ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.6 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಪುಟ:Kannada-Saahitya.pdf/೨೧ 104 23103 324731 64979 2026-06-15T14:37:32Z Reema Jalihal 7674 /* Proofread */ 324731 proofread-page text/x-wiki <noinclude><pagequality level="3" user="Reema Jalihal" /></noinclude>{{center|ವಿದ್ಯುಚ್ಚೋರನೆಂಬ ಋಷಿಯ ಕಥೆ}} {{rh|right=11}} ಮನುಷ್ಯರ ರೂಪ, ಯೌವನ, ತೇಜಸ್ಸು, ಸೌಭಾಗ್ಯ, ಆಯಸ್ಸು, ಸಂಪತ್ತು, ನಲ್ಮೆ ಇದೇ ಮೊದಲಾದವೆಲ್ಲ ಅನಿತ್ಯಗಳು. ಯಾವಾಗ ಈ ಶರೀರವು ಸ್ವಸ್ಥವಾಗಿರುವುದೋ, ಯಾವಾಗ ಮುಪ್ಪು ಇನ್ನೂ ದೂರವಾಗಿರುವುದೋ, ಯಾವಾಗ ಇಂದ್ರಿಯಶಕ್ತಿ ಕುಗ್ಗದೆ ತಡೆಯಿಲ್ಲದ್ದಾಗಿರುವುದೋ, ಯಾವಾಗ ಆಯಸ್ಸಿಗೆ ಇನ್ನೂ ಕ್ಷಯ ಕಟ್ಟದಿರುವುದೋ, ಆಗಲೆ ವಿದ್ವಾಂಸನಾದವನು ಆತ್ಮಶ್ರೇಯಸ್ಸಿಗೆ ಪ್ರಯತ್ನ ಮಾಡಬೇಕು. ಮನೆ ಹೊತ್ತಿ ಬೇಯುತ್ತಿರುವಾಗ ಬಾವಿ ತೋಡುವ ಪ್ರಯತ್ನ ಮಾಡುವುದು ಅದೆಂಥದು ?' ಎಂದು ಮೊದಲಾಗಿ ಶಾಸ್ತ್ರ ವಚನಗಳನ್ನು ಉದಾಹರಿಸಿ ನುಡಿದು, ತನ್ನ ನಿಶ್ಚಯವನ್ನು ದೃಢಪಡಿಸಿದನು. ಮತ್ತೆ ನೆರೆದ ಜನರನ್ನೆಲ್ಲ ಕುರಿತು, “ ನಾನು ಅರಸ ; ಇವರು ಆಳುಗಳು ; ನನಗೇನು ?—ಎಂದುಕೊಂಡು ಅರಿತು ಅರಿಯಧ ನಾನು ಯಾರನ್ನಾದರೂ ಏನನ್ನಾದರೂ ಅಂದಿದ್ದು, ಆ ಸಂಕಟ ಮನಸ್ಸಿನಲ್ಲಿ ಕೊರೆಯುತ್ತಿದ್ದರೂ ಆ ಮಾತನ್ನು ಎಲ್ಲರೂ ಮರೆತುಬಿಡಿ” ಎಂದು ಕೇಳಿಕೊಂಡು ಕ್ಷಮೆಗೊಳಿಸಿದನು. ಬಳಿಕ ವಿದ್ಯುದಂಗನೆಂಬ ತನ್ನ ಹಿರಿಯ ಮಗನಿಗೆ ಪಟ್ಟಕಟ್ಟಿ ರಾಜ್ಯಾಭಿಷೇಕ ಮಾಡಿ "ಈತನನ್ನು ಹಿಡಿದು ನೀವೆಲ್ಲ ಸುಖವಾಗಿ ಬಾಳಿ ” ಎಂದುಕಲ್ಪಿಸಿದನು. ಯಮದಂಡನಿಗೆ ತಳಾರಿಕೆಯನ್ನು ಕೊಟ್ಟನು. ಆಮೇಲೆ ಮಂಗಳಾಲಂಕಾರಗಳನ್ನು ಧರಿಸಿ ಪಟ್ಟದಾನೆಯನ್ನೇರಿ, ಸತಿಯರು ಸಂಗಡ ಬರುತ್ತಿರಲು ಇಕ್ಕೆಲದಲ್ಲೂ ಚಾಮರವಿಕ್ಕಿಸಿಕೊಳ್ಳುತ್ತ ಸಮಸ್ತ ರಾಜ್ಯ ಚಿಹ್ನೆಗಳೊಡನೆ ಹೊರಟು, ವಂದಿ ಮಾಗಧ ಯಾಚಕಾದಿಗಳಿಗೂ, ದೀನ ಅನಾಥ ಅಂಧಕರಿಗೂ ತುಷ್ಟಿದಾನ ಕೊಡುತ್ತ ಸಹಸ್ರಕೂಟ ಚೈತ್ಯಾಲಯಕ್ಕೆ ಹೋದನು. ಅಲ್ಲಿ ಆನೆಯಿಂದಿಳಿದು ಬಸದಿಯನ್ನು ಮೂರು ಸಲ ಪ್ರದಕ್ಷಿಣೆ ಮಾಡಿ ದೇವರನ್ನು ನಂದಿಸಿದನು. ಬಳಿಕ ಗುಣಧರರೆಂಬ ಆಚಾರ್‍ಯರ ಬಳಿಗೈದಿ ಗುರುಭಕ್ತಿಯಿಂದ ವಂದಿಸಿ, “ಭಟಾರಾ, ಸಂಸಾರವೆಂಬ ಸಮುದ್ರದಲ್ಲಿ ಮುಳುಗಿದ್ದೇನೆ. ಮುಳುಗಬಿಡದೆ ನನ್ನನ್ನು ಮೇಲೆತ್ತಿರಿ. ದೀಕ್ಷೆಯನ್ನು ಅನುಗ್ರಹಿಸಿರಿ ” ಎಂದು ನುಡಿದ ಒಡಂಬಡಿಸಿ ದೀಕ್ಷೆಪಡೆದು ತಪೋನಿರತನಾದನು. ಸೌಂದರಿ ಮಹಾದೇವಿ ಮೊದಲಾದ ಅವನ ಅರಸಿಯರೂ ತಪಸ್ಸನ್ನು ಕೈಕೊಂಡು ಘೋರತಪಸ್ಸಿಗೆ ತೊಡಗಿದರು.