ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.2 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಪುಟ:Mysore-University-Encyclopaedia-Vol-6-Part-4.pdf/೧ 104 4567 319755 154400 2026-05-14T10:30:23Z Sharanya K H 7593 /* Proofread */ 319755 proofread-page text/x-wiki <noinclude><pagequality level="3" user="Sharanya K H" /></noinclude> '''ಗಾಂಜಾ ಗಿಡ''' ಕಾಂಡಭಾಗವೆಲ್ಲ ಟೊಳ್ಳಷ್ಟೆ;ಕಾಂಡದ ಎಪಿಡರ್ಮಿಸ್ ಮತ್ತು ಕೇಂಬಿಯಮುಗಳ ನಡುವೆ ಇರುವ ಆಹಾರಸಾಗಣೆಯ ಅಂಗಾಂಶವಾದ ಫ್ಲೋಯೆಮ್ ಅಂಗಾಂಶವೇ ಗಾಂಜಾಗಿಡದ ನಾರು.ಗಂಡು ಹೂಗಳು ಗಾತ್ರದಲ್ಲಿ ಹೆಣ್ಣು ಹೂಗಳಿಗಿಂತ ದೊಡ್ಡವಾದ್ದರಿಂದ ಸುಲಭವಾಗಿ ಕಣ್ಣಿಗೆ ಬೀಳುತ್ತವೆ.ಅದೇ ಹೆಣ್ಣು ಹೂಗಳು ತುಂಬಾ ಚಿಕ್ಕವಾದುದರಿಂದ ಗಮನವನ್ನು ಸೆಳೆಯವು.ಕಾಂಡದ ತುದಿ ಭಾಗಗಳಲ್ಲಿ ಮತ್ತು ಕಾಂಡದುದ್ದಕ್ಕೆ ಪ್ರತಿ ಗೆಣ್ಣೆನಲ್ಲು ಹೂಗಳು ಗೊಂಚಲು ಗೊಂಚಲಾಗಿ ಬಿಡುತ್ತವೆ.ಬೀಜಗಳು ಗಾತ್ರದಲ್ಲಿ ಗೋದಿ ಕಾಳಿನಷ್ಟಿದ್ದು ಕೊಂಚ ಗುಂಡಾಗಿರುತ್ತದೆ.ಅವು ಪೂರ್ಣ ಬಲಿಯಲು ಇಷ್ಟೇ ಕಾಲ ಹಿಡಿಯುತ್ತದೆಂದು ಹೇಳಲು ಸಾಧ್ಯವಿಲ್ಲ. ನಾರಿನ ಉತ್ಪಾದನೆಗೋಸ್ಕರ ಈ ಗಿಡದ ಸಾಗುವಳಿ ವಿಧಾನಗಳು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆಯಾದರೂ ಎಲ್ಲ ಕಡೆಗೂ ಅನುಸರಿಸುವ ಕೆಲವು ಸಾಮನ್ಯ ಕ್ರಮಗಳಿವೆ.ಸಕಾಲದಲ್ಲಿ ಬೀಜ ಬಿತ್ತುವುದು,ಅಚ್ಚುಕಟ್ಟಾಗಿ ಹದ ಮಾಡಿದ ಭೂಮಿಯನ್ನೇ ಉಪಯೊಗಿಸುವುದು,ಫಲವತ್ತಾಗಿಲ್ಲದಲ್ಲಿ ಸಾಕಷ್ಟು ಗೊಬ್ಬರ ಕೊಡುವುದು ಹಾಗೂ ದಟ್ಟವಾಗಿ ಬೀಜ ಬಿತ್ತುವುದು ಎಲ್ಲೆಡೆಗಳಲ್ಲೂ ವಾಡಿಕೆ.ಒಂದು ಎಕರೆಗೆ ೧೫-೨೦ ಕೆಜಿ.ಬೀಜ ಬೇಕಾಗುತ್ತದೆ.ಬೆಲ್ಜಿಯಂ ಮತ್ತು ಫ಼್ರಾನ್ಸಿನ ಉತ್ತರದ ಪ್ರದೇಶಗಳಲ್ಲಿ ಎಕರೆಗೆ ೪೦ ಕೆಜಿ.ಬೀಜವನ್ನು ಬಿತ್ತುವುದುಂಟು.ಭೂಮಿಯ ಮೇಲ್ಮೈಯಲ್ಲಿ ಎಂದರೆ ೧-೨.೫ ಸೆಂ.ಮೀ ಆಳದಲ್ಲಿ ಬೀಜ ನೆಡುತ್ತಾರೆ.ಬಿತ್ತಿದ ಆನಂತರ ಆರೈಕೆ ಅಷ್ಟಾಗಿ ಬೇಕಿಲ್ಲ.ಯೂರೋಪಿನ ಕೆಲವು ಭಾಗಗಳಲ್ಲಿ ಕೈಯಿಂದ ಗಿಡಗಳನ್ನು ಬುಡುಸಮೇತ ಕೀಳುವುದು ರೂಢಿಯಲ್ಲಿದೆ.ಉಳಿದ ದೇಶಗಳ ಬಹುಭಾಗಗಳಲ್ಲಿ ಗಿಡವನ್ನು ನೆಲದಿಂದ ಕೊಂಚ ಮೇಲಕ್ಕೆ ಕುಡುಗೋಲಿನಿಂದ ಕತ್ತರಿಸುತ್ತಾರೆ. ಗಿಡಗಳ ಕಟಾವಾದ ಬಳಿಕ ಅವುಗಳಿಂದ ನಾರು ತೆಗೆಯಲು ಅವನ್ನು ಕೊಳೆಸಬೇಕು.ಕೊಳೆಸುವಿಕೆಯಲ್ಲಿ ಮುಖ್ಯವಾಗಿ ಎರಡು ವಿಧಾನಗಳಿವೆ:ನೀರಿನಲ್ಲಿ ಅದ್ದಿಟ್ಟು ಕೊಳೆಸುವುದು ಅಥವಾ ಇಬ್ಬನಿಯಲ್ಲಿ ಗಿಡಗಳನ್ನು ಹರವಿಟ್ಟು ಕೊಳೆಸುವುದು.ಅಮೆರಿಕದಲ್ಲಿ ಇಬ್ಬನಿಯಿಂದ ಕೊಳೆಸುವುದು ಸಾಮಾನ್ಯ.ನೀರಿನಲ್ಲಿ ಅದ್ದಿಟ್ಟು ಕೊಳೆಸುವುದು ಇತರ ದೇಶಗಳಲ್ಲಿ ಅನುಸರಿಸುವ ಮಾರ್ಗ.ಇಬ್ಬನಿಯಲ್ಲಿ ಕಟಾವಾದ ಗಿಡಗಳನ್ನು ಹೊಲಗಳಲ್ಲೇ ಕೊಳೆಯಲು ಬಿಡುತ್ತಾರೆ.ಕೆಲವು ಏಕಾಣು ಜೀವಿಗಳು ಹಾಗೂ ಶಿಲೀಂಧ್ರಗಳು ನಾರಿನ ಸುತ್ತಲಿರುವ ಸಸ್ಯಾಂಶವನ್ನು ಹೊಕ್ಕು ಅವನ್ನು ಕೊಳೆಸುತ್ತವೆ.ಹೀಗೆ ಸಸ್ಯಾಂಶ ಮಾತ್ರ ಕೊಳೆಯುವುದರಿಂದ ನಾರನ್ನು ಸುಲಭವಾಗಿ ಬೇರ್ಪಡಿಸಬಹುದು.ಕೊಳೆಯಲು ಬೇಕಾಗುವ ಕಾಲಾವಧಿ ಹವಾ ಪರಿಸ್ಥಿತಿಯನ್ನು ಅವಲಂಬಿಸಿ ಒಂದು ವಾರದಿಂದ ಕೆಲವು ತಿಂಗಳುಗಳಷ್ಟು ವ್ಯತ್ಯಾಸವಾಗುತ್ತದೆ. ನೀರಿನಲ್ಲಿ ಅದ್ದಿ ಕೊಳೆಸುವ ಕ್ರಮದಲ್ಲಿ ಮೊದಲು ಕಟಾವಾದ ಗಿಡಗಳನ್ನು ಪೂರ್ಣವಾಗಿ ಒಣಗಿಸಬೇಕು.ಆನಂತರ ಇವನ್ನು ನೀರಿನಲ್ಲಿ ಅದ್ದಿಡಬೇಕು.ಏಕಾಣುಜೀವಿಗಳು ಹಾಗೂ ನೀರು ಇವೆರಡರಿಂದಾಗಿ ನಾರಿನ ಸುತ್ತಲಿರುವ ಸಸ್ಯಾಂಶ ಕೊಳೆಯಲು ಅವಕಾಶವಾಗುತ್ತದೆ. ಈ ಕ್ರಮದಿಂದ ನಾರು ಪಡೆಯಲು ೧೦-೨೦ ದಿವಸಗಳಾಗುತ್ತವೆ.ಕೊಳೆಯಲು ಬೇಕಾಗುವ ಅವಧಿ ನೀರಿನ ಉಷ್ಣತೆಯನ್ನು ಸೂಕ್ತವಾಗಿ ನಿಯಂತ್ರಿಸಿದರೆ ಕೇವಲ ೩-೫ ದಿವಸಗಳಲ್ಲಿ ಕೊಳೆಯುತ್ತದೆ.ಇದಕ್ಕೆ ಬೇಕಾಗುವ ಸೂಕ್ತ ಉಷ್ಣತೆ ೯೦* ಫ್ಯಾ. ಇಬ್ಬನಿಯಿಂದ ಕೊಳೆಸಿದ ಗಿಡಗಳನ್ನು ಕೆಲವು ಪ್ರದೇಶಗಳಲ್ಲಿ ಕಂತೆ ಕಟ್ಟುವುದಿಲ್ಲ.ಅಮೆರಿಕ ಸಂಯುಕ್ತಸಂಸ್ಥಾನದ ಉತ್ತರ ಭಾಗಗಳಲ್ಲಿ ಗಿಡಗಳನ್ನು ಒಟ್ಟಿಗೆ ಸೇರಿಸಿ ಯೊಂತ್ರಗಳಿಂದ ಕಂತೆ ಕಟ್ಟುತ್ತಾರೆ.ಇದಾದ ಆನಂತರ ಕಂತೆಗಳನ್ನು ಒಣಗಿಸಲು ಯಾವ ವಿಶಿಷ್ಟಾಕ್ರಮವನ್ನೂ ಸಾಮಾನ್ಯವಾಗಿ ಅನುಸರಿಸುವುದಿಲ್ಲ.ಅವೇ ಒಣಗುತ್ತವೆ. ಆದರೆ ಅಮೆರಿಕ ಸಂಯುಕ್ತಸ್ಥಾನಗಳಲ್ಲಿ ಹಲವಾರು ಸಾಧನಗಳನ್ನು ಉಪಯೋಗಿಸಿ ಕೃತಕ ರೀತಿಯಲ್ಲಿ ಒಣಗಿಸುತ್ತಾರೆ. ಕೊಳತೆ ಗಿಡಗಳು ಸಾಕಷ್ಟು ಒಣಗಿದ ಆನಂತರ ನಾರನ್ನು ಬೇರ್ಪಡಿಸಲು ವಿವಿಧ ರೀತಿಯ ಯಂತ್ರ ಸಾಧನಗಳನ್ನು ಉಪಯೋಗಿಸಲಾಗುವುದು.ಈ ಸಾಧನೆಗಳಿಗೆ ಜಜ್ಜಿ ತುಂಡರಿಸುವ(ಬ್ರೇಕರ್ಸ್)ಸಾಧನಗಳು ಎಂದು ಹೆಸರು.ಏಕೆಂದರೆ ಇವು ಸಸ್ಯಾಂಶವೆಲ್ಲವನ್ನು ಕಬ್ಬಿನ ಗಾಣದಂತೆ ಜಜ್ಜಿ ತುಂಡರಿಸುತ್ತವೆ.ಈ ಸಂಸ್ಕಾರವಾದ ಆನಂತರ ನಾರನ್ನು ಇವುಗಳಿಂದ ಬೇರ್ಪಡಿಸಲಾಗುವುದು.ಒದರುವುದು,ಕೂರ್ಚ ಹೊಡೆಯುವುದು ಹಾಗೂ ಚಾಚುವುದರಿಂದ ನಾರನ್ನು ಬೇರ್ಪಡಿಸಿ ಚೊಕ್ಕ ಮಾಡುತ್ತಾರೆ.ಸಾಮಾನ್ಯವಾಗಿ ಈ ಕಾರ್ಯಗಳನ್ನು ಕೈಗಳಿಂದಲೇ ಮಾಡಿದರೂ ಅನೇಕ ಕಡೆ ಯಂತ್ರ ಸಾಧನಗಳನ್ನೂ ಉಪಯೊಗಿಸುವುದುಂಟು.ಈ ಸಾಧನಗಳನ್ನು ಉಪಯೋಗಿಸಿದಾಗ ನಾರು ತುಂಡಾಗುವ ಸಂಭವ ಉಂಟು. '''ಉತ್ಪಾದನಾ ಪರಿಮಾಣ:'''ಎಕರೆಗೆ ಉತ್ಪಾದನೆಯಾಗುವ ನಾರಿನ ಪರಿಮಾಣದಲ್ಲಿ ದೇಶದಿಂದ ದೇಶಕ್ಕೆ ವ್ಯತ್ಯಾಸ ಕಂಡುಬರುತ್ತದೆ.ಸಾಮನ್ಯವಾಗಿ ಇಳುವರಿ ಒಂದು ಎಕರೆಗೆ ೨೨೫-೮೨೦ ಕೆಜಿ.ಗಳವರೆಗೂ ಇರುವುದುಂಟು.ಎಕರೆಗೆ ಅತ್ಯಂತ ಕನಿಷ್ಠ ಉತ್ಪಾದನೆ ರಷ್ಯದಲ್ಲಿ ಹಾಗೂ ಅತ್ಯಂತ ಅಧಿಕ ಉತ್ಪಾದನೆ ಉತ್ತರ ಇಟಲಿಯಲ್ಲಿ.ಅಮೆರಿಕ ಸಂಯುಕ್ತಸ್ಥಾನಗಳಲ್ಲಿ ೯೦೦ ಕೆಜಿ.ನಾರು ಉತ್ಪಾದನೆಯಾದ ದಾಖಲೆಯಿದೆಯಾದರೂ ಸರಾಸರಿ ಉತ್ಪಾದನೆ ೪೦೦ ಕೆಜಿ.ಯನ್ನು ಮೀರಿಲ್ಲ. '''ಉಪಯೋಗಗಳು:'''ನಾರನ್ನು ಏಷ್ಯ ಮತ್ತು ಯೂರೋಪುಗಳಲ್ಲಿ ವಿವಿಧ ರೀತಿಯ ನೇಯ್ಗೆ ಸುರುಕುಗಳಿಗಾಗಿ ಒಂದಲ್ಲ ಒಂದು ಕಾಲದಲ್ಲಿ ಬಳಸಲಾಗಿದೆ.ಇದರಿಂದ ಅತ್ಯಂತ ನವುರಾದ ದಾರ ಹಾಗೂ ದಪ್ಪ ಹುರಿಗಳನ್ನು ತಯಾರಿಸಬಹುದು.ಅಮೆರಿಕ ಸಂಯುತಸ್ಥಾನಗಳಲ್ಲಿ ಗಾಂಜಾ ನಾರಿನಿಂದ ಟ್ವೈನ್ ದಾರವನ್ನು ತಯಾರಿಸುತ್ತಿದ್ದರು.ಕೃತಕ ಸ್ಪಂಜ್ ಮಾಡಲು ಈ ನಾರನ್ನು ೧೯೫೦ರ ಆನಂತರ ಉಪಯೋಗಿಸಿ ಕೊಳ್ಳಲಾಗುತ್ತದೆ. ಈ ಗಿಡದ ಬೀಜದಿಂದ ಎಣ್ಣೆಯೊಂದನ್ನು ತೆಗೆಯಬಹುದು.ಬೀಜದಲ್ಲಿ ಶೇ.೩೦ ಭಾಗ ಎಣ್ಣೆ ಉಂಟು.ಇದನ್ನು ಬಣ್ಣ,ವಾರ್ನಿಶ್ ಮತ್ತು ಸಾಬೂನು ತಯಾರಿಕೆಯಲ್ಲಿ ಬಳಸುತ್ತಾರೆ.ಅಲ್ಲದೆ ಬೀಜಗಳನ್ನು ಸಾಕುಪಕ್ಷಿಗಳ ಆಹಾರವಾಗಿ ಉಪಯೋಗಿಸುವುದಿದೆ. '''ಗಾಂಜಾ ಸೇವನೆ:'''ಗಾಂಜಾಗಿಡದ ಕುಡಿ ಹೂ,ಎಳೆಯಕಾಂಡ,ಎಲೆ ಮತ್ತು ಬೀಜಗಳಲ್ಲಿ ಔಷಧೀಯ ಗುಣವಿದೆ.ಈ ಪದಾರ್ಥವನ್ನೇ ಗಾಂಜಾ ಎನ್ನುವುದೂ ಉಂಟು.ಗಾಂಜಾದ ಮಾದಕ ಗುಣಕ್ಕೆ ಅದರಲ್ಲಿನ ಎಣ್ಣೆಯೇ ಕಾರಣ.ತೀವ್ರತೆಗೆ ತಕ್ಕಂತೆ ಗಾಂಜಾ ಮೂರು ಬಗೆಯದಾಗಿದೆ. ೧.ಅತ್ಯಂತ ಪ್ರಭಾವಶಾಲಿ ಮತ್ತೇರಿಸುವ ಬಗೆಃ ಬಲಿತಿರುವ ಹೆಣ್ಣು ಗಿಡಗಳ ಕುಡಿಗಳಿಂದ ಬರುವ ಗೋಂದಿನಿಂದ ಇದನ್ನು ತಯಾರುಮಾಡುತ್ತಾರೆ.ಉತ್ತರ ಆಫ಼್ರಿಕ,ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ಇದಕ್ಕೆ ಹಶೀಶ್ ಎನ್ನುತ್ತಾರೆ.ಇದನ್ನೇ ಭಾರತದಲ್ಲಿ ಚರಸ್ ಎನ್ನುವುದು. ೨.ಪ್ರಭಾವ ಅಷ್ಟು ಹೆಚ್ಚೂ ಅಲ್ಲ,ಕಡಿಮೆಯೂ ಅಲ್ಲ,ಮಧ್ಯಮ ರೀತಿಯ ಬಗೆ ಇದೇ ಗಾಂಜಾ ಎಂದು ಬಳಕೆಯಿದೆ.ಸಾಗುವಳಿ ಮಾಡಿದ ಗಿಡಗಳ ಕುಡಿಗಳಲ್ಲಿ ಬಿಡುವ ಹೂ ಮತ್ತು ಎಲೆಗಳಿಂದ ಇದನ್ನು ಪಡೆಯಲಾಗುತ್ತದೆ. ೩.ಪ್ರಭಾವ ಅತ್ಯಲ್ಪವಾಗಿರುವುದು ಮೂರನೆಯ ವಿಧ.ಇದನ್ನು ಭಾಂಗ್(ಭಂಗಿ)ಎಂದು ಕರೆಯುತ್ತಾರೆ. ಕಾಡುಗಿಡಗಳಂತೆ ಬೆಳೆದಿರುವ ಗಿಡಗಳ ಒಣ ಎಲೆಗಳು ಹಾಗೂ ಹೂ ಬಿಡುವ ಕೊಂಬೆಗಳನ್ನು ಕತ್ತರಿಸಿ ಇದನ್ನು ತೆಗೆಯಲಾಗುತ್ತದೆ. ಗಾಂಜಾ ಗಿಡದ ಯಾವ ಭಾಗಕ್ಕೆ ಆಗಲಿ ಅಥವಾ ಯಾವ ಭಾಗದಿಂದ ತೆಗೆದ ವಸ್ತುವಿಗಾಗಲಿ ಅಮೆರಿಕದಲ್ಲಿ ಮ್ಯಾರವಾನ ಎಂಬ ಸಾಮಾನ್ಯ ಹೆಸರು ರೂಢಿಯಲ್ಲಿದೆ.ಅಂದರೆ ಈ ವಸ್ತುವನ್ನು ಸೇವಿಸಿದರೆ ವ್ಯಕ್ತಿಯ ಶರೀರಕ್ರಿಯೆ ಹಾಗೂ ಮನಸ್ಸಿನ ಮೇಲೆ ಪರಿಣಾಮ ಬೀರುವಂತಿರಬೇಕು.ಮ್ಯಾರವಾನ ಪದ ಪೋರ್ಚುಗೀಸ್ ಭಾಷೆಯ ಮರಜಿ ಆಂಗೋ(ಮಾದಕವಸ್ತು ಎಂದು ಅರ್ಥ)ಎಮ್ಬುದರಿಂದ ಬಂದಿದೆ ಎಂದು ಊಹಿಸಲಾಗಿದೆ.ಅಮೆರಿಕದಲ್ಲಿ ಎಲ್ಲೆಡೆಗಳಲ್ಲೂ ಸುಲಭವಾಗಿ ಹಾಗೂ ಅತಿ ಕಡಿಮೆ ಬೆಲೆಗೆ ದೊರಕುವ ವಸ್ತು ಭಂಗಿ.ಅಶುದ್ಧ ಹಾಗೂ ಕೀಳುದರ್ಜೆಯ ವಸ್ತುವಿದು.ಇದರಿಂದ ಕೆಲವು ರೋಗಗಳೂ ಬರಬಹುದೆಮ್ದು ಹೇಳಲಾಗಿದೆ. ಗಾಂಜಾ ಮೊಟ್ಟಮೊದಲು ಔಷಧರೂಪದಲ್ಲಿ ಬಳಕೆಗೆ ಬಂದುದು ಪ್ರಾಚೀನ ಚೀನದಲ್ಲಿ.ಇದನ್ನು ಭಾರತ,ಆಫ಼್ರಿಕ,ಆನಂತರ ಯೂರೋಪು ದೇಶಗಳಲ್ಲೂ ಉಪಯೊಗಿಸಲಾಗುತ್ತಿತ್ತು ಮತ್ತು ಮಧ್ಯ ಮತ್ತು ದಕ್ಷಿಣ ಅಮೆರಿಕ ದೇಶಗಳ ಆದಿವಾಸಿಗಳಿಗೂ ಇದರ ಉಪಯೋಗ ಚೆನ್ನಾಗಿ ತಿಳಿದಿತ್ತು.ಇದನ್ನು ನೋವು ಮತ್ತು ಸಣ್ಣಪುಟ್ಟ ರೋಗಗಳಿಗೆ ಶಿಫಾರಸು ಮಾಡುತ್ತಿದ್ದರು.ಗಾಂಜಾದ ಬಗ್ಗೆ ೧೯೩೮ರ ಆನಂತರ ಗಮನಾರ್ಹವಾದ ಸಂಶೋಧನೆಗಳು ನಡೆದಿವೆ.ಇದರ ರಾಸಾಯನಿಕ ಸ್ವರೂಪ ಅತಿ ಜಟಿಲವಾದದ್ದು.ಇದರ ಪೂರ್ಣ ಅರಿವು ನಮಗಿನ್ನೂ ಆಗಿಲ್ಲ.ಟೆಟ್ರಹೈಡ್ರೊಕ್ಯನಾಬಿನಲ್(ಟಿ.ಎಚ್.ಸಿ.)ಎಂಬುದು ಗಾಂಜಾದ ಕ್ರಿಯಾಂಶ(ಆಕ್ಟಿವ್ ಪ್ರಿನ್ಸಿಪಲ್)ಎಂದು ವಿಜ್ಞಾನಿಗಳು ನಂಬಿದ್ದಾರೆ.ಕ್ಯಾನಾಬಿನಾಲಿನಲ್ಲಿ ಅನೇಕ ಸ್ವರೊಪಗಳಿವೆ.ಪ್ರತಿಯೊಂದು ಒಂದು ನಿರ್ದಿಷ್ಟ ರೀತಿಯ ಮಾದಕಾವಸ್ಥೆಗೆ ಕಾರಣವಾಗಬಹುದು.<noinclude><references/></noinclude> rbeipdxg5x264e5q59ieeyqs9bva48y ಟೆಂಪ್ಲೇಟು:Gap 10 11526 319590 256936 2026-05-13T14:28:52Z A826 6806 319590 wikitext text/x-wiki <onlyinclude><br /><span class="wst-gap __gap {{{class|}}}" style="display:inline-block; inline-size:{{{1|2em}}}"></span></onlyinclude><noinclude> {{documentation}} </noinclude> pcsiypuob50ratz3mvrl132xj4dopkk ಪುಟ:ಅರಮನೆ.pdf/೫೦ 104 31054 319635 317930 2026-05-13T14:43:37Z Shreesha Sharma 7840 /* Validated */ 319635 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=|left=ಅರಮನೆ|right=೧೯}} ಹೊತ್ತಿಗೆ ಹಿ೦ಗಾಗಿ ಬಿಟ್ಟಿರವನಲ್ಲಾ ಯಾದಾರ ದೆವ್ವ ಗಿವ್ವ ಬಡಕೊ೦ಡರಬೌದೋ</br> ಹೆ೦ಗೆ ಅ೦ತ ಮಮ್ಮಲನೆ ಯೋಚಿಸಿದಳು. ಜಗಲೂರೆಜ್ಜನನ್ನು ಮನದಾಗೆ</br> ಸ್ಮರಿಸಿದಳು.ರಾಜಮಾತೆ ಭ್ರಯ್ರಮಾ೦ಬೆಯ ಮೆಳ್ಳಗಣ್ಣು ತಾಕಿರಬೌದೆ೦ದು ಭಾವಿಸಿ</br> ವುಫ್ಫು ಬೆಳ್ಳಗಡ್ಡೆ ಯಿಳೇ ತೆಗೆದು ಹಾಕಿ ನೋಡಿದಳು. ವಲೇಲಿ ಆಟೊ೦ದು</br> ಘಾಟ ಆದರೂ ಆತನ ಮೂಗಿನಿ೦ದ ವ೦ದಾರ ಸೀನು ಬಾರಲಿಲ್ಲ .. ಕಲ್ಲು </br> ಗು೦ಡಿನ೦ಗ ಕೂಕ೦ಡೇ ಕೂಕ೦ಡಿದ್ದ , ಯಿ೦ಥ ಅನುಭವ ಥನಗೆ೦ದೂ ಆದುದಿಲ್ಲ</br>ಯಿದು ಯಿದೇ ಮೊದಲ ಸಲ.. ಯೀಸು ವರುಸು ದಿನಮಾನ ತಾನು ಹೇಳಿದ೦ಗ </br> ಕೇಳಿಕ೦ಡಿದ್ದ ತನ್ನ ಗ೦ಡ ತನ್ನತ್ತ ವ೦ದು ಸಲ ಕಣ್ಣೆತ್ತಿ </br>ಮಾತುದುರಿಸದಿರುವು ದೆಂದರೇನು? ವ೦ದೇ ವ೦ದ ಮಾತುದುರಿಸದಿರುವು</br>ದೆ೦ದರೇನು? ಯೀತನು ತೀತನೊಳಗೆ ಪೀಡೆ ಪಿಶಾಚಿ </br> ಸೇರಿಕೊ೦ಡಿರಬೌದೆ೦ದು ಭಾವಿಸಿದ ಆಕಿಯು ಮ೦ತ್ರಗಾರ ಮರೆಪ್ಪನ ಮನೆಗೆ</br> ಹೋಗಿ "ಮಾವಾ ಯಾಕಾ ಮುದೇತ ಅವುಸದಕ ಬೇಕ೦ದಗ ವ೦ದs ವ೦ದ </br>ಮಾತಾಡುತಾಯಿಲ್ಲಾ.. ಅಯುಗೇಡಿ ಹ೦ಗ ಕು೦ತುಗ೦ಡಾನ ವ೦ದs ಅ೦ತರ </br>ಮ೦ತರಿಸಿಕೊಟ್ಟು ಆತನ್ನ ನಿಸೂರು ಮಾಡು" ಯ೦ತ ಕೇಳಿಕೊ೦ಡಿದ್ದಕ್ಕೆ </br>ಆತನಿದ್ದು "ಮಾವಾ..ಗಾಳಿ ಸವುಡಿರಬೇಕವ್ವಾ" ಯ೦ದು ಅ೦ತರ ಮ೦ತರಿಸಿ </br>ಕೊಟ್ಟನು .ಆಕೆಯು ಅದನ್ನು ತ೦ದು ತನ್ನ ಮುದೇತನ ರೆಟ್ಟೆಗೆ ಕಟ್ಟಲು ಧಯರ್ಯ </br>ಸಾಲದೆ ಮುಂದಿಟ್ಟು ಲೋಬಾನದ ಹೊಗೆ ಹಾಕಿದಳು. "ಯೀಗ್ಲಾರ</br>ಯದ್ದೇಳೋ.. ಸಣಕಂದಮ್ಮನಂಗ ನೋಡ್ಕಂಡಿರೋ ನನ ಸಂಗಾಟ ವಂದೆಲ್ಡು </br>ಮಾತಾಡೋ " ಯಂದು ಗದರಿಸಿ ಕೇಳಿದಳು. ಆದರೆ ಆತ ತುಟಿ ಪಿಟಕ್ಕೆನ್ನಲಿಲ್ಲ</br>.. ಹಿಂಗ ಆಕೆ ಮಾಡಿದ್ದು ತರಾವರಿ ಯತ್ನಗಳ ಪಯ್ಕಿ ವಂದಾರ </br>ಫಲಕಾರಿಯಾಗಲಿಲ್ಲ. ಯಂದೂ ಗಂಡನೆದರು ಅತ್ತಾಕಿಯಲ್ಲದ ಆಕೆಯ ಕಣ್ಣಲ್ಲಿ</br> ವರತೆ ಮೂಡಿತು. ಅಯ್ಯೋ ನನ್ನ ಕರುಮವೇ.. ಯೀ ಯಿಳೀ ವಯಸ್ಸಿನಾಗ</br> ಕಣ್ಣೀರ್ನ ಕಪಾಳಕ್ಕ ತಂದುಕೋಬೇಕಾಗಿ ಬಂತಲ್ಲಾ.. ನಾನು ಮಾಡಿರೋ</br> ತಪ್ಪೇನಾರ ಯಿದ್ರ‌ಅದನ್ನಾರ ಹೇಳೋ"" ಯಂದು ಆತನೆದುರ ತಲೆಗೆ ಕಯ್ನ</br> ಹಚಕಂಡು ಕೂತಳು. ಆದರೂ ಆತನ ಬಾಯಿಯಿಂದ ವಂದಾರ ಮಾತು</br> ವುದುರಲಿಲ್ಲ</br> {{gap}}ಧಯರ್ಯ ಆತುಮ ಯಿಸುವಾಸಕ್ಕೆ ತವರೆಂದೆನಿಸಿದ್ದ ಜಗಲೂರೆವ್ವ ಬಿರು </br>ಬಿರನೆ ಅಂಗಳಕ್ಕೋಡಿ 'ಯ್ಯೋಯ್ ಭರಮಜ್ ಮಾಮೋ ಬರ್ರೆಪ್ಪಾ..<noinclude><references/></noinclude> 48bcg5qi52uvmk3petz515e77jgn0vz ಪುಟ:VISHAALAAKSHI - Niranjana.pdf/೧೫ 104 37851 319571 317940 2026-05-13T14:18:21Z Shreesha Sharma 7840 /* Validated */ 319571 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೧೩}} ದ್ದರು, ದುಡಿದು ಬಳಲಿ ಹಣ್ಣಾಗಿಯೇ ಉದುರಿದ್ದ ಜೀವ. ಆದರೆ, ಆ ಅಂತ್ಯ ಅನಿವಾರ್ಯ ಎನ್ನುವುದು ಯಾವ ಸಮಾಧಾನ ? ವಿಶಾಲಾಕ್ಷಿಯ ಅಣ್ಣ ಬಹಳ ಗೋಳಾಡಿದ್ದ: {{gap}}'ನಾನು ಪಾಪಿ! ಅಪ್ಪಯ್ಯನನ್ನು ನೋಡೋ ಭಾಗ್ಯ ನನಗಿಲ್ಲದೇಹೋಯ್ತು!' {{gap}}ಅಂತಹ ಅನಾಥ ಸುಸಾರವೇನೂ ಅಲ್ಲ. ತಂದೆ ಇಳಿಸಿದ್ದ ವಿಮೆ-ಐದು ಸಾವಿರದ್ದು-ಬಂದಿತ್ತು, ತಮ್ಮಂದಿರಿಬ್ಬರ ವಿದ್ಯಾಭ್ಯಾಸವಾದರೆ ಆಯಿತಿನ್ನು. {{gap}}ಆದರೂ ತಾಯಿ ರೋದಿಸಿದ್ದರು {{gap}}'ನಾವು ನಿರ್ಗತಿಕರಾದೆವಲ್ಲಾ!' {{gap}}[ಅವರ ದೃಷ್ಟಿಯಲ್ಲಿ ಘೋರತರವಾಗಿತ್ತು ಸಮಸ್ಯೆ, ಮಕ್ಕಳಿಗೆ ಎಲ್ಲಿಂದ ಬರಬೇಕು ಅದರ ಕಲ್ಪನೆ ?]. {{gap}}ತಂಗಿಯೆಂದು ತಾತ್ಸಾರಮಾಡದೆ, ಆಕೆ ತನ್ನ ಅಕ್ಕನೇ ಎನ್ನುವಂತೆ, ರಂಗರಾಜ ಕೇಳಿದ್ದ: {{gap}}ಕೆಲಸಕ್ಕೆ ರಾಜಿನಾಮೆ ಕೊಟ್ಟು ಬಂದ್ರಿಡ್ತೀನಿ, ಆಗದಾ ವಿಶಾಲಿ ?' {{gap}}ಬೆಂಗಳೂರಿನಿಂದ ಬಂದು ಒಂದೆರಡು ಘಂಟೆಹೊತ್ತು ಇದ್ದು ಹೋದ ಅವರ ಚಿಕ್ಕಪ್ಪ ಇತ್ತುದೂ ಅಂತಹದೇ ಸಲಹೆಯನ್ನು, {{gap}}'ರಾಜಿನಾಮೆ ಕೊಟ್ಟು ಬಂದ್ವಿಡು, ಇಲ್ಲೇ ಏನಾದರೂ ಕೆಲಸ ಸಿಗ ಬಹುದು, ನಾನೂ ನೋಡ್ತೀನಿ.' {{gap}}ಅವರೂ ನೋಡುವ' ವಿಷಯದಲ್ಲಿ ನಾಗಮ್ಮನಿಗೇನೂ ನಂಬಿಕೆ ಇರಲಿಲ್ಲ. ತನ್ನ ಮೈದುನನನ್ನು ಚೆನ್ನಾಗಿಯೇ ಅರಿತಿದ್ದಳು ಆಕೆ. ಆದರೂ ಹೆಣ್ಣುಜೀವ ಹೇಳಿತ್ತು: {{gap}}ಅದೇ ಸರಿ, ರಾಜೂ. {{gap}}'ಒಪ್ಪದೇ ಇದ್ದವಳು ವಿಶಾಲಿ ಒಬ್ಬಳೇ.. {{gap}}ಖಂಡಿತ ಕೂಡದು, ಇಲ್ಲಿ ನಾನಿಲ್ವೆ ? ಮನೆಯ ಜವಾಬ್ದಾರಿ ನನಗಿರಲಿ.' {{gap}}“ಹುಚ್ಚು ಮಾತು, ಹುಚ್ಚು ಮಾತು!” ಎಂದಿದ್ದರು ನಾಗಮ್ಮ, {{gap}}[ಒಳಗಿನ ದುಗುಡವನ್ನು ಮಕ್ಕಳೆದುರು ತೋಡಿಕೊಳ್ಳಲಾರದೆ ಅವರು ನೀರವವಾಗಿ ಅತ್ತಿದ್ದರು, ವಿಧಿಯನ್ನು ಹಳಿದಿದ್ದರು.]<noinclude></noinclude> d8b0cr26egiko3htc3o9wrz5hxul8cw ಪುಟ:VISHAALAAKSHI - Niranjana.pdf/೧೬ 104 37852 319572 317938 2026-05-13T14:18:35Z Shreesha Sharma 7840 /* Validated */ 319572 proofread-page text/x-wiki <noinclude><pagequality level="4" user="Shreesha Sharma" /></noinclude> {{rh|center=ವಿಶಾಲಾಕ್ಷಿ |left=೧೪|right=}} {{gap}}ರಜಾ ಮುಗಿಯುತ್ತ ಬಂದಂತೆ ವಿಶಾಲಿಗೆ ಜಯವಾಯಿತು, ಆದ ಇತ್ಯರ್ಥ, 'ರಾಜಿನಾಮೆ ಈಗಲೇ ಬೇಡ' ಎಂದು. {{gap}}ಹೊರಟುನಿಂತಾಗ ರಂಗರಾಜ, ಮುಗುಳುನಗಲು ಯತ್ನಿಸುತ್ತ, ಅಂದಿದ್ದ; - {{gap}}“ನಮ್ಮ ಅಪ್ಪ ಅಮ್ಮನಿಗೆ ಎಲ್ಲೋ ಲೆಕ್ಕ ತಪ್ಪಿರಬೇಕು ವಿಶಾಲಿ, ಈ ಮನೇಲಿ ದೊಡೋಳು ನೀನೇ !?. {{gap}}ಫಳಕ್ಕನೆ ನೀರು ಚಿಮ್ಮಿತ್ತು ವಿಶಾಲಾಕ್ಷಿಯ ಕಣ್ಣುಗಳಲ್ಲಿ... {{gap}}ಮತ್ತೆ ತಾಯಿಯ ಸ್ವರ ಕೇಳಿಸಿತು: {{gap}}“ತಟ್ಟೆ ಇಡಲೇನೇ ?” {{gap}}“ಬಂದೆ ಅಮ್ಮಾ'' {{gap}}ಮೇಜಿನ ಮೇಲೆ 'ಪ್ರಬುದ್ಧ ಕರ್ಣಾಟಕ'ದ ಸಂಚಿಕೆಯನ್ನೂ ಲೇಖನದ ಪ್ರತಿಗಳನ್ನೂ ಎದುರಿಗೆ ಇರಿಸಿಕೊಂಡು, ಹಳೆಯ ನೆನಪುಗಳೆಡೆಗೆ ಮನಸ್ಸನ್ನು ಅಲೆಯಲು ಬಿಟ್ಟು, ಕುಳಿತೇ ಇದ್ದಳು ಆಕೆ, ತಾಯಿ ಪುನಃ ಕರೆದೊಡನೆಯೇ ಗಡಬಡಿಸಿ ಎದ್ದು, ಅಡುಗೆಯ ಮನೆಗೆ ನಡೆದಳು. {{gap}}ಅಡುಗೆಯ ಮನೆಯಲ್ಲೇ ಊಟ, ದೇವರ ಬಿಡಾರವೂ ಅಲ್ಲೇ ಮೂಲೆಯಲ್ಲಿ ಇಪ್ಪತ್ತೈದು ವರ್ಷಗಳಿಗೂ ಹಿಂದೆ, ರಂಗರಾಜ ಒಂದು ವರ್ಷದ ಕೂಸಾಗಿದ್ದಾಗ [ವಿಶಾಲಿ ಹೊಟ್ಟೆಯಲ್ಲಿದ್ದಾಗ, ಆ ಮನೆಯನ್ನು ನಾಗಮ್ಮನ. ಯಜಮಾನರು ಹಿಡಿದಿದ್ದರು, `ಹನ್ನೊಂದು ರೂಪಾಯಿ ಆಗಿನ ಬಾಡಿಗೆ ಮುಂದೆ ಹದಿಮೂರಾಗಿತ್ತು, ಹತ್ತೊಂಭತ್ತಕ್ಕೇರಿತು. ಇಪ್ಪತ್ತಮೂರಕ್ಕೆ ಬಂದು ನಿಂತಿತ್ತು. ಈಗ ಅಂತಹ ಮನೆ ಮೂವತ್ತೈದಕ್ಕೂ ಸಿಗುತ್ತಿರಲಿಲ್ಲ. " [ಬೆಂಗಳೂರಿನಲ್ಲಾದರೆ ಎಪ್ಪತ್ತು ಎಂಭತ್ತು ಹೇಳಿದರೂ ಹೇಳಿದರೇ... ಹೀಗಾಗಿ, ವಿಶಾಲಾಕ್ಷಿಯ ತಂದೆ ತೀರಿಕೊಂಡ ಬಳಿಕ ಮನೆ ಬದಲಾಯಿಸಬೇಕೆಂಬ ಮಾತು ಬಂದಿತ್ತಾದರೂ ಅಲ್ಲಿಗೇ ನಿಂತುಹೋಗಿತ್ತು, ತೂಗಿಸಿಕೊಂಡು ಹೋಗ ಬೇಕಾದ ಸಂಸಾರ, ಬಾಡಿಗೆಗಾಗಿ ಹೆಚ್ಚು ಹಣ ಸುರಿಯುವುದು, ದುಂದು ವೆಚ್ಚವಾಗಿಯೇ ನಾಗಮ್ಮನಿಗೆ ಕಂಡಿತು.” ಶೋಕಪೀಡಿತೆಯಾದ ಆರಂಭದ ದಿನಗಳಲ್ಲಿ, ಆ ಮನೆಯಲ್ಲಿ, ಹೆಜ್ಜೆ ಹೆಜ್ಜೆಗೂ 'ಅವರ' ನೆನಪೇ ಆಯಿತು ನಿಜ. ಆದರೂ ಪ್ರಯತ್ನಪೂರ್ವಕವಾಗಿ, ಇತರ ವಿಷಯಗಳ ಕಡೆಗೇ ಮನಸ್ಸು ಹರಿಸಿ, ನಾಗಮ್ಮ ಚೇತರಿಸಿಕೊಂಡಿದ್ದರು.<noinclude></noinclude> fdqkyr7tv439s8eftoccca828hx8554 ಪುಟ:VISHAALAAKSHI - Niranjana.pdf/೧೭ 104 37853 319573 317937 2026-05-13T14:19:27Z Shreesha Sharma 7840 /* Validated */ 319573 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ |left=|right=೧೫}} {{gap}}“ಉಪ್ಪು ಹೆಚ್ಚಾಗಿದೆಯೇನೆ ಸಾರಿಗೆ ?” {{gap}}“ಇಲ್ಲಮ್ಮ, ಸರಿಯಾಗಿದೆ.” {{gap}}“ಇನ್ನೊಂದು ಸೌಟು ಬಡಿಸ್ತೇನು ?” {{gap}}“ಬೇಡ, ಸಾಕು.” {{gap}}ಬಹಳ ವರ್ಷಗಳಿಂದ ಬಳಕೆಯಾಗಿದ ಪದಗಳು_ಬೇಡ, ಸಾಕು.” ಮನೆಯಲ್ಲಿರುವವಳು ತಾನೊಬ್ಬಳೇ ಎನ್ನುವ ಹಾಗೆ ಎಂದೂ ತಿಂದುಂಡವಳಲ್ಲ ವಿಶಾಲಿ, ಊಟಕ್ಕೆ ಕುಳಿತರೂ ಅಷ್ಟೆ, ತಿಂಡಿ ಕೈಗೆತ್ತಿಕೊಂಡರೂ ಅಷ್ಟೆ, ತಮ್ಮ ದಿರ ನೆನಪಾಗುತ್ತಿತ್ತು ಅವಳಿಗೆ ....ಚಂದ್ರ, 'ಸ್ಪೆಶಲ್ ಕ್ಲಾಸಿ'ದೆಯೆಂದು ಬೇಗನೆ ಮನೆ ಬಿಟ್ಟು ಕಾಲೇಜಿಗೆ ಹೋಗಿದ್ದ. ಸೈಕಲಿನ ಮೇಲೆ ಸಿಂದು ಯಾವ ಘಳಿಗೆಯಲ್ಲಾದರೂ ಬಂದನೇ, ಜಯನಿಗಾದರೋ ಹೈ ನ್ಯೂ ಲು ಹತ್ತಿರ. ಮಧ್ಯಂತರದ ಬಿಡುವೇ ಸಾಕಾಗುತ್ತಿತ್ತು ಊಟದ ಶಾಸ್ತ್ರ ಮುಗಿಸಿಹೋಗಲು. {{gap}}ಉಣ್ಣುತ್ರ ವಿಶಾಲಾಕ್ಷಿ ಯೋಚಿಸಿದಳು: ಇನ್ನೂ ಎರಡು ಮೂರು ಘಂಟೆ ಗಳ ಕಾಲ ಇಲ್ಲಿಯೇ ಕುಳಿತು ಮಾಡಬೇಕಾದುದೇನು ತಾನು ? ವಿಶ್ವವಿದ್ಯಾ ನಿಲಯದ ಜವಾನ ಸಂತಸದ ಹೇರನ್ನೇ ಇಳಿಸಿಹೋಗಿದ್ದ, ಹ ತ್ತು ಜ ನ ಕೈ ತಾನೀಗ ಅದನ್ನು ಹಂಚಬೇಕು, ಗಿರಿಜಾಬಾಯಿ--ಅವರು ಸಿಗುವುದು ಐದು ಘಂಟೆಯ ಅನಂತರವೇ, ನರ್ಮದೆಯನ್ನು ನೋಡಿ ಬಹಳ ದಿನಗಳಾದುವು. ಮೊದಲು ಅಲ್ಲಿಗೆ ಹೋಗಿ, ಬಳಿಕ ತರಗತಿಗೆ ಬರಬಹುದು, ಊಟದ ಹೊತ್ತು ನಿಜ, ಆದರೂ ನರ್ಮುದೆಗೇನೂ ತೊಂದರೆಯಾಗದು, ಮಗುವನ್ನು ಆಡಿಸುವುದರ ಹೊರತು ಬೇರೇನು ಕೆಲಸವಿದೆ ಅವಳಿಗೆ ? ಡಾಕ್ಟರ್ ಶ್ರೀಕಾಂತ ಮನೆಗೆ ಬಂದೊಡನೆಯೇ ತಾನು ಹೊರಬಿದ್ದ ರಾಯಿತು, ಮತ್ತೂ ಸಮಯವಿತ್ತೆಂದರೆ ಲೈಬ್ರೆರಿಗೆ ಹೋಗಬಹುದು.... {{gap}}“ಮಜ್ಜಿಗೆಗೆ ಅನ್ನ ?” {{gap}}“ಹಂ?” “ಅನ್ನ ಇಡಲೇನೇ ಸ್ವಲ್ಪ ?” {{gap}}“ಹೂಂ, ಸ್ವಲ್ಪ-ಸ್ವಲ್ಪ ಸಾಕು.” {{gap}}“ನಿಧಾನವಾಗಿ ಊಟಮಾಡೇ, ಅದೇನು ಅವಸರ-ಅಂತ.” {{gap}}“ಏನಿಲ್ಲವಮ್ಮ,”<noinclude></noinclude> hmioxg9mpvkob8nomqakm4vgzvvblq4 319586 319573 2026-05-13T14:27:11Z A826 6806 319586 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ |left=|right=೧೫}} {{gap}}"ಉಪ್ಪು ಹೆಚ್ಚಾಗಿದೆಯೇನೆ ಸಾರಿಗೆ?" {{gap}}"ಇಲ್ಲಮ್ಮ, ಸರಿಯಾಗಿದೆ." {{gap}}"ಇನ್ನೊಂದು ಸೌಟು ಬಡಿಸ್ತೇನು?" {{gap}}"ಬೇಡ, ಸಾಕು." {{gap}}ಬಹಳ ವರ್ಷಗಳಿಂದ ಬಳಕೆಯಾಗಿದ ಪದಗಳು—ಬೇಡ, ಸಾಕು." ಮನೆಯಲ್ಲಿರುವವಳು ತಾನೊಬ್ಬಳೇ ಎನ್ನುವ ಹಾಗೆ ಎಂದೂ ತಿಂದುಂಡವಳಲ್ಲ ವಿಶಾಲಿ, ಊಟಕ್ಕೆ ಕುಳಿತರೂ ಅಷ್ಟೆ, ತಿಂಡಿ ಕೈಗೆತ್ತಿಕೊಂಡರೂ ಅಷ್ಟೆ, ತಮ್ಮ ದಿರ ನೆನಪಾಗುತ್ತಿತ್ತು ಅವಳಿಗೆ ....ಚಂದ್ರ, 'ಸ್ಪೆಶಲ್ ಕ್ಲಾಸಿ'ದೆಯೆಂದು ಬೇಗನೆ ಮನೆ ಬಿಟ್ಟು ಕಾಲೇಜಿಗೆ ಹೋಗಿದ್ದ. ಸೈಕಲಿನ ಮೇಲೆ ಸಿಂದು ಯಾವ ಘಳಿಗೆಯಲ್ಲಾದರೂ ಬಂದನೇ, ಜಯನಿಗಾದರೋ ಹೈ ನ್ಯೂ ಲು ಹತ್ತಿರ. ಮಧ್ಯಂತರದ ಬಿಡುವೇ ಸಾಕಾಗುತ್ತಿತ್ತು ಊಟದ ಶಾಸ್ತ್ರ ಮುಗಿಸಿಹೋಗಲು. {{gap}}ಉಣ್ಣುತ್ರ ವಿಶಾಲಾಕ್ಷಿ ಯೋಚಿಸಿದಳು: ಇನ್ನೂ ಎರಡು ಮೂರು ಘಂಟೆ ಗಳ ಕಾಲ ಇಲ್ಲಿಯೇ ಕುಳಿತು ಮಾಡಬೇಕಾದುದೇನು ತಾನು? ವಿಶ್ವವಿದ್ಯಾ ನಿಲಯದ ಜವಾನ ಸಂತಸದ ಹೇರನ್ನೇ ಇಳಿಸಿಹೋಗಿದ್ದ, ಹ ತ್ತು ಜ ನ ಕೈ ತಾನೀಗ ಅದನ್ನು ಹಂಚಬೇಕು, ಗಿರಿಜಾಬಾಯಿ—ಅವರು ಸಿಗುವುದು ಐದು ಘಂಟೆಯ ಅನಂತರವೇ, ನರ್ಮದೆಯನ್ನು ನೋಡಿ ಬಹಳ ದಿನಗಳಾದುವು. ಮೊದಲು ಅಲ್ಲಿಗೆ ಹೋಗಿ, ಬಳಿಕ ತರಗತಿಗೆ ಬರಬಹುದು, ಊಟದ ಹೊತ್ತು ನಿಜ, ಆದರೂ ನರ್ಮುದೆಗೇನೂ ತೊಂದರೆಯಾಗದು, ಮಗುವನ್ನು ಆಡಿಸುವುದರ ಹೊರತು ಬೇರೇನು ಕೆಲಸವಿದೆ ಅವಳಿಗೆ? ಡಾಕ್ಟರ್ ಶ್ರೀಕಾಂತ ಮನೆಗೆ ಬಂದೊಡನೆಯೇ ತಾನು ಹೊರಬಿದ್ದ ರಾಯಿತು, ಮತ್ತೂ ಸಮಯವಿತ್ತೆಂದರೆ ಲೈಬ್ರೆರಿಗೆ ಹೋಗಬಹುದು.... {{gap}}"ಮಜ್ಜಿಗೆಗೆ ಅನ್ನ?" {{gap}}"ಹಂ?" "ಅನ್ನ ಇಡಲೇನೇ ಸ್ವಲ್ಪ?" {{gap}}"ಹೂಂ, ಸ್ವಲ್ಪ—ಸ್ವಲ್ಪ ಸಾಕು." {{gap}}"ನಿಧಾನವಾಗಿ ಊಟಮಾಡೇ, ಅದೇನು ಅವಸರ—ಅಂತ." {{gap}}"ಏನಿಲ್ಲವಮ್ಮ,"<noinclude></noinclude> idhs4i3e39lleuvvynkwcx91amh356q ಪುಟ:VISHAALAAKSHI - Niranjana.pdf/೧೮ 104 37854 319574 317936 2026-05-13T14:19:47Z Shreesha Sharma 7840 /* Validated */ 319574 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=ವಿಶಾಲಾಕ್ಷಿ - |left=೧೬ |right=}} {{gap}}ಊಟ ಮುಗಿಸಿ ಕೊಠಡಿಗೆ ಮರಳಿದ ವಿಶಾಲಾಕ್ಷಿ, ಮೇಜಿನ ಮೇಲಿದ್ದ 'ಪ್ರಬುದ್ಧ ಕರ್ಣಾಟಕ'ದ ಸಂಚಿಕೆಯನ್ನೂ ಲೇಖನದ ಪ್ರತಿಗಳನ್ನೂ ಮುದ್ದಿಸುವ ನೋಟದಿಂದ ಪುನಃ ಪುನಃ ನೋಡಿದಳು. ಬಿಳಿಯದೊಂದನ್ನು ಕೈಗೆತ್ತಿಕೊಂಡು ಹಾಳೆ ಮಗುಚಿದಳು, “ತಿದ್ದಿರಬಹುದು, ತಿದ್ದಿರಲೇಬೇಕು' ಎಂಬ ಶಂಕೆ [ಅಲ್ಲೊಂದು ಇಲ್ಲೊಂದು ಪದದ ಓರೆಕೋರೆಯನ್ನು ಒಪ್ಪಗೊಳಿಸಿದ್ದರು ಸಂಪಾದಕರು, ವಿಶಾಲಿಯ ಗಮನಕ್ಕೆ ಅದು ಬೀಳಲಿಲ್ಲ.] ತಾನು ಬರೆದಿದ್ದ ಹಾಗೆಯೇ ಅಚ್ಚಾಗಿತ್ತು. ಅದನ್ನಾಗಲೇ ಹಲವಾರು ಜನ ಓದಿರಬಹುದು, ಏನು ಹೇಳು ವರೊ? ಏನು ಹೇಳುವರೋ ? ಕುವೆಂಪು ಕೃತಿಯೂ ಇತ್ತು ಮೊದಲ ಪುಟದಲ್ಲೇ, ತಾನು ಬರೆದುದು ಅವರ ಕಣ್ಣಿಗೂ ಬೀಳಬಹುದು.... {{gap}}ಹೊರಡುವ ಸಿದ್ಧತೆಗೆಂದು, ಸಡಿಲವಾಗಿದ್ದ ಹೆರಳನ್ನು ವಿಶಾಲಾಕ್ಷಿ ಬಿಚ್ಚಿದಳು ಕನ್ನಡಕವನ್ನು ತೆಗೆದು ಮೇಜಿನ ಮೇಲಿರಿಸಿ, ಗೋಡೆಯಲ್ಲಿ ತೂಗ ಹಾಕಿದ್ದ ಕನ್ನಡಿಗೆ ಸವಿಾಪವಾಗಿ ನಿಂತಳು ತುಟಿಗಳ ಮೇಲೆ ಲಾಸ್ಯವಾಡುತಿದ್ದ ಮಂದಹಾಸ ಲೇಖಿಕೆ ವಿಶಾಲಾಕ್ಷಿ ತಾನು ಯೌವನದ ಒತ್ತಡಕ್ಕೆ ಹಿಂದೇಟು ಹೊಡೆಯುತ್ತಿದ್ದ ಮುಖದ ಮೇಲಿನ ಸಿಡುಬಿನ ಕಲೆಗಳು, ಲಜ್ಜಿತವಾಗಿ ತಮ್ಮ ಒಡತಿಯನ್ನು ಕಂಡುವು. ಬಾಲ್ಯದಿಂದಲೆ ಒಡನಾಡಿಗಳಾಗಿ ಬಂದಿದ್ದುವು, ಆ ಕಲೆಗಳು ಮತ್ತು ಕನ್ನಡಕ, ಮೈಗೂಡಿ ಹೋಗಿ ಈಗ ಆನಿ ಭಾಜ್ಯವೆನಿಸಿದ್ದ ಅಂಶಗಳು ....ಜಡೆಯೊ ? ತುರುಬೊ? ಹೃದಯ ನಲಿಯು ಶಿದ್ಧ-ಸುಖದ ಹಕ್ಕಿ- ಉಲಿಯುತ್ತಿದ್ದ ಈ ದಿ ನ ಮುಡಿಕಟ್ಟಬೇಕೆನಿಸಿತು. ಚೋಟುದ್ದ ಕೂದಲಲ್ಲ ತನ್ನದು, ಸಾಕಷ್ಟು ನೀಳವಾದದ್ದು, ಚೌರಿಯ ನೆರವಿಲ್ಲ. ದೆಯೇ ಹಿರಿದಾಗಿ ಕಾಣುವ ಗಂಟು ....ಎಣ್ಣೆಗಪ್ಪು ಮೈ, ಇದ್ದಿಲನ್ನೂ ನಾಚಿ ಸುವ ಮೈಬಣ್ಣದ ಮಹಿಳೆಯರಿರುವಾಗ, ಇದೇ ಬಿಳುಪು.ಯಾವಾಗಲೂ ಹೋಲಿಸಿನೋಡಬೇಕಾದುದು ತಮಗಿ೦ತ ಉತ್ತಮರೊಡನಲ್ಲ, ತಮ್ಮಷ್ಟು ಭಾಗ್ಯವಂತರೂ ಅಲ್ಲದವರೊಡನೆ ....ಪೌಡರಿನ ತೆಳು ಲೇಪನ ಕಂಡೂ ಕಾಣಿಸ ದಷ್ಟು ... ಸೀರೆಗಳಿದ್ದುವು ಈಗ, ಆರಿಸಿ ಉಟ್ಟುಕೊಳ್ಳುವಷ್ಟು, ಈಗಲೂ ಸರಳ ವಾಗಿರುವುದೇ ಇಷ್ಟ ವಿಶಾಲಾಕಿಗೆ...'ಬೇಸರ' ಎಂದೊಡನೆ ಮೂಗುಮುರಿಯ ಬೇಕೆಂದೇನೂ ಅವಳಿಗೆ ಅನಿಸುತ್ತಿರಲಿಲ್ಲ. ಒಂದು ರೀತಿಯಲ್ಲಿ ಅದು ಇಷ್ಟ ಕೂಡಾ. ಆದರೂ ಬಿಳಿ ಅರಿವೆಯ 'ಬಾಡಿ'ಯೇ ಸಾಕೆನಿಸುತ್ತಿತ್ತು, ಅಭ್ಯಾಸವನ್ನು ಬದಲಿ. ಸುವುದು ಸುಲಭವಾಗಿರಲಿಲ್ಲ...<noinclude></noinclude> 9j49cza51lfslbnlphq445mt6vscxgc ಪುಟ:VISHAALAAKSHI - Niranjana.pdf/೧೯ 104 37855 319575 317941 2026-05-13T14:20:01Z Shreesha Sharma 7840 /* Validated */ 319575 proofread-page text/x-wiki <noinclude><pagequality level="4" user="Shreesha Sharma" /></noinclude> {{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೧೭}} {{gap}}ವಿಶಾಲಾಕ್ಷಿ, 'ಪ್ರಬುದ್ಧ ಕರ್ಣಾಟಕ'ದ ಸಂಚಿಕೆಯನ್ನೂ ಲೇಖನದ ಮೂರು ಪ್ರತಿಗಳನ್ನೂ ತೆಗೆದು ಒತ್ತಟ್ಟಿಗೆ ಇರಿಸಿದಳು. ತರಗತಿಯಲ್ಲಿ ಟಿಪ್ಪಣಿ ಬರೆದುಕೊಳ್ಳಲು ಹಾಳೆಗಳು ಕೆಲವು, ಪೆನ್ನು, ಒಯ್ಯುವುದು ಹೇಗೆ ? ಶೋಕಿ ಚೀಲವಿತ್ತು. ಬಳಸುತ್ತಿದ್ದುದು ಕಡಮೆ, ಆದರೆ ಅದರೊಳಗೆ ಇವೆಲ್ಲ ಹಿಡಿಸಲಾರವು, ಪೆನ್ನು ಹಾಳೆಗಳನ್ನಷ್ಟೆ ಹೊರಗಿರಿಸಿ, ಅವನ್ನು ಯಾವುದಾದರೂ ಪೇಪರಿನೊಳಗೆ ಭದ್ರವಾಗಿ ಸುತ್ತಿ ದಾರ ಬಿಗಿಯುವುದೇ ಸರಿ. ಅದರೊಳಗೇನಿದೆ ಎಂಬುದು ಸಹಾಧ್ಯಾಯಿಗಳಿಗೆ ಗೊತ್ತಾಗಬಾರದು.... {{gap}}“ಮಾರ್ಕೆಟ್ಟಿನಿಂದ ಏನಾದರೂ ತರಬೇಕೇನಮ್ಮ?” {{gap}}ಸಾಮಾನು ಯಾವುದಾದರೂ ತೀರಿದೆಯೇ ಎಂದು ನಾಗಮ್ಮ ಒಂದು ಕ್ಷಣ ಯೋಚಿಸಿದರು, ಒಂದೂ ಹೊಳೆಯಲಿಲ್ಲ. {{gap}}“ನೆನಪಾಗೋಲ್ವಲ್ಲೇ....? {{gap}}“ಹೋಗಲಿಬಿಡು, ಚಂದ್ರನಿಗೆ ಹೇಳಿ ಭಾನುವಾರ ತರಿಸಿದರಾಯ್ತು.” {{gap}}“ತರಕಾರಿ ಮುಗಿದಿದೆ.” {{gap}}“ಅಲ್ಲಿಂದಲೇ ತರಲೋ ? ಅಥವಾ ಬೆಳಗ್ಗೆ ಮಾಡ್ಕೊಂಡು ಬಂದಾಗ? {{gap}}“ಸಾಕು, ಸಾಕು, ಇಲ್ಲೇ ಕೊಂಡರಾಯ್ತು, ಮುಗಿದಿದೆ ಅಂತ ಹೇಳ್ಳೆ, ಅಷ್ಟೆ.” {{gap}}ಮಗಳು ಚಿಲ್ಲರೆ ದುಡ್ಡೆಣಿಸಿ, ಹೊರಬೀಳಲು ಅಣಿಯಾಗಿ, ಚಪ್ಪಲಿ ಮೆಟ್ಟಿ ಕೊಳ್ಳುತ್ತಿದ್ದಂತೆ, ನಾಗಮ್ಮ ಕೇಳಿದರು {{gap}}“ಎಷ್ಟು ಹೊತ್ತಿಗೆ ಬರ್ತೀಯಾ ?” “ಗಿರಿಜಾಬಾಯಿಯನ್ನು ನೋಡಿ, ಹಾಗೇ ಮಾತಾಡಿಸ್ಕೊಂಡು...” {{gap}}“ಆದಷ್ಟು ಬೇಗೈ ಬಂದ್ವಿಡು.” {{gap}}“ಹೂನಮ್ಮ”. {{gap}}ಎಲ್ಲ ವಿವರಗಳೂ ಯಾಕೆ ಎಂದು, ನರ್ಮದೆಯನ್ನು ಕಾಣಹೋಗುವ ವಿಷಯ ವಿಶಾಲಾಕ್ಷಿ ತಾಯಿಗೆ ಹೇಳಲಿಲ್ಲ. ಹೊಸ್ತಿಲು ದಾಟಿ ಹೊರಬೀಳುತ್ತ ಅವಳೆಂದಳು ; {{gap}}“ಬರ್ತೀನಿ.” {{gap}}ಸ್ಲೇಟು ಪುಸ್ತಕಗಳನ್ನು ಚೀಲದಲ್ಲಿ ತುಂಬಿ, ಎಳೆಯರ ಶಾಲೆಗೆ ಲಂಗತೊಟ್ಟು<noinclude></noinclude> qp6dx92edota3pttyy78f38uxrhwc44 ಪುಟ:VISHAALAAKSHI - Niranjana.pdf/೨೦ 104 37856 319576 317942 2026-05-13T14:20:13Z Shreesha Sharma 7840 /* Validated */ 319576 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=ವಿಶಾಲಾಕ್ಷಿ |left=೧೮|right=}}ವಿಶಾಲಾಕ್ಷಿ ವಿಶಾಲಿ ಹೋಗತೊಡಗಿದಾಗಿನಿಂದಲೂ ಹಾಗೆಯೇ, ಬಾಗಿಲಲ್ಲಿ ನಿಂತು ಕೂಗಿ ಹೇಳಬೇಕು ತಾಯಿಗೆ--ಬಡ್ತೀನಿ' ಎಂದು. {{gap}}ಅಭ್ಯಾಸಬಲದಿಂದ ನಾಗಮ್ಮ ಅಂದರು : {{gap}}“ಹೂಂ.” {{gap}}ಹಿಂದೆಯಾಗಿದ್ದರೆ ಎಚ್ಚರಿಕೆಯ ಮಾತುಗಳೂ ಇರುತ್ತಿದ್ದುವು : 'ಬೀದಿ ಬದೀಲೇ ಹೋಗು, ಮೋಟಾರು ಬಂದೀತು ಹುಷಾರಿ!” ಈಗ ಹಾಗೆ ಹೇಳುವ ಅಗತ್ಯವಿರಲಿಲ್ಲ; ಎಳೆಯ ಮಗುವೇನೂ ಅಲ್ಲ ಅವರ ಮಗಳು. {{gap}}ತರಗತಿಗಳಿಗೆಂದು ಹೊರಟಿದ್ದ ವಿದ್ಯಾರ್ಥಿಗಳ ಹಿಂಡು ರಸ್ತೆಯಲ್ಲಿತ್ತು, ಕಾಲ್ನಡಿಗೆಯವರು, ಸೈಕಲ್ ಸವಾರರು ..ಹಿಂದೆ ಅಂತಹ ವಿದ್ಯಾರ್ಥಿಗಳು ತನ್ನೆಡೆಗೆ ನೋಡಿದಾಗ ಭಯಗೊಳ್ಳುತ್ತಿದ್ದಳು ವಿಶಾಲಿ, ಈಗ ಆ ಬಗೆಯ ಅನುಭವವಾಗುತ್ತಿರಲಿಲ್ಲ. ಅವರೆಲ್ಲರಿಗಿಂತ ಹಿರಿಯಳು ಆಕೆ.ಹಿರಿಯಳು. ವಯಸ್ಸಲ್ಲ, ತಾನು ಅಧ್ಯಾಪಿಕೆಯಾಗಿದ್ದುದಲ್ಲ, ಕೈಯಲ್ಲಿದ್ದ ಕಟ್ಟು ಸಾರುತ್ತಿತ್ತು ತನ್ನ ಹಿರಿತನ'ವನ್ನು, {{gap}}ಗಂಭೀರವಾದ ಮೆಲುನಡೆಯಿಂದ ಬೀದಿಯ ಅಂಚಿನಲ್ಲಿ ವಿಶಾಲಾಕ್ಷಿ ನಡೆದಳು. {{gap}}ನಡೆದುಹೋಗುತ್ತಿದ್ದ ಮ ಗ ಳ ನ್ನು ತುಂಬುನೋಟದಿಂದ ನಾಗಮ್ಮ ನೋಡಿದರು.<noinclude></noinclude> lapboshp12rj71qz1vg6a5aal122rrq ಪುಟ:VISHAALAAKSHI - Niranjana.pdf/೨೧ 104 37857 319569 100016 2026-05-13T14:14:21Z Shreelatha.Halemane 7642 /* Proofread */ 319569 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|೨}} {{gap}}ತುಂಬುನೋಟದಿಂದ ನೋಡಿದರು ನಾಗಮ್ಮ, ನಡೆದುಹೋಗುತ್ತಿದ್ದ ಮಗಳನ್ನು, ಅ ನೋಟದಲ್ಲಿ ಒಲವಿತ್ತು, ವ್ಯಥೆಯೂ ಇತ್ತು. {{gap}}ಯಜಮಾನರು ಮನಸ್ಸಿಗೆ ಹಚ್ಚಿಕೊಂಡಿರಲಿಲ್ಲವೆಂದಲ್ಲ. ಹೊರಗೆ ತೋರಿಸಿ ಕೊಳ್ಳದೇ ಇದ್ದರೂ ಬೆಳೆದು ವಿಷವಾಗಿ ಹಬ್ಬಿತ್ತು ಅಂತರಂಗದ ಕೊರಗು. ತಾವಿಬ್ಬರೇ ಇದ್ದಾಗಲೂ ಆ ಪ್ರಶ್ನೆಯ ಪ್ರಸ್ತಾಪವನ್ನು ಅವರು ಮಾಡುತ್ತಿದ್ದುದು ಕಡಮೆ. ಎಲ್ಲ ಸಂಕಟಗಳೂ ಒಳಗೇ ಇರುತ್ತಿದ್ದುವು-ಉಕ್ಕಿನ ತಿಜೋರಿಯಲ್ಲಿ ದ್ದಂತೆ, ಭದ್ರವಾಗಿ. {{gap}}ವಿಶಾಲಾಕ್ಷಿ ಹದಿನೈದು ಹದಿನಾರರ ಹರೆಯದವಳಿದ್ದಾಗಲೇ ವರಾನ್ವೇಷಣೆ ಆರಂಭವಾಗಿತ್ತು, ಸಂಬಂಧಿಕರ ವೃತ್ತಗಳಲ್ಲೇ ಮೊದಲು. ಅದು ನಿರರ್ಥಕ ವಾದಾಗ, ಹೊರಗಿನ ಕ್ಷೇತ್ರಗಳಲ್ಲಿ, ಹುಡುಗಿ ಸ್ಪುರದ್ರೂಪಿಣಿಯಾಗಿರಲಿಲ್ಲ. ಬಾಲ್ಯದಲ್ಲಿ ಬಡಿದ ಸಿಡುಬು, ಎಳೆಯ ಜೀವ ತನಗೆ ಬಲಿಯಾಗದೇ ಇದ್ದಾಗ, ಮುಖವನ್ನು ಮತ್ತಷ್ಟು ಅಂದಗೆಡಿಸಿ ತೀಟೆ ತೀರಿಸಿಕೊಂಡಿತ್ತು, ದೃಷ್ಟಿ ದುರ್ಬಲ ವಾದುದೂ ಅದರ ಫಲಶ್ರುತಿಯಾಗಿಯೇ, ಹೆಣ್ಣು ಹೆತ್ತವರ ಕಷ್ಟವನ್ನು ಆತ್ಮೀ ಯರೇ ತಿಳಿಯಲೊಲ್ಲರೆಂದಮೇಲೆ, ಅಪರಿಚಿತರಿಂದ ಸಹಾನುಭೂತಿ ನಿರೀಕ್ಷಿಸುವು ದಾದರೂ ಹೇಗೆ ಸಾಧ್ಯ? {{gap}}ಆ ತರುಣದಲ್ಲಿ ನಾಗಮ್ಮ ಪದೇ ಪದೇ ಕೇಳಿದ್ದರು: {{gap}}“ಏನಾದರೂ ಮಾಡೋಕೆ ಆಗೋಲ್ವೇಂದ್ರೆ.... {{gap}}” ನಿಜಸ್ಥಿತಿಯನ್ನು ನಿಷ್ಟುರ ಮಾತುಗಳಲ್ಲಿ ಅವರು ಬಣ್ಣಿಸಿದ್ದರು: {{gap}}“ಮೂರು ನಾಲ್ಕು ಸಾವಿರ ರೂಪಾಯಿ ವರದಕ್ಷಿಣೆ ಕೊಡೋಹಾಗಿದ್ರೆ..? {{gap}}“ಮೂರು ನಾಲ್ಕು ಸಾವಿರ!<noinclude></noinclude> o04l9e51ai6dxwladltsd9niicqvulb 319577 319569 2026-05-13T14:20:24Z Shreesha Sharma 7840 /* Validated */ 319577 proofread-page text/x-wiki <noinclude><pagequality level="4" user="Shreesha Sharma" /></noinclude>{{center|೨}} {{gap}}ತುಂಬುನೋಟದಿಂದ ನೋಡಿದರು ನಾಗಮ್ಮ, ನಡೆದುಹೋಗುತ್ತಿದ್ದ ಮಗಳನ್ನು, ಅ ನೋಟದಲ್ಲಿ ಒಲವಿತ್ತು, ವ್ಯಥೆಯೂ ಇತ್ತು. {{gap}}ಯಜಮಾನರು ಮನಸ್ಸಿಗೆ ಹಚ್ಚಿಕೊಂಡಿರಲಿಲ್ಲವೆಂದಲ್ಲ. ಹೊರಗೆ ತೋರಿಸಿ ಕೊಳ್ಳದೇ ಇದ್ದರೂ ಬೆಳೆದು ವಿಷವಾಗಿ ಹಬ್ಬಿತ್ತು ಅಂತರಂಗದ ಕೊರಗು. ತಾವಿಬ್ಬರೇ ಇದ್ದಾಗಲೂ ಆ ಪ್ರಶ್ನೆಯ ಪ್ರಸ್ತಾಪವನ್ನು ಅವರು ಮಾಡುತ್ತಿದ್ದುದು ಕಡಮೆ. ಎಲ್ಲ ಸಂಕಟಗಳೂ ಒಳಗೇ ಇರುತ್ತಿದ್ದುವು-ಉಕ್ಕಿನ ತಿಜೋರಿಯಲ್ಲಿ ದ್ದಂತೆ, ಭದ್ರವಾಗಿ. {{gap}}ವಿಶಾಲಾಕ್ಷಿ ಹದಿನೈದು ಹದಿನಾರರ ಹರೆಯದವಳಿದ್ದಾಗಲೇ ವರಾನ್ವೇಷಣೆ ಆರಂಭವಾಗಿತ್ತು, ಸಂಬಂಧಿಕರ ವೃತ್ತಗಳಲ್ಲೇ ಮೊದಲು. ಅದು ನಿರರ್ಥಕ ವಾದಾಗ, ಹೊರಗಿನ ಕ್ಷೇತ್ರಗಳಲ್ಲಿ, ಹುಡುಗಿ ಸ್ಪುರದ್ರೂಪಿಣಿಯಾಗಿರಲಿಲ್ಲ. ಬಾಲ್ಯದಲ್ಲಿ ಬಡಿದ ಸಿಡುಬು, ಎಳೆಯ ಜೀವ ತನಗೆ ಬಲಿಯಾಗದೇ ಇದ್ದಾಗ, ಮುಖವನ್ನು ಮತ್ತಷ್ಟು ಅಂದಗೆಡಿಸಿ ತೀಟೆ ತೀರಿಸಿಕೊಂಡಿತ್ತು, ದೃಷ್ಟಿ ದುರ್ಬಲ ವಾದುದೂ ಅದರ ಫಲಶ್ರುತಿಯಾಗಿಯೇ, ಹೆಣ್ಣು ಹೆತ್ತವರ ಕಷ್ಟವನ್ನು ಆತ್ಮೀ ಯರೇ ತಿಳಿಯಲೊಲ್ಲರೆಂದಮೇಲೆ, ಅಪರಿಚಿತರಿಂದ ಸಹಾನುಭೂತಿ ನಿರೀಕ್ಷಿಸುವು ದಾದರೂ ಹೇಗೆ ಸಾಧ್ಯ? {{gap}}ಆ ತರುಣದಲ್ಲಿ ನಾಗಮ್ಮ ಪದೇ ಪದೇ ಕೇಳಿದ್ದರು: {{gap}}“ಏನಾದರೂ ಮಾಡೋಕೆ ಆಗೋಲ್ವೇಂದ್ರೆ.... {{gap}}” ನಿಜಸ್ಥಿತಿಯನ್ನು ನಿಷ್ಟುರ ಮಾತುಗಳಲ್ಲಿ ಅವರು ಬಣ್ಣಿಸಿದ್ದರು: {{gap}}“ಮೂರು ನಾಲ್ಕು ಸಾವಿರ ರೂಪಾಯಿ ವರದಕ್ಷಿಣೆ ಕೊಡೋಹಾಗಿದ್ರೆ..? {{gap}}“ಮೂರು ನಾಲ್ಕು ಸಾವಿರ!<noinclude></noinclude> iojfnfz7lxe95ykw5t3u4zwqgdhaq6w ಪುಟ:VISHAALAAKSHI - Niranjana.pdf/೨೨ 104 37858 319570 100017 2026-05-13T14:17:19Z Shreelatha.Halemane 7642 /* Proofread */ 319570 proofread-page text/x-wiki <noinclude><pagequality level="3" user="Shreelatha.Halemane" /></noinclude>{{rh|center=ವಿಶಾಲಾಕ್ಷಿ |left=೨೦|right=}} {{gap}}'ಹೂಂ, ಆಗಲೂ ಒಳ್ಳೆ ಅಳಿಯ ಸಿಕ್ತಾನೆ ಅಂದ್ರೋಬೇಡ.' {{gap}}“ಮತ್ತೆ ? . {{gap}}(ಅಷ್ಟು ಕೊಟ್ಟರೆ ಯಾವನಾದರೂ ಕಮಂಗಿಯ ಕೊರಳಿಗೆ ವಿಶಾಲೀನ. ಕಟ್ಟಬಹುದು..... {{gap}}ಪರಿಸ್ಥಿತಿಯ ಪರಿಣಾಮವಾಗಿಯೇ ವಿಶಾಲಾಕ್ಷಿ ಓದು ಮುಂದುವರಿಸಿದ್ದು, {{gap}}ಇಂಟೆರಾಗಲಿ ಎಂದುಕೊಂಡರು ಆಕೆಯ ತಂದೆ.ಆದರೆ, ಬರಿಯ ವಿದ್ಯೆ ನೋಡಿ ಮೆಚ್ಚಿಕೊಳ್ಳಲು ಈಗಿನ ಯುವಕರೇನು ಮೂರ್ಖರೆ? ಶ್ರೀಮಂತ ಮಾವಂದಿರೇ ಬೇಕು ಎಲ್ಲ. ಅವಿವಾಹಿತರಿಗೂ ಇನ್ನಷ್ಟು ದೊಡ್ಡವಳಾಗಲಿ, ಮೈಕೈ ತುಂಬಿಕೊಂಡು ಒಂದಿಷ್ಟು 'ನೋಡುವ ಹಾಗಾದರೂ ಆಗಬಹುದು ಎಂದು ಅವಳ ತಂದೆ ಆಸೆ ಕಟ್ಟಿಕೊಂಡರು. ಆ ವಿಷಯವಲ್ಲ ಅವರಿಗೆ ನಿರಾಸೆ ಯಾಯಿತು, {{gap}}ಈ ಕೊರತೆಯನ್ನೆಲ್ಲ ತುಂಬಿಕೊಡಲು ವಿಶಾಲಾಕ್ಷಿಯಲ್ಲಿದ್ದುದು-ಒಳ್ಳೆಯ ಗುಣ, ಅಧ್ಯಯನದಲ್ಲಿ ಆಸಕ್ತಿ ಇತ್ತು ಅವಳಿಗೆ ಪ್ರಥಮ ಶ್ರೇಣಿ ಯಾವಾಗಲೂ ಮಾಸಲಾಗಿರುತ್ತಿತ್ತು ಆ ವಿನಯ ಸಂಪನ್ನೆಗೆ. {{gap}}ಯೋಚನೆಯಿಂದ ಬಹಳ ಹಣ್ಣಾದ ಒಂದು ಘಳಿಗೆಯಲ್ಲಿ ನಾಗಮ್ಮನವರ ಯಜಮಾನರು ಅಂದಿದ್ದರು: .. {{gap}}“ನಮ್ಮ ವಿಶಾಲಿ ಸಾಕ್ಷಾತ್ ಸರಸ್ವತಿಯೇ ಸರಿ, ಅದೇ ನಮ್ಮ ಪಾಲಿನ ಸೌಭಾಗ್ಯ.' {{gap}}[ಆದರೆ ಆ 'ಸರಸೋತಮ್ಮ'ನಿಗೆ ಗಂಡನಿದ್ದ: ಈ ವಿಶಾಲಿಗೆ ಮಾತ್ರ-] {{gap}}ಇಂಜಿನಿಯರಾಗಲು ಹೊರಟಿದ್ದ ರಂಗರಾಜನಿಗಿಂತಲೂ ಸ್ವಲ್ಪ ಮೊದಲೇ, ಅವನ ತಂಗಿ ಪದವೀಧರೆಯಾದಳು, ಸಂಕಟದ ಮಧ್ಯೆಯೂ ಸಂಭ್ರಮ, ಪದವೀ ಪ್ರದಾನ ಸಮಾರಂಭಕ್ಕೆ ಹೋಗಲು ವಿಶಾಲಿಯ ತಂದೆಗೆ ಬಿಡುವು ದೊರೆಯಲಿಲ್ಲ. ಆದರೆ ಸಂಜೆ ಮನೆಗೆ ಮರಳಿದ ಮೇಲೆ, ಮಗಳು ಸುರುಳಿ ಸುತ್ತಿ ತಂದಿದ್ದ ಡಿಗ್ರಿ ಹಾಳೆಯನ್ನು, ಪ್ರೀತಿಯಿಂದ ಮುಟ್ಟಿ ನೋಡಿದರು, ಬಿಡಿಸಿ ಓದಿದರು. . ಪುನಃ ಸುರುಳಿಸುತ್ತಿ ಮಗಳ ಕೈಗಿತ್ತರು. {{gap}}(ಜೋಪಾನವಾಗಿಟ್ಟುಕೋ ವಿಶಾಲಿ.'<noinclude></noinclude> ssidfgebk2re62l5agmed1s2c551hdj 319578 319570 2026-05-13T14:20:36Z Shreesha Sharma 7840 /* Validated */ 319578 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=ವಿಶಾಲಾಕ್ಷಿ |left=೨೦|right=}} {{gap}}'ಹೂಂ, ಆಗಲೂ ಒಳ್ಳೆ ಅಳಿಯ ಸಿಕ್ತಾನೆ ಅಂದ್ರೋಬೇಡ.' {{gap}}“ಮತ್ತೆ ? . {{gap}}(ಅಷ್ಟು ಕೊಟ್ಟರೆ ಯಾವನಾದರೂ ಕಮಂಗಿಯ ಕೊರಳಿಗೆ ವಿಶಾಲೀನ. ಕಟ್ಟಬಹುದು..... {{gap}}ಪರಿಸ್ಥಿತಿಯ ಪರಿಣಾಮವಾಗಿಯೇ ವಿಶಾಲಾಕ್ಷಿ ಓದು ಮುಂದುವರಿಸಿದ್ದು, {{gap}}ಇಂಟೆರಾಗಲಿ ಎಂದುಕೊಂಡರು ಆಕೆಯ ತಂದೆ.ಆದರೆ, ಬರಿಯ ವಿದ್ಯೆ ನೋಡಿ ಮೆಚ್ಚಿಕೊಳ್ಳಲು ಈಗಿನ ಯುವಕರೇನು ಮೂರ್ಖರೆ? ಶ್ರೀಮಂತ ಮಾವಂದಿರೇ ಬೇಕು ಎಲ್ಲ. ಅವಿವಾಹಿತರಿಗೂ ಇನ್ನಷ್ಟು ದೊಡ್ಡವಳಾಗಲಿ, ಮೈಕೈ ತುಂಬಿಕೊಂಡು ಒಂದಿಷ್ಟು 'ನೋಡುವ ಹಾಗಾದರೂ ಆಗಬಹುದು ಎಂದು ಅವಳ ತಂದೆ ಆಸೆ ಕಟ್ಟಿಕೊಂಡರು. ಆ ವಿಷಯವಲ್ಲ ಅವರಿಗೆ ನಿರಾಸೆ ಯಾಯಿತು, {{gap}}ಈ ಕೊರತೆಯನ್ನೆಲ್ಲ ತುಂಬಿಕೊಡಲು ವಿಶಾಲಾಕ್ಷಿಯಲ್ಲಿದ್ದುದು-ಒಳ್ಳೆಯ ಗುಣ, ಅಧ್ಯಯನದಲ್ಲಿ ಆಸಕ್ತಿ ಇತ್ತು ಅವಳಿಗೆ ಪ್ರಥಮ ಶ್ರೇಣಿ ಯಾವಾಗಲೂ ಮಾಸಲಾಗಿರುತ್ತಿತ್ತು ಆ ವಿನಯ ಸಂಪನ್ನೆಗೆ. {{gap}}ಯೋಚನೆಯಿಂದ ಬಹಳ ಹಣ್ಣಾದ ಒಂದು ಘಳಿಗೆಯಲ್ಲಿ ನಾಗಮ್ಮನವರ ಯಜಮಾನರು ಅಂದಿದ್ದರು: .. {{gap}}“ನಮ್ಮ ವಿಶಾಲಿ ಸಾಕ್ಷಾತ್ ಸರಸ್ವತಿಯೇ ಸರಿ, ಅದೇ ನಮ್ಮ ಪಾಲಿನ ಸೌಭಾಗ್ಯ.' {{gap}}[ಆದರೆ ಆ 'ಸರಸೋತಮ್ಮ'ನಿಗೆ ಗಂಡನಿದ್ದ: ಈ ವಿಶಾಲಿಗೆ ಮಾತ್ರ-] {{gap}}ಇಂಜಿನಿಯರಾಗಲು ಹೊರಟಿದ್ದ ರಂಗರಾಜನಿಗಿಂತಲೂ ಸ್ವಲ್ಪ ಮೊದಲೇ, ಅವನ ತಂಗಿ ಪದವೀಧರೆಯಾದಳು, ಸಂಕಟದ ಮಧ್ಯೆಯೂ ಸಂಭ್ರಮ, ಪದವೀ ಪ್ರದಾನ ಸಮಾರಂಭಕ್ಕೆ ಹೋಗಲು ವಿಶಾಲಿಯ ತಂದೆಗೆ ಬಿಡುವು ದೊರೆಯಲಿಲ್ಲ. ಆದರೆ ಸಂಜೆ ಮನೆಗೆ ಮರಳಿದ ಮೇಲೆ, ಮಗಳು ಸುರುಳಿ ಸುತ್ತಿ ತಂದಿದ್ದ ಡಿಗ್ರಿ ಹಾಳೆಯನ್ನು, ಪ್ರೀತಿಯಿಂದ ಮುಟ್ಟಿ ನೋಡಿದರು, ಬಿಡಿಸಿ ಓದಿದರು. . ಪುನಃ ಸುರುಳಿಸುತ್ತಿ ಮಗಳ ಕೈಗಿತ್ತರು. {{gap}}(ಜೋಪಾನವಾಗಿಟ್ಟುಕೋ ವಿಶಾಲಿ.'<noinclude></noinclude> s6iw6jaobu04mdfzsu72jzdl3vosq4g ಪುಟ:VISHAALAAKSHI - Niranjana.pdf/೨೩ 104 37859 319580 100018 2026-05-13T14:24:05Z Shreesha Sharma 7840 /* Proofread */ 319580 proofread-page text/x-wiki <noinclude><pagequality level="3" user="Shreesha Sharma" /></noinclude> {{center|ಪ್ರೇಮಕ್ಕೆ ಕಣ್ಣಿಲ್ಲ - }}{{Right|೨೧}} {{gap}}ಮೃದುವಾದ ಧ್ವನಿಯಲ್ಲಿ ಆಡಿದ್ದ ಮಾತು, ತುಸು ಕಂಪಿಸಿತ್ತು. ನಾಗಮ್ಮ ನಿಗೆ ತಿಳಿದಿತ್ತು ಆ ಕಂಪನದ ಅರ್ಥ.... {{gap}}ವಿಶಾಲಾಕ್ಷಿಯ ತಂದೆ ಮತ್ತೊಮ್ಮೆ ಯತ್ನಿಸಿ ನೋಡಿದರು- ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾದ, ಬಿ.ಎ, ಆನರ್ಸ್ ಪದವೀಧರೆಯಾದ, ಬುದ್ಧಿಮತಿ “ ಯಾದ, ಸಕಲಗುಣಸಂಪನ್ನೆಯಾದ ತನ್ನ ಮಗಳಿಗೆ ಒಬ್ಬ ಗಂಡು ದೊರೆಯುವನೇ ಎಂದು. “ಮರಳಿಯತ್ನವ ಮಾಡು, ಮರಳಿಯತ್ನವ ಮಾಡು.' ಉಪದೇಶ ವೀಯುವುದು ಸುಲಭ, ಸ್ವತಃ ಆಚರಿಸುವುದು ಕಷ್ಟ.... {{gap}}ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಿಕೆಯಾಗುವ ಅವಕಾಶ ದೊರೆತಾಗ, ವಿಶಾಲಾಕ್ಷಿ ಆ ಪ್ರಸ್ತಾಪವನ್ನು ಮೊದಲು ಮಾಡಿದುದು ತಾಯಿಯೊಡನೆ. {{gap}}ನಾಗಮ್ಮ ಅಂದಿದ್ದರು: {{gap}}'ನಿಮ್ಮ ತಂದೇನ ಕೇಳಿನೋಡು.' {{gap}}ವಿದ್ಯಾರ್ಥಿನಿಯಾಗಿದ್ದವರೆಗೂ ಒಂದು ಬಗೆ ಹೇಗೂ ಕಾಲ ಕಳೆಯು ತಿತ್ತು, ಕೆಲಸವಿಲ್ಲದೆ ಮನೆಯಲ್ಲೆ ಕುಳಿತಿರುವುದೆಂದರೆ, ಮಾನಸಿಕ ಯಾತನೆಗೆ : ಆಹ್ವಾನ ನೀಡಿದಂತೆ, ಅಧ್ಯಾಪಿಕೆಯಾಗುವುದರಿಂದ, ಸರಾಗವಾಗಿ ಉಸಿರಾಡಲು ಮತ್ತೂ ಒಂದಿಷ್ಟು ಅವಕಾಶ, ಆ ವೃತ್ತಿ ಮಗಳಿಗೆ ಇಷ್ಟವೆಂಬುದನ್ನು ಅವಳ ಸ್ವರದಲ್ಲಿ ಗುರುತಿಸಿದ್ದ ತಂದೆ, ತಾವೂ ಸಂತೋಷ ವ್ಯಕ್ತಪಡಿಸುತ್ತ, ನಗೆಯ - ಮುಖವಾಡ ಧರಿಸುತ್ತ, ಹೇಳಿದ್ದರು : {{gap}}ಆಗಲಿ, ಅದಕ್ಕೇನು ? {{gap}}ಏಕಾಂತದಲ್ಲಿ ಸಹಧರ್ಮಿಣಿಯೊಡನೆ ಅವರು ನುಡಿದಿದ್ದರು: - {{gap}}'ಸ್ವಲ್ಪ ಸಮಯದವರೆಗೆ ಹೋಗ್ತಾ ಇರಲಿ, ಮನೆಯಲ್ಲಿ ಇರೋದಕ್ಕಿಂತ : ಅದು ವಾಸಿ. ಆಮೇಲೆ ಬಿಟ್ಟುಬಿಟ್ಟರಾಯ್ತು ...ಮುಂದೆ ನೋಡೋಣ.' {{gap}}ಅವರಿಗೆ ಪ್ರಿಯವಾಗಿದ್ದ ಪದಪ್ರಯೋಗ-ಮುಂದೆ ನೋಡೋಣ.' ಸಮಸ್ಯೆ ಸಿಕ್ಕುಗಟ್ಟಿ ಗಡುತರವಾದಾಗಲೆಲ್ಲ ಆ ಮಾತು. {{gap}}ಆ ಆಸೆಯಲ್ಲೇ ದೀರ್ಘಕಾಲ ಕಳೆಯಿತು.... {{gap}}ಆಮೇಲೆ ಒಮ್ಮೆಲೆ ಯಾವ ಆಸೆಗೂ ಆಸ್ಪದವಿಲ್ಲದ ಹಾಗೆ {{gap}}ಅಲ್ಲ, ಇಷ್ಟೊಂದು ಕ್ರೂರವಾಗಬಹುದೆ ವಿಧಿ ? ... {{gap}}ಏಕಮಾತ್ರ ಆಸರೆಯಾಗಿದ್ದ ಹೆಮ್ಮರ ಇನ್ನಿಲ್ಲ ತನ್ನ ಪಾಲಿಗೆ,<noinclude></noinclude> bmsu4g6uzto8ucans461xw2mj5ps4if ಪುಟ:ದಕ್ಷಕನ್ಯಾ .djvu/೧ 104 56191 319756 124794 2026-05-14T10:30:51Z Sharanya K H 7593 /* Proofread */ 319756 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ದಕ್ಷಕನ್ಯಾ .djvu/೨ 104 56192 319757 124795 2026-05-14T10:31:06Z Sharanya K H 7593 /* Proofread */ 319757 proofread-page text/x-wiki <noinclude><pagequality level="3" user="Sharanya K H" /></noinclude>UNIVERSAL LIBRARY OU_200202 LIBRARY UNIVERSAL<noinclude></noinclude> a4t44pwpnf0t0qz6r93c4gzhivmff4c ಪುಟ:ದಕ್ಷಕನ್ಯಾ .djvu/೩ 104 56193 319758 124796 2026-05-14T10:31:22Z Sharanya K H 7593 /* Proofread */ 319758 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ದಕ್ಷಕನ್ಯಾ .djvu/೪ 104 56194 319759 124797 2026-05-14T10:31:36Z Sharanya K H 7593 /* Proofread */ 319759 proofread-page text/x-wiki <noinclude><pagequality level="3" user="Sharanya K H" /></noinclude>OSMANIA UNIVERSITY LIBRARY Call No. K83|834 Rccession No. R 88 Author JoaJRA OS Tile BETEG This book should be ictu ncd on or besnic the date last markri selon<noinclude></noinclude> sjuo5fcweizmnqixwuvgx85pt02thhs ಪುಟ:ದಕ್ಷಕನ್ಯಾ .djvu/೫ 104 56195 319760 124798 2026-05-14T10:31:51Z Sharanya K H 7593 /* Proofread */ 319760 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ದಕ್ಷಕನ್ಯಾ .djvu/೬ 104 56196 319761 124799 2026-05-14T10:32:04Z Sharanya K H 7593 /* Proofread */ 319761 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ದಕ್ಷಕನ್ಯಾ .djvu/೧೨ 104 56202 319762 124805 2026-05-14T11:01:08Z Shreelatha.Halemane 7642 /* Proofread */ 319762 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|'''ಪರಿ ಣ ತಿ.'''}} {{Left|ದೇಶಬಾಂಧವರೇ !}} {{gap}}ತಮ್ಮೆಲ್ಲರ ಉದಾರಾಶ್ರಯ ಬಲದಿಂದ ಸತೀಹಿತೈಷಿಣಿಯು, ತನ್ನ ಜನ್ಮ ವ್ರತವಾದ ದೇಶಮಾತೃ ಸೇವೆಯಲ್ಲಿ, ಮೊದಲನೆಯ ವರ್ಷವನ್ನು ಯಥೋಚಿತರೀತಿಯಲ್ಲಿ ವಿನಿಯೋಗಿಸಿ, ದ್ವಿತೀಯವರ್ಷದ ಪರಿಸಮಾಪ್ತಿಯೊಳಗಾಗಿ, ನಿರ್ದಿಷ್ಟ ಕಾರ್ಯವನ್ನೂ ಸಮರ್ಪಕವಾಗಿ ನೆರೆವೇರಿಸುವಂತೆ ಮಾಡುವ ಉತ್ಸುಕತೆಯಿಂದ ಕಾರ್ಯ ತತ್ಪರಳಾಗಿಯೇ ಇರುವಳು. {{gap}}ಆದರೆ, ಕೆಲವು ಅನಿವಾರ್ಯ [ಹೇಗೆಂಬುದು, ' ಕ್ಷಮಾಪಣ ' ಲೇಖ ನದಲ್ಲಿ ವಿವರಿಸಲ್ಪಟ್ಟಿರುವುದು.] ಗಳಿಂದ ಹಿತೈಷಿಣಿಯು, ಈವರೆಗೂ ಹೊರ ಹೊರಡಲಿಕ್ಕಾಗದಿದ್ದು, ಈಗಲೇ ದೊರೆತಿರುವ ಸರ್ವಮಂಗಳೆಯ ಅನುಗ್ರ ಹದಿಂದ, ನೂತನ ಶಕ್ತಿ ಸಂಪನ್ನಳಾಗಿ, ತನ್ನ ಸುತ್ತಮುತ್ತಲೂ ಆಕ್ರಮಿಸಿ ಕೊಂಡಿದ್ದ ವಿಘ್ನ ಪರಂಪರೆಗಳನ್ನು ಬಡಿದೋಡಿಸಿ, ಮುಂದೆ ಬರುವಂತಾದಳು. ಇನ್ನು ಮುಂದೆಯಾದರೂ ಇದೇ ಮಾತೆಯ ವರಪ್ರಸಾದವು ತನ್ನಲ್ಲಿ ಪೂರ್ಣವಾಗಿದ್ದು, ತನ್ನ ಗಮನಾಗಮನ ವಿಚಾರಗಳಿಗೆ, ಯಾವ ಬಗೆಯ ಕಂಟಕಗಳಾಗಲೀ ಅಡ್ಡಯಿಸಿ ಬರುವುದಿಲ್ಲವೆಂದು ಧೈರ್ಯದಿಂದ ಸಾರಿಸಾರಿ ಹೇಳುತ್ತಿರುವಳು. {{gap}}ಅಲ್ಲದೆ, ಈವರೆಗೆ ದೊರೆತಿರುವ ಬಹುಮಂದಿ ಮಹಿಳೆಯರ ಸಲಹೆಯಂತೆಯೇ, ಇನ್ನು ಮುಂದೆ ಸತೀಹಿತೈಷಿಣಿಯ ಅಂತರ್ಬಾಹ್ಯಂಗಗಳೂ, ಸುಲಲಿತವೂ, ಸರಸ-ಸುಮನೋಹರ ಪದಬಂಧುರವೂ ಆಗಿ, ನಮ್ಮ ಸೋದರಿಯರ ಕೋಮಲವಾದ ಹೃತ್ಕುಸುಮಗಳು ವಿಕಸನವಾಗುವಂತೆ ಮಾಡುವ ಪ್ರಯತ್ನವೂ ನಡೆದು-ನಡೆಯುತ್ತಿರುವುದು, ಪ್ರಯತ್ನವು, ಸಫಲವಾದಂತೆಲ್ಲಾ, ಹಿತೈಷಿಣಿಯೊಡನೆ ತಿಂಗಳು-ತಿಂಗಳಿಗೂ ಕರ್ಣಾಟಕ ನಂದಿನಿಯೂ ಹೊರಹೊರಟು, ಸೋದರಿಯರ ಸೇವೆಯನ್ನು ಮಾಡಬೇಕೆಂಬ<noinclude></noinclude> ix8nwjjegm4j8xc03koxap9nn4katqu 319767 319762 2026-05-14T11:16:25Z Shreesha Sharma 7840 /* Validated */ 319767 proofread-page text/x-wiki <noinclude><pagequality level="4" user="Shreesha Sharma" /></noinclude>{{center|'''ಪರಿ ಣ ತಿ.'''}} {{Left|ದೇಶಬಾಂಧವರೇ !}} {{gap}}ತಮ್ಮೆಲ್ಲರ ಉದಾರಾಶ್ರಯ ಬಲದಿಂದ ಸತೀಹಿತೈಷಿಣಿಯು, ತನ್ನ ಜನ್ಮ ವ್ರತವಾದ ದೇಶಮಾತೃ ಸೇವೆಯಲ್ಲಿ, ಮೊದಲನೆಯ ವರ್ಷವನ್ನು ಯಥೋಚಿತರೀತಿಯಲ್ಲಿ ವಿನಿಯೋಗಿಸಿ, ದ್ವಿತೀಯವರ್ಷದ ಪರಿಸಮಾಪ್ತಿಯೊಳಗಾಗಿ, ನಿರ್ದಿಷ್ಟ ಕಾರ್ಯವನ್ನೂ ಸಮರ್ಪಕವಾಗಿ ನೆರೆವೇರಿಸುವಂತೆ ಮಾಡುವ ಉತ್ಸುಕತೆಯಿಂದ ಕಾರ್ಯ ತತ್ಪರಳಾಗಿಯೇ ಇರುವಳು. {{gap}}ಆದರೆ, ಕೆಲವು ಅನಿವಾರ್ಯ [ಹೇಗೆಂಬುದು, ' ಕ್ಷಮಾಪಣ ' ಲೇಖ ನದಲ್ಲಿ ವಿವರಿಸಲ್ಪಟ್ಟಿರುವುದು.] ಗಳಿಂದ ಹಿತೈಷಿಣಿಯು, ಈವರೆಗೂ ಹೊರ ಹೊರಡಲಿಕ್ಕಾಗದಿದ್ದು, ಈಗಲೇ ದೊರೆತಿರುವ ಸರ್ವಮಂಗಳೆಯ ಅನುಗ್ರ ಹದಿಂದ, ನೂತನ ಶಕ್ತಿ ಸಂಪನ್ನಳಾಗಿ, ತನ್ನ ಸುತ್ತಮುತ್ತಲೂ ಆಕ್ರಮಿಸಿ ಕೊಂಡಿದ್ದ ವಿಘ್ನ ಪರಂಪರೆಗಳನ್ನು ಬಡಿದೋಡಿಸಿ, ಮುಂದೆ ಬರುವಂತಾದಳು. ಇನ್ನು ಮುಂದೆಯಾದರೂ ಇದೇ ಮಾತೆಯ ವರಪ್ರಸಾದವು ತನ್ನಲ್ಲಿ ಪೂರ್ಣವಾಗಿದ್ದು, ತನ್ನ ಗಮನಾಗಮನ ವಿಚಾರಗಳಿಗೆ, ಯಾವ ಬಗೆಯ ಕಂಟಕಗಳಾಗಲೀ ಅಡ್ಡಯಿಸಿ ಬರುವುದಿಲ್ಲವೆಂದು ಧೈರ್ಯದಿಂದ ಸಾರಿಸಾರಿ ಹೇಳುತ್ತಿರುವಳು. {{gap}}ಅಲ್ಲದೆ, ಈವರೆಗೆ ದೊರೆತಿರುವ ಬಹುಮಂದಿ ಮಹಿಳೆಯರ ಸಲಹೆಯಂತೆಯೇ, ಇನ್ನು ಮುಂದೆ ಸತೀಹಿತೈಷಿಣಿಯ ಅಂತರ್ಬಾಹ್ಯಂಗಗಳೂ, ಸುಲಲಿತವೂ, ಸರಸ-ಸುಮನೋಹರ ಪದಬಂಧುರವೂ ಆಗಿ, ನಮ್ಮ ಸೋದರಿಯರ ಕೋಮಲವಾದ ಹೃತ್ಕುಸುಮಗಳು ವಿಕಸನವಾಗುವಂತೆ ಮಾಡುವ ಪ್ರಯತ್ನವೂ ನಡೆದು-ನಡೆಯುತ್ತಿರುವುದು, ಪ್ರಯತ್ನವು, ಸಫಲವಾದಂತೆಲ್ಲಾ, ಹಿತೈಷಿಣಿಯೊಡನೆ ತಿಂಗಳು-ತಿಂಗಳಿಗೂ ಕರ್ಣಾಟಕ ನಂದಿನಿಯೂ ಹೊರಹೊರಟು, ಸೋದರಿಯರ ಸೇವೆಯನ್ನು ಮಾಡಬೇಕೆಂಬ<noinclude></noinclude> 2atme407rdok579d6hw99vq7ykhw1yf ಪುಟ:ದಕ್ಷಕನ್ಯಾ .djvu/೧೩ 104 56203 319765 124806 2026-05-14T11:12:20Z Shreelatha.Halemane 7642 /* Proofread */ 319765 proofread-page text/x-wiki <noinclude><pagequality level="3" user="Shreelatha.Halemane" /></noinclude>ಕುತೂಹಲವು ಬಲವಾಗುತ್ತಿರುವುದು. ಆದರೆ, ಕರ್ಣಾಟಕ ನಂದಿನಿಯ ವಿಚಾರವಾಗಿ, ತಮ್ಮೆಲ್ಲರ ಅಭಿಪ್ರಾಯವೆಂತಿರುವುದೆಂಬುದು ಸ್ಪಷ್ಟಪಡುವವರೆಗೂ, ಅದು ಸಾಧ್ಯವಾಗುವಂತಿಲ್ಲ, ಇದಕ್ಕಾಗಿ ತಾವೆಲ್ಲರೂ ಉದಾರಮನಸ್ಸಿನಿಂದ ತಮ್ಮ ನಿಜವಾದ ಅಭಿಪ್ರಾಯವನ್ನು ಲಿಖಿತಮೂಲಕವಾಗಿ ಕಳುಹಲು, ಸಂಪ್ರಾರ್ಧಿತರಾಗಿಯೇ ಇರುವಿರಿ, ಇನ್ನೇನು ಹೇಳುವ? ದೇಶಭಾಷಾಭಿಮಾನದಿಂದಲೂ, ಮಾತೃ ಪ್ರೇರಣೆಯಿಂದಲೂ ತಾವು, ಇಂದಿನವರೆಗೂ, ಹಿತೈಷಿಣಿಯನ್ನು ಪ್ರೋತ್ಸಾಹಿಸಿದಂತೆ ಮುಂದೆಯೂ ಎಂದೆಂದಿಗೂ ಇವಳನ್ನು ಅನಾದರಿಸದೆ, ಶುದ್ಧಾಂತಃಕರಣದಿಂದ-ಪ್ರೋತ್ಸಾಹಿಸುತ್ತಿರುವಿರೆಂದೂ, ಹಿತೈಷಣಿಯ ವ್ರತಸಿದ್ಧಿಗೆ ನೀವೇ ಸಹಕಾರಿಗಳಾಗಿದ್ದು, ಕಾಲೋಚಿತವಾದ ಹಿತಸೂಚನೆಗಳಿಂದ ಎಚ್ಚರಿಸುವ ಸುಹೃತ್ತ್ ಗಳಾಗಿರುವರೆಂದೂ ನಂಬಿರುವೆವು. {{gap}}ಈ ನಮ್ಮ ನಂಬಿಕೆಗೆ ಭಂಗತಾರದೆ, ಬಳಿಗೆ ಒಂದ ದಕ್ಷ ಕನ್ಯೆಯನ್ನು ವಾತ್ಸಲ್ಯದಿಂದೆತ್ತಿಯಾಡಿಸಿ, ಮುಂದೆ, ತಿಂಗಳೆರಡರಲ್ಲಿ ನಿಮ್ಮೆಡೆಗೆ ಒರಲಿಕ್ಕಿರುವ ಮಾತೃನಂದಿನಿಯ ಮತ್ತು ರಮಾನಂದ-ವಿಕ್ರಮರ ಅಭ್ಯುದಯಕ್ಕಾಗಿ ಈಗಳಿಂದಲೇ ಸ್ವಸ್ತಿವಾಚನದಿಂದ ನರವೇರಿಸುತ್ತಿರಬೇಕೆಂದೂ ಮನವಿಮಾಡಿರುವೆವು, ಮಾಡಿರುವ ಮನವಿಯನ್ನು ಮಾನ್ಯ ಮಾಡುವುದೂ, ಬಿಡುವದೂ ನಿಮ್ಮ ಮೇಲೆ ಬಿದ್ದ ಹೊರೆಯಾಗಿದೆ. ಇಷ್ಟಲ್ಲದೆ ಸದ್ಯದಲ್ಲಿ ಮತ್ತೇನನ್ನೂ ಹೇಳಲಾರೆವು | {{rh|center=|left=ನಂಜನಗೂಡು,|right=ಇತಿ ಕಾರ್ಯದರ್ಶಿ,}} {{rh|center=|left=, 14-10-1915.|right=ಸತೀಹಿತೆ ೩ಣೀ ಮಾತೃ ಮಂದಿರ.}}<noinclude></noinclude> gqfu1ojlc10negfq41m4uuxij8ykr9y 319768 319765 2026-05-14T11:16:37Z Shreesha Sharma 7840 /* Validated */ 319768 proofread-page text/x-wiki <noinclude><pagequality level="4" user="Shreesha Sharma" /></noinclude>ಕುತೂಹಲವು ಬಲವಾಗುತ್ತಿರುವುದು. ಆದರೆ, ಕರ್ಣಾಟಕ ನಂದಿನಿಯ ವಿಚಾರವಾಗಿ, ತಮ್ಮೆಲ್ಲರ ಅಭಿಪ್ರಾಯವೆಂತಿರುವುದೆಂಬುದು ಸ್ಪಷ್ಟಪಡುವವರೆಗೂ, ಅದು ಸಾಧ್ಯವಾಗುವಂತಿಲ್ಲ, ಇದಕ್ಕಾಗಿ ತಾವೆಲ್ಲರೂ ಉದಾರಮನಸ್ಸಿನಿಂದ ತಮ್ಮ ನಿಜವಾದ ಅಭಿಪ್ರಾಯವನ್ನು ಲಿಖಿತಮೂಲಕವಾಗಿ ಕಳುಹಲು, ಸಂಪ್ರಾರ್ಧಿತರಾಗಿಯೇ ಇರುವಿರಿ, ಇನ್ನೇನು ಹೇಳುವ? ದೇಶಭಾಷಾಭಿಮಾನದಿಂದಲೂ, ಮಾತೃ ಪ್ರೇರಣೆಯಿಂದಲೂ ತಾವು, ಇಂದಿನವರೆಗೂ, ಹಿತೈಷಿಣಿಯನ್ನು ಪ್ರೋತ್ಸಾಹಿಸಿದಂತೆ ಮುಂದೆಯೂ ಎಂದೆಂದಿಗೂ ಇವಳನ್ನು ಅನಾದರಿಸದೆ, ಶುದ್ಧಾಂತಃಕರಣದಿಂದ-ಪ್ರೋತ್ಸಾಹಿಸುತ್ತಿರುವಿರೆಂದೂ, ಹಿತೈಷಣಿಯ ವ್ರತಸಿದ್ಧಿಗೆ ನೀವೇ ಸಹಕಾರಿಗಳಾಗಿದ್ದು, ಕಾಲೋಚಿತವಾದ ಹಿತಸೂಚನೆಗಳಿಂದ ಎಚ್ಚರಿಸುವ ಸುಹೃತ್ತ್ ಗಳಾಗಿರುವರೆಂದೂ ನಂಬಿರುವೆವು. {{gap}}ಈ ನಮ್ಮ ನಂಬಿಕೆಗೆ ಭಂಗತಾರದೆ, ಬಳಿಗೆ ಒಂದ ದಕ್ಷ ಕನ್ಯೆಯನ್ನು ವಾತ್ಸಲ್ಯದಿಂದೆತ್ತಿಯಾಡಿಸಿ, ಮುಂದೆ, ತಿಂಗಳೆರಡರಲ್ಲಿ ನಿಮ್ಮೆಡೆಗೆ ಒರಲಿಕ್ಕಿರುವ ಮಾತೃನಂದಿನಿಯ ಮತ್ತು ರಮಾನಂದ-ವಿಕ್ರಮರ ಅಭ್ಯುದಯಕ್ಕಾಗಿ ಈಗಳಿಂದಲೇ ಸ್ವಸ್ತಿವಾಚನದಿಂದ ನರವೇರಿಸುತ್ತಿರಬೇಕೆಂದೂ ಮನವಿಮಾಡಿರುವೆವು, ಮಾಡಿರುವ ಮನವಿಯನ್ನು ಮಾನ್ಯ ಮಾಡುವುದೂ, ಬಿಡುವದೂ ನಿಮ್ಮ ಮೇಲೆ ಬಿದ್ದ ಹೊರೆಯಾಗಿದೆ. ಇಷ್ಟಲ್ಲದೆ ಸದ್ಯದಲ್ಲಿ ಮತ್ತೇನನ್ನೂ ಹೇಳಲಾರೆವು | {{rh|center=|left=ನಂಜನಗೂಡು,|right=ಇತಿ ಕಾರ್ಯದರ್ಶಿ,}} {{rh|center=|left=, 14-10-1915.|right=ಸತೀಹಿತೆ ೩ಣೀ ಮಾತೃ ಮಂದಿರ.}}<noinclude></noinclude> 57zrlrqdbvaafs80xy4lqjjpizwykkb ಪುಟ:ದಕ್ಷಕನ್ಯಾ .djvu/೧೪ 104 56204 319766 124807 2026-05-14T11:15:25Z Shreelatha.Halemane 7642 /* Proofread */ 319766 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|||ಶ್ರೀ || }} {{center|ಕ್ಷಮಾಪಣೆ.}} {{gap}}ಯಾರನ್ನು ಕುರಿತು ಕ್ಷಮೆಯನ್ನು ಕೋರಬೇಕು ? ಏನೆಂದು ಹೇಳಿ ಕೇಳಬೇಕು ? ಇದಾವುದೂ ಬಗೆಹತ್ತುವಂತಿಲ್ಲ. ಕ್ಷಮಾಪಣೆಯನ್ನು ಕೋರುವದರಿಂದ ಎಷ್ಟರ ಫಲವಾಗಬಹುದೋ, ಅಷ್ಟೇ ಫಲವೇ ಕೇಳದಿದ್ದರೂ ದೊರೆಯಬಹುದು ಎಂದರೆ-ಕ್ಷಮಾಶೀಲರಾದ ಮಾನನಿಧಿಗಳು, ಅದೊಂದು ತಮ್ಮ ಜನ್ಮ ವ್ರತವೆಂದು ತಿಳಿದೇ ಇರುವುದರಿಂದ, ತಾವು ಕೋರಲ್ಪಡದೆಯೇ ಅಲ್ಪಜ್ಞರ ಎಷ್ಟೇ ಅಪರಾಧಗಳನ್ನಾದರೂ ಕ್ಷಮಿಸಿ, ಅವರನ್ನು ಉನ್ನತಿಗೆ ತರಬಲ್ಲವರಾಗಿರುವರು ಅಂತವರಲ್ಲಿ ಕ್ಷಮೆಯನ್ನು ಕುರಿತು ಕೇಳಬೇಕಾದ ಅಗತ್ಯವೇ ಉಳಿದಿರುವುದಿಲ್ಲ. ಕ್ಷಮಿಸಿಲ್ಲದವರಲ್ಲಿ ಹಲ್ಗಿರಿದು ಬೇಡಿದರೂ ಫಲವಿಲ್ಲ, ಇದನ್ನು ತಿಳಿದೂ ಇಂದಿನ ಕ್ಷಮಾಪಣೆಯ ದೀರ್ಘಲೇಖನಕ್ಕೇಕೆ ಪ್ರಯತ್ನಗೊಳ್ಳಬೇಕೆಂದರೆ-ಲೋಕಮರ್ಯಾದೆಯನ್ನು ಯಾರೂ ಮಾರಬಾರದಷ್ಟೆ , ಕರ್ತವ್ಯದಲ್ಲಿ ಕಟ್ಟುಬಿದ್ದಿರುವ ನಾವು ಕ್ಷಮಾಪಣೆಯನ್ನು ಕೊರಲೇಬೇಕು. {{gap}}ಅಪರಾಧವೆಂತಹುದೆಂದರೆ, ಹಿತೈಷಿಣಿಗೆ ಈ ವರೆಗೂ ಮುತ್ತಿದ್ದ ಅಜ್ಞಾತವಾಸವೆಂಬುದೇ ಉತ್ತರವು, ಏತರಿಂದ ಎಂಬುದಕ್ಕೆ ಸಮಾಧಾನವಾಗಿ, ಯಾವ ಕಾರಣಗಳನ್ನು ಹುಡುಕುವ ? ಸಾಮಾನ್ಯವಾಗಿ ನೋಡಿದರೆ, ನಾಲ್ಕು ಮುಖ್ಯ ಕಾರಣಗಳು ಮುಂದೆ ನಿಲ್ಲುವವು. {{gap}}1. ಪತ್ರಪ್ರಚಾರದ ಅಪದೆಸೆಗೆ ಮುದ್ರಾಲಯದವರ ಅವಿಧೇಯತೆ, ಅಲಸತೆ, ಆಶಾಪರತೆಗಳೇ ಪ್ರಬಲ ಕಾರಣವೆಂಬುದು ಮೊದಲನೆಯ ಸಮಾಧಾನವು {{gap}}2, ವಾಚನಾಭಿರುಚಿಯಿಲ್ಲದ ಈ ಕರ್ಣಾಟಕದಲ್ಲಿ, ಭಾಷಾದ್ರೋ ಹಿಗಳಾದ ದೇಶೀಯರ ನಿಷ್ಟುರತೆಯೇ ಪತ್ರಿಕೆಗಳ ಅವನತಿಗೆ ಕಾರಣವೆಂಬುದು ಎರಡನೆಯ ಸಮಾಧಾನವು.<noinclude></noinclude> s2onulqawagj0jwjlhkqmbmiuqahjcz 319769 319766 2026-05-14T11:16:48Z Shreesha Sharma 7840 /* Validated */ 319769 proofread-page text/x-wiki <noinclude><pagequality level="4" user="Shreesha Sharma" /></noinclude>{{center|||ಶ್ರೀ || }} {{center|ಕ್ಷಮಾಪಣೆ.}} {{gap}}ಯಾರನ್ನು ಕುರಿತು ಕ್ಷಮೆಯನ್ನು ಕೋರಬೇಕು ? ಏನೆಂದು ಹೇಳಿ ಕೇಳಬೇಕು ? ಇದಾವುದೂ ಬಗೆಹತ್ತುವಂತಿಲ್ಲ. ಕ್ಷಮಾಪಣೆಯನ್ನು ಕೋರುವದರಿಂದ ಎಷ್ಟರ ಫಲವಾಗಬಹುದೋ, ಅಷ್ಟೇ ಫಲವೇ ಕೇಳದಿದ್ದರೂ ದೊರೆಯಬಹುದು ಎಂದರೆ-ಕ್ಷಮಾಶೀಲರಾದ ಮಾನನಿಧಿಗಳು, ಅದೊಂದು ತಮ್ಮ ಜನ್ಮ ವ್ರತವೆಂದು ತಿಳಿದೇ ಇರುವುದರಿಂದ, ತಾವು ಕೋರಲ್ಪಡದೆಯೇ ಅಲ್ಪಜ್ಞರ ಎಷ್ಟೇ ಅಪರಾಧಗಳನ್ನಾದರೂ ಕ್ಷಮಿಸಿ, ಅವರನ್ನು ಉನ್ನತಿಗೆ ತರಬಲ್ಲವರಾಗಿರುವರು ಅಂತವರಲ್ಲಿ ಕ್ಷಮೆಯನ್ನು ಕುರಿತು ಕೇಳಬೇಕಾದ ಅಗತ್ಯವೇ ಉಳಿದಿರುವುದಿಲ್ಲ. ಕ್ಷಮಿಸಿಲ್ಲದವರಲ್ಲಿ ಹಲ್ಗಿರಿದು ಬೇಡಿದರೂ ಫಲವಿಲ್ಲ, ಇದನ್ನು ತಿಳಿದೂ ಇಂದಿನ ಕ್ಷಮಾಪಣೆಯ ದೀರ್ಘಲೇಖನಕ್ಕೇಕೆ ಪ್ರಯತ್ನಗೊಳ್ಳಬೇಕೆಂದರೆ-ಲೋಕಮರ್ಯಾದೆಯನ್ನು ಯಾರೂ ಮಾರಬಾರದಷ್ಟೆ , ಕರ್ತವ್ಯದಲ್ಲಿ ಕಟ್ಟುಬಿದ್ದಿರುವ ನಾವು ಕ್ಷಮಾಪಣೆಯನ್ನು ಕೊರಲೇಬೇಕು. {{gap}}ಅಪರಾಧವೆಂತಹುದೆಂದರೆ, ಹಿತೈಷಿಣಿಗೆ ಈ ವರೆಗೂ ಮುತ್ತಿದ್ದ ಅಜ್ಞಾತವಾಸವೆಂಬುದೇ ಉತ್ತರವು, ಏತರಿಂದ ಎಂಬುದಕ್ಕೆ ಸಮಾಧಾನವಾಗಿ, ಯಾವ ಕಾರಣಗಳನ್ನು ಹುಡುಕುವ ? ಸಾಮಾನ್ಯವಾಗಿ ನೋಡಿದರೆ, ನಾಲ್ಕು ಮುಖ್ಯ ಕಾರಣಗಳು ಮುಂದೆ ನಿಲ್ಲುವವು. {{gap}}1. ಪತ್ರಪ್ರಚಾರದ ಅಪದೆಸೆಗೆ ಮುದ್ರಾಲಯದವರ ಅವಿಧೇಯತೆ, ಅಲಸತೆ, ಆಶಾಪರತೆಗಳೇ ಪ್ರಬಲ ಕಾರಣವೆಂಬುದು ಮೊದಲನೆಯ ಸಮಾಧಾನವು {{gap}}2, ವಾಚನಾಭಿರುಚಿಯಿಲ್ಲದ ಈ ಕರ್ಣಾಟಕದಲ್ಲಿ, ಭಾಷಾದ್ರೋ ಹಿಗಳಾದ ದೇಶೀಯರ ನಿಷ್ಟುರತೆಯೇ ಪತ್ರಿಕೆಗಳ ಅವನತಿಗೆ ಕಾರಣವೆಂಬುದು ಎರಡನೆಯ ಸಮಾಧಾನವು.<noinclude></noinclude> okw5tyh5x3zjq7lqrct5h4nbur8yzt3 ಪುಟ:ದಕ್ಷಕನ್ಯಾ .djvu/೧೫ 104 56205 319770 124808 2026-05-14T11:53:26Z Shreesha Sharma 7840 /* Proofread */ 319770 proofread-page text/x-wiki <noinclude><pagequality level="3" user="Shreesha Sharma" /></noinclude> {{gap}}3, ದ್ರೋಹಿಗಳ ಅಪಕೃತಿಯಿಂದುಂಟಾದ ಕಷ್ಟನಷ್ಟಗಳೇ ಮೂರನೆಯ ಸಮಾಧಾನವು. {{gap}}4, ದೇಹಪರಿಶ್ರಮದಿಂದಾದ ಶಾರೀರಕ ಮತ್ತು ಮಾನಸಿಕ ಕ್ಲೇಶಗಳೇ ನಾಲ್ಕನೆಯ ಸಮಾಧಾನವು. {{gap}}1, ಇವುಗಳಲ್ಲಿ ಯಾವುದನ್ನು ನಾವು ಮುಂದಿಡಬಹುದು ? ಮುದ್ರಾಲಯದವರ ಮೇಲೆ ಅಪವಾದವನ್ನು ಹೊರಿಸಿದ ಮಾತ್ರಕ್ಕೆ, ನಿಜವೆಂದು ನಂಬಿ ಶಾಂತರಾಗುವರಾರು ? " ಮುದ್ರಾಲಯದ ಸ್ಥಾಪನೆಯ ಉದ್ದೇಶವೇ ಪತ್ರ ಮತ್ತು ಪುಸ್ತಕಪ್ರಕಾಶಕ್ಕೆಂದಾಗಿರುವಲ್ಲಿ, ಅವುಗಳ ಮೇಲೆಯೇ ಅಪವಾದವೇ ? ಮುದ್ರಾಲಯದವರಲ್ಲಿ ಅವಿಧೇಯತೆ-ಅಲಸತೆಆಶಾಪರತೆಗಳೇ ತುಂಬಿದ್ದರೆ, ಮುದ್ರಾಲಯಗಳಾದರೂ ಹಾಳುಬಿದ್ದು ಹೋಗದಿರುವುದೇ ? ಅಂತವುಗಳ ನಾಶಕ್ಕೆ ಅವುಗಳ ವ್ಯವಸ್ಥಾಪಕರೇ ಕಾರಣರಾಗುವರಲ್ಲವೇ ?'' ಹೀಗೆಂಬ ಆಕ್ಷೇಪಣೆಗಳೇ ನಮ್ಮ ತಲೆಯ ಮೇಲೆ ಬೀಳುವುದು ನಿಜ ! ನಮ್ಮಲ್ಲಿ ಕರ್ತವ್ಯ ಕ್ಷಮತೆಗೆ ಮೂಲಾಧಾರವಾದ ಸತ್ಯಸಂಧತೆಯೂ, ಅನುವರ್ತನಗುಣವೂ, ಜಾಗರೂಕತೆಯ, ನಿರಂತರೋದ್ಯಮಶೀಲತೆಯ ಚೆನ್ನಾಗಿದ್ದ ಪಕ್ಷದಲ್ಲಿ, ಮುದ್ರಾಲಯದವರ ಮೇಲಿನ ಅಪವಾದಾರೋಪಕ್ಕೆ ಅವಕಾಶವೇ ಇರುವುದಿಲ್ಲ, ನಮ್ಮ ಉತ್ಸಾಹಶಕ್ತಿಯನ್ನು ನೋಡಿ, ಅವರೂ ನಮ್ಮ ಆಸ್ತ ಬಾಂಧವರಾಗಿ ನಿಂತು, ನಮ್ಮ ಕಾಠ್ಯವನ್ನು ತೃಪ್ತಿಕರವಾಗಿ ನಡೆಯಿಸುವುದರಲ್ಲಿ ಹಿಂತೆಗೆಯುವುದಿಲ್ಲ. ಹಾಗಿಲ್ಲದೆ, ನಮ್ಮಲ್ಲಿ ಅಭಿಮಾನ-ಆಲಸ್ಯ -ಉದಾಸೀನಗಳೇ ಮುಂದಾಗಿರುವುದಾದರೆ, ಅವರು ಮಾಡುವುದಾದರೂ ಏನಿರುವುದು ? ನಮ್ಮ ಅಜಾಗರೂಕತೆಯ ಮುಂದೆ, ಅವರ ಶ್ರದ್ಧಾಭಕ್ತಿಗಳಾದರೂ ಹೇಗೆ ಪ್ರಕಾಶಿಸಬೇಕು ? ಹೀಗಿರುವುದರಿಂದ ಮೊದಲನೆಯ ಸಮಾಧಾನದ ಮಾತನ್ನೇ ಕಟ್ಟಿಡಬೇಕಾಯಿತು. {{gap}}2. ಇನ್ನು ದೇಶಕ್ಕೂ, ದೇಶಿಯರಿಗೂ ಹೊರಿಸಿದ ಅಪವಾದವುಅದಾದರೂ ಒಪ್ಪತಕ್ಕುದೋ ? " ಹೇಗೆ ? ಕರ್ಣಾಟಕದಲ್ಲಿ ವಾಚನಾಭಿ<noinclude></noinclude> ajxqmkgpmyq5xkxw3hnr4iazgoxleq9 ಪುಟ:ದಕ್ಷಕನ್ಯಾ .djvu/೧೬ 104 56206 319771 124809 2026-05-14T11:57:13Z Shreesha Sharma 7840 /* Proofread */ 319771 proofread-page text/x-wiki <noinclude><pagequality level="3" user="Shreesha Sharma" /></noinclude> ರುಚಿಯೇ ಇಲ್ಲವೆಂದು ಹೇಳುವುದು ಸರಿಯಲ್ಲ, ಅಭಿರುಚಿಯನ್ನುಂಟು ಮಾಡುವ ರಸವಿಸರವು ಪಸರಿಸದಿದೆಯೆಂದು ಮಾತ್ರ ಹೇಳಬಹುದು. ಅಲ್ಲದೆ ದೇಶೀಯರಲ್ಲಿ ಭಾಷಾಭಿಮಾನವು ಹೆಚ್ಚದಿರಲು ಕಾರಣರಾರು ? ಏತರಿಂದ ? ಗ್ರಂಥಕರ್ತರಲ್ಲಿ ದೇಶಹಿತೇಚ್ಛೆಯು ಚೆನ್ನಾಗಿದ್ದರೆ, ದೇಶೀಯರ ದೇಶಾಭಿಮಾನಕ್ಕೂ, ಭಾಷಾಪ್ರಸಾರಕ್ಕೂ ಕೊರತೆಯೇನು ? ವಾಚನಾಭಿರುಚಿ, ಪ್ರೋತ್ಸಾಹ, ದೇಶಭಕ್ತಿಗಳನ್ನು ಹೆಚ್ಚಿಸಬಲ್ಲ ಪ್ರತಿಭಾಶಕ್ತಿಯು ನಮ್ಮಲ್ಲಿದ್ದರೆ, ನಾವು ಕೋರದೆಯೇ ಅವರು ನಮ್ಮನ್ನು ಪ್ರೋತ್ಸಾಹಿಸುವರು , ಅದಿಲ್ಲವಾದರೆ, ಕೂಗಿಕೂಗಿ ಅತ್ತು ಬೇಸತ್ತರೂ, ನಮ್ಮನ್ನು ಕೇಳು ವವರಾರು ?” ಈ ಬಗೆಯ ಕಠಿನ ಸಮಸ್ಯೆಗಳೇ ನಮ್ಮ ಮುಂದೆ ನಿಲ್ಲುವುವು. ಇದರಲ್ಲಿಯೂ ನಮ್ಮ ಅವಚ್ಛತೆಯೇ ಮುಂದಾಗಿರುವುದರಿಂದ ಇದರ ಪ್ರಸ್ತಾಪವನ್ನೂ ಬಿಡಬೇಕಾಯಿತು. {{gap}}3. ದ್ರೋಹಿಗಳ ಅಪಕೃತಿಯ ಮೇಲೆ ಬಿದ್ದ ಆರೋಪವು, ಅದೂ ತೃಪ್ತಿಕರವಾಗಲಾರದು. “ ವಿಷಧರರೂ ಇರಬಹುದು ; ಕಂಟಕ ಗಳನ್ನೊಡ್ಡಿದ್ದರೆಂದೂ ಹೇಳಬಹುದು, ಆದರೆ, ಅಷ್ಟು ಮಾತ್ರಕ್ಕೆ ಹೆದರಿ, ಕೈಕೊಂಡ ಕಾರ್ಯವನ್ನು ಬಿಡುವುದು ಸರಿಯಲ್ಲ: ಕಾರ್ಯದ ಪೂರ್ವಾಪರ ವಿಚಾರವನ್ನು ಮುಂದಾಗಿಯೇ ನಿರ್ಧರಿಸಿದ್ದು, ಕರ್ತವ್ಯವನ್ನು ನಿರ್ವಹಿಸುವುದೇ ಕಾರ್ಯ ಧುರಂಧರರ ಲಕ್ಷಣವು, ಅಲ್ಲದಿದ್ದರೆ ಈ ಪ್ರಯತ್ನದಲ್ಲಿ ಪ್ರವರ್ತಿಸುವುದೇ ತಪ್ಪು.” ಹೀಗೆಂಬ ವಜ್ರಪಾತವೇ ನಮ್ಮ ಮೇಲೆ ಬೀಳುವದು, ಇದಕ್ಕಿನ್ನೇನು ಹೇಳುವ ? {{gap}}4, ಶಾರೀರಕ ಮತ್ತು ಮಾನಸಿಕ ಕ್ಷೇಶಗಳೆಂದರೆ, ಅವು ಯಾರನ್ನೂ ಬಿಟ್ಟುದಲ್ಲ. ಅದನ್ನೇ ಪ್ರಾಮುಖ್ಯವಾಗಿಟ್ಟರೆ ಕೇಳುವವರಾರು ? ಕಾರ್ಯಕ್ಷೇತ್ರದಲ್ಲಿ ಕಾಲಿಟ್ಟ ಬಳಿಕ ಕಾಲಕ್ಕೆ ತಕ್ಕಂತೆ, ಕಾರ್ಯಕ್ರಮಗಳನ್ನು ಗೊತ್ತು ಮಾಡಿಟ್ಟು, ತಕ್ಕಮಟ್ಟಿಗೆ ವಿಶ್ರಾಂತಿಯನ್ನು ಹೊಂದಿಯೇ ಇರಬೇಕಲ್ಲದೆ, ಬೇರೆಬೇರೆ ಕಾರಣಗಳನ್ನು ಮುಂದಿಡುವುದು ಮೂರ್ಖತನವು..?<noinclude></noinclude> gszvp0zsuzyxkvtidirabpv6k6c0yhv ಪುಟ:ಪಂಪರಾಮಾಯಣ ಕಥೆ.djvu/೯ 104 58871 319542 127736 2026-05-13T12:09:29Z Shreelatha.Halemane 7642 /* Proofread */ 319542 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಪ೦ಪ ರಾಮಾಯಣದ ಕಥೆ}} ತನ್ನ ತಂದೆಯು ತನ್ನನ್ನು ಕಳುಹಿಸಿದನೆಂದು ಹೇಳಲು, ದೊರೆಯು ಸಂತೋಷ ಪಟ್ಟು ಅದಕ್ಕೆ ಸಮ್ಮತಿಸಿದನು. ಕೂಡಲೆ ಶುಭದಿನ ಮುಹೂರ್ತದಲ್ಲಿ ವಿವಾಹ ಮಂಗಳೋಪಕರಣಗಳೊಡನೆ ವಜ್ರಬಾಹುವು ಆನೆಯನ್ನೇರಿ ಉಚಿತ ಪರಿವಾರ ದೊಡನೆ ಪ್ರಯಾಣವನ್ನು ಬೆಳೆಯಿಸಿ ವಸಂತಗಿರಿಯ ಬಳಿಗೆ ಬಂದು ಅದರ ಸೊಬಗುನ್ನು ನೋಡುತ್ತಿರುವಲ್ಲಿ, ತಪಸ್ಸು ಮಾಡುತ್ತಿರುವ ಗುಣ ಸಾಗರ ಭಟ್ಟಾರಕನೆಂಬ ಒಬ್ಬ ಮುನಿಯು ಆತನ ಕಣ್ಣಿಗೆ ಬಿದ್ದನು. ವಜ್ರಬಾಹುವು ಆ ಮುನಿಯನ್ನು ಕಂಡು ಅತ್ಯಂತ ಭಕ್ತಿಯಿಂದ ಕೂಡಲೆ ಆ ಮುನಿಯ ಬಳಿಯಲ್ಲಿ ದೀಕ್ಷೆಗೊಂಡನು. ಇದನ್ನು ನೋಡಿ ಉದಯಸುಂದರನೂ ಇಪ್ಪತ್ತು ಮೂವರು ಅರಸುವ ಕೈ ತಪಕ್ಕೆ ನಿಂತರು. ಅಣ್ಣನು ದೀಕ್ಷೆಗೊ೦ಡ ವಾರ್ತೆಯನ್ನು ಕೇ ಅನಂಗೊನ್ನಾವೆಯ ದೀಕ್ಷೆ ಗೊ೦ಡಳು. ಮದುವೆಗಾಗಿ ಹೊರಟ ಮೊಮ್ಮಗನು ಪ್ರಪಂಚದ ಸುಖವನ್ನು ಬಿಟ್ಟು ತಪೋರಾಜ್ಯದಲ್ಲಿ ನಿಂತದ್ದನ್ನು ಕೇಳಿ ವಿಜಯರಥನು ತನ್ನ ಮೊಮ್ಮಗನಾದ ಪುರಂದರನಿಗೆ ಪಟ್ಟವನ್ನು ಕಟ್ಟಿ, ತಾನೂ ದೀಕ್ಷೆಗೊಂಡನು. ಪುರ೦ದರನು ಸಕಲ ಸಾಮ್ರಾಜ್ಯ ಸುಖ ಸುಧಾರಸದಿಂದ ತಣಿದು ಮಗನಾದ ಕೀರ್ತಿಧರನಿಗೆ ಪಟ್ಟ ವನ್ನು ಕಟ್ಟಿ ತಾನೂ ದೀಕ್ಷೆಗೊಂಡನು. ಕೀರ್ತಿ ಧರನು ಒಂದು ದಿನ ಸೂರ್ಯಗಣನನ್ನು ನೋಡಿ ಜಗತ್ತನ್ನು ಬೆಳಗುವ ಸೂರ್ಯನಿಗೂ ರಾಹುವಿನಿಂದ ಈ ಸ್ಥಿತಿಯ ಬ೦ದಿತಲ್ಲವೆ ಎಂದು, ಭೂಮಂಡಲವನ್ನು ಹುಲ್ಲುಕಡ್ಡಿಗೆ ಸಮ ಮಾಡಿ, ವೈರಾಗ್ಯ ಪರನಾದನು. ಆಗ ಮಂತ್ರಿಗಳು ರಾಜ್ಯವು ಅನಾಯಕನಾಗುವುದೆಂದು ಭಯಪಟ್ಟ ದೊರೆಯನ್ನು ತನಗೊಬ್ಬ ಮಗನು ಹುಟ್ಟುವವರೆಗೂ ರಾಜ್ಯಭಾರ ಮಾಡುವಂತೆ ಒಡಂಬಡಿಸಿದರು. ಮಗನು ಹುಟ್ಟಿದ ಕೂಡಲೆ, ಸುಕೌಶಲನೆ೦ಬ ಆ ತೊಟ್ಟಿಲ ಮಗುವಿಗೆ ಪಟ್ಟ ವನ್ನು ಕಟ್ಟಿ, ಕೀರ್ತಿಧರನು ಜನದೀಕ್ಷೆಗೊಂಡನು. ಸುಕೌಶಲನು ತನ್ನ ಕೀರ್ತಿಯನ್ನು ನಾಲ್ಕು ಕಡೆಗಳಲ್ಲಿಯೂ ಹಬ್ಬಿಸಿ ಅರಸುಗೆಯ್ಯುತ್ತಿರುವಲ್ಲಿ ಒ೦ದು ದಿನ ಆತನ ತಾಯಿ ಯಾದ ಸಹದೇವಿಯು ಸಹಚರಿಯರೊಡನೆ ಮಣಿಮಂಟಪದಲ್ಲಿಯ ಮಣಿ ಮಯಾಸನದ ಮೇಲೆ ಲೀಲೆಯಿಂದ ಕುಳ್ಳಿರಲು, ಕಾ೦ತಿಯುತನಾದ ಒಬ್ಬ ಯತಿಯು ಇವರ ಮನೆಯನ್ನು ಹೊಕ್ಕನು. ಇದನ್ನು ನೋಡಿ ಗುಣಹೀನೆಯಾದ ಸಹದೇವಿಯ ತನ್ನ ಮಗನು ಎಲ್ಲಿ ದೀಕ್ಷೆಗೊಳ್ಳುವನೋ ಎಂಬ ಭಯದಿಂದ ಪಾಪಕ್ಕೆ೦ಜದೆ ಆ ಯತಿ ಯನ್ನು ಪಟ್ಟಣದಿಂದ ಆಟ ಸಿಬಿಟ್ಟಳು. ಸುಕ್ಕಲನ ದಾದಿಯೊಬ್ಬಳು ಈ ಯತಿ ಯು ಕೀರ್ತಿಧರನೆಂದರಿತು ನೊ೦ದು ಎದೆಯನ್ನು ಗುದ್ದಿಕೊಳ್ಳುತ್ತ ಅಳತೊಡಗಿ ದಳು. ಸುಕೌಶಲನು ಇದಕ್ಕೆ ಕಾರಣವನ್ನು ತಿಳಿದು ಬಹಳ ದುಖಪಟ್ಟು, ಇಹ ಲೋಕ ಸೌಖ್ಯವು ಮುಖ್ಯವಲ್ಲಿಂದು ತಿಳಿದು, ಕೀರ್ತಿಧರ ಮುನೀಂದ್ರರ ಸಾದಾರ ವಿಂದದಲ್ಲಿ ಮುಕ್ತಿ ಸುಖವನ್ನು ಪಡೆಯುವೆನೆಂದು ನಿಶ್ಚಯಿಸಿ ಅರಮನೆಯನ್ನು ಬಿಟ್ಟ ಹೊರಟು, ಉಪವನವನ್ನು ಸೇರಿ ಕೀರ್ತಿಧರ ಭಟ್ಟಾರಕರ ಮುಂದೆ ನಿಂತನು. ಅವನ ಮಾಂಡಲಿಕರೂ ಸಾಮಂತರೂ ಮಂತ್ರಿಗಳೂ ಅಂತ:ಪುರ ಸ್ತ್ರೀಯರೂ ತಮಗಿನ್ನೇನು<noinclude></noinclude> px70j00ony2ividpzi8qhl7bihrgbe4 ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩ 104 69529 319753 140392 2026-05-14T10:29:25Z Sharanya K H 7593 /* Proofread */ 319753 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪ 104 69530 319754 140393 2026-05-14T10:29:42Z Sharanya K H 7593 /* Proofread */ 319754 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ನನ್ನ ನಲ್ಲ.pdf/೨೮ 104 75425 319605 291161 2026-05-13T14:32:47Z Shreesha Sharma 7840 /* Validated */ 319605 proofread-page text/x-wiki <noinclude><pagequality level="4" user="Shreesha Sharma" />{{Left|ನನ್ನ ನಲ್ಲ}} {{Right|೫}}</noinclude> ಯಾವ ದೇಶಾಂತರದೊಳೆಲ್ಲಿ ನಲ್ಲನ ವಾಸ ಕಂಡವರನ್ನೆಲ್ಲಾರೆ ಕಾಣಬಹುದೇ । ಯಾವ ಪುಣ್ಯಾತ್ಮರಾ ಕಾಲುಹಿಡಿಯಲೆ ತಾಯಿ ಹೇಗಾರೆ ದೊರೆಯೆನಗೆ ದೊರೆಯಬಹುದೇ ||೨|| ಯಕ್ಷರಾಕ್ಷಸರಿರಲಿ ಭೂತ ಬೆಂತರವಿರಲಿ ದೇವಗಂಧರ್ವರಾರಾರೆ ಇರಲಿ ! ಲಕ್ಷಿಸಲಿ ಲಕ್ಷಿಸಲಿ ನನ್ನ ಮೊರೆ ಲಕ್ಷಿಸಲಿ ರಕ್ಷಕನ ಸುದ್ದಿ ಯಾರಾರೆ ತರಲಿ ||೩|| ಕಣಿಯ ಕೇಳಲೆ ಮತ್ತೆ ಹೊತ್ತಿಗೆಯ ಕೇಳಲೇ ದಿಗ್ದೇಶ ದೇಶಿಕರ ಕೇಳಲೇನೇ ? ಗಣತಿಗಳ ಕೇಳಿದರೆ ಗುಣಿಸಿ ಹೇಳ್ಯಾರೇನೇ ಯಾರ ಮೊರೆ ಹೊಗಲಿನ್ನು ಮಾಡಲೇನೇ ||೪|| ಬರುವನೆಂಬರು ಕೆಲರು ಬಾರನೆಂಬರು ಕೆಲರು ಅಹುದು ಬಹುದೆಂದು ನರಳುವರು ಕೆಲರು | ಆರಿಯೆವೆಂಬರು ಕೆಲರು ಅರಿತವೆಂಬರು ಕೆಲರು ತುಟಿ ಮುಚ್ಚಿ ತಲೆದೂಗುವವರು ಕೆಲರು ||೫|| ಬರುವನೆಂಬರು ಕೆಲರು ಬಾರನೆಂಬರು ಕೆಲರು ಸತ್ತು ಬಹುದಿನವಾಯಿತೆಂಬರು ಕೆಲರು | ಬೆರಗುಬಡುವರು ಕೆಲರು ಬೆರಳು ಮುರಿವರು ಕೆಲರು ಬಲ್ಲಂತೆ ಬಾಯಿಬಡಿವವರು ಕೆಲರು ||೬|| ಮೇಲೆ ಕೈಮಾಡುವರು ಒಳಗೆ ಕೈತೋರುವರು ಒಳಹೊರಗು ಬೆರಳ ಸುತ್ತುವರು ಕೆಲರು | ಕಾಲುಕೆರೆಯುವ ಕೆಲರು ನೆಲೆವ ಬರೆಯುವ ಕೆಲರು ಎದೆಗೆ ಕೈಯಿಟ್ಟಿಟ್ಟು ಕುಣಿವ ಕೆಲರು || ೭||<noinclude></noinclude> pvbdiuralbmqfa3nud5030144cdha1k ಪುಟ:ನನ್ನ ನಲ್ಲ.pdf/೨೯ 104 75426 319606 291183 2026-05-13T14:33:26Z Shreesha Sharma 7840 /* Validated */ 319606 proofread-page text/x-wiki <noinclude><pagequality level="4" user="Shreesha Sharma" />{{Left|೬}} {{Right|ನನ್ನ ನಲ್ಲ}}</noinclude> ಗಲ್ಲ ಹಿಡಿಯುವ ಕೆಲರು ಗಲ್ಲ ಹಿಂಡುವ ಕೆಲರು ಬೆಸನಿಸುವ ಕೆಲರು ಬೆದರಿಸುವ ಕೆಲರು | ಕಲ್ಲುಗೊಳ್ಳುವ ಕೆಲರು ಹಲ್ಲುಕಿಸಿಯುವ ಕೆಲರು ಬಲ್ಲವರು ಬಲ್ಲಂತೆ ಬಣಗುತಿಹರು ||೮|| ತಾಳ್ಮೆ ಗಲಿಸುವ ಕೆಲರು ತಪ್ಪು ಹೊರಿಸುವ ಕೆಲರು ತಿರುತಿರುಗಿ ತಿವಿತಿವಿದು ಬಯ್ವ ಕೆಲರು | ತಾಳು ತಪ್ಪೀ ರೀತಿ ಬೇತಾಳದಂತೆನ್ನ ಗಾಳಿಸುವ ಗೋಳಿಸುವ ಖಲರು ಕೆಲರು ||೯|| ಆಶೆ ಹಚ್ಚುವ ಕೆಲರು ಆಶೆ ಹರಿಯುವ ಕೆಲರು ಆಶೆ ತೋರಿಸಿ ಅಡ್ಡ ಸೆಳೆವ ಕೆಲರು | ಆಸರಾಗುವ ಕೆಲರು ಆಸೆಬುರುಕರು ಕೆಲರು ಮುಖ ತಿರುವಿ ಮೂಗು ಮುರಿವವರು ಕೆಲರು ||೧೦|| ಅಣಕವಾಡುವ ಕೆಲರು ಅಣಗಿಸ್ಯಾಡುವ ಕೆಲರು ಅನುವು ಹೇಳುವ ಕೆಲರು ಆಳುವ ಕೆಲರು | ಕೆಣಕಿ ಕೇಳುವ ಕೆಲರು ಗುಣಿಸಿ ಗುಣುಗುವ ಕೆಲರು ಹಣಿಕೆಹಾಕದೆ ಹಾದುಹೋಹ ಕೆಲರು ||೧೧|| ಧೈರ್ಯ ಹೇಳುವ ಕೆಲರು ದಿಕ್ಕುಗೆಡಿಸುವ ಕೆಲರು ದಂಗುಬಡಿಸುವ ದಂಭದವರು ಕೆಲರು | ಶೌರ್ಯಗಲಿಸುವ ಕೆಲರು ಶಾಂತಗೊಳಿಸುವ ಕೆಲರು ಸಾಕು ಬಿಡು ಸುಮ್ಮನಿರು ಎಂಬ ಕೆಲರು ||೧೨|| ಸತ್ತವರ ಮನೆಯಲ್ಲಿ ಸಂತೆ ನೆರೆಯುವ ತೆರದಿ ಬಲ್ಲವರು ಬಲ್ಲಂತೆ ರಂಬಿಸುವರು | ಸತ್ತವನ ಬದುಕಿಸುವ ಸಾಮರ್ಥ್ಯದವರಾರು ಮಾತುಕತೆ ಹೇಳಿ ಮನೆಗೇಳುವವರು ||೧೩||<noinclude></noinclude> 98w1262u90a11a1p1i2e2mr8ws7a8pq ಪುಟ:ನನ್ನ ನಲ್ಲ.pdf/೩೦ 104 75427 319607 291200 2026-05-13T14:34:09Z Shreesha Sharma 7840 /* Validated */ 319607 proofread-page text/x-wiki <noinclude><pagequality level="4" user="Shreesha Sharma" />{{Left|ನನ್ನ ನಲ್ಲ}} {{Right|೭}}</noinclude> ಯಾರ ಕೇಳಿದರಿಲ್ಲ ಯಾರು ಹೇಳಿದರಿಲ್ಲ ಯಾರ ಬಳಿಯಲಿ ಅತ್ತು ಕರೆದರಿಲ್ಲ | ಯಾರಕಡೆಗೇನುಂಟು ಮೀರಿಮಿಕ್ಕಿದ ಮಾತು ಯಾರಾರ ಬಳಿಗು ನೆಲೆ ಕಾಣಲಿಲ್ಲ. ||೧೪|| ಶಕುನಕ್ಕೆ ಸಿಕ್ಕಿಲ್ಲ ಹೊತ್ತಿಗೆಗೆ ಹೊಳೆದಿಲ್ಲ. ದಿಗ್ದಶ ಯಾತ್ರಿಗಳು ಕಾಣಲಿಲ್ಲ | ಅಕಟಕಟ ಗತಿಯೇನು ಮುಂದಿನ್ನು ದಿಕ್ಕೇನು ಎಲ್ಲಿ ಮೊರೆಯಿಡಲಿನ್ನು ತಿಳಿಯದಲ್ಲ ||೧೫|| ಹರಣ ಹಾರುವ ರೋಗಿ ಕಂಡಕಸ ತಿನುವಂತೆ ಕಂಡಕಂಡವರ ಕಾಲ್ಕೆರಗುವಂತೆ । ಮರಣ ಸಂಕಟಬಟ್ಟು ತಿರುತಿರುಗಿ ಬೇಸತ್ತೆ ಸಿಕ್ಕವರು ಸಿಕ್ಕದ್ದು ಹೇಳಿದಂತೆ ||೧೬|| ತಿರುಗಿ ಸೊರಗಿದರಿಲ್ಲ ಮರುಗಿ ಮಿಡುಕಿದರಿಲ್ಲ ಹುಡುಹುಡುಕಿ ಹೈರಣಿಸಿ ದಣಿದರಿಲ್ಲ | ಬೆರಗಾದೆ ಬೆಪ್ಪಾದೆ ಹೊಲ್ಲಾದೆ ಹುಚ್ಚಾದೆ ನಲ್ಲನಿಲ್ಲದೆ ಜೀವ ನಿಲ್ಲದಲ್ಲಾ ||೧೭|| ಮಾವು ಬೇವಾಯೆನಗೆ ಸವಿಯು ಕಹಿಯಾಯ್ತನಗೆ ಕೂಳು ನೀರೆನಗೆ ನಂಜಾಯ್ತೆ ತಾಯಿ । ಜೀವ ಸಾಕಾಯ್ತೆನಗೆ ಸಾವು ಬೇಕಾಯ್ತನಗೆ ಜಗವು ಕಿಚ್ಚಿನ ಕೊಂಡವಾಯ್ತೆ ತಾಯಿ ||೧೮|| ನನ್ನರಸ ನನ್ನೊಡೆಯ ನನ್ನ ಜೀವದ ಜೀವ ನನ್ನ ಮೊರೆಯನ್ನಾರು ಕೇಳಬಹುದೊ | ನಿನ್ನ ನಂಬಿದ ಬಳ್ಳಿ ನಿನ್ನಾಸರಿಲ್ಲದಿರೆ ಭವದಲ್ಲಿ ತಾನೆಂತು ಬಾಳಬಹುದೊ ||೧೯||<noinclude></noinclude> edxpjkx5vnpbfhacejsjniqswm8xlba ಪುಟ:ನನ್ನ ನಲ್ಲ.pdf/೩೧ 104 75428 319608 291442 2026-05-13T14:34:43Z Shreesha Sharma 7840 /* Validated */ 319608 proofread-page text/x-wiki <noinclude><pagequality level="4" user="Shreesha Sharma" />{{Left|೮}} {{Right|ನನ್ನ ನಲ್ಲ}}</noinclude>ಬರುವದೇನುಂಟೊಮ್ಮೆ ಬರುವ ಕಾಲಕೆ ಬಹುದು ಬಯಕೆ ಬರುವದರ ಕಣ್ಣನ್ನೇ ಕಾಣೋ | ಅರಿಯದಾ ಹವಣಿಕೆಯು ಜೀವಜೀವನ ಲೀಲೆ ದೇವದೇವನ ಗೂಢ ವಿಧಿಯು ಕಾಣೋ ||೨೦|| {{center|೩ನೇ ಎಸಳು}} ನಿಲ್ಲು ನಿಲ್ಲೆಲೆ ನವಿಲೆ ನಿನ್ನ ಕಣ್ಣುಗಳೇಸು ಕಣ್ಣ ಬಣ್ಣಗಳೇಸು ಎಣಿಸಲಾರೆ| ಎಲ್ಲ ರೂಪಿಸಿದವನು ಎಲ್ಲಿ ತಾನಡಗಿದನೆ ತಾಳಲಾರದು ಜೀವ ಹೇಳಬಾರೆ ||೧|| ಪಿಳುಕಿಸದ ಸಿರಿಗಣ್ಣು ಸುತ್ತು ಚಿನ್ನದ ರೇಖೆ ಬೆಳ್ಳಿಮಿರುಗಿನ ಮೈಯ ಕಾಂತಿ ನಿನಗೆ | ತಿಳಿಗಂಗೆ ನಿಮ್ಮವ್ವ ಮೀನಮೂರುತಿ ತಿಳಿಸಿ ನನ್ನೊಡೆಯನಡಗಿರುವನಾವಕಡೆಗೆ ||೨|| ಆರದಾರತಿ ಹಿಡಿದು ಹಾರುತಿರುವವಳಾರೆ ಹೊನ್ನಿ, ಏ ಹೊನ್ನಿ ನೀನಾರೆ ಬಾರೆ | ಯಾರಿಗಾರತಿ ಹೇಳೆ ನಾನೂ ಬರುವ ನನ್ನರಸನಿದ್ದಾನು ಅಲ್ಲಿಯಾರೆ ||೩|| ಸಣ್ಣ ದನಿಯವಳಾರೆ ನುಣ್ಣ ದನಿಯವಳಾರೆ ಹೆಣ್ಣುದನಿಗೈವ ಕೋಗೆಲೆಯೆ ಬಾರೆ | ಕಣ್ಣುತಪ್ಪಿಸಿದವನ ಕುರುಹು ಹೇಳೇ ತಾಯಿ ಬನದಮ್ಮ ನೀನಾರೆ ಕರುಣ ತೋರೆ ||೪||<noinclude></noinclude> opi8kzhgbwoau7lwbm0rw3nxjo3dr8a ಪುಟ:ನನ್ನ ನಲ್ಲ.pdf/೩೨ 104 75429 319609 291460 2026-05-13T14:35:24Z Shreesha Sharma 7840 /* Validated */ 319609 proofread-page text/x-wiki <noinclude><pagequality level="4" user="Shreesha Sharma" />{{Left|ನನ್ನ ನಲ್ಲ}} {{Right|೯}}</noinclude><poem></poem> ಮಾಣಿಕದ ಮೂಗಿನವ ಮೈ ಪಚ್ಚರತ್ನದವ ಹಣ್ಣು ಕುಕ್ಕುತ ಹಾರುವಣ್ಣ ಬಾರೋ । ಜಾಣ ರಂಗಯ್ಯ ತಾ ಕಾಣದಡಗಿದನೆಲ್ಲಿ ಗಿಣಿರಾಮ ನೀನಾರ ಸುದ್ದಿ ಬೀರೊ ||೫|| ಬೆಳದಿಂಗಳಿರುಳಲ್ಲಿ ನಟ್ಟನಡುರಾತ್ರಿಯಲಿ ಸಪ್ಪಳಿಲ್ಲದ ಗಪ್ಪುಗಾರಿನಲ್ಲಿ | ಕೊಳದ ಬಾಂದಳದಲ್ಲಿ ಟಿಂವ್‌ಗುಡುವ ಟೀಂವಕ್ಕೆ ನೀನಾರೆ ಬಲ್ಲೆಯಾ ನಲ್ಲನೆಲ್ಲಿ ||೬|| ಬಿರುಗಣ್ಣ ಮಲ್ಲಿಗೆಯೆ ಸರಿಯೆ ನಿನಗೀ ಮೌನ ಕಣ್ಣಿಲ್ಲದವರು ಕಂಡಿಲ್ಲದಿರಲಿ | ಸಿರಿವಂತರಾ ಮಗಳು ಸೊರಗಿ ಸಾಯುತಲಿರುವೆ ಪುರುಷನೆಡೆ ಹೇಳಮ್ಮ ಪುಣ್ಯಬರಲಿ ||೭|| ಬಹುರಸದ ಮೊಲೆಯೂಣಿಸಿ ಜೀವತಣಿಸುವ ತಾಯಿ ಸರ್ವರಾಧಾರೆ ಭೂದೇವಿ ತಾಯಿ । ಬಹಳ ಬೇಡುವಳಲ್ಲ ನನ್ನ ರಾಯನ ಸೊಲ್ಲ ನೀನಾರೆ ಹೇಳಿಕೊಡಬಾರೆ ತಾಯಿ ||೮|| ಇಲ್ಲಿಯೂ ಮುಗಿಯುವ ಅಲ್ಲಿಯೂ ಮುಗಿಯದವ ಎಲ್ಲಿಯೂ ಮುಗಿಯದಾಕಾಶ ತಂದೆ | ಎಲ್ಲಿ ನನ್ನರಸನಿಹನೆಲ್ಲಿ ನನ್ನಾಶ್ರಯವು ಕೈಮುಗಿವೆ ಹೇಳೆನ್ನನಂತ ತಂದೆ ||೯|| ಎಂದಿಗೂ ಇದ್ದವನು ಎಂದಿಗೂ ಇರುವವನು ಜೇಷ್ಠನೇ ಶಾಶ್ವತನೆ ಕಾಲನಟನೆ | ಹಿಂದು ಮುಂದರಿಯದಲೆ ಕುಣಿಯುವೆನು ನಿನ್ನೊಡನೆ ನನ್ನ ರಾಯನ ನೆಲೆಯ ತೋರು ಗಡನೆ ||೧೦|| <poem></poem><noinclude></noinclude> 3xrpf7j44f8aso72lm5e5b9i798ah2j ಪುಟ:ನನ್ನ ನಲ್ಲ.pdf/೪೫ 104 75442 319611 317086 2026-05-13T14:36:58Z Shreesha Sharma 7840 /* Validated */ 319611 proofread-page text/x-wiki <noinclude><pagequality level="4" user="Shreesha Sharma" />{{Left|೨೨}}{{Right|ನನ್ನ ನಲ್ಲ}}</noinclude> ಹೊರಟು ಮೂಕಳಂತೆ ನಡೆದಳು ಸುನೀತಿ ಎದ್ದು- ಮನೆಯ ಬಿಟ್ಟು ಹೊರಗೆ ನಡೆದಳು ॥ ೪ ತೋಟಪಟ್ಟಿ ಹಳ್ಳಕೊಳ್ಳ ಬಾವಿಕೆರೆಗಲ್ಲಿ ನೋಡಿ ಕೇರಿಕೇರಿ ತಿರುಗಿ ನೋಳ್ಳು ಹಿಂದಕೊಮ್ಮೆ- ಮುಂದಕೊಮ್ಮೆ ಹೊರಳಿ ನೋಳ್ಪಳು ॥ ೫ “ಅಲ್ಲಿ ಇರುವನೇನೋ ತರಳ ? {{gap}}ಇಲ್ಲಿ ಇರುವನೇನೋ ಕಂದ ?” {{gap}}ಎಂದು ಮುಂದುಮುಂದೆ ಹೊರಟಳು {{gap}}“ಬಿಸಿಲುಗುದುರೆ- {{gap}}ಹಿಂದೆ ಚಿಗರಿಯಂತೆ” ನಡೆದಳು ॥ ೬ ಮುಂದೆ ಹೋಗಿ ಮತ್ತೆ ಮನಸಿ ನಲ್ಲಿ 'ಮಗನು ಮನೆಗೆ ಹೋಗಿ ಮಲಗುಕೊಂಡನೇನೋ !” ಎಂದಳು ಜೋಕಾಲಿಯಂತೆ- ತೂಗಲಾಡಿ ಬಾಲೆ ದಣಿದಳು ॥ ೭ *ಸಣ್ಣ ಕೂಸು ಐದು ವರ್ಷ ತುಂಬಲಿಲ್ಲ ಇನ್ನು ತನಕ ಎನ್ನ ಕೂಸು ಎಲ್ಲಿ ಹೋಯಿತು ? ಸಣ್ಣ ಗಿಣಿಯು~ ಕತ್ತಲಲ್ಲಿ ಎತ್ತ ಹಾರಿತು ? ೮<noinclude></noinclude> euj6zz98bu0pqv82miy8pb26t6l97mp ಪುಟ:ನನ್ನ ನಲ್ಲ.pdf/೯೨ 104 75489 319610 312235 2026-05-13T14:36:16Z Shreesha Sharma 7840 /* Validated */ 319610 proofread-page text/x-wiki <noinclude><pagequality level="4" user="Shreesha Sharma" /></noinclude>ನನ್ನ ನಲ್ಲ ಎಂದೀಗೊಮ್ಮೆ ಹಾಕುತ ಹಣಕಿ ಮಾರೀ ತೋರಿ ತುಸುತುಸು ಇಣಕಿ ಮಾಟಾ ಮೋಡಿ ಮಾಡಿಕೋತ ಕಳ್ಳಿ ಆಟಾ ಆಡಿಕೋತ ಅಲ್ಲೇ ಕುಳಿತಿ ಬಾರೇ ಗೆಳತಿ ನೀ ಕೂತಲ್ಲಿ ಜ್ಯೋತಿಯ ಢಾಳ ನಾ ಕೂತಲ್ಲಿ ಕತ್ತಲೆ ಕಾಳ ಕಂಡೂ ಕಂಡೂ ಕೂತೇ ಕೂತಿ ತಿಳಿದೂ ತಿಳಿದೂ ಹಾಗೇ ಇರತಿ ಅಲ್ಲೇ ಕುಳಿತಿ ಬಾರೇ ಗೆಳತಿ ಏಸೋ ಕಾಲಕೆ ಅಟ್ಟಕೆ ಬಂದೀ ಅಲ್ಲಿದಿಲ್ಲಿ- ಗೆಂದರೆ ಬಂದೀ ಬರತೀ ಬರತೀ ಬಂದೇ ಬರತೀ ಎಷ್ಟೋತ್ತಾರೆ ಅಲ್ಲೇ ಇರತಿ ಅಲ್ಲೇ ಕುಳಿತಿ ಬಾರೇ ಗೆಳತಿ<noinclude></noinclude> c44hldzk8ihqtvkev9xr6puzsydgwiu ಪುಟ:ಅರಮನೆ.pdf/೪೬ 104 77132 319631 317926 2026-05-13T14:42:57Z Shreesha Sharma 7840 /* Validated */ 319631 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=ಅರಮನೆ|right=೧೫}} ಕೂಗುತಲಿತ್ತು.. ತಾಯ್ತನದ ಹಂಬಲದ ಯಮ್ಮೆ ಮಣಕಗಳು ತಮ್ಮ ತಮ್ಮ ಬಂಧನ ಹರಕೊಂಡು ಜಿಕ್ಕೋತ ಅದರ ಸನೀಕ ಬರುತ್ತಿದ್ದವು. ಬರಲಿಲ್ಲಾಂದರ ಅದೇ ಹಾದಿಯಿಲ್ಲದ ಕಡೇಕ ಹಾದಿ ಮಾಡಿಕೊಂಡು ಅವುಗಳಿದ್ದಲ್ಲಿಗೆ ತಾನೊಡುತಲಿತ್ತು. ಆಗ ಅದರ ಪಾದಾಘಾತಕ್ಕೆ ಹಾಳಾಗುತ್ತಿದ್ದುದು ವಂದಾ... ಯರಡಾ........ ವಂದು ಜೋಳದ ಹೊಲ ವುಳುದೀತಾ? ಎಂದು ಮಲ್ಲಿಗೆ ಅಂಟಿನ ತೋಟ ವುಳುದೀತಾ.. ವಂದು ಹಿತ್ತಲು ವುಳುದೀತಾ? ಯದುರಿಗೆ ಬಂದೋರ ಸೊಂಟವುಳುದೀತಾ? ಹಾನಿಗೀಡಾದ ವಬ್ಬರಲ್ಲಾ ವಬ್ಬರು 'ಅವ್ವಾ.. ತಾಯೀ.. ನೀನು ಸಾಕ್ಕೊಂಡಿರೋದು ಊಾಣನೋ ಅತುವಾ ಬಿರುಗಾಳಿಯೋ..” ಯಂದು ಅಳುತ ಅಬ್ಬರಿಸುತ್ತ ಬಂದು ಅದರ ಸಾಕು ತಾಯಿಯಾದ ಜಗಲೂರೆವ್ವಗೆ ದೂರು ನೀಡುತಲಿದ್ದುದು ಮಾಮೂಲು ಸಂಗತಿಯಾಗಿತ್ತು. ಮೇಲು ಮಾತಿಗೆ ನೀವೇ ಅದಕ ವದ್ದು ಬುದ್ದಿ ಕಲುಸಿರಿ.. ದೊಡ್ಡಿಗೆ ಕೂಡಿ ಹಾಕಿರಿ” ಯಂದನ್ನುತ್ತಿದ್ದಳು. ಪಟ್ಟಣದ ಯಾರೊಬ್ಬರಿಗೂ ಅಂಥ ಧಯರಾಗಲೀ, ತಾಕತ್ತಾಗಲೀ ಯಿಲ್ಲವೇಯಿಲ್ಲಯಂಬುದು ತನಗೆ ಗೊತ್ತಿಲ್ಲದಿರಲಿಲ್ಲ. ಬಸುರು ಬೇಕು, ಆದರ ಹೆಸರು ಬ್ಯಾಡಾಂದರ ಹೆಂಗ? ವಂದಾನೊಂದು ಕಾಲದಲ್ಲಿ ಮಿಂಚೇರಿ ಪಟ್ಟಣವನ್ನಾಳಿದ ಸೂರನಾಯಕನೇ ಕೋಣದ ರೂಪದಲ್ಲಿರುವನೆಂದೇ ತಾನು ಭಾವಿಸಿದ್ದಳು. ತನ್ನ ಗಾಂಧಾರಿ ಗರುಭದೊಳಗೆ ಜನಿಸಬೇಕಿದ್ದ ನೂರೊಂದು ಮಂದಿ ಕವುರವರೇ ಕೋಣದ ರೂಪದಲ್ಲಿರುವರೆಂದು ತಾನು ಭಾವಿಸಿದ್ದಳು. ಜೀವಾತುಮ, ಪರಮಾತುಮರ ಸಂಬಂಧ ಯಾವ ರೀತಿಯದೋ ಅಂಥಾದ್ದೇ ಸಂಬಂಧ ತಮ್ಮಿಬ್ಬರದೆಂದು ತಾನು ಭಾವಿಸಿದ್ದಳು. ಆದ್ದರಿಂದ ಯಾರು ಯೇನೇ ಹೇಳಲಿ, ತಾನು ಮಾಗ್ರಸೂರನ ಮ್ಯಾಲ ಬ್ಯಾಸರ ಮಾಡಿಕೊಳ್ಳುತ್ತಿರಲಿಲ್ಲ.. ಮಗಾ ಯಂಬ ಸಬುದದ ಹೊರತು ಯಿನ್ನೊಂದು ಮಾತು ಆಕೆಯ ಬಾಯಿ ಯಿಂದ ವುದುರುತ್ತಿರಲಿಲ್ಲ.. ಯಿದ್ಯಾವ ಸೀಮೆ ತಾಯಿ? ಯಿದ್ಯಾವ ಸೀಮೆ ಮಗ? ವಬ್ಬರಿಂದಿನ್ನೊಬ್ಬರನ್ನು ಅಗಲಿಸಿ ಪರಸ್ಪರ ಜೀವ ನಷ್ಟಾ ಮಾಡಬೇಕೆಂಬ ಯತ್ನ ಪ್ರಯತ್ನಗಳು ಪಟ್ಟಣದೊಳಗ ಕಾಲ ಧರುಮಕ್ಕನುಸಾರವಾಗಿ ನಡೆಯದೇ ಯಿರಲಿಲ್ಲ. ಆದರವು ಹಾಂಗ ನಡದು ಹೀಂಗ ಠುಸ್ಸಂದವು.. ವಟ್ಟಿನಲ್ಲಿ ಜಗಲೂರವ್ವ 'ಸೂರಾ ಸೂರಾ ಅಂದಕಂತಲೇ ಯಚ್ಚರಾಗುತ್ತಿದ್ದಳು.. ಸೂರಾ... ಸೂರಾss ಅಂದಕಂತಲೇ ಮಕ್ಕಂತಿದ್ದಳು.. ಹಾಗಿತ್ತು ಅವರಿಬ್ಬರ ಸಂಬಂಧವು ಸಿವಸಂಕರ ಮಾದೇವಾss....<noinclude><references/></noinclude> aulm6tolc1rs020myoubnqnvuglwb0g ಪುಟ:ಅರಮನೆ.pdf/೪೭ 104 77133 319632 317927 2026-05-13T14:43:08Z Shreesha Sharma 7840 /* Validated */ 319632 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=೧೬|right=ಅರಮನೆ}} {{gap}}ಮತ್ತೊಂದು ಬಾರಿ “ಹೋಯ್ ಸೂರಾ.. ಯಲ್ಲದೀ ಮಗ್ನೆ?” ಯಂದು ಕೂಗಿದಳು. ಆಕೆಯ ಆ ಕೂಗು ಯೇಟೊಂದು ಸಕ್ತಿವುತವಾಗಿ ಯಿತ್ತೆಂದರೆ ಸೂರಪರಮಾತುಮನು ವಂಚಣ ಮಂಕಾದನು. ಯೇಕೆ ಹಿಂಗಾ ಕೂಗಿದರೆಲ್ಲಿ ಯವ್ವನ ಯಂಬ ಪದ ಮೂನವಾಗ್ತದೋ ಯಂದು ಸಬುಧ ಭಾವಿಸಿತದು. ಗಾಳಿಯ ತುಂಡೊಂದು ಆಕೆಯ ಕೂಗನ್ನು ಮುದ್ರೆಯುಂಗು ರೋಪಾದಿಯಲ್ಲಿ ತನ್ನಂಗಯ್ಯೋಳಗಿಟು ಕೊಂಡು ಸುಯ್ಯಂತ ಹೋಗಿ ಅನತಿ ದೂರದಲ್ಲಿ ಗೋಪಿಕಾ ಸ್ತ್ರೀಯಂಥ ಮಣಕವೊಂದನ್ನು ತನ್ನ ಮುಂದ ತರುಬಿಟ್ಟುಕೊಂಡು ಸಿರಿಕುಷ್ಣ ಪರಮಾತಮನಂತೆ ರಾಸಲೀಲಾಯಿನೋದದಲ್ಲಿ ನಿರತನಾಗಿದ್ದ ಸೂರ ಮಾಶಯನ ಕದ್ದ ಕುಂಡಲದೊಳಗುದುರಿಸಿತು. ಅದು ಮಸ್ತಕಕ್ಕೇರಿದೊಡನೆ ಜಂಘಾಬಲ ವುಡುಗಿದಂಗಾಗಿ ಆತಂಕಕ್ಕೀಡಾದ ಪ್ರಿಯತಮೆಗೆ ಮಾತುಕರೆಯನ್ನು ಅಲಕ್ಷಿಸುವಂತಿಲ್ಲ.. ಪ್ರಿಯೆ.. ಹೋಗಿ ಯೇನೆಂದು ಕೇಳಿ ಅನುಮತಿ ಪಡೆದು ಬರುವೆನು.. ಅಲ್ಪಕಾಲದ ಯಿರಹವನ್ನು ಸಹಿಸಿಕೋ” ಯಂದು ಹೇಳಿ ಸಮಾಧಾನಪಡಿಸಿ ಶರವೇಗದಲ್ಲಿ ಕ್ರಮಿಸಿ ತನ್ನ ತೀರರೂಪಳನ್ನು ಸೇರಿತು. ಅದನ್ನು ನೋಡಿದೊಡನೆ ಆಕೆಗಾದ ಸಂತೋಷ ಅಷ್ಟಿಷ್ಟಲ್ಲ. ಅದರ ಮೂತಿಗೆ ಹುಸಿಪಟ್ಟನ್ನು ಹಾಕುತ್ತ “ನನ್ ಬಿಟ್ಟು ಯಲ್ಲೋಗಿದ್ಯೋ ನೀನು. ಯೇಟು ಬಾರಿ ಕೂಗಬೇಕೆಲೋ ನಿನ್ನ.. ಯೇಟೊತ್ ಯಾವಾಕೀನ ಅಡ್ಡಾಕೊಂಡಿದ್ದೆಲೋ... ನಿಂಗೇನು ಹೇಳೋರು ಕೇಳೋರು ಯಾರೂ ಯಿಲ್ಲಂದ್ಯಂಡೀಯಾ ಹೆಂಗೆ?” ಯಂದು ವಂದೇ ವುಸುರಿಗೆ ತರಾಟೆ ತೆಗೆದುಕೊಂಡಳು. ಆವಾಗಿದ್ದು ಅದು ಆಕೆಯ ಮುಖಮೂತಿ ಮುಂಗಯ್ಯ ನೆಕ್ಕಾಡುತ ತನ್ನ ವಯ್ಯ ಮನೆ ಭಾಷೆಯಲ್ಲಿ ಯೆನೇನೋ ಸಬೂಬು ಹೇಳಿತು. ಅದು ಆಕೆಗೆ ಅರವಾಗದೆಯಿರಲಿಲ್ಲ. ''ಸಿಕಣಪ್ಪಾ.. ನಾನಿನ್ನು ಕೂಳು ಕುಚ್ಚಿಡೋದಂತ್ತಪ್ಪಾ.. ಮಸ್ತು ವದಕನ ಬದುಕನ ಅದಾವ ಮನ್ಯಾಗ.. ನಾನೋಯ್ತಿನಿ.. ನೀನ್ಯಾವಾಗಾರ ಬಂದುಕಾ' ಯಂದು ಹೇಳಲು ಅದು ವಯ್ಯ ವಯ್ಯನೆ ಹಾಡುತ ಠಣ ಠಣ್ಣ ಜಿಕ್ಕೋತ ಜಿಕ್ಕೋತ ಸಂತೋಷದಿಂದ ಮೋಡಿ ಹೋಯಿತು. ಮಿನ್ನೇನದು ಮರೆಯಾಗಲಿದೆ ಅಂಬುವಾಗ “ವುಮಾರಿ ಕಣ ಮಗಾ.. ಕಾಲ ಸುಮಾರಾಗಯ್ತಿ' ಯಂದು ಮರೆತಿದ್ದ ಮಾತನ್ನು ಕೂಗಿ ಹೇಳದೆಯಿರಲಿಲ್ಲ ಜಗಲೂರೆವ್ವ.... {{gap}}ಸಮಾಧಾನದ ವುಸುರು ಬಿಟ್ಟು ಸುತ್ತನ್ನಾಕಡೆ ಕಣ್ಣಾಡಿಸಿ ಸುತ್ತಮುತ್ತ ನೋಟ ಮಾತ್ರದಿಂದ ಅಗೋಚರ ಬೇಲಿ ರಚನೆ ಮಾಡಿದಳು. ಮುದ್ಯೋನು ಮನೀಗೆ ಬಂದಾನೋ, ಯಿಲ್ಲಾ ಅರಮನ್ಯಾಗಯಿದಾನೋ? ವುಂಡೋ, ಯಲ್ಲಾ<noinclude><references/></noinclude> 8i4nr9eqbig9dpom0vscsrui4prd0kg ಪುಟ:ಅರಮನೆ.pdf/೪೮ 104 77134 319633 317928 2026-05-13T14:43:18Z Shreesha Sharma 7840 /* Validated */ 319633 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=ಅರಮನೆ|right=೧೭}} ವುಪಾಸ ಅದಾನೋ ಯಂದನಕಂತ ಅನುವಾದ ಹುಲ್ಲಿನ ಹೊರೆಯನ್ನು ಸರಂತ ಯತ್ತಿ ತಲಿಮ್ಯಾಲ ಯಿಟುಕೊಂಡು, ಯಿನ್ನೊಂದು ಕಮ್ಮೊಳಗೆ ಘನುವಾದ ಕುಡುಗೋಲನ್ನು ಹಿಡಕೊಂಡು ಮರ ಕಡೇಕಿದ್ದ ಹಾದಿಯ ಮ್ಯಾಲ ದೊಪ್ಪೆಂದು ಹೆಜ್ಜೆಯಿಟೇಟಿಗೆ ಮೂರೊಳಗೆ ಮೊರಮನ ಖಡುಗದ ತುದಿಮಾಲಿದ್ದ ಗಜನಿಂಬೆ ಹಣ್ಣು ಬಿದ್ದು ವುರುಳಿಕೋತ ವುರುಳಿಕೋತ ಯಸನೋಪಾಸನೆ ಯಲ್ಲಿ ನಿರತನಾಗಿದ್ದ ಪೂಜಾರಿ ಜೆಟ್ಟಿಂಗಪ್ಪನ ಮುಂದೆ ನಿಂತಿತು. ಆಕೆ ಯಿನ್ನೊಂದು ಹೆಜ್ಜೆಯನ್ನು ದೊಪ್ಪೆಂದು ಯಿಡಲು ಮದ್ಯಾಣದ ಸುಖ ಬಿಸಿಲಿಗೆ ತಮ್ಮ ಫಳಫಳನೆ ಹೊಳೆಯುತಲಿದ್ದ ಮಯ್ಯ ಚೆಲ್ಲಿ ಮಲಿಕ್ಕಂಡಿದ್ದ ಸರುಪಗಳು ಹೆದರಿ ತಮ ತಮ್ಮ ಬಿಲಪಲ ಸೇರಿಕೊಂಡವು. ಆಕೆ ಮತ್ತೊಂದು ಹೆಜ್ಜೆಯನ್ನು ದೊಪ್ಪೆಂದು ಯಿಡಲು ಅಮರಾವತಿ, ವಾಮನ, ಕುಮುದ, ಅಂಜನ, ಪುಷ್ಪದಂತ, ಸಾರುವ ಭವುಮ, ಸುಪ್ರತೀಕ ಯಂಬುವ ಅಷ್ಟದಿಗ್ಗಜರು ತಮ್ಮ ತಮ್ಮ ವಾಸಾಸ್ಥಾನಗಳಿಂದ ಹೊರಬಂದು ಪ್ಲಾ.. ಹಾ.. ಜಗಲೂರವ್ವ ಯಂಬ ನರಮಾನ್ನವಳೇ ಯಂದು ನೋಡುತ ವುದ್ದರಿಸಿದರು. ಆಕೆಯ ಅಗ್ನಿ ಸದ್ರುಶ ನೋಟ ತಗುಲಿದರೆಲ್ಲಿ ತಮ ತಮ್ಮ ರೆಕ್ಕೆ ಪುಕ್ಕಗಳು ಪುರುಪುರನ ವುರಿದು ಹೋಗುವಮೋ ಯಂದು ಹೆದರಿದ ಬಾನಾಡಿಗಳು ತಾವಿದ್ದ ಜಾಗಗಳಲ್ಲಿಯೇ ಗಪ್ ಚುಪ್ ಅಂತ ಅವಿತಿಟ್ಟುಕೊಂಡವು. ವಟ್ಟಿನಲ್ಲಿ ಕಪ್ಪತ್ರಾಯ ಗುಡ್ಡವೇ ಸ್ತ್ರೀಯೋಲ್ವಳ ರೂಪಧಾರಣ ಮಾಡಿ ನಡೆಯುತ್ತಿರುವುದೋ ಯಂಬ ಭ್ರಮೆಯನ್ನು ಸಚರಾಚರಕ್ಕುಂಟು ಮಾಡುತಲಿದ್ದ ಜಗಲೂರೆವ್ವನ ಭವ್ಯಾಕ್ರುತಿಯನ್ನು ಯೇಟು ಹೊಗಳಿದರೂ ಕಡಿಮೆಯೇ ಸಿವಸಂಕರ ಮಾದೇವಾss {{gap}}ಅನಾದಿಕಾಲದಿಂದ ರಾಜಮಾರಾಜರಿಂದಲೂ, ಸಾಮಂತ, ಮಾಂಡಲೀಕ ಪಾಳೆಗಾರರಿಂದಲೂ ಯಲ್ಲಾಪ್ರಕೊರಚರಟ್ಟಿಕಳ್ಳಕಾಕರಿಂದಲೂ ಪೂಜೆ ಪುನಸ್ಕಾರ ಮಾಡಿಸಿಕೊಂಡಿರುವಂಥಾ.. ವುಡೇಗೊಳ್ಳ ಮಲೆಯೊಳಗೆ ನೆಲೆಗೊಂಡಿರುವಂಥಾ.. ಜಗಲೂರಜ್ಞನ ವರಪ್ರಸಾದ ಸಂಜಾತೆಯಾದ ಜಗಲೂರೆವ್ವ ಯಂಥಾಕಿ ಯಂದರೆ ಸಾವಿರ ನಾಲಗೆಗಳ ತಾಕತ್ತನ್ನು ತನ್ನೊಂದೆ ನಾಲಿಗೆ ವಾಲ ಯಿಟುಕೊಂಡಿರುವಾಕಿ, ಬಯ್ದಳ ಫಳಾರದಂಗಡಿಯನ್ನು ತನ್ನ ಗಂಟಲೊಳಗೆ ಯಿಟ್ಟುಕೊಂಡಿರವಾಕಿ, ಭಯದ ಸುಗ್ಗಿ ವಕ್ಕಲಾಡುವಲ್ಲಿ ನಿಷ್ಣಾತೆಯಂದು ಹೆಸರಾಗಿರುವಾಕಿ, ಯಿವೆಲ್ಲಕ್ಕಿಂತ ಮಿಗಿಲಾಗಿ ಅಂತಃಕರಣದ ಕೊಪ್ಪರಿಗೆಯನ್ನು ತನ್ನ ರುದಯದಲ್ಲಿ ಯಿಟ್ಟುಕೊಂಡಿರುವಾಕಿ.. ಯಿಂಥ ಜಗಲೂರವ ವಂದೊಂದೆ ಹೆಜ್ಜೆಯನ್ನಿಕ್ಕುತ್ತ.. ಭೂಮಾಯಿ ಯನ್ನು ಪುಳಕಗೊಳಿಸುತ್ತ.. ವಬ್ಬೊಬ್ಬರ<noinclude><references/></noinclude> or072ak96uon1w8rx2147rnbhgm1t26 ಪುಟ:ಅರಮನೆ.pdf/೪೯ 104 77135 319634 317929 2026-05-13T14:43:27Z Shreesha Sharma 7840 /* Validated */ 319634 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=೧೮|right=ಅರಮನೆ}} ಸುಖದುಕ್ಕಗಳನು ಯಿಚಾರಿಸುತ್ತ ಥಳಗೇರಿಯನ್ನು ಪ್ರವೇಶ ಮಾಡಿ ತಮ್ಮ ಮನೆಯಂಗಳದಲ್ಲಿ ತಲೆಮ್ಯಾಲಿದ್ದ ಹುಲ್ಲಿನ ಹೊರೆಯನ್ನು ದೊಪ್ಪಂತ ಯತಿ ಹಾಕಿದೇಟಿಗೆ ಅಜುಬಾಜುಕಿದ್ದ ಮನೆಗಳ ಮಾಡಿನಿಂದ ತಪತಪಾಂತ ಮಣ್ಣು ಸುರಿಯಿತು. ತಮ್ಮ ತಮ್ಮ ಮನೆಗಳಿಂದ ಹೊರ ಬಂದು ಜನ ಆಕೆಯ ದರುಸನ ಪಡಕೊಂಡರು. ಆಕೆಯ ಕಯ್ಲಿದ್ದ ಕುಡುಗೋಲು ಬಿಸಿಲನ್ನು ಪ್ರತಿಫಲಿಸಿದೇಟಿಗೆ ಅರಮನೆಯ ವುಪ್ಪರಿಗೆ ವಂಟಿಗಣ್ಣನ್ನು ಮುಚ್ಚಿಕೊಂಡಿತು.... {{gap}}ವಳಗಡೀಕಿರೋ ತನ್ನ ಗಂಡ ಹೊರೀಕೆ ಬರಲೀ ಅಂತ ವಂದು ನಿಡುಸುಯ್ದಳು. ಕೆಮ್ಮಿ ಕ್ಯಾಕರಿಸಿದಳು. ಯೇನು ಮಾಡುತ್ತಿದ್ದಾನೀ ಮುದೇ... ಯಂದು ಗೊಣಗಿದಳು. ವಂದೊಂದೆ ಹೆಜ್ಜೆಯನಿಕ್ಕುತ ವಳಗಡೀಕೆ ಹೋಗಿ ನೋಡುತ್ತಾಳೆ.. ವ೦ದು ಪುರುಷಾಕುತಿಂರು ಮುಂಡಕ್ಕೆ ವಂದು ದೋತರವನ್ನುಟ್ಟುಕೊಂಡು, ತಲೆಮ್ಯಾಲ ಎಂದು ಮುಂಡಾಸು ಬಿಕ್ಕೊಂಡು, ಹಣೆಮಾಲ ರೂಪಾಯಗಲದೋಟು ಕುಂಕುಮದ ಬೊಟ್ಟಿಟ್ಟುಕೊಂಡು ಬಾಯಿಂದ ಯೇನೋ ವಟಗುಟ್ಟುತ ಕರಿಗಂಬಳಿ ಗದ್ದುಗೆ ಮ್ಯಾಲ ವಟ್ಟೆ ಮದಲಿಂಗನಂಗ ಕೂಕಂಡಿರೋದು ಕಾಣಿಸಿತು. ಯಾರಿದ್ದೀತೀತ ಅಂತ ಸನೀಕ ಹೋಗಿ ನೋಡುತ್ತಾಳೆ. ತನ್ನ ಗಂಡ.. ನಗು ಬಂತು.. ನಕ್ಕರಲ್ಲಿ ಅನ್ಯಾಯವಾಗುವುದೋ ಯಂದು ಹಿಂದೇಟು ಹಾಕುತ " ಯ್, ವಳ್ಳಿ ಮದ್ದಿಂಗನಗೆ ಅಲಂಕಾರ ಮಾಡ್ಕೊಂಡು ಕೂಕಂಡಿದ್ದೀಯಲ್ಲಾ.. ವಂದು ಗಾವಾದ ಪಿಳ್ಳೇನ ತಗದು ನಾನೇ ನಿಂತಿದ್ದು ಲಗುನ ಮಾಡಲೇನು?” ಯಂದು ಚಾಸ್ಪಿ ಮಾಡಿದಳು. ಅದಕ್ಕಾತನ ಬಾಯಿಯಿಂದ ದುಸುರಾ ಮಾತು ಹೊಂಡಲಿಲ್ಲ. ಬಗಬಗ್ಗಿ ನೋಡಿ "ಯಾಕ ಮಾರೀನ ವಂಥರಾ ದಿಮ್ಮಗ ಮಾಡಕಂಡಿಯಲ್ಲಾ?” ಅಂದಳು. ಅದಕೂ ಆತನ ಬಾಯಿಯಿಂದ ಮಾತು ವುದುರಲಿಲ್ಲ.. ಕುಂತ್ತಾ.. ಯೇಟೊತ್ತು ಕುಂತಗಂಡಿದ್ದೀಯೋ ಕುಂತಗಂಡಿರು.. ಕುಂಡಿ ಸುಟ್ಟ ಮಾಲ ನೀನೇ ಯದ್ದೇಳುತೀ... ಯಂದು ತನ್ನ ಪಾಡಿಗೆ ತಾನು ಮನೆಯ ದಗದ ವದಕನಕ್ಕೆ ತೊಡಗಿದಳು. ವಟವಟ ಅನಕಂತ ಕಸ ಮುಸುರಿ ಮಾಡಿದಳು, ಮುದ್ದೆ ತಿರುವಿಟ್ಟು ಯಿಂಡಿ ಅರೆದಿಟ್ಟು “ಯ್ಯೋಯ್... ವುಣುವಂತಿ, ಕಯ್ಯಕಾಲು ಮಾರೀನ ತೊಳಕಂಡು ಬಾ” ಅಂದಳು. ಅದಕ್ಕೂ ಆ ಸರೀರ ಮಿಸುಕಾಡಲಿಲ್ಲ.. ವಡಲು ಸುಟ್ಟಮ್ಯಾಲ ನೀನೇ ವುಂಬುತಿ ಯಂದು ವಟಗುಟ್ಟುತ್ತ ತಾನೊಂದೆರಡು ತುತ್ತು ಗಂಟಲಿಗೆ ನೂಕಿ ವಂದೂವರೆ ತಂಬುಗೆ ನೀರು ಸೊಂಡಿ "ಯಾಕಿಂಗ ಕುಂತಗುಡಿರ ಬೌದೀತ? ನಾನೋಗೋ ಹೊತ್ತಿನಾಗ ಬೇಷಿದ್ದ.. ಬರೋ<noinclude><references/></noinclude> 9l09phmy1umoeanlzt6z6rl2neq0z0e ಪುಟ:ಅರಮನೆ.pdf/೫೧ 104 77136 319636 317931 2026-05-13T14:43:47Z Shreesha Sharma 7840 /* Validated */ 319636 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=೨೦|right=ಅರಮನೆ}} ನನ ಗಂಡ ಯಾಕೋ ಮಾತಾಡುವಲ್ಲ.. ಯಂದಾಕೆ ಕೂಗಲು ಅವರೊಂದೆ ಅಲ್ಲದೆ ಅನೇಕರು ತಮ್ಮ ತಮ್ಮ ಮೂಲೆಗಳಿಂದ ಬಂದರು. ಯೋನಾಗೇತವ್ವಾ.. ಯೋನು ಬುಟ್ಟಯ್ಯವ್ವಾ.. ಅನಕಂತ ಬಂದು ಮೋಬಯ್ಯನನ್ನು ನೋಡಿ ಯಿಸುಮಿತಗೊಂಡರು. ಅಲಲಲಾ ಯಂದನಕಂತ ತಮ್ಮ ತಮ್ಮ ಮೂಗುಗಳ ಮ್ಯಾಲ ಬೊಟ್ಟಿಟ್ಟುಕೊಂಡರು.. “ಯೇನು ಡವುಲಪಾss ಯೇನು ಡವುಲ, ಮಡಿದೋತರ ವುಟ್ಟವನಲ್ಲಾ ಯೇನು ಡವುಲಪ್ಪಾss ಯೇನು ಡವಲು.. ತಲೆ ಮ್ಯಾಲ ರುಮಾಲ ಬಿಗಿದವನಲ್ಲಾ.. ಯೇನು ಡವುಲಪ್ಪಾss ಯೇನು ಡವುಲು.. ಹಣೆಮಾಲ ರೂಪಾಯಿಯೋಟಗಲ ಕುಂಕುಮ ಬೊಟ್ಟಿಟ್ಟುಕೊಂಡವನಲ್ಲಾ.. ಯೇನು ಡವುಲಪ್ಪಾss ಯೇನು ಡವುಲು.. ಯಾಕಪ್ಪಾ ತಂದೆ? ಯದರಿಕೆ ಬರೋ ಹಂಗ ಕುಂತಗಂಡೀ, ನೆಲ ಯೇನಾರ ಹಿಡಕಂಡಯ್ಯಾ.. ಕುಂಡಿಗೇನಾರ ಗೆದ್ದಲು ಹತ್ತಯ್ಯಾ..ಯೇನು ಥಳಗೇರಿ ಮ್ಯಾಲ ಮುನುಸಾss ಯಿಲ್ಲಾ ಕಚ್ಚಿ ಹಿಡಿದ ಹೆಂಡತಿ ಮ್ಯಾಲ ಮುನುಸಾ... ನೀನಿಂಗ ಕುಂತಗಂಡಿರೋದು ನಮಗ ಪಾಡು ಕಾಣುವಲ್ಲದು..ನೀನು ಹಿಂಗ ಮಾತಾಡದಿರೋದು ನಮಗ ಪಾಡು ಕಾಣುವಲ್ಲದು” ಯಂದು ಅನಕಂತ ಆತನ ಸುತ್ತಮುತ್ತ ಅಷ್ಟದಿಕ್ಕುಪಾಲಕರಂಗ, ಪಂಚ ಪರಮೇಸೂರರಂಗ ನೆರೆದು ಕಣ್ಕಣ್ ಬಿಟ್ಟರು. ಬಾಯಿ ಬಾಯಿ ಬಿಟ್ಟರು. ಆತನ ಸರೀರವನ್ನು ಮುಟು ಮುಟ್ಟಲಕಂತ ಹಿಂದಕ ಮುಂದಕ ಜರುಗಾಡಿದರು. ಕೊನೀಕಿದ್ದು ಅವರೆಲ್ಲ “ಯಪ್ಪಾ ಜಗಲೂರೆವ್ವ..ಯೀತನ ಮಯ್ಯಾಗ ಹೊಕ್ಕೊಂಡಿರೋದು ದೆವ್ವಾನೋ, ದೇವರೋ.. ಅಲ್ಲಾಗಲೊಲ್ಲದು ಕಣವ್ವಾ...ಯಂದು ಹೇಳುತ ಹಿಂದ ಹಿಂದಕ ಜರುಗಲು ಆ ಸಾದ್ವಿಗೆ ದುಕ್ಕ ವುಮ್ಮಳಿಸಿ ಬಂತು. ಯೀ ನರ ಜಲುಮ ನೀರಮ್ಯಾಗಳ ಗುಳ್ಳೆಯಿದ್ದಂಗೆ.. ನಾಳೆ ಹೋಗೋದು ಯವತ್ತೆ ಹೋಗಲಿ ಯಂದು ದ್ರುಢ ನಿಶ್ಚಯ ಮಾಡಿದ ಆಕೆಯು ಯರಡು ಸೂಟ ಮುಂದಕ ಜರುಗಿ “ಅಲಲಲಾ... ತಲೆಯಿದ್ದಾಗಲೆ ಮೊಣಕಾಲ ಚಿಪ್ಪಿಗೆ ಪಟ್ಟಾನ ಕಟಬುಟ್ಟು ಕುಂತಗಂಡೀಯಲ್ಲಾ.. ವಂದುss ಪ್ಲಾ.. ಅನುವಲ್ಲೆಲ್ಲಾ.. ವಂದುಹೂಂ ಅನುವಲ್ಲೆಲ್ಲಾ.. ನಾನಿಂಗ ಹೋಗಿ ಹಂಗ ಬರೋ ಹೊತ್ತೆ ನೀನು ನಿನ್ನ ಸರೀರಾನ ಹಾದೀಲಿ ಹೋಗೋ ದೆವ್ವಕ್ಕೆ ಮಾಡ್ಕೊಂಡೀಯಾ, ಬೀದೀಲಿ ಹೋಗೋ ಮಾರಮ್ಮಗ ಮಾರಿಕೊಂಡೀಯಾ” ಯಂದು ಯದೆ ಯದೆ ಬಡುಕೊಳ್ಳುತ ಅಬ್ಬರಿಸಿದಳು... {{gap}}ಆಗ ಸರೀರವು ಅವುದೋ ಅಲ್ಲವೋ ಎಂಬಂತೆ ಮಿಸುಕಾಡಲಿಕ್ಕ ಸುರುವು ಮಾಡಿತು. ಕನ್ನೊಳ್ಳಿಸಿ ಸುತ್ತಮುತ್ತ ನೋಡಿತು....<noinclude><references/></noinclude> t2ugy2dbafdh2qfg330knw1z17eaec3 ಪುಟ:ಅರಮನೆ.pdf/೫೨ 104 77137 319637 317932 2026-05-13T14:43:57Z Shreesha Sharma 7840 /* Validated */ 319637 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=ಅರಮನೆ|right=೨೧}} {{gap}}“ಯಲಮ್ ನರಮಾನ್ನವರುಗಳಾss.. ಮುಟ್ಟಿ ನನ್ನ ಮಯ್ಲಿಗಿ ಮಾಡಬ್ಯಾಡೂರಿ, ಮಾತಾಡಿ ನನ ಕಿವಿಗಳನ ಮಯ್ಲಿಗೆ ಮಾಡಬ್ಯಾಡ್ರಿ” ಯಂದದು ಅನ್ನಲು ಅವರೆಲ್ಲ ಗಪಚುಪ್ಪಾದರು. ಅವರ ಪಯ್ಕೆ ಹಿರೀಕನಿದ್ದ ಗೊಡ್ಡಯ್ಯನು “ಮಯ್ಲಿಗಿ ಆಗುವಂಥಾದ್ದೇನುಂಟು ನಿನ ಮಮ್ಮೊಳಗ” ಅಂತ ಕೇಳಲದು “ನನ್ನೊಳಗೆ ಆದಿಸಗುತಿ ವಸ್ತಿ ಮಾಡುವಳೆ. ಹರಕತ್ತು ಮಾಡಿ ತೊಂದರೆ ಕೊಡಬ್ಯಾಡೂರಿ” ಅಂದಿತು. ಆಗಿದ್ದು ಯಿನ್ನೊಬ್ಬ ಹಿರೀಕನಾದ ಯರಬೋರಯ್ಯನು “ತಮ್ಮಾ ಮೋಬಯ್ಯಾ.. ಯೇನಾಡ್ಲಿಕತ್ತಿಯಪ್ಪಾ”ಯಂದು ಕೇಳಲದು “ನಾನು ಮೋಬಯ್ಯನಲ್ಲಾ.. ಆತನ ಸರೀರ ಮಾತಾಡ್ತಿರೋದು..” ಅಂದಿತು. ಅದಾಡಿದ ಮಾತು ಕೇಳಿ ಯಲ್ಲಾರು ಸರೀರ ನೋಡಲಕ ಮೋಬಯ್ಯನದು.. ಆದರಾತನಲ್ಲ ಮಾತಾಡ್ತಿರೋದು ಅಂದರೇನಯ್ಯ? ಯಂದನಕಂತ ಪರಸ್ಪರ ಮಿಕಿ ನೋಡಿಕೊಂಡರು.... {{gap}}ವಂಚಣ ಮೂರ್ಛೆ ಹೋಗಿದ್ದ ಜಗಲೂರೆವ್ವ ಮರುಚಣ ಚೇತರಿಸಿಕೊಂಡು.. ಯಿದು ನನಗಂಡನ ಸರೀರ.. ನಾನು ಜ್ಞಾಪಾನ ಜತುನ ಮಾಡಿರೋ ಸರೀರ.. ಯಿದು ನನ ಗಂಡನದಲ್ಲ ಅಂದರ ಯೇನರ್ತ..? ಯಂದನಕಂತ ಮುಲುಮುಟ್ಟಲಕ ಹೋಗಲು ಅದು ಹಿಂದ ಹಿಂದಕ ಜರುಗಿ “ಖಬಲ್ದಾರ್‌.. ಮುಟ್ಟೇಯಾ ಜ್ವಾಕೆ. ನಿನ್ನ ಗಂಡ ನನ್ನೊಳಗೆ ಅದಾನಂದರ ಅದಾನ, ಯಲ್ಲಾಂದರ ಯಿಲ್ಲ.. ವಂದುಕಾಲಕ ನೀನವಗ ಹೆಣೆಯಿದ್ದಿರಬೌದು.. ಆದರ ಲೀಗಲ್ಲ. ನಿನಗೂ ಅವಗೂ ಯಿದ್ದ ರಿಣ ತೀರಯ್ತಿ.. ಮರು ಮಾತಾಡದೆ ಯಿಲ್ಲಿಂದ ಹೊಂಟೋಗಿ ಬಿಡು.” ಯಂದು ಗದ್ದರಿಸಿತು.. ತನ್ನೊಂದೊಂದು ಮಾತುಗಳಿಂದ ಆಕೆಯನ್ನು ದೂರ ತಳ್ಳಿತು.. ಆಕೆ ಬೀಳೋದು, ಪುಟದಿದ್ದು ಬರೋದು ಮಾಡಿದಳು..... {{gap}}ನಿಟಾರನೆ ನೆಲಮುಗುಲಿಗೇಕಾಗಿ ನಿಂತುಕೊಂಡ ಆಕೆಯು.. ಅಲಲಲಾS ಯಾವ ಅವ್ವ ಯೇನು ಕಥೀSS... ನಾನಿಲ್ಲದ ಯ್ಯಾಳ್ಯಾಗ ಅದೆಂಗ ತೂರಿಕೊಂಡ್ಡು ನನಗಂಡನ ಮಯ್ಯೋಳಗ, ನನ್ನೆಂಡ್ತಿ ಬರಲಿ ತಡಿ ಅಂತ ನನ ಗಂಡ ಆಕೇನ ತರುಬಬೌದಿತ್ತಲ್ಲಾ ಯಂದು ಮುಂತಾಗಿ ಅರುಭಟಿಸುತ್ತಿರಲು ಆ ಸರೀರವು “ನಾನೇ ನಿನ ಗಂಡನ್ನ ಹೊರ ಹಾಕಿ ತಾಯಿಗೆ ಆಶ್ರಯ ಕೊಟೀನಿ... ನೀನು ಬಯ್ದು ರವುರವ ನರಕಕ್ಕೆ ಹೋಗಬ್ಯಾಡ.. ನನ್ನ ಪಾದಪೂಜೆ ಮಾಡಿ ಸಾಂಬವಿಗೆ ಸರಣಾಗು.. ತಿಳಿತಾ” ಯಂದಿತು.... {{gap}}ಅದಕಿದ್ದು ಆಕೆಯು.. “ನೀನ್ಯಾವಾಕಿಯೇ ಆಗಿರು.. ಆದರೆ ನೀನು ನನ<noinclude><references/></noinclude> m5stilys5kv8fyrmawm0fuc71rzlp2p ಪುಟ:ಅರಮನೆ.pdf/೫೩ 104 77138 319638 317933 2026-05-13T14:44:09Z Shreesha Sharma 7840 /* Validated */ 319638 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=೨೨|right=ಅರಮನೆ}} ಗಂಡನ ಸರೀರದೊಳಗೆ ತೂರಂಡಿರೋದು ಘನಘೋರ ಅಪರಾಧ.. ನಿನಗೆ ನಾನು ಸರಣೋಗುವುದೆಂದರೇನು? ನೀನೆಂಗ ನನ ಗಂಡನ ಸರೀರದಿಂದ ಹೊರ ಹೋಗೋದಿಲ್ಲೋ ನಾನು ನೋಡ್ತೀನಿ” ಯಂದು ಗುಡು ಗುಡುಗಿದಳು.. ಸರೀರವು ತನ್ನ ನೋಟ ಮಾತ್ರದಿಂದ ಆಕೆಯನ್ನು ಮನೆಯಿಂದ ಹೊರತಳ್ಳಿತೆಂಬಲ್ಲಿಗೆ... {{gap}}ಅತ್ತ ಕಡಪಾ ಯಂಬ ಪಟ್ಟಣದೊಳಗೆ ಥಾಮಸು ಮನೋ ಸಾಹೇಬನು ನೀನು ನಿನ್ನ ಕುಟುಂಬ ಸಲುವಲು ಮುನ್ನೂರೆಕರೆ ಯಿಟ್ಟುಕೋ ಯಂದು ಚಿನ್ನೋಬುಳ ರೆಡ್ಡಿಗೂ, ನೀನು ನಿನ್ನ ಕುಟುಂಬ ಸಲುವಲು ಮುನ್ನೂರಕೆರೆ ಯಿಟ್ಟುಕೋ ಯಂದು ವುಯಾವುಲ ಕೇಸುವರೆಡ್ಡಿಗೂ ಹೇಳಿ ನಿಗದಿ ಪಡಿಸುತ್ತಿರುವಾಗ್ಗೆ... {{gap}}ಪೆದ ತಿಮ್ಮಾರೆಡ್ಡಿ ಮತ್ತಾತನ ಸಂಗಡಿಗರು ನರಸಿಮ್ಯಸ್ವಾಮಿಗೆ ಪೂಜೆ ಸಲ್ಲಿಸಿ ರಣಯೀಳ್ಯ ಪಡೆಯಲಕೆಂದು ಕದಿರಿಯತ್ತ ಪ್ರಯಾಣ ಬೆಳೆಸಿರುವಾಗ್ಗೆ.... {{gap}}ಅತ್ತ ಜರುಮಲಿ, ಮೂರಂಚಲ್ಲಿ ನುರಿತ ಬೇಟೆಗಾರರೂ, ನಿಷ್ಣಾತ ಗೂಢಾಚಾರರೂ ಆದಂಥ ಗುತ್ತಪ್ಪ, ವತ್ತೆಪ್ಪರೆಂಬ ಅವಳಿ ಸೋದರರು ನಿಚ್ಚಾಪುರದ ಕಡೆ ಹೊಂಟಿದ್ದ ಪಾರಿವಾಳವನ್ನು ಬಾಣ ಗುರಿಯಿಟ್ಟು ಕೆಡವಿ ಅದರ ಕಾಲ ವುಂಗುಟಕಿದ್ದ ಪತ್ತರವನ್ನು ಬಿಚ್ಚಿ ಅಕ್ಕರಗಳನ್ನು ನೋಡಿ ತಿಕಮಕರಾಗಿರುವಾಗ್ಗೆ.... {{gap}}ಅತ್ತ ಜೊನ್ನಗಿರಿಂರು ರಾಜ ಕದಿರೆ ಪ್ಪ ನಾಯಕನೆದುರು ಹಾಜರುಪಡಿಸಲೆಂದು ಮದ್ದಿ ಕೇರಿ ಸಂತ್ರಸ್ತರನ್ನು ಸಕರು ದರಗುಟ್ಟಿಯಳದೊಯ್ಯುತ್ತಿರುವಾಗ್ಗೆ.. ಯಿತ್ತ ಕುದುರೆಡವು ಪಟ್ಟಣದಲ್ಲಿ ರಾಜಮಾತೆ ಭಯೋಮಾಂಬೆಯು ಪಿಕದಾನಿ ಹಿಡಿಯೋ ಮೋಬಯ್ಯನನ್ನು ನೀನು ಕರೆದುಕೊಂಡು ಬಾ, ನೀನು ಕರೆದುಕೊಂಡು ಬಾ ಯಂದು ವುಂಡುವುಪವಾಸಿ ಬಳಸಿ ಬೆಮ್ರಚಾರಿಗಳಂತಾಗಿದ್ದ ವಂದಿಬ್ಬರು ಸಮ್ಮಿಕರನ್ನು ಥಳಗೇರಿಗೆ ಕಳುವಿ ಬಂದನೋ ಬಾರನೋ ಯಂಬ ನಿರೀಕ್ಷೆಯಲ್ಲಿರುವಾಗ್ಗೆ.. ರಾಜಕುಮಾರ ಕಾಟಯ್ಯ ನಾಯಕನು ತನ್ನ ಗುದದ ಬೊಕ್ಕೆ ಯಿಲಾಜು ಮಾಡಿಕೊಳ್ಳುವ ಸಲುವಾಗಿ ತಾನು ಪಗಡೆಯಾಟ ದಲ್ಲಿ ಗೆದ್ದದ್ದಂಥಾ ಮಾಯಾವಿ ಪಂಚಲೋಹದ ಗಿಂಡಿಯೊಳಗೆ ನೀರು ತುಂಬಿಕೊಂಡು ಹೊರಕಡೀಕಂತ ಕಡುದಮ್ಮನ ಹಳ್ಳದ ಸಾಲಿನ ಕಡೇಕ ಗುಟ್ಟಾಗಿ ಹೋಗುತ್ತಿರುವಾಗ್ಗೆ ಸಿವ ಸಂಕರ<noinclude><references/></noinclude> kz5fmef0djmy3wmaph46dgh16qw8dtg ಪುಟ:ಅರಮನೆ.pdf/೫೪ 104 77139 319639 317934 2026-05-13T14:45:21Z Shreesha Sharma 7840 /* Validated */ 319639 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=ಅರಮನೆ|right=೨೩}} ಮಾದೇವಾ$$ {{gap}}ಗುಡಿಹಿ೦ದಲ ಮೂಳೆ ಮೋಬಯ್ಯನ ಸರೀರದೊಳಗೆ ಸಾಂಬವಿ ವಸ್ತಿ ಮಾಡಿರುವಳೆಂಬ ವರಮಾನವನ್ನು ತನ್ನ ಮಯ್ಯ ಪದರೊಳಗೆ ತುಂಬಿಕೊಂಡು ಗಾಳಿ ಯಿತ್ತಲಿಂದ ಅತ್ತ ಸುಳುದಾಡುತ ಹೋತು, ಕಾಗೆ, ಗುಬ್ಲಿಯೇ ಮೊದಲಾದ ನಿರುಪದ್ರವಿ ಪಕ್ಷಿಗಳು ಆ ವರಮಾನದ ಮೂಟೆಯನ್ನು ತಮ್ಮ ತಮ್ಮ ಹೆಗಲ ಮ್ಯಾಲ ಹೇರಿಕೊಂಡು ಯಿತ್ತಲಿಂದ ಅತ್ತ ಹಾರುತ್ತ ಹೋದವು. ಯೀ ಪರಮಾನ್ನ ಸದ್ರುಸ ಸುದ್ದಿಯನ್ನು ಮಂದಿ ತಮ ಬಾಯಿಯಿಂದ ಖಿನ್ನೊಬ್ಬರ ಕಿವಿಗೆ ಬಡಬಡಿಸತೊಡಿಗದರು. ಬಾಯಿ ಕಿವಿಗಳುಳ್ಳ ಮಂದಿ ಪಯ್ಲಿ ಕೆಲವರು ಮುಖ ಮಾರುನ ಮಾಡಿಕೊಳ್ಳೋದ ಬಿಟ್ಟು, ಯಿಸಲ್ಟನ ಕಾರೈವುಗಳನ್ನು ಆರಂಬರಕ್ಕೆ ಬಿಟ್ಟು ಕೂಸು ಕಂದಮ್ಮ ಗಳನ್ನು ತಮ್ಮ ತಮ್ಮ ಯದೆಗವುಚಿಕೊಂಡು, ಅಂಗಿ, ಪಂಚೆ, ಕುಬುಸಗಳಿಗೆ ಗುಂಡಿ ಹಾಕಿ ಕೊಳ್ಳುತ, ಚಲ್ದಾಣಗಳಿಗೆ ಲಾಡಿ ಬಿಗಿದು ಸರಗಂಟು ಹಾಕುತ, ಬಾಯೊಳಗೆ ಬಾನದುಂಡೆಯನ್ನು ನಮಲೋದು ಮರೆಯುತ, ಕಯ್ಯ ತಿರುಮತ, ಕಾಲು ಬೀಸಿ ಬೀಸಿ ಹಾಕೂತ ಹಾಕೂತ ಥಳಗೇರಿಯ ಗುಡಿ ಹಿ೦ದಲ ಮನೆಗೆ ಯಡತಾಕಿ ಮನೆಮುಂದಲ ಪಳುಗಟ್ಟೆ ಮ್ಯಾಲ ಮಟ್ಟಸವಾಗಿ ಕೂಕಂಡಿದ್ದ ಮೋಬಯ್ಯನನ್ನು ಯಿಸುಮಯದಿಂದ ನೋಡಿ “ಹಾಯ್ ಸಿವನೇ ಸಿವಸಂಕರ ಮಾದೇವಾss” ಯಂದುದ್ಧಾರ ತೆಗೆಯೂತ ತಮ್ಮ ತಮ್ಮ ಮನೆಗಳಿಗೆ ವಾಪಾಸಾಗ ಲಾರಂಭಿಸಿದರು. ವಜ್ರಾಲ ಸೋಲಪ್ಪ ಪುಂಗಿ ಪುಲ್ಲಪ್ಪ, ಮುತ್ತೇರಿ ಮಲ್ಲವ್ವ ಬೋರಯ್ಯರೆ ಮೊದಲಾದ ಹಿರೀಕರು ಗುಡ್ಡದ ಹಿಂದು ಮುಂದುಲ ಗಂಡು ಕಲ್ಲುಗಳಂಗೆ ನೆರೆದು ಮೂಗಿನಿಂದಲೂ ಕಣ್ಣೀರು ಸುರಿಸುತಲಿದ್ದ ಜಗಲೂರೆವ್ವಗೆ ಪರಿಪರಿಯಿಂದ ಸಮಾಧಾನ ಹೇಳುತಲಿದ್ದರು. ಆಜುಡಲವ್ವ ಗಾದೀರಮ್ಮ, ವುಲಿಗೆವ್ವ ಯಲ್ಲಮ್ಮ ಯಲ್ಲಮ್ಮ ಅಲ್ಲೆಮ್ಮರೇ ಮೊದಲಾದ ನಿತ್ಯ ಸುಮಂಗಲೇರು ಅವ್ವನ ಸಾಲಂಕ್ರುತ ಹಡಲಿಗೆಯನ್ನು ತಮ್ಮ ತಮ್ಮ ತಲೆ ಮ್ಯಾಲ ಹೊತ್ತು ಕೊಂಡಲ್ಲಿಗೆ ಬಂದು ಚವುಡಿಕೆಗಳನ್ನು ಮೀಟುತ್ತ “ಸಾಂಬವಿಯ ಮಗನಾದನೇ ನಮಮೋಬ ಜಗದಂಬೆ ಸಿಸುವಾದನೇ” ಯಂದು ಹಾಡೂತ ಪಾಡೂತ ಕುಣಿಯ ತೊಡಗಿದರು. ಥಳಗೇಲ್ಯಾತಿ ಥಳಗೇರಿ ಕಡೇಲಿಂದ ಕಳವಳ, ತಡಸಲ, ಬಳುವಳ, ಕಡುವಲರೆಂಬ ಹೊಲೇರ ಪಡುವಲಯ್ಯನ ಮಕ್ಕಳು ಸುಯ್ಯಂತ ಬಂದು ತಮ್ಮ ತಮ್ಮ ಹಲಗೆ ತಪ್ಪಡಿಗಳ ಮ್ಯಾಲ ಕೋಲಾಡಿಸಲಾರಂಭಿಸಿದರು. ಮುದ್ದ, ಸುದ್ದ, ಗುದ್ದರೆಂಬ ಸಿದ್ದನ ಮಕ್ಕಳಲ್ಲಿಗೆ ಸುಯ್ಯಂತ ಬಂದು 'ಕೂಂಯ್.. ಕುಕುಕೂಂಯ್ss' ಯಂದು<noinclude><references/></noinclude> lij8sop4pn0rarrshh6icnvns2ox4on ಪುಟ:ಅರಮನೆ.pdf/೫೫ 104 77140 319640 317935 2026-05-13T14:45:33Z Shreesha Sharma 7840 /* Validated */ 319640 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=೨೪|right=ಅರಮನೆ}} ಕಹಳೆ ಮೊದತೊಡಗಿದರು. ನೋಡು ನೋಡುತ್ತಿದ್ದಂತೆ ಗವುಳೇರ ಮೋಣಿ ಕಡೇಲಿಂದ ಪೆಟಿಗೆಪ್ಪ ತಾಳಪ್ಪ, ದಿಮುಡೆಪ್ಪ ಗಂಟೆಪ್ಪ, ತಪಡೆಪ್ಪ ಮೊದಲಾದ ಶ್ರೀದೇವಿ ಭಜನಾಮಂಡಳಿ ಯವರು ನಮ್ಮವ್ವ ತಾಯಿ ಜಗದಂಬಾ, ಜಗದಂಬಾ ಯಂದು ಯೇರಿಕೆ ದನಿಯಲ್ಲಿ ಭಜನಾ ಮಾಡುತ್ತ ಬಂದರು. ಅರೆಗಳಿಗೆ ವಳಗ ಯೀಯಲ್ಲ ಗಲಾಟೆ ಗದ್ದಲ ಗವುಜಗದಿಂದಾಗಿ ವಬ್ಬರ ಮಾತು ಯಿನ್ನೊಬ್ಬರಿಗೆ ಕೇಳಿಸದಂಗಾತು. ಜಗಲೂರ ವ್ವ “ನನ್ನ ಗ೦ಡನ ಸರೀರವನ್ನು ಆಕ್ಕರಮಿಸಿಕೊಂಡಾಕೆ ಯಾವಾಗೇ ಆಗಿಲ್ಲ. ಅವು ರಂಡ್ಯಾಗ್ಲಿ”ಯಂದು ಮುಂತಾಗಿ ಯೇರಿಕೆ ದನಿಯಲ್ಲಿ ಆವಾಜು ಹಾಕದಿದ್ದಲ್ಲಿ ಗುಂಪು ಸಂತೆಯಾಗದೆ ಯಿರುತ್ತಿರಲಿಲ್ಲ, ಸಂತ ಜಾತುರೆಯಾಗದೆ ಯಿರುತ್ತಿರಲಿಲ್ಲ. ಅನುವು ಆಪತ್ತಿನಲ್ಲಿ ತಾವಾಗೋರು ಯಂಬ ಕಾರಣಕ್ಕೆ ಅಲ್ಲಿ ವುಳುಕೊಂಡಿದ್ದ ಮಂದಿ ಪಯ್ಕೆ ಹಿರೀಕನಾದ ಗೊಡ್ಡಯ್ಯನು “ಯಸನ ಯಂಬ ಬೆಂಕಿಗೆ ಮಯ್ಯ ಕಾಸ ಬ್ಯಾಡಪ್ಪಾ.. ಯಾವಾಗ ನಿನ್ನ ಗಂಡ ನಿಸೂರು ಯಿದ್ದನವ್ವಾ ಮಗಳೆ.. ಅಯ್ದಗೇಡಿಯಂಗ ಆಡುತ್ತಿದ್ದನಲ್ಲಾ.. ಅದರಂಗ ಅವರ ಅವ್ವ ಯಂಬ ಅಯ್ದು ಬಡಕೊಂಡಿರಬೌದು.. ಅದು ಯವತ್ತಲ್ಲ ನಾಳೆ ಬುಟ್ಟೋಯ್ತದೆ.. ನಿನ ಗಂಡ ನಿನಗೆ ದಕ್ಕೇ ದಕ್ಕುತಾನ.. ಗುಡ್ಡದಂಥಾ ಮನುಶೋಳಾದ ನೀನು ಅನ್ವೇಗ ಬ್ಯಾಡ ತಾಯಿ ಅಳೋಗಬ್ಯಾಡಾss” ಯಂದು ಮುಂತಾಗಿ ಬುದ್ದಿ ಹೇಳುತ್ತಾ ಹೇಳುತಾ ಮನ್ಯಾಗೆ ಬದುಕಯ್ಕೆ. ವದಕನಯೆ ಯಂದನಕಂತ ಕುಂಡಿ ಅಡಿಯಿದ್ದ ವಲ್ಲಿಯನ್ನು ಕೊಡವಿ ಹೆಗಲ ಮ್ಯಾಲ ಹಾಕ್ಕೊಂಡು ಅಲ್ಲಿಂದ ಹೊತಾ ಹೋದನು... {{gap}}ಯಷ್ಟೋ ಹೊತ್ತಿನವರೆಗೆ ವುರಿಸುತ್ತಾ ಅಸ್ತವಾಗುತಾಯಿದ್ದ ಮಂದಿ ಕ್ರಮೇಣ ಕರುಗುತಾ ಬಂತು. ಯನ್ನು ವುಳುಕೊಂಡಿದ್ದವೆಂದರೆ ವುಪಾಸನಾ ರೊತಾರೂಢವಾಗಿದ್ದ ಮೂರಾಕು ನಾಯಿಗಳು, ಅಯಿದಾರು ಮಂದಿ ಅವ್ವನ ಸತ್ಯುಳ್ಳ ಸರಣಾರು, ತನ್ನವ್ವ ಮಾಡುತಲಿದ್ದ ದುಕ್ಕದ ರೇಶಿಮೆ ನೂಲಿನ ಗುಂಟ ನಡೆದು ಬಂದು ಸೂರ ಆಟು ದೂರದಲಿ ನಿಂತು ಸಕಲೋಂದು ಯಿದ್ಯಾಮಾನವನ್ನು ಗಮನಿಸುತಯಿತ್ತು. ಅದು ತನ್ನವ್ವನ ಕಣ್ಣಳಗೂ ನೀರಿದೆಯಲ್ಲಾ ಯಂದು ಅಚ್ಚಯ್ಯ ಭರಿತ ದುಕ್ಕವನ್ನನುಭೋಸುತಲಿತ್ತು ಮಂದಿ ಮುಕ್ಕಾಲು ವೀಸಿ ಕರುಗುವುದನೇ ಯದುರು ನೋಡುತ ನಿಂತಿದ್ದ ಅದು ಬಲು ಚೂಚುಮವಾಗಿ ವಂದೊಂದೆ ಹೆಜ್ಜೆಯನಿಕ್ಕುತ ಹಿಂದೇಸಿಂದ ಅಂಜುತ, ಅಳುಕುತ ಬಂದು ತನ್ನ ಮಾತ್ರುಸೊರೂಪಿಣಿಯ ವದನದ ಮಾನವತೆಯನ್ನು<noinclude><references/></noinclude> apegx79ik25bmrqejtb6se3f4lb9jpa ಪುಟ:ಅರಮನೆ.pdf/೫೬ 104 77141 319641 319028 2026-05-13T14:45:43Z Shreesha Sharma 7840 /* Validated */ 319641 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=ಅರಮನೆ|right=೨೫}} ನಾಲಗೆಯಿಂದ ನೆಕ್ಕಿತು. ತನ್ನ ಮೂಗಿನಿಂದ ಗಾಳಿ ವುದುರಿಸಿ ಆಕೆಯ ಸೆಕೆಯನ್ನು ಕಳೆಯಿತು. ಆ ಮಾತಾಯಿ ಅದರ ಮುಖವನ್ನು ತನ್ನೆದೆಗೆ ಎತ್ತಿಕೊಂಡು ನನ್ನ ಬಾಳೇವಿಂಗಾಗಿ ಬುಟ್ಟಯ್ತಲ್ಲಾ ಸೂರಾss” ಯಂದು ದುಕ್ಕ ತೋಡಿಕೊಂಡಳು... {{gap}}ಹೊತ್ತು ವುಗಳೊಳಗೆ ಸೇರೋದೂ, ಯಿಳಿದು ಮಾಡುತಲಿದ್ದಿತು. ಬುದ್ಧಿಭ್ರಮಣಾ ಆದಂಗಾಗಿ ಸೂರ ಪರಮಾತುಮನು ತನ್ನ ಪರಿಭ್ರಮಣದ ಹಾದಿಯನ್ನು ಪರಪಾಟು ಮಾಡಿಕೊಂಡಿದ್ದುದೇ ಅದಕ್ಕೆ ಕಾರಣ. ಕರುಣಾಂತರಂಗದ ಬೇಯಿನ ಮರವು ತನ್ನ ನೆರಳನ್ನು ಆಕೆಯತ್ತ ಬಾಚಲು ಹರ ಸಾಹಸ ಮಾಡುತಲಿದ್ದಿತು. ಪಕ್ಷಿಗಳು ಯಂಥಾಕಿಗೆ ಯಿಂಥಾ ದುರತಿ ವದಗಯ್ತಲ್ಲಾ ಯಂದು ರೋಧಿಸುತ ಹಾರುವುದನ್ನು ಮರೆತು ಅಲ್ಲಲ್ಲಿ ಕೂಕಂಡಿದ್ದವು. ಯಿಲಿಚೆನ್ನಗಳು, ಕೋಶಮ್ಮಗಳು ತಮ್ಮ ತಮ್ಮ ವಭಾವ ಮರತು ದುಕ್ಕ ಅನುಭೋಸುತಲಿದ್ದವು. ಮಕ್ಕಳು ಮರಿ ಯಿಲ್ಲದಿದ್ದರೇನಂತೆ, ಜಗ್ಗೂರೆವ್ವ ಪಸು ಪಕ್ಷಿ ಮರಗಿಡ ಮೊದಲಾದವುಗಳನ್ನು ಹೆತ್ತ ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದುದೇ ಅದಕ್ಕೆ ಕಾರಣ. ವಂದು ತುತ್ತುಯಿನ್ನೊಂದಕ ಹಾಕದೆ ಯಿನ್ನೊಂದು ತುತ್ತು ವುಂಡಾಕೆಯಲ್ಲದ, ವಂದು ಗುಟುಕು ನೀರನ್ನು ಯಿನ್ನೊಂದಕ ಹಾಕದೆ ಗುಟುಕು ಕುಡುದಾರಿಯಲ್ಲದ ಜಗಲೂರೆವ್ವನ ದುಕ್ಕವನ್ನು ಸಚರಾಚರ ತನ್ನದೆಂದು ಭಾವನ ಮಾಡಿತು. {{gap}}ಈ ಹಿಂದಕ ಮುಂದಕ ಜರುಗದೆ ವಡಲೊಳಗಿನ ನೀರು ನಿಡಿ ಅಳ್ಳಾಡದಂತೆ ಆಕೆ ಕೂಕಂಡಿದ್ದ ಬಯಲೇನಿತ್ತು ಅದು ಯೀ ಕಾಲದ್ದಲ್ಲ. ಪುರಾತನ ಕಾಲದ್ದು. ಅಂಥಪ್ಪ ಮಹಿಮಾನ್ವಿತ ಜಾಗದಲ್ಲಿ ಕೂಕಂಡಿದ್ದ ಜಗಲೂರೆವ್ವ ಹಿಂದಕ ಜರುಗು ಯಂದರ ಹೆಂಗ ಹಿಂದಕ ಜರುಗ್ಯಾಳು? ಮುಂದಕ ಜರುಗು ಯಂದರ ಹೆಂಗ ಮುಂದಕ ಜರುಗ್ಯಾಳು? ಅಲ್ಲಿ ಹಿಂದು ಮುಂದು ಯಂಬೆರಡು ಮಾಯಾವಿ ಸಂಬಂಧಗಳ ನಡುವೆ ಅಂಥ ಪರುಕುಯಿರಲಿಲ್ಲ.. ನೆಲ ಆಕೇನ ಹಿಡಕೊಂಡಿತ್ತೋ, ಆಕೇನೆ ನೆಲವನ್ನು ಹಿಡಕೊಂಡಿದ್ದಳೋ... ವಟ್ಟಿನಲ್ಲಿ ಬುಡುಮೆ ಕಲ್ಲಿನಂಗ ನಿಚ್ಚಲ ಸ್ಥಿತೀಲಿ ಕೂಕಂಡಿದ್ದಳು. {{gap}}ದುಕ್ಕ ಮಾಡೋರು ಮಾಡಿದರೇನೇ ಚಂದ. ದುಕ್ಕ ಮಾಡೋ ಕಲೆ ಸಿದ್ದಿಸೋದು ಆಟು ಸುಲಭವಲ್ಲ... ಅದಕ್ಕೆ ಸಣ್ಣೂರಿದ್ದಾಗಲಿಂದಲೇ ಹೆತ್ತೋರಿಂದ, ಸುತ್ತಮುತ್ತಲಿನ ಪರಿಸರದಿಂದ ತಾಲೀಮು ಪಡೆದುಕೊಂಡಿರಬೇಕು, ನುರುಪಡಿ ಆಗಿರಬೇಕು, ಹಂಗಿದ್ದರೇನೆ ಅದು ಸಿದ್ದಿಸೋದು. ಆದರ ಜಗಲೂರೆವ್ವನ ಮುಖದಾಗ ದುಕ್ಕದ ವಂದೇ ವಂದು ಯಸಳನ್ನು ಕಂಡಿರೋರು ಥಳಗೇರಿ<noinclude><references/></noinclude> bc0qaz6wxqmgkmql9xpa29a5a64ul39 ಪುಟ:ಅರಮನೆ.pdf/೫೭ 104 77142 319642 319029 2026-05-13T14:45:54Z Shreesha Sharma 7840 /* Validated */ 319642 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=೨೬|right=ಅರಮನೆ}} ವಂದೆ ಯಾಕ, ಯಿಡೀ ಪಟ್ಟಣದೊಳಗೆ ಯಾರೂ ಯಿರಲಿಲ್ಲ ಹನ್ನೊಬ್ಬರ ಕಣ್ಣೀರೊರೆಸೋದರಲ್ಲಿ, ದುಕ್ಕ ಮಣಗಿಸುವಂಥ ಚಂದನೆಯ ನಾಕು ಮಾತಾಡೋದರಲ್ಲಿ ಆತುಮ ಯಿಸುವಾಸ ತುಂಬೋದರಲ್ಲಿ ಆಸರಾಗೋದರಲ್ಲಿ ಆಕೆಗೆ ಸರಿಸಮಕ್ಕೆ ಬರೋರು ಯಾರೂ ಯಿಲ್ಲ. ಯಂಥಾಕೆಗೆ ಯಂಥ ಗತಿ ಬಂತಪ್ಪಾ ಸಿವ ಸಂಕರ ಮಾದೇವಾss...ಯಂದು ಥಳಗೇರಿಗಳೆಲ್ಲ ಮಮ್ಮಲನ ಮರುಗುತ ಸುಮ್ಮಕ ಕುಂತಿರಲಿಲ್ಲ.. ವಂದಲ್ಲಾ ಎಂದು ಮನೆಯಿಂದ ವಬ್ಬರಲ್ಲಾ ವಬ್ಬರು ಬರೋದು, ಸಮಾಧಾನದ ನಾಕು ಮಾತಾಡೋದು, ಹೋಗೋದು ಮಾಡತಲಿದ್ದರು. {{gap}}ನೂರೊಂದು ದಿವಸಗಳ ಪಠ್ಯಂತ ವಂದಗುಳು ಬಾನ ಮುಟ್ಟದೆ, ಎಂದು ಗುಟುಕು ನೀರು ಕುಡಿಯದೆ ವುಪಾಸಯಿದ್ದು ಮಳೆ ಸುರಿಸಿ ನೂರೆನೇ ದಿವಸದಲ್ಲಿ ಕಣ್ಣು ಮುಚ್ಚಿದ ಮಹಿಮಾನ್ವಿತೆಯಾದ ಲಚುಮವ್ವನ ತೋಪಿನ ಕಡೆಯಿಂದ ಜಡೆತಾತನು, ಕರೆಕುರಿಯಪ್ಪ, ಕೆಂಗುರಿಯಪ್ಪಾವಧೂತರೊಂದಿಗೆ ತಿಪ್ಪಯ್ಯ ಗಾದಯ್ಯ ಮೋದಯ್ಯರೇ ಮೊದಲಾದ ಸಿಸು ಮಕ್ಕಳೊಂದಿಗೆ ಯೇಕತಾರಿ ನುಡಿಸುತ್ತ, ಜಗದಂಬೆಯ ಗುಣಗಾನ ಮಾಡುತ್ತ ಬಂದು ವಸ್ತಿಯದುರು ಮಂಡೆಕಾಲೂರಿ ಕುಂತು “ಅಯ್ಯಾ ಮೋಬಯ್ಯಾ ಸಾಂಬವಿಗೆ ನೀನು ನಿನ್ನ ಸರೀರವನ್ನು ಬಿಡದಿ ಮಾಡಿಕೊಟ್ಟಿರುವಿರಿ. ನೀನು ಸಾಮಾನ್ಯನಲ್ಲ. ನೀನೇ ಸಾಂಬ ವಿ, ಸಾಂಬವಿಂದೇ ನೀನು” ಎಂದು ತಿಳಿದು ಸಣಮಾಡುತ್ತಿದ್ದೇನೆಂದು ವುದ್ದಂಡ ಪ್ರಣಾಮ ಸಲ್ಲಿಸಲು ಸಿಸುಮಕ್ಕಳು ಸಿವನಾಮ ಪಾರೊತಿ ಪತಿ ಹರ ಹರ ಮಾದೇವಾss ಯಂದು ಜಯಘೋಷ ಮಾಡಿದರು. “ದಮ್ಮಿನ ಮ್ಯಾಲ ದಮ್ಮೆಳೆದು ನಿನ್ನೊಳಗೆಯಿರೋ ತಾಯಿಗೆ ಅಮಲೇರಿಸು” ಯಂದು ನಾಕು ತೊಲಾ ತಂಬಾಕು ತುಂಬಿದ ಮೊಳಾವರೆವುದ್ದ ಯಿದ್ದ ಯಗ್ನಕುಂಡದ ಬಾಯಂತಿದ್ದ ಗುಡುಗುಡಿಯನ್ನು ವಸ್ತಿಯ ಕಮ್ಮೊಳಗಿಟ್ಟನು. “ಯಿಗಾ ಗಟಗಟಾಂತ ವಂದೇ ಗುಟುಕಿಗೆ ಕುಡುದು ತಾಯಿ ಸಾಂಬವಿಯ ಬಾಯಾರಿಕೇನ ತಣುಸು” ಯಂದಂದು ತನ್ನ ಬಗಲಿಂದ ಹೆಂಡ ತುಂಬಿದ್ದ ತತ್ರಾಣಿಯನ್ನು ತಗದು ಕೊಟ್ಟನು. ವಸ್ತಿಯು ವಂದುಸುರಿಗೆ ಚಿಲುಮೇನ ಖಾಲಿ ಮಾಡಿದ್ದು ತಡಾಗಲಿಲ್ಲ ಎಂದು ಗುಟುಕಿಗೆ ತತ್ತರಾಣೀನ ಖಾಲಿ ಮಾಡಿ ಹೋಬ್ಬ ಯಂದು ತೇಗಿದ್ದು ತಡಾಗಲಿಲ್ಲ. ಮತ್ತೆ ತಾಯಿಯ ಹಸುವು ತೀರಿಸಲಕಂತ ವಂದಗೊನೆ ಬಾಳೆಹಣ್ಣು, ವಂದು ಬಿಂದಿಗೆ ನೊರೆವಾಲು.. {{gap}}...ಜಡೆತಾತನು ಚಿಂತಾಕ್ರಾಂತಳಾಗಿ ಕೂಕಂಡಿದ್ದ ಜಗಲೂರೆವ್ವನ ಬಳಿಗೆ<noinclude><references/></noinclude> gyyp9v2mpuadevfrkldv5kkzi9c1brp ಪುಟ:ಅರಮನೆ.pdf/೫೮ 104 77143 319643 319030 2026-05-13T14:46:05Z Shreesha Sharma 7840 /* Validated */ 319643 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=ಅರಮನೆ|right=೨೭}} ಬಂದು 'ತಾಯೇ.. ನಿನ ಗಂಡ ಮೋಬಯ್ಯ ತನ್ನ ಸರೀರದೊಳಗೆ ಅದಾನೋ ಯಿಲ್ಲವೋ... ಆದರೆ ನೀನು ಜ್ಞಾಪಾನ ಜತುನ ಮಾಡಿದ್ದ ಆ ಸರೀರದೊಳಗೆ ಸಾಂಬವಿಯಿರೋದಂತು ನಮಗ ಖಾತರಿ ಆಗಯ್ತಿ.. ಹಿರೇ ಮನುಶೋಳಾದ ನೀನು ವಸ್ತಿಯ ಸೇವೆ ಮಾಡಿಕೊಂಡಿರಬೇಕವ್ವಾ.. ಹಂಗ ಮಾಡಿದರೆ ನಿನಗ ಪುಣ್ಯ ಭಾಗ್ಯ ಪ್ರಾಪ್ತಿ ಆಗತಯ್ಯವ್ವಾ.. ಯದೆಗುಂದ ಬ್ಯಾಡ ತಾಯಿ.. ಯಾ ಸರೀರ ಯಾರಿಗೆ ಸಾಸುವತ ಹೇಳು.. ನಾಳೆ ಹೋಗೋದು ಯಿಂದೇ ತಾಯಿ ಪಾದಕ್ಕರುಪಿತವಾದರ ಯಾಕ ಯಸನ ಮಾಡಬೇಕು, ನೀನು ನಿನಗಂಡನೊಟ್ಟಿಗೆ ಅಜರಾಮರವಾಗುತ್ತೀ.. ಸೂರ ಚಂದ್ರಾಮರಿರೋಗಂಟಾ ಲೋಕ ನಿನ್ನ ಕೊಂಡಾಡದವ್ವಾ.” ಯಂದು ತುಂಬಿದ ಕೊಡದಂಗ ನಾಕು ಮಾತುಗಳನ್ನಾಡಿ ಹೋದನು. {{gap}}ಕುಕ್ಕುರು ಗಾಲೀಲೆ ಕೂಕಂಡು ಗಂಡನ ಸರೀರವನ್ನು ದಿಟ್ಟಿಸುತಲಿದ್ದ ಆಕೆ ದುಸುರಾ ಮಾತಾಡದಿದ್ದರೂss {{gap}}ಪಟ್ಟಣ ಯಂಬುದು ಪಟ್ಟಣವಾ.. ಹೆಜೇನು ಗೂಡಾ... ಯಂಬಂತಾಗಿ ಬಿಟ್ಟಿತ್ತು ಸಿವನೆ, ಯಿನ್ನೊಂದೆಲ್ಲು ನಾಲಗೆಗಳನ ಆ ದೇವರು ತಮಗೆ ಕೊಟ್ಟಿದ್ದರ ಯೇಟು ಪಾಡಿತ್ತು ಅಂದಕಂತಾರೆ ಜನ ಸೀವನss.. ಮೋಬಯ್ಯನ ವರಮಾನವು ಸುಡೋ ತುಪ್ಪದುಂಡೆಯಂಗ ಹಿಂದಕ ಹೊಳ್ಳದಂಗ ಮುಂದಕೂ ಹೊಳದಂಗ ವಬ್ಬೊಬ್ಬರ ಗಂಟಲ ಜೆಗೇವಲ್ಲಿ ಚಕ್ಕಳ ಮುಕ್ಕಳ ಹಾಕ್ಕೊಂಡು ಕುಂತು ಬಿಟ್ಟಿತ್ತು ಸೀವನೇ.. ಅವರ ಪಯ್ಕೆ, ಮೋಬಯ್ಯನನ್ನು ನೋಡಿದೋರಿದ್ದರು, ನೋಡಿರದೋರಿದ್ದರು. ಅವ ಯಾರಪಾ ಅಂದರ.. ಅವ ಯಿವ ಯಿದ್ದಂಗ ಯಿದ್ದನಲ್ಲಾ. ಯವ ಅವ ಯಿದ್ದಂಗ ಯಿದ್ದನಲ್ಲಾ.. ಮೊಂಡು ಮೂಗು ಬಟ್ಟೆಕಾಯಂಗಯ್ತಲ್ಲಾ.. ಕವಳೆ ಹಣ್ಣಿನಂಗ ಕಣ್ಣು ಅದಾವಲ್ಲಾ... ದವಡೆಲುವುಗಳು ಚಾಚಿಕೊಂಡು ಮುಂದಕ ಬಂದಾವಲ್ಲ.. ಹಣೆ ಬುರುಬುರಾಂತ ಮೂದಿ ಮುಂದ ಹೊಂಟಯ್ತಲ್ಲಾ... ಕಸಬಾರಿಗೆ ಚುಂಗಿನೋಟು ಮೀಸೆ ಬುಟ್ಟಿದ್ರಲ್ಲಾ.. ಕುತ್ತಿಗೆ ಹಿಂದ ಚುಂಡೇನ ಕಟ್ಟಿದ್ದನಲ್ಲಾ.. ನೂರು ಮಾತಾಡಿದೋರೆದುರು ಹತೇ ಹತ್ತು ಮಾತಾಡ್ತಿದ್ದನಲ್ಲಾ.. ಹತ್ತು ಮಾತಾಡಿದೋರೆದುರು ವಂದೇ ವಂದು ಮಾತಾಡ್ತಿದ್ದನಲ್ಲಾ.. ಮಕ್ಕು ಮರಿಮ್ಯಾಲ ಬಲು ಜೀವ ಮಿಟುಕೊಂಡಿದ್ದನಲ್ಲಾ. ಅಕ್ರೋರಾ.. ತಂಗೋರಾ ಅಂತಿದ್ದನಲ್ಲಾ.. ಚೀಗ ದೊಡ್ಡಮ್ಮಾ ಅಂತಿದ್ದನಲ್ಲಾ.. ಅಣೋರ ತಮೋರಾ ಅಂತಿದ್ದನಲ್ಲಾ.. ಹೊತ್ತುಟ್ಟುತ್ತಲೆ ಲಟಗೂ ಪುಟುಗೂ ಹೆಜ್ಜೆ ಹಾಕುತ ಅರಮನೆಗೆ ಕಡೇಕ ಹೋಯ್ತಿದ್ದನಲ್ಲಾ.. ಮುದೇಕಿ ಭದ್ರಮ್ಮವ್ವನ<noinclude><references/></noinclude> 0z6nsokrpb3ygulzh3i8j6h8ifgz01i ಪುಟ:ಅರಮನೆ.pdf/೫೯ 104 77144 319644 319031 2026-05-13T14:46:16Z Shreesha Sharma 7840 /* Validated */ 319644 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=೨೮|right=ಅರಮನೆ}} ಬಲಕ ಪಿಕದಾನಿ ಹಿಡಕೊಂಡು ನಿಂತಿದ್ದನಲ್ಲಾ.. ಅವನೇ ಕಣರಪ್ಪಾ ಮೋಬಯ್ಯಾ ಅಂದರ... ಮೋಬಯಾ ಅಂದರ ಅವನೇ ಕಣರಪ್ಪಾ.. ಆತ ಬಲು ನಯ ನಾಜೂಕಿನವನಾಗಿದ್ದನಪ್ಪಾ.. ಸಣ್ಣವರನು ದೊಡ್ಡವರನಕಂತ, ದೊಡ್ಡವರನು ಯಿನ್ನೂ ದೊಡ್ಡವರನಕಂತ, ಭಯ ಅಂಬುದನು ಬಲಗಯ್ಯ, ಭೀತಿ ಅಂಬುದನು ಯಡಗಯ್ಯ ಯಿಟುಕೊಂಡು ನೆಲದ ಮ್ಯಾಲ ಯಿರುವೆ ಯಣಸೂತ ತಗ್ಗಿಸಿದ ತಲೇನ ಮ್ಯಾಲಕೆತ್ತದಂಗ ಯಿದ್ದನಲ್ಲಾ, ಅವನೇ ಕನರಪ್ಪಾ ಮೋಬಯ್ಯಾ ಅಂದರ.. ತನ ಯದ್ಯಾಗ ಕ್ವಾಟಾನ ಯೆಟುಕೊಂಡಿದ್ದನಲ್ಲಾ... ಬೆಣ್ಣೆವುಂಡೆ ನಾಚೋ ಹಂಗ ಮೆತ್ತಾನ ಮೆತ್ತಗಯಿರುತ್ತಿದ್ದನಲ್ಲಾ.. ದಯಾ ಅಂಬುದನು ಯಡಕಳ್ಕೊಳಗೂ, ದಾಕ್ಷಿಣ್ಯ ಅಂಬುದನು ಬಲಗಸ್ಕೊಳಗೂ ಯಿಟುಕೊಂಡು ದಯನೇಸಿಯಾಗಿ ನೋಡುತ್ತಿದ್ದನಲ್ಲಾ... ಕರದೋರ ಕಾಳಗ ಕೆರಾss ಆಯ್ತಿದ್ದನಲ್ಲಾ.. ಬಾ ಯಂದೊರ ಮನೆಂರು ಬಾಕಲಿಗೆ ತಾನಾಯ್ತಿದ್ದನಲ್ಲಾ... ಕುರುಕುರೂಂತ ಸಂಗನೆ ಮಾಡೋರ ಕುಂಡಿ ಬುಡಕ ಚಾಪೆ ಆಯ್ತಿದ್ದನಲ್ಲಾ.. ಕಿವಿವುಳ್ಳೋರಿಗೆ ಬಾಯಿ ಆಯ್ತಿದ್ದನಲ್ಲಾ... ಮಾಡೋರಿಗೆ ಕಮ್ಮಿ ಆಯ್ತಿದ್ದನಲ್ಲಾ.. ನಡೆಯೋರಿಗೆ ಕಾಲಾಯ್ತಿದ್ದನಲ್ಲ.. ಅವನೇ ಕನರಪ್ಪಾ ಮೋಬಯ್ಯಾ ಅಂದರ.. ಪುಣ್ಯಾತುಮ ಅಂದರ ಅವನೆ ಕನಪ್ಪಾ.. ಭೂಮ್ರಾಯಿಗೆ ಯಲ್ಲಿ ನೋವಾಗತಯೋ ಅನ್ನೋ ಹಂಗ ನಡದಾಡ್ತ ಇದ್ದನಲ್ಲಾ.. ವಂದಾಡಿದರ ಕಡಿಮೆ, ಯಲ್ಲಾಡಿದರೆ ಹೆಚ್ಚು ಯಂಬಂತೆ ಮಾತಾಡುತ್ತಿದ್ದನಲ್ಲಾ.. ಅವನೇ ಕನಪ್ಪಾ ಮೋಬಯ್ಯಾ.. ಹಿಂಗಾss ವಬ್ಬರು ಯಿನ್ನೊಬ್ಬರ ಯದೆಯೊಳಗೆ ಅವನ ಮಿಗ್ರಹ ಕೆತ್ತಿ ನಿಲ್ಲಿಸೋ ಪ್ರಯತ್ನ ಮಾಡುತ್ತಿದ್ದುದು ಯಲ್ಲಂದರಲ್ಲಿ ಸಿವ ಸಂಕರ ಮಾದೇವಾss.. {{gap}}ಸಾಂಬವಿ ಹಿಂಗವಳಾss ಹಂಗವಳಾ ಯಂಬ ಮೂರು ಪ್ರಶ್ನೆಗಳನ್ನು ತನ್ನೋಟಕೆ ತಾವು ಹಾಕಿಕೊಳ್ಳುತ್ತ, ಯದುರಾದವರನ್ನು ಯಿಚಾರಿಸುತ.. ಹಿಂಗಿರಬೌದಾ ಯಂದು ತಮಗೆ ತಾವು ವುತ್ತರ ಪಡಕೊಳ್ಳುತ, ತಮಗೆ ತಾವು ಸಮಾಧಾನ ಪಟುಕೊಳುತಾ ಗಳಿಗಳಿಗೆಗೊಂದೊಂದು ವುಸುರು ಬಿತ್ತುತ್ತಾ ಮಂದಿ ತಮ್ಮೊಳಗೆ ತಾವು ಕಲ್ಲಾವುಲ್ಲಿಯಾದರು ಸಿವಸಂಕರ ಮಾದೇವಾss.. {{gap}}ಸಾಗರ ಸಮುದ್ರವನ್ನು ಸೇರಿದಂತೆ, ಸಮುದ್ರನದಿಯನ್ನು ಸೇರಿದಂತೆ, ನದಿ ಹೊಳೆಯನ್ನು ಸೇರಿದಂತೆ, ಹೊಳೆ ಹಳ್ಳವನ್ನು ಸೇರಿದಂತೆ, ಹಳ್ಳ ಹನಿಯೊಳಗೆ ಆಶ್ರಯ ಪಡೆದಂತೆ ಅಗಾಧ ವಂತಿಕೆಯಾದ ಆ ತಾಯಿ ಅವನ ಥಟಗು ಸರೀರದೊಳಗೆ ಆಸಯ ಪಡೆದಿರಬೌದಾ ಯಂದು ಮಂದಿ ತಮಗೆ<noinclude><references/></noinclude> kjgnr1ibehw7x3udvf5fslbsbceeklx ಪುಟ:ಅರಮನೆ.pdf/೬೦ 104 77145 319645 319032 2026-05-13T14:46:33Z Shreesha Sharma 7840 /* Validated */ 319645 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=ಅರಮನೆ|right=೨೯}} ತಾವು ಅಲವುಕಿಕವಾಗಿ ಅಂದನಕಂತಿದ್ದುದು ಸಿವ ಸಿವಾ.. {{gap}}ಮೋಬಯ್ಯನು ತಾನು ಸರೀರದೊಳಗದಾನೋ ಯಿಲ್ಲವೋ? ಯಂಬ ಪ್ರಶ್ನೆ ವಬ್ಬೊಬ್ಬರ ಮುಂದ ನೆಲ ಮುಗುಲಿಗೇಕಾಗಿ ನಿಂತುಬಿಟ್ಟಿತು. ಸಮುದ್ರದೊಳಗೆ ನದಿ ನಷ್ಟವಾದಂಗೆ, ನದಿವಳಗೆ ಹೊಳೆ ನಷ್ಟವಾದಂಗೆ, ಹೊಳೆವಳಗೆ ಹಳ್ಳ ನಷ್ಟವಾದಂಗೆ, ಹಳ್ಳದೊಳಗೆ ಬಿಂದು ನಷ್ಟವಾದಂಗೆ, ಬೀಜ ರುಕ್ಷದೊಳಗೆ ನಷ್ಟವಾದಂಗೆ ಆತನು ತನ್ನ ಸರೀರದಿಂದ ನಷ್ಟ ಹೊಂದಿರಬೌದಾ? ತನ್ನ ಸರೀರದಿಂದ ಪರಿತ್ಯಕ್ತನಾಗಿರೋ ಮೋಬಯ್ಯನು ಹೀಗೆಲ್ಲಿರಬೌದು? ಅಲ್ಲಿರಬೌದು? ಯಲ್ಲಿರಬೌದಾ? ಯಲ್ಲಲ್ಲಿ ಯಿರಬೌದಾ? ಯಂದು ಮುಂತಾಗಿ ಯೋಚಿಸುತ್ತಾ.. ಯೋಚಿಸುತ ಭಯ ಭೀತರಾಗುತ್ತಿದ್ದುದು ಸಿವ ಸಂಕರ ಮಾದೇವಾss... {{gap}}ವಟ್ಟಲ್ಲಿ ಪಟ್ಟಣಕ್ಕೆ ಪಟ್ಟಣವು ವಂದು ಬಾಯಾಗಿ, ವಂದು ಕಿವಿಯಾಗಿ ವಂದು ಬವಕೆಯಾಗಿ ಮಾರುಪಾಡಾಗುತ್ತಿರುವಾಗ್ಗೆ... {{gap}}ಅತ್ತ ಕಡಪ ಯಂಬ ಪಟ್ಟಣಕ್ಕೆ ಯಂಟು ಗಾವುದ ದೂರದಲ್ಲಿರೋ ರಾಚೋಟಿ ಯಂಬ ಹೋಬಳಿ ಮಟ್ಟದ ಗ್ರಾಮವುಂಟು. ಆ ಗ್ರಾಮದ ವಂದು ಮೂಲೆಯ ವಂದು ಮುರುಕು ಹೈಪಡಿಯಲ್ಲಿ ಕಿಷ್ಟಯ್ಯ ಚಿನ್ನಮ್ಮಯಂಬ ದಂಪತಿಗಳಿದ್ದರು. ಅವರಿಗೆ ವಂಬತ್ತು ಮಂದಿ ಮಕ್ಕಳು, ಕಿಷ್ಟಯ್ಯನು ಸಣಪುಟ್ಟ ಕಳ್ಳತನ ಮಾಡಿ ಸಂಸಾರ ಸಲಹುತ್ತಿದ್ದನು. ಥಾಮಸು ಮನೋ ಸಾಹೇಬನು ರಾಚೋಟಿ ಜಮೀಂದಾರನಾದ ಕಿರುಕಲ ಕೋನ ರೆಡ್ಡಿಯ ಗಾದೆಯನ್ನು ಕಬಜಾ ಮಾಡಿ ಆತನ ವಡೆತನದಲ್ಲಿದ್ದ ಮೂರು ಸಾಯಿರದಾಂಯುಂಟುನೂರಾ ಮುವತ್ತೊಂದು ಯಕರೆ ಜಮೀನಿನ ಪಯ್ಕೆ ಯಡೂವರೆ ಸಾಯಿರ ಯಕರೆ ಭೂಮಿಯನ್ನು ಅದೇ ಗ್ರಾಮದ ಭೂಹೀನರಿಗೆ ಹಂಚಬೇಕೆಂದು ತೀರುಮಾನಿಸಿದನು. ಅಂಥ ಭೂಹೀನರ ಪಯ್ಕೆ ವಬ್ಬನಾಗಿದ್ದ ಕಿಷ್ಟಯ್ಯನು ಕಲೆಬ್ರುಸಾಹೇಬನೆದುರು ಯಿನಯ ಪೂರಕವಾಗಿ ನಿಂತು “ಅಯ್ಯಾ, ನಾನು ಮಕ್ಕಳೊಂದಿಗೆ ನಿದ್ದೇನೆ.. ದುಡಿದುಂಬಲಕ ಭೂಮಿಯಿಲ್ಲದ ಕಾರಣಕ ಕಳ್ಳತನ ಮಾಡಿ ಸಂಸಾರ ಸಲುವುತ್ತಿದ್ದೇನೆ.. ತಾವು ನನಗೂ ವುಳುಮೆ ಮಾಡಲಕ ಜಮೀನು ಮಂಜೂರು ಮಾಡಿದಲ್ಲಿ ಕಳ್ಳತನ ಬಿಟ್ಟು ವ್ಯಯಿ ಮುರುದು ದುಡಿವುತ ಗವುರವದಿಂದ ಬದುಕುವೆನು” ಯಂದು ಅಹವಾಲು ಸಲ್ಲಿಸಿದನು. ಅದನ್ನು ಕೇಳಿ ಮನೋ ಸಾಹೇಬನ ಕರುಳು ಕರಗಿತು. ಹಂಗಿದ್ದರೆ ಸರೆಯಂದು ಕುಂತ<noinclude><references/></noinclude> qltuiebwmytng1d68ry5s0shzstmm6z ಪುಟ:ಅರಮನೆ.pdf/೬೧ 104 77146 319646 319033 2026-05-13T14:46:44Z Shreesha Sharma 7840 /* Validated */ 319646 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=೩೦|right=ಅರಮನೆ}} ಬಯಟಲೆ ಅವನಿಗೆ ಯಲ್ಲು ಕೂರಿಗೆ ಜಮೀನನ್ನು ಮಂಜೂರು ಮಾಡಿದನು. ಆಗ ಅವನ ಹೆಂಡತಿ ಯೇಳು ತಿಂಗಳ ಬಸುರಿಯಿದ್ದಳಲ್ಲ.. “ಅಯ್ಯಾ ದೊರೆಯ. ನಿನ್ನಿಂದ ನಾನು ವುದ್ದಾರವಾದೆನು. ಗಂಡುಕೂಸು ಹುಟ್ಟಿದಲ್ಲಿ.. ಅದಕ್ಕೆ ನಿನ್ನ ಹೆಸರನ್ನು ಯಿಡುತ್ತೇನೆ.. ಆಗ್ಗೆ ನೀನು ತೊಟ್ಟಿಲ ಕಾರಕ್ಕೆ ಬಂದು ನನ್ನ ಮಗನಿಗೆ ಆಸುರವಾದ ಮಾಡಬೇಕು” ಯಂದು ಯಿನಂತಿ ಮಾಡಿಕೊಂಡನು. ಅದರಂತೆ ಮುಂದೊಂದಿನ ಅವನಿಗೆ ಗಂಡು ಕೂಸಾತು. ಆ ಕೂಡಲೆ ಕತ್ತೆಯೊಂದನ್ನು ಬಾಡಿಗೆ ಪಡೆದು ಅದರ ಮ್ಯಾಲ ಕುಂತು ಕಡಪ ಪಟ್ಟಣವ ತಲುಪಿ ಸಾಹೇಬನಿಗೆ ಸಾಂಪ್ರತು ಸುದ್ದಿ ಮುಟ್ಟಿಸಿದನು.. ಕೊಟ್ಟ ಮಾತಿನಂತೆ ಥಾಮಸು ಮನೋ ಸಾಹೇಬನು ರಾಚೋಟಿಯ ಆ ಬಡ ಕಿಷ್ಯನ ಮಗನ ತೊಟ್ಟಿಲು ಕಾವ್ಯದಲ್ಲಿ ಪಾಲ್ಗೊಂಡಿರುವಾಗ್ಗೆ... ಅಯ್ಯೋರು ಆ ಕೂಸಿಗೆ ಮನೋಪ್ಪನೆಂದು ನಾಮಕರಣ ಮಾಡುತ್ತಿರುವಾಗ್ಗೆ... {{gap}}ಗೂಢಾಚಾರರಾದ ಗುತ್ತೆಪ್ಪ ಮತ್ತಾತನ ಸೋದರರು ನೀಡಿದ ಪತ್ತರವನ್ನು ಮೋದಿಸಿ ಕೆಂಡಮಂಡಲ ವಾದ ಜರಿಮಲೆಯ ಜಗದಪ್ಪ ನಾಯಕನು ನಿಚ್ಚಾಪುರದ ಬಾಲಪ್ಪನಾಯಕನನ್ನು ಮಿತ್ರದ್ರೋಹಿ, ಪರಮ ಘಾತಕ, ಅಮವಾಸೆ ವಳಗಾಗಿ ನಿನ್ನ ರುಂಡವನ್ನು ಚೆಂಡಾಡಿ ತಂದು ಜರಿಮಲೆಯ ಅಗಸೆ ಬಾಗಿಲಿಗೆ ಕಟ್ಟಿಸುವೆನೆಂದು ಘೋರ ಸಪಥ ಮಾಡುತ್ತಿರುವಾಗ್ಗೆ.... {{gap}}ತಾಸುಗಳ ಪರಂತರ ವಂದರ ಮ್ಯಾಲೊಂದು ಪ್ರಶ್ನೆಗಳನ್ನು ಹಾಕಿ ಯಿಚಾರಿಸಿದ ನಂತರ ಜೋನ್ನಗಿರಿಯ ರಾಜನಾದ ಕದಿರೆಪ್ಪನಾಯಕನು ಮದ್ದಿಕೇರಿಯ ಸಂತರಸ್ತರನ್ನು ತನ್ನ ಸಯ್ಯಕ್ಕೆ ಸೇರಿಕೊಳ್ಳುತ್ತಿರುವಾಗ್ಗೆ..... {{gap}}ಯಿತ್ತ ಕುದುರೆಡವು ಪಟ್ಟಣದ ಅರಮನೇಲಿದ್ದ ರಾಜಮಾತೆ ಭಮ್ರಮಾಂಬೆಯ ಕಳುವಿದ್ದ ವಂದೆಲ್ಲು ಮಂದಿ ಸಕರು ಥಳಗೇರಿಯಿಂದ ಹೊತ್ತು ತಂದ ಯಿದ್ಯಾಮಾನಗಳನ್ನು ಕಿವಿಯಾರೆ ಕೇಳಿ ತಿಳಿದು ಭ್ರಮಾಧೀನಳಾಗಿ ರೆಟ್ಟೇಲಿರದಿದ್ದ ರವುಸವನ್ನು ವಡಲೊಳಗೆ ತಂದುಕೊಂಡು ಯಲವೋ.. ಮೋಬಯ್ಯನೇ... ರಾಜಾಗ್ನಿಯನ್ನು ದಿಕ್ಕರಿಸಿದೆಯಾ... ಮೂರು ತಲೆಮಾರು ದುಡಿದರೂ ತೀರದಷ್ಟಿರೋ ಸಾಲದ ರುಣವನ್ನು ಮರೆತೆಯಾ? ನಿನ್ನ ಯಕಃಶ್ಚಿತ್ ವಿ ಳಗೆ ಸಾಂಬವಿ ಹೆಕೆಂಡಿರುವಳೆ೦ದು ಕಪಟ ನಾಟಕವನ್ನಾರಂಭಿಸಿರುವೆಯಾ.. ನಿನಗೆ ತಕ್ಕ ಶಾಸ್ತಿ ಮಾಡಿಸುತ್ತೇನೆ ನೋಡುತ್ತಿರು. ಮತ್ತೆ ನಿನ ಕ ಪಿಕದಾನಿ ಹಿಡಿಸದಿದ್ದರೆ ನಾನು ರಾಜ ಮಾತೆಯೇ ಅಲ್ಲ” ಯಂದು ಮನದೊಳಗೆ ಸಪಥ ಮಾಡುತ ಹೊರಗಡೆ ಕೇಳಿಸುವಂತೆ<noinclude><references/></noinclude> 2kwv9hz7qi3zairx5ajt2mssqdc1mhm ಪುಟ:ಅರಮನೆ.pdf/೬೨ 104 77147 319647 319374 2026-05-13T14:46:57Z Shreesha Sharma 7840 /* Validated */ 319647 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=ಅರಮನೆ|right=೩೧}} “ಹೊಹೋಯ್ ಕಾಟಯ್ಯೋ” ಯಂದು ತನ್ನ ಸವತಿ ಮಗನನ್ನು ಕೂಗಿದಾಗ್ಗೆ... {{gap}}ಕಡದಮ್ಮನ ಹಳ್ಳದ ಯಡ ದಂಡೆಗುಂಟ ಬೆಳೆದಿದ್ದ ಬಾರೆ, ಕಾರೆ, ಕವಳೆ ಗಿಡಮೊದೆಗಳ ಮರೆಯಲ್ಲಿ ಬಹಿರ್ದೆಸೆಗೆ ಕೂಕಂಡಿದ್ದ ಕಾಟಯ್ಯ ನಾಯಕನು ತಿಣುಕುತ್ತ ಪ್ರಸವ ಯೇದನೆಯನ್ನು ಅನುಭವಿಸುತ್ತಿದ್ದನು. ಅದು ತನ್ನ ತಂದೆ ಪದ ಬೊಮ್ಮಯ್ಯ ನಾಯಕನಿಂದ ಬಳುವಳಿಯಾಗಿ ಬಂದಿರುವಂಥಾದ್ದಾಗಿತ್ತು. ಆತನಂತೆ ತಾನೆಲ್ಲಿ ಅಕಾಲಮರಣಕ್ಕೆ ತುತ್ತಾಗುವೆನೋ ಎಂದು ಹೆದರುತ್ತಿದ್ದನಾದರೂ ಯಿನ್ನೊಬ್ಬರಿಗೆ ತನ್ನ ವ್ಯಾದಿಯ ಮರುಮ ಬಿಟ್ಟುಕೊಟ್ಟಿರಲಿಲ್ಲ. ಅವರಿವರ ಮೂಲಕ ಮಾಹಿತಿ ಪಡಕೊಂಡು ದೂರದ ಜಾಟಗೆರೆಗೆ ಮಾಯಾದ ಯೇಸದಲ್ಲಿ ಹೋಗಿ ಕಾಸುಲ ಕರವ್ವ ಯಂಬ ವಯ್ದೆ ಪಂಡಿತ ಕಯ್ಯ ಕುಡುಗೋಲಿಂದ ಮುಳ್ಳು ಕೊಕ್ಕಿಸಿಕೊಂಡು ಬಂದಿದ್ದ. ವಯಾಚ್ಚೇ ಕಾಲ್ಯಾಂತೇ ಅಪ್ರಯೋಜಕಾಹ ಯಂಬ ಮಾತಿನಂತೆ ತನ್ನನ್ನು ಮರೆತು ಬಿಟ್ಟನಲ್ಲಾ, ಕೊಡೋದನು ಕೊಡಲಿಲ್ಲಾಂತ ಆಕೆಯು ತನ್ನ ಬಳಿಗೆ ಬಂದು ಹೋಗುವವರಿಗೆಲ್ಲ ಹೇಳಿ ತನ್ನ ಬಾಯಿಯ ಕಡಿತ ತೀರಿಸಿಕೊಂಡಿದ್ದಳು. “ಯಿಂಥಾ ಅನುವಾದ ಬ್ಯಾನೆ ಯಿಟು ಕಂಡೀ ಯಂತಲ್ಲಾ.. ಮಾಡಿಕೊಂಡ ಹೆಂಡ್ತಿಯಾದ ನಾನೇ ಅದ ನೋಡಿಲ್ಲಾಂದರ ಹೆಂಗೆ.. ತೋರೂ.. ತೋರು” ಅಂತ ಕಿರಿಯ ಹೆಂಡತಿಯೂ, ಜನ್ನೋಬನಹಳ್ಳಿ ವತನದಾರ ಬೋಸನಾಯಕನ ಮಗಳೂ ಆದಂಥ ತಿರುಮಲಾಂಬೆಯು ಪಟ್ಟು ಹಿಡಿಯಲು ಆತನು ಹಳೆಣ್ಣೆ ದೀಪದ ಬೆಳಕಲ್ಲಿ ತಗಾ ನೋಡಿಕ್ಕಾ” ಯಂದು ತೋರಿಸಿ ಬಿಟ್ಟನು. ಮುಖ ತಗ್ಗಿಸಿ ನೋಡುತ್ತಲೆ ಆಕೆ “ಅಯ್ಯಯ್ಯೋs ಗಬ್ಬುನಾಥ.. ಥ ನಿನ್ನ” ಯಂದು ಆಕೆ ಅಂದು ದೂರವಾದದ್ದೇ ಕಡೆ.. ವುಳಿಕೆ ಹೆಂಡರು ಸುಮ್ಮನಿದ್ದಾರೆಯೇ.. “ಯಾಕೆ ತಿರುಮಲೀ.. ಹೀಗ್ಯಾಕ ದೂರ ಮಕ್ಕಂತದೀ'ಯಂದು ಪೀಡಿಸದಕ್ಕಿದ್ದು ಆಕೆಯು “ನಾನೊಲ್ಲೆರಾ. ಬೇಕಾರ ನೀವೇ ಹೋಗಿ ಸುಖ ಪಡಕಿ...” ಯಂದು ಹೇಳಿಬಿಟ್ಟಳು. ಯಲ್ಲಾರು ಹೋಗೋದು ನೋಡೋದು, ಮುಖ ಸಿಂಡರಿಸಿಕೊಳ್ಳೋದು ಮಾಡತೊಡಗಿದರು. “ನೀನು ಬಾರೆ ಜಗದಂಬಾ.. ನೀನು ಬಾರೆ ಚಲುವಾಂಬಾ.. ನೀನು ಬಾರೆ ಲಕುಮಾಂಬ” ಯಂದು ಆತನು ಕರೆಯುತ್ತಿದ್ದುದಕ್ಕೆ ಅವರೆಲ್ಲಾ ವಕ್ಕೊರಲಿನಿಂದ “ನೀನ್ಯಾವತ್ತು ನಿನ ವ್ಯಾದೀನ ವಾಸಿ ಮಾಡ್ಕೊಂಡು ಬರೀರೋ ಅಂದೇ ನಾವು ನಿನ ಜೋಡಿ ಮಲಿಕ್ಕೆಂಬೋದು” ಯಂದು ಕೊಸರಿ ನುಡಿದು ಬಿಡಲು ಆತನು “ಯಲಮೋ ಥಾಮಸು ಮನೋ... ನಮ್ಮ ರಾಜಸತ್ತೇನ ಕಸ್ಕೊಂಡಿದ್ದಲ್ಲದೆ ನನ್ನ ಹೆಂಡ್ರನು<noinclude><references/></noinclude> djajtllir794epin5t70h7r2k6a0ghy ಪುಟ:ಅರಮನೆ.pdf/೬೩ 104 77148 319648 319375 2026-05-13T14:47:08Z Shreesha Sharma 7840 /* Validated */ 319648 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=೩೨|right=ಅರಮನೆ}} ನನ್ನಿಂದ ದೂರ ಮಾಡಿಬಿಟ್ಟೆಲ್ಲಾ... ಮುಂದ ನಿನಗೂ ಯಿಂಥ ರೋಗ ಬಂದು ನಿನ್ನೆಂಡ್ರು ನ್ನಿಂದ ದೂರಾಗ್ಲಿ” ಯಂದು ದೂರುವಾಸ ಮುನಿಯಂತೆ ಸಾಪ ಹಾಕಿದನೇ ಹೊರತು ತನ್ನ ಹೆಂಡರನ್ನು ವಾಚಾಮಗೋಚರವಾಗಿ ಬಯ್ಯುವ ಸಾಹಸಕ್ಕೆ ಮಾತ್ರಹೋಗಲಿಲ್ಲ. ರಾಜಸತ್ತೆ ನಷ್ಟಗೊಂಡ ಮ್ಯಾಲ ಅವರು ತಮ್ಮ ತಮ್ಮ ತವರುಮನೆಗಳಿಂದ ವಂದಲ್ಲಾ ಎಂದು ಬೆಲೆಬಾಳುವ ವಸ್ತುಗಳನ್ನು ತರುತ್ತಿದ್ದುದೇ ಕಾರಣ. ದೋಪರಯುಗದಲ್ಲಿ ದ್ರವುಪದಿಗೆ ಅಯ್ದು ಮಂದಿ ಗಂಡರಿದ್ದರೆ ಕಲಿಯುಗದಲ್ಲಿ ತನಗೆ ಅಚ್ಚು ಮಂದಿ ಹೆಂಡತಿಯರಿರುವ ಕಾರಣಕ್ಕೆ ತನ್ನನ್ನು ತಾನು ಪಂಚಾಲನೆಂದು ಕರೆಯಿಸಿಕೊಳ್ಳುತ್ತಿದ್ದ ಆತನು ಮುಂದೊಂದು ದಿವಸ ಪಗಡೆಯಾಟ ಆಡಲಕೆಂದು ಸಿಂಗನಮಲ ಯಂಬ ಗ್ರಾಮಕ್ಕೆ ಹೋಗಿದ್ದನು. ಅಲ್ಲಿ ಕುಂತಲ ಸೀಮೆ ಮಟ್ಟದ ಪಗಡೆ ಪಂದ್ಯಾಟವು ಯೇರು ಪಾಟಾಗಿತ್ತು. ಕುಶಲ ಆಟಗಾರನಾದ ಪಾಂಚಾಲನ ಯದುರಾಳಿಯು ತನ್ನ ಸೊಂಟದಿಂದ ವಂದು ಪಾತ್ರೆತೆಗೆದು ಪಣ ವಡ್ಡಿದನು. ಅದನ್ನು ನೋಡಿ ನಗಾಡುತ ಪಂಚಾಲನು “ಯಿದ್ಯಾವ ಸೀಮೇದು” ಯಂದು ಕೇಳಿದ್ದಕ್ಕೆ “ಯಿದು ಸಾಮಾನ್ಯ ಪಾತ್ರೆಯಲ್ಲ... ಯಿದು ಕುತಯುಗ ಕಾಲದಲ್ಲಿ ಹರಿಶ್ಚಂದ್ರನು ಶವುಚಕ್ಕೆ ಬಳಸುತ್ತಿದ್ದ.. ತ್ರೇತಾಯುಗದಲ್ಲಿ ರಾಮನೂ, ದ್ವಾಪರದಲ್ಲಿ ಕವುರವರೂ ತಮ್ಮ ಶವುಚ ಕಾರಕ್ಕೆ ಬಳಸುತ್ತಿದ್ದರು, ಕಲಿಯುಗದಲ್ಲಿ ಗಂಗ, ಕದಂಬ, ಚಾಲುಕ್ಯರಿಂದ ಹಿಡಿದು ವಿಜಯನಗರವನ್ನಾಳಿದ ರಾಜರು ಯದರೊಳಗಿನ ನೀರಿನಿಂದ ತಮ ತಮ್ಮ ದ್ವಾರಗಳನ್ನು ತೊಳೆದುಕೊಂಡು ಆರೋಗ್ಯ ಸಂಪಾದಿಸಿ ಕೊಂಡಿದ್ದಾರೆ. ಯೇನೆಂದು ತಿಳಿದುಕೊಂಡಿರುವಿ ಮೂಢಾs” ಯಂದು ಜಯುನಿವರೆಗೆ ಮೋದಿಕೊಂಡಿದ್ದ ಆತನು ಯಿವರಿಸಿದನು. ಆಗಿದ್ದು ಯೀತನು “ಸರೆ ಹಂಗಯೇನು ಯಿದ್ರಸಮಾಸ್ಕಾರss... ಯಿದು ನಿನ್ನತ್ರಹೆಂಗ ಬಂತು?” ಯಂದು ಪ್ರಶ್ನೆ ಹಾಕಿದ್ದಕ್ಕಾತನು ನಮ್ಮ ಮನೆತನ ಯಂಥಾದ್ದು? ಯೇನುಕಥೆ? ನಾವು ಗುರೂಂ ಮನೆತನದವರು. ನಮ್ಮ ಗಿರಿ ಮುತ್ತಾತ ಹಯವದನನು ದೂರ ದೂರದ ದೇಶಗಳಿಂದ ಸಾವಿರ ಗಟಲೆ ಜಾತಿ ಕುದುರೆಗಳನ್ನು ತರಿಸಿ ಮೋರಂಗಲ್ಲನ್ನಾಳುತ್ತಿದ್ದ ಕಾಕತೀಯ ರಾಜರಿಂದ ಹಿಡಿದು ದಖ್ಯನದ ಮಲಬಾರಿ ಅರಸರವರೆಗೆ ಸರಬರಾಜು ಮಾಡುತ್ತಿದ್ದನು. ಪತ್ತಿಕೊಂಡವನ್ನಾಳುತ್ತಿದ್ದ ವೀರಾಜು ಪಾರಿತೋಷಕ ರೂಪದಲ್ಲಿ ಹೊದನ್ನು ಕೊಟ್ಟಿದ್ದನು.. ತಿಳಿತಾ... ನೀನು ನಗಾಡಿದಲ್ಲಿ mದರೊಳಗಿರುವ ಶಕ್ತಿ ಮಾಯವಾದೀತು, ಯಚ್ಚರಿಕೆ, ಹೊದರೊಳಗೆ ಮಾಂಯರೂಪದಲ್ಲಿ ವಾಸಿಸುತ್ತಿರುವ ಅಶ್ವಿನಿ ದೇವತೆಗಳ ಕೋಪಕ್ಕೆ<noinclude><references/></noinclude> jemjoocrexkvg89cp5zbsfycm8etc4h ಪುಟ:ಅರಮನೆ.pdf/೬೪ 104 77149 319649 319376 2026-05-13T14:47:18Z Shreesha Sharma 7840 /* Validated */ 319649 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=ಅರಮನೆ|right=೩೩}} ಗುರಿಯಾಗುವಿ” ಯಂದು ಹೇಳಿದನು. ಯಂದಿನಂತೆ ಆತ ಸೋತನು, ಮೀತ ಗೆದ್ದನು. {{gap}}ಗುಟ್ಟಾಗಿ ತಂದು ತನ್ನ ಕಬ್ಬಿಣ ಪೆಠಾರಿಯೊಳಗೆ ಬಚ್ಚಿಟ್ಟನು ಪಂಚಾಲನು. ತಿಪ್ಪೆಯೊಳಗ ಹೂತರೂ ವಜಹಂಗ ಪ್ರಕಾಸಮಾನವಾಗಿ ಹೊಳೆವುದೋ, ಅದೇ ರೀತಿ ಆ ಪಾತ್ರೆಯು ಹೆಂಗೋ ಮಲ್ಲಾರಿಗೂ ತನ್ನ ಪರಿಚಯವನ್ನು ಮಾಡಿಕೊಂಡಿತು. ಮುಖ್ಯವಾಗಿ ಆತನ ಹೆಂಡರಿಗೆ.. “ನಮ್ಮಯ್ಯರನ್ನು ಮದುವೆಯಾಗಿ ಪಂಚಾಲಯೆಂಬುವ ಬಿರುದನ್ನು ಧರಿಸಿರೋ ನೀನೇ ನಮ್ಮೆದೋಅ ಬಗೆಯುವುದೇನು? ನಮಗೂ ಅದನ್ನು ವುಪಯೋಗ ಮಾಡೋ ಹಕ್ಕುಂಟು.. ಕೊಡು ಕೊಡು” ಯಂದು ಅವರೆಲ್ಲ ಕಲೆಬಿದ್ದರು. ಯೀ ಪರಪಂಚದೊಳಗೆ ತಾನೋಗ್ರನೇ ಆರೋಗ್ಯದಿಂದ ಕಂಗೊಳಿಸುತ್ತಿರಬೇಕೆಂಬ ಯಿಚ್ಚೆವುಳ್ಳವನಾದ ಆತನು ಪಾಲಿನ ರಾಜ್ಯವನ್ನು ಬೇಕಾದರೆ ಕೊಟ್ಟೇನು, ಆದರೆ ಅದನು ಮಾತ್ರಕೊಡಲಾರೆ” ಯಂದು ಖಡಾಖಂಡಿತವಾಗಿ ಹೇಳಿಬಿಟ್ಟಳು. ತನ್ನ ಪ್ರಾಣ ಪದಕದಂತಿರೋ ಗೆಳೆಯರಾದ.... - {{gap}}ಅಮಾತ್ಯ ಗವುಡಿಕೆ ಸಣಸಿದ್ದಪ್ಪ ಭಂಡಾರಿ ಸನ್ಯಾಸಪ್ಪ “ಕಾಟಯ್ಯ ನಾಯಕ sss?” ರಂದು ಕಡದಮ್ಮನ ಹಳ್ಳದ ಬೇಲಿ ಸಾಲೊಳಗೆ ಬೆದಕಾಡುತ್ತಿದ್ದಾರೆ. ''ಯಲ್ಲದೀ ದೊರsss” ಯಂದು ಕೂಗುತ್ತಿದ್ದಾರೆ.. ಕಾಟಯ್ಯನು ಅವರ ಕಣ್ಣಿಗೆ ಬೀಳಬಾರದೆಂದು ಪೊದೆಯಿಂದ ಪೊದೆಗೆ ಸರಿದಾಡುತ್ತಿ ದ್ದಾನೆ.. ಯಿನ್ನು ಸರದಾಡಲಿಕ್ಕಾಯ್ತಾಯಿಲ್ಲ.. ಪ್ರಸವ ಯೇದನೆ ಪರಾಕಾಷ« ತಲುಪಿ ಬಿಟ್ಟು ಸ್ನಾ.. ಯಂದು ಆತನು ತಿಣುಕಿದ ಸಬುಧವು ಗಿಡಮರಗಳ ಯಲೆ ಯಲೆಗೆ ತಾಕಿ ಪ್ರತಿಧ್ವನಿಸಲು... {{gap}}ಅವರು ಸುಯ್ಯಂತ ತಲುಪಿ "ಯೇನು ದೊರೆ? ನಾವು ಮಾಡಿರೋ ಪಾಪವಾದರೂ ಯೇನು? ನಮ್ಮನ್ನು ಬಿಟ್ಟು ನೀನೊಬ್ಬೆ ಹೊರಕಡೀಕ ಬಂದೀಯಲ್ಲ..” ಯಂದು ಆತನ ಮುಂದ ಅಲ್ಲಲ್ಲಿ ಕೂತುಕೊಳ್ಳಲು ಅದೇ ಪುವಲ ರಾಜಾಸ್ತಾನವಾಗಿ ಮಾರುಪಟ್ಟಿತು. ಅವರಾರಿಗೂ ವಂದೇ ವಂದು ಹನಿ ನೀರು ವುಳಿಯದಂತೆ ತೊಳೆದುಕೊಂಡು ನಂತರ ಅದನ್ನು ಸೊಂಟದ ಬಾಳೆ ಕಾಯಿಯೊಳಗೆ ಮರೆಮಾಚಿಕೊಂಡು ಆತನು ರಾಜಗಾಂಭೀಯ್ಯದಿಂದ “ಯೇನುರಯಾ.. ನನ್ನನ್ನು ಹುಡುಕಿಕೊಂಡು ಯಾಕ ಬಂದೀರಪ್ಪಾ? ಯೇನಾದರೂ ರಾಜಕಾರಣ ವುಂಟೇನು” ಯಂದು ಮಂತರಾಲೋಚನೆಗೆ ನಾಂದಿ ಪಲುಕಿದನು..<noinclude><references/></noinclude> cbke4ip1t2wygu4wo2qkbmpf8epr28x ಪುಟ:ಅರಮನೆ.pdf/೬೫ 104 77150 319650 319377 2026-05-13T14:47:36Z Shreesha Sharma 7840 /* Validated */ 319650 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=೩೪|right=ಅರಮನೆ}} ಆಗ ಅವರ ಬಾಯಿಯಂಬ ಬೀಜ ಮೊಳಕೆ ಹೊಡೆಯಲು ಅದರ ಸುಳಿ ವಳಗೆ ಮೋಬಯ್ಯ ಯಂಬ ಆಕ್ರುತಿಯು ರುದ್ರೋಚರವಾತು ಸಿವಸಂಕರ ಮಾದೇವಾss.. {{gap}}“ಹಾಂ.. ವಬ್ಬ ಯಕಃಶ್ಚಿತ್ ಪಿಕದಾನಿ ಹಿಡಿಯೋನು ರಾಜಾಗ್ನೆಯನ್ನು ದಿಕ್ಕಾರ ಮಾಡಿದನೇನು? ಅವನಿಗೆ ತಕ್ಕ ಸಾಸ್ತಿ ಮಾಡಬೇಕು” ಯಂದು ಗುಡು ಗುಡಿಸುತ್ತ ಮುಂದ ಮುಂದ ಕಾಟಯ್ಯ.. ಹಿಂದ ಹಿಂದ ಆ ಮಾನವ ರೂಪಿ ಅರಮನೆಯ ಆಧಾರ ಸ್ತಂಭಗಳು.. ಮೊದಲಿನಿಂದಲೂ ಆಟೇಯಾ, ಮೋಬಯ್ಯನು ಅವರಾರಿಗೂ ಆಗಿ ಬರಾಣಿಲ್ಲ.. ಪಿಕದಾನಿಯೇ ತನ್ನ ರುದಯ ಕಲಸ ಯಂದು ಭಾವಿಸಿ ರಾಜನಿಷೆ«ಯಿಂದ ಅರಮನೆಯ ಸೇವೆ ಮಾಡುತ್ತಿದ್ದ ಮೋಬಯ್ಯ ಯಂಬ ಪ್ರಣವಾಕ್ಷರಗಳನ್ನು ಅವರೆಲ್ಲ ತಮ್ಮ ತಮ್ಮ ಬಾಯೊಳಗೆ ಜಮಡುತ ನಮಲುತ್ತ... {{gap}}ಅರಮನೆಯ ದಿವಾನ ಖಾಸಾದೊಳಗ ಯಪ್ಪತ್ತೊಂಬತ್ತರ ಹರೆಯದ ರಾಜಮಾತೆಯು ಯಿಪ್ಪತ್ತರ ಹರೆಯವನ್ನು ಹಾ... ಹೂ ಅಂತ ಆವಹಿಸಿಕೊಳ್ಳುವ ಯತ್ನವ ಮಾಡುತಲಿದ್ದಾಳೆ.. ಥಳಗೇರಿಯಿಂದ ಬರುತಲಿದ್ದ ವಂದೊಂದು ವರಮಾನವು ಕಾದ ಸೀಸದೋಪಾದಿಯಲ್ಲಿ ಆಕೆಯ ಕಿವಿಯಲ್ಲಿಳಿತಾ ಅದೆ.. ರಾಜಪರಿವಾರದೋರು ಅಲ್ಲಿ, ಮಳಿಗದೋರು ಯಿಲ್ಲಲ್ಲಿ ಗಪ್ ಚುಪ್ಪಾಗಿ ನಿಂತವರೆ ಕುಂತವರೆ, ಅಲ್ಲೆ ಅನತಿ ದೂರದಲ್ಲಿದ್ದ ಸಿಮಾಸನದ ಮ್ಯಾಲ ಮಾರ್ಜಾಲ ಮೊಂದು ಹೆಬ್ಬುಲಿಯೋಪಾದಿಯಲ್ಲಿ ರಾಜನಿದುರೆ ಮಾಡುತಲಿದೆ. ಅದರ ವಡಲ ಗುರುಗುರು ನಿನಾದಕ್ಕೆ ಸಿಮಾಸನದ ಅಂಗೋಪಾಂಗಗಳು ಕಂಪಿಸುತ್ತಿವೆ. ಅವುದೋ ಅಲ್ಲವೋ ಯಂಬ ನಿಷ್ಪತ್ತಿಯಲ್ಲಿ ಅದು ಹಿಂದಕು ಮುಂದುಕು ವಾಲಾಡುತಲದೆ... {{gap}}ಆಕೆಯ ವುಸುರಾಟದೊಳಗೆ ಮೊಬಯ್ಯ ಮುಡು ಮುಡನೆ ಮೂಡತಲವನೆ, ಮುಳು ಮುಳುನೆ ಮುಳುಗತಲವನೆ, ಮಾತಿನ ಸಿಮುಟಿಗೆ ಸಿಲುಕದೆ ಪುಸಕ್ಕಂತವನೆ... ಅಲಲಲಾ ಮೋಬಯ್ಯ ಎಂದು ಹಲ್ಲು ಮೂಡದ ಮೊಲದಂಗಿದ್ದೆಲ್ಲಾ.. ಅರಮನೆಯ ತೊಂಬಲವ ತುಂಬಿ ಕೊಂಡಿರೋ ಸರೀರವುಳ್ಳವನೇ.. ಮಯ್ಯೋಳಗ ಎಂದು ನಮೂನಿ ಆಗತಂತ ಹೋದಾತ ಅತ್ತಾಗೆ ಹೋದೆಲ್ಲಾ... ಯಂದನಕಂತ ರಾಜಮಾತೆ ಯಲ್ಲಾರಿಗೂ ಕೇಳಿಸುವಂತೆ ಕಾಟಯ್ಯನಿಗೆ ಯೀ ಪ್ರಕಾರವಾಗಿ ಯೇನು ಹೇಳಿದಳೆಂದರೆ.... {{gap}}“ಅಯಾs ರಾಜಕುಮಾರಾss.. ಕುಂಪಣಿಮಂದೀಗೆ ಅರಮನೇಲಿ<noinclude><references/></noinclude> kgsgztn2p9jwkbpxgn5pn4fqrql1xmw ಪುಟ:ಅರಮನೆ.pdf/೬೬ 104 77151 319568 169860 2026-05-13T14:11:33Z Shreelatha.Halemane 7642 /* Proofread */ 319568 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{rh|center=|left=ಅರಮನೆ|right=೩೫}} ಹುಟ್ಟಿದ ನೀವೆಲ್ಲಾರು ಅಡ್ಡಾಯ ಕೊಟ್ಟಿದ್ದಕ್ಕೆ ಮಳಿಗದ ಮಂದಿ ತಮ್ಮೋಟಕ ತಾವು ಕುಣೀಲಕ ಹತ್ಯಾರ, ನಿಮ್ಮಂಥ ರಾಜಕುಮಾರರು ಬಿಗುಸು ಯಿದ್ದರ ಹಿಂಗಾಗುತಿರಲಿಲ್ಲ. ಯೀಗ ಯೀತನು, ನಾಳೆ ಯಿನ್ನೊಬ್ಬಾತನು, ಅರಮನೆ ಅಂದರ ಯೇನಂತ ತಿಳಕೊಂಡಿರುವರೋ? ಯಿದು ಹಿಂಗss ಮುಂದೊರೆದರ ನಮ ಚಾಕರಿ ನಾವೇ ಮಾಡಬೇಕಾಗಿ ಬಂದೀತು, ಅದಕ ನೀನು ಆ ಮೋಬಯ್ಯಲ್ಲಿಗೆ ಬರೋಹಂಗ ಮಾಡು” ಯಂದು ಹೇಳಲು.. ಅದಕಿದ್ದು ಕಾಟಯ್ಯನು ಯವ್ವಾ. ನೀನೆಸನ ಮಾಡಿಕೋ ಬ್ಯಾಡ, ಮೋಬಯ್ಯನೆಂಬ ದುರುಳನಿಗೆ ನಾನು ಬುದ್ದಿ ಕಲಿಸಿ ನಿನ್ನ ಪಾದದ ಬುಡಕ ಕೆಡವುತೀನಿ” ಯಂದು ಭರವಸೆ ನೀಡಿ ತಾನು ಬಂದ ಹಜಾರವು ಪಿಸುಮಾತಿನ ಮೊಗಸಾಲೆಯಾಗಿತ್ತು. ಹಿಂದಿನ ರಾಜಮಾರಾಜರು ಯುದ್ಧ ತಂತ್ರಗಳ ನೀಲಿನಕ್ಷೆ ರೂಪಿಸುತ್ತಿದ್ದ ಜಾಗ ಅದಾಗಿತ್ತು. ತನ್ನ ಯಡ ಬಲಕ ಆಗ್ರಾಧಾರಕರಾಗಿ ನಿಂತುಕೊಂಡಿದ್ದ ರಾಜಸೇವಾಸಕ್ತರನ್ನುದ್ದೇಶಿಸಿ.... {{gap}}“ತಲೆಯಿರುವಾಗಲೆ ಮೊಣಕಾಲು ಚಿಪ್ಪಿಗೆ ಪಟ್ಟಕಟ್ಟುವ ಹುನ್ನಾರು ನಡದಂಗ ಕಾಣತಯ್ತೆ, ಕಂಪಣಿ ಮಂದಿ ವಂದಪ್ಪ ಆದರ ಯೀ ಪಿಕದಾನಿ ಮೋಬಯ್ಯ ಯಿನ್ನೊಂದಪ್ಪ ಆಗ್ಯಾನ ಯೀತ ಬರಿ ಬಾಯಿ ಮಾತೀಲೆ ಬಗ್ಗೋ ಪಯ್ಕಿ ಅಲ್ಲ.. ದಂಡಂ ದಶಗುಣಂ ಭವೇತ್ ಅಂತ ನಮಗ ಸಾಲಿ ಕಲಿಸಿದ ಗುರುಗಳು ಹೇಳ್ತಿದ್ರು.. ಅವನ್ನ ವದ್ದು ಬಡ್ದೂ ಯಳಕೊಂಡು ಬರಂಥೋರು ಯಾರದಾರ.. ಯಿದರ ಕಾಲಾಗ ವಂದ್ಯಾಕ, ಯಲ್ಲು ಬೆಳ್ಳಿ ರೂಪಾಯಿ ಖರುಚಾದ್ರುಪರವಾಯಿಲ್ಲ...” ಯಂದು ರೋಸಿ ಹೇಳಿದನು. {{gap}}ಅದಕಿದ್ದು ರಾಜಸೇವಾಸಕ್ತರು ಪರಸ್ಪರ ಮುಖ ನೋಡಿಕೊಂಡರು. “ಹುಷಾರಾಗಿ ಕಾಲಿಡ್ರಿ.. ವೆಬಯ್ಯನ ಮನೊಳಗ ಆದಿ ಸಗುತಿಯದ್ದಂಗಯ್ಯಾಳ.. ಆಟೋರಾಜ ಮುನುಸುಕೊಂಡನಿಭಾಯಿಸಬೋದು, ಅದರ ಕಾಪಾಡೋ ದಯವ ಮುನುಸುಕೊಂಡಲ್ಲಿ ಯೇನು ಗತಿ? ತಲಿ ಗಟ್ಟಿ ಅಯ್ತಂತ ಗೋಡೆಗೆ ಹಾಯ ಬ್ಯಾಡ್ರಿ”ಯಂದು ತಮ್ಮ ತಮ್ಮ ಹೆಂಡರು ಆಡಿದ್ದ ಬುದ್ದಿವಾದ ವನ್ನು ನೆನಪಿಸಿಕೊಂಡರು. ಅದರ ಬ್ಯಾರೆ ಮೋಬಯ್ಯ ವುಂಡಮನೆಗೆ ಯರಡು ಬಗೆಯೋ ಪಯ್ಕೆ ಅಲ್ಲಯಂಬುದು ಯಲ್ಲಾರಿಗೂ ಗೊತ್ತಿರೋ ಸಂಗತಿ. ವಿರೋಧಿ ರಾಜರೇನಾದರೂ ಆತನನ್ನು ಪಗಡೆ ಕಾಯಾಗಿ ಬಳಸಿಕೊಂಡಿರಬೌದೇ?.. ಆತ ತನ್ನ ಅನುಚಿತ ವರನೆಗೆ ಕಂಡರಿಯದ, ಕೇಳರಿಯದ ಸಾಂಬವಿ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿರಬೌದೇ? ತಾನು<noinclude><references/></noinclude> coyn6aulj5ntg82627ghxsbegjpshi7 319651 319568 2026-05-13T14:47:47Z Shreesha Sharma 7840 /* Validated */ 319651 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=ಅರಮನೆ|right=೩೫}} ಹುಟ್ಟಿದ ನೀವೆಲ್ಲಾರು ಅಡ್ಡಾಯ ಕೊಟ್ಟಿದ್ದಕ್ಕೆ ಮಳಿಗದ ಮಂದಿ ತಮ್ಮೋಟಕ ತಾವು ಕುಣೀಲಕ ಹತ್ಯಾರ, ನಿಮ್ಮಂಥ ರಾಜಕುಮಾರರು ಬಿಗುಸು ಯಿದ್ದರ ಹಿಂಗಾಗುತಿರಲಿಲ್ಲ. ಯೀಗ ಯೀತನು, ನಾಳೆ ಯಿನ್ನೊಬ್ಬಾತನು, ಅರಮನೆ ಅಂದರ ಯೇನಂತ ತಿಳಕೊಂಡಿರುವರೋ? ಯಿದು ಹಿಂಗss ಮುಂದೊರೆದರ ನಮ ಚಾಕರಿ ನಾವೇ ಮಾಡಬೇಕಾಗಿ ಬಂದೀತು, ಅದಕ ನೀನು ಆ ಮೋಬಯ್ಯಲ್ಲಿಗೆ ಬರೋಹಂಗ ಮಾಡು” ಯಂದು ಹೇಳಲು.. ಅದಕಿದ್ದು ಕಾಟಯ್ಯನು ಯವ್ವಾ. ನೀನೆಸನ ಮಾಡಿಕೋ ಬ್ಯಾಡ, ಮೋಬಯ್ಯನೆಂಬ ದುರುಳನಿಗೆ ನಾನು ಬುದ್ದಿ ಕಲಿಸಿ ನಿನ್ನ ಪಾದದ ಬುಡಕ ಕೆಡವುತೀನಿ” ಯಂದು ಭರವಸೆ ನೀಡಿ ತಾನು ಬಂದ ಹಜಾರವು ಪಿಸುಮಾತಿನ ಮೊಗಸಾಲೆಯಾಗಿತ್ತು. ಹಿಂದಿನ ರಾಜಮಾರಾಜರು ಯುದ್ಧ ತಂತ್ರಗಳ ನೀಲಿನಕ್ಷೆ ರೂಪಿಸುತ್ತಿದ್ದ ಜಾಗ ಅದಾಗಿತ್ತು. ತನ್ನ ಯಡ ಬಲಕ ಆಗ್ರಾಧಾರಕರಾಗಿ ನಿಂತುಕೊಂಡಿದ್ದ ರಾಜಸೇವಾಸಕ್ತರನ್ನುದ್ದೇಶಿಸಿ.... {{gap}}“ತಲೆಯಿರುವಾಗಲೆ ಮೊಣಕಾಲು ಚಿಪ್ಪಿಗೆ ಪಟ್ಟಕಟ್ಟುವ ಹುನ್ನಾರು ನಡದಂಗ ಕಾಣತಯ್ತೆ, ಕಂಪಣಿ ಮಂದಿ ವಂದಪ್ಪ ಆದರ ಯೀ ಪಿಕದಾನಿ ಮೋಬಯ್ಯ ಯಿನ್ನೊಂದಪ್ಪ ಆಗ್ಯಾನ ಯೀತ ಬರಿ ಬಾಯಿ ಮಾತೀಲೆ ಬಗ್ಗೋ ಪಯ್ಕಿ ಅಲ್ಲ.. ದಂಡಂ ದಶಗುಣಂ ಭವೇತ್ ಅಂತ ನಮಗ ಸಾಲಿ ಕಲಿಸಿದ ಗುರುಗಳು ಹೇಳ್ತಿದ್ರು.. ಅವನ್ನ ವದ್ದು ಬಡ್ದೂ ಯಳಕೊಂಡು ಬರಂಥೋರು ಯಾರದಾರ.. ಯಿದರ ಕಾಲಾಗ ವಂದ್ಯಾಕ, ಯಲ್ಲು ಬೆಳ್ಳಿ ರೂಪಾಯಿ ಖರುಚಾದ್ರುಪರವಾಯಿಲ್ಲ...” ಯಂದು ರೋಸಿ ಹೇಳಿದನು. {{gap}}ಅದಕಿದ್ದು ರಾಜಸೇವಾಸಕ್ತರು ಪರಸ್ಪರ ಮುಖ ನೋಡಿಕೊಂಡರು. “ಹುಷಾರಾಗಿ ಕಾಲಿಡ್ರಿ.. ವೆಬಯ್ಯನ ಮನೊಳಗ ಆದಿ ಸಗುತಿಯದ್ದಂಗಯ್ಯಾಳ.. ಆಟೋರಾಜ ಮುನುಸುಕೊಂಡನಿಭಾಯಿಸಬೋದು, ಅದರ ಕಾಪಾಡೋ ದಯವ ಮುನುಸುಕೊಂಡಲ್ಲಿ ಯೇನು ಗತಿ? ತಲಿ ಗಟ್ಟಿ ಅಯ್ತಂತ ಗೋಡೆಗೆ ಹಾಯ ಬ್ಯಾಡ್ರಿ”ಯಂದು ತಮ್ಮ ತಮ್ಮ ಹೆಂಡರು ಆಡಿದ್ದ ಬುದ್ದಿವಾದ ವನ್ನು ನೆನಪಿಸಿಕೊಂಡರು. ಅದರ ಬ್ಯಾರೆ ಮೋಬಯ್ಯ ವುಂಡಮನೆಗೆ ಯರಡು ಬಗೆಯೋ ಪಯ್ಕೆ ಅಲ್ಲಯಂಬುದು ಯಲ್ಲಾರಿಗೂ ಗೊತ್ತಿರೋ ಸಂಗತಿ. ವಿರೋಧಿ ರಾಜರೇನಾದರೂ ಆತನನ್ನು ಪಗಡೆ ಕಾಯಾಗಿ ಬಳಸಿಕೊಂಡಿರಬೌದೇ?.. ಆತ ತನ್ನ ಅನುಚಿತ ವರನೆಗೆ ಕಂಡರಿಯದ, ಕೇಳರಿಯದ ಸಾಂಬವಿ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿರಬೌದೇ? ತಾನು<noinclude><references/></noinclude> 0t03ttq1xec464tou2g28pid20rofx7 ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧ 104 81048 319737 191166 2026-05-14T09:33:27Z Sharanya K H 7593 /* Proofread */ 319737 proofread-page text/x-wiki <noinclude><pagequality level="3" user="Sharanya K H" /></noinclude>________________ TIGHT BINDING BOOK TEXT FLY WITHIN THE BOOK ONLY THE BOOK WAS DRENCHED<noinclude></noinclude> ivfwuw1kfm7szd8ob2x36w2202iwgdr ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨ 104 81049 319746 191167 2026-05-14T09:37:15Z Sharanya K H 7593 /* Proofread */ 319746 proofread-page text/x-wiki <noinclude><pagequality level="3" user="Sharanya K H" /></noinclude>________________ UNIVERSAL LIBRARY 2003 LIBRARY UNIVERSAL<noinclude></noinclude> qd87d06h35vml4emtp18vn48x63lv8p ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩ 104 81050 319745 191168 2026-05-14T09:36:54Z Sharanya K H 7593 /* Proofread */ 319745 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೪ 104 81051 319744 191169 2026-05-14T09:36:36Z Sharanya K H 7593 /* Proofread */ 319744 proofread-page text/x-wiki <noinclude><pagequality level="3" user="Sharanya K H" /></noinclude>________________ OUP-901--26-3-70--5,000 OSMANIA UNIVERSITY LIBRARY Call No. 349.54 Accession No. K 350. " A 538.V.1 Author Best Sono ularf. s. Title Grederas. Title This book should be returned on or beforr the date last marked helow.<noinclude></noinclude> hhn9showhamrc5izukno66hoiui068m ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೫ 104 81052 319742 191170 2026-05-14T09:36:03Z Sharanya K H 7593 /* Proofread */ 319742 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೬ 104 81053 319747 191171 2026-05-14T09:37:41Z Sharanya K H 7593 /* Proofread */ 319747 proofread-page text/x-wiki <noinclude><pagequality level="3" user="Sharanya K H" /></noinclude>________________ ಆನಂದ ಕರ್ಣಾಟಕ ಗ್ರಂಥರತ್ನ ಮಾಲೆ, ನಂ. ೨, ಶ್ರೀ . ಶ್ರೀ ವ್ಯಾಸ ಮಹರ್ಷಿ ಪ್ರ ಣಿ ತ ಶ್ರೀಮದ್ಭಾಗವತವು ಕರ್ಣ ಟಕ ವಚನವು (ಪ್ರಥಮ ದ್ವಿತೀಯಸ್ಕಂಧಗಳು.) ಶ್ರೀಮದ್ಯದುಶೈಲನಿವಾಸರಸಿಕ ಪಂಡಿತ ದೇವಶಿಖಾಮಣಿ ಅಳಸಿಂಗರಾಚಾರವಿರಚಿತವು. Vol 1. (ದ್ವಿತೀಯಮುದ್ರಣ.) ಮ ದ್ರಾ ಸು ಆನಂದಮುದ್ರಾಕ್ಷರಶಾಲೆಯಲ್ಲಿ ಮುದ್ರಿತವಾಗಿ ಆರ್. ವೇಂಕಟೇಶ್ವರಕಂಪೆನಿಯವರಿಂದ ಪ್ರಕಟಿಸಲ್ಪಟ್ಟಿದೆ. 1918 | ALL KIGHTS RESERVED<noinclude></noinclude> myyv7yi9knv7thpkqr9sgvnx92yhex3 ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೭ 104 81054 319748 191172 2026-05-14T09:38:04Z Sharanya K H 7593 /* Proofread */ 319748 proofread-page text/x-wiki <noinclude><pagequality level="3" user="Sharanya K H" /></noinclude>________________ AN, Rights Reserved. CHECKED. 1951 Checked 1963 ಕಾಪಿರೈಟ್, ೧೯೧೮ - ಈ ಪುಸ್ತಕದ ಸರ್ವಸ್ವಾತಂತ್ರವೂ ಮದ್ರಾಸ್, ಆರ್. ವೇಂಕಟೇಶ್ವರಕಂಪನಿಯವರಿಗೆ ಸೇರಿದೆ. ಇದಕ್ಕೆ ಇಂಡಿಯಾದೇಶದ ಮತ್ತು ಹೊರದೇಶದ ಕಾಪಿರೈಟ್ ತೆಗೆಯಲ್ಪಟ್ಟಿದೆ ಈ ಪುಸ್ತಕವನ್ನು ಸಂಪೂರ್ಣವಾಗಿಯಾಗಲಿ, ಅಥವಾ ಇದರ ಯಾವುದಾ ದರೂ ಭಾಗವನ್ನಾಗಲಿ, ಪ್ರತ್ಯೇಕವಾಗಿ ಪ್ರಕಟಿಸುವುದಕ್ಕೂ, ಭಾಷಾಂತ ರೀಕರಿಸಿ ವಿಕ್ರಯಿಸುವುದಕ್ಕೂ ಬೇರೊಬ್ಬರಿಗೂ ಬಾಧ್ಯತೆಯಿರದು. ಈ ಪುಸ್ತಕದೊಳಗಿನ ಭಾವಗಳನ್ನಾಗಲಿ, ಪದಗಳನ್ನಾಗಲಿ, ಚಿತ್ರಪಟಗಳ ನ್ನಾಗಲಿ, ಇತರರು ಕಾಪಿಮಾಡಿದ ಪಕ್ಷದಲ್ಲಿ, ಅಂತವರು ಕಾಪಿರೈಟನ್ನು ಉಲ್ಲಂಘಿಸಿದಂತಾಗುವುದು. ಆದುದರಿಂದ ಯಾವ ಭಾಗದಲ್ಲಿಯಾದರೂ ಈ ಕಾಪಿರೈಟನ್ನು ಉಲ್ಲಂಘಿಸಿದವರು, ನಷ್ಟದ ದಾವೆಗೆ ಗುರಿಯಾಗುವ ರೆಂದು ಇದರಿಂದ ತಿಳಿಯಪಡಿಸಿದೆ.<noinclude></noinclude> ly8wibv85pslryu9oejrwkdy5q23vhf ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೮ 104 81055 319749 191173 2026-05-14T09:38:21Z Sharanya K H 7593 /* Proofread */ 319749 proofread-page text/x-wiki <noinclude><pagequality level="3" user="Sharanya K H" /></noinclude>________________ ಪ್ರಥಮಸ್ಕಂಧದ ವಿಷಯಾನುಕ್ರಮಣಿಕೆ. ೪೧ ೪೫ 40 ೫೪ ಅಧ್ಯಾಯಸಂಖ್ಯೆ. ವಿಷಯಗಳು. ಪ್ರಟಸಂಖ್ಯೆ ಶ್ರೀಮದ್ಭಾಗವತ ಮಾಹಾತ್ಮವು. ದುಂಧುಕಾರಿವೃತ್ತಾಂತವು. ಅವತಾರಿಕೆ. ೧. ಮಂಗಳಶ್ಲೋಕಾರ್ಥವು. ಸತನ ಬಳಿಗೆ ಬಂದು ಶೌನಕಾದಿಗಳು ಪ್ರಶ್ನೆ ಮಾಡಿದುದು. ೨. ಸೂತನು ಕನಕಾದಿಗಳಿಗೆ ಪರಮಪುರುಷಾರ ಸ್ವರೂಪವನ್ನು ತಿಳಿಸಿದುದು, ಶಿ, ಭಗವಂತನ ಇಪ್ಪತ್ತೊಂದವತಾರಗಳು, ೪. ವ್ಯಾಸಮಹರ್ಷಿಯು ಚಿಂತಾಕುಲನಾಗಿ ದು:ಖಿಸುತಿದಾಗ ನಾರದನು ಆತನ ಬಳಿಗೆ ಬಂದುದು, ೫. ವ್ಯಾಸ ನಾರದ ಸಂವಾದವು. ೮೯ ನಾರದನು ತನ್ನ ಪೂರ್ವಜನ್ಮ ಚರಿತ್ರವನ್ನು ತಿಳಿಸಿದುದು. ೬. ನಾರದನು ತಾನು ವನಪ್ರವೇಶಮಾಡಿದುದನ, ತನಗೆ ಶ್ರೀ ಮನ್ನಾರಾಯಣನು ಪ್ರತ್ಯಕ್ಷವಾದುದನ ವ್ಯಾಸನಿಗೆ ತಿಳಿಸಿ, ಅವನ ಅನುಮತಿಯನ್ನು ಪಡೆದು ಹಿಂತಿರುಗಿ ಹೋದುದು. ೭. ವ್ಯಾಸಮುನಿಯು ಭಾಗವತವನ್ನು ರಚಿಸಿ ಶುಕಮುನಿಗೆ ಉಪ ದೇಶಿಸಿದುದು, . ೮, ಪಾಂಡವರು ಗಂಗಾತೀರಕ್ಕೆ ಬಂದುದು. ಕುಂತಿಯ ಪ್ರಾರ್ಥ ನೆಯಮೇಲೆ ಕೃಷ್ಣನು ಹಸ್ತಿನಾಪುರದಲ್ಲಿ ನಿಂತುದು, ಧರ್ಮರಾಜನು ತನ್ನ ತಮ್ಮಂದಿರೊಡನೆಯೂ, ಶ್ರೀಕೃಷ್ಣನೊ ಡನೆಯ ಭೀಷ್ಮಾಚಾರನ ಬಳಿಗೆ ಬಂದು, ಅವನಿಂದ ಧ ರ್ಮೋಪದೇಶವನ್ನು ಹೊಂದಿದುದು. ಭೀಷ್ಮನು' ಶ್ರೀಕೃ #ನನ್ನು ಸ್ತುತಿಸುತ್ತ ದೇಹತ್ಯಾಗವನ್ನು ಮಾಡಿದುದು. ೪೧೨ : d<noinclude></noinclude> t4ad3ppff5gx8k7ugbnp25rf12cs4ip ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೯ 104 81056 319750 191174 2026-05-14T10:27:14Z Sharanya K H 7593 /* Proofread */ 319750 proofread-page text/x-wiki <noinclude><pagequality level="3" user="Sharanya K H" /></noinclude>________________ ೧೩೪ ೧೪ಂ ೧೪೬ ೯. ಭೀಷ ನು ದೇಹಾವಸಾನಕಾಲದಲ್ಲಿ ಶ್ರೀಕೃಷ್ಣನನ್ನು ಸ್ತುತಿ ಸಿದುದು. ೧೦. ಶ್ರೀಕೃಷ್ಣನು ಧರರಾಜನನ್ನು ರಾಜ್ಯಭಾರಕ್ಕಾಗಿ ನಿಯಮಿಸಿ ತಾನು ದ್ವಾರಕೆಗೆ ಹೊರಟುದು, ೧೧, ಶ್ರೀಕೃಷ್ಣನು ದ್ವಾರಕೆಯನ್ನು ಪ್ರವೇಶಿಸಿದುದು, ಪರೀಕ್ಷಿ ಹಾರಾಜನ ಜನನವು. ೧೩, ವಿದುರನು ಹಸ್ತಿನಾಪುರಕ್ಕೆ ಬಂದು ಧೃತರಾಷ್ಟ್ರನಿಗೆ ಹಿತವ ನ್ನು ಹೇಳಿದುದು. ಧೃತರಾ ನಿರ್ಗಮನವು, ನಾರದಾ ಗಮನವು. ೧೪. ಧರ್ಮರಾಜನು ದುಶ್ಯಕ ನಗಳನ್ನು ಕಂಡು ಚಿ೦ತಾಕುಲನಾಗಿ | ದುದು. ಅರ್ಜುನಾಗಮನವು. ೧೫. ಅರ್ಜುನನು ದ್ವಾರಕಾಪುರವೃತ್ತಾಂತವನ್ನು ಧರರಾಜನಿಗೆ ತಿಳಿ - ಸಿದುದು, ಪಾಂಡವನಿರ್ಗಮನವು.. ೧೬. ಪರೀಕ್ಷಿದ್ರಾಜನ ವೃತ್ತಾಂತವು. ೧೭. ಕಲಿಪುರುಷನು ಧರ್ಮದೇವತೆಯನ್ನು ಕಾಲಿಂದೊದೆದುದು. ೧೮. ಪರೀಕ್ಷಿದ್ರಾಜನು ಬೇಟೆಗೆ ಹೋದುದು, ಶೃ೦ಗಿಶಾಪವು. ೧೯. ಪರೀಕಿನ ಹರಾಜನು ಚಿಂತಾಕುಲನಾಗಿ ದುಃಖಿಸಿದುದು, ೫೧ ೬೩ ೭ ೧೮೬ ೨೦.<noinclude></noinclude> rzz9wadh2ew7w4d4c1f1t37dscisqg7 ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೦ 104 81057 319751 191175 2026-05-14T10:28:29Z Sharanya K H 7593 /* Proofread */ 319751 proofread-page text/x-wiki <noinclude><pagequality level="3" user="Sharanya K H" /></noinclude>________________ ದ್ವಿತೀಯಸ್ಕಂಧದ ವಿಷಯಾನುಕ್ರಮಣಿಕೆ. ೨೩ ೨ 6) ೨೩೭ . ೪೧ ೨೦ ೧. ಹರಿಕೀರ್ತನಪ್ರಶಂಸೆ. ಖಟ್ವಾಂಗಚರಿತ್ರವು, ಅಷ್ಟಾಂಗಯೋ ಗವಿವರಣೆ, ನಿರಾಡೂಪವರ್ಣನೆ. ೨೧೧ ೨. ಭಕ್ತಿಯೋಗದ ಮಹಿಮೆ ಧಮಾರ್ಚಿರಾದಿಗತಿಗಳ ವಿವರಣವು. ೨೧೯ ಶುಕನು ಪರೀಕ್ಷಿಗೆ ಹರಿಭಕ್ತಿಮಾರ್ಗದ ಪ್ರಾಶಸ್ತ್ರವನ್ನೂ, ಆ ಹರಿಯೊಬ್ಬನೇ ಮೋಕ್ಷಾದಿಸರ ಫಲಪ್ರದನೆಂದೂ ತಿಳಿಸಿದುದು, ೪. ಪರೀಕ್ಷಿದ್ರಾಜನು ಶುಕಮುನಿಯ ಕುರಿತು ತಿಕಸೃಷ್ಟಿ ಯ ಕ್ರಮವನ್ನು ಕೇಳಿದುದು. ೫. ನಾರದನು ಬ್ರಹ್ಮನಿಂದ ಪ್ರಪಂಚ ಸೃಷ್ಟಿಕ್ರಮವನ್ನು ಪ್ರಶ್ನೆ ಮಾ ಡಿ ತಿಳಿದುದು, ೬. ಪುರುಷಸೂಕ್ತ ಕ್ರಮದಿಂದ ಪರಮಪುರುಷನಸ್ವರೂಪವಿವರಣೆ ವು. ವಿರಾಡ್ಮಿಭೂತಿವರ್ಣನವು. ೭, ಬ್ರಹ್ಮ ದೇವನು ನಾರದನಿಗೆ ಭಗವದವತಾರಗಳನ್ನೂ, ಆಯಾ ಅವತಾರಗಳಲ್ಲಿ ನಡೆದ ಕಾರ್ಯಗಳನ್ನೂ, ಅವತಾರಪ್ಪ ಯೋಜನಗಳನ್ನೂ ತಿಳಿಸಿದುದು. ೨೬೨ ವರಾಹವತಾರವು. ಸುಯಜ್ಞಾವತಾರವು. ಕಪಿಲಾವತಾರವು. ದತ್ತಾತ್ರೇಯಾವತಾರವು. ಮುನಿಕುಮಾರಾವತಾರವು. ನರನಾರಾಯಣಾವತಾರವು. ಧುವವರಪ್ರದಾವತಾರವು. ಪೃಥುಚಕ್ರವರ್ತಿಯ ಅವತಾರವು. ಋುಷಭಾವತಾರವು. ಹಯಗ್ರೀವಾವತಾರವು. - ೨೬೩ >> ೩೩೪ - - ೨೬೭ - ೨೩ - ೨೬<noinclude></noinclude> 9sq39gn5052dby8v8cnhf7xlq8ipha3 ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೧ 104 81058 319752 191176 2026-05-14T10:28:44Z Sharanya K H 7593 /* Proofread */ 319752 proofread-page text/x-wiki <noinclude><pagequality level="3" user="Sharanya K H" /></noinclude>________________ ೨೩೮ ೨೩೯ ೨೭೦ ೨೭೨ ಮತ್ತಾವತಾರವು. ಕೂರ್ಮಾವತಾರವು. ನೃಸಿಂಹಾವತಾರವು. ಗಜೇಂದ್ರವರದಾವತಾರವು. ವಾಮನಾವತಾರವು, ಹಂಸಾವತಾರವು. ಆಯಾಮನ್ವಂತರಗಳಲ್ಲಿ ಬೇರೆಬೇರೆಯಾಗಿ ಕೈಕೊಂಡ ಅವತಾರಗಳು, ಧನ್ವಂತರಿಯ ಅವತಾರವು. ಪರಶುರಾಮಾವತಾರವು. ಶ್ರೀರಾಮಾವತಾರವು. ಕೃಷ್ಣಾವತಾರವು, ೨೭೪ ವ್ಯಾಸಾವತಾರವು. ಬಿದ್ದಾವತಾರವು. ಕಲ್ಯ ವತಾರವು. ೮. ಪರೀಕ್ಷಿದ್ರಾಜನು ಇನ್ನೂ ಬೇರೆಬೇರೆ ವಿಷಯಗಳನ್ನು ಕುರಿತು ಶುಕಮುನಿಯನ್ನು ಪ್ರಶ್ನೆ ಮಾಡಿದ ದು. ೨೮೬ ೯, ಶುಕಮುನಿಯು ಪರೀಕ್ಷಿದ್ರಾ? ನ ಪ್ರಶ್ನೆಗಳಿಗೆ ಕ್ರಮವಾಗಿ ಉತ್ತರ ವನ್ನು ಹೇಳಿದುದು, ೧೧. ಶುಕಮುನಿಯು ಪರೀಕ್ಷಿದ್ರಾಜನಿಗೆ ಸೃಷ್ಟ ದಿಕ್ರಮವನ್ನೂ ಜೀವಾ ಪರಮಾತ್ಮ ಸ್ವರೂಪವನ್ನೂ ಇತರ ವಿಷಯಗಳನ್ನೂ ತಿಳಿಸಿದುದು & C೫ ೨೮೬ ೨೯೧<noinclude></noinclude> t6szhmfdgstgeik7swvio8i3f5n64n6 ಪುಟ:ವೈಶಾಖ.pdf/೨೧೬ 104 82145 319659 319382 2026-05-13T14:49:34Z Shreesha Sharma 7840 /* Validated */ 319659 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=೨೦೦|right=ವೈಶಾಖ}} ಬಾಯಾಡಲೆಂದು ಹತ್ತಿರದ ಹಂಬಿನಿಂದ ನಾಲ್ಕಾರು ವೀಳೆಯದೆಲೆಗಳನ್ನು ಬಿಡಿಸಿಕೊಂಡರು. {{gap}}ಅಡಿಕೆ ಸಸಿಗಳಿಗೆಲ್ಲ ಒಬ್ಬರೆ ನೀರುಣಿಸಿ ಕೃಷ್ಣಶಾಸ್ತ್ರಿಗಳು ದೇಹಬಾಧೆಯನ್ನು ತೀರಿಸಿ, ಹಲ್ಲು ತಿಕ್ಕಿ ಮುಖಮಾರ್ಜನಮಾಡಿ ಹರಬಿಯಿಂದ ಕೊಳದ ನೀರನ್ನು ಎತ್ತಿ ಎತ್ತಿ ತಲೆಯ ಮೇಲೆ ಸುರವುಕೊಂಡರು. ಆತ್ಮಹತ್ಯೆಯ ಯೋಚನೆ ಸುಳಿಯಿತು. ಕೊಳಕ್ಕೆ ಬೀಳಲು ಹವಣಿಸಿದರು. ತಟ್ಟನೆ ಸರಸಿಯ ನೆನಪು ಆಯಿತು. ಆ ಕಂದನನ್ನು ತಬ್ಬಲಿ ಮಾಡಿ ಹೋಗುವುದೆ? ಎಂಬ ಚಿಂತೆ ಕವಿದು, ಹಾಗೆಯೇ ಮೆಟ್ಟಲಿನ ಕಲ್ಲಿನ ಮೇಲೆ ಒರಗಿದರು. ಬ್ರಹ್ಮಪಿಶಾಚಿ ಯಾಗುವೆನೆಂಬ ಭಯವೂ ಸುಳಿಯದಿರಲಿಲ್ಲ. {{gap}}ತೋಟದೊಳಗೆ ಲಕ್ಕ ಶಾಸ್ತಿಗಳನ್ನು ಸಮೀಪಿಸಿದವನೆ, {{gap}}“ಯಾಕೆ ಸೋಮಿ, ಇಂಗೆ ಕುಂತುಬುಟಿ?- ಮದ್ದಿನ್ನ ಆಗ್ಲೆ ದಾಟೋಗದೆ?” ಎಂದು ಕೇಳಿದವನು, “ಕೇಸವಯ್ಯಾರ ತಟಕೋಗಿದ್ದೆ” ಎಂದು ವಿವರಿಸಿ, “ಅಡಿಕೆ ಸೊಸಿಗಳೆ ನೀರ ಆಕ್ಲಾ?” ಕೇಳಿದ. {{gap}}ಬೋಡ್ಡ ಒಂದು ಹಳ್ಳಿಕುಂಚವನ್ನು ಅಟ್ಟಿಸಿಕೊಂಡು ಓಡಿತು. ಇನ್ನೇನು ಸಿಕ್ಕಿತು. ಎನ್ನುವುದರಲ್ಲಿ ಅದು ಒಂದು ಅಡಿಕೆ ಮರವನ್ನು ಹತ್ತಿಬಿಟ್ಟಿತು. ಕೈತಪ್ಪಿದ ಬೇಟೆಯಿಂದ ನಿರಾಶೆಗೊಂಡ ಬೊಡ್ಡ ಅಡಿಕೆ ಮರದ ಕೆಳಗಡೆ ನಗರುತ್ತ ನಿಂತು ಮೇಲೆ ಹೋಗಿ ಮರೆಯಾದ ಹಳ್ಳಿಕುಂಚನನ್ನೇ ತನ್ನ ದೃಷ್ಟಿಯಲ್ಲಿ ಅರಸುತ್ತಿತ್ತು. {{gap}}ಶಾಸ್ತ್ರಿಗಳು ತನ್ನ ಮಾತಿಗೆ ಉತ್ತರ ಕೊಡದಿರಲು, ಲಕ್ಕ ಮತ್ತೊಮ್ಮೆ ಅವರನ್ನು ಸಮೀಪಿಸಿ ಕೇಳಿದ: {{gap}}“ಸೋಸಿಗಳೆ ನೀರ ಆಕ್ಲಾ, ಅಯ್ಯಾರೆ?” {{gap}}“ಬೇಡ. ಎಲ್ಲಕ್ಕೂ ನಾನೇ ಹಾಕಿದ್ದೀನಿ” ಎನ್ನುತ್ತ ನಿಧಾನವಾಗಿ ಎದ್ದು, ಮಣ್ಣಿನಲ್ಲಿ ಹೊರಳಾಡಿದ್ದರಿಂದ ಮೈಲಿಗೆಯಾಯಿತೆಂದು ಇನ್ನೊಮ್ಮೆ ತಲೆಯಿಂದ ನೀರು ಸುರುವಿಕೊಂಡು, ಒದ್ದೆ ಪಂಚೆಯಲ್ಲಿ ಶಾಸ್ತ್ರಿಗಳು ಮನೆಯ ಕಡೆ ಹೊರಟರು. ಮೈ ಮೇಲೆ ಹೊದಿಯುವ ವಸ್ತ್ರಗಳನ್ನು ನೀರಿಗೆ ಅದ್ದಿ ಹಿಂಡಿ, ಅದನ್ನು ಮಡಿಕೆ ಮಾಡಿ ತಲೆಯ ಮೇಲೆ ಇಟ್ಟಿದ್ದರು. ಕೈಯಲ್ಲಿ ಮಡಿನೀರು ತುಂಬಿದ ತಾಮ್ರದ ಚೆಂಬು, {{gap}}ಬೊಡ್ಡನೊಡನೆ ಲಕ್ಕನೂ ಅವರನ್ನು ಹಿಂಬಾಲಿಸಿದ. ಶಾಸ್ತಿಗಳ ಮಾತು ಯಾವತ್ತೂ ಮಿತ. ಇದು ಲಕ್ಕನಿಗೂ ತಿಳಿದ ವಿಷಯವೆ. ಹಾಗಿದ್ದೂ ಒಮ್ಮೊಮ್ಮೆ ತನ್ನೊಡನೆ ಯಾವ ವಿಚಾರವನ್ನಾದರೂ ಎತ್ತಿ ಮಾತಾಡಿಸಿ ತಾನು ಮಾತಾಡುವಂತೆ<noinclude></noinclude> cz09hx2nbmh07edxwq843u4ifvzy4o3 ಪುಟ:ವೈಶಾಖ.pdf/೨೧೭ 104 82146 319660 319383 2026-05-13T14:49:43Z Shreesha Sharma 7840 /* Validated */ 319660 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=ಸಮಗ್ರ ಕಾದಂಬರಿಗಳು|right=೨೦೧}} {{gap}}ಹಚ್ಚಬೇಕು! ಆದರೆ ಈ ದಿನ ಅವರು ತುಟಿ ಪಿಟಕ್ಕೆನ್ನದ ಮೌನವಾಗಿ ಸಾಗುತ್ತಿದ್ದುದು ಲಕ್ಕನಿಗೆ ಅಚ್ಚರಿ ತಂದಿತ್ತ {{gap}}“ಇವೊತ್ತು ಈ ಅಯ್ಯನೋರ ಚರ್ಯೇನೆ ಒಂದು ತರಾ ಆಗದೆ. ಇವುರ ಅಟ್ಟೇಲಿ ಯಾನೊ ಯಾಸ ನಡದಿರಬೈದು, ಅತ್ವಾ, ಭೀಮನಳ್ಳಿಗೆ ವೋಗಿರೋ ಇವರ ಎಣ್ಣು ಇನ್ನೂ ಬರನಿಲ್ಲ ಅನ್ನಾ ಬ್ಯಾಸರವೊ?” ಅಂತ ತನ್ನ ಮನಸ್ಸಿನಾಗೆ ಅಂದುಕೊತ್ತ ಅಪರ ಮನೆಗಂಟ ಇಂಬಾಲಿಸಿದೋನು {{gap}}“ಇನ್ನು ನಾ ಬತ್ತೀನಿ ಕನ್ನಯ್ಯ” ಅಂತಯೋಳಿ, ಲಕ್ಕ ಹೊಲಗೇರಿ ಕಡೀಕೆ ನಡುದ... {{gap}}ಶಾಸ್ತ್ರಿಗಳು ಕೈಕಾಲು ತೊಳೆಯಲು ಮನೆಯ ಅಂಗಳಕ್ಕೆ ಇಳಿದರು ರುಕ್ಕಿಣಿಯ ಒಳಗಿನಿಂದ ಹಿತ್ತಾಳೆ ತಂಬಿಕೆಯಲ್ಲಿ ನೀರು ತಂದಳು. {{gap}}“ಅಲ್ಲಿ ಇಟ್ಟು ಹೋಗು.” {{gap}}ಯಾರೊ ಅಪರಿಚಿತರನ್ನು ಉದ್ದೇಶಿಸಿ ಹೇಳುವಂತೆ ಶಾಸ್ತ್ರಿಗಳು ನುಡಿದಿದ್ದರು. ಕೈಲಿದ್ದ ತಂಬಿಗೆಯನ್ನು ಕಟ್ಟೆಯ ಮೇಲೆ ಇಡುವಾಗ, ಮನಃಕೇಶದಿಂದ ಜರ್ಝರಿತವಾದ ಅವರ ಮುಖವನ್ನು ಗಮನಿಸದೆ ರುಕ್ಕಿಣಿ ಒಳ ನಡೆದಳು. {{gap}}ಇಷ್ಟು ದಿನ ಕೈ ಕಾಲು ತೊಳೆದು, ಮನೆಯಲ್ಲಿ ಒದ್ದೆಯಾದ ಬಟ್ಟೆಯನ್ನು ಕಳಚಿ, ಮಡಿಪಂಚೆಯನ್ನೊ ರೇಶಿಮೆ ಮಗುಟವನ್ನೊ ಉಡುತ್ತಿದ್ದ ಶಾಸ್ತ್ರಿಗಳು ಇಂದು ಒದ್ದೆ ಬಟ್ಟೆಯಲ್ಲಿ ದೇವರ ಪೂಜೆಗೆ ಕುಳಿತರು. ರುಕ್ಕಿಣಿ ಅಭಿಷೇಕದ ಹಾಲನ್ನು ತಂದಿಟ್ಟು ದೇವರ ಬಾಗಿಲಿನಲ್ಲಿ ವಾಡಿಕೆಯಂತೆ ಶ್ರೀಗಂಧ ತೇಯುತ್ತ ಕುಳಿತಳು. {{gap}}ಶಾಸ್ತ್ರಿಗಳು ಸಂಧ್ಯಾವಂದನೆ ಮಾಡಿ, {{gap}}ಪರಸ್ತ್ರೀ ಸಂಗಜನಿತದೋಷವೃತ್ಯರ್ಥಂ {{gap}}ಮಹಾ ಚರಿತ ದುಷ್ಕರ್ಮದೋಷನಿವೃತ್ಯರ್ಥಂ {{gap}}ಮಮ ಶರೀರಶುಧ್ಯರ್ಥಂ {{gap}}ಸಹಸ್ತಗಾಯಜಪಂ ಕರಿಷ್ಟೇ... {{gap}}-ಎಂದು ಸಂಕಲ್ಪವನ್ನು ವಟಗುಟ್ಟಿ ಗಾಯತ್ರೀ ಜಪ ಮಾಡುತ್ತ ಕುಳಿತಾಗ, ರುಕ್ಕಿಣಿಯು ಮರ್ಮಾಹತಳಾಗಿ ಗಂಧ ತೇಯುವುದನ್ನು ಅರ್ಧಕ್ಕೇ ನಿಲ್ಲಿಸಿ, ಎದ್ದು ಹೋದಳು. {{gap}}ಸಹಸ್ರ ಗಾಯತ್ರೀ ಜಪ ಮುಗಿಸಿ, ಶಾಸ್ತ್ರಿಗಳು ಪೂಜೆಗೆ ಕುಳಿತರು.<noinclude></noinclude> 0k5khlrjbzvy6y9oz7khq5ejdcv8jse ಪುಟ:ವೈಶಾಖ.pdf/೨೨೧ 104 82150 319652 278700 2026-05-13T14:48:11Z Shreesha Sharma 7840 /* Validated */ 319652 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=ಸಮಗ್ರ ಕಾದಂಬರಿಗಳು|right=೨೦೫}} {{gap}}“ಕೋಟೆಯೊಳಗೆ ಹೋಗಿ ನೋಡೋಣವಾ?” - ಆಸೆಯಿಂದ ಕೇಳಿದಳು.<br/> {{gap}}“ಇಲ್ಲಿಯ ತನಕ ಈ ಕೋಟೆಯೊಳಗೆ ನಮ್ಮ ಪ್ರದೇಶದ ಆಸುಪಾಸಿನ ಜನರು ಯಾರೂ ಪ್ರವೇಶಿದ್ದೇ ಇಲ್ಲ.... ಇದರ ಒಳಗೆ ಒಮ್ಮೆ ಹೋದವರು ಹಿಂದಿರುಗಿ ಬರಲು ದಾರಿ ಕಾಣದೆ ಸಾಯುತ್ತರೆಂದೇ ನಂಬಿಕೆ!... ಕೋಟೆಯೊಳಗೆ ಕೋಟೆಯಿದೆ ಎಂದು ಪ್ರತೀತಿ... ಒಂದೆರಡು ದನ ಕಾಯುವ ಹುಡುಗರಿಗೆ ಒಳಗೇನಿರುವುದೋ ನೋಡಬೇಕೆಂಬ ಚಪಲ ಬಂದು ಈ ಕೋಟೆಯ ಒಳಹೊಕ್ಕದ್ದರಂತೆ. ಆದರೆ ಹಾಗಿ ಹೋದವರು ಮತ್ತೆ ಹಿಂದಿರುಗಲೇ ಇಲ್ಲವಂತೆ! ಆದ್ದರಿಂದ...” ಎಂದು ವಿಶ್ವೇಶ್ವರ ವಿವರಣೆ ನೀಡುತ್ತಿರುವಾಗ, ಅವನ ವಾಕ್ಯವನ್ನು ಪೂರ್ತಿಗೊಳಿಸಲು ಅನುವುಗೊಡದೆ,<br/> “ಆದ್ದರಿಂದ ಕೋಟೆಯೊಳಗೆ ನಾವು ಹೋಗಿ ಹಿಂದಕ್ಕೆ ನೋಡುವುದು ಬೇಡ- ಇದು ತಾನೆ ನೀವು ಹೇಳಬೇಕೆಂದು ಇರುವುದು?” ಎಂದು ರುಕ್ಕಿಣಿ ಮುಖವನ್ನು ಸಣ್ಣಗೆ ಮಾಡಿದಳು.<br/> “ಹಾಗಲ್ಲವೆ, ರುಕ್ಕು, ಒಳಗಡೆ ಹೋಗಿ ಬರಲು ಆಗದೆ ಹೋದರೆ, ಯಾವ ಪುರುಷಾರ್ಥ ಸಾಧಿಸಿದ ಹಾಗಾಯ್ತು, ನೀನೇ ಹೇಳು.” ಗಂಡನ ಮಾತು ರುಕ್ಕಿಣಿಗೆ ಒಪ್ಪಿತವಾಗಲಿಲ್ಲ. “ಅದಕ್ಕೇನಂತೆ, ಅಲ್ಲಿ ಸಾಯೋದೇ ಆದರೆ, ನಾವಿಬ್ಬರೂ ಒಟ್ಟಿಗೇ ಇರುತ್ತೇವಲ್ಲ!- ಆಗ ಇಬ್ಬರೂ ಒಟ್ಟಿಗೇ ಸಾಯೋದಪ್ಪ” ಎಂದಳು. “ಬಂಗಾರದ ಜಿಂಕೆಯನ್ನು ಬಯಸಿದ ತ್ರೇತಾಯುಗದ ಸೀತಾದೇವಿಯ ಸಂತತಿ ಇನ್ನೂ ಜೀವಂತವಿದೆ!” ಎಂದು ನಗುತ್ತ, ಮೋಹದ ಮಡದಿಯನ್ನು ಬಾಚಿ ತಬ್ಬಿ ರಮಿಸುತ್ತ, “ನನ್ನ ಮನದನ್ನೇ ಹೋಗಲೇಬೇಕೆಂದು ಹಟ ಮಾಡವಾಗ ನನ್ನ ಮಾತೆಲ್ಲಿ ನಡೆಯುತ್ತೆ?... ಆದರೂ ಅಲ್ಲಿ ಕಾದಿರಬಹುದಾದ ಅಪಾಯಕುರಿತು ಹೇಳಿದ್ದೇನೆ. ಇನ್ನೊಮ್ಮೆ ಚೆನ್ನಾಗಿ ಆಲೋಚನೆ ಮಾಡಿ ತಿಳಿಸು. ಹೋಗಲೇಬೇಕೆ?” ರುಕ್ಕಿಣಿ ಅಷ್ಟೇನೂ ಆಲೋಚನೆ ಮಾಡುವ ಗೋಜಿಗೇ ಹೋಗದೆ ಹೌದು ಎನ್ನುವಂತೆ ತಲೆ ಕುಣಿಸಿದಳು. “ಸರಿ” ಎಂದು, “ಕಲ್ಲುಮುಳ್ಳಿನ ಹಾದಿ, ಎಚ್ಚರದಿಂದ ಬಾ.” ಹೇಳುತ್ತ ವಿಶ್ವೇಶ್ವರ ಕೋಟೆಯನ್ನು ಪ್ರವೇಶಿಸಿದ. ಹಿಂದಿನಿಂದ ಒಳಗೆ ಬಂದ ರುಕ್ಕಿಣಿ ತಾನು ಕಂಡ ದೃಶ್ಯದಿಂದ ಅವಾಕ್ಕಾದಳು. ಅವಳು ಶ್ರೀರಂಗಪಟ್ಟಣದಂತಹ<noinclude></noinclude> k7jzjnllhugvby0lmngrg6zb84hb6bx ಪುಟ:ವೈಶಾಖ.pdf/೨೨೨ 104 82151 319653 278699 2026-05-13T14:48:21Z Shreesha Sharma 7840 /* Validated */ 319653 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=೨೦೬|right=ವೈಶಾಖ}} ಕೋಟೆಗಳನ್ನೇನೂ ನೋಡಿದ್ದಳು. ಆದರೆ ಇಷ್ಟು ಎತ್ತರದ ಭವ್ಯವಾದ ಕೋಟೆಯನ್ನು ತನ್ನ ಜೀವಮಾನದಲ್ಲೇ ಅವಳು ಕಂಡಿದ್ದಿಲ್ಲ! ಆ ಕೋಟೆ ಗೋಡೆಯ ಎತ್ತರಕ್ಕೇ ಇರುವ ದೈತ್ಯಾಕಾರದ ಮರಗಳು, ಈ ಮರಗಳು, ಅಷ್ಟಷ್ಟು ದೂರಕ್ಕೆ ಸೈನಿಕರನ್ನು ನಿಲ್ಲಿಸಿ, ಅಭೇದ್ಯವಾದ ವ್ಯೂಹ ರಚಿಸಿದಂತೆ, ದಟ್ಟವಾಗಿ ಬೆಳೆದು ನಿಂತಿದ್ದವು. ಕೆಲವೇ ಮರಗಳನ್ನು ದಾಟಿಹೋದಬಳಿಕ, ತಾವಿಬ್ಬರೂ ಎಲ್ಲಿದ್ದೇವೆ ಎನ್ನವುದೆ ಅರ್ಥವಾಗುತ್ತಿರಲಿಲ್ಲ. ಆದರೆ ಇಲ್ಲಿ ಮರಗಳಿರಲಿಲ್ಲ. ಕೇವಲ ಹೆಬ್ಬಂಡೆಗಳ ಸಾಲು, ಅವುಗಳ ಸಂದಿಯಲ್ಲಿ ತೂರಿ ನಡೆದಂತೆ, ಮಟ್ಟಸವಾದ ಬಯಲನ್ನು ದಾಟಿದರೆ ಮತ್ತೆ ಅವೇ ದೈತ್ಯ ಮರಗಳ ಜಾತ್ರೆ, ಇಲ್ಲಂತೂ ದಟ್ಟಿಸಿದ್ದ ವೃಕ್ಷರಾಶಿಯ ರೆಂಬೆಗಳು ಒಂದಕ್ಕೊಂದು ಹೆಣೆದಂತಿದ್ದು ಕತ್ತಲು ತಾನೇತನಾಗಿ ವಿಜೃಂಭಿಸಿತ್ತು. ಮರಗಳ ಮೇಲಿನ ರೆಂಬೆಗಳಿಗೆ ತೂರಿದ್ದ ರಾಕ್ಷಸ ಬಾವಲಿಗಳು ಒಟ್ಟಿಗೇ ಪಟಪಟ ಸದ್ದು ಮಾಡುತ್ತ ಅವರಿಬ್ಬರ ಮುಖ ವೈಗಳಿಗೆ ಇನ್ನೇನು ಬಡಿದುಬಿಡುವುವೊ ಎನ್ನುವಂತೆ ಸುತ್ತಲೂ ಹಾರಾಡಿದಾಗ, ಭೀತಿಗೊಂಡ ರುಕ್ಕಿಣಿಯು ವಿಶ್ವೇಶ್ವರನನ್ನು ಬಲವಾಗಿ ಅಪಿದಳು. ಗಂಡನನ್ನು ಬಲಾತ್ಕರಿಸಿ ತಾನು ತಪ್ಪು ಮಾಡಿದೆನೆಂದು ಈಗ ಅವಳಿಗೆ ಮನವರಿಕೆಯಾಗಿತ್ತು. ಆ ಕೋಟೆಯಲೊಳಗಿನ ಅರಣ್ಯ ಪ್ರದೇಶದ ವಿಸ್ತಾರದಲ್ಲಿ ಎಂಥಂತವೊ ವಿಕಾರ ಸ್ವರಗಳು ಚೀರಲಾರಂಭಿಸದುವು. ಭೀತಿಯಿಂದ ನಡುಗತ್ತು,<br/> {{gap}}“ಇನ್ನೊಂದು ಕ್ಷಣ ಇಲ್ಲಿರೋದು ಬೇಡ. ನಡೀರಿ. ಆದಷ್ಟು ಜಾಗ್ರತೆ ಇಲ್ಲಿಂದ ಕಾಲೆಗೆಯೋಣ” ಎಂದು ಪೀಡಿಸತೊಡಗಿದಳು ರುಕ್ಕಿಣಿ.<br/> {{gap}}ವಿಶ್ವೇಶ್ವರನಿಗೂ ಅದೇ ಚಿಂತೆಯಾಗಿತ್ತು. ರುಕ್ಕಿಣಿಯ ಕೈ ಹಿಡಿದು ಮಸಕು ಕತ್ತಲೆಯಲ್ಲಿ ದಾರಿ ಹುಡುಕುತ್ತ ಹೊರಟದಂತೆ ಒಂದು ಮರಕ್ಕೆ ಢಿಕ್ಕಿ ಹೊಡೆದು ರಕ್ತ ಚಿಮ್ಮಿತು. ಅನಂತರ ಅವರಿಬ್ಬರೂ ಮರದಿಂದ ಮರಕ್ಕೆ ಢಿಕ್ಕಿ ಹೊಡೆಯುತ್ತ ಸಾಗಿ, ತಾವು ಕೋಟೆಯೊಳಗೆ ಪ್ರವೇಶ ಮಾಡಿದ ದ್ವಾರವನ್ನು ಹುಡುಕಾಡಿದರು. ಎಷ್ಟು ಕಾಲ ಅರಸಿದರೂ ಆ ಕೋಟೆಬಾಗಿಲು ಅವರ ಕಣ್ಣಿಗೆ ಬೀಳದೆ ನಿಗೂಢವಾಗೇ ಇತ್ತು. ಮುಂದೆ ಹೋದಂತೆ, ಅವರು ಎಲ್ಲಿಂದ ಹೊರಟರೊ ಅದೇ ಸ್ಥಳಕ್ಕೆ ಹಿಂದಿರುಗಿ ಬಂದಂತೆ ತೋರುತ್ತಿತ್ತು. ವಿಚಿತ್ರ ವೆಂದರೆ, ಎಲ್ಲಸ್ಥಳಗಳೂ ಒಂದೇ ರೀತಿ ಕಾಣುತ್ತಿದ್ದವು. ಎಲ್ಲಕ್ಕಿಂತಲೂ ಸೋಜಿಗವೆಂದರೆ ಅಲ್ಲಿ ವಿರಾಜಿಸುತ್ತಿದ್ದ ವೃಕ್ಷಗಳ ಜಾಣಾಕ್ಷ ಜೋಡಣೆ.... ಇನ್ನು ಹೆಚ್ಚು ಕಾಲ ಅಲ್ಲಿ ಓಡಾಡಿದರೆ ಸಿಪಾಯಿಗಳಂತೆ ಅಚಲವಾಗಿ ನಿಂತ ಆ ಮರಗಳಿಗೆ ಒಂದಾದಮೇಲೆ ಬಂದರಂತೆ ತಲೆ ಬಡಿದು ಸಾಯುವುದೊಂದೇ<noinclude></noinclude> qs19bbdfxdht2jyzwftwm0zov4wifen ಪುಟ:ವೈಶಾಖ.pdf/೨೨೩ 104 82152 319654 278698 2026-05-13T14:48:31Z Shreesha Sharma 7840 /* Validated */ 319654 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=ಸಮಗ್ರ ಕಾದಂಬರಿಗಳು|right=೨೦೭}} ಸಹಜವೆಂದು ಅವರಿಬ್ಬರಿಗೂ ಕಳವಳ ಹುಟ್ಟಿತು. ಆದರೆ ಆ ಕಠೋರ ಸನ್ನಿವೇಶದಲ್ಲಿ ಒಂದೇ ಜಾಗದಲ್ಲಿ ನಿಲ್ಲುವುದೂ ಬಲು ಅಪಾಯಕಾರಿಯೆಂದು ಅವರೂ ಗ್ರಹಿಸಿದರು. ಕೂಡಲೆ, ಎಡವುತ್ತ, ಮುಗ್ಗರಿಸಿ ಬೀಳುತ್ತ ಮರದಿಂದ ಮರಕ್ಕೆ ಢಿಕ್ಕಿ ಹೊಡೆಯುತ್ತ ಸಾಗಿದರು...<br/> {{gap}}ಆ ಮಸಕಿನಲ್ಲಿ ಅವರು ಈಗ ಯಾವ ದಾರಿ ಹಿಡಿದಿದ್ದರೆ ಅವರಿಗಂತೂ ಅರಿವಿರಲಿಲ್ಲ. ಆ ಪರಮ ಸಂಕಟದ ವೇಳೆ, ಆರಂಭದಲ್ಲಿ ದೂರದಿಂದ ಕೇಳಿಬರುತ್ತಿದ್ದ ವಿಕಾರ ಸ್ವರಗಳು ಬರಬರುತ್ತ ರಣಮದ್ದಲೆಯಾಗಿ ಹತ್ತಿರವಾದಂತೆ ಭಾಸವಾಗತೊಡಗಿತ್ತು. ದಾರಿ ತಪ್ಪಿರಬೇಕೆಂದು ಊಹಿಸಿ ಬೇರೆ ದಿಕ್ಕಿಗೆ ತಿರುಗಿದರು. ಅತ್ತಣಿಂದಲೂ ಕರ್ಕಶ ಸ್ವರಗಳು ಸಮೀಪಾಗುತ್ತಿರುವಂತೆ ಕಂಡವು. ಇದೂ ಸರಿಯಲ್ಲವೆಂದು ಇನ್ನೊಂದು ದಿಕ್ಕಿಗೆ ತಿರುಗಿದರು.... ಎಂಥದೋ ವಿಕಾರ ಚೀರಾಟ... ಕುದುರೆಗಳ ಖುರಪುಟ ಧ್ವನಿ... ಆನೇಗಳು ಘಳಿಡುವ ಸದ್ದು. ಕತ್ತಿಗಳು ಪರಸ್ಪರ ತಾಕಲಾಡುವಾಗ ಉದ್ಭವಿಸುವ ಖಣಿಲ್ ಖಿಲ್ ಶಬ್ದ... ಯಾವ ಕಡೆ ತಿರುಗಿ ನೋಡಿದರೂ ಭೀತಿ ಹುಟ್ಟಿಸುವ ಇಂಥ ಸದ್ದುಗಳೇ ಮತ್ತೂ ಮತ್ತೂ ಸಮೀಪವಾಗುತ್ತಿದ್ದವು. ಇನ್ನು ಪ್ರಯತ್ನಮಾಡುವುದೂ ವ್ಯರ್ಥವೆಂದು ಬಗೆದು ತಟಸ್ಥರಾಗಿ ನಿಂತಲ್ಲೇ ನಿಂತರು... ಹಟಾತ್ತನೆ ಯಾರೊ ತನ್ನ ಗಂಡನನ್ನು ಎಳೆದೊಯ್ಯುತ್ತಿರುವಂತೆ ಭಾಸವಾಯಿತು... ರುಕ್ಕಿಣಿ ತತ್ತರಿಸಿದಳು. ವಿಶ್ವೇಶ್ವರನನ್ನು ಎಳೆದೊಯ್ದು ಜಾಡನ್ನು ಕುರುಡಾಗಿ ಅನುಕರಿಸುತ್ತ ನಡೆದಳು... ಮರದಿಂದ ಮರಕ್ಕೆ ಢಿಕ್ಕಿ ಹೊಡೆದು ಬಿದ್ದಳು, ಎದ್ದಳು, ಮತ್ತೆ ಅರಸುತ್ತ ಹೊರಟಳು... ಕತ್ತಲೆಯ ಕಾಡು, ಸೈನಿಕರಂತೆ ದೃಢವಾಗಿ ನಿಂತು, ಸುಸೂತ್ರವಾಗಿ ಮುಂದುವರಿಸಲು ಅಡ್ಡ ಬಂದು, ದಾರಿ ತಪ್ಪಿಸುವ ಬೃಹದಾಕಾರದ ಮರಗಳು... ಎದ್ದು, ಬಿದ್ದು ಸಾಗಿದಂತೆ, ಥಟ್ಟನೆ ಒಂದು ಕೊಚ್ಚೆಗುಂಡಿಗೆ ಮುಗುಚಿ ಮುಳುಗಿದಂತಾಯಿತು. “ಅಮಾ' ಎಂದು ಚೀರುತ್ತ ರುಕ್ಕಿಣಿ ಕಣೆರೆದಳು...<br/> {{gap}}ವೆಂಕಣ್ಣ ಜೋಯಿಸರ ಮನೆಯಿಂದ ಬಾಲಕರ ತಂಡದ ವೇದಘೋಷದ “ಪಂಚಾರಿ' ಕೇಳಿ ಬಂದು, ತಾನು ಇಷ್ಟು ಹೊತ್ತಿನ ತನಕ ಅನುಭವಿಸಿದ್ದು ಕೇವಲ ಕನಸು ಎಂಬಂಶವನ್ನು ಅದು ಮನವರಿಕೆ ಮಾಡಿಕೊಟ್ಟಿತು. ಆದರೂ ಅವಳ ಎದೆಬಡಿತ ಸ್ಥಿಮಿತಕ್ಕೆ ಬರಲು ಸ್ವಲ್ಪ ಕಾಲವೇ ಬೇಕಾಯಿತು. {{rh|center=೨೦|left=|right=}} <br/>ಮುಂದಿನ ದಿನಗಳಲ್ಲಿ ಕೃಷ್ಣಶಾಸ್ತ್ರಿಗಳು ತೋಟದಲ್ಲಿ ತಮ್ಮ ದುಡಿಮೆಯನ್ನು ಅಧಿಕಗೊಳಿಸಿದರು. ತಣ್ಣೀರು ಸ್ನಾನ ಮಾಡಿ, ಒದ್ದೆ ಬಟ್ಟೆಯಲ್ಲಿ ಮನೆಗೆ ಬಂದು,<noinclude></noinclude> 3bn06wypwb59u35dbhanioaoi0lgxyu ಪುಟ:ವೈಶಾಖ.pdf/೨೨೪ 104 82153 319655 278697 2026-05-13T14:48:42Z Shreesha Sharma 7840 /* Validated */ 319655 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=೨೦೮|right=ವೈಶಾಖ}} ಪೂಜೆಪುನಸ್ಕಾರ, ಜಪತಪಾದಿಗಳಲ್ಲಿ ಹೆಚ್ಚು ಸಮಯವನ್ನು ವ್ಯಯ ಮಾಡುವರು. ಅನಂತರ ಒಂದೇ ಊಟದ ಉಗ್ರ ವ್ರತದ ಕಟ್ಟುನಿಟ್ಟಾದ ಆಚರಣೆ. ರುಕ್ಕಿಣಿಯು ಯಾಂತ್ರಿಕವಾಗಿ ಮನೆಗೆಲಸ ಮಾಡುವಳು. ಹಗಲು ಹೇಗೊ ಕಳೆಯುವುದು. ಅನೇಕ ರಾತ್ರಿ ಕಾಲಿಟೊಡನೆಯ ಅವಳ ಒಳಗಿನ ತಳಮಳ ಆರಂಭವಾಗುವುದು. ಅನೇಕ ದಿನಗಳಿಂದ ಉಪಯೋಗಿಸದೆ ಮೂಲೆಗೊರಗಿಸಿದ ತಂಬುರಿಯನ್ನು ಯಾರೋ ಕೈಗೆತ್ತಿ ಶ್ರುತಿ ಮಾಡಿ, ಬಿಗಿದ ತಂತಿಯನ್ನೊಮ್ಮೆ ಮೀಟಿ ಹೋದಂತಾಗಿತ್ತು, ರುಕ್ಕಿಣಿಯ ಸ್ಥಿತಿ! ಮೀಟಿಹೋದಮೇಲೂ ತುಂಬೂರಿಯಿಂದ ಝೇಂಕಾರನಾದ ಬಹುಕಾಲ ಹೊರಹೊಮ್ಮುತ್ತಲೇ ಇರುವಂತೆ, ಶಾಸ್ತಿಗಳು ಎಲ್ಲೋ ಅವಳ ಅಳದಲ್ಲಿ ಅಡಗಿ ಸೊರಗಿ ಮಲಗಿದ್ದ ಬಯಕೆಗಳನ್ನು ಒಮ್ಮೆ ಮಾತ್ರ ಕೆದಕಿ, ಆ ಬಳಿಕ ವಿಶ್ವಾಮಿತ್ರನಂತೆ ತಮ್ಮ ಸಂಯಮದ ಚಿಪ್ಪಿನೊಳಗೆ ಮುದುಡಿದ್ದರು.<br/> {{gap}}ಎಂಟೊಂಬತ್ತು ದಿನಗಳು, ಮಳೆ ಸುರಿಸುವಂತೆ ತೋರಿ ಚರಿಹೋಗುವ ಮೊಡಗಳಂತೆ, ಕಳೆದುಹೋಗಿದ್ದವು. ಅವಳಿಗೆ ಅರಿವಿಲ್ಲದಂತೆಯೆ ಅವಳೊಳಗೆ ಪಲ್ಲವಿಸಿದ ಬಯಕೆ ಅದಮ್ಯವಾಗಿ ಬೆಳೆದು ಹೆಮ್ಮರವಾಗಿತ್ತು. ಗಂಡನೊಡನೆ ಸುಖಿಸಿದ ಹಳೆಯ ದಿನಗಳು ಅಂತರಂಗವನ್ನು ಮುತ್ತಿ ಜೇನು ಹುಳಗಳಂತೆ ಕಾಡಲುಪಕ್ರಮಿಸಿದ್ದವು. ಹೀಗಿರುವಾಗ ಒಮ್ಮೆ ಭೀಮನಹಳ್ಳಿಯ ಅಕ್ಕ ಪಾರ್ವತಿಯು ಒಂದು ಪತ್ರ ಕಳಿಸಿ, ಎರಡು ವರ್ಷಗಳ ಹಿಂದೆಯೇ ಲಗ್ನವಾಗಿದ್ದ ತನ್ನ ಮೊದಲನೆಯ ಮಗಳು ಪದ್ಮ ಋತುವಾಗಿರುವುದರಿಂದ ಮುಂದಿನ ಬುಧವಾರ ಆರತಕ್ಷತೆ ಇಟ್ಟಿದ್ದೇವೆ, ಆ ಶುಭಸಮಾರಂಭಕ್ಕೆ ತಪ್ಪದೆ ಬರಬೇಕೆಂದು ಆಹ್ವಾನಿಸಿದ್ದಳು. ಉಬ್ಬಸ ಹಿಡಿಸುತ್ತಿದ್ದ ತಮ್ಮ ಮನೆಯ ವಾತಾವರಣದಿಂದ ಕೆಲವು ದಿನಗಳವರೆಗಾದರೂ ಮುಕ್ತಳಾಗಬೇಕಂದು ರುಕ್ಕಿಣಿಗೆ ಆಪೇಕ್ಷೆಯೇನೊ ಉಂಟಾಯಿತು. ಆದರೆ ಶಾಸ್ತಿಗಳ ಊಟೋಪಚಾರಕ್ಕೆ - ಅದು ಕೇವಲ ಒಂದು ಹೊತ್ತಿನ ಭೋಜನವಾದರೂ ಸಹ – ತೊಂದರೆಯಾಗುವುದೆಂದು ಎಣಿಸಿದಳು. ಸುದ್ದಿ ತಿಳಿದಾಗ ಶಾಸ್ತಿಗಳಿಗೆ,<br/> {{gap}}“ಒಂದು ಹೊತ್ತಗೆ ಅಡಿಗೆ ಮಾಡಿಕಳ್ಳಲಿಕ್ಕೆ ನನಗೇನೂ ಬಾಧಕವಿಲ್ಲ. ಪದ್ಧಿ ಆರಕ್ಷತೆಗೆ ತಪ್ಪಿಸಿಕೊಬೇಡ- ಹೋಗು. ನಿನಗೆ ಇಚ್ಛೆ ಬಂದಷ್ಟು ದಿನ ಇದ್ದು ಬಾ” ಎಂದು ಒತ್ತಾಯ ಮಾಡಿದಾಗ, ರುಕ್ಕಿಣಿಯು ಭೀಮನಳ್ಳಿಯ ಪಯಣಕ್ಕೆ ಸನ್ನದ್ಧಳಾದಳು. ಗಾಡಿ ಹೊಡೆಯಲು ಶಾಸ್ತ್ರಿಗಳು ಯಥಾಪ್ರಕಾರ ಲಕ್ಕನನ್ನು ಗೊತ್ತು ಮಾಡಿದರು.<noinclude></noinclude> iwjrumm2t5qroxv9yn3vmeuo5smjw1e ಪುಟ:ವೈಶಾಖ.pdf/೨೨೫ 104 82154 319656 278696 2026-05-13T14:48:53Z Shreesha Sharma 7840 /* Validated */ 319656 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=ಸಮಗ್ರ ಕಾದಂಬರಿಗಳು|right=೨೦೯}} {{gap}}ಭೀಮನಳ್ಳಿ ಒಂದು ಕಾಡುಹಳ್ಳಿ, ಅಲ್ಲಿಗೆ ತಲುಪಲು ಕಾಡಿನ ಮಧ್ಯದ ಬಂಡಿ ಹಾದಿಯಲ್ಲಿ ಹೋಗಬೇಕು. ಪಾರ್ವತಿಯ ಆಹ್ವಾನ ಬಂದದ್ದು ಸೋಮವಾರ ಸಂಜೆಗೆ, ಮಾರನೆಯ ದಿನ ಮಂಗಳವಾರ, ಮಂಗಳವಾರ ಶುಕ್ರವಾರಗಳು ಪ್ರಯಾಣ ಕ್ಕೆ ಶುಭ ದಿನ ಗಳಲ್ಲವಲ್ಲ. ಇನ್ನು ಬುಧ' ವಾರ ವೇ ಮಂಗಳಕಾರ್ಯವಿರುವುದರಿಂದ ಆ ದಿನವೇ ಪ್ರಯಾಣ ಬೆಳಸಬೇಕು. ಮುಹೂರ್ತವಿರುವುದು ಹತ್ತು ಗಂಟೆಗೆ, ಹನ್ನೆರಡು ಹದಿಮೂರು ಮೈಲಿಗಳು ಕಾಡುಹಾದಿ ಸಮೆಯಲು ಸುಮಾರು ನಾಲ್ಕು ಗಂಟೆಗಳ ಅವಧಿಯಾದರೂ ಬೇಕು. ಆದ್ದರಿಂದ ಬೆಳಗಿನ ಜಾವ ಇನೂ ಕತ್ತಲಿರುವಂತೆಯೆ ರುಕ್ಕಿಣಿಯನ್ನು ಹೊತ್ತ ಗಾಡಿ ಆಗಲೇ ಬ್ರಾಹ್ಮಣಕೇರಿಯನ್ನು ದಾಟಿತ್ತು. ಆಗ ಯಾರದೋ ಮನೆಯೊಳಗಿನಿಂದ ಅರೆನಿದ್ದೆಯಿಂದ ಎಚ್ಚೆತ್ತು ರೋದಿಸುತ್ತಿದ್ದ ಕೂಸನ್ನು ತೊಟ್ಟಿಲಲ್ಲಿ ತೂಗುತ್ತ ಅದರ ತಾಯಿ ಲಾಲಿಪದ ಹಾಡುವುದು ಕೇಳಿಬರುತ್ತಿತ್ತು. ಗಾಡಿಯು ಇನ್ನೂ ಮುಂದೆ ಸರಿದಂತೆ, ರಾಗಿಕಲ್ಲು ಬೀಸುವ ಇಬ್ಬರು ಹೆಣ್ಣುಮಕ್ಕಳು ದನಿಯೆತ್ತಿ ಉಳಿಯುತ್ತಿದ್ದ ಜನಪದ ಗೀತೆಯ ಕೆಲವು ಸಾಲುಗಳು ಮುಂಜಾವಿನ ಗಾಳಿಯಲ್ಲಿ ತೇಲಿದವು...<br/> {{gap}}ಮುಂಜಾವಿನ ಮೋಡಗಟ್ಟಿದ ಕತ್ತಲೆಯಲ್ಲಿ ಹಾಲುನೊರೆಯಂತೆ ಬೆಳ್ಳಗಿದ್ದ ಎತ್ತರದ ಎತ್ತುಗಳು ತಮ್ಮ ಕೊರಳಿನ ಗೆಜ್ಜೆಗಳಿಂದ ಜಣಜಣನಾದ ಹೊರಡಿಸುತ್ತ ಊರನ್ನು ದಾಟಿಸಿ ಗಾಡಿಯನ್ನು ಕಾಡಿನ ಬಂಡಿಹಾದಿಗೆ ತಂದಿದ್ದವು. ಉದ್ದಕ್ಕೂ ಲಕ್ಕನ ಸಹಚರಿ ಬೊಡ್ಡ ಗಾಡಿಯನ್ನು ಅನುಸರಿಸಿ ಹಿಂದೆ ಹಿಂದೆ ಬರುತ್ತಿತ್ತು, ಆ ನಾಯಿ ಜೊತೆಗೆ ಬರದಂತೆ ಓಡಿಸಲು ಅನೇಕ ಬಾರಿ ಲಕ್ಕ ಪ್ರಯತ್ನ ಪಟ್ಟ. ಸಫಲವಾಗಿಲಿಲ್ಲ.<br/> {{gap}}“ಬೊಡ್ಡಿ ಹೆತ್ತಿದ್ದು, ಹ್ಯಾದೆಯಾ ಪಿಶಾತಿ ಅಂದ್ರೆ ಇಕಾ ಬಂದೆ ಗವಾಕ್‌ಸದಲಿ ಅಂತ ಲಾಜಾದಲ್ಲಿ ಪುನಾ ಗಾಡಿ ವಂದುಗುಟ್ಟೇ ಅಜರು!” ಲಕ್ಕ ನಿಸ್ಸಹಾಯಕನಾಗಿ ಗೊಣಗಿದ.<br/> {{gap}}ಅದರ ಪರದಾಟ ನೋಡಲಾರದೆ ರುಕ್ಕಿಣಿಯೆ,<br/> {{gap}} “ಪಾಪ; ಬರಲಿ ಬಿಡೋ” ಎಂದಳು.<br/> {{gap}}“ಇನ್ಯಾನು ಇಲ್ಲ ಅಮ್ಮಾರೆ, ಗಮ್ಮನೆ ವಂದುಗಟ್ಟೆ ಬಂದರೆ ಸಮಾಸು. ನಾ ಬ್ಯಾಡ ಅಂದೇನ? ಈ ಕಾಡಿನಾಗೆ ಇಂಕರ ಸರಕ್ ಪರತ್ ಅನಕ್ಕಿಲ್ಲ. ಸೂರನಂಗೆ ಬ್ಯಾಟಿಗೆ ವೊಂಟುಬುತ್ತದೆ. ಈ ಕಾಡಿನಾಗೆ ಉಳಿ, ಕಿರುಬನ ಕಾಟ ಇದ್ದದೆ!- ಅದೇ ನಂಗೆ ಕೇವು” ಎಂದರೂ ಅಂತಿಮವಾಗಿ ನಿರ್ವಾಹವಿಲ್ಲದೆ<noinclude></noinclude> i72cphy0zs3xr2mavutowsp5mwkw83u ಪುಟ:ವೈಶಾಖ.pdf/೨೨೬ 104 82155 319657 278695 2026-05-13T14:49:09Z Shreesha Sharma 7840 /* Validated */ 319657 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=೨೧೦|right=ವೈಶಾಖ}} <br/> ಸೋತು ಲಕ್ಕನೂ ಸುಮ್ಮನಾದ.<br/> {{gap}}ಆದರೆ ಎತ್ತಿನ ಗಾಡಿ ಕಾಡಿನಲ್ಲಿ ಇನ್ನೂ ನಾಲ್ಕು ಮಾರು ಕೂಡ ಉರುಳಲಿಲ್ಲ. ದೂರದಲ್ಲಿ ಮೋಲಿ ಕಾಡುಕೋಳಿಯೊ ಕಣ್ಣಿಗೆ ಬಿದ್ದಿರಬೇಕು. ಬೊಡ್ಡ ರಭಸದಿಂದ ಅದನ್ನಟ್ಟಿ ಫೇರಿ ಕಿತ್ತಿತ್ತು. ಲಕ್ಕ ಗಾಬರಿಗೊಂಡು ಗಾಡಿಯನ್ನು ನಿಲ್ಲಿಸಿ ಕೆಳಕ್ಕಿಳಿದ. ಬಂಡಿಯ ಮುಂಭಾಗದ ಕೆಳಗಡೆ ಕಟ್ಟಿದ್ದ ಲಾಟೀನನ್ನು ಬಿಚ್ಚಿ ತೆಗೆದುಕೊಂಡು 'ಬೊಡ್ಡ, ಬೊಡ್ಡ' ಎಂದು ಕೂಗುತ್ತ ಅದರ ಹಿಂದೆ ಓಡಿದ್ದು ಕಂಡು ಬೇಸರಗೊಂಡಿದ್ದ ರುಕ್ಕಿಣಿಯ ಮನಸ್ಸಿಗೆ ಕಚಗುಳಿ ಇಟ್ಟಂತಾಗಿ ಮೋಜೆನಿಸಿತು.<br/> {{gap}}ಮೊಲ ಬೊಡ್ಡನ ಬಾಯಿ ತಪ್ಪಿಸಿ ಒಂದು ಬಿಲವನ್ನು ಹೊಕ್ಕಿದ್ದನ್ನು ಕಂಡ ಆ ಬಿಲದ ಮುಂದೆ ಬೊಗಳುತ್ತ ನಿಂತ ಬೊಡ್ಡನನ್ನು ಲಕ್ಕ ಒದ್ದು ಓಡಿಸಿದ. ಊರ ದಿಕ್ಕಿಗೆ ಹೋಗುವ ಬದಲು ಅದು ಈ ಸಲ ಗಾಡಿಯ ಕೆಳಗಡೆ ಸೇರಿತು. ಲಕ್ಕ ಹಿಂಬಾಲಿಸಿದವನೆ ಅದನ್ನು ಅಲ್ಲಿಂದಲೂ ಓಡಿಸಲು ಪ್ರಯತ್ನಿಸಿದ. ಹಿಂದಿನಿಂದ ಓಡಿಸಿದರೆ, ಮುಂದೆ, ಮುಂಬನಿಂದ ಓಡಿಸಿದರೆ ಹಿಂದೆ- ಹೀಗೆ ಲಕ್ಕನನ್ನು ಪೇಟಾಡಿಸಿತು. ರುಕ್ಕಿಣಿ ನಗುತ್ತ,<br/> {{gap}}“ಲಕ್ಕ, ನಿನಗೆ ಹೊತ್ತು ಹೋಗದು, ಬಾ. ಇದನ್ನು ನೀನು ಅಟ್ಟಾಡುವುದು, ಗಾಳಿ ಗುದ್ದುವುದು- ಎರಡೂ ಒಂದೇ. ಬರೀ ಶ್ರಮ, ಅಷ್ಟೆ” ಎಂದಳು.<br/> {{gap}}ನಿಟ್ಟುಸಿರು ಬಿಟ್ಟು “ಲೌಡಿಮಗಂದೆ” ಎಂದು ಶಪಿಸಿ, ಲಕ್ಕ ಪುನಃ ಗಾಡಿಯ ಮೂಕಿಯನ್ನೇರಿ ಎತ್ತುಗಳಿಗೆ ಚಾಲನೆ ಕೊಟ್ಟ, ಗಾಡಿ, ಬಂಡಿಹಾದಿಯಲ್ಲಿ ಗಡಲ್ ಗಡಕ್ ಎಂದು ಕಾಡಿನ ಮೌವನ್ನು ಭೇದಿಸುತ್ತಾ ಮುಂದುವರಿಯಿತು. ಗಾಡಿ ಸಾಗಿದಂತೆ ಮೆಳೆಗಳು ಒತ್ತಿನಲ್ಲಿ ಏನೋ ಸರಪರ ಸದ್ದಾಯಿತು. ಎತ್ತುಗಳು ಬೆದರಿದವು. ಗಾಡಿಯ ಅಡಿಯಿಂದ ಬೊಡ್ಡನೂ ಬೊಗಳಲಾರಂಭಿಸಿತು. “ಇದೇನೊ ಲೈಕ- ಎತ್ತುಗಳು ಹೀಗೆ ಬೆದರಾ ಇವೆ?...” ಎಂದು ರುಕ್ಕಿಣಿ ಕೇಳಿದಳು.<br/> {{gap}} “ಈ ಎತ್ತಿನ ಜೊತೆ ಈ ಕಾಡು ಆದೀಲಿ ಬಂದು ಸುಮಾರು ಜಿನವೆ ಆಗದೆ. ಅಷ್ಟೇ ಮೆಳೆ ಹಿಂದೆ ಸರಪರ ಅಂದದ್ದೆಲ್ಲ ಚಿಕ್ಕ ಹೈಕಳು ಬೆದರೂವಂಗೆ ಬೆದರಾ ಅವೆ” ಎಂದು ಲಕ್ಕ “ಬೋಡ್ಡನೂ ಬೊಗಳ್ತಾ ಇದೆಯಲ್ಲ?...” ಸಂದೇಹ ಪೂರ್ತಿಯಾಗಿ ನಿವಾರಣೆಯಾಗದೆ ಕೇಳಿದಳು. “ಸರಿಕನ ಬುಡಿ. ಇನ್ನು ಈ ಬೊಡ್ಡಂಗೇನು ಕೇಮ? ಸಣ್ಣ ಪುಟ್ಟದೆಲ್ಲ<noinclude></noinclude> bdupwwwq2ziubgds2h4bo7hl77i0w2k ಪುಟ:ವೈಶಾಖ.pdf/೨೨೭ 104 82156 319658 278694 2026-05-13T14:49:19Z Shreesha Sharma 7840 /* Validated */ 319658 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=ಸಮಗ್ರ ಕಾದಂಬರಿಗಳು|right=೨೧೧}} <br/> ಬೊಗಳಾದೆ ಕೆಲ್ಲ!”<br/> {{gap}}“ನಾನು ಯಾಕೆ ಕೇಳಿದೆ ಅಂದರೆ, ಚಿರತೆಯೊ ಹುಲಿಯೊ ಮೆಳೆ ಪಕ್ಕದಲ್ಲಿ ಬರಿರಬಹುದೇನೋ ಅಂತ ಸಂದೇಹ ಬಂತು- ಅದಕ್ಕೆ”<br/> {{gap}}“ಊ, ಈ ಕಾಡಲ್ಲಿ ಹುಲಿ, ಚಿರತೆಗೇನು ಕಮ್ಮಿ. ಬಂದರೂ ಬರಬೈದು. ಬೆಳ್ಳಗಿರೊ ಎತ್ತುಗಳ ಕಂಡು ಆವಕೆ ಆಸೆ ಆಗ್ಗೆ ಇರಾದಾ, ನೀವೇ ಯೋಳಿ... ಆದ್ರೆ ಇಂಗೆ ಮೆಳೆ ಇಂದ್ರೆ ಸದ್ದ ಮಾಡಿರೋದು ಒಂದು ಉಡ ಆಗಿರಬೈದು, ಒಂದು ಕೀರ ಆಗಿರಬೈದು, ಇನ್ನೇನಾರೂ ಆಗಿರಬೈದು...” ಎಂದು ಮಾತು ನಿಲ್ಲಿಸಿ “ಉಚ್, ಉಚ್' ಎನ್ನುತ್ತ ಎತ್ತುಗಳನ್ನು ಚುರುಕುಗೊಳಿಸಿದ.<br/> {{gap}} ಮುಂಜಾವಿನಲ್ಲಿ ದರುಮನಳ್ಳಿ ಬಿಟ್ಟು ಹೊರಡುವಾಗಲೆ ಹೆಪ್ಪುಗಟ್ಟಿದ್ದ ಮೋಡ ಸಣ್ಣಗೆ ಮಳೆಗರೆಯಲ್ಲಾರಂಭಿಸಿತು. ಕ್ರಮೇಣ ಅದರ ರಭಸ ಹೆಚ್ಚುತ್ತ ಹೋಯಿತು. ಗಾಳಿಯೂ ಜೋರಿನಿಂದ ಬೀಸುತ್ತಿದ್ದು ಬಂಡಿಯ ಹಿಂದುಗಡೆ ಕುಳಿತ ರುಕ್ಕಿಣಿಯು, ಮಳೆಯ ಎರಚಲಿನಿಂದ ತಪ್ಪಿಸಿಕೊಳ್ಳಲು ಗಾಡಿಯ ಹಿಂದಿನಿಂದ ಮೇಲೆ ಸರಿಯುತ್ತ ಹೋಗಬೇಕಾಯಿತು.<br/> {{gap}}ಹೊರಡುವಾಗ ಅಸಾಧ್ಯ ಸೆಕೆಯಿದ್ದುದರಿಂದ ಲಕ್ಕ ಅಂಗಿ ಬಿಚ್ಚಿ ಮೊಣಕಾಲಿನವರೆಗೂ ಸುತ್ತಿದ್ದ ತುಂಡು ದಟ್ಟಿ ಪಂಚೆಯಲ್ಲೇ ಕುಳಿತು ಗಾಡಿ ಹೊಡೆಯುತ್ತಿದ್ದ ಒಮ್ಮೊಮ್ಮೆ ಕಣ್ಣು ಕೋರೈಸುವಂತೆ, ಬಾನಿನಲ್ಲಿ ಮಿಂಚು ಕವಲು ಕವಲಾಗಿ ಬೆಳಗುವುದು. ಆಗ ಅವನ ತೆರೆದ ಕಪ್ಪು ಮಯ್ಯ ನುಣುಪಾದ ಕಪ್ಪುಶಿಲೆಯಂತೆ ಥಳಥಳ ಹೊಳೆಯುವುದು, ಮಳೆಯ ಹನಿ ಮುತ್ತಿನ ಮಣಿಗಳಂತೆ ಅವನ ದೇಹದ ಮೇಲೆ ಚೆಲ್ಲಿದಾಗ, ಅದು ಚಿರತೆಯ ಮೈಯಂತೆ ಮಿರುಗುವುದು. ಅವನ ಮೈಯನ್ನೆ ಗಮನಿಸಿದಂತೆ, ರುಕ್ಕಿಣಿಯ ಅಂತರಾಳದಲ್ಲಿ ಹಿಂದೆ ಇಂಥದೇ ಗಾಡಿ ಪ್ರಯಾಣದಲ್ಲಿ, ರುದ್ರಪಟ್ಟಣದಿಂದ ಬರುತ್ತಿದ್ದಂತೆ ಕಳ್ಳುರು ಮೇಲೆರಗಿದಾಗ, ಲಕ್ಕ ಜೀವದ ಹಂಗುದೊರೆದು ಹೋರಾಡಿದ ಘಟನೆ ನೆನಪಾಗಿ ಅವನ ಬಗ್ಗೆ ಅಭಿಮಾನ ಉಕ್ಕಿತು. <br/> {{gap}} ಮುಂಭಾಗದಲ್ಲಿ ಮಳೆಯ ಎರಚಲು ಕಡಿಮೆ ಆದರೂ ಮಳೆಯ ಹನಿಗಳು ಮೈ ಮೇಲೆ ಬಿದ್ದಾಗ, ಲಕ್ಕನಿಗೆ ಎಲ್ಲಿಲ್ಲದ ಖುಷಿ!... ಮಳೆಯಲ್ಲಿ ನೆನೆಯುವುದೆಂದರೆ ಬಾಲ್ಯದಿಂದಲೂ ಲಕ್ಕನಿಗೆ ಆನಂದವೆ. ಈಗಲೂ ಕೂಡ ಮಳೆ ಹನಿಹನಿಯಾಗಿ ಮೈ ಮೇಲೆ ಎರಚುತ್ತ ಬಂದಾಗ, ಮಗುವಿನಂತೆ ಅವನು ಕುಲುಕುವುದನ್ನು ರುಕ್ಕಿಣಿಯು ಗಮನಿಸಿದಳು. ಆದರೆ ಮಳೆಯಲ್ಲಿ ಎತ್ತುಗಳ ನಡೆ ಮಾತ್ರ ಮಂದವಾಯಿತು.<noinclude></noinclude> furxx9eix7von7puz5l0y0u47pakh3l ಪುಟ:ವೈಶಾಖ.pdf/೨೨೮ 104 82157 319678 278691 2026-05-14T05:19:33Z Shreelatha.Halemane 7642 /* Validated */ 319678 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=೨೧೨|right=ವೈಶಾಖ}} {{gap}}ಮಳೆ ಹೊಯ್ದಾಗ ರುಕ್ಕಿಣಿಗೂ ಸಂತೋಷವೇ. ಗಂಡನ ಸಂಗಸುಖ ಅನುಭವಿಸಿದ ಮೊದಲ ರಾತ್ರಿಯಲ್ಲೂ ಇಂಥದೇ ಮಳೆ... ಕಿಟಿಕಿಗಳಿಗೆ ಇಂಥವೆ ಹನಿಯ ತೆರೆ ಬೀಸಿ ಒಸಗೆಕೋಣೆಯಲ್ಲಿ ತಮ್ಮಿಬ್ಬರನ್ನೂ ಬೆಸೆದು ಹೊರಗಿನ ಪ್ರಪಂಚವನ್ನು ಮರೆಯುವಂತೆ ಮಾಡಿತ್ತು... ಇಂದು ಸಹ ದಾರದಾರವಾಗಿ ಸುರಿದು ಕಾಡನ್ನೆಲ್ಲ ಆವರಿಸಿದ್ದ ಮಳೆ, ತಾನು, ಲಕ್ಕ, ಗಾಡಿ ಎತ್ತುಗಳು, ಬೊಡ್ಡಇವಿಷ್ಟನ್ನುಳಿದು ಸದ್ಯಕ್ಕೆ ಜಗತ್ತಿನಲ್ಲಿ ಇನ್ನು ಬೇರೆ ಯಾವ ವಸ್ತುವೂ ಇಲ್ಲವೆನ್ನುವಂತೆ ಮಾಯೆಯ ಮುಸುಕಿನ ಮೋಡಿ ಹಾಕುತ್ತಿತ್ತು...<br/> {{gap}}ಇದೇ ಗುಂಗಿನಲ್ಲಿ ಅವಳ ಚಿತ್ತ ರೆಕ್ಕೆ ಕಟ್ಟಿ ಹಾರುತ್ತಿರುವಾಗ, ಥಟ್ಟನೆ ಸಿಡಿಲೊಂದ ಎದೆ ಝಲ್ ಎನ್ನುವಂತೆ ಫಳಾರನೆ ಅಬ್ಬರಿಸಿತು. ಬೆಚ್ಚಿಬಿದ್ದ ರುಕ್ಕಿಣಿಯು 'ಅಮ್ಮಾ'- ಎಂದ ಚೀರಿ. ಈಗ ತೀರ ಸನಿಹದಲ್ಲಿದ್ದ ಲಕ್ಕನನ್ನು ಅಪ್ಪಿಬಿಟ್ಟಳು!.<br/> {{gap}}ಅವಳ ಅಪ್ಪುಗೆಯಿಂದ ಭಯಭ್ರಾಂತನಾದ ಲಕ್ಕ.<br/> {{gap}}“ಅಯ್ಯೋ, ನನ್ಯಾಕೆ ತಬ್ಬಿಕಂಡ್ತಿ- ಬುಡಿ... ಮಳೆಬಂದಾಗ ಸಿಡ್ಡು ವೊಡುದ್ರೆ, ಇಂಗೂ ಬೆಟ್ಟೋರ?- ಬುಡಿ, ಬುಡಿ” ಎಂದು ಬಿಡಿಸಿಕೊಳ್ಳಲೆತ್ನಸಿದ.<br/> {{gap}}ಆದರೆ ರುಕ್ಕಿಣಿಯ ಹಿಡಿತ ಬಲವಾಗಿತ್ತು... {{gap}}ಅವಳು ತನ್ನ ಮುಖವನ್ನು ಅವನ ಕುತ್ತಿಗೆಯ ಹಿಂಭಾಗಕ್ಕೆ ತಂದಾಗ, ಅವಳ ಉಸಿರಿನ ಬಿಸಿ ಬೆಂಕಿಯ ಬೆರಳುಗಳಿಂದ ಆ ಭಾಗವನ್ನು ನೇವರಿಸಿತ್ತು... {{gap}}ಲಕ್ಕ ಮತ್ತೂ ತಳಮಳಕ್ಕೆ ಈಡಾದ. ತನ್ನನ್ನು ತಕ್ಕೆಯಲ್ಲಿ ಬಂಧಿಸಿದ ಅವಳ ತೋಳುಗಳಿಂದ ಬಿಡಿಸಿಕೊಳ್ಳುವುದು ಅವನಿಗೆ ಅಂಥ ಕಠಿಣವಾದುದೇನೂ ಆಗಿರಲಿಲ್ಲ. ಆದರೆ ತೀರ ಜುಲುಮೆ ಮಾಡಿ ಕೀಳಲು ಹೋದರೆ, ತನಗೆ ಮಾತೃಸ್ಥಾನದಲ್ಲಿರುವ ಅವಳ ಕೋಮಲ ಬಾಹುಗಳಿಗೆ ಎಲ್ಲಿ ನೋವಾದೀತೊ ಎಂದು ಆತಂಕಗೊಂಡ... ಮುಂದೆ ಅವನು ಬೇರೆ ಯಾವ ಯೋಚನೆ ಮಾಡಲೂ ಅವಕಾಶ ಕೊಡದೆ, ರುಕ್ಕಿಣಿ ಆವೇಶ ಬಂದವಳಂತೆ ಎರಗಿ, ಅವನ್ನು ಕೆಳಗೆ ಮಲಗಿಸಿ ತಾನು ಮಲಗಿ ಆಕ್ರಮಣ ಮಾಡಿದಳು!... ಈಗಲೂ ಅವಳಿಗೆ ಎಲ್ಲಿ ನೋವಾಗುವುದೊ ಎಂದು ಕಂಪಿಸುತ್ತಲೆ ಅವಳ ಬಲಾತ್ಕಾರಕ್ಕೆ ಸೋತು ತನ್ನನ್ನು ಒಪಸಿಕೊಂಡಿದ್ದ ಆದರೂ ಅವನ ಬಾಯಿಯಿಂದ ಯಾಂತ್ರಿಕವಾಗಿ “ಬ್ಯಾಡಿ ಅಮ್ಮಾರೆ, ಬ್ಯಾಡಿ ಅಯ್ಯಾರೆ...” ಎಂದು ದುರ್ಬಲ ಉದ್ದಾರ ಹೊರಡುತ್ತಲೇ ಇತ್ತು.<br/> {{gap}}ಲಕ್ಕನಿಗೆ ಹೇಗೆ ಹೇಗೋ ಆಗಿತ್ತು. ರುಕ್ಕಿಣಿಯ ಆಕ್ರಮಣದಿಂದ ಅವನ<noinclude></noinclude> 8t1md7xn0lqjpe8p4n9835tf3jasgxa ಪುಟ:ವೈಶಾಖ.pdf/೨೨೯ 104 82158 319679 278683 2026-05-14T05:21:32Z Shreelatha.Halemane 7642 /* Validated */ 319679 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=ಸಮಗ್ರ ಕಾದಂಬರಿಗಳು|right=೨೧೩}} ಮನಸ್ಸು ಕಲಸಿಹೋಗಿತ್ತು. ಕಾಡಿನಲ್ಲಿ ಬಿದಿರು ಒಂದಕ್ಕೊಂದು ಮಸೆದಾಗ, ಸಣ್ಣದಾಗಿ ಕಾಣಿಸಿಕೊಂಡ ಕಿಡಿ, ಗಾಳಿ ಬೀಸಿದಂತೆ ಭುಗಿಲ್ಲನೆ ಜ್ವಾಲೆಯಾಗುವಂತೆ, ಅವನ ದೇಹಕ್ಕೂ ಬಿಸಿಯೇರಿತ್ತು... ಎಲ್ಲ ಮುಗಿದ ನಂತರ ಮಳೆ ಸುರಿದಾಗ ಆರುವ ಕಾಳಿಚ್ಚಿನಂತೆ ಮತ್ತೆ ಆರಿ ತಣ್ಣಗಾಗಿತ್ತು.<br/> {{gap}}ರುಕ್ಕಿಣಿಯು ಲಕ್ಕನ ಮೈಮೇಲಿನಿಂದ ಹೊರಳಿ ಮಗ್ಗುಲಾಗಿ, ಎದ್ದು ಕುಳಿತು, ಸೀರೆಯನ್ನು ಸರಿಪಡಿಸಿಕೊಳ್ಳುತ್ತಿದ್ದಳು. ದಡಬಡನೆ ಎದ್ದ ಲಕ್ಕ ಚಡ್ಡಿಯ ಗುಂಡಿಯನ್ನು ಹಾಕಿ, ದಟ್ಟಿಯನ್ನು ಜೋಪಾನವಾಗಿ ಉಟ್ಟು, ಗಾಡಿಯ ಒಳಗಿನ ಗೂಟಕ್ಕೆ ಸಿಕ್ಕಿಸಿದ್ದ ಹಗ್ಗಳನ್ನು ಕೈ ಗೆತ್ತಿಕೊಳ್ಳುತ್ತ, ಸಾವಧಾನವಾಗಿ ಹೋಗುತ್ತಿದ್ದ ಎತ್ತುಗಳನ್ನು ಚುರುಕುಗೊಳಿಸಿದ ಮಳೆ ನಿರರ್ಗಳವಾಗಿ ಹುಯ್ಯುತ್ತಲೆ ಇತ್ತು.<br/> {{gap}}ಈ ಹೊಸ ಅನುಭವದಿಂದ ಚುರುಕುಗೊಂಡ ಅವನ ಮನಸ್ಸು ಹಳೆಯ ಅನುಭವವೊಂದನ್ನುನೆನೆಯತೊಡಗಿತು<br/> {{gap}}ಆಗ ಅವನಿನ್ನೂ ತಲೆಕೆದರಿ, ಗೊಣ್ಣೆ ಸುರಿಸಿಕಳ ಚಡ್ಡಿ ಇಕ್ಕಂಡು ತಟ್ಟಾಡ್ತ ಇದ್ದ ಹೈದ. ಅತ್ತು ವಯಸ ಇರಬೈದು, ಕೆಂಗಣ್ಣಪ್ಪನ ಅಟ್ಟೇಲಿ ಜೀತಕ್ಕಿದ್ದ ಕಾಲ, ಆ ಗೌಡನ ಎಮ್ಮೆ ದನ ಯೆಲ್ಲಾನೂವೆ ಅಟ್ಟಕಂಡು ಅವ ಮೇಯಿಸಕ್ಕೆ ಅಡವಿಗೊಗಿದ್ದ. ಬಾಕಿ ಹೈಕಳ ಸಂಗಾಟ ಸಿವಾಚಾರದ ಗಂಗಿಯೂ ಬಂದಿದ್ದಳುಅವತ್ತು ಭಾನುವಾರ, ಮಟಕ್ಕೆ ರಜ ಅಲ್ವ, ಅದ್ರೆ... ಕಾಡಲ್ಲಿ ವೋಟೋಟು ದೂರಕೆ ಬ್ಯಾರೆ ಬ್ಯಾರೆ ಗುಂಪಾಗಿ ನಾವೆಲ್ಲ ಹೈಕಳೂವೆ ದನ ಮೇಯಿಸ್ತಾ ಇವಿ. ಇದ್ದಕಿದ್ದಂಗೆ ಇವೊತ್ತಿನಂತದ್ದೆ ಮಳೆ ಗಟ್ಟಿಸಿ ಕೆಡವಿಬುಟ್ರು. ನಾವೆಲ್ಲರೂವೆ ಕಾಡಿಗೆ ವೊ೦ಟಾಗ ಮಳೆ ಸುಳುವೇ ಇರನಿಲ್ಲ ಅದುಕೇ ಕೆಲವು ಹೈಕಳಂಗೆ ಗಂಗಿ, ನಾನು ಏಡು ಆಳೂವೆ ಗೊರಗ ತಂದಿರನಿಲ್ಲ. ಮಳೆ ಏಟ ತಡೀನಾರೆ ವಸಿ ಹೈಕಳು ಮರ, ಮಂಟಿ, ಮೆಳೆ, ಮರೆಗೋಗಿ ಕುಂತೊ. ವಸಿ ಹೈಕಳು, ಗೊರಗು ತಂದಿದೋವು, ಗೊರಗಾಕಂಡಿದೂವೆ, ಅಟ್ಟಾಡೊ ಮಳೇಲಿ ದಪಾನೆ ಮರಗೋಳ ಮರೆಗೋಗಿ ನಿಂತೆ. ದನಗೊಳೆಲ್ಲ ಮೆಳೆ ಮರೆಗೆ ವತ್ತರುಸಿ ನಿಂತೊ. ಗಂಗಿ, ನಾನು ಏಡಾಳ್ವೆ ಒಟ್ಟಿಗೇಯ ದನ ಮೇಯಿಸ್ತಿದ್ದೋರು, ದೌಡು ವೋಡುದು, ಉಲಿಗುತ್ತೀಲಿ ಆಶ್ರಯ ಪಡೆದೊ. ಆ ಉಲಿಗುತ್ತಿ ಮ್ಯಾಲೆಲ್ಲ ಹಂಬು ಅದಕ್ಕಾಗಿ ಚಪ್ಪರದಂಗೆ ಸುತ್ತಾಲು ಮೂರು ಕಡೀಕೆ ಎಣೆಕಂಡು ವಳುಗಡೆ ಒಂದು ಅದಿನಾರು ಮೆಟ್ಟಿನ ಉಲಿ ನಿಸುರಾಗಿ ಕಾಲು ಚಾಚಿ ಬಿದ್ದು ಕೊಬೈದಿತ್ತು. ಸಣ್ಣ ಪುಟ್ಟ ಕರಿ ಅಸುರು ಎಲೆಗೊಳೆಲ್ಲ ಒಂದಕ್ಕೊಂದು, ಒಂದರ ಮ್ಯಾಕ್ಕೊಂದು ತಗಲಿ, ವತ್ತೊತ್ತಾಗಿ ಜಮಾಯ್ಕ, ಮ್ಯಾಗಿನಿಂದ ಒಂದು ತೊಟ್ಟು ಮಳೇನೂವೆ ವಳೀಕೆ ಬೀಳದಂಗೆ<noinclude></noinclude> fyetov8zgt6y3lgmhm5wcw2yw9lq0db ಪುಟ:ವೈಶಾಖ.pdf/೨೩೦ 104 82159 319680 278681 2026-05-14T05:24:13Z Shreelatha.Halemane 7642 /* Validated */ 319680 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=೨೧೪|right=ವೈಶಾಖ}} ಮಾಡಿತ್ತು. ಈ ಉಲಿಗುತ್ಯ ಮೂಡಲ ಚೋರಿ ಬಾಯಿ ತೆರೆಕಂಡಿದ್ರಿಂದ, ಮೂಡಲ ಮಳೆ ಒಂದ ಬುಟ್ಟರೆ, ಬ್ಯಾರೆ ಕಡಿಂದ ಹುಯ್ಯೋ ಮಳೆಗೆ ಇದರೊಳ್ಳೆ ನೆನಿತಾನೆ ಇರನಿಲ್ಲ. ಕಳ್ಳರು, ಕಾಕರು, ದನ ಕಾಯೋರು ಈ ಗುತ್ತಿ ವಳುಚೋರಿ ಬೆಂಕಿ ಅತ್ತಿಸಿ, ಮಳೆ ವ್ಯಾಳ್ಯದಲ್ಲಿ ಬೀಡಿ ಅಚ್ಚಿಕೊಂಡು, ಬೆಂಕಿ ಕಾಯ್ತಾ ಕುಂತುಗತ್ತಿದ್ರು... ಈ ಉಲಿಗುತ್ತಿ ವಳೀಕೆ ನಮ್ಮ ತೆಲ ಇನ್ನೊದರ ಮಳುಗೇಯ, ಗಂಗಿ ನಾನು ಏಡು ಹೈಕಳೂವೆ ನೆಂದು ಪಜ್ಜಿ ಆಗಿದ್ದೋ... ಇದು ಮೂಡಲ ಮಳೆ ಆಗಿದ್ರಿಂದ, ಮೂಡಲ ಗಾಳಿ ರೊಯ್ ಅಂತ ಒಂದೊಂದು ದಪ ಬೀಸಿದಾಗ್ಯೂವೆ, ಒಂದೊಂದು ಸರವು ಮಳೆಯ ನಮ್ಮಿಬ್ಬರ ಮ್ಯಾಲೂ ಚಕ್ಕನೆ ಕೇರಿದಂಗೆ ಆಗೋದು... ಥಂಡಿ ಗಾಳಿ ಬೀಸಿತೊಂದ್ರೆ, ನೆಂದೋಗಿ ಕುಂತಿದ್ದ ನಾವಿಬ್ಬರೂವೆ ಚಳಿ ತಡಿನಾರೆ ಗಡ ಗಡ ನಡುಗಿನ, ಕಟಕಟ್ಟೆ ಹಲ್ಲು ಕಡಿಯೋವಂಗಾಯಿಯ್ಯ.... ಗಂಗಿ ಅಂಗೆ ನ್ಯಾಡಿದ್ದು. ಇಂಗೆ ಸ್ವಾಡಿದ್ದು. ಮಳೆನಿಲ್ಲೊ ಸುಳುವೆ ಕಾಣನಿಲ್ಲ. “ಆಸ್ಸ್ಸ್ ಯೇನು ಚಳಿ, ನಾ ತಡಕೋನಾರಿ” ಅಂದೋಳು, ನನ್ನ ತಬ್ಬಿಕಂಡು ಕೇಳೀಕೆ ಕೆಡವಿ ನನ್ನ ಮ್ಯಾಲೆ ಮನಗಿ, “ಇದೇನ ನೀ ಮಾಡ್ತಿರಾದು ಬ್ಯಾಡ, ಬ್ಯಾಡ” ಅಂತಿದ್ರೂವೆ, ನನ್ನ ಚಡ್ಡಿ ಗುಂಡಿ ಬಿಚ್ಚಿ, ತನ್ನ ಲಂಗೆತ್ತಿ ಉಜ್ಜಕ್ಕೆ ಮುಟ್ಟಿಕೊಂಡ್ಲು... ಗಂಗಿ ಆಗ್ಗೆ ಮಯ್ಯ ನೆರೆಯಕ್ಕೆ ಬಂದಿದ್ದಳು. ಅವುರಟೀಲಿ ಮಸ್ತು ಕರಾವು. ಕಾಂದಾರಿ ಎಣ್ಣುಗೊಳಂಗೆ ಕೊದಾರಿಯಾಗಿ ಬೆಳುಕಂಡಿದ್ದು..... ತೀಟೆ ತಡೀನಾಗ್ಗೆ ಇಂಗೆ ಅವಳು ಉಜ್ಜುತ್ತಾ ಇರಬೇಕಾದ್ರೆ, ನಂಗೆ ಉಚ್ಚೆಗೆ ಅವಸರಾಗ ಚಿರಕಿವೊಡದಂಗೆ ಮ್ಯಾಕಮುಖನಾಗಿ ಲೋಳ್ಳನೆ ಹುಯ್ದು ಬುಟ್ಟೆ.... ಆ ಸಂಯ ನೆನೀತಿದ್ದಂಗೆ ಲಕ್ಕನಿಗೆ ಎಂಗೆಂಗೋ ಆಯ್ತು!...<br/> {{gap}}ಇನ್ನೂ ಕಾಡನ್ನು ದಾಟಿರಲಿಲ್ಲ. ಮಳೆ ನಿಂತಿತ್ತು ಆಗಳೆ ಉದಯವಾಗಿದ್ದ ಸೂರ್ಯ, ಚದರುತ್ತಿದ್ದ ಮೋಡಗಳ ಅಂಚಿಗೆ ಬೆಳ್ಳಿಯ ಲೇಪ ಮಾಡಿ, ಮೇಲೆ ಮೇಲೆ ಏರುತ್ತಾ ಇದ್ದ. ಮಳೆಯಲ್ಲಿ ಮಿಂದ ಅಡವಿ ಬೆಳಗಿನ ಪ್ರಭೆಯಿಂದ ಹೊಸ ಕಾಂತಿಯನ್ನು ವಡೆದಂತಿತ್ತು. ಆದರೆ ರುಕ್ಕಿಣಿಗಾಗಲಿ, ಲಕ್ಕನಿಗಾಗಲಿ ಆ ಹಸರು ಸೌಂದರ್ಯದತ್ತ ದೃಷ್ಟಿ ಹೊರಳಲಿಲ್ಲ. ಅವರಿಬ್ಬರೂ ಅನಿರೀಕ್ಷಿತವಾಗಿ ನಡೆದುಹೋದ ಪ್ರಸಂಗದಿಂದ ವಿವಶರಾಗಿ ಚಿಂತಿಸುತ್ತ ಸಾಗಿದ್ದರು. ಲಕ್ಕನಿಗೆಆಗಬಾರದ್ದು ಆಗೋಯ್ತ-ಮುಂದಕೇನೋ? ಎಂಬ ಕಳವಳ... ರುಕ್ಕಿಣಿಯ ಅಂತರಂಗವೂ ತೀವ್ರತಮವಾದ ಕೋಭೆಗೆ ಒಳಗಾಗಿತ್ತು-ಶಾಸ್ತ್ರಿಗಳು ಕೆದಕಿ ಕೆರಳಿಸಿದ ಅಂದಿನಿಂದ ಅವಳ ನರನರವೂ ಉದ್ರೇಕಗೊಂಡಿತ್ತು. ಒಳಗೊಳಗೇ ತನಗರಿವಿಲ್ಲದಂತೆಯೇ ಉಪಶಮನಕ್ಕಾಗಿ ಹಂಬಲಿಸುತ್ತಿತ್ತೇನೋ... ಆದರೆ ಇದರ<noinclude></noinclude> 6403dl55tr3446bk43u6twvwlzlzfc1 ಪುಟ:ವೈಶಾಖ.pdf/೨೩೧ 104 82160 319663 278680 2026-05-13T14:59:47Z Pragathi. BH 7585 /* Validated */ 319663 proofread-page text/x-wiki <noinclude><pagequality level="4" user="Pragathi. BH" /></noinclude>________________ {{rh|center=|left=ಸಮಗ್ರ ಕಾದಂಬರಿಗಳು|right=೨೧೫}} ಪರಿಣಾಮ ಎನಾಗುವುದೊ ಎಂಬ ವಿಚಾರ ಸುಳಿಯಿತು, ತಲ್ಲಣಗೊಂಡಳು.... ಓ ಎಂಥ ಕೆಲಸ ಮಾಡಿಬಿಟ್ಟೆ? ಎಂಥ ಅಚಾತುರ್ಯವಾಯತು?...' ಎಂದ ಪಶ್ಚಾತ್ತಾಪದಲ್ಲಿ ಬೆಂದಳು.<br/> {{gap}}ಕಾಡನ್ನು ದಾಟಿದೊಡನೆಯ ಲಕ್ಕೆ ಎತ್ತುಗಳನ್ನು ದೌಡಾಸಿದ. ಆರತಕ್ಷತೆ ಇನ್ನೇನು ಶುರುವಾಬೇಕು ಎನ್ನುವಷ್ಟರಲ್ಲಿ ಅವರು ಭೀಮನಳ್ಳಿಯನ್ನು ತಲುಪಿದ್ದರು.<br/> “ಬರ್ತೀಯೊ ನಿಲ್ಲವೊ ಅಂದುಕೊಳ್ತಾ ಇದ್ದೆ... ಸದ್ಯ, ಬಂದೆಯಲ್ಲ ಎನ್ನುತ್ತ ಅಕ್ಕ ಪಾರ್ವತಿ ಉಕ್ಕುವ ಪ್ರೀತಿಯಿಂದ ಅಲಂಗಿಸಿ, “ಮಾವಯ್ಯ ಆರೋಗ್ಯವಾಗಿದ್ದಾರೆ ತಾನೆ?” - ಕುಶಲ ಪ್ರಶ್ನೆ ಮಾಡಿದಳು. ಹೌದೆನ್ನುವಂತೆ ರುಕ್ಕಿಣಿಯು ತಲೆಯಾಡಿಸಿದಾಗ “ಯಾಕೆ ರುಕ್ಕೂ ಕೊಂಚ ಕಂಗೆಟ್ಟಿರುವ ಹಾಗೆ ಕಾಣುತ್ತಲ್ಲ?... ಮೈಯಲ್ಲಿ ಸ್ವಸ್ಥ ಇಲ್ಲವೆ?.... ಏನು ಸಮಾಚಾರ?”<br/> {{gap}}ಪಾರ್ವತಿಯು ಲೋಕಾಭಿರಾಮವಾಗಿ ಪ್ರಶ್ನಿಸಿದ್ದಳು. ಹಾಗೆ ಕೇಳಿದವಳು, ಪುಣ್ಯಕ್ಕೆ ರುಕ್ಕಿಣಿಯ ವದನವನ್ನು ಅವಲೋಕಿಸುತ್ತ ನಿಲ್ಲದೆ, ಎತ್ತುಗಳನ್ನು ಬಿಚ್ಚುತ್ತಿದ್ದ ಲಕ್ಕನ ಕಡೆಗೆ ತಿರುಗಿ,<br/> {{gap}}“ಹಿತ್ತಲಲ್ಲಿ ನಮ್ಮಾಳು ಚೋರಕ ಇದ್ದಾನೆ. ಅವನ ಕೈಗೆ ನಿಮ್ಮೆತ್ತುಗಳನ್ನು ಕೊಡು. ಅವನು ಎತ್ತುಗಳನ್ನು ಕಟ್ಟಿಹಾಕಿ ಅವಕ್ಕೆ ಹುಲ್ಲು ನೀರು ಕೊಡ್ತಾನೆ” ಎಂದವಳೆ, “ಹಾಗೇನೆ ಕೈಕಾಲಿಗೆ ನೀರು ಈಸುಕೊ. ಹೊಟ್ಟೆಗೆ ಏನಾದರೂ ತಗೊಳ್ಳವಂತೆ” ಎಂದಳು. ಲಕ್ಕ ನಿರುತ್ಸಾಹದಿಂದ, “ಯೇನು ಬ್ಯಾಡಿ, ಅಮ್ಮಾರೆ. ನಾ ನಮ್ಮೊರೇ ವೊಡ್ತೀನಿ” ಅಂದ. “ಚಿ, ಚಿ! ಎಲ್ಲಾದರೂ ಉಂಟೇನೊ, ಇವತ್ತು ನಮ್ಮ ಮನೆಯಲ್ಲಿ ಮಂಗಳಕಾರ್ಯ. ನೀನು ಇವತ್ತು ಇಲ್ಲೇ ಹೋಗಬೇಕು” ಪಾರ್ವತಿ ಒತ್ತಾಯ ಮಾಡಿದಳು. “ಇಲ್ಲ ಅಮ್ಮಾರೆ, ನಾ ವೋಗಲೇ ಬೇಕು. ನಮ್ಮಯ್ಯಂಗೆ ಏಡು ಜಿನದಿಂದ ಜರ.”- ಸುಳ್ಳಿನ ಮರ ಬಿದ್ದಿದ್ದ ಲಕ್ಕ.<br/> {{gap}}“ಅಯ್ಯಯ್ಯೋ, ಇದೇನೂ ನೀನು ಹೇಳಿರೋದು? ಮಂಗಳಕಾರ್ಯ ಮುಗಿಯುವವರೆಗೂ ನೀನು ಇದ್ದೀಯ, ಕಾರ್ಯ ಮುಗಿದ ಕೂಡಲೆ, ಅಕ್ಕ ಪಕ್ಕದ ಹಳ್ಳಿಗಳಿಂದ ಬಂದಿರುವ ನಮ್ಮ ನೆಂಟರಿಷ್ಟರನ್ನ ನಿನ್ನ ಗಾಡಿಯಲ್ಲೆ ಕಳಿಸೋಣ, ಎಂತಿದ್ದೆನಲ್ಲೋ?” ಎಂದು ಪಾರ್ವತಿ ಪೇಚಾಡಿದಳು,<noinclude></noinclude> soo62qn6mbow3ku46nz8gd81xtorwzq 319664 319663 2026-05-13T15:06:15Z Pragathi. BH 7585 319664 proofread-page text/x-wiki <noinclude><pagequality level="4" user="Pragathi. BH" /></noinclude>________________ {{rh|center=|left=ಸಮಗ್ರ ಕಾದಂಬರಿಗಳು|right=೨೧೫}} ಪರಿಣಾಮ ಎನಾಗುವುದೊ ಎಂಬ ವಿಚಾರ ಸುಳಿಯಿತು, ತಲ್ಲಣಗೊಂಡಳು.... ಓ ಎಂಥ ಕೆಲಸ ಮಾಡಿಬಿಟ್ಟೆ? ಎಂಥ ಅಚಾತುರ್ಯವಾಯತು?...' ಎಂದ ಪಶ್ಚಾತ್ತಾಪದಲ್ಲಿ ಬೆಂದಳು.<br/> {{gap}}ಕಾಡನ್ನು ದಾಟಿದೊಡನೆಯ ಲಕ್ಕೆ ಎತ್ತುಗಳನ್ನು ದೌಡಾಸಿದ. ಆರತಕ್ಷತೆ ಇನ್ನೇನು ಶುರುವಾಬೇಕು ಎನ್ನುವಷ್ಟರಲ್ಲಿ ಅವರು ಭೀಮನಳ್ಳಿಯನ್ನು ತಲುಪಿದ್ದರು.<br/> {{gap}}“ಬರ್ತೀಯೊ ನಿಲ್ಲವೊ ಅಂದುಕೊಳ್ತಾ ಇದ್ದೆ... ಸದ್ಯ, ಬಂದೆಯಲ್ಲ ಎನ್ನುತ್ತ ಅಕ್ಕ ಪಾರ್ವತಿ ಉಕ್ಕುವ ಪ್ರೀತಿಯಿಂದ ಅಲಂಗಿಸಿ,<br /> {{gap}}“ಮಾವಯ್ಯ ಆರೋಗ್ಯವಾಗಿದ್ದಾರೆ ತಾನೆ?” - ಕುಶಲ ಪ್ರಶ್ನೆ ಮಾಡಿದಳು. ಹೌದೆನ್ನುವಂತೆ ರುಕ್ಕಿಣಿಯು ತಲೆಯಾಡಿಸಿದಾಗ “ಯಾಕೆ ರುಕ್ಕೂ ಕೊಂಚ ಕಂಗೆಟ್ಟಿರುವ ಹಾಗೆ ಕಾಣುತ್ತಲ್ಲ?... ಮೈಯಲ್ಲಿ ಸ್ವಸ್ಥ ಇಲ್ಲವೆ?.... ಏನು ಸಮಾಚಾರ?”<br/> {{gap}}ಪಾರ್ವತಿಯು ಲೋಕಾಭಿರಾಮವಾಗಿ ಪ್ರಶ್ನಿಸಿದ್ದಳು. ಹಾಗೆ ಕೇಳಿದವಳು, ಪುಣ್ಯಕ್ಕೆ ರುಕ್ಕಿಣಿಯ ವದನವನ್ನು ಅವಲೋಕಿಸುತ್ತ ನಿಲ್ಲದೆ, ಎತ್ತುಗಳನ್ನು ಬಿಚ್ಚುತ್ತಿದ್ದ ಲಕ್ಕನ ಕಡೆಗೆ ತಿರುಗಿ,<br/> {{gap}}“ಹಿತ್ತಲಲ್ಲಿ ನಮ್ಮಾಳು ಚೋರಕ ಇದ್ದಾನೆ. ಅವನ ಕೈಗೆ ನಿಮ್ಮೆತ್ತುಗಳನ್ನು ಕೊಡು. ಅವನು ಎತ್ತುಗಳನ್ನು ಕಟ್ಟಿಹಾಕಿ ಅವಕ್ಕೆ ಹುಲ್ಲು ನೀರು ಕೊಡ್ತಾನೆ” ಎಂದವಳೆ, “ಹಾಗೇನೆ ಕೈಕಾಲಿಗೆ ನೀರು ಈಸುಕೊ. ಹೊಟ್ಟೆಗೆ ಏನಾದರೂ ತಗೊಳ್ಳವಂತೆ” ಎಂದಳು.<br /> {{gap}}ಲಕ್ಕ ನಿರುತ್ಸಾಹದಿಂದ,<br /> {{gap}}“ಯೇನು ಬ್ಯಾಡಿ, ಅಮ್ಮಾರೆ. ನಾ ನಮ್ಮೊರೇ ವೋಯ್ತೀನಿ” ಅಂದ.<br /> “ಚಿ, ಚಿ! ಎಲ್ಲಾದರೂ ಉಂಟೇನೊ, ಇವತ್ತು ನಮ್ಮ ಮನೆಯಲ್ಲಿ ಮಂಗಳಕಾರ್ಯ. ನೀನು ಇವತ್ತು ಇಲ್ಲೇ ಹೋಗಬೇಕು” ಪಾರ್ವತಿ ಒತ್ತಾಯ ಮಾಡಿದಳು.<br /> {{gap}}“ಇಲ್ಲ ಅಮ್ಮಾರೆ, ನಾ ವೋಗಲೇ ಬೇಕು. ನಮ್ಮಯ್ಯಂಗೆ ಏಡು ಜಿನದಿಂದ ಜರ.”- ಸುಳ್ಳಿನ ಮರ ಬಿದ್ದಿದ್ದ ಲಕ್ಕ.<br/> {{gap}}“ಅಯ್ಯಯ್ಯೋ, ಇದೇನೂ ನೀನು ಹೇಳಿರೋದು? ಮಂಗಳಕಾರ್ಯ ಮುಗಿಯುವವರೆಗೂ ನೀನು ಇದ್ದೀಯ, ಕಾರ್ಯ ಮುಗಿದ ಕೂಡಲೆ, ಅಕ್ಕ ಪಕ್ಕದ ಹಳ್ಳಿಗಳಿಂದ ಬಂದಿರುವ ನಮ್ಮ ನೆಂಟರಿಷ್ಟರನ್ನ ನಿನ್ನ ಗಾಡಿಯಲ್ಲೆ ಕಳಿಸೋಣ, ಎಂತಿದ್ದೆನಲ್ಲೋ?” ಎಂದು ಪಾರ್ವತಿ ಪೇಚಾಡಿದಳು,<noinclude></noinclude> m3hwvfn2yt0i0m0815qouxyz42ch18p ಪುಟ:ವೈಶಾಖ.pdf/೨೩೨ 104 82161 319665 278679 2026-05-13T15:13:21Z Pragathi. BH 7585 /* Validated */ 319665 proofread-page text/x-wiki <noinclude><pagequality level="4" user="Pragathi. BH" /></noinclude>________________ {{rh|center=|left=೨೧೬|right=ವೈಶಾಖ}} {{gap}}“ಅದ್ಯಾಕೆ ಅಮ್ಮಾರೆ, ನಿಮ್ಮ ಗಾಡಿಗೇನಾಗದೆ?” ಕೇಳಿದ “ನಮ್ಮ ಗಾಡಿ ದೂರಿ ಮುರಿದುಹೋಗಿದೆ. ಅದನ್ನ ರಿಪೇರಿಗೆ ಬಿಟ್ಟಿದೀವಿ. ಅದಕ್ಕೇನೆ ನೀನು ಇಲ್ಲೇ ಇದ್ದು ನಮಗೆ ಕೊಂಚ ಸಹಾಯ ಮಾಡು ಅಂತ ಕೇಳಿರೋದು...”<br/> {{gap}}“ಇಲ್ಲ, ಇಲ್ಲ, ನಾ ವೋಗಲೇಬೇಕು... ನಮ್ಮ ಗಾಡ್ಯ ಬೇಕಾರೆ ನೀವು ಇಲ್ಲೆ ಇಟ್ಟುಗನ್ನಿ, ಗಾಡಿ ವೋಡಿಯಕ್ಕೆ ಯೆಂಗಿದ್ರೂ ನಿಮ್ಮಾಳು ಜೊರಕ ಇದ್ದೇ ಅವನೆ... ನಾ ವೋಗಿ ಅಯ್ಯಾರೆ ಇಸ್ಯ ತಿಳುಸ್ತೀನಿ.”<br/> {{gap}}“ಹುಂ, ಇನ್ನೇನು ಮಾಡುವುದು. ನಿಮ್ಮ ತಂದೆಗೆ ಹುಶಾರಿಲ್ಲ ಎನ್ನುವಾಗ, ನಾವು ಹೇಗೆತಾನೆ ನಿನ್ನನ್ನ ತಡೆಯಲಿಕ್ಕೆ ಆಗುತ್ತೆ. ನಿಮ್ಮ ಗಾಡಿಯನ್ನು ಇನ್ನು ನಾಲೈದು ದಿನಗಳಲ್ಲಿ ಕಳಿಸಿಕೊಡ್ತಾರಂತೆ ಎಂದು ಮಾವಯ್ಯನವರಿಗೆ ತಿಳಿಸು... ಆದೇನೋ ಸರಿ. ಆದರೆ ನೀನು ದೂರ ಪ್ರಯಾಣ ಮಾಡಿ ಬಂದಿದ್ದೀಯೆ, ಮತ್ತೆ ಹಸಿದು ನೀನು ನಡೆದು ಹೋಗಲಿಕ್ಕೆ ನಾನೆಂದೂ ಒಪ್ಪಲ್ಲ. ಹೊಟ್ಟೆಗೆ ನೀನು ಏನಾದರೂ ತಗೊಂಡೇ ಇಲ್ಲಿಂದ ಹೊರಡಬೇಕು.”- ಪಾರ್ವತಿ ಒತ್ತಾಯ ಪಡಿಸಿದಳು.<br/> {{gap}}ವಿಧಿಯಿಲ್ಲದೆ ಒಪ್ಪಿ, ಲಕ್ಕ ಎತ್ತುಗಳನ್ನಟ್ಟಿ, ಅವರ ಮನೆಯ ಹಿಂದಿನ ಹಿತ್ತಲಿಗೆ ಹೊರಟ. ಅವನು ತೆರಳುವುದನ್ನೇ ವೀಕ್ಷಿಸುತ್ತಿದ್ದ ಪಾರ್ವತಿ,<br/> {{gap}}“ನಿಮ ಲಕ್ಕನ್ನ ನೋಡಲಿಕ್ಕೆ ಒಂದು ಸಂತೋಷ ಆಗುತ್ತೆ ನೋಡೆ ನಕ್ಕು... ನಮ್ಮರೈತರು ಹೇಳ್ತಾರಲ್ಲ-ಕೊರಡ ಬಿಗಿದ ಹಂಗೆ ಬೆಳದದ್ದೆ ಅಂತ - ಹಾಗೆ ಬೆಳೆದಿದ್ದಾನೆ, ಹುಡುಗ!... ನಮ್ಮ ಚೋರಕನೂ ಇದ್ದಾನೆ ನೋಡು. ನಾವು ಎಷ್ಟೆಷ್ಟೇ ಪೋಷಾಕು ಮಾಡಿದರೂ ಅವನು ಮಾತ್ರ ಸೀಕಲ್ಲ ಕೊನೆ!” ಎನ್ನುತ್ತ ನಕ್ಕಳು.<br /> {{gap}}ರುಕ್ಕಿಣಿ ಮಾತು ತಿರುಗಿಸಿ,<br /> {{gap}}“ಇದೇನು, ನಮ್ಮ ಸರಸಿ, ಗಿರಜಿ ಇಬ್ಬರೂ ಕಾಡ್ತಾನೆ ಇಲ್ಲ?” ಎಂದು ಕೇಳಿದಳು.<br /> {{gap}}“ಅಯ್ಯೋ, ಅವರಿಬ್ಬರನ್ನೂ ಸಾದಾ ದಿನಗಳಲ್ಲೇ ಹಿಡಿಯುವುದು ಪ್ರಯಾಸ. ಇನ್ನು ಇಂಥ ಸಂಭ್ರಮದ ದಿನದಲ್ಲಿ ಕೇಳಬೇಕೆ?... ಒಳಗಡೆ ಎಲ್ಲೋ ಸುತ್ತಾಡ ಇರಬೇಕು. ಬಾ, ನೋಡೋಣ” ಎನ್ನುತ್ತ ಪಾರ್ವತಿ ಕೈ ಹಿಡಿದು ಎಳೆದಾಗ, ರುಕ್ಕಿಣಿಯ<br /> {{gap}}“ಅಕ್ಕ, ನಾನು ಸ್ನಾನ ಮಾಡಬೇಕಲ್ಲ...” ಎಂದು ತಡವರಿಸಿದಳು.<noinclude></noinclude> bb8yegl69cpz95um6pdwaijxe3e5qwg ಪುಟ:ವೈಶಾಖ.pdf/೨೩೩ 104 82162 319666 278666 2026-05-13T15:18:09Z Pragathi. BH 7585 /* Validated */ 319666 proofread-page text/x-wiki <noinclude><pagequality level="4" user="Pragathi. BH" /></noinclude>________________ {{rh|center=|left=ಸಮಗ್ರ ಕಾದಂಬರಿಗಳು|right=೨೧೭}} {{gap}}“ಯಾಕೆ ಬೆಳಿಗ್ಗೆ ಸ್ನಾನ ಮಾಡಲಿಲ್ಲವೆ?...” ಎಂದು ಅನ್ಯಮನಸ್ಕಳಾಗಿ ಪ್ರಶ್ನಿಸಿದಳು. ಅಲ್ಲಿಗೆ ಬಂದ ನೆಂಟತಿಯೊಬ್ಬಳಿಗೆ “ನಮ್ಮೆಜಮಾನರಿಗೆ ರುಕ್ಕು ಬಂದಿದ್ದಾಳೆ ಎಂದು ತಿಳಿಸು” ಎಂದು, ನಂತರ ರುಕ್ಕಿಣಿಯತ್ತ ತಿರುಗಿ ನೋಡಿ,<br/> {{gap}} “ಇಲ್ಲ, ನೀನು ತೀರ ತೆಗೆದುಹೋಗಿರುವ ಹಾಗಿದೆ, ರುಕ್ಕು...” ಎನ್ನುತ್ತಿರುವಂತೆ, ರುಕ್ಕಿಣಿಯು-ನೆನೆದಿದ್ದೀನಿ. ಏನೋ ಮುಜುಗರ. ಮತ್ತೆ ಸ್ನಾನ ಮಾಡಿದರೆ ಎಷ್ಟೋ ಹರ್ಷ ಆಗುತ್ತೆ.” ರುಕ್ಕಿಣಿ ವಿವರಣೆಯಿತ್ತಳು.<br/> {{gap}}ಆಗ ಕಣ್ಣಿಟ್ಟು ಸರಿಯಾಗಿ ರುಕ್ಕಿಣಿಯನ್ನು ನೋಡಿದಳು ಪಾರ್ವತಿ.<br/> {{gap}}“ಅಯ್ಯಯ್ಯೋ, ನನ್ನ ಗಡಿಬಿಡಿಯಲ್ಲಿ, ನೀನು ನೆನೆದಿರೋದನ್ನೂ ನೋಡಿಲ್ಲ ನಾನು. ನಡಿ, ನಡಿ. ಹಂಡೆಯಲ್ಲಿ ನೀರು ಕಾಯ್ತಾನೆ ಇದೆ. ಬೇಗ ಬೇಗ ಸ್ನಾನ ಮಾಡಿ ಸಿದ್ಧವಾಗುವಿಯಂತೆ, ಬಾ...”<br/> {{gap}} ತಂಗಿಯನ್ನು ಪ್ರೀತಿಯಿಂದ ತಬ್ಬಿ, ತಮ್ಮ ಮನೆಯೊಳಗೆ ಹೋಗುತ್ತ, ಪಡಸಾಲೆಯಲ್ಲಿ ಅಡ್ಡವಾದ ತನ್ನ ಯಜಮಾನರಿಗೆ, ಪಾರ್ವತಿಯು {{gap}}“ವಾಲಗದೋರು ಇನ್ನೂ ಬಂದೇ ಇಲ್ಲವಲ್ಲ” ಎಂದು ಆಕ್ಷೇಪಿಸಿದಳು.<br /> {{gap}}“ಅದನ್ನೇ ವಿಚಾರಿಸಲು ಹೊರಟೆ”- ಎಂದು ಚಂದ್ರಶೇಖರಯ್ಯ, “ಯಾಕೆ ರುಕ್ಕ-ಇಷ್ಟು ಕಂಗೆಟ್ಟು ಹೋಗಿದ್ದೀಯೆ?” ಎಂದು ಕೇಳಿದ.<br /> {{gap}}“ಕಾಡುಹಾದಿ, ಗಾಡಿ ಪ್ರಯಾಣ, ಕೊಂಚ ಬಳಲಿದ್ದಾಳೆ, ಅಷ್ಟೆ, ಈಗ ನೀವು ವಾಲಗದವರನ್ನು ಮೊದಲು ಹೋಗಿ ತರದೂದು ಮಾಡಿ ಕರೆದುತನ್ನಿ.” - ಅವಸರದಿಂದ ಹೇಳಿದ ಪಾರ್ವತಿ, ರುಕ್ಕಿಣಿಯನ್ನು ತ್ವರೆಯಿಂದ ಬಚ್ಚಲುಮನೆಗೆ ಕರೆದೊಯ್ದಳು.<br/> <br/> {{center|'''೨೧'''}} {{gap}}ಪಾರ್ವತಮ್ಮ ವತ್ತಾಯಕ ಯೇನೊ ಒಂದೇಟು ವೋಟ್ಟೆಗಾಕಿ, ಭೀಮನಳ್ಳಿಯ ಇಂದುಕಾಕಿ, ಲಕ್ಕ ಆಗ್ಗೆ ಕಾಡುಹಾದೀಲಿ ವಾಪಸಾಗ್ತಾ ಇದ್ದ. ಜ್ವತೆ ಬೊಡ್ಡ ನಗರ ಬತ್ತಿತ್ತು. ಆಗ್ಗೆ ಬಿಸುಲು ಯೇಗ್ತಾ ಇತ್ತು. ಇಂದಿನ ಜಿನ ಮಳೆ ಬಿದ್ರೆ, ಮಾರನೆ ಜಿನ ಕಾಡಲ್ಲಿ ನಡೆಯಕ್ಕೆ ಲಕ್ಕಂಗೆ ಯಾವೊತ್ತು ಉಮೇದೆ... ಆದರೆ ಆ ಸ್ವತ್ತು ಲಕ್ಕಂಗೆ ಯಾಕೊ ಬಿಡಬ್ಯಾಸರ, ಜೋಲು ವೊಕ ಅಕ್ಕಂಡು, ಆ ಮೆಳಿಂದ ಈ ಮೆಳೆಗೆ ಪತರ ಪುತರ ಸದ್ದು ಮಾಡ್ತ ಓಡೋಗೊ ಗೌಜಲಕ್ಕಿನೊ ಕಾಡುಕೋಳೀನೊ ಅಟ್ಟಾಡಕ್ಕೆ ವೊಂಟ ಬೋಡ್ಡನ್ನ ಒದ್ದು, ನಾಕೇಟು ಬಾರಿಸಿ, ಹೊಟ್ಟೆ ತುಂಬ ಬೋಗುಳ ಬಯ್ಯಕೊತ್ತ ಬತ್ತಾ ಇದ್ದ. ಆ ಸಮಯಕ್ಕೆ ಸರಾಗಿ<noinclude></noinclude> h53e2dt82lb4xxub1lspg2vocr4q625 ಪುಟ:ವೈಶಾಖ.pdf/೨೩೪ 104 82163 319561 319425 2026-05-13T13:32:31Z Shreelatha.Halemane 7642 /* Proofread */ 319561 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{rh|center=|left=೨೧೮|right=ವೈಶಾಖ}} ಯಾವುದೊ ಮರದ ಮ್ಯಾಗ್ನಿಂದ ಒಂದು ಹಕ್ಕಿ ಕೂಗಿ ದಂಗಾಯ್ತು: {{center|ಉಪ್ಪಲ ಸೆಟ್ಟಿ}} {{center|ಉಪ್ಪಲ ಸೆಟ್ಟಿ}} {{center|ನೀ ತರೆ }} {{center|ನಾ ಮರೆ... }} {{gap}}ಲಕ್ಕನ ಮನಸು ಒಂದು ಹೊಳ್ಳು ಹೊತ್ತು ಇಂದಿಂದೆ ಚಿಮ್ಮು... {{gap}}ಆಗಿನ್ನೂವೆ ಇಂಗೇಯ ಬತ್ತಾ ಇರಬೇಕಾರೆ, ಇಂತಾದ್ದೆ ಒಂದು ಸೋರೆ ಕಟ್ಟಿ ಹಕ್ಕಿ, ಸಮ ಸಮಾ ಇದೇ ಜಾಗದಾಗೆ ಇದೇ ತರ, ಇದೇ ವರಸೇಲಿ ಕೂಗ್ತಿತ್ತು... ಅದು ಗೆಪ್ತಿ ಆಯ್ತಿದ್ದಂಗೆ ಆ ಹಕ್ಕಿ ಸಂಗ್ತಿ ಗ್ಯಾಪನ ಆಯ್ತು: ಒಬ್ಬ ಉಪ್ಪುಲಸೆಟ್ಟಿ ಒಂದು ಇಂತಾ ಸೋರೆ ಕಟ್ಟನ್ನ ಇಡಿದು, ಅದರ ರೆಕ್ಕೆ ಪುಕ್ಕ ತರದಾಕಿ, ಅದ್ರ ತನ್ನ ಎಗುಲು ಮ್ಯಾಲೆ ಕುಂಡರಿಸ್ಕಂಡು, ಉಪ್ಪಿನ ಯಾಪಾರಕ್ಕೆ ಊರೂರು ತಿರುಗ್ತಾ ಇದ್ದಂತೆ. ಅವನೇನು ತಿಳುಕಂಡಿದ್ದ- ಈ ಹಕ್ಕಿ ರೆಕ್ಕೆ ಪುಕ್ಕ ತರದಾಕಿನ್ನಿ, ಇನ್ನು ಇದು ಹಾರಕ್ಕೆ ಇಲ್ಲ. ನನ್ನ ವಸದಲ್ಲೇ ಇದೆ. ಅಟ್ಟಿಗೆ ವೋದ ಮ್ಯಾಲೆ ನನ್ನ ಎಡತಿ ಕೈಯಲ್ಲಿ ಇದ ಬೇಯಿಸಿ, ಪಳಿ ಮಾಡಿ ತಿನ್ನಬೇಕೂಂತ ಲೆಕ್ಕ ಆಗಿದ್ದ. ಆದ್ರೆ ಕಾಲ ಕಳದಂಗೆ, ಇಂಕರ ಇಂಕರಾಗಿ ಆ ಹಕ್ಕಿಯ ರೆಕ್ಕೆ ಪುಕ್ಕ ಬೆಳೀತ ಮೋದೊ. ಒಂದು ಜಿನ, ಪೂರಾ ಬೆಳುದ ಮ್ಯಾಗೆ, ಆ ಸೋರೆಕಟ್ಟ ಆ ಉಪ್ಪಲ ಸೆಟ್ಟಿ ಹೆಗಲ ಮ್ಯಾಗಿನಿಂದ ಮ್ಯಾಕ್ಕೆ ಹಾರಿ, “ಉಪ್ಪುಲ ಸೆಟ್ಟಿ, ಉಪ್ಪಲ ಸೆಟ್ಟಿ-ನೀ ತರೆ, ನಾ ಮುದ್ರೆ...” ಅಂತ ಈಯಾ ವೊಂಟೋಯ್ತಂತೆ... {{gap}}ಲಕ್ಕ ಈ ಇಸಯಾನೆ ಮೆಲುಕಾಕ್ತ ಬತ್ತಾ ಇದ್ದ. ಭೀಮನಹಳ್ಳಿಲಿ ವೊಟ್ಟಿಗೆ ಪುಟ ಬಲವಾಗಿ ಬಿದ್ದಿತ್ತಲ್ಲ. ಆ ಮೇಕಿನಲ್ಲಿ ಒಂದು ವರಸೇಲಿ ಕುಲುಕುಲುಕ ಜೊತೇಲಿ ಬತ್ತಿದ್ದ ಬೊಡ್ಡ, ಇದ್ದಕ್ಕಿದ್ದಂತೆ ಕಣ್ಣಿಗೆ ಕಾಣಿಸೆ, ಲಕ್ಕ “ಮಾಳತದ್ದು, ಯಾವ ಕಿರುಬನ ಬಾಯಿಗೆ ವೋಯ್ಯೋ.... “ಗೊಣಗ್ರ, ಹೊಳ್ಳಿ ಕ್ವಾಡ್ಡ, ಒಂದು ದಪ್ಪ ಹುರುಗಲು ಮರದ ಮೋಟು ಬೊಡ್ಡೆಗೆ ಕಾಲೆತ್ತಿ ಆರಾಮವಾಗಿ ಅದು ಉಚ್ಚೆ ಹುಯುತ್ತಿತ್ತು!- ಅದ್ರೆ ಸ್ವಾಗ್ತಿದ್ದಂಗೆ ಲಕ್ಕಂಗೆ ಇಂದ್ರೆ ಅಲ್ಲಿ ನಡೆದ ಒಂದು ಪರಸಂಗ ನೆಪ್ಪಾಯ್ತು: {{gap}}ತಾನು ಬಾಕಿ ದನ ಕಾಯೊ ಹೈಕಳ ಜತೆ ಇಂಗೇಯ ಇಂದುಕೊಂದು ಜಿನ ಬತ್ತಾ ಇದ್ದ. ಆಗ ಎತ್ತತ್ತಗೊ ಸ್ವಾಢ ಬತ್ತದ್ದ ಉಳಿಕೆ ಹೈಕಳು 'ಉಸ್' ಮಾಡಿ, ರಾಗ ತಗ್ಗುಸಿ, “ಅಲ್ಲಿ ಕ್ವಾಡ್ಗ ಅಪ್ಪಯ್ಯ!...” ಅಂತ ಬೆಟ್ಟು ಮಾಡಿ ತೋರಿದ್ರು, ಅದೇನಪ್ಪ ಅಂತ ತಿರುಗಿ ಕ್ವಾಡಿದ್ರೆ, ಯಾರಾದ್ರೂ ಬೆಪ್ಪಾಗೊ ಅಂತ<noinclude></noinclude> hkg3gn3u34wav8d42aw0hjlwrrpbbnz 319662 319561 2026-05-13T14:50:15Z Shreesha Sharma 7840 /* Validated */ 319662 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=೨೧೮|right=ವೈಶಾಖ}} ಯಾವುದೊ ಮರದ ಮ್ಯಾಗ್ನಿಂದ ಒಂದು ಹಕ್ಕಿ ಕೂಗಿ ದಂಗಾಯ್ತು: {{center|ಉಪ್ಪಲ ಸೆಟ್ಟಿ}} {{center|ಉಪ್ಪಲ ಸೆಟ್ಟಿ}} {{center|ನೀ ತರೆ }} {{center|ನಾ ಮರೆ... }} {{gap}}ಲಕ್ಕನ ಮನಸು ಒಂದು ಹೊಳ್ಳು ಹೊತ್ತು ಇಂದಿಂದೆ ಚಿಮ್ಮು... {{gap}}ಆಗಿನ್ನೂವೆ ಇಂಗೇಯ ಬತ್ತಾ ಇರಬೇಕಾರೆ, ಇಂತಾದ್ದೆ ಒಂದು ಸೋರೆ ಕಟ್ಟಿ ಹಕ್ಕಿ, ಸಮ ಸಮಾ ಇದೇ ಜಾಗದಾಗೆ ಇದೇ ತರ, ಇದೇ ವರಸೇಲಿ ಕೂಗ್ತಿತ್ತು... ಅದು ಗೆಪ್ತಿ ಆಯ್ತಿದ್ದಂಗೆ ಆ ಹಕ್ಕಿ ಸಂಗ್ತಿ ಗ್ಯಾಪನ ಆಯ್ತು: ಒಬ್ಬ ಉಪ್ಪುಲಸೆಟ್ಟಿ ಒಂದು ಇಂತಾ ಸೋರೆ ಕಟ್ಟನ್ನ ಇಡಿದು, ಅದರ ರೆಕ್ಕೆ ಪುಕ್ಕ ತರದಾಕಿ, ಅದ್ರ ತನ್ನ ಎಗುಲು ಮ್ಯಾಲೆ ಕುಂಡರಿಸ್ಕಂಡು, ಉಪ್ಪಿನ ಯಾಪಾರಕ್ಕೆ ಊರೂರು ತಿರುಗ್ತಾ ಇದ್ದಂತೆ. ಅವನೇನು ತಿಳುಕಂಡಿದ್ದ- ಈ ಹಕ್ಕಿ ರೆಕ್ಕೆ ಪುಕ್ಕ ತರದಾಕಿನ್ನಿ, ಇನ್ನು ಇದು ಹಾರಕ್ಕೆ ಇಲ್ಲ. ನನ್ನ ವಸದಲ್ಲೇ ಇದೆ. ಅಟ್ಟಿಗೆ ವೋದ ಮ್ಯಾಲೆ ನನ್ನ ಎಡತಿ ಕೈಯಲ್ಲಿ ಇದ ಬೇಯಿಸಿ, ಪಳಿ ಮಾಡಿ ತಿನ್ನಬೇಕೂಂತ ಲೆಕ್ಕ ಆಗಿದ್ದ. ಆದ್ರೆ ಕಾಲ ಕಳದಂಗೆ, ಇಂಕರ ಇಂಕರಾಗಿ ಆ ಹಕ್ಕಿಯ ರೆಕ್ಕೆ ಪುಕ್ಕ ಬೆಳೀತ ಮೋದೊ. ಒಂದು ಜಿನ, ಪೂರಾ ಬೆಳುದ ಮ್ಯಾಗೆ, ಆ ಸೋರೆಕಟ್ಟ ಆ ಉಪ್ಪಲ ಸೆಟ್ಟಿ ಹೆಗಲ ಮ್ಯಾಗಿನಿಂದ ಮ್ಯಾಕ್ಕೆ ಹಾರಿ, “ಉಪ್ಪುಲ ಸೆಟ್ಟಿ, ಉಪ್ಪಲ ಸೆಟ್ಟಿ-ನೀ ತರೆ, ನಾ ಮುದ್ರೆ...” ಅಂತ ಈಯಾ ವೊಂಟೋಯ್ತಂತೆ... {{gap}}ಲಕ್ಕ ಈ ಇಸಯಾನೆ ಮೆಲುಕಾಕ್ತ ಬತ್ತಾ ಇದ್ದ. ಭೀಮನಹಳ್ಳಿಲಿ ವೊಟ್ಟಿಗೆ ಪುಟ ಬಲವಾಗಿ ಬಿದ್ದಿತ್ತಲ್ಲ. ಆ ಮೇಕಿನಲ್ಲಿ ಒಂದು ವರಸೇಲಿ ಕುಲುಕುಲುಕ ಜೊತೇಲಿ ಬತ್ತಿದ್ದ ಬೊಡ್ಡ, ಇದ್ದಕ್ಕಿದ್ದಂತೆ ಕಣ್ಣಿಗೆ ಕಾಣಿಸೆ, ಲಕ್ಕ “ಮಾಳತದ್ದು, ಯಾವ ಕಿರುಬನ ಬಾಯಿಗೆ ವೋಯ್ಯೋ.... “ಗೊಣಗ್ರ, ಹೊಳ್ಳಿ ಕ್ವಾಡ್ಡ, ಒಂದು ದಪ್ಪ ಹುರುಗಲು ಮರದ ಮೋಟು ಬೊಡ್ಡೆಗೆ ಕಾಲೆತ್ತಿ ಆರಾಮವಾಗಿ ಅದು ಉಚ್ಚೆ ಹುಯುತ್ತಿತ್ತು!- ಅದ್ರೆ ಸ್ವಾಗ್ತಿದ್ದಂಗೆ ಲಕ್ಕಂಗೆ ಇಂದ್ರೆ ಅಲ್ಲಿ ನಡೆದ ಒಂದು ಪರಸಂಗ ನೆಪ್ಪಾಯ್ತು: {{gap}}ತಾನು ಬಾಕಿ ದನ ಕಾಯೊ ಹೈಕಳ ಜತೆ ಇಂಗೇಯ ಇಂದುಕೊಂದು ಜಿನ ಬತ್ತಾ ಇದ್ದ. ಆಗ ಎತ್ತತ್ತಗೊ ಸ್ವಾಢ ಬತ್ತದ್ದ ಉಳಿಕೆ ಹೈಕಳು 'ಉಸ್' ಮಾಡಿ, ರಾಗ ತಗ್ಗುಸಿ, “ಅಲ್ಲಿ ಕ್ವಾಡ್ಗ ಅಪ್ಪಯ್ಯ!...” ಅಂತ ಬೆಟ್ಟು ಮಾಡಿ ತೋರಿದ್ರು, ಅದೇನಪ್ಪ ಅಂತ ತಿರುಗಿ ಕ್ವಾಡಿದ್ರೆ, ಯಾರಾದ್ರೂ ಬೆಪ್ಪಾಗೊ ಅಂತ<noinclude></noinclude> 0o8qzs7nyhv0efgfmr4sljqq1724rfj ಪುಟ:ವೈಶಾಖ.pdf/೨೩೫ 104 82164 319562 305855 2026-05-13T13:33:23Z Shreelatha.Halemane 7642 /* Proofread */ 319562 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{Left|'''ಸಮಗ್ರ ಕಾದಂಬರಿಗಳು'''}}{{Right|೨೧೯}} ದುಸ್ಸಯವೆ.... ಮೈಗೆ ಹ್ವಾಸಾ ಸ್ಯಾಲೆಸುತ್ತಿ, ಕೈಯಿಗೆ ಮೊಕ್ಕೆಲ್ಲ ಅರಿಶಿಣ ತ್ವಡದು, ಅಣೆ ಮದ್ಯಕ್ಕೆ ರೂಪಾಯಿ ಅಗಲ ಕುಂಕಮ ಇಕ್ಕಂಡು, ತಲೆ ಕೆದರಿಕಂಡು, ಒಂದು ಎಂಗಸು ಕಣ್ಮುಚ್ಚಿ ಅಕ್ಕ ಪಕ್ಕ ಚಿಗುರತಾ ಇದ್ದ ಹುರುಗಲು ಮರದ ಬೊಡ್ಡೆಗೆ ಬೆನ್ನ ಮರುಗಿಸಿ ಕುಂತಿದ್ದಲು. ಅವಳ ಕುತ್ತಗೇಲಿ ಚೆಂಡು ಹೂವ್ರ ಹಾರ!... ಇದ್ಯಾಕಪ್ಪ ಇಲ್ಲಿ ಬಂದು ನಿದ್ದೆ ಮಾಡ್ತಿದ್ದಳು ಈವಮ್ಮ? ಅಂತ, ಒಬ್ಬ ಹೈದ ಮೆತ್ತಗಂದ. ಇಲ್ಲಿ ಯಾವೊ ಪಕ್ಕದ ಹಳ್ಳಿಯೋಳು ಇರಬೈದು, ಅಂತ ಇನ್ನೊಂದು ಹೈದ, ವೋಟ್ಟರಲ್ಲಿ ನಮ್ಮೆಲ್ಲಾರನೂವೆ ತಡೆದು ನಿಲ್ಲುಸಿ ಇನ್ನೊಂದು ಹೈದ ಯೋಲ್ಲ... {{gap}}“ಸತ್ಯಾಗಿ ಕ್ವಾಡುತ್ತ ಅವಳ ಸುತ್ತಾಲೂ ಎಂಗೆ ಕುರಿಗಳು ಸಾಲುಗಟ್ಟಿ ಕುಂತವೆ!... ಕುರಿ ಮೇಯಿಸಕ್ಕೆ ಬಂದೋಳು, ಅಂಗೆ ನಿದ್ದೆ ಜೋಂಪು ಅತ್ತಿ, ಆ ಮರದ ಬೊಡ್ಡೆಗೆ ವರುಗಿ ಕುಂತವೆ!” {{gap}}ನಾವೆಲ್ಲರೂ ಇನ್ನೂ ಸಮೀಪವೋಗಿ ನೋಡುದ್ರೆ, ಅವಳ ಸುತ್ತುಗಟ್ಟಿ ಅಷ್ಟು ದೂರಕೆ ಸಾಲಾಗಿ ರುಸಿಗಳಂಗೆ, ಆ ಕಾಡೋಕಾಗ್ಲಿ ಈ ಕಡೀಕಾಗ್ಲಿ ಇಂಕರಾನೂ ಮಿಸುಕಾಡ್ಡೆ ಕುಂತಿದ್ದೋವು ಕುರಿಗಳಲ್ಲ-ರಣಹದ್ದುಗಳು! ಅನ್ನೊ ಇಸ್ಯ ತಿಳೀತುನೂರಾರು ರಣದ್ದುಗಳು! ಇದ್ಯಾಕಪ್ಪ ಇಲ್ಲಿಗೆ ಬಂದು ಇಂಗೆ ಕುಂತವೆ?... ನಾವು ಹೈದಳೆಲ್ಲಾರು ಚಿಂತಿಸ್ತಾ ಇದ್ದಂಗೆ, ಕಾ ಕಾ ಕಾ ಅಂತ ಅತ್ತಿರದ ಮರದ ಮೈಲೆ ಕುಂತಿದ್ದ ಒಂದು ಕಾಗೆ ಕೂಗು, ಅದರ ಇಂದುಗುಟ್ಟಲೆ ಸುತ್ತಾ ಮುತ್ತ ಮರಗಳ ಮ್ಯಲೆ ಕುಂತಿದ್ದ ಕಾಗೆಗಳೆಲ್ಲ ಕಾ ಕಾ ಕಾ ಬಾಜಾ ಬಜಂತ್ರಿಯ ಬಜಾಯಿಸಕ್ಕೆ ಮುಟ್ಟಿಕಂಡೊ... ರಣದ್ದು ಮಾತ್ರ ಮಿಸಿಕಾಡ್ಡೆ ಕುಂತೇ ಇದ್ದೂ... ಇಂಗಿರೋನೂವೆ, ಅತ್ತಿರದ ಮರದ ಮಾಗೆ ಕುಂತ ಒಂದು ಕಾಗೆ ಮರದ ಮಾಗಿನಿಂದ ಹಾರಿ ಕೆಳಿಕೆ ಬಂತು. ಹೈಕಳು, ಇದೇನಪ್ಪಾಂತ ಉಸಾರಾಗಿ, ಇನ್ನೂ ಮುಂದಕ್ಕೆ ಚಿಗದು ನ್ಯಾಡುದ್ರೆ- ಆ ಯಮ್ಮನ ಮುಂದೆ ಒಂದು ದೊಡ್ಡ ಮೊನೆ ಬಾಳೆಲೆ ಆಸಿತ್ತು. ಅದರ ಮ್ಯಾಲೆ, ಅನ್ನದ ರಾಸಿ ಗೋಪುರ ಕಟ್ಟಿತ್ತು. ಆ ರಾಸಿ ಅಂಚಿಗೆ ಯೇನೇನೊ ಸೀ ಪದಾರ್ತ, ಚಿಪ್ಪು ಬಾಳೆ ಹಣ್ಣು, ತೆಂಗಿನಕಾಯಿ ಹೋಳು, ಕಡಲೆಪುರಿ, ಈಳ್ಯದೆಲೆ ಇವೆಲ್ಲ ಇದ್ದಂಗಿತ್ತು. ಆ ಮೊನೆ ಬಾಳೆಲೆ ವತ್ತಿಗೇಯ ಚರಿಗೆ ಗಾತ್ರದ ಹೈಸಾ ಮಡಿಕೇಲಿ ನೀರು ಬ್ಯಾರೆ ತುಂಬಿ ಇಟ್ಟಂಗಿತ್ತು.. ಇದ್ಯಾಕಪ್ಪ ಇವನೆಲ್ಲ ತಂದಿಟ್ಟಿರಾದು ಅಂತ ನಮಗೆ ಜೋಜಿಗ... ಅವಳೇ ತಿನ್ನಕೆ ತಂದು ಇಟ್ಟು ಕಂಡು ವೋಟರಲ್ಲಿ ಕಣ್ಣೆಗೆ ನಿದ್ದೆ ಅತ್ತಿ ಮನಗಿ ಬುಟ್ಟಿರಬೈದು, ಅಂತ ಒಂದುಕೊಂದು ತರ್ಕ ಮಾಡಿದೆ... ಯಾವ ತರ್ಕಕೂವೆ ಈ ಒಂಟು ಬಗೆ ಅರೀನೆ ಇಲ್ಲ!...<noinclude></noinclude> jwbyvv2mdmpzzkc899qny9svbovwibs 319661 319562 2026-05-13T14:50:00Z Shreesha Sharma 7840 /* Validated */ 319661 proofread-page text/x-wiki <noinclude><pagequality level="4" user="Shreesha Sharma" /></noinclude>________________ {{Left|'''ಸಮಗ್ರ ಕಾದಂಬರಿಗಳು'''}}{{Right|೨೧೯}} ದುಸ್ಸಯವೆ.... ಮೈಗೆ ಹ್ವಾಸಾ ಸ್ಯಾಲೆಸುತ್ತಿ, ಕೈಯಿಗೆ ಮೊಕ್ಕೆಲ್ಲ ಅರಿಶಿಣ ತ್ವಡದು, ಅಣೆ ಮದ್ಯಕ್ಕೆ ರೂಪಾಯಿ ಅಗಲ ಕುಂಕಮ ಇಕ್ಕಂಡು, ತಲೆ ಕೆದರಿಕಂಡು, ಒಂದು ಎಂಗಸು ಕಣ್ಮುಚ್ಚಿ ಅಕ್ಕ ಪಕ್ಕ ಚಿಗುರತಾ ಇದ್ದ ಹುರುಗಲು ಮರದ ಬೊಡ್ಡೆಗೆ ಬೆನ್ನ ಮರುಗಿಸಿ ಕುಂತಿದ್ದಲು. ಅವಳ ಕುತ್ತಗೇಲಿ ಚೆಂಡು ಹೂವ್ರ ಹಾರ!... ಇದ್ಯಾಕಪ್ಪ ಇಲ್ಲಿ ಬಂದು ನಿದ್ದೆ ಮಾಡ್ತಿದ್ದಳು ಈವಮ್ಮ? ಅಂತ, ಒಬ್ಬ ಹೈದ ಮೆತ್ತಗಂದ. ಇಲ್ಲಿ ಯಾವೊ ಪಕ್ಕದ ಹಳ್ಳಿಯೋಳು ಇರಬೈದು, ಅಂತ ಇನ್ನೊಂದು ಹೈದ, ವೋಟ್ಟರಲ್ಲಿ ನಮ್ಮೆಲ್ಲಾರನೂವೆ ತಡೆದು ನಿಲ್ಲುಸಿ ಇನ್ನೊಂದು ಹೈದ ಯೋಲ್ಲ... {{gap}}“ಸತ್ಯಾಗಿ ಕ್ವಾಡುತ್ತ ಅವಳ ಸುತ್ತಾಲೂ ಎಂಗೆ ಕುರಿಗಳು ಸಾಲುಗಟ್ಟಿ ಕುಂತವೆ!... ಕುರಿ ಮೇಯಿಸಕ್ಕೆ ಬಂದೋಳು, ಅಂಗೆ ನಿದ್ದೆ ಜೋಂಪು ಅತ್ತಿ, ಆ ಮರದ ಬೊಡ್ಡೆಗೆ ವರುಗಿ ಕುಂತವೆ!” {{gap}}ನಾವೆಲ್ಲರೂ ಇನ್ನೂ ಸಮೀಪವೋಗಿ ನೋಡುದ್ರೆ, ಅವಳ ಸುತ್ತುಗಟ್ಟಿ ಅಷ್ಟು ದೂರಕೆ ಸಾಲಾಗಿ ರುಸಿಗಳಂಗೆ, ಆ ಕಾಡೋಕಾಗ್ಲಿ ಈ ಕಡೀಕಾಗ್ಲಿ ಇಂಕರಾನೂ ಮಿಸುಕಾಡ್ಡೆ ಕುಂತಿದ್ದೋವು ಕುರಿಗಳಲ್ಲ-ರಣಹದ್ದುಗಳು! ಅನ್ನೊ ಇಸ್ಯ ತಿಳೀತುನೂರಾರು ರಣದ್ದುಗಳು! ಇದ್ಯಾಕಪ್ಪ ಇಲ್ಲಿಗೆ ಬಂದು ಇಂಗೆ ಕುಂತವೆ?... ನಾವು ಹೈದಳೆಲ್ಲಾರು ಚಿಂತಿಸ್ತಾ ಇದ್ದಂಗೆ, ಕಾ ಕಾ ಕಾ ಅಂತ ಅತ್ತಿರದ ಮರದ ಮೈಲೆ ಕುಂತಿದ್ದ ಒಂದು ಕಾಗೆ ಕೂಗು, ಅದರ ಇಂದುಗುಟ್ಟಲೆ ಸುತ್ತಾ ಮುತ್ತ ಮರಗಳ ಮ್ಯಲೆ ಕುಂತಿದ್ದ ಕಾಗೆಗಳೆಲ್ಲ ಕಾ ಕಾ ಕಾ ಬಾಜಾ ಬಜಂತ್ರಿಯ ಬಜಾಯಿಸಕ್ಕೆ ಮುಟ್ಟಿಕಂಡೊ... ರಣದ್ದು ಮಾತ್ರ ಮಿಸಿಕಾಡ್ಡೆ ಕುಂತೇ ಇದ್ದೂ... ಇಂಗಿರೋನೂವೆ, ಅತ್ತಿರದ ಮರದ ಮಾಗೆ ಕುಂತ ಒಂದು ಕಾಗೆ ಮರದ ಮಾಗಿನಿಂದ ಹಾರಿ ಕೆಳಿಕೆ ಬಂತು. ಹೈಕಳು, ಇದೇನಪ್ಪಾಂತ ಉಸಾರಾಗಿ, ಇನ್ನೂ ಮುಂದಕ್ಕೆ ಚಿಗದು ನ್ಯಾಡುದ್ರೆ- ಆ ಯಮ್ಮನ ಮುಂದೆ ಒಂದು ದೊಡ್ಡ ಮೊನೆ ಬಾಳೆಲೆ ಆಸಿತ್ತು. ಅದರ ಮ್ಯಾಲೆ, ಅನ್ನದ ರಾಸಿ ಗೋಪುರ ಕಟ್ಟಿತ್ತು. ಆ ರಾಸಿ ಅಂಚಿಗೆ ಯೇನೇನೊ ಸೀ ಪದಾರ್ತ, ಚಿಪ್ಪು ಬಾಳೆ ಹಣ್ಣು, ತೆಂಗಿನಕಾಯಿ ಹೋಳು, ಕಡಲೆಪುರಿ, ಈಳ್ಯದೆಲೆ ಇವೆಲ್ಲ ಇದ್ದಂಗಿತ್ತು. ಆ ಮೊನೆ ಬಾಳೆಲೆ ವತ್ತಿಗೇಯ ಚರಿಗೆ ಗಾತ್ರದ ಹೈಸಾ ಮಡಿಕೇಲಿ ನೀರು ಬ್ಯಾರೆ ತುಂಬಿ ಇಟ್ಟಂಗಿತ್ತು.. ಇದ್ಯಾಕಪ್ಪ ಇವನೆಲ್ಲ ತಂದಿಟ್ಟಿರಾದು ಅಂತ ನಮಗೆ ಜೋಜಿಗ... ಅವಳೇ ತಿನ್ನಕೆ ತಂದು ಇಟ್ಟು ಕಂಡು ವೋಟರಲ್ಲಿ ಕಣ್ಣೆಗೆ ನಿದ್ದೆ ಅತ್ತಿ ಮನಗಿ ಬುಟ್ಟಿರಬೈದು, ಅಂತ ಒಂದುಕೊಂದು ತರ್ಕ ಮಾಡಿದೆ... ಯಾವ ತರ್ಕಕೂವೆ ಈ ಒಂಟು ಬಗೆ ಅರೀನೆ ಇಲ್ಲ!...<noinclude></noinclude> a6io33bvjnvayb3g79bq3mhya35didj ಪುಟ:ವೈಶಾಖ.pdf/೨೩೬ 104 82165 319668 305874 2026-05-14T03:31:10Z Shreelatha.Halemane 7642 /* Proofread */ 319668 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{Left|೨೨೦}} {{Right|'''ವೈಶಾಖ'''}} ಕಾಗೆ ಅತ್ತಾಗಿ ಇತ್ತಾಗಿ ಸೂಕ್ಷ್ಮಾಗಿ ಕ್ವಾಡಿ, ಯಾಕೊ ಮತ್ತೆ ಹಾರೋಗಿ ಮರದ ಮ್ಯಾಲೆ ಕುಂತಗತ್ತು, ರಣಹದ್ದುಗಳು ಚಿಂಕರಾನು ಮಿಸುಕಾಡ್ಡೆ ತೆಪ್ಪಗೆ ಕುಂತೇ ಇದ್ದೊ... ವಸಿ ವ್ಯಾಳ್ಯ ಇಂಗೇ ಕಳೀತು. ತಟ್ಟನೆ ಮೊದಲು ಕೆಳೀಕೆ ಇಳುದಿದ್ದ ಕಾಗೆ ಸರಕ್ಕನೆ ಮರದಿಂದ ಇಳುದು ಅನ್ನದ ರಾಸಿಗೆ ಬಾಯಾಕಿ, ಕೊಕ್ಕಿಗೆ ಸಿಕ್ಕಿದೋಟು, ಅನ್ನದ ಅಗಳ ಕಚ್ಚಿ, ಮರದ ಮಾಕ್ಕೆ ಹಾರೋಗಿ ತನ್ನ ಹಿಂದ್ದ ಜಾಗದಲ್ಲೆ ತಿಂತಾ ಕುಂತುಗತ್ತು... {{gap}}ಕಾಗೆ ಅಂಗೆ ಒಂದು ಅನ್ನದ ಅಗಳ ಎತ್ತಿಗಂಡೋದೂ ಎಚ್ಚರಗ್ಗೆ ಆರಾಮಾಗಿ ನಿದ್ದೆ ವೋಡೀತಿದ್ದ ಎಂಗಸಿನ ಭಯ ವಸಿ ತೆಪ್ತಿ, ಆ ಎಂಗಸಿನ ಸುತ್ತಾನೂ ಗುಂಡಗೆ ಕುಂತಿದ್ದ ರಣದ್ದುಗಳು ಒಂದಕ್ಕೊಂದು ಮಾತಾಡಿಕಂಡ ಪರೀಲಿ ಒಟ್ಟಿಗೇಯ ಒಂದು ಸಲ ತಂತಮ್ಮ ಮುಂದಕೆ ಕುಪ್ಪಿದೊ... {{gap}}ಆ ಕಾಗೆ ತಾನು ಎತ್ತಗಂಡೋಗಿದ್ದ ಅನ್ನದ ಅಗಳ ತಿಂದು ಮುಗುಸಿ, ಮತ್ತೊಂದು ಸರ್ತಿ ಹಾರಿ ಬಂದು, ಆಚೋರಿ ಈಚೋರಿ ಒಂದು ದಪ್ಪ ಕತ್ತು ಕೊಂಕಸಿ ನ್ಯಾಡಿ, ಇನ್ನೊಟು ಅನ್ನದ ಅಗಳ ಕಚ್ಚಿಗಂಡೋಯ್ತು ... {{gap}}ಅಲುಗಾಡ್ಡೆ ಕುಂತಿದ್ದ ರಣದ್ದುಗಳು ಗುಂಡಗೆ ಇನ್ನೊಂದು ಕುಪ್ಪು ಮುಂದಕೆ ಕುಪ್ಪುದೊ ಈಗ ಮಾತ್ರ ಬಾಕಿ ಕಾಗೆಗಳೂವೆ ಕಾ ಕಾ ಕಾ ಎಂದು ಕೂಗ್ಗ, ಒಂದೊಂದಾಗಿ ಏಡೇಡಾಗಿ ಸುತ್ತಾನೆ ಮರಗಳಿಂದ ಇಳುದು ಒಂದು ಅನ್ನದ ಅಗಳುಗಳ ತಂತಮ್ಮ ಕೊಕ್ಕಿನಲ್ಲಿ ಕಬ್ಬಿಕಂಡೋದೊ... {{gap}}ರಣದ್ದುಗಳು ಇನ್ನೂ ಒಂದು ಕುಷ್ಟು ಮುಂದಕೆ ಕುಪ್ಪುದೊ... {{gap}} ಪುನಾ ಕಾಗೆಗಳು ಗುಂಪಾಗಿ ಇಳುದು ಬಂದು ಆ ಮೊನೆ ಬಾಳೆಲೆ ಮ್ಯಾಲಿದ್ದ ಉಳಿಕೆ ಅನ್ನ, ಸೀ ಪದಾರ್ತ, ಬಾಳೆಹಣ್ಣು, ತೆಂಗಿನ ಹೋಳು ಯೆಲ್ಲಾನೂವೆ ಲೂಟಿ ಮಾಡಿಕಂಡೋದೊ... {{gap}}ಕಾಗೆಗಳು ಎತ್ತಿಕಂಡು ವೋದಂಗೊದಂಗೆ ರಣದುಗಳೂವೆ ಇನ್ನೂ ಮುಂದಮುಂದೆ ಮುಂದಮುಂದೆ ಕುಷ್ಟತಾ ಕುಷ್ಟತಾ ನಡುದೊ... {{gap}}ತಾನು, ಹೈಕಳೂ ಎಲ್ಲಾರೂವೆ ಈ ಶೋಜಿಗಾವ ಉಸುರು ಕಚ್ಚಿ ಕ್ವಾಡ್ತಾ ಇದ್ದೂ, ನಾಕೈದು ಕಾಗೆಗಳು ಒಟ್ಟಿಗೇ ಮಡಿಕೆ ನೀರ ಕುಡಿಯಕ್ಕೋಗಿ ಮಡಿಕೆ ನೀರ ಉಂಟಿಸಿ, ಅದರ ಸುತ್ತ ಕದ್ರಕ್ಕೆ ಸುರುಮಾಡ್ಕೊ... {{gap}}ಇದ್ಯಾಪಾಟಿದೆಯ್ಯ ನಿದ್ದೆ ಅಮರಿಕಂಡದೆ ಈ ಎಂಗಸ್ಥೆ ಅಂತಾ ನಾವು ಬೆರುಗಾದೊ.<noinclude></noinclude> qcdfok7bopwdhaxtwee5lsiq0aeix0r 319672 319668 2026-05-14T04:37:46Z Pragathi. BH 7585 /* Validated */ 319672 proofread-page text/x-wiki <noinclude><pagequality level="4" user="Pragathi. BH" /></noinclude>________________ {{Left|೨೨೦}} {{Right|'''ವೈಶಾಖ'''}} {{gap}}ಕಾಗೆ ಅತ್ತಾಗಿ ಇತ್ತಾಗಿ ಸೂಕ್ಷ್ಮಾಗಿ ಕ್ವಾಡಿ, ಯಾಕೊ ಮತ್ತೆ ಹಾರೋಗಿ ಮರದ ಮ್ಯಾಲೆ ಕುಂತಗತ್ತು, ರಣಹದ್ದುಗಳು ಚಿಂಕರಾನು ಮಿಸುಕಾಡ್ಡೆ ತೆಪ್ಪಗೆ ಕುಂತೇ ಇದ್ದೊ... ವಸಿ ವ್ಯಾಳ್ಯ ಇಂಗೇ ಕಳೀತು. ತಟ್ಟನೆ ಮೊದಲು ಕೆಳೀಕೆ ಇಳುದಿದ್ದ ಕಾಗೆ ಸರಕ್ಕನೆ ಮರದಿಂದ ಇಳುದು ಅನ್ನದ ರಾಸಿಗೆ ಬಾಯಾಕಿ, ಕೊಕ್ಕಿಗೆ ಸಿಕ್ಕಿದೋಟು, ಅನ್ನದ ಅಗಳ ಕಚ್ಚಿ, ಮರದ ಮಾಕ್ಕೆ ಹಾರೋಗಿ ತನ್ನ ಹಿಂದ್ದ ಜಾಗದಲ್ಲೆ ತಿಂತಾ ಕುಂತುಗತ್ತು... {{gap}}ಕಾಗೆ ಅಂಗೆ ಒಂದು ಅನ್ನದ ಅಗಳ ಎತ್ತಿಗಂಡೋದೂ ಎಚ್ಚರಗ್ಗೆ ಆರಾಮಾಗಿ ನಿದ್ದೆ ವೋಡೀತಿದ್ದ ಎಂಗಸಿನ ಭಯ ವಸಿ ತೆಪ್ತಿ, ಆ ಎಂಗಸಿನ ಸುತ್ತಾನೂ ಗುಂಡಗೆ ಕುಂತಿದ್ದ ರಣದ್ದುಗಳು ಒಂದಕ್ಕೊಂದು ಮಾತಾಡಿಕಂಡ ಪರೀಲಿ ಒಟ್ಟಿಗೇಯ ಒಂದು ಸಲ ತಂತಮ್ಮ ಮುಂದಕೆ ಕುಪ್ಪಿದೊ... {{gap}}ಆ ಕಾಗೆ ತಾನು ಎತ್ತಗಂಡೋಗಿದ್ದ ಅನ್ನದ ಅಗಳ ತಿಂದು ಮುಗುಸಿ, ಮತ್ತೊಂದು ಸರ್ತಿ ಹಾರಿ ಬಂದು, ಆಚೋರಿ ಈಚೋರಿ ಒಂದು ದಪ್ಪ ಕತ್ತು ಕೊಂಕಸಿ ನ್ಯಾಡಿ, ಇನ್ನೊಟು ಅನ್ನದ ಅಗಳ ಕಚ್ಚಿಗಂಡೋಯ್ತು ... {{gap}}ಅಲುಗಾಡ್ಡೆ ಕುಂತಿದ್ದ ರಣದ್ದುಗಳು ಗುಂಡಗೆ ಇನ್ನೊಂದು ಕುಪ್ಪು ಮುಂದಕೆ ಕುಪ್ಪುದೊ ಈಗ ಮಾತ್ರ ಬಾಕಿ ಕಾಗೆಗಳೂವೆ ಕಾ ಕಾ ಕಾ ಎಂದು ಕೂಗ್ಗ, ಒಂದೊಂದಾಗಿ ಏಡೇಡಾಗಿ ಸುತ್ತಾನೆ ಮರಗಳಿಂದ ಇಳುದು ಒಂದು ಅನ್ನದ ಅಗಳುಗಳ ತಂತಮ್ಮ ಕೊಕ್ಕಿನಲ್ಲಿ ಕಬ್ಬಿಕಂಡೋದೊ... {{gap}}ರಣದ್ದುಗಳು ಇನ್ನೂ ಒಂದು ಕುಷ್ಟು ಮುಂದಕೆ ಕುಪ್ಪುದೊ... {{gap}} ಪುನಾ ಕಾಗೆಗಳು ಗುಂಪಾಗಿ ಇಳುದು ಬಂದು ಆ ಮೊನೆ ಬಾಳೆಲೆ ಮ್ಯಾಲಿದ್ದ ಉಳಿಕೆ ಅನ್ನ, ಸೀ ಪದಾರ್ತ, ಬಾಳೆಹಣ್ಣು, ತೆಂಗಿನ ಹೋಳು ಯೆಲ್ಲಾನೂವೆ ಲೂಟಿ ಮಾಡಿಕಂಡೋದೊ... {{gap}}ಕಾಗೆಗಳು ಎತ್ತಿಕಂಡು ವೋದಂಗೊದಂಗೆ ರಣದುಗಳೂವೆ ಇನ್ನೂ ಮುಂದಮುಂದೆ ಮುಂದಮುಂದೆ ಕುಷ್ಟತಾ ಕುಷ್ಟತಾ ನಡುದೊ... {{gap}}ತಾನು, ಹೈಕಳೂ ಎಲ್ಲಾರೂವೆ ಈ ಶೋಜಿಗಾವ ಉಸುರು ಕಚ್ಚಿ ಕ್ವಾಡ್ತಾ ಇದ್ದೂ, ನಾಕೈದು ಕಾಗೆಗಳು ಒಟ್ಟಿಗೇ ಮಡಿಕೆ ನೀರ ಕುಡಿಯಕ್ಕೋಗಿ ಮಡಿಕೆ ನೀರ ಉಂಟಿಸಿ, ಅದರ ಸುತ್ತ ಕದ್ರಕ್ಕೆ ಸುರುಮಾಡ್ಕೊ... {{gap}}ಇದ್ಯಾಪಾಟಿದೆಯ್ಯ ನಿದ್ದೆ ಅಮರಿಕಂಡದೆ ಈ ಎಂಗಸ್ಥೆ ಅಂತಾ ನಾವು ಬೆರುಗಾದೊ.<noinclude></noinclude> dc5xi7378z32vqf40ni8cu5wz3ynkzq 319673 319672 2026-05-14T04:43:20Z Pragathi. BH 7585 319673 proofread-page text/x-wiki <noinclude><pagequality level="4" user="Pragathi. BH" />{{rh|center=|left=೨೨೦|right='''ವೈಶಾಖ'''}}</noinclude>________________ {{gap}}ಕಾಗೆ ಅತ್ತಾಗಿ ಇತ್ತಾಗಿ ಸೂಕ್ಷ್ಮಾಗಿ ನ್ವಾಡಿ, ಯಾಕೊ ಮತ್ತೆ ಹಾರೋಗಿ ಮರದ ಮ್ಯಾಲೆ ಕುಂತಗತ್ತು, ರಣಹದ್ದುಗಳು ಚಿಂಕರಾನು ಮಿಸುಕಾಡ್ಡೆ ತೆಪ್ಪಗೆ ಕುಂತೇ ಇದ್ದೊ... ವಸಿ ವ್ಯಾಳ್ಯ ಇಂಗೇ ಕಳೀತು. ತಟ್ಟನೆ ಮೊದಲು ಕೆಳೀಕೆ ಇಳುದಿದ್ದ ಕಾಗೆ ಸರಕ್ಕನೆ ಮರದಿಂದ ಇಳುದು ಅನ್ನದ ರಾಸಿಗೆ ಬಾಯಾಕಿ, ಕೊಕ್ಕಿಗೆ ಸಿಕ್ಕಿದೋಟು, ಅನ್ನದ ಅಗಳ ಕಚ್ಚಿ, ಮರದ ಮಾಕ್ಕೆ ಹಾರೋಗಿ ತನ್ನ ಹಿಂದ್ದ ಜಾಗದಲ್ಲೆ ತಿಂತಾ ಕುಂತುಗತ್ತು... {{gap}}ಕಾಗೆ ಅಂಗೆ ಒಂದು ಅನ್ನದ ಅಗಳ ಎತ್ತಿಗಂಡೋದೂ ಎಚ್ಚರಗ್ಗೆ ಆರಾಮಾಗಿ ನಿದ್ದೆ ವೋಡೀತಿದ್ದ ಎಂಗಸಿನ ಭಯ ವಸಿ ತೆಪ್ತಿ, ಆ ಎಂಗಸಿನ ಸುತ್ತಾನೂ ಗುಂಡಗೆ ಕುಂತಿದ್ದ ರಣದ್ದುಗಳು ಒಂದಕ್ಕೊಂದು ಮಾತಾಡಿಕಂಡ ಪರೀಲಿ ಒಟ್ಟಿಗೇಯ ಒಂದು ಸಲ ತಂತಮ್ಮ ಮುಂದಕೆ ಕುಪ್ಪಿದೊ... {{gap}}ಆ ಕಾಗೆ ತಾನು ಎತ್ತಗಂಡೋಗಿದ್ದ ಅನ್ನದ ಅಗಳ ತಿಂದು ಮುಗುಸಿ, ಮತ್ತೊಂದು ಸರ್ತಿ ಹಾರಿ ಬಂದು, ಆಚೋರಿ ಈಚೋರಿ ಒಂದು ದಪ್ಪ ಕತ್ತು ಕೊಂಕಸಿ ನ್ಯಾಡಿ, ಇನ್ನೊಟು ಅನ್ನದ ಅಗಳ ಕಚ್ಚಿಗಂಡೋಯ್ತು ... {{gap}}ಅಲುಗಾಡ್ಡೆ ಕುಂತಿದ್ದ ರಣದ್ದುಗಳು ಗುಂಡಗೆ ಇನ್ನೊಂದು ಕುಪ್ಪು ಮುಂದಕೆ ಕುಪ್ಪುದೊ<br /> {{gap}}ಈಗ ಮಾತ್ರ ಬಾಕಿ ಕಾಗೆಗಳೂವೆ ಕಾ ಕಾ ಕಾ ಎಂದು ಕೂಗ್ಗ, ಒಂದೊಂದಾಗಿ ಏಡೇಡಾಗಿ ಸುತ್ತಾನೆ ಮರಗಳಿಂದ ಇಳುದು ಒಂದು ಅನ್ನದ ಅಗಳುಗಳ ತಂತಮ್ಮ ಕೊಕ್ಕಿನಲ್ಲಿ ಕಬ್ಬಿಕಂಡೋದೊ...<br /> {{gap}}ರಣದ್ದುಗಳು ಇನ್ನೂ ಒಂದು ಕುಷ್ಟು ಮುಂದಕೆ ಕುಪ್ಪುದೊ...<br /> {{gap}} ಪುನಾ ಕಾಗೆಗಳು ಗುಂಪಾಗಿ ಇಳುದು ಬಂದು ಆ ಮೊನೆ ಬಾಳೆಲೆ ಮ್ಯಾಲಿದ್ದ ಉಳಿಕೆ ಅನ್ನ, ಸೀ ಪದಾರ್ತ, ಬಾಳೆಹಣ್ಣು, ತೆಂಗಿನ ಹೋಳು ಯೆಲ್ಲಾನೂವೆ ಲೂಟಿ ಮಾಡಿಕಂಡೋದೊ...<br /> {{gap}}ಕಾಗೆಗಳು ಎತ್ತಿಕಂಡು ವೋದಂಗೊದಂಗೆ ರಣದ್ದುಗಳೂವೆ ಇನ್ನೂ ಮುಂದಮುಂದೆ ಮುಂದಮುಂದೆ ಕುಪ್ಪುತಾ ಕುಪ್ಪುತಾ ನಡುದೊ...<br /> {{gap}}ತಾನು, ಹೈಕಳೂ ಎಲ್ಲಾರೂವೆ ಈ ಶೋಜಿಗಾವ ಉಸುರು ಕಚ್ಚಿ ನ್ವಾಡ್ತಾ ಇದ್ದೊ.<br /> {{gap}}ನಾಕೈದು ಕಾಗೆಗಳು ಒಟ್ಟಿಗೇ ಮಡಿಕೆ ನೀರ ಕುಡಿಯಕ್ಕೋಗಿ ಮಡಿಕೆ ನೀರ ಉಂಟಿಸಿ, ಅದರ ಸುತ್ತ ಕದ್ರಕ್ಕೆ ಸುರುಮಾಡ್ಕೊ...<br /> {{gap}}ಇದ್ಯಾಪಾಟಿದೆಯ್ಯ ನಿದ್ದೆ ಅಮರಿಕಂಡದೆ ಈ ಎಂಗಸ್ಗೆ ಅಂತಾ ನಾವು ಬೆರುಗಾದೊ.<noinclude></noinclude> nh8xd8xoh4kwjh881paejppvamob2kw 319674 319673 2026-05-14T04:44:31Z Pragathi. BH 7585 319674 proofread-page text/x-wiki <noinclude><pagequality level="4" user="Pragathi. BH" />{{rh|center=|left=೨೨೦|right='''ವೈಶಾಖ'''}}</noinclude>________________ {{gap}}ಕಾಗೆ ಅತ್ತಾಗಿ ಇತ್ತಾಗಿ ಸೂಕ್ಷ್ಮಾಗಿ ನ್ವಾಡಿ, ಯಾಕೊ ಮತ್ತೆ ಹಾರೋಗಿ ಮರದ ಮ್ಯಾಲೆ ಕುಂತಗತ್ತು, ರಣಹದ್ದುಗಳು ಚಿಂಕರಾನು ಮಿಸುಕಾಡ್ಡೆ ತೆಪ್ಪಗೆ ಕುಂತೇ ಇದ್ದೊ... ವಸಿ ವ್ಯಾಳ್ಯ ಇಂಗೇ ಕಳೀತು. ತಟ್ಟನೆ ಮೊದಲು ಕೆಳೀಕೆ ಇಳುದಿದ್ದ ಕಾಗೆ ಸರಕ್ಕನೆ ಮರದಿಂದ ಇಳುದು ಅನ್ನದ ರಾಸಿಗೆ ಬಾಯಾಕಿ, ಕೊಕ್ಕಿಗೆ ಸಿಕ್ಕಿದೋಟು, ಅನ್ನದ ಅಗಳ ಕಚ್ಚಿ, ಮರದ ಮಾಕ್ಕೆ ಹಾರೋಗಿ ತನ್ನ ಹಿಂದ್ದ ಜಾಗದಲ್ಲೆ ತಿಂತಾ ಕುಂತುಗತ್ತು... {{gap}}ಕಾಗೆ ಅಂಗೆ ಒಂದು ಅನ್ನದ ಅಗಳ ಎತ್ತಿಗಂಡೋದೂ ಎಚ್ಚರಗ್ಗೆ ಆರಾಮಾಗಿ ನಿದ್ದೆ ವೋಡೀತಿದ್ದ ಎಂಗಸಿನ ಭಯ ವಸಿ ತೆಪ್ತಿ, ಆ ಎಂಗಸಿನ ಸುತ್ತಾನೂ ಗುಂಡಗೆ ಕುಂತಿದ್ದ ರಣದ್ದುಗಳು ಒಂದಕ್ಕೊಂದು ಮಾತಾಡಿಕಂಡ ಪರೀಲಿ ಒಟ್ಟಿಗೇಯ ಒಂದು ಸಲ ತಂತಮ್ಮ ಮುಂದಕೆ ಕುಪ್ಪಿದೊ... {{gap}}ಆ ಕಾಗೆ ತಾನು ಎತ್ತಗಂಡೋಗಿದ್ದ ಅನ್ನದ ಅಗಳ ತಿಂದು ಮುಗುಸಿ, ಮತ್ತೊಂದು ಸರ್ತಿ ಹಾರಿ ಬಂದು, ಆಚೋರಿ ಈಚೋರಿ ಒಂದು ದಪ್ಪ ಕತ್ತು ಕೊಂಕಸಿ ನ್ಯಾಡಿ, ಇನ್ನೊಟು ಅನ್ನದ ಅಗಳ ಕಚ್ಚಿಗಂಡೋಯ್ತು ... {{gap}}ಅಲುಗಾಡ್ಡೆ ಕುಂತಿದ್ದ ರಣದ್ದುಗಳು ಗುಂಡಗೆ ಇನ್ನೊಂದು ಕುಪ್ಪು ಮುಂದಕೆ ಕುಪ್ಪುದೊ<br /> {{gap}}ಈಗ ಮಾತ್ರ ಬಾಕಿ ಕಾಗೆಗಳೂವೆ ಕಾ ಕಾ ಕಾ ಎಂದು ಕೂಗ್ತ, ಒಂದೊಂದಾಗಿ ಏಡೇಡಾಗಿ ಸುತ್ತಾನೆ ಮರಗಳಿಂದ ಇಳುದು ಒಂದು ಅನ್ನದ ಅಗಳುಗಳ ತಂತಮ್ಮ ಕೊಕ್ಕಿನಲ್ಲಿ ಕಚ್ಚಿಕಂಡೋದೊ...<br /> {{gap}}ರಣದ್ದುಗಳು ಇನ್ನೂ ಒಂದು ಕುಷ್ಟು ಮುಂದಕೆ ಕುಪ್ಪುದೊ...<br /> {{gap}} ಪುನಾ ಕಾಗೆಗಳು ಗುಂಪಾಗಿ ಇಳುದು ಬಂದು ಆ ಮೊನೆ ಬಾಳೆಲೆ ಮ್ಯಾಲಿದ್ದ ಉಳಿಕೆ ಅನ್ನ, ಸೀ ಪದಾರ್ತ, ಬಾಳೆಹಣ್ಣು, ತೆಂಗಿನ ಹೋಳು ಯೆಲ್ಲಾನೂವೆ ಲೂಟಿ ಮಾಡಿಕಂಡೋದೊ...<br /> {{gap}}ಕಾಗೆಗಳು ಎತ್ತಿಕಂಡು ವೋದಂಗೊದಂಗೆ ರಣದ್ದುಗಳೂವೆ ಇನ್ನೂ ಮುಂದಮುಂದೆ ಮುಂದಮುಂದೆ ಕುಪ್ಪುತಾ ಕುಪ್ಪುತಾ ನಡುದೊ...<br /> {{gap}}ತಾನು, ಹೈಕಳೂ ಎಲ್ಲಾರೂವೆ ಈ ಶೋಜಿಗಾವ ಉಸುರು ಕಚ್ಚಿ ನ್ವಾಡ್ತಾ ಇದ್ದೊ.<br /> {{gap}}ನಾಕೈದು ಕಾಗೆಗಳು ಒಟ್ಟಿಗೇ ಮಡಿಕೆ ನೀರ ಕುಡಿಯಕ್ಕೋಗಿ ಮಡಿಕೆ ನೀರ ಉಂಟಿಸಿ, ಅದರ ಸುತ್ತ ಕದ್ರಕ್ಕೆ ಸುರುಮಾಡ್ಕೊ...<br /> {{gap}}ಇದ್ಯಾಪಾಟಿದೆಯ್ಯ ನಿದ್ದೆ ಅಮರಿಕಂಡದೆ ಈ ಎಂಗಸ್ಗೆ ಅಂತಾ ನಾವು ಬೆರುಗಾದೊ.<noinclude></noinclude> srd82vy0sq2oqod49bckurzf4c3uhvj 319675 319674 2026-05-14T04:45:22Z Pragathi. BH 7585 319675 proofread-page text/x-wiki <noinclude><pagequality level="4" user="Pragathi. BH" />{{rh|center=|left=೨೨೦|right='''ವೈಶಾಖ'''}}</noinclude>________________ {{gap}}ಕಾಗೆ ಅತ್ತಾಗಿ ಇತ್ತಾಗಿ ಸೂಕ್ಷ್ಮಾಗಿ ನ್ವಾಡಿ, ಯಾಕೊ ಮತ್ತೆ ಹಾರೋಗಿ ಮರದ ಮ್ಯಾಲೆ ಕುಂತಗತ್ತು, ರಣಹದ್ದುಗಳು ಚಿಂಕರಾನು ಮಿಸುಕಾಡ್ಡೆ ತೆಪ್ಪಗೆ ಕುಂತೇ ಇದ್ದೊ... ವಸಿ ವ್ಯಾಳ್ಯ ಇಂಗೇ ಕಳೀತು. ತಟ್ಟನೆ ಮೊದಲು ಕೆಳೀಕೆ ಇಳುದಿದ್ದ ಕಾಗೆ ಸರಕ್ಕನೆ ಮರದಿಂದ ಇಳುದು ಅನ್ನದ ರಾಸಿಗೆ ಬಾಯಾಕಿ, ಕೊಕ್ಕಿಗೆ ಸಿಕ್ಕಿದೋಟು, ಅನ್ನದ ಅಗಳ ಕಚ್ಚಿ, ಮರದ ಮಾಕ್ಕೆ ಹಾರೋಗಿ ತನ್ನ ಹಿಂದ್ದ ಜಾಗದಲ್ಲೆ ತಿಂತಾ ಕುಂತುಗತ್ತು... {{gap}}ಕಾಗೆ ಅಂಗೆ ಒಂದು ಅನ್ನದ ಅಗಳ ಎತ್ತಿಗಂಡೋದೂ ಎಚ್ಚರಗ್ದೆ ಆರಾಮಾಗಿ ನಿದ್ದೆ ವೋಡೀತಿದ್ದ ಎಂಗಸಿನ ಭಯ ವಸಿ ತೆಪ್ತಿ, ಆ ಎಂಗಸಿನ ಸುತ್ತಾನೂ ಗುಂಡಗೆ ಕುಂತಿದ್ದ ರಣದ್ದುಗಳು ಒಂದಕ್ಕೊಂದು ಮಾತಾಡಿಕಂಡ ಪರೀಲಿ ಒಟ್ಟಿಗೇಯ ಒಂದು ಸಲ ತಂತಮ್ಮ ಮುಂದಕೆ ಕುಪ್ಪಿದೊ... {{gap}}ಆ ಕಾಗೆ ತಾನು ಎತ್ತಗಂಡೋಗಿದ್ದ ಅನ್ನದ ಅಗಳ ತಿಂದು ಮುಗುಸಿ, ಮತ್ತೊಂದು ಸರ್ತಿ ಹಾರಿ ಬಂದು, ಆಚೋರಿ ಈಚೋರಿ ಒಂದು ದಪ್ಪ ಕತ್ತು ಕೊಂಕಸಿ ನ್ಯಾಡಿ, ಇನ್ನೊಟು ಅನ್ನದ ಅಗಳ ಕಚ್ಚಿಗಂಡೋಯ್ತು ... {{gap}}ಅಲುಗಾಡ್ಡೆ ಕುಂತಿದ್ದ ರಣದ್ದುಗಳು ಗುಂಡಗೆ ಇನ್ನೊಂದು ಕುಪ್ಪು ಮುಂದಕೆ ಕುಪ್ಪುದೊ<br /> {{gap}}ಈಗ ಮಾತ್ರ ಬಾಕಿ ಕಾಗೆಗಳೂವೆ ಕಾ ಕಾ ಕಾ ಎಂದು ಕೂಗ್ತ, ಒಂದೊಂದಾಗಿ ಏಡೇಡಾಗಿ ಸುತ್ತಾನೆ ಮರಗಳಿಂದ ಇಳುದು ಒಂದು ಅನ್ನದ ಅಗಳುಗಳ ತಂತಮ್ಮ ಕೊಕ್ಕಿನಲ್ಲಿ ಕಚ್ಚಿಕಂಡೋದೊ...<br /> {{gap}}ರಣದ್ದುಗಳು ಇನ್ನೂ ಒಂದು ಕುಷ್ಟು ಮುಂದಕೆ ಕುಪ್ಪುದೊ...<br /> {{gap}} ಪುನಾ ಕಾಗೆಗಳು ಗುಂಪಾಗಿ ಇಳುದು ಬಂದು ಆ ಮೊನೆ ಬಾಳೆಲೆ ಮ್ಯಾಲಿದ್ದ ಉಳಿಕೆ ಅನ್ನ, ಸೀ ಪದಾರ್ತ, ಬಾಳೆಹಣ್ಣು, ತೆಂಗಿನ ಹೋಳು ಯೆಲ್ಲಾನೂವೆ ಲೂಟಿ ಮಾಡಿಕಂಡೋದೊ...<br /> {{gap}}ಕಾಗೆಗಳು ಎತ್ತಿಕಂಡು ವೋದಂಗೊದಂಗೆ ರಣದ್ದುಗಳೂವೆ ಇನ್ನೂ ಮುಂದಮುಂದೆ ಮುಂದಮುಂದೆ ಕುಪ್ಪುತಾ ಕುಪ್ಪುತಾ ನಡುದೊ...<br /> {{gap}}ತಾನು, ಹೈಕಳೂ ಎಲ್ಲಾರೂವೆ ಈ ಶೋಜಿಗಾವ ಉಸುರು ಕಚ್ಚಿ ನ್ವಾಡ್ತಾ ಇದ್ದೊ.<br /> {{gap}}ನಾಕೈದು ಕಾಗೆಗಳು ಒಟ್ಟಿಗೇ ಮಡಿಕೆ ನೀರ ಕುಡಿಯಕ್ಕೋಗಿ ಮಡಿಕೆ ನೀರ ಉಂಟಿಸಿ, ಅದರ ಸುತ್ತ ಕದ್ರಕ್ಕೆ ಸುರುಮಾಡ್ಕೊ...<br /> {{gap}}ಇದ್ಯಾಪಾಟಿದೆಯ್ಯ ನಿದ್ದೆ ಅಮರಿಕಂಡದೆ ಈ ಎಂಗಸ್ಗೆ ಅಂತಾ ನಾವು ಬೆರುಗಾದೊ.<noinclude></noinclude> ksqllsgx307229tvh0nnojevcibhdxx ಪುಟ:ವೈಶಾಖ.pdf/೨೩೭ 104 82166 319669 305887 2026-05-14T03:31:58Z Shreelatha.Halemane 7642 /* Proofread */ 319669 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{Left|ಸಮಗ್ರ ಕಾದಂಬರಿಗಳು}} {{Right|೨೨೧}} {{gap}}ನಾವೆಲ್ಲಾರು ಕ್ವಾಡ ಗ್ವಾಡ್ತಿದ್ದಂಗೇಯ ಒಂದು ರಣದ್ದು ಸುಮಾರು ಒಂದು ಮುಕ್ಕಾಲು ಮಾರಿನೋಟು ಉದ್ದದ ತನ್ನ ರೆಕ್ಕೆಗಳ್ಳ ಕೆದರಿ, ಸಟ್ಟನೆ ಆ ಕುಂತಿದ್ದ ಎಂಗಸಿನ ಮೂಲೆ ಎರಗು, ಆ ಕ್ಷಣಕೆ ಆ ಎಂಗಸಿನ ದೇಯ ವಕ್ಕಡೀಕೆ ಮುಂಟಿಗಂತು!... ಆದ ಕಂಡು ನಮಗೆಲ್ಲ ದೊಡ್ವನಾಗಿದ್ದ ಹೈದ ಉಸುರ* ಆ ಎಂಗಸು ನಿದ್ದೆ ಮಾಡ್ತ ಇಲ್ಲ ಕನಲ್ಲ- ಅವಳು ಸತ್ತೋಗವಳೆ!... ಅದು ಅವಳ ಹೆಣ- ಇಲ್ಲದಿದ್ರೆ ಈ ಪಾಟಿ ಸದ್ದುಗದ್ದಲದಲ್ಲಿ ಅವಳು ಎಚ್ಚಾರಾಗ್ಗೆ ಇರಿದ್ದ?... ಆಲ್ಲದೇಯ ಆ ರಣದ್ದು ಅಂಗೆ ಮ್ಯಾಲೆ ಎಗರಿ ಬಿದ್ದರೂವೆ ಚಿಂಕರಾನು ಚೀರದೆ ಅಂಗೆ ಯಾರಾರು ಸುಮ್ಮೆ ಮಂಟಿಗಂಡಾರ?...” {{gap}}ಒಂದು ರಣದ್ದು ಎಗರಿ ಬಿದ್ದು ಅವಳ ಎದೆ ಗುಂಡಿಗ್ಯ ಕುಕ್ಕಿ ವೋಟು ಮಾಂವುಸವ ಆ ಗುಡಿಂಗ್ನಿಂದ ಕಿತ್ತ ಕಣಕೆ, ಅವಳ ಸುತ್ತಾಲು ಕುಂತಿದ್ದ ಎಲ್ಲಾ ರಣದ್ದುಗಳೂವೆ ನಾ ಮುಂದೆ ತಾ ಮುಂದು ಅವಂಗೆ ಗರಿಕೆದರಿ ಆ ಎಂಗಸಿನ ಹೆಣದ ಮ್ಯಾಲೆ ಎಗರಿ ಬಿದ್ದೊ. ಸಿಕ್ಕಸಿಕ್ಕದೋಟು ಮಾಂವುಸವ ಕಿತ್ತೊ. ಜಾಗ ಸಿಕ್ಕದೇ ವೋದಾಗ, ಕೀ ಕೀ ಕೀ ಅಂತ ಕೀರ ಕೀರಾಗಿ ಕಿರುಚ್ಚ ಒಂದಕ್ಕೊಂದು ಕಡಿದಾಡಿ ಮಡಿದ ಬೀಳ್ತಾ ಇದ್ರೂ... {{gap}}ಇದ ಕಂಡು ನಮಗೆ ಇನ್ನು ಅಲ್ಲಿ ನಿಂತು ಸ್ವಾರಕ್ಕಾಗನಿಲ್ಲ. ನಾವೆಲ್ಲಾರೂ ದನ ಅಟ್ಟಿಕಂಡು ಬಿದ್ದಂಬೀಳ ಒಂದೇ ಉಸುರೆ ವಟ ಹೃಡದೊ. {{gap}}ಅವತ್ತು ನಾತ್ರೆಗೆ ಆ ದೊಡ್ಡ ಹೈದ ವಿನಾಯ್ತಿ, ನಾನೂ ಸೇರಿದಂಗೆ ಐದು ಹೈಕಳಿಗೂ ಬೆಂಕಿ ಕಾದಮಗೆ ಜರ ಕಾಯ್ತು. ಎಂಟತ್ತು ಜಿನ ಬುಡನೇ ಇಲ್ಲ. ನಾವು ಹೈಕಳೆಲ್ಲ ಹೆಣಾವ ಆ ಪರಿಪಟ್ಲಲ್ಲಿ ಕಂಡು ಕಂಗಾಲಾಗಿದ್ದೊ. ನಾನಂತೂ ಹೆಣಾವ ಮೋಟು ಸಮೀಪ, ಅದೂ ಆ ಪರೀಲಿ ನಾಡಿದ್ದು - ಇದೇ ಮೊದಿ ಸಲ... ಜರದ ತಾಪದಲ್ಲಿ ನನ್ನ ಗ್ಯಾನ ಯಾತಾವು ಯಾತಾವೊ ಸುಳುದಾಡ್ತ ಇತ್ತು... ನಾನೊಂದು ಮರದ ಬೊಡ್ಡೆಗೆ ಅಂತು ಕುಂತಿರೋವಂಗೆ, ಸುತ್ತಾಲು ಗುಂಡಗೆ ಸದ್ದಿಲ್ಲೆ ತೆಪ್ಪಗೆ ಕುಂತಿದ್ದ ಆ ರಣದ್ದುಗಳು ವಸಿವಾಗಿ ಕುಷ್ಟುತಾ ಕುಷ್ಟುತ ಬಂದು, ಕಡೀಕೆ ಅವೆಲ್ಲಾ ಒಟ್ಟೋಟ್ಟಿಗೆ ತಮ್ಮ ರೆಕ್ಕೆಗಳ ವೋಟೋಟು ಅಗಲಕ್ಕೂ ಕೆದರಿ, ಗಕ್ಕನೆ ಮ್ಯಲೆರಗಿ, ನನ್ನ ಸರೀರದ ಮಾಂವುಸವ ಕುಕ್ಕಿ ಕುಕ್ಕಿ ತಿಂತಾ ಇದ್ದಂಗೆ ಕಂಡು ಕಿಟಾರೆ ಕಿರುಚ್ಚೆ!... ಅವ್ವ ಎದ್ದು, “ಯೇನಾಯಿತ್ತ ಮೊಗಾ?... ನಾ ಇಲ್ಲೇ ಇನ್ನಿ, ಎದುರಿಕೊಬ್ಯಾಡ ಮನಕ್ಕೊ” ಅಂತ ತಬ್ಬಿ ಕಂಡು ಮೈದಡವಿದ್ದು....