್ಲ.. ತಮಗೆ ತಾವು ಯಂದೂ ಮರುಳಾದವರೂ<noinclude><references/></noinclude> blu4gdb2lzbdojgyqhrtmcq141lc4xo ಪುಟ:ಅರಮನೆ.pdf/೪೧ 104 77127 317054 169836 2026-05-04T16:37:21Z Shreelatha.Halemane 7642 /* Proofread */ 317054 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{Left|೧೦}}{{Right|ಅರಮನೆ}} {{gap}}ಹೆಂಗಪ್ಪಾ ತನ್ನ ಸರೀರವನ್ನು ತಾನು ನೋಡಿಕೊಳ್ಳುವುದು? ಅವರ ಕಣ್ಣಲ್ಲಿ ಮಿಣುಕಲೇನು? ಯಿವರ ಕಣ್ಣಲ್ಲಿ ಮಿಣುಕಲೇನು? ಮುಗ ಜಲದೊಳಗೆ ಯಿಣುಕಿ ತನ್ನ ಸರೀರದ ದರುಸನ ಪಡೆಯಲೇನು? ಬಿಸುಲುಗುದುರೆಯ ಪಾರದರುಸಕ ಮಯ್ಯೋಳಗ ಯಿಣುಕಿ ತನ್ನ ಸರೀರದ ದುಸನ ಪಡೆಯಲೇನು? ಕಲ್ಪನಾದ ಮಾಯಾವಿ ಕರಿಗಂಬಳಿ ಮಾಲ ಕುಂತು ಹಾರಾಡಿದನು, ತೂರಾಡಿದನು, ಯಿಲಯಿಲಾಂತ ವದ್ದಾಡಿದನು.. “ಯೇ ನನ್ನ ಕರುಮಂಟ ಸರೀರವನ್ನು ಅರಮನೆ, ಗುರುಮನೆ, ತವರು ಮನೆಯನ್ನಾಗಿ ಮಾಡಿಕೊಂಡು ವಸ್ತಿ ಮಾಡಿರುವಂಥಾ ತಾಯಿ ಸಾಂಬವಿಯೇ.. ನನ್ನ ಸರೀರವು ನಂಗೆ ಕಾಂಬುವಂತೆ ಮಾಡೆವ್ವಾ.. ನನ್ನ ನೆಳ್ಳು ನಂಗೆ ಕಾಂಬುವಂತೆ ಮಾಡವ್ವಾ” ಯಂದು ಮುಂತಾಗಿ ಹಲುಬ್ಯಾಡಿದನು. ತನ್ನ ಸರೀರವೇ ತನಗೆ ಮೋಸ ಮಾಡಿರಬೌದೇ? ತಾನು ಕಂಡುಂಡದ್ದು ದಿವಿನಾದ ಕಣಸಿದ್ದಿರಬೌದೇ? ತಾನು ಕಿವಿಯಾರ ಕೇಳಿಸಿಕೊಂಡಿರೋದು ಅಸರೀರ ವಾಣಿ ಆಡಿದ ಮಾತುಗಳಿದ್ದಿರಬೌದೇ? ಭ್ರಮಾಯಿದ್ದಿರಬೌದೇ? ಯಂದು ತನಗೆ ತಾನೇ ಅನುಮಾನ ತಾಳಿದನಂತೆ.... {{gap}}ಅವನು ಹಂಗ ಅಲ್ಲಿ ಯೋಚಿಸುತ್ತಿರುವಾಗ್ಗೆ.. ವದ್ದಾಡುತ್ತಿರುವಾಗ್ಗೆ. ಬಿಸಿಲು ಬೆಳದಿಂಗಳ ಲಂಗವನ್ನುಟ್ಟುಕೊಂಡಿತ್ತು. ಮಲ್ಲಿಗೆ ಹುಬ್ಬಿನಂಥ ರವುಕೇನ ತೊಟುಕೊಂಡಿತ್ತು.. ಬೆವರಿನ ವಾಣಿಯಾಗಿರುವ ಅವನ ಸರೀರವನ್ನು ತಣಿಸಲಿಕ್ಕೆಂದು, ಕಣ್ಣೀರಿನ ತತ್ರಾಣಿಯಾಗಿರುವ ಅವನ ಕಣ್ಣಿಗೆ ಮುದ ನೀಡಲಕೆಂದು ದೂರದಲ್ಲೆಲ್ಲೋ ಅವುಚಿಟ್ಟುಕೊಂಡಿದ್ದ ಬಿರುಗಾಳಿಯು ತನ್ನ ವುದುರದಿಂದ ವಂದು ಹಿಡಿ ತಂಗಾಳಿಯನ್ನು ಹೊರತೆಗೆದು ಅಗೋ ಅಲ್ಲಿ ಥಳಗೇರಿವಳಗ ಜಗದಂಬೆಯನ್ನು ತನ್ನ ದೇಹದೊಳಗಿಟ್ಟು ಪಾಲನೆ ಪೋಷಣೆ ಮಾಡುತ್ತಿರುವ ಮೋಬಯ್ಯನ ಮಯ್ದೆ ಚಾಮರದ ಸೇವೆ ಮಾಡಿ ಬಾ” ಯಂದು ಆಗ್ರಾಪಿಸಲು ಅದು ಹಂಗs ಮಾಡಿತಂತೆ.... {{gap}}ಆದರೆ ಅದನ್ನೆಲ್ಲ ಗಮನಿಕೆ ಮಾಡಲಕಾಗಲೀ, ಮುದಗೊಳ್ಳಲಕಾಗಲೀ ಅರುವಿಗೆ ನಿಲುಕದ ಅನುಭವದ ನಿಧಿಗೆ ವಡೆಯನಾಗಿದ್ದಂಥ ಮೋಬಯ್ಯಗೆ ಪುರುಸೊತ್ತಂಬುದು ಯಿರಲಿಲ್ಲ. ತನ್ನ ಸರೀರದೊಳಗಾಕೆಂದು ನೆಲೆಗೊಂಡಿರಲಕಬೇಕೆಂದು ಖಾತರಿ ತಾಳಿದನಂತೆ. ಅವನ ಕರುಣೆಯ ಕಡಲಿಗೆ, ತ್ರಿಕಾಲ ಸತ್ಕವುಗಳಿಗೆ ಮನುಕುಲದ ಬೇಕು ಬೇಡಗಳಿಗೆ ವಡೆಯನಾಗಿರುವ ತಾನು ತನ್ನ ಪಯಿತ್ರಸರೀರವನ್ನು ಸಬುಧವಾಸನೆ, ಮುಟ್ಟು ಮಯ್ಲಿಗೆಗಳಿಂದ<noinclude><references/></noinclude> 4bayyzgrod9s5jawoddruzuid8aydxc 317186 317054 2026-05-05T09:41:29Z Ashwini Rai K 8475 /* Validated */ 317186 proofread-page text/x-wiki <noinclude><pagequality level="4" user="Ashwini Rai K" /></noinclude>________________ {{rh|left=೧೦|center=|right=ಅರಮನೆ}} {{gap}}ಹೆಂಗಪ್ಪಾ ತನ್ನ ಸರೀರವನ್ನು ತಾನು ನೋಡಿಕೊಳ್ಳುವುದು? ಅವರ ಕಣ್ಣಲ್ಲಿ ಮಿಣುಕಲೇನು? ಯಿವರ ಕಣ್ಣಲ್ಲಿ ಮಿಣುಕಲೇನು? ಮುಗ ಜಲದೊಳಗೆ ಯಿಣುಕಿ ತನ್ನ ಸರೀರದ ದರುಸನ ಪಡೆಯಲೇನು? ಬಿಸುಲುಗುದುರೆಯ ಪಾರದರುಸಕ ಮಯ್ಯೋಳಗ ಯಿಣುಕಿ ತನ್ನ ಸರೀರದ ದುಸನ ಪಡೆಯಲೇನು? ಕಲ್ಪನಾದ ಮಾಯಾವಿ ಕರಿಗಂಬಳಿ ಮಾಲ ಕುಂತು ಹಾರಾಡಿದನು, ತೂರಾಡಿದನು, ಯಿಲಯಿಲಾಂತ ವದ್ದಾಡಿದನು.. “ಯೇ ನನ್ನ ಕರುಮಂಟ ಸರೀರವನ್ನು ಅರಮನೆ, ಗುರುಮನೆ, ತವರು ಮನೆಯನ್ನಾಗಿ ಮಾಡಿಕೊಂಡು ವಸ್ತಿ ಮಾಡಿರುವಂಥಾ ತಾಯಿ ಸಾಂಬವಿಯೇ.. ನನ್ನ ಸರೀರವು ನಂಗೆ ಕಾಂಬುವಂತೆ ಮಾಡೆವ್ವಾ.. ನನ್ನ ನೆಳ್ಳು ನಂಗೆ ಕಾಂಬುವಂತೆ ಮಾಡವ್ವಾ” ಯಂದು ಮುಂತಾಗಿ ಹಲುಬ್ಯಾಡಿದನು. ತನ್ನ ಸರೀರವೇ ತನಗೆ ಮೋಸ ಮಾಡಿರಬೌದೇ? ತಾನು ಕಂಡುಂಡದ್ದು ದಿವಿನಾದ ಕಣಸಿದ್ದಿರಬೌದೇ? ತಾನು ಕಿವಿಯಾರ ಕೇಳಿಸಿಕೊಂಡಿರೋದು ಅಸರೀರ ವಾಣಿ ಆಡಿದ ಮಾತುಗಳಿದ್ದಿರಬೌದೇ? ಭ್ರಮಾಯಿದ್ದಿರಬೌದೇ? ಯಂದು ತನಗೆ ತಾನೇ ಅನುಮಾನ ತಾಳಿದನಂತೆ.... {{gap}}ಅವನು ಹಂಗ ಅಲ್ಲಿ ಯೋಚಿಸುತ್ತಿರುವಾಗ್ಗೆ.. ವದ್ದಾಡುತ್ತಿರುವಾಗ್ಗೆ. ಬಿಸಿಲು ಬೆಳದಿಂಗಳ ಲಂಗವನ್ನುಟ್ಟುಕೊಂಡಿತ್ತು. ಮಲ್ಲಿಗೆ ಹುಬ್ಬಿನಂಥ ರವುಕೇನ ತೊಟುಕೊಂಡಿತ್ತು.. ಬೆವರಿನ ವಾಣಿಯಾಗಿರುವ ಅವನ ಸರೀರವನ್ನು ತಣಿಸಲಿಕ್ಕೆಂದು, ಕಣ್ಣೀರಿನ ತತ್ರಾಣಿಯಾಗಿರುವ ಅವನ ಕಣ್ಣಿಗೆ ಮುದ ನೀಡಲಕೆಂದು ದೂರದಲ್ಲೆಲ್ಲೋ ಅವುಚಿಟ್ಟುಕೊಂಡಿದ್ದ ಬಿರುಗಾಳಿಯು ತನ್ನ ವುದುರದಿಂದ ವಂದು ಹಿಡಿ ತಂಗಾಳಿಯನ್ನು ಹೊರತೆಗೆದು ಅಗೋ ಅಲ್ಲಿ ಥಳಗೇರಿವಳಗ ಜಗದಂಬೆಯನ್ನು ತನ್ನ ದೇಹದೊಳಗಿಟ್ಟು ಪಾಲನೆ ಪೋಷಣೆ ಮಾಡುತ್ತಿರುವ ಮೋಬಯ್ಯನ ಮಯ್ದೆ ಚಾಮರದ ಸೇವೆ ಮಾಡಿ ಬಾ” ಯಂದು ಆಗ್ರಾಪಿಸಲು ಅದು ಹಂಗs ಮಾಡಿತಂತೆ.... {{gap}}ಆದರೆ ಅದನ್ನೆಲ್ಲ ಗಮನಿಕೆ ಮಾಡಲಕಾಗಲೀ, ಮುದಗೊಳ್ಳಲಕಾಗಲೀ ಅರುವಿಗೆ ನಿಲುಕದ ಅನುಭವದ ನಿಧಿಗೆ ವಡೆಯನಾಗಿದ್ದಂಥ ಮೋಬಯ್ಯಗೆ ಪುರುಸೊತ್ತಂಬುದು ಯಿರಲಿಲ್ಲ. ತನ್ನ ಸರೀರದೊಳಗಾಕೆಂದು ನೆಲೆಗೊಂಡಿರಲಕಬೇಕೆಂದು ಖಾತರಿ ತಾಳಿದನಂತೆ. ಅವನ ಕರುಣೆಯ ಕಡಲಿಗೆ, ತ್ರಿಕಾಲ ಸತ್ಕವುಗಳಿಗೆ ಮನುಕುಲದ ಬೇಕು ಬೇಡಗಳಿಗೆ ವಡೆಯನಾಗಿರುವ ತಾನು ತನ್ನ ಪಯಿತ್ರಸರೀರವನ್ನು ಸಬುಧವಾಸನೆ, ಮುಟ್ಟು ಮಯ್ಲಿಗೆಗಳಿಂದ<noinclude><references/></noinclude> t07pcr9ddu6leri94oy1q1k4xtcb227 ಪುಟ:ಅರಮನೆ.pdf/೪೨ 104 77128 317056 169837 2026-05-04T16:41:13Z Shreelatha.Halemane 7642 /* Proofread */ 317056 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{Left|ಅರಮನೆ}}{{Right|೧೧}} ದೂರಯಿರಿಸಬೇಕೆಂದು ನಿಧ್ವಯ ತಾಳಿದನು. ಯಿನು ಮುಂದೆ ತಾನು ಮಾಡಲಿರುವುದು ವಂದಾ, ಹೊರಕಡೀಕೆ, ಮಜ್ಜಣಾ, ಆಡಲಿರುವ ಮಾತು, ವುಸುರಾಡುವ ಗಾಳಿ, ನಿಂತಿರುವ ನೆಲ, ಮುಟ್ಟಲಿರುವ ಜಲ, ಮಾಡುವ, ಮಾಡದೇ ಯಿರುವ ಕೆಲಸ ಕಾರೈವುಗಳೆಲ್ಲ ಪಯಿತ್ರಯಂದು ಬಗೆಯ ಬೇಕೆಂದುಕೊಂಡನು. ಅವ್ವ ಮಲಕ್ಕೊಂಡಿರುವ ತನ್ನ ಸರೀರ ಯಂಬುವ ತೊಟ್ಟಿಲನ್ನೇ ವಂದು ಅಗೋಚರ ತೊಟ್ಟಿಲೊಳಗಿಟ್ಟು ತೂಗುತ, ಬಗೆಬಗೆಯ ಲಾಲಿಪಾಡುಗಳಿ೦ದ ಸ೦ತ ಯಿಸಬೇಕೆಂದುಕೊಂಡನು. ಹಿಂಗ ಯೋಚಿಸುತ್ತಿರುವಾಗ್ಗೆ ಆತನ ಸರೀರವು ಕ್ರಮ ಕ್ರಮೇಣ ಯಿಸ್ತಾಮ ಸ್ಥಿತಿಗೆ.... {{gap}}ವಂದು ವಪ್ಪಂದ ಮಾಡಿಕೊಳ್ಳಲಕೆಂದು ಕುಂಪಣಿ ಕಛೇರಿಗೆ ಆಗಮಿಸಿ ತಲೆ ಕೆಳಗು ಮಾಡಿ ಮೀಸೆ ಮ್ಯಾಲಕೆ ಮಾಡಿ ನಿಂತುಕೊಂಡಿದ್ದ ಚಿನ್ನೋಬುಳ ರಡ್ಡಿಯನ್ನೂ ವುಯಾವುಲ ಕೇಸವರೆಡ್ಡಿಯನ್ನೂ ಕುಳ್ಳಿರಿಸಿ ನೀವು ನಿಮ್ಮ ನಿಮ್ಮ ವಳಿತದೊಳಗಿರುವ ದೂರುಗಳಿಗೆ ಯೇನು ಮಾಡೀರಿ? ಯೇನು ಬಿಟ್ಟಿರಿ ಯಂದು ಥಾಮಸು ಮನೋ ಸಾಹೇಬ ಯಿಚಾರಿಸುತ್ತಿರುವಾಗ್ಗೆ. ತಾನು ಬೇಟೆಯಾಡಿದ ಹುಲಿಯ ಕಳೇಬರದ ಮಾಲ ಯಡಗಾಲಿಟ್ಟು ಯಡ್ಡವರು ಮೆರವಣಿಗೆಯನ್ನು ಕೂಡ್ಲಿಗಿಯ ಬೀದಿ ಬೀದಿಗುಂಟ ಮಾಡಿಸಿಕೊಳ್ಳುತ್ತಿರುವಾಗ್ಗೆ. ಕರಿಯೇಮುಲ ದಟ್ಟರಷ್ಟೇವಳಗೆ ಅಹರಿಶಿ ಚರೈಸೀ ಚರೈಸೀ ಗುರುಪ್ಪನಾಯಕನೂ, ಪೆದ ತಿಮ್ಮಾರೆಡ್ಡಿಯೂ, ಹರಿಶ್ಚಂದ್ರರೆಡ್ಡಿಯೂ ಕುಂಪಣಿ ಸರಕಾರಕ್ಕೆ ಸರಣಾಗಿ ಯಿಲಿಯಂಗ ಬದುಕೋದಕ್ಕಿಂತ ಅವರ ವಿರುದ್ದ ಹುಲಿಯಂಗ ಹೋರಾಡಿ ಸಾವುದೇ ಮೇಲೆಂದು ತೀರುಮಾನಿಸಿ ತಮ್ಮ ಮನೆದೇವರಾದ ಕದರಿ ನರಸಿಂಹಸ್ವಾಮಿಯನ್ನು ತಮ್ಮ ತಮ್ಮ ಮನಸೊಳಗೆ ನೆನೆಯುತ್ತಿರುವಾಗ್ಗೆ.. ತಮ್ಮ ತಮ್ಮ ಕಾಲಿನುಂಗುಟಕ್ಕೆ ಕಟ್ಟಿಕೊಂಡಿದ್ದ ಪಾರಿವಾಳಗಳ ಪಯ್ಲಿ ಕೆಲವು ಗಿಡುಗಗಳ ಬೇಟೆಗೋ, ಬೇಟೆಗಾರರ ಬಾಣಗಳಿಗೋ ತುತ್ತಾಗುತ್ತಿರುವಾಗ್ಗೆ.. ಬೊಮ್ಮಕ್ಕನ ರಣಬಯ ಲಿಂದ ಗಾಯಗೊಂಡು ಹೊರಟಿದ್ದ ಕುದುರೆಗಳ ಪಯ್ಲಿ ಕೆಲವು ಗಾದರಿಮಲೆ ಅರಣ್ಯದಲ್ಲಿನ ತೋಳ, ಕಿರುಬ, ಚಿರತೆ, ಹದ್ದು, ರಣಹದ್ದುಗಳಿಗೆ ಬಲಿಯಾಗುತ್ತಿರುವಾಗ್ಗೆ. ಮದ್ದಿಕೇರಿಯಿಂದ ಹೊರಟಿದ್ದ ಸಂತರಸ್ತರನ್ನು ಜೊನ್ನಗಿರಿಯ ಕದಿರೆಪ್ಪನಾಯಕನ ಸಯೀಕರು ನಿಮ್ಮಲ್ಲೇನುಂಟು ಯೇನಿಲ್ಲಯಂದು ಸುಲಿಗೆ ಮಾಡುತ್ತಿರುವಾಗ್ಗೆ.. ಯಿತ್ತ ಕುದುರೆಡವು ಪಟ್ಟಣದಲ್ಲಿ ರಾಜಮಾತೆ ಭಮ್ರಮಾಂಬೆಯು ತನ್ನೊಂದೊಂದು ವುಸುರಿಗೂ ಹಿಂದಕು<noinclude><references/></noinclude> 83wszjtf1xx80ydtol98wohbhtltikb 317187 317056 2026-05-05T09:42:13Z Ashwini Rai K 8475 /* Validated */ 317187 proofread-page text/x-wiki <noinclude><pagequality level="4" user="Ashwini Rai K" /></noinclude>________________ {{rh|left=ಅರಮನೆ|center=|right=೧೧}} ದೂರಯಿರಿಸಬೇಕೆಂದು ನಿಧ್ವಯ ತಾಳಿದನು. ಯಿನು ಮುಂದೆ ತಾನು ಮಾಡಲಿರುವುದು ವಂದಾ, ಹೊರಕಡೀಕೆ, ಮಜ್ಜಣಾ, ಆಡಲಿರುವ ಮಾತು, ವುಸುರಾಡುವ ಗಾಳಿ, ನಿಂತಿರುವ ನೆಲ, ಮುಟ್ಟಲಿರುವ ಜಲ, ಮಾಡುವ, ಮಾಡದೇ ಯಿರುವ ಕೆಲಸ ಕಾರೈವುಗಳೆಲ್ಲ ಪಯಿತ್ರಯಂದು ಬಗೆಯ ಬೇಕೆಂದುಕೊಂಡನು. ಅವ್ವ ಮಲಕ್ಕೊಂಡಿರುವ ತನ್ನ ಸರೀರ ಯಂಬುವ ತೊಟ್ಟಿಲನ್ನೇ ವಂದು ಅಗೋಚರ ತೊಟ್ಟಿಲೊಳಗಿಟ್ಟು ತೂಗುತ, ಬಗೆಬಗೆಯ ಲಾಲಿಪಾಡುಗಳಿ೦ದ ಸ೦ತ ಯಿಸಬೇಕೆಂದುಕೊಂಡನು. ಹಿಂಗ ಯೋಚಿಸುತ್ತಿರುವಾಗ್ಗೆ ಆತನ ಸರೀರವು ಕ್ರಮ ಕ್ರಮೇಣ ಯಿಸ್ತಾಮ ಸ್ಥಿತಿಗೆ.... {{gap}}ವಂದು ವಪ್ಪಂದ ಮಾಡಿಕೊಳ್ಳಲಕೆಂದು ಕುಂಪಣಿ ಕಛೇರಿಗೆ ಆಗಮಿಸಿ ತಲೆ ಕೆಳಗು ಮಾಡಿ ಮೀಸೆ ಮ್ಯಾಲಕೆ ಮಾಡಿ ನಿಂತುಕೊಂಡಿದ್ದ ಚಿನ್ನೋಬುಳ ರಡ್ಡಿಯನ್ನೂ ವುಯಾವುಲ ಕೇಸವರೆಡ್ಡಿಯನ್ನೂ ಕುಳ್ಳಿರಿಸಿ ನೀವು ನಿಮ್ಮ ನಿಮ್ಮ ವಳಿತದೊಳಗಿರುವ ದೂರುಗಳಿಗೆ ಯೇನು ಮಾಡೀರಿ? ಯೇನು ಬಿಟ್ಟಿರಿ ಯಂದು ಥಾಮಸು ಮನೋ ಸಾಹೇಬ ಯಿಚಾರಿಸುತ್ತಿರುವಾಗ್ಗೆ. ತಾನು ಬೇಟೆಯಾಡಿದ ಹುಲಿಯ ಕಳೇಬರದ ಮಾಲ ಯಡಗಾಲಿಟ್ಟು ಯಡ್ಡವರು ಮೆರವಣಿಗೆಯನ್ನು ಕೂಡ್ಲಿಗಿಯ ಬೀದಿ ಬೀದಿಗುಂಟ ಮಾಡಿಸಿಕೊಳ್ಳುತ್ತಿರುವಾಗ್ಗೆ. ಕರಿಯೇಮುಲ ದಟ್ಟರಷ್ಟೇವಳಗೆ ಅಹರಿಶಿ ಚರೈಸೀ ಚರೈಸೀ ಗುರುಪ್ಪನಾಯಕನೂ, ಪೆದ ತಿಮ್ಮಾರೆಡ್ಡಿಯೂ, ಹರಿಶ್ಚಂದ್ರರೆಡ್ಡಿಯೂ ಕುಂಪಣಿ ಸರಕಾರಕ್ಕೆ ಸರಣಾಗಿ ಯಿಲಿಯಂಗ ಬದುಕೋದಕ್ಕಿಂತ ಅವರ ವಿರುದ್ದ ಹುಲಿಯಂಗ ಹೋರಾಡಿ ಸಾವುದೇ ಮೇಲೆಂದು ತೀರುಮಾನಿಸಿ ತಮ್ಮ ಮನೆದೇವರಾದ ಕದರಿ ನರಸಿಂಹಸ್ವಾಮಿಯನ್ನು ತಮ್ಮ ತಮ್ಮ ಮನಸೊಳಗೆ ನೆನೆಯುತ್ತಿರುವಾಗ್ಗೆ.. ತಮ್ಮ ತಮ್ಮ ಕಾಲಿನುಂಗುಟಕ್ಕೆ ಕಟ್ಟಿಕೊಂಡಿದ್ದ ಪಾರಿವಾಳಗಳ ಪಯ್ಲಿ ಕೆಲವು ಗಿಡುಗಗಳ ಬೇಟೆಗೋ, ಬೇಟೆಗಾರರ ಬಾಣಗಳಿಗೋ ತುತ್ತಾಗುತ್ತಿರುವಾಗ್ಗೆ.. ಬೊಮ್ಮಕ್ಕನ ರಣಬಯ ಲಿಂದ ಗಾಯಗೊಂಡು ಹೊರಟಿದ್ದ ಕುದುರೆಗಳ ಪಯ್ಲಿ ಕೆಲವು ಗಾದರಿಮಲೆ ಅರಣ್ಯದಲ್ಲಿನ ತೋಳ, ಕಿರುಬ, ಚಿರತೆ, ಹದ್ದು, ರಣಹದ್ದುಗಳಿಗೆ ಬಲಿಯಾಗುತ್ತಿರುವಾಗ್ಗೆ. ಮದ್ದಿಕೇರಿಯಿಂದ ಹೊರಟಿದ್ದ ಸಂತರಸ್ತರನ್ನು ಜೊನ್ನಗಿರಿಯ ಕದಿರೆಪ್ಪನಾಯಕನ ಸಯೀಕರು ನಿಮ್ಮಲ್ಲೇನುಂಟು ಯೇನಿಲ್ಲಯಂದು ಸುಲಿಗೆ ಮಾಡುತ್ತಿರುವಾಗ್ಗೆ.. ಯಿತ್ತ ಕುದುರೆಡವು ಪಟ್ಟಣದಲ್ಲಿ ರಾಜಮಾತೆ ಭಮ್ರಮಾಂಬೆಯು ತನ್ನೊಂದೊಂದು ವುಸುರಿಗೂ ಹಿಂದಕು<noinclude><references/></noinclude> sdbbpp5mibwtb51met3tbz0oocq18zp ಪುಟ:ಅರಮನೆ.pdf/೪೩ 104 77129 317057 169838 2026-05-04T16:42:03Z Shreelatha.Halemane 7642 /* Proofread */ 317057 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{Left|೧೨}}{{Right|ಅರಮನೆ}} ಮುಂದಕೂ ಕಿರಕೂ ಕಿರಕೂ ಯಂದು ಸಬುಧ ಮಾಡುತ ವಾಲಾಡುತ್ತಿದ್ದ ಸಿಮಾಸನವನ್ನು ತದೇಕ ಚಿತ್ತದಿಂದ ನೋಡುತ ತನ್ನ ದವಡೇಲಿದ್ದ ತೊಂಬಲ ದುಂಡೆಯನ್ನು ಯಡಕೂ ಬಲಕ್ಕೂ ತಳ್ಳಾಡುತ್ತಿರುವಾಗ್ಗೆ.... {{gap}}ಪರರ್ಗುಣಿ ಮಾಗಿ ಯಂಬುವ ಹಚ್ಚ ಹಸುರನೆಯ ಯಿಪ್ಪತ್ತು ಕೂರಿಗೆ ಹೊಲದಲ್ಲಿ ತನ್ನೆಡಗಾಲನ್ನು ಹುಲ್ಲಿನ ಹೊರೆಯ ಮಾಲಿಟ್ಟು ತನ್ನೆರಡೂ ಕಯ್ಕೆಗಳನ್ನು ಸೊಂಟದ ಯರಡೂ ಬದಿಯಲ್ಲಿಟ್ಟು ಜಗಲೂರೆವ್ವ “ಹೋಹೋಮ್ ಸೂರಾss.. ಹೋಂ ಸೂರಾss..” ಯಂದು ಕೂಗಿದೊಡನೆ ಹೊಲದ ಮ್ಯಾರೇಲಿ ಆಸು, ಬೇವು, ಹೊನ್ನಿ, ಸಾಗುವಾನಿ ಯವೇ ಮರಗಿಡಗಳ ಮ್ಯಾಲ ಯಿಸ್ತಮಿಸಿ ಕೊಂಡಿದ್ದ ಕಾಗೆ, ಗೂಗೆ, ಮೀನು ಮಿಂಚುಳ್ಳಿಯೇ ಮೊದಲಾದ ಪಕ್ಷಿಗಳು ಬೆಚ್ಚಿಬಿದ್ದು ಹಾರಿ ಮುಗಿಲ ಬಯಲ ತುಂಬ ಅಂಡಾವರನಗೊಂಡವು.... {{gap}}ಮುಂಗೋಳಿ ಕೂಗಿನ ನಾದವನ್ನ ಹಾದಿ ಮಾಡಿಕೊಂಡು ಹೊಲ ಸೇರಿ ಯುಂಟಾಳು ಮಾಡೋ ಕೆಲಸವನ್ನು ತಾನೊಬ್ಬಾಕೆಂದೇ ಮಾಡಿ ಮುಗಿಸುವಂತಾಕೆಯಾದ ಜಗಲೂರೆವ್ವನ ತಂದೆ ಯಾರಪ್ಪಾ ಅಂದರೆ ಮಿಂಚೇರಿಯ ಪರಿಶೇ ಪಯ್ಕೆ ಪಯಿಲುವಾನನಾದ ಅಂತಾಡಪ್ಪನೆಂಬಾತನು, ತಾಯಿ ಯಾರಪ್ಪಾ ಅಂದರ ಕಂಬಳೆವ್ವನು, ಆ ದಂಪತಿಗಳಿಗಾಕೆ ಯಷ್ಟನೆಯವಳೆಂದರೆ ಅಷ್ಟಮ ಸುಪುತ್ರಿಯು, ತಾನು ಬಾಯಿ ಸತ್ತ ಹುಳದಂಥ ಮೋಬಯ್ಯನೆಂಬಾತನ ಕಯ್ಕೆ ಹಿಡಿದು ಆವತ್ತಿಗೆ ಬರೋಬ್ಬರಿ ಯಿಪ್ಪತ್ತೇಳು ವರುಷ ತುಂಬಿರುವುದು. ಆದರೆ ತನ್ನುದುರದೊಳಗ ವಂದಾದರು ನರಹುಳ ಕಂಡಿಲ್ಲ. ಯರಡು ಕಂಭಗಳ ನಡುವೆ ಜ್ವಾಲೆ ಕಟ್ಟಿಲ್ಲ.. ಮೊಲೆ ವುಣುಸಿ ಲಾಲಿ ಪಾಡಿಲ್ಲ. ಮುಟ್ಟು ನಿಲ್ಲೋ ಲಚ್ಚಣ ಕಾಣದ್ದ ರಿಂದಾಕೆಯು ಕಚ್ಚಿ ಹಿಡಿದ ಗಂಡನ ಮ್ಯಾಲ ಬ್ಯಾಸರ ಮಾಡಿಕೊಂಡಿದ್ದಿಲ್ಲ.. ವಂದಾನೊಂದಿನ ತವರು ಮನೀಗೆ ಹೋಗಿ “ಯಪ್ಪಾ...... ನನ್ನುದುರ ಬಿತ್ತೊರಿಲ್ಲದ, ರೆಂಟೆ ಹೊಡೆಯೋರಿಲದ ಬರಡು ಹೊಲಾ ಆಗಯ.. ಮೊನೆ ವಂದಿನ ನಸುಕಿನಾಗ ಅಂಗಯ್ದಾಡೋ ಅರಗಿಣಿ ಬಂದು ಮನೆಯಂಗಳದ ಬೇಯಿನ ಮರದ ಮ್ಯಾಲ ಕುಂತು ಬಂಜೆ ಬಂಜೆಯಂದು ಕೂಗಿದಂಗಾತು.. ನನ ಗಂಡನೆಂಬೋದು ಹಗಲಿಪ್ಪತ್ನಾಕು ತಾಸು ತೊಂಬಲ ವುಗುಳೋ ಪಿಕದಾನಿ ಹಿಡಕೊಂಡು ಅರಮನ್ಯಾಗ ಭಮ್ರಮಾಂಬೆಯ ಕಾಪಲ ಮಾಡತಯ್ಕೆ.. ಅದಕ ಹೆಂಡತಿ ಯಿದ್ರೂವಂದ... ಯಿರದಿದ್ರೂವಂದss.. ಕಂದನಿಲ್ಲದ ಬಂಜೆ ಬಾಳು ನೀಗೀ<noinclude><references/></noinclude> 7rxwv8qwkpwlukt3bm14qpj6yfjwaqs 317188 317057 2026-05-05T09:42:36Z Ashwini Rai K 8475 /* Validated */ 317188 proofread-page text/x-wiki <noinclude><pagequality level="4" user="Ashwini Rai K" /></noinclude>________________ {{rh|left=೧೨|center=|right=ಅರಮನೆ}} ಮುಂದಕೂ ಕಿರಕೂ ಕಿರಕೂ ಯಂದು ಸಬುಧ ಮಾಡುತ ವಾಲಾಡುತ್ತಿದ್ದ ಸಿಮಾಸನವನ್ನು ತದೇಕ ಚಿತ್ತದಿಂದ ನೋಡುತ ತನ್ನ ದವಡೇಲಿದ್ದ ತೊಂಬಲ ದುಂಡೆಯನ್ನು ಯಡಕೂ ಬಲಕ್ಕೂ ತಳ್ಳಾಡುತ್ತಿರುವಾಗ್ಗೆ.... {{gap}}ಪರರ್ಗುಣಿ ಮಾಗಿ ಯಂಬುವ ಹಚ್ಚ ಹಸುರನೆಯ ಯಿಪ್ಪತ್ತು ಕೂರಿಗೆ ಹೊಲದಲ್ಲಿ ತನ್ನೆಡಗಾಲನ್ನು ಹುಲ್ಲಿನ ಹೊರೆಯ ಮಾಲಿಟ್ಟು ತನ್ನೆರಡೂ ಕಯ್ಕೆಗಳನ್ನು ಸೊಂಟದ ಯರಡೂ ಬದಿಯಲ್ಲಿಟ್ಟು ಜಗಲೂರೆವ್ವ “ಹೋಹೋಮ್ ಸೂರಾss.. ಹೋಂ ಸೂರಾss..” ಯಂದು ಕೂಗಿದೊಡನೆ ಹೊಲದ ಮ್ಯಾರೇಲಿ ಆಸು, ಬೇವು, ಹೊನ್ನಿ, ಸಾಗುವಾನಿ ಯವೇ ಮರಗಿಡಗಳ ಮ್ಯಾಲ ಯಿಸ್ತಮಿಸಿ ಕೊಂಡಿದ್ದ ಕಾಗೆ, ಗೂಗೆ, ಮೀನು ಮಿಂಚುಳ್ಳಿಯೇ ಮೊದಲಾದ ಪಕ್ಷಿಗಳು ಬೆಚ್ಚಿಬಿದ್ದು ಹಾರಿ ಮುಗಿಲ ಬಯಲ ತುಂಬ ಅಂಡಾವರನಗೊಂಡವು.... {{gap}}ಮುಂಗೋಳಿ ಕೂಗಿನ ನಾದವನ್ನ ಹಾದಿ ಮಾಡಿಕೊಂಡು ಹೊಲ ಸೇರಿ ಯುಂಟಾಳು ಮಾಡೋ ಕೆಲಸವನ್ನು ತಾನೊಬ್ಬಾಕೆಂದೇ ಮಾಡಿ ಮುಗಿಸುವಂತಾಕೆಯಾದ ಜಗಲೂರೆವ್ವನ ತಂದೆ ಯಾರಪ್ಪಾ ಅಂದರೆ ಮಿಂಚೇರಿಯ ಪರಿಶೇ ಪಯ್ಕೆ ಪಯಿಲುವಾನನಾದ ಅಂತಾಡಪ್ಪನೆಂಬಾತನು, ತಾಯಿ ಯಾರಪ್ಪಾ ಅಂದರ ಕಂಬಳೆವ್ವನು, ಆ ದಂಪತಿಗಳಿಗಾಕೆ ಯಷ್ಟನೆಯವಳೆಂದರೆ ಅಷ್ಟಮ ಸುಪುತ್ರಿಯು, ತಾನು ಬಾಯಿ ಸತ್ತ ಹುಳದಂಥ ಮೋಬಯ್ಯನೆಂಬಾತನ ಕಯ್ಕೆ ಹಿಡಿದು ಆವತ್ತಿಗೆ ಬರೋಬ್ಬರಿ ಯಿಪ್ಪತ್ತೇಳು ವರುಷ ತುಂಬಿರುವುದು. ಆದರೆ ತನ್ನುದುರದೊಳಗ ವಂದಾದರು ನರಹುಳ ಕಂಡಿಲ್ಲ. ಯರಡು ಕಂಭಗಳ ನಡುವೆ ಜ್ವಾಲೆ ಕಟ್ಟಿಲ್ಲ.. ಮೊಲೆ ವುಣುಸಿ ಲಾಲಿ ಪಾಡಿಲ್ಲ. ಮುಟ್ಟು ನಿಲ್ಲೋ ಲಚ್ಚಣ ಕಾಣದ್ದ ರಿಂದಾಕೆಯು ಕಚ್ಚಿ ಹಿಡಿದ ಗಂಡನ ಮ್ಯಾಲ ಬ್ಯಾಸರ ಮಾಡಿಕೊಂಡಿದ್ದಿಲ್ಲ.. ವಂದಾನೊಂದಿನ ತವರು ಮನೀಗೆ ಹೋಗಿ “ಯಪ್ಪಾ...... ನನ್ನುದುರ ಬಿತ್ತೊರಿಲ್ಲದ, ರೆಂಟೆ ಹೊಡೆಯೋರಿಲದ ಬರಡು ಹೊಲಾ ಆಗಯ.. ಮೊನೆ ವಂದಿನ ನಸುಕಿನಾಗ ಅಂಗಯ್ದಾಡೋ ಅರಗಿಣಿ ಬಂದು ಮನೆಯಂಗಳದ ಬೇಯಿನ ಮರದ ಮ್ಯಾಲ ಕುಂತು ಬಂಜೆ ಬಂಜೆಯಂದು ಕೂಗಿದಂಗಾತು.. ನನ ಗಂಡನೆಂಬೋದು ಹಗಲಿಪ್ಪತ್ನಾಕು ತಾಸು ತೊಂಬಲ ವುಗುಳೋ ಪಿಕದಾನಿ ಹಿಡಕೊಂಡು ಅರಮನ್ಯಾಗ ಭಮ್ರಮಾಂಬೆಯ ಕಾಪಲ ಮಾಡತಯ್ಕೆ.. ಅದಕ ಹೆಂಡತಿ ಯಿದ್ರೂವಂದ... ಯಿರದಿದ್ರೂವಂದss.. ಕಂದನಿಲ್ಲದ ಬಂಜೆ ಬಾಳು ನೀಗೀ<noinclude><references/></noinclude> 53gn3jr3hz679hzv942xufkasaewmsd ಪುಟ:ಅರಮನೆ.pdf/೪೪ 104 77130 317058 169839 2026-05-04T16:42:45Z Shreelatha.Halemane 7642 /* Proofread */ 317058 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{Left|ಅರಮನೆ}}{{Right|೧೩}} ನೀಗಿ ಬದುಕು ಬಲು ಬ್ಯಾಸರ ಆಗಯ್ತಪ್ಪಾ.. ಆದರ ನಾನ್ಯಾದ್ಯಾರ ಯುದ್ಧಕ ಹೋಗಿ ಯೀರ ಮರಣ ಸಾಯಬೇಕಂತ ಮಾಡೀನಿ, ಮಾಸ್ತಿಕಲ್ಲಿನ ಕರೆಗೆ ಓಂಗೊಡಾಕಂತ ಮಾಡೀನಿ” ಯಂದು ಕಣ್ಣಲ್ಲಿ ಯಲ್ಲು ಬೊಗಸೆ ನೀರು ತಂದುಕೊಂಡು ತನ್ನೆದೆಯಾಗಿದ್ದ ಗಿದ್ದುನ ದುಕ್ಕವನ್ನು ನಾಕು ಮಾತಲ್ಲಿ ಹೇಳಿದಳು. ಆವಾಗಿದ್ದು ಆಕೆಯ ತಾಯ್ತಂದೆಯರು ಹಂಗಾಡಬ್ಯಾಡವ್ವಾ.. ಹಂಗಾಡಬ್ಯಾಡ ಕಂದಾSS ಯಂದು ಬಗೆಯಿಂದ ರಮಿಸಿದರು. ಆದರೂ ಆಕೆಯ ದುಕ್ಕ ತಮಣಿಯಾಗಲಿಲ್ಲ. ಆಗ್ಗೆ ಗವುರಮ್ಮಗೆ ಆರತಿ ಬೆಳಗಲಕಂತ ಹಿರೇ ಗವುರಮ್ಮನುಣ್ಣುಮಿಗೆ ಬಂದಿದ್ದಂಥ ಆಕೆಯ ಯೇಳು ಮಂದಿ ಅಕ್ಕಂದಿರು 'ದುಕ್ಕ ಮಾಡಿಕೋಬ್ಯಾಡ ತಂಗಿ.. ಬೇಕಾರ ನನ್ನ ಮಗನ್ನ ತಗಂಡು ಸಾಕ್ಕೋ? ಯಂದರು. ಅದಕಿದ್ದು ಆಕೆಯು ನಿಮ್ಮಕ್ಕು ನನ ಮಕ್ಕು ಹೆಂಗಾಕಾವ್ರಕ್ಕಾ.. ಬ್ಯಾಡ... ಬ್ಯಾಡ” ಅಂದಳು.. ಅದೇ ಹೊತ್ತಿಗೆ ಊಾಣಗರುಮೊಂದು ತನ್ನ ಹೆತ್ತವ್ವನ ಮೊಲೆ ಜಿಲುಕಿ ಜಿಕ್ಕೋತ ಜಕ್ಕೋತ ಅಲ್ಲಿಗೆ ಬಂತು. ಅದರ ಕರಿದುಟಿಗಳ ನಡುವೆ ನೊರೆವಾಲಿನ ಗೆರೆಗಳಿದ್ದವು. ಅದರ ಮಯ್ಯ ಮಿರಿ ಮಿರಿ ಮಿಂಚುತಾಯಿತ್ತು.. ಅದು ಬರು ಬರುತ್ತಲೆ ತನ್ನ ನಾಲಗೆಯಿಂದ ಆಕೆಯ ಮಕಮಾರೆಯನ್ನು ನೆಕ್ಕಲಕ ಹತ್ತಿತು.. ಆ ವಂದು ಗಳಿಗೇಲಿ ಹತ್ತು ಕಂದಮ್ಮಗಳನ್ನು ಹೆತ್ತು ಆಡಿಸಿದೋಟು ಸಂತೋಷವಾಗಲು ಆಕೆಯು “ಯಪ್ಪಾ.. ನಿಮಾಸ್ತಿ ಬ್ಯಾಡ.. ನಿಮ್ಮಡಮಬ್ಯಾಡಯೀ ಕ್ಲಾಣಗರೂನ ಕೊಟ್ಟರಾಟೇ ಸಾಕು.. ಯದೇ ವಡಲ ಸವುಭಾಗ್ಯ ಯಂದಂದುಕೊಂಡು ಸಾಕೋತೀನಿ.. ಕಣ್ಣಾಗ ಕಣ್ಣಿಟ್ಟು ಜ್ಞಾಪಾನ ಜತುನ ಮಾಡತೇನಿ” ಯಂದೊಂದುಸುರಿಗೆ ಅಂದಳು. ಆವಾಗಿದ್ದು ಅಂತಾಡಪ್ಪನು “ಯಾರು ಬ್ಯಾಡಂತಾರ ಮಗಳೇ” ಯಂದು ವಪ್ಪಿಗೆ ನೀಡಿದನು. ಅದಕ ಮೊಲೆ ತಿಂಭೋ ಆಸೆ ಬಲು ಅಯ್ದೆ ಯಂಬ ಕಾರಣಕ್ಕೆ ಅದನ್ನು ಅದರ ತಾಯೊಂದಿಗೆ ಆಳಿನ ಕಣ್ಣು ಕುದುರೆಡವಿಗೆ ಹೊಡೆದು ಕಳುವಿ ಕೊಟ್ಟನು.... {{gap}}ಬರು ಬರುತ್ತಲೆ ಅದಕ್ಕೆ ಸೂರ ಯಂದು ನಾಮಕರಣ ಮಾಡಿದಳು. ತನ್ನೊಡಲಿಗೆ ಕಡಿಮೆ ಮಾಡಿಕೊಂಡು ಪಾಲನೆ ಪೋಷಣೆ ಮಾಡುತ ಸಾಕಿದಳು.. ತನ್ನ ಸಂಗಾಟ ವು೦ಬಲಕ ಯಿಡುತ್ತಿದ್ದಳು. ತನ್ನ ಮಗ್ಗುಲು ಮಲಗಿಸಿಕೊಳ್ಳುತ್ತಿದ್ದಳು.. ನಯ ನಾಜೂಕು ಕಲಿಸಿದಳು, ಆಕೆಯ ಮನದಾಗಿನ ಭಾವನೆಗಳನ್ನು ಅದು ಅರಮಾಡಿಕೊಳ್ಳುತ.. ಅದರ ಮನದಾಗಿನ ಭಾವನೆಗಳನ್ನು ಆಕೆ ಅರ ಮಾಡಿಕೊಳ್ಳುತ ಪರಸ್ಪರ ಸ್ಪಂದನ ಮಾಡುತ.. ವಂದೇ ಮಾತಲ್ಲಿ ಹೇಳಲಕಂದರ ಜಾಣ ಮನುಷ್ಯನೊಬ್ಬ ಊಾಣದ ರೂಪದಲ್ಲಿದ್ದನೆಂದರೆ<noinclude><references/></noinclude> sgzpmpjx1iat1zc2s449fa3317w2ahp 317189 317058 2026-05-05T09:43:13Z Ashwini Rai K 8475 /* Validated */ 317189 proofread-page text/x-wiki <noinclude><pagequality level="4" user="Ashwini Rai K" /></noinclude>________________ {{rh|left=ಅರಮನೆ|center=|right=೧೩}} ನೀಗಿ ಬದುಕು ಬಲು ಬ್ಯಾಸರ ಆಗಯ್ತಪ್ಪಾ.. ಆದರ ನಾನ್ಯಾದ್ಯಾರ ಯುದ್ಧಕ ಹೋಗಿ ಯೀರ ಮರಣ ಸಾಯಬೇಕಂತ ಮಾಡೀನಿ, ಮಾಸ್ತಿಕಲ್ಲಿನ ಕರೆಗೆ ಓಂಗೊಡಾಕಂತ ಮಾಡೀನಿ” ಯಂದು ಕಣ್ಣಲ್ಲಿ ಯಲ್ಲು ಬೊಗಸೆ ನೀರು ತಂದುಕೊಂಡು ತನ್ನೆದೆಯಾಗಿದ್ದ ಗಿದ್ದುನ ದುಕ್ಕವನ್ನು ನಾಕು ಮಾತಲ್ಲಿ ಹೇಳಿದಳು. ಆವಾಗಿದ್ದು ಆಕೆಯ ತಾಯ್ತಂದೆಯರು ಹಂಗಾಡಬ್ಯಾಡವ್ವಾ.. ಹಂಗಾಡಬ್ಯಾಡ ಕಂದಾSS ಯಂದು ಬಗೆಯಿಂದ ರಮಿಸಿದರು. ಆದರೂ ಆಕೆಯ ದುಕ್ಕ ತಮಣಿಯಾಗಲಿಲ್ಲ. ಆಗ್ಗೆ ಗವುರಮ್ಮಗೆ ಆರತಿ ಬೆಳಗಲಕಂತ ಹಿರೇ ಗವುರಮ್ಮನುಣ್ಣುಮಿಗೆ ಬಂದಿದ್ದಂಥ ಆಕೆಯ ಯೇಳು ಮಂದಿ ಅಕ್ಕಂದಿರು 'ದುಕ್ಕ ಮಾಡಿಕೋಬ್ಯಾಡ ತಂಗಿ.. ಬೇಕಾರ ನನ್ನ ಮಗನ್ನ ತಗಂಡು ಸಾಕ್ಕೋ? ಯಂದರು. ಅದಕಿದ್ದು ಆಕೆಯು ನಿಮ್ಮಕ್ಕು ನನ ಮಕ್ಕು ಹೆಂಗಾಕಾವ್ರಕ್ಕಾ.. ಬ್ಯಾಡ... ಬ್ಯಾಡ” ಅಂದಳು.. ಅದೇ ಹೊತ್ತಿಗೆ ಊಾಣಗರುಮೊಂದು ತನ್ನ ಹೆತ್ತವ್ವನ ಮೊಲೆ ಜಿಲುಕಿ ಜಿಕ್ಕೋತ ಜಕ್ಕೋತ ಅಲ್ಲಿಗೆ ಬಂತು. ಅದರ ಕರಿದುಟಿಗಳ ನಡುವೆ ನೊರೆವಾಲಿನ ಗೆರೆಗಳಿದ್ದವು. ಅದರ ಮಯ್ಯ ಮಿರಿ ಮಿರಿ ಮಿಂಚುತಾಯಿತ್ತು.. ಅದು ಬರು ಬರುತ್ತಲೆ ತನ್ನ ನಾಲಗೆಯಿಂದ ಆಕೆಯ ಮಕಮಾರೆಯನ್ನು ನೆಕ್ಕಲಕ ಹತ್ತಿತು.. ಆ ವಂದು ಗಳಿಗೇಲಿ ಹತ್ತು ಕಂದಮ್ಮಗಳನ್ನು ಹೆತ್ತು ಆಡಿಸಿದೋಟು ಸಂತೋಷವಾಗಲು ಆಕೆಯು “ಯಪ್ಪಾ.. ನಿಮಾಸ್ತಿ ಬ್ಯಾಡ.. ನಿಮ್ಮಡಮಬ್ಯಾಡಯೀ ಕ್ಲಾಣಗರೂನ ಕೊಟ್ಟರಾಟೇ ಸಾಕು.. ಯದೇ ವಡಲ ಸವುಭಾಗ್ಯ ಯಂದಂದುಕೊಂಡು ಸಾಕೋತೀನಿ.. ಕಣ್ಣಾಗ ಕಣ್ಣಿಟ್ಟು ಜ್ಞಾಪಾನ ಜತುನ ಮಾಡತೇನಿ” ಯಂದೊಂದುಸುರಿಗೆ ಅಂದಳು. ಆವಾಗಿದ್ದು ಅಂತಾಡಪ್ಪನು “ಯಾರು ಬ್ಯಾಡಂತಾರ ಮಗಳೇ” ಯಂದು ವಪ್ಪಿಗೆ ನೀಡಿದನು. ಅದಕ ಮೊಲೆ ತಿಂಭೋ ಆಸೆ ಬಲು ಅಯ್ದೆ ಯಂಬ ಕಾರಣಕ್ಕೆ ಅದನ್ನು ಅದರ ತಾಯೊಂದಿಗೆ ಆಳಿನ ಕಣ್ಣು ಕುದುರೆಡವಿಗೆ ಹೊಡೆದು ಕಳುವಿ ಕೊಟ್ಟನು.... {{gap}}ಬರು ಬರುತ್ತಲೆ ಅದಕ್ಕೆ ಸೂರ ಯಂದು ನಾಮಕರಣ ಮಾಡಿದಳು. ತನ್ನೊಡಲಿಗೆ ಕಡಿಮೆ ಮಾಡಿಕೊಂಡು ಪಾಲನೆ ಪೋಷಣೆ ಮಾಡುತ ಸಾಕಿದಳು.. ತನ್ನ ಸಂಗಾಟ ವು೦ಬಲಕ ಯಿಡುತ್ತಿದ್ದಳು. ತನ್ನ ಮಗ್ಗುಲು ಮಲಗಿಸಿಕೊಳ್ಳುತ್ತಿದ್ದಳು.. ನಯ ನಾಜೂಕು ಕಲಿಸಿದಳು, ಆಕೆಯ ಮನದಾಗಿನ ಭಾವನೆಗಳನ್ನು ಅದು ಅರಮಾಡಿಕೊಳ್ಳುತ.. ಅದರ ಮನದಾಗಿನ ಭಾವನೆಗಳನ್ನು ಆಕೆ ಅರ ಮಾಡಿಕೊಳ್ಳುತ ಪರಸ್ಪರ ಸ್ಪಂದನ ಮಾಡುತ.. ವಂದೇ ಮಾತಲ್ಲಿ ಹೇಳಲಕಂದರ ಜಾಣ ಮನುಷ್ಯನೊಬ್ಬ ಊಾಣದ ರೂಪದಲ್ಲಿದ್ದನೆಂದರೆ<noinclude><references/></noinclude> 2eel1o4y3eiqg7e4ihw9jsp2wp3ax5a ಪುಟ:ಅರಮನೆ.pdf/೪೫ 104 77131 317059 169840 2026-05-04T16:43:32Z Shreelatha.Halemane 7642 /* Proofread */ 317059 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{Left|೧೪}}{{Right|ಅರಮನೆ}} ಸರಿಯಾದೀತು. ಬಿದಿಗೆ ಚಂದ್ರಾಮನಂತೆ ದಿನಕ್ಕೊಂದೊಂದು ಚಂದಲ್ಲಿ ಬೆಳೆದೂ ಬೆಳೆದೂ ಅದು ಪ್ರವುಢಾವಸ್ತೆಗೆ ಬಂತು. ಆಕೆಗೊಂದೇ ಅಲ್ಲದ ಯಿಡೀ ಕೇರಿಗೆ.. ಯಿಡೀ ಪಟ್ಟಣಕ್ಕೇನೆ ಕಣಣಿ ಆತು. ಹರೇವಿಗೆ ಬಂದ ನಂತರ ಅದಕ್ಕೆ ಪುರುಸೊತ್ತು ಯಿಲ್ಲದಂಗಾತು. ಹಾಳೂರಿಗೆ ಹಣುಮಪ್ಪ ಚಂದ ಅನ್ನಂಗೆ ಯಿಡೀ ಪಟ್ಟಣಕ್ಕೇನೆ ಅದೊಂದೆ ಯಿತ್ತು. ಅಂದರೆ ಸದರಿ ಪಟ್ಟಣದೊಳಗ ಊಾಣದ ಸಂತತಿಯೇ ಯಿರಲಿಲ್ಲ ಯಂದು ಅರವಲ್ಲ.. ಯಿದ್ದವು. ಆದರೆ ತಗೊಂಡು ಯೇನು ಮಾಡೋದು? ವಂದೆಲ್ಲು ಬಾರಿ ಹಾರಿ ಸುಸ್ತಾಗಿ ಕೆಳಗಿಳಿದು ದುಸು ದುಸನೆದೇಕಿ ಆಯಾಸ ಅನುಭೋಸುತ್ತಿದ್ದವು. ಅವುಗಳಿಂದ ಹಾರಿಸಿಕೊಂಡ ಮಣಕ ಯೆಮ್ಮೆಗಳಿಗೆ ಗರ ಕಟ್ಟುತ್ತಿರಲಿಲ್ಲ.. ಕಟ್ಟಿದರೂ ನಿಲ್ಲುತ್ತಿರಲಿಲ್ಲ.. ನಿಂತರೂ ಭಾಳ ದಿನ ಉಳಿಯುತ್ತಿರಲಿಲ್ಲ.. ಅದಕ್ಕೆಂದೇ ಪಟ್ಟಣದ ಸಮಸ್ತ ಯೆಮ್ಮೆಗಳು ಸೂರನ ಮ್ಯಾಲ ಬಿದ್ದು ಸಾಯುತ್ತಿದ್ದವು. ಅವುಗಳ ಮಾಲಿಕರಾದರೂ ಆಟೆಯಾ.. ತಮ್ಮ ತಮ್ಮ ಬೆದೆಗೆ ಬಂದ ಮಣಕ ಯಮ್ಮೆಗಳನ್ನು ಹೊಡಕೊಂಡು ಬಂದು ಸೂರನ ಹಿಂದ ಮುಂದ ಬಿಟ್ಟು ರುಸುಮು ರೂಪದಲ್ಲಿ ವಂದು ಹೊರೆ ಮೇವನ್ನೋ, ಕಲಗಚ್ಚನ್ನೋ, ಹುಣ್ಣೀ ನುಚ್ಚನ್ನೋ ತಂದು ಅದರ ಮುಂದ ಮೇಯಲಕ ಬಿಡುತ್ತಿದ್ದರು. ಅದೊಂದೇ ಅಲ್ಲದೆ ತಮ್ಮ ಹೊಲಗದ್ದೆಗಳಲ್ಲಿ ಅದು ಮೇದರೆ ಹುಲುಸು ಹೆಚ್ಚಾಗತಯ್ಕೆ ಯಂಬ ಕಾರಣಕ್ಕೆ ಅದನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದರು. ಯೇಸು ಮೇದರೂ, ಯೇನು ಮಾಡಿದರೂ ಅದನ್ನು ಗದರಿಸಿ ಗದುಮುವ ಗೋಜಿಗೆ ಯಾರೊಬ್ಬರೂ ಹೋಗುತ್ತಿರಲಿಲ್ಲ.. ಹಿಂಗಾಗಿ ಅದಕ್ಕೆ ಹರೇವು ಬಂದದ್ದಾಗಲೀ, ತಾರುಣ್ಯ ನೂರುಮಡಿಗೊಂಡದ್ದಾಗಲೀ ತಡಾಗಲಿಲ್ಲ.. ಗೂಟ ದಂದಕ್ಕಿಂತ ನಿರುಬ೦ಧಗಳಿಲ್ಲದೆ ಅಂಕೆ ಅಟಾಟೋಪಗಳಿಲ್ಲದೆ, ಕಾಯಿದೆ ಕಾನೂನುಗಳಿಲ್ಲದೆ ಹಾರುತಯ್ದೆಯೇನೋ ಯಂಬಂತೆ ಮೋಡಾಡುತ ಸದರಿ ಪಟ್ಟಣದ ಸಕಲ ಶಾಮಲ ವದ್ದೆಯರಾದ ಮಹಿಷೆಯರೊಂದಿಗೆ ವಡನಾಡುತ, ಗರುಭ ತುಂಬುತ, ಕೆಚ್ಚಲು ಜೀಕುತ, ಹಾಲು ಹಯನಕ್ಕೆ ಬರ ಬಾರದಂಗ ನೋಡಿಕೊಳ್ಳುತ ಅದು ಅಷ್ಟ ದಿಗ್ಗಜಗಳ ಕಣ್ಣು ಕಸುರಾಗುವಂತೆ ಬೆಳೆದು ವಂದು ಹದಕ್ಕೆ ಬಂದಿತ್ತು. ಅಂದ ಮಾತ್ರಕ್ಕೆ ಅದು ಅಜಾತ ಸತ್ರುವಾಗಿತ್ತು ಯಂದು ಭಾವಿಸಬೇಕಾದುದಿಲ್ಲ... ತೂರಿದ್ದಲ್ಲಿ ಹೊಲಗೇರಿ ಹೆಂಗಿರದೋ ಹಂಗೇನೆ ಅದಕ್ಕೆ ಸತ್ರುಗಳಿದ್ದರು. ಅವನ್ಯಾರಪ್ಪಾ ಅಂದರ ಯಮ್ಮೆ ಮಣಕಗಳನ್ನೋಂದಾದರೂ ಕಟ್ಟಿರದೋರು. ಬೆದೆಗೆ ಬಂದಾಗಂತೂ ಅದು ನಮ್ಮ ನಮ್ಮ ಯಂದು ಸುತ್ತಿಪ್ಪತ್ತೂರುಗಳಿಗೆ ಕೇಳಿಸುವಂತೆ<noinclude><references/></noinclude> i1che3hfvrojns8yg3efbahqd0kp27k 317190 317059 2026-05-05T09:43:42Z Ashwini Rai K 8475 /* Validated */ 317190 proofread-page text/x-wiki <noinclude><pagequality level="4" user="Ashwini Rai K" /></noinclude>________________ {{rh|left=೧೪|center=|right=ಅರಮನೆ}} ಸರಿಯಾದೀತು. ಬಿದಿಗೆ ಚಂದ್ರಾಮನಂತೆ ದಿನಕ್ಕೊಂದೊಂದು ಚಂದಲ್ಲಿ ಬೆಳೆದೂ ಬೆಳೆದೂ ಅದು ಪ್ರವುಢಾವಸ್ತೆಗೆ ಬಂತು. ಆಕೆಗೊಂದೇ ಅಲ್ಲದ ಯಿಡೀ ಕೇರಿಗೆ.. ಯಿಡೀ ಪಟ್ಟಣಕ್ಕೇನೆ ಕಣಣಿ ಆತು. ಹರೇವಿಗೆ ಬಂದ ನಂತರ ಅದಕ್ಕೆ ಪುರುಸೊತ್ತು ಯಿಲ್ಲದಂಗಾತು. ಹಾಳೂರಿಗೆ ಹಣುಮಪ್ಪ ಚಂದ ಅನ್ನಂಗೆ ಯಿಡೀ ಪಟ್ಟಣಕ್ಕೇನೆ ಅದೊಂದೆ ಯಿತ್ತು. ಅಂದರೆ ಸದರಿ ಪಟ್ಟಣದೊಳಗ ಊಾಣದ ಸಂತತಿಯೇ ಯಿರಲಿಲ್ಲ ಯಂದು ಅರವಲ್ಲ.. ಯಿದ್ದವು. ಆದರೆ ತಗೊಂಡು ಯೇನು ಮಾಡೋದು? ವಂದೆಲ್ಲು ಬಾರಿ ಹಾರಿ ಸುಸ್ತಾಗಿ ಕೆಳಗಿಳಿದು ದುಸು ದುಸನೆದೇಕಿ ಆಯಾಸ ಅನುಭೋಸುತ್ತಿದ್ದವು. ಅವುಗಳಿಂದ ಹಾರಿಸಿಕೊಂಡ ಮಣಕ ಯೆಮ್ಮೆಗಳಿಗೆ ಗರ ಕಟ್ಟುತ್ತಿರಲಿಲ್ಲ.. ಕಟ್ಟಿದರೂ ನಿಲ್ಲುತ್ತಿರಲಿಲ್ಲ.. ನಿಂತರೂ ಭಾಳ ದಿನ ಉಳಿಯುತ್ತಿರಲಿಲ್ಲ.. ಅದಕ್ಕೆಂದೇ ಪಟ್ಟಣದ ಸಮಸ್ತ ಯೆಮ್ಮೆಗಳು ಸೂರನ ಮ್ಯಾಲ ಬಿದ್ದು ಸಾಯುತ್ತಿದ್ದವು. ಅವುಗಳ ಮಾಲಿಕರಾದರೂ ಆಟೆಯಾ.. ತಮ್ಮ ತಮ್ಮ ಬೆದೆಗೆ ಬಂದ ಮಣಕ ಯಮ್ಮೆಗಳನ್ನು ಹೊಡಕೊಂಡು ಬಂದು ಸೂರನ ಹಿಂದ ಮುಂದ ಬಿಟ್ಟು ರುಸುಮು ರೂಪದಲ್ಲಿ ವಂದು ಹೊರೆ ಮೇವನ್ನೋ, ಕಲಗಚ್ಚನ್ನೋ, ಹುಣ್ಣೀ ನುಚ್ಚನ್ನೋ ತಂದು ಅದರ ಮುಂದ ಮೇಯಲಕ ಬಿಡುತ್ತಿದ್ದರು. ಅದೊಂದೇ ಅಲ್ಲದೆ ತಮ್ಮ ಹೊಲಗದ್ದೆಗಳಲ್ಲಿ ಅದು ಮೇದರೆ ಹುಲುಸು ಹೆಚ್ಚಾಗತಯ್ಕೆ ಯಂಬ ಕಾರಣಕ್ಕೆ ಅದನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದರು. ಯೇಸು ಮೇದರೂ, ಯೇನು ಮಾಡಿದರೂ ಅದನ್ನು ಗದರಿಸಿ ಗದುಮುವ ಗೋಜಿಗೆ ಯಾರೊಬ್ಬರೂ ಹೋಗುತ್ತಿರಲಿಲ್ಲ.. ಹಿಂಗಾಗಿ ಅದಕ್ಕೆ ಹರೇವು ಬಂದದ್ದಾಗಲೀ, ತಾರುಣ್ಯ ನೂರುಮಡಿಗೊಂಡದ್ದಾಗಲೀ ತಡಾಗಲಿಲ್ಲ.. ಗೂಟ ದಂದಕ್ಕಿಂತ ನಿರುಬ೦ಧಗಳಿಲ್ಲದೆ ಅಂಕೆ ಅಟಾಟೋಪಗಳಿಲ್ಲದೆ, ಕಾಯಿದೆ ಕಾನೂನುಗಳಿಲ್ಲದೆ ಹಾರುತಯ್ದೆಯೇನೋ ಯಂಬಂತೆ ಮೋಡಾಡುತ ಸದರಿ ಪಟ್ಟಣದ ಸಕಲ ಶಾಮಲ ವದ್ದೆಯರಾದ ಮಹಿಷೆಯರೊಂದಿಗೆ ವಡನಾಡುತ, ಗರುಭ ತುಂಬುತ, ಕೆಚ್ಚಲು ಜೀಕುತ, ಹಾಲು ಹಯನಕ್ಕೆ ಬರ ಬಾರದಂಗ ನೋಡಿಕೊಳ್ಳುತ ಅದು ಅಷ್ಟ ದಿಗ್ಗಜಗಳ ಕಣ್ಣು ಕಸುರಾಗುವಂತೆ ಬೆಳೆದು ವಂದು ಹದಕ್ಕೆ ಬಂದಿತ್ತು. ಅಂದ ಮಾತ್ರಕ್ಕೆ ಅದು ಅಜಾತ ಸತ್ರುವಾಗಿತ್ತು ಯಂದು ಭಾವಿಸಬೇಕಾದುದಿಲ್ಲ... ತೂರಿದ್ದಲ್ಲಿ ಹೊಲಗೇರಿ ಹೆಂಗಿರದೋ ಹಂಗೇನೆ ಅದಕ್ಕೆ ಸತ್ರುಗಳಿದ್ದರು. ಅವನ್ಯಾರಪ್ಪಾ ಅಂದರ ಯಮ್ಮೆ ಮಣಕಗಳನ್ನೋಂದಾದರೂ ಕಟ್ಟಿರದೋರು. ಬೆದೆಗೆ ಬಂದಾಗಂತೂ ಅದು ನಮ್ಮ ನಮ್ಮ ಯಂದು ಸುತ್ತಿಪ್ಪತ್ತೂರುಗಳಿಗೆ ಕೇಳಿಸುವಂತೆ<noinclude><references/></noinclude> dkn2s4ubpnt75ajs0jfz73m7vb7mmdl ಪುಟ:ಅರಮನೆ.pdf/೮೦ 104 77165 317097 169875 2026-05-05T02:53:32Z Sharanya K H 7593 /* Proofread */ 317097 proofread-page text/x-wiki <noinclude><pagequality level="3" user="Sharanya K H" /></noinclude>________________ ಅರಮನೆ ೪೬ ಅದಾಳ.. ಆಕೆ ಬಿಡುತಿರೋ ವಂದೊಂದುಸುರು ನನ್ನೆದೆಗೆ ಬಡೀತಯ್ಕೆ.. ಆಕೆ ಮಾಡುತಿರೋ ದುಕ್ಕ ನನ್ನ ಕಿವಿಗೆ ಅಟೇತಯ್ಕೆ.. ಆದರ ಯೇನು ಮಾಡಲಾವ್ವಾ.. ಅದು ಆಕೆಯ ಪೂರುವಾನ್ವಿತ ಕರುಮ ಅಯ್ಕೆ, ಆಕೆಗೆ, ಆಕೆಯಂಥವರಿಗೆ ಪಾಠ ಕಲಸಲಕೆಂದೇ ಆದಿಸಗುತಿಯು ಭೂತಪ್ರೇತಾದಿ ಗಣಗಳೊಂದಿಗೆ ಆಕೆಯ ಗಂಡನಾದ ಮೋಬಯ್ಯನ ಸರೀರದೊಳಗ ವಸ್ತಿ ಮಾಡಿದ್ದಾಳಂತೆ.. ಜಮಾ ಬಂದಿಕಾರೈವ ಸುರುವು ಮಾಡುತಾಳಂತೆ.. ಅಲ್ಲೀತನಕ ಆಕೆ ದುಕ್ಕ ಮಾಡಲಕ ಬೇಕು.. ತಪ್ಪಿದ್ದಲ್ಲ...” ಯಂದು ಯಿವರಿಸಿದನು. ಅದಕಿದ್ದು ಸರಣೆ “ಆದಿಸುಗುತಿ ಅಂದರ ನಿನಗ ಖಾಸಾ ಹೆಂಡತಿ ಆಗಬೇಕಲ್ಲಪ್ಪಾ.. ಖುದ್ದಾಗಿ ನೀನೇ ಆಕೆಗೆ ಬುದ್ದಿ ಹೇಳಬಾರದೇನು?” ಯಂದು ಹೇಳಿದ್ದಕ್ಕೆ ಸಿವನು “ಅದು ಆಗದ ಮಾತವ್ವಾ.. ಆಕೆ ಮಾ ಕೋಪಿಷ« ಅದಾಳ. ಆಕೆ ಯದುರು ನಾನೆಷ್ಟರವನು?” ಯಂದು ತನ್ನ ಅಸಹಾಯಕತೆಯನ್ನು ತೋಡಿಕೊಂಡನು.. “ಸರೆ ಬಿಡಪ್ಪ” ಯಂದಲ್ಲಿಂದ ವಾಪಸಾದ.. - ಚನ್ನವ್ವ ಸಾವುರ ಬಯಲ ಹಾದಿ ಕಲೆಯುವ ಕಡೆ ನಿಂತುಕೊಂಡಳು. ತನ್ನನ್ನು ಹಾಡುಕಟ್ಟಿ ಅಜರಾಮರಗೊಳಿಸಿರುವ, ಹೆಣ್ಣುಮಕ್ಕಳಿಗೆ ಆದರಸಪ್ರಾಯ ಯೆನಿಸಿರುವ ಜಗಲೂರವ್ವಗೆ ತಾನು ಆಸರೆಯಾಗಿ ನಿಲ್ಲಬೇಕು ಯಂದು ನಿರರಿಸಿದಳು. ಭೂಮಾಯಿ ಯಲ್ಲಿದಾಳ ಯಂದು ಹುಡುಕ್ತ ಪ್ರಯಾಣ ಹೊಂಟಳು. ಆಕಾಸ ವಾರಗದಲ್ಲಿ ತಾನು ನಡೆಯುತ್ತಿರಬೇಕಾದರ ಹಾದಿಲೀ ರತುನ ಕೊಳ, ಮುತ್ತಿನ ಕೊಳ ತುಳುಕಿದಂತಾದವು, ಅವನ್ನೆಲ್ಲಾ ತನ್ನ ಮೂನ್ನೂರಾ ಮುವ್ವತ್ತು ಮೂರು ಗಾವುದ ವುದ್ದದ ಕಯ್ಕೆಗಳನ್ನು ಚಾಚಿ ಸರಿಸುತ ಮುಂದ ಮುಂದಕ ನಡೆದಳು. ತನ್ನ ಪಾಡಿಗೆ ತಾನು ಹೋಗುತ್ತಿರಬೇಕಾದರ ತನ್ನ ಹೆಸರಗುಂಟ ಯಾರೋ ಕೂಗಿದಂಗಾತು, ಅದರೊಟ್ಟಿಗೆ ಭೂಮಿಯೋಟ ಗಲದ ಜಾಗಟೆ ಭಾರಿಸಿದಂಗಾತು, ಪಾತಾಳ ಗಾತುರದ ಗಂಟೆ ಬಡದಂಗಾತು, ವಯಕುಂಠ ತೂಕದ ಸಂಖ ವೂದಿದಂಗಾತು. ತಿರುಗಿ ನೋಡಿದಳು, ಯದುರಿಗೆ ಸತಸಹಸ್ರಸ್ಪಟಿಕ ಲಿಂಗಗಳು ಕೋರಯಿಸು ತಿರುವಂಥ ದ್ರುಸ್ಯವು, ವಂದು ನದಿ ಯಿನ್ನೊಂದು ನದಿಯೊಳಗ ಜಳಕ ಮಾಡುತ್ತಿರುವಂಥ ದ್ರುಸ್ಯವು, ಅಷ್ಟಾಶಿತಿ ಸಹಸ್ತರುಷಿಗಳು ಯೇಕಾಗಿ ನಿಂತಿರುವಂಥ ದ್ರುಸ್ಯವು, ನಾಮ ರೂಪ ಕ್ರಿಯಾ ಕಲಾಪಗಳ ಜಾಲ ಪ್ರಭಾವದೊಳಗೆ ನಿಂತಿರುವ ಯಕ್ತಿ ಕಡೇಕ ತಿಳಿಸಿ ನೋಡಿದಳು. ಆಕೆ ಹೆಣ್ಣು ಹೆಂಗಸು ಯಂದು ಖಾತರಿ ಮಾಡಿಕೊಂಡಳು. ಗುರುತು ಸಿಗಲಿಲ್ಲ. ಹುಬ್ಬಿನ ಮ್ಯಾಲ ಕಯ್ಯಚ್ಚಿ ಕಣ್ಣಿಗೆ ಮಬ್ಬು ಕವಿಯುವ<noinclude><references/></noinclude> t2xcipq53jwv4vmaxphgwywimwvizbh 317191 317097 2026-05-05T09:44:59Z Ashwini Rai K 8475 /* Validated */ 317191 proofread-page text/x-wiki <noinclude><pagequality level="4" user="Ashwini Rai K" /></noinclude>________________ {{rh|left=ಅರಮನೆ|center=|right=೪೯}} ಅದಾಳ.. ಆಕೆ ಬಿಡುತಿರೋ ವಂದೊಂದುಸುರು ನನ್ನೆದೆಗೆ ಬಡೀತಯ್ಕೆ.. ಆಕೆ ಮಾಡುತಿರೋ ದುಕ್ಕ ನನ್ನ ಕಿವಿಗೆ ಅಟೇತಯ್ಕೆ.. ಆದರ ಯೇನು ಮಾಡಲಾವ್ವಾ.. ಅದು ಆಕೆಯ ಪೂರುವಾನ್ವಿತ ಕರುಮ ಅಯ್ಕೆ, ಆಕೆಗೆ, ಆಕೆಯಂಥವರಿಗೆ ಪಾಠ ಕಲಸಲಕೆಂದೇ ಆದಿಸಗುತಿಯು ಭೂತಪ್ರೇತಾದಿ ಗಣಗಳೊಂದಿಗೆ ಆಕೆಯ ಗಂಡನಾದ ಮೋಬಯ್ಯನ ಸರೀರದೊಳಗ ವಸ್ತಿ ಮಾಡಿದ್ದಾಳಂತೆ.. ಜಮಾ ಬಂದಿಕಾರೈವ ಸುರುವು ಮಾಡುತಾಳಂತೆ.. ಅಲ್ಲೀತನಕ ಆಕೆ ದುಕ್ಕ ಮಾಡಲಕ ಬೇಕು.. ತಪ್ಪಿದ್ದಲ್ಲ...” ಯಂದು ಯಿವರಿಸಿದನು. ಅದಕಿದ್ದು ಸರಣೆ “ಆದಿಸುಗುತಿ ಅಂದರ ನಿನಗ ಖಾಸಾ ಹೆಂಡತಿ ಆಗಬೇಕಲ್ಲಪ್ಪಾ.. ಖುದ್ದಾಗಿ ನೀನೇ ಆಕೆಗೆ ಬುದ್ದಿ ಹೇಳಬಾರದೇನು?” ಯಂದು ಹೇಳಿದ್ದಕ್ಕೆ ಸಿವನು “ಅದು ಆಗದ ಮಾತವ್ವಾ.. ಆಕೆ ಮಾ ಕೋಪಿಷ« ಅದಾಳ. ಆಕೆ ಯದುರು ನಾನೆಷ್ಟರವನು?” ಯಂದು ತನ್ನ ಅಸಹಾಯಕತೆಯನ್ನು ತೋಡಿಕೊಂಡನು.. “ಸರೆ ಬಿಡಪ್ಪ” ಯಂದಲ್ಲಿಂದ ವಾಪಸಾದ.. - ಚನ್ನವ್ವ ಸಾವುರ ಬಯಲ ಹಾದಿ ಕಲೆಯುವ ಕಡೆ ನಿಂತುಕೊಂಡಳು. ತನ್ನನ್ನು ಹಾಡುಕಟ್ಟಿ ಅಜರಾಮರಗೊಳಿಸಿರುವ, ಹೆಣ್ಣುಮಕ್ಕಳಿಗೆ ಆದರಸಪ್ರಾಯ ಯೆನಿಸಿರುವ ಜಗಲೂರವ್ವಗೆ ತಾನು ಆಸರೆಯಾಗಿ ನಿಲ್ಲಬೇಕು ಯಂದು ನಿರರಿಸಿದಳು. ಭೂಮಾಯಿ ಯಲ್ಲಿದಾಳ ಯಂದು ಹುಡುಕ್ತ ಪ್ರಯಾಣ ಹೊಂಟಳು. ಆಕಾಸ ವಾರಗದಲ್ಲಿ ತಾನು ನಡೆಯುತ್ತಿರಬೇಕಾದರ ಹಾದಿಲೀ ರತುನ ಕೊಳ, ಮುತ್ತಿನ ಕೊಳ ತುಳುಕಿದಂತಾದವು, ಅವನ್ನೆಲ್ಲಾ ತನ್ನ ಮೂನ್ನೂರಾ ಮುವ್ವತ್ತು ಮೂರು ಗಾವುದ ವುದ್ದದ ಕಯ್ಕೆಗಳನ್ನು ಚಾಚಿ ಸರಿಸುತ ಮುಂದ ಮುಂದಕ ನಡೆದಳು. ತನ್ನ ಪಾಡಿಗೆ ತಾನು ಹೋಗುತ್ತಿರಬೇಕಾದರ ತನ್ನ ಹೆಸರಗುಂಟ ಯಾರೋ ಕೂಗಿದಂಗಾತು, ಅದರೊಟ್ಟಿಗೆ ಭೂಮಿಯೋಟ ಗಲದ ಜಾಗಟೆ ಭಾರಿಸಿದಂಗಾತು, ಪಾತಾಳ ಗಾತುರದ ಗಂಟೆ ಬಡದಂಗಾತು, ವಯಕುಂಠ ತೂಕದ ಸಂಖ ವೂದಿದಂಗಾತು. ತಿರುಗಿ ನೋಡಿದಳು, ಯದುರಿಗೆ ಸತಸಹಸ್ರಸ್ಪಟಿಕ ಲಿಂಗಗಳು ಕೋರಯಿಸು ತಿರುವಂಥ ದ್ರುಸ್ಯವು, ವಂದು ನದಿ ಯಿನ್ನೊಂದು ನದಿಯೊಳಗ ಜಳಕ ಮಾಡುತ್ತಿರುವಂಥ ದ್ರುಸ್ಯವು, ಅಷ್ಟಾಶಿತಿ ಸಹಸ್ತರುಷಿಗಳು ಯೇಕಾಗಿ ನಿಂತಿರುವಂಥ ದ್ರುಸ್ಯವು, ನಾಮ ರೂಪ ಕ್ರಿಯಾ ಕಲಾಪಗಳ ಜಾಲ ಪ್ರಭಾವದೊಳಗೆ ನಿಂತಿರುವ ಯಕ್ತಿ ಕಡೇಕ ತಿಳಿಸಿ ನೋಡಿದಳು. ಆಕೆ ಹೆಣ್ಣು ಹೆಂಗಸು ಯಂದು ಖಾತರಿ ಮಾಡಿಕೊಂಡಳು. ಗುರುತು ಸಿಗಲಿಲ್ಲ. ಹುಬ್ಬಿನ ಮ್ಯಾಲ ಕಯ್ಯಚ್ಚಿ ಕಣ್ಣಿಗೆ ಮಬ್ಬು ಕವಿಯುವ<noinclude><references/></noinclude> mj8efd3n7wtewpj4cg6kx0ma1pgii8r ಪುಟ:ಯಕ್ಷಗಾನ ಮಕರಂದ.pdf/೧೯೧ 104 100111 317072 316887 2026-05-04T17:08:23Z Ashwini Rai K 8475 /* Validated */ 317072 proofread-page text/x-wiki <noinclude><pagequality level="4" user="Ashwini Rai K" /></noinclude>{{Right|'''165'''}} {{gap}}ದಿ| ಶಾಸ್ತ್ರಿಗಳವರ ವಾಲಿವಧೆಯ ವಾಲಿಯ ಪಾತ್ರ ಅನುಪಮ ಹಾಗೂ ಅಮರ. ಶ್ರೀರಾಮನಿಗೂ ವಾಲಿಗೂ ವಾದರೂಪವಾದ ಸಂಭಾಷಣೆ 'ವಾದೇ ವಾದೇ ಜಾಯತೇ ತತ್ವಬೋಧಃ' ಎಂಬುದನ್ನು ಸರಿಯಾಗಿ ಮನಗಾಣಿಸುತ್ತಿತ್ತು. ಪ್ರತಿವಾದ ಎಲ್ಲಿಯೂ ಹಾದಿ ತಪ್ಪಿ ಹೋಗುತ್ತಿರಲಿಲ್ಲ. ಇದಿರಾಳಿಯ ಬಾಯಿ ಮುಚ್ಚಿಸುವ ಕುಹಕತನ ದಿ| ಶಾಸ್ತ್ರಿಗಳಿಂದ ಅತಿ ದೂರವಾದುದು. ಕೊನೆಗೆ ಪಶ್ಚಾ ತಾಪ ಪರಿಪೂತನಾದ ವಾಲಿ ಇದು ಮಹೀಮಂಡಲದ ಭಾರವನೊದೆಯಲಾದ ವಿಲಾಸ' ಎಂದು ಶ್ರೀರಾಮನಿಗೆ ಕೈಮುಗಿಯುವ ದೃಶ್ಯ ಅಪೂರ್ವವಾದುದು, ದಿ| ಶಾಸ್ತ್ರಿಗಳು ಯೌವನ ದಾಟಿದಾಗ ಹೇಳುತ್ತಿದ್ದರು: ಪಟ್ಟಾಭಿಷೇಕದ ದಶರಥ, ವಾಲಿವಧೆಯ ವಾಲಿ, ಈ ಪಾತ್ರಗಳನ್ನು ಮೊದಲಿಗಿಂತ ಈಗ ತೃಪ್ತಿಕರವಾಗಿ ನಿರ್ವ ಹಿಸಬಲ್ಲೆ' ಎಂದು. ಇದು, ಪಾತ್ರೋಚಿತ ರಸಕ್ಕೆ ತಕ್ಕ ವಯಸೂ ಪೋಷಕವೆಂಬ ಅವರ ರಸಾಭಿಜ್ಞತೆಗೆ ಸಾಕ್ಷಿಯಾಗಿದೆ. {{gap}}ಪೊಳಲಿ ಶಾಸ್ತ್ರಿಗಳವರು ವೀರ, ಕರುಣ, ರೌದ್ರರಸದ ಪಾತ್ರಗಳನ್ನು ಯಶ ಸ್ವಿಯಾಗಿ ನಿರ್ವಹಿಸುತ್ತಿದ್ದಂತೆ ಹಾಸ್ಯರಸ ಪೂರ್ಣ ಪಾತ್ರಗಳನ್ನೂ ಜೀವಂತವಾಗಿ ನಿರ್ವಹಿಸುತ್ತಿದ್ದರು. ಅವರ ಹಾಸ್ಯ ಮೇರಗತಿಯದು. 'ಶರಸೇತು ಭಂಗ'ದ ವೃದ್ಧ ಬ್ರಾಹ್ಮಣನ ಪಾತ್ರವನ್ನು ವಹಿಸಿ ಅರ್ಥವಿಸುತ್ತಿರುವಾಗ ಆ ವೃದ್ಯೋಚಿತ ವಾದ ನಡುಗುವ ಸ್ವರ, ತರ್ಕಸರಣಿಯ ಚಮತ್ಕಾರದ ವೃದ್ಧೋಚಿತವಾದ ಮಾತು ಗಳು ಹಾಸ್ಯರಸಾಭಿವ್ಯಕ್ತಿಗೆ ಉತ್ತಮ ಉದಾಹರಣೆಯಾಗಬಲ್ಲುದು. {{gap}}ಶಾಸ್ತ್ರಿಗಳು ಎಳೆಕರುಗಳನ್ನು ಮುರಿದು ತಿನ್ನುವ ಹುಲಿಯಾಗಿರದೆ ಹಾಲಿತ್ತು ಪೋಷಿಸುವ ಕಾಮಧೇನುವಾಗಿದ್ದರು. ಹೊಸಬರಾದರೆ ಪಾತ್ರದ ಪರಿಚಯ ಹೇಳಿ ಕೊಟ್ಟು ದಾರಿ ತಪ್ಪಿಹೋದಾಗ ಸರಿದಾರಿಗೆಳೆದು ಮುನ್ನಡೆಸುವ ದೊಡ್ಡತನ ಅವರ ಲ್ಲಿತ್ತು. ನನಗೆ ದಿ | ಶಾಸ್ತ್ರಿಗಳಿದ್ದ ಕೂಟದಲ್ಲಿ ಒಂದೆರಡು ಕಡೆ ಅರ್ಥ ಹೇಳಬೇಕಾಗಿ ಬಂತು. ಅವರ ಎದುರು ಅರ್ಥ ಹೇಳಲು ಹೆದರಿ ಹಿಂಜರಿದಾಗ ಅವರೇ ನನಗೆ ಪಾತ್ರ ಪರಿಚಯ ಮಾಡಿಕೊಟ್ಟು ನನ್ನಿಂದ ಅರ್ಥ ಹೇಳಿಸಿ ಪ್ರೋತ್ಸಾಹಿಸಿದುದನ್ನು ಈಗಲೂ ಮರೆಯುವಂತಿಲ್ಲ. {{gap}}ತಾಳಮದ್ದಳೆ ಕೂಟದಲ್ಲಿ ಅರ್ಥಗಾರನಾಗಿ ಹೇಗೆ ಹೆಸರು ಪಡೆದಿದ್ದರೆ ಹಾಗೆ ಪುರಾಣ ಪ್ರವಚನದಲ್ಲಿಯ ಪೊಳಲಿ ಶಾಸ್ತ್ರಿಗಳು ಎತ್ತಿದ ಕೈಯವರು. ಅವರ ಪ್ರವಚನವು ಯೆಯ್ಯಾಡಿಪದವು ಇತ್ಯಾದಿ ಕೆಲವೆಡೆ ಬಿಡದೆ ನಡೆಯುತ್ತಿತ್ತು. ಸಂಸ್ಕೃತ ದಲ್ಲಿ ಆಳವಾದ ಪಾಂಡಿತ್ಯವುಳ್ಳ ಶಾಸ್ತ್ರಿಗಳವರು ವ್ಯಾಸ ಭಾರತ, ವಾಲ್ಮೀಕಿ ರಾಮಾ ಯಣ, ಶುಕಭಾಗವತ ಇವುಗಳನ್ನು ಆಮೂಲಾಗ್ರ ಅಧ್ಯಯನ ಮಾಡಿ ಅರಗಿಸಿ ಕೊಂಡವರಾದ ಕಾರಣ ಕನ್ನಡದಲ್ಲಿ ಗದುಗು ಭಾರತ, ತೊರವೆ ರಾಮಾಯಣ, ಜೈಮಿನಿ ಭಾರತ ಇತ್ಯಾದಿಗಳ ವಾಚನಕ್ಕೆ ತನ್ನ ಸಂಸ್ಕೃತ ಪುರಾಣಾನುಭವವನ್ನು<noinclude></noinclude> 7rttq2qeslcmafkzbkndpu77tsz5l3c ಪುಟ:ಯಕ್ಷಗಾನ ಮಕರಂದ.pdf/೧೯೨ 104 100112 317073 301194 2026-05-04T17:08:40Z Ashwini Rai K 8475 /* Validated */ 317073 proofread-page text/x-wiki <noinclude><pagequality level="4" user="Ashwini Rai K" /></noinclude>{{Left|'''166'''}} ಬೆರೆಸಿ ಸರಸವಾಗಿ ಅರ್ಥ ವಿವರಣೆ ಮಾಡುತ್ತಿದ್ದರು. ಆಯಾ ಪದ್ಯಗಳಿಗೆ ಅವುಗಳ ರಸಭಾವಗಳಿಗೆ ತಕ್ಕಂತೆ ಮಾತಿನ ಏರಿಳಿತ, ಭಾವಾಭಿವ್ಯಕ್ತಿ, ಸರಳ ವಾಕ್‌ಸರಣಿ ಇವು ಗಳಿಂದ ಅರ್ಥ ವಿವರಿಸುವಾಗ ಶೋತೃಗಳು ಮಂತ್ರಮುಗ್ಧರಾಗುತ್ತಿದ್ದರು. ಒಮ್ಮೆ ಶಾಸ್ತ್ರಿಗಳವರಿಗೆ ಗದುಗು ಭಾರತದ 'ದೌಪದಿ ಸ್ವಯಂವರ' ಭಾಗದ ವಾಚನ ಮಾಡಬೇಕಾದ ಸಂದರ್ಭ ನನಗೊದಗಿತ್ತು. ಅವರ ಅಂದಿನ ಅರ್ಥ ವಿವರಣೆ ಈಗಲೂ ನನ್ನ ನೆನಪಿನಲ್ಲಿದೆ. ಸ್ವಯಂವರ ಮಂಟಪದ ಬಳಿ ಭೂಸುರವೇಷಧಾರಿ ಯಾಗಿ ಕುಳಿತಿದ್ದ ಅರ್ಜುನನು “ನೋಡಿ ಮೆಲ್ಲನೆ ಧೋತ್ರದರ್ಭೆಯ ಗೂಡ ಸಂವರಿ ಸುತ್ತ ಸಭೆಯಿಂದೆದ್ದನು”, ಆಗ ನೆರೆದ ವಿಪ್ರಸಮೂಹ “ಏನು ಸಿದ್ಧಿಯುಪಾಧ್ಯರೆಡ್ಡಿ ರಿದೇನು ಧನುವಿಂಗಲ್ಲಲೇ” ಎನ್ನುವುದಲ್ಲದೆ “ಪುಲ್ಲಿಗೆಯ ತತ್ಸವಿಯ ಮಂಡಿಗೆಯಲ್ಲಿ ನವದ್ಭತ ಸೂಪದಂಶಕದಲ್ಲಿ ನೋಡಲಿ ನಮ್ಮನೆಂದುದು ಧೂರ್ತವಟುನಿಕರ” ಈ ಪದ್ಯಗಳ ಅರ್ಥವಿವರಣೆಯನ್ನು ಶಾಸ್ತ್ರಿಗಳವರ ಹಾಸ್ಯಗರ್ಭಿತವಾದ ಮಾತಿನಿಂದಲೇ ಕೇಳಬೇಕು. ಕೇಳಿದವರು ರಸಾಸ್ವಾದದಿಂದ ತಲೆತೂಗುತ್ತಿದ್ದರು. ಹೀಗೆಯೇ ವಿರಾಟಪರ್ವದ ಉತ್ತರನ ಪೌರುಷ' ಭಾಗದ ವಾಚನಕ್ಕೆ ಶಾಸ್ತ್ರಿ ಗಳು ಅರ್ಥವಿವರಣೆ ಮಾಡುವುದನ್ನು ಕೇಳಿದ್ದೆ. ಆರೊಡನೆ ಕಾದುವೆನು ಕೆಲಬರು ಹಾರುವರು, ಕೆಲರಂತಕನ ನೆರೆಯರವರು' ಇತ್ಯಾದಿ ಉತ್ತರನ ಪೌರುಷದ ಮಾತು ಗಳನ್ನು ದಿ| ಶಾಸ್ತ್ರಿಗಳು ರಸೋಚಿತವಾಗಿ ವಿವರಿಸಿದ್ದರು. “ಹಸಿದ ಮಾರಿಯ ಮಂದೆಯಲಿ ಕುರಿ ನುಸುಳಿದಂತಾದೆನು ಬೃಹನ್ನಳೆ, ಎಸಗದಿರು ತೇಜಿಗಳ ಚಮ್ಮಟಿ ಗೆಯನು ಬಿಸುಡು; ಮಿಸುಕಬಾರದು ಪ್ರಳಯಕಾಲನ ಮುಸುಕನಂಗಿವವನಾರು ಕೌರವನಸಮ ಬಲ ರಥವ ಮರಳಿಚು ಚಾಳಿಸುವೆನೆಂದ-ಈ ಪದ್ಯಕ್ಕೆ ಅರ್ಥ ವಿವರಣೆ ಮಾಡುವಾಗ ಉತ್ತರ ಕುಮಾರನ ಹೇಡಿತನದ ಚಿತ್ರವನ್ನು ತನ್ನ ಹಾಸ್ಯ ವೈಖರಿಯಿಂದ ಶೋತೃಗಳ ಕಣ್ಣ ಮುಂದೆ ಕಾಣುವಂತೆ ಸೃಷ್ಟಿಸುವ ಶಕ್ತಿ ಅವರಿಗೆ ಮಾತ್ರ ಮೀಸಲಾದುದು. ಹೀಗೆ ತಾಳಮದ್ದಳೆ ಕೂಟ-ಪುರಾಣ ವಾಚನ ಇವೆರಡ ರಲ್ಲಿಯ ರಸಲೋಕವನ್ನೇ ಸೃಷ್ಟಿಸಿ ಮೆರೆಸಿದವರು ದಿ| ಪೊಳಲಿ ಶಾಸ್ತ್ರಿಗಳವರು. ಅವರ ಆದರ್ಶ ಇಂದಿನ ಪೀಳಿಗೆಯವರಿಗೆ ಅನುಸರಣೀಯವಾಗಿದೆ. {{center|—————}}<noinclude></noinclude> dk237ipt51cjdpg0h2sju0lg8olf6le ಪುಟ:ಯಕ್ಷಗಾನ ಮಕರಂದ.pdf/೧೯೩ 104 100113 317074 301198 2026-05-04T17:09:08Z Ashwini Rai K 8475 /* Validated */ 317074 proofread-page text/x-wiki <noinclude><pagequality level="4" user="Ashwini Rai K" /></noinclude>{{Left|'''ಶಾಸ್ತ್ರಿಗಳ ಜರಾಸಂಧ'''}} ——————————————————————————————————— {{Right|'''-ಸೇವ ನಮಿರಾಜ ಮಲ್ಲ.'''}} ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳ ಹೆಸರು ನನಗೆ ಹಿಂದೆಯೇ ಗೊತ್ತಿತ್ತು. ಆದರೆ ಅವರ ಪರಿಚಯ ಒಂದು ತಾಳಮದ್ದಳೆಯ ಸಂದರ್ಭದಲ್ಲಿಯೇ ಆದುದು ಸುದೈವವೆನ್ನಬೇಕು. ಏಕೆಂದರೆ, “ಕೇಳಿದರೆ ಶಾಸ್ತ್ರಿಗಳ ಅರ್ಥ ಕೇಳಬೇಕು' ಎಂದು ಅನೇಕರು ಹೇಳುವುದನ್ನು ಕೇಳಿ ಕೇಳಿ ನನಗೆ ಸಾಕಾಗಿ ಹೋಗಿತ್ತು. ನಾನಾಗ ಮಂಗಳೂರಲ್ಲಿ ಎಳೆಯ ವಕೀಲ. ವಕಾಲತ್ತು ನಡೆಯುತಿದ್ದುದು ಅಷ್ಟಕ್ಕಷ್ಟೇ. ಆದರೆ ನಾಲ್ಕು ಬರಹಗಳನ್ನು ಪ್ರಕಟಿಸುವ ಸಾಹಸ ಮಾಡಿದ್ದರಿಂದ ಕೆಲವು ಜನರಿಗೆ, ಇವನು ಬರೆಯುವವನಾದ್ದರಿಂದ ಭಾಷಣವನ್ನು ಕೊಡಬಲ್ಲವನು ಎಂಬ ತಪ್ಪು ಅಭಿಪ್ರಾಯವಿತ್ತು. ಕೆಲವು ಮಂದಿ ನನ್ನನ್ನು ಆಗ ಸಾಹಿತಿ ಎಂದು ಅಣಕಕ್ಕಾಗಿಯೋ ಅಥವಾ ಭೂಷಣಕ್ಕಾಗಿಯೇ ಕರೆಯುತ್ತಲೂ ಇದ್ದರು. ಅಲ್ಲಿ ಅಧ್ಯಕ್ಷನಾದ, ಇಲ್ಲಿ ಭಾಷಣ ಕೊಟ್ಟ, ಇತ್ಯಾದಿ ಸುದ್ದಿಗಳನ್ನು ಪತ್ರಿಕೆಗಳು ಪ್ರಕಟಿಸಿ ನನ್ನನ್ನು ಒಬ್ಬ ಆಪದ್ಭಾಂಧವ ಅಧ್ಯಕ್ಷನನ್ನಾಗಿಯೇ ಭಾಷಣಗಾರನನ್ನಾಗಿಯೋ ಮಾಡಿದ್ದುವು ಸಭಾಪರ್ವದ ಈ ಯುಗದಲ್ಲಿ ಅಧ್ಯಕ್ಷ, ಮುಖ್ಯ ಅತಿಥಿ ಮುಂತಾದ ಪಾತ್ರಧಾರಿಗಳಿರುವುದು ಸಾಮಾನ್ಯವಷ್ಟೆ ? ಒಂದು ದಿನ ಉಳ್ಳಾಲದ ಬಳಿಯ ಹಳ್ಳಿಯೊಂದರಿಂದ ಕೆಲವು ಯುವಕ ಮಹ ನೀಯರು ನನ್ನನ್ನು ಸಂಧಿಸಿ ಮರುದಿನವೇ ಜರಗಬೇಕಾದ ತಮ್ಮ ಸಮಾರಂಭಕ್ಕೆ ಅಧ್ಯಕ್ಷನಾಗಬೇಕೆಂದು ಒತ್ತಾಯಪಡಿಸಿದರು. ನಾನು ಕೂಡ ಆಗ ಇಂತಹ ಆಮಂತ್ರ ಣಗಳಿಗೆ “ಊಹುಂ' ಎಂದು ನಿರಾಕರಿಸುವ ಪದ್ಧತಿಯನ್ನೇ ಕೈಬಿಟ್ಟಿದ್ದೆ. ನಾನು ಊರಲ್ಲಿ ಇಲ್ಲ ಎಂದಿತ್ಯಾದಿಯಾಗಿ ಕಾಲ್ಪನಿಕ ನೆವನಗಳನ್ನು ಮುಂದೊಡ್ಡುವ ಪರಿಪಾಠ ನನ್ನದಲ್ಲ. ಅದರ ಬದಲು ನನಗೆ ಆಯಾಸವಾಗಿದೆ, ಅಥವಾ ಬೇರೆ ಕೆಲಸ ಇದೆ, ಎಂದರೆ ಹೀಗೆ ಆಮಂತ್ರಿಸುವವರ ಒತ್ತಾಯ ಹಲವು ಬಾರಿ ಹೆಚ್ಚುವದೆಂಬುದು ನನ್ನ ಅನುಭವವಾಗಿತ್ತು. ಆದ್ದರಿಂದ ಯಾವ ಊರಲ್ಲಿ ಇದ್ದರೂ, ಅದು ಯಾವ ವಿಷಯದ ಸಭೆಯಾಗಿದ್ದರೂ ನನಗೆ ಸಿಕ್ಕಿದ ಆಮಂತ್ರಣವನ್ನು ಮರುಮಾತಿಲ್ಲದೆ ಸ್ವೀಕರಿಸುವದೇ ಒಳ್ಳೆಯ ಮಾರ್ಗವೆಂದು ನನಗೆ ಆ ವೇಳೆಗೆ ಅನುಭವವಾಗಿತ್ತು.<noinclude></noinclude> gtpzasgjtew2pg6d5lypfm20p525ypo ಪುಟ:ಯಕ್ಷಗಾನ ಮಕರಂದ.pdf/೧೯೪ 104 100114 317115 316913 2026-05-05T05:49:31Z Ashwini Rai K 8475 /* Validated */ 317115 proofread-page text/x-wiki <noinclude><pagequality level="4" user="Ashwini Rai K" /></noinclude>{{Left|'''168'''}} {{gap}}ಆದ್ದರಿಂದ ಉಳ್ಳಾಲದ ಬಳಿಯ ಹಳ್ಳಿಯಲ್ಲಿಯ ಸಭೆ ಎಂದೊಡನೆ ನಾನು ಅಧ್ಯಕ್ಷನಾಗಲು ಒಪ್ಪಿಗೆ ಕೊಟ್ಟೇಬಿಟ್ಟೆ. ಆಗ ಉಳ್ಳಾಲದಲ್ಲಿ ನೇತ್ರಾವತಿ ನದಿಗೆ ಸೇತುವೆ ಇರಲಿಲ್ಲ. ಆದರೆ ನನ್ನನ್ನು ಕರೆದ ವ್ಯಕ್ತಿ ಸೇತುಬಂಧನ ಮಾಡಬಲ್ಲವನಲ್ಲ ದಿದ್ದರೂ ನದಿಯನ್ನು ಒಮ್ಮೆ ದಾಟಿಸಿ ಹಿಂದೆ ಕಳಿಸುವವ ಎಂದು ನನಗೆ ಗೊತ್ತಿತ್ತು. {{gap}}ಹಾಗೆ ಮರುದಿನ ನಾನು ಉಳ್ಳಾಲದಿಂದ ಸ್ವಲ್ಪ ದೂರ ಹಳ್ಳಿ ದಾರಿಯನ್ನು ನಡೆದು, ಕೆಲವು ಕಾಲುವೆಗಳನ್ನು ಹಾರಿ, ಕೆಲವು ಕಲ್ಲುಗಳ ಮೇಲೆ ನೆಗೆದು, ಅಂತೂ ನಾನು ನಮ್ಮ ಮಂಗಳೂರು ಬಳಗದೊಡನೆ ಸಭಾ ಚಪ್ಪರವನ್ನು ತಲುಪಿಯಾಯಿತು. ಅಧ್ಯಕ್ಷರಿಗಾಗಿ ಒಂದು ಮೇಜು, ಅದರ ಮೇಲೆ ಒಂದು ಪೆಟ್ರೋಮೆಕ್ಸ್ ದೀಪ. ಅಂದಿನ ಸಭೆಯ ಕಾರ್ಯಕ್ರಮ ತಾಳಮದ್ದಳೆ ಎಂದು ತಿಳಿದೊಡನೆ ನನ್ನ ತಲೆಯ ಮೇಲಿದ್ದ ಭಾರ ಹೆಗಲಿಗೆ ಇಳಿಯಿತು. ಏಕೆಂದರೆ ತಾಳಮದ್ದಳೆಯಲ್ಲಿ ಅಧ್ಯಕ್ಷರಿಗೆ ಮಾತಾಡಲು ಎಡೆಯಿದ್ದದ್ದು ತಾಳಮದ್ದಳೆ ಮುಗಿದ ಮೇಲೆ, ಆದರೆ ಹೆಚ್ಚಿನ ತಾಳಮದ್ದಳೆ ಕೂಟಗಳಿಗೆ ಆದಿ ಇದೆಯೇ ಹೊರತು ಅಂತ್ಯವಿಲ್ಲ ಎಂದು ನಾನು ಆಗಲೇ ತಿಳಿದಿದ್ದೆ. ಆದಕಾರಣ ಅಧ್ಯಕ್ಷನ ಕೆಲಸ ಬಲು ಸುಲಭ. {{gap}}ಸ್ವಾಗತ ಭಾಷಣವೋ ಪರಿಚಯ ಭಾಷಣವೋ ಆಗುವಾಗಲೇ ಅಂದು ಜರಾ ಸಂಧ ವಧೆ' ಪ್ರಸಂಗದ ತಾಳಮದ್ದಳೆಯೆಂದು ತಿಳಿಯಿತು. ಜರಾಸಂಧ ಶ್ರೀ ಪೊಳಲಿ ಶಾಸ್ತ್ರಿಗಳು ಎಂದೊಡನೆ ಒಮ್ಮೆಲೇ ಕಿಟಕೀಳುವ ಚಪ್ಪಾಳೆ ಬಿತ್ತು. ಜರಾಸಂಧನ ಎದುರು ನಿಲ್ಲುವ ಕೃಷ್ಣನ ಪಾತ್ರಧಾರಿ ಮುಳಿಯ ಮಹಾಬಲ ಭಟ್ಟರು. ಇವರು ನನ್ನ ಹಳೆಯ ಗೆಳೆಯನಲ್ಲದೆ, ನನ್ನ ಪೂಜ್ಯ ಗುರು ಮುಳಿಯ ತಿಮ್ಮಪ್ಪಯ್ಯನವರ ಮಗ, ಮದರಾಸಿನಲ್ಲಿ ಇದ್ದ ಉದ್ಯೋಗವನ್ನು ತ್ಯಜಿಸಿ ಆಗ ತಾನೇ ಮಂಗಳೂರಲ್ಲಿ ವಕೀಲವೃತ್ತಿ ಆರಂಭಿಸಿದವರು. ತಾಳಮದ್ದಳೆಯ ಕೂಟದವರು ಒಡನೆಯೇ ಶ್ರೀ ಭಟ್ಟರ ಮೇಲೆ ಎರಗಿ ಜನಪ್ರಿಯ ಅರ್ಥಧಾರಿಯನ್ನಾಗಿ ಮಾಡಿದ್ದರು. {{gap}}ಇತರ ಹೆಚ್ಚಿನ ವಿವರಗಳು ನನಗೆ ನೆನಪಿಲ್ಲ. ತೆಕ್ಕುಂಜೆ ಗೋಪಾಲಕೃಷ್ಣ ಭಟ್ಟರು ಅರ್ಜುನನ ಪಾತ್ರ ವಹಿಸಿದ್ದರೆಂದು ನೆನಪು. ಆದರೆ ತಾಳಮದ್ದಳೆಯ ಆ ಕಥಾಭಾಗದಲ್ಲಿ ಕೃಷ್ಣ ಮತ್ತು ಜರಾಸಂಧರೊಳಗಿನ 'ಜಟಾಪಟಿ'ಗೆ ಪ್ರಾಧಾನ್ಯ. ಇದೇ ಕಥೆಯ ಕೊನೆಯ ಭಾಗ, ಸುಮಾರು ಏಳೂವರೆ ಗಂಟೆಗೆ ಆರಂಭವಾದ ಈ ತಾಳಮದ್ದಳೆ ಸುಮಾರು ಹನ್ನೊಂದರ ತನಕ ನಿರಾತಂಕವಾಗಿ ನಡೆಯಿತು. {{gap}}ಆಗಲೇ ಜರಾಸಂಧನಿಗೂ ಕೃಷ್ಣನಿಗೂ ವಾಗ್ಯುದ್ಧ ಆರಂಭವಾದುದು. ಇಬ್ಬರೂ ತಮ್ಮ ತಮ್ಮ ಕುಲಗೋತ್ರಗಳನ್ನು ಹೊಗಳಿಯಾಯಿತು. ಆ ಮೇಲೆ ಪರಸ್ಪರ ಕುಲಗೋತ್ರಗಳಿಂದ ಹಿಡಿದು ಮುಂದಿನ ತನಕವೂ ದೂಷಣೆ ಅವಹೇಳನ ಗಳನ್ನು ಅದಲು ಬದಲು ಮಾಡಿದುದಾಯಿತು. ಅರ್ಥಧಾರಿಗಳ ಪರಸ್ಪರ ಕೌಶಲ್ಯ ಪ್ರದರ್ಶನ ಮತ್ತು ಅವರ ಪಾಂಡಿತ್ಯ ಪ್ರದರ್ಶನಗಳಿಗೆ ಇದೊಂದು ಸದವಕಾಶ<noinclude></noinclude> i21thi8ury2jvmlqjv2rp2wrprxcc48 ಪುಟ:ಯಕ್ಷಗಾನ ಮಕರಂದ.pdf/೧೯೫ 104 100115 317152 303528 2026-05-05T09:02:45Z Ashwini Rai K 8475 /* Validated */ 317152 proofread-page text/x-wiki <noinclude><pagequality level="4" user="Ashwini Rai K" /></noinclude>{{Right|'''169'''}} ವನ್ನೊದಗಿಸಿತ್ತು. ಪಂಡಿತರಲ್ಲದವರ ಕೈಯ್ಯಲ್ಲಿ ಈ ಎರಡು ಪಾತ್ರಗಳ ರೂಪುಗಳೂ ಅತ್ಯಂತ ಕೀಳು ಮಟ್ಟಕ್ಕೆ ಇಳಿಯುವ ಸಾಧ್ಯತೆಯಿತ್ತು. ಇನ್ನೂ ತನ್ನ ಮಾತೇ ಮೇಲಾಗಬೇಕೆಂದು ಹಟಹಿಡಿಯುವ ಅರ್ಥಧಾರಿಗಳ ಕೈಯ್ಯಲ್ಲಿ ಅರ್ಥಕ್ಕಿಂತಲೂ ಅನರ್ಥಕ್ಕೆ ಹೆಚ್ಚು ಅವಕಾಶ ಕೊಡಬಹುದಿತ್ತು. {{gap}}ಆದರೆ ಈ ಇಬ್ಬರು ಪಾಂಡಿತ್ಯಪೂರ್ಣ ಕಲಾವಿದರಿಂದಲೂ ಭಾಗವತದ ಕಥೆ, ಅದರ ವಿಚಾರಪ್ರದ ಅಂಶಗಳಲ್ಲಿರುವ ರಸ ಮತ್ತು ಭಾವ ಹೊರ ಸೂಸುತ್ತಿದ್ದು ವು. ಶಾಸ್ತ್ರಾದಿಗಳ ಪಾಂಡಿತ್ಯ ಮತ್ತು ಭಾಷಾಪ್ರಭುತ್ವಗಳಲ್ಲಿ ಮಹಾಬಲ ಭಟ್ಟರು ಮೇಲೋ, ಶಾಸ್ತ್ರಿಗಳು ಮೇಲೋ ಎಂದು ಹೇಳಬರುವಂತಿದ್ದಿಲ್ಲ. ಶೋತೃ ವೃಂದ ನಿಶ್ಯಬ್ದವಾಗಿ ಇವರಿಬ್ಬರ ಮಾತುಗಳನ್ನು ಆಲಿಸುತ್ತಿತ್ತು. ಅವುಗಳಿಂದ ಕೆಲ ವೊಮ್ಮೆ ಹೊರಹೊಮ್ಮುತ್ತಿದ್ದ ರಸಾವೇಶದಿಂದ ಪುಳಕಿತರಾದವರು “ಷಹಬಾಸ್' ಎನ್ನುತ್ತ ಚಪ್ಪಾಳೆ ಹೊಡೆಯುತ್ತಿದ್ದರು. {{gap}}ಒಮ್ಮೆ ಮಹಾಬಲ ಭಟ್ಟರೆಂದರು, “ಎಲವೋ, ನೀನು ಹಿಂದಿನ ನಿನ್ನ ಪೌರುಷ ಕೊಚ್ಚುತ್ತಿರುವೆ. ಈಗ ನೀನು ಹಲ್ಲು ಮುರಿದ ಸಿಂಹ.” ಶಾಸ್ತ್ರಿಗಳು ಒಮ್ಮೆಲೇ ಅವಾಕ್ಕಾದರು. {{gap}}“ನನ್ನ ಪರಾಕ್ರಮ ಹಲ್ಲನ್ನು ಹೊಂದಿಕೊಂಡಿಲ್ಲ ಖಳಾ.. ” ಎಂದು ಅವರಿಂದ ಉತ್ತರ ಬಂತು. “ಆದರೆ ನಿನ್ನ ಪರಾಕ್ರಮ ನಿನ್ನ ವಯಸ್ಸನ್ನು ಹೊಂದಿಕೊಂಡಿದೆ. ನಿನ್ನ ಹಲ್ಲುಗಳು ವಯಸ್ಸನ್ನು ಸೂಚಿಸುತ್ತವೆ.” ಜರಾಸಂಧನಿಗೆ ಆ ಕಥಾಭಾಗದಲ್ಲಿ ಹಲ್ಲು ಉದುರಿತ್ತೋ ತಿಳಿಯದು. ಆದರೆ ಶಾಸ್ತ್ರಿಗಳ ಬಾಯಿಯಲ್ಲಿ ಹಲ್ಲಿರಲಿಲ್ಲ. ಗಂಟೆ ನೋಡುತ್ತ ಮಧ್ಯರಾತ್ರಿ ಸಮೀಪಿಸುತ್ತಿದೆಯೆಂದು ನಾನು ನನ್ನ ಪಟ್ಟದ ಅಧಿಕಾರವನ್ನು ಅಲ್ಲೇ ಚಲಾಯಿಸಿದೆ. ಅಂದು ಮರಳುವಾಗ ಬೆಳದಿಂಗಳಿತ್ತು. ಉಳ್ಳಾಲದಲ್ಲಿ ದೋಣಿಯನ್ನೇರಿ ದವರು ಬಂದರಿನಲ್ಲಿ ಅದರಿಂದ ಇಳಿಯುವ ತನಕವೂ ಶಾಸ್ತ್ರಿಯವರ ವಿನೋದದ ಮಾತುಗಳು ನಮ್ಮನ್ನು ನಗಿಸುತ್ತಿದ್ದು, ಅವರಿಗೆ ಭಟ್ಟರಿಂದ ಮುಖಭಂಗವಾಯಿತೆ ಎಂದು ಶಂಕಿಸಿದ್ದ ನನಗೆ ಅವರ ತಿಳಿಹಾಸ್ಯದ ಮಾತುಗಳು ಸುತ್ತಲೂ ಬೀಸುತ್ತಿದ್ದ ತಂಗಾಳಿಯೊಡನೆ ತಂಪನ್ನಿತ್ತುವು. {{center|————}}<noinclude></noinclude> k7ec4dkxjlh5ylj9v0a94j841fk949k ಪುಟ:ಯಕ್ಷಗಾನ ಮಕರಂದ.pdf/೧೯೬ 104 100116 317153 303559 2026-05-05T09:03:20Z Ashwini Rai K 8475 /* Validated */ 317153 proofread-page text/x-wiki <noinclude><pagequality level="4" user="Ashwini Rai K" /></noinclude>{{Left|''''"ಎಕ್ಕಲಗಾಣದೋಜ''''}} ——————————————————————————————————— {{Right|'''ವಿ. ಬಿ. ಹೊಸಮನೆ.'''}} {{center|ಸುರಪತಿಗಂ ಶಚಿಗಂ ತಾ}}“ {{center|ಗುರುವಪ್ಪುದರಿಂದ ಪೊಳಲಿ ಶಾಸ್ತ್ರಿಯ ವಚನಂ}} {{center|ಪರಮಾರ್ಥಪ್ರದವಾದುದು}} {{center|ಗುರುವಚನಮಲಂಘನೀಯವೆಂಬುದು ಪುಸಿಯೇ}} -ಹೀಗೆಂದು 'ಪೊಳಲಿ ಶಾಸ್ತ್ರಿ'ಗಳ ಕುರಿತೊಂದು ಮೆಚ್ಚುನುಡಿ ! ಸುಮಾರು ಐದು ದಶಮಾನಗಳ ಹಿಂದೆ, ಈ ಮೆಚ್ಚು ನುಡಿಯನ್ನು ಬೆಳ್ಳಾರೆ ಅಯ್ಯನಕಟ್ಟೆಯಲ್ಲಿ 'ನಭೂತೋ ನಭವಿಷ್ಯತಿ' ಎಂಬಂತೆ ವಿಜೃಂಭಿಸಿದ ಯಕ್ಷಗಾನ ತಾಳಮದ್ದಳೆ ಕೂಟದ ಅಧ್ಯಕ್ಷಪೀಠದಿಂದ ಆಗಿನ ವಿದ್ಯಾಧಿಕಾರಿಗಳಾಗಿದ್ದ ಬಹುಭಾಷಾಪಂಡಿತರಾದ ದಿ| ತಾತಾಚಾರ್ಯ ಅವರು ನುಡಿದಿದ್ದರೆಂದು ಓದಿದ್ದೇನೆ. ಈ ಪ್ರಶಂಸೆಯ ಮಾತು ಕೇಳಿಬಂದು ನಾಲೈದು ದಶಕಗಳ ಕಾಲ ಸಂದಿತಾದರೂ ಈ ಯಕ್ಷಗಾನ ಬೃಹಸ್ಪತಿ, ಯಕ್ಷಗಾನ ಕಲಾವಾಯದಿಂದ ಮರೆಯಾಗುವವರಲ್ಲ. ದಿವಂಗತ ಪೊಳಲಿ ಶಂಕರ ನಾರಾಯಣ ಶಾಸ್ತ್ರಿಗಳಿಂದು ಕೀರ್ತಿ ಶರೀರದಿಂದ ಮಾತ್ರ ಉಳಿದಿದ್ದಾರೆ. ಅವರು ನನಗೆ ಮೊದಲು ಕಂಡುದು ಯಕ್ಷಗಾನವಾಯದ ಗುರುಗಳಾಗಿ ಎಂದರೆ ಅಭಿ ಮಾನಯುಕ್ತ ಔಚಿತ್ಯಪೂರ್ಣ ಮಾತಾದೀತು. ಸಹೃದಯರು ಇಂತಹ ಘಟನೆಗಳ ನ್ನೆಷ್ಟೋ ಕಂಡಿರಬಹುದು. ಅಂಥವುಗಳಲ್ಲಿ ಇದೂ ಒಂದಾದೀತು. {{gap}}ಹೌದು, ನಾನು ಈ 'ಎಕ್ಕಲಗಾಣದೋಜ'ನನ್ನು ಕಂಡುದು ಯಕ್ಷಗಾನ ಕಲೆಯ-ವಾನ್ಗ್ಮ್ಯದ ವಿದ್ಯಾರ್ಥಿಯಾಗಿ, ಎಂದರೆ ತಪ್ಪಲ್ಲ. ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದಿನ ಮಾತು. ನಾನಾಗ ಧಿ ಕವಿ ಕಡೆಂಗೋಡ್ಲು ಅವರ 'ರಾಷ್ಟ್ರಮತ' ವಾರಪತ್ರಿಕೆಯಲ್ಲಿ ಸಹಾಯಕನಾಗಿದ್ದೆ. ಪತ್ರಿಕಾಕರ್ತರೆಂದರೆ ಆಗ ಇಂದಿನಂತಲ್ಲ. ಯಾವ ಸಭೆಯಲ್ಲಾದರೂ ಯಾರ ಮುಂದಾದರೂ ಗೌರವದ ಸ್ವಾಗತ ಕಾದೇ ಇರು ತಿತ್ತು. ಅಂದು ಪತ್ರಕರ್ತರು ಇಂದಿನಂತೆ ಯಾರನ್ನೂ ಹೊಗಳಿ ಬದುಕಬೇಕಾಗಿರ ಲಿಲ್ಲ. ಸಂಘ ಸಂಸ್ಥೆಗಳ ವಾರ್ಷಿಕೋತ್ಸವ, ಭಜನೆ, ಯಕ್ಷಗಾನ ಕೂಟಾದಿಗಳಿದ್ದಲ್ಲಿಗೆ ಆಮಂತ್ರಣದಂತೆ ಹೋಗಿ ಎಲ್ಲರಂತೆ ನಾನೂ ಭಾಗವಹಿಸುತ್ತಿದ್ದೆ. ಅಲ್ಲಿ ಪೊಳಲಿ<noinclude></noinclude> rqcqszkxu737ykpntz8srfs7sso59yv ಪುಟ:ಯಕ್ಷಗಾನ ಮಕರಂದ.pdf/೧೯೭ 104 100117 317154 303590 2026-05-05T09:03:50Z Ashwini Rai K 8475 /* Validated */ 317154 proofread-page text/x-wiki <noinclude><pagequality level="4" user="Ashwini Rai K" /></noinclude>{{Right|'''171'''}} ಶಾಸ್ತ್ರಿಗಳು ಇದ್ದರೆಂದಾದರೆ ಮೆಲ್ಲಗೆ ಭಾಗವತರ ಬಳಿಗೆ ಸೇರಿ ಶ್ರುತಿ ನಂಡಿಸುವ ಹೊಣೆ ಹೊತ್ತು ಕುಳಿತೇ ಬಿಡುತ್ತಿದ್ದೆ. ಮೊದಮೊದಲು ಸಭಿಕರ ಹಿಂದೆ ಇಣಿಕಿ ನೋಡುತ್ತಲೇ ಇದ್ದ ನನ್ನನ್ನು ಶಾಸ್ತ್ರಿಗಳು ದೂರದಿಂದಲೇ ನೋಡಿ, “ಹ ಹೆ, ಸಂಪಾದಕರು 1 ಮುಂದೆ ಬನ್ನಿ !” ಎಂದು ಸ್ವಾಗತಿಸುತ್ತಿದ್ದರು. ದಾಕ್ಷಿಣ್ಯ ಸ್ವಭಾವದವನೆಂದು ಕಂಡಿದ್ದ ನನ್ನನ್ನು ಹಲವು ಬಾರಿ ಕರೆದು, “ಅರ್ಥ ಹೇಳಲು ಕಲಿಯೋ ಮಹಾರಾಯ” ಎಂದು ಬೆನ್ನು ತಟ್ಟುತ್ತಿದ್ದರು. ಮಾತೊಡೆದಾಗ ಎಲ್ಲಿ ನಗೆಗೀಡಾಗುತ್ತೇನೋ ಎಂಬ ಅಳುಕು ಒಂದೆಡೆ ಆದರೆ, ಇನ್ನೊಂದೆಡೆ ಗಣ್ಯರೆನಿಸಿದ ಇತರರ ಮೌನ ನಿರೀಕ್ಷಣೆ ನನ್ನನ್ನಾಗ ಬಾಯಿಮುಚ್ಚಿಸಿತ್ತು. ಹೀಗಿದ್ದರೂ ಒಮ್ಮೆ ಪರಿಸ್ಥಿತಿಯ ಒತ್ತಡದಿಂದ ಶಾಸ್ತ್ರಿಗಳ ಆದೇಶದಂತೆ ನಾನು 'ಅರ್ಥಧಾರಿ'ಯಾದೆ. ಶ್ರುತಿ ಬಾರಿಸುತ್ತಿದ್ದಲ್ಲಿಂದಲೇ ಮೂರು ಪದ್ಯಗಳ ಅರ್ಥ ಹೇಳಿ, ನನ್ನ ಪತ್ರಿಕಾ ಪ್ರತಿನಿಧಿ ಮಿತ್ರರೆಲ್ಲ ನನ್ನ ಹೆಸರನ್ನು ಅರ್ಥಧಾರಿ'ಗಳ ಪಟ್ಟಿಯಲ್ಲಿ ಸೇರಿಸಿದ ಆ ಘಟನೆ ಎಂದೂ ಮರೆಯುವಂತಿಲ್ಲ. {{gap}}ನನ್ನ ನೆನಪಿನಂತೆ ಅಂದು ವಿಭೀಷಣ ನೀತಿ' ಪ್ರಸಂಗ, ಕದಿರೆ ದೇವಸ್ಥಾನದ ವರ್ಷಾವಧಿ ಜಾತ್ರೆಯ ಸಾಂಸ್ಕೃತಿಕ ಉತ್ಸವದ ಸಂದರ್ಭದಲ್ಲಿ ನಡೆದ ಯಕ್ಷಗಾನ. ಆಗ ತಾಳಮದ್ದಳೆ ಕೂಟ ಎನ್ನುವುದೇ ರೂಢಿಯಾಗಿತ್ತು. ಮುಖ್ಯ ಪಾತ್ರಧಾರಿ ಗಳಾಗಿ ಬರಬೇಕಾಗಿದ್ದ ಗಣ್ಯ ಮಹನೀಯರೊಬ್ಬರು ಬಂದಿರಲಿಲ್ಲ. ಪ್ರಸಂಗ ಆರಂಭ ವಾದ ಮೇಲೆ ಬರಬಹುದೆಂದು ಕೆಲವರೆನ್ನುತ್ತಿದ್ದರು. ಮತ್ತೆ ಕೆಲವರು ಅವರಿಗಾಗಿ ಕಾದಿರಿಸಿದ್ದ ಪಾತ್ರ ಮತ್ತೊಬ್ಬರಿಗೆ ಕೊಟ್ಟಿರುವುದನ್ನು ಪ್ರತಿಭಟಿಸಿ ಬಂದಿರಲಾರ ರೆಂದರು. ಶಾಸ್ತ್ರಿಗಳು ವ್ಯಂಗ್ಯ ಮಾತಿನಲ್ಲಿ “ನಾವೊಬ್ಬ ಹೊಸ ಅರ್ಥಧಾರಿಗಳನ್ನು ತಯಾರಿಸೋಣ” ಎನ್ನುತ್ತಿದ್ದರು. 'ನಾನಿಂದು ಶ್ರುತಿ ಹಿಡಿಯಲು ಬರಬಾರದಿತ್ತು' ಎಂದು ಒಳಗೊಳಗೇ ಪರಿತಪಿಸುತ್ತಿದ್ದರೂ ಅಂದಿನ ಒತ್ತಾಯಕ್ಕೆ ಮಣಿಯಲೇ ಬೇಕಾಯಿತು. ಅಂದು ನನ್ನ ಯಕ್ಷಗಾನ ಅರ್ಥಗಾರಿಕೆಗೆ 'ಶ್ರೀ ಗಣೇಶ' ಮಾಡಿಸಿ ದವರು ಶ್ರೀ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು ! ಅಣ್ಣ ರಾವಣನ ಪಾತ್ರದಲ್ಲಿ ಶ್ರೀ ಶಾಸ್ತ್ರಿಗಳು ಆರ್ಭಟಿಸಿದರು. ಅವರ ಸೂಚನೆಯಂತೆ ತಮ್ಮ ವಿಭೀಷಣನ ಪಾತ್ರದಲ್ಲಿ ನಾನು ನಡುನಡುಗಿ ತೊದಲಿದೆ. ಅಣ್ಣನಲ್ಲಿ ವಿನಯ ತೋರಬೇಕಾದ ವಿಭೀಷಣನ ವಿನಯಪರತೆಯನ್ನು ಪ್ರೇಕ್ಷಕರು ಮೆಚ್ಚಿದರೆ ಹುಚ್ಚಾಗಿ ಕಂಡರೆ ತಿಳಿಯದು. {{center|ನೀನೇಕೆ ಮರುಳಪ್ಪುದಣ್ಣ - ಈಗ |}} {{center|ಜಾನಕಿಯನು ಬಿಟ್ಟುಕೊಡುವುದೆ ಬಣ್ಣ||}} ಹೀಗೆ ಪದ್ಯವೂ ಸಾಗಿತು- ಅರ್ಥವೂ ಸಾಗಿತು. ಅಂದು ದಿ| ಮಹಾಬಲ ನೋಂಡರು ಭಾಗವತರಾಗಿ ಪದ್ಯವನ್ನು ಹಾಡಿದ್ದರೆಂದು ನೆನಪು. ಈ ಹೊಸ ಅರ್ಥ<noinclude></noinclude> o2jww3376pocxe7jiwlr5zptfuvv5j1 ಪುಟ:ಯಕ್ಷಗಾನ ಮಕರಂದ.pdf/೧೯೮ 104 100118 317155 303599 2026-05-05T09:04:20Z Ashwini Rai K 8475 /* Validated */ 317155 proofread-page text/x-wiki <noinclude><pagequality level="4" user="Ashwini Rai K" /></noinclude>{{Left|172}} ಧಾರಿಯ ತೊದಲಾಟಕ್ಕೆ ಮುನ್ನ ಚೆನ್ನಾಗಿ ಅರ್ಥವಾಗಲಿ, ಎಂದೋ ಏನೋ-ಮತ್ತೆ ಮತ್ತೆ ಆಲಾಪನೆ ಮಾಡಿದ್ದೇ ಮಾಡಿದ್ದು. ಅವರ ಆಲಾಪನೆ ಆವೃತ್ತಿ ಆದಷ್ಟು ಬಾರಿಗೂ ಮಿಕ್ಕಿ ಅರ್ಥದಲ್ಲಿಯೂ ನಾನು ಆಡಿದ್ದನ್ನೇ ಆಡಿ ಆವೃತ್ತಿ ಮಾಡಿರಬೇಕು. ಸಹೃದಯ ಪ್ರೋತೃಗಳು ವಿಭೀಷಣನ ಕುರಿತು ಆಗಲೇ ಸಂದೇಹದ ಸುಳಿಗೆ ಸಿಕ್ಕಿ ದ್ದರು. ವಿಭೀಷಣನ ತೊದಲಾಟ ರಾವಣನ ನುಡಿಯೊಳಗೆ ಸೇರಿ ಪರಿಪಕ್ವವಾಗಿ ಬಂದಾಗ ಶೋತೃಗಳ ಚಪ್ಪಾಳೆ ಮತ್ತೆ ನನ್ನನ್ನು ಹುರಿದುಂಬಿಸಿತು. 'ನಾನೆನ್ನ ಬೇಕಾದ ಮಾತನ್ನೇಕೆ ರಾವಣ ಜಗಿಯುವುದು' – ಎಂದೊಮ್ಮೆ ತೋರಿತ್ತು. ಒಂದೆಡೆ ಯಿಂದ ಆಗ್ರಹಬುದ್ದಿ ಅಭಿಮಾನದ ಹೆಡೆಯೆತ್ತಿ ಕುಟುಕಿತು. ನಾನಾಡಿದ ಮಾತುಗಳು ವಿಭೀಷಣನವೋ ಅಥವಾ ಪತ್ರಿಕೋದ್ಯಮದೊಳಗಿನವೋ ಎಂಬ ಸಂದೇಹವೂ ಮಾಡಿತು. ಮರುಕ್ಷಣದಲ್ಲಿ ಶಾಸ್ತ್ರಿಗಳು ಮತ್ತೊಮ್ಮೆ ನನ್ನ ಮಾತುಗಳನ್ನ ಪರಿಷ್ಕರಿಸಿ ನುಡಿದು ಶೋತೃಗಳನ್ನು ತೃಪ್ತಿಗೊಳಿಸುತ್ತಿದ್ದಾರೆ ಎಂಬುದೂ ಸ್ಪಷ್ಟವಾಯಿತು. ಗದ್ಗದ ಸ್ವರದಲ್ಲಿ ಎರಡು ಮಾತುಗಳನ್ನು ಪದ್ಯದ ಅರ್ಥರೂಪದಲ್ಲಿ ನಾನಾಡಿದರೆ, ಅದಕ್ಕೆ ಉಪ್ಪುಕಾರ ಬೆರಸಿ ಬಳಿದು ನಾಲ್ಕಾರು ಮಾತುಗಳಲ್ಲಿ ಜನರಂಜನೆಗೊಳಿಸಿದರು ಶಾಸ್ತ್ರಿಗಳು ! ಕಂಡದ್ದ ನುಡಿದರೆ ಕೋಪವೆಗ್ಗಳಿಸಿದು-ದಣ್ಣ ದೇವ | ತನ್ನ- ವ೦ಡ ಗಟ್ಟಿಯೆನುತ ಮರಕೆ ಜೆಪ್ಪುವುದುಂಟೆ-ಅಣ್ಣದೇವ || {{gap}}ಈ ಪದ್ಯವನ್ನಾಲಿಸುತ್ತಿದ್ದಂತೆಯೇ, ನಾನು ಮಾತಾಡತಕ್ಕ ವ್ಯಕ್ತಿ ಅಣ್ಣ ರಾವ ಣಾಸುರನೆಂಬುದೇ ಮರೆತುಹೋಯಿತು. ಶಾಸ್ತ್ರಿಗಳಿಗೆ ಈ ನೀತಿ ನುಡಿಯಲು ನಾನೆ ಷ್ಟರವನು ಎಂದು ಮೈ ಬೆವರಿತು, ಮಾತು ಮುಗ್ಗರಿಸಿತು. ಈ ಪದ್ಯದ ಅರ್ಥ ವನ್ನು ನಾಲೈದು ನಿಮಿಷ ಕಾಲವಾದರೂ ಎಳೆದೇನು ಎಂಬ ಭಾವನೆ ಮನಸ್ಸಿನಲ್ಲೇ ಕುದಿದು ಆವಿಯಾಗಿ ಬತ್ತಿಹೋಯಿತು. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಶಾಸ್ತ್ರಿಗಳು ತಮ್ಮನ ಮಾತನ್ನು ಅಣ್ಣನ ಮಾತುಗಳೊಂದಿಗೆ ಮೊದಲು ಮಾಡಿದರು. ವಿಭೀಷಣನ ಮಾತನ್ನು ರಾವಣನೇ ಮಾತಾಡುವುದೇಕೆ ಎಂದು ಜನ ಒಮ್ಮೆ ತಬ್ಬಿ ಬ್ಬಾದರು. ವಿಭೀಷಣನಿಗೂ ಅಷ್ಟರಲ್ಲಿ ಆ ಮಾತು ತನ್ನದೆಂದು ತಿಳಿಯಿತು, ಈ ಸಂದಿಗ್ಧಾವಸ್ಥೆಯಲ್ಲಿ, ಪುರೋಹಿತರು ಹೇಳಿದ ಮಂತ್ರಕ್ಕೆಲ್ಲ ಯಜಮಾನನು 'ಅಸ್ಮಿ ಎಂದು ಒಪ್ಪಿಗೆ ನೀಡಿದಂತೆ ನಾನೂ ಕೇವಲ 'ಹೌದಣ್ಣ' ಹೇಳಿ ಅರ್ಥವನ್ನು ನಿಭಾ ಯಿಸಿಕೊಂಡ. ಮುಂದಿನ ಪದ್ಯ ನಿಲ್ಲುವಷ್ಟರೊಳಗೆ ಮಾತಿಗೆ ಮೊದಲು ಮಾಡಿದ ವಿಭೀಷಣನು, ನೀತಿಯ ಮಾತುಗಳನ್ನು ಪುಂಖಾನುಪುಂಖವಾಗಿ ಪ್ರಯೋಗಿಸಿ ನಾಡಿ ದಾಗ ಶೋತೃಗಳಿಂದ ಚಪ್ಪಾಳೆಯ ಸುರಿಮಳೆ, “ಏನಯ್ಯ ವಿಭೀಷಣ, ಒಂದು ರಾಜಕೀಯ ಭಾಷಣವನ್ನೇ ಬಿಗಿದುಬಿಟ್ಟೆಯಲ್ಲ” ಎಂದು ಶಾಸ್ತ್ರಿಗಳೂ ಬೆನ್ನು ಚಪ್ಪರಿ ಸಿದಂತೆ ಮಾತಾಡಿದರು. ಜನ ನಗೆಗಡಲಲ್ಲಿ ತೇಲಿದರು,<noinclude></noinclude> 1wqcr4yvbduqfl58qchys0y0yt0hkh0 ಪುಟ:ಯಕ್ಷಗಾನ ಮಕರಂದ.pdf/೧೯೯ 104 100119 317156 303603 2026-05-05T09:04:46Z Ashwini Rai K 8475 /* Validated */ 317156 proofread-page text/x-wiki <noinclude><pagequality level="4" user="Ashwini Rai K" /></noinclude>{{Right|'''173'''}} ರಾವಣ ವಿಭೀಷಣರ ಮಾತಿನ ನಾಟಕೀಯ ಅಲ್ಲಿದ್ದ ಧೀಮಂತರಿಗೊಂದು ವಚನಿಸಿರಬೇಕು. ಆದರೆ ಅಣ್ಣನಿಂದ ತಿರಸ್ಕೃತವಾಗಿ ಮದಲಿಕೆಯ ಮಾತು ಗಳನ್ನು ಕೇಳಿದಾಗ ನನಗೊಮ್ಮೆ ನಾನು ಕುಳಿತಿರುವುದು ನಿಜವಾಗಿಯೂ ರಾವಣನ ಕಣ್ಣೆದುರಿಗೆಯೇ ಆಗಿದೆಯೋ ಎನ್ನುವಂತೆ ಭಾಸವಾಗಿ ಆ ಆರ್ಭಟಕ್ಕೆ ಬೆದರಿದ್ದೆ. ವಿಭೀಷಣನ ಪಾತ್ರದಲ್ಲಿ ಅಂದು ನನಗುಂಟಾದ ತೃಪ್ತಿ ಶೋತೃಗಳಿಗೂ ಕಂಡಿರ ಬಹುದು. ಕಾರ್ಯಕ್ರಮದ ಕೊನೆಯಲ್ಲಿ ಶಾಸ್ತ್ರಿಗಳು ಬೆನ್ನು ತಟ್ಟಿ ಮಾತಾಡಿಸುವಲ್ಲಿ ವರೆಗೂ ನಾನು ರಾವಣನ ಮುಂದೆಯೇ ನಿಂತಿರುವಂತೆ ಆಗ ನನಗೆ ಭಾಸವಾಗಿತ್ತು. ಅವರ ಪ್ರೋತ್ಸಾಹಕ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ. ನನ್ನ 'ಎಕ್ಕಲಗಾಣದೋಜ' ಪೊಳಲಿ ಶಾಸ್ತ್ರಿಗಳನ್ನು ನಾನೆಂದೂ ಮರೆಯುವಂತಿಲ್ಲ. {{gap}}ಯಕ್ಷಗಾನ ವಾಹ್ಮಯಪ್ರಪಂಚದಲ್ಲಿ, ಪೊಳಲಿ ಶಂಕರನಾರಾಯಣ ಶಾಸ್ತ್ರಿ ಎಂದರೆ ಯಾರೆಂದು ತಿಳಿಯದವರು ವಿರಳ. ಖಾದಿ ಉಡುಪು-ಕಟ್ಟೆ ಹಾಕಿ, ಜುಬ್ಬ ತೊಟ್ಟು, ಟೊಪ್ಪಿ ಇಟ್ಟು ಮೈಲುದ್ದಕ್ಕೆ ನಡೆಯುತ್ತಿದ್ದರೂ ಆ ನಡಿಗೆ ಶಾಸ್ತ್ರಿಗಳದೇ ಎಂದು ಗುರುತಿಸಬಹುದಾಗಿತ್ತು. ದೃಷ್ಟಿಚಕ್ರದೊಳಗಿಂದ ತಿವಿತಿವಿದು ನೋಡುವ, ಮಿನುಮಿನುಗಿ ಮಾತಾಡುವ, ಮತ್ತು ಆ ಮಾತಿನ ಮೋಡಿಯ ನೋಟ ಎಂದಿಗ ಮರೆಯದ ದೃಶ್ಯ, ನಿತ್ಯದ ಮಾತು ಅನುನಾಸಿಕವಾಗಿ ಕಂಡರೆ ಅರ್ಥಗಾರಿಕೆಯಂ ಮಾತು ಗತ್ತುಗಾರಿಕೆಯದು. ಪುರಾಣವಾಚನದ ಕಾಲದಲ್ಲಿ ಅವರ ವ್ಯಾಖ್ಯಾನದ ವೈಖರಿಯೇ ಬೇರೆ. ಪುರಾಣಪುರುಷರು ಪ್ರೇಕ್ಷಕರ ಎದುರಿನಲ್ಲಿ ಬಂದು ನಿಂತಿರು ವಂತೆಯೇ ಮೂಡುತ್ತಿತ್ತು ಅವರ ಗಂಭೀರ ವಾಗೈಖರಿ ! ಮನೆಯಲ್ಲಿದ್ದಾಗ ನಿತ್ಯಾನುಷ್ಠಾನಗಳಲ್ಲಿ ತೊಡಗಿದ್ದಾಗ ಬಿಟ್ಟರೆ, ಎಲ್ಲೆಲ್ಲಿಯೂ ಒಂದೇ ರೀತಿ ನಡ- ನುಡಿಗಳಲ್ಲಿ ತೋರುವ ಶಾಸ್ತ್ರಿಗಳು, ಜೀವನದಲ್ಲಿ ನಿಷ್ಠಾವಂತ ವ್ಯಕ್ತಿ. ಹುಬ್ಬುಗಳ ಮಧ್ಯದಲ್ಲಿ ಎದ್ದು ನಗುವ ಅಕ್ಷತೆಯ ನೋಟ ಎಂಥವರನ್ನಾದರೂ ಆಕರ್ಷಿಸದಿರದು. ಬಡತನವನ್ನೂ ವಾಹ್ಮಯವನ್ನೂ ಬೆನ್ನಿಗೆ ಕಟ್ಟಿಕೊಂಡೇ ಬಾಳಿದವರು ಶಾಸ್ತ್ರಿಗಳು. ಮಾತು-ಆಕೃತಿಗಳಿಂದ ಮರೆಯಲಾರದ ಆ ಮುಖಮುದ್ರೆ ತೇಜಃಪುಂಜವಾಗಿ, ಚಿರ ಸ್ಮರಣೀಯ. 'ಯಕ್ಷಗಾನ ವಾಚಸ್ಪತಿ' ಬಿರುದು ಇವರಿಗೆ ಸಾರ್ಥಕ, ಯಕ್ಷಗಾನ ವಾಹ್ಮಯದಲ್ಲಿ ಶಾಸ್ತ್ರಿಗಳ ಕೀರ್ತಿಶರೀರ ಶಾಶ್ವತ ನೆಲೆನಿಂತಿದೆ-ಧನ್ಯಜೀವನವೆನಿಸಿದೆ.<noinclude></noinclude> fglj3fhg5khbgxbk6nv0bkhdpypb03l ಪುಟ:ಯಕ್ಷಗಾನ ಮಕರಂದ.pdf/೨೦೦ 104 100120 317157 303623 2026-05-05T09:05:04Z Ashwini Rai K 8475 /* Validated */ 317157 proofread-page text/x-wiki <noinclude><pagequality level="4" user="Ashwini Rai K" /></noinclude>{{Left|'''ಉದಾತ್ತ ಕಲಾವಿದ'''}} —————————————————————————————— {{Right|'''-ಕೆ. ಪುರುಷೋತ್ತಮ ಭಟ್ಟ,'''}} ನನಗೆ ಶ್ರೀ ಶಂಕರನಾರಾಯಣ ಶಾಸ್ತ್ರಿಗಳ ಹೆಸರನ್ನೇ ಕೇಳಿ ಗೊತ್ತು ಹೊರತು ಕಂಡು ಮಾತಾಡಿರಲಿಲ್ಲ. ಕಾಣುವ ಕುತೂಹಲ ನನ್ನಿಷ್ಟ ಸಿದ್ದಿಗಾಗಿಯೇ ಎಂಬಂತೆ ಅವರ ಊರೇ ಆಗಿದ್ದ ಕುಪ್ಪೆಪದವಿನಲ್ಲೇ ನಮ್ಮ ಕಟೀಲು ಮೇಳದ ಆಟ. ಆ ದಿನ ಎಲ್ಲರಿಂದ ಮುಂದಾಗಿ ನಾನು ಪದವನ್ನು ಸೇರಿ ಆಟದ ಮುಂದಾಳು ಶ್ರೀ ಕೊರಗ ರೈಯವರನ್ನು ಸಂಧಿಸಿದಾಗಲೇ ಅಲ್ಲಿಗೆ ಶ್ರೀ ಶಾಸ್ತ್ರಿಗಳ ಸವಾರಿಯಾಯಿತು. ಒಡನೆಯೇ ರೈಯವರು, “ಸಾಲೆಗ್ ಮೇರ ಗುರ್ತ ಇದೆ, ಮೇರ್ ಈ ಮೇಲೊಡ್ ಸಿರಿಯೇಸೊದಾ‌, ಪುರುಸೋತ್ ಭಟ್”-ಇಷ್ಟು ಹೇಳುವಷ್ಟರಲ್ಲಿ ನಾನೆದ್ದು ನಮಸ್ಕರಿಸಿದ ಮುಗುಳು ನಗು, ಪ್ರತಿ ನಮಸ್ಕಾರ, ಇನ್ನು ರೈಯವರಿಗುತ್ತರವಾಗಿ, “ಮೇರ ಪುದರ್ ಕೇನೇ ಗೊತ್ತು. ತೂದ್ ಪರಿಚಯ ಇಜ್ಜಿ- ಇನಿ ತೂಯಿಲೆಕಾಂಡೆ ಮೇರೆನ್ ಮದ್ಯಂದ ಉನಸ್‌ಗ್ ಇಲ್ಲಡೆಗ್ಲೆತ್ತೊಂ ಪೋಪೆ -ಕತ್ತಲೆಗ್ ಬಲ್ಬರ್”, ಅದಕ್ಕೆ ರೈಯವರು, “ಆರೆನ್ ಉದ್ಘಾಂಡನೇ ಯಾವಂದ್, ಉಂಡಿನ ಕರಾವಿಲೆಕ್ಕೊ ಪುಲ್ಯ ಮುಟ್ಟಲ ಪೊಡಿ ಆಪಿನ ಒಂಜಿ ಪರ್ಸಂಗೊನ್ ಈರೇ ಪನೋಡು” ಎಂದೊಡನೆ ಶಾಸ್ತ್ರಿಗಳು “ದೌಪದೀ ವಾ ಪಹರಣ ಎಡ್ಡೆ ಆಪುಂಡುಂದ್‌ ಅಗರಿತಾರ್ ಪಂಡ್‌ದಿತ್ತೇರ್-ಶೆಟ್, ಕೌರವ, ಕೃಷ್ಣ ಭಟ್, ಶಕುನಿ, ರಾಮಯ ದುಃಶಾಸನೆ ಆಂಡ ದೌಪದಿಗ್ ಎಡ್ಡೆ ಕೆಲಸ ಅವನೇ ಗಟ್ಟಿ ಮಾಲ್ಪುಲೆ, ಎಂಕುಲು ಬರೆ” ಎಂದವರೇ ನನ್ನನ್ನು ಜೊತೆಯಲ್ಲೇ ಕರೆದುಕೊಂಡು ಮನೆಗೆ ಹೋದರು.ಮನೆ ಸೇರಿದನೆಯೇ ಕಾಫಿ ಯಾಯಿತು. ಸ್ನಾನಕ್ಕೆ ಬಿಸಿನೀರು; ಮಿಂದು ಬಂದಾಗ ದೇವರ ಕೋಣೆಯಲ್ಲಿ ಸಂಧ್ಯಾವಂದನೆಯ ಸನ್ನಾಹ. ಆಡಂಬರವಿಲ್ಲದ ಅಚ್ಚುಕಟ್ಟಿನ ಊಟ. ಕೈತೊಳೆದು ಬಂದೊಡನೆ ಚಾವಡಿಯಲ್ಲಿ ಚಾಪೆ ದಿಂಬುಗಳನ್ನಿರಿಸಿ, ವಿಶ್ರಾಂತಿಗಾಗಿ ಕೈ ತೋರಿಸಿದರು.