<noinclude><references/></noinclude> 6qizaj2ym2tfnwww5fdeoh3e6vy4m6o ಪುಟ:Kannada-Saahitya.pdf/೨೨ 104 23104 324738 256905 2026-06-15T16:37:27Z Reema Jalihal 7674 /* Proofread */ 324738 proofread-page text/x-wiki <noinclude><pagequality level="3" user="Reema Jalihal" />{{rh|೧೨|ಕನ್ನಡ ಸಾಹಿತ್ಯ ಚಿತ್ರಗಳು|}}</noinclude>{{center|ಕನ್ನಡ ಸಾಹಿತ್ಯ ಚಿತ್ರಗಳು}} {{rh|left=12}} ಇತ್ತ ವಿದ್ಯುಚ್ಚೋರ ಮುನಿ ಹನ್ನೆರಡು ವರ್ಷಗಳವರೆಗೂ ಗುರುಗಳನ್ನಗಲದೆ ಸಮಸ್ತ ಆಗಮವೆಲ್ಲವನ್ನೂ ಕಲಿತರು. ಉಗೋಗ್ರ ತಪಸ್ಸುಮಾಡಿ ಕಡೆಗೆ ಆಚಾರ್ಯರಾದರು. ಐನೂರು ಮಂದಿ ಶಿಷ್ಯರೊಡನೆ ದೇಶವಿಹಾರ ಮಾಡುತ್ತಿದ್ದರು. ಹೀಗೆ ವಿಹರಿಸುತ್ತಿದ್ದಾಗ ಒಮ್ಮೆ ಪೂರ್ವದೇಶದಲ್ಲಿ ಖಾಳಿಮಂಡಳವೆಂಬ ನಾಡಿನಲ್ಲಿ ತಾಮ್ರಲಿಪಿಯೆಂಬ ಪಟ್ಟಣದ ಹೊರವಳಯಕ್ಕೆ ಹೋದರು. ಅಲ್ಲಿ ವರಾಂಗಾಯಿಯೆಂಬ ಉಗ್ರದೇವತೆಗೆ ಆರಾರು ತಿಂಗಳಿಗೊಮ್ಮೆ ಜಾತ್ರೆಯಾಗುವುದು. ಅಷ್ಟಮಿಯ ದಿನ ಜಾತ್ರೆ ನೆರೆಯಿತು. ದುರ್ಗಾದೇವತೆ ಋಷಿಗಳ ಬರವನ್ನು ದೂರದಲ್ಲಿ ಕಂಡು ಎದುರು ಹೋಗಿ “ ನನ್ನ ಜಾತ್ರೆ ಮುಗಿಯುವವರೆಗೂ ನೀವು ಈ ಪಟ್ಟಣವನ್ನು ಪ್ರವೇಶಿಸಬೇಡಿ” ಎಂದು ತಡೆದಳು. ಶಿಷ್ಯರು " ನಮ್ಮನ್ನು ದೇವತೆ ಏನು ಮಾಡುತ್ತಾಳೆ ? ಹೋಗೋಣ ಭಟಾರಾ !" ಎಂದು ಅವರನ್ನೊಡಗೊಂಡು ಪಟ್ಟಣವನ್ನು ಪ್ರವೇಶಿಸಿದರು. ರಾತ್ರಿ ಪಟ್ಟಣದ ಪಶ್ಚಿಮ ದಿಕ್ಕಿನ ಕೋಟೆಯ ಹೊರಗಡೆ ವಿದ್ಯುಚ್ಚೋರ ಭಟಾರರು ಪ್ರತಿಮಾ ಯೋಗದಲ್ಲಿ ನಿಂತರು. ದೇವತೆ ಮುನಿದು ಪಾರಿವಾಳದಷ್ಟು ದೊಡ್ಡವಾದ ಚಿಕ್ಕುಟಗಳನ್ನೂ ಸೊಳ್ಳೆಗಳನ್ನೂ ನಿರ್ಮಿಸಿ ಅವರ ಮೇಲೆ ಬಿಟ್ಟಳು. ಇರುಳು ನಾಲ್ಕು ಜಾವವೂ ಅವು ಮೈಯನ್ನೆಲ್ಲ ತಿನ್ನುತ್ತಿದ್ದು ನರಕ ವೇದನೆಗಿಂತ ಹೆಚ್ಚು ವೇದನೆಯುಂಟಾಗುವಂತೆ ಮಾಡಿದವು. ವಿದ್ಯುಚ್ಚೋರ ಮುನಿಗಳು ಅವೊಂದೂ ಇಲ್ಲವೇ ಇಲ್ಲವೋ ಎಂಬಂತೆ ಆ ವೇದನೆಗಳನ್ನೆಲ್ಲ ಸೈರಿಸಿದರು. ಸೈರಿಸಿ ಉತ್ತಮ ಧ್ಯಾನದಲ್ಲಿ ಮನಸ್ಸು ನಿಲ್ಲಿಸಿದರು. ಕಡೆಗೆ ಸಮಸ್ತ ಕರ್ಮಗಳನ್ನೂ ಕೆಡಿಸಿ ಮೋಕ್ಷಕ್ಕೆ ಹೋದರು. ಭವ್ಯರು ವಿದ್ಯುಚ್ಚೋರ ಋಷಿಗಳನ್ನು ನೆನೆದು ದುಃಖಗಳನ್ನೆಲ್ಲ ಸೈರಿಸಿ ರತ್ನತ್ರಯಗಳನ್ನು ಸಾಧಿಸಿ ಸ್ವರ್ಗಮೋಕ್ಷ ಸುಖಗಳನ್ನು ಪಡೆಯಲಿ. {{center|ಹಿನ್ನುಡಿ}} [ ಇದು " ವಡ್ಡಾರಾಧನೆ” ಎಂಬ ಹಳಗನ್ನಡ ಗ್ರಂಥದಲ್ಲಿನ ಒಂದು ಕಥೆ. ಆ ಗ್ರಂಥದಲ್ಲಿ ಇಂಥವೇ ಹತ್ತಿಪ್ಪತ್ತು ಕಥೆಗಳಿವೆ. ಧರ್ಮಮಾರ್ಗದಲ್ಲಿ ನಡೆದು ತಪಸ್ಸು ಮಾಡುವಾಗ ಅನೇಕ ಬಗೆಯ ತೊಂದರೆಗಳಿಗೆ ಸಿಕ್ಕಿ, ಅವುಗಳನ್ನೆಲ್ಲ ಸಹಿಸಿ<noinclude><references/></noinclude> aor4tcrujezxgevdk89u442b4dl1sc8 ಪುಟ:Kannada-Saahitya.pdf/೨೪ 104 23128 324740 65535 2026-06-15T17:12:46Z Reema Jalihal 7674 /* Proofread */ 324740 proofread-page text/x-wiki <noinclude><pagequality level="3" user="Reema Jalihal" /></noinclude>{{header | title = ಭರತ-ಬಾಹುಬಲಿ }} <poem>ಪರಮ ಜಿನೇ೦ದ್ರ ಸರಸ್ವತಿ ಬೇರದು ಪೆಣ್ಣ ರೂಪಮ೦ ಧರಿಯಿಸಿ ನಿ೦ದುದಲ್ತದುವೆ ಭಾವಿನಸಿಯೋದುವ ಕೇಳ್ವಫೂಜಿಪಾ ದರಿಸುವ ಭವ್ಯಕೋಟಿಗೆ ನಿರ೦ತರ ಸೌಖ್ಯಮನೀವುದಾನದ ಕ೯ರೆದಪೆನಾ ಸರಸ್ವತಿಯೆ ಮಾಲ್ಕೆಮಗಿಲ್ಲೆಯೆ ವಾಗ್ವಿಳಾಸಮ೦</poem> [ಸರ್ವ ಶ್ರೇಷ್ಟನಾದ ಜನನ ಮಾತೇ ಸರಸ್ವತಿ. ಸರಸ್ವತಿಯೆಂದರೆ ಬೇರೆ ಒಂದು ಹೆಣ್ಣು ರೂಪವಲ್ಲ. ಜನನ ವಾಣಿಯನ್ನು ಮನಸ್ಸಿನಲ್ಲಿ ಭಾವಿಸಿಕೊಂಡು ಓದುವ, ಕೇಳುವ, ಪೂಜಿಸುವ ಮತ್ತು ಆದರಿಸುವ ಪುಣ್ಯವಂತರಿಗೆಲ್ಲ ಅವು ಶಾಶ್ವತವಾದ ಸುಖವನ್ನು ದಯಪಾಲಿಸುತ್ತದೆ. ನಾನು ಆ ಜನ ವಾಣಿಗೇ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಆ ಸರಸ್ವತಿಯು ನಮಗೆ ಮಾತಿನ ಸೊಗಸನ್ನು ಉಂಟು ಮಾಡಲಿ.] {{center|ಮೊದಲ ಮಾತು}} [ ಹಿಂದು ಕಾಲದಲ್ಲಿ ಎಲ್ಲಿ ನೋಡಿದರೂ ಧರ್ಮ ನೆಲಸಿರುವುದು, ಸುಖ ಸಮೃದ್ಧಿ ತುಂಬಿರುವುದು. ಬರುಬರುತ್ತ ಧರ್ಮವೂ ಸುಖವೂ ಇಳಿಮುಖವಾಗಿ ಅಧರ್ಮ ದುಃಖಗಳು ತಲೆಯೆತ್ತುವುವು. ಕಡೆಗೆ ಅಧರ್ಮವೇ ಮೆಲ್ಗೈಯಾಗಿ ಧರ್ಮ ನಶಿಸುವುದು. ಆಮೇಲೆ ಅಧರ್ಮಕ್ಕೆ ಇಳಿಗತಿಯೊದಗಿ ಧರ್ಮ ಬೆಳೆದು ತಾನೇ ತಾನಾಗುವುದು. ಹೀಗೆ ಲೋಕದಲ್ಲಿ ಸದಾ ನಡೆಯುತ್ತಲೇ ಇರುವುದು. ಧರ್ಮ ಇಳಿಮುಖವಾಗಿ ಕುಗ್ಗುವ ಕಾಲಕ್ಕೆ ಅವಸರ್ಷಿಣಿಯೆಂದೂ, ಮೇಲ್ಮುಖವಾಗಿ ಹೆಚ್ಚುವ ಕಾಲಕ್ಕೆ ಉತ್ಸರ್ಪಿಣಿಯೆಂದೂ ಹೆಸರು. ಅಧರ್ಮ ಹೆಚ್ಚಿದಾಗಲೆಲ್ಲ— ಪ್ರತಿ ಅವಸರ್ಪಿಣಿಯಲ್ಲೂ ಉತ್ಸರ್ಪಿಣಿಯಲ್ಲೂ— ಇಪ್ಪತ್ತುನಾಲ್ಕು ಮಂದಿ ತೀರ್ಥಂಕರರು ಅವತರಿಸಿ ಲೋಕಕ್ಕೆ ಧರ್ಮವನ್ನು ಬೋಧಿಸುವರು. ಸರ್ವಜ್ಞರೂ ಲೋಕೋದ್ಧಾರಕರೂ ಆದ ಇವರನ್ನೆ ದೇವರೆಂದು ಕರೆಯುವುದು. ಈ ತೀರ್ಥಂಕರರು ಕೂಡ ನಮ್ಮೆಲ್ಲರಂತೆಯೇ ಸಾಧಾರಣರಾಗಿದ್ದವರು. ಅವರೂ ತಮ್ಮ ಕರ್ಮಕ್ಕೆ ತಕ್ಕಂತೆ ಸ್ವರ್ಗ ನರಕಗಳನ್ನು ಸೇರಿ ಸುಖದುಃಖಗಳನ್ನು ಅನುಭವಿಸುವರು ; ಮೃಗ, ಪಕ್ಷಿ, ಮನುಷ್ಯ ಮೊದಲಾದ ಜನ್ಮಗಳಲ್ಲಿ ಬಂದು ತೊಳಲುವರು. ಕ್ರಮಕ್ರಮವಾಗಿ ತಮ್ಮ ಕೆಟ್ಟ ಗುಣಗಳನ್ನೆಲ್ಲ ಕಳೆದುಕೊಂಡು ಒಳ್ಳೆಯ ಗುಣಗಳನ್ನೇ ಹೆಚ್ಚಿಸಿಕೊಳ್ಳುವರು. ಕಟ್ಟಕಡೆಗೆ ಹುಟ್ಟು ಸಾವುಗಳ<noinclude><references/></noinclude> 8k5pn2cak0isbfkrd16n73s73nm7gzi 324741 324740 2026-06-15T17:13:37Z Reema Jalihal 7674 324741 proofread-page text/x-wiki <noinclude><pagequality level="3" user="Reema Jalihal" /></noinclude>{{center|ಭರತ-ಬಾಹುಬಲಿ}} <poem>{{center|ಪರಮ ಜಿನೇ೦ದ್ರ ಸರಸ್ವತಿ ಬೇರದು ಪೆಣ್ಣ ರೂಪಮ೦ ಧರಿಯಿಸಿ ನಿ೦ದುದಲ್ತದುವೆ ಭಾವಿನಸಿಯೋದುವ ಕೇಳ್ವಫೂಜಿಪಾ ದರಿಸುವ ಭವ್ಯಕೋಟಿಗೆ ನಿರ೦ತರ ಸೌಖ್ಯಮನೀವುದಾನದ ಕ೯ರೆದಪೆನಾ ಸರಸ್ವತಿಯೆ ಮಾಲ್ಕೆಮಗಿಲ್ಲೆಯೆ ವಾಗ್ವಿಳಾಸಮ೦}}</poem> [ಸರ್ವ ಶ್ರೇಷ್ಟನಾದ ಜನನ ಮಾತೇ ಸರಸ್ವತಿ. ಸರಸ್ವತಿಯೆಂದರೆ ಬೇರೆ ಒಂದು ಹೆಣ್ಣು ರೂಪವಲ್ಲ. ಜನನ ವಾಣಿಯನ್ನು ಮನಸ್ಸಿನಲ್ಲಿ ಭಾವಿಸಿಕೊಂಡು ಓದುವ, ಕೇಳುವ, ಪೂಜಿಸುವ ಮತ್ತು ಆದರಿಸುವ ಪುಣ್ಯವಂತರಿಗೆಲ್ಲ ಅವು ಶಾಶ್ವತವಾದ ಸುಖವನ್ನು ದಯಪಾಲಿಸುತ್ತದೆ. ನಾನು ಆ ಜನ ವಾಣಿಗೇ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಆ ಸರಸ್ವತಿಯು ನಮಗೆ ಮಾತಿನ ಸೊಗಸನ್ನು ಉಂಟು ಮಾಡಲಿ.] {{center|ಮೊದಲ ಮಾತು}} [ ಹಿಂದು ಕಾಲದಲ್ಲಿ ಎಲ್ಲಿ ನೋಡಿದರೂ ಧರ್ಮ ನೆಲಸಿರುವುದು, ಸುಖ ಸಮೃದ್ಧಿ ತುಂಬಿರುವುದು. ಬರುಬರುತ್ತ ಧರ್ಮವೂ ಸುಖವೂ ಇಳಿಮುಖವಾಗಿ ಅಧರ್ಮ ದುಃಖಗಳು ತಲೆಯೆತ್ತುವುವು. ಕಡೆಗೆ ಅಧರ್ಮವೇ ಮೆಲ್ಗೈಯಾಗಿ ಧರ್ಮ ನಶಿಸುವುದು. ಆಮೇಲೆ ಅಧರ್ಮಕ್ಕೆ ಇಳಿಗತಿಯೊದಗಿ ಧರ್ಮ ಬೆಳೆದು