<noinclude></noinclude> 65ig3owskyw56chnemnolomib07bmjj 319693 319669 2026-05-14T06:07:01Z Shreesha Sharma 7840 /* Validated */ 319693 proofread-page text/x-wiki <noinclude><pagequality level="4" user="Shreesha Sharma" /></noinclude>________________ {{Left|ಸಮಗ್ರ ಕಾದಂಬರಿಗಳು}} {{Right|೨೨೧}} {{gap}}ನಾವೆಲ್ಲಾರು ನ್ವಾಡ ನ್ವಾಡ್ತಿದ್ದಂಗೇಯ ಒಂದು ರಣದ್ದು ಸುಮಾರು ಒಂದು ಮುಕ್ಕಾಲು ಮಾರಿನೋಟು ಉದ್ದದ ತನ್ನ ರೆಕ್ಕೆಗಳ್ನ ಕೆದರಿ, ಸಟ್ಟನೆ ಆ ಕುಂತಿದ್ದ ಎಂಗಸಿನ ಮ್ಯಲೆ ಎರಗ್ತು, ಆ ಕ್ಷಣಕೆ ಆ ಎಂಗಸಿನ ದೇಯ ವಕ್ಕಡೀಕೆ ಮುಂಟಿಗಂತು!... ಆದ ಕಂಡು ನಮಗೆಲ್ಲ ದೊಡ್ವನಾಗಿದ್ದ ಹೈದ ಉಸುರ್ದ ಆ ಎಂಗಸು ನಿದ್ದೆ ಮಾಡ್ತ ಇಲ್ಲ ಕನಲ್ಲ- ಅವಳು ಸತ್ತೋಗವಳೆ!... ಅದು ಅವಳ ಹೆಣ- ಇಲ್ಲದಿದ್ರೆ ಈ ಪಾಟಿ ಸದ್ದುಗದ್ದಲದಲ್ಲಿ ಅವಳು ಎಚ್ಚಾರಾಗ್ದೆ ಇರ್ತಿದ್ಲ?... ಆಲ್ಲದೇಯ ಆ ರಣದ್ದು ಅಂಗೆ ಮ್ಯಾಲೆ ಎಗರಿ ಬಿದ್ದರೂವೆ ಚಿಂಕರಾನು ಚೀರದೆ ಅಂಗೆ ಯಾರಾರು ಸುಮ್ಮೆ ಮಂಟಿಗಂಡಾರ?...” {{gap}}ಒಂದು ರಣದ್ದು ಎಗರಿ ಬಿದ್ದು ಅವಳ ಎದೆ ಗುಂಡಿಗ್ಯ ಕುಕ್ಕಿ ವೋಟು ಮಾಂವುಸವ ಆ ಗುಡಿಂಗ್ನಿಂದ ಕಿತ್ತ ಕ್ಸಣಕೆ, ಅವಳ ಸುತ್ತಾಲು ಕುಂತಿದ್ದ ಎಲ್ಲಾ ರಣದ್ದುಗಳೂವೆ ನಾ ಮುಂದೆ ತಾ ಮುಂದು ಅವಂಗೆ ಗರಿಕೆದರಿ ಆ ಎಂಗಸಿನ ಹೆಣದ ಮ್ಯಾಲೆ ಎಗರಿ ಬಿದ್ದೊ. ಸಿಕ್ಕಸಿಕ್ಕದೋಟು ಮಾಂವುಸವ ಕಿತ್ತೊ. ಜಾಗ ಸಿಕ್ಕದೇ ವೋದಾಗ, ಕೀ ಕೀ ಕೀ ಅಂತ ಕೀರ ಕೀರಾಗಿ ಕಿರುಚ್ಚ ಒಂದಕ್ಕೊಂದು ಕಡಿದಾಡಿ ಮಡಿದ ಬೀಳ್ತಾ ಇದ್ದೊ... {{gap}}ಇದ ಕಂಡು ನಮಗೆ ಇನ್ನು ಅಲ್ಲಿ ನಿಂತು ನ್ವಾಡ್ತಿರಕ್ಕಾಗನಿಲ್ಲ. ನಾವೆಲ್ಲಾರೂ ದನ ಅಟ್ಟಿಕಂಡು ಬಿದ್ದಂಬೀಳ ಒಂದೇ ಉಸುರ್ಗೆ ವಟ ಹ್ವಡದೊ. {{gap}}ಅವತ್ತು ನಾತ್ರೆಗೆ ಆ ದೊಡ್ಡ ಹೈದ ವಿನಾಯ್ಸಿ, ನಾನೂ ಸೇರಿದಂಗೆ ಐದು ಹೈಕಳಿಗೂ ಬೆಂಕಿ ಕಾದಮಗೆ ಜರ ಕಾಯ್ತು. ಎಂಟತ್ತು ಜಿನ ಬುಡನೇ ಇಲ್ಲ. ನಾವು ಹೈಕಳೆಲ್ಲ ಹೆಣಾವ ಆ ಪರಿಪಟ್ಲಲ್ಲಿ ಕಂಡು ಕಂಗಾಲಾಗಿದ್ದೊ. ನಾನಂತೂ ಹೆಣಾವ ಪೋಟು ಸಮೀಪ, ಅದೂ ಆ ಪರೀಲಿ ನ್ವಾಡಿದ್ದು - ಇದೇ ಮೊದಲ್ನೇ ಸಲ... ಜರದ ತಾಪದಲ್ಲಿ ನನ್ನ ಗ್ಯಾನ ಯಾತಾವು ಯಾತಾವೊ ಸುಳುದಾಡ್ತ ಇತ್ತು... ನಾನೊಂದು ಮರದ ಬೊಡ್ಡೆಗೆ ಅಂತು ಕುಂತಿರೋವಂಗೆ, ಸುತ್ತಾಲು ಗುಂಡಗೆ ಸದ್ದಿಲ್ಲೆ ತೆಪ್ಪಗೆ ಕುಂತಿದ್ದ ಆ ರಣದ್ದುಗಳು ವಸಿವಸ್ಯಾಗಿ ಕುಪ್ಪುತಾ ಕುಪ್ಪುತ ಬಂದು, ಕಡೀಕೆ ಅವೆಲ್ಲಾ ಒಟ್ಟೋಟ್ಟಿಗೆ ತಮ್ಮ ರೆಕ್ಕೆಗಳ ವೋಟೋಟು ಅಗಲಕ್ಕೂ ಕೆದರಿ, ಗಕ್ಕನೆ ಮ್ಯಲೆರಗಿ, ನನ್ನ ಸರೀರದ ಮಾಂವುಸವ ಕುಕ್ಕಿ ಕುಕ್ಕಿ ತಿಂತಾ ಇದ್ದಂಗೆ ಕಂಡು ಕಿಟಾರೆ ಕಿರುಚ್ಚೆ!... ಅವ್ವ ಎದ್ದು, “ಯೇನಾಯಿತ್ತ ಮೊಗಾ?... ನಾ ಇಲ್ಲೇ ಇನ್ನಿ, ಎದುರಿಕೊಬ್ಯಾಡ ಮನಕ್ಕೊ” ಅಂತ ತಬ್ಬಿ ಕಂಡು ಮೈದಡವಿದ್ದು....<noinclude></noinclude> 9smksetups186azy0062zci5fys8n7d ಪುಟ:ವೈಶಾಖ.pdf/೨೩೮ 104 82167 319670 306142 2026-05-14T03:35:04Z Shreelatha.Halemane 7642 /* Proofread */ 319670 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{Left|೨೨೨}} {{Right|'''ವೈಶಾಖ'''}} {{gap}}ತಾನು ಕಂಡದ್ದ ಕಂಡಂಗೆ ಎಲ್ಲಾ ನೂವೆ ಅವ್ವನ ಕುಟ್ಟೆ ಯೋಳಿ, {{gap}}“ಅದ್ಯಾಕವ್ವ ಅವಳ ಹೆಣವ ಅಂಗೆ ಕುಂಡರಿಸಿದ್ರು?” ಕೇಳಿದ್ದ. {{gap}}“ಬಿಮ್ಮಂಸೆ ಆದ ಎಂಗಸು ಸತ್ತರೆ, ಹೈಟೆ ವಳಗಡೆ ರೊ ಇನ್ನೊಂದು ಜೀವೊವೇ ಸತ್ತಂಗೆ ಅಲ್ವ?- ಅದುಕ್ಕೆ ಸುಮಾರು ಜಾತಿ ಜನ ಮಣ್ಣು ಬಗದು, ಅಂತಾ ಹೆಣವ ಹೂಳಕ್ಕಿಲ್ಲಕನಪ್ಪ- ಓದು ಪಕ್ಕಸ ಹೂತೆ, ಆ ಹೆಣವ ಹೂತ ಆಸುಪಾಸ್ಕಲ್ಲಿ ಮಳೆ ಬೆಳೆಯೇ ಅಗಕ್ಕಿಲ್ಲವಂತೆ!- “ಇಂಗೆಲ್ಲ ಇವರಿಸಿದ್ದಲು, ಅವ್ವ, {{gap}}ತನ್ನ ಅವ್ವ ಜಿನ ಯೋಳಿದ ಮಾತ್ರೆ ನೆನೀತ ದರಮನಳ್ಳಿ ಕಡೀಕೆ ಲಕ್ಕ ತನ್ನ ಪಯಣವ ಮುಂದುವರಿಸ್ತ, ಯತಾ ಪರ್ಕಾರ ಬೊಡ್ಡ ಅವನ್ನ ಇಂಬಾಲಿಸ್ತು. {{center|'''೨೨'''}} {{gap}}ಲಕ್ಕ ಕಾಡ್ನಿಂದ ಬತ್ತಾ ಇದ್ದಂಗೆ ಕೆಂಗಣಪ್ಪ ತನ್ನ ಹೊಲದ ಪಕ್ಕದ. ಬಯಲಲ್ಲಿ ಕುಂತು ಏನೊ ಅರಸ್ತಾ ಇದ್ದದ್ದು ಕಾಣಿಸ್ತು, ಲಕ್ಕ ಅದೇ ದಾರೀಲಿ ವೋಗಬೇಕಲ್ಲ! ಕೆಂಗಣ್ಣಪ್ಪ ಹದ್ದಿನ ಕಣ್ಣ ತೆಪ್ಪಸಿ ವೋಗೋವಂಗಿಲ್ಲ. ಸುಮಾಸು, ಬಂದದ್ದು ಬರಲಿ- ಅಂದು ನ್ಯಾರವಾಗಿ ಕೆಂಗಣ್ಣಪ್ಪ ಏನ್ನೋ ಅರಸ್ತಿದ್ದ ತಳಕ್ಕೇ ದ್ವಾದ. {{gap}}“ಆದೇನಯ್ಯ ಈಟೊಂದು ಬಗೇಲಿ ಉಡುಕ್ತಾ ಇದ್ದೀರಿ?... ಯೇನ್ನಾರ ಕಳಕಂಡ್ರ?” ಕೇಳ, {{gap}}“ಇಲ್ಲ ಕನ್ದ ಲಕ್ಕ ನಾ ಯೇನ್ನೂ ಕಳಕಂಡಿಲ್ಲ....” - {{gap}}“ಮಂತೆ, ಈ ಬಟಾ ಬಯಲಲ್ಲಿ ಯಾಕೆ ಇಂಗೆ ಕುಂತು ತಡಕಾಡ ಇದ್ದೀರಿ?” {{gap}}“ನಿಂಗೆ ಗ್ರಲ್ಲೇನ್ದ-ಪುರುಸರತ್ನ ತಡಕಾಡ್ತಾ ಇದ್ವಿ” {{gap}}“ಅದಾ?...” ಅಂತ ವಳವಳುಗೇ ಲಕ್ಕ ನಕ್ಕ, ದಾತು ರುದ್ದಿಗೆ ಕೆಂಗಣಪ್ಪ ಅಗಾಗ ಈ ಪುರುಸರತ್ನದ ಸೊಪ್ಪ ತಿನ್ತಾ ಇದ್ದದ್ದು ಲಕ್ಕಂಗೂ ಸ್ವತ್ತಿತ್ತು. {{gap}}“ಊ. ಅದೇಯ... ನನ್ನ ಜತೇಲಿ ಕುಂತು ಉಡುಕಾಡಿ ಈ ಮುರುಸರತ್ನದ ಸೊಪ್ಪ ವಸಿ ಜಮಾಯ್ತಿ ಕ್ವಡು, ಮತ್ತೆ, ಆಗ್ಲೀ ಬಿಸಿಲು ಏಕ್ತಾ ಅದೆ. ನಂಗೋಬ್ಬಂಗೇ ತಗ ಆಯ್ತದೆ.”- ಕೆಂಗಣಪ್ಪ ಇಂಗಂದು “ಅಂಗೇ ಆಮ್ಯಕೆ, ನಮ್ಮಟ್ಟಿ ತಾವಿಕೆ ತಿರುಗಾಡಿಕಂಡು ಬಾ. ನನ್ನೆಡತಿ ಕಜ್ಜಾಯ ಮಾಡವಳೆ” ಅಂದು ಮಸಿ ಮಾಡ. {{gap}}ಕಜ್ಜಾಯ ಅಸೀದೊ, ಬಿಸಿದೆ- ಅನ್ನೋ ಮಾತು ನಗ ಬೆರಕ್ಕಾಗಿ ಲಕ್ಕನ ನಾಲಿಗೆ ಮ್ಯಲೆ ಉಳ್ಳಾಡಿತೆ ವಿನಾ ತುಟಿಯಿಂದಾಚೆ ಹೊಳ್ಳನಿಲ್ಲ.... ಗೌಡ ಗ್ಯಾಗರೀತ ಅವೆ. {{gap}}ಅಲ್ಲದೇಯ ಇಂದುಕೆ ಬಾಲ್ಯದಲ್ಲಿ ಅಮ್ಮ ಅಟ್ಟೇಲಿ ಜೀತಕೆ<noinclude></noinclude> qs7erykpt827xeo2ynyb31sxwompbrq ಪುಟ:ವೈಶಾಖ.pdf/೨೩೯ 104 82168 319690 306162 2026-05-14T05:59:40Z Shreesha Sharma 7840 /* Proofread */ 319690 proofread-page text/x-wiki <noinclude><pagequality level="3" user="Shreesha Sharma" /></noinclude>________________ {{Left|ಸಮಗ್ರ ಕಾದಂಬರಿಗಳು}}{{Right|೨೨೩}} ಇರನಿಲ್ವ, ತಾನು?- ತುಸ ವೊತ್ತು ಜ್ವತ್ಯಾಗಿ ಕುಂತು ಒಂದೋಟು ಸೊಪ್ಪು ಕಿತ್ತುಕೊಟ್ಟರೆ, ಅದ್ಯಾವ ಸಾಮ್ರಾಜ್ಯ ಕಳುದೋದದು?... ಅಲ್ಲದೇಯ ಈ ಗಾಟಿ ಗೌಡ ಈಟು ಸಣ್ಣ ಇಸ್ಯಕ್ಕೆಲ್ಲ ಯಕೆ ಯೆದುರಾಕೊಬೇಕು? {{gap}}ಇಂಗೆ ಚಿಂತುಸಿ, ಆ ಬಯಲಲ್ಲಿ ಲಕ್ಕ ಪುರುಸರತ್ನವ ತಾನೂ ಅರಸ್ತ ವೊಂಟ ಗೌಡ ಸಂತುರುಪ್ತನಾಗಿ ಕುಂತ ತನ್ನ ಉಡುಕಾಟದವ ಮುಂದುವರಿಸ್ಥ. ಗರಿಕೆ ಅಂಗೇ ಇದ್ದು ಪುಟಾಣಿ ನಕ್ಷತ್ರದ ತರ ಹೂವು ಇರೊ ಪುರುಸರತ್ನ ಸೊಪ್ಪ ಕುಕ್ಕರಗಾಲ್ನಲ್ಲಿ ಕುಂತು ಕೀಳ್ತ, {{gap}}“ಇನ್ನೇಟು ಪುರುಸರತ್ನ ತಿಂದರೆ ತಾನೆ ಈವಯ್ಯ ಎಂದೊ ವೊಂಟೋದ ಪುಂಸತ್ವ ವಾಪಸು ಬಂದಾತು?'- ತನ್ವಳಗೇ ಯೋಳಿಕೊಂಡು ನಗಡ್ಡ, ಮತ್ತೆ ಆಪಾಟಿ ಗ್ಯಾನಗೆಟ್ಟು ಆಟ ಆಡಿದರೆ ಯಾವ ಪುಂಸತ್ವ ತಾನೆ ಅದೇಟು ಜಿನ ಉಳುದಾತು?... ಮೊದ್ಲೆ ಯೋಳಕ್ಕಿಲ್ಲಾ ಗಾದ್ಯ- ಅನ್ನ ಅದೆ ಅಂತ ಉಂಡೋನು ಕೆಟ್ಟ, ಎಣ್ಣು ಅವಳ ಅಂತ ಮೋದೋನು ಕೆಟ್ಟ, ಅಂತಾವ!...' ಅಂದುಕೊತ್ತ ಇದ್ದಮಗೆ, ಗೌಡ್ನ ಅಟ್ಟಿಲಿ ತಾನು ಜೀತಕ್ಕಿದ್ದ ದಿನಗಳು ಗ್ಯಾಪನ ಅದೊ: {{gap}}ಅದರಾಗು ಒಂದು ಜಿನ ಗೌಡನ ಎಡತಿ ತೌರಿಗೋಗಿದ್ದುಲು. ಲಕ್ಕ ಅಟ್ಟ ವಳುಗಡೆಗೆ ಇದ್ದ ಕಟ್ಟಿಗೆ ಅಂಚಿಗೆ, ವಳುಗಿನ ಜಗತಿ ಕೈಪಿಡಿ ಪಕ್ಕದಾಗೆ ಮನಗಿದ್ದ. ಇನ್ನೊಚ್ಚೊರಿ ದನ ಕರ ಕಟ್ಟಾಕಿತ್ತು. ಎಡತಿ ಇಲ್ಲದಿದ್ದಾಗ ಕೆಂಗಣ್ಣಪ್ಪ ಅಟ್ಟ ವಳುಗಡೆ ಜಗತಿ ಮ್ಯಾಲೇ ಮನಗ್ತಿದ್ದ... {{gap}}ಮೊಖದ ತುಂಬ ಕಂಬಳಿ ಕವುಚಿ ಮನಗಿದ್ದ ಲಕ್ಕಂಗೆ ಅದ್ಯಾವ ಮಾಯದಲ್ಲಿ ನಿದ್ದೆ ಬಂತೊ, ಗ್ವತಿಲ್ಲ. ಮಕಾಡಿ ಮನಗಿದ ವಸಿ ವೊತ್ನಲ್ಲೆ ಇರಬೇಕು, ಯರೊ ಉದ್ದುದ್ದಕೆ ತನ್ನ ಮಯ್ಯ ಮ್ಯಾಲೆ ಭಾರ ಹೇರಿ ಮನಗಿದಂಗಾಯ್ತು!... ಎಚ್ಚರಾದರೂವೆ ಕಣ್ಣು ಮಾತ್ರ ತೆರೀನಿಲ್ಲ. ಎದರಿಕೆ. ಯವುದೊ ಪಿಶಾತಿ ಬಂದು ಹೇರಿಕಂತು ಅಂತ ಲಕ್ಕ ಬೆಮತೋದ... ಆದ್ರೆ, ಆ ಹಾಳು ಪಿತತಿ ತನ್ನ ಚಡ್ಡಿ ಯಾಕೆ ಬಿಚ್ಚಬೇಕು?- ಅರ್ತವೆ ಆಗದೆ ಕಣ್ಣು ಮುಚ್ಚಿದಂಗೇಯ ಅಲ್ಲು ಮರಿ ಕಚ್ಚಿ, 'ಜಡೆಮುನಿ, ಕಾಪಡಪ್ಪ' ಅಂತ ಮನದಾಗೆ ಪ್ರಾರ್ತನೆ ಮಾಡ್ತ ಸುಮ್ಮನೆ ಬಿದ್ದುಕಂಡ... ಥೋ, ಇದೇನ- ಕುಂಡಿ, ಒಳತೊಡೆಯೆಲ್ಲನು ತಣ್ಣಗಾಯ್ತು ಅದಲ್ಲ... {{gap}}“ನಾನೇ ಕಗ್ಗ-ಗಾಬರಿ ಬೀಳಬ್ಯಾಡ”- ಪುಸಿ ಮಾಡ್ತ ಗೌಡ ಕಂತು ಗಂಡು ತನ್ನ ಟುವಲ್ನಿಂವಿಂದ ಕುಂಡಿ ವರುಸ್ತಾ ಇದ್ದ... {{gap}}ಲಕ್ಕ ತಟಕ್ಕನೆ ಎದ್ದು ಕುಂತು ಅಳಕ್ಕೆ ಸುರು ಮಾಡ್ಡ... ಗೌಡ ಲಕ್ಕನ ಕೆನ್ನೆ ಸವರ್ತ,<noinclude></noinclude> 1kdhp4u9nzu3dwsca2vu4loamg9oo3w ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ 4 96765 319686 276185 2026-05-14T05:57:38Z A826 6806 /* ಆವೃತ್ತಿಗಳು */ 319686 wikitext text/x-wiki ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯಾ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್, ವಿಕ್ಷನರಿ ಮತ್ತು ವಿಕಿಪೀಡಿಯಾದಂತಹ ಯೋಜನೆಗಳಲ್ಲಿ ಸಂಪೂರ್ಣ ಒಂದು ತಿಂಗಳ ಅವಧಿಗೆ ತರಬೇತಿ ನೀಡುತ್ತಾರೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಆವೃತ್ತಿಗಳು == # [[ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ ಜೂನ್ ೨೦೨೪]] # [[ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ ಮೇ-ಜೂನ್ ೨೦೨೬]] [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] 506nof3gw2ztamv2sh9iakheu2lmhmv 319687 319686 2026-05-14T05:58:24Z A826 6806 removed [[Category:ವಿಕಿಸೋರ್ಸ್ ಕಾರ್ಯಾಗಾರ]] using [[Help:Gadget-HotCat|HotCat]] 319687 wikitext text/x-wiki ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯಾ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್, ವಿಕ್ಷನರಿ ಮತ್ತು ವಿಕಿಪೀಡಿಯಾದಂತಹ ಯೋಜನೆಗಳಲ್ಲಿ ಸಂಪೂರ್ಣ ಒಂದು ತಿಂಗಳ ಅವಧಿಗೆ ತರಬೇತಿ ನೀಡುತ್ತಾರೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಆವೃತ್ತಿಗಳು == # [[ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ ಜೂನ್ ೨೦೨೪]] # [[ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ ಮೇ-ಜೂನ್ ೨೦೨೬]] swhhb84ko0wmqkkpti6rfu78ex32uov 319688 319687 2026-05-14T05:58:53Z A826 6806 Restored revision 319686 by [[Special:Contributions/A826|A826]] ([[User talk:A826|talk]])(TwinkleGlobal) 319688 wikitext text/x-wiki ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯಾ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್, ವಿಕ್ಷನರಿ ಮತ್ತು ವಿಕಿಪೀಡಿಯಾದಂತಹ ಯೋಜನೆಗಳಲ್ಲಿ ಸಂಪೂರ್ಣ ಒಂದು ತಿಂಗಳ ಅವಧಿಗೆ ತರಬೇತಿ ನೀಡುತ್ತಾರೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಆವೃತ್ತಿಗಳು == # [[ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ ಜೂನ್ ೨೦೨೪]] # [[ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ ಮೇ-ಜೂನ್ ೨೦೨೬]] [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] 506nof3gw2ztamv2sh9iakheu2lmhmv ಪುಟ:ಯಕ್ಷಗಾನ ಮಕರಂದ.pdf/೧೦ 104 99673 319544 307117 2026-05-13T12:10:49Z Hariprasad Shetty10 7490 319544 proofread-page text/x-wiki <noinclude><pagequality level="3" user="Anzx-ooo" />{{right|ix}}</noinclude>{| class=wikitable |+ಕಲೆ |- | 1. || ಕನ್ನಡ ನಾಡಿನ ಜಾನಪದ ರಂಗಭೂಮಿ || : || ಶಿವರಾಮ ಕಾರಂತ || 1 |- | 2. || ಯಕ್ಷಗಾನದ ಶಾಸ್ತ್ರೀಯತೆ || : || ಕುಕ್ಕಿಲ ಕೃಷ್ಣ ಭಟ್ಟ || 8 |- | 3. || “ಯಕ್ಷಗಾನ”ದ ಮೌಲಿಕ ವಿಚಾರ || : || ಕೆ. ವೆಂಕಟರಾಯಾಚಾರ್ಯ || 25 |- | 4. || ಛಾಲಿಕ್ಯ ಕ್ರೀಡೆ || : || ಕೃಷ್ಣಮೂರ್ತಿ ನಿಟಿಲಾಪುರ || 29 |- | 5. || ಯಕ್ಷಗಾನ ಬಯಲಾಟದ ಮೂಲ ಗೊಂಬೆಯಾಟ ? || : || ಗೌರೀಶ ಕಾಯ್ಕಿಣಿ || 33 |- | 6. || Yakshagana || : || Dr. V. Raghavan || 42 |- | 7. || “ಯಕ್ಷಗಾನ” ಗಾನವಿಧಾನ || : || ಶ್ರೀನಿವಾಸ ಉಡುಪ || 56 |- | 8. || ಯಕ್ಷಗಾನ ಪ್ರಸಂಗಗಳ ಧಾಟಿ || : || ಎಂ. ರಾಜಗೊಳಿಸುವಾಲಾಚಾರಂಗ || 75 |- | 9. || ಯಕ್ಷಗಾನದಲ್ಲಿ ಸಂಗೀತಾಂಶಗಳು || : || ಎ. ಈಶ್ವರಯ್ಯ || 88 |- | 10. || ಯಕ್ಷಗಾನದ ಮಟ್ಟುಗಳು || : || ಹೊಸ್ತೋಟ ಮಂಜುನಾಥ ಭಟ್ಟ || 94 |- | 11. || ಯಕ್ಷಗಾನದಲ್ಲಿ ತಾಳ-ಛಂದಸ್ಸು-ಗಮಕ || : || ಟಿ. ಕೇಶವ ಭಟ್ಟ || 98 |- | 12. || ಯಕ್ಷಗಾನದಲ್ಲಿ ವಸ್ತು-ವಿನ ಆಯ್ಕೆ || : || ಶ್ರೀಧರ ಉಪ್ಪೂರ || 109 |- | 13. || ಯಕ್ಷಗಾನ ಛಂದಸ್ಸು || : || ಕ. ಪು. ಸೀತಾರಾಮ ಕೆದಿಲಾಯ || 113 |- | 14. || ಯಕ್ಷಗಾನ - ಪ್ರಸಂಗ ಸಾಹಿತ್ಯ || : || ಶ್ರೀಧರ ಡಿ. ಎಸ್. || 135 |- | 15. || ಯಕ್ಷಗಾನ ಕೃತಿಗಳಲ್ಲಿ ಕಾವ್ಯ-ಸೌಂದರ್ಯ (ಮೂವರು ಕವಿಗಳನ್ನು ಅನುಲಕ್ಷಿಸಿ) || : || ಕೇಶವ ಉಚ್ಚಿಲ್ || 139 |- | 16. || ಪ್ರಭಾವ-ವಿವೇಚನೆ (ತೊರವೆ ರಾಮಾಯಣ ಮತ್ತು ಯಕ್ಷಗಾನ ಪ್ರಸಂಗಗಳು) || : || ಡಾ। ಹೊಸಬೆಟ್ಟು ಸೀತಾರಾಮಾಚಾರ್ಯ || 154 |- | 17. || ಯಕ್ಷಗಾನ ಸಾಹಿತ್ಯ || : || ಪು. ಶ್ರೀನಿವಾಸ ಭಟ್ಟ || 160 |- | 18. || ಪ್ರಸಂಗ ತಂತ್ರ || : || ಮಹಾಬಲೇಶ್ವರ ಹೆಗಡೆ || 170 |- | 19. || ಯಕ್ಷಗಾನಕೊಂಡು ನಿರ್ದೇಶನ ವ್ಯವಸ್ಥೆ || : || ಕೆ. ಎಂ. ರಾಘವನ್ ನಂಬಿಯಾರ್ || 181 |- | 20. || ಯಕ್ಷಗಾನ: ಪರಂಪರೆ-ಪ್ರಯೋಗ || : || ಜಿ. ಎಸ್. ಅವಧಾನಿ || 192 |- | 21. || ಪರಂಪರೆ ಮತ್ತು ಸುಧಾರಣೆ || : || ಕೆರೆಮನೆ ಮಹಾಬಲ ಹೆಗಡೆ || 200 |- | 22. || ಪ್ರದರ್ಶನ-ದಿಗ್ದರ್ಶನ: ಕೆಲವು ಸಮಸ್ಯೆಗಳು || : || ದಾಮೋದರ ಮಂಡೆಚ್ಚ || 208 |}<noinclude></noinclude> 7znhionlvigbnysuxh1fohdqtx757wf 319545 319544 2026-05-13T12:11:25Z Hariprasad Shetty10 7490 /* Validated */ 319545 proofread-page text/x-wiki <noinclude><pagequality level="4" user="Hariprasad Shetty10" />{{right|ix}}</noinclude>{| class=wikitable |+ಕಲೆ |- | 1. || ಕನ್ನಡ ನಾಡಿನ ಜಾನಪದ ರಂಗಭೂಮಿ || : || ಶಿವರಾಮ ಕಾರಂತ || 1 |- | 2. || ಯಕ್ಷಗಾನದ ಶಾಸ್ತ್ರೀಯತೆ || : || ಕುಕ್ಕಿಲ ಕೃಷ್ಣ ಭಟ್ಟ || 8 |- | 3. || “ಯಕ್ಷಗಾನ”ದ ಮೌಲಿಕ ವಿಚಾರ || : || ಕೆ. ವೆಂಕಟರಾಯಾಚಾರ್ಯ || 25 |- | 4. || ಛಾಲಿಕ್ಯ ಕ್ರೀಡೆ || : || ಕೃಷ್ಣಮೂರ್ತಿ ನಿಟಿಲಾಪುರ || 29 |- | 5. || ಯಕ್ಷಗಾನ ಬಯಲಾಟದ ಮೂಲ ಗೊಂಬೆಯಾಟ ? || : || ಗೌರೀಶ ಕಾಯ್ಕಿಣಿ || 33 |- | 6. || Yakshagana || : || Dr. V. Raghavan || 42 |- | 7. || “ಯಕ್ಷಗಾನ” ಗಾನವಿಧಾನ || : || ಶ್ರೀನಿವಾಸ ಉಡುಪ || 56 |- | 8. || ಯಕ್ಷಗಾನ ಪ್ರಸಂಗಗಳ ಧಾಟಿ || : || ಎಂ. ರಾಜಗೊಳಿಸುವಾಲಾಚಾರಂಗ || 75 |- | 9. || ಯಕ್ಷಗಾನದಲ್ಲಿ ಸಂಗೀತಾಂಶಗಳು || : || ಎ. ಈಶ್ವರಯ್ಯ || 88 |- | 10. || ಯಕ್ಷಗಾನದ ಮಟ್ಟುಗಳು || : || ಹೊಸ್ತೋಟ ಮಂಜುನಾಥ ಭಟ್ಟ || 94 |- | 11. || ಯಕ್ಷಗಾನದಲ್ಲಿ ತಾಳ-ಛಂದಸ್ಸು-ಗಮಕ || : || ಟಿ. ಕೇಶವ ಭಟ್ಟ || 98 |- | 12. || ಯಕ್ಷಗಾನದಲ್ಲಿ ವಸ್ತು-ವಿನ ಆಯ್ಕೆ || : || ಶ್ರೀಧರ ಉಪ್ಪೂರ || 109 |- | 13. || ಯಕ್ಷಗಾನ ಛಂದಸ್ಸು || : || ಕ. ಪು. ಸೀತಾರಾಮ ಕೆದಿಲಾಯ || 113 |- | 14. || ಯಕ್ಷಗಾನ - ಪ್ರಸಂಗ ಸಾಹಿತ್ಯ || : || ಶ್ರೀಧರ ಡಿ. ಎಸ್. || 135 |- | 15. || ಯಕ್ಷಗಾನ ಕೃತಿಗಳಲ್ಲಿ ಕಾವ್ಯ-ಸೌಂದರ್ಯ (ಮೂವರು ಕವಿಗಳನ್ನು ಅನುಲಕ್ಷಿಸಿ) || : || ಕೇಶವ ಉಚ್ಚಿಲ್ || 139 |- | 16. || ಪ್ರಭಾವ-ವಿವೇಚನೆ (ತೊರವೆ ರಾಮಾಯಣ ಮತ್ತು ಯಕ್ಷಗಾನ ಪ್ರಸಂಗಗಳು) || : || ಡಾ। ಹೊಸಬೆಟ್ಟು ಸೀತಾರಾಮಾಚಾರ್ಯ || 154 |- | 17. || ಯಕ್ಷಗಾನ ಸಾಹಿತ್ಯ || : || ಪು. ಶ್ರೀನಿವಾಸ ಭಟ್ಟ || 160 |- | 18. || ಪ್ರಸಂಗ ತಂತ್ರ || : || ಮಹಾಬಲೇಶ್ವರ ಹೆಗಡೆ || 170 |- | 19. || ಯಕ್ಷಗಾನಕೊಂಡು ನಿರ್ದೇಶನ ವ್ಯವಸ್ಥೆ || : || ಕೆ. ಎಂ. ರಾಘವನ್ ನಂಬಿಯಾರ್ || 181 |- | 20. || ಯಕ್ಷಗಾನ: ಪರಂಪರೆ-ಪ್ರಯೋಗ || : || ಜಿ. ಎಸ್. ಅವಧಾನಿ || 192 |- | 21. || ಪರಂಪರೆ ಮತ್ತು ಸುಧಾರಣೆ || : || ಕೆರೆಮನೆ ಮಹಾಬಲ ಹೆಗಡೆ || 200 |- | 22. || ಪ್ರದರ್ಶನ-ದಿಗ್ದರ್ಶನ: ಕೆಲವು ಸಮಸ್ಯೆಗಳು || : || ದಾಮೋದರ ಮಂಡೆಚ್ಚ || 208 |}<noinclude></noinclude> 9oo0psqha4se6sre2y3pk4c4r3butnx ಪುಟ:ಯಕ್ಷಗಾನ ಮಕರಂದ.pdf/೧೩ 104 99681 319554 307289 2026-05-13T12:25:14Z Hariprasad Shetty10 7490 319554 proofread-page text/x-wiki <noinclude><pagequality level="3" user="Anzx-ooo" /></noinclude>{| class=wikitable |+ಚಿತ್ರಗಳು<br />'''ವ್ಯಕ್ತಿ''' |- | * || ಯಕ್ಷಗಾನ ವಾಚಸ್ಪತಿ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು - ತೆಂಕುತಿಟ್ಟಿನ ಬಣ್ಣದ ವೇಷ (ಸುಗ್ರೀವ, ರಾವಣ) - ಹಳೆಯ ಕಾಲದ ಸ್ತ್ರೀ ವೇಷದ ಮಾದರಿ || 3 |- | * || ಶಾಸ್ತ್ರಿ ದಂಪತಿಗಳು, ಶಾಸ್ತ್ರಿಗಳ ಮನೆ || 34 |- | || ಗೆಳೆಯರ ನಡುವೆ || 35 |- | * || ಸನ್ಮಾನ, ತಾಳಮದ್ದಳೆ || 66 |- | || ಒಂದು ಅಪೂರ್ವ ಚಿತ್ರ || 67 |- | * || ಸಮದಂಡಿಗಳು || 82 |- | || ಪ್ರವಚನ ಮಂದಿರದಲ್ಲಿ || 83 |- | * || ಶಾಸ್ತ್ರಿಗಳ ಕೈಬರಹ || 130 |- | || ಪ್ರವಚನಕಾರ || 131 |- | colspan="3" style="text-align: center;" | '''ಕಲೆ''' |- | * || ಬಡಗುತಿಟ್ಟಿನ ವೇಷಗಳು || 32 |- | || ಗೊಂಬೆಯಾಟ - ಬಡಗು || 33 |- | * || ಸುಧಾರಿತ ಮುಂಡಾಸು || 192 |- | || ಸುಧಾರಿತ ರಂಗಸ್ಥಳ || 193 |- | * || ಬಣ್ಣದ ವೇಷ - ತೆಂಕು || 288 |- | || ರಾಜವೇಷ - ಬಡಗು || 289 |- | * || ಬಣ್ಣದ ವೇಷ – ಎರಡು ಮಾದರಿಗಳು || 304 |- | || ಹನುಮಂತ, ಶೂರ್ಪನಖಿ, ಭೀಮ, ಅರ್ಜುನ || 305 |- | * || ಬಡಗು ಸ್ತ್ರೀವೇಷ - ಉತ್ತರ ಕನ್ನಡ ಪದ್ಧತಿಯ ಅಭಿನಯ || 400 |- | || ಹಿಮ್ಮೇಳ - ಬಡಗು, ತೆಂಕು || 401 |- | * || ಬಡಗುತಿಟ್ಟಿನ ಕೃಷ್ಣ || 432 |- | || ತೆಂಕುತಿಟ್ಟಿನ ರಾಜವೇಷ || 433 |- | * || ಸಾಂಪ್ರದಾಯಿಕ ಮುಂಡಾಸು ವೇಷ || 448 |- | || ಮುಂಡಾಸು ವೇಷದ ವಿವರ, ಕೆಲವು ವೇಷಭೂಷಣಗಳು || 449 |- | * || ಕೂಚಿಪುಡಿಯ ಕಿರೀಟಗಳು || 496 |- | || ತೆರುಕೂತ್ತಿನ ಒಂದು ವೇಷ || 497 |- | * || ಬೊಂಬೆಯಾಟ – ತೆಂಕು || 576 |- | * || ಕಂಬನಿ || 608 |}<noinclude></noinclude> 0601tgk0knqbu9z3j137wm121oaweuv 319555 319554 2026-05-13T12:25:26Z Hariprasad Shetty10 7490 /* Validated */ 319555 proofread-page text/x-wiki <noinclude><pagequality level="4" user="Hariprasad Shetty10" /></noinclude>{| class=wikitable |+ಚಿತ್ರಗಳು<br />'''ವ್ಯಕ್ತಿ''' |- | * || ಯಕ್ಷಗಾನ ವಾಚಸ್ಪತಿ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು - ತೆಂಕುತಿಟ್ಟಿನ ಬಣ್ಣದ ವೇಷ (ಸುಗ್ರೀವ, ರಾವಣ) - ಹಳೆಯ ಕಾಲದ ಸ್ತ್ರೀ ವೇಷದ ಮಾದರಿ || 3 |- | * || ಶಾಸ್ತ್ರಿ ದಂಪತಿಗಳು, ಶಾಸ್ತ್ರಿಗಳ ಮನೆ || 34 |- | || ಗೆಳೆಯರ ನಡುವೆ || 35 |- | * || ಸನ್ಮಾನ, ತಾಳಮದ್ದಳೆ || 66 |- | || ಒಂದು ಅಪೂರ್ವ ಚಿತ್ರ || 67 |- | * || ಸಮದಂಡಿಗಳು || 82 |- | || ಪ್ರವಚನ ಮಂದಿರದಲ್ಲಿ || 83 |- | * || ಶಾಸ್ತ್ರಿಗಳ ಕೈಬರಹ || 130 |- | || ಪ್ರವಚನಕಾರ || 131 |- | colspan="3" style="text-align: center;" | '''ಕಲೆ''' |- | * || ಬಡಗುತಿಟ್ಟಿನ ವೇಷಗಳು || 32 |- | || ಗೊಂಬೆಯಾಟ - ಬಡಗು || 33 |- | * || ಸುಧಾರಿತ ಮುಂಡಾಸು || 192 |- | || ಸುಧಾರಿತ ರಂಗಸ್ಥಳ || 193 |- | * || ಬಣ್ಣದ ವೇಷ - ತೆಂಕು || 288 |- | || ರಾಜವೇಷ - ಬಡಗು || 289 |- | * || ಬಣ್ಣದ ವೇಷ – ಎರಡು ಮಾದರಿಗಳು || 304 |- | || ಹನುಮಂತ, ಶೂರ್ಪನಖಿ, ಭೀಮ, ಅರ್ಜುನ || 305 |- | * || ಬಡಗು ಸ್ತ್ರೀವೇಷ - ಉತ್ತರ ಕನ್ನಡ ಪದ್ಧತಿಯ ಅಭಿನಯ || 400 |- | || ಹಿಮ್ಮೇಳ - ಬಡಗು, ತೆಂಕು || 401 |- | * || ಬಡಗುತಿಟ್ಟಿನ ಕೃಷ್ಣ || 432 |- | || ತೆಂಕುತಿಟ್ಟಿನ ರಾಜವೇಷ || 433 |- | * || ಸಾಂಪ್ರದಾಯಿಕ ಮುಂಡಾಸು ವೇಷ || 448 |- | || ಮುಂಡಾಸು ವೇಷದ ವಿವರ, ಕೆಲವು ವೇಷಭೂಷಣಗಳು || 449 |- | * || ಕೂಚಿಪುಡಿಯ ಕಿರೀಟಗಳು || 496 |- | || ತೆರುಕೂತ್ತಿನ ಒಂದು ವೇಷ || 497 |- | * || ಬೊಂಬೆಯಾಟ – ತೆಂಕು || 576 |- | * || ಕಂಬನಿ || 608 |}<noinclude></noinclude> og2yn0fw7yko5h0buwvdzcm7r83xd4w ಪುಟ:ಯಕ್ಷಗಾನ ಮಕರಂದ.pdf/೧೧ 104 99683 319546 307122 2026-05-13T12:11:55Z Hariprasad Shetty10 7490 319546 proofread-page text/x-wiki <noinclude><pagequality level="3" user="Anzx-ooo" />{{Left|x}}</noinclude>{| class=wikitable |- | ೨೩. || ಯಕ್ಷಗಾನದ ಭಾಗವತ-ಭಾಗವತಿಕೆ || : || ಕಡತೋಕ ವಂಜುನಾಥ ಭಾಗವತ || 212 |- | ೨೪. || ಜನಪದ ನೃತ್ಯನಾಟಕಗಳ ವೇಷಭೂಷಣ || : || ಪಿ. ಆರ್. ತಿಪ್ಪೇಸ್ವಾಮಿ || 218 |- | ೨೫. || ಬಯಲಾಟದಲ್ಲಿ ನೃತ್ಯ || : || ಕೆ. ಗೋವಿಂದ ಭಟ್ಟ || 228 |- | ೨೬. || ಬಯಲಾಟದ ಪಂಚಾಂಗ || : || ಗುಂಡ್ಮಿ, ಚಂದ್ರಶೇಖರ ಐತಾಳ || 232 |- | ೨೭. || ಪೌರಾಣಿಕ ಚೌಕಟ್ಟಿನಲ್ಲಿ ಯಕ್ಷಗಾನದ ಮಾತುಕತೆ || : || ಆರ್. ವಿ. ಭಂಡಾರಿ || 236 |- | ೨೮. || ಯಕ್ಷಗಾನ-ತಾಳವಿದ್ದಲೆ-ಕೆಲವು ಚಿಪ್ಪಣಿಗಳು || : || ಲಕ್ಷ್ಮೀಶ ತೋಳ್ಪಾಡಿ || 240 |- | ೨೯. || ತಾಳತಪ್ಪುವ ತಾಳಮದ್ದಲೆ || : || ಎನ್. ಕೆ. ಚಿನ್ನಕೇಶವ || 246 |- | ೩೦. || ತಾಳವಿದ್ದಲೆ ಅರ್ಥಗಾರಿಕೆಯಲ್ಲಿ ರಸಾವಿಷ್ಕಾರ || : || ಡಾ। ರಮಾನಂದ ಬನಾರಿ || 254 |- | ೩೧. || ಯಕ್ಷಗಾನದಲ್ಲಿ ಸಾಂಕೇತಿಕತೆ || : || ಅಮೃತ ಸೋಮೇಶ್ವರ || 260 |- | ೩೨. || ಯಕ್ಷಗಾನದ ಹೊರಗೊಳಗು || : || ತೆರಕುಂಬ ಗೋಪಾಲಕೃಷ್ಣ ಭಟ್ಟ || 269 |- | ೩೩. || ಮದ್ದಲೆ ತಿಟ್ಟುಗಳು || : || ಎಂ. ಪ್ರಭಾಕರ ಜೋಶಿ || 285 |- | ೩೪. || ಯಕ್ಷಗಾನದ ಪ್ರವೇಶ || : || ಸೇಡಿಯಾಪು ಕೃಷ್ಣ ಭಟ್ಟ || 290 |- | ೩೫. || ತೆಂಕುತಿಟ್ಟಿನ ವೇಷರಚನೆ || : || ಡಿ. ಕೆ. ಸುಬ್ಬಣ್ಣ ಭಟ್ಟ || 305 |- | ೩೬. || ತೆಂಕುತಿಟ್ಟಿನ ವೇಷಭೂಷಣ (ಆ) ವ್ಯವಸ್ಥೆ || : || ರಾಮಚಂದ್ರ ಉಚ್ಚಿಲ || 313 |- | ೩೭. || ತೆಂಕುತಿಟ್ಟಿನ ಬಯಲಾಟದ ಪೂರ್ವರಂಗ || : || ಬಲಿಪ ನಾರಾಯಣ ಭಾಗವತ || 322 |- | ೩೮. || ತಾಳವಿಧಾನ || : || ಕೆ. ಬಾಬು ರೈ || 331 |- | ೩೯. || ತೆಂಕುತಿಟ್ಟಿನ ತಾಳಗಳು ಮತ್ತು ಸಂಪ್ರದಾಯಗಳು || : || ದೀವಾಣ ಭೀಮ ಭಟ್ಟ || 333 |- | ೪೦. || ಪೂರ್ವರಂಗ - ನಾಟ್ಯಾಭ್ಯಾಸದ ತಳಹದಿ || : || ಕೋಳ್ಯೂರು ರಾಮಚಂದ್ರ ರಾವ್ || 351 |- | ೪೧. || ರಂಗಪ್ರವೇಶ || : || ಅಳಿಕೆ ರಾಮಯ್ಯ ರೈ || 355 |- | ೪೨. || ಆಟದ ಮೇಳ || : || ಕುಂಬಳೆ ಸಂದರ ರಾವ್ || 361 |- | ೪೩. || ನಾಟ್ಯಾರಂಭ || : || ಪಿ. ಶ್ರೀಧರ ಐತಾಳ || 373 |- | ೪೪. || ಬಡಗುತಿಟ್ಟಿನ ಮದ್ದಳೆ - ಪ್ರಮಾಣ ಮತ್ತು ರೀತಿ || : || ಹಿರಿಯಡ್ಕ ಗೋಪಾಲ ರಾವ್ || 389 |- | ೪೫. || ಬಡಗುತಿಟ್ಟಿನ ತಾಳ ಮತ್ತು ನೃತ್ಯಪದ್ಧತಿ || : || ಎಂ. ನಾರಣಪ್ಪ ಉಪ್ಪುರ || 398 |}<noinclude></noinclude> ivbb1c67qujy85b6qg3dze8vxcn081y 319548 319546 2026-05-13T12:17:14Z Hariprasad Shetty10 7490 319548 proofread-page text/x-wiki <noinclude><pagequality level="3" user="Anzx-ooo" />{{Left|x}}</noinclude>{| class=wikitable |- | 23. || ಯಕ್ಷಗಾನದ ಭಾಗವತ-ಭಾಗವತಿಕೆ || : || ಕಡತೋಕ ವಂಜುನಾಥ ಭಾಗವತ || 212 |- | 24. || ಜನಪದ ನೃತ್ಯನಾಟಕಗಳ ವೇಷಭೂಷಣ || : || ಪಿ. ಆರ್. ತಿಪ್ಪೇಸ್ವಾಮಿ || 218 |- | 25. || ಬಯಲಾಟದಲ್ಲಿ ನೃತ್ಯ || : || ಕೆ. ಗೋವಿಂದ ಭಟ್ಟ || 228 |- | 26. || ಬಯಲಾಟದ ಪಂಚಾಂಗ || : || ಗುಂಡ್ಮಿ, ಚಂದ್ರಶೇಖರ ಐತಾಳ || 232 |- | 27. || ಪೌರಾಣಿಕ ಚೌಕಟ್ಟಿನಲ್ಲಿ ಯಕ್ಷಗಾನದ ಮಾತುಕತೆ || : || ಆರ್. ವಿ. ಭಂಡಾರಿ || 236 |- | 28. || ಯಕ್ಷಗಾನ-ತಾಳವಿದ್ದಲೆ-ಕೆಲವು ಚಿಪ್ಪಣಿಗಳು || : || ಲಕ್ಷ್ಮೀಶ ತೋಳ್ಪಾಡಿ || 240 |- | 29. || ತಾಳತಪ್ಪುವ ತಾಳಮದ್ದಲೆ || : || ಎನ್. ಕೆ. ಚಿನ್ನಕೇಶವ || 246 |- | 30. || ತಾಳವಿದ್ದಲೆ ಅರ್ಥಗಾರಿಕೆಯಲ್ಲಿ ರಸಾವಿಷ್ಕಾರ || : || ಡಾ। ರಮಾನಂದ ಬನಾರಿ || 254 |- | 31. || ಯಕ್ಷಗಾನದಲ್ಲಿ ಸಾಂಕೇತಿಕತೆ || : || ಅಮೃತ ಸೋಮೇಶ್ವರ || 260 |- |32. || ಯಕ್ಷಗಾನದ ಹೊರಗೊಳಗು || : || ತೆರಕುಂಬ ಗೋಪಾಲಕೃಷ್ಣ ಭಟ್ಟ || 269 |- | 33. || ಮದ್ದಲೆ ತಿಟ್ಟುಗಳು || : || ಎಂ. ಪ್ರಭಾಕರ ಜೋಶಿ || 285 |- | 34. || ಯಕ್ಷಗಾನದ ಪ್ರವೇಶ || : || ಸೇಡಿಯಾಪು ಕೃಷ್ಣ ಭಟ್ಟ || 290 |- | 35. || ತೆಂಕುತಿಟ್ಟಿನ ವೇಷರಚನೆ || : || ಡಿ. ಕೆ. ಸುಬ್ಬಣ್ಣ ಭಟ್ಟ || 305 |- | 36. || ತೆಂಕುತಿಟ್ಟಿನ ವೇಷಭೂಷಣ (ಆ) ವ್ಯವಸ್ಥೆ || : || ರಾಮಚಂದ್ರ ಉಚ್ಚಿಲ || 313 |- | 37. || ತೆಂಕುತಿಟ್ಟಿನ ಬಯಲಾಟದ ಪೂರ್ವರಂಗ || : || ಬಲಿಪ ನಾರಾಯಣ ಭಾಗವತ || 322 |- | 38. || ತಾಳವಿಧಾನ || : || ಕೆ. ಬಾಬು ರೈ || 331 |- | 39. || ತೆಂಕುತಿಟ್ಟಿನ ತಾಳಗಳು ಮತ್ತು ಸಂಪ್ರದಾಯಗಳು || : || ದೀವಾಣ ಭೀಮ ಭಟ್ಟ || 333 |- | 40. || ಪೂರ್ವರಂಗ - ನಾಟ್ಯಾಭ್ಯಾಸದ ತಳಹದಿ || : || ಕೋಳ್ಯೂರು ರಾಮಚಂದ್ರ ರಾವ್ || 351 |- | 41. || ರಂಗಪ್ರವೇಶ || : || ಅಳಿಕೆ ರಾಮಯ್ಯ ರೈ || 355 |- | 42. || ಆಟದ ಮೇಳ || : || ಕುಂಬಳೆ ಸಂದರ ರಾವ್ || 361 |- | 43. || ನಾಟ್ಯಾರಂಭ || : || ಪಿ. ಶ್ರೀಧರ ಐತಾಳ || 373 |- | 44. || ಬಡಗುತಿಟ್ಟಿನ ಮದ್ದಳೆ - ಪ್ರಮಾಣ ಮತ್ತು ರೀತಿ || : || ಹಿರಿಯಡ್ಕ ಗೋಪಾಲ ರಾವ್ || 389 |- | 45. || ಬಡಗುತಿಟ್ಟಿನ ತಾಳ ಮತ್ತು ನೃತ್ಯಪದ್ಧತಿ || : || ಎಂ. ನಾರಣಪ್ಪ ಉಪ್ಪುರ || 398 |}<noinclude></noinclude> 2g62nlpdiji4t7zucai6d0gjeketprm 319549 319548 2026-05-13T12:17:56Z Hariprasad Shetty10 7490 /* Validated */ 319549 proofread-page text/x-wiki <noinclude><pagequality level="4" user="Hariprasad Shetty10" />{{Left|x}}</noinclude>{| class=wikitable |- | 23. || ಯಕ್ಷಗಾನದ ಭಾಗವತ-ಭಾಗವತಿಕೆ || : || ಕಡತೋಕ ವಂಜುನಾಥ ಭಾಗವತ || 212 |- | 24. || ಜನಪದ ನೃತ್ಯನಾಟಕಗಳ ವೇಷಭೂಷಣ || : || ಪಿ. ಆರ್. ತಿಪ್ಪೇಸ್ವಾಮಿ || 218 |- | 25. || ಬಯಲಾಟದಲ್ಲಿ ನೃತ್ಯ || : || ಕೆ. ಗೋವಿಂದ ಭಟ್ಟ || 228 |- | 26. || ಬಯಲಾಟದ ಪಂಚಾಂಗ || : || ಗುಂಡ್ಮಿ, ಚಂದ್ರಶೇಖರ ಐತಾಳ || 232 |- | 27. || ಪೌರಾಣಿಕ ಚೌಕಟ್ಟಿನಲ್ಲಿ ಯಕ್ಷಗಾನದ ಮಾತುಕತೆ || : || ಆರ್. ವಿ. ಭಂಡಾರಿ || 236 |- | 28. || ಯಕ್ಷಗಾನ-ತಾಳವಿದ್ದಲೆ-ಕೆಲವು ಚಿಪ್ಪಣಿಗಳು || : || ಲಕ್ಷ್ಮೀಶ ತೋಳ್ಪಾಡಿ || 240 |- | 29. || ತಾಳತಪ್ಪುವ ತಾಳಮದ್ದಲೆ || : || ಎನ್. ಕೆ. ಚಿನ್ನಕೇಶವ || 246 |- | 30. || ತಾಳವಿದ್ದಲೆ ಅರ್ಥಗಾರಿಕೆಯಲ್ಲಿ ರಸಾವಿಷ್ಕಾರ || : || ಡಾ। ರಮಾನಂದ ಬನಾರಿ || 254 |- | 31. || ಯಕ್ಷಗಾನದಲ್ಲಿ ಸಾಂಕೇತಿಕತೆ || : || ಅಮೃತ ಸೋಮೇಶ್ವರ || 260 |- |32. || ಯಕ್ಷಗಾನದ ಹೊರಗೊಳಗು || : || ತೆರಕುಂಬ ಗೋಪಾಲಕೃಷ್ಣ ಭಟ್ಟ || 269 |- | 33. || ಮದ್ದಲೆ ತಿಟ್ಟುಗಳು || : || ಎಂ. ಪ್ರಭಾಕರ ಜೋಶಿ || 285 |- | 34. || ಯಕ್ಷಗಾನದ ಪ್ರವೇಶ || : || ಸೇಡಿಯಾಪು ಕೃಷ್ಣ ಭಟ್ಟ || 290 |- | 35. || ತೆಂಕುತಿಟ್ಟಿನ ವೇಷರಚನೆ || : || ಡಿ. ಕೆ. ಸುಬ್ಬಣ್ಣ ಭಟ್ಟ || 305 |- | 36. || ತೆಂಕುತಿಟ್ಟಿನ ವೇಷಭೂಷಣ (ಆ) ವ್ಯವಸ್ಥೆ || : || ರಾಮಚಂದ್ರ ಉಚ್ಚಿಲ || 313 |- | 37. || ತೆಂಕುತಿಟ್ಟಿನ ಬಯಲಾಟದ ಪೂರ್ವರಂಗ || : || ಬಲಿಪ ನಾರಾಯಣ ಭಾಗವತ || 322 |- | 38. || ತಾಳವಿಧಾನ || : || ಕೆ. ಬಾಬು ರೈ || 331 |- | 39. || ತೆಂಕುತಿಟ್ಟಿನ ತಾಳಗಳು ಮತ್ತು ಸಂಪ್ರದಾಯಗಳು || : || ದೀವಾಣ ಭೀಮ ಭಟ್ಟ || 333 |- | 40. || ಪೂರ್ವರಂಗ - ನಾಟ್ಯಾಭ್ಯಾಸದ ತಳಹದಿ || : || ಕೋಳ್ಯೂರು ರಾಮಚಂದ್ರ ರಾವ್ || 351 |- | 41. || ರಂಗಪ್ರವೇಶ || : || ಅಳಿಕೆ ರಾಮಯ್ಯ ರೈ || 355 |- | 42. || ಆಟದ ಮೇಳ || : || ಕುಂಬಳೆ ಸಂದರ ರಾವ್ || 361 |- | 43. || ನಾಟ್ಯಾರಂಭ || : || ಪಿ. ಶ್ರೀಧರ ಐತಾಳ || 373 |- | 44. || ಬಡಗುತಿಟ್ಟಿನ ಮದ್ದಳೆ - ಪ್ರಮಾಣ ಮತ್ತು ರೀತಿ || : || ಹಿರಿಯಡ್ಕ ಗೋಪಾಲ ರಾವ್ || 389 |- | 45. || ಬಡಗುತಿಟ್ಟಿನ ತಾಳ ಮತ್ತು ನೃತ್ಯಪದ್ಧತಿ || : || ಎಂ. ನಾರಣಪ್ಪ ಉಪ್ಪುರ || 398 |}<noinclude></noinclude> duu2ve8n7b0tfova2qomlry0cxcsvvi ಪುಟ:ಯಕ್ಷಗಾನ ಮಕರಂದ.pdf/೧೨ 104 99692 319550 307129 2026-05-13T12:18:43Z Hariprasad Shetty10 7490 319550 proofread-page text/x-wiki <noinclude><pagequality level="3" user="Anzx-ooo" />{{Right|xi}}</noinclude> {| class=wikitable |- | 46. || ಯಕ್ಷಗಾನ ರೂಪಕದ ಗಾನ-ಹೆಜ್ಜೆ-ಗೆಜ್ಜೆ || : || ಡಾ। ಮಾರ್ತಾ ಆಶ್ಟನ್ (ಅನು: ಪ್ರೊ. ಲೀಲಾ ಭಟ್) || 430 |- | 47. || ನೃತ್ಯ-ಚಲನೆ: ಒಂದು ಟಿಪ್ಪಣಿ || : || ಗುರುರಾಜ ಮಾರ್ಪಳ್ಳಿ || 443 |- | 48. || ಬಡಗುತಿಟ್ಟಿನ ಮೇಳ - ಕೆಲವು ವಾಹಿತಿಗಳು || : || ಎಂ. ಲಕ್ಷ್ಮೀನಾರಾಯಣ ಸಾವಂತ || 445 |- | 49. || ಉತ್ತರ ಕನ್ನಡದ ಯಕ್ಷಗಾನದ ಸಂಪ್ರದಾಯ, ವಯಸ್ಸು, ಪ್ರವೇಶ || : || ಪಿ. ವಿ. ಹಾಸ್ಯಗಾರ || 460 |- | 50. || ಯಕ್ಷಗಾನ ನೃತ್ಯಾರಂಭ || : || ಗೋಪಾಲಕೃಷ್ಣ ಪಿ. ನಾಯಕ || 469 |- | 51. || ಬಂಧಿಯಾದ ಉತ್ತರ ಕನ್ನಡದ ನೃತ್ಯಾಶ್ರಮಣ || : || ಗಂಗಾಧರ ಶಾಸ್ತ್ರಿ, ನಾಜಗಾರು || 473 |- | 52. || Kuchipudi Yakshagana || : || Prof. S. V. Joga Rao and Dr. J. Suryaprakasa Rao || 476 |- |53. || ಕಥಕ್ಕಳಿ-ಯಕ್ಷಗಾನ-ಕೇಳಿಕೆ || : || ವೆಂಕಟರಾಜ ಪುಣಿಂಚತ್ತಾಯ || 485 |- | 54. || Art and Literature of Kathakali || : || Dr. S. K. Nayar || 502 |- | 55. || ತೆರುಕೂತ್ತು || : || ಶ್ರೀಕೃಷ್ಣ ಭಟ್, ಅರ್ಜಿಕಜೆ || 519 |- | 56. || ಕನ್ನಡದ ದೊಡ್ಡಾಟ || : || ನಿಂಗಣ್ಣ ಸಣ್ಣಕ್ಕಿ || 534 |- | 57. || ಕರಿಭಂಟನ ಕಾಳಗ: ಚಾರಿತ್ರಿಕೆ || : || ಹ. ಕ. ರಾಜೇಗೌಡ || 546 |- | 58. || ತೊಗಲು ಗೊಂಬೆ ಆಟ || : || ಡಾ। ಡಿ. ಕೆ. ರಾಜೇಂದ್ರ || 567 |- | 59. || ಗೊಂಬೆಯಾಟ || : || ಪಿ. ಕೆ. ಐತಾಳ || 575 |- | 60. || ಸಿಂಹಳದ ಯಕ್ಷನೃತ್ಯ || : || ಕಂದ್ಯಾಡಿ ವಿಶ್ವನಾಥ ರೈ || 583 |- | 61. || ಹೊಮಿನ ಕೋಲು || : || ಬಾ. ಸಾವಂತ || 589 |- | colspan=4| ಅನುಬಂಧ - ೧: ಸಂಶೋಧಕರಿಗೊಂದು ವಸ್ತು || 596 |- | colspan=4| ಅನುಬಂಧ - ೨: ಕೃತಜ್ಞತೆ || 598 |- | colspan=4| ಅನುಬಂಧ - ೩: ನಮ್ಮ ಲೇಖಕರು|| 599 |}<noinclude></noinclude> ehr1wxf096uc2p2rbr2sv4b82e1y924 319551 319550 2026-05-13T12:19:16Z Hariprasad Shetty10 7490 319551 proofread-page text/x-wiki <noinclude><pagequality level="3" user="Anzx-ooo" />{{Right|xi}}</noinclude> {| class=wikitable |- | 46. || ಯಕ್ಷಗಾನ ರೂಪಕದ ಗಾನ-ಹೆಜ್ಜೆ-ಗೆಜ್ಜೆ || : || ಡಾ। ಮಾರ್ತಾ ಆಶ್ಟನ್ (ಅನು: ಪ್ರೊ. ಲೀಲಾ ಭಟ್) || 430 |- | 47. || ನೃತ್ಯ-ಚಲನೆ: ಒಂದು ಟಿಪ್ಪಣಿ || : || ಗುರುರಾಜ ಮಾರ್ಪಳ್ಳಿ || 443 |- | 48. || ಬಡಗುತಿಟ್ಟಿನ ಮೇಳ - ಕೆಲವು ವಾಹಿತಿಗಳು || : || ಎಂ. ಲಕ್ಷ್ಮೀನಾರಾಯಣ ಸಾವಂತ || 445 |- | 49. || ಉತ್ತರ ಕನ್ನಡದ ಯಕ್ಷಗಾನದ ಸಂಪ್ರದಾಯ, ವಯಸ್ಸು, ಪ್ರವೇಶ || : || ಪಿ. ವಿ. ಹಾಸ್ಯಗಾರ || 460 |- | 50. || ಯಕ್ಷಗಾನ ನೃತ್ಯಾರಂಭ || : || ಗೋಪಾಲಕೃಷ್ಣ ಪಿ. ನಾಯಕ || 469 |- | 51. || ಬಂಧಿಯಾದ ಉತ್ತರ ಕನ್ನಡದ ನೃತ್ಯಾಶ್ರಮಣ || : || ಗಂಗಾಧರ ಶಾಸ್ತ್ರಿ, ನಾಜಗಾರು || 473 |- | 52. || Kuchipudi Yakshagana || : || Prof. S. V. Joga Rao and Dr. J. Suryaprakasa Rao || 476 |- |53. || ಕಥಕ್ಕಳಿ-ಯಕ್ಷಗಾನ-ಕೇಳಿಕೆ || : || ವೆಂಕಟರಾಜ ಪುಣಿಂಚತ್ತಾಯ || 485 |- | 54. || Art and Literature of Kathakali || : || Dr. S. K. Nayar || 502 |- | 55. || ತೆರುಕೂತ್ತು || : || ಶ್ರೀಕೃಷ್ಣ ಭಟ್, ಅರ್ಜಿಕಜೆ || 519 |- | 56. || ಕನ್ನಡದ ದೊಡ್ಡಾಟ || : || ನಿಂಗಣ್ಣ ಸಣ್ಣಕ್ಕಿ || 534 |- | 57. || ಕರಿಭಂಟನ ಕಾಳಗ: ಚಾರಿತ್ರಿಕೆ || : || ಹ. ಕ. ರಾಜೇಗೌಡ || 546 |- | 58. || ತೊಗಲು ಗೊಂಬೆ ಆಟ || : || ಡಾ। ಡಿ. ಕೆ. ರಾಜೇಂದ್ರ || 567 |- | 59. || ಗೊಂಬೆಯಾಟ || : || ಪಿ. ಕೆ. ಐತಾಳ || 575 |- | 60. || ಸಿಂಹಳದ ಯಕ್ಷನೃತ್ಯ || : || ಕಂದ್ಯಾಡಿ ವಿಶ್ವನಾಥ ರೈ || 583 |- | 61. || ಹೂವಿನ ಕೋಲು || : || ಬಾ. ಸಾವಂತ || 589 |- | colspan=4| ಅನುಬಂಧ - ೧: ಸಂಶೋಧಕರಿಗೊಂದು ವಸ್ತು || 596 |- | colspan=4| ಅನುಬಂಧ - ೨: ಕೃತಜ್ಞತೆ || 598 |- | colspan=4| ಅನುಬಂಧ - ೩: ನಮ್ಮ ಲೇಖಕರು|| 599 |}<noinclude></noinclude> dukcbzngi99zkb696vd9c2yhhh98owl 319552 319551 2026-05-13T12:23:04Z Hariprasad Shetty10 7490 319552 proofread-page text/x-wiki <noinclude><pagequality level="3" user="Anzx-ooo" />{{Right|xi}}</noinclude> {| class=wikitable |- | 46. || ಯಕ್ಷಗಾನ ರೂಪಕದ ಗಾನ-ಹೆಜ್ಜೆ-ಗೆಜ್ಜೆ || : || ಡಾ। ಮಾರ್ತಾ ಆಶ್ಟನ್ (ಅನು: ಪ್ರೊ. ಲೀಲಾ ಭಟ್) || 430 |- | 47. || ನೃತ್ಯ-ಚಲನೆ: ಒಂದು ಟಿಪ್ಪಣಿ || : || ಗುರುರಾಜ ಮಾರ್ಪಳ್ಳಿ || 443 |- | 48. || ಬಡಗುತಿಟ್ಟಿನ ಮೇಳ - ಕೆಲವು ವಾಹಿತಿಗಳು || : || ಎಂ. ಲಕ್ಷ್ಮೀನಾರಾಯಣ ಸಾಮಗ || 445 |- | 49. || ಉತ್ತರ ಕನ್ನಡದ ಯಕ್ಷಗಾನದ ಸಂಪ್ರದಾಯ, ವಯಸ್ಸು, ಪ್ರವೇಶ || : || ಪಿ. ವಿ. ಹಾಸ್ಯಗಾರ || 460 |- | 50. || ಯಕ್ಷಗಾನ ನೃತ್ಯಾರಂಭ || : || ಗೋಪಾಲಕೃಷ್ಣ ಪಿ. ನಾಯಕ || 469 |- | 51. || ಮರೆಯಾದ ಉತ್ತರ ಕನ್ನಡದ ನೃತ್ಯವೈಶಿಷ್ಟ್ಯ || : || ಗಂಗಾಧರ ಶಾಸ್ತ್ರಿ, ನಾಜಗಾರು || 473 |- | 52. || Kuchipudi Yakshagana || : || Prof. S. V. Joga Rao and Dr. J. Suryaprakasa Rao || 476 |- |53. || ಕಥಕ್ಕಳಿ-ಯಕ್ಷಗಾನ-ಕೇಳಿಕೆ || : || ವೆಂಕಟರಾಜ ಪುಣಿಂಚತ್ತಾಯ || 485 |- | 54. || Art and Literature of Kathakali || : || Dr. S. K. Nayar || 502 |- | 55. || ತೆರುಕೂತ್ತು || : || ಶ್ರೀಕೃಷ್ಣ ಭಟ್, ಅರ್ಜಿಕಜೆ || 519 |- | 56. || ಕನ್ನಡದ ದೊಡ್ಡಾಟ || : || ನಿಂಗಣ್ಣ ಸಣ್ಣಕ್ಕಿ || 534 |- | 57. || ಕರಿಭಂಟನ ಕಾಳಗ: ಚಾರಿತ್ರಿಕ ಘಟನೆಯೆ? || : || ಹ. ಕ. ರಾಜೇಗೌಡ || 546 |- | 58. || ತೊಗಲು ಗೊಂಬೆ ಆಟ || : || ಡಾ। ಡಿ. ಕೆ. ರಾಜೇಂದ್ರ || 567 |- | 59. || ಗೊಂಬೆಯಾಟ ವಿಸ್ತೃತ ಕಲಾಪ್ರಕಾರ|| : || ಪಿ. ಕೆ. ಐತಾಳ || 575 |- | 60. || ಸಿಂಹಳದ ಯಕ್ಷನೃತ್ಯ || : || ಕುದ್ಕಾಡಿ ವಿಶ್ವನಾಥ ರೈ || 583 |- | 61. || ಹೂವಿನ ಕೋಲು || : || ಬಾ. ಸಾಮಗ || 589 |- | colspan=4| ಅನುಬಂಧ - ೧: ಸಂಶೋಧಕರಿಗೊಂದು ವಸ್ತು || 596 |- | colspan=4| ಅನುಬಂಧ - ೨: ಕೃತಜ್ಞತೆ || 598 |- | colspan=4| ಅನುಬಂಧ - ೩: ನಮ್ಮ ಲೇಖಕರು|| 599 |}<noinclude></noinclude> stfovdypuwxrixrmc57lgz3c7411f4z 319553 319552 2026-05-13T12:23:40Z Hariprasad Shetty10 7490 /* Validated */ 319553 proofread-page text/x-wiki <noinclude><pagequality level="4" user="Hariprasad Shetty10" />{{Right|xi}}</noinclude> {| class=wikitable |- | 46. || ಯಕ್ಷಗಾನ ರೂಪಕದ ಗಾನ-ಹೆಜ್ಜೆ-ಗೆಜ್ಜೆ || : || ಡಾ। ಮಾರ್ತಾ ಆಶ್ಟನ್ (ಅನು: ಪ್ರೊ. ಲೀಲಾ ಭಟ್) || 430 |- | 47. || ನೃತ್ಯ-ಚಲನೆ: ಒಂದು ಟಿಪ್ಪಣಿ || : || ಗುರುರಾಜ ಮಾರ್ಪಳ್ಳಿ || 443 |- | 48. || ಬಡಗುತಿಟ್ಟಿನ ಮೇಳ - ಕೆಲವು ವಾಹಿತಿಗಳು || : || ಎಂ. ಲಕ್ಷ್ಮೀನಾರಾಯಣ ಸಾಮಗ || 445 |- | 49. || ಉತ್ತರ ಕನ್ನಡದ ಯಕ್ಷಗಾನದ ಸಂಪ್ರದಾಯ, ವಯಸ್ಸು, ಪ್ರವೇಶ || : || ಪಿ. ವಿ. ಹಾಸ್ಯಗಾರ || 460 |- | 50. || ಯಕ್ಷಗಾನ ನೃತ್ಯಾರಂಭ || : || ಗೋಪಾಲಕೃಷ್ಣ ಪಿ. ನಾಯಕ || 469 |- | 51. || ಮರೆಯಾದ ಉತ್ತರ ಕನ್ನಡದ ನೃತ್ಯವೈಶಿಷ್ಟ್ಯ || : || ಗಂಗಾಧರ ಶಾಸ್ತ್ರಿ, ನಾಜಗಾರು || 473 |- | 52. || Kuchipudi Yakshagana || : || Prof. S. V. Joga Rao and Dr. J. Suryaprakasa Rao || 476 |- |53. || ಕಥಕ್ಕಳಿ-ಯಕ್ಷಗಾನ-ಕೇಳಿಕೆ || : || ವೆಂಕಟರಾಜ ಪುಣಿಂಚತ್ತಾಯ || 485 |- | 54. || Art and Literature of Kathakali || : || Dr. S. K. Nayar || 502 |- | 55. || ತೆರುಕೂತ್ತು || : || ಶ್ರೀಕೃಷ್ಣ ಭಟ್, ಅರ್ಜಿಕಜೆ || 519 |- | 56. || ಕನ್ನಡದ ದೊಡ್ಡಾಟ || : || ನಿಂಗಣ್ಣ ಸಣ್ಣಕ್ಕಿ || 534 |- | 57. || ಕರಿಭಂಟನ ಕಾಳಗ: ಚಾರಿತ್ರಿಕ ಘಟನೆಯೆ? || : || ಹ. ಕ. ರಾಜೇಗೌಡ || 546 |- | 58. || ತೊಗಲು ಗೊಂಬೆ ಆಟ || : || ಡಾ। ಡಿ. ಕೆ. ರಾಜೇಂದ್ರ || 567 |- | 59. || ಗೊಂಬೆಯಾಟ ವಿಸ್ತೃತ ಕಲಾಪ್ರಕಾರ|| : || ಪಿ. ಕೆ. ಐತಾಳ || 575 |- | 60. || ಸಿಂಹಳದ ಯಕ್ಷನೃತ್ಯ || : || ಕುದ್ಕಾಡಿ ವಿಶ್ವನಾಥ ರೈ || 583 |- | 61. || ಹೂವಿನ ಕೋಲು || : || ಬಾ. ಸಾಮಗ || 589 |- | colspan=4| ಅನುಬಂಧ - ೧: ಸಂಶೋಧಕರಿಗೊಂದು ವಸ್ತು || 596 |- | colspan=4| ಅನುಬಂಧ - ೨: ಕೃತಜ್ಞತೆ || 598 |- | colspan=4| ಅನುಬಂಧ - ೩: ನಮ್ಮ ಲೇಖಕರು|| 599 |}<noinclude></noinclude> qsqq0mwp88r0l0662kmvr21mfeb5arr ಪುಟ:ಯಕ್ಷಗಾನ ಮಕರಂದ.pdf/೮ 104 99715 319539 316845 2026-05-13T12:07:36Z Hariprasad Shetty10 7490 /* Validated */ 319539 proofread-page text/x-wiki <noinclude><pagequality level="4" user="Hariprasad Shetty10" /> {{rh||ಲೇಖನಗಳು-ಲೇಖಕರು|}} {{rh||ವ್ಯಕ್ತಿ|}}</noinclude>{| class=wikitable |- | 1. || ತೆನೆಗಟ್ಟಿದ ತಿರುಳು (ಕವನ) || : || ಏರ್ಯ ಲಕ್ಷ್ಮೀನಾರಾಯಣ ಆಳ್ವ || 1 |- | 2. || ಯಕ್ಷಗಾನ ವಾಚಸ್ಪತಿ ಪೊಳಲಿ ಶಂಕರನಾರಾಯಣ ಶಾಸ್ತ್ರಿ || : || ಅಮ್ಮೆಂಬಳ ಶಂಕರನಾರಾಯಣ ನಾವಡ || 3 |- | 3. || ಪೊಳಲಿ ಶಾಸ್ತ್ರಿಯವರು ಮತ್ತು ನಾರಾಯಣ ಕಿಲ್ಲೆಯವರು || : || ಕಯ್ಯಾರ ಕಿಂಞಣ್ಣ ರೈ || 17 |- | 4. || ನಮ್ಮ ತಂದೆಯವರು || : || ನಿತ್ಯಾನಂದ ಕಾರಂತ || 29 |- | 5. || ನಮ್ಮ ಶಾಸ್ತ್ರಿಗಳು || : || ಕೆ. ಪಾಂಡುರಂಗ ಪೈ || 38 |- | 6. || ಕಿಲೆಂಜಾರು ಕಾರಂತರು ಪೊಳಲಿ ಶಾಸ್ತ್ರಿಗಳಾದ ಬಗೆ || : || ಪೊಳಲಿ ಪದ್ಮನಾಭ ಭಟ್ಟ || 44 |- |7. || ಗುರುವರ್ಯ ಶ್ರೀ ಶಾಸ್ತ್ರಿಗಳು || : || ಡಾ। ಕೆ. ಎಸ್. ಭಟ್ || 50 |- |8. || ಶಿಸ್ತಿನ ಮೂರ್ತಿ || : || ಪದ್ಮಾವತಿ ಎಸ್‌. || 54 |- |9. || ದಿ. ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು || : || ಕೆ. ಬಾಲಕೃಷ್ಣ ರಾವ್ || 59 |- |10. || ಯಕ್ಷಗಾನ ವಾಚಸ್ಪತಿ ದಿ। ಪೊಳಲಿ ಶಾಸ್ತ್ರಿಗಳು || : || ಎಂ. ಆರ್. ಶಾಸ್ತ್ರಿ || 64 |- |11. || ಅಭಿಮಾನಧನ ಶ್ರೀ ಶ್ರೀ ಶಾಸ್ತ್ರಿಗಳು || : || ಅ. ಬಾಲಕೃಷ್ಣ ಶೆಟ್ಟಿ, ಪೊಳಲಿ || 69 |- |12. || ಶಾಸ್ತ್ರಿಗಳ ಸಮದಂಡಿಗಳು || : || ಮಂದಾರ ಕೇಶವ ಭಟ್ಟ || 73 |- |13. || ಶಾಸ್ತ್ರಿಗಳು ಚಿತ್ರಿಸಿದ ಕೆಲವು ಪಾತ್ರಗಳು || : || ಕೃ. ಭ. ಪೆರ್ಲ || 82 |- |14. || ಅಂತಃಸತ್ವ ಪ್ರಭಾವ || : || ಮಲ್ಪೆ ಶಂಕರನಾರಾಯಣ ಸಾವಂಗ || 92 |- |15. || ಬಹುಮುಖ ಪ್ರತಿಭೆಯ ಶಂಕರನಾರಾಯಣ ಶಾಸ್ತ್ರಿಗಳು || : || ಅಡ್ಡ ವಾಸು ಶೆಟ್ಟಿ || 95 |- |16. || ಪೊಳಲಿ ಪಾತ್ರೋಷಕ ಶಾಸ್ತ್ರಿ || : || ಬಿ. ಜಯರಾಮ ಶೆಟ್ಟಿ || 101 |- |17. || ಪೊಳಲಿ ಶಂಕರನಾರಾಯಣ ಶಾಸ್ತ್ರಿ || : || ಕೊಳಂಬೆ ಪುಟ್ಟಣ್ಣ ಗೌಡ || 105 |- |18. || ಶಾಸ್ತ್ರಿಗಳ ಸವಿನೆನಪು || : || ದೇರಾಜೆ ಸೀತಾರಾಮಯ್ಯ || 112 |- |19. || ಪೊಳಲಿ ಶಾಸ್ತ್ರಿಯವರು : ಕೆಲವು ನೆನಪುಗಳು || : || ಎಂ. ರಾಮಚಂದ್ರ ||121 |- | 20. || ಸೂರ್ಯನಿಗೆ ಸೊಡರು || : || ತೆಕ್ಕುಂಜ ದಾಮೋದರ ಭಟ್ಟ || 127 |- | 21. || ಶಾಸ್ತ್ರಿಗಳ ಕಲಾಪ್ರತಿಭೆಯ ಎರಡು ಮುಖಗಳು || : || ಕೆದಂಬಾಡಿ ಜತ್ತಪ್ಪ ರೈ || 131<noinclude></noinclude> obfxj091ptkqupvphu94n5wkew4mrvt ಪುಟ:ಯಕ್ಷಗಾನ ಮಕರಂದ.pdf/೯ 104 99719 319540 306963 2026-05-13T12:09:07Z Hariprasad Shetty10 7490 319540 proofread-page text/x-wiki <noinclude><pagequality level="3" user="Anzx-ooo" /> {{Left|vii}}</noinclude>{| class=wikitable |- | 22. || ಪ್ರವಚನಕಾರ ಶಾಸ್ತ್ರಿಗಳು || : || ಕೆ. ವಿ. ಹರಿದಾಸ || 141 |- | 23. || ಸ್ನೇಹಶೀಲ || : || ಮಲ್ಪೆ ರಾಮದಾಸ ಸಾವಂಗ || 152 |- | 24. || ಪೂಜ್ಯ ಶಂಕರನಾರಾಯಣ ಶಾಸ್ತ್ರಿಗಳು - ನಾನು ಕಂಡಂತೆ || : || ಬಿ. ಎಂ. ಇದಿನಬ್ಬ || 155 |- | 25. || ಶಾಸ್ತ್ರಿಗಳ ಆರ್ಥಗಾರಿಕೆ || : || ತಾಳ್ತಜೆ ಕೃಷ್ಣ ಭಟ್ಟ || 157 |- | 26. || ಮಹಾಜ್ಯೋತಿ || : || ಸೀತಾನದಿ ಗಣಪಯ್ಯ ಶೆಟ್ಟಿ || 161 |- | 27. || ಯಕ್ಷಗಾನ ರಸಋಷಿ || : || ಸೊಡಂಕೂರು ತಿರುಮಲೇಶ್ವರ ಭಟ್ಟ || 163 |- | 28. || ಶಾಸ್ತ್ರಿಗಳ ಜರಾಸಂಧ || : || ಸೇವ ನೇಮಿರಾಜ ಮಲ್ಲ || 167 |- | 29. || ‘ಎಕ್ಕಲಗಾಣದೋಜ’ || : || ವಿ. ಬಿ. ಹೊಸಮನೆ || 170 |- | 30. || ಉದಾತ್ತ ಕಲಾವಿದ || : || ಕೆ. ಪುರುಷೋತ್ತಮ ಭಟ್ಟ || 174 |- | 31. || ಶಂಕರನಾರಾಯಣ ಶಾಸ್ತ್ರಿಗಳ ಯಕ್ಷಗಾನ ಪ್ರವೇಶ || : || ಆಗರಿ ಶ್ರೀನಿವಾಸ ಭಾಗವತ || 178 |- | 32. || ನಾ ಕಂಡ ಶಾಸ್ತ್ರಿಗಳು || : || ಕೀರಿಕ್ಕಾಡು ವಿಷ್ಣು ಭಟ್ಟ || 180 |- | 33. || ಪೂಜ್ಯ ಶಾಸ್ತ್ರಿಗಳು ಭೀಷ್ಟನಾಗಿ- ನಾನು ಕಂಡಂತೆ || : || ಕೈಲಾರು ಈಶ್ವರ ಭಟ್ಟ || 185 |- | 34. || ಪರಿಪೂರ್ಣ ಕಲಾವಿದ || : || ಜೆಡ್ಡು ನಾರಾಯಣ ಭಟ್ಟ || 188 |- | 35. || ಜೀವಂತ ವ್ಯಕ್ತಿತ್ವ || : || ಕಜೆ ಈಶ್ವರ ಭಟ್ಟ || 191 |- | 36. || ತುಂಬಿದ ಕೊಡ || : || ಕೂರಾಡಿ ಸದಾಶಿವ ಕಲ್ಕೂರ || 193 |- | 37. || ಹಿರಿಯ ಚೀತನಕ್ಕೆ ನಮನ - ಒಂದು ಸವಿನೆನಹು || : || ಹರಿದಾಸ ಯಚ್. ಶ್ರೀಧರಾಚಾರ್ಯ || 196 |- | 38. || ನನ್ನ ಪೂಜ್ಯ ಗುರುಗಳು || : || ಗುರುಪುರ ವಾಸುದೇವ ಪ್ರಭು || 198 |- | 39. || ನೆನಪುಗಳು || : || ಬಿ. ರಾಮಾಚಾರ್ಯ<br />ತುದಿಯಡ್ಕ ವಿಷ್ಣಯ್ಯ<br /> ಸಿ. ಗೋಪಾಲಕೃಷ್ಣ ಶಾಸ್ತ್ರಿ<br /> ಪಟ್ಟಾಜೆ ವೆಂಕಟ್ರಮಣ ಭಟ್ಟ<br /> ಕೆ. ಗೋಪಾಲಕೃಷ್ಣ ಭಟ್, ಅಡ್ಕ<br /> ಕೆ. ವೆಂಕಟರಾಯಾಚಾರ್ಯ<br /> ತೆಕ್ಕುಂಜ ಗೋಪಾಲಕೃಷ್ಣ ಭಟ್ಟ<br /> ನೆಲ್ಲಿಕಾರು ಬಾಬು ಶೆಟ್ಟಿ<br />ಕೆ. ಶ್ರೀಕರ ಭಟ್ || 201 |- | 40. || ಶಾಸ್ತ್ರಿಗಳ ಬರವಣಿಗೆ - ಯಕ್ಷಗಾನದಲ್ಲಿ || : || ಶ್ರೀ ಕಿಲ್ಲೆಯವರು || 221 |}<noinclude></noinclude> mth500do7nxxpoesvymb0d5gclhuj9v 319541 319540 2026-05-13T12:09:23Z Hariprasad Shetty10 7490 319541 proofread-page text/x-wiki <noinclude><pagequality level="3" user="Anzx-ooo" /> {{Left|viii}}</noinclude>{| class=wikitable |- | 22. || ಪ್ರವಚನಕಾರ ಶಾಸ್ತ್ರಿಗಳು || : || ಕೆ. ವಿ. ಹರಿದಾಸ || 141 |- | 23. || ಸ್ನೇಹಶೀಲ || : || ಮಲ್ಪೆ ರಾಮದಾಸ ಸಾವಂಗ || 152 |- | 24. || ಪೂಜ್ಯ ಶಂಕರನಾರಾಯಣ ಶಾಸ್ತ್ರಿಗಳು - ನಾನು ಕಂಡಂತೆ || : || ಬಿ. ಎಂ. ಇದಿನಬ್ಬ || 155 |- | 25. || ಶಾಸ್ತ್ರಿಗಳ ಆರ್ಥಗಾರಿಕೆ || : || ತಾಳ್ತಜೆ ಕೃಷ್ಣ ಭಟ್ಟ || 157 |- | 26. || ಮಹಾಜ್ಯೋತಿ || : || ಸೀತಾನದಿ ಗಣಪಯ್ಯ ಶೆಟ್ಟಿ || 161 |- | 27. || ಯಕ್ಷಗಾನ ರಸಋಷಿ || : || ಸೊಡಂಕೂರು ತಿರುಮಲೇಶ್ವರ ಭಟ್ಟ || 163 |- | 28. || ಶಾಸ್ತ್ರಿಗಳ ಜರಾಸಂಧ || : || ಸೇವ ನೇಮಿರಾಜ ಮಲ್ಲ || 167 |- | 29. || ‘ಎಕ್ಕಲಗಾಣದೋಜ’ || : || ವಿ. ಬಿ. ಹೊಸಮನೆ || 170 |- | 30. || ಉದಾತ್ತ ಕಲಾವಿದ || : || ಕೆ. ಪುರುಷೋತ್ತಮ ಭಟ್ಟ || 174 |- | 31. || ಶಂಕರನಾರಾಯಣ ಶಾಸ್ತ್ರಿಗಳ ಯಕ್ಷಗಾನ ಪ್ರವೇಶ || : || ಆಗರಿ ಶ್ರೀನಿವಾಸ ಭಾಗವತ || 178 |- | 32. || ನಾ ಕಂಡ ಶಾಸ್ತ್ರಿಗಳು || : || ಕೀರಿಕ್ಕಾಡು ವಿಷ್ಣು ಭಟ್ಟ || 180 |- | 33. || ಪೂಜ್ಯ ಶಾಸ್ತ್ರಿಗಳು ಭೀಷ್ಟನಾಗಿ- ನಾನು ಕಂಡಂತೆ || : || ಕೈಲಾರು ಈಶ್ವರ ಭಟ್ಟ || 185 |- | 34. || ಪರಿಪೂರ್ಣ ಕಲಾವಿದ || : || ಜೆಡ್ಡು ನಾರಾಯಣ ಭಟ್ಟ || 188 |- | 35. || ಜೀವಂತ ವ್ಯಕ್ತಿತ್ವ || : || ಕಜೆ ಈಶ್ವರ ಭಟ್ಟ || 191 |- | 36. || ತುಂಬಿದ ಕೊಡ || : || ಕೂರಾಡಿ ಸದಾಶಿವ ಕಲ್ಕೂರ || 193 |- | 37. || ಹಿರಿಯ ಚೀತನಕ್ಕೆ ನಮನ - ಒಂದು ಸವಿನೆನಹು || : || ಹರಿದಾಸ ಯಚ್. ಶ್ರೀಧರಾಚಾರ್ಯ || 196 |- | 38. || ನನ್ನ ಪೂಜ್ಯ ಗುರುಗಳು || : || ಗುರುಪುರ ವಾಸುದೇವ ಪ್ರಭು || 198 |- | 39. || ನೆನಪುಗಳು || : || ಬಿ. ರಾಮಾಚಾರ್ಯ<br />ತುದಿಯಡ್ಕ ವಿಷ್ಣಯ್ಯ<br /> ಸಿ. ಗೋಪಾಲಕೃಷ್ಣ ಶಾಸ್ತ್ರಿ<br /> ಪಟ್ಟಾಜೆ ವೆಂಕಟ್ರಮಣ ಭಟ್ಟ<br /> ಕೆ. ಗೋಪಾಲಕೃಷ್ಣ ಭಟ್, ಅಡ್ಕ<br /> ಕೆ. ವೆಂಕಟರಾಯಾಚಾರ್ಯ<br /> ತೆಕ್ಕುಂಜ ಗೋಪಾಲಕೃಷ್ಣ ಭಟ್ಟ<br /> ನೆಲ್ಲಿಕಾರು ಬಾಬು ಶೆಟ್ಟಿ<br />ಕೆ. ಶ್ರೀಕರ ಭಟ್ || 201 |- | 40. || ಶಾಸ್ತ್ರಿಗಳ ಬರವಣಿಗೆ - ಯಕ್ಷಗಾನದಲ್ಲಿ || : || ಶ್ರೀ ಕಿಲ್ಲೆಯವರು || 221 |}<noinclude></noinclude> 58gbdxkixt4hrk9khwtodbx2wwirzgr 319543 319541 2026-05-13T12:10:02Z Hariprasad Shetty10 7490 /* Validated */ 319543 proofread-page text/x-wiki <noinclude><pagequality level="4" user="Hariprasad Shetty10" /> {{Left|viii}}</noinclude>{| class=wikitable |- | 22. || ಪ್ರವಚನಕಾರ ಶಾಸ್ತ್ರಿಗಳು || : || ಕೆ. ವಿ. ಹರಿದಾಸ || 141 |- | 23. || ಸ್ನೇಹಶೀಲ || : || ಮಲ್ಪೆ ರಾಮದಾಸ ಸಾವಂಗ || 152 |- | 24. || ಪೂಜ್ಯ ಶಂಕರನಾರಾಯಣ ಶಾಸ್ತ್ರಿಗಳು - ನಾನು ಕಂಡಂತೆ || : || ಬಿ. ಎಂ. ಇದಿನಬ್ಬ || 155 |- | 25. || ಶಾಸ್ತ್ರಿಗಳ ಆರ್ಥಗಾರಿಕೆ || : || ತಾಳ್ತಜೆ ಕೃಷ್ಣ ಭಟ್ಟ || 157 |- | 26. || ಮಹಾಜ್ಯೋತಿ || : || ಸೀತಾನದಿ ಗಣಪಯ್ಯ ಶೆಟ್ಟಿ || 161 |- | 27. || ಯಕ್ಷಗಾನ ರಸಋಷಿ || : || ಸೊಡಂಕೂರು ತಿರುಮಲೇಶ್ವರ ಭಟ್ಟ || 163 |- | 28. || ಶಾಸ್ತ್ರಿಗಳ ಜರಾಸಂಧ || : || ಸೇವ ನೇಮಿರಾಜ ಮಲ್ಲ || 167 |- | 29. || ‘ಎಕ್ಕಲಗಾಣದೋಜ’ || : || ವಿ. ಬಿ. ಹೊಸಮನೆ || 170 |- | 30. || ಉದಾತ್ತ ಕಲಾವಿದ || : || ಕೆ. ಪುರುಷೋತ್ತಮ ಭಟ್ಟ || 174 |- | 31. || ಶಂಕರನಾರಾಯಣ ಶಾಸ್ತ್ರಿಗಳ ಯಕ್ಷಗಾನ ಪ್ರವೇಶ || : || ಆಗರಿ ಶ್ರೀನಿವಾಸ ಭಾಗವತ || 178 |- | 32. || ನಾ ಕಂಡ ಶಾಸ್ತ್ರಿಗಳು || : || ಕೀರಿಕ್ಕಾಡು ವಿಷ್ಣು ಭಟ್ಟ || 180 |- | 33. || ಪೂಜ್ಯ ಶಾಸ್ತ್ರಿಗಳು ಭೀಷ್ಟನಾಗಿ- ನಾನು ಕಂಡಂತೆ || : || ಕೈಲಾರು ಈಶ್ವರ ಭಟ್ಟ || 185 |- | 34. || ಪರಿಪೂರ್ಣ ಕಲಾವಿದ || : || ಜೆಡ್ಡು ನಾರಾಯಣ ಭಟ್ಟ || 188 |- | 35. || ಜೀವಂತ ವ್ಯಕ್ತಿತ್ವ || : || ಕಜೆ ಈಶ್ವರ ಭಟ್ಟ || 191 |- | 36. || ತುಂಬಿದ ಕೊಡ || : || ಕೂರಾಡಿ ಸದಾಶಿವ ಕಲ್ಕೂರ || 193 |- | 37. || ಹಿರಿಯ ಚೀತನಕ್ಕೆ ನಮನ - ಒಂದು ಸವಿನೆನಹು || : || ಹರಿದಾಸ ಯಚ್. ಶ್ರೀಧರಾಚಾರ್ಯ || 196 |- | 38. || ನನ್ನ ಪೂಜ್ಯ ಗುರುಗಳು || : || ಗುರುಪುರ ವಾಸುದೇವ ಪ್ರಭು || 198 |- | 39. || ನೆನಪುಗಳು || : || ಬಿ. ರಾಮಾಚಾರ್ಯ<br />ತುದಿಯಡ್ಕ ವಿಷ್ಣಯ್ಯ<br /> ಸಿ. ಗೋಪಾಲಕೃಷ್ಣ ಶಾಸ್ತ್ರಿ<br /> ಪಟ್ಟಾಜೆ ವೆಂಕಟ್ರಮಣ ಭಟ್ಟ<br /> ಕೆ. ಗೋಪಾಲಕೃಷ್ಣ ಭಟ್, ಅಡ್ಕ<br /> ಕೆ. ವೆಂಕಟರಾಯಾಚಾರ್ಯ<br /> ತೆಕ್ಕುಂಜ ಗೋಪಾಲಕೃಷ್ಣ ಭಟ್ಟ<br /> ನೆಲ್ಲಿಕಾರು ಬಾಬು ಶೆಟ್ಟಿ<br />ಕೆ. ಶ್ರೀಕರ ಭಟ್ || 201 |- | 40. || ಶಾಸ್ತ್ರಿಗಳ ಬರವಣಿಗೆ - ಯಕ್ಷಗಾನದಲ್ಲಿ || : || ಶ್ರೀ ಕಿಲ್ಲೆಯವರು || 221 |}<noinclude></noinclude> kzqfth69half3az13g3kw3e1sbyq06w ಪುಟ:ಯಕ್ಷಗಾನ ಮಕರಂದ.pdf/೨೪೪ 104 100164 319620 317831 2026-05-13T14:39:22Z Shreesha Sharma 7840 /* Validated */ 319620 proofread-page text/x-wiki <noinclude><pagequality level="4" user="Shreesha Sharma" /></noinclude>{{Left|218}} ಉದ್ದೇಶವೇನೆಂದು ಕೃಷ್ಣನನ್ನು ಕೇಳಿದಾಗ ಭಕ್ಥರೋಧ್ಹಾರಕ್ಕಾಗಿ ಎಂದು ಕೃಷ್ಣನ ಉತ್ತರ.ಆಗ ಹರಿಯಿತು ಶಾಸ್ತ್ರಿಗಳ ತರ್ಕಸರಣೀ'' ಭಕ್ತರ ಉದ್ಧಾರಕ್ಕಾಗಿ ಅವತಾರವೇ? ಹಿಂದೆ ಮೊಸಳೆಯ ಬಾಯಿಯಲ್ಲಿ ಸಿಕ್ಕಿಬಿದ್ದ ಗಜೇಂದ್ರ ಆರ್ತನಾಗಿ ಮೊರೆಯಿಟ್ಟಾಗ ಗಜೇಂದ್ರ ಮೋಕ್ಷ) ಯಾವ ಅವತಾರವೂ ಆಗಲಿಲ್ಲ.ಸ್ವಯಂ ಗರುಡವಾಹನನಾಗಿ ಭಕ್ತನನ್ನು ಉದ್ದರಿಸಿದ್ದಾನೆ.ನಮ್ಮ ಕಾಲದಲ್ಲೇ ಹಸ್ತಿನಾ. ವತಿಯ ದ್ಯೂತಸಭೆಯಲ್ಲಿ ದ್ರೌಪದಿಯ ಮಾನಹರಣದ ಪ್ರಯತ್ನ ನಡೆದಾಗ ನೀನೇ ಗತಿಯೆಂದು ಮೊರೆಯಿಟ್ಟ ಆಕೆಯ ಮಾನಸಂರಕ್ಷಣೆಗೆ ಯಾವ ಅವತಾರವೂ ಆಗಲಿಲ್ಲ. . ನಿನ್ನೆ ಮಹಿಮೆ ಮಾತ್ರ ಸಾಕಾಯಿತು. ಹಾಗಾದರೆ ಭಕ್ತೋದ್ದಾರಕ್ಕೆ ಅವತಾರವೇ ಅವಶ್ಯವಿಲ್ಲ ಎಂದಂತಾಯಿತು. ಮತ್ತೆ ಈ ಅವತಾರದ ಉದ್ದೇಶ ವೇನು? ತಿಳಿದವರು. ಹೇಳಿದರು, ಧರ್ಮೋದ್ಧಾರ ಆಂತ. ಅದೇ ಸರಿಯೋ$ ಅಭ್ಲ ನೀನು ಹೇಳಿದಂತೆ ಭಕ್ತೋದ್ಭಾರಕ್ಳಾಗಿಯೇ ಎಂಬುದೇ ಸರಿಯೊ! ನಿಜ ಹೇಳು... ಕೃಷ್ಣನ ಅರ್ಥ ಹೆೇಳಿದವರಿಗೆ 'ಪಾಪ, ಬೆವತುಹೋಯಿತು. {{gap}}ಹಳ್ಳಿಯ ಮನೆಯೊಂದರಲ್ಲಿ ವಿಜೃಂಭಣೆಯ ತಾಳಮದ್ದಳೆ. ಶ್ರೋತೃಗಳಲ್ಲಿ ಹಳಬರೇ ಹೆಚ್ಚು.ಭೀಷ್ಮಪರ್ವದಲ್ಲಿ ಭೀಷ್ಮನು ಕೃಷ್ಣನ ಹಣೆಗೇ ಗುರಿಯಿಟ್ಟು ಗಾಯಗೊಳಿಸುವ ಸನ್ನಿವೇಶ, ಶಾಸ್ತ್ರಿಗಳು.ಹಳೆಯ ಅರ್ಥಧಾರಿಗಳ ಕ್ರ ಕ್ರಮದಲ್ಲಿ “ಓಯ್‌, ಏನಾಶ್ವರ್ಯವಿದು? ಪರಶುರಾಮ ಗುರುಗಳಲ್ಲಿ ಇಷ್ಟು ಕಾಲ ಕಲಿತ ವಿದ್ಯೆಯೆಲ್ಲ ನಿಷ್ಫಲವಾಯಿತೇ | ಅರ್ಜುನನು ಹೊಡೆದ ಬಾಣಗಳು ನೆರವಾಗಿ ನನ್ನ್ನ ಎದೆಗೇ ಬೀಳುತ್ತಿವೆ. ಮಧ್ಯದಲ್ಲಿ ಅವುಗಳನ್ನು ನಾನು ತುಂಡರಿಸದೆ ಇದ್ದರೆ ನನ್ನ ಎದೆಯನ್ನೇ ಭೇದಿಸುವುದು ಖಂಡಿತ... ಅರ್ಜುನನ, ಎದೆಗೇ. ಗುರಿಹಿಡಿದೆ ಎಷ್ಟು. ಬಾಣ ಹೊಡೆದಿದ್ದೆದ್ದೇನೆ, . ಒಂದಾದರೂ ಅವನ ಕೂದಲಿಗಾದರೂ ತಾಗಿದೆಯೇ? 'ಬಾಣಗಳೆಲ್ಲ ಹೋಗಿ, ತಾಗಿದ್ದು ರಥದ ಕಂಬಗಳಿಗಲ್ಲವೆ? ಇದೆಲ್ಲ ಈ ಕರಿಯನ ತಂತ್ರ ] ರಥವನ್ನು ಅತ್ತಿಂದಿತ್ತ, ಇತ್ತಿಂದತ್ತ ಹಾರಿಸಿ, ಕುಣಿಸಿ, ನನ್ನ ಬಾಣಗಳೆಲ್ಲ ಗುರಿ ತಪ್ಪುವಂತೆ ಮಾಡಿದ್ದಾನೆ. ಇವನಿಗೆ ಬುದ್ಧಿ ಕಲಿಸಿಯೇ ಬಿಡುತ್ತೇನೆ. ಇವನ. ಮೇಲೆಯೇ ಬಾಣ ಹೊಡದು ಗಾಸಿಗೊಳಿಸಿದರೆ ಮತ್ತೆ ಏನು ಮಾಡುತ್ತಾನೋ ನೋಡುತ್ತೇನೆ ಬತ್ತಳಿಕೆಯಿಂದತ್ ಒಂದು ಬಾಣ ತೆಗೆದಿದ್ದೇನೆ. ಇದನ್ನು ಹೂಡಿ ಈ ಕರಿಯನ ಹಣೆಗೆ ಗುರಿಯುಟ್ಟು,ಝಮಾಯಿಸಿ ಬಿಡುತ್ತೇನೆ ಆಗದೆ??? ಎಂದು ಹೂಂಕರಿಸಿದರು, ಅಲ್ಲಿದ್ದ. ಹಳಬರಿಗೆ ಖ್ಹುಷಿಯೋ ಖುಶಿ! {{gap}}ಸೈಂಟ್‌ ಅಲೋಸಿಯಸ' ಕಾಲೇಜಿನಲ್ಲಿ ಮುದ್ದಣ ಜಯಂತಿಯಂದು *ಕುಮಾರ. ವಿಜಯದ ಒಂದು ಭಾಗದ ತಾಳಮದ್ದಳೆ. ಶೂರಪದ್ಮಾಸುರನ ಮಗನಾದ ಹಿರಣ್ಯ<noinclude></noinclude> gz1fqqh68x59dlkk1550mvgjfci89gg ಪುಟ:ಯಕ್ಷಗಾನ ಮಕರಂದ.pdf/೨೪೭ 104 100167 319612 317803 2026-05-13T14:37:22Z Shreesha Sharma 7840 /* Validated */ 319612 proofread-page text/x-wiki <noinclude><pagequality level="4" user="Shreesha Sharma" /></noinclude>{{center|'''ಶಾಸ್ತ್ರಿಗಳ ಬರವಣಿಗೆ'''}} {{gap}}ಶಾಸ್ತ್ರಿಗಳು ಬರವಣಿಗೆಯ ತಡೆಗೆ ವಿಶೇಷ ಗಮನ ಕೊಟ್ಟವರಲ್ಲಿ. ಅದರಲ್ಲೂ ಅವರ ಗದ್ಯಲೇಖನ ತೀರ ವಿರಳ. ಆದರೆ ನಿರೂಪಣಾ ಸಾಮರ್ಥ್ಯ, ವಿಶ್ಲೇಷಣಾ ವಿಚಕ್ಜಣ ತೆಗಳಿಂದ ಅವರಿಗೆ ಒಳ್ಳೆಯ ಬರಹಗಾರನಾಗುವ ಯೋಗ್ಯಶೆ ಇತ್ತೆಂಬುದು ನಿರ್ವಿವಾದ. ಆ ದಿಸೆಯಲ್ಲಿ ವ್ಯವಸಾಯ ಮಾಡಿದ್ದರೆ ಅವರ ನಾಲಿಗೆಯಷ್ಟೇ ಲೇಖನಿಯೂ ಸತ್ವಶಾಲಿ ಯೌಗುತ್ತಿದ್ದಿತೆಂಬುದಕ್ಕೆ ಕೆಳೆಗೆ ಉದ್ಧರಿಸಿದ ಅವರ ಚಿಕ್ಕದೊಂದು ಲೇಖನವೇ ಸತ್ವ. ಸಂಪಾದಕ, {{Left|ಯಕ್ಷಗಾನದಲ್ಲಿ ಶ್ರೀ ಕಿಲ್ಲೆಯವರು.}} ——————————————————————————————————— {{Right|ಶ್ರೀ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು,}} {{gap}}ಶ್ರೀ ದಿವಂಗತ ನಾರಾಯಂಣ ಕಿಲ್ಲೆಯವರಿಗೂ ನನಗೂ ಪ್ರಥಮ ಪರಿಚಯ. ವಾದುದು ಯಕಕ್ಷ್ಣಗಾನ ರುಗದಲ್ಲಿ.. ನಮ್ಮೊಳಗೆ ಅಂದಂ ನಡೆದ ರೀತಿಯ ವಚನ ಘರ್ಷಣೆಯು ಮತ್ತೆಂದೂ ನಡೆದಿಲ್ಲ... ಇದು ಸಾಧಾರಣ 1928ನೆಯ ಇಸವಿ ಯಲ್ಲಿರಬಹುದೆಂದು ನನ್ನ ನೆನಪು, ಶ್ರೀ ಕಿಲ್ಲೆಯವರು ಯಕ್ನಗುನರಂಗಕ್ಕೆ ಪ್ರವೇಶಿಸಿ ಐದಾರು ತಿಂಗಳಾಗುವ ಸಮಯವದು. ಆ ದಿನ "ಶ್ರೀ ಕೃಷ್ಣ ಸಂಧಾನ' ಪ್ರಸಂಗ, {{gap}}ಶ್ರೀ ಕಿಲ್ಲೆಯವರಿಗೂ ನನಗೂ ಯಕ್ಷಗಾನದಲ್ಲಿ ಕೊನೆಯ ಕೂಟವೆಂದರೆ ಕಳೆದ. ಅಕ್ಟೋಬರ್‌ ತಿಂಗಳಲ್ಲಿ ಕಟೀಲಿನ ಹಾಯರ್‌ ಎಲಿಮೆಂಟರಿ ಶಾಲೆಯಲ್ಲಿ, ಅಂದು. ಕೂಡಾ ಕೃಷ್ಣ ಸಂಧಾನವೇ ಪ್ರಸಂಗ, ಅಂತು ನಮ್ಮಿಬ್ಬರ ಕೂಟವು ಕೃಷ್ಣ ಸಂಧಾನ. ದಲ್ಲೇ ಪ್ರಾರಂಭವಾಗಿ ಅದರಲ್ಲೇ ಮುಕ್ತಾಯಂಗೊಂಡುದು ಏಚಿತ್ರ ಘಟನೆ. {{gap}}ಆದರೆ ಆ ಎರಡು ಯಃಕ್ಚ್ರಗಾನ ಕೂಟಗಳ ಪಾಕವು ಮಾತ್ರ ನಮ್ಮ ವಯಸ್ಸಿಗೆ ತಕ್ಕಂತೆ ತೀರ ಭಿನ್ನರುಚಿಯಾಗಿಯೇ ಇತ್ತು, ಮೊದಲನೆಯ ಕೂಟವು ಮಾವಿನ ಕಾಯಿಯ ರಸವನ್ನು ಹೊರಡಿಸಿದ್ದರೆ, ಕೊನೆಯ ಕೂಟವು ಒಳ್ಳೆ ಮಾವಿನ ಹಣ್ಣಿನ ಸವಿಯನ್ನು ಬೀರುತ್ತಿತ್ತು. . ""ಫಲವು ಕಾಲುನುಗಂಣವಾರಿ, ಪಾಕವಶಾತ್‌--ರೂಪ<noinclude></noinclude> fxn6nleuth7vyn8zkkpejecv8wplm4f ಪುಟ:ಯಕ್ಷಗಾನ ಮಕರಂದ.pdf/೨೫೦ 104 100170 319613 319248 2026-05-13T14:37:40Z Shreesha Sharma 7840 /* Validated */ 319613 proofread-page text/x-wiki <noinclude><pagequality level="4" user="Shreesha Sharma" /></noinclude>ಕಲೆ<noinclude></noinclude> kvx99ypxksm7fehnwha0kmq38zoh0pm ಪುಟ:ಯಕ್ಷಗಾನ ಮಕರಂದ.pdf/೨೫೨ 104 100172 319547 319250 2026-05-13T12:16:58Z Shreelatha.Halemane 7642 /* Proofread */ 319547 proofread-page text/x-wiki <noinclude><pagequality level="3" user="Shreelatha.Halemane" /></noinclude>2 ವೇಷಗಳ ಅನುಕರಣೆಯಂತಿ ದ್ಹರೂ, ಈಗಿನ ಸಂಪೂರ್ಣರೂಪ ತಮಿಳುನಾಡಿನ ತೆರ ಕೂತು ವೇಷಗಳಿಗೆ ಹೇಗೆ ಅಷ್ಟು ಸಮೀಪವಾಯಿತೆಂದು ಊಹಿಸುವುದು ಕಷ್ಟ. {{gap}}ದಕ್ಷಿಣ ಕನ್ನಡದ ಬಡಗಣ ಭಾಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಾಣಿ ಸುವ ವ್ಯತ್ಯಾಸ ಇಷ್ಟೊಂದು ಹೆಚ್ಚಿನದಲ್ಲ. {{gap}}ಆದರೆ ಯಕ್ಷಗಾನವೆಂಬುದು ನಮ್ಮೊಂದು ಜಿಲ್ಲೆಗಾಗಲಿ, ಪ್ರಾಂತ್ಯಕ್ಕಾಗಲಿ. ಸೀಮಿತವಾಗಿ ಇರದ ಒಂದು: ಬಯಲಾಟದ ಪ್ರಭೇದ. ಒಂದು ಕಾಲಕ್ಕೆ ಇದರ. ಸಂಗೀತಶೈಲಿ ಕೂಚಿಪುಡಿ ಮತ್ತು ಮೇಲತ್ತೂರುಗಳಂತಹ ವಿದೂರ ಸ್ಥಳಗಳಲ್ಲೂ. ಹಬ್ಬಿದ್ದುಂಟು, . ಕೂಚಿಪುಡಿ ಸಂಪ್ರದಾಯದಲ್ಲಿ ಭಾಗವತ ಹಾಡುಗಳ ಜತೆಗೆ. ಒಂದಿಷ್ಟು ಗದ್ಯವನ್ನೂ ನುಡಿಯುತ್ತಾನಾದರೂ.ಪಾತ್ರಧಾರಿಗಳು ಕುಣಿತ, ಅಭಿನಯ ಗಳಿಂದಲೇ ಪಾತ್ರಪೋಷಣೆ ಮಾಡುತ್ತಾರೆ. ಕಾಲಕ್ರಮದಲ್ಲಿ ಆ ಪ್ರದೇಶದಲ್ಲಿ ಬೆಳೆದ ಕರ್ನಾಟಕಿ ಸಂಗೀತ ಪದ್ಧತಿಯ ಪ್ರಾಬಲ್ಯದಿಂದಾಗಿ ಹಳೆಯ ಗಾನರೂಪ ಅಲ್ಲಿ ಉಳಿದುಕೊಳ್ಳಲಿಲ್ಲ. ದಕ್ಷಿಣ ಕನ್ನಡ ಜಲ್ಲೆಯ ಮಗ್ಗುಲಿನ ಹಾಸನ, ಚಿಕ್ಕಮಗ ಳೂರು ಜಿಲ್ಲೆಗಳಲ್ಲಿ ವ್ಯವಸಾಯಿ ನಾಟಕ ಮಂಡಳಿಗಳ ಪ್ರಭಾವದಿಂದಾಗಿ ಅಲ್ಲಿನ ಹಾಡುಗಾರಿಕೆಯಲ್ಲಿ ಕರ್ನಾಟಕಿ ಸಂಗೀತದ ಪ್ರಭಾವ ಅಧಿಕವಾಗಿ ಕಾಣಿಸತೊಡಗಿತು. ಶಿವಮೊಗ್ಗು ಜಿಲ್ಲೆಯ ಶಿರಾಲಕೊಪ್ಪ, ಶಿಕಾರಿಪುರ ತಾಲೂಕುಗಳಲ್ಲಿ ಈ ತೆರನ ರೂಢಿ ಯಿರುವ ಭಾಗವತಿಕೆಯನ್ನು ನಾವು ಕೇಳುತ್ತೇವೆ. {{gap}}ವಿಜಯನಗರದ ದೊರೆಗಳ ಕಾಲದಲ್ಲೂ, ಯಕ್ಷಗಾನ'ವನ್ನು ಮುಖ್ಯವಾಗಿ ಇರಿಸಿಕೊಂಡ ಬಯಲಾಟದ ಪದ್ಧತಿ ಬಳ್ಳಾರಿ ಜಿಲ್ಲೆಯಲ್ಲೂ ರೂಢಿಯಕೆಯಲ್ಲಿತ್ತು. ಬಳ್ಳಾರಿ ನಗರಕ್ಕಿಂತ ಉತ್ತರದಲ್ಲಿರುವ ಕುರುಗೋಡು ಸೀಮೆಯಲ್ಲಿ ತಾಳಮದ್ದಳೆಯ ರೂಪದಲ್ಲಿ ಅದು ಪ್ರಚಾರದಲ್ಲಿತ್ತೆಂಬುದಕ್ಕಿ ಕುರುಗೋಡು ಸೋಮಸಮುದ್ರದ ಒಂದು ಶಾಸನ, 1556ರದ್ದು, ದಾಖಲೆ ಒದಗಿಸುತ್ತದೆ. ಬಳ್ಳಾರಿ ಜಿಲ್ಲೆಯ ಹರಪನ. ಹಳ್ಳೀ ಹೂವಿನ ಹಡಗಲಿ ತಾಲೂಕುಗಳಲ್ಲಿ ನಮ್ಮ, ಜಿಲ್ಲೆಯಲ್ಲಿರುವಷ್ಟುಲ್ಲದಿದ್ದರೂ, ತಾಳ ಮದ್ದಲೆ ಪದ್ಧತಿ ರೂಢಿಯಲ್ಲಿದೆ, ಬಯಲಾಟ ಅಲ್ಲಿ ಇದ್ದಿಲ್ಲ ಎನ್ನುವಂತಿಲ್ಲ. ಏಕೆಂದರೆ 'ಮೂಡೆಲಪಾಯ' ಎಂದು ಕರೆಯುವ ಒಂದರಡು ಆಟದ ಪ್ರಕಾರಗಳು ಬಿಜಾಪುರ ಜಿಲ್ಲೆಯಲ್ಲೂ, ಸಮೀಪದ ರಾಯಚೂರು ಜಿಲ್ಲೆಯಲ್ಲೂ ಉಳಿದುಕೊಂಡಿವೆ. ಅದೇ ರೀತಿ "ದೊಡ್ಡಾ ಟ', .ಸಣ್ಣಾಟ' ಎಂಬ ರೂಪಗಳಲ್ಲಿ ಯಕ್ಷಗಾನ ಪ್ರಭೇದಗಳು ಧಾರವಾಡ ಜಿಲ್ಲೆಯ ಹಲವಾರು ತಾಲೂಕುಗಳಲ್ಲಿ ಇಂದಿಗೂ" ಉಳಿದುಕೊಂಡಿವೆ. ಯಾವುದೇ ಸಂಪ್ರದಾಯ ತಲೆಮಾರಿಂದ ತಲೆಮಾರಿಗೆ ನಿರ್ದಿಷ್ಟ ರೀತಿಯಲ್ಲಿ ಉಳಿಯ ಬೇಕಾದರೆ, ಆ ವ್ಯವಸಾಯವನ್ನು ನಿರ್ವಹಿಸುವವರ ಜೀವನದ. ಮುಖ್ಯ ವೃತ್ತಿಯೇ ಅದಾಗಿರಬೇಕು. ' ಅದು ಕೇವಲ" ಉತ್ಸಾಹ ಬಂದಾಗ ಆಡುವ, ಉಳಿದಾಗ ಮರೆ ಯುವ ಹವ್ಯಾಸವಾದಲ್ಲಿ ಯಾವುದೇ ಸಂಪ್ರದಾಯದ ಗುಣ-ಲಕ್ಷ್ಮಣಗಳು ಮಂದು.<noinclude></noinclude> gjs1ck536r0opkfr8rozx3f2cftr1fl 319614 319547 2026-05-13T14:37:54Z Shreesha Sharma 7840 /* Validated */ 319614 proofread-page text/x-wiki <noinclude><pagequality level="4" user="Shreesha Sharma" /></noinclude>2 ವೇಷಗಳ ಅನುಕರಣೆಯಂತಿ ದ್ಹರೂ, ಈಗಿನ ಸಂಪೂರ್ಣರೂಪ ತಮಿಳುನಾಡಿನ ತೆರ ಕೂತು ವೇಷಗಳಿಗೆ ಹೇಗೆ ಅಷ್ಟು ಸಮೀಪವಾಯಿತೆಂದು ಊಹಿಸುವುದು ಕಷ್ಟ. {{gap}}ದಕ್ಷಿಣ ಕನ್ನಡದ ಬಡಗಣ ಭಾಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಾಣಿ ಸುವ ವ್ಯತ್ಯಾಸ ಇಷ್ಟೊಂದು ಹೆಚ್ಚಿನದಲ್ಲ. {{gap}}ಆದರೆ ಯಕ್ಷಗಾನವೆಂಬುದು ನಮ್ಮೊಂದು ಜಿಲ್ಲೆಗಾಗಲಿ, ಪ್ರಾಂತ್ಯಕ್ಕಾಗಲಿ. ಸೀಮಿತವಾಗಿ ಇರದ ಒಂದು: ಬಯಲಾಟದ ಪ್ರಭೇದ. ಒಂದು ಕಾಲಕ್ಕೆ ಇದರ. ಸಂಗೀತಶೈಲಿ ಕೂಚಿಪುಡಿ ಮತ್ತು ಮೇಲತ್ತೂರುಗಳಂತಹ ವಿದೂರ ಸ್ಥಳಗಳಲ್ಲೂ. ಹಬ್ಬಿದ್ದುಂಟು, . ಕೂಚಿಪುಡಿ ಸಂಪ್ರದಾಯದಲ್ಲಿ ಭಾಗವತ ಹಾಡುಗಳ ಜತೆಗೆ. ಒಂದಿಷ್ಟು ಗದ್ಯವನ್ನೂ ನುಡಿಯುತ್ತಾನಾದರೂ.ಪಾತ್ರಧಾರಿಗಳು ಕುಣಿತ, ಅಭಿನಯ ಗಳಿಂದಲೇ ಪಾತ್ರಪೋಷಣೆ ಮಾಡುತ್ತಾರೆ. ಕಾಲಕ್ರಮದಲ್ಲಿ ಆ ಪ್ರದೇಶದಲ್ಲಿ ಬೆಳೆದ ಕರ್ನಾಟಕಿ ಸಂಗೀತ ಪದ್ಧತಿಯ ಪ್ರಾಬಲ್ಯದಿಂದಾಗಿ ಹಳೆಯ ಗಾನರೂಪ ಅಲ್ಲಿ ಉಳಿದುಕೊಳ್ಳಲಿಲ್ಲ. ದಕ್ಷಿಣ ಕನ್ನಡ ಜಲ್ಲೆಯ ಮಗ್ಗುಲಿನ ಹಾಸನ, ಚಿಕ್ಕಮಗ ಳೂರು ಜಿಲ್ಲೆಗಳಲ್ಲಿ ವ್ಯವಸಾಯಿ ನಾಟಕ ಮಂಡಳಿಗಳ ಪ್ರಭಾವದಿಂದಾಗಿ ಅಲ್ಲಿನ ಹಾಡುಗಾರಿಕೆಯಲ್ಲಿ ಕರ್ನಾಟಕಿ ಸಂಗೀತದ ಪ್ರಭಾವ ಅಧಿಕವಾಗಿ ಕಾಣಿಸತೊಡಗಿತು. ಶಿವಮೊಗ್ಗು ಜಿಲ್ಲೆಯ ಶಿರಾಲಕೊಪ್ಪ, ಶಿಕಾರಿಪುರ ತಾಲೂಕುಗಳಲ್ಲಿ ಈ ತೆರನ ರೂಢಿ ಯಿರುವ ಭಾಗವತಿಕೆಯನ್ನು ನಾವು ಕೇಳುತ್ತೇವೆ. {{gap}}ವಿಜಯನಗರದ ದೊರೆಗಳ ಕಾಲದಲ್ಲೂ, ಯಕ್ಷಗಾನ'ವನ್ನು ಮುಖ್ಯವಾಗಿ ಇರಿಸಿಕೊಂಡ ಬಯಲಾಟದ ಪದ್ಧತಿ ಬಳ್ಳಾರಿ ಜಿಲ್ಲೆಯಲ್ಲೂ ರೂಢಿಯಕೆಯಲ್ಲಿತ್ತು. ಬಳ್ಳಾರಿ ನಗರಕ್ಕಿಂತ ಉತ್ತರದಲ್ಲಿರುವ ಕುರುಗೋಡು ಸೀಮೆಯಲ್ಲಿ ತಾಳಮದ್ದಳೆಯ ರೂಪದಲ್ಲಿ ಅದು ಪ್ರಚಾರದಲ್ಲಿತ್ತೆಂಬುದಕ್ಕಿ ಕುರುಗೋಡು ಸೋಮಸಮುದ್ರದ ಒಂದು ಶಾಸನ, 1556ರದ್ದು, ದಾಖಲೆ ಒದಗಿಸುತ್ತದೆ. ಬಳ್ಳಾರಿ ಜಿಲ್ಲೆಯ ಹರಪನ. ಹಳ್ಳೀ ಹೂವಿನ ಹಡಗಲಿ ತಾಲೂಕುಗಳಲ್ಲಿ ನಮ್ಮ, ಜಿಲ್ಲೆಯಲ್ಲಿರುವಷ್ಟುಲ್ಲದಿದ್ದರೂ, ತಾಳ ಮದ್ದಲೆ ಪದ್ಧತಿ ರೂಢಿಯಲ್ಲಿದೆ, ಬಯಲಾಟ ಅಲ್ಲಿ ಇದ್ದಿಲ್ಲ ಎನ್ನುವಂತಿಲ್ಲ. ಏಕೆಂದರೆ 'ಮೂಡೆಲಪಾಯ' ಎಂದು ಕರೆಯುವ ಒಂದರಡು ಆಟದ ಪ್ರಕಾರಗಳು ಬಿಜಾಪುರ ಜಿಲ್ಲೆಯಲ್ಲೂ, ಸಮೀಪದ ರಾಯಚೂರು ಜಿಲ್ಲೆಯಲ್ಲೂ ಉಳಿದುಕೊಂಡಿವೆ. ಅದೇ ರೀತಿ "ದೊಡ್ಡಾ ಟ', .ಸಣ್ಣಾಟ' ಎಂಬ ರೂಪಗಳಲ್ಲಿ ಯಕ್ಷಗಾನ ಪ್ರಭೇದಗಳು ಧಾರವಾಡ ಜಿಲ್ಲೆಯ ಹಲವಾರು ತಾಲೂಕುಗಳಲ್ಲಿ ಇಂದಿಗೂ" ಉಳಿದುಕೊಂಡಿವೆ. ಯಾವುದೇ ಸಂಪ್ರದಾಯ ತಲೆಮಾರಿಂದ ತಲೆಮಾರಿಗೆ ನಿರ್ದಿಷ್ಟ ರೀತಿಯಲ್ಲಿ ಉಳಿಯ ಬೇಕಾದರೆ, ಆ ವ್ಯವಸಾಯವನ್ನು ನಿರ್ವಹಿಸುವವರ ಜೀವನದ. ಮುಖ್ಯ ವೃತ್ತಿಯೇ ಅದಾಗಿರಬೇಕು. ' ಅದು ಕೇವಲ" ಉತ್ಸಾಹ ಬಂದಾಗ ಆಡುವ, ಉಳಿದಾಗ ಮರೆ ಯುವ ಹವ್ಯಾಸವಾದಲ್ಲಿ ಯಾವುದೇ ಸಂಪ್ರದಾಯದ ಗುಣ-ಲಕ್ಷ್ಮಣಗಳು ಮಂದು.<noinclude></noinclude> awhjwr4goetgqlwzfo0xsnyxtpmb0ct ಪುಟ:ಯಕ್ಷಗಾನ ಮಕರಂದ.pdf/೨೫೩ 104 100173 319556 281792 2026-05-13T12:41:42Z Shreelatha.Halemane 7642 /* Proofread */ 319556 proofread-page text/x-wiki <noinclude><pagequality level="3" user="Shreelatha.Halemane" /></noinclude>{{Right|3}} ವರಿಯಲಾರವು. ಧಾರವಾಡ, ಹಾಸನ, ಬಳ್ಳಾರಿ ಜಿಲ್ಲೆಗಳ ಪಾಡು ಅಂಥದು: ಧಾರವಾಡ ಜಿಲ್ಲೆ. ನಾಲ್ಯು ಕಡೆಗಳಲ್ಲಿ "ದೊಡ್ಡಾಟ, "ಸಣ್ಣಾಟ'ಗಳನ್ನು ಆಡುತ್ತಾರೆ.ಸುತ್ತಲೂ ಕುಳಿತುಕೊಳ್ಳುವ ಎಲ್ಲರಿಗೂ ಕಾಣಿಸುವಂತೆ, ಎತ್ತರದ ಆಟ್ಟವನ್ನು ಕಟ್ಟಿ ಅದರ ಮೇಲೆ ಆಡುವ ಸಂಪ್ರದಾಯವನ್ನು ಅವರು (ಅಟ್ಟದ ಆಟ ಎಂದು ಕರೆಯುತ್ತಾರೆ. ಅಲ್ಲಿ ಆಡುವ ಹೆಚ್ಚಿನ ಪ್ರಸಂಗಗಳು ನಮ್ಮಲ್ಲಿ ಹಿಂದೆ. ರೂಢಿಯಲ್ಲಿದ್ದುವೇ. ಮಲೆನಾಡಿನವರೇ ಅವನ್ನು ಬರೆದದ್ದು. ಆದರೆ ಆಗಾಗ ಕಡಿದುಹೋಗುತ್ತಿದ್ದ ಪರಂಪರೆಯಿಂದಾಗಿ ಮರೆತುಹೋದ "ಹಾಡುಗಳ ಬದಲಿಗೆ ನಡುನಡುವೆ ತುಂಬಿಸಿಕೊಂಡ ಹಾಡುಗಳು ಬೇಕಷ್ಟಿವೆ. {{gap}}ಭಾಗವತ, ಮೃದಂಗವಾದಕ ಮತ್ತು ಇಬ್ಬರು ಮೂವರು ತಾಳಗಾರರು ರಂಗ ಸ್ಥಳದ ನಿರ್ದೇಶನ ವಹಿಸುತ್ತಿದ್ದು ಕಥಾನಕದ ಪಾತ್ರಗಳೆಲ್ಲವೂ ವೇಷಭೂಷಣರಾಗಿ, ರಂಗಕ್ಕೆ ಬರುವ ಕ್ರಮವನ್ನು" “ದೊಡ್ಡಾಟ ಎಂದು ಕರೆಯುತ್ತಾರೆ. ಮುಖ್ಯ ಪಾತ್ರಗಳು ಮಾತ್ರವೇ ವೇಷಭೂಷಣಗಳಿೂಡನೆ ಬರುವ ಉಳಿದುದನ್ನು ವೇಷವಿಲ್ಲದೆಯೇ ನಿತ್ಯ ಉಡುಗೆಯಲ್ಲೆ ತಾಳಧಾರಿಯೂ ಭಾಗವತನೂ ತೋರಿಸುವ ಆಟದ ಕ್ರಮವನ್ನು ಅಲ್ಲಿನವರು ಸಣ್ಣಾಟವೆಂದು ಕರೆಯುತಾರೆ. {{gap}}ಆ ಪ್ರದೇಶದ ಭಾಗವತಿಕೆಯ ಕ್ರಮದಲ್ಲಿ ಇನ್ನೊಂದು ವ್ಯತ್ಯಾಸವಿದೆ. ಹಾಡು ವವರು ಭಾಗವತನೊಬ್ಬನೇ ಅಲ್ಲ, ಹಿಮ್ಮೇಳದ ಇಬ್ಬರು ಮೂವರು ಅವನ ಜತೆ ಯಲ್ಲೇ ಹಾಡುತ್ತಾರೆ. ಸಾಲದುದಕ್ಕೆ-ಹಿಮ್ಮೇಳದಲ್ಲಿ ಹಾರ್ಮೋನಿಯಮ್‌ ವಾದ್ಯ ವಿದ್ದು, ಅದನ್ನು ನುಡಿಸುವಾತನು ಗಟ್ಟಿಯಾಗಿ ಹಾಡುತ್ತಾನೆ. ವಾದ್ಯವನ್ನು ಆತ ನುಡಿಸುತ್ತಾನೆ. ಎಲ್ಲರೂ ಕೂಡಿ ತಮ್ಮ ಕಂಠಗಳ ಎಟುಕ ಎಲ್ಲಿಯ ತನಕ ಸಾಗು. ತ್ತದೋ ಅಲ್ಲಿಯ ತನಕವೂ ಒದರುತ್ತಾರೆ ಎಂದರೂ ತಪ್ಪಿಲ್ಲ. ಸಾಮಾನ್ಯವಾಗಿ ಹಾರ್ಮೋನಿಯಮ್‌ ವಾದಕನ ಕಂಠ ತಾರಕಸ್ಥಾಯಿಯ ' ಕೊನೆಯ ಸ್ವರವನ್ನು ಎಟುಕುವಂತಿರಂತ್ತದೆ.. ಈ ಪ್ರದೇಶದಲ್ಲಿ ವ್ಯಶೆಸಾಯಿ ನಾಟಕದ ರಂಗಭೂವಿ ಹೆಚ್ಚಾಗಿ ಇದ್ದುದರಿಂದ, ಹಾರ್ಮೋನಿಯರ್ಮ ಸ ಗಾನ ಹಿಮ್ಮೇ ಳವನ್ನು ಸೇರಿ. ಕೊಂಡಿತು. . ' ಅಲ್ಲದೆ, ಆಲಾಪದ ಕ್ರಮದಲ್ಲಿ ಹಿಂದುಸ್ಥಾನಿ ರೀತಿಯೂ. ಸೇರಿ ಕೊಂಡಿತು... ಹಾರ್ಮೋನಿಯಮ್‌ ಜತೆಯಲ್ಲೇ ಹಿಮ್ಮೇಳಕ್ಕೆ ಸನಾಯಿಯಂಥ ವಾದ್ಯವನ್ನು (ಮುಖವೀಣೆ) ನುಡಿಸುವ ಒಬ್ಬ ವಾದಕನೂ ಸೇರುತ್ತಾನೆ. ಶ್ರುತಿ ಶುದ್ಧವಿಲ್ಲದೆಯೂ. ಆತ ರಾಗಾಲಾಪಗಳ ಗದ್ದಲವನ್ನು ಹೆಚ್ಚಿಸುತ್ತಾನೆ. ಈ ತಾಳ: ವಾದ್ಯಕಾರರ ಉತ್ಸಾಹ ಮಾತ್ರ ಹೇಳಿ ತೀರದ್ದು. . ರಂಗಭೂಮಿಯಲ್ಲಿ ತಾವೊಬ್ಬರೇ ಎಂಬ ಮೈಮರೆವು ಅವರಿಗೆ. ರಂಗಸ್ಥಳಕ್ಕೆ , ಬರುವ ಪಾತ್ರಗಳು ಕೆಲವೇ ಬಗೆಯ ಮಾಮೂಲಿ ಕುಣಿತಗಳನ್ನು ಕುಣಿಯುತ್ತಾರೆ, ಕುಣಿತ ಮುಗಿಯುತ್ತಲೇ ತಮ್ಮ ಮಾತುಗಳನ್ನು ನಾಟಕ ಕಂಪೆನಿಯ?<noinclude></noinclude> 6qlzp2ra3zxtp9yyujwawmauzor3ff7 319615 319556 2026-05-13T14:38:05Z Shreesha Sharma 7840 /* Validated */ 319615 proofread-page text/x-wiki <noinclude><pagequality level="4" user="Shreesha Sharma" /></noinclude>{{Right|3}} ವರಿಯಲಾರವು. ಧಾರವಾಡ, ಹಾಸನ, ಬಳ್ಳಾರಿ ಜಿಲ್ಲೆಗಳ ಪಾಡು ಅಂಥದು: ಧಾರವಾಡ ಜಿಲ್ಲೆ. ನಾಲ್ಯು ಕಡೆಗಳಲ್ಲಿ "ದೊಡ್ಡಾಟ, "ಸಣ್ಣಾಟ'ಗಳನ್ನು ಆಡುತ್ತಾರೆ.ಸುತ್ತಲೂ ಕುಳಿತುಕೊಳ್ಳುವ ಎಲ್ಲರಿಗೂ ಕಾಣಿಸುವಂತೆ, ಎತ್ತರದ ಆಟ್ಟವನ್ನು ಕಟ್ಟಿ ಅದರ ಮೇಲೆ ಆಡುವ ಸಂಪ್ರದಾಯವನ್ನು ಅವರು (ಅಟ್ಟದ ಆಟ ಎಂದು ಕರೆಯುತ್ತಾರೆ. ಅಲ್ಲಿ ಆಡುವ ಹೆಚ್ಚಿನ ಪ್ರಸಂಗಗಳು ನಮ್ಮಲ್ಲಿ ಹಿಂದೆ. ರೂಢಿಯಲ್ಲಿದ್ದುವೇ. ಮಲೆನಾಡಿನವರೇ ಅವನ್ನು ಬರೆದದ್ದು. ಆದರೆ ಆಗಾಗ ಕಡಿದುಹೋಗುತ್ತಿದ್ದ ಪರಂಪರೆಯಿಂದಾಗಿ ಮರೆತುಹೋದ "ಹಾಡುಗಳ ಬದಲಿಗೆ ನಡುನಡುವೆ ತುಂಬಿಸಿಕೊಂಡ ಹಾಡುಗಳು ಬೇಕಷ್ಟಿವೆ. {{gap}}ಭಾಗವತ, ಮೃದಂಗವಾದಕ ಮತ್ತು ಇಬ್ಬರು ಮೂವರು ತಾಳಗಾರರು ರಂಗ ಸ್ಥಳದ ನಿರ್ದೇಶನ ವಹಿಸುತ್ತಿದ್ದು ಕಥಾನಕದ ಪಾತ್ರಗಳೆಲ್ಲವೂ ವೇಷಭೂಷಣರಾಗಿ, ರಂಗಕ್ಕೆ ಬರುವ ಕ್ರಮವನ್ನು" “ದೊಡ್ಡಾಟ ಎಂದು ಕರೆಯುತ್ತಾರೆ. ಮುಖ್ಯ ಪಾತ್ರಗಳು ಮಾತ್ರವೇ ವೇಷಭೂಷಣಗಳಿೂಡನೆ ಬರುವ ಉಳಿದುದನ್ನು ವೇಷವಿಲ್ಲದೆಯೇ ನಿತ್ಯ ಉಡುಗೆಯಲ್ಲೆ ತಾಳಧಾರಿಯೂ ಭಾಗವತನೂ ತೋರಿಸುವ ಆಟದ ಕ್ರಮವನ್ನು ಅಲ್ಲಿನವರು ಸಣ್ಣಾಟವೆಂದು ಕರೆಯುತಾರೆ. {{gap}}ಆ ಪ್ರದೇಶದ ಭಾಗವತಿಕೆಯ ಕ್ರಮದಲ್ಲಿ ಇನ್ನೊಂದು ವ್ಯತ್ಯಾಸವಿದೆ. ಹಾಡು ವವರು ಭಾಗವತನೊಬ್ಬನೇ ಅಲ್ಲ, ಹಿಮ್ಮೇಳದ ಇಬ್ಬರು ಮೂವರು ಅವನ ಜತೆ ಯಲ್ಲೇ ಹಾಡುತ್ತಾರೆ. ಸಾಲದುದಕ್ಕೆ-ಹಿಮ್ಮೇಳದಲ್ಲಿ ಹಾರ್ಮೋನಿಯಮ್‌ ವಾದ್ಯ ವಿದ್ದು, ಅದನ್ನು ನುಡಿಸುವಾತನು ಗಟ್ಟಿಯಾಗಿ ಹಾಡುತ್ತಾನೆ. ವಾದ್ಯವನ್ನು ಆತ ನುಡಿಸುತ್ತಾನೆ. ಎಲ್ಲರೂ ಕೂಡಿ ತಮ್ಮ ಕಂಠಗಳ ಎಟುಕ ಎಲ್ಲಿಯ ತನಕ ಸಾಗು. ತ್ತದೋ ಅಲ್ಲಿಯ ತನಕವೂ ಒದರುತ್ತಾರೆ ಎಂದರೂ ತಪ್ಪಿಲ್ಲ. ಸಾಮಾನ್ಯವಾಗಿ ಹಾರ್ಮೋನಿಯಮ್‌ ವಾದಕನ ಕಂಠ ತಾರಕಸ್ಥಾಯಿಯ ' ಕೊನೆಯ ಸ್ವರವನ್ನು ಎಟುಕುವಂತಿರಂತ್ತದೆ.. ಈ ಪ್ರದೇಶದಲ್ಲಿ ವ್ಯಶೆಸಾಯಿ ನಾಟಕದ ರಂಗಭೂವಿ ಹೆಚ್ಚಾಗಿ ಇದ್ದುದರಿಂದ, ಹಾರ್ಮೋನಿಯರ್ಮ ಸ ಗಾನ ಹಿಮ್ಮೇ ಳವನ್ನು ಸೇರಿ. ಕೊಂಡಿತು. . ' ಅಲ್ಲದೆ, ಆಲಾಪದ ಕ್ರಮದಲ್ಲಿ ಹಿಂದುಸ್ಥಾನಿ ರೀತಿಯೂ. ಸೇರಿ ಕೊಂಡಿತು... ಹಾರ್ಮೋನಿಯಮ್‌ ಜತೆಯಲ್ಲೇ ಹಿಮ್ಮೇಳಕ್ಕೆ ಸನಾಯಿಯಂಥ ವಾದ್ಯವನ್ನು (ಮುಖವೀಣೆ) ನುಡಿಸುವ ಒಬ್ಬ ವಾದಕನೂ ಸೇರುತ್ತಾನೆ. ಶ್ರುತಿ ಶುದ್ಧವಿಲ್ಲದೆಯೂ. ಆತ ರಾಗಾಲಾಪಗಳ ಗದ್ದಲವನ್ನು ಹೆಚ್ಚಿಸುತ್ತಾನೆ. ಈ ತಾಳ: ವಾದ್ಯಕಾರರ ಉತ್ಸಾಹ ಮಾತ್ರ ಹೇಳಿ ತೀರದ್ದು. . ರಂಗಭೂಮಿಯಲ್ಲಿ ತಾವೊಬ್ಬರೇ ಎಂಬ ಮೈಮರೆವು ಅವರಿಗೆ. ರಂಗಸ್ಥಳಕ್ಕೆ , ಬರುವ ಪಾತ್ರಗಳು ಕೆಲವೇ ಬಗೆಯ ಮಾಮೂಲಿ ಕುಣಿತಗಳನ್ನು ಕುಣಿಯುತ್ತಾರೆ, ಕುಣಿತ ಮುಗಿಯುತ್ತಲೇ ತಮ್ಮ ಮಾತುಗಳನ್ನು ನಾಟಕ ಕಂಪೆನಿಯ?