ನನಗೆ ಉಂಡ ಹೊಟ್ಟೆ ಭಾರ, ನಿದ್ದೆ ಗೆಟ್ಟು ಕಣ್ಣು ಭಾರ, ಇವುಗಳಿಂದ ಮೇಲಾದಭಾರ ರಾತ್ರೆಯ ದೌಪದಿಯಾದ್ದರಿಂದ, ತಲೆದಿಂಬಿಗಿಂತ ಮೊದಲು ತಲೆಗಿಂಬುಬೇಕಾದ್ದರಿಂದ, ಅಂತರಂಗದಲ್ಲಿ ನಲಿದಾಡುವ ದೌಪದಿಯನ್ನು ಮೆಲ್ಲನೆ ಶಾಸ್ತ್ರಿಗಳಮುಂದಿಳಿಸಿದೆ. ಮಾತಿನಲ್ಲಿ ನಡುಕ, ಬೆವರಿದ ಮುಖ, ಅಷ್ಟರಿಂದಲೇ ಶಾಸ್ತ್ರಿಗಳು<noinclude></noinclude> cp9dpvoewwixuxl48rggrbftza7nz5m ಪುಟ:ಯಕ್ಷಗಾನ ಮಕರಂದ.pdf/೨೦೧ 104 100121 317158 303630 2026-05-05T09:05:34Z Ashwini Rai K 8475 /* Validated */ 317158 proofread-page text/x-wiki <noinclude><pagequality level="4" user="Ashwini Rai K" /></noinclude>{{Right|'''175'''}} ನನ್ನನ್ನು ತಿಳಿದವರಾಗಿ, “ನೀವು ಪ್ರಸಂಗದ ಪದ್ಯವನ್ನೊಂದೊಂದಾಗಿ ಹೇಳಿದರೆ, ಅದರಲ್ಲಡಗಿರುವ ಭಾವಾರ್ಥವನ್ನು ಮೂಲಗ್ರಂಥದ ಆಧಾರದಿಂದ ಹೇಳ ಬಲ್ಲೆ-ಸ್ತ್ರೀಪಾತ್ರವಾದ್ದರಿಂದ ರಂಗದಲ್ಲಿ ಭಾವಪೂರ್ಣವಾಗಿ ವಿವರಿಸುವ ಕೆಲಸ ನಿಮ್ಮದು?” ಎಂದೊಡನೆ ನಾನು ಪದ್ಯ ಹೇಳಲುಪಕ್ರಮಿಸಿದೆ. ಅವರು ವಿವರಿಸಿದ ಸೂಕ್ಷ್ಮ ತತ್ವಸಾರವನ್ನೆಲ್ಲಾ ಅಮೃತಸದೃಶವೆಂದು ಹೀರಿ, ನನ್ನ ಮೊದಲ ಗುರು ದಿ| ಪಡೆ ಶ್ರೀಪತಿ ಶಾಸ್ತ್ರಿಗಳನ್ನು ಸ್ಮರಿಸುತ್ತಾ ಪೂಜ್ಯ ಭಾವದಿಂದ ಮನಸ್ಸಿನಲ್ಲೇ ಶಾಸ್ತ್ರಿಗಳನ್ನು ವಂದಿಸಿದೆ ಮುಖದಲ್ಲಿದ್ದು ಕಾಣುವ ಬ್ರಹ್ಮತೇಜಸ್ಸು, ಅದಕ್ಕೆ ಕಳೆಗೊಡುವ ವಿದ್ವದ್ಯಾಂಭೀರ್ಯ, ಹಾಗೇ ಅವರ ಅಂತಃಶುದ್ಧಿಯ ಅಳತೆ ಗೋಲೆಂಬಂತೆ ಮುಖದಲ್ಲಿ ಮಿನುಗುವ ಬಿಳಿನಗು. ನನಗಿತ್ತ ಉಪದೇಶವಿದು “ಪ್ರಸಂಗದ ಪದ್ಯಗಳು ಗೊತ್ತುಬೇಕು, ಕವಿಹೃದಯವನ್ನರಿತಿರಬೇಕು, ಪುರಾಣದ ತತ್ವವನ್ನು ಪುಷ್ಟಿಕರಿಸುತ್ತಾ, ಪಾತ್ರಗೌರವವನ್ನಳಿಸದೆ, ಇದಿರಿನವನನ್ನು ಕೊಂಡಿದೆ, ಪದ್ಯದ ಮೇರೆ ಮೀರದೆ, ಸರಳ, ವಿರಳವಾಗಿ ಮಾತನ್ನಾಡಬೇಕು ಮುಖ್ಯವಾಗಿ ತನ್ನತನವನ್ನು ತೀರಾ ಮರೆತು, ಪುರಾಣಪ್ರಪಂಚದಲ್ಲೇ ವಿಹರಿಸುತ್ತಾ ಹೋದ ಪಾತ್ರನಿರ್ವಹಣೆಯೇ ಸರಿ ಎನ್ನಿಸುವಂಥಾದ್ದು ಪಾಂಚಾಲೆಯ ಪಾತಿವ್ರತ್ಯವನ್ನು ಶೂರ್ಪನಖಿಯಲ್ಲಿ ತೋರಹೋದ ರಾವಣ-ದುರ್ಯೋಧನರು ಯುಧಿಷ್ಠಿರ, ಶ್ರೀ ರಾಮರಂತೆ ಧರ್ಮಸಾಧಕರಾದರೆ, ನಮ್ಮ ಪುರಾಣದ ಅಂತಃಸತ್ವವನ್ನು ನಾವೇ ಸುಟ್ಟಂತಾಗುವುದು. ಇದೇ ನಮ್ಮ ಪಾತ್ರಪೋಷಣೆಯ ಗುಟ್ಟು - ಇಷ್ಟು ನೆನಪಿರಲಿ. ಇನ್ನು ಮಲಗಿ ನಿದ್ರೆ ಮಾಡಿ, ರಾತ್ರಿಗೆ ತೊಂದ್ರೆಯಾದೀತು. ಹೆದರ ಬೇಡಿ. ನಿಮ್ಮ ವೇಷ ಒಳ್ಳೇದಾಗುತ್ತದೆ'' ಇದೇ ಶ್ರೀ ಶಾಸ್ತ್ರಿಗಳು ನನಗಿತ್ತ ಆಶೀರ್ವಾದ. ದೂತಮುಖದಿಂದ ಸೋತು ಪಾಂಡವರ ಕೈ ತಪ್ಪಿದ, ಆಟದಲ್ಲಿ ಗೆದ್ದರೂ ದುರ್ಯೋಧನನಿಗೊಪ್ಪದ, ಆ ದೌಪದಿಯನ್ನು ಶ್ರೀ ಶಾಸ್ತ್ರಿಗಳು ಕುಪ್ಪೆ ಪದವಿನಲ್ಲಿ ಉಪಾಯದಿಂದ ನನ್ನ ಕೈಗೊಪ್ಪಿಸಿದರು. ವಿನಮ್ರನಾಗಿ ಶ್ರದ್ಧೆಯಿಂದಲೇ ಆಕೆಯನ್ನು ತಲೆಗಿಂಬನ್ನಾಗಿರಿಸಿ ಒರಗಿದೆ. ಆ ದಿನ ರಾತ್ರಿ ರಂಗದಲ್ಲೆ ಷ್ಟೆಂಬುದನ್ನು ಪ್ರೇಕ್ಷಕವೃಂದವೇ ತೀರ್ಮಾನಿಸಲಿ ಅಂತೂ ಆ ದೌಪದಿಯು ಮುಂದೆ ಕರ್ಣಾಟಕದ ನೂರಾರು ರಂಗಗಳನ್ನು ಹೊಕ್ಕು, ಮುಂಬೈ, ಮದರಾಸಿನಂತಹ ಮಹಾನಗರಗಳಲ್ಲಿ ಹೊರಳಿ, ನರಳಿದರೂ, ರಂಗದಿಂದ ನಿವೃತ್ತನಾದ ನನ್ನನ್ನೆಂದಿಗೂ ಒಳಗಿಂದೊಳಗೆ ಕಾಡುತ್ತಿದ್ದಾಳೆ. ನನ್ನ ಅಂತರಂಗದಲ್ಲಿ ನಲಿಯುತ್ತಿದ್ದಾಳೆ. {{center|'''ಶ್ರೀ ಶಾಸ್ತ್ರಿಗಳ ಪುರಾಣಪ್ರಜ್ಞೆ ಹಾಗೂ ಪಾತ್ರತನ್ಮಯತೆ'''}} ಅದೇ ರಂಗಸ್ಥಳ, ಮರುದಿನ 'ಕರ್ಣಪರ್ವ' ಪ್ರಸಂಗ, ಶಾಸ್ತ್ರಿಗಳು ಮುಂಭಾಗ ದಲ್ಲೇ ಚಾಪೆಯಲ್ಲಿ ದಿಂಬಿಗೊರಗಿ ಕೂತಿದ್ದಾರೆ. ನಾನು ಕೃಷ್ಣನಾಗಿ ಅರ್ಜುನನ ಮುಂದಿದ್ದೇನೆ, ಕರ್ಣನು ರಥವನ್ನು ಮೇಲೆತ್ತುವ ಸನ್ನಿವೇಶ, “ಮನಸಿಜ ಪಿತ<noinclude></noinclude> d7yguvwmeodei7k8mz235ibuzn1k8ef ಪುಟ:ಯಕ್ಷಗಾನ ಮಕರಂದ.pdf/೨೦೪ 104 100124 317159 316867 2026-05-05T09:07:23Z Ashwini Rai K 8475 /* Validated */ 317159 proofread-page text/x-wiki <noinclude><pagequality level="4" user="Ashwini Rai K" />{{Left|ಶಂಕರನಾರಾಯಣ ಶಾಸ್ತ್ರಿಗಳ ಯಕ್ಷಗಾನ ಪ್ರವೇಶ}} ————————————————————————————— {{Right|– ಅಗರಿ ಶ್ರೀನಿವಾಸ ಭಾಗವತ,}}</noinclude>ಸರ್ವಸಾಧಾರಣ 1928ನೇ ಇಸವಿಯಲ್ಲಿ, ಆಗರ್ಭ ಶ್ರೀಮಂತರ ವಿದ್ಯಾಭಿ ಮಾನಿಗಳೂ ಆಗಿದ್ದ ಕಟ್ಟೆ ಮಾರು ದಿ| ಚೆಲುವಯ್ಯ ಬಲ್ಲಾಳರ ಮಳಲಿಯ ಮನೆಯಲ್ಲಿ ಯಕ್ಷಗಾನ ಕೂಟ. ಪ್ರಸಂಗ 'ಕೃಷ್ಣ ಸಂಧಾನ', ಮಳಲಿಯವರೇ ಆಗಿದ್ದ ಒಬ್ಬರಿಗೆ ಸಂಜಯನ ಪಾತ್ರವನ್ನು ಒಪ್ಪಿಸಿತ್ತು. “ಶಿವಶಿವ ಯಮಜನೋಲಗದ ಸಿರಿಯನು” ಎಂಬ ಪದ್ಯಕ್ಕೆ ಸಂಜಯನ ಪಾತ್ರಧಾರಿಗಳು, ಧರ್ಮರಾಯನ ವೈಭವ ವನ್ನು ಬಣ್ಣಿಸಲು ಆರಂಭಿಸುವಾಗಲೇ ಕೌರವನ ಪಾತ್ರವನ್ನು ವಹಿಸಿದ್ದ ಪ್ರಸಿದ್ಧ ಅರ್ಥಧಾರಿಗಳ “ಬಾಯಿ ಮುಚ್ಚು” ಎಂಬ ಅಬ್ಬರದ ನಂಡಿಗೆ ಆ ಪಾತ್ರಧಾರಿಗೆ ಸಭಾಕಂಪನದಿಂದಾಗಿ ತಡವರಿಸಿ, ಮಾತನಾಡಲು ಅಸಾಧ್ಯವಾಯಿತು. ಅರ್ಥವಿವರಣೆಗೆ ಬೇರೆ ಯಾರೂ ಇಲ್ಲ. ವಿದ್ಯಾಭ್ಯಾಸವನ್ನು ಮುಗಿಸಿ ನೆಂಟರ ಊರಾದ ಪೊಳಲಿಗೆ ಬಂದಿದ್ದ ಶ್ರೀ ಶಂಕರನಾರಾಯಣ ಶಾಸ್ತ್ರಿಗಳು ಪ್ರೇಕ್ಷಕರಾಗಿ ಆ ಕೂಟಕ್ಕೆ ಬಂದಿದ್ದರು. ಅವರೊಡನೆ ಆಷ್ಟರು “ಸಂಜಯನ ಅರ್ಥವನ್ನು ನೀವು ಮುಂದು ವರಿಸಬೇಕೆಂದು ಕೇಳಿಕೊಂಡಾಗ “ನನಗೆ ಪ್ರಸಂಗದ ಪರಿಚಯವಿಲ್ಲ, ಯಕ್ಷಗಾನದಲ್ಲಿ ಅರ್ಥ ಹೇಳಿ ಅಭ್ಯಾಸವಿಲ್ಲ” ಎಂದು ಎಷ್ಟು ಹೇಳಿದರೂ, ಕೇಳದ ಮಿತ್ರರ ಒತ್ತಾಯಕ್ಕೆ ಕಟ್ಟು ಬಿದ್ದು ಕೊನೆಗೆ ಒಪ್ಪಿಕೊಂಡರು. {{gap}}ಪುನಃ ಭಾಗವತರು “ಶಿವಶಿವ ಯಮಜನೋಲಗದ ಸಿರಿಯನು” ಎಂಬ ಪದ್ಯ ವನ್ನು ಹಾಡಿದಾಗ ಶ್ರೀ ಶಾಸ್ತ್ರಿಗಳು ಧರ್ಮರಾಯನ ವೈಭವದ ವರ್ಣನೆಗೆ ಪ್ರಾರಂ ಭಿಸಿದರು. ಕೌರವನ ಮುನ್ನಿನಂತೆಯೆ “ಮುಚ್ಚು ಬಾಯಿ” ಎಂಬ ಅಬ್ಬರದ ನುಡಿ ಬಂತು. ಆಗ ಶಾಸ್ತ್ರಿಗಳು ತಮ್ಮ ಮಾತನ್ನು ನಿಲ್ಲಿಸಿದರು. ಕೌರವನು, “ಧರ್ಮ ರಾಯನು ಏನು ಹೇಳಿದನು ?” ಎಂದು ಕೇಳಲು ಶಾಸ್ತ್ರಿಗಳು ಪುನಃ ಧರ್ಮರಾಯನ ವೈಭವದ ವರ್ಣನೆಗೆ ತೊಡಗಿದಾಗ ಪುನಃ “ಮುಚ್ಚು ಬಾಯಿ” ಎಂಬ ಕೌರವನ ಅಧಿ ಕಾರದ ಆಜ್ಞೆ. ಇದನ್ನು ಕೇಳಿ ಶಾಸ್ತ್ರಿಗಳು, ರಾಜಸ್ಥಾನದ ಗೌರವವೇನು, ರಾಜನ ಯೋಗ್ಯತೆ ಹೇಗಿರಬೇಕು, ಆಸ್ಥಾನದಲ್ಲಿ ಮಂತ್ರಿಯಾದವನ ಅಧಿಕಾರದ ವ್ಯಾಪ್ತಿ ಎಷ್ಟು ಎಂಬುದಕ್ಕೆ ಶಾಸ್ತ್ರದ ಆಧಾರ ಕೊಟ್ಟು, ಇದು ನಿನ್ನ ಉದ್ಧಟತನವೆಂದು ಕೌರವನ ಮಾತನ್ನು ಖಂಡಿಸಿದಾಗ ಅಲ್ಲಿದ್ದವರೆಲ್ಲಾ ವಿಸ್ಮಯಗೊಂಡರು. ಇವರ<noinclude></noinclude> nvx1c7feudd3slm6n5tubzgjuos83j0 ಪುಟ:ಯಕ್ಷಗಾನ ಮಕರಂದ.pdf/೨೦೫ 104 100125 317160 303760 2026-05-05T09:09:02Z Ashwini Rai K 8475 /* Validated */ 317160 proofread-page text/x-wiki <noinclude><pagequality level="4" user="Ashwini Rai K" /></noinclude>{{Right|179}} ವಿದ್ವತ್ತನ್ನು ನೋಡಿ ಪ್ರಸಿದ್ಧ ಅರ್ಥಧಾರಿಗಳಾದ ಅರ್ಕುಳ ಸುಬ್ರಾಯಾಚಾರಿಗಳ, ಕೆ. ಪಿ. ವೆಂಕಪ್ಪ ಶೆಟ್ಟರೂ ಶಾಸ್ತ್ರಿಗಳನ್ನು ವಿಚಾರಿಸಿ, “ನಮ್ಮ ಯಕ್ಷಗಾನ ಕೂಟಕ್ಕೆ ನಿಮ್ಮಿಂದ ಅನೇಕ ಪ್ರಯೋಜನವಿರುವುದರಿಂದ ನೀವು ಅಗತ್ಯ ಸೇರಬೇಕೆಂದು ಒತ್ತಾಯಿಸಿದರು. ಮಾತ್ರವಲ್ಲ, ಒಪ್ಪಿಸಿದರು. {{gap}}ಅಂದಿನಿಂದ ಅವಿಶ್ರಾಂತವಾಗಿ ಶ್ರೀ ಶಾಸ್ತ್ರಿಗಳು ಸಂಸ್ಕೃತ ಮೂಲಗ್ರಂಥಗಳ, ಶಾಸ್ತ್ರಗಳ ಆಧಾರಗಳನ್ನು ಯಕ್ಷಗಾನದ ಅರ್ಥ ವಿವರಣೆಗೆ ಅಳವಡಿಸಿಕೊಂಡು ಅರ್ಥ ಗಾರಿಕೆಯೆಂಬ ಬಂಗಾರದ ಕುಸುಮಕ್ಕೆ ಶಾಸ್ತ್ರಾಧಾರಗಳೆಂಬ ಸುಗಂಧವನ್ನು ಸೇರಿಸಿ ಇದನ್ನು ವಿದ್ವಜ್ಜನಾಕರ್ಷಕ ಕಲೆಯಾಗಿ ಮಾರ್ಪಡಿಸಿರುತ್ತಾರೆ. ಎಷ್ಟೋ ತಾಳಮದ್ದಳೆಗಳ ಕೂಟದಲ್ಲಿ ಅವರ ಒಡನಾಟ ನನಗಿದೆ. ಪಾತ್ರದ ತನ್ಮಯತೆಯಿಂದ ಭಕ್ತಿರಸ, ಕರುಣಾರಸಗಳ ಪ್ರದರ್ಶನದಲ್ಲಿ ಅವರ ಕಣ್ಣುಗಳಿಂದ ಆನಂದಾಶ್ರು ಸುರಿಯುತ್ತಿದ್ದು, ಪ್ರೇಕ್ಷಕರ ಕಣ್ಣುಗಳಿಂದಲೂ ಕಣ್ಣೀರು ಉದುರಿ ದ್ದನ್ನು ನಾನು ಕಂಡಿರುತ್ತೇನೆ. ಭೀಷ್ಮಪರ್ವದ “ತನಯರೀರ್ವರು ಯೆನಗೆ ಸವ ನಾದ ಮೇಲೆ” ಎಂಬ ಪದ್ಯವನ್ನು ಅರ್ಥವಿಸುವಾಗ ಧರ್ಮಸಂಕಟಕ್ಕೆ ಬಿದ್ದ ಭೀಷ್ಮನೇ ತಾನಾಗುತಿದ್ದರು. ಬ್ರಾಹ್ಮಣವೇಷಧಾರಿಯಾದ ಕೃಷ್ಣನು ಮಯೂರ ಧ್ವಜನ ಅರ್ಧದೇಹವನ್ನು ದಾನ ಬೇಡಿದಾಗ “ಯೆಂದಿಗಾದರು ತನುಸ್ಥಿರ ಸ್ಥಿರವೆ, ನಾಬುಧನಿಗಿತ್ತರೆ ಕೀರ್ತಿ ಧರಣಿಯಲಿ” ಈ ಪದ್ಯದ ಅರ್ಥಸನ್ನಿವೇಶದಲ್ಲಿ ಸಂಸಾರದ ನಶ್ವರತೆ,ಮಾನವ ಜನ್ಮದ ಸಾರ್ಥಕತೆ, ಇವುಗಳನ್ನು ಹೃದಯಂಗಮವಾಗುವಂತೆ ವಿವರಿಸಿ ಪ್ರೇಕ್ಷಕರ ಮನಸ್ಸನ್ನು ಸೂರೆಗೊಳ್ಳುತ್ತಿದ್ದರು. ಪಾತ್ರಪೋಷಣೆಯಿಂದ ರಾಮನೇ ಆಗಿಯೂ, ರಾವಣನೇ ಆಗಿಯೂ, ಕೃಷ್ಣನೇ ಆಗಿಯೂ, ಕೌರವನೇ ಆಗಿಯೂ, ಜರಾಸಂಧನೇ ಆಗಿಯೂ ಪ್ರೇಕ್ಷಕರಿಗೆ ಕಾಣಿಸಬಲ್ಲ ಅರ್ಥಧಾರಿಗಳೆಂದರೆ ಶಾಸ್ತ್ರಿಗಳು. ಶ್ರೀ ಮಹಾದೇವೀ ಲಲಿತಾ ಉಪಾಖ್ಯಾನ, ಪ್ರಭಾವತೀ ಪರಿಣಯ, ಶಿವಲೀ ಲಾರ್ಣವ, ಭಸ್ಮ ರುದ್ರಾಕ್ಷಿ ಮಹಾತ್ಮ, ಧನಗುಪ್ತ ಮಹಾಬಲಿ, ತಾರಾ ಶಶಾಂಕ ಶುಕ್ರ ಪ್ರತಾಪ, ಇತ್ಯಾದಿ ಸಂಸ್ಕೃತದಲ್ಲಿರುವ ಪುರಾಣಕಥೆಗಳನ್ನು ಕನ್ನಡಕ್ಕೆ ಭಾಷಾಂ ತರಿಸಿ ನನಗೆ ಕೊಟ್ಟು, ಪ್ರಸಂಗಗಳನ್ನು ರಚಿಸುವಂತೆ ಅನುವು ಮಾಡಿಕೊಟ್ಟ ವಿದ್ವಾಂಸರು ಶಾಸ್ತ್ರಿಗಳು, ಶಾಸ್ತ್ರಿಗಳು ಸ್ವರ್ಗಸ್ಥರ ರಾದ ಮೇಲೆ ಪ್ರಸಂಗಗಳನ್ನು ಬರೆಯುವ ಹವ್ಯಾಸವೇ ನನ್ನಲ್ಲಿ ಕುಂಠಿತವಾಗಿರುತ್ತದೆ. ಅಂತೂ ಶಾಸ್ತ್ರಿಗಳು ಅಮರ ಲೋಕವಾಸಿಗಳಾದುದರಿಂದ, ಯಕ್ಷಗಾನ ಪ್ರಪಂಚಕ್ಕೇನೇ ಅಪಾರ ನಷ್ಟ ಉಂಟಾ ಗಿರುತ್ತದೆ ಎಂಬುದಕ್ಕೆ ಸಂದೇಹವಿಲ್ಲ. ನಿತ್ಯ ಅನುಷ್ಠಾನಪರರಾಗಿಯೂ, ದೈವಭಕ್ತ ರಾಗಿಯೂ, ಜನಾನುರಾಗಿಗಳಾಗಿಯೂ, ವಿದ್ವಾಂಸರಾಗಿಯೂ ಕಣ್ಮರೆಯಾಗಿರುವ ಶ್ರೀ ಶಾಸ್ತ್ರಿಗಳು ಸತ್ತೂ ಬದುಕಿರುವವರಲ್ಲಿ ಒಬ್ಬರು. {{center|——————}}<noinclude></noinclude> ei9d5tt8q5g1lxff7ccsrdkm6kvdkha ಪುಟ:ಯಕ್ಷಗಾನ ಮಕರಂದ.pdf/೨೦೬ 104 100126 317161 303769 2026-05-05T09:09:33Z Ashwini Rai K 8475 /* Validated */ 317161 proofread-page text/x-wiki <noinclude><pagequality level="4" user="Ashwini Rai K" /></noinclude>{{Left|'''ನಾ ಕಂಡ ಶಾಸ್ತ್ರಿಗಳು'''}} —————————————————————————————— {{Right|'''-ಕೀರಿಕ್ಕಾಡು ವಿಷ್ಣು ಭಟ್ಟ,'''}} ಶುಭ್ರವಾದ ಉಡುಪಿನ, ಮುಗುಳುನಗೆಯ ಸೌಜನ್ಯದ ಮೂರ್ತಿ ವೇದಿಕೆ ಯೇರಿ ನಮ್ರತೆಯಿಂದ ಸಭಿಕರಿಗೆ ಕೈಮುಗಿದು ಬಾಗಿ ನಮಸ್ಕರಿಸಿ ಎರಡೂ ಕಾಲು ಗಳನ್ನು ಒಂದಕ್ಕೊಂದು ಸಂಧಿಸಿ ಕುಳಿತದ್ದನ್ನು ಕಂಡೆ. ಕಂಡಾಕ್ಷಣವೇ ಆ ಘನ ವ್ಯಕ್ತಿತ್ವಕ್ಕೆ ಶರಣಾದೆ.ಅವರೇ ಯಕ್ಷಗಾನ ವಾಚಸ್ಪತಿ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು, ನಾಲ್ಕು ದಶಕಕ್ಕೂ ಹಿಂದೆ ಮಂಗಳೂರಿನ ಉಪಾಧ್ಯಾಯ ತರಬೇತಿ ಮಂದಿರದಲ್ಲಿ ಜರಗಿದ ಯಕ್ಷಗಾನ ಕೂಟ, ಅಂದಿನ ಕಥಾಭಾಗ 'ವಿಭೀಷಣ ನೀತಿ - ಅಂಗದ ಸಂಧಾನ'. ಆರ್ಕುಳ ಸುಬ್ರಾಯ ಆಚಾರ್ಯರ ರಾವಣ, ನಾರಾಯಣ ಕಿಲ್ಲೆ ಯವರ ವಿಭೀಷಣ, ಕವಿಭೂಷಣ ವೆಂಕಪ್ಪ ಶೆಟ್ಟರ ಅಂಗದ, ಶಾಸ್ತ್ರಿಗಳ ಪ್ರಹಸ್ತ ಪ್ರಾರಂಭಕ್ಕೆ ಹಾಗೆ ಕುಳಿತ ಶಾಸ್ತ್ರಿಗಳು ಎದ್ದುದು ಮಂಗಳ ಪದ್ಯ ಆದ ಬಳಿಕವೇ ತನ್ನ ಅರ್ಥಕ್ಕಾಗುವಾಗ ಮಾತ್ರ ಹೋಗಿ ಒಡೋಲಗ ಕೊಟ್ಟು, ಅದು ಸಮಾಪ್ತಿ ಯಾದೊಡನೆಯೇ ಎದ್ದು ಹೋಗಿ ಮಲಗಿ ಬಿಡುವುದೋ, ಇಲ್ಲವೇ ಇದಿರು ಸಾಲಿನ ಪ್ರೇಕ್ಷಕರ ಜೊತೆ ಕುಳಿತುಕೊಳ್ಳುವುದೋ, ಶಾಸ್ತ್ರಿಗಳ ಜಾಯಮಾನವಲ್ಲ. ಪ್ರತಿ ಯೊಂದು ಅರ್ಥವನ್ನೂ ವೇದಿಕೆಯಲ್ಲಿದ್ದೇ ಕೇಳಿ ತೃಪ್ತಿಯಾದಾಗ ಮುಗುಳ್ಳಕ್ಕು ತಲೆಯಾಡಿಸಿ ಪ್ರೋತ್ಸಾಹಿಸುವುದೇ ಅವರ ಹಿರಿಯ ಗುಣ, ಹಾಗೆಂದು ಇನ್ನೊಬ್ಬರ ಅರ್ಥಗಾರಿಕೆ ತೃಪ್ತಿ ಕೊಡದಿದ್ದರೂ ತಿರಸ್ಕಾರಭಾವವನ್ನು ಕಾಣಿಸಿ ನೋಯಿಸ ಲಾರರು. ಅಂದಿನ ಅವರ ಪ್ರಹಸ್ತನ ಅರ್ಥ ನಿಜವಾದ ಒಬ್ಬ ರಾಜನೀತಿಜ್ಞ, ಮಹಾ ಮುತ್ಸದ್ದಿ ಹೇಗಿರಬೇಕು ಎಂಬುದನ್ನು ಸಾಕ್ಷಾತ್ಕರಿಸಿದ ಹಾಗಿತ್ತು. ಕಂಡೆಯಾ ಕಡು ವೀರ ರಾವಣನ” ಎಂಬ ಪದ್ಯಕ್ಕೆ ಅವರು ಅರ್ಥ ವಿವರಿಸುವಾಗ ರಾವಣನಂಥ ಒಬ್ಬ ರಾಜಕಾರಣಿ, ಲೋಕಮಲ್ಲ, ಸಾಕ್ಷಾತ್ ಶಿವಭಕ್ತ ಇನ್ನೊಬ್ಬ ನಿಲ್ಲ ಎಂಬ ನಂಬಿಕೆಯನ್ನು ಹುಟ್ಟಿಸಿ ಬಿಟ್ಟಿದ್ದರು. ಶಾಸ್ತ್ರಿಗಳು ಯಾವ ಪಾತ್ರವನ್ನು ವಹಿಸಿದರೂ ಅದನ್ನು ಒಳ್ಳೇ ಪರಿಣಾಮ ಕಾರಿಯಾಗಿ ಚಿತ್ರಿಸುವುದರಲ್ಲಿ ನಿಸ್ಸಿಮರು. ಆದರೆ ನನ್ನ ದೃಷ್ಟಿಯಲ್ಲಿ ಅವರ “ಪಂಚವಟಿ-ವಾಲಿವಧೆ'ಯ ಶ್ರೀ ರಾಮ, ವಾಲಿ, ಸುಗ್ರೀವ, 'ವಿಭೀಷಣ ನೀತಿ'ಯು ರಾವಣ, ಅಂಗದ ಸಂಧಾನ'ದ ಪ್ರಹಸ್ತ, 'ಕೃಷ್ಣ ಸಂಧಾನ'ದ ಕೃಷ್ಣ, 'ಜರಾಸಂಧ<noinclude></noinclude> cl49wyivot2h7nmlxqgmcej7zwukcoo ಪುಟ:ಯಕ್ಷಗಾನ ಮಕರಂದ.pdf/೨೦೭ 104 100127 317162 303786 2026-05-05T09:09:53Z Ashwini Rai K 8475 /* Validated */ 317162 proofread-page text/x-wiki <noinclude><pagequality level="4" user="Ashwini Rai K" /></noinclude>{{Right|'''181'''}} ವಧೆ'ಯ ಜರಾಸಂಧ, 'ಸುಭದ್ರಾರ್ಜುನ'ದ ಅರ್ಜುನ, ಕೃಷ್ಣ, ಹನುಮಂತ, 'ಕರ್ಣ ಪರ್ವ'ದ ಕರ್ಣ, ಶಲ್ಯ, 'ಭೀಷ್ಮಾರ್ಜುನ'ದ ಭೀಷ್ಮ, ಶ್ರೀಕೃಷ್ಣ, 'ಸುಧನ್ವಾರ್ಜುನ'ದ ಸುಧನ್ವ, ಹಂಸಧ್ವಜ, ಇಷ್ಟು ಪಾತ್ರಗಳು ಅವರಿಗಾಗಿಯೇ ಮೀಸಲಿಟ್ಟಂತಿದ್ದುವುಗಳು. ಅವರ ಕೃಷ್ಣನಿಗೆ ಕೌರವನಾಗಿ, ಜರಾಸಂಧನಿಗೆ ಕೃಷ್ಣನಾಗಿ, ಕರ್ಣನಿಗೆ ಅರ್ಜುನ ನಾಗಿ, ಭೀಷ್ಮನಿಗೆ ಅರ್ಜುನನಾಗಿ, ಶ್ರೀರಾಮನಿಗೆ ಶೂರ್ಪನಖಿಯಾಗಿ, ಪ್ರಹಸ್ತನಿಗೆ ಅಂಗದನಾಗಿ ಇದಿರು ಅರ್ಥ ಹೇಳಿದ ಭಾಗ್ಯ ನನಗೂ ದೊರಕಿತ್ತು. ಶಾಸ್ತ್ರಿಗಳ ಬಹುದೊಡ್ಡ ಗುಣವೆಂದರೆ ಯಾರೇ ತನ್ನ ಇದಿರಿಗೆ ಅರ್ಥ ಹೇಳಲಿ, ಅವನು ಅವನಷ್ಟಕ್ಕೇ ಇದ್ದರೆ ಅವನನ್ನು ಮಾತಿನಿಂದ ಸೋಲಿಸುವ ಪ್ರಯತ್ನಕ್ಕೆ ಹೋಗದಿರುವುದು. ಎಲ್ಲಾದರೂ ಗ್ರಹಚಾರವಶಾತ್ ಅವರನ್ನು ಕೆಣಕಿದರೆ, ಅವನು ಎಂಥವನೇ ಇರಲಿ, ಪಾತಾಳಕ್ಕೆ ಬೀಳುವುದಂತೂ ಖಂಡಿತವೇ. ಕಿರಿಯ ಕಲಾವಿದರಿಗೆ ಮಾರ್ಗದರ್ಶನವೀಯುವುದರಲ್ಲಿ ಶಾಸ್ತ್ರಿಗಳಂಥವರು ಬೇರೊಬ್ಬರಿಲ್ಲ. ಅವರ ಅರ್ಥಗಾರಿಕೆಯದೊಂದು ಅದರದೇ ಆದ ಸೊಗಸು. ಅಗಾಧ ಪಾಂಡಿತ್ಯದ ಅಸಾಮಾನ್ಯ ವಿದ್ವಾಂಸರಿದ್ದೂ ಸರ್ವಸಾಮಾನ್ಯರಿಗೂ ಅರ್ಥವಾಗು ವಂಥ ಸಂದರ್ಭೋಚಿತ ಸರಳ ಶಬ್ದಗಳಿಂದ ರಸಚೇತನವುಂಟುಮಾಡುವ, ಎಂಥವ ರನ್ನೂ ತನ್ನೆಡೆಗೆ ಸೆಳೆಯುವ ಕಲಾಕೌಶಲ್ಯ ಅವರಿಗೆ ಹಸ್ತಗತ. ಶಾಸ್ತ್ರಿಗಳ ದೈನಂದಿನ ಜೀವನದ ನೇಮನಿಷ್ಠೆ ಅಷ್ಟೇ ಕಟ್ಟುನಿಟ್ಟಿನದ್ದು. ಅವರು ಎಲ್ಲೇ ಇರಲಿ, ನಿತ್ಯಾತ್ಮಿಕಗಳನ್ನು ತಪ್ಪದೆ ನಡೆಸುತ್ತಿದ್ದರು. ಅತಿಥಿ ಅಭ್ಯಾ ಗತರನ್ನು ಆದರಿಸುವುದರಲ್ಲಿ ಅವರದು ಎತ್ತಿದ ಕೈ. ಒಮ್ಮೆ ನಾನವರನ್ನು ಕಾಣಲು ಎಯ್ಯಾಡಿಗೆ ಹೋಗಿದ್ದೆ. ಅವರು ಒಳಗೆ ಪೂಜಾರಾಧನೆಯಲ್ಲಿದ್ದರು. ನನ್ನ ಆಗಮನ ವನ್ನು ತಿಳಿದಾಕ್ಷಣವೇ ಅಲ್ಲಿಗೇ ಆಹ್ವಾನಿಸಿ, ಹತ್ತಿರವೇ ಪೀಠವಿತ್ತು ಕುಳ್ಳಿರಿಸಿದ ಆ ಆದರದ ಸೌಜನ್ಯ ಎಂದೆಂದೂ ಮರೆಯದಂತಹದು. ಅವರು ನನಗಿಂತ ಹಿರಿಯರ ಪ್ರಾಜ್ಞರೂ ಆಗಿದ್ದರೂ ನನ್ನನ್ನು ಕರೆಯುತ್ತಿದ್ದುದು ಮಾಷ್ಟ್ರಣ್ಣಾ' ಎಂತಲೇ. ಒಮ್ಮೆ ಕರ್ಣಪರ್ವ' ಪ್ರಸಂಗದ ಯಕ್ಷಗಾನ ಕೂಟದಲ್ಲಿ ಖ್ಯಾತರೊಬ್ಬರ ಕರ್ಣ, ಶಾಸ್ತ್ರಿಗಳ ಶಲ್ಯ, ಕರ್ಣ “ಅರ್ಜುನನನ್ನು ಯಾರು ತೋರಿಸಿಕೊಡುವರೋ ಅವರಿಗೆ ಏನು ಬೇಕೋ ಅದನ್ನು ಕೊಡುತ್ತೇನೆ” ಎಂದು ಹೇಳಿದಾಕ್ಷಣ “ಕೊಡದಿರು ಕಾಡೊಂದ” ಎಂಬ ಶಲ್ಯನ ಪದ್ಯಕ್ಕೆ ಶಾಸ್ತ್ರಿಗಳು “ಕರ್ಣಾ, ಪಾರ್ಥನನ್ನು ಕಾಣಲೇ ಬೇಕೆಂದು ನಿನಗೆ ಆಸೆಯಿದ್ದರೆ ನಾನೇ ತೋರಿಸಿಕೊಟ್ಟೇನು. ನೀನು ನನಗೆ ಒಂದೇ ಒಂದು ಕಾಸ ಕೊಡ ಬೇಕೆಂದಿಲ್ಲ” ಎಂದರು. ಕರ್ಣನು ಒಡನೆಯೇ “ಓಹೋ, ಒಂದು ಕಾಸಾಗಿ ಮಾತ್ರ ಬೇಡೆಂದು ಕಾಣುತ್ತದೆ. ತುಂಬಾ ಕಾಸಿನ ಮೇಲೆಯೇ ಆಸೆಯಿರಬೇಕು, ಅಲ್ಲವೇ!” ಎಂದು ಪ್ರಶ್ನಿಸಿದ ಶಾಸ್ತ್ರಿಗಳು “ಕರ್ಣಾ, ನಿನ್ನ ಬುದ್ಧಿವಂತಿಕೆ ಇಲ್ಲಿಗೂ<noinclude></noinclude> p9ecpah04n7lar8sn7jego0lcs180yq ಪುಟ:ಯಕ್ಷಗಾನ ಮಕರಂದ.pdf/೨೦೮ 104 100128 317163 303790 2026-05-05T09:10:10Z Ashwini Rai K 8475 /* Validated */ 317163 proofread-page text/x-wiki <noinclude><pagequality level="4" user="Ashwini Rai K" /></noinclude>{{Left|'''182'''}} ಮುಟ್ಟಿತೋ? ಹಾಗೆ ನೋಡಿದರೆ ನೀನು ಕೊಡುವುದಾದರೂ ಎಲ್ಲಿಂದ ? ಯಾರಾರ ಭಂಡಾರ ಸೂರೆಮಾಡುವ ವ್ಯವಹಾರಬುದ್ಧಿ ನಮ್ಮಲ್ಲಿ ನೀನು ಪ್ರದರ್ಶಿಸುವುದು ಬೇಡ, ನಾವು ನಿನ್ನ ಹಾಗಲ್ಲ' ಎಂದು ಎದೆತಟ್ಟಿದಾಗ ಸಭೆಯಲ್ಲಿ ಪ್ರಚಂಡ ಕರತಾಡನ ಮತ್ತೊಮ್ಮೆ “ಭೀಷ್ಮಾರ್ಜುನ'ದಲ್ಲಿ ನಾರಾಯಣ ಕಿಲ್ಲೆಯವರ ಭೀಷ್ಮ, ಶಾಸ್ತ್ರಿಗಳ ಶ್ರೀ ಕೃಷ್ಣ. ಧರಿಸಿದೆ ಮತ್ಯಾದಿ ರೂಪಗಳ” ಎಂಬ ಪದ್ಯಕ್ಕೆ ಕಿಲ್ಲೆಯವರು ಅರ್ಥ ಹೇಳುತ್ತ, ಕೊನೆಯದಾಗಿ ಈ ಕೃಷ್ಣಾವತಾರದಲ್ಲಿ ಮೊಲೆ ಕೊಟ್ಟ ಪೂತನಿಯನ್ನು ಕೊಂದದ್ದು, ಹಾಲು ಬೆಣ್ಣೆ ಕದ್ದು ತಿಂದದ್ದು, ಮಾವ ಕಂಸನನ್ನೇ ಸಂಹರಿಸಿದ್ದು-ಇದೆಲ್ಲವೂ ನ್ಯಾಯವೇ?” ಎಂದು ಪ್ರಶ್ನಿಸಿ ನಿಲ್ಲಿಸಿದರು. ಅದಕ್ಕೆ ಶಾಸ್ತ್ರಿಗಳು ಪ್ರತಿಯೊಂದಕ್ಕೂ ಅವತಾರದ ಹಿನ್ನೆಲೆಯನ್ನು ಸಕಾರಣವಾಗಿ ವಿವರಿಸಿ ಉತ್ತರಿಸುತ್ತ, ಕೃಷ್ಣಾವತಾರದಲ್ಲಿಗೆ ತಂದು “ಚಿಕ್ಕ ಶಿಶುವಾಗಿದ್ದ ಕೃಷ್ಣನಿಗೆ ಮೊಲೆಯಿತ್ತು ಪೂತನಿ ತಾನಾಗಿ ಸತ್ತು ಬಿದ್ದುದಕ್ಕೆ ಹೊಣೆ ಅವಳೇ, ಹಾಲು, ಬೆಣ್ಣೆ, ತಮ್ಮ ಮನೆಯವರಿಗೆ ತಿಳಿಯದಂತೆ ಗೋಪ ಸ್ತ್ರೀಯರ ಕದದ ಚಿಲಕ ತೆಗೆದಿಟ್ಟು ಕೃಷ್ಣನ ಸ್ವೀಕಾರಕ್ಕೆ ದಾರಿಮಾಡಿಕೊಟ್ಟು ಮೆದ್ದಾಗ ತಪ್ಪೇನು ? ಕಂಸನೇ ಕೃಷ್ಣ ನನ್ನು ಕರೆಯಿಸಿ ಕೊಲ್ಲಲು ಪ್ರಯತ್ನಿಸಿದಾಗ ಆತ್ಮರಕ್ಷಣೆಯ ಹೋರಾಟದಲ್ಲಿ ಅವನು ಸತ್ತುದರಿಂದ ಕೃಷ್ಣನದು ಅನ್ಯಾಯ ಹೇಗೆ ? ಭೀಷ್ಮರು ತಿಳಿದೂ ಯಾಕೆ ಸಾಮಾನ್ಯ ರಂತೆ ವರ್ತಿಸುವುದು?” ಎಂದು ಹೊರಗೆ ಕಾಣುವಾಗ ಬಹಳ ಸುಲಭವಿದ್ದರೂ ಒಳಗೆ ಸಾಕಷ್ಟು ತತ್ವಗಳನ್ನು ತುಂಬಿಸಿದ ಈ ಉತ್ತರವನ್ನು ಹೇಳಿದರು. ಅತ್ಯಂತ ಕ್ಲಿಷ್ಟ ವಿಷಯಗಳನ್ನು ಕೂಡ ಸರಳವಾಗಿ ವಿಶದೀಕರಿಸುವುದರಲ್ಲಿ ಶಾಸ್ತ್ರಿಗಳು ನಿಷ್ಣಾತರು. ಒಂದು ಯಕ್ಷಗಾನ ಕೂಟದಲ್ಲಿ 'ಜರಾಸಂಧ ವಧೆ'ಯ ಜರಾಸಂಧ ಶಾಸ್ತ್ರಿಗಳು. ಶ್ರೀ ಕೃಷ್ಣ ನಾನು, ಸ್ನಾತಕವ್ರತಸ್ಥರಂತೆ ವೇಷಧಾರಿಗಳಾಗಿ ಬಂದ ಕೃಷ್ಣ ಭೀಮಾ ರ್ಜುನರ ನಿಜಸ್ಥಿತಿಯರಿಯದೆ ಜರಾಸಂಧ ಅವರನ್ನು ಪೀಠವಿತ್ತು, ಕುಳ್ಳಿರಿಸಿ, ಮಧು ಪರ್ಕಾದಿಗಳಿಂದ ಪೂಜಿಸಿ ನಿರೀಕ್ಷಿಸುತ್ತ ಅನುಮಾನಗೊಂಡು “ಯಾರು ನೀವು ಸತ್ಯ ಹೇಳಿ” ಎಂದು ಪ್ರಶ್ನಿಸಿದಾಗ, ಕೃಷ್ಣ ತನ್ನ ನಿಜವನ್ನು ಹೇಳಿದಾಕ್ಷಣ ಅವರು “ನೀನು ಕೃಷ್ಣನೋ ? ಹಾಗಿದ್ದರೆ ಈ ಮಾವಿನ ಮಿಡಿಯಷ್ಟೂ ಬೆಳೆಯದ ಇವ ರಾರು? ಎಂದಾಗ, ನಾನು “ಮಾವಿನ ಮಿಡಿಯಲ್ಲ; ಮಾವನ ಮಿಡಿ, ಅಂದರೆ ನನ್ನ ಮಾವನ ಮಕ್ಕಳು, ಭೀಮಾರ್ಜುನರು” ಎಂದೆ. ಆಗ ಅವರು “ಭಲೆ, ನಮ್ಮ ಹುಡುಗ ನೀನು ಒಳ್ಳೆ ಚತುರನಿದ್ದೀಯಾ! ಗೊತ್ತು ಗೊತ್ತು” ಎಂದು ಮುಂದು ವರಿಸಿದರು. ಅವರು ವಿನೋದಕ್ಕಾಗಿ ಭೀಮಾರ್ಜುನರನ್ನು ಸಣ್ಣವರು ಎಂಬ ಧ್ವನಿಯಲ್ಲಿ ಮಾವಿನ ಮಿಡಿ ಎಂಬ ಶಬ್ದ ಪ್ರಯೋಗಿಸಿದರೂ, ಅದೆಷ್ಟು ಅರ್ಥಗರ್ಭಿತ ವೆಂದು ವಿವೇಚನೆಯಿಂದ ಸ್ಪಷ್ಟವಾಗದಿರದು. ಮಾವಿನ ಮರ ಹಲವಾರು ಕೊಂಬೆ ಗಳಿದ್ದು ವಿಸ್ತಾರವಾದುದು. ಅದರಂತೆ ಚಂದ್ರವಂಶವೂ ಶಾಖೋಪಶಾಖೆಗಳಿಂದ<noinclude></noinclude> pnollvzxfy2441pr37yf77hy0hdqhd9 ಪುಟ:ಯಕ್ಷಗಾನ ಮಕರಂದ.pdf/೨೦೯ 104 100129 317164 303800 2026-05-05T09:10:26Z Ashwini Rai K 8475 /* Validated */ 317164 proofread-page text/x-wiki <noinclude><pagequality level="4" user="Ashwini Rai K" /></noinclude>{{Right|'''183'''}} ಕೂಡಿದ್ದು, ಅದರದೊಂದು ಶಾಖೆಯಲ್ಲಿ ಹುಟ್ಟಿ ಬೆಳೆದು ಹಣ್ಣಾದ ದವನು ಜರಾ ಸಂಧ. ಅತ್ತ ಭೀಷ್ಮ ಧೃತರಾಷ್ಟ್ರರೂ ಹಾಗೆಯೇ. ಇಷ್ಟು ಮಂದಿ ತಲೆ ಹಣ್ಣಾದ ವರೆಡೆಯಲ್ಲಿ ಭೀಮಾರ್ಜುನರು ಮಿಡಿಗೆ ಸಮಾನರಲ್ಲದೆ ಮತ್ತೇನು? ಇಂತಹ ಸರಳ ಆದರೆ ಅರ್ಥಗರ್ಭಿತ ಪ್ರಯೋಗಗಳು ಹಲವಾರು, ಒಮ್ಮೆ ಜಾಲರಿನಲ್ಲಿ ಶಾಸ್ತ್ರಿಗಳಿಗೆ ಸನ್ಮಾನ ಸಮಾರಂಭ. ಕಾರ್ಯ ಕರ್ತರು ನನಗಿದನ್ನು ತಿಳಿಸುವ ಮೊದಲೇ ನಾನು ಇನ್ನೊಂದು ಕಾರ್ಯಕ್ರಮಕ್ಕೆ ಬರುವೆನೆಂದು ಒಪ್ಪಿಕೊಂಡಿದ್ದೆ. ಇಲ್ಲಿ ಯಕ್ಷಗಾನವಿದ್ದು 'ವಿಭೀಷಣ ನೀತಿ- ಅಂಗದ ಸಂಧಾನ'ದಲ್ಲಿ ಶಾಸ್ತ್ರಿಗಳು ಪ್ರಹಸ್ತನ ಪಾತ್ರವನ್ನೂ, ನಾನು ಅಂಗದನ ಪಾತ್ರವನ್ನೂ ವಹಿಸಬೇಕೆಂದು ಕಾರ್ಯಕರ್ತರ ಅಪೇಕ್ಷೆಯಾಗಿತ್ತು. ಇಕ್ಕಟ್ಟಿನ ಸಂದರ್ಭ. ಕಡೆಗೆ ಅಲ್ಲಿಯ ಅರ್ಥ ಮುಗಿಸಿ, ಇಲ್ಲಿಯ ಅಂಗದನ ಪಾತ್ರಕ್ಕಾಗುವಾಗ ಬರುತ್ತೇನೆ ಎಂದು ಇವರಿಗೆ ಹೇಳಿದೆ. ಹಾಗೆಯೇ ಬೆಳಗಿನ ಝಾಮ ಐದು ಗಂಟೆಗೆ ಜಾಲರಿಗೆ ಬಂದು ತಲಪಿದೆ. ಇಲ್ಲಿ ಬರುವಾಗ ಶಾಸ್ತ್ರಿಗಳು, ನಾನು ಬರುವುದು ಅನುಮಾನ ಎಂದು ಭಾವಿಸಿ “ವಿಭೀಷಣ ನೀತಿ'ಯ ರಾವಣನ ಅರ್ಥ ವಹಿಸಿಕೊಂಡು ಅದನ್ನು ಪೂರೈಸಿ, ಅಲ್ಲೇ ಮಾಳಿಗೆಯಲ್ಲಿ ಮಲಗಿದ್ದರು. ಅಂಗದ-ಪ್ರಹಸ್ತರ ಸಂವಾದ ಮುಗಿದು ಅಂಗದನು ರಾವಣನನ್ನು ಮಾತಾಡಿಸುವಲ್ಲಿಗೆ ಮುಟ್ಟಿತ್ತು. ಅಲ್ಲಿಂದ ಅಂಗದನ ಅರ್ಥ ವಹಿಸಿಕೊಂಡೆ. ಶಾಸ್ತ್ರಿಗಳ ನಿದ್ರೆಗೆ ಆತಂಕ ಮಾಡಬೇಡಿ ಎಂದು ಕಾರ್ಯಕರ್ತರನ್ನು ತಡೆದು, “ಏನಪ್ಪ ರಾವಣೇಂದ್ರ” ಎಂಬ ಪದ್ಯವನ್ನು ಭಾಗವತರು ಹಾಡಿದಾಗ, ರಾವಣನನ್ನು ಅತ್ಯುನ್ನತ ಮಟ್ಟದ ಮಹಾನ್ ವ್ಯಕ್ತಿಯಾಗಿ ಚಿತ್ರಿಸಿ, ಇಂತಹ ನೀನೂ ಸೀತಾಪಹಾರದಂತಹ ಅತ್ಯಾಚಾರಕ್ಕೆ ಮನಮಾಡಿದ್ದು ಅನ್ಯಾಯ ವಲ್ಲವೇ?” ಎಂತ ಆಪಾದಿಸಿದೆ. ಬಳಿಕ ಎರಡನೇ ಪದ್ಯ ಹಾಡಿದಾಗ ಅದರ ಅರ್ಥ ಪ್ರಾರಂಭಿಸಿದ್ದೇನಷ್ಟೆ. ಥಟ್ಟನೆ ವೇದಿಕೆಯಲ್ಲಿ ಶಾಸ್ತ್ರಿಗಳು ಪ್ರತ್ಯಕ್ಷ, ಮಾತ್ರವಲ್ಲ, “ಅಂಗದಾ” ಎಂದು ಸಂಬೋಧಿಸಿ, ನನ್ನನ್ನು ನೋಡಿ, “ಏನಯ್ಯಾ, ನೀನು ಮಾತಿನಲ್ಲಿ ನಿದ್ರೆಯಲ್ಲಿದ್ದವನನ್ನೂ ಎಬ್ಬಿಸುವಷ್ಟು ಜಾಣನಿದ್ದಿಯಾ? ಆದರೆ ನೋಡು, ನಾನು ಯಾರೆಂತ ಚೆನ್ನಾಗಿ ಯೋಚಿಸಿ ಮಾತಾಡು” ಎಂದು ಅವರ ಸ್ವಾಭಾವಿಕ ಕ್ರಮದಿಂದ ತಲೆಯಲ್ಲಾಡಿಸಿ ಒಮ್ಮೆ ಸಭೆಯತ್ತ ನೋಡಿದ್ದೇ ನೋಡಿದ್ದು, ಸಭೆಯಲ್ಲಿ ನಗುವೇ ನಗು. ಮತ್ತಿನ ಕಥೆ ಬಣ್ಣಿಸಲಾರದಷ್ಟು ರಸಮಯವಾಗಿತ್ತು. ಅಂಗದ ರಾವಣರ ಸಂವಾದದಲ್ಲಿ ಘಂಟೆ ಏಳಾದರೂ ಜನರು ಏಳುವಂತಿಲ್ಲ. ಇನಿತಿದ್ದೂ ಯಾರಿಗೂ ಒಂದಿಷ್ಟೂ ಬೇಸರವಾಗದಿದ್ದುದೇ ಅಂದಿನ ವೈಶಿಷ್ಟ್ಯ ಆ ಭಾಗದಲ್ಲಿ ಶಾಸ್ತ್ರಿಗಳ ರಾವಣ ಅಷ್ಟೊಂದು ಎತ್ತರಕ್ಕೆ ಏರಿದ್ದು ಸ್ವತಃ ನನಗೇ ಆಶ್ಚರ್ಯ. ಈ ಮೊದಲು ಅವರ ರಾವಣನ ಪಾತ್ರವನ್ನು ಅನೇಕ ಬಾರಿ ನಾನು ಕೇಳಿದ್ದೆ. ಅವೆಲ್ಲಕ್ಕಿಂತಲೂ ಇದು ಮಿಗಿಲಾಗಿತ್ತು. ನಮ್ಮೊಳಗೆ ಅಷ್ಟೊಂದು ವಾದಿಸಿಕೊಂಡ ಪ್ರಸಂಗ ನಡೆ<noinclude></noinclude> beyc8wg7m630qo7jbkxxkjwx5k246uy ಪುಟ:ಯಕ್ಷಗಾನ ಮಕರಂದ.pdf/೨೧೦ 104 100130 317165 303806 2026-05-05T09:10:49Z Ashwini Rai K 8475 /* Validated */ 317165 proofread-page text/x-wiki <noinclude><pagequality level="4" user="Ashwini Rai K" /></noinclude>{{Left|184}} ದಿದ್ದರೂ ನಾವಲ್ಲಿಂದ ಎದ್ದ ಮೇಲೆ ಅವರು ನಮ್ಮ ಮನೆಗೆ ಬಂದು ನನ್ನ ಆತಿಥ್ಯ ಸ್ವೀಕರಿಸಿ ಆ ಮೇಲೆ ಊರಿಗೆ ತೆರಳಿದರು. ಶಾಸ್ತ್ರಿಗಳು ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಸನ್ನಿಧಿ ಯಲ್ಲಿ ಒಮ್ಮೆ ಶೂರ್ಪನಖಾ ಮಾನಭಂಗ' ಕಥಾಭಾಗದ ಶೂರ್ಪನಖಿಯ ಪಾತ್ರ ನಿರ್ವಹಿಸಿ ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದರು. ಸಹಜ ಶೂರ್ಪನಖಿಯಾಗಿ ಪ್ರವೇಶಿಸಿದಾಗಿನ ರೌದ್ರಾವೇಶ ಪ್ರದರ್ಶನ, ಅದಕ್ಕೆ ತಕ್ಕುದಾದ ಶಬ್ದ ಗಾಂಭೀರ್ಯ, ಮಾಯಾ ಶೂರ್ಪನಖಿಯ ಶೃಂಗಾರ, ವೈಯಾರ ಅವೆಲ್ಲವೂ ಭಲೆ ಭಲೆ ಅನ್ನಿ ಸಿದ್ದರ, ಎಲ್ಲಕ್ಕಿಂತಲೂ ಮಿಗಿಲಾಗಿ ಕರ್ಣನಾಸಾಛೇದನವಾದ ಮುತ್ತಿನ ಮಾತು ಗಳು ಮಗಿಲ್ಲದ ವ್ಯಕ್ತಿ ಮಾತಾಡಿದಂತೆ. ಅನುನಾಸಿಕ ಸ್ವರ ಶಬ್ದಗಳ ಬಳಕೆ, ವ್ಯಕ್ತಿಯ ಪರಿಚಯವೇ ಗೊತ್ತಾಗದಂತಹ ಸ್ಥಿತಿ, ಕೊನೆಯ ವರೆಗೂ ಒಂದಿಷ್ಟೂ ಮರೆಯದ ಔಚಿತ್ಯಪ್ರಜ್ಞೆ ಇದುವರೆಗೂ ಪ್ರಾಯಶಃ ಯಾವ ಕಲಾವಿದನೂ ಪ್ರಕ ಟಿಸದ ಆ ಕಲಾಕೌಶಲ್ಯ ಶಾಸ್ತ್ರಿಗಳ ಚಾತುರ್ಯಕ್ಕೆ ಮರೆಯಲಾರದ ನಿದರ್ಶನ. {{gap}}ಶಾಸ್ತ್ರಿಗಳ ಇತ್ತೀಚೆಗಿನ ಅಂದರೆ 1968ರಿಂದ ಅವರು ಪರಂಧಾಮವೈದುವು ದಕ್ಕೆ ಕೆಲವು ಮಾಹಗಳ ವರೆಗೆ ಶ್ರೀ ಎಡನೀರು ಮಠದಲ್ಲಿ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಅಪ್ಪಣೆಯಂತೆ ಆಗಾಗ ಅಲ್ಲಿ ಕಲೆತು ಕೆಲವೊಮ್ಮೆ ಒಂದೊಂದು ವಾರವೇ ನಾವು ಒಂದಾಗಿ ಪ್ರತಿ ದಿನವೂ ಸ್ವಲ್ಪ ಸ್ವಲ್ಪ ಹೊತ್ತು ಯಕ್ಷಗಾನ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಆನಂದ ಪಡುತ್ತಿದ್ದೆವು. ಆ ರಸ ನಿಮಿಷಗಳನ್ನು ನಾನೆಂ ದೆಂದಿಗೂ ಮರೆಯಲಾರೆ. ಅವರಿಗಿಂತ ಪ್ರಾಯದಲ್ಲಿ ಪಾಂಡಿತ್ಯದಲ್ಲಿ ಸಣ್ಣವನಾದ ನನ್ನನ್ನು ಅವರು ಗೌರವಿಸುತ್ತಿದ್ದ ಕ್ರಮ ನೆನಪಾದಾಗ ಅಂತಹ ಹಿರಿಯ ಗುಣದ ಮಹಾ ವ್ಯಕ್ತಿಯನ್ನು ಕಳೆದುಕೊಂಡ ನಾವೆಂತಹ ನಿರ್ಭಾಗ್ಯರು-ಎಂದು ಕಣ್ಣೀರು ಬರುತ್ತಿದೆ. ಶಾಸ್ತ್ರಿಗಳು ಯಕ್ಷಗಾನ ಕಲೆಗೇ ಒಬ್ಬ ಯುಗಪುರುಷರೆಂಬುದಕ್ಕೆ ಸಂಶ ಯವೇ ಇಲ್ಲ. ಅವರ ಸ್ಮರಣೆ ಕಲಾವಿದರಿಗೆ ರಸಚೇತನವನ್ನುಂಟುಮಾಡಲಿ.<noinclude></noinclude> kn56go52zb839lo78fweki98xj5vxzq ಪುಟ:ಯಕ್ಷಗಾನ ಮಕರಂದ.pdf/೨೧೧ 104 100131 317166 303815 2026-05-05T09:11:04Z Ashwini Rai K 8475 /* Validated */ 317166 proofread-page text/x-wiki <noinclude><pagequality level="4" user="Ashwini Rai K" /></noinclude>{{Left|'''ಪೊಳಲಿ ಶಾಸ್ತ್ರಿಗಳು ಭೀಷ್ಮನಾಗಿ - ನಾನು ಕಂಡಂತೆ'''}} ——————————————————————————————— {{Right|'''-ಕೈಲಾರು ಈಶ್ವರ ಭಟ್ಟ.'''}} ಸುಪ್ರಸಿದ್ಧ ಯಕ್ಷಗಾನ ಕಲಾವಿದರೂ, ಕನ್ನಡ, ಸಂಸ್ಕೃತ ಉಭಯಭಾಷಾ ವಿಶಾರದರೂ ಆದ ದಿವಂಗತ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳನ್ನು ಕನ್ನಡನಾಡಿನಾದ್ಯಂತ ತಿಳಿಯದವರಿಲ್ಲ; ಅವರ ವಿದ್ವತ್ತೂರ್ಣವಾದ ಅರ್ಥವಿವರಣೆಯನ್ನು ಕೇಳದವರಿಲ್ಲ. ಯಕ್ಷಗಾನ ವಾಚಸ್ಪತಿಯೆಂಬ ಬಿರುದಾಂಕಿತ ದಿ. ಶಾಸ್ತ್ರಿಗಳ ಕುರಿತು ನನ್ನಂಥವರು ಬರೆಯುವುದೆಂದರೆ ಕುರುಡರು ಆನೆಯನ್ನು ಮುಟ್ಟಿ ನೋಡಿದಂತೆಯೇ ಸರಿ. ದಿವಂಗತ ಶಾಸ್ತ್ರಿಗಳ ಅರ್ಥವಿವರಣೆಯ ರಸಾಸ್ವಾದನೆಗೈದ ನನ್ನ ಈ ಪುಟ್ಟ ಲೇಖನವು ಕೇವಲ ಅವರ ಪ್ರತಿಭೆಯ ದಿಗ್ದರ್ಶನ ಮಾತ್ರವಾಗಬಹುದಷ್ಟೇ ಹೊರತು ಸಮಗ್ರದರ್ಶನವೆಂದೂ ಆಗಲಾರದು. ನಾನು ಕೇಳಿದ ಅವರ ಭೀಷ್ಮನ ಪಾತ್ರವು ಈಗಲೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಗುಣುಗುಣಿಸುತ್ತಲಿದೆ. ಬಾಲ್ಯದಿಂದಲೇ ಉಂಡು ತಿಂದು ನಲಿದು, ಒಡನೊಡನೆಯೇ ಬೆಳೆದು ಬಂದು, ರಾಜ್ಯದ ಪ್ರತಿಷ್ಠೆಯ ವ್ಯಾಮೋಹಕ್ಕೆ ಬಲಿಯಾದ ಕೌರವ ಪಾಂಡವರಲ್ಲಿ ಯುದ್ಧವು ನಿಶ್ಚಯವಾಗಿ, ಕುರುಕ್ಷೇತ್ರದಲ್ಲವರು ಸೈನ್ಯ ಸಮೇತರಾಗಿ ಸೇರಿ, ಯುದ್ಧ ನಡೆದು ಸಾಯುವ ಸನ್ನಿವೇಶ ಬಂದ ಸಂದರ್ಭದಲ್ಲಿ, ಮಧ್ಯರಾತ್ರಿಯಾದರೂ ನಿದ್ದೆ ಬಾರದ ಭೀಷ್ಮರು, “ಭಗವಾನ್ ಶ್ರೀಹರೀ ! ನನ್ನ ದೌರ್ಭಾಗ್ಯವೇ ! ನಾನು ನಿದ್ರೆ ಮಾಡ ಬೇಕೆಂದು ಎಷ್ಟು ಪ್ರಯತ್ನಿಸಿದರೂ ನಿದ್ದೆಯೇ ಬರಲೊಲ್ಲದು. ಹೇಗೆ ತಾನೇ ನಿದ್ರೆ ಬರಬೇಕು? ನನ್ನ ಈ ಎಡಬಲ ತೊಡೆಗಳಲ್ಲಿ ಕೂರಿಸಿ, ಆಡಿಸಿ, ದೊಡ್ಡವರನ್ನಾಗಿ ಮಾಡಿ, ಸಕಲ ವಿದ್ಯಾಪಾರಂಗತರನ್ನಾಗಿಸಿದ, ವೀರಾಧಿವೀರರಾದ ಈ ನನ್ನ ಮರಿ ಮಕ್ಕಳೇ ದಾಯಾದ್ಯಮತ್ಸರದಿಂದ ನಮ್ಮಿ ಹಸ್ತಿನಾವತೀ ಸಾಮ್ರಾಜ್ಯಕ್ಕಾಗಿ ತಮ್ಮ ತಮ್ಮೊಳಗೇ ಯುದ್ಧ ಮಾಡುತ್ತಾರೆಂದಾಗ ಹೇಗೆ ತಾನೇ ನಿದ್ದೆ ಬರಬೇಕು ? ಎರಡು ಮೂರು ತಲೆಮಾರುಗಳಿಂದಲೂ ಹಸ್ತಿನಾವತಿಯ ಗದ್ದುಗೆಯ ಗೌರವವನ್ನು ಕಾಪಾ ಡಿಕೊಂಡು ಬಂದ ನಾನು ನಾಳಿನ ಯುದ್ಧದಲ್ಲಾಗತಕ್ಕ ಪ್ರಳಯಾಂತಕ ದೃಶ್ಯವನ್ನು ಹೇಗೆ ತಾನೇ ನೋಡಲಿ!”-ಎಂದು ಮನದಳಲನ್ನು ತೋಡಿಕೊಳ್ಳುವಾಗ, ಶ್ರೀಯು ತರ ಕರುಣರಸ ಪ್ರದರ್ಶನವು ಯಾರ ಮನಸ್ಸನ್ನಾದರೂ ಕರಗಿಸದಿರಲಾರದು.<noinclude></noinclude> 4rjfmmo7vf3u3ldpvhdcupu4f0brffp ಪುಟ:ಯಕ್ಷಗಾನ ಮಕರಂದ.pdf/೨೧೨ 104 100132 317167 303829 2026-05-05T09:12:18Z Ashwini Rai K 8475 /* Validated */ 317167 proofread-page text/x-wiki <noinclude><pagequality level="4" user="Ashwini Rai K" /></noinclude>{{Left|'''186'''}} ಸೇನಾಧಿಪತ್ಯವನ್ನು ವಹಿಸಿಕೊಳ್ಳಬೇಕೆಂದು ಕೇಳಲು, ಮಧ್ಯರಾತ್ರಿಯಲ್ಲಿ ಏಕಾಂಗಿಯಾಗಿ ಬಂದ ಕೌರವೇಶ್ವರನನ್ನು ಕಂಡು, “ಸಂಧಾನವನ್ನು ಮಾಡಿ ಈ ಹಸ್ತಿ ನಾವತಿಯ ಪಟ್ಟವನ್ನು ನಿನಗೆ ಚಿರಸ್ಥಾಯಿಯಾಗುವಂತೆ ಮಾಡುವೆನು; ಯುದ್ಧವು ಬೇಡ”ವೆಂದು ಎಷ್ಟು ಬಗೆಯಿಂದ ಹೇಳಿದರೂ ಕೇಳದೆ, ಕೌರವನು ತನ್ನ ದೃಢ ನಿಶ್ಚಯ ವನ್ನು ಪ್ರಕಟಿಸಿದಾಗ, “ಕೌರವಾ! ನೀನು ಛಲವಾದಿಯೆಂಬುದನ್ನು ಬಲ್ಲೆ. ಈ ಭೀಷ್ಮನು ಯುದ್ಧಕ್ಕೆ ಹೆದರಿ, ಸಂಧಿಯಾಗಬೇಕೆಂದು ಹೇಳುವನೆಂದೆಣಿಸಿದೆಯಾ ? ಕೇಳು ಕೌರವೇಶ್ವರಾ | ನನ್ನ ಪ್ರತಿಜ್ಞೆಗಳನ್ನು ಕೇಳು, ನಾಳೆ ಪ್ರಾರಂಭವಾಗುವ ಯುದ್ಧದಲ್ಲಿ ನಿನ್ನ ಸೇನಾಧಿಪತ್ಯವನ್ನು ವಹಿಸಿಕೊಂಡು, ಪಾಂಡವ ಸೇನೆಯೊಡನೆ ಖಾಡಾಖಾಡಿ ಯುದ್ಧ ಮಾಡಿ, ಮಡಿದ ಸರನು ಮುಳುಗುವ ಮುನ್ನ ದಿನ ವೊಂದರಲ್ಲಿ ಹತ್ತು ಸಾವಿರ ಮುಕುಟವರ್ಧನರನ್ನು ಧರಿತ್ರಿಗೆ ಕೆಡಹುವೆನು. ಈ ಯುದ್ಧ ದಲ್ಲಿ ಚಕ್ರವನ್ನು ಹಿಡಿದು ಯುದ್ಧ ಮಾಡುವುದಿಲ್ಲವೆಂದು ಹೇಳಿದ ಭಗವಾನ್ ಶ್ರೀ ಕೃಷ್ಣನ ಕೈಯಲ್ಲಿ ಚಕ್ರವನ್ನು ಹಿಡಿಸುತ್ತೇನೆ. ಹೆದರಬೇಡ, ಹೋಗು. ಧೈರ್ಯಸ್ಥ ನಾಗಿ ಹೋಗು” ಎಂದು ಹೇಳುವಲ್ಲಿ ಅವರ ವೀರೋಚಿತವಾದ ವಾಕ್ಯಗಳನ್ನು ಕೇಳು ವಾಗ, ಮಾತಿನ ಮುಖದಿಂದ ಅಗ್ನಿಯೇ ಪ್ರಜ್ವಲಿಸಿದಂತೆ ಕಾಣಬರುತ್ತಿತ್ತು. ವೀರ ರಸ ಪ್ರದರ್ಶನವು ಅತ್ಯುನ್ನತವಾಗುತ್ತಿತ್ತು. ಪರಮಾತ್ಮಧ್ಯಾನ ಪರಾಯಣರಾಗಿ ಮಲಗಿ ನಿದ್ರಿಸಲಾರದೇ ಹೋದ ಭೀಷ್ಮರು, ಮರುದಿನದ ಯುದ್ಧದಲ್ಲಿ ತನ್ನನ್ನಿದಿರಿಸಿದ ಅಭಿಮನ್ಯುವಿನೊಡನೆ, ಅಭಿಮನ್ಯು ಕುಮಾರಾ ! ನೀನೇ ಬಂದುದು ಬಹಳ ಒಳ್ಳೆಯದಾಯಿತು. ಎಷ್ಟೋ ದಿವಸಗಳಿಂದ ಯೋಚಿಸುತ್ತಿದ್ದೇನೆ. ನಮ್ಮ ಅಭಿಮನ್ಯು ಹುಡುಗ ಹೇಗೆ? ಅವನ ಶಸ್ತ್ರ ವಿದ್ಯಾಭ್ಯಾಸವು ಹೇಗೆ ಸಾಗಿದೆ ? – ಎಂಬುದನ್ನು ಪ್ರತ್ಯಕ್ಷ ತಿಳಿಯಬೇಕೆಂದಿದ್ದೆ. ಈ ದಿನ ಪರೀಕ್ಷೆ ಮಾಡಬೇಕು. ಕುಮಾರಾ ! ತೋರಿಸು ನಿನ್ನ ಕರಕೌಶಲಗಳನ್ನು, ನೀನು ಈ ಶಸ್ತ್ರವಿದ್ಯೆಯಲ್ಲಿ ಉತ್ತಮಾಂಕಗಳನ್ನು ಪಡೆಯುವೆಯೋ ಹೇಗೆಂಬುದನ್ನು ಪರೀಕ್ಷಿಸುವೆನು. ಹುಂ, ಪ್ರಯೋಗಿಸು” ಎಂದಾಗ ಉಬ್ಬೇರಿದ ಅಭಿಮನ್ಯುವು ನಿಶಿತಾಸ್ತ್ರಗಳನ್ನೆಸೆಯಲು ಭೀಷ್ಮರು, “ಹಾಂ! ಹಾಂ! ಸಾಕು. ಸಾಕು. ಚಿಂತೆಯಿಲ್ಲ ಹುಡುಗ, ಕುಮಾರಾ! ನೀನು ಧನುರ್ವಿದ್ಯೆಯಲ್ಲಿ ಸಮರ್ಥನಾಗಿದ್ದೀಯೇ. ಇಕೋ ಈ ಅಜ್ಜನ ಎರಡು ಬಾಣಗಳ ಸವಿಯನ್ನು ನೋಡಿಕೊಂಡು ತೆರಳು ಎಂದು ಹೇಳುವಾಗ ಅವರ ಪರೀಕ್ಷಕ ದೃಷ್ಟಿ ಓರ್ವ ಪ್ರತಿಭಾಶಾಲಿಯಾದ ವಿದ್ಯಾರ್ಥಿ ಯನ್ನು ಪರೀಕ್ಷಿಸುವಂತೆ ಭಾಸವಾಗುತ್ತಿತ್ತು. ಹಾಸ್ಯರಸ ಪೋಷಣೆಯಲ್ಲಂತೂ ಶಾಸ್ತ್ರಿಗಳು ಅನನ್ಯಸಾಧಾರಣರಾಗಿದ್ದರು. ಶ್ರೀ ಕೃಷ್ಣಾರ್ಜುನರು ರಥಾರೂಢರಾಗಿ ಯುದ್ಧಕ್ಕೆ ಬಂದು ನಿಂತಾಗ ಶ್ರೀಕೃಷ್ಣ ನೊಡನೆ, “ದೇವಾ ! ನಾನೂ ನಿನ್ನ ಭಕ್ತನಲ್ಲವೇ ? ಭಕ್ತರಲ್ಲಿ ಭೇದವನ್ನೆಣಿಸುವೆಯಾ<noinclude></noinclude> 8z093iqtm8olet9s7sa20n6pwf8lsxy ಪುಟ:ಯಕ್ಷಗಾನ ಮಕರಂದ.pdf/೨೧೩ 104 100133 317168 303833 2026-05-05T09:12:43Z Ashwini Rai K 8475 /* Validated */ 317168 proofread-page text/x-wiki <noinclude><pagequality level="4" user="Ashwini Rai K" /></noinclude>{{Right|'''187'''}} ಪರಮಾತ್ಮ ? ಸ್ವಾಮಿ ! ನಾನು ನಿಜವಾಗಿಯೂ ನಿನ್ನ ಭಕ್ತನಾಗಿದ್ದರೆ, ಈ ಅರ್ಜು ನನು ಹೆಚ್ಚು -- ನಾನೊಂದು ಕಡಿಮೆಯೇನು? ಬಾ ದೇವಾ ! ಬಾ, ಒಂದೇ ಒಂದು ಬಾರಿ ಈ ಭೀಷ್ಮನ ರಥವನ್ನಲಂಕರಿಸು” ಎಂದಾಗ ಕೃಷ್ಣನು, “ಭೀಷ್ಮರೇ! ನಿಮಗೂ ಪಾಂಡವ ಕೌರವರು ಸಮಾನರಲ್ಲವೆ ? ನೀವೇ ಏಕೆ ಈಯೆಡೆಗೆ ಬರಬಾರದು ?” ಎಂದು ಕೇಳುವಾಗ, “ಕೃಷ್ಣಾ ! ನಾನು ಕೌರವನ ಉಪ್ಪುಂಡವನು. ತಾಯಿಯ ಮಾತಿಗಾಗಿ ಈ ಹಸ್ತಿನಾವತಿಯ ಸಿಂಹಾಸನದ ಹೊಣೆ ಹೊತ್ತವನು” ಎಂದಾಗ ಕೃಷ್ಣನು, “ನಾನೂ ಪಾಂಡವರ ಹೊಣೆ ಹೊತ್ತವನು. ಅರ್ಜುನನಿಗೆ ಸಾರಥ್ಯವನ್ನು ಮಾಡುವೆನೆಂದು ಭಾಷೆ ಕೊಟ್ಟಿರುವೆನು” – ಎಂಬಲ್ಲಿ ಅವರ ಪ್ರಶೋತ್ತರ ಮಾತು ಗಳು ಸಹೃದಯರ ಮನಸ್ಸನ್ನು ಸೂರೆಮಾಡುವಂತಹವು. ಕಡೆಯದಾಗಿ ಭೀಷ್ಮಾರ್ಜು ನರ ಸಮರ ಸರಿಸಮಾನವಾಗಿ ನಡೆದು, ಅರ್ಜುನನನ್ನು ಯುದ್ಧದಲ್ಲಿ ಸೋಲಿಸಲು ಭಕ್ತಸಂರಕ್ಷಕನಾದ ಭಗವಾನ್ ಶ್ರೀಹರಿಯ ಅನುಗ್ರಹವಿರುವಲ್ಲಿಯ ತನಕ ಯಾರಿಂ ದಲೂ ಸಾಧ್ಯವಾಗಲಾರದೆಂಬುದನ್ನು ಮನಗಂಡು, ಕೌರವನಿಗೆ ಭಾಷೆಯನ್ನಿತ್ತಂತೆ ಯುದ್ಧ ಮಾಡಿ, ಪಾಂಡವ ಬಲವನ್ನು ಸದೆಬಡಿದರೂ ಜಯಾಪಜಯಗಳು ಯಾರ ಪಾಲಿಗೂ ಬಾರದಿರಲು, ಎದುರಾಗಿ ರಥವನ್ನು ಮುಂದುವರಿಸಿಕೊಂಡು ಬರುತ್ತಿರುವ ಶ್ರೀ ಹರಿಯ ಹಣೆಗೇ ಗುರಿಯಿಟ್ಟು 'ಅಸಿರತ್ನ' ಶರವನ್ನೆಸೆದಾಗ, ಕ್ಷೆಭೆಗೊಂಡ ಶ್ರೀ ಕೃಷ್ಣನು, ಪ್ರಳಯಕಾಲದ ರುದ್ರನಂತೆ, ವಾಫೆಯನ್ನು ಬಿಸುಟು, ಸುದರ್ಶನ ವನ್ನು ಝಳಪಿಸುತ್ತಾ ಭೂಮಿಗಿಳಿದು ತನ್ನೆದುರಿಗೆ ಬರುತ್ತಿದ್ದಾಗ, ಬ್ರಹ್ಮಾಂಡ ವನ್ನೇ ಸುಡುತ್ತಿರುವನೋ ಎಂಬಂತಿದ್ದ ಶ್ರೀಹರಿಯ ಪಾದಕಮಲಗಳಲ್ಲಿ ವಿನಮ ನಾಗಿ ಬೀಳುತ್ತಾ “ಜಯ ! ಜಯ ! ಸ್ವಾಮಿ ! ಈಯೊಂದು ಅಪರಾಧವನ್ನು ಮನ್ನಿಸಿ ರಕ್ಷಿಸು; ರಕ್ಷಿಸು” – ಎಂದು ಹೇಳುತ್ತಾ, ಶ್ರೀ ಕೃಷ್ಣನ ಮಹಿಮೆಯನ್ನು ಕೊಂಡಾಡುತ್ತ, ಭಕ್ತಿಯಿಂದ ಸ್ತುತಿಸುತ್ತಾ ಕೃಷ್ಣನನ್ನು ಪ್ರಸನ್ನಗೊಳಿಸಿ, ಶಿಖಂಡಿ ಯೆದುರಾಗಿ ಬರಲು ಶಸ್ತ್ರಾಸ್ತ್ರಗಳನ್ನು ಬಿಸುಟು, ಹೃತ್ಕಮಲಸ್ಥನನಾದ ಚಿನ್ಮಯ ಮೂರ್ತಿಯಲ್ಲಿ ಭಾವೈಕ್ಯದಿಂದ ಜೀವೈಕ್ಯವನ್ನು ಪಡೆಯುವ ದೃಢನಿಶ್ಚಯದಿಂದ, ಮೈ ತುಂಬಾ ಚುಚ್ಚಿಕೊಂಡಿರುವ ಸರಳ ಮಂಚದಲ್ಲಿ ಭಾರತಾಹಾವರಂಗದಲ್ಲಿಯೇ ಯೋಗಾರೂಢನಾಗಿ ಮಲಗಿ ಶ್ರೀಕೃಷ್ಣಾರ್ಪಣಮಸ್ತು – ಎನ್ನುವ ದೃಶ್ಯವಂತ ಅತ್ಯಂತ ಹೃದಯಂಗಮವೂ, ಕರ್ಣಾನಂದಕರವೂ ಆಗಿರುತ್ತಿತ್ತು. {{center|''' ಸರ್ವೇ ಜನಾಃ ಸುಖಿನೋ ಭವಂತು '''}}<noinclude></noinclude> 9jlv3j9ryo9lkkcuubqucbatear4ppv ಪುಟ:ಯಕ್ಷಗಾನ ಮಕರಂದ.pdf/೨೧೪ 104 100134 317169 294015 2026-05-05T09:15:22Z Ashwini Rai K 8475 /* Proofread */ 317169 proofread-page text/x-wiki <noinclude><pagequality level="3" user="Ashwini Rai K" /></noinclude> {{Left|'''"ಪರಿಪೂರ್ಣ ಕಲಾವಿದ"'''}} ---------------------------------------------------- {{Right|'''- ಜೆಡ್ಡು ನಾರಾಯಣ ಭಟ್ಟ.'''