ತಾನೇ ತಾನಾಗುವುದು. ಹೀಗೆ ಲೋಕದಲ್ಲಿ ಸದಾ ನಡೆಯುತ್ತಲೇ ಇರುವುದು. ಧರ್ಮ ಇಳಿಮುಖವಾಗಿ ಕುಗ್ಗುವ ಕಾಲಕ್ಕೆ ಅವಸರ್ಷಿಣಿಯೆಂದೂ, ಮೇಲ್ಮುಖವಾಗಿ ಹೆಚ್ಚುವ ಕಾಲಕ್ಕೆ ಉತ್ಸರ್ಪಿಣಿಯೆಂದೂ ಹೆಸರು. ಅಧರ್ಮ ಹೆಚ್ಚಿದಾಗಲೆಲ್ಲ— ಪ್ರತಿ ಅವಸರ್ಪಿಣಿಯಲ್ಲೂ ಉತ್ಸರ್ಪಿಣಿಯಲ್ಲೂ— ಇಪ್ಪತ್ತುನಾಲ್ಕು ಮಂದಿ ತೀರ್ಥಂಕರರು ಅವತರಿಸಿ ಲೋಕಕ್ಕೆ ಧರ್ಮವನ್ನು ಬೋಧಿಸುವರು. ಸರ್ವಜ್ಞರೂ ಲೋಕೋದ್ಧಾರಕರೂ ಆದ ಇವರನ್ನೆ ದೇವರೆಂದು ಕರೆಯುವುದು. ಈ ತೀರ್ಥಂಕರರು ಕೂಡ ನಮ್ಮೆಲ್ಲರಂತೆಯೇ ಸಾಧಾರಣರಾಗಿದ್ದವರು. ಅವರೂ ತಮ್ಮ ಕರ್ಮಕ್ಕೆ ತಕ್ಕಂತೆ ಸ್ವರ್ಗ ನರಕಗಳನ್ನು ಸೇರಿ ಸುಖದುಃಖಗಳನ್ನು ಅನುಭವಿಸುವರು ; ಮೃಗ, ಪಕ್ಷಿ, ಮನುಷ್ಯ ಮೊದಲಾದ ಜನ್ಮಗಳಲ್ಲಿ ಬಂದು ತೊಳಲುವರು. ಕ್ರಮಕ್ರಮವಾಗಿ ತಮ್ಮ ಕೆಟ್ಟ ಗುಣಗಳನ್ನೆಲ್ಲ ಕಳೆದುಕೊಂಡು ಒಳ್ಳೆಯ ಗುಣಗಳನ್ನೇ ಹೆಚ್ಚಿಸಿಕೊಳ್ಳುವರು. ಕಟ್ಟಕಡೆಗೆ ಹುಟ್ಟು ಸಾವುಗಳ<noinclude><references/></noinclude> akdnol8g4i9ya68xhy1im5988jsd46d 324884 324741 2026-06-16T08:25:15Z A826 6806 /* Validated */ 324884 proofread-page text/x-wiki <noinclude><pagequality level="4" user="A826" /></noinclude>{{center|ಭರತ-ಬಾಹುಬಲಿ}} <poem>{{center|ಪರಮ ಜಿನೇ೦ದ್ರ ಸರಸ್ವತಿ ಬೇರದು ಪೆಣ್ಣ ರೂಪಮ೦ ಧರಿಯಿಸಿ ನಿ೦ದುದಲ್ತದುವೆ ಭಾವಿನಸಿಯೋದುವ ಕೇಳ್ವಫೂಜಿಪಾ ದರಿಸುವ ಭವ್ಯಕೋಟಿಗೆ ನಿರ೦ತರ ಸೌಖ್ಯಮನೀವುದಾನದ ಕ೯ರೆದಪೆನಾ ಸರಸ್ವತಿಯೆ ಮಾಲ್ಕೆಮಗಿಲ್ಲೆಯೆ ವಾಗ್ವಿಳಾಸಮ೦}}</poem> [ಸರ್ವ ಶ್ರೇಷ್ಟನಾದ ಜನನ ಮಾತೇ ಸರಸ್ವತಿ. ಸರಸ್ವತಿಯೆಂದರೆ ಬೇರೆ ಒಂದು ಹೆಣ್ಣು ರೂಪವಲ್ಲ. ಜನನ ವಾಣಿಯನ್ನು ಮನಸ್ಸಿನಲ್ಲಿ ಭಾವಿಸಿಕೊಂಡು ಓದುವ, ಕೇಳುವ, ಪೂಜಿಸುವ ಮತ್ತು ಆದರಿಸುವ ಪುಣ್ಯವಂತರಿಗೆಲ್ಲ ಅವು ಶಾಶ್ವತವಾದ ಸುಖವನ್ನು ದಯಪಾಲಿಸುತ್ತದೆ. ನಾನು ಆ ಜನ ವಾಣಿಗೇ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಆ ಸರಸ್ವತಿಯು ನಮಗೆ ಮಾತಿನ ಸೊಗಸನ್ನು ಉಂಟು ಮಾಡಲಿ.] {{center|ಮೊದಲ ಮಾತು}} [ ಹಿಂದು ಕಾಲದಲ್ಲಿ ಎಲ್ಲಿ ನೋಡಿದರೂ ಧರ್ಮ ನೆಲಸಿರುವುದು, ಸುಖ ಸಮೃದ್ಧಿ ತುಂಬಿರುವುದು. ಬರುಬರುತ್ತ ಧರ್ಮವೂ ಸುಖವೂ ಇಳಿಮುಖವಾಗಿ ಅಧರ್ಮ ದುಃಖಗಳು ತಲೆಯೆತ್ತುವುವು. ಕಡೆಗೆ ಅಧರ್ಮವೇ ಮೆಲ್ಗೈಯಾಗಿ ಧರ್ಮ ನಶಿಸುವುದು. ಆಮೇಲೆ ಅಧರ್ಮಕ್ಕೆ ಇಳಿಗತಿಯೊದಗಿ ಧರ್ಮ ಬೆಳೆದು ತಾನೇ ತಾನಾಗುವುದು. ಹೀಗೆ ಲೋಕದಲ್ಲಿ ಸದಾ ನಡೆಯುತ್ತಲೇ ಇರುವುದು. ಧರ್ಮ ಇಳಿಮುಖವಾಗಿ ಕುಗ್ಗುವ ಕಾಲಕ್ಕೆ ಅವಸರ್ಷಿಣಿಯೆಂದೂ, ಮೇಲ್ಮುಖವಾಗಿ ಹೆಚ್ಚುವ ಕಾಲಕ್ಕೆ ಉತ್ಸರ್ಪಿಣಿಯೆಂದೂ ಹೆಸರು. ಅಧರ್ಮ ಹೆಚ್ಚಿದಾಗಲೆಲ್ಲ— ಪ್ರತಿ ಅವಸರ್ಪಿಣಿಯಲ್ಲೂ ಉತ್ಸರ್ಪಿಣಿಯಲ್ಲೂ— ಇಪ್ಪತ್ತುನಾಲ್ಕು ಮಂದಿ ತೀರ್ಥಂಕರರು ಅವತರಿಸಿ ಲೋಕಕ್ಕೆ ಧರ್ಮವನ್ನು ಬೋಧಿಸುವರು. ಸರ್ವಜ್ಞರೂ ಲೋಕೋದ್ಧಾರಕರೂ ಆದ ಇವರನ್ನೆ ದೇವರೆಂದು ಕರೆಯುವುದು. ಈ ತೀರ್ಥಂಕರರು ಕೂಡ ನಮ್ಮೆಲ್ಲರಂತೆಯೇ ಸಾಧಾರಣರಾಗಿದ್ದವರು. ಅವರೂ ತಮ್ಮ ಕರ್ಮಕ್ಕೆ ತಕ್ಕಂತೆ ಸ್ವರ್ಗ ನರಕಗಳನ್ನು ಸೇರಿ ಸುಖದುಃಖಗಳನ್ನು ಅನುಭವಿಸುವರು; ಮೃಗ, ಪಕ್ಷಿ, ಮನುಷ್ಯ ಮೊದಲಾದ ಜನ್ಮಗಳಲ್ಲಿ ಬಂದು ತೊಳಲುವರು. ಕ್ರಮಕ್ರಮವಾಗಿ ತಮ್ಮ ಕೆಟ್ಟ ಗುಣಗಳನ್ನೆಲ್ಲ ಕಳೆದುಕೊಂಡು ಒಳ್ಳೆಯ ಗುಣಗಳನ್ನೇ ಹೆಚ್ಚಿಸಿಕೊಳ್ಳುವರು. ಕಟ್ಟಕಡೆಗೆ ಹುಟ್ಟು ಸಾವುಗಳ<noinclude><references/></noinclude> jo3e3lit0ftxzd7j66iohjdsq2dxxz1 ಪುಟ:Kannada-Saahitya.pdf/೨೩ 104 23129 324739 65510 2026-06-15T16:53:56Z Reema Jalihal 7674 /* Proofread */ 324739 proofread-page text/x-wiki <noinclude><pagequality level="3" user="Reema Jalihal" /></noinclude>{{center|ವಿದ್ಯುಚ್ಚೋರನೆಂಬ ಋಷಿಯ ಕಥೆ}} {{rh|right=13}} ಮುಕ್ತರಾದ ದೊಡ್ಡವರ ಸಂಗತಿಗಳು ಆ ಎಲ್ಲ ಕಥೆಗಳಲ್ಲಿಯೂ ಬರುತ್ತವೆ. ಧರ್ಮ ಮತ್ತು ತಪಸ್ಸಿನ ವಿಷಯಗಳನ್ನು ಹೇಳುವ ಆ ಕಥೆಗಳಲ್ಲಿ ಜನರ ನಡವಳಿಕೆಗೆ ಸಂಬಂಧಪಟ್ಟ ಎಷ್ಟೋ ಸಂಗತಿಗಳು ಗೊತ್ತಾಗುತ್ತವೆ. ಎಲ್ಲ ಕಥೆಗಳೂ ಚೆನ್ನಾಗಿವೆ. "ವಡ್ಡಾರಾಧನೆ” ಎಂದರೆ “ ವೃದ್ಧಾರಾಧನೆ ದೊಡ್ಡವರ ಪೂಜೆ ” ಎಂದರ್ಥ. ಕಠಿನವಾದ ತಪಸ್ಸಿನಲ್ಲಿ ತೊಡಗಿದ ಜೈನ ಸನ್ಯಾಸಿಗಳು ಈ ಕಥೆಗಳಲ್ಲಿ ಹೇಳಿರುವ ಹಿರಿಯರು ಎಂಥೆಂಥ ಕಷ್ಟಗಳನ್ನು ಸಹಿಸಬೇಕಾಯಿತೆಂಬುದನ್ನು ಕೇಳುತ್ತ ತಾವೂ ಧೈಯ್ಯದಿಂದ ಕಷ್ಟಗಳನ್ನು ತಾಳಿಕೊಳ್ಳುತ್ತಿದ್ದರಂತೆ. ಹಿರಿಯರ ಒಳ್ಳೆಯ ಗುಣಗಳನ್ನು ನೆನೆದು ಅವರು ನಡೆದಂತೆ ನಡೆಯುವುದೇ ನಾವು ಅವರಿಗೆ ಮಾಡುವ ನಿಜವಾದ ಪೂಜೆ. ಅದಕ್ಕಾಗಿಯೇ ಈ ಪುಸ್ತಕಕ್ಕೆ 'ವಡ್ಡಾರಾಧನೆ ' ಎಂದು ಹೆಸರಿಟ್ಟಂತೆ ತೋರುತ್ತದೆ. ನಮಗೆ ಇದುವರೆಗೆ ಸಿಕ್ಕಿರುವ ಕನ್ನಡ ಗ್ರಂಥಗಳಲ್ಲೆಲ್ಲ ಈ ವಡ್ಡಾರಾಧನೆಯೇ ಬಹು ಹಳೆಯದು. ಇದು ಕ್ರಿ.ಶ. ಐದು ಅಥವಾ ಆರನೆಯ ಶತಮಾನದಲ್ಲಿ ಬರೆದದ್ದಾಗಿರಬೇಕು. ಇನ್ನೂ ಹಿಂದಿನ ಕಾಲದ್ದಾಗಿದ್ದರೂ ಇರಬಹುದು. ಇದರ ಭಾಷೆ ಈಗ ನಾವು 'ಹಳಗನ್ನಡ ' ಎನ್ನುತ್ತೇವಲ್ಲ ಅದಕ್ಕೂ ಹಳೆಯದು. ನಾಲ್ಕು ಐದನೆಯ ಶತಮಾನದ ಶಾಸನಗಳಲ್ಲಿ ಕೆಲವು ಕಡೆ ಇಂಥ ಭಾಷೆ ಕಂಡುಬರುತ್ತದೆ. ಇದನ್ನು 'ಪೂರ್ವದ ಹಳಗನ್ನಡ ” ಎನ್ನಬಹುದು. ಇದನ್ನು ಬರೆದವರು 'ರೇವಾಕೋಟ್ಯಾಚಾರ್‍ಯ'ರೆಂಬ ಜೈನಗುರುಗಳು.]<noinclude><references/></noinclude> cmiuqjxu2tf5vmqv6uyu2j1d3nxrhy3 ಪುಟ:Kannada-Saahitya.pdf/೧೮ 104 23133 324714 65817 2026-06-15T12:39:20Z Reema Jalihal 7674 /* Proofread */ 324714 proofread-page text/x-wiki <noinclude><pagequality level="3" user="Reema Jalihal" /></noinclude>{{center|ಕನ್ನಡ ಸಾಹಿತ್ಯ ಚಿತ್ರಗಳು}} {{rh|left=8}} ಕಾಣಲಾಗುತ್ತಿರಲಿಲ್ಲ. ಇವನನ್ನು ಬಹಳ ಹೊತ್ತು ಹುಡುಕಿ ಕಾಣದೆ ದೆಸೆಗೆಟ್ಟು ಬೇಸತ್ತೆನು. ಆಗ ' ಆಗಲಿ. ಮಗನೇ, ನೀನು ತಳಾರನಾದಾಗ ನಿನ್ನ ಕಾಸಿನಲ್ಲಿ ಕದ್ದು ನಿನ್ನನ್ನು ಕೊಲ್ಲಿಸದಿದ್ದರೆ ಏನಾಯಿತು !” ಎಂದು ನುಡಿದೆನು. ಅದಕ್ಕೆ ಈತನೂ ಹೀಗೆಂದನು : 'ಆಗಲಿ. ಮಗನೇ, ನೀನು ನಾನು ತಳಾರು ಮಾಡುವಾಗ ಕದ್ದರೆ ನಿನ್ನನ್ನು ಹಿಡಿದು