<noinclude></noinclude> 5fttpr4iylqg4ah51dvqhu0towvc7cw ಪುಟ:ಯಕ್ಷಗಾನ ಮಕರಂದ.pdf/೨೫೪ 104 100174 319557 281793 2026-05-13T13:12:47Z Shreelatha.Halemane 7642 /* Proofread */ 319557 proofread-page text/x-wiki <noinclude><pagequality level="3" user="Shreelatha.Halemane" /></noinclude>ಬಂಧುಗಳಂತೆ, ಕಂಠಪಾಠ ಕಲಿತು ಆಡುತ್ತಾರೆ. ಹೀಗೆ ಅವರಿಗೆ ಮಾತುಗಳನ್ನು ಬರೆದುಕೊಡುವ ಪಂಡಿತರೂ ಇದ್ದಾರೆ. . ಆ ಗದ್ಯದಲ್ಲಿ ಅಸಂಬದ್ಧ ವೆನಿಸುವ ಮಟ್ಟಕ್ಕೂ ಹೋಗುವಷ್ಟು ಮಾತುಗಳೆ ಚಮತ್ಕ್ಯತಿ ಕಾಣಿಸುತ್ತದೆ. * ಎಷ್ಟೋ ಬಾರಿ ವ್ಯವಸಾಯಿ ನಾಟಕ ಕಂಪಿನಿಗಳವರಿಂದಲೇ ಬೇಷಭೂಷಣಗಳನ್ನು ಇವರು. ಎರವಲು : ತರುವುದರಿಂದ, ವೇಷಭೂಷಣಗಳ. ವಿಚಾರದಲ್ಲಿ ನಮ್ಮಲ್ಲಿಯಷ್ಟು. ನಿರ್ದಿಷ್ಟ ಸಂಪ್ರದಾಯ ಬೆಳೆದು ಬಂದಿಲ್ಲ. ಅಲ್ಲಿ ಈ ಬಯಲಾಟಗಳನ್ನು ಅಪೂರ್ವ ಕ್ಕೊಮ್ಮೆ ಆಡುವುದಾದರೂ ಕೂಡ, ಅನುಕೂಲವುಳ್ಳವರು ಶೋಕಿಗಾಗಿ ಬೇಕಷ್ಟು ಹಣ ವ್ಯಯಿಸಿ, ಭರ್ಜರಿ ಡ್ರೆಸ್ಸುಗಳನ್ನು ಹೊಲಿಸಿ ರಂಗಸ್ಥಳದಲ್ಲಿ ಮೆರಸುತ್ತಾರೆ. {{gap}}ಸಣ್ಣಾಟಗಳು ಇದಕ್ಕಿಂತ ಹೆಚ್ಚಿಗೆ ಸಂಪ್ರದಾಯ ಉಳಿಸಿಕೊಂಡ ರೀತಿಗಳಾಗಿ ಕಾಣಿಸುತ್ತವೆ. 1926-37ರಲ್ಲಿ ನಾನು ಧಾರವಾಡದಲ್ಲಿ ಕಂಡೊಂದು ಸಣ್ಣಾಟ, ಆ. ಕಡೆ ಪ್ರಸಿದ್ಧಿಗೆ ಬಂದಿದ್ದ “ಕೃಷ್ಣ ಪಾರಿಜಾತ? ಆಟವಾಗಿತ್ತು. ಅದರ ನಾಲ್ಕಾರು. ಚಾಲುಗಳು ಇನ್ನೂ ನನ್ನ ನೆನಪನಲ್ಲಿವೆ. ಅವು ನಮ್ಮ ಯಕ್ಷಗಾನ ಹಾಡುಗಳಿಗೆ ಸಾಕಷ್ಟು ಸಮೀಪವಾಗಿದ್ದವು. ಈಗ ಹಾಗೆ ಉಳಿದಿಲ್ಲ." ಈಗ ಹೆಚ್ಚಾಗಿ ಮರಾಠಿ. ಧಾಟಿಗಳನ್ನೇ ಬಳಸುತ್ತಿದ್ದಾರೆ. ಇಂಡಿ, ಸಾಲೊಟಗ್ಗಿ ಜಮಖಂಡಿ, ಬೀಬಿ ಇಂಗಳಿಗೆ. ಯಂಥ ಊರುಗಳಲ್ಲಿ ಈ ಪಾರಿಜಾತ ಆಟ ಆಡುವ ಸಂಪ್ರದಾಯ ಉಳಿದಿದೆ... ಇವು. ಗಳ ವೈಶಿಷ್ಟ್ಯ ಒಂದು ಪ್ರತ್ಯೇಕ ತೆರನದು. ಇವರ ಆಟಗಳು ಕೃಷ್ಣ, ರುಕ್ಮಿಣಿ, ಸತ್ಯಭಾಮೆ ತಪ್ಪಿದಲ್ಲಿ ರಾಧೆಗೆ ಸೀಮಿತವಾದವು. ಈ ಪಾತ್ರಗಳಷ್ಟೇ ವೇಷಭೂಷಣ ಗಳಲ್ಲಿ ಬರುತ್ತವೆ... ಭಾಗವತ ಹಾಡನ್ನು ಎತ್ತಿಕೊಟ್ಟ ಬಳಿಕ ಪಾತ್ರಧಾರಿಗಳೇ ಹಾಡನ್ನು ಸುಪೂರ್ಣವಾಗಿ ಮುಂದುವರಿಸುತ್ತಾರೆ... ಆವರ. ಕೊರಳು ತಾರಕಕ್ಕೆ ಎಟುಕುವ ಕೊರಳು. . ಹೀಗಾಗಿ ಪಾತ್ರಧಾರಿಗಳೊಳಗೂ ಭಾಗವತನೊಳಗೂ ಆಲಾ ಪನದ ಸ್ಪರ್ಧೆ ನಡೆಯುತ್ತದೆ. ಕೆಲವರಿಗಂತೂ ಒಳ್ಳೆಯ ಶಾರೀರ ಇರುವುದನ್ನು ಕಾಣಬಹುದು, ಈ ಪಾತ್ರಗಳು ಹಾಡುತ್ತಾ ನಡುನಡುವೆ ತೀವ್ರ ಹೆಜ್ಜೆಗಳನ್ನು ಹಾಕುತ್ತಾ ಅಲ್ಲೊಮ್ಮೆ ಇಲ್ಲೊಮ್ಮೆ ಎತ್ತರಕ್ಕೆ ಜಿಗಿಯುತ್ತಾ, ನೃತ್ಯದ ಅಂಶವನ್ನಲ್ಲ ನೃತ್ತದ ಅಂಶವನ್ನು ಪ್ರದರ್ಶಿಸು್ತ್ತಾರೆ. ಹಾಡುಗಾರಿಕೆ' ಕುಣಿತ ಮುಗಿದೊಡನೆಯೇ ಇಬ್ಬರು ತಾಳಗಾರರ ತಾಳದ. ಚಮತ್ಕ್ರುತಿ ಸಾಕಷ್ಟು ಕಾಲ ನಡೆಯುತ್ತದೆ. ಅನಂತರ ಪಾತ್ರಧಾರಿಗಳು ಕಂಠಪಾಠ ಕಲಿತ ಮಾತುಗಳಿಂದ ಸಂಭಾಷಣೆ ನಡೆಸುತ್ತಾರೆ. ಇವರ ವೇಷ ಭೂಷಣಗಳು ಕಂಪೆನಿ ನಾಟಕಗಳ ಪಾತ್ರಗಳಂತೆಯೇ ಇರುತ್ತವೆ. ಕೆಲ ಕೆಲವರಲ್ಲಿ ಹಾಡುವ ಕಂಠ ಮಧುರವಾಗಿಯೂ, ಶಿಸ್ತುಬದ್ಧ ವಾಗಿಯೂ ಇರುವುದನ್ನು ಕಾಣಬಹುದು. ವೇಷಧಾರಿಗಳು ನಮ್ಮಲ್ಲಿಯಂತೆ ಭಾಗವತನೊಡನೆ ತಮ್ಮ ಆತ್ಮ ಕಥಾನಕ ಅಥವಾ ಮನೋಗತ ತೋಡಿಕೊಳ್ಳುವುದಿಲ್ಲ. ಎಲ್ಲಕ್ಕೂ ಒಬ್ಬಳು ದೂತಿ. ಬೇಕಾಗುತ್ತದೆ. ನಿತ್ಯದ ಸಾಮಾಜಿಕ ಉಡುಗೆಯಲ್ಲಿ ಬರುವ ಒಬ್ಬ ಈ ತಾಳಗಾರ ತಾನೇ<noinclude></noinclude> 9fscf8c8b3yjlyycdirc8ylrk5lzep5 319616 319557 2026-05-13T14:38:17Z Shreesha Sharma 7840 /* Validated */ 319616 proofread-page text/x-wiki <noinclude><pagequality level="4" user="Shreesha Sharma" /></noinclude>ಬಂಧುಗಳಂತೆ, ಕಂಠಪಾಠ ಕಲಿತು ಆಡುತ್ತಾರೆ. ಹೀಗೆ ಅವರಿಗೆ ಮಾತುಗಳನ್ನು ಬರೆದುಕೊಡುವ ಪಂಡಿತರೂ ಇದ್ದಾರೆ. . ಆ ಗದ್ಯದಲ್ಲಿ ಅಸಂಬದ್ಧ ವೆನಿಸುವ ಮಟ್ಟಕ್ಕೂ ಹೋಗುವಷ್ಟು ಮಾತುಗಳೆ ಚಮತ್ಕ್ಯತಿ ಕಾಣಿಸುತ್ತದೆ. * ಎಷ್ಟೋ ಬಾರಿ ವ್ಯವಸಾಯಿ ನಾಟಕ ಕಂಪಿನಿಗಳವರಿಂದಲೇ ಬೇಷಭೂಷಣಗಳನ್ನು ಇವರು. ಎರವಲು : ತರುವುದರಿಂದ, ವೇಷಭೂಷಣಗಳ. ವಿಚಾರದಲ್ಲಿ ನಮ್ಮಲ್ಲಿಯಷ್ಟು. ನಿರ್ದಿಷ್ಟ ಸಂಪ್ರದಾಯ ಬೆಳೆದು ಬಂದಿಲ್ಲ. ಅಲ್ಲಿ ಈ ಬಯಲಾಟಗಳನ್ನು ಅಪೂರ್ವ ಕ್ಕೊಮ್ಮೆ ಆಡುವುದಾದರೂ ಕೂಡ, ಅನುಕೂಲವುಳ್ಳವರು ಶೋಕಿಗಾಗಿ ಬೇಕಷ್ಟು ಹಣ ವ್ಯಯಿಸಿ, ಭರ್ಜರಿ ಡ್ರೆಸ್ಸುಗಳನ್ನು ಹೊಲಿಸಿ ರಂಗಸ್ಥಳದಲ್ಲಿ ಮೆರಸುತ್ತಾರೆ. {{gap}}ಸಣ್ಣಾಟಗಳು ಇದಕ್ಕಿಂತ ಹೆಚ್ಚಿಗೆ ಸಂಪ್ರದಾಯ ಉಳಿಸಿಕೊಂಡ ರೀತಿಗಳಾಗಿ ಕಾಣಿಸುತ್ತವೆ. 1926-37ರಲ್ಲಿ ನಾನು ಧಾರವಾಡದಲ್ಲಿ ಕಂಡೊಂದು ಸಣ್ಣಾಟ, ಆ. ಕಡೆ ಪ್ರಸಿದ್ಧಿಗೆ ಬಂದಿದ್ದ “ಕೃಷ್ಣ ಪಾರಿಜಾತ? ಆಟವಾಗಿತ್ತು. ಅದರ ನಾಲ್ಕಾರು. ಚಾಲುಗಳು ಇನ್ನೂ ನನ್ನ ನೆನಪನಲ್ಲಿವೆ. ಅವು ನಮ್ಮ ಯಕ್ಷಗಾನ ಹಾಡುಗಳಿಗೆ ಸಾಕಷ್ಟು ಸಮೀಪವಾಗಿದ್ದವು. ಈಗ ಹಾಗೆ ಉಳಿದಿಲ್ಲ." ಈಗ ಹೆಚ್ಚಾಗಿ ಮರಾಠಿ. ಧಾಟಿಗಳನ್ನೇ ಬಳಸುತ್ತಿದ್ದಾರೆ. ಇಂಡಿ, ಸಾಲೊಟಗ್ಗಿ ಜಮಖಂಡಿ, ಬೀಬಿ ಇಂಗಳಿಗೆ. ಯಂಥ ಊರುಗಳಲ್ಲಿ ಈ ಪಾರಿಜಾತ ಆಟ ಆಡುವ ಸಂಪ್ರದಾಯ ಉಳಿದಿದೆ... ಇವು. ಗಳ ವೈಶಿಷ್ಟ್ಯ ಒಂದು ಪ್ರತ್ಯೇಕ ತೆರನದು. ಇವರ ಆಟಗಳು ಕೃಷ್ಣ, ರುಕ್ಮಿಣಿ, ಸತ್ಯಭಾಮೆ ತಪ್ಪಿದಲ್ಲಿ ರಾಧೆಗೆ ಸೀಮಿತವಾದವು. ಈ ಪಾತ್ರಗಳಷ್ಟೇ ವೇಷಭೂಷಣ ಗಳಲ್ಲಿ ಬರುತ್ತವೆ... ಭಾಗವತ ಹಾಡನ್ನು ಎತ್ತಿಕೊಟ್ಟ ಬಳಿಕ ಪಾತ್ರಧಾರಿಗಳೇ ಹಾಡನ್ನು ಸುಪೂರ್ಣವಾಗಿ ಮುಂದುವರಿಸುತ್ತಾರೆ... ಆವರ. ಕೊರಳು ತಾರಕಕ್ಕೆ ಎಟುಕುವ ಕೊರಳು. . ಹೀಗಾಗಿ ಪಾತ್ರಧಾರಿಗಳೊಳಗೂ ಭಾಗವತನೊಳಗೂ ಆಲಾ ಪನದ ಸ್ಪರ್ಧೆ ನಡೆಯುತ್ತದೆ. ಕೆಲವರಿಗಂತೂ ಒಳ್ಳೆಯ ಶಾರೀರ ಇರುವುದನ್ನು ಕಾಣಬಹುದು, ಈ ಪಾತ್ರಗಳು ಹಾಡುತ್ತಾ ನಡುನಡುವೆ ತೀವ್ರ ಹೆಜ್ಜೆಗಳನ್ನು ಹಾಕುತ್ತಾ ಅಲ್ಲೊಮ್ಮೆ ಇಲ್ಲೊಮ್ಮೆ ಎತ್ತರಕ್ಕೆ ಜಿಗಿಯುತ್ತಾ, ನೃತ್ಯದ ಅಂಶವನ್ನಲ್ಲ ನೃತ್ತದ ಅಂಶವನ್ನು ಪ್ರದರ್ಶಿಸು್ತ್ತಾರೆ. ಹಾಡುಗಾರಿಕೆ' ಕುಣಿತ ಮುಗಿದೊಡನೆಯೇ ಇಬ್ಬರು ತಾಳಗಾರರ ತಾಳದ. ಚಮತ್ಕ್ರುತಿ ಸಾಕಷ್ಟು ಕಾಲ ನಡೆಯುತ್ತದೆ. ಅನಂತರ ಪಾತ್ರಧಾರಿಗಳು ಕಂಠಪಾಠ ಕಲಿತ ಮಾತುಗಳಿಂದ ಸಂಭಾಷಣೆ ನಡೆಸುತ್ತಾರೆ. ಇವರ ವೇಷ ಭೂಷಣಗಳು ಕಂಪೆನಿ ನಾಟಕಗಳ ಪಾತ್ರಗಳಂತೆಯೇ ಇರುತ್ತವೆ. ಕೆಲ ಕೆಲವರಲ್ಲಿ ಹಾಡುವ ಕಂಠ ಮಧುರವಾಗಿಯೂ, ಶಿಸ್ತುಬದ್ಧ ವಾಗಿಯೂ ಇರುವುದನ್ನು ಕಾಣಬಹುದು. ವೇಷಧಾರಿಗಳು ನಮ್ಮಲ್ಲಿಯಂತೆ ಭಾಗವತನೊಡನೆ ತಮ್ಮ ಆತ್ಮ ಕಥಾನಕ ಅಥವಾ ಮನೋಗತ ತೋಡಿಕೊಳ್ಳುವುದಿಲ್ಲ. ಎಲ್ಲಕ್ಕೂ ಒಬ್ಬಳು ದೂತಿ. ಬೇಕಾಗುತ್ತದೆ. ನಿತ್ಯದ ಸಾಮಾಜಿಕ ಉಡುಗೆಯಲ್ಲಿ ಬರುವ ಒಬ್ಬ ಈ ತಾಳಗಾರ ತಾನೇ<noinclude></noinclude> 5xeri7uz7m6ka229xkx9kuot1m3pgm7 ಪುಟ:ಯಕ್ಷಗಾನ ಮಕರಂದ.pdf/೨೫೫ 104 100175 319558 281794 2026-05-13T13:19:25Z Shreelatha.Halemane 7642 /* Proofread */ 319558 proofread-page text/x-wiki <noinclude><pagequality level="3" user="Shreelatha.Halemane" /></noinclude>{{Right|5}} ದೂತಿ ಅಂದುಕೊಂಡು ಮುಂದೆ ಬರುತ್ತಾನೆ.ಕಥೆಯ ಪೂರೈಕೆಗೆ ನಾರದನಂತಹ ಉಪಪಾತ್ರ ಬೇಕಾದರೂ ತಾಳಗಾರನೇ ಅದು ಎಂದು ಸಭೆ ಒಪ್ಪಬೇಕು. ಇಂಥ ಎರಡು ಮೂರು ಮೇಳಗಳು ಉತ್ತರ ಕರ್ನಾಟಕದಲ್ಲಿ ಜನಾದರವನ್ನು ಪಡೆದಿವೆ. {{gap}}ಕಳೆದ ಶತಮಾನದಲ್ಲಿ ಉತ್ತರ ಕರ್ನಾಟಕದ ಯಾವನೋ 'ಒಬ್ಬ ವ್ಯಕ್ತಿ ವಾಸ್ತವ ಬದುಕಿನಲ್ಲಿ ನಡೆದ. ಸಂಗ್ಯಾ ಬಾಳ್ಯಾ ಎಂಬ ಇಬ್ಬರು ಗೆಳೆಯರೊಳಗೆ ಕಾಣಿಸಿ. ಕೊಂಡ ಸಂಘರ್ಷವನ್ನು, ಅದಕ್ಕೆ 'ಕಾರಣವಾದ ಪ್ರಣಯ ಕತೆಯನ್ನು ಬಯಲಾಟ. ದಂತೆ. ಸ್ಥಳಿಕ ಜಾನಪದ ಗೀತೆಗಳಲ್ಲಿ ಬರೆದು ಆಡುವ ಪರಿಪಾಠ ತೊಡಗಿದ. ಈ ಆಟ ಒಂದು ಕಾಲದಲ್ಲಿ ಸರಕಾರದಿಂದ ಬಹಿಷ್ಕೃತವೂ ಆಗಿತ್ತಂತೆ. ಆದರೆ ಕಳೆದ ಶತ ಮಾನದ ಅವಧಿಯಲ್ಲಿ ಅದು ಬಿಜಾಪುರದ ಉತ್ತರ ಗಡಿಯಿಂದ ಮಲೆನಾಡಿನ ಸಾಗರ ಸೀಮೆಯ ತನಕವೂ ಹಬ್ಬಿದ್ದನ್ನು ಕಾಣುತ್ತೇವೆ... ಇದನ್ನು ಆಡುವ ಪದ್ಧತಿ. ದೊಡ್ಡಾಟದಂತೆಯೇ ಇದ್ದರೂ ಹಾಡುಗಾರಿಕೆಯ ರೀತಿ ಬೇರೆ, ಹಿಮ್ಮೇಳ ಬೇರೆ. ಹಾಡುವುದು ನಾಲ್ಕಾರು ಮಂದಿ ಕೂಡಿ; ತಾಳ ನುಡಿಸುತ್ತಾ, ಇದು ಸಾಮಾಜಿಕ ಕತೆಯಾದುದರಿಂದ ರಂಗಸ್ಥಳದಲ್ಲಿ ನಿತ್ಯದ ವೇಷಭೂಷಣಗಳೇ ಬರುತ್ತವೆ. ತೀರ ಅಳಿದುಹೋಗುತ್ತಿದ್ದ ಸಂಗ್ಯಾ ಬಾಳ್ಯಾನ ಆಟವನ್ನು ಈ ಮೂರು ನಾಲ್ಕು ವರ್ಷ ಗಳಿಂದ ಆ ಕಡೆಯ ಕೆಲವು ವಿದ್ಯಾವಂತರು ಉಳಿಸಿಕೊಂಡು ಆಡತೊಡಗಿದ್ದಾರೆ. ಇದನ್ನು ನಮ್ಮ ಬಯಲಾಟಕ್ಕೆ ಹೋಲಿಸುವಂತಿಲ್ಲ. {{gap}}ಯಕ್ಷಗಾನ ಬಯಲಾಟದಿಂದಲೇ ಹುಟ್ಟಿಕೊಂಡ ಮತ್ತೆರಡು ಆಟದ ಸಂಪ್ರ ದಾಯಗಳೆಂದರೆ ತೊಗಲುಗೊಂಬೆಯಾಟ ಮತ್ತು ಗೊಂಬೆಯಾಟಗಳು, ತೊಗಲು ಗೊಂಬೆಯಾಟವನ್ನು 'ಕಿಲ್ಲಿಕೇತನ ಆಟ' ಎಂದು ಕರೆಯುವ ವಾಡಿಕೆಯೂ ಉಂಟು. ಇಲ್ಲಿ- ಬಿಳಿಯ ತೆರೆಯೊಂದರ ಹಿಂದೆ ದೀಪವನ್ನು ಇರಿಸಿ, ಆ ತೆರೆಯ ಬೆಂಗಡೆಯಲ್ಲಿ ತೊಗಲಿನ ಮೇಲೆ ಬರೆದ ಬಣ್ಣ ಸವರಿದ ಗೊಂಬೆಗಳನ್ನು ಒತ್ತಿ ಹಿಡಿದು, ಯಕ್ಷಗಾನ ಕಥಾನಕಗಳ ವಿವಿಧ ಪಾತ್ರಗಳನ್ನು ತೋರಿಸುತ್ತಾರೆ. . ಇದನ್ನು ಹೆಚ್ಚಾಗಿ ಪ್ರದರ್ಶಿ ಸುವವರು ಮರಾಟಿ ಮನೆಮಾತಾದ ಒಂದು ಜನವರ್ಗ, . ಅವರು ರತ್ನಗಿರಿ, ಮಾಲ ವಾಣ ಜಿಲ್ಲೆಗಳಿಂದ ಬಳ್ಳಾರಿ ಮತ್ತು ಮೈಸೂರು ಪ್ರಾಂತಗಳಿಗ ಕೆಲವು ಶತಮಾನಗಳ ಹಿಂದೆಯೇ ವಲಸೆ ಬಂದಿದ್ದ ಜನಗಳು. "ಅವರ ಭಾಗವತರು ಹಾಡುವುದು ನಮ್ಮ ಯಕ್ಷಗಾನ ಪ್ರಸಂಗಗಳನ್ನೇ, ಇಂತಹ ಗುಂಪುಗಳು ಆಂಧ್ರ ದೇಶದಿಂದ ಕರ್ನಾಟ ಕಕ್ಕೆ ವಲಸೆ ಬಂದದ್ದೂ ಉಂಟು. ಅವರು ತೆಲುಗಿನಲ್ಲಿ ಹಾಡುಗಳನ್ನು ಹಾಡು ತ್ತಾರೆ; ಸಂಭಾಷಣೆ, ಕತೆ ಮುಂದುವರಿಸುತ್ತಾರೆ.. {{gap}}ಕನ್ನಡ ತೊಗಲುಗೊಂಬೆ ಆಟದವರ ಬಾಯಿಯಿಂದ ನಾನು ಕೇಳಿದ ಹಾಡು ಗಳು.-ಹಳೆಯ ಧಾಟಿಯ ಯಕ್ಷಗಾನ ಕತೆ ಮತ್ತು ಪ್ರಸಂಗದವುಗಳೇ. ಹಾಡು. ಗಾರಿಕೆಯ ಜತೆಗೆ ತಾಳ ಮತ್ತು ಮೃದಂಗಗಳಿರುತ್ತವೆ. ಈ ಗೊಂಬೆಗಳಿಗೆ ಚಲನೆ<noinclude></noinclude> 8rvsfsm3u88pjl1w35i8ygrzwgradgn 319617 319558 2026-05-13T14:38:27Z Shreesha Sharma 7840 /* Validated */ 319617 proofread-page text/x-wiki <noinclude><pagequality level="4" user="Shreesha Sharma" /></noinclude>{{Right|5}} ದೂತಿ ಅಂದುಕೊಂಡು ಮುಂದೆ ಬರುತ್ತಾನೆ.ಕಥೆಯ ಪೂರೈಕೆಗೆ ನಾರದನಂತಹ ಉಪಪಾತ್ರ ಬೇಕಾದರೂ ತಾಳಗಾರನೇ ಅದು ಎಂದು ಸಭೆ ಒಪ್ಪಬೇಕು. ಇಂಥ ಎರಡು ಮೂರು ಮೇಳಗಳು ಉತ್ತರ ಕರ್ನಾಟಕದಲ್ಲಿ ಜನಾದರವನ್ನು ಪಡೆದಿವೆ. {{gap}}ಕಳೆದ ಶತಮಾನದಲ್ಲಿ ಉತ್ತರ ಕರ್ನಾಟಕದ ಯಾವನೋ 'ಒಬ್ಬ ವ್ಯಕ್ತಿ ವಾಸ್ತವ ಬದುಕಿನಲ್ಲಿ ನಡೆದ. ಸಂಗ್ಯಾ ಬಾಳ್ಯಾ ಎಂಬ ಇಬ್ಬರು ಗೆಳೆಯರೊಳಗೆ ಕಾಣಿಸಿ. ಕೊಂಡ ಸಂಘರ್ಷವನ್ನು, ಅದಕ್ಕೆ 'ಕಾರಣವಾದ ಪ್ರಣಯ ಕತೆಯನ್ನು ಬಯಲಾಟ. ದಂತೆ. ಸ್ಥಳಿಕ ಜಾನಪದ ಗೀತೆಗಳಲ್ಲಿ ಬರೆದು ಆಡುವ ಪರಿಪಾಠ ತೊಡಗಿದ. ಈ ಆಟ ಒಂದು ಕಾಲದಲ್ಲಿ ಸರಕಾರದಿಂದ ಬಹಿಷ್ಕೃತವೂ ಆಗಿತ್ತಂತೆ. ಆದರೆ ಕಳೆದ ಶತ ಮಾನದ ಅವಧಿಯಲ್ಲಿ ಅದು ಬಿಜಾಪುರದ ಉತ್ತರ ಗಡಿಯಿಂದ ಮಲೆನಾಡಿನ ಸಾಗರ ಸೀಮೆಯ ತನಕವೂ ಹಬ್ಬಿದ್ದನ್ನು ಕಾಣುತ್ತೇವೆ... ಇದನ್ನು ಆಡುವ ಪದ್ಧತಿ. ದೊಡ್ಡಾಟದಂತೆಯೇ ಇದ್ದರೂ ಹಾಡುಗಾರಿಕೆಯ ರೀತಿ ಬೇರೆ, ಹಿಮ್ಮೇಳ ಬೇರೆ. ಹಾಡುವುದು ನಾಲ್ಕಾರು ಮಂದಿ ಕೂಡಿ; ತಾಳ ನುಡಿಸುತ್ತಾ, ಇದು ಸಾಮಾಜಿಕ ಕತೆಯಾದುದರಿಂದ ರಂಗಸ್ಥಳದಲ್ಲಿ ನಿತ್ಯದ ವೇಷಭೂಷಣಗಳೇ ಬರುತ್ತವೆ. ತೀರ ಅಳಿದುಹೋಗುತ್ತಿದ್ದ ಸಂಗ್ಯಾ ಬಾಳ್ಯಾನ ಆಟವನ್ನು ಈ ಮೂರು ನಾಲ್ಕು ವರ್ಷ ಗಳಿಂದ ಆ ಕಡೆಯ ಕೆಲವು ವಿದ್ಯಾವಂತರು ಉಳಿಸಿಕೊಂಡು ಆಡತೊಡಗಿದ್ದಾರೆ. ಇದನ್ನು ನಮ್ಮ ಬಯಲಾಟಕ್ಕೆ ಹೋಲಿಸುವಂತಿಲ್ಲ. {{gap}}ಯಕ್ಷಗಾನ ಬಯಲಾಟದಿಂದಲೇ ಹುಟ್ಟಿಕೊಂಡ ಮತ್ತೆರಡು ಆಟದ ಸಂಪ್ರ ದಾಯಗಳೆಂದರೆ ತೊಗಲುಗೊಂಬೆಯಾಟ ಮತ್ತು ಗೊಂಬೆಯಾಟಗಳು, ತೊಗಲು ಗೊಂಬೆಯಾಟವನ್ನು 'ಕಿಲ್ಲಿಕೇತನ ಆಟ' ಎಂದು ಕರೆಯುವ ವಾಡಿಕೆಯೂ ಉಂಟು. ಇಲ್ಲಿ- ಬಿಳಿಯ ತೆರೆಯೊಂದರ ಹಿಂದೆ ದೀಪವನ್ನು ಇರಿಸಿ, ಆ ತೆರೆಯ ಬೆಂಗಡೆಯಲ್ಲಿ ತೊಗಲಿನ ಮೇಲೆ ಬರೆದ ಬಣ್ಣ ಸವರಿದ ಗೊಂಬೆಗಳನ್ನು ಒತ್ತಿ ಹಿಡಿದು, ಯಕ್ಷಗಾನ ಕಥಾನಕಗಳ ವಿವಿಧ ಪಾತ್ರಗಳನ್ನು ತೋರಿಸುತ್ತಾರೆ. . ಇದನ್ನು ಹೆಚ್ಚಾಗಿ ಪ್ರದರ್ಶಿ ಸುವವರು ಮರಾಟಿ ಮನೆಮಾತಾದ ಒಂದು ಜನವರ್ಗ, . ಅವರು ರತ್ನಗಿರಿ, ಮಾಲ ವಾಣ ಜಿಲ್ಲೆಗಳಿಂದ ಬಳ್ಳಾರಿ ಮತ್ತು ಮೈಸೂರು ಪ್ರಾಂತಗಳಿಗ ಕೆಲವು ಶತಮಾನಗಳ ಹಿಂದೆಯೇ ವಲಸೆ ಬಂದಿದ್ದ ಜನಗಳು. "ಅವರ ಭಾಗವತರು ಹಾಡುವುದು ನಮ್ಮ ಯಕ್ಷಗಾನ ಪ್ರಸಂಗಗಳನ್ನೇ, ಇಂತಹ ಗುಂಪುಗಳು ಆಂಧ್ರ ದೇಶದಿಂದ ಕರ್ನಾಟ ಕಕ್ಕೆ ವಲಸೆ ಬಂದದ್ದೂ ಉಂಟು. ಅವರು ತೆಲುಗಿನಲ್ಲಿ ಹಾಡುಗಳನ್ನು ಹಾಡು ತ್ತಾರೆ; ಸಂಭಾಷಣೆ, ಕತೆ ಮುಂದುವರಿಸುತ್ತಾರೆ.. {{gap}}ಕನ್ನಡ ತೊಗಲುಗೊಂಬೆ ಆಟದವರ ಬಾಯಿಯಿಂದ ನಾನು ಕೇಳಿದ ಹಾಡು ಗಳು.-ಹಳೆಯ ಧಾಟಿಯ ಯಕ್ಷಗಾನ ಕತೆ ಮತ್ತು ಪ್ರಸಂಗದವುಗಳೇ. ಹಾಡು. ಗಾರಿಕೆಯ ಜತೆಗೆ ತಾಳ ಮತ್ತು ಮೃದಂಗಗಳಿರುತ್ತವೆ. ಈ ಗೊಂಬೆಗಳಿಗೆ ಚಲನೆ<noinclude></noinclude> 58e15ix0ejas33ty6yw8d04ddrro151 ಪುಟ:ಯಕ್ಷಗಾನ ಮಕರಂದ.pdf/೨೫೬ 104 100176 319559 281795 2026-05-13T13:26:00Z Shreelatha.Halemane 7642 /* Proofread */ 319559 proofread-page text/x-wiki <noinclude><pagequality level="3" user="Shreelatha.Halemane" /></noinclude>6 ಬಹು ಕಡಿಮೆ. ಮೂರು ಸಲಿಕೆಗಳಿಂದ ಗೊಂಬೆಗಳ ಕಾಲು ಕೈಗಳನ್ನು ಚಲಿಸುತ್ತಾರೆ; ಆ ಗೊಂಬೆಗಳನ್ನೇ ತಿರುವಿಹಾಕಿ ಮುಖದ ದಿಕ್ಕನ್ನು ಬದಲಿಸುತ್ತಾರೆ. ಬಣ್ಣವಿಲ್ಲದಂತ ಗೊಂಬೆಗಳ ತೋರಿಸುವಿಕೆಯೂ ಉಂಟು.ಹಾಡು ಮುಗಿದ ಮೇಲೆ ಪರದೆಯ ಹಿಂದಿರುವ ಜನರು ಪಾತ್ರೋಚಿತ ಮಾತುಗಾರಿಕೆ ತೊಡಗುತ್ತಾರೆ. ಹಿಂದಿನ ಕಾಲದಲ್ಲಿ ಈ ಮೇಳಗಳಿಗೆ ಪೋಷಣೆ ಹರಕೆಯಿಂದ ಸಿಗುತ್ತಿತ್ತು. ದನಕರುಗಳಿಗೆ ಕಾಯಿಲೆ. ಆದರೆ, ತೊಗಲುಗೊಂಬೆ ಆಟ ಆಡಿಸುವ ಹರಕೆಯನ್ನು ಹೊರುವ ಭಕ್ತರಿದ್ದರು. ಈಗೀಗ ಆ ಸಂಪ್ರದಾಯ ನಷ್ಟವಾಗಿದ್ದು, ಅವರ ಆಟ ಆಡಿಸುವವರೇ ಇಲ್ಲವಾಗಿದೆ. {{gap}}ಇದಕ್ಕೆ ಪ್ರತಿಯಾಗಿ ಬೆಳೆದು ಬಂದ ಸಂಪ್ರದಾಯ ಗೊಂಬೆಯಾಟದ್ದು.. ಹರ. ಪನಹಳ್ಳಿ, ಹೂವಿನಹಡಗಲಿ, ರಾಣಿಬೆನ್ನೂರು. ತಾಲೂಕುಗಳಲ್ಲಿ ಇವನ್ನಾಡುವ ಆರೆಂಟು ಗುಂಪುಗಳನ್ನು ನೋಡಿದ್ದೇನೆ. ' ಅವರ ಹಿಮ್ಮೇಳ ಯಕ್ಷಗಾನಸಂಗೀತ ಪ್ರಧಾನವಾದದ್ದು. ಅದಕ್ಕೆ ಒಂದಿಷ್ಟು ಹಿಂದುಸ್ಥಾನಿ ಶೈಲಿಯೂ ಸೇರಿಕೊಳ್ಳುತ್ತದೆ, ಹಾರ್ಮೋನಿಯಮ್, ಮುಖವೀಣೆಗಳು ಹಾಡುಗಾರಿಕೆಯನ್ನು ಕೂಡಿಕೊಳ್ಳುತ್ತವೆ. ಒಂದು ತೆರೆಯ ಮುಂದೆ ' ಸೂತ್ರದ ಗೊಂಬೆಗಳನ್ನು ಕುಣಿಸುತ್ತಾರೆ. ಪಾತ್ರಗಳ ಬಗ್ಗೆ ತೆರೆಯ ಹಿಂದಿನವರು ಸಂಭಾಷಣೆ ನಡೆಸುತ್ತಾರೆ. . ಅವರಲ್ಲಿ ಇನ್ನಷ್ಟು ಧಾರಾಳ _ಪರಿಮಾಣದಿಂದ ಯಕ್ಷಗಾನ ಶೈಲಿಯ ಹಾಡುಗಳು ಉಳಿದುಕೊಂಡಿವೆ. ರಾಗಪ್ರಭೇದಗಳೂ ಸಾಕಷ್ಟಿವೆ. " ಆದರೆ ಅವರ ಹಾರ್ಮೋನಿಯಮ್‌ ವಾದಕರು, ಮುಖವೀಣೆಯವರು ಯಾವತ್ತು ಹಾಡುಗಳಿಗೆ ಹಿಂದುಸ್ಥಾನಿಭೈರವಿ ರಾಗದ ಆಲಾಪ ವನ್ನೇ ತೊಡಿಸುವುದು ಗಾನದ ದೃಷ್ಟಿಯಿಂದ ಮಾರಕವಾಗಿ ಬಂದಿದೆ. ಆಲ್ಲಿ. ಇಷ್ಟೊಂದು ಗೊಂಬೆಯಾಟದ. ಮಂಡಲಗಳಿದ್ದರೂ ಅವು ಆಕರ್ಷಕ ರೀತಿಯಲ್ಲಿ ಉಳಿದುಕೊಂಡು ಬಂದಿಲ್ಲ, ಇನ್ನೂ ಹವ್ಯಾಸಿಗಳ ಹಂತದಲ್ಲೇ ಇವೆ. ' ಜನರ. ಪ್ರೋತ್ಸಾಹ ಏನೇನೂ ಇಲ್ಲದೆ ಈ ಕಲೆ ಬೇಗನೆ ನಶಿಸುವ ದಿನಗಳನ್ನು ಕಾಣುತ್ತಿದ್ದೇವೆ. {{gap}}ಇಂಥ ಯಾವುದೇ ಕಲಾಮಾಧ್ಯಮವಾಗಲಿ ದೀರ್ಫಕಾಲ ಉಳಿಯುವುದಕ್ಕೆ ನೋಡುವ ಜನಸಾಮಾನ್ಯರಲ್ಲಿ ಆಸಕ್ತಿ, ಉತ್ಸಾಹ ಇರಬೇಕಾಗುತ್ತದೆ. ಜನರಲ್ಲಿ ಈ ಕಲಾಮಾಧ್ಯಮವನ್ನು ಕುರಿತ ಅಭಿರುಚಿಯೇ ಇಲ್ಲದೆ ಹೋದರೆ, ಆ ವೃತ್ತಿಯನ್ನು ನಡೆಸುವವರು, ಎಷ್ಟು ದಿನ ಅದನ್ನು ಉಳಿಸಿಕೊಂಡಾರು ಎಂಬ ಪ್ರಶ್ನೆ ಬರುತ್ತದೆ" ಆ ದೃಷ್ಟಿಯಿಂದ ನಮ್ಮ ಜಿಲ್ಲೆಯ ಯಕ್ಷಗಾನ ಬಯಲಾಟಗಳು ಇಂದು ಮೊದಲಿ ಗಿಂತ ಎಷ್ಟೋ ಹೆಚ್ಚಿನ ಜನಾದರಣೆ ಪಡೆದದ್ದನ್ನು ಕಾಣುತ್ತೇವೆ. ನಮ್ಮಲ್ಲಿ ಅದು ಆಕರ್ಷಕ ಮಾಧ್ಯಮವಾಗಿ ಬೆಳೆಯುವುದಕ್ಕೆ ಅಂಥ ಆದರಣೆ ಕಾರಣ... ಜನರೆ ರಸಿಕ ಮನೋವೃತ್ತಿಯನ್ನು ತಮ್ಮ ಮಾಧ್ಯಮದ ಮೂಲಕ ಶುಚಿಗೊಳಿಸಬೇಕು, ಸುಂದರ ಗೊಳಿಸಬೇಕು. ಎಂಬ ಬಯಕೆ ಮಾತ್ರ ನಮ್ಮ ಕಲಾವೃಂದದಲ್ಲಿ ಕಾಣಿಸುವುದಿಲ್ಲ. ಚಲಚ್ಚಿತ್ರ ಮಾಧ್ಯಮದಂತೆ. _ಜನಗಳ ಕೀಳು ಅಭಿರುಚಿಗಳಿಗೆ ಅವಕಾಶ, ಪೋಷಣೆ<noinclude></noinclude> 8tdwbh1es9zbd8rapvlt3u7ojrta733 319618 319559 2026-05-13T14:38:37Z Shreesha Sharma 7840 /* Validated */ 319618 proofread-page text/x-wiki <noinclude><pagequality level="4" user="Shreesha Sharma" /></noinclude>6 ಬಹು ಕಡಿಮೆ. ಮೂರು ಸಲಿಕೆಗಳಿಂದ ಗೊಂಬೆಗಳ ಕಾಲು ಕೈಗಳನ್ನು ಚಲಿಸುತ್ತಾರೆ; ಆ ಗೊಂಬೆಗಳನ್ನೇ ತಿರುವಿಹಾಕಿ ಮುಖದ ದಿಕ್ಕನ್ನು ಬದಲಿಸುತ್ತಾರೆ. ಬಣ್ಣವಿಲ್ಲದಂತ ಗೊಂಬೆಗಳ ತೋರಿಸುವಿಕೆಯೂ ಉಂಟು.ಹಾಡು ಮುಗಿದ ಮೇಲೆ ಪರದೆಯ ಹಿಂದಿರುವ ಜನರು ಪಾತ್ರೋಚಿತ ಮಾತುಗಾರಿಕೆ ತೊಡಗುತ್ತಾರೆ. ಹಿಂದಿನ ಕಾಲದಲ್ಲಿ ಈ ಮೇಳಗಳಿಗೆ ಪೋಷಣೆ ಹರಕೆಯಿಂದ ಸಿಗುತ್ತಿತ್ತು. ದನಕರುಗಳಿಗೆ ಕಾಯಿಲೆ. ಆದರೆ, ತೊಗಲುಗೊಂಬೆ ಆಟ ಆಡಿಸುವ ಹರಕೆಯನ್ನು ಹೊರುವ ಭಕ್ತರಿದ್ದರು. ಈಗೀಗ ಆ ಸಂಪ್ರದಾಯ ನಷ್ಟವಾಗಿದ್ದು, ಅವರ ಆಟ ಆಡಿಸುವವರೇ ಇಲ್ಲವಾಗಿದೆ. {{gap}}ಇದಕ್ಕೆ ಪ್ರತಿಯಾಗಿ ಬೆಳೆದು ಬಂದ ಸಂಪ್ರದಾಯ ಗೊಂಬೆಯಾಟದ್ದು.. ಹರ. ಪನಹಳ್ಳಿ, ಹೂವಿನಹಡಗಲಿ, ರಾಣಿಬೆನ್ನೂರು. ತಾಲೂಕುಗಳಲ್ಲಿ ಇವನ್ನಾಡುವ ಆರೆಂಟು ಗುಂಪುಗಳನ್ನು ನೋಡಿದ್ದೇನೆ. ' ಅವರ ಹಿಮ್ಮೇಳ ಯಕ್ಷಗಾನಸಂಗೀತ ಪ್ರಧಾನವಾದದ್ದು. ಅದಕ್ಕೆ ಒಂದಿಷ್ಟು ಹಿಂದುಸ್ಥಾನಿ ಶೈಲಿಯೂ ಸೇರಿಕೊಳ್ಳುತ್ತದೆ, ಹಾರ್ಮೋನಿಯಮ್, ಮುಖವೀಣೆಗಳು ಹಾಡುಗಾರಿಕೆಯನ್ನು ಕೂಡಿಕೊಳ್ಳುತ್ತವೆ. ಒಂದು ತೆರೆಯ ಮುಂದೆ ' ಸೂತ್ರದ ಗೊಂಬೆಗಳನ್ನು ಕುಣಿಸುತ್ತಾರೆ. ಪಾತ್ರಗಳ ಬಗ್ಗೆ ತೆರೆಯ ಹಿಂದಿನವರು ಸಂಭಾಷಣೆ ನಡೆಸುತ್ತಾರೆ. . ಅವರಲ್ಲಿ ಇನ್ನಷ್ಟು ಧಾರಾಳ _ಪರಿಮಾಣದಿಂದ ಯಕ್ಷಗಾನ ಶೈಲಿಯ ಹಾಡುಗಳು ಉಳಿದುಕೊಂಡಿವೆ. ರಾಗಪ್ರಭೇದಗಳೂ ಸಾಕಷ್ಟಿವೆ. " ಆದರೆ ಅವರ ಹಾರ್ಮೋನಿಯಮ್‌ ವಾದಕರು, ಮುಖವೀಣೆಯವರು ಯಾವತ್ತು ಹಾಡುಗಳಿಗೆ ಹಿಂದುಸ್ಥಾನಿಭೈರವಿ ರಾಗದ ಆಲಾಪ ವನ್ನೇ ತೊಡಿಸುವುದು ಗಾನದ ದೃಷ್ಟಿಯಿಂದ ಮಾರಕವಾಗಿ ಬಂದಿದೆ. ಆಲ್ಲಿ. ಇಷ್ಟೊಂದು ಗೊಂಬೆಯಾಟದ. ಮಂಡಲಗಳಿದ್ದರೂ ಅವು ಆಕರ್ಷಕ ರೀತಿಯಲ್ಲಿ ಉಳಿದುಕೊಂಡು ಬಂದಿಲ್ಲ, ಇನ್ನೂ ಹವ್ಯಾಸಿಗಳ ಹಂತದಲ್ಲೇ ಇವೆ. ' ಜನರ. ಪ್ರೋತ್ಸಾಹ ಏನೇನೂ ಇಲ್ಲದೆ ಈ ಕಲೆ ಬೇಗನೆ ನಶಿಸುವ ದಿನಗಳನ್ನು ಕಾಣುತ್ತಿದ್ದೇವೆ. {{gap}}ಇಂಥ ಯಾವುದೇ ಕಲಾಮಾಧ್ಯಮವಾಗಲಿ ದೀರ್ಫಕಾಲ ಉಳಿಯುವುದಕ್ಕೆ ನೋಡುವ ಜನಸಾಮಾನ್ಯರಲ್ಲಿ ಆಸಕ್ತಿ, ಉತ್ಸಾಹ ಇರಬೇಕಾಗುತ್ತದೆ. ಜನರಲ್ಲಿ ಈ ಕಲಾಮಾಧ್ಯಮವನ್ನು ಕುರಿತ ಅಭಿರುಚಿಯೇ ಇಲ್ಲದೆ ಹೋದರೆ, ಆ ವೃತ್ತಿಯನ್ನು ನಡೆಸುವವರು, ಎಷ್ಟು ದಿನ ಅದನ್ನು ಉಳಿಸಿಕೊಂಡಾರು ಎಂಬ ಪ್ರಶ್ನೆ ಬರುತ್ತದೆ" ಆ ದೃಷ್ಟಿಯಿಂದ ನಮ್ಮ ಜಿಲ್ಲೆಯ ಯಕ್ಷಗಾನ ಬಯಲಾಟಗಳು ಇಂದು ಮೊದಲಿ ಗಿಂತ ಎಷ್ಟೋ ಹೆಚ್ಚಿನ ಜನಾದರಣೆ ಪಡೆದದ್ದನ್ನು ಕಾಣುತ್ತೇವೆ. ನಮ್ಮಲ್ಲಿ ಅದು ಆಕರ್ಷಕ ಮಾಧ್ಯಮವಾಗಿ ಬೆಳೆಯುವುದಕ್ಕೆ ಅಂಥ ಆದರಣೆ ಕಾರಣ... ಜನರೆ ರಸಿಕ ಮನೋವೃತ್ತಿಯನ್ನು ತಮ್ಮ ಮಾಧ್ಯಮದ ಮೂಲಕ ಶುಚಿಗೊಳಿಸಬೇಕು, ಸುಂದರ ಗೊಳಿಸಬೇಕು. ಎಂಬ ಬಯಕೆ ಮಾತ್ರ ನಮ್ಮ ಕಲಾವೃಂದದಲ್ಲಿ ಕಾಣಿಸುವುದಿಲ್ಲ. ಚಲಚ್ಚಿತ್ರ ಮಾಧ್ಯಮದಂತೆ. _ಜನಗಳ ಕೀಳು ಅಭಿರುಚಿಗಳಿಗೆ ಅವಕಾಶ, ಪೋಷಣೆ<noinclude></noinclude> 50yp12gflw24kzbn8mktpkn45w8ihz1 ಪುಟ:ಯಕ್ಷಗಾನ ಮಕರಂದ.pdf/೨೭೦ 104 100191 319560 281818 2026-05-13T13:28:24Z Shreelatha.Halemane 7642 /* Proofread */ 319560 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|20}} ವೆಂದರೆ ಪೂಜಾಪ್ರಬಂಧ, ಎಂದರೆ ಪೂಜೆಗಾಗಿ ಇರುವ ಪ್ರಬಂಧವೆಂದರ್ಥ. ಅದಲ್ಲದೆ ಉಚಿತವಾದ ಬೇರೆ ಅರ್ಥ ಕಾಣುವುದಿಲ್ಲ. ಆದ್ದರಿಂದ ಯಕ್ಷಗಾನ'ವೆಂಬ ಸಮಸ್ತಪದಕ್ಕೆ 'ಯಕ್ಷಾರ್ಥಂ ಗಾನಂ= ಯಕ್ಷಗಾನಂ' ಎಂದು ವಿಗ್ರಹವಾಕ್ಯ ವಾಗುವುದು. {{gap}}ಸಂಸ್ಕೃತದಲ್ಲಿ ಕ್ಷೇಮೇಂದ್ರನೆಂಬ ಪ್ರಸಿದ್ಧ ಕವಿಯು (ಕಾಲ: ಕ್ರಿ. ಶ. 1100- 1,200) 'ದಶಾವತಾರ ಚರಿತ'ವೆಂಬ ಗೀತಪ್ರಬಂಧವನ್ನು ರಚಿಸಿ ಅದನ್ನು ಪೂಜಾ ಪ್ರಬಂಧವೆಂದು ಕರೆದಿರುತ್ತಾನೆ {{gap}}ವಿಸ್ಕೋಃ ಸ್ವಲ್ಪ ವಿಲೋಕಿತಾಕೃತಿ ಸುಧಾ ಸಂವರ್ಧಿತೋತ್ಕಂಠಯಾ | {{gap}}ಭಕ್ತಿವ್ಯಕ್ತ ದಶಾವತಾರ ಸರಸಃ ಪೂಜಾಪ್ರಬಂಧಃ ಕೃತಃ | (೧೦-೪೪) {{gap}}ಇದರಲ್ಲಿ ಕೃಷ್ಣಾವತಾರದ ಮಾಹಾತ್ಮ ವು ಮಿಕ್ಕೆಲ್ಲ ಅವತಾರಗಳಿಗಿಂತ ವಿಸ್ತಾರ ವಾಗಿಯೂ ಬಹಳ ರಸವತ್ತಾಗಿಯೂ ವರ್ಣಿಸಲ್ಪಟ್ಟಿದೆ. ಜಯದೇವ ಕವಿಯ ಗೀತ ಗೋವಿಂದವು ಈ ಗ್ರಂಥದಿಂದ ಪ್ರಭಾವಿತವಾಗಿರುವುದೆಂದು ವಿದ್ವಾಂಸರ ಅಭಿ ಪ್ರಾಯವಿದೆ. ಇವೆರಡೂ ಪ್ರಬಂಧಗಳು ದೇವಸ್ಥಾನಗಳಲ್ಲಿ ಗೀತಾರಾಧನೆ, ನಾಟ್ಯಾ ರಾಧನೆಗೆ ಸಲ್ಲುತ್ತಿದ್ದವೆಂದೂ ತಿಳಿಯುವುದು. ಆಂಧ್ರ, ಕನ್ನಡ, ತಮಿಳು ಯಕ್ಷ ಗಾನಗಳಲ್ಲೆಲ್ಲ ದಶಾವತಾರ ಸ್ತುತಿಗೆ ವಿಶೇಷ ಪ್ರಾಧಾನ್ಯವಿರುವುದನ್ನು ಕಾಣಬಹುದು ಸಭಾಲಕ್ಷಣ'ವೆಂಬ ಬಯಲಾಟದ ಪೂರ್ವರಂಗ ವಿಧಿಯು ದಶಾವತಾರ ಸ್ತುತಿ ಶ್ಲೋಕ ಗಳಿಂದಲೇ ಪ್ರಾರಂಭವಾಗುವುದು. ಆ ಮೇಲೆ ದಶಾವತಾರ ಸ್ತುತಿ ಕೀರ್ತನೆ ಗಳೊಂದಿಗೆ ದಶಾವತಾರ ನೃತ್ಯ ನಡೆಯಬೇಕು, ಬಾಲಗೋಪಾಲರ ನರ್ತನಕ್ಕೆ ದಶಾ ವತಾರ ಸ್ತುತಿ ಪದ್ಯ ಹಾಡಬೇಕು. ಸ್ತ್ರೀವೇಷಗಳ ವೃಂದವನ್ನು ಕುಣಿಸಲಿಕ್ಕಿರುವ ಅವತಾರ ಸಂವಾದ' ಎಂಬ ಪದ್ಯಗಳು ಬೇರೇ ಇವೆ. ಯಕ್ಷಗಾನ ಕವಿಗಳು ತಮ್ಮ ಕೃತಿಗಳ ಆದಿಮಧ್ಯಾಂತಗಳಲ್ಲಿ ಸಹ ದಶಾವತಾರ ಸ್ತುತಿ ಪದ್ಯಗಳನ್ನು ರಚಿಸಿರುವು ದನ್ನು ಸಾಮಾನ್ಯವಾಗಿ ಕಾಣಬಹುದು.ಅಲ್ಲದೆ ಯಕ್ಷಗಾನ ಮೇಳಗಳೆಲ್ಲವೂ ಒಂದೊಂದು ದೇವಸ್ಥಾನವನ್ನು ಹೊಂದಿಕೊಂಡೆ ಇರುವಂತಹವು. ಮೊದಲಿಂದಲೂ ಇವು ದೇವಸ್ಥಾನದ ಸೊತ್ತಾಗಿಯೇ ನಡೆದು ಬಂದಿವೆ ಎಂಬುದು ದೇವಸ್ಥಾನಗಳಲ್ಲೇ ದೊರೆತಿರುವ ಶಾಸನಾದಿಗಳಿಂದ ವ್ಯಕ್ತವಾಗುವುದು. ಯಕ್ಷಗಾನ ಸೇವೆಗಳಿಗಾಗಿ ಉಂಬಳಿ ಉತಾರಗಳನ್ನು ಕೊಟ್ಟಿರುವ ದಾಖಲೆಗಳು ದೇವಸ್ಥಾನಗಳಲ್ಲಿ ದೊರೆಯು ಇವೆ. ಪ್ರತಿಯೊಬ್ಬ ಯಕ್ಷಗಾನ ಕವಿಯ ಕೃತಿಯ ಕೊನೆಯಲ್ಲಿ ಮಂಗಳಾರತಿ ಹಾಡುಗಳನ್ನು ತಪ್ಪದೆ ರಚಿಸಿರುವುದನ್ನೂ ಕಾಣಬಹುದು. ಮಧ್ಯಮಧ್ಯಗಳಲ್ಲಿ ಸಹ ಮಂಗಳಾರತಿ ಹಾಡು ಬರುವುದುಂಟು, ಅಲ್ಲದೆ ಪ್ರತಿಯೊಂದು ಕೃತಿಯ ಒಂದೊಂದು ದೇವಸ್ಥಾನದ ದೇವರ ಅಂಕಿತದಲ್ಲಿ ರಚಿಸಲ್ಪಟ್ಟಿದೆ. ಆಟದ ಮೇಳವು ದೇವಸ್ಥಾನದಿಂದ ಹೊರಟು ಹೊರಸಂಚಾರಕ್ಕೆ ಹೋಗುವಾಗ ಸಹ ಆಯಾ ದೇವಳದ<noinclude></noinclude> ot6x9t2515duiny0epakapp3r7r15uv 319619 319560 2026-05-13T14:39:06Z Shreesha Sharma 7840 /* Validated */ 319619 proofread-page text/x-wiki <noinclude><pagequality level="4" user="Shreesha Sharma" /></noinclude>{{Left|20}} ವೆಂದರೆ ಪೂಜಾಪ್ರಬಂಧ, ಎಂದರೆ ಪೂಜೆಗಾಗಿ ಇರುವ ಪ್ರಬಂಧವೆಂದರ್ಥ. ಅದಲ್ಲದೆ ಉಚಿತವಾದ ಬೇರೆ ಅರ್ಥ ಕಾಣುವುದಿಲ್ಲ. ಆದ್ದರಿಂದ ಯಕ್ಷಗಾನ'ವೆಂಬ ಸಮಸ್ತಪದಕ್ಕೆ 'ಯಕ್ಷಾರ್ಥಂ ಗಾನಂ= ಯಕ್ಷಗಾನಂ' ಎಂದು ವಿಗ್ರಹವಾಕ್ಯ ವಾಗುವುದು. {{gap}}ಸಂಸ್ಕೃತದಲ್ಲಿ ಕ್ಷೇಮೇಂದ್ರನೆಂಬ ಪ್ರಸಿದ್ಧ ಕವಿಯು (ಕಾಲ: ಕ್ರಿ. ಶ. 1100- 1,200) 'ದಶಾವತಾರ ಚರಿತ'ವೆಂಬ ಗೀತಪ್ರಬಂಧವನ್ನು ರಚಿಸಿ ಅದನ್ನು ಪೂಜಾ ಪ್ರಬಂಧವೆಂದು ಕರೆದಿರುತ್ತಾನೆ {{gap}}ವಿಸ್ಕೋಃ ಸ್ವಲ್ಪ ವಿಲೋಕಿತಾಕೃತಿ ಸುಧಾ ಸಂವರ್ಧಿತೋತ್ಕಂಠಯಾ | {{gap}}ಭಕ್ತಿವ್ಯಕ್ತ ದಶಾವತಾರ ಸರಸಃ ಪೂಜಾಪ್ರಬಂಧಃ ಕೃತಃ | (೧೦-೪೪) {{gap}}ಇದರಲ್ಲಿ ಕೃಷ್ಣಾವತಾರದ ಮಾಹಾತ್ಮ ವು ಮಿಕ್ಕೆಲ್ಲ ಅವತಾರಗಳಿಗಿಂತ ವಿಸ್ತಾರ ವಾಗಿಯೂ ಬಹಳ ರಸವತ್ತಾಗಿಯೂ ವರ್ಣಿಸಲ್ಪಟ್ಟಿದೆ. ಜಯದೇವ ಕವಿಯ ಗೀತ ಗೋವಿಂದವು ಈ ಗ್ರಂಥದಿಂದ ಪ್ರಭಾವಿತವಾಗಿರುವುದೆಂದು ವಿದ್ವಾಂಸರ ಅಭಿ ಪ್ರಾಯವಿದೆ. ಇವೆರಡೂ ಪ್ರಬಂಧಗಳು ದೇವಸ್ಥಾನಗಳಲ್ಲಿ ಗೀತಾರಾಧನೆ, ನಾಟ್ಯಾ ರಾಧನೆಗೆ ಸಲ್ಲುತ್ತಿದ್ದವೆಂದೂ ತಿಳಿಯುವುದು. ಆಂಧ್ರ, ಕನ್ನಡ, ತಮಿಳು ಯಕ್ಷ ಗಾನಗಳಲ್ಲೆಲ್ಲ ದಶಾವತಾರ ಸ್ತುತಿಗೆ ವಿಶೇಷ ಪ್ರಾಧಾನ್ಯವಿರುವುದನ್ನು ಕಾಣಬಹುದು ಸಭಾಲಕ್ಷಣ'ವೆಂಬ ಬಯಲಾಟದ ಪೂರ್ವರಂಗ ವಿಧಿಯು ದಶಾವತಾರ ಸ್ತುತಿ ಶ್ಲೋಕ ಗಳಿಂದಲೇ ಪ್ರಾರಂಭವಾಗುವುದು. ಆ ಮೇಲೆ ದಶಾವತಾರ ಸ್ತುತಿ ಕೀರ್ತನೆ ಗಳೊಂದಿಗೆ ದಶಾವತಾರ ನೃತ್ಯ ನಡೆಯಬೇಕು, ಬಾಲಗೋಪಾಲರ ನರ್ತನಕ್ಕೆ ದಶಾ ವತಾರ ಸ್ತುತಿ ಪದ್ಯ ಹಾಡಬೇಕು. ಸ್ತ್ರೀವೇಷಗಳ ವೃಂದವನ್ನು ಕುಣಿಸಲಿಕ್ಕಿರುವ ಅವತಾರ ಸಂವಾದ' ಎಂಬ ಪದ್ಯಗಳು ಬೇರೇ ಇವೆ. ಯಕ್ಷಗಾನ ಕವಿಗಳು ತಮ್ಮ ಕೃತಿಗಳ ಆದಿಮಧ್ಯಾಂತಗಳಲ್ಲಿ ಸಹ ದಶಾವತಾರ ಸ್ತುತಿ ಪದ್ಯಗಳನ್ನು ರಚಿಸಿರುವು ದನ್ನು ಸಾಮಾನ್ಯವಾಗಿ ಕಾಣಬಹುದು.ಅಲ್ಲದೆ ಯಕ್ಷಗಾನ ಮೇಳಗಳೆಲ್ಲವೂ ಒಂದೊಂದು ದೇವಸ್ಥಾನವನ್ನು ಹೊಂದಿಕೊಂಡೆ ಇರುವಂತಹವು. ಮೊದಲಿಂದಲೂ ಇವು ದೇವಸ್ಥಾನದ ಸೊತ್ತಾಗಿಯೇ ನಡೆದು ಬಂದಿವೆ ಎಂಬುದು ದೇವಸ್ಥಾನಗಳಲ್ಲೇ ದೊರೆತಿರುವ ಶಾಸನಾದಿಗಳಿಂದ ವ್ಯಕ್ತವಾಗುವುದು. ಯಕ್ಷಗಾನ ಸೇವೆಗಳಿಗಾಗಿ ಉಂಬಳಿ ಉತಾರಗಳನ್ನು ಕೊಟ್ಟಿರುವ ದಾಖಲೆಗಳು ದೇವಸ್ಥಾನಗಳಲ್ಲಿ ದೊರೆಯು ಇವೆ. ಪ್ರತಿಯೊಬ್ಬ ಯಕ್ಷಗಾನ ಕವಿಯ ಕೃತಿಯ ಕೊನೆಯಲ್ಲಿ ಮಂಗಳಾರತಿ ಹಾಡುಗಳನ್ನು ತಪ್ಪದೆ ರಚಿಸಿರುವುದನ್ನೂ ಕಾಣಬಹುದು. ಮಧ್ಯಮಧ್ಯಗಳಲ್ಲಿ ಸಹ ಮಂಗಳಾರತಿ ಹಾಡು ಬರುವುದುಂಟು, ಅಲ್ಲದೆ ಪ್ರತಿಯೊಂದು ಕೃತಿಯ ಒಂದೊಂದು ದೇವಸ್ಥಾನದ ದೇವರ ಅಂಕಿತದಲ್ಲಿ ರಚಿಸಲ್ಪಟ್ಟಿದೆ. ಆಟದ ಮೇಳವು ದೇವಸ್ಥಾನದಿಂದ ಹೊರಟು ಹೊರಸಂಚಾರಕ್ಕೆ ಹೋಗುವಾಗ ಸಹ ಆಯಾ ದೇವಳದ<noinclude></noinclude> gkcfna55spubgbiim8hs3vza4g66bk7 ಪುಟ:ಯಕ್ಷಗಾನ ಮಕರಂದ.pdf/೨೭೧ 104 100192 319709 281819 2026-05-14T07:41:31Z Hariprasad Shetty10 7490 319709 proofread-page text/x-wiki <noinclude><pagequality level="1" user="PraneethGanesh" />{{Right|21}}</noinclude> ದೇವರ ಪ್ರತಿಮೆಯನ್ನು ಜೊತೆಯಲ್ಲಿಯೇ ಕೊಂಡುಹೋಗುವುದಲ್ಲದೆ, ಆಟ ಸುರು ಮಾಡುವುದಕ್ಕೆ ಮೊದಲಾಗಿ ನೇಪಥ್ಯ ಗೃಹದಲ್ಲಿ ಆ ದೇವರನ್ನು ಪೂಜೆಗೆ ಇಡುವುದು ಪರಂಪರೆಯಿಂದ ಸರ್ವತ್ರ ನಡೆದು ಬಂದಿದೆ. ಅದೂ ಅಲ್ಲದೆ ದೇವಸ್ಥಾನಗಳಲ್ಲಿ 'ತಾಳ ಮದ್ದಳೆ ಸೇವೆ' ಎಂದು ಹೆಸರಾದ ಗೀತಾರಾಧನೆಯಲ್ಲಿ ಯಕ್ಷಗಾನ ಪದಗಳನ್ನು ಹಾಡುವ ಸಂಪ್ರದಾಯವಿದ್ದಿತ್ತೆಂದೂ ತಿಳಿಯುವುದು. ಹಿಂದೆ ಹೇಳಿದ ಆ ಶ್ರೀನಾಥ ಕವಿಯ ಆಂಧ್ರ ಭೀಮೇಶ್ವರ ಪುರಾಣ'ದಲ್ಲಿ ಯಕ್ಷಗಾನದ ಪ್ರಸ್ತಾವವೆಂದರೆ, ದಕ್ಷಾ ರಾಮವೆಂಬ ಶಿವಕ್ಷೇತ್ರದಲ್ಲಿ ಭೀಮೇಶ್ವರ ದೇವರ ಮುಂದೆ (ಶಿವ ದೇವಾಲಯದಲ್ಲಿ) ಯಕ್ಷಗಾನ ಗೀತಾರಾಧನೆ ನಡೆಯುತ್ತಿತ್ತೆಂದು ಕವಿ ವರ್ಣಿಸಿರುವುದಾಗಿದೆ ಕೀರ್ತಿ೦ತುರಿದ್ದಾನಿ ಕೀರ್ತಿ ಗಂಧರ್ವಲು ಗಾಂಧರ್ವಮುನ ಯಕ್ಷಗಾನ ಸರಣಿ | ಇದು, ಅನ್ಯಕರ್ತೃಕವಾದ ಪುರಾತನ ಸಂಸ್ಕೃತ ಭೀಮೇಶ್ವರ ಪುರಾಣವೊಂದನ್ನು ಈ ಕವಿಯು ಆಂದ್ರೀಕರಿಸಿದ್ದು, ಸಂಸ್ಕೃತದ ಆ ಶ್ಲೋಕ ಹೀಗಿರುತ್ತದೆ. ಕೀರ್ತಯಂತಿ ಮಾಹಾತ್ಮಂ ಗಂಧರ್ವಾದಿವೌಕಸಃ | ಗಾಂಧರ್ವವಿದ್ಯಾನಿಪುಣಾ ಗಾಂಧರ್ವೇಣ ಗರೀಯಸಾ | “ಗಾಂಧರ್ವೇಣ ಗರೀಯಸಾ' - ಗಾಂಧರ್ವವೆಂದರೆ ದೇವಸ್ತುತ್ಯಾಶ್ರಯವಾದ ಸಂಗೀತ ರತ್ನಾಕರಾದಿ ಇತರ ಶಾಸ್ತ್ರಗ್ರಂಥಗಳಲ್ಲಿಯೂ ಅದೇ ಅರ್ಥವಿರುತ್ತದೆ. 'ಗರೀಯಸಾ ಗಾಂಧ ರ್ವೇಣ” ಎಂದರೆ ದೇವಸ್ತುತ್ಯರ್ಥವಾದ ಮಹಾಪ್ರಬಂಧದಿಂದ, 'ಮಾಹಾತ್ಮ ಕೀರ್ತಯಂತಿಸ್ಮ' ಎಂದಿರುವುದರಿಂದ ಅದು ದೇವರ ಮಹಾತ್ಮಗಳನ್ನು ವರ್ಣಿಸುವ ಪ್ರಬಂಧವೆಂಬುದು ಸ್ಪಷ್ಟ. ಶ್ರೀನಾಥನು ಅದನ್ನೇ 'ಯಕ್ಷಗಾನ ಸರಣಿ' ಎಂದು ಅನುವಾದಿಸಿರುವುದರಿಂದ ಯಕ್ಷಗಾನ'ವೆಂಬುದು ದೇವರ ಮಹಾತ್ಮಗಳನ್ನು ವರ್ಣಿಸಿರುವ ಹಾಗೂ ದೇವರ ಆರಾಧನಾರ್ಥವಾಗಿರುವ ಮಹಾಪ್ರಬಂಧವಾಗಿತ್ತೆಂಬು ದರಲ್ಲಿ ಸಂದೇಹವುಳಿಯುವುದಿಲ್ಲ. 'ಸರಣಿ” ಎಂದರೆ ಶ್ರೇಣಿ', ಒಂದರ ಹಿಂದೊಂದ ರಂತೆ ಅನೇಕ ಪ್ರಬಂಧಗಳೆಂದರ್ಥ, ಪೂಜಾಪ್ರಬಂಧವೇ ಯಕ್ಷಗಾನ' ವೆಂಬುದು ಇದರಿಂದ ಸಮರ್ಥಿತವಾಗುವುದು. ಹೀಗಿರುವುದರಿಂದ ಪೂಜಾಪ್ರಬಂಧ ಎಂಬ ಅರ್ಥದಲ್ಲಿಯೇ ಯಕ್ಷಗಾನವೆಂಬ ಹೆಸರು ಬಂದಿರುವುದು ಸಹಜವೂ ಯಥಾರ್ಥವೂ ಇರಬೇಕೆಂದು ತೋರುವುದು. ಪ್ರಾಯಶಃ ಜಯದೇವನ ಗೀತ ಗೋವಿಂದದ ಪ್ರಭಾವ ನಮ್ಮ ದಕ್ಷಿಣದೇಶದಲ್ಲಿ ವಿಶೇಷ ಪ್ರಸಿದ್ಧಿಗೆ ಬಂದ ಮೇಲೆಯೇ ಯಕ್ಷಗಾನ ವೆಂಬ ಹೆಸರ, ದಶಾವತಾರ ಆಟವೆಂಬ ಹೆಸರೂ ರೂಢಿಗೆ ಬಂದಿರುವುದು ಸಂಭಾ ವ್ಯವಾಗಿ ತೋರುವುದು, ಗೇಯಪ್ರಬಂಧವೆಂದು ನಾಟ್ಯ ಶಾಸ್ತ್ರದಲ್ಲಿ ಹೇಳಿದೆ. ಕೇರಳದ ಕಥಕಳಿಗೆ ಯಕ್ಷಗಾನವೆಂಬ ಹೆಸರು ಏಕೆ ಬರಲಿಲ್ಲವೆಂದರೆ; ಅದು ದೇವಸ್ಥಾನಗಳ ಸೇವಾರ್ಥವಾಗಿದ್ದುದಲ್ಲ, ದೇವಸ್ಥಾನಗಳನ್ನು ಆಶ್ರಯಿಸಿಕೊಂಡಿ<noinclude></noinclude> rm5i3od0b8mjgj44d20cunuo2ui1z2z 319710 319709 2026-05-14T07:47:00Z Hariprasad Shetty10 7490 319710 proofread-page text/x-wiki <noinclude><pagequality level="1" user="PraneethGanesh" />{{Right|21}}</noinclude> ದೇವರ ಪ್ರತಿಮೆಯನ್ನು ಜೊತೆಯಲ್ಲಿಯೇ ಕೊಂಡುಹೋಗುವುದಲ್ಲದೆ, ಆಟ ಸುರು ಮಾಡುವುದಕ್ಕೆ ಮೊದಲಾಗಿ ನೇಪಥ್ಯ ಗೃಹದಲ್ಲಿ ಆ ದೇವರನ್ನು ಪೂಜೆಗೆ ಇಡುವುದು ಪರಂಪರೆಯಿಂದ ಸರ್ವತ್ರ ನಡೆದು ಬಂದಿದೆ. ಅದೂ ಅಲ್ಲದೆ ದೇವಸ್ಥಾನಗಳಲ್ಲಿ 'ತಾಳ ಮದ್ದಳೆ ಸೇವೆ' ಎಂದು ಹೆಸರಾದ ಗೀತಾರಾಧನೆಯಲ್ಲಿ ಯಕ್ಷಗಾನ ಪದಗಳನ್ನು ಹಾಡುವ ಸಂಪ್ರದಾಯವಿದ್ದಿತ್ತೆಂದೂ ತಿಳಿಯುವುದು. ಹಿಂದೆ ಹೇಳಿದ ಆ ಶ್ರೀನಾಥ ಕವಿಯ ಆಂಧ್ರ 'ಭೀಮೇಶ್ವರ ಪುರಾಣ'ದಲ್ಲಿ ಯಕ್ಷಗಾನದ ಪ್ರಸ್ತಾವವೆಂದರೆ, ದಕ್ಷಾ ರಾಮವೆಂಬ ಶಿವಕ್ಷೇತ್ರದಲ್ಲಿ ಭೀಮೇಶ್ವರ ದೇವರ ಮುಂದೆ (ಶಿವ ದೇವಾಲಯದಲ್ಲಿ) ಯಕ್ಷಗಾನ ಗೀತಾರಾಧನೆ ನಡೆಯುತ್ತಿತ್ತೆಂದು ಕವಿ ವರ್ಣಿಸಿರುವುದಾಗಿದೆ— {{smaller block}} ಕೀರ್ತಿ೦ತುರಿದ್ದಾನಿ ಕೀರ್ತಿ ಗಂಧರ್ವಲು ಗಾಂಧರ್ವಮುನ ಯಕ್ಷಗಾನ ಸರಣಿ | ಇದು, ಅನ್ಯಕರ್ತೃಕವಾದ ಪುರಾತನ ಸಂಸ್ಕೃತ ಭೀಮೇಶ್ವರ ಪುರಾಣವೊಂದನ್ನು ಈ ಕವಿಯು ಆಂದ್ರೀಕರಿಸಿದ್ದು, ಸಂಸ್ಕೃತದ ಆ ಶ್ಲೋಕ ಹೀಗಿರುತ್ತದೆ. ಕೀರ್ತಯಂತಿ ಮಾಹಾತ್ಮಂ ಗಂಧರ್ವಾದಿವೌಕಸಃ | ಗಾಂಧರ್ವವಿದ್ಯಾನಿಪುಣಾ ಗಾಂಧರ್ವೇಣ ಗರೀಯಸಾ | “ಗಾಂಧರ್ವೇಣ ಗರೀಯಸಾ' - ಗಾಂಧರ್ವವೆಂದರೆ ದೇವಸ್ತುತ್ಯಾಶ್ರಯವಾದ ಸಂಗೀತ ರತ್ನಾಕರಾದಿ ಇತರ ಶಾಸ್ತ್ರಗ್ರಂಥಗಳಲ್ಲಿಯೂ ಅದೇ ಅರ್ಥವಿರುತ್ತದೆ. 'ಗರೀಯಸಾ ಗಾಂಧ ರ್ವೇಣ” ಎಂದರೆ ದೇವಸ್ತುತ್ಯರ್ಥವಾದ ಮಹಾಪ್ರಬಂಧದಿಂದ, 'ಮಾಹಾತ್ಮ ಕೀರ್ತಯಂತಿಸ್ಮ' ಎಂದಿರುವುದರಿಂದ ಅದು ದೇವರ ಮಹಾತ್ಮಗಳನ್ನು ವರ್ಣಿಸುವ ಪ್ರಬಂಧವೆಂಬುದು ಸ್ಪಷ್ಟ. ಶ್ರೀನಾಥನು ಅದನ್ನೇ 'ಯಕ್ಷಗಾನ ಸರಣಿ' ಎಂದು ಅನುವಾದಿಸಿರುವುದರಿಂದ ಯಕ್ಷಗಾನ'ವೆಂಬುದು ದೇವರ ಮಹಾತ್ಮಗಳನ್ನು ವರ್ಣಿಸಿರುವ ಹಾಗೂ ದೇವರ ಆರಾಧನಾರ್ಥವಾಗಿರುವ ಮಹಾಪ್ರಬಂಧವಾಗಿತ್ತೆಂಬು ದರಲ್ಲಿ ಸಂದೇಹವುಳಿಯುವುದಿಲ್ಲ. 'ಸರಣಿ” ಎಂದರೆ ಶ್ರೇಣಿ', ಒಂದರ ಹಿಂದೊಂದ ರಂತೆ ಅನೇಕ ಪ್ರಬಂಧಗಳೆಂದರ್ಥ, ಪೂಜಾಪ್ರಬಂಧವೇ ಯಕ್ಷಗಾನ' ವೆಂಬುದು ಇದರಿಂದ ಸಮರ್ಥಿತವಾಗುವುದು. ಹೀಗಿರುವುದರಿಂದ ಪೂಜಾಪ್ರಬಂಧ ಎಂಬ ಅರ್ಥದಲ್ಲಿಯೇ ಯಕ್ಷಗಾನವೆಂಬ ಹೆಸರು ಬಂದಿರುವುದು ಸಹಜವೂ ಯಥಾರ್ಥವೂ ಇರಬೇಕೆಂದು ತೋರುವುದು. ಪ್ರಾಯಶಃ ಜಯದೇವನ ಗೀತ ಗೋವಿಂದದ ಪ್ರಭಾವ ನಮ್ಮ ದಕ್ಷಿಣದೇಶದಲ್ಲಿ ವಿಶೇಷ ಪ್ರಸಿದ್ಧಿಗೆ ಬಂದ ಮೇಲೆಯೇ ಯಕ್ಷಗಾನ ವೆಂಬ ಹೆಸರ, ದಶಾವತಾರ ಆಟವೆಂಬ ಹೆಸರೂ ರೂಢಿಗೆ ಬಂದಿರುವುದು ಸಂಭಾ ವ್ಯವಾಗಿ ತೋರುವುದು, ಗೇಯಪ್ರಬಂಧವೆಂದು ನಾಟ್ಯ ಶಾಸ್ತ್ರದಲ್ಲಿ ಹೇಳಿದೆ. ಕೇರಳದ ಕಥಕಳಿಗೆ ಯಕ್ಷಗಾನವೆಂಬ ಹೆಸರು ಏಕೆ ಬರಲಿಲ್ಲವೆಂದರೆ; ಅದು ದೇವಸ್ಥಾನಗಳ ಸೇವಾರ್ಥವಾಗಿದ್ದುದಲ್ಲ, ದೇವಸ್ಥಾನಗಳನ್ನು ಆಶ್ರಯಿಸಿಕೊಂಡಿ<noinclude></noinclude> lz85ehbplnxdpsmqf3gi3ogpldlmyl9 319711 319710 2026-05-14T07:47:40Z Hariprasad Shetty10 7490 319711 proofread-page text/x-wiki <noinclude><pagequality level="1" user="PraneethGanesh" />{{Right|21}}</noinclude> ದೇವರ ಪ್ರತಿಮೆಯನ್ನು ಜೊತೆಯಲ್ಲಿಯೇ ಕೊಂಡುಹೋಗುವುದಲ್ಲದೆ, ಆಟ ಸುರು ಮಾಡುವುದಕ್ಕೆ ಮೊದಲಾಗಿ ನೇಪಥ್ಯ ಗೃಹದಲ್ಲಿ ಆ ದೇವರನ್ನು ಪೂಜೆಗೆ ಇಡುವುದು ಪರಂಪರೆಯಿಂದ ಸರ್ವತ್ರ ನಡೆದು ಬಂದಿದೆ. ಅದೂ ಅಲ್ಲದೆ ದೇವಸ್ಥಾನಗಳಲ್ಲಿ 'ತಾಳ ಮದ್ದಳೆ ಸೇವೆ' ಎಂದು ಹೆಸರಾದ ಗೀತಾರಾಧನೆಯಲ್ಲಿ ಯಕ್ಷಗಾನ ಪದಗಳನ್ನು ಹಾಡುವ ಸಂಪ್ರದಾಯವಿದ್ದಿತ್ತೆಂದೂ ತಿಳಿಯುವುದು. ಹಿಂದೆ ಹೇಳಿದ ಆ ಶ್ರೀನಾಥ ಕವಿಯ ಆಂಧ್ರ 'ಭೀಮೇಶ್ವರ ಪುರಾಣ'ದಲ್ಲಿ ಯಕ್ಷಗಾನದ ಪ್ರಸ್ತಾವವೆಂದರೆ, ದಕ್ಷಾ ರಾಮವೆಂಬ ಶಿವಕ್ಷೇತ್ರದಲ್ಲಿ ಭೀಮೇಶ್ವರ ದೇವರ ಮುಂದೆ (ಶಿವ ದೇವಾಲಯದಲ್ಲಿ) ಯಕ್ಷಗಾನ ಗೀತಾರಾಧನೆ ನಡೆಯುತ್ತಿತ್ತೆಂದು ಕವಿ ವರ್ಣಿಸಿರುವುದಾಗಿದೆ— {{smaller block}}ಕೀರ್ತಿ೦ತುರಿದ್ದಾನಿ ಕೀರ್ತಿ ಗಂಧರ್ವಲು <br />{{smaller block}}ಗಾಂಧರ್ವಮುನ ಯಕ್ಷಗಾನ ಸರಣಿ | ಇದು, ಅನ್ಯಕರ್ತೃಕವಾದ ಪುರಾತನ ಸಂಸ್ಕೃತ ಭೀಮೇಶ್ವರ ಪುರಾಣವೊಂದನ್ನು ಈ ಕವಿಯು ಆಂದ್ರೀಕರಿಸಿದ್ದು, ಸಂಸ್ಕೃತದ ಆ ಶ್ಲೋಕ ಹೀಗಿರುತ್ತದೆ. ಕೀರ್ತಯಂತಿ ಮಾಹಾತ್ಮಂ ಗಂಧರ್ವಾದಿವೌಕಸಃ | ಗಾಂಧರ್ವವಿದ್ಯಾನಿಪುಣಾ ಗಾಂಧರ್ವೇಣ ಗರೀಯಸಾ | “ಗಾಂಧರ್ವೇಣ ಗರೀಯಸಾ' - ಗಾಂಧರ್ವವೆಂದರೆ ದೇವಸ್ತುತ್ಯಾಶ್ರಯವಾದ ಸಂಗೀತ ರತ್ನಾಕರಾದಿ ಇತರ ಶಾಸ್ತ್ರಗ್ರಂಥಗಳಲ್ಲಿಯೂ ಅದೇ ಅರ್ಥವಿರುತ್ತದೆ. 'ಗರೀಯಸಾ ಗಾಂಧ ರ್ವೇಣ” ಎಂದರೆ ದೇವಸ್ತುತ್ಯರ್ಥವಾದ ಮಹಾಪ್ರಬಂಧದಿಂದ, 'ಮಾಹಾತ್ಮ ಕೀರ್ತಯಂತಿಸ್ಮ' ಎಂದಿರುವುದರಿಂದ ಅದು ದೇವರ ಮಹಾತ್ಮಗಳನ್ನು ವರ್ಣಿಸುವ ಪ್ರಬಂಧವೆಂಬುದು ಸ್ಪಷ್ಟ. ಶ್ರೀನಾಥನು ಅದನ್ನೇ 'ಯಕ್ಷಗಾನ ಸರಣಿ' ಎಂದು ಅನುವಾದಿಸಿರುವುದರಿಂದ ಯಕ್ಷಗಾನ'ವೆಂಬುದು ದೇವರ ಮಹಾತ್ಮಗಳನ್ನು ವರ್ಣಿಸಿರುವ ಹಾಗೂ ದೇವರ ಆರಾಧನಾರ್ಥವಾಗಿರುವ ಮಹಾಪ್ರಬಂಧವಾಗಿತ್ತೆಂಬು ದರಲ್ಲಿ ಸಂದೇಹವುಳಿಯುವುದಿಲ್ಲ. 'ಸರಣಿ” ಎಂದರೆ ಶ್ರೇಣಿ', ಒಂದರ ಹಿಂದೊಂದ ರಂತೆ ಅನೇಕ ಪ್ರಬಂಧಗಳೆಂದರ್ಥ, ಪೂಜಾಪ್ರಬಂಧವೇ ಯಕ್ಷಗಾನ' ವೆಂಬುದು ಇದರಿಂದ ಸಮರ್ಥಿತವಾಗುವುದು. ಹೀಗಿರುವುದರಿಂದ ಪೂಜಾಪ್ರಬಂಧ ಎಂಬ ಅರ್ಥದಲ್ಲಿಯೇ ಯಕ್ಷಗಾನವೆಂಬ ಹೆಸರು ಬಂದಿರುವುದು ಸಹಜವೂ ಯಥಾರ್ಥವೂ ಇರಬೇಕೆಂದು ತೋರುವುದು. ಪ್ರಾಯಶಃ ಜಯದೇವನ ಗೀತ ಗೋವಿಂದದ ಪ್ರಭಾವ ನಮ್ಮ ದಕ್ಷಿಣದೇಶದಲ್ಲಿ ವಿಶೇಷ ಪ್ರಸಿದ್ಧಿಗೆ ಬಂದ ಮೇಲೆಯೇ ಯಕ್ಷಗಾನ ವೆಂಬ ಹೆಸರ, ದಶಾವತಾರ ಆಟವೆಂಬ ಹೆಸರೂ ರೂಢಿಗೆ ಬಂದಿರುವುದು ಸಂಭಾ ವ್ಯವಾಗಿ ತೋರುವುದು, ಗೇಯಪ್ರಬಂಧವೆಂದು ನಾಟ್ಯ ಶಾಸ್ತ್ರದಲ್ಲಿ ಹೇಳಿದೆ. ಕೇರಳದ ಕಥಕಳಿಗೆ ಯಕ್ಷಗಾನವೆಂಬ ಹೆಸರು ಏಕೆ ಬರಲಿಲ್ಲವೆಂದರೆ; ಅದು ದೇವಸ್ಥಾನಗಳ ಸೇವಾರ್ಥವಾಗಿದ್ದುದಲ್ಲ, ದೇವಸ್ಥಾನಗಳನ್ನು ಆಶ್ರಯಿಸಿಕೊಂಡಿ<noinclude></noinclude> jaqtntjbts7337ok8nsg7lyg6lfijb5 319712 319711 2026-05-14T07:49:35Z Hariprasad Shetty10 7490 319712 proofread-page text/x-wiki <noinclude><pagequality level="1" user="PraneethGanesh" />{{Right|21}}</noinclude> ದೇವರ ಪ್ರತಿಮೆಯನ್ನು ಜೊತೆಯಲ್ಲಿಯೇ ಕೊಂಡುಹೋಗುವುದಲ್ಲದೆ, ಆಟ ಸುರು ಮಾಡುವುದಕ್ಕೆ ಮೊದಲಾಗಿ ನೇಪಥ್ಯ ಗೃಹದಲ್ಲಿ ಆ ದೇವರನ್ನು ಪೂಜೆಗೆ ಇಡುವುದು ಪರಂಪರೆಯಿಂದ ಸರ್ವತ್ರ ನಡೆದು ಬಂದಿದೆ. ಅದೂ ಅಲ್ಲದೆ ದೇವಸ್ಥಾನಗಳಲ್ಲಿ 'ತಾಳ ಮದ್ದಳೆ ಸೇವೆ' ಎಂದು ಹೆಸರಾದ ಗೀತಾರಾಧನೆಯಲ್ಲಿ ಯಕ್ಷಗಾನ ಪದಗಳನ್ನು ಹಾಡುವ ಸಂಪ್ರದಾಯವಿದ್ದಿತ್ತೆಂದೂ ತಿಳಿಯುವುದು. ಹಿಂದೆ ಹೇಳಿದ ಆ ಶ್ರೀನಾಥ ಕವಿಯ ಆಂಧ್ರ 'ಭೀಮೇಶ್ವರ ಪುರಾಣ'ದಲ್ಲಿ ಯಕ್ಷಗಾನದ ಪ್ರಸ್ತಾವವೆಂದರೆ, ದಕ್ಷಾ ರಾಮವೆಂಬ ಶಿವಕ್ಷೇತ್ರದಲ್ಲಿ ಭೀಮೇಶ್ವರ ದೇವರ ಮುಂದೆ (ಶಿವ ದೇವಾಲಯದಲ್ಲಿ) ಯಕ್ಷಗಾನ ಗೀತಾರಾಧನೆ ನಡೆಯುತ್ತಿತ್ತೆಂದು ಕವಿ ವರ್ಣಿಸಿರುವುದಾಗಿದೆ— {{smaller block}}ಕೀರ್ತಿ೦ತುರಿದ್ದಾನಿ ಕೀರ್ತಿ ಗಂಧರ್ವಲು <br />{{smaller}}ಗಾಂಧರ್ವಮುನ ಯಕ್ಷಗಾನ ಸರಣಿ | ಇದು, ಅನ್ಯಕರ್ತೃಕವಾದ ಪುರಾತನ ಸಂಸ್ಕೃತ ಭೀಮೇಶ್ವರ ಪುರಾಣವೊಂದನ್ನು ಈ ಕವಿಯು ಆಂದ್ರೀಕರಿಸಿದ್ದು, ಸಂಸ್ಕೃತದ ಆ ಶ್ಲೋಕ ಹೀಗಿರುತ್ತದೆ. ಕೀರ್ತಯಂತಿ ಮಾಹಾತ್ಮಂ ಗಂಧರ್ವಾದಿವೌಕಸಃ | ಗಾಂಧರ್ವವಿದ್ಯಾನಿಪುಣಾ ಗಾಂಧರ್ವೇಣ ಗರೀಯಸಾ | “ಗಾಂಧರ್ವೇಣ ಗರೀಯಸಾ' - ಗಾಂಧರ್ವವೆಂದರೆ ದೇವಸ್ತುತ್ಯಾಶ್ರಯವಾದ ಸಂಗೀತ ರತ್ನಾಕರಾದಿ ಇತರ ಶಾಸ್ತ್ರಗ್ರಂಥಗಳಲ್ಲಿಯೂ ಅದೇ ಅರ್ಥವಿರುತ್ತದೆ. 'ಗರೀಯಸಾ ಗಾಂಧ ರ್ವೇಣ” ಎಂದರೆ ದೇವಸ್ತುತ್ಯರ್ಥವಾದ ಮಹಾಪ್ರಬಂಧದಿಂದ, 'ಮಾಹಾತ್ಮ ಕೀರ್ತಯಂತಿಸ್ಮ' ಎಂದಿರುವುದರಿಂದ ಅದು ದೇವರ ಮಹಾತ್ಮಗಳನ್ನು ವರ್ಣಿಸುವ ಪ್ರಬಂಧವೆಂಬುದು ಸ್ಪಷ್ಟ. ಶ್ರೀನಾಥನು ಅದನ್ನೇ 'ಯಕ್ಷಗಾನ ಸರಣಿ' ಎಂದು ಅನುವಾದಿಸಿರುವುದರಿಂದ ಯಕ್ಷಗಾನ'ವೆಂಬುದು ದೇವರ ಮಹಾತ್ಮಗಳನ್ನು ವರ್ಣಿಸಿರುವ ಹಾಗೂ ದೇವರ ಆರಾಧನಾರ್ಥವಾಗಿರುವ ಮಹಾಪ್ರಬಂಧವಾಗಿತ್ತೆಂಬು ದರಲ್ಲಿ ಸಂದೇಹವುಳಿಯುವುದಿಲ್ಲ. 'ಸರಣಿ” ಎಂದರೆ ಶ್ರೇಣಿ', ಒಂದರ ಹಿಂದೊಂದ ರಂತೆ ಅನೇಕ ಪ್ರಬಂಧಗಳೆಂದರ್ಥ, ಪೂಜಾಪ್ರಬಂಧವೇ ಯಕ್ಷಗಾನ' ವೆಂಬುದು ಇದರಿಂದ ಸಮರ್ಥಿತವಾಗುವುದು. ಹೀಗಿರುವುದರಿಂದ ಪೂಜಾಪ್ರಬಂಧ ಎಂಬ ಅರ್ಥದಲ್ಲಿಯೇ ಯಕ್ಷಗಾನವೆಂಬ ಹೆಸರು ಬಂದಿರುವುದು ಸಹಜವೂ ಯಥಾರ್ಥವೂ ಇರಬೇಕೆಂದು ತೋರುವುದು. ಪ್ರಾಯಶಃ ಜಯದೇವನ ಗೀತ ಗೋವಿಂದದ ಪ್ರಭಾವ ನಮ್ಮ ದಕ್ಷಿಣದೇಶದಲ್ಲಿ ವಿಶೇಷ ಪ್ರಸಿದ್ಧಿಗೆ ಬಂದ ಮೇಲೆಯೇ ಯಕ್ಷಗಾನ ವೆಂಬ ಹೆಸರ, ದಶಾವತಾರ ಆಟವೆಂಬ ಹೆಸರೂ ರೂಢಿಗೆ ಬಂದಿರುವುದು ಸಂಭಾ ವ್ಯವಾಗಿ ತೋರುವುದು, ಗೇಯಪ್ರಬಂಧವೆಂದು ನಾಟ್ಯ ಶಾಸ್ತ್ರದಲ್ಲಿ ಹೇಳಿದೆ. ಕೇರಳದ ಕಥಕಳಿಗೆ ಯಕ್ಷಗಾನವೆಂಬ ಹೆಸರು ಏಕೆ ಬರಲಿಲ್ಲವೆಂದರೆ; ಅದು ದೇವಸ್ಥಾನಗಳ ಸೇವಾರ್ಥವಾಗಿದ್ದುದಲ್ಲ, ದೇವಸ್ಥಾನಗಳನ್ನು ಆಶ್ರಯಿಸಿಕೊಂಡಿ<noinclude></noinclude> a7imtum1du1dmsieeko45kv5jel7jb6 319713 319712 2026-05-14T07:55:30Z Hariprasad Shetty10 7490 319713 proofread-page text/x-wiki <noinclude><pagequality level="1" user="PraneethGanesh" />{{Right|21}}</noinclude> ದೇವರ ಪ್ರತಿಮೆಯನ್ನು ಜೊತೆಯಲ್ಲಿಯೇ ಕೊಂಡುಹೋಗುವುದಲ್ಲದೆ, ಆಟ ಸುರು ಮಾಡುವುದಕ್ಕೆ ಮೊದಲಾಗಿ ನೇಪಥ್ಯ ಗೃಹದಲ್ಲಿ ಆ ದೇವರನ್ನು ಪೂಜೆಗೆ ಇಡುವುದು ಪರಂಪರೆಯಿಂದ ಸರ್ವತ್ರ ನಡೆದು ಬಂದಿದೆ. ಅದೂ ಅಲ್ಲದೆ ದೇವಸ್ಥಾನಗಳಲ್ಲಿ 'ತಾಳ ಮದ್ದಳೆ ಸೇವೆ' ಎಂದು ಹೆಸರಾದ ಗೀತಾರಾಧನೆಯಲ್ಲಿ ಯಕ್ಷಗಾನ ಪದಗಳನ್ನು ಹಾಡುವ ಸಂಪ್ರದಾಯವಿದ್ದಿತ್ತೆಂದೂ ತಿಳಿಯುವುದು. ಹಿಂದೆ ಹೇಳಿದ ಆ ಶ್ರೀನಾಥ ಕವಿಯ ಆಂಧ್ರ 'ಭೀಮೇಶ್ವರ ಪುರಾಣ'ದಲ್ಲಿ ಯಕ್ಷಗಾನದ ಪ್ರಸ್ತಾವವೆಂದರೆ, ದಕ್ಷಾ ರಾಮವೆಂಬ ಶಿವಕ್ಷೇತ್ರದಲ್ಲಿ ಭೀಮೇಶ್ವರ ದೇವರ ಮುಂದೆ (ಶಿವ ದೇವಾಲಯದಲ್ಲಿ) ಯಕ್ಷಗಾನ ಗೀತಾರಾಧನೆ ನಡೆಯುತ್ತಿತ್ತೆಂದು ಕವಿ ವರ್ಣಿಸಿರುವುದಾಗಿದೆ— ಕೀರ್ತಿ೦ತುರೆದ್ದಾನಿ ಕೀರ್ತಿ ಗಂಧರ್ವಲು <br />ಗಾಂಧರ್ವಮುನ ಯಕ್ಷಗಾನ ಸರಣಿ| ಇದು, ಅನ್ಯಕರ್ತೃಕವಾದ ಪುರಾತನ ಸಂಸ್ಕೃತ ಭೀಮೇಶ್ವರ ಪುರಾಣವೊಂದನ್ನು ಈ ಕವಿಯು ಆಂಧ್ರೀಕರಿಸಿದ್ದು, ಸಂಸ್ಕೃತದ ಆ ಶ್ಲೋಕ ಹೀಗಿರುತ್ತದೆ— ಕೀರ್ತಯಂತಿಸ್ಮ ಮಾಹಾತ್ಮೈಂ ಗಂಧರ್ವಾಸ್ತ್ರಿದಿವೌಕಸಃ | <br />ಗಾಂಧರ್ವವಿದ್ಯಾನಿಪುಣಾ ಗಾಂಧರ್ವೇಣ ಗರೀಯಸಾ || “ಗಾಂಧರ್ವೇಣ ಗರೀಯಸಾ' - ಗಾಂಧರ್ವವೆಂದರೆ ದೇವಸ್ತುತ್ಯಾಶ್ರಯವಾದ ಸಂಗೀತ ರತ್ನಾಕರಾದಿ ಇತರ ಶಾಸ್ತ್ರಗ್ರಂಥಗಳಲ್ಲಿಯೂ ಅದೇ ಅರ್ಥವಿರುತ್ತದೆ. 'ಗರೀಯಸಾ ಗಾಂಧ ರ್ವೇಣ” ಎಂದರೆ ದೇವಸ್ತುತ್ಯರ್ಥವಾದ ಮಹಾಪ್ರಬಂಧದಿಂದ, 'ಮಾಹಾತ್ಮ ಕೀರ್ತಯಂತಿಸ್ಮ' ಎಂದಿರುವುದರಿಂದ ಅದು ದೇವರ ಮಹಾತ್ಮಗಳನ್ನು ವರ್ಣಿಸುವ ಪ್ರಬಂಧವೆಂಬುದು ಸ್ಪಷ್ಟ. ಶ್ರೀನಾಥನು ಅದನ್ನೇ 'ಯಕ್ಷಗಾನ ಸರಣಿ' ಎಂದು ಅನುವಾದಿಸಿರುವುದರಿಂದ ಯಕ್ಷಗಾನ'ವೆಂಬುದು ದೇವರ ಮಹಾತ್ಮಗಳನ್ನು ವರ್ಣಿಸಿರುವ ಹಾಗೂ ದೇವರ ಆರಾಧನಾರ್ಥವಾಗಿರುವ ಮಹಾಪ್ರಬಂಧವಾಗಿತ್ತೆಂಬು ದರಲ್ಲಿ ಸಂದೇಹವುಳಿಯುವುದಿಲ್ಲ. 'ಸರಣಿ” ಎಂದರೆ ಶ್ರೇಣಿ', ಒಂದರ ಹಿಂದೊಂದ ರಂತೆ ಅನೇಕ ಪ್ರಬಂಧಗಳೆಂದರ್ಥ, ಪೂಜಾಪ್ರಬಂಧವೇ ಯಕ್ಷಗಾನ' ವೆಂಬುದು ಇದರಿಂದ ಸಮರ್ಥಿತವಾಗುವುದು. ಹೀಗಿರುವುದರಿಂದ ಪೂಜಾಪ್ರಬಂಧ ಎಂಬ ಅರ್ಥದಲ್ಲಿಯೇ ಯಕ್ಷಗಾನವೆಂಬ ಹೆಸರು ಬಂದಿರುವುದು ಸಹಜವೂ ಯಥಾರ್ಥವೂ ಇರಬೇಕೆಂದು ತೋರುವುದು. ಪ್ರಾಯಶಃ ಜಯದೇವನ ಗೀತ ಗೋವಿಂದದ ಪ್ರಭಾವ ನಮ್ಮ ದಕ್ಷಿಣದೇಶದಲ್ಲಿ ವಿಶೇಷ ಪ್ರಸಿದ್ಧಿಗೆ ಬಂದ ಮೇಲೆಯೇ ಯಕ್ಷಗಾನ ವೆಂಬ ಹೆಸರ, ದಶಾವತಾರ ಆಟವೆಂಬ ಹೆಸರೂ ರೂಢಿಗೆ ಬಂದಿರುವುದು ಸಂಭಾ ವ್ಯವಾಗಿ ತೋರುವುದು, ಗೇಯಪ್ರಬಂಧವೆಂದು ನಾಟ್ಯ ಶಾಸ್ತ್ರದಲ್ಲಿ ಹೇಳಿದೆ. ಕೇರಳದ ಕಥಕಳಿಗೆ ಯಕ್ಷಗಾನವೆಂಬ ಹೆಸರು ಏಕೆ ಬರಲಿಲ್ಲವೆಂದರೆ; ಅದು ದೇವಸ್ಥಾನಗಳ ಸೇವಾರ್ಥವಾಗಿದ್ದುದಲ್ಲ, ದೇವಸ್ಥಾನಗಳನ್ನು ಆಶ್ರಯಿಸಿಕೊಂಡಿ<noinclude></noinclude> agm66bg4a2iwfgtttvo46hu5iihge5q 319714 319713 2026-05-14T08:08:28Z Hariprasad Shetty10 7490 319714 proofread-page text/x-wiki <noinclude><pagequality level="1" user="PraneethGanesh" />{{Right|21}}</noinclude> ದೇವರ ಪ್ರತಿಮೆಯನ್ನು ಜೊತೆಯಲ್ಲಿಯೇ ಕೊಂಡುಹೋಗುವುದಲ್ಲದೆ, ಆಟ ಸುರು ಮಾಡುವುದಕ್ಕೆ ಮೊದಲಾಗಿ ನೇಪಥ್ಯ ಗೃಹದಲ್ಲಿ ಆ ದೇವರನ್ನು ಪೂಜೆಗೆ ಇಡುವುದು ಪರಂಪರೆಯಿಂದ ಸರ್ವತ್ರ ನಡೆದು ಬಂದಿದೆ. ಅದೂ ಅಲ್ಲದೆ ದೇವಸ್ಥಾನಗಳಲ್ಲಿ 'ತಾಳ ಮದ್ದಳೆ ಸೇವೆ' ಎಂದು ಹೆಸರಾದ ಗೀತಾರಾಧನೆಯಲ್ಲಿ ಯಕ್ಷಗಾನ ಪದಗಳನ್ನು ಹಾಡುವ ಸಂಪ್ರದಾಯವಿದ್ದಿತ್ತೆಂದೂ ತಿಳಿಯುವುದು. ಹಿಂದೆ ಹೇಳಿದ ಆ ಶ್ರೀನಾಥ ಕವಿಯ ಆಂಧ್ರ 'ಭೀಮೇಶ್ವರ ಪುರಾಣ'ದಲ್ಲಿ ಯಕ್ಷಗಾನದ ಪ್ರಸ್ತಾವವೆಂದರೆ, ದಕ್ಷಾ ರಾಮವೆಂಬ ಶಿವಕ್ಷೇತ್ರದಲ್ಲಿ ಭೀಮೇಶ್ವರ ದೇವರ ಮುಂದೆ (ಶಿವ ದೇವಾಲಯದಲ್ಲಿ) ಯಕ್ಷಗಾನ ಗೀತಾರಾಧನೆ ನಡೆಯುತ್ತಿತ್ತೆಂದು ಕವಿ ವರ್ಣಿಸಿರುವುದಾಗಿದೆ— ಕೀರ್ತಿ೦ತುರೆದ್ದಾನಿ ಕೀರ್ತಿ ಗಂಧರ್ವಲು <br />ಗಾಂಧರ್ವಮುನ ಯಕ್ಷಗಾನ ಸರಣಿ| ಇದು, ಅನ್ಯಕರ್ತೃಕವಾದ ಪುರಾತನ ಸಂಸ್ಕೃತ ಭೀಮೇಶ್ವರ ಪುರಾಣವೊಂದನ್ನು ಈ ಕವಿಯು ಆಂಧ್ರೀಕರಿಸಿದ್ದು, ಸಂಸ್ಕೃತದ ಆ ಶ್ಲೋಕ ಹೀಗಿರುತ್ತದೆ— ಕೀರ್ತಯಂತಿಸ್ಮ ಮಾಹಾತ್ಮೈಂ ಗಂಧರ್ವಾಸ್ತ್ರಿದಿವೌಕಸಃ | <br />ಗಾಂಧರ್ವವಿದ್ಯಾನಿಪುಣಾ ಗಾಂಧರ್ವೇಣ ಗರೀಯಸಾ || “ಗಾಂಧರ್ವೇಣ ಗರೀಯಸಾ' - ಗಾಂಧರ್ವವೆಂದರೆ ದೇವಸ್ತುತ್ಯಾಶ್ರಯವಾದ ಗೇಯಪ್ರಬ‍ಂಧವೆಂದು ನಾಟ್ಯ ಶಾಸ್ತ್ರದಲ್ಲೇ ಹೇಳಿದೆ. ಸಂಗೀತ ರತ್ನಾಕರಾದಿ ಇತರ ಶಾಸ್ತ್ರಗ್ರಂಥಗಳಲ್ಲಿಯೂ ಅದೇ ಅರ್ಥವಿರುತ್ತದೆ. 'ಗರೀಯಸಾ ಗಾಂಧರ್ವೇಣ” ಎಂದರೆ ದೇವಸ್ತುತ್ಯರ್ಥವಾದ ಮಹಾಪ್ರಬಂಧದಿಂದ, 'ಮಾಹಾತ್ಮಂ ಕೀರ್ತಯಂತಿಸ್ಮ' ಎಂದಿರುವುದರಿಂದ ಅದು ದೇವರ ಮಹಾತ್ಮ್ಯಗಳನ್ನು ವರ್ಣಿಸಿರುವ ಪ್ರಬಂಧವೆಂಬುದು ಸ್ಪಷ್ಟ. ಶ್ರೀನಾಥನು ಅದನ್ನೇ 'ಯಕ್ಷಗಾನ ಸರಣಿ' ಎಂದು ಅನುವಾದಿಸಿರುವುದರಿಂದ 'ಯಕ್ಷಗಾನ'ವೆಂಬುದು ದೇವರ ಮಹಾತ್ಮಗಳನ್ನು ವರ್ಣಿಸಿರುವ ಹಾಗೂ ದೇವರ ಆರಾಧನಾರ್ಥವಾಗಿರುವ ಮಹಾಪ್ರಬಂಧವಾಗಿತ್ತೆಂಬುದರಲ್ಲಿ ಸಂದೇಹವುಳಿಯುವುದಿಲ್ಲ. 'ಸರಣಿ” ಎಂದರೆ ಶ್ರೇಣಿ', ಒಂದರ ಹಿಂದೊಂದರಂತೆ ಅನೇಕ ಪ್ರಬಂಧಗಳೆಂದರ್ಥ. ಪೂಜಾಪ್ರಬಂಧವೇ —ಯಕ್ಷಗಾನ'ವೆಂಬುದು ಇದರಿಂದ ಸಮರ್ಥಿತವಾಗುವುದು. ಹೀಗಿರುವುದರಿಂದ ಪೂಜಾಪ್ರಬಂಧ ಎಂಬ ಅರ್ಥದಲ್ಲಿಯೇ ಯಕ್ಷಗಾನವೆಂಬ ಹೆಸರು ಬಂದಿರುವುದು ಸಹಜವೂ ಯಥಾರ್ಥವೂ ಇರಬೇಕೆಂದು ತೋರುವುದು. ಪ್ರಾಯಶಃ ಜಯದೇವನ ಗೀತ ಗೋವಿಂದದ ಪ್ರಭಾವ ನಮ್ಮ ದಕ್ಷಿಣದೇಶದಲ್ಲಿ ವಿಶೇಷ ಪ್ರಸಿದ್ಧಿಗೆ ಬಂದ ಮೇಲೆಯೇ ಯಕ್ಷಗಾನವೆಂಬ ಹೆಸರೂ, ದಶಾವತಾರ ಆಟವೆಂಬ ಹೆಸರೂ ರೂಢಿಗೆ ಬಂದಿರುವುದು ಸಂಭಾವ್ಯವಾಗಿ ತೋರುವುದು. {{gap}}ಕೇರಳದ ಕಥಕಳಿಗೆ ಯಕ್ಷಗಾನವೆಂಬ ಹೆಸರು ಏಕೆ ಬರಲಿಲ್ಲವೆಂದರೆ; ಅದು ದೇವಸ್ಥಾನಗಳ ಸೇವಾರ್ಥವಾಗಿದ್ದುದಲ್ಲ, ದೇವಸ್ಥಾನಗಳನ್ನು ಆಶ್ರಯಿಸಿಕೊಂಡಿ<noinclude></noinclude> 0r2nent3kvygt2wmhb3zm9n3zhrx35u 319715 319714 2026-05-14T08:08:37Z Hariprasad Shetty10 7490 /* Proofread */ 319715 proofread-page text/x-wiki <noinclude><pagequality level="3" user="Hariprasad Shetty10" />{{Right|21}}</noinclude> ದೇವರ ಪ್ರತಿಮೆಯನ್ನು ಜೊತೆಯಲ್ಲಿಯೇ ಕೊಂಡುಹೋಗುವುದಲ್ಲದೆ, ಆಟ ಸುರು ಮಾಡುವುದಕ್ಕೆ ಮೊದಲಾಗಿ ನೇಪಥ್ಯ ಗೃಹದಲ್ಲಿ ಆ ದೇವರನ್ನು ಪೂಜೆಗೆ ಇಡುವುದು ಪರಂಪರೆಯಿಂದ ಸರ್ವತ್ರ ನಡೆದು ಬಂದಿದೆ. ಅದೂ ಅಲ್ಲದೆ ದೇವಸ್ಥಾನಗಳಲ್ಲಿ 'ತಾಳ ಮದ್ದಳೆ ಸೇವೆ' ಎಂದು ಹೆಸರಾದ ಗೀತಾರಾಧನೆಯಲ್ಲಿ ಯಕ್ಷಗಾನ ಪದಗಳನ್ನು ಹಾಡುವ ಸಂಪ್ರದಾಯವಿದ್ದಿತ್ತೆಂದೂ ತಿಳಿಯುವುದು. ಹಿಂದೆ ಹೇಳಿದ ಆ ಶ್ರೀನಾಥ ಕವಿಯ ಆಂಧ್ರ 'ಭೀಮೇಶ್ವರ ಪುರಾಣ'ದಲ್ಲಿ ಯಕ್ಷಗಾನದ ಪ್ರಸ್ತಾವವೆಂದರೆ, ದಕ್ಷಾ ರಾಮವೆಂಬ ಶಿವಕ್ಷೇತ್ರದಲ್ಲಿ ಭೀಮೇಶ್ವರ ದೇವರ ಮುಂದೆ (ಶಿವ ದೇವಾಲಯದಲ್ಲಿ) ಯಕ್ಷಗಾನ ಗೀತಾರಾಧನೆ ನಡೆಯುತ್ತಿತ್ತೆಂದು ಕವಿ ವರ್ಣಿಸಿರುವುದಾಗಿದೆ— ಕೀರ್ತಿ೦ತುರೆದ್ದಾನಿ ಕೀರ್ತಿ ಗಂಧರ್ವಲು <br />ಗಾಂಧರ್ವಮುನ ಯಕ್ಷಗಾನ ಸರಣಿ| ಇದು, ಅನ್ಯಕರ್ತೃಕವಾದ ಪುರಾತನ ಸಂಸ್ಕೃತ ಭೀಮೇಶ್ವರ ಪುರಾಣವೊಂದನ್ನು ಈ ಕವಿಯು ಆಂಧ್ರೀಕರಿಸಿದ್ದು, ಸಂಸ್ಕೃತದ ಆ ಶ್ಲೋಕ ಹೀಗಿರುತ್ತದೆ— ಕೀರ್ತಯಂತಿಸ್ಮ ಮಾಹಾತ್ಮೈಂ ಗಂಧರ್ವಾಸ್ತ್ರಿದಿವೌಕಸಃ | <br />ಗಾಂಧರ್ವವಿದ್ಯಾನಿಪುಣಾ ಗಾಂಧರ್ವೇಣ ಗರೀಯಸಾ || “ಗಾಂಧರ್ವೇಣ ಗರೀಯಸಾ' - ಗಾಂಧರ್ವವೆಂದರೆ ದೇವಸ್ತುತ್ಯಾಶ್ರಯವಾದ ಗೇಯಪ್ರಬ‍ಂಧವೆಂದು ನಾಟ್ಯ ಶಾಸ್ತ್ರದಲ್ಲೇ ಹೇಳಿದೆ. ಸಂಗೀತ ರತ್ನಾಕರಾದಿ ಇತರ ಶಾಸ್ತ್ರಗ್ರಂಥಗಳಲ್ಲಿಯೂ ಅದೇ ಅರ್ಥವಿರುತ್ತದೆ. 'ಗರೀಯಸಾ ಗಾಂಧರ್ವೇಣ” ಎಂದರೆ ದೇವಸ್ತುತ್ಯರ್ಥವಾದ ಮಹಾಪ್ರಬಂಧದಿಂದ, 'ಮಾಹಾತ್ಮಂ ಕೀರ್ತಯಂತಿಸ್ಮ' ಎಂದಿರುವುದರಿಂದ ಅದು ದೇವರ ಮಹಾತ್ಮ್ಯಗಳನ್ನು ವರ್ಣಿಸಿರುವ ಪ್ರಬಂಧವೆಂಬುದು ಸ್ಪಷ್ಟ. ಶ್ರೀನಾಥನು ಅದನ್ನೇ 'ಯಕ್ಷಗಾನ ಸರಣಿ' ಎಂದು ಅನುವಾದಿಸಿರುವುದರಿಂದ 'ಯಕ್ಷಗಾನ'ವೆಂಬುದು ದೇವರ ಮಹಾತ್ಮಗಳನ್ನು ವರ್ಣಿಸಿರುವ ಹಾಗೂ ದೇವರ ಆರಾಧನಾರ್ಥವಾಗಿರುವ ಮಹಾಪ್ರಬಂಧವಾಗಿತ್ತೆಂಬುದರಲ್ಲಿ ಸಂದೇಹವುಳಿಯುವುದಿಲ್ಲ. 'ಸರಣಿ” ಎಂದರೆ ಶ್ರೇಣಿ', ಒಂದರ ಹಿಂದೊಂದರಂತೆ ಅನೇಕ ಪ್ರಬಂಧಗಳೆಂದರ್ಥ. ಪೂಜಾಪ್ರಬಂಧವೇ —ಯಕ್ಷಗಾನ'ವೆಂಬುದು ಇದರಿಂದ ಸಮರ್ಥಿತವಾಗುವುದು. ಹೀಗಿರುವುದರಿಂದ ಪೂಜಾಪ್ರಬಂಧ ಎಂಬ ಅರ್ಥದಲ್ಲಿಯೇ ಯಕ್ಷಗಾನವೆಂಬ ಹೆಸರು ಬಂದಿರುವುದು ಸಹಜವೂ ಯಥಾರ್ಥವೂ ಇರಬೇಕೆಂದು ತೋರುವುದು. ಪ್ರಾಯಶಃ ಜಯದೇವನ ಗೀತ ಗೋವಿಂದದ ಪ್ರಭಾವ ನಮ್ಮ ದಕ್ಷಿಣದೇಶದಲ್ಲಿ ವಿಶೇಷ ಪ್ರಸಿದ್ಧಿಗೆ ಬಂದ ಮೇಲೆಯೇ ಯಕ್ಷಗಾನವೆಂಬ ಹೆಸರೂ, ದಶಾವತಾರ ಆಟವೆಂಬ ಹೆಸರೂ ರೂಢಿಗೆ ಬಂದಿರುವುದು ಸಂಭಾವ್ಯವಾಗಿ ತೋರುವುದು. {{gap}}ಕೇರಳದ ಕಥಕಳಿಗೆ ಯಕ್ಷಗಾನವೆಂಬ ಹೆಸರು ಏಕೆ ಬರಲಿಲ್ಲವೆಂದರೆ; ಅದು ದೇವಸ್ಥಾನಗಳ ಸೇವಾರ್ಥವಾಗಿದ್ದುದಲ್ಲ, ದೇವಸ್ಥಾನಗಳನ್ನು ಆಶ್ರಯಿಸಿಕೊಂಡಿ<noinclude></noinclude> 4h88biry4ab0jug4bfv8e39an6087by ಪುಟ:ಯಕ್ಷಗಾನ ಮಕರಂದ.pdf/೨೭೨ 104 100193 319716 281820 2026-05-14T08:12:00Z Hariprasad Shetty10 7490 319716 proofread-page text/x-wiki <noinclude><pagequality level="1" user="PraneethGanesh" />{{Left|22}}</noinclude>ದ್ದುದೂ ಅಲ್ಲ. ಅಲ್ಲಿಯ ದೇವಸ್ಥಾನಗಳಲ್ಲಿ 'ಚೊಕ್ಯಾರ್ ಕೂತ್ತು' ಹಾಗೂ ' 'ಕೂಡಿಯಾಟ್ಟಂ' ಎಂಬ ಹೆಸರಿನಿಂದ ಸಂಸ್ಕೃತ ನಾಟಕಗಳ ಹಾಗೂ ಉಪರೂಪಕಗಳ ಪ್ರಯೋಗವು ನಡೆಯುತ್ತಿತ್ತೆಂಬುದು ಸರ್ವಶ್ರುತವಾದ ವಿಚಾರ. ಗೀತ ಗೋವಿಂದದ ನಾಟ್ಯ ಸೇವೆಯ ಅಲ್ಲಿಯ ದೇವಸ್ಥಾನಗಳಲ್ಲಿ ಸಂಸ್ಕೃತ ಪ್ರಬಂಧಗಳ ಮೂಲಕವೇ ಅಷ್ಟಪದಿಯಾಟ್ಟ', 'ಕೃಷ್ಣಾಟ್ಟಂ' ಎಂಬ ಹೆಸರಿನಿಂದ ನಡೆಯುತ್ತಿತ್ತು. ದೇವಸ್ಥಾ ನದ ಒಳಾಂಗಣದಲ್ಲಿ ನಡೆಯುತ್ತಿದ್ದ ಆ ನಾಟ್ಯ ಪ್ರಯೋಗಗಳಿಗೆ ಬ್ರಾಹ್ಮಣೇತರರಿಗೆ ಪ್ರವೇಶವಿಲ್ಲದೇ ಇದ್ದ ನಿಮಿತ್ತ ಅಂಥ ಸಾರ್ವಜನಿಕರ ಅನುಕೂಲಕ್ಕೆ ಬೇಕಾಗಿ ಕೊಟ್ಟಾರಕರದಲ್ಲಿದ್ದ ಒಬ್ಬ ರಾಜನು ರಾಮಾಯಣ ಪ್ರಬಂಧಗಳನ್ನು ರಚಿಸಿ ರಾಮನಾಟ್ಟಂ' ಎಂಬ ಹೆಸರಿನಿಂದ ಈ ಪ್ರಯೋಗವನ್ನು ರೂಢಿಗೆ ತಂದುದಾಗಿ ಜನಜನಿತವಾದ ಹೇಳಿಕೆಯಿದೆ, ಸಂಶೋಧಕರ ಬರಹಗಳೂ ಬಂದಿವೆ. ಇನ್ನು, ಯಕ್ಷಗಾನ ಪ್ರಯೋಗಕ್ಕೆ 'ಬಯಲಾಟ'ವೆಂಬ ಹೆಸರು ಯಾವುದ ವೆಂದು ಕರೆದರೆ ಆಂಧ್ರದಲ್ಲಿ 'ವೀಥಿನಾಟಕ'ವೆಂದು ಹೆಸರಾಗಿದೆ. ಅದಕ್ಕೆ, ದಶ ದ ಪ್ರಶ್ನೆಯೇ, ನಮ್ಮಲ್ಲಿ 'ಬಯಲಾಟ' ರೂಪಕಗಳಲ್ಲಿ ಒಂದಾದ 'ವೀಥೀ' ಎಂಬ ಅರ್ಥವಲ್ಲ; ಹೊರಬೀದಿಯಲ್ಲಿ ಆಡುವುದು ಎಂಬುದರಿಂದ ಬಂದ ಹೆಸರದು. ದ್ರಾವಿಡ ದೇಶದ 'ತೆರುಕ್ಕೂತ್ತು' ಎಂಬ ಹೆಸರಿಗೂ ಬಯಲಾಟವೆಂದೇ ಅರ್ಥ. ಇದರಿಂದ, ಹೊರಬಯಲಲ್ಲಿ ಅಲ್ಲದೆ ಒಳಗೆ ಆಡುವ ಆಟವೆಂಬುದು ಬೇರೆ ಇದ್ದಿರಬೇಕೆಂಬ ಅನುಮಾನ ಸಹಜವಾಗಿ ಹುಟ್ಟುತ್ತದೆ. ಹಾಗೆ ನಾಟಕಶಾಲೆ (Stage, theatre) ಯೊಳಗೆ ಆಡುವ ಪ್ರಯೋಗವಿದ್ದಿತೆಂ ಬುದೂ ಪೂರ್ವದ ನಮ್ಮ ಕಾವ್ಯಾದಿಗಳಲ್ಲಿ ಬರುವ ವರ್ಣನೆಗಳಿಂದ ತಿಳಿದು ಬರು ತದೆ. ದೇವಾಲಯಕ್ಕೆ ಸಂಬಂಧಿಸಿಯ, ರಾಜಾಲಯಕ್ಕೆ ಸಂಬಂಧಿಸಿಯ, ನಾಟ್ಯ ಮಂದಿರಗಳಿದ್ದವು. ಕಾವ್ಯಗಳಲ್ಲಿ ವರ್ಣಿಸಿರುವ ಪ್ರಕಾರ ಆ ಪ್ರಯೋಗ ಗಳು ಶುದ್ಧ ಶಾಸ್ತ್ರೀಯ ಸಂಪ್ರದಾಯದಲ್ಲಿ ನಡೆಯುತ್ತಿದ್ದುವೆಂದು ಊಹಿಸ ಬಹುದು. ಅತಃಪೂರ್ವದಲ್ಲಿಯೇ ಹೀಗೆ ಆಭ್ಯಂತರ, ಬಾಹ್ಯ ಎಂಬ ಎರಡು ವಿಧದ ನಾಟಕ ಪ್ರಯೋಗಗಳಿದ್ದುದನ್ನು ನಾಟ್ಯಶಾಸ್ತ್ರದಲ್ಲಿ ಭರತ ಮುನಿಯ ಹೇಳು ತಾನೆ. ಅವುಗಳಲ್ಲಿ ಬಾಹ್ಯಪ್ರಯೋಗಕ್ಕೆ ಆ ಹೆಸರು ಯಾವುದಕ್ಕಾಗಿ ಎಂಬು ದನ್ನು ಹೀಗೆ ಹೇಳಿದ್ದಾನೆ (ನಾಟಕಾದಿ ರೂಪಕಗಳಲ್ಲಿ ಚತುರ್ವಿಧವಾದ ಅಭಿನಯ ಗಳನ್ನು ಸಲಕ್ಷಣವಾಗಿಯೂ ಶುದ್ಧವಾಗಿ ಹೇಗೆ ನಿರ್ವಹಿಸಬೇಕೆಂಬುದನ್ನು ಹೇಳಿದ ಮೇಲೆ ಈ ಶ್ಲೋಕಗಳು ಬರುತ್ತವೆ.) ರಿಂದ ಬಂತೆಂಬುದು ಸಹ ವಿಚಾರಾರ್ಹವಾದ ಏತೇ ಪ್ರಯೋರ್ನಿಯಾ ಮಾರ್ಗಾದ್ಯಭಿನಯೇಸ್ಮೃತಾಃ| ಯವೀದೃಶಂ ಭವೇನಾಟ್ಯಂ ಯಮಾಭ್ಯಂತರಂತು ತತ್ | ಲಕ್ಷಣಾಭ್ಯಂತರತ್ವಾಗಿ ತದಾಭ್ಯಂತರವಿಷ್ಯತೇ | ಶಾಸ್ತ್ರಬಾಹ್ಯಂ ಭವೇದ್ಯತ್ತು ತದ್ಭಾಹ್ಯಮಿತಿ ಸಂಸ್ಕೃತಂ 0<noinclude></noinclude> cntj1rjbwjculalvoxkijnzjpdf0wn5 319717 319716 2026-05-14T08:16:28Z Hariprasad Shetty10 7490 319717 proofread-page text/x-wiki <noinclude><pagequality level="1" user="PraneethGanesh" />{{Left|22}}</noinclude>ದ್ದುದೂ ಅಲ್ಲ. ಅಲ್ಲಿಯ ದೇವಸ್ಥಾನಗಳಲ್ಲಿ 'ಚೊಕ್ಯಾರ್ ಕೂತ್ತು' ಹಾಗೂ ' 'ಕೂಡಿಯಾಟ್ಟಂ' ಎಂಬ ಹೆಸರಿನಿಂದ ಸಂಸ್ಕೃತ ನಾಟಕಗಳ ಹಾಗೂ ಉಪರೂಪಕಗಳ ಪ್ರಯೋಗವು ನಡೆಯುತ್ತಿತ್ತೆಂಬುದು ಸರ್ವಶ್ರುತವಾದ ವಿಚಾರ. ಗೀತ ಗೋವಿಂದದ ನಾಟ್ಯ ಸೇವೆಯೂ ಅಲ್ಲಿಯ ದೇವಸ್ಥಾನಗಳಲ್ಲಿ ಸಂಸ್ಕೃತ ಪ್ರಬಂಧಗಳ ಮೂಲಕವೇ 'ಅಷ್ಟಪದಿಯಾಟ್ಟಂ', 'ಕೃಷ್ಣಾಟ್ಟಂ' ಎಂಬ ಹೆಸರಿನಿಂದ ನಡೆಯುತ್ತಿತ್ತು. ದೇವಸ್ಥಾನದ ಒಳಾಂಗಣದಲ್ಲಿ ನಡೆಯುತ್ತಿದ್ದ ಆ ನಾಟ್ಯ ಪ್ರಯೋಗಗಳಿಗೆ ಬ್ರಾಹ್ಮಣೇತರರಿಗೆ ಪ್ರವೇಶವಿಲ್ಲದೇ ಇದ್ದ ನಿಮಿತ್ತ ಅಂಥ ಸಾರ್ವಜನಿಕರ ಅನುಕೂಲಕ್ಕೆ ಬೇಕಾಗಿ ಕೊಟ್ಟಾರಕರದಲ್ಲಿದ್ದ ಒಬ್ಬ ರಾಜನು ರಾಮಾಯಣ ಪ್ರಬಂಧಗಳನ್ನು ರಚಿಸಿ'ರಾಮನಾಟ್ಟಂ' ಎಂಬ ಹೆಸರಿನಿಂದ ಈ ಪ್ರಯೋಗವನ್ನು ರೂಢಿಗೆ ತಂದುದಾಗಿ ಜನಜನಿತವಾದ ಹೇಳಿಕೆಯಿದೆ, ಸಂಶೋಧಕರ ಬರಹಗಳೂ ಬಂದಿವೆ. {{gap}}ಇನ್ನು, ಯಕ್ಷಗಾನ ಪ್ರಯೋಗಕ್ಕೆ 'ಬಯಲಾಟ'ವೆಂಬ ಹೆಸರು ಯಾವುದ ವೆಂದು ಕರೆದರೆ ಆಂಧ್ರದಲ್ಲಿ 'ವೀಥಿನಾಟಕ'ವೆಂದು ಹೆಸರಾಗಿದೆ. ಅದಕ್ಕೆ, ದಶ ದ ಪ್ರಶ್ನೆಯೇ, ನಮ್ಮಲ್ಲಿ 'ಬಯಲಾಟ' ರೂಪಕಗಳಲ್ಲಿ ಒಂದಾದ 'ವೀಥೀ' ಎಂಬ ಅರ್ಥವಲ್ಲ; ಹೊರಬೀದಿಯಲ್ಲಿ ಆಡುವುದು ಎಂಬುದರಿಂದ ಬಂದ ಹೆಸರದು. ದ್ರಾವಿಡ ದೇಶದ 'ತೆರುಕ್ಕೂತ್ತು' ಎಂಬ ಹೆಸರಿಗೂ ಬಯಲಾಟವೆಂದೇ ಅರ್ಥ. ಇದರಿಂದ, ಹೊರಬಯಲಲ್ಲಿ ಅಲ್ಲದೆ ಒಳಗೆ ಆಡುವ ಆಟವೆಂಬುದು ಬೇರೆ ಇದ್ದಿರಬೇಕೆಂಬ ಅನುಮಾನ ಸಹಜವಾಗಿ ಹುಟ್ಟುತ್ತದೆ. ಹಾಗೆ ನಾಟಕಶಾಲೆ (Stage, theatre) ಯೊಳಗೆ ಆಡುವ ಪ್ರಯೋಗವಿದ್ದಿತೆಂ ಬುದೂ ಪೂರ್ವದ ನಮ್ಮ ಕಾವ್ಯಾದಿಗಳಲ್ಲಿ ಬರುವ ವರ್ಣನೆಗಳಿಂದ ತಿಳಿದು ಬರು ತದೆ. ದೇವಾಲಯಕ್ಕೆ ಸಂಬಂಧಿಸಿಯ, ರಾಜಾಲಯಕ್ಕೆ ಸಂಬಂಧಿಸಿಯ, ನಾಟ್ಯ ಮಂದಿರಗಳಿದ್ದವು. ಕಾವ್ಯಗಳಲ್ಲಿ ವರ್ಣಿಸಿರುವ ಪ್ರಕಾರ ಆ ಪ್ರಯೋಗ ಗಳು ಶುದ್ಧ ಶಾಸ್ತ್ರೀಯ ಸಂಪ್ರದಾಯದಲ್ಲಿ ನಡೆಯುತ್ತಿದ್ದುವೆಂದು ಊಹಿಸ ಬಹುದು. ಅತಃಪೂರ್ವದಲ್ಲಿಯೇ ಹೀಗೆ ಆಭ್ಯಂತರ, ಬಾಹ್ಯ ಎಂಬ ಎರಡು ವಿಧದ ನಾಟಕ ಪ್ರಯೋಗಗಳಿದ್ದುದನ್ನು ನಾಟ್ಯಶಾಸ್ತ್ರದಲ್ಲಿ ಭರತ ಮುನಿಯ ಹೇಳು ತಾನೆ. ಅವುಗಳಲ್ಲಿ ಬಾಹ್ಯಪ್ರಯೋಗಕ್ಕೆ ಆ ಹೆಸರು ಯಾವುದಕ್ಕಾಗಿ ಎಂಬು ದನ್ನು ಹೀಗೆ ಹೇಳಿದ್ದಾನೆ (ನಾಟಕಾದಿ ರೂಪಕಗಳಲ್ಲಿ ಚತುರ್ವಿಧವಾದ ಅಭಿನಯ ಗಳನ್ನು ಸಲಕ್ಷಣವಾಗಿಯೂ ಶುದ್ಧವಾಗಿ ಹೇಗೆ ನಿರ್ವಹಿಸಬೇಕೆಂಬುದನ್ನು ಹೇಳಿದ ಮೇಲೆ ಈ ಶ್ಲೋಕಗಳು ಬರುತ್ತವೆ.) ರಿಂದ ಬಂತೆಂಬುದು ಸಹ ವಿಚಾರಾರ್ಹವಾದ ಏತೇ ಪ್ರಯೋರ್ನಿಯಾ ಮಾರ್ಗಾದ್ಯಭಿನಯೇಸ್ಮೃತಾಃ| ಯವೀದೃಶಂ ಭವೇನಾಟ್ಯಂ ಯಮಾಭ್ಯಂತರಂತು ತತ್ | ಲಕ್ಷಣಾಭ್ಯಂತರತ್ವಾಗಿ ತದಾಭ್ಯಂತರವಿಷ್ಯತೇ | ಶಾಸ್ತ್ರಬಾಹ್ಯಂ ಭವೇದ್ಯತ್ತು ತದ್ಭಾಹ್ಯಮಿತಿ ಸಂಸ್ಕೃತಂ 0<noinclude></noinclude> 8gare6omfjiw7e1tin2so0fhqrssepc 319718 319717 2026-05-14T08:25:24Z Hariprasad Shetty10 7490 319718 proofread-page text/x-wiki <noinclude><pagequality level="1" user="PraneethGanesh" />{{Left|22}}</noinclude>ದ್ದುದೂ ಅಲ್ಲ. ಅಲ್ಲಿಯ ದೇವಸ್ಥಾನಗಳಲ್ಲಿ 'ಚೊಕ್ಯಾರ್ ಕೂತ್ತು' ಹಾಗೂ ' 'ಕೂಡಿಯಾಟ್ಟಂ' ಎಂಬ ಹೆಸರಿನಿಂದ ಸಂಸ್ಕೃತ ನಾಟಕಗಳ ಹಾಗೂ ಉಪರೂಪಕಗಳ ಪ್ರಯೋಗವು ನಡೆಯುತ್ತಿತ್ತೆಂಬುದು ಸರ್ವಶ್ರುತವಾದ ವಿಚಾರ. ಗೀತ ಗೋವಿಂದದ ನಾಟ್ಯ ಸೇವೆಯೂ ಅಲ್ಲಿಯ ದೇವಸ್ಥಾನಗಳಲ್ಲಿ ಸಂಸ್ಕೃತ ಪ್ರಬಂಧಗಳ ಮೂಲಕವೇ 'ಅಷ್ಟಪದಿಯಾಟ್ಟಂ', 'ಕೃಷ್ಣಾಟ್ಟಂ' ಎಂಬ ಹೆಸರಿನಿಂದ ನಡೆಯುತ್ತಿತ್ತು. ದೇವಸ್ಥಾನದ ಒಳಾಂಗಣದಲ್ಲಿ ನಡೆಯುತ್ತಿದ್ದ ಆ ನಾಟ್ಯ ಪ್ರಯೋಗಗಳಿಗೆ ಬ್ರಾಹ್ಮಣೇತರರಿಗೆ ಪ್ರವೇಶವಿಲ್ಲದೇ ಇದ್ದ ನಿಮಿತ್ತ ಅಂಥ ಸಾರ್ವಜನಿಕರ ಅನುಕೂಲಕ್ಕೆ ಬೇಕಾಗಿ ಕೊಟ್ಟಾರಕರದಲ್ಲಿದ್ದ ಒಬ್ಬ ರಾಜನು ರಾಮಾಯಣ ಪ್ರಬಂಧಗಳನ್ನು ರಚಿಸಿ'ರಾಮನಾಟ್ಟಂ' ಎಂಬ ಹೆಸರಿನಿಂದ ಈ ಪ್ರಯೋಗವನ್ನು ರೂಢಿಗೆ ತಂದುದಾಗಿ ಜನಜನಿತವಾದ ಹೇಳಿಕೆಯಿದೆ, ಸಂಶೋಧಕರ ಬರಹಗಳೂ ಬಂದಿವೆ. {{gap}}ಇನ್ನು, ಯಕ್ಷಗಾನ ಪ್ರಯೋಗಕ್ಕೆ 'ಬಯಲಾಟ'ವೆಂಬ ಹೆಸರು ಯಾವುದರಿಂದ ಬಂತೆಂಬುದು ಸಹ ವಿಚಾರಾರ್ಹವಾದ ಪ್ರಶ್ನಯೇ.ನಮ್ಮಲ್ಲಿ 'ಬಯಲಾಟ'ವೆಂದು ಕರೆದರೆ ಆಂಧ್ರದಲ್ಲಿ 'ವೀಥಿನಾಟಕ'ವೆಂದು ಹೆಸರಾಗಿದೆ.ಅದಕ್ಕೆ, ದಶರೂಪಕಗಳಲ್ಲಿ ಒಂದಾದ 'ವೀಥೀ' ಎಂಬ ಅರ್ಥವಲ್ಲ; ಹೊರಬೀದಿಯಲ್ಲಿ ಆಡುವುದು ಎಂಬುದರಿಂದ ಬಂದ ಹೆಸರದು. ದ್ರಾವಿಡ ದೇಶದ 'ತೆರುಕ್ಕೂತ್ತು' ಎಂಬ ಹೆಸರಿಗೂ ಬಯಲಾಟವೆಂದೇ ಅರ್ಥ. ಇದರಿಂದ, ಹೊರಬಯಲಲ್ಲಿ ಅಲ್ಲದೆ ಒಳಗೆ ಆಡುವ ಆಟವೆಂಬುದು ಬೇರೆ ಇದ್ದಿರಬೇಕೆಂಬ ಅನುಮಾನ ಸಹಜವಾಗಿ ಹುಟ್ಟುತ್ತದೆ. ಹಾಗೆ ನಾಟಕಶಾಲೆ (Stage, theatre) ಯೊಳಗೆ ಆಡುವ ಪ್ರಯೋಗವಿದ್ದಿತೆಂಬುದೂ ಪೂರ್ವದ ನಮ್ಮ ಕಾವ್ಯಾದಿಗಳಲ್ಲಿ ಬರುವ ವರ್ಣನೆಗಳಿಂದ ತಿಳಿದು ಬರುತ್ತದೆ. ದೇವಾಲಯಕ್ಕೆ ಸಂಬಂಧಿಸಿಯೂ, ರಾಜಾಲಯಕ್ಕೆ ಸಂಬಂಧಿಸಿಯೂ, ನಾಟ್ಯ ಮಂದಿರಗಳಿದ್ದವು. ಕಾವ್ಯಗಳಲ್ಲಿ ವರ್ಣಿಸಿರುವ ಪ್ರಕಾರ ಆ ಪ್ರಯೋಗಗಳು ಶುದ್ಧ ಶಾಸ್ತ್ರೀಯ ಸಂಪ್ರದಾಯದಲ್ಲಿ ನಡೆಯುತ್ತಿದ್ದುವೆಂದು ಊಹಿಸಬಹುದು. ಅತಃಪೂರ್ವದಲ್ಲಿಯೇ ಹೀಗೆ ಆಭ್ಯಂತರ, ಬಾಹ್ಯ ಎಂಬ ಎರಡು ವಿಧದ ನಾಟಕ ಪ್ರಯೋಗಗಳಿದ್ದುದನ್ನು ನಾಟ್ಯಶಾಸ್ತ್ರದಲ್ಲಿ ಭರತ ಮುನಿಯೇ ಹೇಳುತ್ತಾನೆ. ಅವುಗಳಲ್ಲಿ ಬಾಹ್ಯಪ್ರಯೋಗಕ್ಕೆ ಆ ಹೆಸರು ಯಾವುದಕ್ಕಾಗಿ ಎಂಬುದನ್ನು ಹೀಗೆ ಹೇಳಿದ್ದಾನೆ—(ನಾಟಕಾದಿ ರೂಪಕಗಳಲ್ಲಿ ಚತುರ್ವಿಧವಾದ ಅಭಿನಯಗಳನ್ನು ಸಲಕ್ಷಣವಾಗಿಯೂ ಶುದ್ಧವಾಗಿಯೂ ಹೇಗೆ ನಿರ್ವಹಿಸಬೇಕೆಂಬುದನ್ನು ಹೇಳಿದ ಮೇಲೆ ಈ ಶ್ಲೋಕಗಳು ಬರುತ್ತವೆ.) {{gap}}ಏತೇ ಪ್ರಯೋರ್ನಿಯಾ ಮಾರ್ಗಾದ್ಯಭಿನಯೇಸ್ಮೃತಾಃ| <br />ಯವೀದೃಶಂ ಭವೇನಾಟ್ಯಂ ಯಮಾಭ್ಯಂತರಂತು ತತ್ | <br />ಲಕ್ಷಣಾಭ್ಯಂತರತ್ವಾಗಿ ತದಾಭ್ಯಂತರವಿಷ್ಯತೇ | <br />ಶಾಸ್ತ್ರಬಾಹ್ಯಂ ಭವೇದ್ಯತ್ತು ತದ್ಭಾಹ್ಯಮಿತಿ ಸಂಸ್ಕೃತಂ 0<noinclude></noinclude> 49wlupl6jbpx0exzxxmakko0237a79c 319719 319718 2026-05-14T08:39:32Z Hariprasad Shetty10 7490 319719 proofread-page text/x-wiki <noinclude><pagequality level="1" user="PraneethGanesh" />{{Left|22}}</noinclude>ದ್ದುದೂ ಅಲ್ಲ. ಅಲ್ಲಿಯ ದೇವಸ್ಥಾನಗಳಲ್ಲಿ 'ಚೊಕ್ಯಾರ್ ಕೂತ್ತು' ಹಾಗೂ ' 'ಕೂಡಿಯಾಟ್ಟಂ' ಎಂಬ ಹೆಸರಿನಿಂದ ಸಂಸ್ಕೃತ ನಾಟಕಗಳ ಹಾಗೂ ಉಪರೂಪಕಗಳ ಪ್ರಯೋಗವು ನಡೆಯುತ್ತಿತ್ತೆಂಬುದು ಸರ್ವಶ್ರುತವಾದ ವಿಚಾರ. ಗೀತ ಗೋವಿಂದದ ನಾಟ್ಯ ಸೇವೆಯೂ ಅಲ್ಲಿಯ ದೇವಸ್ಥಾನಗಳಲ್ಲಿ ಸಂಸ್ಕೃತ ಪ್ರಬಂಧಗಳ ಮೂಲಕವೇ 'ಅಷ್ಟಪದಿಯಾಟ್ಟಂ', 'ಕೃಷ್ಣಾಟ್ಟಂ' ಎಂಬ ಹೆಸರಿನಿಂದ ನಡೆಯುತ್ತಿತ್ತು. ದೇವಸ್ಥಾನದ ಒಳಾಂಗಣದಲ್ಲಿ ನಡೆಯುತ್ತಿದ್ದ ಆ ನಾಟ್ಯ ಪ್ರಯೋಗಗಳಿಗೆ ಬ್ರಾಹ್ಮಣೇತರರಿಗೆ ಪ್ರವೇಶವಿಲ್ಲದೇ ಇದ್ದ ನಿಮಿತ್ತ ಅಂಥ ಸಾರ್ವಜನಿಕರ ಅನುಕೂಲಕ್ಕೆ ಬೇಕಾಗಿ ಕೊಟ್ಟಾರಕರದಲ್ಲಿದ್ದ ಒಬ್ಬ ರಾಜನು ರಾಮಾಯಣ ಪ್ರಬಂಧಗಳನ್ನು ರಚಿಸಿ'ರಾಮನಾಟ್ಟಂ' ಎಂಬ ಹೆಸರಿನಿಂದ ಈ ಪ್ರಯೋಗವನ್ನು ರೂಢಿಗೆ ತಂದುದಾಗಿ ಜನಜನಿತವಾದ ಹೇಳಿಕೆಯಿದೆ, ಸಂಶೋಧಕರ ಬರಹಗಳೂ ಬಂದಿವೆ. {{gap}}ಇನ್ನು, ಯಕ್ಷಗಾನ ಪ್ರಯೋಗಕ್ಕೆ 'ಬಯಲಾಟ'ವೆಂಬ ಹೆಸರು ಯಾವುದರಿಂದ ಬಂತೆಂಬುದು ಸಹ ವಿಚಾರಾರ್ಹವಾದ ಪ್ರಶ್ನಯೇ.ನಮ್ಮಲ್ಲಿ 'ಬಯಲಾಟ'ವೆಂದು ಕರೆದರೆ ಆಂಧ್ರದಲ್ಲಿ 'ವೀಥಿನಾಟಕ'ವೆಂದು ಹೆಸರಾಗಿದೆ.ಅದಕ್ಕೆ, ದಶರೂಪಕಗಳಲ್ಲಿ ಒಂದಾದ 'ವೀಥೀ' ಎಂಬ ಅರ್ಥವಲ್ಲ; ಹೊರಬೀದಿಯಲ್ಲಿ ಆಡುವುದು ಎಂಬುದರಿಂದ ಬಂದ ಹೆಸರದು. ದ್ರಾವಿಡ ದೇಶದ 'ತೆರುಕ್ಕೂತ್ತು' ಎಂಬ ಹೆಸರಿಗೂ ಬಯಲಾಟವೆಂದೇ ಅರ್ಥ. ಇದರಿಂದ, ಹೊರಬಯಲಲ್ಲಿ ಅಲ್ಲದೆ ಒಳಗೆ ಆಡುವ ಆಟವೆಂಬುದು ಬೇರೆ ಇದ್ದಿರಬೇಕೆಂಬ ಅನುಮಾನ ಸಹಜವಾಗಿ ಹುಟ್ಟುತ್ತದೆ. ಹಾಗೆ ನಾಟಕಶಾಲೆ (Stage, theatre) ಯೊಳಗೆ ಆಡುವ ಪ್ರಯೋಗವಿದ್ದಿತೆಂಬುದೂ ಪೂರ್ವದ ನಮ್ಮ ಕಾವ್ಯಾದಿಗಳಲ್ಲಿ ಬರುವ ವರ್ಣನೆಗಳಿಂದ ತಿಳಿದು ಬರುತ್ತದೆ. ದೇವಾಲಯಕ್ಕೆ ಸಂಬಂಧಿಸಿಯೂ, ರಾಜಾಲಯಕ್ಕೆ ಸಂಬಂಧಿಸಿಯೂ, ನಾಟ್ಯ ಮಂದಿರಗಳಿದ್ದವು. ಕಾವ್ಯಗಳಲ್ಲಿ ವರ್ಣಿಸಿರುವ ಪ್ರಕಾರ ಆ ಪ್ರಯೋಗಗಳು ಶುದ್ಧ ಶಾಸ್ತ್ರೀಯ ಸಂಪ್ರದಾಯದಲ್ಲಿ ನಡೆಯುತ್ತಿದ್ದುವೆಂದು ಊಹಿಸಬಹುದು. ಅತಃಪೂರ್ವದಲ್ಲಿಯೇ ಹೀಗೆ ಆಭ್ಯಂತರ, ಬಾಹ್ಯ ಎಂಬ ಎರಡು ವಿಧದ ನಾಟಕ ಪ್ರಯೋಗಗಳಿದ್ದುದನ್ನು ನಾಟ್ಯಶಾಸ್ತ್ರದಲ್ಲಿ ಭರತ ಮುನಿಯೇ ಹೇಳುತ್ತಾನೆ. ಅವುಗಳಲ್ಲಿ ಬಾಹ್ಯಪ್ರಯೋಗಕ್ಕೆ ಆ ಹೆಸರು ಯಾವುದಕ್ಕಾಗಿ ಎಂಬುದನ್ನು ಹೀಗೆ ಹೇಳಿದ್ದಾನೆ—(ನಾಟಕಾದಿ ರೂಪಕಗಳಲ್ಲಿ ಚತುರ್ವಿಧವಾದ ಅಭಿನಯಗಳನ್ನು ಸಲಕ್ಷಣವಾಗಿಯೂ ಶುದ್ಧವಾಗಿಯೂ ಹೇಗೆ ನಿರ್ವಹಿಸಬೇಕೆಂಬುದನ್ನು ಹೇಳಿದ ಮೇಲೆ ಈ ಶ್ಲೋಕಗಳು ಬರುತ್ತವೆ.) {{gap}}ಏತೇ ಪ್ರಯೋರ್ನಿಯಾ ಮಾರ್ಗಾದ್ಯಭಿನಯೇಸ್ಮೃತಾಃ| <br />ಯವೀದೃಶಂ ಭವೇನಾಟ್ಯಂ ಯಮಾಭ್ಯಂತರಂತು ತತ್ | <br />ಲಕ್ಷಣಾಭ್ಯಂತರತ್ವಾಗಿ ತದಾಭ್ಯಂತರವಿಷ್ಯತೇ | <br />ಶಾಸ್ತ್ರಬಾಹ್ಯಂ ಭವೇದ್ಯತ್ತು ತದ್ಭಾಹ್ಯಮಿತಿ ಸಂಸ್ಕೃತಂ ||<noinclude></noinclude> apy7ikto5zeuvnynwxfg80jv30osszd 319720 319719 2026-05-14T08:40:00Z Hariprasad Shetty10 7490 319720 proofread-page text/x-wiki <noinclude><pagequality level="1" user="PraneethGanesh" />{{Left|22}}</noinclude>ದ್ದುದೂ ಅಲ್ಲ. ಅಲ್ಲಿಯ ದೇವಸ್ಥಾನಗಳಲ್ಲಿ 'ಚೊಕ್ಯಾರ್ ಕೂತ್ತು' ಹಾಗೂ ' 'ಕೂಡಿಯಾಟ್ಟಂ' ಎಂಬ ಹೆಸರಿನಿಂದ ಸಂಸ್ಕೃತ ನಾಟಕಗಳ ಹಾಗೂ ಉಪರೂಪಕಗಳ ಪ್ರಯೋಗವು ನಡೆಯುತ್ತಿತ್ತೆಂಬುದು ಸರ್ವಶ್ರುತವಾದ ವಿಚಾರ. ಗೀತ ಗೋವಿಂದದ ನಾಟ್ಯ ಸೇವೆಯೂ ಅಲ್ಲಿಯ ದೇವಸ್ಥಾನಗಳಲ್ಲಿ ಸಂಸ್ಕೃತ ಪ್ರಬಂಧಗಳ ಮೂಲಕವೇ 'ಅಷ್ಟಪದಿಯಾಟ್ಟಂ', 'ಕೃಷ್ಣಾಟ್ಟಂ' ಎಂಬ ಹೆಸರಿನಿಂದ ನಡೆಯುತ್ತಿತ್ತು. ದೇವಸ್ಥಾನದ ಒಳಾಂಗಣದಲ್ಲಿ ನಡೆಯುತ್ತಿದ್ದ ಆ ನಾಟ್ಯ ಪ್ರಯೋಗಗಳಿಗೆ ಬ್ರಾಹ್ಮಣೇತರರಿಗೆ ಪ್ರವೇಶವಿಲ್ಲದೇ ಇದ್ದ ನಿಮಿತ್ತ ಅಂಥ ಸಾರ್ವಜನಿಕರ ಅನುಕೂಲಕ್ಕೆ ಬೇಕಾಗಿ ಕೊಟ್ಟಾರಕರದಲ್ಲಿದ್ದ ಒಬ್ಬ ರಾಜನು ರಾಮಾಯಣ ಪ್ರಬಂಧಗಳನ್ನು ರಚಿಸಿ'ರಾಮನಾಟ್ಟಂ' ಎಂಬ ಹೆಸರಿನಿಂದ ಈ ಪ್ರಯೋಗವನ್ನು ರೂಢಿಗೆ ತಂದುದಾಗಿ ಜನಜನಿತವಾದ ಹೇಳಿಕೆಯಿದೆ, ಸಂಶೋಧಕರ ಬರಹಗಳೂ ಬಂದಿವೆ. {{gap}}ಇನ್ನು, ಯಕ್ಷಗಾನ ಪ್ರಯೋಗಕ್ಕೆ 'ಬಯಲಾಟ'ವೆಂಬ ಹೆಸರು ಯಾವುದರಿಂದ ಬಂತೆಂಬುದು ಸಹ ವಿಚಾರಾರ್ಹವಾದ ಪ್ರಶ್ನಯೇ.ನಮ್ಮಲ್ಲಿ 'ಬಯಲಾಟ'ವೆಂದು ಕರೆದರೆ ಆಂಧ್ರದಲ್ಲಿ 'ವೀಥಿನಾಟಕ'ವೆಂದು ಹೆಸರಾಗಿದೆ.ಅದಕ್ಕೆ, ದಶರೂಪಕಗಳಲ್ಲಿ ಒಂದಾದ 'ವೀಥೀ' ಎಂಬ ಅರ್ಥವಲ್ಲ; ಹೊರಬೀದಿಯಲ್ಲಿ ಆಡುವುದು ಎಂಬುದರಿಂದ ಬಂದ ಹೆಸರದು. ದ್ರಾವಿಡ ದೇಶದ 'ತೆರುಕ್ಕೂತ್ತು' ಎಂಬ ಹೆಸರಿಗೂ ಬಯಲಾಟವೆಂದೇ ಅರ್ಥ. ಇದರಿಂದ, ಹೊರಬಯಲಲ್ಲಿ ಅಲ್ಲದೆ ಒಳಗೆ ಆಡುವ ಆಟವೆಂಬುದು ಬೇರೆ ಇದ್ದಿರಬೇಕೆಂಬ ಅನುಮಾನ ಸಹಜವಾಗಿ ಹುಟ್ಟುತ್ತದೆ. ಹಾಗೆ ನಾಟಕಶಾಲೆ (Stage, theatre) ಯೊಳಗೆ ಆಡುವ ಪ್ರಯೋಗವಿದ್ದಿತೆಂಬುದೂ ಪೂರ್ವದ ನಮ್ಮ ಕಾವ್ಯಾದಿಗಳಲ್ಲಿ ಬರುವ ವರ್ಣನೆಗಳಿಂದ ತಿಳಿದು ಬರುತ್ತದೆ. ದೇವಾಲಯಕ್ಕೆ ಸಂಬಂಧಿಸಿಯೂ, ರಾಜಾಲಯಕ್ಕೆ ಸಂಬಂಧಿಸಿಯೂ, ನಾಟ್ಯ ಮಂದಿರಗಳಿದ್ದವು. ಕಾವ್ಯಗಳಲ್ಲಿ ವರ್ಣಿಸಿರುವ ಪ್ರಕಾರ ಆ ಪ್ರಯೋಗಗಳು ಶುದ್ಧ ಶಾಸ್ತ್ರೀಯ ಸಂಪ್ರದಾಯದಲ್ಲಿ ನಡೆಯುತ್ತಿದ್ದುವೆಂದು ಊಹಿಸಬಹುದು. ಅತಃಪೂರ್ವದಲ್ಲಿಯೇ ಹೀಗೆ ಆಭ್ಯಂತರ, ಬಾಹ್ಯ ಎಂಬ ಎರಡು ವಿಧದ ನಾಟಕ ಪ್ರಯೋಗಗಳಿದ್ದುದನ್ನು ನಾಟ್ಯಶಾಸ್ತ್ರದಲ್ಲಿ ಭರತ ಮುನಿಯೇ ಹೇಳುತ್ತಾನೆ. ಅವುಗಳಲ್ಲಿ ಬಾಹ್ಯಪ್ರಯೋಗಕ್ಕೆ ಆ ಹೆಸರು ಯಾವುದಕ್ಕಾಗಿ ಎಂಬುದನ್ನು ಹೀಗೆ ಹೇಳಿದ್ದಾನೆ—(ನಾಟಕಾದಿ ರೂಪಕಗಳಲ್ಲಿ ಚತುರ್ವಿಧವಾದ ಅಭಿನಯಗಳನ್ನು ಸಲಕ್ಷಣವಾಗಿಯೂ ಶುದ್ಧವಾಗಿಯೂ ಹೇಗೆ ನಿರ್ವಹಿಸಬೇಕೆಂಬುದನ್ನು ಹೇಳಿದ ಮೇಲೆ ಈ ಶ್ಲೋಕಗಳು ಬರುತ್ತವೆ.) {{gap}}ಏತೇ ಪ್ರಯೋರ್ನಿಯಾ ಮಾರ್ಗಾದ್ಯಭಿನಯೇಸ್ಮೃತಾಃ| <br />ಯವೀದೃಶಂ ಭವೇನಾಟ್ಯಂ ಯಮಾಭ್ಯಂತರಂತು ತತ್ | <br />ಲಕ್ಷಣಾಭ್ಯಂತರತ್ವಾಗಿ ತದಾಭ್ಯಂತರವಿಷ್ಯತೇ | <br />ಶಾಸ್ತ್ರಬಾಹ್ಯಂ ಭವೇದ್ಯತ್ತು ತದ್ಭಾಹ್ಯಮಿತಿ ಸಂಸ್ಕೃತಂ ||<noinclude></noinclude> rvm5dkwxyyod382ysf7rueny66ke7qb 319721 319720 2026-05-14T08:40:24Z Hariprasad Shetty10 7490 319721 proofread-page text/x-wiki <noinclude><pagequality level="1" user="PraneethGanesh" />{{Left|22}}</noinclude>ದ್ದುದೂ ಅಲ್ಲ. ಅಲ್ಲಿಯ ದೇವಸ್ಥಾನಗಳಲ್ಲಿ 'ಚೊಕ್ಯಾರ್ ಕೂತ್ತು' ಹಾಗೂ ' 'ಕೂಡಿಯಾಟ್ಟಂ' ಎಂಬ ಹೆಸರಿನಿಂದ ಸಂಸ್ಕೃತ ನಾಟಕಗಳ ಹಾಗೂ ಉಪರೂಪಕಗಳ ಪ್ರಯೋಗವು ನಡೆಯುತ್ತಿತ್ತೆಂಬುದು ಸರ್ವಶ್ರುತವಾದ ವಿಚಾರ. ಗೀತ ಗೋವಿಂದದ ನಾಟ್ಯ ಸೇವೆಯೂ ಅಲ್ಲಿಯ ದೇವಸ್ಥಾನಗಳಲ್ಲಿ ಸಂಸ್ಕೃತ ಪ್ರಬಂಧಗಳ ಮೂಲಕವೇ 'ಅಷ್ಟಪದಿಯಾಟ್ಟಂ', 'ಕೃಷ್ಣಾಟ್ಟಂ' ಎಂಬ ಹೆಸರಿನಿಂದ ನಡೆಯುತ್ತಿತ್ತು. ದೇವಸ್ಥಾನದ ಒಳಾಂಗಣದಲ್ಲಿ ನಡೆಯುತ್ತಿದ್ದ ಆ ನಾಟ್ಯ ಪ್ರಯೋಗಗಳಿಗೆ ಬ್ರಾಹ್ಮಣೇತರರಿಗೆ ಪ್ರವೇಶವಿಲ್ಲದೇ ಇದ್ದ ನಿಮಿತ್ತ ಅಂಥ ಸಾರ್ವಜನಿಕರ ಅನುಕೂಲಕ್ಕೆ ಬೇಕಾಗಿ ಕೊಟ್ಟಾರಕರದಲ್ಲಿದ್ದ ಒಬ್ಬ ರಾಜನು ರಾಮಾಯಣ ಪ್ರಬಂಧಗಳನ್ನು ರಚಿಸಿ'ರಾಮನಾಟ್ಟಂ' ಎಂಬ ಹೆಸರಿನಿಂದ ಈ ಪ್ರಯೋಗವನ್ನು ರೂಢಿಗೆ ತಂದುದಾಗಿ ಜನಜನಿತವಾದ ಹೇಳಿಕೆಯಿದೆ, ಸಂಶೋಧಕರ ಬರಹಗಳೂ ಬಂದಿವೆ. {{gap}}ಇನ್ನು, ಯಕ್ಷಗಾನ ಪ್ರಯೋಗಕ್ಕೆ 'ಬಯಲಾಟ'ವೆಂಬ ಹೆಸರು ಯಾವುದರಿಂದ ಬಂತೆಂಬುದು ಸಹ ವಿಚಾರಾರ್ಹವಾದ ಪ್ರಶ್ನಯೇ.ನಮ್ಮಲ್ಲಿ 'ಬಯಲಾಟ'ವೆಂದು ಕರೆದರೆ ಆಂಧ್ರದಲ್ಲಿ 'ವೀಥಿನಾಟಕ'ವೆಂದು ಹೆಸರಾಗಿದೆ.ಅದಕ್ಕೆ, ದಶರೂಪಕಗಳಲ್ಲಿ ಒಂದಾದ 'ವೀಥೀ' ಎಂಬ ಅರ್ಥವಲ್ಲ; ಹೊರಬೀದಿಯಲ್ಲಿ ಆಡುವುದು ಎಂಬುದರಿಂದ ಬಂದ ಹೆಸರದು. ದ್ರಾವಿಡ ದೇಶದ 'ತೆರುಕ್ಕೂತ್ತು' ಎಂಬ ಹೆಸರಿಗೂ ಬಯಲಾಟವೆಂದೇ ಅರ್ಥ. ಇದರಿಂದ, ಹೊರಬಯಲಲ್ಲಿ ಅಲ್ಲದೆ ಒಳಗೆ ಆಡುವ ಆಟವೆಂಬುದು ಬೇರೆ ಇದ್ದಿರಬೇಕೆಂಬ ಅನುಮಾನ ಸಹಜವಾಗಿ ಹುಟ್ಟುತ್ತದೆ. ಹಾಗೆ ನಾಟಕಶಾಲೆ (Stage, theatre) ಯೊಳಗೆ ಆಡುವ ಪ್ರಯೋಗವಿದ್ದಿತೆಂಬುದೂ ಪೂರ್ವದ ನಮ್ಮ ಕಾವ್ಯಾದಿಗಳಲ್ಲಿ ಬರುವ ವರ್ಣನೆಗಳಿಂದ ತಿಳಿದು ಬರುತ್ತದೆ. ದೇವಾಲಯಕ್ಕೆ ಸಂಬಂಧಿಸಿಯೂ, ರಾಜಾಲಯಕ್ಕೆ ಸಂಬಂಧಿಸಿಯೂ, ನಾಟ್ಯ ಮಂದಿರಗಳಿದ್ದವು. ಕಾವ್ಯಗಳಲ್ಲಿ ವರ್ಣಿಸಿರುವ ಪ್ರಕಾರ ಆ ಪ್ರಯೋಗಗಳು ಶುದ್ಧ ಶಾಸ್ತ್ರೀಯ ಸಂಪ್ರದಾಯದಲ್ಲಿ ನಡೆಯುತ್ತಿದ್ದುವೆಂದು ಊಹಿಸಬಹುದು. ಅತಃಪೂರ್ವದಲ್ಲಿಯೇ ಹೀಗೆ ಆಭ್ಯಂತರ, ಬಾಹ್ಯ ಎಂಬ ಎರಡು ವಿಧದ ನಾಟಕ ಪ್ರಯೋಗಗಳಿದ್ದುದನ್ನು ನಾಟ್ಯಶಾಸ್ತ್ರದಲ್ಲಿ ಭರತ ಮುನಿಯೇ ಹೇಳುತ್ತಾನೆ. ಅವುಗಳಲ್ಲಿ ಬಾಹ್ಯಪ್ರಯೋಗಕ್ಕೆ ಆ ಹೆಸರು ಯಾವುದಕ್ಕಾಗಿ ಎಂಬುದನ್ನು ಹೀಗೆ ಹೇಳಿದ್ದಾನೆ—(ನಾಟಕಾದಿ ರೂಪಕಗಳಲ್ಲಿ ಚತುರ್ವಿಧವಾದ ಅಭಿನಯಗಳನ್ನು ಸಲಕ್ಷಣವಾಗಿಯೂ ಶುದ್ಧವಾಗಿಯೂ ಹೇಗೆ ನಿರ್ವಹಿಸಬೇಕೆಂಬುದನ್ನು ಹೇಳಿದ ಮೇಲೆ ಈ ಶ್ಲೋಕಗಳು ಬರುತ್ತವೆ.) {{gap}}ಏತೇ ಪ್ರಯೋರ್ನಿಯಾ ಮಾರ್ಗಾದ್ಯಭಿನಯೇಸ್ಮೃತಾಃ| {{gap}}<br />ಯವೀದೃಶಂ ಭವೇನಾಟ್ಯಂ ಯಮಾಭ್ಯಂತರಂತು ತತ್ | {{gap}}<br />ಲಕ್ಷಣಾಭ್ಯಂತರತ್ವಾಗಿ ತದಾಭ್ಯಂತರವಿಷ್ಯತೇ | {{gap}}<br />ಶಾಸ್ತ್ರಬಾಹ್ಯಂ ಭವೇದ್ಯತ್ತು ತದ್ಭಾಹ್ಯಮಿತಿ ಸಂಸ್ಕೃತಂ ||<noinclude></noinclude> p86h60fg16zztywpgm3yz8v06g272z1 319722 319721 2026-05-14T08:40:51Z Hariprasad Shetty10 7490 319722 proofread-page text/x-wiki <noinclude><pagequality level="1" user="PraneethGanesh" />{{Left|22}}</noinclude>ದ್ದುದೂ ಅಲ್ಲ. ಅಲ್ಲಿಯ ದೇವಸ್ಥಾನಗಳಲ್ಲಿ 'ಚೊಕ್ಯಾರ್ ಕೂತ್ತು' ಹಾಗೂ ' 'ಕೂಡಿಯಾಟ್ಟಂ' ಎಂಬ ಹೆಸರಿನಿಂದ ಸಂಸ್ಕೃತ ನಾಟಕಗಳ ಹಾಗೂ ಉಪರೂಪಕಗಳ ಪ್ರಯೋಗವು ನಡೆಯುತ್ತಿತ್ತೆಂಬುದು ಸರ್ವಶ್ರುತವಾದ ವಿಚಾರ. ಗೀತ ಗೋವಿಂದದ ನಾಟ್ಯ ಸೇವೆಯೂ ಅಲ್ಲಿಯ ದೇವಸ್ಥಾನಗಳಲ್ಲಿ ಸಂಸ್ಕೃತ ಪ್ರಬಂಧಗಳ ಮೂಲಕವೇ 'ಅಷ್ಟಪದಿಯಾಟ್ಟಂ', 'ಕೃಷ್ಣಾಟ್ಟಂ' ಎಂಬ ಹೆಸರಿನಿಂದ ನಡೆಯುತ್ತಿತ್ತು. ದೇವಸ್ಥಾನದ ಒಳಾಂಗಣದಲ್ಲಿ ನಡೆಯುತ್ತಿದ್ದ ಆ ನಾಟ್ಯ ಪ್ರಯೋಗಗಳಿಗೆ ಬ್ರಾಹ್ಮಣೇತರರಿಗೆ ಪ್ರವೇಶವಿಲ್ಲದೇ ಇದ್ದ ನಿಮಿತ್ತ ಅಂಥ ಸಾರ್ವಜನಿಕರ ಅನುಕೂಲಕ್ಕೆ ಬೇಕಾಗಿ ಕೊಟ್ಟಾರಕರದಲ್ಲಿದ್ದ ಒಬ್ಬ ರಾಜನು ರಾಮಾಯಣ ಪ್ರಬಂಧಗಳನ್ನು ರಚಿಸಿ'ರಾಮನಾಟ್ಟಂ' ಎಂಬ ಹೆಸರಿನಿಂದ ಈ ಪ್ರಯೋಗವನ್ನು ರೂಢಿಗೆ ತಂದುದಾಗಿ ಜನಜನಿತವಾದ ಹೇಳಿಕೆಯಿದೆ, ಸಂಶೋಧಕರ ಬರಹಗಳೂ ಬಂದಿವೆ. {{gap}}ಇನ್ನು, ಯಕ್ಷಗಾನ ಪ್ರಯೋಗಕ್ಕೆ 'ಬಯಲಾಟ'ವೆಂಬ ಹೆಸರು ಯಾವುದರಿಂದ ಬಂತೆಂಬುದು ಸಹ ವಿಚಾರಾರ್ಹವಾದ ಪ್ರಶ್ನಯೇ.ನಮ್ಮಲ್ಲಿ 'ಬಯಲಾಟ'ವೆಂದು ಕರೆದರೆ ಆಂಧ್ರದಲ್ಲಿ 'ವೀಥಿನಾಟಕ'ವೆಂದು ಹೆಸರಾಗಿದೆ.ಅದಕ್ಕೆ, ದಶರೂಪಕಗಳಲ್ಲಿ ಒಂದಾದ 'ವೀಥೀ' ಎಂಬ ಅರ್ಥವಲ್ಲ; ಹೊರಬೀದಿಯಲ್ಲಿ ಆಡುವುದು ಎಂಬುದರಿಂದ ಬಂದ ಹೆಸರದು. ದ್ರಾವಿಡ ದೇಶದ 'ತೆರುಕ್ಕೂತ್ತು' ಎಂಬ ಹೆಸರಿಗೂ ಬಯಲಾಟವೆಂದೇ ಅರ್ಥ. ಇದರಿಂದ, ಹೊರಬಯಲಲ್ಲಿ ಅಲ್ಲದೆ ಒಳಗೆ ಆಡುವ ಆಟವೆಂಬುದು ಬೇರೆ ಇದ್ದಿರಬೇಕೆಂಬ ಅನುಮಾನ ಸಹಜವಾಗಿ ಹುಟ್ಟುತ್ತದೆ. ಹಾಗೆ ನಾಟಕಶಾಲೆ (Stage, theatre) ಯೊಳಗೆ ಆಡುವ ಪ್ರಯೋಗವಿದ್ದಿತೆಂಬುದೂ ಪೂರ್ವದ ನಮ್ಮ ಕಾವ್ಯಾದಿಗಳಲ್ಲಿ ಬರುವ ವರ್ಣನೆಗಳಿಂದ ತಿಳಿದು ಬರುತ್ತದೆ. ದೇವಾಲಯಕ್ಕೆ ಸಂಬಂಧಿಸಿಯೂ, ರಾಜಾಲಯಕ್ಕೆ ಸಂಬಂಧಿಸಿಯೂ, ನಾಟ್ಯ ಮಂದಿರಗಳಿದ್ದವು. ಕಾವ್ಯಗಳಲ್ಲಿ ವರ್ಣಿಸಿರುವ ಪ್ರಕಾರ ಆ ಪ್ರಯೋಗಗಳು ಶುದ್ಧ ಶಾಸ್ತ್ರೀಯ ಸಂಪ್ರದಾಯದಲ್ಲಿ ನಡೆಯುತ್ತಿದ್ದುವೆಂದು ಊಹಿಸಬಹುದು. ಅತಃಪೂರ್ವದಲ್ಲಿಯೇ ಹೀಗೆ ಆಭ್ಯಂತರ, ಬಾಹ್ಯ ಎಂಬ ಎರಡು ವಿಧದ ನಾಟಕ ಪ್ರಯೋಗಗಳಿದ್ದುದನ್ನು ನಾಟ್ಯಶಾಸ್ತ್ರದಲ್ಲಿ ಭರತ ಮುನಿಯೇ ಹೇಳುತ್ತಾನೆ. ಅವುಗಳಲ್ಲಿ ಬಾಹ್ಯಪ್ರಯೋಗಕ್ಕೆ ಆ ಹೆಸರು ಯಾವುದಕ್ಕಾಗಿ ಎಂಬುದನ್ನು ಹೀಗೆ ಹೇಳಿದ್ದಾನೆ—(ನಾಟಕಾದಿ ರೂಪಕಗಳಲ್ಲಿ ಚತುರ್ವಿಧವಾದ ಅಭಿನಯಗಳನ್ನು ಸಲಕ್ಷಣವಾಗಿಯೂ ಶುದ್ಧವಾಗಿಯೂ ಹೇಗೆ ನಿರ್ವಹಿಸಬೇಕೆಂಬುದನ್ನು ಹೇಳಿದ ಮೇಲೆ ಈ ಶ್ಲೋಕಗಳು ಬರುತ್ತವೆ.) {{gap}}ಏತೇ ಪ್ರಯೋರ್ನಿಯಾ ಮಾರ್ಗಾದ್ಯಭಿನಯೇಸ್ಮೃತಾಃ|<br />ಯವೀದೃಶಂ ಭವೇನಾಟ್ಯಂ ಯಮಾಭ್ಯಂತರಂತು ತತ್ |<br />ಲಕ್ಷಣಾಭ್ಯಂತರತ್ವಾಗಿ ತದಾಭ್ಯಂತರವಿಷ್ಯತೇ |<br />ಶಾಸ್ತ್ರಬಾಹ್ಯಂ ಭವೇದ್ಯತ್ತು ತದ್ಭಾಹ್ಯಮಿತಿ ಸಂಸ್ಕೃತಂ ||<noinclude></noinclude> 0p0zkglet78fy6v9xes8elrtj36a0mg 319723 319722 2026-05-14T08:41:07Z Hariprasad Shetty10 7490 319723 proofread-page text/x-wiki <noinclude><pagequality level="1" user="PraneethGanesh" />{{Left|22}}</noinclude>ದ್ದುದೂ ಅಲ್ಲ. ಅಲ್ಲಿಯ ದೇವಸ್ಥಾನಗಳಲ್ಲಿ 'ಚೊಕ್ಯಾರ್ ಕೂತ್ತು' ಹಾಗೂ ' 'ಕೂಡಿಯಾಟ್ಟಂ' ಎಂಬ ಹೆಸರಿನಿಂದ ಸಂಸ್ಕೃತ ನಾಟಕಗಳ ಹಾಗೂ ಉಪರೂಪಕಗಳ ಪ್ರಯೋಗವು ನಡೆಯುತ್ತಿತ್ತೆಂಬುದು ಸರ್ವಶ್ರುತವಾದ ವಿಚಾರ. ಗೀತ ಗೋವಿಂದದ ನಾಟ್ಯ ಸೇವೆಯೂ ಅಲ್ಲಿಯ ದೇವಸ್ಥಾನಗಳಲ್ಲಿ ಸಂಸ್ಕೃತ ಪ್ರಬಂಧಗಳ ಮೂಲಕವೇ 'ಅಷ್ಟಪದಿಯಾಟ್ಟಂ', 'ಕೃಷ್ಣಾಟ್ಟಂ' ಎಂಬ ಹೆಸರಿನಿಂದ ನಡೆಯುತ್ತಿತ್ತು. ದೇವಸ್ಥಾನದ ಒಳಾಂಗಣದಲ್ಲಿ ನಡೆಯುತ್ತಿದ್ದ ಆ ನಾಟ್ಯ ಪ್ರಯೋಗಗಳಿಗೆ ಬ್ರಾಹ್ಮಣೇತರರಿಗೆ ಪ್ರವೇಶವಿಲ್ಲದೇ ಇದ್ದ ನಿಮಿತ್ತ ಅಂಥ ಸಾರ್ವಜನಿಕರ ಅನುಕೂಲಕ್ಕೆ ಬೇಕಾಗಿ ಕೊಟ್ಟಾರಕರದಲ್ಲಿದ್ದ ಒಬ್ಬ ರಾಜನು ರಾಮಾಯಣ ಪ್ರಬಂಧಗಳನ್ನು ರಚಿಸಿ'ರಾಮನಾಟ್ಟಂ' ಎಂಬ ಹೆಸರಿನಿಂದ ಈ ಪ್ರಯೋಗವನ್ನು ರೂಢಿಗೆ ತಂದುದಾಗಿ ಜನಜನಿತವಾದ ಹೇಳಿಕೆಯಿದೆ, ಸಂಶೋಧಕರ ಬರಹಗಳೂ ಬಂದಿವೆ. {{gap}}ಇನ್ನು, ಯಕ್ಷಗಾನ ಪ್ರಯೋಗಕ್ಕೆ 'ಬಯಲಾಟ'ವೆಂಬ ಹೆಸರು ಯಾವುದರಿಂದ ಬಂತೆಂಬುದು ಸಹ ವಿಚಾರಾರ್ಹವಾದ ಪ್ರಶ್ನಯೇ.ನಮ್ಮಲ್ಲಿ 'ಬಯಲಾಟ'ವೆಂದು ಕರೆದರೆ ಆಂಧ್ರದಲ್ಲಿ 'ವೀಥಿನಾಟಕ'ವೆಂದು ಹೆಸರಾಗಿದೆ.