}} {{gap}}ನನಗೆ ಶಾಸ್ತ್ರಿಗಳ ಪರಿಚಯವಾಗಿದ್ದು 1956ರಲ್ಲಿ. ಆ ಮೊದಲು ಅವರನ್ನು ಮೆಚ್ಚಿದವರಲ್ಲಿ ನಾನೂ ಒಬ್ಬ, ಅಷ್ಟೆ. ಅವರ ಕೌರವ, ಶಲ್ಯನ ಪಾತ್ರ ನಿರ್ವಹಣೆ ಯನ್ನು ದಿ! ಕಿಲ್ಲೆಯವರ ಒಡನಾಟದಲ್ಲಿ ಕಂಡಿದ್ದೆ, ಕೇಳಿದ್ದೆ ಸಂಪೂರ್ಣ ಮೆಚ್ಚಿದ್ದ. ಪ್ರಾಯಶಃ ಭೀಷ್ಮ, ಮಾಗಧರ ಪಾತ್ರಗಳನ್ನು ಬಹಳ ಚಿಕ್ಕವನಿದ್ದಾಗ- ಆರೆನಿದ್ದೆ ಯಲ್ಲಿ ಕೇಳಿರಬೇಕು. ಶ್ರೀಯುತ ಶಾಸ್ತ್ರಿಗಳು, ತೆಕ್ಕುಂಜೆಯವರು ಮತ್ತು ಮಹಾ ಬಲ ಭಟ್ಟರು-ಹೀಗೆ ಒಂದಾಗಿ ಅಲ್ಲಲ್ಲಿ ಯಕ್ಷಗಾನ ತಾಳಮದ್ದಳೆಗಳಾಗು ತಿದ್ದಾಗ ಯಕ್ಷಗಾನದ ಕೇವಲ 'ಮರುಳು' ಪ್ರಬಲವಾಗಿ- ಹಾಗೆಯೇ ನನ್ನ ಆತ್ಮೀಯ ಬಂಧು ಮಹಾಬಲ ಭಟ್ಟರ ಒಡನಾಟಕ್ಕಾಗಿ-ಇವರುಗಳೊಂದಿಗೆ ಕೂಟ ಗಳಿಗೆಲ್ಲಾ ಹೋಗುತ್ತಿದ್ದೆ. ಯಕ್ಷಗಾನ ವಾಯಾಭಿನಯಗಳಲ್ಲಿ ಪ್ರೌಢಿಮೆ ನನಗಿರಲಿಲ್ಲವಾದರೂ, ಬೇರೆ ಬೇರೆ ಅರ್ಥಧಾರಿಗಳ ಪಾತ್ರ ನಿರ್ವಹಣೆಯ ಕುರಿತು ನನ್ನ ಮನಸ್ಸಿಗೆ ಕಂಡುದನ್ನು ಕಂಡ ಹಾಗೆ ಹೇಳಿಬಿಡುತ್ತಿದ್ದೆ. ಕೂಟ ಮುಗಿಸಿ ಹಿಂದೆ ಬರುವಾಗ ಬಹುಮಟ್ಟಿಗೆ ಕೂಟಗಳ ವಿಮರ್ಶೆಗಳು-ಹಳೆಯ ಕಾಲದ ಮತ್ತು ಆಗ ತಾನೆ ನಡೆದ ಕೂಟಗಳ ನಡೆಯುತ್ತಿದ್ದುವು. ಹಳೆಯ ನೆನಹುಗಳು ಅನಿವಾರ್ಯ ವಾಗಿ ಬಂದೇ ಬರುತ್ತಿದ್ದುವು. ನಮ್ಮ ಪರಿಚಯ ಹಳೆಯದಾಗುತ್ತ ಹೋದಂತೆ ನಾನೊಬ್ಬ 'ಸಹೃದಯ'ನೆಂದು ಶಾಸ್ತ್ರಿಗಳು ತೀರ್ಮಾನಿಸಿರಬೇಕು. ಒಂದು ದಿವಸ ನನ್ನನ್ನು ನೋಡಿ ಹುಸಿ ಗಾಂಭೀರ್ಯದಿಂದ “ನೀವಿಷ್ಟೆಲ್ಲಾ ಮಾತಾಡುವವರು ಅರ್ಥ ಹೇಳಬೇಕಯ್ಯ -ಸುಮ್ಮನೆ ನಮ್ಮೊಟ್ಟಿಗೆ ಬಂದರೆ ಸಾಲದು, ” ಎಂದೇ ಬಿಟ್ಟರು. ಅಂದಿನಿಂದ ನಾನು ತಾಳಮದ್ದಳೆಗಳಲ್ಲಿ ಅರ್ಥ ಹೇಳಲು ಪ್ರಾರಂಭಿಸಿದೆ. 1956 ನವೆಂಬರ್ 3ರಂದು ಬೋಳಾರದ ಮಂಗಳಾದೇವಿ ದೇವಸ್ಥಾನದ ಗೋಪುರ ದಲ್ಲಿ 'ಕರ್ಣಪರ್ವ' ತಾಳಮದ್ದಳೆ. ಶಾಸ್ತ್ರಿಗಳ ಕರ್ಣ, ಮಹಾಬಲ ಭಟ್ಟರ ಅರ್ಜುನ, ತೆಕ್ಕುಂಜೆಯವರ ಶಲ್ಯ-ನಾನು ಸರ್ಪಾಸ್ತ್ರದ ಪಾತ್ರದಲ್ಲಿ. ಅಂದಿನಿಂದ ನಾನೊಬ್ಬ “ಖಾಯಂ ಅರ್ಥಧಾರಿ'ಯಾಗಿ, ಶಾಸ್ತ್ರಿಗಳು ಹೋದಲ್ಲೆಲ್ಲ ಹಿಂಬಾಲಿಸು ತಿದ್ದೆ. ನನಗೆ ಪಾತ್ರವಿರಲಿ, ಇಲ್ಲದಿರಲಿ, ಹೋಗದಿರುತ್ತಿರಲಿಲ್ಲ. ಅನೇಕ ಕಡೆಗಳಲ್ಲಿ ನನಗೆ ಉತ್ಸಾಹ ಭಂಗವಾಗದಿರಲೆಂದಿರಬೇಕು - ಪಾತ್ರಗಳನ್ನು ಹಂಚುವವರಿಗೆ<noinclude></noinclude> 4ffj7macjsxxxa5bzxv1ylclbf3oesm ಪುಟ:ಯಕ್ಷಗಾನ ಮಕರಂದ.pdf/೨೪೪ 104 100164 316915 281783 2026-05-04T12:06:00Z Shreelatha.Halemane 7642 316915 proofread-page text/x-wiki <noinclude><pagequality level="1" user="Ashwini Rai K" /></noinclude>{{Left|218}} ಉದ್ದೇಶವೇನೆಂದು ಕೃಷ್ಣನನ್ನು ಕೇಳಿದಾಗ ಭಕ್ಥರೋಧ್ಹಾರಕ್ಕಾಗಿ ಎಂದು ಕೃಷ್ಣನ ಉತ್ತರ.ಆಗ ಹರಿಯಿತು ಶಾಸ್ತ್ರಿಗಳ ತರ್ಕಸರಣೀ'' ಭಕ್ತರ ಉದ್ಧಾರಕ್ಕಾಗಿ ಅವತಾರವೇ? ಮೂರೆಯಿಟ್ಟಾಗ ಗ ತಾಂ ಸ್ವಯ ಸ್ವಯಂ ಗರುಡವಾಹನನಾಗಿ ಭಕ್ತನನ್ನು ಉದ್ದ ಹಸ್ತಿನಾ. ವತಿಯ ದ್ಯೂತಸಭೆಯಲ್ಲಿ ದ್ರೌಪದಿಯ ಮಾನಹರಣದ ಪ್ರಯತ್ನ ನಡೆದಾಗ ನೀನೇ ಗತಿಯೆಂದು ಮೊರಂ! ಯಿಟ್ಟ ಆಕೆಯ ಮಾನಸಂರಕ್ಷಣೆಗೆ ಯಾವ ಅವತಾರವೂ ಆಗಲಿಲ್ಲ. . ನಿನ್ನೆ ಮಹಿಮೆ ವೌಿತ್ರ ಸಾಕಾಯಿತು. ಹಾಗಾದರೆ ಭಕ್ತೋದ್ದಾರರಕ್ಕಿ ಅವತಾರವೇ ಅವಶ್ಯವಿಲ್ಲ ಎಂದಂತಾಯಿತು. ಮತ್ತೆ ಈ ಅವತಾರದ ಉದ್ದೇಶ ವೇನು? ತಿಳಿದವರು. ಹೇಳಿದರು, ಧರ್ಮೋದ್ಧಾರ ಆಂತ. ಅದೇ ಸರಿಯೋ$ ಅಭ್ಲ ನೀನು ಹೇಳಿದಂತೆ ಭಕ್ತೋದ್ಭಾರಕ್ಳಾಗಿಯೇ ಎಂಬುದೇ ಸರಿಯೊ! ಹೇಳು... ಕೃಷ್ಣನ ಅರ್ಥ ಹೆೇಳಿದರಗೆ'ಪಾಪ, ಬೆವತುಹೋಯಿತು. ತ ಕ ಕೆ ಆ ಹಳ್ಳಿಯ ಮನೆಯೊಂದರಲ್ಲಿ ವಿಜೃಂಭಣೆಯ ತಾಳಮದ್ದಳೆ. ಶ್ರೋತೃಗಳಲ್ಲಿ ಹಳಬರೇ ಹು. ಭೀಷ್ಮಪವ್ವ'ದಲ್ಲಿ ಭೀಷ್ಮನು ಕೃಷ್ಣನ ವಿಣೆಗೇ ಗುರಿಯಿಟ್ಟು ಗಾಯಗೊಳಿಸುವ ಸನ್ನಿವೇಶ, ಶಾಸ್ತ್ರಿಗಳು. "ಔಯ ರಿರ್ಥಧಾರಿಗಳ ಕ್ರ ಕ್ರಮದಲ್ಲಿ “ಓಯ್‌, ಏನಾಶ್ಮ ಶ್ವರ್ಯವಿದು? ಪರಶುರಾಮ ಗುರುಗಳಲ್ಲಿ ಇಷ್ಟು ಕಾಲ ಕಲಿತ ವಿದ್ಯೆಯೆಲ್ಲ ನಿಷ್ಟ ಪ್ಮನಿವಾಯಿತೇ | ಅರ್ಜುನನು ಹೊಡೆದ ಬಾಣಗಳು ನೆರವಾಗಿ ನನ್ನ್ನ ಎದೆಗೇ ಬೀಳುತ್ತಿವೆ. ಮಧ್ಯದಲ್ಲಿ ಅವುಗಳನ್ನು ನಾನು ಶುಂಡರಿಸದೆ ಇದ್ದರೆ ನನ್ನ ಎದೆಯನ್ನೇ ಭೇದಿಸುವುದು. ಬಂತ... ಅಜುಸನನ, ಎದೆಗೇ. ಗುರಿಹಿಡಿದೆ ಎಷ್ಟು. ಬಾಣ ಹೊಡೆದಿದ್ದೆ. ದ್ದೇನೆ, . ಒಂದಾದರೂ ಅವನ ಕೂಡಲಿಗಾದರೂ ತಾಗಿದೆಯ 9 'ಬಾಣಗಳಿಲ್ಲ ಹೋಗಿ, ತಾಗಿದ್ದ್ದಿ ರಥದ ಕಂಬಗಳಿಗಲ್ಲವೆ? ಇದೆಲ್ಲ ಈ ಕರಿಯನ ತಂತ್ರ ] ರಥವನ್ನು ಅತ್ತಿಂದಿತ್ತ, ಇತ ಸಿದತ್ತ್ವಹಾರಿಸಿ, ಕುಣಿಸಿ, ನನ್ನ ಬಾಣಗಳಿಲ್ಲ ಗುರಿ ತಪ್ಪು ದ ಮುಡಿದ್ದಾನ ನೆ. ಇವಾಾಗೆ ಬುದ್ಧಿ ಕಲಿಸಿಯೇ ಬಿಡುತ್ತೇನೆ. . ಇವನ. ಮೇಲೆಯೆ] ಬಾಣ ಹೊಡದು ಗಾಸಿಗೊಳಿಸಿದರೆ ಜತ್ತೆ ಏನು ಮಾಡುತ್ತಾನೋ ನೋಡುತ್ತೇನೆ ತ್ತಳೆಯಿಂದ ಒಂದು ಜಾಣ ತೆಗದ್ದೇನೆ. ಇದನ್ನು ಚೂಡಿ ಈ ಕರಿಯನ ಹಣೆಗೆ ಗುರಿಯುಟ್ಟು, “ರಮಯ? ಭಿಡುಸ್ಟೇೆ ಆಗದೆ??? ಎಂದು ಹೂಂಕರಿಸಿದರು, ಅಲ್ಲಿದ್ದ. ಹಳಿಗೆ, ೆ ಖಿಷಿಯೋ ಖು! ?ನಿಜ ಸೈಂಟ್‌ ಅಲೋಸಿಯಸ' ಕಾಲೇಜಿನಲ್ಲಿ ಮುದ್ದಣ ಜಯಂತಿಯಂದು *ಕುಮಾರ. ವಿಜಯದ ಓಂದು ಭಾಗದ ತಾಳಮದ್ದಳೆ. ಶೂರವಿದ್ಯಾ? ಸುರನ:ವಂಗನಾದ ಹಿರಣ್ಯ<noinclude></noinclude> jb38vc3ns9o7jv3pyjwwdvkcr4zlt2i ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು 4 101285 317043 316730 2026-05-04T15:17:50Z A826 6806 317043 wikitext text/x-wiki {| class="wikitable sortable" style="text-align:center; width:100%; font-size:90%; color: blue;" |+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 33360<br><small>ದತ್ತಾಂಶ ಪಡೆದ ಸಮಯ: 2026-05-04 15:16:11 UTC / 2026-05-04 20:46:11 IST</small> ! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು |- | 1 || [[Special:Contributions/Pragathi. BH|Pragathi. BH]] || 0 || 0 || 8152 (8341) || 0 || 0 || 7961 || 77 (154) || 98 (294) || 8405 || '''8341''' |- | 2 || [[Special:Contributions/Shreelatha.Halemane|Shreelatha.Halemane]] || 0 || 0 || 5771 (7001) || 0 || 0 || 4727 || 607 (1214) || 364 (1092) || 6083 || '''7001''' |- | 3 || [[Special:Contributions/Shreesha Sharma|Shreesha Sharma]] || 0 || 0 || 2864 (3353) || 0 || 0 || 1995 || 195 (390) || 161 (483) || 3236 || '''3353''' |- | 4 || [[Special:Contributions/Sharanya K H|Sharanya K H]] || 0 || 0 || 3046 (3064) || 0 || 0 || 3032 || 16 (32) || 1 (3) || 3085 || '''3064''' |- | 5 || [[Special:Contributions/Ashwini Rai K|Ashwini Rai K]] || 0 || 0 || 330 (713) || 0 || 0 || 70 || 60 (120) || 195 (585) || 413 || '''713''' |- | 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553''' |- | 7 || [[Special:Contributions/A826|A826]] || 10740 || 0 || 182 (224) || 24 || 0 || 3 || 2 (4) || 25 (75) || 10957 || '''245''' |- | 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221''' |- | 9 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150''' |- | 10 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109''' |- | 11 || [[Special:Contributions/Vikashegde|Vikashegde]] || 0 || 0 || 27 (48) || 0 || 0 || 0 || 11 (22) || 8 (24) || 32 || '''48''' |- | 12 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44''' |- | 13 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31''' |- | 14 || [[Special:Contributions/Hariprasad Shetty10|Hariprasad Shetty10]] || 0 || 0 || 10 (18) || 0 || 0 || 0 || 0 (0) || 5 (15) || 46 || '''18''' |- | 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7''' |- | 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4''' |- | 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3''' |- | 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1''' |- | 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1''' |- | 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1''' |- | 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1''' |- | 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1''' |- | 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |} <noinclude> <syntaxhighlight lang="python" line copy=1> #!/usr/bin/env python3 import requests import time from datetime import datetime, timezone, timedelta from collections import defaultdict import re START_DATE = datetime(2026, 4, 18, 18, 0, 1, tzinfo=timezone.utc) END_DATE = datetime(2026, 6, 3, 23, 59, 59, tzinfo=timezone.utc) TARGET_NAMESPACES = [0, 102, 104, 106, 114] NAMESPACE_NAMES = { 0: "ಮುಖ್ಯ", 102: "ಕರ್ತೃ", 104: "ಪುಟ", 106: "ಪರಿವಿಡಿ", 114: "ಅನುವಾದ" } # Scoring rules for namespace 104 SCORING_RULES = { 'page_creation': 1, # New page creation 'proofread': 2, # Edit summary contains "/* Proofread */" 'validation': 3, # Edit summary contains "/* Validated */" 'regular_edit': 1 # Regular edit in namespace 104 } WIKI_URL = "https://kn.wikisource.org/w/api.php" DATA_GENERATION_TIME = datetime.now(timezone.utc) # Convert to IST for display IST = timezone(timedelta(hours=5, minutes=30)) DATA_GENERATION_TIME_IST = DATA_GENERATION_TIME.astimezone(IST) START_DATE_IST = START_DATE.astimezone(IST) END_DATE_IST = END_DATE.astimezone(IST) # User to exclude from namespace 0 (set their points to zero) EXCLUDED_USER = "A826" EXCLUDED_NAMESPACE = 0 def get_namespace_name(ns): return NAMESPACE_NAMES.get(ns, f"Namespace {ns}") def fetch_all_edits(): user_namespace_stats = defaultdict(lambda: defaultdict(set)) # Track unique pages per namespace for scoring user_scores = defaultdict(lambda: defaultdict(int)) # Track scores by user and namespace user_edit_details = defaultdict(list) # Store edit details for debugging user_total_edits = defaultdict(int) # Track total number of edits per user (including duplicates) user_namespace_edit_counts = defaultdict(lambda: defaultdict(int)) # Track total edit counts per namespace # Track specific edit types in namespace 104 user_ns104_stats = defaultdict(lambda: { 'creations': 0, 'proofreads': 0, 'validations': 0, 'regular': 0, 'proofread_score': 0, # Track proofread score separately 'validation_score': 0 # Track validation score separately }) start_iso = START_DATE.strftime('%Y-%m-%dT%H:%M:%SZ') end_iso = END_DATE.strftime('%Y-%m-%dT%H:%M:%SZ') print("=" * 80) print("KANNADA WIKISOURCE EDIT SCORING TOOL") print("=" * 80) print(f"Start (UTC): {START_DATE.strftime('%Y-%m-%d %H:%M:%S')}") print(f"Start (IST): {START_DATE_IST.strftime('%Y-%m-%d %H:%M:%S')}") print(f"End (UTC): {END_DATE.strftime('%Y-%m-%d %H:%M:%S')}") print(f"End (IST): {END_DATE_IST.strftime('%Y-%m-%d %H:%M:%S')}") print(f"Generated (UTC): {DATA_GENERATION_TIME.strftime('%Y-%m-%d %H:%M:%S')}") print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}") print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}") print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})") print(f"Scoring in namespace 104 (ಪುಟ):") print(f" - Page creation: {SCORING_RULES['page_creation']} point") print(f" - Proofread (/* Proofread */): {SCORING_RULES['proofread']} points") print(f" - Validation (/* Validated */): {SCORING_RULES['validation']} points") print(f" - Regular edit: {SCORING_RULES['regular_edit']} point") print("-" * 80) params = { 'action': 'query', 'list': 'recentchanges', 'rcstart': end_iso, 'rcend': start_iso, 'rcnamespace': '|'.join(str(ns) for ns in TARGET_NAMESPACES), 'rcprop': 'title|user|timestamp|ids|comment|flags', 'rctype': 'edit|new', 'rclimit': '500', 'format': 'json' } total_edits = 0 excluded_edits = 0 continue_token = None page_count = 0 while True: if continue_token: params['rccontinue'] = continue_token try: response = requests.get(WIKI_URL, params=params, timeout=30) data = response.json() if 'query' not in data or 'recentchanges' not in data['query']: break changes = data['query']['recentchanges'] page_count += 1 print(f"Batch {page_count}... ({len(changes)} edits)") for change in changes: user = change.get('user', 'Unknown') title = change.get('title', '') ns = change.get('ns', 0) comment = change.get('comment', '') is_new = change.get('type') == 'new' # Increment total edit count for this user (every edit counts) user_total_edits[user] += 1 total_edits += 1 user_namespace_edit_counts[user][ns] += 1 # Set points to zero for A826 in namespace 0 if ns == EXCLUDED_NAMESPACE and user == EXCLUDED_USER: score = 0 # Track unique page for scoring purposes (still counts as 0 points) if title not in user_namespace_stats[user][ns]: user_namespace_stats[user][ns].add(title) user_scores[user][ns] += score excluded_edits += 1 continue if ns in TARGET_NAMESPACES: # Calculate score for this edit score = 0 if ns == 104: # Special scoring for namespace 104 if is_new: # Page creation score = SCORING_RULES['page_creation'] user_ns104_stats[user]['creations'] += 1 user_edit_details[user].append(f"Created page: {title} (+{score})") elif '/* Validated */' in comment: # Validation edit score = SCORING_RULES['validation'] user_ns104_stats[user]['validations'] += 1 user_ns104_stats[user]['validation_score'] += score user_edit_details[user].append(f"Validated: {title} (+{score})") elif '/* Proofread */' in comment: # Proofread edit score = SCORING_RULES['proofread'] user_ns104_stats[user]['proofreads'] += 1 user_ns104_stats[user]['proofread_score'] += score user_edit_details[user].append(f"Proofread: {title} (+{score})") else: # Regular edit score = SCORING_RULES['regular_edit'] user_ns104_stats[user]['regular'] += 1 user_edit_details[user].append(f"Regular edit: {title} (+{score})") else: # For other namespaces, count each unique page as 1 point score = 1 # Track unique pages per namespace for scoring if title not in user_namespace_stats[user][ns]: user_namespace_stats[user][ns].add(title) user_scores[user][ns] += score if total_edits % 500 == 0: print(f" Processed {total_edits} edits...") if 'continue' in data and 'rccontinue' in data['continue']: continue_token = data['continue']['rccontinue'] time.sleep(0.5) else: print("Finished fetching all edits!") break except Exception as e: print(f"Error: {e}") break print("-" * 80) print(f"Batches: {page_count}") print(f"Total edits fetched: {total_edits}") print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}") print(f"Users with edits: {len(user_total_edits)}") # Summary of total edits per user print("\nTotal edits per user (including duplicates):") print("-" * 60) for user in sorted(user_total_edits.items(), key=lambda x: x[1], reverse=True)[:20]: print(f" {user[0]}: {user[1]} edits") print("=" * 80) return (user_namespace_stats, user_scores, user_ns104_stats, user_total_edits, total_edits, user_namespace_edit_counts) def generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts): table_data = [] for user in user_total_edits.keys(): # Calculate total points (sum of scores from all namespaces) total_points = sum(user_scores[user].values()) # Get unique page counts per namespace ns_unique_pages = {} for ns in TARGET_NAMESPACES: ns_pages = user_namespace_stats[user].get(ns, set()) ns_unique_pages[ns] = len(ns_pages) # Get total edit counts per namespace (including duplicates) ns_total_edits = user_namespace_edit_counts.get(user, {}) # Get namespace 104 detailed stats ns104_stats = user_ns104_stats.get(user, { 'creations': 0, 'proofreads': 0, 'validations': 0, 'regular': 0, 'proofread_score': 0, 'validation_score': 0 }) table_data.append({ 'user': user, 'total_score': total_points, 'total_edits': user_total_edits.get(user, 0), 'ns0_edits': ns_total_edits.get(0, 0), # Show total edits, not unique pages 'ns102_edits': ns_total_edits.get(102, 0), 'ns104_unique': ns_unique_pages.get(104, 0), 'ns104_score': user_scores[user].get(104, 0), 'ns106_edits': ns_total_edits.get(106, 0), 'ns114_edits': ns_total_edits.get(114, 0), 'creations': ns104_stats['creations'], 'proofreads': ns104_stats['proofreads'], 'proofread_score': ns104_stats['proofread_score'], 'validations': ns104_stats['validations'], 'validation_score': ns104_stats['validation_score'] }) table_data = [row for row in table_data if row['total_score'] > 0 or row['total_edits'] > 0] table_data.sort(key=lambda x: x['total_score'], reverse=True) if not table_data: return "No edits found in the specified date range." wikitable = [] wikitable.append('{| class="wikitable sortable" style="text-align:center; width:100%; font-size:90%; color: blue;"') wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>') # Updated header with combined columns for proofread and validation header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು'] wikitable.append(' '.join(header_cols)) for idx, row in enumerate(table_data, start=1): user = row['user'] # Always use Special:Contributions link user_link = f"[[Special:Contributions/{user}|{user}]]" # Show both unique page count and weighted score for namespace 104 ns104_display = f"{row['ns104_unique']} ({row['ns104_score']})" # Combine proofread count and score into one column proofread_display = f"{row['proofreads']} ({row['proofread_score']})" # Combine validation count and score into one column validation_display = f"{row['validations']} ({row['validation_score']})" wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''") wikitable.append('|}') return '\n'.join(wikitable) def main(): (user_namespace_stats, user_scores, user_ns104_stats, user_total_edits, total_competition_edits, user_namespace_edit_counts) = fetch_all_edits() if not user_total_edits: print("\nNo data retrieved.") return output = generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts) print("\n" + "=" * 80) print("WIKITABLE OUTPUT (Copy this entire section):") print("=" * 80) print(output) print("=" * 80) if __name__ == "__main__": main() </syntaxhighlight> </noinclude> [[ವರ್ಗ:ವಿಕಿಸೋರ್ಸ್೨೦]] 3tjsqp3yzgbkp9c0y2gd4mfntsa1lza ಪುಟ:ನಿತ್ಯ ನೇಮಾವಲಿ.pdf/೬೮ 104 101878 317192 314378 2026-05-05T09:45:42Z Ashwini Rai K 8475 /* Validated */ 317192 proofread-page text/x-wiki <noinclude><pagequality level="4" user="Ashwini Rai K" /></noinclude>{{center|ಪ್ರಾತಃಕಾಲದ ಭಜನೆ}} {{center|}}ನಮಿಸಿ ನಾರಾಯಣನ| ನರನ ಪುರುಷೋತ್ತಮನ। {{center|}}ವ್ಯಾಸ ವಾಗ್ದೇವಿಯರ |ಬಳಿಕ ಪೇಳ್ವುದು ಜಯವ|| ಹೇ ನಾರಾಯಣನೇ, ದೇವಾಧಿದೇವನೇ, ಜಗತ್ಪತಿಯೇ ನಿನ್ನ ನಾಮವನ್ನು ಸ್ಮರಿಸಿ, ಮಂಗಲಕರವಾದ ಕಥೆಗಳನ್ನು ಹೇಳುತ್ತೇನೆ. ಬ್ರಹ್ಮಾನಂದನೂ, ಶ್ರೇಷ್ಠವಾದ ಸುಖವನ್ನು ಕೊಡುವಂಥವನೂ, ಜ್ಞಾನಮೂರ್ತಿಯೂ, ದ್ವಂದ್ವಾತೀತನೂ, ಆಕಾಶಸದೃಶನೂ, ತತ್ವಮಸಿ ಇತ್ಯಾದಿ ಮಹಾವಾಕ್ಯಗಳ ಏಕಮೇವ ಧ್ಯೇಯನೂ, ಏಕೈಕನೂ, ನಿತ್ಯನೂ, ಅಚಲನೂ, ನಿರ್ಮಲನೂ, ಎಲ್ಲ ತತ್ವಗಳಿಗೆ ಸಾಕ್ಷಿಯಾಗಿದ್ದವನೂ, ಭಾವಗಳಿಗೆ ನಿಲುಕದವನೂ, ತ್ರಿಗುಣರಹಿತನೂ ಆದ ಸದ್ಗುರುವಿಗೆ ನಮಸ್ಕಾರ ಮಾಡುತ್ತೇನೆ. {{center|೨}} ಸದ್ಗುರುನಾಥ ಮಾಝೇ ಆಈ| ಮಲಾ ಠಾವ ದ್ಯಾವಾ ಪಾಯೀ (೨ಸಲ) ಮಲಾ ಠಾವ ದ್ಯಾವಾ ಪಾಯಿ||(೨ ಸಲ) ಸದ್ಗುರುನಾಥ ಮಾಝೇ ಆಈ| ಮಲಾ ಠಾವ ದ್ಯಾವಾ ಪಾಯೀ||(೨ ಸಲ) '''ಭಾವಾರ್ಥ''': ತಾಯಿಯಂತಿದ್ದ ಸದ್ಗುರುವೇ, ನಿನ್ನ ಚರಣಗಳಲ್ಲಿ ನನಗೆ ಆಶ್ರಯಕೊಡು. {{center|೬೭}}<noinclude></noinclude> b0jspjxfby3nfa51zxcuw9gyzce76br ಪುಟ:ನಿತ್ಯ ನೇಮಾವಲಿ.pdf/೬೯ 104 101880 317193 314379 2026-05-05T09:46:03Z Ashwini Rai K 8475 /* Validated */ 317193 proofread-page text/x-wiki <noinclude><pagequality level="4" user="Ashwini Rai K" /></noinclude>{{center|ನಿತ್ಯನೇಮಾವಲಿ}} {{center|೩}} ಪಹಿಲೇ ಪಾಹತಾ ಶ್ರೀಮುಖ| ತಹಾನ ಹರಪಲೀ ಭೂಕ||೧|| ಸಹಾ ಪಹಾ ಡೋಳೇಭರೀ| ಮೂರ್ತಿ ಸಾವಳೀ ಗೋಜರೀ||೨|| ರವಿ ಶಶಿ ಜ್ಯಾಚ್ಯಾ ಕಳಾ| ತೂ ಹಾ ಮದನಾಚಾ ಪುತಳಾ||೩|| ತುಕಾ ಮ್ಹಣೇ ವರ್ಣೂ ಕಾಯ| ಘೇತೋ ಅಲಯಾ ಬಾಲಯ||೪|| '''ಭಾವಾರ್ಥ''': ಮೊದಲು ದೇವನ ಮುಖದರ್ಶನವಾದ ಕೂಡಲೇ ಹಸಿವು, ನೀರಡಿಕೆಗಳು ಮಾಯವಾಗಿಹೋದವು. ಸುಂದರವಾದ ಶ್ಯಾಮವರ್ಣದ ಮೂರ್ತಿಯನ್ನು ಕಣ್ತುಂಬ ನೋಡಿರಿ. ಸೂರ್ಯಚಂದ್ರರು ಅವನ ಅಂಶವೆನಿಸುವ ಸೌಂದರ್ಯದ ಪುತ್ತಳಿ ಅವನು. ಅವನು ನನ್ನನ್ನು ಆಲಂಗಿಸುತ್ತಾನೆ. ಅದರ ಸುಖವನ್ನೆಂತು ವರ್ಣಿಸಲಿ? ಎಂದು ತುಕಾರಾಮರೆನ್ನುತ್ತಾರೆ. {{center|೪}} ವಾಮಸವ್ಯ ದೋಹೀಕಡೇ। ದಿನೇ ದೇವಾಚೇ ರೂಪಡೇ||೧|| {{center|೬೮}}<noinclude></noinclude> pq251jdp2g8jmdhnr5jcs2qyo3l1lsd ಪುಟ:ನಿತ್ಯ ನೇಮಾವಲಿ.pdf/೭೦ 104 101882 317198 314380 2026-05-05T10:32:16Z Shreelatha.Halemane 7642 317198 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಪ್ರಾತಃಕಾಲದ ಭಜನೆ}} ಖಾಲೀ ಪಾಹೇ ಅಥವಾ ವರೀ। ಜಕಡೇ ಪಹಾವೇ ತಿಕಡೇ ಹರೀ||೨|| ಡೋಳೇ ಝಾಕೂನಿಯಾ ಪಾಹೇ। ಪುಢೇ ಗೋಪಾಳ ಉಭಾ ಆಹೇ||೩|| ಅಣುರೇಣು ಚಕ್ರಪಾಣಿ| ಖೂಣ ಝಾಲಿ ದಾಸೀ ಜನೀ||೪|| '''ಭಾವಾರ್ಥ''': ಎಡದಲ್ಲಿಯೂ ಬಲದಲ್ಲಿಯೂ ದೇವರ ರೂಪವು ಕಾಣುತ್ತದೆ. ಕೆಳಗೆನೋಡಲಿ, ಮೇಲೆನೋಡಲಿ, ಎಲ್ಲಿನೋಡಿದರೂ ಹರಿಯೇ ಕಾಣುತ್ತಾನೆ. ಕಣ್ಣುಮುಚ್ಚಿ ನೋಡಿದರೂ, ಎದುರಿಗೆ ಗೋಪಾಲನು ನಿಂತೇ ಇರುತ್ತಾನೆ. ಹೀಗೆ ನಾಮದೇವರ ದಾಸಿಯಾದ ಜನಾಬಾಯಿಗೆ, ಅಣುರೇಣುಗಳಲ್ಲಿಯೂ ಚಕ್ರಪಾಣಿಯು ಇರುವದರ ಗುರುತುಸಿಕ್ಕಿತು. {{center|೫}} ಹಡಬಡಲೇ ಪಾತಕ| ರಾಮನಾಮ ಘೇತಾ ಏಕ||೧|| ನಾಮ ಘೇತಾ ತತ್‌ ಕ್ಷಣೀ| ಚಿತ್ರೇ ಠೇವಿಲೀ ಲೇಖಣೀ||೨|| ಘೇವೂನಿ ಪೂಜೇಚಾ ಸಂಭಾರ| ಬ್ರಹ್ಮಾ ಏತಸೇ ಸಾಮೋರ||೩|| {{center|೬೯}}<noinclude></noinclude> esau8t01no7yl9qvcjt2ltfo34p1u00 ಪುಟ:ನಿತ್ಯ ನೇಮಾವಲಿ.pdf/೭೧ 104 101884 317044 284257 2026-05-04T16:26:38Z Shreelatha.Halemane 7642 /* Proofread */ 317044 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ನಾಮಾ ಮಣೇ ಹೇ ಜರೀ ಲಟಕೇ| ತರೀ ಛೇದಾವೇ ಮಸ್ತಕ||೪|| '''ಭಾವಾರ್ಥ''': ರಾಮನಾಮವೊಂದನ್ನು ತೆಗೆದುಕೊಳ್ಳುತ್ತಿದ್ದ ಹಾಗೆಯೇ ಪಾಪಗಳೆಲ್ಲ ದಿಕ್ಕೆಟ್ಟು ಹೋದವು. ನಾಮ ತೆಗೆದುಕೊಂಡ ತತ್‌ಕ್ಷಣವೇ ಚಿತ್ರಗುಪ್ತನು ಲೆಕ್ಕಣಿಕೆಯನ್ನು ಕೆಳಗೆ ಇಟ್ಟುಬಿಟ್ಟನು. ಬ್ರಹ್ಮನು ಸ್ವತಃ ಪೂಜಾಸಾಮಗ್ರಿಯನ್ನು ತೆಗೆದುಕೊಂಡು ಎದುರಿಗೆ ಬರುತ್ತಿದ್ದಾನೆ. ಈಮಾತು ಅಸತ್ಯವಾದರೆ ನನ್ನ ಶಿರವನ್ನು ಛೇದಿಸಿರಿ ಎಂದು ನಾಮದೇವರು ಹೇಳುತ್ತಾರೆ. ತಿಳಾಎವಢೇ ಬಾಂಧುನಿ ಘರ| ಆತ ರಾಹೇ ವಿಶ್ವಂಭರ||೧|| ತಿಳಾಇತುಕೇ ಹ ಬಂದುಲೇ| ತೇಣೇ ತ್ರಿಭುವನ ಕೋಂದಾಟಲೇ||೨|| ಹರಿಹರಾಂಚ್ಯಾ ಮೂರ್ತಿ| ಬಿಂದುಲ್ಯಾತ ಏತೀ ಜಾತೀ||೩|| ತುಕಾ ಮ್ಹಣೇ ಹೇ ಬಿಂದುಲೇ| ತೇಣೇ ತ್ರಿಭುವನ ಕೋಂದಾಟಲೇ||೪|| '''ಭಾವಾರ್ಥ''': ವಿಶ್ವವ್ಯಾಪಿ ಪರಮೇಶ್ವರನು ಎಳ್ಳುಕಾಳಿನಷ್ಟು ಮನೆಯನ್ನು ಕಟ್ಟಿ ಅದರಲ್ಲಿ ವಾಸಿಸುತ್ತಾನೆ. ಎಳ್ಳುಕಾಳಿನಷ್ಟು ಚಿಕ್ಕದಾಗಿರುವ ಈ ಬಿಂದುವು {{center|೭೦}}<noinclude></noinclude> 1ltpfr9n46ea60y5gpc4m04wthq74mi