ಕಟ್ಟಿ, ಕಳ್ಳರ ದಂಡನೆಯಿಂದ ದಂಡಿಸದಿದ್ದರೆ ಏನಾಯಿತು !' ಎಂದು ನುಡಿದನು. ' ಈ ಮಾತನ್ನು ಮರೆಯಬೇಡ' ಎಂದು ಇಬ್ಬರೂ ಒಬ್ಬರನ್ನೊಬ್ಬರು ಮೂದಲಿಸಿ ಪ್ರತಿಜ್ಞೆ ಮಾಡಿದೆವು. " ಕೆಲವು ಕಾಲ ಕಳೆದ ಮೇಲೆ ನಮ್ಮ ತಂದೆ ನನಗೆ ಪಟ್ಟಕಟ್ಟಿ ತಪ್ಪಸಿಗೆ ಹೋದನು. ಈತನ ತಂದೆಯೂ ತನ್ನ ವಂಶಕ್ರಮದ ಅಧಿಕಾರವನ್ನು ಈತನಿಗೆ ಕೊಟ್ಟು ಅರಸನೊಡನೆ ತಪಸ್ಸಿಗೆ ನಡೆದನು. ನಾನು ರಾಜನಾದೆ ; ಈತನು ತಳಾರನಾದನು. ಹೀಗೆ ಸುಖದಲ್ಲಿ ಇಬ್ಬರಿಗೂ ಕಾಲ ಕಳೆಯುತ್ತಿತ್ತು. ಮತ್ತೆ ಒಂದು ದಿವಸ ಈತ ತನ್ನ ಮನಸ್ಸಿನಲ್ಲಿ ಹೀಗೆಂದುಕೊಂಡನು :- ' ನಮ್ಮರಸ ಕಳ್ಳ; ನಾನು ಈ ಪಟ್ಟಣದಲ್ಲಿ ತಳಾರು ಮಾಡುತ್ತಿದ್ದೇನೆ. ಇದು ಕಾರ್‍ಯ ಒಳ್ಳೆಯದಲ್ಲ' ಎಂದು ನನಗಂಜಿ ನಾಡು ಬಿಟ್ಟು ಬಂದು ನಿಮಗೆ ಆಳಾದನು. ನಾನೂ ಈತನನ್ನು ನಾನಾಳುವ ದೇಶದ ಎಂಟು ದಿಕ್ಕಿನ ಗ್ರಾಮ ನಗರಾದಿಗಳಲ್ಲೆಲ್ಲ ಹುಡುಕಿಸಿ ಕಾಣದೆ, ಪರಮಂಡಲಗಳಲ್ಲಿಯೂ ಹುಡುಕಿಸಿದೆನು. ಎಲ್ಲಿಯೂ ಕಾಣದಿರಲು ಇಲ್ಲಿಗೆ ಚರರನ್ನಟ್ಟಿದೆನು. ಅವರು ಹುಡುಕಿ ಬಂದು, ' ದೇವಾ, ಮಿಥಿಳೆಯೆಂಬ ಪಟ್ಟಣ. ಅದನ್ನಾಳುವವನು ನಾಮರಥನೆಂಬರಸ. ಆತನಿಗೆ ಯಮದಂಡನು ಆಳಾಗಿ ಪಟ್ಟಣದ ಕಾಪು ಪಡೆದು ಸುಖವಾಗಿದ್ದಾನೆ ” ಎಂದು ಹೇಳಿದರು. “ ಆ ಮಾತನ್ನು ಕೇಳಿ ನಾನು ಪುರುಷೋತ್ತಮನೆಂಬ ಮಂತ್ರಿಗೆ 'ಮಿಥಿಳಾ ಪಟ್ಟಣಕ್ಕೆ ಯಾರೂ ಅರಿಯದ ಹಾಗೆ ಹೋಗಿ ಯಮದಂಡನನ್ನು ಕರೆದುಕೊಂಡು ಬರುತ್ತೇನೆ' ಎಂದು ಹೇಳಿದೆನು. ಹೇಳಿ ವಜ್ರಸೇನನೆಂಬ ಹೆಗ್ಗಡೆಯನ್ನು ಕರಸಿ, 'ನಾನು ಒಂದು ಮದೆವಾರ್ತೆಗಾಗಿ ಹೋಗಿಬರುತ್ತೇನೆ. ನಾನು ಬರುವವರೆಗೂ ರಾಜ್ಯವನ್ನು ಪಾಲಿಸುತ್ತಿರು' ಎಂದು ಏರ್ಪಡಿಸಿ ಸಮಸ್ತ ರಾಜ್ಯಭಾರವನ್ನೂ ಒಪ್ಪಿಸಿಕೊಟ್ಟನು. ಬಳಿಕ ಅರ್ಧರಾತ್ರಿಯಲ್ಲಿ ಯಾರೂ ಅರಿಯದ ಹಾಗೆ ಒಬ್ಬನೇ ಹೊರಟು ಬಂದು ಈ ಪಟ್ಟಣವನ್ನು<noinclude><references/></noinclude> m6m51anhrklmyhuw1bseio2tbm7f6gz ಪುಟ:Kannada-Saahitya.pdf/೧೯ 104 23137 324725 65819 2026-06-15T14:06:10Z Reema Jalihal 7674 /* Proofread */ 324725 proofread-page text/x-wiki <noinclude><pagequality level="3" user="Reema Jalihal" /></noinclude>{{center|ವಿದ್ಯುಚ್ಚೋರನೆಂಬ ಋಷಿಯ ಕಥೆ}} {{rh|right=9}} ಹೊಕ್ಕು ಪ್ರತಿಜ್ಞೆ ಕಾರಣವಾಗಿ ಒಡವೆಗಳನ್ನು ಕದ್ದು ಈತನನ್ನು ಕೊಲ್ಲಿಸುವ ಹಾಗೆ ಮಾಡಿದೆನು. ಇದು ಕದ್ದದ್ದಕ್ಕೆ ಕಾರಣ. ಈತನೂ ಈ ರೀತಿಯಲ್ಲಿ ನನಗೆ ಮಿತ್ರ ” ಎಂದು ಹೇಳಿ, ಮತ್ತೂ ಇಂತೆಂದನು: “ ನಿಮ್ಮ ಸರ್ವ ರುಜಾಪಹಾರನೆಂಬ ಹಾರ ದೇವತಾಸಾನ್ನಿಧ್ಯವುಳ್ಳದ್ದು. ನಾನು ಸಮ್ಯಗ್ ದೃಷ್ಟಿಯನ್ನು ಪಡೆದವನಾದ್ದರಿಂದ ನನ್ನ ಕೈಗೆ ಬಂತು. ಉಳಿದ ಮಿಥ್ಯಾ ದೃಷ್ಟಿಗಳ ಕೈಗೆ ಬಾರದು ” ಎಂದು ತನ್ನ ಮಾತು ಮುಗಿಸಿದನು. ಆದನ್ನೆಲ್ಲ ಕೇಳಿ ಅರಸನು ಆ ಹಾರ ತಮಗೆ ಬಂದ ರೀತಿಯನ್ನು ನೆರವಿಗೆಲ್ಲ ವಿವರಿಸುತ್ತಿದ್ದನು. ಅಷ್ಟರಲ್ಲಿ ಇಬ್ಬರು ಹರಿವೊಂಟೆಯವರು ಓಲೆಯನ್ನು ತಂದು ಅರಮನೆಯ ಬಾಗಿಲಿನಲ್ಲಿ ನಿಂತು ಬಾಗಿಲವರಿಗೆ ಹೇಳಿದರು. ಅವರು ಬಂದು ತಮ್ಮರಸನಿಗೆ ತಿಳಿಸಿದರು. ಅರಸನ ಅನುಮತಿಯಿ೦ದ ಓಲೆಕಾರರು ಅರಮನೆಯನ್ನು ಹೊಕ್ಕು ಆಸ್ಥಾನದಲ್ಲಿದ್ದ ವಿದ್ಯುಚ್ಚೋರನನ್ನು ಕಂಡು ಅಡ್ಡ ಬಿದ್ದು ಆತನ ಮುಂದೆ ಓಲೆಯನ್ನಿಟ್ಟರು. ಸಂಧಿವಿಗ್ರಹಿ ಆ ಓಲೆಯನ್ನು ತೆಗೆದುಕೊಂಡು ಓದಿದನು. ಅದರಲ್ಲಿ, “ ವಿದ್ಯುಚ್ಚೋರ ಪರಮಸ್ವಾಮಿಗೆ, ಮಂತ್ರಿ ಪುರುಷೋತ್ತಮನೂ ಹೆಗ್ಗಡೆ ವಜ್ರಸೇನನೂ ಸಾಷ್ಟಾಂಗವಾಗಿ ಎರಗಿ ಬಿನ್ನಯಿಸುವರು. ತಾವು ಹಲವು ದಿವಸ ಹೋಗಿದ್ದೀರಿ. ಬೇರೆ ಮನೆವಾರ್ತೆಯನ್ನೆಲ್ಲ ಮರೆತಿದ್ದೀರಿ. ತಾವಿಲ್ಲದೆ ರಾಜ್ಯವನ್ನು ಪಾಲಿಸುವವರು ಯಾರೂ ಇಲ್ಲ. ಈ ಓಲೆಯನ್ನು ಕಂಡೊಡನೆಯೇ ತಡೆಯದೆ ಹೊರಟು ಬರಬೇಕು ” ಎಂದು ಬರೆದಿರುವುದನ್ನು ಓದಿ ತಿಳಿಸಿದನು. ಅದೆಲ್ಲವನ್ನೂ ಕೇಳಿ ನಾಮರಥನು, “ಈತ ಹೇಳಿದ್ದೂ ಓಲೆಯ ಮಾತೂ ಒಂದಾಯಿತು” ಎಂದು ಸಂದೇಹವಿಲ್ಲದೆ ನಂಬಿದನು. ಬಳಿಕ ತನ್ನ ಸಿಂಹಾಸನಕ್ಕೆ ಸಮಾನವಾದ ಒಂದು ಪೀಠವನ್ನು ಆತನಿಗೆ ಹಾಕಿಸಿ ಕೂರಿಸಿದನು. “ನೀನು ನನ್ನ ತಂಗಿಯ ಮಗನಯ್ಯ, ಸೋದರಳಿಯನಯ್ಯ. ನನಗೆ ಶ್ರೀಮತಿ, ವಸುಮತಿ, ಗುಣಮತಿ, ಸುಲೋಚನೆ, ಸುಪ್ರಭೆ, ಸುಕಾಂತೆ, ಸುಶೀಲೆ, ಮನೋಹರಿ-ಎಂಬ ಎಂಟು ಮಂದಿ ಕನೈಯರಿದ್ದಾರೆ. ಅವರು ಅತ್ಯಂತ ರೂಪಲಾವಣ್ಯವುಳ್ಳವರು ; ನವಯೌವನೆಯರು ; ಅರುವತ್ತು ನಾಲ್ಕು ಕಲೆಗಳಲ್ಲಿಯೂ ತುಂಬ ಕುಶಲೆಯರು. ಹಲವರರಸುಗಳು ಪಾವುಡಗಳನ್ನೂ ಓಲೆಗಳನ್ನೂ ಕಳಿಸಿ ಆ ಕೂಸುಗಳನ್ನು ಬೇಡುತ್ತಿದ್ದಾರೆ.<noinclude><references/></noinclude> 7i9jep6yq5pzs0lhtqrzpmmk8t900lt ಪುಟ:Kannada-Saahitya.pdf/೨೦ 104 23138 324726 65820 2026-06-15T14:23:18Z Reema Jalihal 7674 /* Proofread */ 324726 proofread-page text/x-wiki <noinclude><pagequality level="3" user="Reema Jalihal" /></noinclude> {{center|ಕನ್ನಡ ಸಾಹಿತ್ಯ ಚಿತ್ರಗಳು}} {{rh|left=10}} ಅವರಾರನ್ನೂ ಮೆಚ್ಚದೆ ಇಲ್ಲಿಯವರೆಗೂ ಅವರನ್ನು ಕೊಡದೆ ತಡೆದಿದ್ದೇನೆ. ಈ ಕನ್ಯಾರತ್ನಗಳಿಗೆ ನೀನೇ ಯೋಗ್ಯನಯ್ಯ. ಎಂಟು ಮಂದಿಯನ್ನೂ ನಿನಗೆ ಕೊಟ್ಟೆ, ಮದುವೆಯಾಗು” ಎಂದನು. ವಿದ್ಯುಚ್ಚೋರನು, “ ನಾನು ಒಬ್ಬಳನ್ನು ಮೆಚ್ಚಿ ಅವಳಲ್ಲಿ ಮನಸಿಟ್ಟಿದೇನೆ. ಇವರನ್ನು ಕಟ್ಟಿಕೊಂಡೇನು ಮಾಡಲಿ ?” ಎಂದನು. ಅರಸನು "ಯಾರನ್ನು ಮೆಚ್ಚಿದ್ದೀಯೆ ?” ಎಂದು ಕೇಳಲು, “ಮುಕ್ತಿಶ್ರೀ ಎಂಬವಳು ಹೆಣ್ಣು. ಆಕೆಯಲ್ಲಿ ಮನಸ್ಸಿಟ್ಟಿದ್ದೇನೆ. ಆಕೆಯನ್ನೇ ಮದುವೆಯಾಗಬೇಕು " ಎಂದು ನಿರ್ಧರವಾಗಿ ನುಡಿದು, “ನನ್ನ ಕೆಳೆಯನನ್ನು ನನಗೆ ಒಪ್ಪಿಸಬೇಕು” ಎಂದು ಕೇಳಿಕೊಂಡನು. ಅರಸನು ಅದಕ್ಕೊಪ್ಪಿದನು. ವಿದ್ಯುಚ್ಚೋರನು ಯಮದಂಡನನ್ನೊಡಗೊಂಡು ಅರಸನನ್ನು ಬೀಳ್ಕೊಂಡನು. ಇಬ್ಬರೂ ಒಂಟಿಯನ್ನೆರಿ ತ್ವರಿತವಾಗಿ ಪ್ರಯಾಣಮಾಡುತ್ತ ಕೆಲವು ದಿವಸಗಳಲ್ಲಿ ವೇಣಾತಟವನ್ನು ಸೇರಿ ಹೇಳಿಕಳಿಸಿದರು. ಪಟ್ಟಣವನ್ನು ಅಲಂಕರಿಸಿ ಮಂತ್ರಿ ಮಹಕ್ತರ ಪರಿವಾರ ಸಾಮಂತ ಮಹಾಸಾಮಂತರೂ ಅ೦ತಃಪುರದವರೂ ಪಟ್ಟಣದ ಜನರೆಲ್ಲರೂ ಎದುರು ಬಂದು ಕಂಡು ನಮಸ್ಕರಿಸಿ ಸೇಸೆಯಿಕ್ಕಿದರು. ಬಳಿಕ ಇಬ್ಬರೂ ಪಟ್ಟದಾನೆಯನ್ನೇರಿ ಬೆಳ್ಗೊಡೆ ಮೊದಲಾದ ರಾಜ್ಯಚಿಹ್ನೆಗಳು ಮುಂದೆ ನಡೆಯಲು, ನಾನಾ ವಾದ್ಯಗಳು ಬಾಜಿಸುತ್ತಿರಲು