ಅದಕ್ಕೆ, ದಶರೂಪಕಗಳಲ್ಲಿ ಒಂದಾದ 'ವೀಥೀ' ಎಂಬ ಅರ್ಥವಲ್ಲ; ಹೊರಬೀದಿಯಲ್ಲಿ ಆಡುವುದು ಎಂಬುದರಿಂದ ಬಂದ ಹೆಸರದು. ದ್ರಾವಿಡ ದೇಶದ 'ತೆರುಕ್ಕೂತ್ತು' ಎಂಬ ಹೆಸರಿಗೂ ಬಯಲಾಟವೆಂದೇ ಅರ್ಥ. ಇದರಿಂದ, ಹೊರಬಯಲಲ್ಲಿ ಅಲ್ಲದೆ ಒಳಗೆ ಆಡುವ ಆಟವೆಂಬುದು ಬೇರೆ ಇದ್ದಿರಬೇಕೆಂಬ ಅನುಮಾನ ಸಹಜವಾಗಿ ಹುಟ್ಟುತ್ತದೆ. ಹಾಗೆ ನಾಟಕಶಾಲೆ (Stage, theatre) ಯೊಳಗೆ ಆಡುವ ಪ್ರಯೋಗವಿದ್ದಿತೆಂಬುದೂ ಪೂರ್ವದ ನಮ್ಮ ಕಾವ್ಯಾದಿಗಳಲ್ಲಿ ಬರುವ ವರ್ಣನೆಗಳಿಂದ ತಿಳಿದು ಬರುತ್ತದೆ. ದೇವಾಲಯಕ್ಕೆ ಸಂಬಂಧಿಸಿಯೂ, ರಾಜಾಲಯಕ್ಕೆ ಸಂಬಂಧಿಸಿಯೂ, ನಾಟ್ಯ ಮಂದಿರಗಳಿದ್ದವು. ಕಾವ್ಯಗಳಲ್ಲಿ ವರ್ಣಿಸಿರುವ ಪ್ರಕಾರ ಆ ಪ್ರಯೋಗಗಳು ಶುದ್ಧ ಶಾಸ್ತ್ರೀಯ ಸಂಪ್ರದಾಯದಲ್ಲಿ ನಡೆಯುತ್ತಿದ್ದುವೆಂದು ಊಹಿಸಬಹುದು. ಅತಃಪೂರ್ವದಲ್ಲಿಯೇ ಹೀಗೆ ಆಭ್ಯಂತರ, ಬಾಹ್ಯ ಎಂಬ ಎರಡು ವಿಧದ ನಾಟಕ ಪ್ರಯೋಗಗಳಿದ್ದುದನ್ನು ನಾಟ್ಯಶಾಸ್ತ್ರದಲ್ಲಿ ಭರತ ಮುನಿಯೇ ಹೇಳುತ್ತಾನೆ. ಅವುಗಳಲ್ಲಿ ಬಾಹ್ಯಪ್ರಯೋಗಕ್ಕೆ ಆ ಹೆಸರು ಯಾವುದಕ್ಕಾಗಿ ಎಂಬುದನ್ನು ಹೀಗೆ ಹೇಳಿದ್ದಾನೆ—(ನಾಟಕಾದಿ ರೂಪಕಗಳಲ್ಲಿ ಚತುರ್ವಿಧವಾದ ಅಭಿನಯಗಳನ್ನು ಸಲಕ್ಷಣವಾಗಿಯೂ ಶುದ್ಧವಾಗಿಯೂ ಹೇಗೆ ನಿರ್ವಹಿಸಬೇಕೆಂಬುದನ್ನು ಹೇಳಿದ ಮೇಲೆ ಈ ಶ್ಲೋಕಗಳು ಬರುತ್ತವೆ.) ಏತೇ ಪ್ರಯೋರ್ನಿಯಾ ಮಾರ್ಗಾದ್ಯಭಿನಯೇಸ್ಮೃತಾಃ|<br />ಯವೀದೃಶಂ ಭವೇನಾಟ್ಯಂ ಯಮಾಭ್ಯಂತರಂತು ತತ್ |<br />ಲಕ್ಷಣಾಭ್ಯಂತರತ್ವಾಗಿ ತದಾಭ್ಯಂತರವಿಷ್ಯತೇ |<br />ಶಾಸ್ತ್ರಬಾಹ್ಯಂ ಭವೇದ್ಯತ್ತು ತದ್ಭಾಹ್ಯಮಿತಿ ಸಂಸ್ಕೃತಂ ||<noinclude></noinclude> g5audgacnyzu985hegpw2m33b3358tn 319724 319723 2026-05-14T08:41:28Z Hariprasad Shetty10 7490 319724 proofread-page text/x-wiki <noinclude><pagequality level="1" user="PraneethGanesh" />{{Left|22}}</noinclude>ದ್ದುದೂ ಅಲ್ಲ. ಅಲ್ಲಿಯ ದೇವಸ್ಥಾನಗಳಲ್ಲಿ 'ಚೊಕ್ಯಾರ್ ಕೂತ್ತು' ಹಾಗೂ ' 'ಕೂಡಿಯಾಟ್ಟಂ' ಎಂಬ ಹೆಸರಿನಿಂದ ಸಂಸ್ಕೃತ ನಾಟಕಗಳ ಹಾಗೂ ಉಪರೂಪಕಗಳ ಪ್ರಯೋಗವು ನಡೆಯುತ್ತಿತ್ತೆಂಬುದು ಸರ್ವಶ್ರುತವಾದ ವಿಚಾರ. ಗೀತ ಗೋವಿಂದದ ನಾಟ್ಯ ಸೇವೆಯೂ ಅಲ್ಲಿಯ ದೇವಸ್ಥಾನಗಳಲ್ಲಿ ಸಂಸ್ಕೃತ ಪ್ರಬಂಧಗಳ ಮೂಲಕವೇ 'ಅಷ್ಟಪದಿಯಾಟ್ಟಂ', 'ಕೃಷ್ಣಾಟ್ಟಂ' ಎಂಬ ಹೆಸರಿನಿಂದ ನಡೆಯುತ್ತಿತ್ತು. ದೇವಸ್ಥಾನದ ಒಳಾಂಗಣದಲ್ಲಿ ನಡೆಯುತ್ತಿದ್ದ ಆ ನಾಟ್ಯ ಪ್ರಯೋಗಗಳಿಗೆ ಬ್ರಾಹ್ಮಣೇತರರಿಗೆ ಪ್ರವೇಶವಿಲ್ಲದೇ ಇದ್ದ ನಿಮಿತ್ತ ಅಂಥ ಸಾರ್ವಜನಿಕರ ಅನುಕೂಲಕ್ಕೆ ಬೇಕಾಗಿ ಕೊಟ್ಟಾರಕರದಲ್ಲಿದ್ದ ಒಬ್ಬ ರಾಜನು ರಾಮಾಯಣ ಪ್ರಬಂಧಗಳನ್ನು ರಚಿಸಿ'ರಾಮನಾಟ್ಟಂ' ಎಂಬ ಹೆಸರಿನಿಂದ ಈ ಪ್ರಯೋಗವನ್ನು ರೂಢಿಗೆ ತಂದುದಾಗಿ ಜನಜನಿತವಾದ ಹೇಳಿಕೆಯಿದೆ, ಸಂಶೋಧಕರ ಬರಹಗಳೂ ಬಂದಿವೆ. {{gap}}ಇನ್ನು, ಯಕ್ಷಗಾನ ಪ್ರಯೋಗಕ್ಕೆ 'ಬಯಲಾಟ'ವೆಂಬ ಹೆಸರು ಯಾವುದರಿಂದ ಬಂತೆಂಬುದು ಸಹ ವಿಚಾರಾರ್ಹವಾದ ಪ್ರಶ್ನಯೇ.ನಮ್ಮಲ್ಲಿ 'ಬಯಲಾಟ'ವೆಂದು ಕರೆದರೆ ಆಂಧ್ರದಲ್ಲಿ 'ವೀಥಿನಾಟಕ'ವೆಂದು ಹೆಸರಾಗಿದೆ.ಅದಕ್ಕೆ, ದಶರೂಪಕಗಳಲ್ಲಿ ಒಂದಾದ 'ವೀಥೀ' ಎಂಬ ಅರ್ಥವಲ್ಲ; ಹೊರಬೀದಿಯಲ್ಲಿ ಆಡುವುದು ಎಂಬುದರಿಂದ ಬಂದ ಹೆಸರದು. ದ್ರಾವಿಡ ದೇಶದ 'ತೆರುಕ್ಕೂತ್ತು' ಎಂಬ ಹೆಸರಿಗೂ ಬಯಲಾಟವೆಂದೇ ಅರ್ಥ. ಇದರಿಂದ, ಹೊರಬಯಲಲ್ಲಿ ಅಲ್ಲದೆ ಒಳಗೆ ಆಡುವ ಆಟವೆಂಬುದು ಬೇರೆ ಇದ್ದಿರಬೇಕೆಂಬ ಅನುಮಾನ ಸಹಜವಾಗಿ ಹುಟ್ಟುತ್ತದೆ. ಹಾಗೆ ನಾಟಕಶಾಲೆ (Stage, theatre) ಯೊಳಗೆ ಆಡುವ ಪ್ರಯೋಗವಿದ್ದಿತೆಂಬುದೂ ಪೂರ್ವದ ನಮ್ಮ ಕಾವ್ಯಾದಿಗಳಲ್ಲಿ ಬರುವ ವರ್ಣನೆಗಳಿಂದ ತಿಳಿದು ಬರುತ್ತದೆ. ದೇವಾಲಯಕ್ಕೆ ಸಂಬಂಧಿಸಿಯೂ, ರಾಜಾಲಯಕ್ಕೆ ಸಂಬಂಧಿಸಿಯೂ, ನಾಟ್ಯ ಮಂದಿರಗಳಿದ್ದವು. ಕಾವ್ಯಗಳಲ್ಲಿ ವರ್ಣಿಸಿರುವ ಪ್ರಕಾರ ಆ ಪ್ರಯೋಗಗಳು ಶುದ್ಧ ಶಾಸ್ತ್ರೀಯ ಸಂಪ್ರದಾಯದಲ್ಲಿ ನಡೆಯುತ್ತಿದ್ದುವೆಂದು ಊಹಿಸಬಹುದು. ಅತಃಪೂರ್ವದಲ್ಲಿಯೇ ಹೀಗೆ ಆಭ್ಯಂತರ, ಬಾಹ್ಯ ಎಂಬ ಎರಡು ವಿಧದ ನಾಟಕ ಪ್ರಯೋಗಗಳಿದ್ದುದನ್ನು ನಾಟ್ಯಶಾಸ್ತ್ರದಲ್ಲಿ ಭರತ ಮುನಿಯೇ ಹೇಳುತ್ತಾನೆ. ಅವುಗಳಲ್ಲಿ ಬಾಹ್ಯಪ್ರಯೋಗಕ್ಕೆ ಆ ಹೆಸರು ಯಾವುದಕ್ಕಾಗಿ ಎಂಬುದನ್ನು ಹೀಗೆ ಹೇಳಿದ್ದಾನೆ—(ನಾಟಕಾದಿ ರೂಪಕಗಳಲ್ಲಿ ಚತುರ್ವಿಧವಾದ ಅಭಿನಯಗಳನ್ನು ಸಲಕ್ಷಣವಾಗಿಯೂ ಶುದ್ಧವಾಗಿಯೂ ಹೇಗೆ ನಿರ್ವಹಿಸಬೇಕೆಂಬುದನ್ನು ಹೇಳಿದ ಮೇಲೆ ಈ ಶ್ಲೋಕಗಳು ಬರುತ್ತವೆ.) ಏತೇ ಪ್ರಯೋರ್ನಿಯಾ ಮಾರ್ಗಾದ್ಯಭಿನಯೇಸ್ಮೃತಾಃ|<br />ಯವೀದೃಶಂ ಭವೇನಾಟ್ಯಂ ಯಮಾಭ್ಯಂತರಂತು ತತ್ |<br />ಲಕ್ಷಣಾಭ್ಯಂತರತ್ವಾಗಿ ತದಾಭ್ಯಂತರವಿಷ್ಯತೇ |<br />ಶಾಸ್ತ್ರಬಾಹ್ಯಂ ಭವೇದ್ಯತ್ತು ತದ್ಭಾಹ್ಯಮಿತಿ ಸಂಸ್ಕೃತಂ ||<noinclude></noinclude> gw9iceemt82sjuhxrz2abdkwis63y67 319726 319724 2026-05-14T08:41:39Z Hariprasad Shetty10 7490 /* Proofread */ 319726 proofread-page text/x-wiki <noinclude><pagequality level="3" user="Hariprasad Shetty10" />{{Left|22}}</noinclude>ದ್ದುದೂ ಅಲ್ಲ. ಅಲ್ಲಿಯ ದೇವಸ್ಥಾನಗಳಲ್ಲಿ 'ಚೊಕ್ಯಾರ್ ಕೂತ್ತು' ಹಾಗೂ ' 'ಕೂಡಿಯಾಟ್ಟಂ' ಎಂಬ ಹೆಸರಿನಿಂದ ಸಂಸ್ಕೃತ ನಾಟಕಗಳ ಹಾಗೂ ಉಪರೂಪಕಗಳ ಪ್ರಯೋಗವು ನಡೆಯುತ್ತಿತ್ತೆಂಬುದು ಸರ್ವಶ್ರುತವಾದ ವಿಚಾರ. ಗೀತ ಗೋವಿಂದದ ನಾಟ್ಯ ಸೇವೆಯೂ ಅಲ್ಲಿಯ ದೇವಸ್ಥಾನಗಳಲ್ಲಿ ಸಂಸ್ಕೃತ ಪ್ರಬಂಧಗಳ ಮೂಲಕವೇ 'ಅಷ್ಟಪದಿಯಾಟ್ಟಂ', 'ಕೃಷ್ಣಾಟ್ಟಂ' ಎಂಬ ಹೆಸರಿನಿಂದ ನಡೆಯುತ್ತಿತ್ತು. ದೇವಸ್ಥಾನದ ಒಳಾಂಗಣದಲ್ಲಿ ನಡೆಯುತ್ತಿದ್ದ ಆ ನಾಟ್ಯ ಪ್ರಯೋಗಗಳಿಗೆ ಬ್ರಾಹ್ಮಣೇತರರಿಗೆ ಪ್ರವೇಶವಿಲ್ಲದೇ ಇದ್ದ ನಿಮಿತ್ತ ಅಂಥ ಸಾರ್ವಜನಿಕರ ಅನುಕೂಲಕ್ಕೆ ಬೇಕಾಗಿ ಕೊಟ್ಟಾರಕರದಲ್ಲಿದ್ದ ಒಬ್ಬ ರಾಜನು ರಾಮಾಯಣ ಪ್ರಬಂಧಗಳನ್ನು ರಚಿಸಿ'ರಾಮನಾಟ್ಟಂ' ಎಂಬ ಹೆಸರಿನಿಂದ ಈ ಪ್ರಯೋಗವನ್ನು ರೂಢಿಗೆ ತಂದುದಾಗಿ ಜನಜನಿತವಾದ ಹೇಳಿಕೆಯಿದೆ, ಸಂಶೋಧಕರ ಬರಹಗಳೂ ಬಂದಿವೆ. {{gap}}ಇನ್ನು, ಯಕ್ಷಗಾನ ಪ್ರಯೋಗಕ್ಕೆ 'ಬಯಲಾಟ'ವೆಂಬ ಹೆಸರು ಯಾವುದರಿಂದ ಬಂತೆಂಬುದು ಸಹ ವಿಚಾರಾರ್ಹವಾದ ಪ್ರಶ್ನಯೇ.ನಮ್ಮಲ್ಲಿ 'ಬಯಲಾಟ'ವೆಂದು ಕರೆದರೆ ಆಂಧ್ರದಲ್ಲಿ 'ವೀಥಿನಾಟಕ'ವೆಂದು ಹೆಸರಾಗಿದೆ.ಅದಕ್ಕೆ, ದಶರೂಪಕಗಳಲ್ಲಿ ಒಂದಾದ 'ವೀಥೀ' ಎಂಬ ಅರ್ಥವಲ್ಲ; ಹೊರಬೀದಿಯಲ್ಲಿ ಆಡುವುದು ಎಂಬುದರಿಂದ ಬಂದ ಹೆಸರದು. ದ್ರಾವಿಡ ದೇಶದ 'ತೆರುಕ್ಕೂತ್ತು' ಎಂಬ ಹೆಸರಿಗೂ ಬಯಲಾಟವೆಂದೇ ಅರ್ಥ. ಇದರಿಂದ, ಹೊರಬಯಲಲ್ಲಿ ಅಲ್ಲದೆ ಒಳಗೆ ಆಡುವ ಆಟವೆಂಬುದು ಬೇರೆ ಇದ್ದಿರಬೇಕೆಂಬ ಅನುಮಾನ ಸಹಜವಾಗಿ ಹುಟ್ಟುತ್ತದೆ. ಹಾಗೆ ನಾಟಕಶಾಲೆ (Stage, theatre) ಯೊಳಗೆ ಆಡುವ ಪ್ರಯೋಗವಿದ್ದಿತೆಂಬುದೂ ಪೂರ್ವದ ನಮ್ಮ ಕಾವ್ಯಾದಿಗಳಲ್ಲಿ ಬರುವ ವರ್ಣನೆಗಳಿಂದ ತಿಳಿದು ಬರುತ್ತದೆ. ದೇವಾಲಯಕ್ಕೆ ಸಂಬಂಧಿಸಿಯೂ, ರಾಜಾಲಯಕ್ಕೆ ಸಂಬಂಧಿಸಿಯೂ, ನಾಟ್ಯ ಮಂದಿರಗಳಿದ್ದವು. ಕಾವ್ಯಗಳಲ್ಲಿ ವರ್ಣಿಸಿರುವ ಪ್ರಕಾರ ಆ ಪ್ರಯೋಗಗಳು ಶುದ್ಧ ಶಾಸ್ತ್ರೀಯ ಸಂಪ್ರದಾಯದಲ್ಲಿ ನಡೆಯುತ್ತಿದ್ದುವೆಂದು ಊಹಿಸಬಹುದು. ಅತಃಪೂರ್ವದಲ್ಲಿಯೇ ಹೀಗೆ ಆಭ್ಯಂತರ, ಬಾಹ್ಯ ಎಂಬ ಎರಡು ವಿಧದ ನಾಟಕ ಪ್ರಯೋಗಗಳಿದ್ದುದನ್ನು ನಾಟ್ಯಶಾಸ್ತ್ರದಲ್ಲಿ ಭರತ ಮುನಿಯೇ ಹೇಳುತ್ತಾನೆ. ಅವುಗಳಲ್ಲಿ ಬಾಹ್ಯಪ್ರಯೋಗಕ್ಕೆ ಆ ಹೆಸರು ಯಾವುದಕ್ಕಾಗಿ ಎಂಬುದನ್ನು ಹೀಗೆ ಹೇಳಿದ್ದಾನೆ—(ನಾಟಕಾದಿ ರೂಪಕಗಳಲ್ಲಿ ಚತುರ್ವಿಧವಾದ ಅಭಿನಯಗಳನ್ನು ಸಲಕ್ಷಣವಾಗಿಯೂ ಶುದ್ಧವಾಗಿಯೂ ಹೇಗೆ ನಿರ್ವಹಿಸಬೇಕೆಂಬುದನ್ನು ಹೇಳಿದ ಮೇಲೆ ಈ ಶ್ಲೋಕಗಳು ಬರುತ್ತವೆ.) ಏತೇ ಪ್ರಯೋರ್ನಿಯಾ ಮಾರ್ಗಾದ್ಯಭಿನಯೇಸ್ಮೃತಾಃ|<br />ಯವೀದೃಶಂ ಭವೇನಾಟ್ಯಂ ಯಮಾಭ್ಯಂತರಂತು ತತ್ |<br />ಲಕ್ಷಣಾಭ್ಯಂತರತ್ವಾಗಿ ತದಾಭ್ಯಂತರವಿಷ್ಯತೇ |<br />ಶಾಸ್ತ್ರಬಾಹ್ಯಂ ಭವೇದ್ಯತ್ತು ತದ್ಭಾಹ್ಯಮಿತಿ ಸಂಸ್ಕೃತಂ ||<noinclude></noinclude> k91ac9n5b2kwteh7ngynd7uyqa40cgq ಪುಟ:ಯಕ್ಷಗಾನ ಮಕರಂದ.pdf/೨೭೩ 104 100194 319729 281821 2026-05-14T08:47:47Z Hariprasad Shetty10 7490 319729 proofread-page text/x-wiki <noinclude><pagequality level="1" user="PraneethGanesh" />{{Right|23}}</noinclude>ಅನೇನ ಲಕ್ಷ್ಯತೇಯಸ್ಮಾತ್ ಪ್ರಯೋಗ: ಕರ್ಮ ಚೈವಹಿ | ತಸ್ಮಾಲಕ್ಷಣಮೇತದ್ವಿ ನಾಟ್ಯ ಸಮ್ಯಜಿತಂ | ಅನಾಚಾರ್ಯೋದಿತಾಯೇಚ ಯೇಚ ಶಾಸ್ತ್ರ ಬಹಿಃಸೃತಾಃ | ಬಾಹ್ಯಂ ತೇ ತು ಪ್ರಯೋಕ್ಷಂತೆ ಕ್ರಿಯಾ ಕ (ಮಾತ್ರೆ:) ಪ್ರಯೋಜಿತಾ: || ತಾತ್ಪರ್ಯವೇನೆಂದರೆ, ಶಾಸ್ತ್ರ ನಿರ್ದಿಷ್ಟವಾದ ಲಕ್ಷಣಕ್ಕೆ ಸಂಪೂರ್ಣ ಒಳ ಪಟ್ಟ ನಾಟ್ಯ ಪ್ರಯೋಗವು 'ಆಭ್ಯಂತರ' ವೆಂದ, ನಾಟ್ಯಾಚಾರನ ನಿರ್ದೇಶವಿಲ್ಲದೆ ಆಡಲ್ಪಡುವಂಥವು ಮತ್ತು ಶಾಸ್ತ್ರದಲ್ಲಿ ಹೇಳುವ ಲಕ್ಷಣಕ್ಕಿಂತ ಹೊರಗೆ ಕಾಲಿಟ್ಟ ಪ್ರಯೋಗಗಳು 'ಬಾಹ್ಯ ಪ್ರಯೋಗ'ಗಳೆಂದೂ ಕರೆಯಲ್ಪಡುತ್ತವೆ; ಇಲ್ಲಿ, ಎಂದರೆ ಸಾಮಾನ್ಯಾಭಿನಯ'ವೆಂಬ ಈ ಅಧ್ಯಾಯದಲ್ಲಿ (ಹಿಂದಿನ ಅಧ್ಯಾಯಗಳಲ್ಲಿ ವಿಸ್ತಾರ ವಾಗಿ ನಿರೂಪಿಸಿದ್ದನ್ನು ಸರ್ವಂಗ್ರಾಹಕವಾಗಿ ಕ್ರೋಡೀಕರಿಸಿ ಅತಿ ಮುಖ್ಯವಾ ಎಂದು) ನಿರ್ದಿಷ್ಟ ಪಡಿಸಿದ ಏನೊಂದು ಲಕ್ಷಣಗಳಿವೆಯೋ ಆ ಲಕ್ಷಣಗಳೇ ಪ್ರಯೋಗದ ಅಭ್ಯಂತರ ಬಾಹ್ಯ ಪರಿಚ್ಛೇದಕ್ಕೆ ಪ್ರಮಾಣವಾಗಿವೆ; ಹೊರವಲಯ ದಲ್ಲೇ ಪ್ರಯೋಗಿಸಲ್ಪಡುವ 'ಶಾಸ್ತ್ರ ಬಹಿಃಸೃತ'ವಾದ ಬಾಹ್ಯ ಪ್ರಯೋಗಗಳ ಕೃತಿಗಳೂ ನಾಟಕಾದಿ ರೂಪಕ ಲಕ್ಷಣಗಳಿಂದ ಬಹಿಃಸೃತವಾದುವು ಹಾಗೂ ಕೆಳ ಮಟ್ಟದವು ಆಗಿರುತ್ತವೆ, ಎಂದಾಗಿದೆ. [ಕ್ರಿಯಾ: ಎಂದರೆ ನಾಟಕಾದಿ ದೃಶ್ಯಕಾವ್ಯಗಳು ಎಂದರ್ಥ. 'ಕಲ್ಪ' ಎಂದರೆ ಸ್ವಲ್ಪ ಕೀಳ್ಕೊಟ್ಟದ್ದು ಎಂದರ್ಥ. ಕಲ್ಪ = A termination added to nouns and adjectives in the sense of 'a little less than, almost like, nearly equal to' (denoting similarity with a degree of inferiority) - ಆಪಟೆ ನಿಘಂಟು] ಇಂತಹ ಕೃತಿಗಳೇ ಪ್ರಾಯಶಃ, ಉತ್ತರ ಕಾಲದ ಲಕ್ಷಣ ಗ್ರಂಥಗಳಲ್ಲಿ ಉಪರೂಪಕಗಳೆಂದು ಕರೆಯಲ್ಪಟ್ಟ ಗೇಯ ಕಾವ್ಯಗಳೆಂದು ನ್ಯಾಯವಾಗಿ ಊಹಿಸಬಹುದು. ಭರತನು ಉಪರೂಪಕಗಳನ್ನು ಹೇಳಲಿಲ್ಲವಾದರೂ 'ದಶರೂಪಕ ಲಕ್ಷಣ'ದ ಕೊನೆಗೆ, ಅಲ್ಲಿ ಹೇಳಲ್ಪಡದವು ಬೇರೆ ಇರುತ್ತವೆ ಎಂಬ ಸೂಚನೆ ಕಂಡುಬರುತ್ತದೆ. ಶಾಸ್ತ್ರೀಯ ಪ್ರಯೋಗಗಳೆನ್ನುವ ಕೂಚಿಪುಡಿ' 'ಮೇಳತ್ತೂರು' ದಕ್ಷಿಣ ಕನ್ನಡ (ತೆಂಕ ಮಟ್ಟು') 'ತಂಜಾವೂರು' ಇತ್ಯಾದಿ ಯಕ್ಷಗಾನ ಪ್ರಯೋಗಗಳಾದರೂ ಕೇರ ಳದ 'ಕಥಕಳಿ'ಯಾದರೂ ನಾಟ್ಯಶಾಕ್ತ ಲಕ್ಷಣಕ್ಕೆ ಸಂಪೂರ್ಣ ಒಳಪಟ್ಟಿರುವು ದಿಲ್ಲ. ದೇಶೀ (ಶಾಸ್ತ್ರೀಯ) ವಿಧಾನಗಳು ಕೆಲಮಟ್ಟಿಗೆ ಅವುಗಳಲ್ಲಿ ಸೇರಿಕೊಂಡಿವೆ. ಆದುದರಿಂದ ಇವೆಲ್ಲ ಸಂಪ್ರದಾಯಗಳೂ 'ಬಾಹ್ಯಪ್ರಯೋಗ' ಪರಂಪರೆಯಲ್ಲಿ ನಡೆದು ಬಂದಿರಬೇಕು. ಆದುದರಿಂದಲೇ ಬಯಲಾಟ, ವೀಥಿನಾಟಕ, ತೆರುಕ್ಕೂತ್ತು, ಪುರಕ್ಕೊತ್ತು ಎಂಬ ಹೆಸರಾಗಲು ಕಾರಣವೆಂದೆಣಿಸಬಹುದು - – ಶಾಸ್ತ್ರ ಬಹಿಃಸೃತ ಎಂಬ ಅರ್ಥದಲ್ಲಿ. ಅಂತಹ ಬಾಹ್ಯಪ್ರಯೋಗಗಳು ಪ್ರೇಕ್ಷಾಗೃಹಗಳಿಲ್ಲದೆ, ಬಾಹ್ಯ<noinclude></noinclude> 7tzma9nflsh1ni5689nvgsar4fr3pjy ಪುಟ:ಯಕ್ಷಗಾನ ಮಕರಂದ.pdf/೨೯೯ 104 100221 319624 319529 2026-05-13T14:40:59Z Shreesha Sharma 7840 /* Validated */ 319624 proofread-page text/x-wiki <noinclude><pagequality level="4" user="Shreesha Sharma" /></noinclude>{{Left|47}} terrific Veerabhadra and ending with the boy-War-God Kumara: annihilating demon Taraka and his hordes. Valinigraha', Draupadi-pratapa', 'Bhishma Vijaya', 'Virata-parva' or 'Kee- chaka-vadha', 'Karna-Arjuna-Yuddha', 'Atikayavadha', are some of the other plays, all of which are stories of fight and war.. In this respect the 'Yaksha Gana' differs from the Tamil and Telugu varieties which do not specialise in fights, but re- sembles the Kathakali of Malabar......which is also 'Tandavic' in the main. The actors roar and do robust dances in weird The drums are beaten loudly and 'veera' and 'raudra' rasas are portrayed most successfully. The make-up of the Rakshasas and other wild characters is in keeping with this atmosphere. In the play called 'Draupadi-pratapa', it is a very effective, powerful and wonderful scene which forms the climax of the drama at its end. Chandi and Kali appear in terrific attire, roar, and upon a background of war-beats on a drum in the orchestra at the back, they wheel round in a hand- to-hand fight. It shows how well the rasas could be evoked without all the realistic trappings of scenery etc., of the modern stage. Similarly, in the 'Girija Kalyana', the scene in which Siva gets angry, roars, strikes the earth and creates the terrible Veerabhadra to destroy Daksha's sacrifice, is a thrilling show. But 'Lasya' is not absent in Yaksha Gana, for a theme has to be of varied interest. There is 'Lasya' in 'Bhishma Vijaya' where the princesses bathe, and the 'Ruk- mangada' has some fine playing of 'Sringara' or love between King Rukmangada and Mohini. But the prevailing atmosphere is the 'Arabhati Vritti', the forceful manner. Even a play like 'Rukmangada', whose rasa is the quietistic 'Santa', is played in such a manner as to contain mostly fights, and this is done. by the introduction of the conquest expeditions ('Digvijaya') of the crown prince, who defeats various kings, Asuras and God Yama. The clown has great liberty and he is responsible for too much ex tempore comic speech appearing often. In the themes that are mainly puranic, occasional inventions occur and the 'Draupadi-pratapa' is a fine specimen of an imaginative creation spun out of a puranic nucleus. On the whole, they<noinclude></noinclude> 784mz3xhj6qvk9g2biieq5e6i6y3p6p ಪುಟ:ಯಕ್ಷಗಾನ ಮಕರಂದ.pdf/೩೦೦ 104 100222 319625 319530 2026-05-13T14:41:08Z Shreesha Sharma 7840 /* Validated */ 319625 proofread-page text/x-wiki <noinclude><pagequality level="4" user="Shreesha Sharma" /></noinclude>{{Left|48}} play about fifty dramas: the whole of the 'Ramayana' and the 'Mahabharata' done episode by episode, as also other plays. {{center|IV}} {{gap}}Surely, the Yaksha Gana make-up is as epic as its theme. It is decidedly more graceful, richer and more closely related to the ornamentation found in our sculpture than the Kathakali make-up. The chief male characters, the hero and his son, or the king and his minister or prince, have a fine 'Makuta', and together with other characters belonging to the sublime type called 'Maha-purusha', and 'Dhirodatta', have a uniform kind of exalted make-up with 'Bhujakirti', 'Kataka', 'Virakaccha' etc. The head-dress of the wild characters, the 'Dhiroddhatas', is of a different type, an arch-like head-dress which is prepared then and there on each occasion. The 'Prati-Nayaka' or the villain, Rakshasas, Asuras and God Yama appear in the most weird dress of the Yaksha Gana. Their 'Makuta' is bigger and is of wood studded with glass and somewhat resembles some of the Kathakali head-gears. King Salva in Bhishma-vijaya', Mahishasura and Yama in 'Rukmangada' and Ravana in 'Ati- kayavadha' appear in this dress. The face is masked; the lip hangs low and red; there are two carnivorous teeth; the nose is enlarged with some white matter; and long locks of hair hanging behind complete this male weird dress. There is a corresponding female weird dress; Chandi and Kali in 'Drau- padi-pratapa', and Surpanakha in 'Atikayavadha' appear in it. Lion's teeth, blood-red artificial tongue drawn-out and dang- ling, huge breasts and lengthy locks of hair at the back charac- terise this female weird make-up. All the actors wear trousers to enable them to dance and over them a 'saree' is tied in the form of a 'Kaccha' with girdle ornaments. The faces of kings and princes have a rosy paint; king Bali appears with a green face, Yama with a black one, and Krishna and Vishnu, blue. Hunters appear in some plays like the 'Rukmangada' and the Bhishma-vijaya' and they tie to their bodies some amount of green twigs to suggest that they are forest people; they first<noinclude></noinclude> llcs5921c9zn9qvcv2o23mvde90sn2c ಪುಟ:ಯಕ್ಷಗಾನ ಮಕರಂದ.pdf/೩೦೧ 104 100223 319626 281850 2026-05-13T14:41:21Z Shreesha Sharma 7840 /* Proofread */ 319626 proofread-page text/x-wiki <noinclude><pagequality level="3" user="Shreesha Sharma" /></noinclude>49 make a bonfire and dance round it before their action begins. All royal characters have a bow and arrow in their hands; Vishnu and Krishna bring a chakra (disc), and Narada a bunch of peacock feathers. The costume of Narada has been moder- nised, and along with it that of women characters also to a very large extent. In the midst of old picturesque make-up, the heroine now appears discordantly dressed up in modern make-up imitative of coquettish society women appearing on the modern stage. The old female make-up was full of old jewellery with 'Makuta' or 'Kirita' etc. resembling female figures in our sculpture. The make-up includes masks also. In 'Girija Kalyana', Daksha appears after Veerabhadra's onslaught with a mask of a sheep's head. I am told that Jatayus, the great eagle appearing in the 'Ramayana', is similarly made up with an eagle-mask and huge feathers. Much of the elaborate make-up which they use in the performances in their own place, the players did not bring to Madras. The colour scheme of the dress cannot be realised by seeing the photographs repro- duced here. The dresses are mostly in red colour, dull as well as deep, with a lot of dazzling lace all over. V The traditional Sanskrit play and its vernacular represen- tatives begin with some preliminary benedictory music and dance called in Sanskrit 'purva ranga'. As detailed by Bharata, not only its more variegated variety called the Chitra-purva- ranga' but also its more simple form called 'Suddha-purva ranga' was very elaborate. It is well known that the Kathakali of Malabar has its own 'purvaranga', the 'Todayam', 'Purap- padu', 'Melappadam' etc. A traditional Yaksha Gana starts something like a Tamil Terukkoottu'. There is first the worship of God Vighnesvara, the remover of obstacles, within the green room itself, with a song on this God. The 'Karpura Nirajana shown to the God is then 'taken' by the actors, the chorist and the drummers. After this 'Ganapati Prarthana', the Chorist Bhagavatar, along with the player on the 'mridanga<noinclude></noinclude> nup0wx0eov1bkgugcankdvrwps0d15g ಪುಟ:ಯಕ್ಷಗಾನ ಮಕರಂದ.pdf/೩೦೮ 104 100230 319531 281857 2026-05-13T12:00:38Z Shreelatha.Halemane 7642 /* Proofread */ 319531 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|''ಯಕ್ಷಗಾನ ” ಗಾನವಿಧಾನ}} ———————————————————————————— {{Right|- ಶ್ರೀನಿವಾಸ ಉಡುಪ}} {{gap}}ಸಂಗೀತವನ್ನು ಮಾರ್ಗ ಮತ್ತು ದೇಶ್ಯ ಎಂಬ ಎರಡು ವಿಭಾಗಗಳನ್ನಾಗಿ ಮಾಡುವುದು ಸಂಪ್ರದಾಯ. ಆದರೆ ನಾವು ಕೆಲವೊಮ್ಮೆ ಶಾಸ್ತ್ರೀಯ ಸಂಗೀತ, ಜಾನಪದ ಸಂಗೀತ ಎಂಬ ಪದಗಳನ್ನು ಉಪಯೋಗಿಸಿ ಶಾಸ್ತ್ರೀಯ ಸಂಗೀತ ಎಂದರೆ ಮಾರ್ಗಕ್ಕೆ ಸಮ; ದೇಶ್ಯ ಎಂದರೆ ಜಾನಪದ ಸಂಗೀತ ಎನ್ನುತ್ತೇವೆ. ಹಾಗೆಯೇ ಲಘುಸಂಗೀತ, ಸುಗಮಸಂಗೀತ ಎಂಬ ಪದಗಳೂ ಇತ್ತೀಚೆಗೆ ಬಳಕೆಗೆ ಬಂದವುಗಳು. ಇನ್ನು 'ಲಘು ಶಾಸ್ತ್ರೀಯ' ಎಂಬ ಒಂದು ಹೊಸ ಪದವೂ ಹುಟ್ಟಿಕೊಂಡಿದೆ. ಆದರೆ ಸಂಗೀತದ ಗುಣಮಟ್ಟಗಳನ್ನು ನಿರ್ದೇಶಿಸುವಲ್ಲಿ ಈ ಪದಗಳ ಬಳಕೆ ಸಮರ್ಪಕವಾಗಿ ಸುಗಮಸಂಗೀತ ಅಥವಾ ಲಘುಸಂಗೀತವು ಆಗುತ್ತದೆ ಎನ್ನಲು ಬರುವುದಿಲ್ಲ.ಜನಸಾಮಾನ್ಯರಿಗೆಲ್ಲ ರಂಜನೆಯೊದಗಿಸಿತು ಎನ್ನಲು ಬರುವುದಿಲ್ಲ. ಹಾಗೆಯೇಶಾಸ್ತ್ರೀಯ ಸಂಗೀತವು ಸಾಮಾನ್ಯರಿಗೆ ರುಚಿಸಲಾರದು ಎಂಬುದೂ ಸರಿಯಲ್ಲ.ಸಂಗೀತ ಪ್ರಕಾರಗಳ ಮೆಚ್ಚುವಿಕೆಗೆ ಕೇಳ್ಮೆಯಿಂದ ಬಂದ ಅಭ್ಯಾಸವೇ ಮುಖ್ಯ. {{gap}}ಮಾರ್ಗ ಸಂಗೀತ ಎಂದರೆ ಹಳೆಯ ಕಾಲದ, ಈಗ ಪ್ರಚಾರದಲ್ಲಿಲ್ಲದ ಪದ್ಧತಿ; ಇದು ಸಂಗೀತದ ನಿಯಮಗಳಿಗೆ ಹೊಂದಿಕೊಂಡಂತಹದು, ಬುದ್ಧಿ ಗಮ್ಯವಾದುದು ಎಂದು ಲಕ್ಷಣಕಾರರು ವಿವರಿಸಿದ್ದಾರೆ. ದೇಶ ಎಂದರೆ ವಿವಿಧ ಪ್ರದೇಶಗಳಲ್ಲಿ ಬಳಕೆ ಯಲ್ಲಿದ್ದಂತಹ ಸಂಗೀತ; ಇದು ಈಗ ಶಾಸ್ತ್ರನಿಬಂಧನೆಗಳಿಗೆ ಒಳಗಾಗಿದ್ದರೂ ಸಂಪೂರ್ಣವಾಗಿ ಶಾಸ್ತ್ರಾಧಾರಿತವಲ್ಲ;ಜನಜೀವನದೊಂದಿಗೆ ಹರಿದುಬರುವಾಗ ವಿವಿಧ ಪ್ರದೇಶಗಳ ವಿಶಿಷ್ಟತೆಗಳನ್ನು ತುಂಬಿಕೊಂಡು ಬಂದುದು, ಲಕ್ಷ ಲಕ್ಷಣ ಗಳನ್ನು ಸಮನ್ವಯಗೊಳಿಸಿಕೊಂಡಂತಹದು, ಹೃದಯರಂಜಕ ಗುಣಪ್ರಧಾನವಾ ದುದು ಎಂದು ಹೇಳಿದ್ದಾರೆ. {{gap}}ಕಲೆಯೇ ಆಗಲಿ, ಸಾಹಿತ್ಯವೇ ಆಗಲಿ, ಹುಟ್ಟಿನಿಂದಲೇ ಮಾರ್ಗಪದ್ಧತಿಯಲ್ಲಿರ ಇರಲಿಲ್ಲ ಎಂಬುದನ್ನು ನಾವು ಗಮನಿಸಬೇಕು.ಜಗತ್ತಿನ ಆರಂಭದಿಂದ ನಿತ್ಯಜೀವನದಲ್ಲಿ ಸೇರಿಕೊಂಡು ಅಂದಿನಿಂದ ಇಂದಿನ ವರೆಗೆ ಇಳಿದು ಬಂದ ಭಾಷೆ, ಕಲೆಗಳೆಲ್ಲ ಮೊದಲಿಗೆ ಅಸಂಸ್ಕೃತ ಮಾನವನೊಂದಿಗೆ ಅಸಂಸ್ಕೃತ<noinclude></noinclude> twgc9n4i1o2pft4bcylnf6wyvx8bbks ಪುಟ:ಯಕ್ಷಗಾನ ಮಕರಂದ.pdf/೩೧೪ 104 100236 319621 314975 2026-05-13T14:40:12Z Shreesha Sharma 7840 /* Validated */ 319621 proofread-page text/x-wiki <noinclude><pagequality level="4" user="Shreesha Sharma" /></noinclude>{{Left|62}} {{gap}}'ರಾಗ' ಎಂಬ ಶಬ್ದದ ಉಪಯೋಗ ಸಾಮಾನ್ಯವಾಗಿ ಕಂಡು ಬರುವುದು ಐದನೆಯ ಶತಮಾನದ ಲಕ್ಷಣ ಗ್ರಂಥಗಳಲ್ಲಿ. ಅದಕ್ಕಿಂತ ಮೊದಲು 'ಜಾತಿ' ಎಂಬ ಪದವು 'ರಾಗ' ಎಂಬ ಅರ್ಥದಲ್ಲಿ ಸಂಗೀತದಲ್ಲಿ ಉಪಯೋಗವಾಗುತ್ತಿತ್ತು. ಇದೇ ರೀತಿಯಲ್ಲಿ ನಾವು ಯಕ್ಷಗಾನದಲ್ಲಿ 'ಧಾಟಿ' ಅಥವಾ 'ಮಟ್ಟು' ಎಂಬ ಒಂದು ಪದ ವನ್ನು ಉಪಯೋಗಿಸುತ್ತೇವೆ. ಧಾಟಿ ಎಂದರೆ ಸಾಗುವ ರೀತಿ ಎಂದರ್ಥ. ಹಲ ವಾರು ಹಾಡುಗಳ ತಲೆಬರಹದಲ್ಲಿ ರಾಗ ಎಂಬ ಪದದ ಬದಲಿಗೆ ಬೇರೆ ಯಾವುದೋ ಒಂದು ಹಾಡಿನ ಮೊದಲನೆಯ ಸಾಲನ್ನು ಬರೆದು 'ಎಂಬಂತೆ' ಎಂದು ನಿರ್ದೇಶಿಸಿರು ವುದನ್ನು ಕಾಣುತ್ತೇವೆ. ಎಂದರೆ, ಹಾಡನ್ನು ಹಾಡುವ ರೀತಿ ಇನ್ನೊಂದು ಹಾಡನ್ನು ಹಾಡಿದಂತೆ ಎಂದು ತಿಳಿಯಬಹುದು. ಧಾಟಿಗಳ ಮೂಲವನ್ನು ನಾವು ಜಾನಪದ ಗೀತೆಗಳಲ್ಲಿ ಧಾರಾಳವಾಗಿ ಕಾಣಬಹುದು. ಶುದ್ಧ ಸಂಗೀತದ ರಾಗಗಳ ವರ್ಗಕ್ಕೆ ಹೊಂದದ ರೀತಿಗಳನ್ನೂ ಮಟ್ಟುಗಳನ್ನೂ ಹಾಗೆ ಕರೆಯುವುದನ್ನು ಕಾಣುತ್ತೇವೆ, ಈ ಮಟ್ಟುಗಳು ಜಾನಪದ ಸಂಗೀತದಲ್ಲಿ ಹಲವು ಕಾಲದಿಂದಲೂ ಬಳಕೆಗೆ ಬಂದವು ಈ ರೀತಿಯ ಬಳಕೆಗೆ ಕಾರಣ, ಸಂಗೀತಾಭ್ಯಾಸ ಸಾಕಷ್ಟು ಇಲ್ಲದವರು-- ಎಂದರೆ ಸ್ವರಜ್ಞಾನವಿಲ್ಲದವರು ರಾಗನಿರ್ದೇಶನ ಮಾತ್ರದಿಂದ ಹಾಡುಗಳನ್ನು ಉದ್ದೇಶಿತ ರೀತಿಯಲ್ಲಿ ಹಾಡಲು ಸಾಧ್ಯವಿಲ್ಲ; ಆದುದರಿಂದ ಯಾವುದಾದರೂ ಜನ ಪ್ರಿಯ ಹಾಡನ್ನು ಹೇಳಿ, ಅದರಂತೆ ಈ ಹಾಡನ್ನು ಹಾಡಬೇಕು ಎಂದು ನಿರ್ದೇಶಿಸಿ ದರೆ, ಸಂಗೀತಾಭ್ಯಾಸವಿಲ್ಲದ, ಆದರೆ ಅನುಕರಣೆ ಮಾಡಬಲ್ಲ, ಹಾಡುಗಾರನಿಗೆ ಸುಲಭದಲ್ಲಿ ತಿಳಿದೀತು, ಎಂಬ ಉದ್ದೇಶವಿದ್ದಿರಬೇಕು.ಕೆಲವೊಂದು ಜಾನಪದ ಗೀತೆಗಳ ಧಾಟಿ ಅಥವಾ ಮಟ್ಟುಗಳು ತಮ್ಮ ಸಹಜ ಸೌಂದರ್ಯದಿಂದ ಕಲಾಸಂಗೀತ ಕ್ಷೇತ್ರದವರ ಗಮನವನ್ನು ಸೆಳೆದಾಗ ಅವರು ಆ ಧಾಟಿಗಳನ್ನು ವಿಶ್ಲೇಷಿಸಿದರು;ಸ್ವ ರ ಅಗಳಿಗಳವಡಿಸಿ ಪರಿಷ್ಕರಿಸಿದರು; ಅವುಗಳನ್ನು ರಾಗಗಳೆಂದು ಹೆಸರಿಸಿ ಕರೆದು ಸಂಗೀತ ಪ್ರಪಂಚದಲ್ಲಿ ಉಳಿಸಿಕೊಂಡರು.ಪರಿಣಾಮವಾಗಿ ಹಲವಾರು ಜಾನಪದ ಶೈಲಿಯ ಧಾಟಿಗಳ ಪರಿಷ್ಕೃತ ರೂಪಗಳನ್ನು ನಾವಿಂದು ರಾಗಗಳಾಗಿ ಕಲಾಸಂಗೀತದಲ್ಲಿ ಕಾಣುತ್ತೇವೆ. ಹಾಗೆಯೇ ಹಲವಾರು ಪ್ರದೇಶಗಳಲ್ಲಿ ಪ್ರಚಾರದಲ್ಲಿದ್ದ ಜಾನಪದ ಧಾಟಿಗಳು ಆ ನಾಡುಗಳ ಹೆಸರನ್ನೇ ಇರಿಸಿಕೊಂಡು ರಾಗಗಳಾಗಿ ಶುದ್ಧಸಂಗೀತದಲ್ಲಿ ಸೇರಿವೆ. ಗೌಳ, ಕನ್ನಡ, ಘುರ್ಜರಿ, ಬಂಗಾಳ, ಮಾರುವ ಮೊದಲಾದ ರಾಗಗಳ ಹೆಸರುಗಳು ಈ ರೀತಿಗೆ ಉದಾಹರಣೆಗಳಾಗಿವೆ. {{gap}}ಯಕ್ಷಗಾನ ಕವಿಗಳು ವಿದ್ವಾಂಸ ವರ್ಗದವರೆಂದು ಗಣಿಸಲ್ಪಡುವವರೆನ್ನ ಬರುವುದಿಲ್ಲ.ಕ್ರಮಬದ್ದವಾಗಿ ಸಂಗೀತಾಭ್ಯಾಸ ಮಾಡಿದವರೂ ಎಂದು ಹೇಳಲೂಸಾಕಷ್ಟು ಪ್ರಮಾಣಗಳಿಲ್ಲ. ಹಾಗಾಗಿ ಅವರು ವಾಗ್ಗೇಯಕಾರರಲ್ಲ. ತಮ್ಮ ಹಾಡುಗಳನ್ನು ಸ್ವರಸಂಯೋಜನೆಗೆ ಅಳವಡಿಸಲು ಅವರಿಂದ ಸಾಧ್ಯವಾಗಲಿಲ್ಲ. ಆದರೆ ಯಾವ ರೀತಿ ಯಲ್ಲಿ ಹಾಡಿದರೆ ತಾವು ಉದ್ದೇಶಿಸಿದ ಭಾವ ಸ್ಪಷ್ಟವಾಗಿ ಮೂಡುತ್ತದೆ ಎಂಬ<noinclude></noinclude> phou1prv7kyqfrekoq6ju4jzfhrbx3m ಪುಟ:ಯಕ್ಷಗಾನ ಮಕರಂದ.pdf/೩೧೫ 104 100237 319622 319503 2026-05-13T14:40:26Z Shreesha Sharma 7840 /* Validated */ 319622 proofread-page text/x-wiki <noinclude><pagequality level="4" user="Shreesha Sharma" />{{Right|63}}</noinclude>ದನ್ನು ಸಹಜ ಅನುಭವದಿಂದ, ಪ್ರಯೋಗ ಪರಿಣಾಮಗಳ ಅರಿಯುವಿಕೆಯಿಂದ ಚೆನ್ನಾಗಿ ತಿಳಿದವರು. ಆದುದರಿಂದ ಅವರು ತಾವು ಕೇಳಿದ ಸಂಗೀತದ ಧಾಟಿಗಳಲ್ಲಿ, ತಮ್ಮ ಕಥಾನಿರೂಪಣೆಯ ಭಾವಕ್ಕೆ, ನೃತ್ಯಕ್ಕೆ, ಅಳವಡುವಂಥವುಗಳನ್ನು ಆರಿಸಿ ಕೊಂಡು ಹಾಡುಗಳನ್ನು ರಚಿಸಿರಬಹುದು. ಅಂತೆಯೇ ಆ ಹಾಡುಗಳನ್ನು ಆ ಧಾಟಿ ಗಳ ರಾಗ, ತಾಳಗಳಲ್ಲಿ ಹೆಸರಿಸಿರಬಹುದು. ಸಂಗೀತದಲ್ಲಿ ರಾಗವನ್ನು ನಿರೂಪಿಸ ವಾಗ, ಅಥವಾ ಕೃತಿಗಳನ್ನು ರಚಿಸುವಾಗ ರಾಗದ ಸಂಭಾವ್ಯ ಸಂಚಾರಗಳನ್ನೆಲ್ಲ ಆಲಾಪನೆಯಲ್ಲಿ ಅಥವಾ ಹಾಡುಗಳಲ್ಲಿ ಕಲಾತ್ಮಕವಾಗಿ ಚಿತ್ರಿಸುವುದು ಪದ್ಧತಿ. ಇಲ್ಲಿ ನಾದಮೂಲವಾದ ಸುಂದರ ಶ್ರಾವ್ಯ ಚಿತ್ರಣವನ್ನು ಒದಗಿಸುವುದು ಮಾತ್ರ ಉದ್ದೇಶ. ಯಕ್ಷಗಾನದಲ್ಲಿ ಇಂತಹ ನಿರೂಪಣೆಯ, ವೈವಿಧ್ಯಪೂರ್ಣವಾದ ನಾದಚಿತ್ರಣದ, ಅವಶ್ಯವಿಲ್ಲ. ಹಾಗಾಗಿ ಅಲ್ಲಿ ಹಾಡುಗಳಲ್ಲಿ ರಾಗದ ಸಂಪೂರ್ಣ ಚಿತ್ರಣ ಬರಲಿಲ್ಲ ಎನ್ನಬಹುದು. ಪ್ರಸಂಗದ ಕರ್ತೃ ತನ್ನ ಉದ್ದೇಶಸಿದ್ಧಿಗೆ ಅವಶ್ಯವಾದಷ್ಟು ರಾಗ ಸಂಚಾರಗಳನ್ನು ಮಾತ್ರ ಉಪಯೋಗಿಸಿರಬೇಕು, ಅಥವಾ ಆತನ ಸಂಗೀತಜ್ಞಾನದ ಪರಿಮಿತಿಯಿಂದಾಗಿ ಸುಲಭಸಾಧ್ಯವಾದ ಸಂಚಾರಗಳನ್ನಷ್ಟೆ ಉಪಯೋಗಿಸಿರಬೇಕು, ಅಥವಾ ಸಾಮಾನ್ಯ ಜನರಿಗೆ ಹಾಡುಗಳನ್ನು ಹಾಡಲು ಅಥವಾ ಕೇಳಿ ಆಸ್ವಾದಿಸಲು ಅವಕಾಶವಾಗುವಂತೆ ರಾಗದ ಸರಳಮುಖವನ್ನು ಮಾತ್ರ ಬಳಸಿರಬೇಕು. {{gap}}ಯಕ್ಷಗಾನ ಪರಂಪರಾಗತವಾಗಿ ಇಳಿದು ಬಂದುದು ಜನಸಾಮಾನ್ಯರ ಮಾಧ್ಯ ಮದ ಮೂಲಕ. ಅದನ್ನು ಅಭ್ಯಸಿಸಿದವರಾಗಲೀ ಪ್ರದರ್ಶಿಸಿದವರಾಗಲೀ ನೋಡಿ ಮೆಚ್ಚಿದವರಾಗಲೀ ಸಂಗೀತ ಪಂಡಿತರಲ್ಲ. ಹಾಗಾಗಿ ಅಭ್ಯಾಸ, ನಿರೂಪಣೆಗಳು ತಲೆ ಮಾರಿನಿಂದ ತಲೆಮಾರಿಗೆ ಇಳಿದು ಬಂದಾಗ ಅವುಗಳಲ್ಲಿ ಸ್ವಾಭಾವಿಕವಾಗಿ ಮೂಡಿದ ಲೋಪದೋಷಗಳನ್ನಾಗಲಿ, ಅಶಾಸ್ತ್ರೀಯತೆಯನ್ನಾಗಲಿ ಗುರುತಿಸಲು, ತಿದ್ದಲು, ಅವರಿಗೆ ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಹಾಡುಗಳಲ್ಲಿ ಭಾವಕ್ಕೆ ಅನುಗುಣವಾದ ಶೈಲಿಯ ಹೊರತು ರಾಗದ ಶುದ್ಧ ಸ್ವರೂಪ ಉಳಿಯಲಿಲ್ಲ. ಕೇಳ್ಮೆಯಿಂದ ಮಾಡಿದ ಅಭ್ಯಾಸದ ಫಲವಾಗಿ ಇತರ ರಾಗ ಛಾಯೆಗಳೂ ಸಂಚಾರಗಳೂ ಬಂದು ಸೇರಿ ಕೊಂಡವು. ಆದುದರಿಂದ ನಾವು ಈಗ ಯಕ್ಷಗಾನದ ಹಾಡುಗಳನ್ನು ಕೇಳುವಾಗ ಅವುಗಳನ್ನು ಕರ್ನಾಟಕೀ ಅಥವಾ ಹಿಂದುಸ್ತಾನಿ ಸಂಗೀತ ಪದ್ಧತಿಯ ರಾಗಗಳಿಗೆ ಸಂಪೂರ್ಣವಾಗಿ ಹೋಲಿಸಲು ಸಾಧ್ಯವಿಲ್ಲ. {{gap}}ಸಾಮಾನ್ಯವಾಗಿ, ಈಗ ನಮಗೆ 15ನೆಯ ಶತಮಾನಕ್ಕಿಂತ ಹಿಂದಿನ ಯಕ್ಷ ಗಾನ ಪ್ರಸಂಗಗಳು ದೊರೆಯುವುದಿಲ್ಲ. 15ನೆಯ ಶತಮಾನವು ಸಂಗೀತಪ್ರಪಂಚ ದಲ್ಲಿ ಒಂದು ಕ್ರಾಂತಿಯ ಕಾಲ. ಅಷ್ಟರ ವರೆಗಿನ ಗೇಯ ಪ್ರಬಂಧಗಳು ನಮಗೆ ಇಂದು ಶಾಸ್ತ್ರ ಗ್ರಂಥಗಳಲ್ಲಿ ಮಾತ್ರ ದೊರೆಯುತ್ತವೆ. ಅವುಗಳನ್ನು ಹಾಡುವ ರೀತಿ ನಮ್ಮಲ್ಲಿಯ ವರೆಗೆ ಪರಂಪರಾಗತವಾಗಿ ಇಳಿದು ಬರಲಿಲ್ಲ. ಪುರಂದರದಾಸರ<noinclude></noinclude> dsku5usqeuajex0ccrxkrmr0xjhs99r ಪುಟ:ಯಕ್ಷಗಾನ ಮಕರಂದ.pdf/೩೧೬ 104 100238 319623 319506 2026-05-13T14:40:38Z Shreesha Sharma 7840 /* Validated */ 319623 proofread-page text/x-wiki <noinclude><pagequality level="4" user="Shreesha Sharma" />{{Left|64}}</noinclude>ಕಾಲದ ವರೆಗೆ ಸಂಗೀತವು ಬುದ್ಧಿಜೀವಿಗಳ, ನಾದೋಪಾಸನ ಮಾರ್ಗ ಹಿಡಿದವರ, ಸೊತ್ತಾಗಿತ್ತಲ್ಲದೆ ಜನಸಾಮಾನ್ಯರಿಗೆ ಸಂಗೀತದಲ್ಲಿ ಪ್ರವೇಶವಿರಲಿಲ್ಲ. ಪುರಂದರರು ಭಕ್ತಿ ಪಂಥಕ್ಕೆ ಸಂಗೀತವನ್ನು ಬಳಸಿದವರಲ್ಲಿ ಅಗ್ರಗಣ್ಯರು. ಸರಳವಾದ ಅಭ್ಯಾಸ ಗಾನಗಳನ್ನು ರಚಿಸಿ ಸಾಮಾನ್ಯನಿಗೂ ಸಂಗೀತ ಪ್ರವೇಶ ಲಭ್ಯವಾಗುವಂತೆ ಮಾಡಿ ದರು. ಸುಂದರವಾದ, ಸುಲಭವಾದ ಅಸಂಖ್ಯಾತ ನಾಮಸಂಕೀರ್ತನೆಗಳನ್ನೂ ನೀತಿ ಬೋಧೆಯ ಹಾಡುಗಳನ್ನೂ ರಚಿಸಿ ಹಾಡಿದರು; ಭಜನಗಾನದಲ್ಲಿ ಜನರ ಆಸಕ್ತಿ ಯನ್ನು ಕೆರಳಿಸಿದರು.ಭಕ್ತಿ ಪಂಥಕ್ಕೆ ಪರಮಾತ್ಮಸಂಕೀರ್ತನ, ಭಜನಗಾನಗಳೇ ತಾರಕವೆಂದು ಬೋಧಿಸಿದರು. ಪುರಂದರರು ಆರಂಭಿಸಿದ ಸಂಗೀತದಲ್ಲಿನ ಈ ಹೊಸತನ ಸಾಮಾನ್ಯರನ್ನು ವಿಶೇಷವಾಗಿ ಆಕರ್ಷಿಸಿತು: ಹಲವರು ಪುರಂದರರ ಶಿಷ್ಯರಾದರು ಅವರ ಕೀರ್ತನೆಗಳನ್ನು ಹಾಡುತ್ತ ನಾಡನ್ನೆಲ್ಲ ಸುತ್ತಿದರು. ಪರಿಣಾಮವಾಗಿ ಅನತಿ ಕಾಲದಲ್ಲೇ ಪುರಂದರದಾಸರ ಹಾಡುಗಳು ಎಲ್ಲಾ ಕಡೆಗಳಲ್ಲೂ ವಿಶೇಷವಾಗಿ ಪ್ರಚಾರ ವಾದುವು. ಸುಲಭವಾದ ರಾಗ, ತಾಳಗಳಲ್ಲಿ ರಚಿತವಾದ ಈ ಹಾಡುಗಳನ್ನು ವಿದ್ವಾಂಸರೂ, ಸಾಮಾನ್ಯರೂ ಮೆಚ್ಚಿಕೊಂಡು ಹಾಡಿದರು. ಪದ್ಯರಚನೆ ಮಾಡ ಬಲ್ಲವರು ದಾಸರ ವಿಧಾನವನ್ನೇ ಹೆಚ್ಚಾಗಿ ಅನುಸರಿಸಿದರು. ಆಗಿನ ಯಕ್ಷಗಾನ ಕವಿಗಳೂ ದಾಸರ ಹಾಡುಗಳ ಪ್ರಭಾವಕ್ಕೊಳಗಾಗಿ ತಮ್ಮ ರಚನೆಗಳನ್ನು ಆ ಧಾಟಿಗಳಲ್ಲಿ ರಚಿಸಿರಬಹುದು. ರಾಗ -ತಾಳಗಳು ತಿಳಿದೆಡೆಗಳಲ್ಲಿ ಆ ಹೆಸರುಗಳನ್ನೇ ಹೇಳಿರಬಹುದು. ಗೊತ್ತಾಗದಿದ್ದಲ್ಲಿ ಹಾಡಿನ ಧಾಟಿಯನ್ನು ಸೂಚಿಸಲು 'ಎಂಬಂತೆ' ಎಂದಿರಬಹುದು. ಕೆಲವು ಯಕ್ಷಗಾನ ಪ್ರಸಂಗಗಳ ಹಸ್ತಪ್ರತಿಗಳಲ್ಲಿ ತಲೆಬರೆಹವಾಗಿ 'ರಾಗ-ತಾಳ' ಎಂಬ ಶಬ್ದಗಳಿವೆಯೇ ಹೊರತು ಅವುಗಳ ಹೆಸರಿರುವುದಿಲ್ಲ, ಎಂಬುದೂ ಗಮನಾರ್ಹ, ದಾಸರ ಹಾಡುಗಳಲ್ಲಿ ಯಕ್ಷಗಾನದ ಹಾಡುಗಳಲ್ಲೂ ಕಂಡು ಬರುವ ರಾಗ, ಧಾಟಿ, ತಾಳ, ಲಯ, ಹಾಡಿಕೆಯ ವಿಧಾನಗಳಲ್ಲಿನ ಕೆಲವೊಂದು ಸಾಮ್ಯಗಳಿಂದಾಗಿ, ದಾಸರ ಹಾಡುಗಳ ವೈಶಿಷ್ಟ್ಯದಿಂದ ಯಕ್ಷಗಾನದ ಹಾಡುಗಳು ಪ್ರಭಾವಿತವಾಗಿವೆ ಎಂದು ಹೇಳಬಹುದು. ಆದರೆ ವೀರ, ರೌದ್ರ, ರಸಗಳ ಬಳಕೆ ಅವಶ್ಯವಾದಾಗ, ಸಂಗೀತದಲ್ಲಿ ಇಂತಹ ಹಾಡುಗಳು ದೊರೆಯದಿದ್ದಾಗ, ಹಾಡುವ ವಿಧಾನವನ್ನು ತಮ್ಮ ಉದ್ದೇಶಕ್ಕೆ ತಕ್ಕಂತೆ ಸ್ವಲ್ಪ ಬದಲಿಸಿ ಉಪಯೋಗಿಸಿರಬಹುದು. ಈ ರೀತಿ, ಯಕ್ಷಗಾನ ಎಂದು ನಾವೀಗ ಗುರುತಿಸುವ ಶೈಲಿಗೆ ಮೂಲವಾಗಿರಬಹುದು. {{gap}}ಯಕ್ಷಗಾನದ ಹಾಡುಗಳನ್ನು ಹಾಡುವುದು ಹೆಚ್ಚಾಗಿ ಬಯಲಾಟದ ಅಥವಾ ತಾಳಮದ್ದಳೆಯ ಅವಕಾಶದಲ್ಲಿ ಮಾತ್ರ. ಬಯಲಾಟದಲ್ಲಿ ಸಾವಿರಾರು ಪ್ರೇಕ್ಷಕರು ಸೇರಿದಾಗ, ಭಾಗವತನ ಹಾಡುಗಳು ಜನಸಮೂಹದ ಕೊನೆಯ ಸಾಲಿನ ವರೆಗೆ ತಲಪ ಬೇಕಷ್ಟೆ! ಧ್ವನಿವರ್ಧಕಗಳಿಲ್ಲದಿದ್ದ ಹಿಂದಿನ ಕಾಲದಲ್ಲಿ ಭಾಗವತನು ತಾರಸ್ಥಾಯಿಗಳಲ್ಲೇ ಯಲ್ಲಿ ಸಾಧ್ಯವಾದಷ್ಟು ಗಟ್ಟಿಯಾಗಿ ಹಾಡಿದಾಗ ಮಾತ್ರ ಹಾಡು ಎಲ್ಲರಿಗೂ ಕೇಳಿಸಬಹುದಾಗಿತ್ತು. ಹಾಗಾಗಿ, ಹಾಡುಗಳನ್ನು ಹೆಚ್ಚಾಗಿ ಮಧ್ಯ, ತಾರಸ್ಥಾಯಿಗಳಲ್ಲೇ<noinclude></noinclude> 1eqhr74l0snxsof74mufq4wkw1ie9kx ಪುಟ:ಯಕ್ಷಗಾನ ಮಕರಂದ.pdf/೩೧೯ 104 100241 319533 319514 2026-05-13T12:01:08Z Shreelatha.Halemane 7642 /* Validated */ 319533 proofread-page text/x-wiki <noinclude><pagequality level="4" user="Shreelatha.Halemane" /> {{Right|67}}</noinclude>ಹಾಗೆಯೇ ಸ್ವತಂತ್ರವಾಗಿ ಸಂಗೀತ ನಿರೂಪಣೆಗೂ ವಾದ್ಯಗಳ ಉಪಯೋಗವಾಗುತ್ತದೆ. ಯಕ್ಷಗಾನದಲ್ಲಿ ಗೇಯಕ್ಕೆ ಅನುಸರಣೆಯಾಗಿ ವಾದ್ಯಗಳ ಉಪಯೋಗವಿಲ್ಲ. ಸಾಹಿತ್ಯ ವಿರಹಿತ ಸಂಗೀತದ ಉಪಯೋಗ ಯಕ್ಷಗಾನದಲ್ಲಿ ಇಲ್ಲವಾದುದರಿಂದ ಕೇವಲ ಸಂಗೀತ ನಿರೂಪಣೆಗಾಗಿ ವಾದ್ಯಗಳನ್ನು ಬಳಸುವ ಪ್ರಶ್ನೆಯೇ ಇಲ್ಲ. ಆದರೆ ಹಾಡುಗಾರಿಕೆಗೆ ಪೂರಕವಾಗಿ ವಾದ್ಯಗಳನ್ನು ಉಪಯೋಗಿಸಿದರೆ ರಸಾಸ್ವಾದನೆಯನ್ನು ಹೆಚ್ಚಿಸಲು ಉಪಯುಕ್ತವಾಗದೆ? ಇದನ್ನು ಪ್ರಯೋಗ ಮಾಡಿ ನೋಡಬಹುದು. ಇಂತಹ ಪ್ರಯೋಗಗಳಿಂದ ಶೈಲಿ ಅಥವಾ ಪರಂಪರೆಗೆ ಹಾನಿಯಾಗದು. ಸಂಪ್ರ ದಾಯಗಳನ್ನು ಉದ್ದೇಶಗಳಿಗೆ ವ್ಯತಿರಿಕ್ತವಾಗದ ತೆರದಲ್ಲಿ ಪರಿಷ್ಕರಿಸಿದರೆ ಅದರಿಂದ ಪರಂಪರೆ ಕೆಡದೆ ಇನ್ನಷ್ಟು ಉಜ್ವಲವಾಗಿ ಕಂಗೊಳಿಸುತ್ತದೆ ಎಂಬುದು ಕಲಾ ಚರಿತ್ರೆಯ ಅಭ್ಯಾಸಿಗಳಿಗೆ ತಿಳಿದ ವಿಚಾರ. ಆದುದರಿಂದ ಗೇಯಕ್ಕೆ ಪೂರಕವಾದ ವಾದ್ಯಗಳ ಬಳಕೆಯ ಕಡೆಗೆ ಯಕ್ಷಗಾನ ಕ್ಷೇತ್ರವು ದೃಷ್ಟಿ ಹರಿಯಿಸಬೇಕು. {{gap}}ತಾಳಗಳ ನಿರೂಪಣೆಯಲ್ಲ ಸಂಗೀತಕ್ಕೂ ಯಕ್ಷಗಾನಕ್ಕೂ ಸಾಕಷ್ಟು ಭೇದ ವಿದೆ. ಸಂಗೀತದಲ್ಲಿನ ಕಾಲಪ್ರಮಾಣವನ್ನು ಕೆಲವೊಂದು ನಿಯಮಗಳಿಗನುಸಾರ ವಾಗಿ, ವಿವಿಧ ರೀತಿಗಳಲ್ಲಿ ವಿಭಜಿಸಿ ಅಳೆಯುವ ಕ್ರಮವನ್ನು 'ತಾಳ' ಎನ್ನಬಹುದು. ತಾಳಗಳ ದೀರ್ಘಪ್ರಮಾಣವನ್ನು 'ಅಕ್ಷರ ಕಾಲ' ಎಂಬ ಮಾನದಿಂದ ಅಳೆಯು ವುದು ರೂಢಿ. ಅಕ್ಷರ ಕಾಲ ಎಂದರೆ ಒಂದು ಹೃಸ್ವ ಅಕ್ಷರವನ್ನು ಉಚ್ಚರಿಸಲು ಬೇಕಾಗುವ ಕಾಲ ಪ್ರಮಾಣ. ಆದರೆ ಸಂಗೀತದಲ್ಲಿ ನಾಲ್ಕು ಹಸ್ತಾಕ್ಷರಗಳ ಕಾಲ ಪ್ರಮಾಣವನ್ನು ಒಂದು ಅಕ್ಷರಕಾಲ ಎಂದು ಗಣಿಸಲಾಗುತ್ತದೆ. ಈ ಅಕ್ಷರಕಾಲಗಳ ಸಮೂಹದ ನಿಶ್ಚಿತವಾದ ಒಂದು ಪರಿಮಾಣವನ್ನು —ಎಂದರೆ, ಸಾಮಾನ್ಯವಾಗಿ ಒಂದು ಹಾಡಿನ ಒಂದು ಪಾದಕ್ಕೆ ಬರಬಹುದಾದ ಉದ್ದವನ್ನು —'ಆವರ್ತ' ಎನ್ನು ತ್ತಾರೆ. ಈ ಆವರ್ತದೊಳಗೆ ಒಳಗೊಳ್ಳುವ ಅಕ್ಷರ ಕಾಲಗಳ ವಿವಿಧ ರೀತಿಯ ವಿಂಗಡನೆಯ ಭಾಗಗಳಿಗೆ “ಅಂಗಗಳು' ಎಂದು ಹೆಸರು. ಅಂಗಗಳು ತಾಳದ ಪ್ರತಿ ಯೊಂದು ಆವರ್ತದಲ್ಲೂ ಒಂದೇ ವ್ಯವಸ್ಥೆಯಲ್ಲಿ ಬರಬೇಕು ಎಂಬುದು ನಿಯಮ. ಈ ವಿಂಗಡನೆಯ ಅಂಗಗಳು ಅನುವುತ, ದ್ರುತ, ಲಘು, ಗುರು, ಪ್ಲುತ, ಕಾಕಪಾದ ಎಂದು ಆರು ವಿಧಗಳಾಗಿದ್ದು ಅವುಗಳನ್ನು ಷಡಂಗಗಳು ಎನ್ನುತ್ತಾರೆ; ಅವುಗಳಿಗೆ ಅನುಕ್ರಮವಾಗಿ ಒಂದು, ಎರಡು, ನಾಲ್ಕು, ಎಂಟು, ಹನ್ನೆರಡು ಮತ್ತು ಹದಿನಾರು ಅಕ್ಷರಕಾಲಗಳ ಕಾಲಪ್ರಮಾಣವಿದೆ. ಕೆಲವೊಂದು ಅಂಗಗಳು ಕೆಲವೊಂದು ತಾಳಗಳಲ್ಲಿ ಇರುತ್ತವೆಯೇ ಹೊರತು, ಎಲ್ಲ ಅಂಗಗಳು ಒಂದು ತಾಳದಲ್ಲಿರಬೇಕಾಗಿಲ್ಲ. {{gap}}ತಾಳಗಳಲ್ಲೂ ಮಾರ್ಗ ಮತ್ತು ದೇಸಿ ಎಂಬ ಎರಡು ಪ್ರಕಾರಗಳಿವೆ. 'ಪೂರ್ವದ ಸಂಗೀತದಲ್ಲಿ ಅಷ್ಟೋತ್ತರ ಶತ (108) ತಾಳಗಳ ಉಪಯೋಗವಾಗುತ್ತಿತ್ತು. ಅವು ಗಳಲ್ಲಿ ಮೊದಲಿನ ಐದು ತಾಳಗಳನ್ನು ಮಾರ್ಗೀ ಎಂದೂ ಉಳಿದವುಗಳನ್ನು ದೇಸೀ<noinclude></noinclude> 5t788j839wid1l4hmpx01kx98a5p9j5 ಪುಟ:ಯಕ್ಷಗಾನ ಮಕರಂದ.pdf/೩೨೦ 104 100242 319627 319518 2026-05-13T14:41:39Z Shreesha Sharma 7840 /* Validated */ 319627 proofread-page text/x-wiki <noinclude><pagequality level="4" user="Shreesha Sharma" /> {{Left|68}}</noinclude>ಎಂದೂ ಕರೆದಿದ್ದಾರೆ. ಹದಿನೈದನೆಯ ಶತಮಾನದಲ್ಲಿ ಸಪ್ತತಾಳಗಳು ಬಳಕೆಗೆ ಬಂದುವು. ಅಷ್ಟೋತ್ತರಶತ ತಾಳಗಳಲ್ಲಿ ಪಡಂಗಗಳೆಲ್ಲವುಗಳ ಬಳಕೆಯನ್ನು ಕಾಣು ತೇವೆ. ಆದರೆ ಸಪ್ತತಾಳಗಳಲ್ಲಿ ಮೊದಲಿನ ಮೂರು ಅಂಗಗಳಾದ ಅನುದುತ, ದ್ರುತ, ಲಘುಗಳು ಮಾತ್ರವೇ ಉಪಯೋಗವಾಗುತ್ತವೆ. {{gap}}ಅಷ್ಟೋತ್ತರಶತ ತಾಳಗಳಲ್ಲಿ ಲಘುವಿಗೆ ಕಾಲಪ್ರಮಾಣ ನಾಲ್ಕು ಅಕ್ಷರಕಾಲ ಗಳು. ಸಪ್ತತಾಳಗಳಲ್ಲಿ ಬಳಸುವ ಲಘುವಿನಲ್ಲಿ ತಿಶ್ರ, ಚತುರಶ್ರ, ಖಂಡ, ಮಿಶ್ರಗಳೆಂಬ, ಮೂರು, ನಾಲ್ಕು, ಐದು, ಏಳು ಅಕ್ಷರಕಾಲ ಪ್ರಮಾಣದ ಕಾಲಪ್ರಮಾಣಗಳಿವೆ. ಪುರಂದರದಾಸರು ಧ್ರುವ, ಮಠ‍್ಯ, ರೂಪಕ, ಝಂಪೆ, ತ್ರಿಪುಟ, ಆಟ ಮತ್ತು ಏಕಗಳೆಂಬ ಏಳು ತಾಳಗಳಿಗೆ ಅಲಂಕಾರಗಳನ್ನೂ, ಸುಳಾದಿಗಳನ್ನೂ ರಚಿಸಿದುದರ ಪರಿಣಾಮವಾಗಿ ಅವು ಮುಂದೆ ವಿಶೇಷವಾಗಿ ಬಳಕೆಗೆ ಬಂದುವು. ಸಪ್ತತಾಳಗಳಲ್ಲಿ ಧ್ರುವ, ಮಠ, ರೂಪಕ, ಏಕತಾಳಗಳಲ್ಲಿ ಬರುವ ಲಘುಗಳ ಕಾಲಪ್ರಮಾಣ ನಾಲ್ಕು ಅಕ್ಷರಕಾಲಗಳು, ಇದನ್ನು ಚತುರಶ್ರ ಲಘು ಎಂದು ಕರೆಯುತ್ತಾರೆ. ಝಂಪೆತಾಳದ ಲಘುವಿನ ಕಾಲಪ್ರಮಾಣ ಏಳು ಅಕ್ಷರಕಾಲಗಳಿದ್ದು ಅದನ್ನು ಮಿಶ್ರಲಘು ಎನ್ನುತ್ತಾರೆ. ತ್ರಿಪುಟ ತಾಳದಲ್ಲಿನ ಮೂರು ಅಕ್ಷರಕಾಲ ಪ್ರಮಾಣದ ಲಘು ತಿಶ್ರಲಘು, ಅಟತಾಳದಲ್ಲಿನ ಲಘುವಿಗೆ ಐದು ಅಕ್ಷರಕಾಲ ಪ್ರಮಾಣವಿದ್ದು ಅದು ಖಂಡ ಲಘು ಎನಿಸುತ್ತದೆ. ನಾಲ್ಕು ಜಾತಿಯ ಲಘುಗಳಲ್ಲದೆ ಸಂಕೀರ್ಣಲಘು ಎಂಬ ಒಂಭತ್ತು ಅಕ್ಷರಕಾಲ ಪ್ರಮಾಣದ ಇನ್ನೊಂದು ಲಘುವೂ ಇದೆ; ಆದರೆ ಇದು ಸಪ್ತತಾಳಗಳಲ್ಲಿ ಇಲ್ಲ. ಸಪ್ತತಾಳಗಳಲ್ಲಿ ಪ್ರತಿಯೊಂದರಲ್ಲಿ ಲಘುವಿನ ಅಕ್ಷರಕಾಲ ಪ್ರಮಾಣವನ್ನು ಬದಲಿಸುವುದರ ಮೂಲಕ ಪ್ರತಿಯೊಂದು ತಾಳವನ್ನೂ ಐದು ಬಗೆಯಾಗಿ ಕಾಣಿಸಬಹುದು. ಹೀಗೆ ಮಾಡುವುದರಿಂದ ಸಪ್ತತಾಳಗಳನ್ನು ಲಘುವಿನ ಜಾತಿಭೇದಗಳ ಮೂಲಕ ಮೂವತ್ತೈದು ತಾಳಗಳಾಗಿ ತೋರಿಸಲು ಸಾಧ್ಯವಾಗಿದೆ. {{gap}}ಸಪ್ತತಾಳಗಳಲ್ಲದೆ ಛಾಪುತಾಳಗಳೆಂಬ ಇನ್ನೊಂದು ವರ್ಗದ ತಾಳಗಳಿವೆ. ಜಾನ ಪದ ಮೂಲದ ಈ ತಾಳಗಳನ್ನು ಕೇವಲ ಎರಡು ಘಾತಗಳಿಂದ ಹಾಕಿತೋರಿಸುವುದು ಪದ್ಧತಿ. ಇವುಗಳ ಆವರ್ತದ ಕಾಲಪ್ರಮಾಣವನ್ನು ಅಕ್ಷರಕಾಲಗಳಲ್ಲಿ ಹೇಳದೆ ಅಕ್ಷರಗಳಲ್ಲಿ ಹೇಳುವುದು ರೂಢಿ. ಆದುದರಿಂದ ಹಾಡಿನ ಒಂದು ಪಾದಕ್ಕೆ ಸಾಮಾನ್ಯವಾಗಿ ನಾಲ್ಕು ತಾಳಾವರ್ತಗಳಂತೆ ಇವುಗಳ ಬಳಕೆಯಾಗುತ್ತದೆ. ಷಡಂಗಗಳ ಅಕ್ಷರಕಾಲ ಪ್ರಮಾಣದ ವಿಭಜನೆ ಇವುಗಳ ಆವರ್ತದಲ್ಲಿರುವುದಿಲ್ಲ. ಛಾಪು ತಾಳ ಗಳಲ್ಲಿ ಐದು ಮತ್ತು ಏಳು ಅಕ್ಷರಗಳ ಕಾಲಪ್ರಮಾಣದ ಆವರ್ತಗಳ ತಾಳಗಳು ಖಂಡ ಛಾಪು ಮತ್ತು ಮಿಶ್ರ ಛಾಪು ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿವೆ.ಖಂಡ ಛಾಪು ಛಾಪು ತಾಳಾವರ್ತದ ವಿಭಜನೆ 2+3 ಅಕ್ಷರಗಳ ಕಾಲಪ್ರಮಾಣದ ಎರಡು ಘಾತಗಳ ಮೂಲಕ, ಮಿಶ್ರ ಛಾಪು ತಾಳವನ್ನು 3+4 ಅಕ್ಷರಗಳ ಕಾಲಪ್ರಮಾಣದ ಎರಡು<noinclude></noinclude> 1a6hhy36pqftjgevedja04dqtbazaii ಪುಟ:ಯಕ್ಷಗಾನ ಮಕರಂದ.pdf/೩೨೧ 104 100243 319628 319525 2026-05-13T14:41:50Z Shreesha Sharma 7840 /* Validated */ 319628 proofread-page text/x-wiki <noinclude><pagequality level="4" user="Shreesha Sharma" />{{Right|69}}</noinclude>ಘಾತಗಳಿಂದ ವಿಭಜಿಸಿ ಸೂಚಿಸುತ್ತಾರೆ. ಕೆಲವೊಮ್ಮೆ ಖಂಡ ಛಾಪು ತಾಳವನ್ನು 2+1+2 ಎಂದೂ, ಮಿಶ್ರ ಛಾಪು ತಾಳವನ್ನು 3+2+2 ಎಂದೂ ವಿಭಜಿಸುವ ಕ್ರಮವಿದೆ. ಅಂತೆಯೇ ಮಿಶ್ರ ಛಾಪು ತಾಳಾವರ್ತದ ಏಳು ಅಕ್ಷರಗಳನ್ನು 4+3 ಎಂದೂ,ಖಂಡ ಛಾಪು ತಾಳಾವರ್ತದ ಐದು ಅಕ್ಷರಗಳನ್ನು 3+2 ಎಂದೂ ವಿಭಜಿಸುವುದನ್ನು ಅಪೂರ್ವವಾಗಿ ಕಾಣಬಹುದು. {{gap}}ಈ ಛಾಪು ತಾಳಗಳ ವಿಷಮಗತಿ ವಿಶಿಷ್ಟತೆಯ ಆಕರ್ಷಣೆಯೇ ಮುಂದೆ 1+2 ಅಕ್ಷರಗಳ ತಿಶ್ರಛಾಪು ಎಂಬ ತಾಳದ, ಹಾಗೆಯೇ 4+5 ಅಕ್ಷರಗಳ ಸಂಕೀರ್ಣ ಛಾಪು ಎಂಬ ತಾಳದ ಉದಯಕ್ಕೆ ಕಾರಣವಾಗಿರಬೇಕು. 2+2 ಸಮಗತಿಯ ತಾಳವನ್ನು ಘಾತಮಾತ್ರದಿಂದ ಸೂಚಿಸಿದಾಗ ಅದನ್ನು ಚತುರಶ್ರ ಛಾಪು ಎಂದಿರಬಹುದು. ಗತಿಗಳಲ್ಲಿ ತಿಶ್ರ, ಚತುರಶ್ರ, ಖಂಡ, ಮಿಶ್ರ, ಸಂಕೀರ್ಣ ಎಂಬ 3, 4, 5, 7, 9 ಅಕ್ಷರಗಳ ಕಾಲಪ್ರಮಾಣ ವೈವಿಧ್ಯಗಳಿದ್ದು ಅವುಗಳನ್ನು ಘಾತಮಾತ್ರದಿಂದ ಸೂಚಿ ಸುವ ಕ್ರಮ ರೂಢಿಗೆ ಬಂದಾಗ ಗತಿಗಳ ಹೆಸರಿನ ಮುಂದೆ ಛಾಪು ಎಂಬ ಶಬ್ದವನ್ನಿ ರಿಸಿ ಕರೆಯುವ ರೀತಿ ಬಳಕೆಗೆ ಬಂದಿರಬೇಕು. {{gap}}ಪುರಂದರದಾಸರಿಂದ ವಿಶ್ಲೇಷಿತವಾದ ಸಪ್ತತಾಳಗಳ ಅಂತರ್ಗತಿ ಈ ಜಾನಪದ ಮೂಲದ ಛಾಪು ತಾಳದವುಗಳು ಎಂಬುದನ್ನು ಗಮನಿಸಬೇಕು. ಅವರು ಸಪ್ತತಾಳ ಗಳಲ್ಲಿ ಒಂದು ಅಕ್ಷರಕಾಲಕ್ಕೆ ನಾಲ್ಕು ಪ್ರಸ್ವಾಕ್ಷರಗಳ ಕಾಲಪ್ರಮಾಣವನ್ನು ಇರಿಸಿಕೊಂಡು, ಆವರ್ತವನ್ನು ಹಿಗ್ಗಿಸಿ, ಅಲಂಕಾರಗಳನ್ನು ರಚಿಸಿದರು. ಅಲಂಕಾರಗಳನ್ನು ವಿಳಂಬಗತಿಯಲ್ಲಿ ಎಂದರೆ ಒಂದೊಂದು ಸ್ವರವನ್ನೂ ನಾಲ್ಕು ಅಕ್ಷರಗಳ ಕಾಲ ಪ್ರಮಾಣದಲ್ಲಿ - ಹಾಡಿದಾಗ, ಆವರ್ತದೊಳಗೆ ಅಡಗಿರುವ ಛಾಪುತಾಳದ ಗತಿ ಗೋಚರವಾಗುವುದಿಲ್ಲ. ಮಾತ್ರವಲ್ಲದೆ ಅವರು ಆವರ್ತ ವಿಭಜನೆಯನ್ನು ಷಡಂಗಗಳ ಮೊದಲಿನ ಮೂರು ಅಂಗಗಳನ್ನು ಉಪಯೋಗಿಸಿ ಮಾಡಿದುದ ಗತಿ ವಿಭಜನೆಯನ್ನು ವಿಳಂಬಕಾಲದಲ್ಲಿ ಕಾಣಿಸದಂತೆ ಮಾಡಿರಬಹುದು. ಆದರೆ ಅದೇ ಅಲಂಕಾರಗಳನ್ನು ದ್ರುತಗತಿಯಲ್ಲಿ ಎಂದರೆ ಅಕ್ಷರಕಾಲದ ಪ್ರಮಾಣವನ್ನು ಒಂದು ಹೃಸ್ವಾಕ್ಷರಕ್ಕೆ ಸೀಮಿತಗೊಳಿಸಿ ಹಾಡಿದಾಗ ಅವುಗಳಲ್ಲಿನ ಅಂತರ್ಗತಿ ಛಾಪುತಾಳ ಮೂಲದವು ಎಂಬುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. {{gap}}ಸಪ್ತತಾಳಗಳಲ್ಲಿ ಧ್ರುವತಾಳ ಅಲಂಕಾರದ ಆವರ್ತಕ್ಕೆ ಅಕ್ಷರಕಾಲಗಳು 14, ಅಂಗಗಳಿಗೆ ಅನುಗುಣವಾಗಿ ಅವುಗಳನ್ನು ವಿಭಜಿಸಿದರೆ 4+2+4+4 =14 ಅಕ್ಷರಕಾಲಗಳಾಗುತ್ತವೆ. ಈ ಅಲಂಕಾರವನ್ನು ದ್ರುತಗತಿಯಲ್ಲಿ ಹಾಡಿದಾಗ 2+2+2/2 + 4+4/2 = 3 + 4 ಅಕ್ಷರಗಳ ವಿಭಜನೆಯ ಅಂತರ್ಗತಿ ದೊರೆಯುತ್ತದೆ. ಇದು ಮಿಶ್ರಛಾಪು ತಾಳದ ವಿಭಜನೆ. ಹಾಗೆಯೇ ಮಠ್ಯತಾಳವು 4+2+4=10 ಅಕ್ಷರ ಕಾಲಗಳುಳ್ಳದ್ದು.ಈ ಅಲಂಕಾರವನ್ನು ದ್ರುತಗತಿಯಲ್ಲಿ ಹಾಡಿದಾಗ<noinclude></noinclude> 7m5i4fah4svium15ej759ed72utt6lq ಪುಟ:ಯಕ್ಷಗಾನ ಮಕರಂದ.pdf/೩೨೨ 104 100244 319532 319527 2026-05-13T12:01:03Z Hariprasad Shetty10 7490 319532 proofread-page text/x-wiki <noinclude><pagequality level="1" user="PraneethGanesh" />{{Left|70}}</noinclude> 2+2/2 +2+2+2/2 =2 + 3 ವಿಭಜನೆ ದೊರೆಯುತ್ತದೆ. ಇದು ಖಂಡ ಛಾಪು ತಾಳದ ಅಂತರ್ಗತಿಯನ್ನು ತೋರಿಸುತ್ತದೆ. ಅಂತೆಯೇ ರೂಪಕತಾಳ 2+4 = 6 ಎಂಬುದು 3+3 ಅಥವಾ 2+4/2 = 1 +2 ಎಂದೂ; ಝಂಪೆತಾಳದ 7+1+2=10 ಎಂಬುದು (2+3) + (2 + 3) ಅಥವಾ (3+2) + (3+2) ಎಂದೂ; ತ್ರಿಪುಟ ತಾಳದ 3 + 2+ 2 = 7 ಎಂಬುದು 3 + 4 ಎಂದೂ; ಅಟತಾಳದ 5+5+2+2=14 ಎಂಬುದು (3 + 4) + (3 + 4) ಎಂದೂ; ಏಕತಾಳದ 4 ಅಕ್ಷರಕಾಲಗಳು 2+2 ಎಂದೂ ವಿಭಜನೆಗೊಳ್ಳುವುದನ್ನು ಕಾಣಬಹುದು. {{gap}}ಘಾತಗಳಿಂದ ಮಾತ್ರ ಗಣಿಸಲ್ಪಡುವ ಛಾಪುತಾಳಗಳಲ್ಲಿ ಘಾತಗಳ ಮಧ್ಯದ ಅವಕಾಶವನ್ನು ಅಕ್ಷರಕಾಲಕ್ಕೆ ಎಂದರೆ ನಾಲ್ಕು ಅಕ್ಷರಗಳಿಗೆ ಒಂದು ಅಕ್ಷರಕಾಲದ ಪ್ರಮಾಣದಂತ ಹಿಡಿದರೆ – ಒಂದು ಆವರ್ತಕ್ಕೆ ಬರುವ ಅಕ್ಷರಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಮಿಶ್ರಛಾಪು ತಾಳದ ಏಳು ಅಕ್ಷರಗಳನ್ನು ಅಕ್ಷರಕಾಲಗಳಿಗೆ ಮಾರ್ಪಡಿಸಿದಾಗ ತಾಳದ ಆವರ್ತಕ್ಕೆ 28 ಅಕ್ಷರಗಳು —ಎಂದರೆ ಮೊದಲನೆಯ ಎರಡನೆಯ ಘಾತಗಳ ನಡುವೆ 12 ಅಕ್ಷರಗಳೂ, ಎರಡನೆಯ ಮತ್ತು ಮೂರನೆಯ ಘಾತಗಳ ನಡುವೆ 16 ಅಕ್ಷರಗಳೂ ಬರುತ್ತವೆ. ಆವರ್ತಕ್ಕೆ ಈ ಅವಕಾಶವನ್ನಿರಿಸಿಕೊಂಡಾಗ ಕೇವಲ ಘಾತಗಳಿಂದ ತಾಳಾವರ್ತವನ್ನು ಸೂಚಿಸುವುದು ಸಾಹಸದ ಕೆಲಸ. ಹಾಡನ್ನು ಹೇಳುವ ಅವಕಾಶದಲ್ಲಿ ಎಲ್ಲಾದರೂ ಒಂದು ಅಕ್ಷರದ ಕಾಲ ಪ್ರಮಾಣ ಬಿಟ್ಟು ಹೋದರೆ, ಅಥವಾ ಹೆಚ್ಚು ಬಂದರೆ ಘಾತಮಧ್ಯದ ಕಾಲಾವಕಾಶ ತಪ್ಪುತ್ತದೆ, ಪರಿಣಾಮವಾಗಿ ತಾಳದ ಗತಿ ಕಡುತ್ತದೆ. ಆವರ್ತವನ್ನು ಅಂಗ ವಿಭಜನೆಗೆ ಒಳಪಡಿಸಿ ತಾಳ ಹಾಕಿದಾಗ ಮಾತ್ರ ಅಕ್ಷರಕಾಲಗಳಲ್ಲಿ ಇರಿಸಿಕೊಂಡ ತಾಳಾವರ್ತವನ್ನು ಸರಿಯಾಗಿ ನಡೆಸಲು ಸಾಧ್ಯ. ಎಂದರೆ ತ್ರಿಪುಟ ತಾಳದ ಪೂರ್ವಾರ್ಧದ 12 ಅಕ್ಷರಗಳನ್ನು ಮೂರು ತಾಳಕ್ರಿಯೆಗಳಿಗೂ ಉತ್ತರಾರ್ಧದ 16 ಅಕ್ಷರಗಳನ್ನು ನಾಲ್ಕು ತಾಳಕ್ರಿಯೆಗಳಿಗೂ ಅಳವಡಿಸಿ ಸೂಚಿಸಿದಾಗ ಮಾತ್ರ ಸುಲಭವಾಗಿ ತಾಳಗತಿಯನ್ನು ನಿಲ್ಲಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದುದರಿಂದ, ಅಕ್ಷರಕಾಲಗಳಿಗೆ ಪರಿವರ್ತಿಸಿಕೊಂಡ ಮಿಶ್ರಛಾಪು ತಾಳವನ್ನು ತ್ರಿಪುಟ ತಾಳ ಎಂದರು; ಪೂರ್ವಾರ್ಧದ 12 ಅಕ್ಷರಗಳ 3 ಅಕ್ಷರಕಾಲಗಳನ್ನು ತಿಶ್ರಲಘು ಎಂದೂ ಉತ್ತರಾರ್ಧದ 16 ಅಕ್ಷರಗಳ 4 ಅಕ್ಷರಕಾಲಗಳನ್ನು ಎರಡು ದ್ರುತಗಳೆಂದೂ ಗಣಿಸಿ ತಾಳಾವರ್ತಕ್ಕೆ 7 ಅಕ್ಷರಕಾಲಗಳೆಂದರು- ಪರಿಣಾಮವಾಗಿ ತಾಳದ ಪ್ರತಿಯೊಂದು ಅಕ್ಷರಕಾಲಕ್ಕೂ ಒಂದೊಂದು ಕ್ರಿಯೆ - ತಾಳ ಹಾಕಿ ಸೂಚಿಸುವ ರೀತಿ— ದೊರೆಯುವಂತಾಯಿತು. {{gap}}ತಾಳ ಹಾಕಿ ತೋರಿಸುವ ಕ್ರಮಕ್ಕೆ ಸಂಗೀತ ಶಾಸ್ತ್ರದಲ್ಲಿ ಕ್ರಿಯೆ ಎಂದು ಹೆಸರು. ಷಡಂಗಗಳಲ್ಲಿ ಪ್ರತಿಯೊಂದು ಅಂಗಕ್ಕೂ ಒಂದೊಂದು ವಿಶಿಷ್ಟವಾದ ಕ್ರಿಯೆಯಿದೆ. ಒಂದು ತಾಳದ ಅಂಗಗಳಿಗೆ ಅನುಗುಣವಾಗಿ ಈ ಕ್ರಿಯೆಗಳನ್ನು ಒಂದು ಸಲ ಹಾಕಿ<noinclude></noinclude> h2q7bppzaj97guqg058xzirxenol3oo 319534 319532 2026-05-13T12:01:11Z Hariprasad Shetty10 7490 /* Proofread */ 319534 proofread-page text/x-wiki <noinclude><pagequality level="3" user="Hariprasad Shetty10" />{{Left|70}}</noinclude> 2+2/2 +2+2+2/2 =2 + 3 ವಿಭಜನೆ ದೊರೆಯುತ್ತದೆ. ಇದು ಖಂಡ ಛಾಪು ತಾಳದ ಅಂತರ್ಗತಿಯನ್ನು ತೋರಿಸುತ್ತದೆ. ಅಂತೆಯೇ ರೂಪಕತಾಳ 2+4 = 6 ಎಂಬುದು 3+3 ಅಥವಾ 2+4/2 = 1 +2 ಎಂದೂ; ಝಂಪೆತಾಳದ 7+1+2=10 ಎಂಬುದು (2+3) + (2 + 3) ಅಥವಾ (3+2) + (3+2) ಎಂದೂ; ತ್ರಿಪುಟ ತಾಳದ 3 + 2+ 2 = 7 ಎಂಬುದು 3 + 4 ಎಂದೂ; ಅಟತಾಳದ 5+5+2+2=14 ಎಂಬುದು (3 + 4) + (3 + 4) ಎಂದೂ; ಏಕತಾಳದ 4 ಅಕ್ಷರಕಾಲಗಳು 2+2 ಎಂದೂ ವಿಭಜನೆಗೊಳ್ಳುವುದನ್ನು ಕಾಣಬಹುದು. {{gap}}ಘಾತಗಳಿಂದ ಮಾತ್ರ ಗಣಿಸಲ್ಪಡುವ ಛಾಪುತಾಳಗಳಲ್ಲಿ ಘಾತಗಳ ಮಧ್ಯದ ಅವಕಾಶವನ್ನು ಅಕ್ಷರಕಾಲಕ್ಕೆ ಎಂದರೆ ನಾಲ್ಕು ಅಕ್ಷರಗಳಿಗೆ ಒಂದು ಅಕ್ಷರಕಾಲದ ಪ್ರಮಾಣದಂತ ಹಿಡಿದರೆ – ಒಂದು ಆವರ್ತಕ್ಕೆ ಬರುವ ಅಕ್ಷರಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಮಿಶ್ರಛಾಪು ತಾಳದ ಏಳು ಅಕ್ಷರಗಳನ್ನು ಅಕ್ಷರಕಾಲಗಳಿಗೆ ಮಾರ್ಪಡಿಸಿದಾಗ ತಾಳದ ಆವರ್ತಕ್ಕೆ 28 ಅಕ್ಷರಗಳು —ಎಂದರೆ ಮೊದಲನೆಯ ಎರಡನೆಯ ಘಾತಗಳ ನಡುವೆ 12 ಅಕ್ಷರಗಳೂ, ಎರಡನೆಯ ಮತ್ತು ಮೂರನೆಯ ಘಾತಗಳ ನಡುವೆ 16 ಅಕ್ಷರಗಳೂ ಬರುತ್ತವೆ. ಆವರ್ತಕ್ಕೆ ಈ ಅವಕಾಶವನ್ನಿರಿಸಿಕೊಂಡಾಗ ಕೇವಲ ಘಾತಗಳಿಂದ ತಾಳಾವರ್ತವನ್ನು ಸೂಚಿಸುವುದು ಸಾಹಸದ ಕೆಲಸ. ಹಾಡನ್ನು ಹೇಳುವ ಅವಕಾಶದಲ್ಲಿ ಎಲ್ಲಾದರೂ ಒಂದು ಅಕ್ಷರದ ಕಾಲ ಪ್ರಮಾಣ ಬಿಟ್ಟು ಹೋದರೆ, ಅಥವಾ ಹೆಚ್ಚು ಬಂದರೆ ಘಾತಮಧ್ಯದ ಕಾಲಾವಕಾಶ ತಪ್ಪುತ್ತದೆ, ಪರಿಣಾಮವಾಗಿ ತಾಳದ ಗತಿ ಕಡುತ್ತದೆ. ಆವರ್ತವನ್ನು ಅಂಗ ವಿಭಜನೆಗೆ ಒಳಪಡಿಸಿ ತಾಳ ಹಾಕಿದಾಗ ಮಾತ್ರ ಅಕ್ಷರಕಾಲಗಳಲ್ಲಿ ಇರಿಸಿಕೊಂಡ ತಾಳಾವರ್ತವನ್ನು ಸರಿಯಾಗಿ ನಡೆಸಲು ಸಾಧ್ಯ. ಎಂದರೆ ತ್ರಿಪುಟ ತಾಳದ ಪೂರ್ವಾರ್ಧದ 12 ಅಕ್ಷರಗಳನ್ನು ಮೂರು ತಾಳಕ್ರಿಯೆಗಳಿಗೂ ಉತ್ತರಾರ್ಧದ 16 ಅಕ್ಷರಗಳನ್ನು ನಾಲ್ಕು ತಾಳಕ್ರಿಯೆಗಳಿಗೂ ಅಳವಡಿಸಿ ಸೂಚಿಸಿದಾಗ ಮಾತ್ರ ಸುಲಭವಾಗಿ ತಾಳಗತಿಯನ್ನು ನಿಲ್ಲಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದುದರಿಂದ, ಅಕ್ಷರಕಾಲಗಳಿಗೆ ಪರಿವರ್ತಿಸಿಕೊಂಡ ಮಿಶ್ರಛಾಪು ತಾಳವನ್ನು ತ್ರಿಪುಟ ತಾಳ ಎಂದರು; ಪೂರ್ವಾರ್ಧದ 12 ಅಕ್ಷರಗಳ 3 ಅಕ್ಷರಕಾಲಗಳನ್ನು ತಿಶ್ರಲಘು ಎಂದೂ ಉತ್ತರಾರ್ಧದ 16 ಅಕ್ಷರಗಳ 4 ಅಕ್ಷರಕಾಲಗಳನ್ನು ಎರಡು ದ್ರುತಗಳೆಂದೂ ಗಣಿಸಿ ತಾಳಾವರ್ತಕ್ಕೆ 7 ಅಕ್ಷರಕಾಲಗಳೆಂದರು- ಪರಿಣಾಮವಾಗಿ ತಾಳದ ಪ್ರತಿಯೊಂದು ಅಕ್ಷರಕಾಲಕ್ಕೂ ಒಂದೊಂದು ಕ್ರಿಯೆ - ತಾಳ ಹಾಕಿ ಸೂಚಿಸುವ ರೀತಿ— ದೊರೆಯುವಂತಾಯಿತು. {{gap}}ತಾಳ ಹಾಕಿ ತೋರಿಸುವ ಕ್ರಮಕ್ಕೆ ಸಂಗೀತ ಶಾಸ್ತ್ರದಲ್ಲಿ ಕ್ರಿಯೆ ಎಂದು ಹೆಸರು. ಷಡಂಗಗಳಲ್ಲಿ ಪ್ರತಿಯೊಂದು ಅಂಗಕ್ಕೂ ಒಂದೊಂದು ವಿಶಿಷ್ಟವಾದ ಕ್ರಿಯೆಯಿದೆ. ಒಂದು ತಾಳದ ಅಂಗಗಳಿಗೆ ಅನುಗುಣವಾಗಿ ಈ ಕ್ರಿಯೆಗಳನ್ನು ಒಂದು ಸಲ ಹಾಕಿ<noinclude></noinclude> gdt4i69sh1wpdhvp3pg49ed0vunhkm4 319629 319534 2026-05-13T14:42:01Z Shreesha Sharma 7840 /* Validated */ 319629 proofread-page text/x-wiki <noinclude><pagequality level="4" user="Shreesha Sharma" />{{Left|70}}</noinclude> 2+2/2 +2+2+2/2 =2 + 3 ವಿಭಜನೆ ದೊರೆಯುತ್ತದೆ. ಇದು ಖಂಡ ಛಾಪು ತಾಳದ ಅಂತರ್ಗತಿಯನ್ನು ತೋರಿಸುತ್ತದೆ. ಅಂತೆಯೇ ರೂಪಕತಾಳ 2+4 = 6 ಎಂಬುದು 3+3 ಅಥವಾ 2+4/2 = 1 +2 ಎಂದೂ; ಝಂಪೆತಾಳದ 7+1+2=10 ಎಂಬುದು (2+3) + (2 + 3) ಅಥವಾ (3+2) + (3+2) ಎಂದೂ; ತ್ರಿಪುಟ ತಾಳದ 3 + 2+ 2 = 7 ಎಂಬುದು 3 + 4 ಎಂದೂ; ಅಟತಾಳದ 5+5+2+2=14 ಎಂಬುದು (3 + 4) + (3 + 4) ಎಂದೂ; ಏಕತಾಳದ 4 ಅಕ್ಷರಕಾಲಗಳು 2+2 ಎಂದೂ ವಿಭಜನೆಗೊಳ್ಳುವುದನ್ನು ಕಾಣಬಹುದು. {{gap}}ಘಾತಗಳಿಂದ ಮಾತ್ರ ಗಣಿಸಲ್ಪಡುವ ಛಾಪುತಾಳಗಳಲ್ಲಿ ಘಾತಗಳ ಮಧ್ಯದ ಅವಕಾಶವನ್ನು ಅಕ್ಷರಕಾಲಕ್ಕೆ ಎಂದರೆ ನಾಲ್ಕು ಅಕ್ಷರಗಳಿಗೆ ಒಂದು ಅಕ್ಷರಕಾಲದ ಪ್ರಮಾಣದಂತ ಹಿಡಿದರೆ – ಒಂದು ಆವರ್ತಕ್ಕೆ ಬರುವ ಅಕ್ಷರಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಮಿಶ್ರಛಾಪು ತಾಳದ ಏಳು ಅಕ್ಷರಗಳನ್ನು ಅಕ್ಷರಕಾಲಗಳಿಗೆ ಮಾರ್ಪಡಿಸಿದಾಗ ತಾಳದ ಆವರ್ತಕ್ಕೆ 28 ಅಕ್ಷರಗಳು —ಎಂದರೆ ಮೊದಲನೆಯ ಎರಡನೆಯ ಘಾತಗಳ ನಡುವೆ 12 ಅಕ್ಷರಗಳೂ, ಎರಡನೆಯ ಮತ್ತು ಮೂರನೆಯ ಘಾತಗಳ ನಡುವೆ 16 ಅಕ್ಷರಗಳೂ ಬರುತ್ತವೆ. ಆವರ್ತಕ್ಕೆ ಈ ಅವಕಾಶವನ್ನಿರಿಸಿಕೊಂಡಾಗ ಕೇವಲ ಘಾತಗಳಿಂದ ತಾಳಾವರ್ತವನ್ನು ಸೂಚಿಸುವುದು ಸಾಹಸದ ಕೆಲಸ. ಹಾಡನ್ನು ಹೇಳುವ ಅವಕಾಶದಲ್ಲಿ ಎಲ್ಲಾದರೂ ಒಂದು ಅಕ್ಷರದ ಕಾಲ ಪ್ರಮಾಣ ಬಿಟ್ಟು ಹೋದರೆ, ಅಥವಾ ಹೆಚ್ಚು ಬಂದರೆ ಘಾತಮಧ್ಯದ ಕಾಲಾವಕಾಶ ತಪ್ಪುತ್ತದೆ, ಪರಿಣಾಮವಾಗಿ ತಾಳದ ಗತಿ ಕಡುತ್ತದೆ. ಆವರ್ತವನ್ನು ಅಂಗ ವಿಭಜನೆಗೆ ಒಳಪಡಿಸಿ ತಾಳ ಹಾಕಿದಾಗ ಮಾತ್ರ ಅಕ್ಷರಕಾಲಗಳಲ್ಲಿ ಇರಿಸಿಕೊಂಡ ತಾಳಾವರ್ತವನ್ನು ಸರಿಯಾಗಿ ನಡೆಸಲು ಸಾಧ್ಯ. ಎಂದರೆ ತ್ರಿಪುಟ ತಾಳದ ಪೂರ್ವಾರ್ಧದ 12 ಅಕ್ಷರಗಳನ್ನು ಮೂರು ತಾಳಕ್ರಿಯೆಗಳಿಗೂ ಉತ್ತರಾರ್ಧದ 16 ಅಕ್ಷರಗಳನ್ನು ನಾಲ್ಕು ತಾಳಕ್ರಿಯೆಗಳಿಗೂ ಅಳವಡಿಸಿ ಸೂಚಿಸಿದಾಗ ಮಾತ್ರ ಸುಲಭವಾಗಿ ತಾಳಗತಿಯನ್ನು ನಿಲ್ಲಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದುದರಿಂದ, ಅಕ್ಷರಕಾಲಗಳಿಗೆ ಪರಿವರ್ತಿಸಿಕೊಂಡ ಮಿಶ್ರಛಾಪು ತಾಳವನ್ನು ತ್ರಿಪುಟ ತಾಳ ಎಂದರು; ಪೂರ್ವಾರ್ಧದ 12 ಅಕ್ಷರಗಳ 3 ಅಕ್ಷರಕಾಲಗಳನ್ನು ತಿಶ್ರಲಘು ಎಂದೂ ಉತ್ತರಾರ್ಧದ 16 ಅಕ್ಷರಗಳ 4 ಅಕ್ಷರಕಾಲಗಳನ್ನು ಎರಡು ದ್ರುತಗಳೆಂದೂ ಗಣಿಸಿ ತಾಳಾವರ್ತಕ್ಕೆ 7 ಅಕ್ಷರಕಾಲಗಳೆಂದರು- ಪರಿಣಾಮವಾಗಿ ತಾಳದ ಪ್ರತಿಯೊಂದು ಅಕ್ಷರಕಾಲಕ್ಕೂ ಒಂದೊಂದು ಕ್ರಿಯೆ - ತಾಳ ಹಾಕಿ ಸೂಚಿಸುವ ರೀತಿ— ದೊರೆಯುವಂತಾಯಿತು. {{gap}}ತಾಳ ಹಾಕಿ ತೋರಿಸುವ ಕ್ರಮಕ್ಕೆ ಸಂಗೀತ ಶಾಸ್ತ್ರದಲ್ಲಿ ಕ್ರಿಯೆ ಎಂದು ಹೆಸರು. ಷಡಂಗಗಳಲ್ಲಿ ಪ್ರತಿಯೊಂದು ಅಂಗಕ್ಕೂ ಒಂದೊಂದು ವಿಶಿಷ್ಟವಾದ ಕ್ರಿಯೆಯಿದೆ. ಒಂದು ತಾಳದ ಅಂಗಗಳಿಗೆ ಅನುಗುಣವಾಗಿ ಈ ಕ್ರಿಯೆಗಳನ್ನು ಒಂದು ಸಲ ಹಾಕಿ<noinclude></noinclude> bvzgp3v6wk52fovqnt3ce1o3a2j0und ಪುಟ:ಯಕ್ಷಗಾನ ಮಕರಂದ.pdf/೩೨೩ 104 100245 319535 281872 2026-05-13T12:01:44Z Hariprasad Shetty10 7490 319535 proofread-page text/x-wiki <noinclude><pagequality level="1" user="PraneethGanesh" />{{Left|71}}</noinclude> ಮುಗಿಸುವ ಕಾಲಾವಕಾಶವು ಒಂದು ಆವರ್ತ, ಸಪ್ತತಾಳಗಳಲ್ಲಿ ಉಪಯೋಗಿಸುವ ಷಡಂಗಗಳಲ್ಲಿನ ಮೊದಲ ಮೂರು ಅಂಗಗಳು ಅನುದ್ರುತ, ದ್ರುತ, ಮತ್ತು ಲಘು ಗಳು. ಅನುದ್ರುತವನ್ನು ಘಾತದಿಂದಲೂ ದ್ರುತವನ್ನು ಘಾತ ಮತ್ತು ವಿಸರ್ಜಿತ ದಿಂದಲೂ ಸೂಚಿಸುವುದು ಕ್ರಮ. ಲಘುವಿನ ಕ್ರಿಯೆ ಘಾತದಿಂದೊಡಗೂಡಿದ ಬೆರಳೆಣಿಕೆ. ಲಘುವಿನ ಐದು ಜಾತಿಗಳ ಅಕ್ಷರಕಾಲಗಳಿಗೆ ಅನುಗುಣವಾಗಿ ತಿನ್ನ ಲಘುವಿನ ಮೂರು ಅಕ್ಷರಕಾಲಗಳನ್ನು ಘಾತ ಮತ್ತು ಎರಡು ಬೆರಳೆಣಿಕೆಗಳಿಂದ ಸೂಚಿಸುವುದು ಪದ್ಧತಿ. ಅಂತೆಯೇ ಚತುರಶ್ರ ಲಘುವನ್ನು ಘಾತ ಮತ್ತು ಮೂರು ಬೆರಳೆಣಿಕೆಗಳಿಂದಲೂ, ಖಂಡಲಘುವನ್ನು ಘಾತ ಮತ್ತು ನಾಲ್ಕು ಬೆರಳೆಣಿಕೆ ಗಳಿಂದಲೂ, ಮಿಶ್ರಲಘುವನ್ನು ಘಾತ ಮತ್ತು ಆರು ಬೆರಳೆಣಿಕೆಗಳಿಂದಲೂ, ಸಂಕೀರ್ಣ ಲಘುವನ್ನು ಘಾತ ಮತ್ತು ಎಂಟು ಬೆರಳೆಣಿಕೆಗಳಿಂದಲೂ ಸೂಚಿಸುವುದು ಕ್ರಮ. ಬೆರಳೆಣಿಕೆಗಳನ್ನು ಕಿರುಬೆರಳಿನಿಂದ ಆರಂಭಿಸಿ ಹೆಬ್ಬೆರಳ ಕಡೆಗೆ ಬರುವುದ ಐದು ಬೆರಳುಗಳ ಎಣಿಕೆ ಮುಗಿದ ಬಳಿಕ ಪುನಃ ಕಿರುಬೆರಳಿನಿಂದ ತೊಡಗುವುದೂ ರೀತಿ. ಯಕ್ಷಗಾನದಲ್ಲಿ ಸಂಗೀತದ ಪದ್ದತಿಯಂತೆ ತಾಳಕ್ರಿಯಾ ವಿಧಾನಗಳಿಲ್ಲ. ಇಲ್ಲಿ ಕಂಚಿನತಾಳ ಅಥವಾ ಜಾಗಟೆ ಕೋಲುಗಳಿಂದ ತಾಳಸೂಚನೆ ಪದ್ಧತಿ, ಘಾತವನ್ನು ಗಟ್ಟಿಯಾಗಿಯೂ ಅವುಗಳ ನಡುವಣ ಅಕ್ಷರಗಳನ್ನು ಕಿರುದನಿಯಲ್ಲಿ ಹೊಡೆದು ತೋರಿಸುತ್ತಾರೆ. ಹೀಗೆ ತಾಳ ತೋರಿಸಿದಾಗ ಮಾತ್ರ ನಾಟ್ಯವಾಡಲು ತಾಳದ ಪೆಟ್ಟುಗಳಿಗೆ ಪದಗತಿಯನ್ನು ಹೊಂದಿಸಿಕೊಂಡು ಕುಣಿಯಲು ಅನುಕೂಲವಾಗುತ್ತದೆ, ವಿನಾ ವಿವಿಧ ತಾಳಕ್ರಿಯೆಗಳ ಕಡೆಗೆ ಗಮನವಿರಿಸಿ ಕುಣಿಯುವುದು ಕಷ್ಟಸಾಧ್ಯ. ಯಕ್ಷಗಾನವು ನಾಟೆದ್ದೇಶಿತವಾದುದರಿಂದ, ಕಲಾಸಂಗೀತ ಪದ್ಧತಿಯಂತೆ ವಿವಿಧ ತಾಳಕ್ರಿಯಾ ವಿಧಾನಗಳನ್ನನುಸರಿಸಿ ತಾಳ ಹಾಕುವ ಕ್ರಮ ರೂಢಿಗೆ ಬರಲಿಲ್ಲ; ಅದು ಅವಶ್ಯವೂ ಅಲ್ಲ. ಹಾಗೆಂದು ನಾವು ಯಕ್ಷಗಾನ ಪ್ರಸಂಗಗಳಲ್ಲಿ ಸಾಮಾನ್ಯವಾಗಿ ಸಪ್ತತಾಳಗಳೆಲ್ಲವುಗಳ ಹೆಸರನ್ನೂ ಕಾಣುತ್ತೇವೆ. ಆದರೆ ಅವುಗಳನ್ನು ಸಂಗೀತದಲ್ಲಿ ತೋರಿಸುವ ವಿಧಾನಕ್ಕೂ ಯಕ್ಷಗಾನದಲ್ಲಿ ಉಪಯೋಗಿಸುವ ವಿಧಾನಕ್ಕೂ ಅಂತರ ವಿದೆ. ಹದಿನೈದನೆಯ ಶತಮಾನದಲ್ಲಿ ಸಂಗೀತ ಪ್ರಪಂಚದಲ್ಲಿ ಮೂಡಿದ ರಾಗತಾಳ ಗಳಲ್ಲಿನ ಹೊಸತನ ಹಾಗೂ ಪ್ರಭಾವ ಯಕ್ಷಗಾನ ಕವಿಗಳನ್ನೂ ಆಕರ್ಷಿಸಿದುದರಿಂದ ಅವರು ಹಾಡುಗಳಿಗೆ ರಾಗಗಳ ಹೆಸರುಗಳನ್ನು ಧಾಟಿಗಳನ್ನು ಅನುಸರಿಸಿ ಇರಿಸಿದಂತೆ ತಾಳಗತಿಗಳಿಗೆ ಸಪ್ತತಾಳಗಳ ಹೆಸರನ್ನು ಸೂಚಿಸಿದರು ಎನ್ನಬೇಕಾಗುತ್ತದೆ. ಗಳ ಯಕ್ಷಗಾನ ಪದ್ಧತಿಯಲ್ಲಿ ಯಾವ ತಾಳವನ್ನೇ ಹಾಕಿದರೂ ಅದು ಅಕ್ಷರಕಾಲ ವ್ಯವಸ್ಥೆಗೆ ಗೆ ಒಳಪಡದೆ ಅಕ್ಷರಗಳ ವಿಭಜನೆಯಿಂದಲೇ ತಾಳಾವರ್ತವು ಮುಗಿಯು ತದೆ ಎಂಬುದು ಗಮನಾರ್ಹ, ಯಕ್ಷಗಾನ ತಾಳಗಳನ್ನು ಶಾಸ್ತ್ರೀಯ ಮಟ್ಟಕ್ಕೆ ಏರಿಸುವ ಹಂಬಲದಿಂದ ಇಲ್ಲಿ ಧ್ರುವ, ಮಠಾದಿ ತಾಳಗಳೆಲ್ಲ ಇವೆ ಎಂದು ಹೇಳಿದರೂ<noinclude></noinclude> 5ck8sh90ynet0t30vcksswtcym298h1 319536 319535 2026-05-13T12:02:03Z Hariprasad Shetty10 7490 319536 proofread-page text/x-wiki <noinclude><pagequality level="1" user="PraneethGanesh" />{{Right|71}}</noinclude> ಮುಗಿಸುವ ಕಾಲಾವಕಾಶವು ಒಂದು ಆವರ್ತ, ಸಪ್ತತಾಳಗಳಲ್ಲಿ ಉಪಯೋಗಿಸುವ ಷಡಂಗಗಳಲ್ಲಿನ ಮೊದಲ ಮೂರು ಅಂಗಗಳು ಅನುದ್ರುತ, ದ್ರುತ, ಮತ್ತು ಲಘು ಗಳು. ಅನುದ್ರುತವನ್ನು ಘಾತದಿಂದಲೂ ದ್ರುತವನ್ನು ಘಾತ ಮತ್ತು ವಿಸರ್ಜಿತ ದಿಂದಲೂ ಸೂಚಿಸುವುದು ಕ್ರಮ. ಲಘುವಿನ ಕ್ರಿಯೆ ಘಾತದಿಂದೊಡಗೂಡಿದ ಬೆರಳೆಣಿಕೆ. ಲಘುವಿನ ಐದು ಜಾತಿಗಳ ಅಕ್ಷರಕಾಲಗಳಿಗೆ ಅನುಗುಣವಾಗಿ ತಿನ್ನ ಲಘುವಿನ ಮೂರು ಅಕ್ಷರಕಾಲಗಳನ್ನು ಘಾತ ಮತ್ತು ಎರಡು ಬೆರಳೆಣಿಕೆಗಳಿಂದ ಸೂಚಿಸುವುದು ಪದ್ಧತಿ. ಅಂತೆಯೇ ಚತುರಶ್ರ ಲಘುವನ್ನು ಘಾತ ಮತ್ತು ಮೂರು ಬೆರಳೆಣಿಕೆಗಳಿಂದಲೂ, ಖಂಡಲಘುವನ್ನು ಘಾತ ಮತ್ತು ನಾಲ್ಕು ಬೆರಳೆಣಿಕೆ ಗಳಿಂದಲೂ, ಮಿಶ್ರಲಘುವನ್ನು ಘಾತ ಮತ್ತು ಆರು ಬೆರಳೆಣಿಕೆಗಳಿಂದಲೂ, ಸಂಕೀರ್ಣ ಲಘುವನ್ನು ಘಾತ ಮತ್ತು ಎಂಟು ಬೆರಳೆಣಿಕೆಗಳಿಂದಲೂ ಸೂಚಿಸುವುದು ಕ್ರಮ. ಬೆರಳೆಣಿಕೆಗಳನ್ನು ಕಿರುಬೆರಳಿನಿಂದ ಆರಂಭಿಸಿ ಹೆಬ್ಬೆರಳ ಕಡೆಗೆ ಬರುವುದ ಐದು ಬೆರಳುಗಳ ಎಣಿಕೆ ಮುಗಿದ ಬಳಿಕ ಪುನಃ ಕಿರುಬೆರಳಿನಿಂದ ತೊಡಗುವುದೂ ರೀತಿ. ಯಕ್ಷಗಾನದಲ್ಲಿ ಸಂಗೀತದ ಪದ್ದತಿಯಂತೆ ತಾಳಕ್ರಿಯಾ ವಿಧಾನಗಳಿಲ್ಲ. ಇಲ್ಲಿ ಕಂಚಿನತಾಳ ಅಥವಾ ಜಾಗಟೆ ಕೋಲುಗಳಿಂದ ತಾಳಸೂಚನೆ ಪದ್ಧತಿ, ಘಾತವನ್ನು ಗಟ್ಟಿಯಾಗಿಯೂ ಅವುಗಳ ನಡುವಣ ಅಕ್ಷರಗಳನ್ನು ಕಿರುದನಿಯಲ್ಲಿ ಹೊಡೆದು ತೋರಿಸುತ್ತಾರೆ. ಹೀಗೆ ತಾಳ ತೋರಿಸಿದಾಗ ಮಾತ್ರ ನಾಟ್ಯವಾಡಲು ತಾಳದ ಪೆಟ್ಟುಗಳಿಗೆ ಪದಗತಿಯನ್ನು ಹೊಂದಿಸಿಕೊಂಡು ಕುಣಿಯಲು ಅನುಕೂಲವಾಗುತ್ತದೆ, ವಿನಾ ವಿವಿಧ ತಾಳಕ್ರಿಯೆಗಳ ಕಡೆಗೆ ಗಮನವಿರಿಸಿ ಕುಣಿಯುವುದು ಕಷ್ಟಸಾಧ್ಯ. ಯಕ್ಷಗಾನವು ನಾಟೆದ್ದೇಶಿತವಾದುದರಿಂದ, ಕಲಾಸಂಗೀತ ಪದ್ಧತಿಯಂತೆ ವಿವಿಧ ತಾಳಕ್ರಿಯಾ ವಿಧಾನಗಳನ್ನನುಸರಿಸಿ ತಾಳ ಹಾಕುವ ಕ್ರಮ ರೂಢಿಗೆ ಬರಲಿಲ್ಲ; ಅದು ಅವಶ್ಯವೂ ಅಲ್ಲ. ಹಾಗೆಂದು ನಾವು ಯಕ್ಷಗಾನ ಪ್ರಸಂಗಗಳಲ್ಲಿ ಸಾಮಾನ್ಯವಾಗಿ ಸಪ್ತತಾಳಗಳೆಲ್ಲವುಗಳ ಹೆಸರನ್ನೂ ಕಾಣುತ್ತೇವೆ. ಆದರೆ ಅವುಗಳನ್ನು ಸಂಗೀತದಲ್ಲಿ ತೋರಿಸುವ ವಿಧಾನಕ್ಕೂ ಯಕ್ಷಗಾನದಲ್ಲಿ ಉಪಯೋಗಿಸುವ ವಿಧಾನಕ್ಕೂ ಅಂತರ ವಿದೆ. ಹದಿನೈದನೆಯ ಶತಮಾನದಲ್ಲಿ ಸಂಗೀತ ಪ್ರಪಂಚದಲ್ಲಿ ಮೂಡಿದ ರಾಗತಾಳ ಗಳಲ್ಲಿನ ಹೊಸತನ ಹಾಗೂ ಪ್ರಭಾವ ಯಕ್ಷಗಾನ ಕವಿಗಳನ್ನೂ ಆಕರ್ಷಿಸಿದುದರಿಂದ ಅವರು ಹಾಡುಗಳಿಗೆ ರಾಗಗಳ ಹೆಸರುಗಳನ್ನು ಧಾಟಿಗಳನ್ನು ಅನುಸರಿಸಿ ಇರಿಸಿದಂತೆ ತಾಳಗತಿಗಳಿಗೆ ಸಪ್ತತಾಳಗಳ ಹೆಸರನ್ನು ಸೂಚಿಸಿದರು ಎನ್ನಬೇಕಾಗುತ್ತದೆ. ಗಳ ಯಕ್ಷಗಾನ ಪದ್ಧತಿಯಲ್ಲಿ ಯಾವ ತಾಳವನ್ನೇ ಹಾಕಿದರೂ ಅದು ಅಕ್ಷರಕಾಲ ವ್ಯವಸ್ಥೆಗೆ ಗೆ ಒಳಪಡದೆ ಅಕ್ಷರಗಳ ವಿಭಜನೆಯಿಂದಲೇ ತಾಳಾವರ್ತವು ಮುಗಿಯು ತದೆ ಎಂಬುದು ಗಮನಾರ್ಹ, ಯಕ್ಷಗಾನ ತಾಳಗಳನ್ನು ಶಾಸ್ತ್ರೀಯ ಮಟ್ಟಕ್ಕೆ ಏರಿಸುವ ಹಂಬಲದಿಂದ ಇಲ್ಲಿ ಧ್ರುವ, ಮಠಾದಿ ತಾಳಗಳೆಲ್ಲ ಇವೆ ಎಂದು ಹೇಳಿದರೂ<noinclude></noinclude> kwjsky8gd6mhak2mmt4i5iz5g48gs82 319537 319536 2026-05-13T12:06:58Z Hariprasad Shetty10 7490 319537 proofread-page text/x-wiki <noinclude><pagequality level="1" user="PraneethGanesh" />{{Right|71}}</noinclude> ಮುಗಿಸುವ ಕಾಲಾವಕಾಶವು ಒಂದು ಆವರ್ತ, ಸಪ್ತತಾಳಗಳಲ್ಲಿ ಉಪಯೋಗಿಸುವ ಷಡಂಗಗಳಲ್ಲಿನ ಮೊದಲ ಮೂರು ಅಂಗಗಳು ಅನುದ್ರುತ, ದ್ರುತ, ಮತ್ತು ಲಘು ಗಳು. ಅನುದ್ರುತವನ್ನು ಘಾತದಿಂದಲೂ ದ್ರುತವನ್ನು ಘಾತ ಮತ್ತು ವಿಸರ್ಜಿತ ದಿಂದಲೂ ಸೂಚಿಸುವುದು ಕ್ರಮ. ಲಘುವಿನ ಕ್ರಿಯೆ ಘಾತದಿಂದೊಡಗೂಡಿದ ಬೆರಳೆಣಿಕೆ. ಲಘುವಿನ ಐದು ಜಾತಿಗಳ ಅಕ್ಷರಕಾಲಗಳಿಗೆ ಅನುಗುಣವಾಗಿ ತಿಶ್ರ ಲಘುವಿನ ಮೂರು ಅಕ್ಷರಕಾಲಗಳನ್ನು ಘಾತ ಮತ್ತು ಎರಡು ಬೆರಳೆಣಿಕೆಗಳಿಂದ ಸೂಚಿಸುವುದು ಪದ್ಧತಿ. ಅಂತೆಯೇ ಚತುರಶ್ರ ಲಘುವನ್ನು ಘಾತ ಮತ್ತು ಮೂರು ಬೆರಳೆಣಿಕೆಗಳಿಂದಲೂ, ಖಂಡಲಘುವನ್ನು ಘಾತ ಮತ್ತು ನಾಲ್ಕು ಬೆರಳೆಣಿಕೆಗಳಿಂದಲೂ, ಮಿಶ್ರಲಘುವನ್ನು ಘಾತ ಮತ್ತು ಆರು ಬೆರಳೆಣಿಕೆಗಳಿಂದಲೂ, ಸಂಕೀರ್ಣ ಲಘುವನ್ನು ಘಾತ ಮತ್ತು ಎಂಟು ಬೆರಳೆಣಿಕೆಗಳಿಂದಲೂ ಸೂಚಿಸುವುದು ಕ್ರಮ. ಬೆರಳೆಣಿಕೆಗಳನ್ನು ಕಿರುಬೆರಳಿನಿಂದ ಆರಂಭಿಸಿ ಹೆಬ್ಬೆರಳ ಕಡೆಗೆ ಬರುವುದೂ ಐದು ಬೆರಳುಗಳ ಎಣಿಕೆ ಮುಗಿದ ಬಳಿಕ ಪುನಃ ಕಿರುಬೆರಳಿನಿಂದ ತೊಡಗುವುದೂ ರೀತಿ. {{gap}}ಯಕ್ಷಗಾನದಲ್ಲಿ ಸಂಗೀತದ ಪದ್ದತಿಯಂತೆ ತಾಳಕ್ರಿಯಾ ವಿಧಾನಗಳಿಲ್ಲ. ಇಲ್ಲಿ ಕಂಚಿನತಾಳ ಅಥವಾ ಜಾಗಟೆ ಕೋಲುಗಳಿಂದ ತಾಳಸೂಚನೆ ಪದ್ಧತಿ, ಘಾತವನ್ನು ಗಟ್ಟಿಯಾಗಿಯೂ ಅವುಗಳ ನಡುವಣ ಅಕ್ಷರಗಳನ್ನು ಕಿರುದನಿಯಲ್ಲಿ ಹೊಡೆದು ತೋರಿಸುತ್ತಾರೆ. ಹೀಗೆ ತಾಳ ತೋರಿಸಿದಾಗ ಮಾತ್ರ ನಾಟ್ಯವಾಡಲು —ತಾಳದ ಪೆಟ್ಟುಗಳಿಗೆ ಪದಗತಿಯನ್ನು ಹೊಂದಿಸಿಕೊಂಡು ಕುಣಿಯಲು ಅನುಕೂಲವಾಗುತ್ತದೆ, ವಿನಾ ವಿವಿಧ ತಾಳಕ್ರಿಯೆಗಳ ಕಡೆಗೆ ಗಮನವಿರಿಸಿ ಕುಣಿಯುವುದು ಕಷ್ಟಸಾಧ್ಯ. ಯಕ್ಷಗಾನವು ನಾಟ್ಯೋದ್ದೇಶಿತವಾದುದರಿಂದ, ಕಲಾಸಂಗೀತ ಪದ್ಧತಿಯಂತೆ ವಿವಿಧ ತಾಳಕ್ರಿಯಾ ವಿಧಾನಗಳನ್ನನುಸರಿಸಿ ತಾಳ ಹಾಕುವ ಕ್ರಮ ರೂಢಿಗೆ ಬರಲಿಲ್ಲ; ಅದು ಅವಶ್ಯವೂ ಅಲ್ಲ. ಹಾಗೆಂದು ನಾವು ಯಕ್ಷಗಾನ ಪ್ರಸಂಗಗಳಲ್ಲಿ ಸಾಮಾನ್ಯವಾಗಿ ಸಪ್ತತಾಳಗಳೆಲ್ಲವುಗಳ ಹೆಸರನ್ನೂ ಕಾಣುತ್ತೇವೆ. ಆದರೆ ಅವುಗಳನ್ನು ಸಂಗೀತದಲ್ಲಿ ತೋರಿಸುವ ವಿಧಾನಕ್ಕೂ ಯಕ್ಷಗಾನದಲ್ಲಿ ಉಪಯೋಗಿಸುವ ವಿಧಾನಕ್ಕೂ ಅಂತರ ವಿದೆ. ಹದಿನೈದನೆಯ ಶತಮಾನದಲ್ಲಿ ಸಂಗೀತ ಪ್ರಪಂಚದಲ್ಲಿ ಮೂಡಿದ ರಾಗತಾಳ ಗಳಲ್ಲಿನ ಹೊಸತನ ಹಾಗೂ ಪ್ರಭಾವ ಯಕ್ಷಗಾನ ಕವಿಗಳನ್ನೂ ಆಕರ್ಷಿಸಿದುದರಿಂದ ಅವರು ಹಾಡುಗಳಿಗೆ ರಾಗಗಳ ಹೆಸರುಗಳನ್ನು ಧಾಟಿಗಳನ್ನು ಅನುಸರಿಸಿ ಇರಿಸಿದಂತೆ ತಾಳಗತಿಗಳಿಗೆ ಸಪ್ತತಾಳಗಳ ಹೆಸರನ್ನು ಸೂಚಿಸಿದರು ಎನ್ನಬೇಕಾಗುತ್ತದೆ. {{gap}}ಯಕ್ಷಗಾನ ಪದ್ಧತಿಯಲ್ಲಿ ಯಾವ ತಾಳವನ್ನೇ ಹಾಕಿದರೂ ಅದು ಅಕ್ಷರಕಾಲ ವ್ಯವಸ್ಥೆಗೆ ಗೆ ಒಳಪಡದೆ ಅಕ್ಷರಗಳ ವಿಭಜನೆಯಿಂದಲೇ ತಾಳಾವರ್ತವು ಮುಗಿಯುತ್ತದೆ ಎಂಬುದು ಗಮನಾರ್ಹ. ಯಕ್ಷಗಾನ ತಾಳಗಳನ್ನು ಶಾಸ್ತ್ರೀಯ ಮಟ್ಟಕ್ಕೆ ಏರಿಸುವ ಹಂಬಲದಿಂದ ಇಲ್ಲಿ ಧ್ರುವ, ಮಠ್ಯಾದಿ ತಾಳಗಳೆಲ್ಲ ಇವೆ ಎಂದು ಹೇಳಿದರೂ<noinclude></noinclude> q67cxkiirnw0av6f8b4v1wttp8vw5ua 319538 319537 2026-05-13T12:07:07Z Hariprasad Shetty10 7490 /* Proofread */ 319538 proofread-page text/x-wiki <noinclude><pagequality level="3" user="Hariprasad Shetty10" />{{Right|71}}</noinclude> ಮುಗಿಸುವ ಕಾಲಾವಕಾಶವು ಒಂದು ಆವರ್ತ, ಸಪ್ತತಾಳಗಳಲ್ಲಿ ಉಪಯೋಗಿಸುವ ಷಡಂಗಗಳಲ್ಲಿನ ಮೊದಲ ಮೂರು ಅಂಗಗಳು ಅನುದ್ರುತ, ದ್ರುತ, ಮತ್ತು ಲಘು ಗಳು. ಅನುದ್ರುತವನ್ನು ಘಾತದಿಂದಲೂ ದ್ರುತವನ್ನು ಘಾತ ಮತ್ತು ವಿಸರ್ಜಿತ ದಿಂದಲೂ ಸೂಚಿಸುವುದು ಕ್ರಮ. ಲಘುವಿನ ಕ್ರಿಯೆ ಘಾತದಿಂದೊಡಗೂಡಿದ ಬೆರಳೆಣಿಕೆ. ಲಘುವಿನ ಐದು ಜಾತಿಗಳ ಅಕ್ಷರಕಾಲಗಳಿಗೆ ಅನುಗುಣವಾಗಿ ತಿಶ್ರ ಲಘುವಿನ ಮೂರು ಅಕ್ಷರಕಾಲಗಳನ್ನು ಘಾತ ಮತ್ತು ಎರಡು ಬೆರಳೆಣಿಕೆಗಳಿಂದ ಸೂಚಿಸುವುದು ಪದ್ಧತಿ. ಅಂತೆಯೇ ಚತುರಶ್ರ ಲಘುವನ್ನು ಘಾತ ಮತ್ತು ಮೂರು ಬೆರಳೆಣಿಕೆಗಳಿಂದಲೂ, ಖಂಡಲಘುವನ್ನು ಘಾತ ಮತ್ತು ನಾಲ್ಕು ಬೆರಳೆಣಿಕೆಗಳಿಂದಲೂ, ಮಿಶ್ರಲಘುವನ್ನು ಘಾತ ಮತ್ತು ಆರು ಬೆರಳೆಣಿಕೆಗಳಿಂದಲೂ, ಸಂಕೀರ್ಣ ಲಘುವನ್ನು ಘಾತ ಮತ್ತು ಎಂಟು ಬೆರಳೆಣಿಕೆಗಳಿಂದಲೂ ಸೂಚಿಸುವುದು ಕ್ರಮ. ಬೆರಳೆಣಿಕೆಗಳನ್ನು ಕಿರುಬೆರಳಿನಿಂದ ಆರಂಭಿಸಿ ಹೆಬ್ಬೆರಳ ಕಡೆಗೆ ಬರುವುದೂ ಐದು ಬೆರಳುಗಳ ಎಣಿಕೆ ಮುಗಿದ ಬಳಿಕ ಪುನಃ ಕಿರುಬೆರಳಿನಿಂದ ತೊಡಗುವುದೂ ರೀತಿ. {{gap}}ಯಕ್ಷಗಾನದಲ್ಲಿ ಸಂಗೀತದ ಪದ್ದತಿಯಂತೆ ತಾಳಕ್ರಿಯಾ ವಿಧಾನಗಳಿಲ್ಲ. ಇಲ್ಲಿ ಕಂಚಿನತಾಳ ಅಥವಾ ಜಾಗಟೆ ಕೋಲುಗಳಿಂದ ತಾಳಸೂಚನೆ ಪದ್ಧತಿ, ಘಾತವನ್ನು ಗಟ್ಟಿಯಾಗಿಯೂ ಅವುಗಳ ನಡುವಣ ಅಕ್ಷರಗಳನ್ನು ಕಿರುದನಿಯಲ್ಲಿ ಹೊಡೆದು ತೋರಿಸುತ್ತಾರೆ. ಹೀಗೆ ತಾಳ ತೋರಿಸಿದಾಗ ಮಾತ್ರ ನಾಟ್ಯವಾಡಲು —ತಾಳದ ಪೆಟ್ಟುಗಳಿಗೆ ಪದಗತಿಯನ್ನು ಹೊಂದಿಸಿಕೊಂಡು ಕುಣಿಯಲು ಅನುಕೂಲವಾಗುತ್ತದೆ, ವಿನಾ ವಿವಿಧ ತಾಳಕ್ರಿಯೆಗಳ ಕಡೆಗೆ ಗಮನವಿರಿಸಿ ಕುಣಿಯುವುದು ಕಷ್ಟಸಾಧ್ಯ. ಯಕ್ಷಗಾನವು ನಾಟ್ಯೋದ್ದೇಶಿತವಾದುದರಿಂದ, ಕಲಾಸಂಗೀತ ಪದ್ಧತಿಯಂತೆ ವಿವಿಧ ತಾಳಕ್ರಿಯಾ ವಿಧಾನಗಳನ್ನನುಸರಿಸಿ ತಾಳ ಹಾಕುವ ಕ್ರಮ ರೂಢಿಗೆ ಬರಲಿಲ್ಲ; ಅದು ಅವಶ್ಯವೂ ಅಲ್ಲ. ಹಾಗೆಂದು ನಾವು ಯಕ್ಷಗಾನ ಪ್ರಸಂಗಗಳಲ್ಲಿ ಸಾಮಾನ್ಯವಾಗಿ ಸಪ್ತತಾಳಗಳೆಲ್ಲವುಗಳ ಹೆಸರನ್ನೂ ಕಾಣುತ್ತೇವೆ. ಆದರೆ ಅವುಗಳನ್ನು ಸಂಗೀತದಲ್ಲಿ ತೋರಿಸುವ ವಿಧಾನಕ್ಕೂ ಯಕ್ಷಗಾನದಲ್ಲಿ ಉಪಯೋಗಿಸುವ ವಿಧಾನಕ್ಕೂ ಅಂತರ ವಿದೆ. ಹದಿನೈದನೆಯ ಶತಮಾನದಲ್ಲಿ ಸಂಗೀತ ಪ್ರಪಂಚದಲ್ಲಿ ಮೂಡಿದ ರಾಗತಾಳ ಗಳಲ್ಲಿನ ಹೊಸತನ ಹಾಗೂ ಪ್ರಭಾವ ಯಕ್ಷಗಾನ ಕವಿಗಳನ್ನೂ ಆಕರ್ಷಿಸಿದುದರಿಂದ ಅವರು ಹಾಡುಗಳಿಗೆ ರಾಗಗಳ ಹೆಸರುಗಳನ್ನು ಧಾಟಿಗಳನ್ನು ಅನುಸರಿಸಿ ಇರಿಸಿದಂತೆ ತಾಳಗತಿಗಳಿಗೆ ಸಪ್ತತಾಳಗಳ ಹೆಸರನ್ನು ಸೂಚಿಸಿದರು ಎನ್ನಬೇಕಾಗುತ್ತದೆ. {{gap}}ಯಕ್ಷಗಾನ ಪದ್ಧತಿಯಲ್ಲಿ ಯಾವ ತಾಳವನ್ನೇ ಹಾಕಿದರೂ ಅದು ಅಕ್ಷರಕಾಲ ವ್ಯವಸ್ಥೆಗೆ ಗೆ ಒಳಪಡದೆ ಅಕ್ಷರಗಳ ವಿಭಜನೆಯಿಂದಲೇ ತಾಳಾವರ್ತವು ಮುಗಿಯುತ್ತದೆ ಎಂಬುದು ಗಮನಾರ್ಹ. ಯಕ್ಷಗಾನ ತಾಳಗಳನ್ನು ಶಾಸ್ತ್ರೀಯ ಮಟ್ಟಕ್ಕೆ ಏರಿಸುವ ಹಂಬಲದಿಂದ ಇಲ್ಲಿ ಧ್ರುವ, ಮಠ್ಯಾದಿ ತಾಳಗಳೆಲ್ಲ ಇವೆ ಎಂದು ಹೇಳಿದರೂ<noinclude></noinclude> 49dbnw7abqfgtolaumhuxwe0kw46v16 319630 319538 2026-05-13T14:42:17Z Shreesha Sharma 7840 /* Validated */ 319630 proofread-page text/x-wiki <noinclude><pagequality level="4" user="Shreesha Sharma" />{{Right|71}}</noinclude> ಮುಗಿಸುವ ಕಾಲಾವಕಾಶವು ಒಂದು ಆವರ್ತ, ಸಪ್ತತಾಳಗಳಲ್ಲಿ ಉಪಯೋಗಿಸುವ ಷಡಂಗಗಳಲ್ಲಿನ ಮೊದಲ ಮೂರು ಅಂಗಗಳು ಅನುದ್ರುತ, ದ್ರುತ, ಮತ್ತು ಲಘು ಗಳು. ಅನುದ್ರುತವನ್ನು ಘಾತದಿಂದಲೂ ದ್ರುತವನ್ನು ಘಾತ ಮತ್ತು ವಿಸರ್ಜಿತ ದಿಂದಲೂ ಸೂಚಿಸುವುದು ಕ್ರಮ. ಲಘುವಿನ ಕ್ರಿಯೆ ಘಾತದಿಂದೊಡಗೂಡಿದ ಬೆರಳೆಣಿಕೆ. ಲಘುವಿನ ಐದು ಜಾತಿಗಳ ಅಕ್ಷರಕಾಲಗಳಿಗೆ ಅನುಗುಣವಾಗಿ ತಿಶ್ರ ಲಘುವಿನ ಮೂರು ಅಕ್ಷರಕಾಲಗಳನ್ನು ಘಾತ ಮತ್ತು ಎರಡು ಬೆರಳೆಣಿಕೆಗಳಿಂದ ಸೂಚಿಸುವುದು ಪದ್ಧತಿ. ಅಂತೆಯೇ ಚತುರಶ್ರ ಲಘುವನ್ನು ಘಾತ ಮತ್ತು ಮೂರು ಬೆರಳೆಣಿಕೆಗಳಿಂದಲೂ, ಖಂಡಲಘುವನ್ನು ಘಾತ ಮತ್ತು ನಾಲ್ಕು ಬೆರಳೆಣಿಕೆಗಳಿಂದಲೂ, ಮಿಶ್ರಲಘುವನ್ನು ಘಾತ ಮತ್ತು ಆರು ಬೆರಳೆಣಿಕೆಗಳಿಂದಲೂ, ಸಂಕೀರ್ಣ ಲಘುವನ್ನು ಘಾತ ಮತ್ತು ಎಂಟು ಬೆರಳೆಣಿಕೆಗಳಿಂದಲೂ ಸೂಚಿಸುವುದು ಕ್ರಮ. ಬೆರಳೆಣಿಕೆಗಳನ್ನು ಕಿರುಬೆರಳಿನಿಂದ ಆರಂಭಿಸಿ ಹೆಬ್ಬೆರಳ ಕಡೆಗೆ ಬರುವುದೂ ಐದು ಬೆರಳುಗಳ ಎಣಿಕೆ ಮುಗಿದ ಬಳಿಕ ಪುನಃ ಕಿರುಬೆರಳಿನಿಂದ ತೊಡಗುವುದೂ ರೀತಿ. {{gap}}ಯಕ್ಷಗಾನದಲ್ಲಿ ಸಂಗೀತದ ಪದ್ದತಿಯಂತೆ ತಾಳಕ್ರಿಯಾ ವಿಧಾನಗಳಿಲ್ಲ. ಇಲ್ಲಿ ಕಂಚಿನತಾಳ ಅಥವಾ ಜಾಗಟೆ ಕೋಲುಗಳಿಂದ ತಾಳಸೂಚನೆ ಪದ್ಧತಿ, ಘಾತವನ್ನು ಗಟ್ಟಿಯಾಗಿಯೂ ಅವುಗಳ ನಡುವಣ ಅಕ್ಷರಗಳನ್ನು ಕಿರುದನಿಯಲ್ಲಿ ಹೊಡೆದು ತೋರಿಸುತ್ತಾರೆ. ಹೀಗೆ ತಾಳ ತೋರಿಸಿದಾಗ ಮಾತ್ರ ನಾಟ್ಯವಾಡಲು —ತಾಳದ ಪೆಟ್ಟುಗಳಿಗೆ ಪದಗತಿಯನ್ನು ಹೊಂದಿಸಿಕೊಂಡು ಕುಣಿಯಲು ಅನುಕೂಲವಾಗುತ್ತದೆ, ವಿನಾ ವಿವಿಧ ತಾಳಕ್ರಿಯೆಗಳ ಕಡೆಗೆ ಗಮನವಿರಿಸಿ ಕುಣಿಯುವುದು ಕಷ್ಟಸಾಧ್ಯ. ಯಕ್ಷಗಾನವು ನಾಟ್ಯೋದ್ದೇಶಿತವಾದುದರಿಂದ, ಕಲಾಸಂಗೀತ ಪದ್ಧತಿಯಂತೆ ವಿವಿಧ ತಾಳಕ್ರಿಯಾ ವಿಧಾನಗಳನ್ನನುಸರಿಸಿ ತಾಳ ಹಾಕುವ ಕ್ರಮ ರೂಢಿಗೆ ಬರಲಿಲ್ಲ; ಅದು ಅವಶ್ಯವೂ ಅಲ್ಲ. ಹಾಗೆಂದು ನಾವು ಯಕ್ಷಗಾನ ಪ್ರಸಂಗಗಳಲ್ಲಿ ಸಾಮಾನ್ಯವಾಗಿ ಸಪ್ತತಾಳಗಳೆಲ್ಲವುಗಳ ಹೆಸರನ್ನೂ ಕಾಣುತ್ತೇವೆ. ಆದರೆ ಅವುಗಳನ್ನು ಸಂಗೀತದಲ್ಲಿ ತೋರಿಸುವ ವಿಧಾನಕ್ಕೂ ಯಕ್ಷಗಾನದಲ್ಲಿ ಉಪಯೋಗಿಸುವ ವಿಧಾನಕ್ಕೂ ಅಂತರ ವಿದೆ. ಹದಿನೈದನೆಯ ಶತಮಾನದಲ್ಲಿ ಸಂಗೀತ ಪ್ರಪಂಚದಲ್ಲಿ ಮೂಡಿದ ರಾಗತಾಳ ಗಳಲ್ಲಿನ ಹೊಸತನ ಹಾಗೂ ಪ್ರಭಾವ ಯಕ್ಷಗಾನ ಕವಿಗಳನ್ನೂ ಆಕರ್ಷಿಸಿದುದರಿಂದ ಅವರು ಹಾಡುಗಳಿಗೆ ರಾಗಗಳ ಹೆಸರುಗಳನ್ನು ಧಾಟಿಗಳನ್ನು ಅನುಸರಿಸಿ ಇರಿಸಿದಂತೆ ತಾಳಗತಿಗಳಿಗೆ ಸಪ್ತತಾಳಗಳ ಹೆಸರನ್ನು ಸೂಚಿಸಿದರು ಎನ್ನಬೇಕಾಗುತ್ತದೆ. {{gap}}ಯಕ್ಷಗಾನ ಪದ್ಧತಿಯಲ್ಲಿ ಯಾವ ತಾಳವನ್ನೇ ಹಾಕಿದರೂ ಅದು ಅಕ್ಷರಕಾಲ ವ್ಯವಸ್ಥೆಗೆ ಗೆ ಒಳಪಡದೆ ಅಕ್ಷರಗಳ ವಿಭಜನೆಯಿಂದಲೇ ತಾಳಾವರ್ತವು ಮುಗಿಯುತ್ತದೆ ಎಂಬುದು ಗಮನಾರ್ಹ. ಯಕ್ಷಗಾನ ತಾಳಗಳನ್ನು ಶಾಸ್ತ್ರೀಯ ಮಟ್ಟಕ್ಕೆ ಏರಿಸುವ ಹಂಬಲದಿಂದ ಇಲ್ಲಿ ಧ್ರುವ, ಮಠ್ಯಾದಿ ತಾಳಗಳೆಲ್ಲ ಇವೆ ಎಂದು ಹೇಳಿದರೂ<noinclude></noinclude> 9ia6g3wep9iwkmskjckcbxrv8mvgwgm ಪುಟ:ಯಕ್ಷಗಾನ ಮಕರಂದ.pdf/೩೨೪ 104 100246 319731 281873 2026-05-14T08:54:57Z Hariprasad Shetty10 7490 319731 proofread-page text/x-wiki <noinclude><pagequality level="1" user="PraneethGanesh" />{{Left|72}}</noinclude>ಅಲ್ಲಿ ಕಾಣುವುದು ಕಲಾಸಂಗೀತದಲ್ಲಿ ಇರುವಂತೆ ವಿವಿಧ ಅಂಗಗಳಿಂದ ಕೂಡಿ ಅಕ್ಷರ ಕಾಲಗಳ ವಿಭಜನೆಗೆ ಒಳಗಾದ ತಾಳಗಳಲ್ಲ; ಛಾಪು ತಾಳಗಳಿಗೆ ಹೊಂದುವಂತಹ ಅಕ್ಷರಗಳ ಕಾಲಪ್ರಮಾಣದ ತಾಳಗಳು ಎಂದು ಹೇಳಬೇಕಾಗುತ್ತದೆ. {{gap}}ಈ ಹಿನ್ನೆಲೆಯಲ್ಲಿ ಯಕ್ಷಗಾನದ ತಾಳಗಳನ್ನು ಪರಿಶೀಲಿಸಿದರೆ ಇಲ್ಲಿ ಉಪ ಯೋಗವಾಗುವ ತಾಳಗಳನ್ನು ಹೀಗೆ ವಿಂಗಡಿಸಬಹುದು. ಧ್ರುವತಾಳ ಎಂದು ಹೆಸರಿಸಿದ ಹಾಡುಗಳು ಪ್ರಸಂಗಗಳಲ್ಲಿ ತೀರ ವಿರಳ. ಅಂತಹ ಹಾಡುಗಳನ್ನು ತ್ರಿಪುಟ ತಾಳದಂತೆ- ಎಂದರೆ ತಾಳಾವರ್ತಕ್ಕೆ 7 ಅಕ್ಷರಗಳ ಕಾಲ ಬರುವಂತೆ —ಹಾಡುತ್ತಾರೆ. ಯಕ್ಷಗಾನದ 'ತ್ರಿವುಡೆ' ತಾಳಕ್ಕೂ ಇದಕ್ಕೂ ಕಾಣುವ ಭೇದ ತಾಳದ ವೇಗದಲ್ಲಿ ಮಾತ್ರ-ಎಂದರೆ ಇದು ತ್ರಿಪುಟ ತಾಳವನ್ನು ಅಥವಾ ಮಿಶ್ರಛಾಪು ತಾಳವನ್ನು ನಿಧಾನ ಗತಿಯಲ್ಲಿ ಇರಿಸಿಕೊಂಡಂತೆ ಕಾಣಿಸುತ್ತದೆ. ಹಾಗೆಯೇ ರೂಪಕತಾಳವು 3+3 ಅಥವಾ 2+4 ಅಕ್ಷರಗಳ ಆವರ್ತದಲ್ಲಿರುತ್ತದೆ. ಆಗಿದ್ದು ಇದರಲ್ಲಿ ಸಾಮಾನ್ಯವಾಗಿ ತ್ವರಿತ ಮತ್ತು ವಿಳಂಬ ಗತಿಗಳಿರುತ್ತವೆ. ತ್ರಿಪುಟತಾಳವು ಇದನ್ನು ಯಕ್ಷಗಾನದಲ್ಲಿ 'ತ್ರಿವುಡೆ' ಎಂದು ಕರೆಯುತ್ತಾರೆ- ಮೂರು ಘಾತಗಳ ಕ್ರಿಯೆಯ-ಮಿಶ್ರ ಛಾಪು ತಾಳದ 3+2+2 ಎಂಬ ರೀತಿಯ-ನಿಧಾನ ನಡೆಯಲ್ಲಿರುತ್ತದೆ. ಅಟತಾಳವು- ಇದನ್ನು ಯಕ್ಷಗಾನ ದಲ್ಲಿ 'ಅಷ್ಟೆ ತಾಳ' ಎಂದು ಕರೆಯುತ್ತಾರೆ - ಎರಡು ಘಾತಗಳಿಂದ ಸೂಚಿಸುವ ಮಿಶ್ರ ಛಾಪು ತಾಳದಂತಿರುತ್ತದೆ. ನಾಲ್ಕು ಅಕ್ಷರಗಳ ಕಾಲದ ವಿಳಂಬಗತಿಯನ್ನು ಆದಿತಾಳ ಎಂತಲೂ ಇದರ ತ್ವರಿತಗತಿಯನ್ನು ಏಕತಾಳ ಎಂತಲೂ ಹೆಸರಿಸಿದಂತೆ ಕಾಣುತ್ತದೆ. {{gap}}ಯಕ್ಷಗಾನ ಪ್ರಸಂಗಗಳಲ್ಲಿ ಮಠ್ಯೆತಾಳ ಎಂದು ಹೆಸರಿಸಿದ ತಾಳದ ಹಾಡು ಗಳನ್ನು ರೂಪಕತಾಳದ ನಡೆಯಲ್ಲಿ ಹಾಡುವ ಪದ್ಧತಿ ಬಂದಿರುವುದು ಒಂದು ವಿಶೇಷ. ರೂಪಕತಾಳದ ಆವರ್ತಕ್ಕೆ 2+4=6 ಅಕ್ಷರಗಳು; ಮಠ್ಯತಾಳದ ಅಂತರ್ಗತಿ (2+3) + (2+3) = 5+5 ಅಥವಾ ಎರಡು ಖಂಡಛಾಪು ತಾಳಾವರ್ತಗಳಿಗೆ ಸಮ; ಎಂದರೆ ಛಾಪು ತಾಳದ ಆವರ್ತದಲ್ಲಿ ರೂಪಕ ತಾಳದ ಆವರ್ತಕ್ಕಿಂತ ಒಂದು ಅಕ್ಷರ ಕಡಮೆ; ಖಂಡಛಾಪು ತಾಳಗತಿಯನ್ನು ದ್ರುತಗತಿಯಲ್ಲಿ 'ತಕ್ಕಿಟ್ಟ ತಕ್ಕಿಟ್ಟ' (2+2+1; 2+2+1) ಎಂದು 5 ಅಕ್ಷರಗಳ ನಡೆಯಲ್ಲಿ ಹೇಳುವಾಗ ರೂಪಕತಾಳದ ತಕಿಟ ತಕಿಟ (2+2+2 ಅಥವಾ 1+1+1) ಎಂಬ ಆರು ಅಥವಾ ಮೂರು ಅಕ್ಷರಗಳ ನಡೆಗೆ ದಾಟುವುದೂ, ಹಾಗೆ ದಾಟಿದುದು ಗೊತ್ತಾಗದಿರುವುದೂ, ಗೊತ್ತಾದರೂ ಹಾಡಿನ ನಡೆಗೆ ಅದರಿಂದ ವಿಶೇಷ ಬಾಧಕವಾಗದಿರುವುದರಿಂದ ಲಕ್ಷಿಸದಿರುವುದೂ ಸಾಧ್ಯ ಹಾಡಿನ ರಚನಾವಕಾಶದಲ್ಲೇ ಈ ರೀತಿಯೊದಗಿದರೆ ಮತ್ತೆ ಆ ದೋಷವನ್ನು ಸುಲಭ ದಲ್ಲಿ ಕಂಡುಹಿಡಿಯಲೂ ಸಾಧ್ಯವಾಗುವುದಿಲ್ಲ.ಕುಣಿತದ ಅವಕಾಶದಲ್ಲಿ ಆ ಅಕ್ಷರಗಳ ಕಾಲಭೇದ ಗೊತ್ತಾಗದಂತೆ ಬದಲಾಗುವುದೂ ಸಾಧ್ಯ. ಆದುದರಿಂದ<noinclude></noinclude> m8m1j0so3mqirg1k4jet954qsqdg6dv 319732 319731 2026-05-14T08:55:15Z Hariprasad Shetty10 7490 /* Proofread */ 319732 proofread-page text/x-wiki <noinclude><pagequality level="3" user="Hariprasad Shetty10" />{{Left|72}}</noinclude>ಅಲ್ಲಿ ಕಾಣುವುದು ಕಲಾಸಂಗೀತದಲ್ಲಿ ಇರುವಂತೆ ವಿವಿಧ ಅಂಗಗಳಿಂದ ಕೂಡಿ ಅಕ್ಷರ ಕಾಲಗಳ ವಿಭಜನೆಗೆ ಒಳಗಾದ ತಾಳಗಳಲ್ಲ; ಛಾಪು ತಾಳಗಳಿಗೆ ಹೊಂದುವಂತಹ ಅಕ್ಷರಗಳ ಕಾಲಪ್ರಮಾಣದ ತಾಳಗಳು ಎಂದು ಹೇಳಬೇಕಾಗುತ್ತದೆ. {{gap}}ಈ ಹಿನ್ನೆಲೆಯಲ್ಲಿ ಯಕ್ಷಗಾನದ ತಾಳಗಳನ್ನು ಪರಿಶೀಲಿಸಿದರೆ ಇಲ್ಲಿ ಉಪ ಯೋಗವಾಗುವ ತಾಳಗಳನ್ನು ಹೀಗೆ ವಿಂಗಡಿಸಬಹುದು. ಧ್ರುವತಾಳ ಎಂದು ಹೆಸರಿಸಿದ ಹಾಡುಗಳು ಪ್ರಸಂಗಗಳಲ್ಲಿ ತೀರ ವಿರಳ. ಅಂತಹ ಹಾಡುಗಳನ್ನು ತ್ರಿಪುಟ ತಾಳದಂತೆ- ಎಂದರೆ ತಾಳಾವರ್ತಕ್ಕೆ 7 ಅಕ್ಷರಗಳ ಕಾಲ ಬರುವಂತೆ —ಹಾಡುತ್ತಾರೆ. ಯಕ್ಷಗಾನದ 'ತ್ರಿವುಡೆ' ತಾಳಕ್ಕೂ ಇದಕ್ಕೂ ಕಾಣುವ ಭೇದ ತಾಳದ ವೇಗದಲ್ಲಿ ಮಾತ್ರ-ಎಂದರೆ ಇದು ತ್ರಿಪುಟ ತಾಳವನ್ನು ಅಥವಾ ಮಿಶ್ರಛಾಪು ತಾಳವನ್ನು ನಿಧಾನ ಗತಿಯಲ್ಲಿ ಇರಿಸಿಕೊಂಡಂತೆ ಕಾಣಿಸುತ್ತದೆ. ಹಾಗೆಯೇ ರೂಪಕತಾಳವು 3+3 ಅಥವಾ 2+4 ಅಕ್ಷರಗಳ ಆವರ್ತದಲ್ಲಿರುತ್ತದೆ. ಆಗಿದ್ದು ಇದರಲ್ಲಿ ಸಾಮಾನ್ಯವಾಗಿ ತ್ವರಿತ ಮತ್ತು ವಿಳಂಬ ಗತಿಗಳಿರುತ್ತವೆ. ತ್ರಿಪುಟತಾಳವು ಇದನ್ನು ಯಕ್ಷಗಾನದಲ್ಲಿ 'ತ್ರಿವುಡೆ' ಎಂದು ಕರೆಯುತ್ತಾರೆ- ಮೂರು ಘಾತಗಳ ಕ್ರಿಯೆಯ-ಮಿಶ್ರ ಛಾಪು ತಾಳದ 3+2+2 ಎಂಬ ರೀತಿಯ-ನಿಧಾನ ನಡೆಯಲ್ಲಿರುತ್ತದೆ. ಅಟತಾಳವು- ಇದನ್ನು ಯಕ್ಷಗಾನ ದಲ್ಲಿ 'ಅಷ್ಟೆ ತಾಳ' ಎಂದು ಕರೆಯುತ್ತಾರೆ - ಎರಡು ಘಾತಗಳಿಂದ ಸೂಚಿಸುವ ಮಿಶ್ರ ಛಾಪು ತಾಳದಂತಿರುತ್ತದೆ. ನಾಲ್ಕು ಅಕ್ಷರಗಳ ಕಾಲದ ವಿಳಂಬಗತಿಯನ್ನು ಆದಿತಾಳ ಎಂತಲೂ ಇದರ ತ್ವರಿತಗತಿಯನ್ನು ಏಕತಾಳ ಎಂತಲೂ ಹೆಸರಿಸಿದಂತೆ ಕಾಣುತ್ತದೆ. {{gap}}ಯಕ್ಷಗಾನ ಪ್ರಸಂಗಗಳಲ್ಲಿ ಮಠ್ಯೆತಾಳ ಎಂದು ಹೆಸರಿಸಿದ ತಾಳದ ಹಾಡು ಗಳನ್ನು ರೂಪಕತಾಳದ ನಡೆಯಲ್ಲಿ ಹಾಡುವ ಪದ್ಧತಿ ಬಂದಿರುವುದು ಒಂದು ವಿಶೇಷ. ರೂಪಕತಾಳದ ಆವರ್ತಕ್ಕೆ 2+4=6 ಅಕ್ಷರಗಳು; ಮಠ್ಯತಾಳದ ಅಂತರ್ಗತಿ (2+3) + (2+3) = 5+5 ಅಥವಾ ಎರಡು ಖಂಡಛಾಪು ತಾಳಾವರ್ತಗಳಿಗೆ ಸಮ; ಎಂದರೆ ಛಾಪು ತಾಳದ ಆವರ್ತದಲ್ಲಿ ರೂಪಕ ತಾಳದ ಆವರ್ತಕ್ಕಿಂತ ಒಂದು ಅಕ್ಷರ ಕಡಮೆ; ಖಂಡಛಾಪು ತಾಳಗತಿಯನ್ನು ದ್ರುತಗತಿಯಲ್ಲಿ 'ತಕ್ಕಿಟ್ಟ ತಕ್ಕಿಟ್ಟ' (2+2+1; 2+2+1) ಎಂದು 5 ಅಕ್ಷರಗಳ ನಡೆಯಲ್ಲಿ ಹೇಳುವಾಗ ರೂಪಕತಾಳದ ತಕಿಟ ತಕಿಟ (2+2+2 ಅಥವಾ 1+1+1) ಎಂಬ ಆರು ಅಥವಾ ಮೂರು ಅಕ್ಷರಗಳ ನಡೆಗೆ ದಾಟುವುದೂ, ಹಾಗೆ ದಾಟಿದುದು ಗೊತ್ತಾಗದಿರುವುದೂ, ಗೊತ್ತಾದರೂ ಹಾಡಿನ ನಡೆಗೆ ಅದರಿಂದ ವಿಶೇಷ ಬಾಧಕವಾಗದಿರುವುದರಿಂದ ಲಕ್ಷಿಸದಿರುವುದೂ ಸಾಧ್ಯ ಹಾಡಿನ ರಚನಾವಕಾಶದಲ್ಲೇ ಈ ರೀತಿಯೊದಗಿದರೆ ಮತ್ತೆ ಆ ದೋಷವನ್ನು ಸುಲಭ ದಲ್ಲಿ ಕಂಡುಹಿಡಿಯಲೂ ಸಾಧ್ಯವಾಗುವುದಿಲ್ಲ.ಕುಣಿತದ ಅವಕಾಶದಲ್ಲಿ ಆ ಅಕ್ಷರಗಳ ಕಾಲಭೇದ ಗೊತ್ತಾಗದಂತೆ ಬದಲಾಗುವುದೂ ಸಾಧ್ಯ. ಆದುದರಿಂದ<noinclude></noinclude> nnicfqehkgd1mhck7sndteywtjl3u9f 319763 319732 2026-05-14T11:06:46Z Shreelatha.Halemane 7642 /* Validated */ 319763 proofread-page text/x-wiki <noinclude><pagequality level="4" user="Shreelatha.Halemane" />{{Left|72}}</noinclude>ಅಲ್ಲಿ ಕಾಣುವುದು ಕಲಾಸಂಗೀತದಲ್ಲಿ ಇರುವಂತೆ ವಿವಿಧ ಅಂಗಗಳಿಂದ ಕೂಡಿ ಅಕ್ಷರ ಕಾಲಗಳ ವಿಭಜನೆಗೆ ಒಳಗಾದ ತಾಳಗಳಲ್ಲ; ಛಾಪು ತಾಳಗಳಿಗೆ ಹೊಂದುವಂತಹ ಅಕ್ಷರಗಳ ಕಾಲಪ್ರಮಾಣದ ತಾಳಗಳು ಎಂದು ಹೇಳಬೇಕಾಗುತ್ತದೆ. {{gap}}ಈ ಹಿನ್ನೆಲೆಯಲ್ಲಿ ಯಕ್ಷಗಾನದ ತಾಳಗಳನ್ನು ಪರಿಶೀಲಿಸಿದರೆ ಇಲ್ಲಿ ಉಪ ಯೋಗವಾಗುವ ತಾಳಗಳನ್ನು ಹೀಗೆ ವಿಂಗಡಿಸಬಹುದು. ಧ್ರುವತಾಳ ಎಂದು ಹೆಸರಿಸಿದ ಹಾಡುಗಳು ಪ್ರಸಂಗಗಳಲ್ಲಿ ತೀರ ವಿರಳ. ಅಂತಹ ಹಾಡುಗಳನ್ನು ತ್ರಿಪುಟ ತಾಳದಂತೆ- ಎಂದರೆ ತಾಳಾವರ್ತಕ್ಕೆ 7 ಅಕ್ಷರಗಳ ಕಾಲ ಬರುವಂತೆ —ಹಾಡುತ್ತಾರೆ. ಯಕ್ಷಗಾನದ 'ತ್ರಿವುಡೆ' ತಾಳಕ್ಕೂ ಇದಕ್ಕೂ ಕಾಣುವ ಭೇದ ತಾಳದ ವೇಗದಲ್ಲಿ ಮಾತ್ರ-ಎಂದರೆ ಇದು ತ್ರಿಪುಟ ತಾಳವನ್ನು ಅಥವಾ ಮಿಶ್ರಛಾಪು ತಾಳವನ್ನು ನಿಧಾನ ಗತಿಯಲ್ಲಿ ಇರಿಸಿಕೊಂಡಂತೆ ಕಾಣಿಸುತ್ತದೆ. ಹಾಗೆಯೇ ರೂಪಕತಾಳವು 3+3 ಅಥವಾ 2+4 ಅಕ್ಷರಗಳ ಆವರ್ತದಲ್ಲಿರುತ್ತದೆ.ಝಂಪೆ ತಾಳವು ಖಂಡ ಛಾಪು ತಾಳವೇ ಆಗಿದ್ದು ಇದರಲ್ಲಿ ಸಾಮಾನ್ಯವಾಗಿ ತ್ವರಿತ ಮತ್ತು ವಿಳಂಬ ಎರಡು ಗತಿಗಳಿರುತ್ತವೆ. ತ್ರಿಪುಟತಾಳವು ಇದನ್ನು ಯಕ್ಷಗಾನದಲ್ಲಿ 'ತ್ರಿವುಡೆ' ಎಂದು ಕರೆಯುತ್ತಾರೆ- ಮೂರು ಘಾತಗಳ ಕ್ರಿಯೆಯ-ಮಿಶ್ರ ಛಾಪು ತಾಳದ 3+2+2 ಎಂಬ ರೀತಿಯ-ನಿಧಾನ ನಡೆಯಲ್ಲಿರುತ್ತದೆ. ಅಟತಾಳವು- ಇದನ್ನು ಯಕ್ಷಗಾನ ದಲ್ಲಿ 'ಅಷ್ಟೆ ತಾಳ' ಎಂದು ಕರೆಯುತ್ತಾರೆ - ಎರಡು ಘಾತಗಳಿಂದ ಸೂಚಿಸುವ ಮಿಶ್ರ ಛಾಪು ತಾಳದಂತಿರುತ್ತದೆ. ನಾಲ್ಕು ಅಕ್ಷರಗಳ ಕಾಲದ ವಿಳಂಬಗತಿಯನ್ನು ಆದಿತಾಳ ಎಂತಲೂ ಇದರ ತ್ವರಿತಗತಿಯನ್ನು ಏಕತಾಳ ಎಂತಲೂ ಹೆಸರಿಸಿದಂತೆ ಕಾಣುತ್ತದೆ. {{gap}}ಯಕ್ಷಗಾನ ಪ್ರಸಂಗಗಳಲ್ಲಿ ಮಠ್ಯೆತಾಳ ಎಂದು ಹೆಸರಿಸಿದ ತಾಳದ ಹಾಡು ಗಳನ್ನು ರೂಪಕತಾಳದ ನಡೆಯಲ್ಲಿ ಹಾಡುವ ಪದ್ಧತಿ ಬಂದಿರುವುದು ಒಂದು ವಿಶೇಷ. ರೂಪಕತಾಳದ ಆವರ್ತಕ್ಕೆ 2+4=6 ಅಕ್ಷರಗಳು; ಮಠ್ಯತಾಳದ ಅಂತರ್ಗತಿ (2+3) + (2+3) = 5+5 ಅಥವಾ ಎರಡು ಖಂಡಛಾಪು ತಾಳಾವರ್ತಗಳಿಗೆ ಸಮ; ಎಂದರೆ ಛಾಪು ತಾಳದ ಆವರ್ತದಲ್ಲಿ ರೂಪಕ ತಾಳದ ಆವರ್ತಕ್ಕಿಂತ ಒಂದು ಅಕ್ಷರ ಕಡಮೆ; ಖಂಡಛಾಪು ತಾಳಗತಿಯನ್ನು ದ್ರುತಗತಿಯಲ್ಲಿ 'ತಕ್ಕಿಟ್ಟ ತಕ್ಕಿಟ್ಟ' (2+2+1; 2+2+1) ಎಂದು 5 ಅಕ್ಷರಗಳ ನಡೆಯಲ್ಲಿ ಹೇಳುವಾಗ ರೂಪಕತಾಳದ ತಕಿಟ ತಕಿಟ (2+2+2 ಅಥವಾ 1+1+1) ಎಂಬ ಆರು ಅಥವಾ ಮೂರು ಅಕ್ಷರಗಳ ನಡೆಗೆ ದಾಟುವುದೂ, ಹಾಗೆ ದಾಟಿದುದು ಗೊತ್ತಾಗದಿರುವುದೂ, ಗೊತ್ತಾದರೂ ಹಾಡಿನ ನಡೆಗೆ ಅದರಿಂದ ವಿಶೇಷ ಬಾಧಕವಾಗದಿರುವುದರಿಂದ ಲಕ್ಷಿಸದಿರುವುದೂ ಸಾಧ್ಯ ಹಾಡಿನ ರಚನಾವಕಾಶದಲ್ಲೇ ಈ ರೀತಿಯೊದಗಿದರೆ ಮತ್ತೆ ಆ ದೋಷವನ್ನು ಸುಲಭ ದಲ್ಲಿ ಕಂಡುಹಿಡಿಯಲೂ ಸಾಧ್ಯವಾಗುವುದಿಲ್ಲ.ಕುಣಿತದ ಅವಕಾಶದಲ್ಲಿ ಆ ಅಕ್ಷರಗಳ ಕಾಲಭೇದ ಗೊತ್ತಾಗದಂತೆ ಬದಲಾಗುವುದೂ ಸಾಧ್ಯ. ಆದುದರಿಂದ<noinclude></noinclude> 48se39wpqn9bkb6sqgm4j1wemkp9tv4 ಪುಟ:ಯಕ್ಷಗಾನ ಮಕರಂದ.pdf/೩೨೬ 104 100247 319735 281874 2026-05-14T09:14:46Z Hariprasad Shetty10 7490 319735 proofread-page text/x-wiki <noinclude><pagequality level="1" user="PraneethGanesh" />{{Left|74}}</noinclude>ಆದುದರಿಂದ ಯಕ್ಷಗಾನ ತಾಲವಿಧಾನಗಳಿಗೆ ಮದ್ದಲೆವಾದನಕ್ಕೆ ಉಪಯೋಗಿಸುವ ಜತಿಗಳನ್ನು ಬಳಸಿರುವ ಸ್ವರಪುಂಜಗಳನ್ನು ತಾಳಬದ್ಧವಾಗಿ ರಚಿಸಿ, ಅವಗಳನ್ನು ತಾಳ ಅಥವಾ ಜಾಗಟೆಗಳಲ್ಲಿ ತಾಳಸೂಚನೆಯ ಘಾತಗಳಿಗೆ ಹೊಂದಿಸಿಕೊಂಡು ಹಾಡಲು ಸಾಧ್ಯವಾಗುವಂತಹ ಅಭ್ಯಾಸಗಾನಗಳ ಪ್ರತ್ಯೇಕ ರಚನೆಯಾಗಬೇಕು. ಆಗ ಮಾತ್ರ ಯಕ್ಷಗಾನವು ತಾಳಗಳಲ್ಲಿ ತನ್ನ ವಿಶಿಷ್ಟತೆಯನ್ನು ಉಳಿಸಿಕೊಂಡು ಆ ಸಂಗೀತಶೈಲಿಗೆ ಪೂರಕವಾದ ಗುಣವುಳ್ಳದ್ದಾಗಿರಲು ಸಾಧ್ಯವಾಗುತ್ತದೆ. ಯಕ್ಷಗಾನದಲ್ಲಿ ವಿಳಂಬಕಾಲದ ಲಯಗತಿಯ ಉಪಯೋಗ ತುಂಬ ಕಡಿಮೆ, ಇಲ್ಲವೆಂದರೂ ಸಲ್ಲುತ್ತದೆ. ಹಾಡುಗಳೆಲ್ಲ, ತಾಳವೈವಿಧ್ಯಗಳೆಲ್ಲ, ಸಾಮಾನ್ಯವಾಗಿ ಮಧ್ಯಲಯ ಹಾಗೂ ದ್ರುತಲಯಗತಿಗಳಲ್ಲೇ ಇರುವುದು ಕಂಡು ಬರುತ್ತದೆ. ಇದು ಸಭಾಗಾನ ವಿಧಾನವಲ್ಲ; ನಾಟಿದ್ದೇಶಿತ ಗಾನವಿಧಾನ ಎಂಬುದು ಈ ರೀತಿಗೆ ಮೂಲಕಾರಣವಾಗಿರಬಹುದು. ಹಾಗೆಯೇ 'ಯಕ್ಷ' ಎಂಬ ಪದಕ್ಕೆ 'ವೇಗ' ಎಂಬ ಅರ್ಥವೂ ನಿಘಂಟುವಿನಲ್ಲಿ ಕಾಣುವುದರಿಂದ ಯಕ್ಷಗಾನ' ಎಂದರೆ ವೇಗದ ಅಥವಾ ದ್ರುತಗತಿಯ ಗಾನವಿಧಾನ ಎಂದೂ ಅರ್ಥ ಮಾಡಬಹುದು. ಹಾಗೆ ಅರ್ಥವಿಸಿದಾಗ ಈ ಗಾನವಿಧಾನವು ಕಲಾಸಂಗೀತ ಗಾನವಿಧಾನಕ್ಕಿಂತ ಭಿನ್ನವಾದುದು ಎಂದು ಕಲ್ಪಿಸ ಬಹುದು. ಕಲಾಸಂಗೀತದಲ್ಲಿ ಮಧ್ಯ ಹಾಗೂ ದುತ ಲಯವಿಧಾನಗಳು ಹಾಡು ತಾಳಗಳಲ್ಲಿ ಸಾಕಷ್ಟು ಕಂಡು ಬಂದರೂ ವಿಳಂಬ ಹಾಗೂ ಮಧ್ಯಗತಿಯ ವಿನ್ಯಾಸ ಗಳಿಗೆ ಅಲ್ಲಿ ಹೆಚ್ಚಿನ ಪ್ರಾಶಸ್ತ್ರ. ಆದುದರಿಂದ ಸಂಗೀತವು. ವಿಲಂಬ ಹಾಗೂ ಮಧ್ಯ ಲಯಗತಿ ಪ್ರಧಾನವಾದ ಭಾವೋದ್ದೇಶಿತ ಗಾನಪದ್ಧ ಎಂದೂ, ಯಕ್ಷ ಗಾನವು ಮಧ್ಯ ಹಾಗೂ ದ್ರುತಲಯಗತಿ ಪ್ರಧಾನವಾದ ನಾಟ್ಯದ್ದೇಶಿತ ಗಾನ Q ತಿ ಎಂದೂ ಹೇಳಬಹುದು. ಮತ್ತು ಅನಿವಾರ್ಯ, ವಿಶೇಷ - ಈ ಉದ್ದೇಶ ಭಿನ್ನತೆಗಳಿಂದಾಗಿ ಗಾನಶೈಲಿಯ ಭಿನ್ನವಾಗಿರುವುದು ಅವಶ್ಯ ಆದುದರಿಂದ ಯಕ್ಷಗಾನಕ್ಕೆ ಹಿಂದಿನಿಂದಲೂ ಪ್ರತ್ಯೇಕವಾದ ಒಂದು ಶೈಲಿ ಇದ್ದಿತೆಂದು ಸಾಧಿಸಬಹುದು. ಶೈಲಿಗಳ ಪ್ರತ್ಯೇಕತೆಯನ್ನೂ ತೆಯನ್ನೂ ಗುರುತಿಸಿ, ಎಲ್ಲೆಲ್ಲ ಇತರ ಸಂಗೀತ ಪದ್ಧತಿಗಳ ರಾಗ-ತಾಳಗಳ ಅನುಕರಣೆ ಬಂದು ದೋಷಪೂರ್ಣವಾಗಿದೆ ಎಂದು ಕಂಡುಹಿಡಿದು, ಅಂತಹ ದೋಷಗಳನ್ನು ನಿವಾರಿಸಿ, ಅಥವಾ ತಿದ್ದಿ, ಶೈಲಿಯನ್ನು ಉದ್ದೇಶಾನುವರ್ತಿಯಾಗುವಂತೆ ಶುದ್ಧ ವಾಗಿಸಿ ರೂಪಿಸಿದಾಗ ಯಕ್ಷಗಾನ ಶೈಲಿ ಅಥವಾ ಗಾನ ವಿಧಾನ ಎಂಬುದು ಭಾರತೀಯ ಸಂಗೀತ ಪದ್ಧತಿಗೆ ಸೇರಿದ, ಪರಂಪರಾಗತವಾಗಿ ಬಂದ, ಇನ್ನೊಂದು ಗಾನವಿಧಾನವಾಗಿ ಕಂಗೊಳಿಸಿತು, ಶೈಲಿ ಅಥವಾ<noinclude></noinclude> 0vnkc95ieursubrpy1bshrlhrm3xpza 319736 319735 2026-05-14T09:22:07Z Hariprasad Shetty10 7490 319736 proofread-page text/x-wiki <noinclude><pagequality level="1" user="PraneethGanesh" />{{Left|74}}</noinclude>ಆದುದರಿಂದ ಯಕ್ಷಗಾನ ತಾಲವಿಧಾನಗಳಿಗೆ ಮದ್ದಲೆವಾದನಕ್ಕೆ ಉಪಯೋಗಿಸುವ ಜತಿಗಳನ್ನು ಬಳಸಿರುವ ಸ್ವರಪುಂಜಗಳನ್ನು ತಾಳಬದ್ಧವಾಗಿ ರಚಿಸಿ, ಅವಗಳನ್ನು ತಾಳ ಅಥವಾ ಜಾಗಟೆಗಳಲ್ಲಿ ತಾಳಸೂಚನೆಯ ಘಾತಗಳಿಗೆ ಹೊಂದಿಸಿಕೊಂಡು ಹಾಡಲು ಸಾಧ್ಯವಾಗುವಂತಹ ಅಭ್ಯಾಸಗಾನಗಳ ಪ್ರತ್ಯೇಕ ರಚನೆಯಾಗಬೇಕು. ಆಗ ಮಾತ್ರ ಯಕ್ಷಗಾನವು ತಾಳಗಳಲ್ಲಿ ತನ್ನ ವಿಶಿಷ್ಟತೆಯನ್ನು ಉಳಿಸಿಕೊಂಡು ಆ ಸಂಗೀತಶೈಲಿಗೆ ಪೂರಕವಾದ ಗುಣವುಳ್ಳದ್ದಾಗಿರಲು ಸಾಧ್ಯವಾಗುತ್ತದೆ. {{gap}}ಯಕ್ಷಗಾನದಲ್ಲಿ ವಿಳಂಬಕಾಲದ ಲಯಗತಿಯ ಉಪಯೋಗ ತುಂಬ ಕಡಿಮೆ, ಇಲ್ಲವೆಂದರೂ ಸಲ್ಲುತ್ತದೆ. ಹಾಡುಗಳೆಲ್ಲ, ತಾಳವೈವಿಧ್ಯಗಳೆಲ್ಲ, ಸಾಮಾನ್ಯವಾಗಿ ಮಧ್ಯಲಯ ಹಾಗೂ ದ್ರುತಲಯಗತಿಗಳಲ್ಲೇ ಇರುವುದು ಕಂಡು ಬರುತ್ತದೆ. ಇದು ಸಭಾಗಾನ ವಿಧಾನವಲ್ಲ; ನಾಟಿದ್ದೇಶಿತ ಗಾನವಿಧಾನ ಎಂಬುದು ಈ ರೀತಿಗೆ ಮೂಲಕಾರಣವಾಗಿರಬಹುದು. ಹಾಗೆಯೇ 'ಯಕ್ಷ' ಎಂಬ ಪದಕ್ಕೆ 'ವೇಗ' ಎಂಬ ಅರ್ಥವೂ ನಿಘಂಟುವಿನಲ್ಲಿ ಕಾಣುವುದರಿಂದ ಯಕ್ಷಗಾನ' ಎಂದರೆ ವೇಗದ ಅಥವಾ ದ್ರುತಗತಿಯ ಗಾನವಿಧಾನ ಎಂದೂ ಅರ್ಥ ಮಾಡಬಹುದು. ಹಾಗೆ ಅರ್ಥವಿಸಿದಾಗ ಈ ಗಾನವಿಧಾನವು ಕಲಾಸಂಗೀತ ಗಾನವಿಧಾನಕ್ಕಿಂತ ಭಿನ್ನವಾದುದು ಎಂದು ಕಲ್ಪಿಸ ಬಹುದು. ಕಲಾಸಂಗೀತದಲ್ಲಿ ಮಧ್ಯ ಹಾಗೂ ದುತ ಲಯವಿಧಾನಗಳು ಹಾಡು ತಾಳಗಳಲ್ಲಿ ಸಾಕಷ್ಟು ಕಂಡು ಬಂದರೂ ವಿಳಂಬ ಹಾಗೂ ಮಧ್ಯಗತಿಯ ವಿನ್ಯಾಸ ಗಳಿಗೆ ಅಲ್ಲಿ ಹೆಚ್ಚಿನ ಪ್ರಾಶಸ್ತ್ರ. ಆದುದರಿಂದ ಸಂಗೀತವು. ವಿಲಂಬ ಹಾಗೂ ಮಧ್ಯ ಲಯಗತಿ ಪ್ರಧಾನವಾದ ಭಾವೋದ್ದೇಶಿತ ಗಾನಪದ್ಧತಿ ಎಂದೂ, ಯಕ್ಷ ಗಾನವು ಮಧ್ಯ ಹಾಗೂ ದ್ರುತಲಯಗತಿ ಪ್ರಧಾನವಾದ ನಾಟ್ಯೋದ್ದೇಶಿತ ಗಾನ ಪದ್ದತಿ ಎಂದೂ ಹೇಳಬಹುದು. {{gap}}ಈ ಉದ್ದೇಶ ಭಿನ್ನತೆಗಳಿಂದಾಗಿ ಗಾನಶೈಲಿಯ ಭಿನ್ನವಾಗಿರುವುದು ಅವಶ್ಯ ಮತ್ತು ಅನಿವಾರ್ಯ. ಆದುದರಿಂದ ಯಕ್ಷಗಾನಕ್ಕೆ ಹಿಂದಿನಿಂದಲೂ ಪ್ರತ್ಯೇಕವಾದ ಒಂದು ಶೈಲಿ ಇದ್ದಿತೆಂದು ಸಾಧಿಸಬಹುದು. ಶೈಲಿಗಳ ಪ್ರತ್ಯೇಕತೆಯನ್ನೂ ವಿಶೇಷತೆಯನ್ನೂ ಗುರುತಿಸಿ, ಎಲ್ಲೆಲ್ಲ ಇತರ ಸಂಗೀತ ಪದ್ಧತಿಗಳ ರಾಗ-ತಾಳಗಳ ಅನುಕರಣೆ ಬಂದು ದೋಷಪೂರ್ಣವಾಗಿದೆ ಎಂದು ಕಂಡುಹಿಡಿದು, ಅಂತಹ ದೋಷಗಳನ್ನು ನಿವಾರಿಸಿ, ಅಥವಾ ತಿದ್ದಿ, ಶೈಲಿಯನ್ನು ಉದ್ದೇಶಾನುವರ್ತಿಯಾಗುವಂತೆ ಶುದ್ಧವಾಗಿಸಿ ರೂಪಿಸಿದಾಗ ಯಕ್ಷಗಾನ ಶೈಲಿ ಅಥವಾ ಗಾನ ವಿಧಾನ ಎಂಬುದು ಭಾರತೀಯ ಸಂಗೀತ ಪದ್ಧತಿಗೆ ಸೇರಿದ, ಪರಂಪರಾಗತವಾಗಿ ಬಂದ, ಇನ್ನೊಂದು ಗಾನವಿಧಾನ ಎಂಬುದು ಭಾರತೀಯ ಸಂಗೀತ ಪದ್ಧತಿಗೆ ಸೇರಿದ ಪರಂಪರಾಗವಾಗಿ ಬಂದ, ಇನ್ನೊಂದು ಶೈಲಿ ಅಥವಾ ಗಾನವಿಧಾನವಾಗಿ ಕಂಗೊಳಿಸಿತು.<noinclude></noinclude> o2t5y790jow45lvywokejd739jw2qlz 319738 319736 2026-05-14T09:34:25Z Hariprasad Shetty10 7490 319738 proofread-page text/x-wiki <noinclude><pagequality level="1" user="PraneethGanesh" />{{Left|74}}</noinclude>ಆದುದರಿಂದ ಯಕ್ಷಗಾನ ತಾಲವಿಧಾನಗಳಿಗೆ ಮದ್ದಲೆವಾದನಕ್ಕೆ ಉಪಯೋಗಿಸುವ ಜತಿಗಳನ್ನು ಬಳಸಿರುವ ಸ್ವರಪುಂಜಗಳನ್ನು ತಾಳಬದ್ಧವಾಗಿ ರಚಿಸಿ, ಅವಗಳನ್ನು ತಾಳ ಅಥವಾ ಜಾಗಟೆಗಳಲ್ಲಿ ತಾಳಸೂಚನೆಯ ಘಾತಗಳಿಗೆ ಹೊಂದಿಸಿಕೊಂಡು ಹಾಡಲು ಸಾಧ್ಯವಾಗುವಂತಹ ಅಭ್ಯಾಸಗಾನಗಳ ಪ್ರತ್ಯೇಕ ರಚನೆಯಾಗಬೇಕು. ಆಗ ಮಾತ್ರ ಯಕ್ಷಗಾನವು ತಾಳಗಳಲ್ಲಿ ತನ್ನ ವಿಶಿಷ್ಟತೆಯನ್ನು ಉಳಿಸಿಕೊಂಡು ಆ ಸಂಗೀತಶೈಲಿಗೆ ಪೂರಕವಾದ ಗುಣವುಳ್ಳದ್ದಾಗಿರಲು ಸಾಧ್ಯವಾಗುತ್ತದೆ. {{gap}}ಯಕ್ಷಗಾನದಲ್ಲಿ ವಿಳಂಬಕಾಲದ ಲಯಗತಿಯ ಉಪಯೋಗ ತುಂಬ ಕಡಿಮೆ, ಇಲ್ಲವೆಂದರೂ ಸಲ್ಲುತ್ತದೆ. ಹಾಡುಗಳೆಲ್ಲ, ತಾಳವೈವಿಧ್ಯಗಳೆಲ್ಲ, ಸಾಮಾನ್ಯವಾಗಿ ಮಧ್ಯಲಯ ಹಾಗೂ ದ್ರುತಲಯಗತಿಗಳಲ್ಲೇ ಇರುವುದು ಕಂಡು ಬರುತ್ತದೆ. ಇದು ಸಭಾಗಾನ ವಿಧಾನವಲ್ಲ; ನಾಟಿದ್ದೇಶಿತ ಗಾನವಿಧಾನ ಎಂಬುದು ಈ ರೀತಿಗೆ ಮೂಲಕಾರಣವಾಗಿರಬಹುದು. ಹಾಗೆಯೇ 'ಯಕ್ಷ' ಎಂಬ ಪದಕ್ಕೆ 'ವೇಗ' ಎಂಬ ಅರ್ಥವೂ ನಿಘಂಟುವಿನಲ್ಲಿ ಕಾಣುವುದರಿಂದ ಯಕ್ಷಗಾನ' ಎಂದರೆ ವೇಗದ ಅಥವಾ ದ್ರುತಗತಿಯ ಗಾನವಿಧಾನ ಎಂದೂ ಅರ್ಥ ಮಾಡಬಹುದು. ಹಾಗೆ ಅರ್ಥವಿಸಿದಾಗ ಈ ಗಾನವಿಧಾನವು ಕಲಾಸಂಗೀತ ಗಾನವಿಧಾನಕ್ಕಿಂತ ಭಿನ್ನವಾದುದು ಎಂದು ಕಲ್ಪಿಸ ಬಹುದು. ಕಲಾಸಂಗೀತದಲ್ಲಿ ಮಧ್ಯ ಹಾಗೂ ದುತ ಲಯವಿಧಾನಗಳು ಹಾಡು ತಾಳಗಳಲ್ಲಿ ಸಾಕಷ್ಟು ಕಂಡು ಬಂದರೂ ವಿಳಂಬ ಹಾಗೂ ಮಧ್ಯಗತಿಯ ವಿನ್ಯಾಸ ಗಳಿಗೆ ಅಲ್ಲಿ ಹೆಚ್ಚಿನ ಪ್ರಾಶಸ್ತ್ರ. ಆದುದರಿಂದ ಸಂಗೀತವು. ವಿಲಂಬ ಹಾಗೂ ಮಧ್ಯ ಲಯಗತಿ ಪ್ರಧಾನವಾದ ಭಾವೋದ್ದೇಶಿತ ಗಾನಪದ್ಧತಿ ಎಂದೂ, ಯಕ್ಷ ಗಾನವು ಮಧ್ಯ ಹಾಗೂ ದ್ರುತಲಯಗತಿ ಪ್ರಧಾನವಾದ ನಾಟ್ಯೋದ್ದೇಶಿತ ಗಾನ ಪದ್ದತಿ ಎಂದೂ ಹೇಳಬಹುದು. {{gap}}ಈ ಉದ್ದೇಶ ಭಿನ್ನತೆಗಳಿಂದಾಗಿ ಗಾನಶೈಲಿಯ ಭಿನ್ನವಾಗಿರುವುದು ಅವಶ್ಯ ಮತ್ತು ಅನಿವಾರ್ಯ. ಆದುದರಿಂದ ಯಕ್ಷಗಾನಕ್ಕೆ ಹಿಂದಿನಿಂದಲೂ ಪ್ರತ್ಯೇಕವಾದ ಒಂದು ಶೈಲಿ ಇದ್ದಿತೆಂದು ಸಾಧಿಸಬಹುದು. ಶೈಲಿಗಳ ಪ್ರತ್ಯೇಕತೆಯನ್ನೂ ವಿಶೇಷತೆಯನ್ನೂ ಗುರುತಿಸಿ, ಎಲ್ಲೆಲ್ಲ ಇತರ ಸಂಗೀತ ಪದ್ಧತಿಗಳ ರಾಗ-ತಾಳಗಳ ಅನುಕರಣೆ ಬಂದು ದೋಷಪೂರ್ಣವಾಗಿದೆ ಎಂದು ಕಂಡುಹಿಡಿದು, ಅಂತಹ ದೋಷಗಳನ್ನು ನಿವಾರಿಸಿ, ಅಥವಾ ತಿದ್ದಿ, ಶೈಲಿಯನ್ನು ಉದ್ದೇಶಾನುವರ್ತಿಯಾಗುವಂತೆ ಶುದ್ಧವಾಗಿಸಿ ರೂಪಿಸಿದಾಗ ಯಕ್ಷಗಾನ ಶೈಲಿ ಅಥವಾ ಗಾನ ವಿಧಾನ ಎಂಬುದು ಭಾರತೀಯ ಸಂಗೀತ ಪದ್ಧತಿಗೆ ಸೇರಿದ, ಪರಂಪರಾಗತವಾಗಿ ಬಂದ, ಇನ್ನೊಂದು ಗಾನವಿಧಾನ ಎಂಬುದು ಭಾರತೀಯ ಸಂಗೀತ ಪದ್ಧತಿಗೆ ಸೇರಿದ ಪರಂಪರಾಗವಾಗಿ ಬಂದ, ಇನ್ನೊಂದು ಶೈಲಿ ಅಥವಾ ಗಾನವಿಧಾನವಾಗಿ ಕಂಗೊಳಿಸಿತು.<noinclude></noinclude> o0kycpf1kvleayvti5uipe0ycfq33d1 319739 319738 2026-05-14T09:34:38Z Hariprasad Shetty10 7490 319739 proofread-page text/x-wiki <noinclude><pagequality level="1" user="PraneethGanesh" />{{Left|74}}</noinclude>ಆದುದರಿಂದ ಯಕ್ಷಗಾನ ತಾಲವಿಧಾನಗಳಿಗೆ ಮದ್ದಲೆವಾದನಕ್ಕೆ ಉಪಯೋಗಿಸುವ ಜತಿಗಳನ್ನು ಬಳಸಿರುವ ಸ್ವರಪುಂಜಗಳನ್ನು ತಾಳಬದ್ಧವಾಗಿ ರಚಿಸಿ, ಅವಗಳನ್ನು ತಾಳ ಅಥವಾ ಜಾಗಟೆಗಳಲ್ಲಿ ತಾಳಸೂಚನೆಯ ಘಾತಗಳಿಗೆ ಹೊಂದಿಸಿಕೊಂಡು ಹಾಡಲು ಸಾಧ್ಯವಾಗುವಂತಹ ಅಭ್ಯಾಸಗಾನಗಳ ಪ್ರತ್ಯೇಕ ರಚನೆಯಾಗಬೇಕು. ಆಗ ಮಾತ್ರ ಯಕ್ಷಗಾನವು ತಾಳಗಳಲ್ಲಿ ತನ್ನ ವಿಶಿಷ್ಟತೆಯನ್ನು ಉಳಿಸಿಕೊಂಡು ಆ ಸಂಗೀತಶೈಲಿಗೆ ಪೂರಕವಾದ ಗುಣವುಳ್ಳದ್ದಾಗಿರಲು ಸಾಧ್ಯವಾಗುತ್ತದೆ. {{gap}}ಯಕ್ಷಗಾನದಲ್ಲಿ ವಿಳಂಬಕಾಲದ ಲಯಗತಿಯ ಉಪಯೋಗ ತುಂಬ ಕಡಿಮೆ, ಇಲ್ಲವೆಂದರೂ ಸಲ್ಲುತ್ತದೆ. ಹಾಡುಗಳೆಲ್ಲ, ತಾಳವೈವಿಧ್ಯಗಳೆಲ್ಲ, ಸಾಮಾನ್ಯವಾಗಿ ಮಧ್ಯಲಯ ಹಾಗೂ ದ್ರುತಲಯಗತಿಗಳಲ್ಲೇ ಇರುವುದು ಕಂಡು ಬರುತ್ತದೆ. ಇದು ಸಭಾಗಾನ ವಿಧಾನವಲ್ಲ; ನಾಟಿದ್ದೇಶಿತ ಗಾನವಿಧಾನ ಎಂಬುದು ಈ ರೀತಿಗೆ ಮೂಲಕಾರಣವಾಗಿರಬಹುದು. ಹಾಗೆಯೇ 'ಯಕ್ಷ' ಎಂಬ ಪದಕ್ಕೆ 'ವೇಗ' ಎಂಬ ಅರ್ಥವೂ ನಿಘಂಟುವಿನಲ್ಲಿ ಕಾಣುವುದರಿಂದ ಯಕ್ಷಗಾನ' ಎಂದರೆ ವೇಗದ ಅಥವಾ ದ್ರುತಗತಿಯ ಗಾನವಿಧಾನ ಎಂದೂ ಅರ್ಥ ಮಾಡಬಹುದು. ಹಾಗೆ ಅರ್ಥವಿಸಿದಾಗ ಈ ಗಾನವಿಧಾನವು ಕಲಾಸಂಗೀತ ಗಾನವಿಧಾನಕ್ಕಿಂತ ಭಿನ್ನವಾದುದು ಎಂದು ಕಲ್ಪಿಸ ಬಹುದು. ಕಲಾಸಂಗೀತದಲ್ಲಿ ಮಧ್ಯ ಹಾಗೂ ದುತ ಲಯವಿಧಾನಗಳು ಹಾಡು ತಾಳಗಳಲ್ಲಿ ಸಾಕಷ್ಟು ಕಂಡು ಬಂದರೂ ವಿಳಂಬ ಹಾಗೂ ಮಧ್ಯಗತಿಯ ವಿನ್ಯಾಸ ಗಳಿಗೆ ಅಲ್ಲಿ ಹೆಚ್ಚಿನ ಪ್ರಾಶಸ್ತ್ರ. ಆದುದರಿಂದ ಸಂಗೀತವು. ವಿಲಂಬ ಹಾಗೂ ಮಧ್ಯ ಲಯಗತಿ ಪ್ರಧಾನವಾದ ಭಾವೋದ್ದೇಶಿತ ಗಾನಪದ್ಧತಿ ಎಂದೂ, ಯಕ್ಷ ಗಾನವು ಮಧ್ಯ ಹಾಗೂ ದ್ರುತಲಯಗತಿ ಪ್ರಧಾನವಾದ ನಾಟ್ಯೋದ್ದೇಶಿತ ಗಾನ ಪದ್ದತಿ ಎಂದೂ ಹೇಳಬಹುದು. {{gap}}ಈ ಉದ್ದೇಶ ಭಿನ್ನತೆಗಳಿಂದಾಗಿ ಗಾನಶೈಲಿಯ ಭಿನ್ನವಾಗಿರುವುದು ಅವಶ್ಯ ಮತ್ತು ಅನಿವಾರ್ಯ. ಆದುದರಿಂದ ಯಕ್ಷಗಾನಕ್ಕೆ ಹಿಂದಿನಿಂದಲೂ ಪ್ರತ್ಯೇಕವಾದ ಒಂದು ಶೈಲಿ ಇದ್ದಿತೆಂದು ಸಾಧಿಸಬಹುದು. ಶೈಲಿಗಳ ಪ್ರತ್ಯೇಕತೆಯನ್ನೂ ವಿಶೇಷತೆಯನ್ನೂ ಗುರುತಿಸಿ, ಎಲ್ಲೆಲ್ಲ ಇತರ ಸಂಗೀತ ಪದ್ಧತಿಗಳ ರಾಗ-ತಾಳಗಳ ಅನುಕರಣೆ ಬಂದು ದೋಷಪೂರ್ಣವಾಗಿದೆ ಎಂದು ಕಂಡುಹಿಡಿದು, ಅಂತಹ ದೋಷಗಳನ್ನು ನಿವಾರಿಸಿ, ಅಥವಾ ತಿದ್ದಿ, ಶೈಲಿಯನ್ನು ಉದ್ದೇಶಾನುವರ್ತಿಯಾಗುವಂತೆ ಶುದ್ಧವಾಗಿಸಿ ರೂಪಿಸಿದಾಗ ಯಕ್ಷಗಾನ ಶೈಲಿ ಅಥವಾ ಗಾನ ವಿಧಾನ ಎಂಬುದು ಭಾರತೀಯ ಸಂಗೀತ ಪದ್ಧತಿಗೆ ಸೇರಿದ, ಪರಂಪರಾಗತವಾಗಿ ಬಂದ, ಇನ್ನೊಂದು ಗಾನವಿಧಾನ ಎಂಬುದು ಭಾರತೀಯ ಸಂಗೀತ ಪದ್ಧತಿಗೆ ಸೇರಿದ ಪರಂಪರಾಗವಾಗಿ ಬಂದ, ಇನ್ನೊಂದು ಶೈಲಿ ಅಥವಾ ಗಾನವಿಧಾನವಾಗಿ ಕಂಗೊಳಿಸಿತು.<noinclude></noinclude> bzegqcnpq75mlz8utylh255sk1e7kb9 319740 319739 2026-05-14T09:34:55Z Hariprasad Shetty10 7490 /* Proofread */ 319740 proofread-page text/x-wiki <noinclude><pagequality level="3" user="Hariprasad Shetty10" />{{Left|74}}</noinclude>ಆದುದರಿಂದ ಯಕ್ಷಗಾನ ತಾಲವಿಧಾನಗಳಿಗೆ ಮದ್ದಲೆವಾದನಕ್ಕೆ ಉಪಯೋಗಿಸುವ ಜತಿಗಳನ್ನು ಬಳಸಿರುವ ಸ್ವರಪುಂಜಗಳನ್ನು ತಾಳಬದ್ಧವಾಗಿ ರಚಿಸಿ, ಅವಗಳನ್ನು ತಾಳ ಅಥವಾ ಜಾಗಟೆಗಳಲ್ಲಿ ತಾಳಸೂಚನೆಯ ಘಾತಗಳಿಗೆ ಹೊಂದಿಸಿಕೊಂಡು ಹಾಡಲು ಸಾಧ್ಯವಾಗುವಂತಹ ಅಭ್ಯಾಸಗಾನಗಳ ಪ್ರತ್ಯೇಕ ರಚನೆಯಾಗಬೇಕು. ಆಗ ಮಾತ್ರ ಯಕ್ಷಗಾನವು ತಾಳಗಳಲ್ಲಿ ತನ್ನ ವಿಶಿಷ್ಟತೆಯನ್ನು ಉಳಿಸಿಕೊಂಡು ಆ ಸಂಗೀತಶೈಲಿಗೆ ಪೂರಕವಾದ ಗುಣವುಳ್ಳದ್ದಾಗಿರಲು ಸಾಧ್ಯವಾಗುತ್ತದೆ. {{gap}}ಯಕ್ಷಗಾನದಲ್ಲಿ ವಿಳಂಬಕಾಲದ ಲಯಗತಿಯ ಉಪಯೋಗ ತುಂಬ ಕಡಿಮೆ, ಇಲ್ಲವೆಂದರೂ ಸಲ್ಲುತ್ತದೆ. ಹಾಡುಗಳೆಲ್ಲ, ತಾಳವೈವಿಧ್ಯಗಳೆಲ್ಲ, ಸಾಮಾನ್ಯವಾಗಿ ಮಧ್ಯಲಯ ಹಾಗೂ ದ್ರುತಲಯಗತಿಗಳಲ್ಲೇ ಇರುವುದು ಕಂಡು ಬರುತ್ತದೆ. ಇದು ಸಭಾಗಾನ ವಿಧಾನವಲ್ಲ; ನಾಟಿದ್ದೇಶಿತ ಗಾನವಿಧಾನ ಎಂಬುದು ಈ ರೀತಿಗೆ ಮೂಲಕಾರಣವಾಗಿರಬಹುದು. ಹಾಗೆಯೇ 'ಯಕ್ಷ' ಎಂಬ ಪದಕ್ಕೆ 'ವೇಗ' ಎಂಬ ಅರ್ಥವೂ ನಿಘಂಟುವಿನಲ್ಲಿ ಕಾಣುವುದರಿಂದ ಯಕ್ಷಗಾನ' ಎಂದರೆ ವೇಗದ ಅಥವಾ ದ್ರುತಗತಿಯ ಗಾನವಿಧಾನ ಎಂದೂ ಅರ್ಥ ಮಾಡಬಹುದು. ಹಾಗೆ ಅರ್ಥವಿಸಿದಾಗ ಈ ಗಾನವಿಧಾನವು ಕಲಾಸಂಗೀತ ಗಾನವಿಧಾನಕ್ಕಿಂತ ಭಿನ್ನವಾದುದು ಎಂದು ಕಲ್ಪಿಸ ಬಹುದು. ಕಲಾಸಂಗೀತದಲ್ಲಿ ಮಧ್ಯ ಹಾಗೂ ದುತ ಲಯವಿಧಾನಗಳು ಹಾಡು ತಾಳಗಳಲ್ಲಿ ಸಾಕಷ್ಟು ಕಂಡು ಬಂದರೂ ವಿಳಂಬ ಹಾಗೂ ಮಧ್ಯಗತಿಯ ವಿನ್ಯಾಸ ಗಳಿಗೆ ಅಲ್ಲಿ ಹೆಚ್ಚಿನ ಪ್ರಾಶಸ್ತ್ರ. ಆದುದರಿಂದ ಸಂಗೀತವು. ವಿಲಂಬ ಹಾಗೂ ಮಧ್ಯ ಲಯಗತಿ ಪ್ರಧಾನವಾದ ಭಾವೋದ್ದೇಶಿತ ಗಾನಪದ್ಧತಿ ಎಂದೂ, ಯಕ್ಷ ಗಾನವು ಮಧ್ಯ ಹಾಗೂ ದ್ರುತಲಯಗತಿ ಪ್ರಧಾನವಾದ ನಾಟ್ಯೋದ್ದೇಶಿತ ಗಾನ ಪದ್ದತಿ ಎಂದೂ ಹೇಳಬಹುದು. {{gap}}ಈ ಉದ್ದೇಶ ಭಿನ್ನತೆಗಳಿಂದಾಗಿ ಗಾನಶೈಲಿಯ ಭಿನ್ನವಾಗಿರುವುದು ಅವಶ್ಯ ಮತ್ತು ಅನಿವಾರ್ಯ. ಆದುದರಿಂದ ಯಕ್ಷಗಾನಕ್ಕೆ ಹಿಂದಿನಿಂದಲೂ ಪ್ರತ್ಯೇಕವಾದ ಒಂದು ಶೈಲಿ ಇದ್ದಿತೆಂದು ಸಾಧಿಸಬಹುದು. ಶೈಲಿಗಳ ಪ್ರತ್ಯೇಕತೆಯನ್ನೂ ವಿಶೇಷತೆಯನ್ನೂ ಗುರುತಿಸಿ, ಎಲ್ಲೆಲ್ಲ ಇತರ ಸಂಗೀತ ಪದ್ಧತಿಗಳ ರಾಗ-ತಾಳಗಳ ಅನುಕರಣೆ ಬಂದು ದೋಷಪೂರ್ಣವಾಗಿದೆ ಎಂದು ಕಂಡುಹಿಡಿದು, ಅಂತಹ ದೋಷಗಳನ್ನು ನಿವಾರಿಸಿ, ಅಥವಾ ತಿದ್ದಿ, ಶೈಲಿಯನ್ನು ಉದ್ದೇಶಾನುವರ್ತಿಯಾಗುವಂತೆ ಶುದ್ಧವಾಗಿಸಿ ರೂಪಿಸಿದಾಗ ಯಕ್ಷಗಾನ ಶೈಲಿ ಅಥವಾ ಗಾನ ವಿಧಾನ ಎಂಬುದು ಭಾರತೀಯ ಸಂಗೀತ ಪದ್ಧತಿಗೆ ಸೇರಿದ, ಪರಂಪರಾಗತವಾಗಿ ಬಂದ, ಇನ್ನೊಂದು ಗಾನವಿಧಾನ ಎಂಬುದು ಭಾರತೀಯ ಸಂಗೀತ ಪದ್ಧತಿಗೆ ಸೇರಿದ ಪರಂಪರಾಗವಾಗಿ ಬಂದ, ಇನ್ನೊಂದು ಶೈಲಿ ಅಥವಾ ಗಾನವಿಧಾನವಾಗಿ ಕಂಗೊಳಿಸಿತು.<noinclude></noinclude> mtajgoqdnvbs5xxo9i5u6o9zb15w3v5 ಪುಟ:ಯಕ್ಷಗಾನ ಮಕರಂದ.pdf/೩೨೫ 104 100248 319733 281875 2026-05-14T09:14:00Z Hariprasad Shetty10 7490 319733 proofread-page text/x-wiki <noinclude><pagequality level="1" user="PraneethGanesh" />{{Right|73}}</noinclude>ಹಿಂದಿನ ಪ್ರಸಂಗಗಳ ಮಠತಾಳದ ಪದ್ಯಗಳ ಹಾಡುವಿಕೆ ಪರಂಪರಾಗತವಾಗಿ ಇಳಿದು ಬಂದಾಗ ಈ ದೋಷ ಕಾಣಲಾಗದೆ ಮಠತಾಳವನ್ನು ರೂಪಕತಾಳದಂತೆ ಹಾಡುವ ಪದ್ಧತಿ ಬಂದು ಬಿಟ್ಟಿದೆ ಎಂದು ಭಾವಿಸಲು ಸಾಕಷ್ಟು ಅವಕಾಶವಿದೆ. ಇಲ್ಲವಾದಲ್ಲಿ ಒಂದೇ ತಾಳಕ್ಕೆ ಎರಡು ಹೆಸರುಗಳನ್ನು ಇರಿಸುವುದು ಹಿಂದಿನ ಪ್ರಸಂಗಕರ್ತೃಗಳಿಗೆ ಅವಶ್ಯವಿರಲಿಲ್ಲ. ಮಠ ತಾಳವೆಂದು ಹೆಸರಿಸಿದ ಹಾಡುಗಳನ್ನು ಖಂಡಛಾಪುತಾಳ ದಲ್ಲಿ ರಾಗಭಾವಗಳಿಗೆ ಲೋಪಬಾರದಂತೆ ಹಾಡಲು ಸಾಧ್ಯವಾಗುವುದೂ ಈ ಬಗೆಗೆ ಸಮರ್ಥನೆಯನ್ನೀಯುತ್ತದೆ. {{gap}}'ತಿತ್ತಿತ್ತ್ಯೆ' ಎಂಬುದು ಯಕ್ಷಗಾನದಲ್ಲಿ ಬಳಸುವ ಇನ್ನೊಂದು ತಾಳ. ಇದನ್ನು ತಾಳ ಎಂಬುದಕ್ಕಿಂತಲೂ 'ನಡೆ' ಎಂದರೆ ಉತ್ತಮ. 7 ಅಕ್ಷರಗಳ ಕಾಲಾವಕಾಶದ ಈ ಗತಿಯನ್ನು ಮಿಶ್ರಛಾಪು ತಾಳದಂತೆ 3+4 ಅಕ್ಷರಗಳಾಗಿ ವಿಭಜಿಸುವ ಬದಲು 4+3 ಅಕ್ಷರಗಳಾಗಿ ವಿಭಜಿಸುತ್ತಾರೆ. ಈ ನಡೆ ಮೋಹಕವಾಗಿದ್ದು, ಕುಣಿತಕ್ಕೆ ವಿಶೇಷವಾಗಿ ಒಗ್ಗುವುದರಿಂದ ಯಕ್ಷಗಾನದಲ್ಲಿ ಈ ನಡೆ ಬಹಳ ಉಪಯೋಗದಲ್ಲಿದೆ. ಅಷ್ಟತಾಳದಿಂದ ಏಕತಾಳಕ್ಕೆ ದಾಟಿ ಮುಂದೆ ತಿತ್ತಿತ್ತ್ಯೆ ನಡೆಯಲ್ಲಿ ಮುಗಿಸುವುದೂ— ಎಂದರೆ 3+4 ಅಕ್ಷರಗಳ ಗತಿಯಿಂದ 2+2 ಅಕ್ಷರಗಳ ಗತಿಗೆ ದಾಟಿ ಬಳಿಕ 4+3 ಅಕ್ಷರಗಳ ನಡೆಗೆ ಬರುವುದೂ, ಹಾಗೆಯೇ ತ್ರಿವುಡೆಯಿಂದಲೂ ಏಕತಾಳಕ್ಕೆ ದಾಟಿ ತಿತ್ತಿತ್ತ್ಯೆ ನಡೆಗೆ ಬರುವುದೂ, ಆದಿತಾಳದಿಂದ ಏಕ, ತಿತ್ತಿತ್ತ್ಯೆಗಳಿಗೆ ದಾಟುವುದೂ ಯಕ್ಷಗಾನ ಕುಣಿತದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ನಡೆ ಬದಲಾವಣೆಯ ಪದ್ಧತಿ. ಆದುದರಿಂದ ಯಕ್ಷಗಾನದ ಹಾಡು ಕುಣಿತಗಳಲ್ಲಿ ಉಪಯೋಗಿಸುವ ತಾಳ ವಿಧಾನ ಗಳಿಗೆ ಅಕ್ಷರ ಗತಿಗಳ ವೈವಿಧ್ಯಪೂರ್ಣ ಮುನ್ನಡೆಯೇ ಪ್ರಾಮುಖ್ಯವಲ್ಲದೆ, ಅಕ್ಷರ ಕಾಲಗಳ ಅಂಗ ವಿಭಜನೆಯ ತಾಳಾವರ್ತಗಳ ನಿಯಮಗಳಲ್ಲ ಎನ್ನಬೇಕಾಗುತ್ತದೆ. {{gap}}ಯಕ್ಷಗಾನದ ತಾಳಾಭ್ಯಾಸವನ್ನು ಸಂಗೀತದ ತಾಳಾಭ್ಯಾಸದಂತೆ ಸಾಧಿಸಲು ಬರುವುದಿಲ್ಲ. ಸಂಗೀತದಲ್ಲಿ ಸರಳೆವರಸೆ, ಜಂಟಿವರಸೆ, ಅಲಂಕಾರಗಳು, ವರ್ಣಗಳ ಮೂಲಕ, ಮೂರು ಅಥವಾ ನಾಲ್ಕು ಕಾಲಗಳಲ್ಲಿನ ಸಾಧನೆಗಳ ಮೂಲಕ —ಲಯ ಜ್ಞಾನವನ್ನು ವರ್ಧಿಸಿಕೊಳ್ಳುವುದು ಪದ್ಧತಿ. ಈ ರೀತಿಯ ಅಭ್ಯಾಸದಿಂದ ಲಯ ಜ್ಞಾನ ಚೆನ್ನಾಗಿ ಒದಗಬಹುದಾದರೂ ಯಕ್ಷಗಾನದ ಹಾಡು-ಕುಣಿತಗಳಿಗೆ ಪೂರಕ ವಾಗಿ ತಾಳಗಳನ್ನು ಉಪಯೋಗಿಸುವ ದಿಸೆಯಲ್ಲಿ ಅಷ್ಟೊಂದು ಪ್ರಯೋಜನ ಒದ ಗೀತೆಂದು ಹೇಳಬರುವುದಿಲ್ಲ. ಯಕ್ಷಗಾನದಲ್ಲಿ ಭಾಗವತನಿಗೆ ಹಾಡುಗಳನ್ನು ಹೇಳು ವುದೊಂದೇ ಕೆಲಸವಲ್ಲ. ಪಾತ್ರಗಳನ್ನು ಕುಣಿಸುವ ಹೊಣೆಯೂ ಆತನದೇ ಆಗಿದೆ. ಇದರ ಸಲುವಾಗಿ ಆತನಿಗೆ ತಾಳದ ವಿವಿಧ ನಡೆಗಳ ಪರಿಣತಿ ಮಾತ್ರವಲ್ಲದೆ ಮದ್ದಲೆ ಯಲ್ಲಿ ಅವುಗಳನ್ನು ನುಡಿಸುವ ವಿಧಾನ ತಿಳಿದಿರುವುದೂ ಅವಶ್ಯ. ಹಾಗಾಗಿ ಎಲ್ಲ ಭಾಗವತರುಗಳಿಗೂ ಮದ್ದಳೆವಾದನದ ಸಾಮಾನ್ಯ ಜ್ಞಾನ ಇದ್ದೇ ಇರಬೇಕಾಗುತ್ತದೆ.<noinclude></noinclude> 37v4npaufigj8zz63mb32pakqg8eqg4 319734 319733 2026-05-14T09:14:08Z Hariprasad Shetty10 7490 /* Proofread */ 319734 proofread-page text/x-wiki <noinclude><pagequality level="3" user="Hariprasad Shetty10" />{{Right|73}}</noinclude>ಹಿಂದಿನ ಪ್ರಸಂಗಗಳ ಮಠತಾಳದ ಪದ್ಯಗಳ ಹಾಡುವಿಕೆ ಪರಂಪರಾಗತವಾಗಿ ಇಳಿದು ಬಂದಾಗ ಈ ದೋಷ ಕಾಣಲಾಗದೆ ಮಠತಾಳವನ್ನು ರೂಪಕತಾಳದಂತೆ ಹಾಡುವ ಪದ್ಧತಿ ಬಂದು ಬಿಟ್ಟಿದೆ ಎಂದು ಭಾವಿಸಲು ಸಾಕಷ್ಟು ಅವಕಾಶವಿದೆ. ಇಲ್ಲವಾದಲ್ಲಿ ಒಂದೇ ತಾಳಕ್ಕೆ ಎರಡು ಹೆಸರುಗಳನ್ನು ಇರಿಸುವುದು ಹಿಂದಿನ ಪ್ರಸಂಗಕರ್ತೃಗಳಿಗೆ ಅವಶ್ಯವಿರಲಿಲ್ಲ. ಮಠ ತಾಳವೆಂದು ಹೆಸರಿಸಿದ ಹಾಡುಗಳನ್ನು ಖಂಡಛಾಪುತಾಳ ದಲ್ಲಿ ರಾಗಭಾವಗಳಿಗೆ ಲೋಪಬಾರದಂತೆ ಹಾಡಲು ಸಾಧ್ಯವಾಗುವುದೂ ಈ ಬಗೆಗೆ ಸಮರ್ಥನೆಯನ್ನೀಯುತ್ತದೆ. {{gap}}'ತಿತ್ತಿತ್ತ್ಯೆ' ಎಂಬುದು ಯಕ್ಷಗಾನದಲ್ಲಿ ಬಳಸುವ ಇನ್ನೊಂದು ತಾಳ. ಇದನ್ನು ತಾಳ ಎಂಬುದಕ್ಕಿಂತಲೂ 'ನಡೆ' ಎಂದರೆ ಉತ್ತಮ. 7 ಅಕ್ಷರಗಳ ಕಾಲಾವಕಾಶದ ಈ ಗತಿಯನ್ನು ಮಿಶ್ರಛಾಪು ತಾಳದಂತೆ 3+4 ಅಕ್ಷರಗಳಾಗಿ ವಿಭಜಿಸುವ ಬದಲು 4+3 ಅಕ್ಷರಗಳಾಗಿ ವಿಭಜಿಸುತ್ತಾರೆ. ಈ ನಡೆ ಮೋಹಕವಾಗಿದ್ದು, ಕುಣಿತಕ್ಕೆ ವಿಶೇಷವಾಗಿ ಒಗ್ಗುವುದರಿಂದ ಯಕ್ಷಗಾನದಲ್ಲಿ ಈ ನಡೆ ಬಹಳ ಉಪಯೋಗದಲ್ಲಿದೆ. ಅಷ್ಟತಾಳದಿಂದ ಏಕತಾಳಕ್ಕೆ ದಾಟಿ ಮುಂದೆ ತಿತ್ತಿತ್ತ್ಯೆ ನಡೆಯಲ್ಲಿ ಮುಗಿಸುವುದೂ— ಎಂದರೆ 3+4 ಅಕ್ಷರಗಳ ಗತಿಯಿಂದ 2+2 ಅಕ್ಷರಗಳ ಗತಿಗೆ ದಾಟಿ ಬಳಿಕ 4+3 ಅಕ್ಷರಗಳ ನಡೆಗೆ ಬರುವುದೂ, ಹಾಗೆಯೇ ತ್ರಿವುಡೆಯಿಂದಲೂ ಏಕತಾಳಕ್ಕೆ ದಾಟಿ ತಿತ್ತಿತ್ತ್ಯೆ ನಡೆಗೆ ಬರುವುದೂ, ಆದಿತಾಳದಿಂದ ಏಕ, ತಿತ್ತಿತ್ತ್ಯೆಗಳಿಗೆ ದಾಟುವುದೂ ಯಕ್ಷಗಾನ ಕುಣಿತದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ನಡೆ ಬದಲಾವಣೆಯ ಪದ್ಧತಿ. ಆದುದರಿಂದ ಯಕ್ಷಗಾನದ ಹಾಡು ಕುಣಿತಗಳಲ್ಲಿ ಉಪಯೋಗಿಸುವ ತಾಳ ವಿಧಾನ ಗಳಿಗೆ ಅಕ್ಷರ ಗತಿಗಳ ವೈವಿಧ್ಯಪೂರ್ಣ ಮುನ್ನಡೆಯೇ ಪ್ರಾಮುಖ್ಯವಲ್ಲದೆ, ಅಕ್ಷರ ಕಾಲಗಳ ಅಂಗ ವಿಭಜನೆಯ ತಾಳಾವರ್ತಗಳ ನಿಯಮಗಳಲ್ಲ ಎನ್ನಬೇಕಾಗುತ್ತದೆ. {{gap}}ಯಕ್ಷಗಾನದ ತಾಳಾಭ್ಯಾಸವನ್ನು ಸಂಗೀತದ ತಾಳಾಭ್ಯಾಸದಂತೆ ಸಾಧಿಸಲು ಬರುವುದಿಲ್ಲ. ಸಂಗೀತದಲ್ಲಿ ಸರಳೆವರಸೆ, ಜಂಟಿವರಸೆ, ಅಲಂಕಾರಗಳು, ವರ್ಣಗಳ ಮೂಲಕ, ಮೂರು ಅಥವಾ ನಾಲ್ಕು ಕಾಲಗಳಲ್ಲಿನ ಸಾಧನೆಗಳ ಮೂಲಕ —ಲಯ ಜ್ಞಾನವನ್ನು ವರ್ಧಿಸಿಕೊಳ್ಳುವುದು ಪದ್ಧತಿ. ಈ ರೀತಿಯ ಅಭ್ಯಾಸದಿಂದ ಲಯ ಜ್ಞಾನ ಚೆನ್ನಾಗಿ ಒದಗಬಹುದಾದರೂ ಯಕ್ಷಗಾನದ ಹಾಡು-ಕುಣಿತಗಳಿಗೆ ಪೂರಕ ವಾಗಿ ತಾಳಗಳನ್ನು ಉಪಯೋಗಿಸುವ ದಿಸೆಯಲ್ಲಿ ಅಷ್ಟೊಂದು ಪ್ರಯೋಜನ ಒದ ಗೀತೆಂದು ಹೇಳಬರುವುದಿಲ್ಲ. ಯಕ್ಷಗಾನದಲ್ಲಿ ಭಾಗವತನಿಗೆ ಹಾಡುಗಳನ್ನು ಹೇಳು ವುದೊಂದೇ ಕೆಲಸವಲ್ಲ. ಪಾತ್ರಗಳನ್ನು ಕುಣಿಸುವ ಹೊಣೆಯೂ ಆತನದೇ ಆಗಿದೆ. ಇದರ ಸಲುವಾಗಿ ಆತನಿಗೆ ತಾಳದ ವಿವಿಧ ನಡೆಗಳ ಪರಿಣತಿ ಮಾತ್ರವಲ್ಲದೆ ಮದ್ದಲೆ ಯಲ್ಲಿ ಅವುಗಳನ್ನು ನುಡಿಸುವ ವಿಧಾನ ತಿಳಿದಿರುವುದೂ ಅವಶ್ಯ. ಹಾಗಾಗಿ ಎಲ್ಲ ಭಾಗವತರುಗಳಿಗೂ ಮದ್ದಳೆವಾದನದ ಸಾಮಾನ್ಯ ಜ್ಞಾನ ಇದ್ದೇ ಇರಬೇಕಾಗುತ್ತದೆ.<noinclude></noinclude> 88146k9vx5hs9tq8ye7t7fe7iopl3ty 319764 319734 2026-05-14T11:08:02Z Shreelatha.Halemane 7642 /* Validated */ 319764 proofread-page text/x-wiki <noinclude><pagequality level="4" user="Shreelatha.Halemane" />{{Right|73}}</noinclude>ಹಿಂದಿನ ಪ್ರಸಂಗಗಳ ಮಟ್ಯತಾಳದ ಪದ್ಯಗಳ ಹಾಡುವಿಕೆ ಪರಂಪರಾಗತವಾಗಿ ಇಳಿದು ಬಂದಾಗ ಈ ದೋಷ ಕಾಣಲಾಗದೆ ಮಟ್ಯತಾಳವನ್ನು ರೂಪಕತಾಳದಂತೆ ಹಾಡುವ ಪದ್ಧತಿ ಬಂದು ಬಿಟ್ಟಿದೆ ಎಂದು ಭಾವಿಸಲು ಸಾಕಷ್ಟು ಅವಕಾಶವಿದೆ. ಇಲ್ಲವಾದಲ್ಲಿ ಒಂದೇ ತಾಳಕ್ಕೆ ಎರಡು ಹೆಸರುಗಳನ್ನು ಇರಿಸುವುದು ಹಿಂದಿನ ಪ್ರಸಂಗಕರ್ತೃಗಳಿಗೆ ಅವಶ್ಯವಿರಲಿಲ್ಲ. ಮಟ್ಟ್ಯ ತಾಳವೆಂದು ಹೆಸರಿಸಿದ ಹಾಡುಗಳನ್ನು ಖಂಡಛಾಪುತಾಳ ದಲ್ಲಿ ರಾಗಭಾವಗಳಿಗೆ ಲೋಪಬಾರದಂತೆ ಹಾಡಲು ಸಾಧ್ಯವಾಗುವುದೂ ಈ ಬಗೆಗೆ ಸಮರ್ಥನೆಯನ್ನೀಯುತ್ತದೆ. {{gap}}'ತಿತ್ತಿತ್ತೈ' ಎಂಬುದು ಯಕ್ಷಗಾನದಲ್ಲಿ ಬಳಸುವ ಇನ್ನೊಂದು ತಾಳ. ಇದನ್ನು ತಾಳ ಎಂಬುದಕ್ಕಿಂತಲೂ 'ನಡೆ' ಎಂದರೆ ಉತ್ತಮ. 7 ಅಕ್ಷರಗಳ ಕಾಲಾವಕಾಶದ ಈ ಗತಿಯನ್ನು ಮಿಶ್ರಛಾಪು ತಾಳದಂತೆ 3+4 ಅಕ್ಷರಗಳಾಗಿ ವಿಭಜಿಸುವ ಬದಲು 4+3 ಅಕ್ಷರಗಳಾಗಿ ವಿಭಜಿಸುತ್ತಾರೆ. ಈ ನಡೆ ಮೋಹಕವಾಗಿದ್ದು, ಕುಣಿತಕ್ಕೆ ವಿಶೇಷವಾಗಿ ಒಗ್ಗುವುದರಿಂದ ಯಕ್ಷಗಾನದಲ್ಲಿ ಈ ನಡೆ ಬಹಳ ಉಪಯೋಗದಲ್ಲಿದೆ. ಅಷ್ಟತಾಳದಿಂದ ಏಕತಾಳಕ್ಕೆ ದಾಟಿ ಮುಂದೆ ತಿತ್ತಿತ್ತ್ಯೆ ನಡೆಯಲ್ಲಿ ಮುಗಿಸುವುದೂ— ಎಂದರೆ 3+4 ಅಕ್ಷರಗಳ ಗತಿಯಿಂದ 2+2 ಅಕ್ಷರಗಳ ಗತಿಗೆ ದಾಟಿ ಬಳಿಕ 4+3 ಅಕ್ಷರಗಳ ನಡೆಗೆ ಬರುವುದೂ, ಹಾಗೆಯೇ ತ್ರಿವುಡೆಯಿಂದಲೂ ಏಕತಾಳಕ್ಕೆ ದಾಟಿ ತಿತ್ತಿತ್ತ್ಯೆ ನಡೆಗೆ ಬರುವುದೂ, ಆದಿತಾಳದಿಂದ ಏಕ, ತಿತ್ತಿತ್ತ್ಯೆಗಳಿಗೆ ದಾಟುವುದೂ ಯಕ್ಷಗಾನ ಕುಣಿತದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ನಡೆ ಬದಲಾವಣೆಯ ಪದ್ಧತಿ. ಆದುದರಿಂದ ಯಕ್ಷಗಾನದ ಹಾಡು ಕುಣಿತಗಳಲ್ಲಿ ಉಪಯೋಗಿಸುವ ತಾಳ ವಿಧಾನ ಗಳಿಗೆ ಅಕ್ಷರ ಗತಿಗಳ ವೈವಿಧ್ಯಪೂರ್ಣ ಮುನ್ನಡೆಯೇ ಪ್ರಾಮುಖ್ಯವಲ್ಲದೆ, ಅಕ್ಷರ ಕಾಲಗಳ ಅಂಗ ವಿಭಜನೆಯ ತಾಳಾವರ್ತಗಳ ನಿಯಮಗಳಲ್ಲ ಎನ್ನಬೇಕಾಗುತ್ತದೆ. {{gap}}ಯಕ್ಷಗಾನದ ತಾಳಾಭ್ಯಾಸವನ್ನು ಸಂಗೀತದ ತಾಳಾಭ್ಯಾಸದಂತೆ ಸಾಧಿಸಲು ಬರುವುದಿಲ್ಲ. ಸಂಗೀತದಲ್ಲಿ ಸರಳೆವರಸೆ, ಜಂಟಿವರಸೆ, ಅಲಂಕಾರಗಳು, ವರ್ಣಗಳ ಮೂಲಕ, ಮೂರು ಅಥವಾ ನಾಲ್ಕು ಕಾಲಗಳಲ್ಲಿನ ಸಾಧನೆಗಳ ಮೂಲಕ —ಲಯ ಜ್ಞಾನವನ್ನು ವರ್ಧಿಸಿಕೊಳ್ಳುವುದು ಪದ್ಧತಿ. ಈ ರೀತಿಯ ಅಭ್ಯಾಸದಿಂದ ಲಯ ಜ್ಞಾನ ಚೆನ್ನಾಗಿ ಒದಗಬಹುದಾದರೂ ಯಕ್ಷಗಾನದ ಹಾಡು-ಕುಣಿತಗಳಿಗೆ ಪೂರಕ ವಾಗಿ ತಾಳಗಳನ್ನು ಉಪಯೋಗಿಸುವ ದಿಸೆಯಲ್ಲಿ ಅಷ್ಟೊಂದು ಪ್ರಯೋಜನ ಒದ ಗೀತೆಂದು ಹೇಳಬರುವುದಿಲ್ಲ. ಯಕ್ಷಗಾನದಲ್ಲಿ ಭಾಗವತನಿಗೆ ಹಾಡುಗಳನ್ನು ಹೇಳು ವುದೊಂದೇ ಕೆಲಸವಲ್ಲ. ಪಾತ್ರಗಳನ್ನು ಕುಣಿಸುವ ಹೊಣೆಯೂ ಆತನದೇ ಆಗಿದೆ. ಇದರ ಸಲುವಾಗಿ ಆತನಿಗೆ ತಾಳದ ವಿವಿಧ ನಡೆಗಳ ಪರಿಣತಿ ಮಾತ್ರವಲ್ಲದೆ ಮದ್ದಲೆ ಯಲ್ಲಿ ಅವುಗಳನ್ನು ನುಡಿಸುವ ವಿಧಾನ ತಿಳಿದಿರುವುದೂ ಅವಶ್ಯ. ಹಾಗಾಗಿ ಎಲ್ಲ ಭಾಗವತರುಗಳಿಗೂ ಮದ್ದಳೆವಾದನದ ಸಾಮಾನ್ಯ ಜ್ಞಾನ ಇದ್ದೇ ಇರಬೇಕಾಗುತ್ತದೆ.<noinclude></noinclude> toxomqesf3kje3hbg9g2v85hz0p7r2c ಪುಟ:ಯಕ್ಷಗಾನ ಮಕರಂದ.pdf/೩೨೭ 104 100249 319741 281876 2026-05-14T09:35:58Z Hariprasad Shetty10 7490 319741 proofread-page text/x-wiki <noinclude><pagequality level="1" user="PraneethGanesh" />{{Left|}}ಯಕ್ಷಗಾನ ಪ್ರಸಂಗಗಳ ಧಾಟಿ {{Right|}}-ಎಂ. ರಾಜಗೋಪಾಲಾಚಾರ್ಯ.</noinclude> ಯಕ್ಷಗಾನದ ಹಾಡಿಕೆಯ ಸಂಪ್ರದಾಯ ಶಾಸ್ತ್ರೀಯವಾದ ಮಾರ್ಗಸಂಗೀತ, ವಾಗ್ಗೇಯಕಾರರೇ ಅವನ್ನು ರಚಿಸಿದವರು ಎಂಬ ವಾದವಿದೆ. ಅದು ಜಾನಪದ ಸಂಪ್ರದಾಯದಲ್ಲಿ ಬೆಳೆದು ಬಂದ ದೇಸಿ ಜಾತಿಗೆ ಸೇರಿದುದು ಎಂಬ ಮತ್ತೊಂದು ವಾದವೂ ಇದೆ. ಹೇಗೂ ಇರಲಿ, ಇದರದೇ ಆದ ಒಂದು ವಿಶಿಷ್ಟ ಶೈಲಿಯದೆ ಎಂದರ ಸಾಕು. ಭಾವ-ರಾಗ-ಲಯ ಶುದ್ಧವಾಗಿಲ್ಲದಿದ್ದರೆ ಅದು ಯಾವ ಸಂಪ್ರದಾಯವೇ ಇರಲಿ ಅದಕ್ಕೆ ಮಹತ್ತ್ವ ಬರುವುದಿಲ್ಲ. ವೈದಿಕಗಾನದ ವಿವರಣೆ ಯಲ್ಲಿ 'ವೈದಿಕಗಾನವೇ ಶ್ರೇಷ್ಠವೆಂದೂ, ಅದಕ್ಕೆ ಸಾಮರ್ಥ್ಯವಿಲ್ಲದವರು ಲೌಕಿಕ ಗಾನದಿಂದಲಾದರೂ ಪರಶಿವನನ್ನು ಆರಾಧಿಸಬಹುದೆಂದ, ಹೇಳಿದೆ. ಇವೆಲ್ಲ ಆಯಾ ಸಂಪ್ರದಾಯದ ಪೆಂಪನ್ನು ಸಾರುವ ಅರ್ಥವಾದಗಳು. ಕೆಲವೊಮ್ಮೆ ಇವು ಅತಿರೇಕಕ್ಕೆ ಹೋಗಿ ಅರ್ಥವಿಲ್ಲದ ವಾದಗಳಾಗುವುದೂ ಇದೆ. ಈಗ ನಾವು ಕೇಳುವ ಕಾಣುವ ಯಕ್ಷಗಾನ ಬಹುಮಟ್ಟಿಗೆ ಕನ್ನಡನಾಡಿನ ಕರಾವಳಿ ಪ್ರದೇಶಕ್ಕೆ ಮಾತ್ರ ಸೀಮಿತ ವಾದರೂ ತೆಂಕುತಿಟ್ಟು, ಬಡಗುತಿಟ್ಟು ಮತ್ತು ಉತ್ತರದ ಬಡಗುತಿಟ್ಟು ಎಂಬ ಮೂರು ಹಂತಗಳಲ್ಲಿ ಇದರ ವ್ಯತ್ಯಾಸವನ್ನು ಗುರುತಿಸಲು ಸಾಧ್ಯ. ವೇಷಭೂಷಣ ಗಳು, ಮುಖವರ್ಣಿಕೆ, ಹಾಡುಗಾರಿಕೆ, ಅರ್ಥಗಾರಿಕೆ ಮುಂತಾದುವುಗಳಲ್ಲಿ ಈ ಮೂರು ಪದ್ಧತಿಯಲ್ಲಿ ಕೆಲವು ಭೇದಗಳಿವೆ. ಆದರೆ ಇದಕ್ಕೆ ಮೂಲವಾದ ಪ್ರಸಂಗ ಗಳು ಎಲ್ಲ ತಿಟ್ಟುಗಳಲ್ಲಿ ಒಂದೇ ಆಗಿವೆ. ಪ್ರಸಂಗಗಳ ರಚನೆ ನೋಡುವಾಗ, ಹಾಡಿಕೆಯ ಶೈಲಿ ಕೇಳಿದಾಗ ಇವು ಜಾನಪದ ಕಲೆಯಾಗಿಯೇ ಬೆಳೆದು ಬಂದಿರಬೇಕೆ ನ್ನುವುದು ಕಾಣುತ್ತದೆ. ನುರಿತ ಭಾಗವತರು ಈಗೀಗ ಶುದ್ಧ ದಕ್ಷಿಣಾದಿ ಶೈಲಿ ಯಲ್ಲೇ ಹಾಡುವವರು ಇಲ್ಲವೆಂದಲ್ಲ. ಅದು ಅವರವರ ಸಂಸ್ಕಾರ-ಅಭಿರುಚಿಗಳಿಗೆ ಸಂಬಂಧಿಸಿದ್ದು. ಹಾಗಾದರೆ ಪ್ರಸಂಗಗಳನ್ನು ಹಾಡುವ ಧಾಟಿ ಮೊದಲು ಹೇಗಿದ್ದಿರ ಬಹುದೆಂಬುದರ ಬಗೆಗೆ ಸ್ವಲ್ಪ ಹಿಂದಕ್ಕೆ ಕಣ್ಣು ಹಾಯಿಸುವುದರಿಂದಲೂ ಲಾಭವಿದೆ. ಯಕ್ಷಗ ಗಾನ ಪ್ರಸಂಗಗಳನ್ನು ಪಂಡಿತ ಕವಿಗಳೂ ಜಾನಪದ ಕವಿಗಳೂ ರಚಿಸಿ ದ್ದಾರೆ. ಹೇಗಿದ್ದರೂ ಅದು ಗೇಯಜಾತಿಯ ಜಾನಪದ ಕಾವ್ಯ, ವಿಮರ್ಶಕರು ಧ್ವನಿಕಾವ್ಯವೆಂದು ಹೇಳುವ ಜಾತಿಗೆ ಇದು ಸೇರುವುದಿಲ್ಲ, ಧ್ವನಿಕಾವ್ಯದಲ್ಲಿ ಶಬ್ದ-<noinclude></noinclude> nu04sgdx948z1i9dso4u1g0g58bsl77 319743 319741 2026-05-14T09:36:22Z Hariprasad Shetty10 7490 319743 proofread-page text/x-wiki <noinclude><pagequality level="1" user="PraneethGanesh" />{{Left|}}ಯಕ್ಷಗಾನ ಪ್ರಸಂಗಗಳ ಧಾಟಿ <br />{{Right|}}-ಎಂ. ರಾಜಗೋಪಾಲಾಚಾರ್ಯ.</noinclude> ಯಕ್ಷಗಾನದ ಹಾಡಿಕೆಯ ಸಂಪ್ರದಾಯ ಶಾಸ್ತ್ರೀಯವಾದ ಮಾರ್ಗಸಂಗೀತ, ವಾಗ್ಗೇಯಕಾರರೇ ಅವನ್ನು ರಚಿಸಿದವರು ಎಂಬ ವಾದವಿದೆ. ಅದು ಜಾನಪದ ಸಂಪ್ರದಾಯದಲ್ಲಿ ಬೆಳೆದು ಬಂದ ದೇಸಿ ಜಾತಿಗೆ ಸೇರಿದುದು ಎಂಬ ಮತ್ತೊಂದು ವಾದವೂ ಇದೆ. ಹೇಗೂ ಇರಲಿ, ಇದರದೇ ಆದ ಒಂದು ವಿಶಿಷ್ಟ ಶೈಲಿಯದೆ ಎಂದರ ಸಾಕು. ಭಾವ-ರಾಗ-ಲಯ ಶುದ್ಧವಾಗಿಲ್ಲದಿದ್ದರೆ ಅದು ಯಾವ ಸಂಪ್ರದಾಯವೇ ಇರಲಿ ಅದಕ್ಕೆ ಮಹತ್ತ್ವ ಬರುವುದಿಲ್ಲ. ವೈದಿಕಗಾನದ ವಿವರಣೆ ಯಲ್ಲಿ 'ವೈದಿಕಗಾನವೇ ಶ್ರೇಷ್ಠವೆಂದೂ, ಅದಕ್ಕೆ ಸಾಮರ್ಥ್ಯವಿಲ್ಲದವರು ಲೌಕಿಕ ಗಾನದಿಂದಲಾದರೂ ಪರಶಿವನನ್ನು ಆರಾಧಿಸಬಹುದೆಂದ, ಹೇಳಿದೆ. ಇವೆಲ್ಲ ಆಯಾ ಸಂಪ್ರದಾಯದ ಪೆಂಪನ್ನು ಸಾರುವ ಅರ್ಥವಾದಗಳು. ಕೆಲವೊಮ್ಮೆ ಇವು ಅತಿರೇಕಕ್ಕೆ ಹೋಗಿ ಅರ್ಥವಿಲ್ಲದ ವಾದಗಳಾಗುವುದೂ ಇದೆ. ಈಗ ನಾವು ಕೇಳುವ ಕಾಣುವ ಯಕ್ಷಗಾನ ಬಹುಮಟ್ಟಿಗೆ ಕನ್ನಡನಾಡಿನ ಕರಾವಳಿ ಪ್ರದೇಶಕ್ಕೆ ಮಾತ್ರ ಸೀಮಿತ ವಾದರೂ ತೆಂಕುತಿಟ್ಟು, ಬಡಗುತಿಟ್ಟು ಮತ್ತು ಉತ್ತರದ ಬಡಗುತಿಟ್ಟು ಎಂಬ ಮೂರು ಹಂತಗಳಲ್ಲಿ ಇದರ ವ್ಯತ್ಯಾಸವನ್ನು ಗುರುತಿಸಲು ಸಾಧ್ಯ. ವೇಷಭೂಷಣ ಗಳು, ಮುಖವರ್ಣಿಕೆ, ಹಾಡುಗಾರಿಕೆ, ಅರ್ಥಗಾರಿಕೆ ಮುಂತಾದುವುಗಳಲ್ಲಿ ಈ ಮೂರು ಪದ್ಧತಿಯಲ್ಲಿ ಕೆಲವು ಭೇದಗಳಿವೆ. ಆದರೆ ಇದಕ್ಕೆ ಮೂಲವಾದ ಪ್ರಸಂಗ ಗಳು ಎಲ್ಲ ತಿಟ್ಟುಗಳಲ್ಲಿ ಒಂದೇ ಆಗಿವೆ. ಪ್ರಸಂಗಗಳ ರಚನೆ ನೋಡುವಾಗ, ಹಾಡಿಕೆಯ ಶೈಲಿ ಕೇಳಿದಾಗ ಇವು ಜಾನಪದ ಕಲೆಯಾಗಿಯೇ ಬೆಳೆದು ಬಂದಿರಬೇಕೆ ನ್ನುವುದು ಕಾಣುತ್ತದೆ. ನುರಿತ ಭಾಗವತರು ಈಗೀಗ ಶುದ್ಧ ದಕ್ಷಿಣಾದಿ ಶೈಲಿ ಯಲ್ಲೇ ಹಾಡುವವರು ಇಲ್ಲವೆಂದಲ್ಲ. ಅದು ಅವರವರ ಸಂಸ್ಕಾರ-ಅಭಿರುಚಿಗಳಿಗೆ ಸಂಬಂಧಿಸಿದ್ದು. ಹಾಗಾದರೆ ಪ್ರಸಂಗಗಳನ್ನು ಹಾಡುವ ಧಾಟಿ ಮೊದಲು ಹೇಗಿದ್ದಿರ ಬಹುದೆಂಬುದರ ಬಗೆಗೆ ಸ್ವಲ್ಪ ಹಿಂದಕ್ಕೆ ಕಣ್ಣು ಹಾಯಿಸುವುದರಿಂದಲೂ ಲಾಭವಿದೆ. ಯಕ್ಷಗ ಗಾನ ಪ್ರಸಂಗಗಳನ್ನು ಪಂಡಿತ ಕವಿಗಳೂ ಜಾನಪದ ಕವಿಗಳೂ ರಚಿಸಿ ದ್ದಾರೆ. ಹೇಗಿದ್ದರೂ ಅದು ಗೇಯಜಾತಿಯ ಜಾನಪದ ಕಾವ್ಯ, ವಿಮರ್ಶಕರು ಧ್ವನಿಕಾವ್ಯವೆಂದು ಹೇಳುವ ಜಾತಿಗೆ ಇದು ಸೇರುವುದಿಲ್ಲ, ಧ್ವನಿಕಾವ್ಯದಲ್ಲಿ ಶಬ್ದ-<noinclude></noinclude> ettldg0l1oo4kphnx6zyqzerfp97xrl ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು 4 101285 319579 319501 2026-05-13T14:22:46Z A826 6806 319579 wikitext text/x-wiki {| class="wikitable sortable" style="text-align:center; width:100%; font-size:75%; color: blue;" |+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 35864<br><small>ದತ್ತಾಂಶ ಪಡೆದ ಸಮಯ: 2026-05-13 14:20:14 UTC / 2026-05-13 19:50:14 IST</small> ! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು |- | 1 || [[Special:Contributions/Pragathi. BH|Pragathi. BH]] || 0 || 0 || 8415 (8862) || 0 || 0 || 7983 || 112 (224) || 301 (903) || 8811 || '''8862''' |- | 2 || [[Special:Contributions/Shreelatha.Halemane|Shreelatha.Halemane]] || 0 || 0 || 6429 (8463) || 0 || 0 || 4890 || 780 (1560) || 695 (2085) || 6792 || '''8463''' |- | 3 || [[Special:Contributions/Sharanya K H|Sharanya K H]] || 0 || 0 || 3738 (3861) || 0 || 0 || 3626 || 115 (230) || 5 (15) || 3801 || '''3861''' |- | 4 || [[Special:Contributions/Shreesha Sharma|Shreesha Sharma]] || 0 || 0 || 3054 (3788) || 0 || 0 || 2097 || 317 (634) || 224 (672) || 3548 || '''3788''' |- | 5 || [[Special:Contributions/Ashwini Rai K|Ashwini Rai K]] || 0 || 0 || 528 (1254) || 0 || 0 || 70 || 63 (126) || 390 (1170) || 654 || '''1254''' |- | 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553''' |- | 7 || [[Special:Contributions/A826|A826]] || 10740 || 1 || 188 (234) || 24 || 0 || 4 || 3 (6) || 27 (81) || 10965 || '''256''' |- | 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221''' |- | 9 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150''' |- | 10 || [[Special:Contributions/Vikashegde|Vikashegde]] || 0 || 0 || 52 (109) || 0 || 0 || 0 || 16 (32) || 27 (81) || 64 || '''109''' |- | 11 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109''' |- | 12 || [[Special:Contributions/Hariprasad Shetty10|Hariprasad Shetty10]] || 0 || 0 || 28 (57) || 0 || 0 || 0 || 9 (18) || 11 (33) || 126 || '''57''' |- | 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44''' |- | 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31''' |- | 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7''' |- | 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4''' |- | 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3''' |- | 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1''' |- | 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1''' |- | 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1''' |- | 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1''' |- | 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1''' |- | 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |} <noinclude> <syntaxhighlight lang="python" line copy=1> #!/usr/bin/env python3 import requests import time from datetime import datetime, timezone, timedelta from collections import defaultdict import re START_DATE = datetime(2026, 4, 18, 18, 0, 1, tzinfo=timezone.utc) END_DATE = datetime(2026, 6, 3, 23, 59, 59, tzinfo=timezone.utc) TARGET_NAMESPACES = [0, 102, 104, 106, 114] NAMESPACE_NAMES = { 0: "ಮುಖ್ಯ", 102: "ಕರ್ತೃ", 104: "ಪುಟ", 106: "ಪರಿವಿಡಿ", 114: "ಅನುವಾದ" } # Scoring rules for namespace 104 SCORING_RULES = { 'page_creation': 1, # New page creation 'proofread': 2, # Edit summary contains "/* Proofread */" 'validation': 3, # Edit summary contains "/* Validated */" 'regular_edit': 1 # Regular edit in namespace 104 } WIKI_URL = "https://kn.wikisource.org/w/api.php" DATA_GENERATION_TIME = datetime.now(timezone.utc) # Convert to IST for display IST = timezone(timedelta(hours=5, minutes=30)) DATA_GENERATION_TIME_IST = DATA_GENERATION_TIME.astimezone(IST) START_DATE_IST = START_DATE.astimezone(IST) END_DATE_IST = END_DATE.astimezone(IST) # User to exclude from namespace 0 (set their points to zero) EXCLUDED_USER = "A826" EXCLUDED_NAMESPACE = 0 def get_namespace_name(ns): return NAMESPACE_NAMES.get(ns, f"Namespace {ns}") def fetch_all_edits(): user_namespace_stats = defaultdict(lambda: defaultdict(set)) # Track unique pages per namespace for scoring user_scores = defaultdict(lambda: defaultdict(int)) # Track scores by user and namespace user_edit_details = defaultdict(list) # Store edit details for debugging user_total_edits = defaultdict(int) # Track total number of edits per user (including duplicates) user_namespace_edit_counts = defaultdict(lambda: defaultdict(int)) # Track total edit counts per namespace # Track specific edit types in namespace 104 user_ns104_stats = defaultdict(lambda: { 'creations': 0, 'proofreads': 0, 'validations': 0, 'regular': 0, 'proofread_score': 0, # Track proofread score separately 'validation_score': 0 # Track validation score separately }) start_iso = START_DATE.strftime('%Y-%m-%dT%H:%M:%SZ') end_iso = END_DATE.strftime('%Y-%m-%dT%H:%M:%SZ') print("=" * 80) print("KANNADA WIKISOURCE EDIT SCORING TOOL") print("=" * 80) print(f"Start (UTC): {START_DATE.strftime('%Y-%m-%d %H:%M:%S')}") print(f"Start (IST): {START_DATE_IST.strftime('%Y-%m-%d %H:%M:%S')}") print(f"End (UTC): {END_DATE.strftime('%Y-%m-%d %H:%M:%S')}") print(f"End (IST): {END_DATE_IST.strftime('%Y-%m-%d %H:%M:%S')}") print(f"Generated (UTC): {DATA_GENERATION_TIME.strftime('%Y-%m-%d %H:%M:%S')}") print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}") print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}") print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})") print(f"Scoring in namespace 104 (ಪುಟ):") print(f" - Page creation: {SCORING_RULES['page_creation']} point") print(f" - Proofread (/* Proofread */): {SCORING_RULES['proofread']} points") print(f" - Validation (/* Validated */): {SCORING_RULES['validation']} points") print(f" - Regular edit: {SCORING_RULES['regular_edit']} point") print("-" * 80) params = { 'action': 'query', 'list': 'recentchanges', 'rcstart': end_iso, 'rcend': start_iso, 'rcnamespace': '|'.join(str(ns) for ns in TARGET_NAMESPACES), 'rcprop': 'title|user|timestamp|ids|comment|flags', 'rctype': 'edit|new', 'rclimit': '500', 'format': 'json' } total_edits = 0 excluded_edits = 0 continue_token = None page_count = 0 while True: if continue_token: params['rccontinue'] = continue_token try: response = requests.get(WIKI_URL, params=params, timeout=30) data = response.json() if 'query' not in data or 'recentchanges' not in data['query']: break changes = data['query']['recentchanges'] page_count += 1 print(f"Batch {page_count}... ({len(changes)} edits)") for change in changes: user = change.get('user', 'Unknown') title = change.get('title', '') ns = change.get('ns', 0) comment = change.get('comment', '') is_new = change.get('type') == 'new' # Increment total edit count for this user (every edit counts) user_total_edits[user] += 1 total_edits += 1 user_namespace_edit_counts[user][ns] += 1 # Set points to zero for A826 in namespace 0 if ns == EXCLUDED_NAMESPACE and user == EXCLUDED_USER: score = 0 # Track unique page for scoring purposes (still counts as 0 points) if title not in user_namespace_stats[user][ns]: user_namespace_stats[user][ns].add(title) user_scores[user][ns] += score excluded_edits += 1 continue if ns in TARGET_NAMESPACES: # Calculate score for this edit score = 0 if ns == 104: # Special scoring for namespace 104 if is_new: # Page creation score = SCORING_RULES['page_creation'] user_ns104_stats[user]['creations'] += 1 user_edit_details[user].append(f"Created page: {title} (+{score})") elif '/* Validated */' in comment: # Validation edit score = SCORING_RULES['validation'] user_ns104_stats[user]['validations'] += 1 user_ns104_stats[user]['validation_score'] += score user_edit_details[user].append(f"Validated: {title} (+{score})") elif '/* Proofread */' in comment: # Proofread edit score = SCORING_RULES['proofread'] user_ns104_stats[user]['proofreads'] += 1 user_ns104_stats[user]['proofread_score'] += score user_edit_details[user].append(f"Proofread: {title} (+{score})") else: # Regular edit score = SCORING_RULES['regular_edit'] user_ns104_stats[user]['regular'] += 1 user_edit_details[user].append(f"Regular edit: {title} (+{score})") else: # For other namespaces, count each unique page as 1 point score = 1 # Track unique pages per namespace for scoring if title not in user_namespace_stats[user][ns]: user_namespace_stats[user][ns].add(title) user_scores[user][ns] += score if total_edits % 500 == 0: print(f" Processed {total_edits} edits...") if 'continue' in data and 'rccontinue' in data['continue']: continue_token = data['continue']['rccontinue'] time.sleep(0.5) else: print("Finished fetching all edits!") break except Exception as e: print(f"Error: {e}") break print("-" * 80) print(f"Batches: {page_count}") print(f"Total edits fetched: {total_edits}") print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}") print(f"Users with edits: {len(user_total_edits)}") # Summary of total edits per user print("\nTotal edits per user (including duplicates):") print("-" * 60) for user in sorted(user_total_edits.items(), key=lambda x: x[1], reverse=True)[:20]: print(f" {user[0]}: {user[1]} edits") print("=" * 80) return (user_namespace_stats, user_scores, user_ns104_stats, user_total_edits, total_edits, user_namespace_edit_counts) def generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts): table_data = [] for user in user_total_edits.keys(): # Calculate total points (sum of scores from all namespaces) total_points = sum(user_scores[user].values()) # Get unique page counts per namespace ns_unique_pages = {} for ns in TARGET_NAMESPACES: ns_pages = user_namespace_stats[user].get(ns, set()) ns_unique_pages[ns] = len(ns_pages) # Get total edit counts per namespace (including duplicates) ns_total_edits = user_namespace_edit_counts.get(user, {}) # Get namespace 104 detailed stats ns104_stats = user_ns104_stats.get(user, { 'creations': 0, 'proofreads': 0, 'validations': 0, 'regular': 0, 'proofread_score': 0, 'validation_score': 0 }) table_data.append({ 'user': user, 'total_score': total_points, 'total_edits': user_total_edits.get(user, 0), 'ns0_edits': ns_total_edits.get(0, 0), # Show total edits, not unique pages 'ns102_edits': ns_total_edits.get(102, 0), 'ns104_unique': ns_unique_pages.get(104, 0), 'ns104_score': user_scores[user].get(104, 0), 'ns106_edits': ns_total_edits.get(106, 0), 'ns114_edits': ns_total_edits.get(114, 0), 'creations': ns104_stats['creations'], 'proofreads': ns104_stats['proofreads'], 'proofread_score': ns104_stats['proofread_score'], 'validations': ns104_stats['validations'], 'validation_score': ns104_stats['validation_score'] }) table_data = [row for row in table_data if row['total_score'] > 0 or row['total_edits'] > 0] table_data.sort(key=lambda x: x['total_score'], reverse=True) if not table_data: return "No edits found in the specified date range." wikitable = [] wikitable.append('{| class="wikitable sortable" style="text-align:center; width:100%; font-size:75%; color: blue;"') wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>') # Updated header with combined columns for proofread and validation header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು'] wikitable.append(' '.join(header_cols)) for idx, row in enumerate(table_data, start=1): user = row['user'] # Always use Special:Contributions link user_link = f"[[Special:Contributions/{user}|{user}]]" # Show both unique page count and weighted score for namespace 104 ns104_display = f"{row['ns104_unique']} ({row['ns104_score']})" # Combine proofread count and score into one column proofread_display = f"{row['proofreads']} ({row['proofread_score']})" # Combine validation count and score into one column validation_display = f"{row['validations']} ({row['validation_score']})" wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''") wikitable.append('|}') return '\n'.join(wikitable) def main(): (user_namespace_stats, user_scores, user_ns104_stats, user_total_edits, total_competition_edits, user_namespace_edit_counts) = fetch_all_edits() if not user_total_edits: print("\nNo data retrieved.") return output = generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts) print("\n" + "=" * 80) print("WIKITABLE OUTPUT (Copy this entire section):") print("=" * 80) print(output) print("=" * 80) if __name__ == "__main__": main() </syntaxhighlight> </noinclude> [[ವರ್ಗ:ವಿಕಿಸೋರ್ಸ್೨೦]] maiokfcetk3me2w2gao8ge3ecchpvuy ಪುಟ:ನಿತ್ಯ ನೇಮಾವಲಿ.pdf/೫೩ 104 101849 319587 306509 2026-05-13T14:28:12Z Shreesha Sharma 7840 319587 proofread-page text/x-wiki <noinclude><pagequality level="3" user="Shreesha Sharma" /></noinclude>{{center|'''ನಿತ್ಯನೇಮಾವಲಿ'''}} {{center|ದಾಸರೆಲ್ಲರು ಬಂದು ಧೂಳಿದರ್ಶನಗೊಂಡು|}} {{center|ಲೇಸಾಗಿ ತಾಳದಂಡಿಗೆಯ ಪಿಡಿದು|}} {{center|ಆದಿಕೇಶದ ನಿಮ್ಮ ಪುಣ್ಯನಾಮಸ್ಮರಣಿ}} {{center|ಉದಯದಲ್ಲೆದ್ದು ಪಾಡುತಿರ್ಪರು ಹರಿಯೇ}}||೩|| {{center|ಶರಣು ಸಿದ್ಧಿವಿನಾಯಕ ಶರಣು ವಿದ್ಯಾಪ್ರದಾಯಕ|}} {{center|ಶರಣು ಪಾರ್ವತಿತನಯ ಮೂರುತಿ ಶರಣುಮೂಷಕವಾಹನ||}} {{center|ನಿಟಿಲನೇತ್ರನ ವರದಪುತ್ರನೇ ನಾಗಭೂಷಣಪ್ರಿಯನೇ।}} {{center|ಕಟಕರಾಂಕಿತಕೋಮಲಾಂಗನೇ ಕನಕಕುಂಡಲಧಾರನೇ}}||೧|| {{center|ಬಟ್ಟುಮುತ್ತಿನ ಪದಕಧಾರನೇ ಬಾಹುಹಸ್ತಚತುಷ್ಟನೇ।}} {{center|ಇಟ್ಟ ತೋಳದಿ ಹೇಮಕಂಕಣ ಪಾಶಾಂಕುಶಧಾರನೇ}}||೨|| {{center|ಕುಕ್ಷಿಮಹಾಲಂಬೋದರನೇ ಇಕ್ಷುಚಾಪನ ಗೆಲಿದನೇ।}} {{center|ಪಕ್ಷಿವಾಹನನಾದ ಪುರಂದರವಿಠಲನ ನಿಜದಾಸನೇ}}||೩|| {{center|ಏಳು ಸದ್ಗುರುನಾಥ ಏಳು ಕರುಣಾನಿಧಿಯೇ}} {{center|ಏಳು ನೀ .ಉಮದೀಶ ಜಗದೀಶನಯ್ಯಾ}}||ಪಲ್ಲ||<noinclude></noinclude> eb1u57mxm11zopa49funircmwejj01s ಪುಟ:ನಿತ್ಯ ನೇಮಾವಲಿ.pdf/೬೪ 104 101866 319603 313687 2026-05-13T14:31:34Z Shreesha Sharma 7840 /* Validated */ 319603 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಉದಯರಾಗ}} ಅತ್ಯಲ್ಪವಾದ ನನ್ನ ಇಚ್ಛಾಪೂರ್ತಿಗೆ ಇಷ್ಟು ವಿಲಂಬವೇಕೆ? ಜಗತ್ತಿಗೆ ಸ್ವಾಮಿಯಾದವನೂ ಕೃಪಾಪೂರ್ಣನೂ ಆದ ನೀನೇ ನಿರ್ದಯನಾದರ, ಹೆತ್ತ ತಾಯಿಯೇ ವಿಷವಿತ್ತರೆ, ನಮ್ಮ ಗತಿ ಏನು? ನೀನೇ ಜಗದ್ರಕ್ಷಕನು, ದಾನಿಯು, ಜ್ಞಾನಿಯು, ದಯಾನಿಧಿಯು, ನಿನ್ನ ಹೊರತು ಬೇರೆ ಯಾರು ನಮ್ಮ ಮನೋರಥವನ್ನು ಈಡೇರಿಸಬಲ್ಲರು? ನೀನು ಆರ್ತರ ಬಂಧು ಎಂದು ಶರಣು ಬಂದಿದ್ದೇನೆ. ನನ್ನನ್ನು ರಕ್ಷಿಸು ಇಲ್ಲವೆ ನಿನ್ನ ಶಾಶ್ವತ ಕೀರ್ತಿಯನ್ನು ಬಿಟ್ಟುಕೊಡು, ದೀನಬಂಧುವೇ, ದಯಾಸಿಂಧುವೇ, ಸುಹೃದ್ವಂಧುವೇ; ಜಗತ್ಪತಿಯ, ಕರುಣಾಪೂರ್ಣನಾದ ಈಶನೇ, ಸಂಸಾರಸಮುದ್ರದಲ್ಲಿ ಮುಳುಗಿದ ನನ್ನನ್ನು ಉದ್ಧರಿಸು. ಚಂದ್ರನು ಚಾಂಡಾಲರ ಮನೆಯಲ್ಲಿಯೂ ಬೆಳದಿಂಗಳನ್ನು ಕೊಡುವಂತ, ಸಾಧುಗಳು ದುರ್ಜನರನ್ನೂ ದಯೆಯಿಂದ ನೋಡುತ್ತಾರ. ಲಕ್ಷ್ಮೀಕಾಂತನೇ, ನನ್ನಮೇಲೆ ಪ್ರಸನ್ನನಾಗು. ಹೇ ದಯಾಸಿಂಧುವೇ, ಮತ್ತೆ ಮತ್ತೆ ಪ್ರಸನ್ನನಾಗಿ ವರವನ್ನು ನೀಡು. ಶ್ರೀಮತ್ಪಂಚರಾತ್ರಾಗಮದಲ್ಲಿ ಹೇಳಿದಕರುಣಾರಸಸ್ತೋತ್ರವುಸಂಪೂರ್ಣವಾಯಿತು. {{center|೮ -ಪ್ರಾರ್ಥನೆ-}} ತಾಪತ್ರಯೇ ಹಾ ಬಹು ಗಾಂಜಲೋ ಮೀ| ಬುದ್ಧಿ ಸ್ಥಿರಾವೇ ನಚ ಶೀಘ್ರ ರಾಮೀ|| {{center|೬೩}}<noinclude></noinclude> rbgbgokjgcgg20izemy9d08h7n9p0er ಪುಟ:ನಿತ್ಯ ನೇಮಾವಲಿ.pdf/೭೦ 104 101882 319581 317198 2026-05-13T14:25:35Z Shreesha Sharma 7840 /* Validated */ 319581 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಪ್ರಾತಃಕಾಲದ ಭಜನೆ}} ಖಾಲೀ ಪಾಹೇ ಅಥವಾ ವರೀ। ಜಕಡೇ ಪಹಾವೇ ತಿಕಡೇ ಹರೀ||೨|| ಡೋಳೇ ಝಾಕೂನಿಯಾ ಪಾಹೇ। ಪುಢೇ ಗೋಪಾಳ ಉಭಾ ಆಹೇ||೩|| ಅಣುರೇಣು ಚಕ್ರಪಾಣಿ| ಖೂಣ ಝಾಲಿ ದಾಸೀ ಜನೀ||೪|| '''ಭಾವಾರ್ಥ''': ಎಡದಲ್ಲಿಯೂ ಬಲದಲ್ಲಿಯೂ ದೇವರ ರೂಪವು ಕಾಣುತ್ತದೆ. ಕೆಳಗೆನೋಡಲಿ, ಮೇಲೆನೋಡಲಿ, ಎಲ್ಲಿನೋಡಿದರೂ ಹರಿಯೇ ಕಾಣುತ್ತಾನೆ. ಕಣ್ಣುಮುಚ್ಚಿ ನೋಡಿದರೂ, ಎದುರಿಗೆ ಗೋಪಾಲನು ನಿಂತೇ ಇರುತ್ತಾನೆ. ಹೀಗೆ ನಾಮದೇವರ ದಾಸಿಯಾದ ಜನಾಬಾಯಿಗೆ, ಅಣುರೇಣುಗಳಲ್ಲಿಯೂ ಚಕ್ರಪಾಣಿಯು ಇರುವದರ ಗುರುತುಸಿಕ್ಕಿತು. {{center|೫}} ಹಡಬಡಲೇ ಪಾತಕ| ರಾಮನಾಮ ಘೇತಾ ಏಕ||೧|| ನಾಮ ಘೇತಾ ತತ್‌ ಕ್ಷಣೀ| ಚಿತ್ರೇ ಠೇವಿಲೀ ಲೇಖಣೀ||೨|| ಘೇವೂನಿ ಪೂಜೇಚಾ ಸಂಭಾರ| ಬ್ರಹ್ಮಾ ಏತಸೇ ಸಾಮೋರ||೩|| {{center|೬೯}}<noinclude></noinclude> 6w68sc2nno5vlsz43eivdknt0pbwbxd ಪುಟ:ನಿತ್ಯ ನೇಮಾವಲಿ.pdf/೭೧ 104 101884 319582 317044 2026-05-13T14:25:51Z Shreesha Sharma 7840 /* Validated */ 319582 proofread-page text/x-wiki <noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}} ನಾಮಾ ಮಣೇ ಹೇ ಜರೀ ಲಟಕೇ| ತರೀ ಛೇದಾವೇ ಮಸ್ತಕ||೪|| '''ಭಾವಾರ್ಥ''': ರಾಮನಾಮವೊಂದನ್ನು ತೆಗೆದುಕೊಳ್ಳುತ್ತಿದ್ದ ಹಾಗೆಯೇ ಪಾಪಗಳೆಲ್ಲ ದಿಕ್ಕೆಟ್ಟು ಹೋದವು. ನಾಮ ತೆಗೆದುಕೊಂಡ ತತ್‌ಕ್ಷಣವೇ ಚಿತ್ರಗುಪ್ತನು ಲೆಕ್ಕಣಿಕೆಯನ್ನು ಕೆಳಗೆ ಇಟ್ಟುಬಿಟ್ಟನು. ಬ್ರಹ್ಮನು ಸ್ವತಃ ಪೂಜಾಸಾಮಗ್ರಿಯನ್ನು ತೆಗೆದುಕೊಂಡು ಎದುರಿಗೆ ಬರುತ್ತಿದ್ದಾನೆ. ಈಮಾತು ಅಸತ್ಯವಾದರೆ ನನ್ನ ಶಿರವನ್ನು ಛೇದಿಸಿರಿ ಎಂದು ನಾಮದೇವರು ಹೇಳುತ್ತಾರೆ. ತಿಳಾಎವಢೇ ಬಾಂಧುನಿ ಘರ| ಆತ ರಾಹೇ ವಿಶ್ವಂಭರ||೧|| ತಿಳಾಇತುಕೇ ಹ ಬಂದುಲೇ| ತೇಣೇ ತ್ರಿಭುವನ ಕೋಂದಾಟಲೇ||೨|| ಹರಿಹರಾಂಚ್ಯಾ ಮೂರ್ತಿ| ಬಿಂದುಲ್ಯಾತ ಏತೀ ಜಾತೀ||೩|| ತುಕಾ ಮ್ಹಣೇ ಹೇ ಬಿಂದುಲೇ| ತೇಣೇ ತ್ರಿಭುವನ ಕೋಂದಾಟಲೇ||೪|| '''ಭಾವಾರ್ಥ''': ವಿಶ್ವವ್ಯಾಪಿ ಪರಮೇಶ್ವರನು ಎಳ್ಳುಕಾಳಿನಷ್ಟು ಮನೆಯನ್ನು ಕಟ್ಟಿ ಅದರಲ್ಲಿ ವಾಸಿಸುತ್ತಾನೆ. ಎಳ್ಳುಕಾಳಿನಷ್ಟು ಚಿಕ್ಕದಾಗಿರುವ ಈ ಬಿಂದುವು {{center|೭೦}}<noinclude></noinclude> 4ozc17guj4akj6n6hv788lpam64np3m ಪುಟ:ನಿತ್ಯ ನೇಮಾವಲಿ.pdf/೭೨ 104 101886 319583 317835 2026-05-13T14:26:06Z Shreesha Sharma 7840 /* Validated */ 319583 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಪ್ರಾತಃಕಾಲದ ಭಜನೆ}} ಮೂರೂ ಲೋಕಗಳನ್ನೇ ತುಂಬಿಕೊಂಡಿದೆ. ಹರಿಹರರ ರೂಪಗಳು ಈ ಬಿಂದುವಿನಲ್ಲಿ ಕಾಣಿಸಿ ಅಡಗುತ್ತವೆ. ಈ ಬಿಂದುವು ಮೂರೂ ಲೋಕಗಳನ್ನು ತುಂಬಿಕೊಂಡಿದೆ ಎಂದು ತುಕಾರಾಮರು ಮತ್ತೊಮ್ಮೆ ಹೇಳುತ್ತಾರೆ. {{center|೭}} ಆನಂದು ಈ ಆಜಿ ಆನಂದು ರೇ। ಸಬಾಹ್ಯ ಅಭ್ಯಂತರೀ ಅವಘಾ ಪರಮಾನಂದು ಈ ||೧|| ಏಕ ದೋನ ತೀನ ಜಾರ ಪಾಚ ಸಹಾ| ಇತಕೇ ವಿಚಾರುನಿ ಅಂತರ ಶೋಧನಿಯಾ ಪಹಾ || ೨ || ಸಾತವಾ ರಾಮ ಆಥವಾ ವೇಳೋವೇಳಾ ಬಾಪರಖುಮಾದೇವಿವರು ವಿಠಲ ಜವಳಾ||೩|| '''ಭಾವಾರ್ಥ''': ಇಂದು ಆನಂದವೇ ಆನಂದ; ಹೊರಗೆ ಒಳಗೆ ಎಲ್ಲೆಡೆಯಲ್ಲಿಯೂ ಪರಮಾನಂದವು ತುಂಬಿತುಳುಕುತ್ತದೆ. ಮನವು ನಿರ್ವಿಕಾರವಾಯಿತಂದರೆ ದೇವನು ದೂರ ಉಳಿಯನು. ಆದ್ದರಿಂದ ಅಂತರ್ನಿರೀಕ್ಷಣೆಯಿಂದ ಆರೂ ವಿಕಾರಗಳನ್ನು ದೂರಮಾಡಿರಿ. ಏಳನೆಯವನಾದ ದೇವನನ್ನು ಮೇಲಿಂದಮೇಲೆ ನೆನೆಯಿರಿ. ಆಗ ವಿಠಲನು ಹತ್ತಿರವೇ ಇರುತ್ತಾನೆ ಎಂದು ಜ್ಞಾನೇಶ್ವರರು ಹೇಳುತ್ತಾರೆ. {{center|೭೧}}<noinclude></noinclude> p5huuop7eh5ip6ypcc6w4pl8ic1fsv0 ಪುಟ:ನಿತ್ಯ ನೇಮಾವಲಿ.pdf/೭೩ 104 101888 319584 317836 2026-05-13T14:26:26Z Shreesha Sharma 7840 /* Validated */ 319584 proofread-page text/x-wiki <noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}} {{center|೮}} ಕೃಪಾಳು ಸಜ್ಜನ ತುಮ್ಹೀ ಸಂತಜನ| ಹೇಚಿ ಕೃಪಾದಾನ ದ್ಯಾವೇ ಮಜ||೧|| ಆಠವಣ ತುಮ್ಹೀ ದ್ಯಾವೀ ಪಾಂಡುರಂಗಾ| ದೇವಾ ಮಾಝೀ ಸಾಂಗಾ ಕಾಕುಳತೀ||೨|| ಅನಾಥ ಅಪರಾಧೀ ಪತಿತ ಆಗಳಾ| ಪರಿ ಪಾಯಾವೇಗಳಾ ನಕಾ ಕರೂ||೩|| ತುಕಾ ಮ್ಹಣೇ ತುಮ್ಹೀ ನಿರವಿಲ್ಯಾವರೀ| ಮಗ ಮಜ ಹರಿ ಉಪೇಕ್ಷ್ಮೀನಾ|||೪|| '''ಭಾವಾರ್ಥ''': ಕೃಪಾಳುವಾದ ಸಂತಸಜ್ಜನರೇ, ಇದನ್ನೇ ನನಗೆ ಕೃಪಾದಾನವಾಗಿ ಕೊಡಿರಿ. (ಏನೆಂದರೆ) ಪಾಂಡುರಂಗನಿಗೆ ನನ್ನ ನೆನಪುಕೊಡಿರಿ, ದೇವನಿಗೆ ನನ್ನ ಕಳಕಳಿಯ ಪ್ರಾರ್ಥನೆಯನ್ನು ಅರುಹಿರಿ, ನಾನು ಅನ್ಯಾಯವನ್ನೆಸಗಿದ್ದೇನೆ. ಅನಾಥನಾಗಿ ನಿಮಗೆ ಶರಣು ಬಂದಿದ್ದೇನೆ. ನಾನು ಅಪರಾಧಿಯೂ ಅತ್ಯಂತ ಪತಿತನೂ ಆಗಿದ್ದರೂ ನನ್ನನ್ನು ನಿಮ್ಮ ಚರಣಗಳಿಂದ ದೂರಮಾಡಬೇಡಿರಿ. ನೀವು ಪಾಂಡುರಂಗನಿಗೆ ನನ್ನಬಗ್ಗೆ ಹೇಳಿದಿರಾದರೆ ದೇವನು ನನ್ನನ ಉಪೇಕ್ಷಿಸನು ಎಂದು ತುಕಾರಾಮರೆನ್ನುತ್ತಾರೆ. {{center|೭೨}}<noinclude></noinclude> kcufkpaqttbxuz1axmrsr3ucqte7ym7 ಪುಟ:ನಿತ್ಯ ನೇಮಾವಲಿ.pdf/೭೪ 104 101890 319585 317838 2026-05-13T14:26:44Z Shreesha Sharma 7840 /* Validated */ 319585 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಪ್ರಾತಃಕಾಲದ ಭಜನೆ}} {{center|೯}} ನಾಮ ವಾಚೇ ಶ್ರವಣ್ ಕೀರ್ತಿ| ಪಾವೂಲೇ ಚಿತ್ತೀ ಸಮಾನ||೧|| ಕಾಳ ಸಾರ್ಥಕ ಕಲ್ಯಾ ತ್ಯಾನೀ| ಧರಿಲಾ 'ಮನೀ ವಿಠಲ||೨|| ಕೀರ್ತನಾಚಾ ಸಮಾರಂಭ| ನಿರ್ಧ್ವಂದ್ವ ಸರ್ವದಾ||೩|| ನಿಳಾ ಮಹ್ಣೇ ಸ್ವರೂಪಸಿದ್ಧಿ| ನಿತ್ಯ ಸಮಾಧಿ ಹರಿನಾಮ||೪|| ಭಾವಾರ್ಥ: ಮುಖದಲ್ಲಿ ಸದಾ ನಾಮವಿದ್ದು, ಕಿವಿಯಿಂದ ದೇವರ (ಗುರುಗಳ) ಕೀರ್ತಿ ಕೇಳುತ್ತ ಚಿತ್ತದಲ್ಲಿ ದೇವನ ಸಮಚರಣಗಳನ್ನು ಕಾಣುತ್ತಿದ್ದು, ಮನದಲ್ಲಿ ವಿಠಲನನ್ನು ಹಿಡಿದಿರುವವನು, ಜನ್ಮಸಾರ್ಥಕ ಮಾಡಿಕೊಳ್ಳುತ್ತಾನೆ. ಹರಿಯ ನಾಮಸ್ಮರಣೆಯಿಂದ ಯಾವಾಗಲೂ ಕೀರ್ತನದಲ್ಲಿ ನಿರ್ಧ್ವಂದ್ವ ಸ್ಥಿತಿಯಲ್ಲಿರುತ್ತಾನೆ. ಆತ್ಮಸ್ವರೂಪದ ಸಾಕ್ಷಾತ್ಕಾರಕ್ಕಾಗಿ ಯಾವಾಗಲೂ ಆ ಅನುಭವದಲ್ಲಿಯೇ ತಲ್ಲೀನನಾಗಿರುತ್ತಾನೆಂದು ನಿಳೋಬಾ ಹೇಳುತ್ತಾರೆ. {{center|೧೦}} ಅಮ್ಹೀ ವೈಕುಂಠವಾಸೀ ಆಲೋ ಯಾಚಿ ಕಾರಣಾಸೀ| ಬೊಲಿಲೇ ಜೇ ಋಷಿ| ಸಾಚ ಭಾವೇ ವರ್ತಾಯಾ ||೧|| {{center|೭೩}}<noinclude></noinclude> tmwk1i0bm8qs6n2mbga7eiz5cnivb5r ಪುಟ:ನಿತ್ಯ ನೇಮಾವಲಿ.pdf/೮೦ 104 101900 319588 317917 2026-05-13T14:28:31Z Shreesha Sharma 7840 /* Validated */ 319588 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೧)}} ತನು ಮನ ಧನವು ತನ್ನದಲ್ಲ! ನನವೀನ ಬಾಯಿಗೆ ನೆಚ್ಚಿಕಿಲ್ಲ!! ಘನ ಗುರುವಿನ ಪಾದವ ಪಿಡಿನೀ ಅನುಮಾನವ್ಯಾತಕೋ ಮಾಡೋ ಸ್ಮರಣೀ ||೧|| ಆಗ ಈಗ ಯಾವಾಗ ಸ್ಥಿರವಿಲ್ಲ! ಸಾಗಿ ಮಾಗಿ ಪೋಗುದು ಗಳಿಗೆಲ್ಲ|| ಭೋಗ ಭಾಗ್ಯದ ಭ್ರಮೆಯನು ಕಳೆ ನೀ ಯೋಗಿಯಾಗಿ ಮಾಡೋ ನೀ ಮನರಂಜನೀ||೨|| ಜಾತಿಗೋತ್ರನೀತಿಗೆ ತಿಳಿಯಲಿಲ್ಲ. ಮಾತುಮಾತಿನೊಳಗೆ ಹೋಯಿತಲ್ಲ!! ಸತ್ಯಬೋಧ ಗುರುವಿನ ಪಾದವ ಪಿಡಿ ನೀ ಸತ್ಯ ಚಿದಾನಂದನ ಮಾಡೋ ಸ್ಮರಣೀ ||೩|| {{center|೩}} ಪರಮಹಂಸ ಪ್ರಕಾಶಗೇ ಮಂಗಲ ಪರಂಜ್ಯೋತಿ ಪರಬ್ರಹ್ಮಗೇ ಮಂಗಲ ||ಪಲ್ಲ|| ನಿತ್ಯ ನಿರಂಜನ ನಿರ್ವಿಕಾರಗೇ ಮಂಗಲ ಸತ್ಯಸಾಧುರ ಸಹಕಾರಗೇ ಮಂಗಲ {{center|೭೯}}<noinclude></noinclude> ex4eqbxk6x3h6q3g50j3bqcyq037aaw ಪುಟ:ನಿತ್ಯ ನೇಮಾವಲಿ.pdf/೮೧ 104 101902 319589 317918 2026-05-13T14:28:44Z Shreesha Sharma 7840 /* Validated */ 319589 proofread-page text/x-wiki <noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}} ಮಿಥ್ಯಾಮಾಯಾ ಆಳಿದಾತಗೇ ಮಂಗಲ| ಮುಕ್ತಿ ಕೊಡುವಂಥ ಕರ್ತಾಗೇ ಮಂಗಲ||೧|| ಭೇದಾಭೇದ ಅಳಿದಾತಗೇ ಮಂಗಲ| ಭೇದವೇ ನಿಲುಕದ ಅಗಣಿತಗೇ ಮಂಗಲ।। ಮೇದಿನಿಯೊಳಗೇ ಜಗಭರಿತಗ ಮಂಗಲ ವಾದಿಜನರ ಸಂಹರ್ತಾಗೇ ಮಂಗಲ||೨|| ಇಂದುಧರ ವಿಶ್ವನಾಥಗೆ ಮಂಗಲ ಬಂದು ಲೋಕಾಪುರದಲ್ಲಿ ನಿಂತಾತಗೇ ಮಂಗಲ।। ತಂದೆ ತ್ರಿಮಲ್ಲ ಅನಂತಗೆ ಮಂಗಲ ಕಂದ ಜ್ಞಾನದೇವರ ದಾತಾಗೇ ಮಂಗಲ ||೩|| {{center|೪}} ಶ್ರೀಗುರುನಾಥ ಛಂದನನಾಥ ನಿರ್ಗುಣರೂಪ ಸದೋದಿತಶಾಂತ ಶ್ರೀಗುರುಸಹಜಾನಂದಮಹೇಶ ನಿರ್ಮಳನಿಶ್ಯಳಶುದ್ಧಪರೇಶ।। ಬೋಧಿತಬೋಧಪರಂಪರಬೋಧ ಸಚ್ಚಿತ್ತುಖಲಿತವಿಚಾರ! - ಜ್ಞಾನೇಶ್ವರಗುರುಸರ್ವಭರಿತ {{center|೮೦}}<noinclude></noinclude> i3q3zjd5gkq1g3mxcr8m1xhmnukwznv ಪುಟ:ನಿತ್ಯ ನೇಮಾವಲಿ.pdf/೮೨ 104 101903 319591 317919 2026-05-13T14:28:58Z Shreesha Sharma 7840 /* Validated */ 319591 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೧)}} ತಾರಯ ತಾರಯ ಮಹಾಗುರುನಾಥll ಪ್ರೇಮಳನಿಚ್ಚಳನಿರಾಮಯರೂಪ ನಿರ್ಮಲ ತಾರಕಪೂರ್ಣ ಪ್ರತಾಪ|| '''ಭಾವಾರ್ಥ''': ಶ್ರೀ ಗುರುನಾಥನೇ, ನಾದಬ್ರಹ್ಮನೇ, ನಿರ್ಗುಣರೂಪ ಸದೋದಿತ ಶಾಂತರೂಪನೇ, ಶ್ರೀಗುರುಸಹಜಾನಂದಮಹೇಶನೇ, ನಿರ್ಮಲ, ನಿಶ್ಚಲ, ಶುದ್ಧ ಪರಮಾತ್ಮನೇ, ಪರಂಪರಬೋಧ ಉಪದೇಶವನ್ನು ಬೋಧಿಸಿದವನೇ,ಅವ್ವತವಿಚಾರವನ್ನೂ ಸಚ್ಚಿತ್ಸುಖಕೊಡುವಜ್ಞಾನೇಶ್ವರಗುರುವಿನ ಸರ್ವ ಉಪದೇಶವನ್ನೂ ಬೋಧಿಸಿದವನೇ, ಪ್ರೇಮಮಯನಿಶ್ಚಲರಾಮಯ ರೂಪನೇ, ನನ್ನನ್ನು ಉದ್ದರಿಸೆಂದು ಮತ್ತೆಮತ್ತೆ ಕೇಳಿಕೊಳ್ಳುತ್ತಾನೆ. {{center|೫}} ಕಾಯೇನ ವಾಚಾ ಮನಸೇಂದ್ರಿಯೈರ್ವಾ| ಬುದ್ಧಾತ್ಮನಾ ವಾ ಪ್ರಕೃತಿಸ್ವಭಾವಾತ್ || ಕರೋಮಿ ಯದ್ಯತ್ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ।। ಅಚ್ಯುತಂ ಕೇಶವಂ ರಾಮನಾರಾಯಣಂ ಕೃಷ್ಣದಾಮೋದರಂ ವಾಸುದೇವ ಭಜೇ। ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ ಜಾನಕೀನಾಯಕಂ ರಾಮಚಂದ್ರ ಭಜೇ।। {{center|೮೧}}<noinclude></noinclude> che8kw1d6xfqhf2pu6su1zv9goy22a9 ಪುಟ:ನಿತ್ಯ ನೇಮಾವಲಿ.pdf/೮೩ 104 101905 319592 317920 2026-05-13T14:29:08Z Shreesha Sharma 7840 /* Validated */ 319592 proofread-page text/x-wiki <noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}} '''ಭಾವಾರ್ಥ''': ದೇಹದಿಂದಾಗಲಿ, ಮನಸ್ಸಿನಿಂದಾಗಲಿ, ಮಾತಿನಿಂದಾಗಲಿ, ಬುದ್ಧಿಯಿಂದಾಗಲಿ, ಇಂದ್ರಿಯಗಳಿಂದಾಗಲಿ, ಪ್ರಕೃತಿಗನುಗುಣವಾಗಿರುವ ಸಹಜ ಸ್ವಭಾವದಿಂದಾಗಲಿ, ಯಾವ ಕರ್ಮಗಳನ್ನು ಮಾಡುವನೋ ಅವೆಲ್ಲವುಗಳನ್ನು ಸರ್ವಶ್ರೇಷ್ಠನಾದ ನಾರಾಯಣನಿಗೆ ಅರ್ಪಿಸುತ್ತೇನೆ. ಅಚ್ಯುತ, ಕೇಶವ, ರಾಮನಾರಾಯಣ, ಕೃಷ್ಣದಾಮೋದರ ವಾಸುದೇವರನ್ನೂ, ಶ್ರೀಧರ ಮಾಧವ, ಗೋಪಿಕಾವಲ್ಲಭ, ಜಾನಕೀನಾಯಕ ' ರಾಮಚಂದ್ರನನ್ನೂ ಭಜಿಸುತ್ತೇನೆ. {{center|೬}} ಹರಿನಾರಾಯಣ ದುರಿತ ನಿವಾರಣ ಪರಮಾನಂದ ಸದಾಶಿವ ಶಂಕರ|| ಭಕ್ತಜನಪ್ರಿಯ ಪಂಕಜಲೋಚನ ನಾರಾಯಣ ತವ ದಾಸೋಹಂ!! ಹರಿನಾರಾಯಣ ಗುರುನಾರಾಯಣ ಘಡಿ ಘಡಿ ಜವೇ ಕರಿ ಪಾರಾಯಣ (ಹೀಗೆ ಮೂರು ಸಲ) '''ಭಾವಾರ್ಥ''': ಹರಿನಾರಾಯಣನೇ ದುರಿತಗಳನ್ನು ನಾಶಮಾಡುವವನೇ, ಪರಮಾನಂದ ಮೂರ್ತಿಯನಿಸಿದ ಶಿವಶಂಕರನೇ, ಭಕ್ತಜನ ಪ್ರಿಯನೇ, {{center|೮೨}}<noinclude></noinclude> m20a6vx62ymnchqto8k9bndq205jy4f ಪುಟ:ನಿತ್ಯ ನೇಮಾವಲಿ.pdf/೮೪ 104 101906 319593 317921 2026-05-13T14:29:20Z Shreesha Sharma 7840 /* Validated */ 319593 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೨)}} ಕಮಲಲೋಚನನೇ, ನಾರಾಯಣನೇ, ನಾನು ನಿನ್ನ ದಾಸನು; ಹೆಜ್ಜೆ ಹೆಜ್ಜೆಗೂ ಬಾಯಿಯಿಂದ “ಹರಿನಾರಾಯಣ, ಗುರುನಾರಾಯಣ' ಎಂದು ಪಾರಾಯಣ ಮಾಡುತ್ತೇನೆ.. {{center|'''ಮಧ್ಯಾಹ್ನದ ಭಜನೆ (ಭಾಗ-೨)'''}} {{center|'''ಪ್ರದಕ್ಷಿಣೆ'''}} ಧನ್ಯ ಹೋ ಪ್ರದಕ್ಷಿಣಾ ಸದ್ಗುರು ರಾಯಾಚಿ| ಧನ್ಯ ಧನ್ಯ ಹೋ ಪ್ರದಕ್ಷಿಣಾ ಶ್ರೀಗುರುರಾಯಾಚೀ। ಝಾಲೀ ತ್ವರಾ ಸುರವರಾ, ವಿಮಾನ ಉತರಾಯಾಚೀ || ದೃಂ || ಪದೋಪದೀ ಘಡಲ್ಯಾ ಅಪಾರ ಪುಣ್ಯಾಚ್ಯಾ ರಾಶಿ| ಸಕಳಹೀ ತೀರ್ಥ ಫಡಲಿ ಆಮ್ಹಾ ಆದಿಕರುನಿ ಕಾಶೀ ||೧|| ಕೋಟಿ ಬ್ರಹ್ಮಹತ್ಯಾ ಹರತೀ ಕರಿತಾ ದಂಡವತ ಲೋಟಾಂಗಣ ಘಾಲಿತಾ ಮೋಕ್ಷ ಲೋಳೇ ಪಾಯಾತ||೨|| ಮೃದಂಗ ಟಾಳ ಘೋಳ ಭಕ್ತ ಭಾವಾರ್ಥೇ ಗಾತೀ। ನಾಮಸಂಕೀರ್ತನೀ ನಿತ್ಯಾನಂದೇ ನಾಚತೀ ||೩|| ಗುರುಭಜನಾಚಾ ಮಹಿಮಾ ನ ಕಳೆ ನಿಗಮಾ ಆಗಮಾಸೀ ಅನುಭವ ಜೇ ಜಾಣತೀ ಈ ಗುರುಪದಿಚೇ ಅಭಿಲಾಷೀ || ೪ || {{center|೮೩}}<noinclude></noinclude> 8x7fn2buqz1wn2ghe686xecysl2tsnm ಪುಟ:ನಿತ್ಯ ನೇಮಾವಲಿ.pdf/೮೫ 104 101907 319594 317922 2026-05-13T14:29:30Z Shreesha Sharma 7840 /* Validated */ 319594 proofread-page text/x-wiki <noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}} ಪ್ರದಕ್ಷಿಣಾ ಕರೂನಿ ದೇಹ ಭಾವೇ ವಾಹಿಲಾ ಶ್ರೀರಂಗಾತ್ಮದ ವಿಠಲ ಪುಢೇ ಉಭಾ ರಾಹಿಲಾ ||೫|| '''ಭಾವಾರ್ಥ''': ಸದ್ಗುರುವಿಗೆ ಪ್ರದಕ್ಷಿಣೆಯನ್ನು ಹಾಕಿ ಧನ್ಯರಾದವು. ಇಂಥ ಧನ್ಯತೆಯನ್ನು ಪಡೆಯಲಿಕ್ಕೆ ದೇವತೆಗಳೂ ವಿಮಾನದಿಂದ ಇಳಿದುಬರಲು ಆತುರರಾಗಿರುತ್ತಾರೆ. ಈ ಪ್ರದಕ್ಷಿಣೆಯಲ್ಲಿ ಹೆಜ್ಜೆಹೆಜ್ಜೆಗೂ ಅಪಾರ ಪುಣ್ಯದರಾಶಿಯು ಲಭಿಸಿತು. ಕಾಶಿಯಿಂದ ಮೊದಲು ಮಾಡಿ ಎಲ್ಲ ಕ್ಷೇತ್ರಗಳ ತೀರ್ಥಯಾತ್ರೆಯಾದಂತಾಯಿತು. ಸಾಷ್ಟಾಂಗನಮಸ್ಕಾರ ಮಾಡುವುದರಿಂದ ಕೋಟಿಬ್ರಹ್ಮಹತ್ಯೆಯ ಪಾಪವೂ ಕಳೆದುಹೋಗುತ್ತದೆ. ಉರುಳುಸೇವೆ ಮಾಡುವವರ ಕಾಲಿನಡಿಯಲ್ಲಿಯೇ ಮೋಕ್ಷ ಹೊರಳಾಡುತ್ತದೆ. ಭಕ್ತರು ತಾಳಮೃದಂಗಗಳ ಮೇಳದೊಂದಿಗೆ ಭಕ್ತಿಯಿಂದ ಹಾಡುತ್ತಾರೆ. ನಾಮಸಂಕೀರ್ತನೆಮಾಡಿ ನಿತ್ಯವೂ ಆನಂದದಿಂದ ಕುಣಿಯುತ್ತಾರೆ. ಗುರುಭಜನೆಯ ಮಹಿಮೆಯನ್ನು ಆಗಮನಿಗಮಗಳೂ ಅರಿಯವು. ಸಾಕ್ಷಾತ್ಕಾರದ ಅನುಭವಪಡೆದು ಅನುಭವವೇನೆಂಬುದನ್ನು ಅರಿತವರು ಗುರುಚರಣಸಾನಿಧ್ಯವನ್ನು ಬಯಸುತ್ತಾರೆ. ಭಕ್ತಿಭಾವದಿಂದ ಪ್ರದಕ್ಷಿಣೆಹಾಕಿ ತಮ್ಮ ದೇಹವನ್ನು ಸಮರ್ಪಿಸಿದಾಗ ಶ್ರೀರಂಗಾತ್ಮಜ ವಿಠಲನು ಎದುರಿಗೆ ಬಂದುನಿಂತನು. (ಪ್ರದಕ್ಷಿಣೆಯಲ್ಲಿ ಪಂಢರಪುರದ ಯಾತ್ರೆಯಾಗುತ್ತದೆ. ದೇಹವೇ ಫಂಡರಪುರ; ಆತ್ಮನೇ ವಿಠಲ). {{center|೮೪}}<noinclude></noinclude> ix5e1z4696dr5nnwk6tva4wbo53192k ಪುಟ:ನಿತ್ಯ ನೇಮಾವಲಿ.pdf/೮೬ 104 101909 319595 317923 2026-05-13T14:29:42Z Shreesha Sharma 7840 /* Validated */ 319595 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೨)}} ಅಲಕ್ಷ ಲಕ್ಷುನಿ ಪಾಹೇ ನಿಜವಸ್ತು| ಪರಾತ್ಪರ ಚಿನ್ಮಯ ಬ್ರಹ್ಮರೂಪ ತೇಜ ಪ್ರತ್ಯಕ್ಷ ಆಹೇ।। ಗುರುಪದ ವಂದುನಿ ಆಧಿ ಪಾಹಿ ತೂ| ಹೃದಯಾಂತರಿ ಶೋಧುನಿ ಮನಾತ ಧೂರ್ತ ಕರೀ ಬೋಧುನೀ| ಕಾಮಕ್ರೋಧ ಮದಮತ್ಸರ ಅಂಗೀ। ದಂಭಾಹಂಕಾರ ಜಿರವುನೀ ದೈತಕಲ್ಪನಾ ಮಾರ ತ್ಯಾಗುನೀ| ಏಕಾಗ್ರಮನ ಸ್ವಸ್ಥ ಕರೋನೀ| ಬೈಸ ಪದ್ಮಾಸನೀ ಮುದ್ರಾ ಲಾವ ಆತ್ಮಭಾಷಣೇ || ದೃಷ್ಟಿ ಆತ ದೃಷ್ಟಿ ಸುರಂಗ |ಕರೂನಿಯಾ ಸಮದೃಷ್ಟಿ ಮಗ|| ನಾನಾ ತರೇಚೇ ರಂಗ ಸುರಂಗ ರಕ್ತ ಶ್ವೇತವತ ಆದೇ ಪುಢ ನೀಲವರ್ಣ ತೇಜ ಜಾಣಾವೇ || ೧ || ನೀಲವರ್ಣ ಈ ಬಿಂಬಾಕಾಶೀ| ಚೈತನ್ಯಾಚೀ ಮೂಸ ತ್ಯಾಮಧ್ಯೆ ವಸ್ತು ಜಡಲೀ ಅಸೇ|| ತ್ರಿಕುಟ ಭೇದುನೀ ಉಲಟ ಜಾತಾ |ಮೀನ ಮಾರ್ಗ ಧಸ ರೂಪ ಅರೂಪ ಹೂವೂನೀ ಪ್ರವೇಶ|| ಉನ್ಮನವೂನಿಯಾ ಬ್ರಹ್ಮರುದ್ಧಿ| ಸಮಾಧಿ ಲಾವು ಬಸ್‌ ತೇಥ ಕಾಳ ಕದಾ ನಾ ಧಸೇ।| ಸಿದ್ಧ ಪುರುಷ ತೋ ಯೋಗ ಸಾಧುನೀತಿ| ತಾಪಾ ಸವಿತೋ ಕರೂನ ಹರಣ| ಆಪುಲಾ ಆಪಣ ರಾಹೇ ನಿಮಗ್ನ| ತ್ಯಾಲಾಚಿ ಪ್ರಾಪ್ತಿ ಹೋಯ ಚರಾಚರ ಅವಚಿ ಬ್ರಹ್ಮ ಆಹೇ || ೨ || ಸದ್ಗುರುಕೃಪಾ ಜಖಮ ಜಿನ್ಹಾರೀ |ಜ್ಯಾಲಾ ಘಾವ ಲಾಗೇಲ ತೋಚಿ ಘಾಯಾಳಗತಿ ಘುಮತೋ।। ಬೀಜಮಂತ್ರ ಹಾ ಜಪ ಗಾಯತ್ರಿ|| ಅಪ್ರಹರ ಯೋಜಿತೋ ಸಾಧನ ಘಡಿ ಪಳ ಘಡಿ ಸಾಧಿತೋ|| {{center|೮೫}}<noinclude></noinclude> 9e3gpa01bzcedop3npd7d4ymhlgxv8s ಪುಟ:ನಿತ್ಯ ನೇಮಾವಲಿ.pdf/೮೭ 104 101910 319596 319378 2026-05-13T14:29:52Z Shreesha Sharma 7840 /* Validated */ 319596 proofread-page text/x-wiki <noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}} ಅಹಂಭಾವೇ ಮೀಪಣ ತನಧನ |ಗುರುಚರಣೀ ಅರ್ಪಿತೋ ತೋ ಹಾ ಮೂಳ ಪಿತ್ಯಾ ಇಚ್ಛಿತೋ! ಅಖಂಡ ತನ್ಮಯ ತ್ಯಾತ ಲುಬ್ಬುನೀ! ನಿಜವಸ್ತು ಲಕ್ಷಿತೋ ಲೋಚನೀ| ನಿರಪೇಕ್ಷ ತೋ ನಿರ್ಮಳ ಪ್ರಾಣಿ |ಜಗಾತ ವೇಡಾ ರಾಹೇ ಅಂತರೀ ಜ್ಞಾನಬೋಧರಸ ಪಿಯೇ || ೩ || ಸದ್ಗುರುಕೃಪಾ ಉತ್ತಮ ಜ್ಯಾಸೀ| ಸಹಜ ಹಾತಾಸೀ ಆಲೀ ತ್ಯಾಲಾ ನಿಜವಸ್ತು ಲಾಧಲೀ ||ಪಾಹತಾ ಪಾಹತಾ ಆತ್ಮಜ್ಯೋತ ಹೀ|ವೈರಾಗ್ಯ ಪಾಜಳಲೀ ಚಿನ್ಮಯ ವಸ್ತು ಝಗಮಗಲೀ!! ಶಾಹಾಲಿಂಗ ಸಂತ ಪ್ರಮಾಣ ಧನ್ಯ ಗುರುಮಾವುಲೀ ಆನಂದೇ ಹರಿವರ ಕೃಪಾ ಕೇಲಿ| ಕವನಕಟಾಕ್ಷ ಕರಿ ಸಿದ್ಧಾಂತ |ಗಣಪತಿ ಭೀಮಸೇನ ಗಾತೂ ಸಭೇತ |ಗುರುಪುತ್ರ ತೋ ಜ್ಞಾನವಂತು| ಐಕುನಿ ತಲ್ಲಿನ ಹೋಯೇ ಲುಂಗರಾ ವ್ಯರ್ಥ ಚಾವಟಿ ರಾಹೇ || ೪ || '''ಭಾವಾರ್ಥ''': ನಾಮಸಾಧನೆ ಮಾಡದೆ ಇದ್ದವರಿಗೆ ಯಾವುದು ಕಣ್ಣಿಗೆ ಕಾಣುವುದಿಲ್ಲವೋ, ಸಾಧನೆ ಮಾಡುವುದರಿಂದ ಯಾವುದು ಕಾಣುವುದೋ, ಅಂಥ ನಿಜವಸ್ತುವನ್ನು ಎಂದರೆ ಪರಬ್ರಹ್ಮನನ್ನು ನೋಡು. ಹೀಗೆ ನೋಡಿದಾಗ ಅನುಭವಕ್ಕೆ ಬರುವ, ಚಿನ್ಮಯರೂಪ ಬ್ರಹ್ಮವು ಪ್ರಕಾಶಮಯವು ಎಂದು ತಿಳಿಯುವದು. ಗುರುಚರಣಕ್ಕೆ ಮದಿಸಿ, ಹೃದಯಾಂತರಾಳದಲ್ಲಿ ಶೋಧಿಸು. ಸದಾ ದಕ್ಷನಾಗಿರುವಂತೆ ಮನಸ್ಸಿಗೆ ಬೋಧಿಸು. ಕಾಮ-ಕ್ರೋಧ, ಮದ-ಮತ್ಸರ, ದಂಭ-ಅಹಂಕಾರಗಳನ್ನು ಬಿಡು. ದೈತಕಲ್ಪನೆಯನ್ನು ಮನಸ್ಸಿನಿಂದ ದೂರಮಾಡು, ಏಕಾಗ್ರಚಿತ್ತದಿಂದ ಮನಸ್ಸನ್ನು ಸ್ಥಿರಗೊಳಿಸು,<noinclude></noinclude> qos4gil1l0v2vifamxpebra4teq4kpd ಪುಟ:ನಿತ್ಯ ನೇಮಾವಲಿ.pdf/೪೪ 104 101911 319604 313600 2026-05-13T14:31:52Z Shreesha Sharma 7840 /* Validated */ 319604 proofread-page text/x-wiki <noinclude><pagequality level="4" user="Shreesha Sharma" /></noinclude>{{center|'''ಪ್ರಸ್ತಾವನೆ'''}} ಲೋಪವಾಗಿದೆ. ಹೀಗಿದ್ದರೂ ಬೇರೀಜು ಮೇಲೆ ಹೇಳಿದ ಸಂಖ್ಯೆಯನ್ನು ಮೀರುತ್ತದೆ. ಈಗ ನಮ್ಮ ಅಭಂಗದಲ್ಲಿ ಹೇಳಿದಂತ ಸಂಖ್ಯೆಯ ಬೇರೀಜು ಐದುಕೋಟಿ, ಒಂದುಲಕ್ಷ, ಮೂವತ್ತುನಾಲ್ಕು ಸಾವಿರಕ್ಕೆ ಸರಿಯಾಗಿರುತ್ತದೆ:- {{center|೧೨,೦೦೦ ಸಂಹಿತ}}{{center|೧೦,೦೦೦ ಉಪಗ್ರಂಥ (ಅವತಾರಸಹಸ್ರ) ದಶಸಹಸ್ರ}} {{center|೧೦೦,೦೦,೦೦೦ ಭಕ್ತಿ}} {{center|೧೦೦,೦೦,೦೦೦ ಜ್ನಾನ}} {{center|೭೫,೦೦,೦೦೦ ವೈರಾಗ್ಯ}} {{center|೭೫,೦೦,೦೦೦ ನಾಮ}} {{center|೬೦,೦೦,೦೦೦ ಬೋಧ}} {{center|೬೦,೦೦,೦೦೦ ರೂಪ}} {{center|೩೦,೦೦,೦೦೦ ಕರುಣಾ}} {{center|೧,೦೦,೦೦೦ ಕರ್ಮಕಾಂಡ}} {{center|೧೨೦೦೦ ಸ್ವಾನುಭವ}} — ೫,೦೧,೩೪,೦೦೦ {{center|೪೩}}<noinclude></noinclude> 3hd6fctradv3zq2s9swfd7wfupfi482 ಪುಟ:ನಿತ್ಯ ನೇಮಾವಲಿ.pdf/೮೮ 104 101912 319597 319379 2026-05-13T14:30:03Z Shreesha Sharma 7840 /* Validated */ 319597 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೨)}} ಪದ್ಮಾಸನದಲ್ಲಿ ಕುಳಿತು ಆತ್ಮನೊಡನೆ ಮಾತನಾಡು. ಹೀಗೆ ಮನಸ್ಸು ಅಂತರ್ಮುಖವಾದಾಗ ಬಗೆಬಗೆಯ ಬಣ್ಣಗಳು ಕಾಣಬಹುದು. ಅವು ಕೆಂಪು, ಬಿಳಿ, ನೀಲವರ್ಣದ ತೇಜವು ಎಂದು ತಿಳಿ, ನೀಲವರ್ಣದ ಬಿಂಬಾಕಾಶದಲ್ಲಿ ಕಾಂಬುವ ನೀಲವರ್ಣದ ಚುಕ್ಕಿಯ ಚೈತನ್ಯಮಯ ಮೂಸವು (ಲೋಹ ಕರಗಿಸುವ ಬಟ್ಟಲು), ಅದರಲ್ಲಿಯೇ ವಸ್ತುವು ತುಂಬಿರುವುದು. ಬ್ರಹ್ಮರಂಧ್ರದಿಂದ ಪ್ರಾಣವು ಈಶ್ವರೋನ್ಮುಖವಾಗಿ ಮೇಲಕ್ಕೆ ತ್ರಿಕೂಟವನ್ನು ಭೇದಿಸಿ ಹೋಗುವಾಗ, ಮೀನವು ಪ್ರವಾಹದ ವಿರುದ್ಧ ಹೋಗುವಂತೆ ಕಷ್ಟವಾಗುತ್ತದೆ. ಆಗ ರೂಪವು . ನಾಶವಾಗಿ, ಅರೂಪವಾಗುತ್ತದೆ. ಉನ್ಮನಿಸ್ಥಿತಿಯಲ್ಲಿ ಬ್ರಹ್ಮರಂಧ್ರದಲ್ಲಿ ಸಮಾಧಿ ಹಚ್ಚಿಕುಳಿತರೆ, ಮಾನವನು ದೇವನಲ್ಲಿ ಏಕರೂಪನಾಗುವನು. ಮೃತ್ಯುವು ಅವನ ಹತ್ತಿರ ಬರಲು ಅಂಜುವುದು. ಹೀಗೆ ರಾಜಯೋಗವನ್ನು ಸಾಧಿಸಿ, ತ್ರಿವಿಧ ತಾಪಗಳಿಂದ ರಹಿತವಾದ ಶ್ರೇಷ್ಠಸ್ಥಿತಿಯನ್ನು ಮುಟ್ಟುವನು. ಚರಾಚರವಲ್ಲವೂ ಬ್ರಹ್ಮಮಯವಾಗಿದೆಯೆಂಬ ಅರಿವಾಗುವುದು. ಯಾರಿಗೆ ಪ್ರಪಂಚದ ಯಾತನೆಯ ಪೆಟ್ಟಿನಿಂದ ಸುತ್ತಿಸುತ್ತಿ ಹೊರಳಾಡಬೇಕಾಗುತ್ತದೆಯೋ, ಅಂಥವರಿಗೆ ಸದ್ಗುರುಕೃಪೆಯಿಂದ ನೋವಿನ ನಿವಾರಣೆಯಾಗುವದು. ಎಂಟೂ ಪ್ರಹರಗಳಲ್ಲಿ ಗಾಯತ್ರೀಮಂತ್ರವನ್ನು ಜಪಿಸುವನು. ಕ್ಷಣಕ್ಷಣವೂ ಬಿಡದೆ ಅಖಂಡ ನಾಮಸ್ಮರಣೆಯನ್ನು ಮಾಡುವನು. ಅಹಂಕಾರವನ್ನೂ, ತನುಮನಧನವನ್ನೂ, ತನ್ನನ್ನೂ, ಗುರುಗಳಿಗೆ ಸಮರ್ಪಿಸಿಕೊಳ್ಳುವನು. {{center|೮೭}}<noinclude></noinclude> sdhgrpd91l7nwngy9qps42ttemct4zz ಪುಟ:ನಿತ್ಯ ನೇಮಾವಲಿ.pdf/೧೦೦ 104 101918 319701 284291 2026-05-14T06:51:56Z Shreesha Sharma 7840 /* Proofread */ 319701 proofread-page text/x-wiki <noinclude><pagequality level="3" user="Shreesha Sharma" /></noinclude>{{center|ರಾತ್ರಿ ಭಜನೆ}} ಸೋಮವಾರ : ಸಾಂಬ ಸದಾಶಿವ ಸಾಂಬ ಸದಾಶಿವ {{gap}}{{gap}}ಸಾಂಬ ಸದಾಶಿವ ಸಾಂಬ (ಬೇಗ ೨ ಸಲ) {{gap}}{{gap}}ಸಾಂಬ ಸದಾಶಿವ ಸಾಂಬ (ಮೇಲ್ಪನಿಯಲ್ಲಿ ೨ ಸಲ) {{gap}}{{gap}}ಸಾಂಬ ಸದಾಶಿವ, ಸಾಂಬ ಸದಾಶಿವ, ಸಾಂಬ {{gap}}{{gap}}ಸದಾಶಿವ ಸಾಂಬ (ಮೊದಲಿನಂತ ೨ ಸಲ) ಮಂಗಳವಾರ : ಸಾಂಬ ಸದಾಶಿವ ಸಾಂಬ ಸದಾಶಿವ {{gap}}{{gap}}ಸಾಂಬ ಸದಾಶಿವ, ಸಾಂಬ ಹರ ಹರ {{Right|(ಸಾವಕಾಶ ೨ ಸಲ)}} ಸಾಂಬ ಸದಾಶಿವ, ಸಾಂಬ ಸದಾಶಿವ, ಸಾಂಬ ಸದಾಶಿವ, ಸಾಂಬ ಹರ ಹರ (೨ ಸಲ ಬೇಗ, ಪುನಃ ೨ ಸಲ ಮೆಲ್ಲಗೆ) ಬುಧವಾರ: ಹರಿ ಹರಿ ವಿಠಲ, ರಖುಮಾಯಿ ವಿಠೋಬಾ (ಕೆಳಗಿನ ಸ್ವರದಲ್ಲಿ ೩ ಸಲ, ಉಚ್ಚಸ್ವರದಲ್ಲಿ ೩ ಸಲ, ಮೊದಲಿನಂತ ೩ ಸಲ) {{center|೯೯}}<noinclude></noinclude> n178aqu2iffi65dfi3y1de1omhs46wm 319708 319701 2026-05-14T06:54:25Z Shreelatha.Halemane 7642 /* Validated */ 319708 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ರಾತ್ರಿ ಭಜನೆ}} ಸೋಮವಾರ : ಸಾಂಬ ಸದಾಶಿವ ಸಾಂಬ ಸದಾಶಿವ {{gap}}{{gap}}ಸಾಂಬ ಸದಾಶಿವ ಸಾಂಬ (ಬೇಗ ೨ ಸಲ) {{gap}}{{gap}}ಸಾಂಬ ಸದಾಶಿವ ಸಾಂಬ (ಮೇಲ್ಪನಿಯಲ್ಲಿ ೨ ಸಲ) {{gap}}{{gap}}ಸಾಂಬ ಸದಾಶಿವ, ಸಾಂಬ ಸದಾಶಿವ, ಸಾಂಬ {{gap}}{{gap}}ಸದಾಶಿವ ಸಾಂಬ (ಮೊದಲಿನಂತ ೨ ಸಲ) ಮಂಗಳವಾರ : ಸಾಂಬ ಸದಾಶಿವ ಸಾಂಬ ಸದಾಶಿವ {{gap}}{{gap}}ಸಾಂಬ ಸದಾಶಿವ, ಸಾಂಬ ಹರ ಹರ {{Right|(ಸಾವಕಾಶ ೨ ಸಲ)}} ಸಾಂಬ ಸದಾಶಿವ, ಸಾಂಬ ಸದಾಶಿವ, ಸಾಂಬ ಸದಾಶಿವ, ಸಾಂಬ ಹರ ಹರ (೨ ಸಲ ಬೇಗ, ಪುನಃ ೨ ಸಲ ಮೆಲ್ಲಗೆ) ಬುಧವಾರ: ಹರಿ ಹರಿ ವಿಠಲ, ರಖುಮಾಯಿ ವಿಠೋಬಾ (ಕೆಳಗಿನ ಸ್ವರದಲ್ಲಿ ೩ ಸಲ, ಉಚ್ಚಸ್ವರದಲ್ಲಿ ೩ ಸಲ, ಮೊದಲಿನಂತ ೩ ಸಲ) {{center|೯೯}}<noinclude></noinclude> f81m30xfueg8c4736f3ldc2lrixuzlg ಪುಟ:ನಿತ್ಯ ನೇಮಾವಲಿ.pdf/೮೯ 104 101920 319598 319380 2026-05-13T14:30:15Z Shreesha Sharma 7840 /* Validated */ 319598 proofread-page text/x-wiki <noinclude><pagequality level="4" user="Shreesha Sharma" /></noinclude>ನಿತ್ಯನೇಮಾವಲಿ ಮೂಲಮನೆಯಾದ ಪರಮೇಶ್ವರನ ಕಡೆ ಹೋಗಲು ಬಯಸುವನು. ನಿರಪೇಕ್ಷಿಯಾದ, ನಿರ್ಮಲನಾದ ಅವನು ಪ್ರಪಂಚದ ಕಣ್ಣಿಗೆ ಹುಚ್ಚನಂತೆ ಕಾಣುತ್ತಾನೆ. ಆದರ ಆಂತರ್ಯದಲ್ಲಿ ಜ್ಞಾನಬೋಧಾಮೃತವನ್ನು ಸವಿಯುತ್ತಾನೆ. ಯಾವನಿಗೆ ಸದ್ಗುರುವಿನಕೃಪೆಯು ಉತ್ತಮವಾಗಿ, ಸಹಜವಾಗಿ ಆಗಿರುವುದೋ ಅವನು ಸಾಕ್ಷಾತ್ಕಾರ ಪಡೆದಿರುತ್ತಾನೆ. ನೋಡನೋಡುತ್ತಲೇ ವೈರಾಗ್ಯದ ಬಲದಿಂದ ಅವನೆದುರಿಗೆ ಆತ್ಮಜ್ಯೋತಿಯು ಬೆಳಗಿತು. ಶಹಾಲಿಂಗರಂಥ ಸಂತರು ಪ್ರೇಮಾದರದಿಂದ ಗುರುಗಳ ಸ್ತವನಮಾಡಿ ಧನ್ಯರಾದರೆಂದು ಗಣಪತಿಭೀಮಸೇನರು ಹೇಳುತ್ತಾರೆ. ಅದರಿಂದ ಜ್ಞಾನಿಗಳು ಹರ್ಷಿತರಾಗುತ್ತಾರೆ. ಆದರೆ ವಿಷಯಾಸಕ್ತರು ಕುಚೇಷ್ಟೆಯನ್ನೇ ಮಾಡುತ್ತಾರೆ. 2 ಕಾಯ ಸಾಂಗೂ ಯಾ ಸಮರ್ಥಾಂಚಿ ಥೋರೀ ಭಜಕಾಸೀ ಆಪಣಾಐಸಾ ಕರೀ ಸದ್ಗುರುರಾಜಾ ತನ್ಮಯ ಛತ್ರಪತಿ। ಮಜ ಕರುನೀ ಸೇವೇ ಅಧಿಪತಿ। ಸೋsಹಂ ಶಬ್ದ ಸನದ ದೇವುನಿ ಹಾತೀ ಶಿರಿ ಹಾತ ಠೇವಿಲಾ ಮುದ್ರಾಂಕಿತ ||೧|| ಅಹಂಕಾರಾಚಿ ದುರ್ಗ ಆವರೀಲೇ। ತಯಾವರೀ ಮಜಲಾ ಪಾಠವೀಲೇ। {{center|೮೮}}<noinclude></noinclude> 6xo4erhnzp5hjz5sigkc5lk4icwm77l ಪುಟ:ನಿತ್ಯ ನೇಮಾವಲಿ.pdf/೯೦ 104 101922 319563 284295 2026-05-13T13:40:23Z Shreelatha.Halemane 7642 /* Proofread */ 319563 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೨)} ಪೂರ್ವದ್ವಾರೇ ತ್ರಿಕುಟ ದೇಖಿಯಲೇ| ರಜೋದೃಷ್ಟಿ ಬ್ರಹ್ಮಾಸೀ ಜಿಂಕಿಯೆಲೇ||೨|| ತೇಥುನಿ ಊರ್ಧ್ವಪಂಥೇ ಪಶ್ಚಿಮಮಾರ್ಗ ಪಾಹೇ। ಸತ್ವಗುಣೀ ಶ್ರೀಹಾಟೀ ವಿಷ್ಣು ಆಹೇ| ತಯಾ ವಳಂಘೋನೀ ವರುತಾ ಜಾಯೇ| ತಮೋಗೋಲ್ಹಾಟಿ ರುದ್ರ ದಿಸತಾಹೇ||೩|| ಜ್ಞಾನಶಸ್ತ್ರ ಫೇವೊನಿಯಾ ಹಾತೀ। ಕೇಲೀ ತಮೋ-ಅಜ್ಞಾನಾಚೀ ಶಾಂತೀ| ಪುಣ್ಯಗಿರಿ ತೇಥುನಿ ದೇಖೇ ಪುಢತಿ| ಶುದ್ಧ ಅಧಿಷ್ಠಾನೀ ವಿಶ್ವಮೂರ್ತಿ||೪|| ಉಭಾ ರಾಹೋನಿ ತಯಾ ಗಿರಿವರಿ| ದೇಖೆ ಭ್ರಮರಗುಂಫಾ ಗಡದ ಓವರೀ| ಔಟಪೀಠಾವರುತೀ ಶೋಭೇ ಬರೀ| ಪರಮಾನಂದ ಆಹೇ ತಯಾ ಘರೀ||೫|| ಬೋಧಬಳಿಯಾ ಪ್ರವೇಶಲೋ ತೇಥ| ಅಹಂಕಾರ ಝಾಲಾ ವಾತಾಹತ। ವಿಜಯದುಂದುಭೀ ವಾಜತಿ ಅನುಹತ| ಬ್ರಹ್ಮದೃಷ್ಟಿತ ಪಾವಲೋ ನಿಜವಿಶ್ರಾಂತ ||೬|| {{center|೮೯}}<noinclude></noinclude> o3f614kwd1ksdx2fhtuhftgnl9wbuxy 319564 319563 2026-05-13T13:40:34Z Shreelatha.Halemane 7642 319564 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೨)}} ಪೂರ್ವದ್ವಾರೇ ತ್ರಿಕುಟ ದೇಖಿಯಲೇ| ರಜೋದೃಷ್ಟಿ ಬ್ರಹ್ಮಾಸೀ ಜಿಂಕಿಯೆಲೇ||೨|| ತೇಥುನಿ ಊರ್ಧ್ವಪಂಥೇ ಪಶ್ಚಿಮಮಾರ್ಗ ಪಾಹೇ। ಸತ್ವಗುಣೀ ಶ್ರೀಹಾಟೀ ವಿಷ್ಣು ಆಹೇ| ತಯಾ ವಳಂಘೋನೀ ವರುತಾ ಜಾಯೇ| ತಮೋಗೋಲ್ಹಾಟಿ ರುದ್ರ ದಿಸತಾಹೇ||೩|| ಜ್ಞಾನಶಸ್ತ್ರ ಫೇವೊನಿಯಾ ಹಾತೀ। ಕೇಲೀ ತಮೋ-ಅಜ್ಞಾನಾಚೀ ಶಾಂತೀ| ಪುಣ್ಯಗಿರಿ ತೇಥುನಿ ದೇಖೇ ಪುಢತಿ| ಶುದ್ಧ ಅಧಿಷ್ಠಾನೀ ವಿಶ್ವಮೂರ್ತಿ||೪|| ಉಭಾ ರಾಹೋನಿ ತಯಾ ಗಿರಿವರಿ| ದೇಖೆ ಭ್ರಮರಗುಂಫಾ ಗಡದ ಓವರೀ| ಔಟಪೀಠಾವರುತೀ ಶೋಭೇ ಬರೀ| ಪರಮಾನಂದ ಆಹೇ ತಯಾ ಘರೀ||೫|| ಬೋಧಬಳಿಯಾ ಪ್ರವೇಶಲೋ ತೇಥ| ಅಹಂಕಾರ ಝಾಲಾ ವಾತಾಹತ। ವಿಜಯದುಂದುಭೀ ವಾಜತಿ ಅನುಹತ| ಬ್ರಹ್ಮದೃಷ್ಟಿತ ಪಾವಲೋ ನಿಜವಿಶ್ರಾಂತ ||೬|| {{center|೮೯}}<noinclude></noinclude> ownntfj0qrnxhwat9aynfrtiy1vgfgc 319599 319564 2026-05-13T14:30:26Z Shreesha Sharma 7840 /* Validated */ 319599 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೨)}} ಪೂರ್ವದ್ವಾರೇ ತ್ರಿಕುಟ ದೇಖಿಯಲೇ| ರಜೋದೃಷ್ಟಿ ಬ್ರಹ್ಮಾಸೀ ಜಿಂಕಿಯೆಲೇ||೨|| ತೇಥುನಿ ಊರ್ಧ್ವಪಂಥೇ ಪಶ್ಚಿಮಮಾರ್ಗ ಪಾಹೇ। ಸತ್ವಗುಣೀ ಶ್ರೀಹಾಟೀ ವಿಷ್ಣು ಆಹೇ| ತಯಾ ವಳಂಘೋನೀ ವರುತಾ ಜಾಯೇ| ತಮೋಗೋಲ್ಹಾಟಿ ರುದ್ರ ದಿಸತಾಹೇ||೩|| ಜ್ಞಾನಶಸ್ತ್ರ ಫೇವೊನಿಯಾ ಹಾತೀ। ಕೇಲೀ ತಮೋ-ಅಜ್ಞಾನಾಚೀ ಶಾಂತೀ| ಪುಣ್ಯಗಿರಿ ತೇಥುನಿ ದೇಖೇ ಪುಢತಿ| ಶುದ್ಧ ಅಧಿಷ್ಠಾನೀ ವಿಶ್ವಮೂರ್ತಿ||೪|| ಉಭಾ ರಾಹೋನಿ ತಯಾ ಗಿರಿವರಿ| ದೇಖೆ ಭ್ರಮರಗುಂಫಾ ಗಡದ ಓವರೀ| ಔಟಪೀಠಾವರುತೀ ಶೋಭೇ ಬರೀ| ಪರಮಾನಂದ ಆಹೇ ತಯಾ ಘರೀ||೫|| ಬೋಧಬಳಿಯಾ ಪ್ರವೇಶಲೋ ತೇಥ| ಅಹಂಕಾರ ಝಾಲಾ ವಾತಾಹತ। ವಿಜಯದುಂದುಭೀ ವಾಜತಿ ಅನುಹತ| ಬ್ರಹ್ಮದೃಷ್ಟಿತ ಪಾವಲೋ ನಿಜವಿಶ್ರಾಂತ ||೬|| {{center|೮೯}}<noinclude></noinclude> 6fnxfb666wkpbmgbmf1m4b8xd0lr9bd ಪುಟ:ನಿತ್ಯ ನೇಮಾವಲಿ.pdf/೯೧ 104 101924 319565 284297 2026-05-13T13:44:35Z Shreelatha.Halemane 7642 /* Proofread */ 319565 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಭಕ್ತಿನಿಶಾಣ ಚಢವಿಲೇ ವರೀ| ಜೇ ಕಾ ಬ್ರಹ್ಮ ಭಾಸತ ಚರಾಚರೀ| ರಾಮನಾಮೇ ಗರ್ಜತೀ ಜಯಜಯಕಾರೀ। ದಾಸಪಣ ನ ಉರ ತೇಥೇ ಉರೀ ||೭|| '''ಭಾವಾರ್ಥ''': ಈ ಸಮರ್ಥರ ಮಹಿಮೆಯನ್ನು ಎಷ್ಟೆಂದು ವರ್ಣಿಸಲಿ? ಭಕ್ತರನ್ನು ಸದ್ಗುರುವು ತನ್ನಂತೇ ಮಾಡಿದನು. ತಾನು ಅರಸನಾಗಿ ನನ್ನನ್ನು ಸೇನಾಪತಿಯನ್ನಾಗಿ ಮಾಡಿಕೊಂಡು, ಸೋsಹಂ ಶಬ್ದದ ಸನದನ್ನು ಕೊಟ್ಟು, ತನ್ನ ಕೃಪಾಹಸ್ತವನ್ನು ನನ್ನ ತಲೆಯ ಮೇಲೆ ಇರಿಸುತ್ತಾನೆ. ಅಹಂಕಾರ ಎಂಬ ಕೋಟೆಯನ್ನು ಗೆದ್ದು, ಭೂಮಧ್ಯದಲ್ಲಿ ದೃಷ್ಟಿಯನ್ನಿಟ್ಟು ಸ್ಥಿರಗೊಳಿಸಿ ನಾಮಸ್ಮರಣೆ ಮಾಡುವುದರಿಂದ, ಈ ಕಾರ್ಯದ ಆರಂಭವಾಗುವುದು. ಮೊದಲು ರಜೋಗುಣ ಕಡಿಮೆಯಾಗುತ್ತ ಹೋಗಿ ಸುಷುಮ್ಮಿಯಿಂದ ಬ್ರಹ್ಮರಂಧ್ರದ ಕಡೆಗೆ ಪ್ರಾಣಶಕ್ತಿ ಹೊರಟಾಗ ಸತ್ವಗುಣ ವೃದ್ಧಿಯಾಗುತ್ತದೆ. ಇದೇ ವಿಷ್ಣುವಿನ ಸಾನಿಧ್ಯ. ಹಾಗೇ ಮುಂದೆ ಹೋಗಿ ತಮೋಗುಣ ಗೆಲ್ಲಬೇಕಾಗುವುದು, ತಮೋಗುಣವೆಂದರೆ ಜಡದೇಹದ ಹಸಿವ, ನೀರಡಿಕೆ, ನಿದ್ರೆ ಮುಂತಾದವುಗಳು. ಇದನ್ನು ಗೆಲ್ಲುವುದು ಇನ್ನೂ ಕಠಿಣ. ಏಕೆಂದರೆ ಅವು ದೇಹಕ್ಕೆ ಅಂಟಿಕೊಂಡಿರುತ್ತವೆ. ದೇಹಬುದ್ಧಿ ಕಡಿಮೆಯಾಗುತ್ತ ಆಗುತ್ತ, ಸಂಪೂರ್ಣ ನಾಶವಾದಾಗ ಕೊನೆಯಲ್ಲಿ ಗೆಲ್ಲಬಹುದು. ಅಲ್ಲಿ ರುದ್ರನು ಗೋಚರಿಸುವನು. ಜ್ಞಾನವೆಂಬ ಶಸ್ತ್ರದಿಂದ ಅಜ್ಞಾನ ಮತ್ತು ತಮೋಗುಣ {{center|೯೦}}<noinclude></noinclude> 6qn7ttcem170jht2xv21qq0g609tqj2 319600 319565 2026-05-13T14:30:38Z Shreesha Sharma 7840 /* Validated */ 319600 proofread-page text/x-wiki <noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}} ಭಕ್ತಿನಿಶಾಣ ಚಢವಿಲೇ ವರೀ| ಜೇ ಕಾ ಬ್ರಹ್ಮ ಭಾಸತ ಚರಾಚರೀ| ರಾಮನಾಮೇ ಗರ್ಜತೀ ಜಯಜಯಕಾರೀ। ದಾಸಪಣ ನ ಉರ ತೇಥೇ ಉರೀ ||೭|| '''ಭಾವಾರ್ಥ''': ಈ ಸಮರ್ಥರ ಮಹಿಮೆಯನ್ನು ಎಷ್ಟೆಂದು ವರ್ಣಿಸಲಿ? ಭಕ್ತರನ್ನು ಸದ್ಗುರುವು ತನ್ನಂತೇ ಮಾಡಿದನು. ತಾನು ಅರಸನಾಗಿ ನನ್ನನ್ನು ಸೇನಾಪತಿಯನ್ನಾಗಿ ಮಾಡಿಕೊಂಡು, ಸೋsಹಂ ಶಬ್ದದ ಸನದನ್ನು ಕೊಟ್ಟು, ತನ್ನ ಕೃಪಾಹಸ್ತವನ್ನು ನನ್ನ ತಲೆಯ ಮೇಲೆ ಇರಿಸುತ್ತಾನೆ. ಅಹಂಕಾರ ಎಂಬ ಕೋಟೆಯನ್ನು ಗೆದ್ದು, ಭೂಮಧ್ಯದಲ್ಲಿ ದೃಷ್ಟಿಯನ್ನಿಟ್ಟು ಸ್ಥಿರಗೊಳಿಸಿ ನಾಮಸ್ಮರಣೆ ಮಾಡುವುದರಿಂದ, ಈ ಕಾರ್ಯದ ಆರಂಭವಾಗುವುದು. ಮೊದಲು ರಜೋಗುಣ ಕಡಿಮೆಯಾಗುತ್ತ ಹೋಗಿ ಸುಷುಮ್ಮಿಯಿಂದ ಬ್ರಹ್ಮರಂಧ್ರದ ಕಡೆಗೆ ಪ್ರಾಣಶಕ್ತಿ ಹೊರಟಾಗ ಸತ್ವಗುಣ ವೃದ್ಧಿಯಾಗುತ್ತದೆ. ಇದೇ ವಿಷ್ಣುವಿನ ಸಾನಿಧ್ಯ. ಹಾಗೇ ಮುಂದೆ ಹೋಗಿ ತಮೋಗುಣ ಗೆಲ್ಲಬೇಕಾಗುವುದು, ತಮೋಗುಣವೆಂದರೆ ಜಡದೇಹದ ಹಸಿವ, ನೀರಡಿಕೆ, ನಿದ್ರೆ ಮುಂತಾದವುಗಳು. ಇದನ್ನು ಗೆಲ್ಲುವುದು ಇನ್ನೂ ಕಠಿಣ. ಏಕೆಂದರೆ ಅವು ದೇಹಕ್ಕೆ ಅಂಟಿಕೊಂಡಿರುತ್ತವೆ. ದೇಹಬುದ್ಧಿ ಕಡಿಮೆಯಾಗುತ್ತ ಆಗುತ್ತ, ಸಂಪೂರ್ಣ ನಾಶವಾದಾಗ ಕೊನೆಯಲ್ಲಿ ಗೆಲ್ಲಬಹುದು. ಅಲ್ಲಿ ರುದ್ರನು ಗೋಚರಿಸುವನು. ಜ್ಞಾನವೆಂಬ ಶಸ್ತ್ರದಿಂದ ಅಜ್ಞಾನ ಮತ್ತು ತಮೋಗುಣ {{center|೯೦}}<noinclude></noinclude> 1lpodrun3t30umt3qsv6i9tpgig3nv9 ಪುಟ:ನಿತ್ಯ ನೇಮಾವಲಿ.pdf/೯೨ 104 101926 319566 284299 2026-05-13T14:05:33Z Shreelatha.Halemane 7642 /* Proofread */ 319566 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೨)}} ನಷ್ಟವಾದ ನಂತರ ಸ್ವರೂಪಸಾಕ್ಷಾತ್ಕಾರವು ಪೂರ್ಣವಾಗುವುದು. ಇವೆರಡೂ ಮಾರ್ಗಗಳು ಪರಸ್ಪರ ಪೂರಕವಾಗಿರುವವು. 'ಔಟಪೀಟ' 'ಭ್ರಮರಗುಂಫಾ' ಇವು ಸಿದ್ಧಯೋಗದಲ್ಲಿಯ ಶಬ್ದಗಳು, ಪರಮಾನಂದದ ಅವಸ್ಥೆಯು ಸಾಧಕನಿಗೆ ಲಭಿಸಿದಾಗ, ತಿಳಿದೂ, ತಿಳಿಯದ ಅವನು ಮದುಳಿನೊಳಗಿನ “ಔಟಪೀಟ” “ಭ್ರಮರಗುಂಫಾ” ಕೇಂದ್ರದಲ್ಲಿ ಪ್ರವೇಶಿಸುತ್ತಾನೆ. ಸಾಕ್ಷಾತ್ಕಾರದಿಂದ ದೊರೆತ ಪರಮಾನಂದದಿಂದ ದೇಹಬುದ್ಧಿ ಸಂಪೂರ್ಣ ನಷ್ಟವಾಗಿ ಹೋಗುತ್ತದೆ. ಆಗ ದುಂದುಭಿ ಮೊಳಗಿದ ನಾದವು ಕೇಳಬರುತ್ತದೆ. ಇಲ್ಲಿ ಬ್ರಹ್ಮನಲ್ಲಿ ನಿಜವಾದ ವಿಶ್ರಾಂತಿಯು ಸಿಗುವದು. ಇದೇ ಬ್ರಹ್ಮದರ್ಶನದ ಪೂರ್ಣವಿರಾಮ. ಇದಕ್ಕೆ ಪರಾ-ಅಭೇದ ಭಕ್ತಿ ಎನ್ನುವರು. ಈ ವಿಜಯಪತಾಕ ಏರಿದಾಗ ಆಗುವ ಆನಂದದ ಭರದಲ್ಲಿ ರಾಮನಾಮದ ಗರ್ಜನೆಯು ನಡೆಯುವುದು. ಆಗ ದಾಸತ್ವವು ಹೋಗಿ ದೇವತ್ವವು ಪ್ರಾಪ್ತವಾಯಿತು. {{center|೪}} ಸಖಯಾ ರಾಮಾ ವಿಶ್ರಾಂತಿ ತುಝೇ ನಾಮೀ| ಮ್ಹಣವುನಿ ಮಜಲಾ ನೇ ತ್ವರೇ ನಿಜಸುಖಧಾಮೀ.||ದೃ|| ಆವಚಟ ಸುಕೃತೇ ನರದೇಹಾ ಝಾಲೀ ಭೇಟೀ| ಪಶು-ಸುತ-ಜಾಯಾ-ಧನ-ಧಾಮಿ ಪ್ರೀತಿ ಮೋಠೀ| ಮಾಝೀ ಮಾಝೇ ಮಣುನಿ ಮ್ಯಾ ಧರಿಲೀ ಪೋಟೀ ಯಾಂಚ್ಯಾ ಸಂಗೇ ಭೋಗಿಲ್ಯಾ ದುಃಖ ಕೋಟೇ||೧|| {{center|೯೧}}<noinclude></noinclude> 86qw430aa6g9tdfi2odl9138hfli9zl 319601 319566 2026-05-13T14:30:55Z Shreesha Sharma 7840 /* Validated */ 319601 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೨)}} ನಷ್ಟವಾದ ನಂತರ ಸ್ವರೂಪಸಾಕ್ಷಾತ್ಕಾರವು ಪೂರ್ಣವಾಗುವುದು. ಇವೆರಡೂ ಮಾರ್ಗಗಳು ಪರಸ್ಪರ ಪೂರಕವಾಗಿರುವವು. 'ಔಟಪೀಟ' 'ಭ್ರಮರಗುಂಫಾ' ಇವು ಸಿದ್ಧಯೋಗದಲ್ಲಿಯ ಶಬ್ದಗಳು, ಪರಮಾನಂದದ ಅವಸ್ಥೆಯು ಸಾಧಕನಿಗೆ ಲಭಿಸಿದಾಗ, ತಿಳಿದೂ, ತಿಳಿಯದ ಅವನು ಮದುಳಿನೊಳಗಿನ “ಔಟಪೀಟ” “ಭ್ರಮರಗುಂಫಾ” ಕೇಂದ್ರದಲ್ಲಿ ಪ್ರವೇಶಿಸುತ್ತಾನೆ. ಸಾಕ್ಷಾತ್ಕಾರದಿಂದ ದೊರೆತ ಪರಮಾನಂದದಿಂದ ದೇಹಬುದ್ಧಿ ಸಂಪೂರ್ಣ ನಷ್ಟವಾಗಿ ಹೋಗುತ್ತದೆ. ಆಗ ದುಂದುಭಿ ಮೊಳಗಿದ ನಾದವು ಕೇಳಬರುತ್ತದೆ. ಇಲ್ಲಿ ಬ್ರಹ್ಮನಲ್ಲಿ ನಿಜವಾದ ವಿಶ್ರಾಂತಿಯು ಸಿಗುವದು. ಇದೇ ಬ್ರಹ್ಮದರ್ಶನದ ಪೂರ್ಣವಿರಾಮ. ಇದಕ್ಕೆ ಪರಾ-ಅಭೇದ ಭಕ್ತಿ ಎನ್ನುವರು. ಈ ವಿಜಯಪತಾಕ ಏರಿದಾಗ ಆಗುವ ಆನಂದದ ಭರದಲ್ಲಿ ರಾಮನಾಮದ ಗರ್ಜನೆಯು ನಡೆಯುವುದು. ಆಗ ದಾಸತ್ವವು ಹೋಗಿ ದೇವತ್ವವು ಪ್ರಾಪ್ತವಾಯಿತು. {{center|೪}} ಸಖಯಾ ರಾಮಾ ವಿಶ್ರಾಂತಿ ತುಝೇ ನಾಮೀ| ಮ್ಹಣವುನಿ ಮಜಲಾ ನೇ ತ್ವರೇ ನಿಜಸುಖಧಾಮೀ.||ದೃ|| ಆವಚಟ ಸುಕೃತೇ ನರದೇಹಾ ಝಾಲೀ ಭೇಟೀ| ಪಶು-ಸುತ-ಜಾಯಾ-ಧನ-ಧಾಮಿ ಪ್ರೀತಿ ಮೋಠೀ| ಮಾಝೀ ಮಾಝೇ ಮಣುನಿ ಮ್ಯಾ ಧರಿಲೀ ಪೋಟೀ ಯಾಂಚ್ಯಾ ಸಂಗೇ ಭೋಗಿಲ್ಯಾ ದುಃಖ ಕೋಟೇ||೧|| {{center|೯೧}}<noinclude></noinclude> fmw7sgxjunuokote24bo4offqm5lzj1 ಪುಟ:ನಿತ್ಯ ನೇಮಾವಲಿ.pdf/೯೩ 104 101928 319567 284301 2026-05-13T14:08:43Z Shreelatha.Halemane 7642 /* Proofread */ 319567 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಸೋಡುನಿ ಸ್ವಹಿತಾ ಧಾವಲೋ ದಿಶಾ ದಾಹೀ। ಶವವತ ಝಾಲೋ ಮಾಗುತಾ ಕೌತುಕ ಪಾಹೀ| ಪರೀ ಖಳಜನ ಹೇ ನೇದಿತೀ ಕವಡೀ ತೇ ಹೀ| ಪರಿ ಹೀ ಆಶಾ ಪಾಪಿಣೀ ಲಾಜತ ನಾಹೀ||೨|| ಜವವರಿ ದೃಢತಾ ತವವರೀ ಯಾ ತನುಚೀ ಪ್ರೀತೀ| ಜರ್ಜರ ಝಾಲಿಯಾ ಅವಘೇಚಿ ನಿಂದಕ ಹೋತೀ| ಯಾಚೀ ದುಃಖ ತುಜಲಾ ಮೀ ಸಾಂಗೂ ಕಿತೀ| ಮಣವುನಿ ಯೇತೋ ಶ್ರೀಧರ ಕಾಕುಳತೀ||೩|| '''ಭಾವಾರ್ಥ''': ಸಖನಾದ ರಾಮಾ, ನಿನ್ನ ನಾಮಸ್ಮರಣೆಯಲ್ಲಿಯೇ ನನಗೆ ನಿಜವಾದ ವಿಶ್ರಾಂತಿ. ಆದ್ದರಿಂದ ಶೀಘ್ರವಾಗಿ ನನ್ನನ್ನು ನಿಜಸುಖಧಾಮಕ್ಕೆ ಕರೆದೊಯ್ಯಬೇಕು. ಸುಕೃತದಿಂದ ಅಕಸ್ಮಾತ್ತಾಗಿ ನನಗೆ ನರದೇಹವು ಲಭಿಸಿತು. ಆದರೆ ನನ್ನ ಮಗ-ಮನೆ-ಹೆಂಡತಿ-ನನ್ನ ಪಶು, ನನ್ನ ಧನ, ಎಂದು ಅತಿಯಾದ ಮಮತೆಯಿಂದ ಸಂಸಾರ ಮಾಡಿ ದುಃಖವನ್ನು ಅನುಭವಿಸಿದನು. ಸ್ವಹಿತವನ್ನು ಕಡೆಗಣಿಸಿ ಹತ್ತು ದಿಕ್ಕಿನಲ್ಲಿ ಶವದಂತೆ ಓಡಾಡಿದನು. ದುಃಖ, ಆಪತ್ತು ಬಂದಾಗ ಆಪ್ತಷ್ಟರು ಒಂದು ಕವಡಿಯನ್ನು ಕೂಡ ಕೊಡುವುದಿಲ್ಲ. ಇದನ್ನು ತಿಳಿದೂತಿಳಿದೂ ಇನ್ನೂ ಆಸೆಯನ್ನು ಬಿಟ್ಟಿಲ್ಲ. ಮೈಯಲ್ಲಿ ಶಕ್ತಿ ಇರುವವರೆಗೆ ದೇಹದ ಪ್ರೀತಿ ಹೋಗುವುದಿಲ್ಲ. ದೇಹವು ದುರ್ಬಲವಾಗಿ ಜನರು {{center|೯೨}}<noinclude></noinclude> 3zgx4lfwxvkifhhxjie9a2m9h0bsfp0 319602 319567 2026-05-13T14:31:15Z Shreesha Sharma 7840 /* Validated */ 319602 proofread-page text/x-wiki <noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}} ಸೋಡುನಿ ಸ್ವಹಿತಾ ಧಾವಲೋ ದಿಶಾ ದಾಹೀ। ಶವವತ ಝಾಲೋ ಮಾಗುತಾ ಕೌತುಕ ಪಾಹೀ| ಪರೀ ಖಳಜನ ಹೇ ನೇದಿತೀ ಕವಡೀ ತೇ ಹೀ| ಪರಿ ಹೀ ಆಶಾ ಪಾಪಿಣೀ ಲಾಜತ ನಾಹೀ||೨|| ಜವವರಿ ದೃಢತಾ ತವವರೀ ಯಾ ತನುಚೀ ಪ್ರೀತೀ| ಜರ್ಜರ ಝಾಲಿಯಾ ಅವಘೇಚಿ ನಿಂದಕ ಹೋತೀ| ಯಾಚೀ ದುಃಖ ತುಜಲಾ ಮೀ ಸಾಂಗೂ ಕಿತೀ| ಮಣವುನಿ ಯೇತೋ ಶ್ರೀಧರ ಕಾಕುಳತೀ||೩|| '''ಭಾವಾರ್ಥ''': ಸಖನಾದ ರಾಮಾ, ನಿನ್ನ ನಾಮಸ್ಮರಣೆಯಲ್ಲಿಯೇ ನನಗೆ ನಿಜವಾದ ವಿಶ್ರಾಂತಿ. ಆದ್ದರಿಂದ ಶೀಘ್ರವಾಗಿ ನನ್ನನ್ನು ನಿಜಸುಖಧಾಮಕ್ಕೆ ಕರೆದೊಯ್ಯಬೇಕು. ಸುಕೃತದಿಂದ ಅಕಸ್ಮಾತ್ತಾಗಿ ನನಗೆ ನರದೇಹವು ಲಭಿಸಿತು. ಆದರೆ ನನ್ನ ಮಗ-ಮನೆ-ಹೆಂಡತಿ-ನನ್ನ ಪಶು, ನನ್ನ ಧನ, ಎಂದು ಅತಿಯಾದ ಮಮತೆಯಿಂದ ಸಂಸಾರ ಮಾಡಿ ದುಃಖವನ್ನು ಅನುಭವಿಸಿದನು. ಸ್ವಹಿತವನ್ನು ಕಡೆಗಣಿಸಿ ಹತ್ತು ದಿಕ್ಕಿನಲ್ಲಿ ಶವದಂತೆ ಓಡಾಡಿದನು. ದುಃಖ, ಆಪತ್ತು ಬಂದಾಗ ಆಪ್ತಷ್ಟರು ಒಂದು ಕವಡಿಯನ್ನು ಕೂಡ ಕೊಡುವುದಿಲ್ಲ. ಇದನ್ನು ತಿಳಿದೂತಿಳಿದೂ ಇನ್ನೂ ಆಸೆಯನ್ನು ಬಿಟ್ಟಿಲ್ಲ. ಮೈಯಲ್ಲಿ ಶಕ್ತಿ ಇರುವವರೆಗೆ ದೇಹದ ಪ್ರೀತಿ ಹೋಗುವುದಿಲ್ಲ. ದೇಹವು ದುರ್ಬಲವಾಗಿ ಜನರು {{center|೯೨}}<noinclude></noinclude> t7q2nxssql48u2rsiv2egpa43f8ylzg ಪುಟ:ನಿತ್ಯ ನೇಮಾವಲಿ.pdf/೯೪ 104 101930 319694 284303 2026-05-14T06:11:24Z Shreesha Sharma 7840 /* Proofread */ 319694 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಮಧ್ಯಾಹ್ನದ ಭಜನೆ (ಭಾಗ-೨)|left=|right=}} ಹೀಯಾಳಿಸಿದಾಗ ದುಃಖದ ಅನುಭವವಾಗುವುದು. ಅದನ್ನು ಎಷ್ಟೆಂದು ಹೇಳಲಿ? ಎಂದು ಶ್ರೀಧರರು ಕಳಕಳಿಯಿಂದ ಕೇಳುತ್ತಾರೆ. {{center|೫}} ಕಾಯ ಸಾಂಗೂ ಮಿ ಯಾ ಸಂತಾಂಚೀ ಉಪಕಾರ| ಮಜ ನಿರಂತರ ಜಾಗವಿತೀ||೧|| ಸಹಜ ಬೋಲನ ಹಿತ ಉಪದೇಶ ಕರೂನಿ ಸಾಯಾಸಾ ಶಿಕವೀತೀ ||೨|| ಕಾಯ ದ್ಯಾವೇ ತ್ಯಾಸೀ ವ್ಹಾವೇ ಉತರಾಯಿ| ಠೇವಿತಾ ಹಾ ಪಾಯೀ ಜೀವ ಥೋಡಾ||೩|| ತುಕಾ ಮನೇ ವತ್ಸ ಧೇನುವೇಚ್ಯಾ ಚಿತ್ತೀ। ತೈಸೇ ಮಜ ಯೇಥೇ ಸಾಂಭಾಳೀತೀ||೪|| '''ಭಾವಾರ್ಥ''': ಯಾವಾಗಲೂ ನನ್ನನ್ನು ಎಚ್ಚರಿಸುತ್ತಿರುವ ಈ ಸಂತರ ಉಪಕಾರವನ್ನು ಎಷ್ಟು ಹೇಳಲಿ? ಅವರು ತಮ್ಮ ಬ್ರಹ್ಮಪದವಿಯ ಜೀವನದಲ್ಲಿ ನುಡಿಯುವ ಸಹಜ ನುಡಿಯೂ ಉಪದೇಶಪರವಾಗಿರುತ್ತದೆ. ಅವರ ಋಣವನ್ನು ಹೇಗೆ ತೀರಿಸುವುದು? ನಮ್ಮನ್ನು ಅವರ ಚರಣದಲ್ಲಿ ಅರ್ಪಿಸಿಕೊಂಡರೂ ಸಹ ಕಡಿಮಯ ಎಂದೆನಿಸುವುದು, ತುಕಾರಾಮರು {{center|೯೩}}<noinclude></noinclude> 3r6t4xxul3o6fovb3w5heleyitjt7a9 319702 319694 2026-05-14T06:53:09Z Shreelatha.Halemane 7642 /* Validated */ 319702 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಮಧ್ಯಾಹ್ನದ ಭಜನೆ (ಭಾಗ-೨)|left=|right=}} ಹೀಯಾಳಿಸಿದಾಗ ದುಃಖದ ಅನುಭವವಾಗುವುದು. ಅದನ್ನು ಎಷ್ಟೆಂದು ಹೇಳಲಿ? ಎಂದು ಶ್ರೀಧರರು ಕಳಕಳಿಯಿಂದ ಕೇಳುತ್ತಾರೆ. {{center|೫}} ಕಾಯ ಸಾಂಗೂ ಮಿ ಯಾ ಸಂತಾಂಚೀ ಉಪಕಾರ| ಮಜ ನಿರಂತರ ಜಾಗವಿತೀ||೧|| ಸಹಜ ಬೋಲನ ಹಿತ ಉಪದೇಶ ಕರೂನಿ ಸಾಯಾಸಾ ಶಿಕವೀತೀ ||೨|| ಕಾಯ ದ್ಯಾವೇ ತ್ಯಾಸೀ ವ್ಹಾವೇ ಉತರಾಯಿ| ಠೇವಿತಾ ಹಾ ಪಾಯೀ ಜೀವ ಥೋಡಾ||೩|| ತುಕಾ ಮನೇ ವತ್ಸ ಧೇನುವೇಚ್ಯಾ ಚಿತ್ತೀ। ತೈಸೇ ಮಜ ಯೇಥೇ ಸಾಂಭಾಳೀತೀ||೪|| '''ಭಾವಾರ್ಥ''': ಯಾವಾಗಲೂ ನನ್ನನ್ನು ಎಚ್ಚರಿಸುತ್ತಿರುವ ಈ ಸಂತರ ಉಪಕಾರವನ್ನು ಎಷ್ಟು ಹೇಳಲಿ? ಅವರು ತಮ್ಮ ಬ್ರಹ್ಮಪದವಿಯ ಜೀವನದಲ್ಲಿ ನುಡಿಯುವ ಸಹಜ ನುಡಿಯೂ ಉಪದೇಶಪರವಾಗಿರುತ್ತದೆ. ಅವರ ಋಣವನ್ನು ಹೇಗೆ ತೀರಿಸುವುದು? ನಮ್ಮನ್ನು ಅವರ ಚರಣದಲ್ಲಿ ಅರ್ಪಿಸಿಕೊಂಡರೂ ಸಹ ಕಡಿಮಯ ಎಂದೆನಿಸುವುದು, ತುಕಾರಾಮರು {{center|೯೩}}<noinclude></noinclude> rnmenymhi59wkhg0sgppnja2xnss3zc ಪುಟ:ನಿತ್ಯ ನೇಮಾವಲಿ.pdf/೯೫ 104 101932 319695 284305 2026-05-14T06:17:48Z Shreesha Sharma 7840 /* Proofread */ 319695 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಹೇಳುವುದೇನೆಂದರೆ, ಆಕಳು ತನ್ನ ಕರುವನ್ನು ವಾತ್ಸಲ್ಯದಿಂದ ರಕ್ಷಿಸುವಂತೆ ನಮ್ಮನ್ನು ಸಂತರು ಪ್ರೀತಿಯಿಂದ ಸಲಹುತ್ತಾರೆ. {{center|೬}} ಝಾಲೀ ಸಂಧ್ಯಾ ಸಂದೇಹ ಮಾಝಾ ಗೇಲಾ| ಆತ್ಮರಾಮ ಹೃದಯೀ ಸಹಜೀ ಆಲಾ||ದೃ|| ಗುರುಕೃಪಾ ನಿರ್ಮಳ ಭಾಗೀರಥೀ। ಶಾಂತಿ ಕ್ಷಮಾ ಯಮುನಾ ಸರಸ್ವತೀ। ಐಶೀ ಪದೇ ಏಕತ್ರ ಜೇಥೇ ಹೋತೀ| ಸ್ವಾನುಭವ ಸ್ನಾನ ಹೇ ಮುಕ್ತಸ್ಥಿತೀ||೧|| ಸದ್ದುದ್ದೀಚೆ ಫಾಲೋನಿ ದರ್ಭಾಸನ| ವರೀ ಸದ್ಗುರುಚೀ ದಯಾ ಪರಿಪೂರ್ಣ| ಶಮ ದಮ ಅಂಗೀ ವಿಭೂತಿಲೇಪನ| ವಾಚೇ ಉಚ್ಚಾರೀ ಕೇಶವನಾರಾಯಣ||೨|| ಬೋಧಪುತ್ರ ನಿರ್ಮಾಣ ಝಾಲಾ ಜೇವ್ಹಾ| ಮಮತಾ ಮ್ಹಾತಾರಿ ಮರೋನಿ ಗೇಲೀ ತೇವಾ। ಭಕ್ತಿ ಬಹೀಣ ಆಲೀ ಅಸ ಗಾವಾ| ಆತಾ ಸಂಧ್ಯಾ ಕರೂ ಮೀ ಕೈಶೀ ಕೇಹ್ವಾ||೩|| {{center|೯೪}}<noinclude></noinclude> 3fwcvkx71cg7zwg1rkuhz69nl8thc5b 319703 319695 2026-05-14T06:53:21Z Shreelatha.Halemane 7642 /* Validated */ 319703 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಹೇಳುವುದೇನೆಂದರೆ, ಆಕಳು ತನ್ನ ಕರುವನ್ನು ವಾತ್ಸಲ್ಯದಿಂದ ರಕ್ಷಿಸುವಂತೆ ನಮ್ಮನ್ನು ಸಂತರು ಪ್ರೀತಿಯಿಂದ ಸಲಹುತ್ತಾರೆ. {{center|೬}} ಝಾಲೀ ಸಂಧ್ಯಾ ಸಂದೇಹ ಮಾಝಾ ಗೇಲಾ| ಆತ್ಮರಾಮ ಹೃದಯೀ ಸಹಜೀ ಆಲಾ||ದೃ|| ಗುರುಕೃಪಾ ನಿರ್ಮಳ ಭಾಗೀರಥೀ। ಶಾಂತಿ ಕ್ಷಮಾ ಯಮುನಾ ಸರಸ್ವತೀ। ಐಶೀ ಪದೇ ಏಕತ್ರ ಜೇಥೇ ಹೋತೀ| ಸ್ವಾನುಭವ ಸ್ನಾನ ಹೇ ಮುಕ್ತಸ್ಥಿತೀ||೧|| ಸದ್ದುದ್ದೀಚೆ ಫಾಲೋನಿ ದರ್ಭಾಸನ| ವರೀ ಸದ್ಗುರುಚೀ ದಯಾ ಪರಿಪೂರ್ಣ| ಶಮ ದಮ ಅಂಗೀ ವಿಭೂತಿಲೇಪನ| ವಾಚೇ ಉಚ್ಚಾರೀ ಕೇಶವನಾರಾಯಣ||೨|| ಬೋಧಪುತ್ರ ನಿರ್ಮಾಣ ಝಾಲಾ ಜೇವ್ಹಾ| ಮಮತಾ ಮ್ಹಾತಾರಿ ಮರೋನಿ ಗೇಲೀ ತೇವಾ। ಭಕ್ತಿ ಬಹೀಣ ಆಲೀ ಅಸ ಗಾವಾ| ಆತಾ ಸಂಧ್ಯಾ ಕರೂ ಮೀ ಕೈಶೀ ಕೇಹ್ವಾ||೩|| {{center|೯೪}}<noinclude></noinclude> ljphn3zon5cc3jldr5gh07eo417bfeq ಪುಟ:ನಿತ್ಯ ನೇಮಾವಲಿ.pdf/೯೬ 104 101934 319696 284307 2026-05-14T06:26:05Z Shreesha Sharma 7840 /* Proofread */ 319696 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಮಧ್ಯಾಹ್ನದ ಭಜನ (ಭಾಗ-೨)}} ಸಹಜ ಕರ್ಮ ಝಾಲೀ ಬ್ರಹ್ಮಾರ್ಪಣ| ಐಸೇ ಐನೀ ನಿವತೀ ಸಾಧುಜನ| ಜನ ನೋಹ ಅವಘಾಚಿ ಜನಾರ್ದನ| ಏಕಾಜನಾರ್ದನೀ ಲಾಧಲೀ ನಿಜಖಣ||೪|| ಇಲ್ಲಿ ನಾಮಸ್ಮರಣೆಯ ಸಾಧನೆಯನ್ನೇ “ಸಂಧ್ಯಾ” ಎಂದು ಸಂಬೋಧಿಸಿದ್ದಾರೆ. '''ಭಾವಾರ್ಥ''': ಈಗ ಸಂಜೆಯಾಯಿತು. ಅದರಿಂದ ನನ್ನ ಸಂದೇಹಗಳು 'ಮಾಯವಾದವು. ಹೃದಯದಲ್ಲಿ ಆತ್ಮಾರಾಮನು ನೆಲೆಸಿದ ಅನುಭವವೂ ಆಯಿತು. ನಿರ್ಮಲವಾದ ಭಾಗೀರಥಿಯು ಎಂದರೆ ಗುರುಕೃಪೆ. ಯಮುನಾ, ಸರಸ್ವತಿ ಎಂದರೆ ಶಾಂತಿ-ಕ್ಷಮೆ. ಇವೆಲ್ಲ ಒಂದೆಡೆ ಸೇರಿದಾಗ ಆಗುವ ಸ್ವಾನುಭವದ ಸ್ನಾನ ಎಂದರೆ ಮುಕ್ತಸ್ಥಿತಿಯು, ಸದ್ಭುದ್ಧಿಯ ದರ್ಭಾಸನ ಹಾಕಿ, ಸದ್ಗುರುವಿನ ಕೃಪೆ ಪಡೆದು, ಮೈಗೆ ಶಮ-ದಮದ ವಿಭೂತಿ ಲೇಪನ ಮಾಡಿಕೊಂಡು, ಮುಖದಿಂದ ಕೇಶವ ನಾರಾಯಣ ಉಚ್ಚರಿಸಿದರೆ ಸಾಕ್ಷಾತ್ಕಾರದ ಅನುಭವವಾಗುವುದು, ಜ್ಞಾನವೆಂಬ ಸತ್ಪುತ್ರನ ಜನನವಾಗಿ, ಮಾಯ ಎಂಬ ಮುದುಕಿಯ ಮರಣವಾದಾಗ, ಭಕ್ತಿ ಎಂಬ ಸೋದರಿ ಊರಿಗೆ ಬಂದ ಬಳಿಕ, ನಾಮಸಾಧನೆಯ ಅವಶ್ಯಕತೆ ಎಲ್ಲಿದೆ? ಎಂದರೆ ನಿತ್ಯಕರ್ಮ ಮಾಡುವಂತಿಲ್ಲ. ಸಾಧಕನು ಕರ್ಮ-ಸನ್ಯಾಸ ತೆಗೆದುಕೊಳ್ಳುತ್ತಾನೆ, ಎಂದರೆ ನಿಷ್ಕ್ರಿಯನಾಗುತ್ತಾನೆ. ಆದರೆ ಕಾರ್ಯಗಳು ಕರ್ತೃತ್ವ, ಅಹಂಕಾರ ಮತ್ತು ವಾಸನಾರಹಿತವಾಗಿದ್ದು, ಬ್ರಹ್ಮನಿಗೇ ಸಮರ್ಪಣೆ ಮಾಡಿದಂಥ {{center|೯೫}}<noinclude></noinclude> 0w9kt2afvkqtu2c49pzmbqtc81s9sjh 319697 319696 2026-05-14T06:26:27Z Shreesha Sharma 7840 319697 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಮಧ್ಯಾಹ್ನದ ಭಜನ (ಭಾಗ-೨)}} ಸಹಜ ಕರ್ಮ ಝಾಲೀ ಬ್ರಹ್ಮಾರ್ಪಣ| ಐಸೇ ಐನೀ ನಿವತೀ ಸಾಧುಜನ| ಜನ ನೋಹ ಅವಘಾಚಿ ಜನಾರ್ದನ| ಏಕಾಜನಾರ್ದನೀ ಲಾಧಲೀ ನಿಜಖಣ||೪|| ಇಲ್ಲಿ ನಾಮಸ್ಮರಣೆಯ ಸಾಧನೆಯನ್ನೇ “ಸಂಧ್ಯಾ” ಎಂದು ಸಂಬೋಧಿಸಿದ್ದಾರೆ. '''ಭಾವಾರ್ಥ''': ಈಗ ಸಂಜೆಯಾಯಿತು. ಅದರಿಂದ ನನ್ನ ಸಂದೇಹಗಳು 'ಮಾಯವಾದವು. ಹೃದಯದಲ್ಲಿ ಆತ್ಮಾರಾಮನು ನೆಲೆಸಿದ ಅನುಭವವೂ ಆಯಿತು. ನಿರ್ಮಲವಾದ ಭಾಗೀರಥಿಯು ಎಂದರೆ ಗುರುಕೃಪೆ. ಯಮುನಾ, ಸರಸ್ವತಿ ಎಂದರೆ ಶಾಂತಿ-ಕ್ಷಮೆ. ಇವೆಲ್ಲ ಒಂದೆಡೆ ಸೇರಿದಾಗ ಆಗುವ ಸ್ವಾನುಭವದ ಸ್ನಾನ ಎಂದರೆ ಮುಕ್ತಸ್ಥಿತಿಯು, ಸದ್ಭುದ್ಧಿಯ ದರ್ಭಾಸನ ಹಾಕಿ, ಸದ್ಗುರುವಿನ ಕೃಪೆ ಪಡೆದು, ಮೈಗೆ ಶಮ-ದಮದ ವಿಭೂತಿ ಲೇಪನ ಮಾಡಿಕೊಂಡು, ಮುಖದಿಂದ ಕೇಶವ ನಾರಾಯಣ ಉಚ್ಚರಿಸಿದರೆ ಸಾಕ್ಷಾತ್ಕಾರದ ಅನುಭವವಾಗುವುದು, ಜ್ಞಾನವೆಂಬ ಸತ್ಪುತ್ರನ ಜನನವಾಗಿ, ಮಾಯ ಎಂಬ ಮುದುಕಿಯ ಮರಣವಾದಾಗ, ಭಕ್ತಿ ಎಂಬ ಸೋದರಿ ಊರಿಗೆ ಬಂದ ಬಳಿಕ, ನಾಮಸಾಧನೆಯ ಅವಶ್ಯಕತೆ ಎಲ್ಲಿದೆ? ಎಂದರೆ ನಿತ್ಯಕರ್ಮ ಮಾಡುವಂತಿಲ್ಲ. ಸಾಧಕನು ಕರ್ಮ-ಸನ್ಯಾಸ ತೆಗೆದುಕೊಳ್ಳುತ್ತಾನೆ, ಎಂದರೆ ನಿಷ್ಕ್ರಿಯನಾಗುತ್ತಾನೆ. ಆದರೆ ಕಾರ್ಯಗಳು ಕರ್ತೃತ್ವ, ಅಹಂಕಾರ ಮತ್ತು ವಾಸನಾರಹಿತವಾಗಿದ್ದು, ಬ್ರಹ್ಮನಿಗೇ ಸಮರ್ಪಣೆ ಮಾಡಿದಂಥ {{center|೯೫}}<noinclude></noinclude> 8s9xbew2y6fjeouemnal4c1fty2mqlh 319704 319697 2026-05-14T06:53:34Z Shreelatha.Halemane 7642 /* Validated */ 319704 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಮಧ್ಯಾಹ್ನದ ಭಜನ (ಭಾಗ-೨)}} ಸಹಜ ಕರ್ಮ ಝಾಲೀ ಬ್ರಹ್ಮಾರ್ಪಣ| ಐಸೇ ಐನೀ ನಿವತೀ ಸಾಧುಜನ| ಜನ ನೋಹ ಅವಘಾಚಿ ಜನಾರ್ದನ| ಏಕಾಜನಾರ್ದನೀ ಲಾಧಲೀ ನಿಜಖಣ||೪|| ಇಲ್ಲಿ ನಾಮಸ್ಮರಣೆಯ ಸಾಧನೆಯನ್ನೇ “ಸಂಧ್ಯಾ” ಎಂದು ಸಂಬೋಧಿಸಿದ್ದಾರೆ. '''ಭಾವಾರ್ಥ''': ಈಗ ಸಂಜೆಯಾಯಿತು. ಅದರಿಂದ ನನ್ನ ಸಂದೇಹಗಳು 'ಮಾಯವಾದವು. ಹೃದಯದಲ್ಲಿ ಆತ್ಮಾರಾಮನು ನೆಲೆಸಿದ ಅನುಭವವೂ ಆಯಿತು. ನಿರ್ಮಲವಾದ ಭಾಗೀರಥಿಯು ಎಂದರೆ ಗುರುಕೃಪೆ. ಯಮುನಾ, ಸರಸ್ವತಿ ಎಂದರೆ ಶಾಂತಿ-ಕ್ಷಮೆ. ಇವೆಲ್ಲ ಒಂದೆಡೆ ಸೇರಿದಾಗ ಆಗುವ ಸ್ವಾನುಭವದ ಸ್ನಾನ ಎಂದರೆ ಮುಕ್ತಸ್ಥಿತಿಯು, ಸದ್ಭುದ್ಧಿಯ ದರ್ಭಾಸನ ಹಾಕಿ, ಸದ್ಗುರುವಿನ ಕೃಪೆ ಪಡೆದು, ಮೈಗೆ ಶಮ-ದಮದ ವಿಭೂತಿ ಲೇಪನ ಮಾಡಿಕೊಂಡು, ಮುಖದಿಂದ ಕೇಶವ ನಾರಾಯಣ ಉಚ್ಚರಿಸಿದರೆ ಸಾಕ್ಷಾತ್ಕಾರದ ಅನುಭವವಾಗುವುದು, ಜ್ಞಾನವೆಂಬ ಸತ್ಪುತ್ರನ ಜನನವಾಗಿ, ಮಾಯ ಎಂಬ ಮುದುಕಿಯ ಮರಣವಾದಾಗ, ಭಕ್ತಿ ಎಂಬ ಸೋದರಿ ಊರಿಗೆ ಬಂದ ಬಳಿಕ, ನಾಮಸಾಧನೆಯ ಅವಶ್ಯಕತೆ ಎಲ್ಲಿದೆ? ಎಂದರೆ ನಿತ್ಯಕರ್ಮ ಮಾಡುವಂತಿಲ್ಲ. ಸಾಧಕನು ಕರ್ಮ-ಸನ್ಯಾಸ ತೆಗೆದುಕೊಳ್ಳುತ್ತಾನೆ, ಎಂದರೆ ನಿಷ್ಕ್ರಿಯನಾಗುತ್ತಾನೆ. ಆದರೆ ಕಾರ್ಯಗಳು ಕರ್ತೃತ್ವ, ಅಹಂಕಾರ ಮತ್ತು ವಾಸನಾರಹಿತವಾಗಿದ್ದು, ಬ್ರಹ್ಮನಿಗೇ ಸಮರ್ಪಣೆ ಮಾಡಿದಂಥ {{center|೯೫}}<noinclude></noinclude> 1cfiz0d7bjwbi28o72033hfs2uxrvwy ಪುಟ:ನಿತ್ಯ ನೇಮಾವಲಿ.pdf/೯೭ 104 101936 319698 284309 2026-05-14T06:36:28Z Shreesha Sharma 7840 /* Proofread */ 319698 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ವಾಗಿರುತ್ತವೆ. ಸಾಧಕನ ಇಂಥ ಶ್ರೇಷ್ಠ ಸ್ಥಿತಿಯನ್ನು ನೋಡಿ ಗುರುವಿಗೆ ಮಹದಾನಂದವಾಗುತ್ತದೆ. ಬ್ರಹ್ಮವೇ ಸತ್ಯ ಎಂಬ ದೃಷ್ಟಾಂತವನ್ನು ಅವನಿಗೆ ಸಾಧಕನ ಮುಖಾಂತರ ಮತ್ತೊಮ್ಮೆ ನೋಡಿ ಮನಗಾಣಲು ಸಿಗುತ್ತದೆ. ಜಗತ್ತು ಮಾಯವಾಗಿ, ಜನಾರ್ದನನೇ ಎಲ್ಲ ಕಡೆ ಇರುವನೆಂಬ ಮಾತು ಏಕನಾಥರಿಗೆ ಅನುಭವವಾಯಿತು. {{center|೭}} ನಿರಂಜನೀ ವನೀ ದೇಖಿಲೀ ಮೀ ಗಾಯ। ತೀನ ತಿಚೇ ಪಾಯ ಚಾರ ಮುಖ||೧|| ಸಹಸ್ರ ತಿಚೇ ನಯನ ನವ ತಿಚೇ ಕಾನ| ಸತ್ರಾವೀಚೇ ಸ್ಥಾನ ಏಕ ಶಿಂಗ||೨|| ಐಶೀ ಕಾಮಧೇನು ವ್ಯಾಸಾನೇ ಪಾಳಿಲೀ| ಶುಕಾನೇ ವಳಿಲೀ ಜನಕಾಘರೀ||೩|| ತುಕಾ ಮ್ಹಣ್ಹೇ ಐಸೇ ಭಾಗ್ಯ ನರಾ ಭೇಟೇ। ಅಭಾಗೀ ಕರಂಟೆ ವಾಯಾ ಗೇಲೇ||೪|| '''ಭಾವಾರ್ಥ''': ನಿರಂಜನ ವನದಲ್ಲಿ ನಾನು ನೋಡಿದ ಆಕಳು ಎಂದರೆ, ಮಾನವನಲ್ಲಿದ್ದ ಆಧ್ಯಾತ್ಮಿಕಶಕ್ತಿ, ಈ ಆಕಳಿಗೆ ಸತ್ವ-ರಜ-ತಮ ಎಂಬ ಮೂರು ಗುಣಗಳು, ಅದರ ಕಾಲುಗಳಿದ್ದಂತೆ, ಸ್ಕೂಲ, ಸೂಕ್ಷ್ಮ, ಕಾರಣ, {{Right|೯೬}}<noinclude></noinclude> f8cn1raskmxzv1yetje80gg0hvmrnag 319705 319698 2026-05-14T06:53:46Z Shreelatha.Halemane 7642 /* Validated */ 319705 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ವಾಗಿರುತ್ತವೆ. ಸಾಧಕನ ಇಂಥ ಶ್ರೇಷ್ಠ ಸ್ಥಿತಿಯನ್ನು ನೋಡಿ ಗುರುವಿಗೆ ಮಹದಾನಂದವಾಗುತ್ತದೆ. ಬ್ರಹ್ಮವೇ ಸತ್ಯ ಎಂಬ ದೃಷ್ಟಾಂತವನ್ನು ಅವನಿಗೆ ಸಾಧಕನ ಮುಖಾಂತರ ಮತ್ತೊಮ್ಮೆ ನೋಡಿ ಮನಗಾಣಲು ಸಿಗುತ್ತದೆ. ಜಗತ್ತು ಮಾಯವಾಗಿ, ಜನಾರ್ದನನೇ ಎಲ್ಲ ಕಡೆ ಇರುವನೆಂಬ ಮಾತು ಏಕನಾಥರಿಗೆ ಅನುಭವವಾಯಿತು. {{center|೭}} ನಿರಂಜನೀ ವನೀ ದೇಖಿಲೀ ಮೀ ಗಾಯ। ತೀನ ತಿಚೇ ಪಾಯ ಚಾರ ಮುಖ||೧|| ಸಹಸ್ರ ತಿಚೇ ನಯನ ನವ ತಿಚೇ ಕಾನ| ಸತ್ರಾವೀಚೇ ಸ್ಥಾನ ಏಕ ಶಿಂಗ||೨|| ಐಶೀ ಕಾಮಧೇನು ವ್ಯಾಸಾನೇ ಪಾಳಿಲೀ| ಶುಕಾನೇ ವಳಿಲೀ ಜನಕಾಘರೀ||೩|| ತುಕಾ ಮ್ಹಣ್ಹೇ ಐಸೇ ಭಾಗ್ಯ ನರಾ ಭೇಟೇ। ಅಭಾಗೀ ಕರಂಟೆ ವಾಯಾ ಗೇಲೇ||೪|| '''ಭಾವಾರ್ಥ''': ನಿರಂಜನ ವನದಲ್ಲಿ ನಾನು ನೋಡಿದ ಆಕಳು ಎಂದರೆ, ಮಾನವನಲ್ಲಿದ್ದ ಆಧ್ಯಾತ್ಮಿಕಶಕ್ತಿ, ಈ ಆಕಳಿಗೆ ಸತ್ವ-ರಜ-ತಮ ಎಂಬ ಮೂರು ಗುಣಗಳು, ಅದರ ಕಾಲುಗಳಿದ್ದಂತೆ, ಸ್ಕೂಲ, ಸೂಕ್ಷ್ಮ, ಕಾರಣ, {{Right|೯೬}}<noinclude></noinclude> 8pkgesulbc1ilmbf5mvz8tb1i82gl48 ಪುಟ:ನಿತ್ಯ ನೇಮಾವಲಿ.pdf/೯೮ 104 101938 319699 284311 2026-05-14T06:39:59Z Shreesha Sharma 7840 /* Proofread */ 319699 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೨)}} ಮಹಾಕಾರಣ ಎಂಬ ಶರೀರದ ಅಂಗಗಳು ನಾಲ್ಕು ಮುಖಗಳಿದ್ದಂತೆ. ಜ್ಞಾನಸಾಧನವಾದ ಸಹಸ್ರದಳ ಕಮಲವು ಸಹಸ್ರ ನಯನಗಳಿದ್ದಂತೆ. ನವದ್ವಾರಗಳು ಒಂಬತ್ತು ಕಿವಿಗಳಿದ್ದಂತೆ. ಚಂದ್ರನ ಹದಿನೇಳನೆಯ ಕಲೆಯಿಂದ ಅಮೃತವು ಸುರಿಯುವುದರಿಂದ, ಆ ಸ್ಥಾನವು ಸ್ತನವಿದ್ದಂತೆ, ಊರ್ಧ್ವ ಭಾಗದಲ್ಲಿದ್ದ ಬ್ರಹ್ಮರಂಧ್ರವು ಆಕಳಿನ ಕೋಡು ಇದ್ದಂತೆ. ಇಂಥ ಕಾಮಧೇನು ಎಂದರೆ ಆಧ್ಯಾತ್ಮಶಕ್ತಿಯುಳ್ಳ ಆಕಳು ವ್ಯಾಸನ ಮನೆಯಲ್ಲಿ ಹುಟ್ಟಿಬೆಳೆದರೂ ಮಹರ್ಷಿ ಜನಕರಾಜನ ಮನೆಯಲ್ಲಿ ಶುಕಮುನಿಯು ಈ ಕಾಮಧೇನುವನ್ನು ಕಾಯ್ದನು. ಅಂದರೆ ಶುಕನ ಅಹಂಕಾರವು ನಷ್ಟವಾಯಿತು. ಹೀಗೆ ಸದ್ಗುರುವಿಗೆ ಶರಣುಹೋಗಿ ಬ್ರಹ್ಮಸ್ವರೂಪವನ್ನು ಪಡೆಯುವ ಅವಕಾಶವನ್ನು ಮಾನವನು ಉಪಯೋಗಿಸಿಕೊಳ್ಳಬೇಕು. ಇಲ್ಲವಾದರೆ ಅವನು ಅಭಾಗಿಯೇ ಸರಿ ಎಂದು ತುಕಾರಾಮರು ಅನ್ನುತ್ತಾರೆ. {{center|೮}} ದೇಹ ತೋ ಪಂಢರಿ ಪ್ರೇಮ ಪುಂಡಲೀಕ| ಸ್ವಭಾವ ಸನ್ಮುಖ ಚಂದ್ರಭಾಗಾ||೧|| ವಿವೇಕಾಚೀ ವೀಟ ಆತ್ಮಾ ಪಂಢರೀರಾವ| ಜೇಥೇ ತೇಥೇ ದೇವ ಠಸಾವಲಾ||೨|| ಕ್ಷಮಾ ದಯಾ ದೋನ್ಹೀ ರುಕ್ಷ್ಮಿಣೀ ತೇ ರಾಯಿ| ದೋಹಿಕಡೆ ಪಾಹೀ ಉಭೀ ಅಸೇ||೩|| {{center|೯೭}}<noinclude></noinclude> lzqwescrdyvnl5wcfkcd765jb0dr59p 319706 319699 2026-05-14T06:53:59Z Shreelatha.Halemane 7642 /* Validated */ 319706 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೨)}} ಮಹಾಕಾರಣ ಎಂಬ ಶರೀರದ ಅಂಗಗಳು ನಾಲ್ಕು ಮುಖಗಳಿದ್ದಂತೆ. ಜ್ಞಾನಸಾಧನವಾದ ಸಹಸ್ರದಳ ಕಮಲವು ಸಹಸ್ರ ನಯನಗಳಿದ್ದಂತೆ. ನವದ್ವಾರಗಳು ಒಂಬತ್ತು ಕಿವಿಗಳಿದ್ದಂತೆ. ಚಂದ್ರನ ಹದಿನೇಳನೆಯ ಕಲೆಯಿಂದ ಅಮೃತವು ಸುರಿಯುವುದರಿಂದ, ಆ ಸ್ಥಾನವು ಸ್ತನವಿದ್ದಂತೆ, ಊರ್ಧ್ವ ಭಾಗದಲ್ಲಿದ್ದ ಬ್ರಹ್ಮರಂಧ್ರವು ಆಕಳಿನ ಕೋಡು ಇದ್ದಂತೆ. ಇಂಥ ಕಾಮಧೇನು ಎಂದರೆ ಆಧ್ಯಾತ್ಮಶಕ್ತಿಯುಳ್ಳ ಆಕಳು ವ್ಯಾಸನ ಮನೆಯಲ್ಲಿ ಹುಟ್ಟಿಬೆಳೆದರೂ ಮಹರ್ಷಿ ಜನಕರಾಜನ ಮನೆಯಲ್ಲಿ ಶುಕಮುನಿಯು ಈ ಕಾಮಧೇನುವನ್ನು ಕಾಯ್ದನು. ಅಂದರೆ ಶುಕನ ಅಹಂಕಾರವು ನಷ್ಟವಾಯಿತು. ಹೀಗೆ ಸದ್ಗುರುವಿಗೆ ಶರಣುಹೋಗಿ ಬ್ರಹ್ಮಸ್ವರೂಪವನ್ನು ಪಡೆಯುವ ಅವಕಾಶವನ್ನು ಮಾನವನು ಉಪಯೋಗಿಸಿಕೊಳ್ಳಬೇಕು. ಇಲ್ಲವಾದರೆ ಅವನು ಅಭಾಗಿಯೇ ಸರಿ ಎಂದು ತುಕಾರಾಮರು ಅನ್ನುತ್ತಾರೆ. {{center|೮}} ದೇಹ ತೋ ಪಂಢರಿ ಪ್ರೇಮ ಪುಂಡಲೀಕ| ಸ್ವಭಾವ ಸನ್ಮುಖ ಚಂದ್ರಭಾಗಾ||೧|| ವಿವೇಕಾಚೀ ವೀಟ ಆತ್ಮಾ ಪಂಢರೀರಾವ| ಜೇಥೇ ತೇಥೇ ದೇವ ಠಸಾವಲಾ||೨|| ಕ್ಷಮಾ ದಯಾ ದೋನ್ಹೀ ರುಕ್ಷ್ಮಿಣೀ ತೇ ರಾಯಿ| ದೋಹಿಕಡೆ ಪಾಹೀ ಉಭೀ ಅಸೇ||೩|| {{center|೯೭}}<noinclude></noinclude> 7pbm2p3vlrz3y63ll8yvk6w15vfbhyz ಪುಟ:ನಿತ್ಯ ನೇಮಾವಲಿ.pdf/೯೯ 104 101940 319700 284313 2026-05-14T06:43:15Z Shreesha Sharma 7840 /* Proofread */ 319700 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಬುದ್ಧಿ ವ ವೈರಾಗ್ಯ ಗರುಡ ಹನುಮಂತ| ಕರ ಜೋಡೋನಿ ತೇಥೇ ಪುಢೇ ಉಭಾ||೪|| ತುಕಾ ಮ್ಹಣ್ಹೇ ಆಮ್ಹೀ ದೇಖಲೀ ಪಂಢರೀ| ಚುಕವಿಲೀ ಫೇರೀ ಚೌರಾಂಶೀಚೀ||೫|| '''ಭಾವಾರ್ಥ''': ಮನುಷ್ಯನಲ್ಲಿ ಭಕ್ತಿ-ಭಾವ ಇದ್ದರೆ ದೇಹವೇ ಪಂಢರಪುರವಾಗಬಹುದು. ಭಗವಂತನಲ್ಲಿ ಇದ್ದ ಪ್ರೀತಿ ಅಥವಾ ಪ್ರೇಮವೇ ಪುಂಡಲೀಕ, ಪ್ರೇಮವು ಉತ್ಕಟವಾಗಿ ಹರಿದರೆ ಆಗುವ ಸ್ವಭಾವವೇ ಚುದ್ರಭಾಗಾ ನದಿಯು, ಎಂದರೆ ಭಗವದ್ಭಕ್ತಿಯೇ ಸ್ವಭಾವವಾದಾಗ, ವಿಠಲನು ದೇಹವನ್ನು ಬಿಟ್ಟು ಹೋಗುವುದಿಲ್ಲ. ಮನುಷ್ಯನಲ್ಲಿ ನಿತ್ಯಾನಿತ್ಯ ವಿವೇಕ ಉದಯಿಸಿ, ದೇಹಬುದ್ಧಿ, ವಾಸನೆಗಳು ನಷ್ಟವಾದರೆ, ದೇವನು ವಿವೇಕವೆಂಬ ಇಟ್ಟಿಗೆಯ ಮೇಲಿಂದ ಚಲಿಸುವದಿಲ್ಲ. ಹೃದಯದಲ್ಲಿಯೇ ಆತ್ಮರೂಪೀ ವಿಠಲನು ನಿಲ್ಲುವನು. ಆಗ ಕ್ಷಮಾ-ದಯಾ ರೂಪದಲ್ಲಿದ್ದ ರಖುಮಾಯಿ-ರುಕ್ಕಿಣಿಯರು ಎರಡೂ ಬದಿಗೆ ನಿಲ್ಲುತ್ತಾರೆ.ವಿವೇಕ-ವೈರಾಗ್ಯದಂತಿದ್ದ ಗರುಡ-ಹನುಮಂತರು ಎದುರಿಗೆ ಕೈ ಜೋಡಿಸಿ ನಿಲ್ಲುತ್ತಾರೆ. ಆತ್ಮದರ್ಶನವಾದಾಗ ಎಂಬತ್ನಾಲ್ಕು ಲಕ್ಷ ಯೋನಿಗಳಲ್ಲಿ ಜನ್ಮ ತೆಗೆದುಕೊಳ್ಳುವುದು ತಪ್ಪಿ ಹೋಗುತ್ತದೆ. ಇದೇ ಪಂಢರಪುರದ ಯಾತ್ರೆಯೆಂದು ತುಕಾರಾಮರು ಹೇಳುತ್ತಾರೆ. {{center|೯೮}}<noinclude></noinclude> jcou9aam6skm7402lpb5ux6po9vblnd 319707 319700 2026-05-14T06:54:13Z Shreelatha.Halemane 7642 /* Validated */ 319707 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಬುದ್ಧಿ ವ ವೈರಾಗ್ಯ ಗರುಡ ಹನುಮಂತ| ಕರ ಜೋಡೋನಿ ತೇಥೇ ಪುಢೇ ಉಭಾ||೪|| ತುಕಾ ಮ್ಹಣ್ಹೇ ಆಮ್ಹೀ ದೇಖಲೀ ಪಂಢರೀ| ಚುಕವಿಲೀ ಫೇರೀ ಚೌರಾಂಶೀಚೀ||೫|| '''ಭಾವಾರ್ಥ''': ಮನುಷ್ಯನಲ್ಲಿ ಭಕ್ತಿ-ಭಾವ ಇದ್ದರೆ ದೇಹವೇ ಪಂಢರಪುರವಾಗಬಹುದು. ಭಗವಂತನಲ್ಲಿ ಇದ್ದ ಪ್ರೀತಿ ಅಥವಾ ಪ್ರೇಮವೇ ಪುಂಡಲೀಕ, ಪ್ರೇಮವು ಉತ್ಕಟವಾಗಿ ಹರಿದರೆ ಆಗುವ ಸ್ವಭಾವವೇ ಚುದ್ರಭಾಗಾ ನದಿಯು, ಎಂದರೆ ಭಗವದ್ಭಕ್ತಿಯೇ ಸ್ವಭಾವವಾದಾಗ, ವಿಠಲನು ದೇಹವನ್ನು ಬಿಟ್ಟು ಹೋಗುವುದಿಲ್ಲ. ಮನುಷ್ಯನಲ್ಲಿ ನಿತ್ಯಾನಿತ್ಯ ವಿವೇಕ ಉದಯಿಸಿ, ದೇಹಬುದ್ಧಿ, ವಾಸನೆಗಳು ನಷ್ಟವಾದರೆ, ದೇವನು ವಿವೇಕವೆಂಬ ಇಟ್ಟಿಗೆಯ ಮೇಲಿಂದ ಚಲಿಸುವದಿಲ್ಲ. ಹೃದಯದಲ್ಲಿಯೇ ಆತ್ಮರೂಪೀ ವಿಠಲನು ನಿಲ್ಲುವನು. ಆಗ ಕ್ಷಮಾ-ದಯಾ ರೂಪದಲ್ಲಿದ್ದ ರಖುಮಾಯಿ-ರುಕ್ಕಿಣಿಯರು ಎರಡೂ ಬದಿಗೆ ನಿಲ್ಲುತ್ತಾರೆ.ವಿವೇಕ-ವೈರಾಗ್ಯದಂತಿದ್ದ ಗರುಡ-ಹನುಮಂತರು ಎದುರಿಗೆ ಕೈ ಜೋಡಿಸಿ ನಿಲ್ಲುತ್ತಾರೆ. ಆತ್ಮದರ್ಶನವಾದಾಗ ಎಂಬತ್ನಾಲ್ಕು ಲಕ್ಷ ಯೋನಿಗಳಲ್ಲಿ ಜನ್ಮ ತೆಗೆದುಕೊಳ್ಳುವುದು ತಪ್ಪಿ ಹೋಗುತ್ತದೆ. ಇದೇ ಪಂಢರಪುರದ ಯಾತ್ರೆಯೆಂದು ತುಕಾರಾಮರು ಹೇಳುತ್ತಾರೆ. {{center|೯೮}}<noinclude></noinclude> sylr9eeozm6uzvqdgcqioa3tc2bgwqf ಪುಟ:ನಿತ್ಯ ನೇಮಾವಲಿ.pdf/೧೨೪ 104 101961 319667 284334 2026-05-14T03:26:52Z Pragathi. BH 7585 /* Proofread */ 319667 proofread-page text/x-wiki <noinclude><pagequality level="3" user="Pragathi. BH" /></noinclude>ರಾತ್ರಿ ಭಜನೆ ಸಬ ಸಂತನ ಕೀ ಜಯ | ಬಾಲಗೋಪಾಲ ಕೀ ಜಯ! ತುಕಾರಾಮ ಮಹಾರಾಜಕೀ ಜಯ! ಜ್ಞಾನೋಬಾಮಹಾರಾಜಕೀ ಜಯ! ರುಕ್ಮಾಂಗದಮಹಾರಾಜಕೀ ಜಯ! ಕೃಷ್ಣದೈಪಾಯನಮಹಾರಾಜಕೀ ಜಯ! ರಾಮದಾಸಮಹಾರಾಜಕೀ ಜಯ! ಶ್ರೀ ಗುರುಲಿಂಗಜಂಗಮಮಹಾರಾಜಕೀ ಜಯ! ಶ್ರೀ ರಘುನಾಥಪ್ರಿಯಮಹಾರಾಜಕೀ ಜಯ! ಶ್ರೀ ಭಾವೂಸಾಹೇಬಮಹಾರಾಜಕೀ ಜಯ! ಶ್ರೀ ಅಂಬೂರಾವಮಹಾರಾಜಕೀ ಜಯ! ಶ್ರೀ ಗುರುದೇವ ರಾಮಭಾವೂಮಹಾರಾಜಕೀ ಜಯ! ಶ್ರೀ ಗುರುದೇವ ದತ್ತ ದತ್ತ ದತ್ತ! ರಾಮಾಶ್ರಮ ಸದ್ಗುರುರಾಜ ಗುರುಲಿಂಗಜಂಗಮಮಹಾರಾಜ! (೨ ಸಲ) ೧೨೩<noinclude></noinclude> mtx90749yl66nlkq7eczw3ta1z6iw3q ಪುಟ:ನಿತ್ಯ ನೇಮಾವಲಿ.pdf/೧೨೫ 104 101963 319671 284336 2026-05-14T04:36:53Z Pragathi. BH 7585 /* Proofread */ 319671 proofread-page text/x-wiki <noinclude><pagequality level="3" user="Pragathi. BH" /></noinclude>ನಿತ್ಯನೇಮಾವಲಿ ಗುರುಲಿಂಗಜಂಗಮಮಹಾರಾಜ (೨ ಸಲ) ರಾಮಾಶ್ರಮ ಸದ್ಗುರುರಾಜ ಗುರುಲಿಂಗಜಂಗಮಮಹಾರಾಜ!! ( ಸಲ) ಇಂಚಗೇರಿವಾಸೀ ಸದ್ಗುರುರಾಜ ಉಮದೀ ಭಾವೂಸಾಹೇಬಮಹಾರಾಜ (೨ ಸಲ) ಉಮದೀ ಭಾವೂಸಾಹೇಬಮಹಾರಾಜ (೨ ಸಲ) ಇಂಚಗೇರಿವಾಸೀ ಸದ್ಗುರುರಾಜ ಉಮದೀ ಭಾವೂಸಾಹೇಬಮಹಾರಾಜನ (೨ ಸಲ) ಇಂಚಗೇರಿವಾಸೀ ಸದ್ಗುರುರಾಜ ಜಿಗಜೇವಣೀ ಅಂಬುರಾವಮಹಾರಾಜ (೨ ಸಲ) ಜಿಗಜೇವಣೀ ಅಂಬುರಾವಮಹಾರಾಜ (೨ ಸಲ) ಇಂಚಗೇರಿವಾಸೀ ಸದ್ಗುರುರಾಜ ಜಿಗಜೇವಣೀ ಅಂಬೂರಾವಮಹಾರಾಜ|| (೨ ಸಲ) ನಿಂಬಾಳವಾಸೀ ಸದ್ಗುರುರಾಜ ಗುರುದೇವ ರಾಮಭಾವೂಮಹಾರಾಜ (೨ ಸಲ) ಗುರುದೇವ ರಾಮಭಾವೂಮಹಾರಾಜ (೨ ಸಲ) ನಿಂಬಾಳವಾಸೀ ಸದ್ಗುರುರಾಜ ಗುರುದೇವ ರಾಮಭಾವೂಮಹಾರಾಜ (೨ ಸಲ) (೧೮ ರಿಂದ ೨೦ರವರೆಗೆ ಜಯಘೋಷವಿರುತ್ತದೆ) ೧೨೪<noinclude></noinclude> shvid4jna4e7eexemszwhtrgv23aeh1 ಪುಟ:ನಿತ್ಯ ನೇಮಾವಲಿ.pdf/೧೨೬ 104 101965 319676 284338 2026-05-14T04:49:02Z Pragathi. BH 7585 /* Proofread */ 319676 proofread-page text/x-wiki <noinclude><pagequality level="3" user="Pragathi. BH" /></noinclude>ರಾತ್ರಿ ಭಜನೆ ಆಕಲ್ಪ ಆಯುಷ್ಯ ವ್ಯಾವೇ ತಯಾ ಕುಳಾ ಮಾಝಿಯಾ ಸಕಳಾ ಹರಿಚ್ಯಾ ದಾಸಾ ಕಲ್ಪನೇಚೀ ಬಾಧಾ ನ ಹೋ ಕೋಣೇ ಕಾಳೀ ಹೀ ಸಂತ ಮಂಡಳಿ ಸುಖೀ ಅಸೋ ಅಹಂಕಾರಾಚಾ ವಾರಾ ನ ಲಾಗೋ ರಾಜಸಾ ಮಾಝ್ಯಾ ವಿಷ್ಣುದಾಸಾ ಭಾವಿಕಾಸೀ ' ಶರೀರ ಪ್ರಾಣಾಸೀ ಕರೀನ ಕುರಮಂಡೀ। ಕ್ಷಣ ಏಕ ನ ಸೋಡೀ ಸಂಗ ತ್ಯಾಚಾ ನಾಮಾ ಮ್ಹಣ್ ತಯಾ ಅಸಾವೇ ಕಲ್ಯಾಣ ಜ್ಯಾ ಮುಖೀ ನಿಧಾನ ಪಾಂಡುರಂಗ ವಿಠಲ ರಖುಮಾಯೀ ವಿಠೋಬಾ ರಖುಮಾಯೀ ವಿಠಲ ವಿಠಲ ವಿಠಲ 11011 11 5 11 11 2 11 11 8 11 11 89 11 ಭಾವಾರ್ಥ: ನನ್ನ ಎಲ್ಲ ಹರಿದಾಸರಿಗೂ, ಅವರ ಕುಲಕ್ಕೂ ಸಹ ದೇವರು ದೀರ್ಘ ಆಯುಷ್ಯವನ್ನು ದಯಪಾಲಿಸಲಿ. ಯಾವಕಾಲಕ್ಕೂ ವಿಷಯಕಲ್ಪನೆಯ ಬಾಧೆ ಅವರಿಗಾಗದಿರಲಿ, ಸಂತಮಂಡಳಿ ಸುಖವಾಗಿರಲಿ, ಭಾವಿಕರಾದಂಥ ೧೨೫<noinclude></noinclude> qkjel8ukmxkke9d0zvy46qxbzqx1gwd ಪುಟ:ನಿತ್ಯ ನೇಮಾವಲಿ.pdf/೧೨೭ 104 101967 319677 284340 2026-05-14T04:50:38Z Pragathi. BH 7585 /* Proofread */ 319677 proofread-page text/x-wiki <noinclude><pagequality level="3" user="Pragathi. BH" /></noinclude>ನಿತ್ಯನೇಮಾವಲಿ ವಿಷ್ಣುದಾಸರಿಗೆ ಅಹಂಕಾರದ ಸೋಂಕು ಆಗದಿರಲಿ. ಇಂಥವರ ಪಾದಕ್ಕೆ ನನ್ನ ಶರೀರ ಮತ್ತು ಪ್ರಾಣಗಳನ್ನು ನಿವಾಳಿಸಿ ಚೆಲ್ಲುತ್ತೇನೆ (ಎಂದರೆ ಪರೋಪಕಾರಕ್ಕಾಗಿ ಮೀಸಲಿಡುತ್ತೇನೆ. ಇಂಥವರ ಸಂಗವನ್ನು ಕ್ಷಣಮಾತ್ರವೂ ಬಿಡುವುದಿಲ್ಲ. ಯಾರು ಪಾಂಡುರಂಗನ ನಾಮಸ್ಮರಣೆ ಮಾಡುವರೋ ಅಂಥ ಸಾಧಕರಿಗೆ ಕಲ್ಯಾಣವಾಗಲಿ ಎಂದು ನಾಮದೇವರು ಹೇಳುತ್ತಾರೆ. وو ಮಿ ತವ ಅನ್ಯಾಯೀ ಅಪರಾಧೀ। ಕರ್ಮಹೀನ ಮತಿಮಂದಬುದ್ಧಿ ತುಜ ಮ್ಯಾ ಆಠವಿಲೇ ನಾಹೀ ಕಧೀ ವಾಚೇ ಕೃಪಾನಿಧಿ ಮಾಯಬಾಪಾ ನಾಹೀ ಐಕಿಲೇ ಗಾಯಿಲೇ ಗೀತ ಧರಿಲೀ ಲಾಜ ಸಾಂಡಿಲೇ ಹಿತ ನಾವಡ ಪುರಾಣ ಬೈಸಲೇ ಸಂತ ಕಲೀ ಬಹುತ ಪರನಿಂದಾ ಕೇಲಾ ನಾಹೀ ಕರವಿಲಾ ನಾಹೀ 11011 11 2 11 11 & 11 11 8 11 ಪರೋಪಕಾರ 11 23 11 ನಾಹೀ ದಯಾ ಆಲೀ ಪೀಡಿತಾ ಪರ ೧೨೬<noinclude></noinclude> 1gy3n0u46jt3lzcj110qzx0xdq04wqi ಪುಟ:ನಿತ್ಯ ನೇಮಾವಲಿ.pdf/೧೨೮ 104 101969 319725 284342 2026-05-14T08:41:33Z Pragathi. BH 7585 /* Proofread */ 319725 proofread-page text/x-wiki <noinclude><pagequality level="3" user="Pragathi. BH" /></noinclude>ರಾತ್ರಿ ಭಜನ ಕರೂ ನಯೇ ತೋ ಕೇಲಾ ವ್ಯಾಪಾರ ಉತರೀ ಪಾರ ತುಕಾ ಮಣ್ ಜ್ಞಾನೋಬಾ ತುಕಾರಾಮ ಜ್ಞಾನೋಬಾ ತುಕಾರಾಮ ತುಕಾರಾಮ ತುಕಾರಾಮ ತುಕರಾಮ 11 2 11 ಭಾವಾರ್ಥ: ನಾನು ಕರ್ಮಹೀನನು, ಮಂದಮತಿಯು, ಅಪರಾಧಿಯು; ಅನ್ಯಾಯ ಮಾಡಿದ್ದೇನೆ. ನಿನ್ನನ್ನು ಎಂದೂ ನೆನೆಯಲಿಲ್ಲ. ಕೃಪಾನಿಧಿ ತಂದೆಯೇ, ಎಂದೂ ಕೀರ್ತನ ಕೇಳಲಿಲ್ಲ. ಸ್ವತಃ ಕೀರ್ತನೆ ಮಾಡಲಿಲ್ಲ. ಲಜ್ಜೆಯಿಂದ ವರ್ತಿಸಿದೆ, ಹಿತವನ್ನು ಸಾಧಿಸಲಿಲ್ಲ; ಪುರಾಣ ಕೇಳಲಿಲ್ಲ, ಸಂತರ ಸಂಗ ಮಾಡಲಿಲ್ಲ, ಪರನಿಂದೆಯನ್ನು ಮಾಡಿದೆ; ಪರೋಪಕಾರ ಮಾಡಲಿಲ್ಲ, ಯಾರಿಂದಲೂ ಮಾಡಿಸಲಿಲ್ಲ, ಪೀಡಿತ ಜನರ ಬಗ್ಗೆ ಕನಿಕರ ಪಡಲಿಲ್ಲ. ಮಾಡಬಾರದ ಎಲ್ಲ ವ್ಯಾಪಾರ ಮಾಡಿಬಿಟ್ಟೆ, ಉದ್ಧಾರ ಮಾಡು ಎಂದು ತುಕಾರಾಮರು ಹೇಳುತ್ತಾರೆ. ಜ್ಞಾನದೇವ ತುಕಾರಾಮ, ಜ್ಞಾನದೇವ ತುಕಾರಾಮ, ಜ್ಞಾನದೇವ ತುಕಾರಾಮ. ಅಹೋ ಬೋಲಿಲೇ ಲೇಕರೂ ವೇಡೇವಾಕುಡೇ ಉತ್ತರೂ ೧೨೭ 11011<noinclude></noinclude> se5rtft67w9f1bkthk30j9f47jv84zb ಪುಟ:ನಿತ್ಯ ನೇಮಾವಲಿ.pdf/೧೨೯ 104 101971 319727 284344 2026-05-14T08:43:31Z Pragathi. BH 7585 /* Proofread */ 319727 proofread-page text/x-wiki <noinclude><pagequality level="3" user="Pragathi. BH" /></noinclude>ನಿತ್ಯನೇಮಾವಲಿ ಕ್ಷಮಾ ಕರಾ ಅಪರಾಧ ಮಹಾರಾಜ ತುಮ್ಹೀ ಸಿದ್ಧ ಅಹೂ ನಾಹಿ ವಿಚಾರಿಲಾ। ಅಧಿಕಾರ ಮ್ಯಾ ಆಪುಲಾ ತುಕಾ ಮನೇ ಜ್ಞಾನೇಶ್ವರಾ ರಾಖಾ ಪಾಯಾಪೇ ಕಿಂಕರಾ 11. 11 9 11 11 211 ಭಾವಾರ್ಥ: ಏನೇನೋ ಮಾತನಾಡಿ ಬಿಟ್ಟೆ. ಮಹಾರಾಜರೇ, ಕ್ಷಮಿಸಿರಿ. ನೀವು ಸಿದ್ಧಪುರುಷರು. ನಿಮ್ಮ ಅಧಿಕಾರವನ್ನು ತಿಳಿಯದೆ ಮಾತನಾಡಿ ಬಿಟ್ಟೆ. ನಿಮ್ಮ ಪಾದಸೇವಕನನ್ನು ಚರಣ ಸನ್ನಿಧಿಯಲ್ಲಿ ಇಟ್ಟುಕೊಂಡು ಕಾಪಾಡಿರಿ, ಎಂದು ತುಕಾರಾಮರು ಜ್ಞಾನೇಶ್ವರಮಹಾರಾಜರಿಗೆ ಕೇಳಿಕೊಳ್ಳುತ್ತಾರೆ. ೨೪ ಪಾಹೀ ಪ್ರಸಾದಾಚೀ ವಾಟ ದ್ಯಾವೇ ಧುವೋನಿಯಾ ತಾಟ 11011 ಶೇಷ ಫೇವೂನಿ ಜಾಯಿನ ತುಮಚೇ ಝಾಲಿಯಾ ಭೋಜನ 11 9 11 ಅಹೂ ಝಾಲೋ ಏಕಸವಾ ತುಮ್ಹಾ ಆಡ ನ ಯೇ ದೇವಾ ೧೨೮ 11 211<noinclude></noinclude> o9jk5mkdwlrnw3c94om8llfk3sohnp9 ಪುಟ:ನಿತ್ಯ ನೇಮಾವಲಿ.pdf/೧೩೦ 104 101973 319728 284346 2026-05-14T08:46:12Z Pragathi. BH 7585 /* Proofread */ 319728 proofread-page text/x-wiki <noinclude><pagequality level="3" user="Pragathi. BH" /></noinclude>ತುಕಾ ಮ್ಹಣೇ ಚಿತ್ತ. ವೀಳ್ಯ ಕರೂನಿ ರಾಹಿಲೋ ನಿವಾಂತ ಭಾವಾರ್ಥ: ಪ್ರಸಾದದ ದಾರಿ ಕಾಯುತ್ತೇನೆ. ಸ್ವಚ್ಛವಾದ ತಟ್ಟೆಯಲ್ಲಿ ನಿಮ್ಮ ಭೋಜನವಾದ ನಂತರ, ಉಳಿದ ಶೇಷಭಾಗವನ್ನು ತೆಗೆದುಕೊಂಡು ಹೋಗುತ್ತೇನೆ. (ಇಲ್ಲಿ ಊಟವೆಂದರೆ ಆಹಾರ ಭೋಜನವಲ್ಲ. ಶೇಷಭಾಗವೆಂದರೆ ಉಂಡು ಬಿಟ್ಟದ್ದಲ್ಲ. ಆತ್ಮಾನಂದದ ಒಂದು ಅಂಶ). ನಿಮ್ಮ ನಿತ್ಯನೇಮ ಸಾಧನೆಗೆ ಅಡ್ಡ ಬರುವುದಿಲ್ಲ. (ಸಾಕ್ಷಾತ್ಕಾರದ ಆನಂದದಿಂದ ಸಂತರ ಹೊಟ್ಟೆ ತುಂಬಿದ ನಂತರವೇ ಅದನ್ನು ಅವರು ಇತರರಿಗೆ ಹಂಚುತ್ತಾರೆ.) ಹೀಗೆ ತುಕಾರಾಮಮಹಾರಾಜರು ಶಾಂತಮನಸ್ಸಿನಿಂದ ಹೇಳುತ್ತಾರೆ. ವಿಡಾ (ವೀಳ್ಯ) ವಿಡಾ ಫ್ಯಾಹೋ ನಾರಾಯಣಾ। ಕೃಷ್ಣಾ ಜಗಜ್ಜೀವನಾ ವಿನವಿತೇ ರಖುಮಾಯಿ ದಾಸೀ ಹೋಯಿನ ಮೀ ಕಾನ್ಹಾ|| ದೃ ಶಾಂತಿ ಹೇ ನಾಗವಲೀ ಪಾನೇ ಘೇವೂನಿಯಾ ಕರೀ ಮೀಪಣ ಜಾಳೂನಿಯಾ। ಚುನಾ ಲಾವಿಯೇಲಾ ವರೀ 110 11 ೧೨೯<noinclude></noinclude> t1m6ddajrlf3rr15uh3ed1avaw4g07e ಪುಟ:ನಿತ್ಯ ನೇಮಾವಲಿ.pdf/೧೩೧ 104 101975 319730 284348 2026-05-14T08:51:39Z Pragathi. BH 7585 /* Proofread */ 319730 proofread-page text/x-wiki <noinclude><pagequality level="3" user="Pragathi. BH" /></noinclude>ನಿತ್ಯನೇಮಾವಲಿ ವಾಸನಾ ಫೋಡೂನಿಯಾ| ಚೂರ್ಣ ಕೇಲೀ ಸುಪಾರಿ ಭಾವಾರ್ಥ ಕಾಪುರಾನೇ! ಘೋಳಿಯೇಲೀ ನಿರ್ಧಾರೀ ವಿವೇಕ ಹಾ ಕಾತರಂಗ ರಂಗೀ ರಂಗಲಾ ಸುರಂಗ ವೈರಾಗ್ಯ ಜಾಯಫಳ ಮಿಳವಿಲೇ ಸಕಳ 11 5 11 11 2 11 ದಯಾ ಹೀ ಜಾಯಪತ್ರೀ| ಕ್ಷಮಾ ಲವಂಗಾ ಆಣಿಲ್ಯಾ ಸುಬುದ್ಧಿ ವೇಲದೊಡೇ! ಶಿವರಾಮಿ ಅರ್ಪಿಯೇಲೇ || ೪ || ಭಾವಾರ್ಥ: ಜಗಜ್ಜೀವನನಾದ ಕೃಷ್ಣಾ, ನಾರಾಯಣಾ, ವೀಳ್ಯವನ್ನು ತೆಗೆದುಕೋ ಎಂದು ರಖುಮಾಯಿ ಸೇವೆಗೆ ಸಿದ್ಧಳಾಗಿ ಬೇಡಿಕೊಳ್ಳುತ್ತಾಳೆ. ಶಾಂತಿ ಎಂಬ ವೀಳ್ಯದೆಲೆಯನ್ನು ಕೈಯಲ್ಲಿ ಹಿಡಿದು, ಅಹಂಕಾರವನ್ನುಸುಟ್ಟು ಮಾಡಿದ ಸುಣ್ಣವನ್ನು ಎಲೆಗೆ ಹಚ್ಚಿ, ಮನೋವಿಕಾರಗಳನ್ನು ಕುಟ್ಟಿ ಅಡಿಕೆ ಪುಡಿ ಮಾಡಿ, ಸದ್ಭಾವವೆಂಬ ಕರ್ಪುರ ಹಾಕಿ, ಬಣ್ಣ ಬರುವಂತೆ ವಿವೇಕದ ಕಾಚನ್ನು ಹಾಕಿ, ವೈರಾಗ್ಯವೆಂಬ ಜಾಜೀಕಾಯಿ ಕೂಡಿಸಿ, ದಯೆಯೆಂಬ ಪತ್ರಿಯನ್ನು ಇಟ್ಟು, ಕ್ಷಮೆ ಎಂಬ ಲವಂಗ ಹಾಕಿ, ಸುಬುದ್ಧಿಯಂಬ ಯಾಲಕ್ಕಿ ಬೆರಸಿ, ವೀಳ್ಯ ತಯಾರಿಸಿದ್ದೇನೆ. ಶಿವರಾಮನಿಗೆ ಇಂತಹ ವೀಳ್ಯವು ಅರ್ಪಿಸಲ್ಪಟ್ಟಿತು. ವಿಡಾ ಘಯಿ ನರಹರಿರಾಯಾ। ಧರುನಿ ಮಾನವಾಚೀ ಕಾಯಾ| ಯತಿವೇಷ ಘವುನಿಯಾ| ವಸಸೀ ದೀನಾಸೀ ತಾರಾಯಾ || ೪ || ೧೩೦<noinclude></noinclude> d53kf9t0p7kwrrqoqnqgzr52vookg9m ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ ಮೇ-ಜೂನ್ ೨೦೨೬/ವಾರ೧ 4 120709 319681 2026-05-14T05:46:29Z A826 6806 ಹೊಸ ಪುಟ: == ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು == ಯೋಜನೆಯ ವಿವರಣೆ: ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚ... 319681 wikitext text/x-wiki == ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು == ಯೋಜನೆಯ ವಿವರಣೆ: ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. === ಸಮಯ ಪಟ್ಟಿ === {| class="wikitable" ! ದಿನಾಂಕ (Date) !! ಕಾರ್ಯ (Task) !! ಕಲಿಕೆಯ ಉದ್ದೇಶ (Learning Objective) |- | ಮೇ 8 || ಮುನ್ನುಡಿ ಮತ್ತು ನೀತಿ ನಿಯಮಗಳು (Orientation & Ethics) || ಸಾರ್ವಜನಿಕ ಡೊಮೇನ್ ಬಗ್ಗೆ ತಿಳಿಯುವುದು + ಸ್ಥಳೀಯ ಭಾಷೆಯ ಮೇಲೆ ಕೇಂದ್ರೀಕರಿಸುವುದು. |- | ಮೇ 9 || ಮೂಲಗಳ ಗುರುತಿಸುವಿಕೆ (Source Identification) || 50 ಪುಸ್ತಕಗಳನ್ನು ಆಯ್ಕೆ ಮಾಡುವುದು (ಕನಿಷ್ಠ 70% ಮೂಲ ಕನ್ನಡ '''ಕಾಲ್ಪನಿಕವಲ್ಲದ''' ಪುಸ್ತಕಗಳಾಗಿರಬೇಕು). |- | ಮೇ 11 || ಮಾಹಿತಿ ಮಾನದಂಡಗಳು + ಕ್ಯಾಟಲಾಗಿಂಗ್ - ಭಾಗ 1 (Metadata + Cataloguing I) || ಡಬ್ಲಿನ್ ಕೋರ್ (Dublin Core) ಕಲಿಯುವುದು + 25 ನಮೂದುಗಳನ್ನು ಪ್ರಾರಂಭಿಸುವುದು. |- | ಮೇ 12 || ಕ್ಯಾಟಲಾಗಿಂಗ್ - ಭಾಗ 2 (Cataloguing II) || ಉಳಿದ 25 ನಮೂದುಗಳನ್ನು ಪೂರ್ಣಗೊಳಿಸುವುದು (ಒಟ್ಟು 50 entries). |- | ಮೇ 13 || ದತ್ತಾಂಶದ ಸೇರ್ಪಡೆ (Data Ingestion) || ಅಪ್ಲೋಡ್ ಮಾಡುವುದು + ಸರಿಯಾದ ಹೆಸರಿಡುವ ಸಂಪ್ರದಾಯಗಳನ್ನು (naming conventions) ಅನುಸರಿಸುವುದು. |- | '''ಮೇ 14''' || ಪುನರ್ ವಿಮರ್ಶೆ + ಗುಣಮಟ್ಟ ತಪಾಸಣೆ (Review + QA) || ಎಲ್ಲಾ 50 ನಮೂದುಗಳನ್ನು ಪರಿಶೀಲಿಸುವುದು (validate entries) – ತಪ್ಪುಗಳಿದ್ದರೆ ತಿದ್ದುಪಡಿ ಮಾಡುವುದು. |} === ಪ್ರಮುಖ ಸೂಚನೆಗಳು (Key Instructions) === * ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. * ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು (ಅನುವಾದಿತವಲ್ಲದವು). * ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ, ಮತ್ತು ಕನ್ನಡ ಯುನಿಕೋಡ್ ಅನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. ofmodizd1e5zk0v3yu1uz8ctfgr8gm9 319682 319681 2026-05-14T05:48:01Z A826 6806 319682 wikitext text/x-wiki ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. === ಸಮಯ ಪಟ್ಟಿ === {| class="wikitable" ! ದಿನಾಂಕ (Date) !! ಕಾರ್ಯ (Task) !! ಕಲಿಕೆಯ ಉದ್ದೇಶ (Learning Objective) |- | ಮೇ 8 || ಮುನ್ನುಡಿ ಮತ್ತು ನೀತಿ ನಿಯಮಗಳು (Orientation & Ethics) || ಸಾರ್ವಜನಿಕ ಡೊಮೇನ್ ಬಗ್ಗೆ ತಿಳಿಯುವುದು + ಸ್ಥಳೀಯ ಭಾಷೆಯ ಮೇಲೆ ಕೇಂದ್ರೀಕರಿಸುವುದು. |- | ಮೇ 9 || ಮೂಲಗಳ ಗುರುತಿಸುವಿಕೆ (Source Identification) || 50 ಪುಸ್ತಕಗಳನ್ನು ಆಯ್ಕೆ ಮಾಡುವುದು (ಕನಿಷ್ಠ 70% ಮೂಲ ಕನ್ನಡ '''ಕಾಲ್ಪನಿಕವಲ್ಲದ''' ಪುಸ್ತಕಗಳಾಗಿರಬೇಕು). |- | ಮೇ 11 || ಮಾಹಿತಿ ಮಾನದಂಡಗಳು + ಕ್ಯಾಟಲಾಗಿಂಗ್ - ಭಾಗ 1 (Metadata + Cataloguing I) || ಡಬ್ಲಿನ್ ಕೋರ್ (Dublin Core) ಕಲಿಯುವುದು + 25 ನಮೂದುಗಳನ್ನು ಪ್ರಾರಂಭಿಸುವುದು. |- | ಮೇ 12 || ಕ್ಯಾಟಲಾಗಿಂಗ್ - ಭಾಗ 2 (Cataloguing II) || ಉಳಿದ 25 ನಮೂದುಗಳನ್ನು ಪೂರ್ಣಗೊಳಿಸುವುದು (ಒಟ್ಟು 50 entries). |- | ಮೇ 13 || ದತ್ತಾಂಶದ ಸೇರ್ಪಡೆ (Data Ingestion) || ಅಪ್ಲೋಡ್ ಮಾಡುವುದು + ಸರಿಯಾದ ಹೆಸರಿಡುವ ಸಂಪ್ರದಾಯಗಳನ್ನು (naming conventions) ಅನುಸರಿಸುವುದು. |- | '''ಮೇ 14''' || ಪುನರ್ ವಿಮರ್ಶೆ + ಗುಣಮಟ್ಟ ತಪಾಸಣೆ (Review + QA) || ಎಲ್ಲಾ 50 ನಮೂದುಗಳನ್ನು ಪರಿಶೀಲಿಸುವುದು (validate entries) – ತಪ್ಪುಗಳಿದ್ದರೆ ತಿದ್ದುಪಡಿ ಮಾಡುವುದು. |} === ಪ್ರಮುಖ ಸೂಚನೆಗಳು (Key Instructions) === * ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. * ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು (ಅನುವಾದಿತವಲ್ಲದವು). * ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ, ಮತ್ತು ಕನ್ನಡ ಯುನಿಕೋಡ್ ಅನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. 5m62d5p5fo1b5fysfr00b4297aydfww 319683 319682 2026-05-14T05:48:30Z A826 6806 /* ಪ್ರಮುಖ ಸೂಚನೆಗಳು (Key Instructions) */ 319683 wikitext text/x-wiki ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. === ಸಮಯ ಪಟ್ಟಿ === {| class="wikitable" ! ದಿನಾಂಕ (Date) !! ಕಾರ್ಯ (Task) !! ಕಲಿಕೆಯ ಉದ್ದೇಶ (Learning Objective) |- | ಮೇ 8 || ಮುನ್ನುಡಿ ಮತ್ತು ನೀತಿ ನಿಯಮಗಳು (Orientation & Ethics) || ಸಾರ್ವಜನಿಕ ಡೊಮೇನ್ ಬಗ್ಗೆ ತಿಳಿಯುವುದು + ಸ್ಥಳೀಯ ಭಾಷೆಯ ಮೇಲೆ ಕೇಂದ್ರೀಕರಿಸುವುದು. |- | ಮೇ 9 || ಮೂಲಗಳ ಗುರುತಿಸುವಿಕೆ (Source Identification) || 50 ಪುಸ್ತಕಗಳನ್ನು ಆಯ್ಕೆ ಮಾಡುವುದು (ಕನಿಷ್ಠ 70% ಮೂಲ ಕನ್ನಡ '''ಕಾಲ್ಪನಿಕವಲ್ಲದ''' ಪುಸ್ತಕಗಳಾಗಿರಬೇಕು). |- | ಮೇ 11 || ಮಾಹಿತಿ ಮಾನದಂಡಗಳು + ಕ್ಯಾಟಲಾಗಿಂಗ್ - ಭಾಗ 1 (Metadata + Cataloguing I) || ಡಬ್ಲಿನ್ ಕೋರ್ (Dublin Core) ಕಲಿಯುವುದು + 25 ನಮೂದುಗಳನ್ನು ಪ್ರಾರಂಭಿಸುವುದು. |- | ಮೇ 12 || ಕ್ಯಾಟಲಾಗಿಂಗ್ - ಭಾಗ 2 (Cataloguing II) || ಉಳಿದ 25 ನಮೂದುಗಳನ್ನು ಪೂರ್ಣಗೊಳಿಸುವುದು (ಒಟ್ಟು 50 entries). |- | ಮೇ 13 || ದತ್ತಾಂಶದ ಸೇರ್ಪಡೆ (Data Ingestion) || ಅಪ್ಲೋಡ್ ಮಾಡುವುದು + ಸರಿಯಾದ ಹೆಸರಿಡುವ ಸಂಪ್ರದಾಯಗಳನ್ನು (naming conventions) ಅನುಸರಿಸುವುದು. |- | '''ಮೇ 14''' || ಪುನರ್ ವಿಮರ್ಶೆ + ಗುಣಮಟ್ಟ ತಪಾಸಣೆ (Review + QA) || ಎಲ್ಲಾ 50 ನಮೂದುಗಳನ್ನು ಪರಿಶೀಲಿಸುವುದು (validate entries) – ತಪ್ಪುಗಳಿದ್ದರೆ ತಿದ್ದುಪಡಿ ಮಾಡುವುದು. |} === ಪ್ರಮುಖ ಸೂಚನೆಗಳು (Key Instructions) === * ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. * ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. * ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ, ಮತ್ತು ಕನ್ನಡ ಯುನಿಕೋಡ್ ಅನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. 1ghau8yclapxf8acwc4fp4g3om6ddxb 319684 319683 2026-05-14T05:51:03Z A826 6806 319684 wikitext text/x-wiki ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ, ಮತ್ತು ಕನ್ನಡ ಯುನಿಕೋಡ್ ಅನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ಸಮಯ ಪಟ್ಟಿ === {| class="wikitable" ! ದಿನಾಂಕ (Date) !! ಕಾರ್ಯ (Task) !! ಕಲಿಕೆಯ ಉದ್ದೇಶ (Learning Objective) |- | ಮೇ 8 || ಮುನ್ನುಡಿ ಮತ್ತು ನೀತಿ ನಿಯಮಗಳು (Orientation & Ethics) || ಸಾರ್ವಜನಿಕ ಡೊಮೇನ್ ಬಗ್ಗೆ ತಿಳಿಯುವುದು + ಸ್ಥಳೀಯ ಭಾಷೆಯ ಮೇಲೆ ಕೇಂದ್ರೀಕರಿಸುವುದು. |- | ಮೇ 9 || ಮೂಲಗಳ ಗುರುತಿಸುವಿಕೆ (Source Identification) || 50 ಪುಸ್ತಕಗಳನ್ನು ಆಯ್ಕೆ ಮಾಡುವುದು (ಕನಿಷ್ಠ 70% ಮೂಲ ಕನ್ನಡ '''ಕಾಲ್ಪನಿಕವಲ್ಲದ''' ಪುಸ್ತಕಗಳಾಗಿರಬೇಕು). |- | ಮೇ 11 || ಮಾಹಿತಿ ಮಾನದಂಡಗಳು + ಕ್ಯಾಟಲಾಗಿಂಗ್ - ಭಾಗ 1 (Metadata + Cataloguing I) || ಡಬ್ಲಿನ್ ಕೋರ್ (Dublin Core) ಕಲಿಯುವುದು + 25 ನಮೂದುಗಳನ್ನು ಪ್ರಾರಂಭಿಸುವುದು. |- | ಮೇ 12 || ಕ್ಯಾಟಲಾಗಿಂಗ್ - ಭಾಗ 2 (Cataloguing II) || ಉಳಿದ 25 ನಮೂದುಗಳನ್ನು ಪೂರ್ಣಗೊಳಿಸುವುದು (ಒಟ್ಟು 50 entries). |- | ಮೇ 13 || ದತ್ತಾಂಶದ ಸೇರ್ಪಡೆ (Data Ingestion) || ಅಪ್ಲೋಡ್ ಮಾಡುವುದು + ಸರಿಯಾದ ಹೆಸರಿಡುವ ಸಂಪ್ರದಾಯಗಳನ್ನು (naming conventions) ಅನುಸರಿಸುವುದು. |- | '''ಮೇ 14''' || ಪುನರ್ ವಿಮರ್ಶೆ + ಗುಣಮಟ್ಟ ತಪಾಸಣೆ (Review + QA) || ಎಲ್ಲಾ 50 ನಮೂದುಗಳನ್ನು ಪರಿಶೀಲಿಸುವುದು (validate entries) – ತಪ್ಪುಗಳಿದ್ದರೆ ತಿದ್ದುಪಡಿ ಮಾಡುವುದು. |} twg2qk4597rt6ay0hn3meavb09yxyz5 319691 319684 2026-05-14T06:02:02Z A826 6806 319691 wikitext text/x-wiki ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ಸಮಯ ಪಟ್ಟಿ === {| class="wikitable" ! ದಿನಾಂಕ (Date) !! ಕಾರ್ಯ (Task) !! ಕಲಿಕೆಯ ಉದ್ದೇಶ (Learning Objective) |- | ಮೇ 8 || ಮುನ್ನುಡಿ ಮತ್ತು ನೀತಿ ನಿಯಮಗಳು (Orientation & Ethics) || ಸಾರ್ವಜನಿಕ ಡೊಮೇನ್ ಬಗ್ಗೆ ತಿಳಿಯುವುದು + ಸ್ಥಳೀಯ ಭಾಷೆಯ ಮೇಲೆ ಕೇಂದ್ರೀಕರಿಸುವುದು. |- | ಮೇ 9 || ಮೂಲಗಳ ಗುರುತಿಸುವಿಕೆ (Source Identification) || 50 ಪುಸ್ತಕಗಳನ್ನು ಆಯ್ಕೆ ಮಾಡುವುದು (ಕನಿಷ್ಠ 70% ಮೂಲ ಕನ್ನಡ '''ಕಾಲ್ಪನಿಕವಲ್ಲದ''' ಪುಸ್ತಕಗಳಾಗಿರಬೇಕು). |- | ಮೇ 11 || ಮಾಹಿತಿ ಮಾನದಂಡಗಳು + ಕ್ಯಾಟಲಾಗಿಂಗ್ - ಭಾಗ 1 (Metadata + Cataloguing I) || ಡಬ್ಲಿನ್ ಕೋರ್ (Dublin Core) ಕಲಿಯುವುದು + 25 ನಮೂದುಗಳನ್ನು ಪ್ರಾರಂಭಿಸುವುದು. |- | ಮೇ 12 || ಕ್ಯಾಟಲಾಗಿಂಗ್ - ಭಾಗ 2 (Cataloguing II) || ಉಳಿದ 25 ನಮೂದುಗಳನ್ನು ಪೂರ್ಣಗೊಳಿಸುವುದು (ಒಟ್ಟು 50 entries). |- | ಮೇ 13 || ದತ್ತಾಂಶದ ಸೇರ್ಪಡೆ (Data Ingestion) || ಅಪ್ಲೋಡ್ ಮಾಡುವುದು + ಸರಿಯಾದ ಹೆಸರಿಡುವ ಸಂಪ್ರದಾಯಗಳನ್ನು (naming conventions) ಅನುಸರಿಸುವುದು. |- | '''ಮೇ 14''' || ಪುನರ್ ವಿಮರ್ಶೆ + ಗುಣಮಟ್ಟ ತಪಾಸಣೆ (Review + QA) || ಎಲ್ಲಾ 50 ನಮೂದುಗಳನ್ನು ಪರಿಶೀಲಿಸುವುದು (validate entries) – ತಪ್ಪುಗಳಿದ್ದರೆ ತಿದ್ದುಪಡಿ ಮಾಡುವುದು. |} nxac6i768mdqvyztne3ku9mpzjucax5 319692 319691 2026-05-14T06:06:05Z A826 6806 /* ಸಮಯ ಪಟ್ಟಿ */ 319692 wikitext text/x-wiki ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ಸಮಯ ಪಟ್ಟಿ === {| class="wikitable" ! ದಿನಾಂಕ (Date) !! ಕಾರ್ಯ (Task) !! ಕಲಿಕೆಯ ಉದ್ದೇಶ (Learning Objective) |- | ಮೇ 8 || ಮುನ್ನುಡಿ ಮತ್ತು ನೀತಿ ನಿಯಮಗಳು (Orientation & Ethics) || ನೀತಿ ಸಂಹಿತೆ(code of conduct) ,ಸಾರ್ವಜನಿಕ ಡೊಮೇನ್ ಬಗ್ಗೆ ತಿಳಿಯುವುದು + ಸ್ಥಳೀಯ ಭಾಷೆಯ ಮೇಲೆ ಕೇಂದ್ರೀಕರಿಸುವುದು. |- | ಮೇ 9 || ಮೂಲಗಳ ಗುರುತಿಸುವಿಕೆ (Source Identification) || 50 ಪುಸ್ತಕಗಳನ್ನು ಆಯ್ಕೆ ಮಾಡುವುದು (ಕನಿಷ್ಠ 70% ಮೂಲ ಕನ್ನಡ '''ಕಾಲ್ಪನಿಕವಲ್ಲದ''' ಪುಸ್ತಕಗಳಾಗಿರಬೇಕು). |- | ಮೇ 11 || ಮಾಹಿತಿ ಮಾನದಂಡಗಳು + ಕ್ಯಾಟಲಾಗಿಂಗ್ - ಭಾಗ 1 (Metadata + Cataloguing I) || ಡಬ್ಲಿನ್ ಕೋರ್ (Dublin Core) ಕಲಿಯುವುದು + 25 ನಮೂದುಗಳನ್ನು ಪ್ರಾರಂಭಿಸುವುದು. |- | ಮೇ 12 || ಕ್ಯಾಟಲಾಗಿಂಗ್ - ಭಾಗ 2 (Cataloguing II) || ಉಳಿದ 25 ನಮೂದುಗಳನ್ನು ಪೂರ್ಣಗೊಳಿಸುವುದು (ಒಟ್ಟು 50 entries). |- | ಮೇ 13 || ದತ್ತಾಂಶದ ಸೇರ್ಪಡೆ (Data Ingestion) || ಅಪ್ಲೋಡ್ ಮಾಡುವುದು + ಸರಿಯಾದ ಹೆಸರಿಡುವ ಸಂಪ್ರದಾಯಗಳನ್ನು (naming conventions) ಅನುಸರಿಸುವುದು. |- | '''ಮೇ 14''' || ಪುನರ್ ವಿಮರ್ಶೆ + ಗುಣಮಟ್ಟ ತಪಾಸಣೆ (Review + QA) || ಎಲ್ಲಾ 50 ನಮೂದುಗಳನ್ನು ಪರಿಶೀಲಿಸುವುದು (validate entries) – ತಪ್ಪುಗಳಿದ್ದರೆ ತಿದ್ದುಪಡಿ ಮಾಡುವುದು. |} mze6av87nzs55t4s374d3w6n34sxlb7 ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ ಮೇ-ಜೂನ್ ೨೦೨೬ 4 120710 319685 2026-05-14T05:52:52Z A826 6806 ಹೊಸ ಪುಟ: ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವ... 319685 wikitext text/x-wiki ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ == * ಮೇ ೦೮, ೨೦೨೬ - ಜೂನ್ ೨೧, ೨೦೨೬ == ಭಾಗವಹಿಸುವವರು == == ಪಠ್ಯಕ್ರಮ == === ವಾರ ೧ === {{/ವಾರ೧}} === ವಾರ ೨ === {{/ವಾರ೨}} === ವಾರ ೩ === {{/ವಾರ೩}} === ವಾರ ೪ === {{/ವಾರ೪}} === ವಾರ ೫ === {{/ವಾರ೫}} === ವಾರ ೬ === {{/ವಾರ೬}} idfqqop4dhcg3f1gcskdnucocem2d5v ವರ್ಗ:ವಿಕಿಸೋರ್ಸ್ ಕಾರ್ಯಾಗಾರ 14 120711 319689 2026-05-14T05:59:21Z A826 6806 ಹೊಸ ಪುಟ: [[ವರ್ಗ:ವಿಕಿಸೋರ್ಸ್_ಪುಟಗಳು]] 319689 wikitext text/x-wiki [[ವರ್ಗ:ವಿಕಿಸೋರ್ಸ್_ಪುಟಗಳು]] l06glsjuejcgzbq058crf1pjk3f8tvc