ಅರಮನೆಯನ್ನು ಹೊಕ್ಕರು. ಮರು ದಿವಸ ಆಸ್ಥಾನ ಮಂಟಪದಲ್ಲಿ ಸಿಂಹಾಸನದ ಮೇಲೆ ಕುಳಿತು, ಸಾಮಂತ ಮಹಾಸಾಮಂತರನ್ನೂ ಮಂತ್ರಿ ಪುರೋಹಿತವರ್ಗದವರನ್ನೂ ಅರಸಿಯರನ್ನೂ ಹೇಳಿಕಳಿಸಿ ಕರಸಿ, "ನಾನು ಈ ಸಂಸಾರದ ಭೋಗೋಪಭೋಗಗಳಿಗೆ ಹೇಸಿ ವಿರಕ್ತನಾಗಿ ತಪಸ್ಸು ಮಾಡಬಯಸಿದೆರು ” ಎಂದು ತನ್ನ ನಿಶ್ಚಯವನ್ನು ತಿಳಿಸಿದನು. ಅದನ್ನು ಕೇಳಿ ಅವರೆಲ್ಲರೂ ನೆರೆದು, “ ಇನ್ನೂ ನಿನಗೆ ಏನು ಕಾಲವಾಗಿದೆ. ತಪಸ್ಸಿಗೆ ಹೋಗುವುದಕ್ಕೆ ? ಇನ್ನೂ ನೀನು ಚಿಕ್ಕವನು ; ನವಯೌವನದವನು. ಕೆಲವು ಕಾಲ ದೊರೆತನ ಮಾಡಿ ಆಮೇಲೆ ತಪಸ್ಸು ಮಾಡುವೆಯಂತೆ” ಎಂದರು. ಅದಕ್ಕೆ ಅರಸನು, " ಎಲ್ಲಿಯವರೆಗೆ ಬಾಳುವರೋ, ಯಾವಾಗ ಸಾಯುವರೋ ತಿಳಿಯುವುದು ಹೇಗೆ ಸಾಧ್ಯ ? <<noinclude><references/></noinclude> 874abddcwdota96meei4scg42h987r2 324727 324726 2026-06-15T14:24:02Z Reema Jalihal 7674 324727 proofread-page text/x-wiki <noinclude><pagequality level="3" user="Reema Jalihal" /></noinclude> {{center|ಕನ್ನಡ ಸಾಹಿತ್ಯ ಚಿತ್ರಗಳು}} {{rh|left=10}} ಅವರಾರನ್ನೂ ಮೆಚ್ಚದೆ ಇಲ್ಲಿಯವರೆಗೂ ಅವರನ್ನು ಕೊಡದೆ ತಡೆದಿದ್ದೇನೆ. ಈ ಕನ್ಯಾರತ್ನಗಳಿಗೆ ನೀನೇ ಯೋಗ್ಯನಯ್ಯ. ಎಂಟು ಮಂದಿಯನ್ನೂ ನಿನಗೆ ಕೊಟ್ಟೆ, ಮದುವೆಯಾಗು” ಎಂದನು. ವಿದ್ಯುಚ್ಚೋರನು, “ ನಾನು ಒಬ್ಬಳನ್ನು ಮೆಚ್ಚಿ ಅವಳಲ್ಲಿ ಮನಸಿಟ್ಟಿದೇನೆ. ಇವರನ್ನು ಕಟ್ಟಿಕೊಂಡೇನು ಮಾಡಲಿ ?” ಎಂದನು. ಅರಸನು "ಯಾರನ್ನು ಮೆಚ್ಚಿದ್ದೀಯೆ ?” ಎಂದು ಕೇಳಲು, “ಮುಕ್ತಿಶ್ರೀ ಎಂಬವಳು ಹೆಣ್ಣು. ಆಕೆಯಲ್ಲಿ ಮನಸ್ಸಿಟ್ಟಿದ್ದೇನೆ. ಆಕೆಯನ್ನೇ ಮದುವೆಯಾಗಬೇಕು " ಎಂದು ನಿರ್ಧರವಾಗಿ ನುಡಿದು, “ನನ್ನ ಕೆಳೆಯನನ್ನು ನನಗೆ ಒಪ್ಪಿಸಬೇಕು” ಎಂದು ಕೇಳಿಕೊಂಡನು. ಅರಸನು ಅದಕ್ಕೊಪ್ಪಿದನು. ವಿದ್ಯುಚ್ಚೋರನು ಯಮದಂಡನನ್ನೊಡಗೊಂಡು ಅರಸನನ್ನು ಬೀಳ್ಕೊಂಡನು. ಇಬ್ಬರೂ ಒಂಟಿಯನ್ನೆರಿ ತ್ವರಿತವಾಗಿ ಪ್ರಯಾಣಮಾಡುತ್ತ ಕೆಲವು ದಿವಸಗಳಲ್ಲಿ ವೇಣಾತಟವನ್ನು ಸೇರಿ ಹೇಳಿಕಳಿಸಿದರು. ಪಟ್ಟಣವನ್ನು ಅಲಂಕರಿಸಿ ಮಂತ್ರಿ ಮಹಕ್ತರ ಪರಿವಾರ ಸಾಮಂತ ಮಹಾಸಾಮಂತರೂ ಅ೦ತಃಪುರದವರೂ ಪಟ್ಟಣದ ಜನರೆಲ್ಲರೂ ಎದುರು ಬಂದು ಕಂಡು ನಮಸ್ಕರಿಸಿ ಸೇಸೆಯಿಕ್ಕಿದರು. ಬಳಿಕ ಇಬ್ಬರೂ ಪಟ್ಟದಾನೆಯನ್ನೇರಿ ಬೆಳ್ಗೊಡೆ ಮೊದಲಾದ ರಾಜ್ಯಚಿಹ್ನೆಗಳು ಮುಂದೆ ನಡೆಯಲು, ನಾನಾ ವಾದ್ಯಗಳು ಬಾಜಿಸುತ್ತಿರಲು ಅರಮನೆಯನ್ನು ಹೊಕ್ಕರು. ಮರು ದಿವಸ ಆಸ್ಥಾನ ಮಂಟಪದಲ್ಲಿ ಸಿಂಹಾಸನದ ಮೇಲೆ ಕುಳಿತು, ಸಾಮಂತ ಮಹಾಸಾಮಂತರನ್ನೂ ಮಂತ್ರಿ ಪುರೋಹಿತವರ್ಗದವರನ್ನೂ ಅರಸಿಯರನ್ನೂ ಹೇಳಿಕಳಿಸಿ ಕರಸಿ, "ನಾನು ಈ ಸಂಸಾರದ ಭೋಗೋಪಭೋಗಗಳಿಗೆ ಹೇಸಿ ವಿರಕ್ತನಾಗಿ ತಪಸ್ಸು ಮಾಡಬಯಸಿದೆರು ” ಎಂದು ತನ್ನ ನಿಶ್ಚಯವನ್ನು ತಿಳಿಸಿದನು. ಅದನ್ನು ಕೇಳಿ ಅವರೆಲ್ಲರೂ ನೆರೆದು, “ ಇನ್ನೂ ನಿನಗೆ ಏನು ಕಾಲವಾಗಿದೆ. ತಪಸ್ಸಿಗೆ ಹೋಗುವುದಕ್ಕೆ ? ಇನ್ನೂ ನೀನು ಚಿಕ್ಕವನು ; ನವಯೌವನದವನು. ಕೆಲವು ಕಾಲ ದೊರೆತನ ಮಾಡಿ ಆಮೇಲೆ ತಪಸ್ಸು ಮಾಡುವೆಯಂತೆ” ಎಂದರು. ಅದಕ್ಕೆ ಅರಸನು, " ಎಲ್ಲಿಯವರೆಗೆ ಬಾಳುವರೋ, ಯಾವಾಗ ಸಾಯುವರೋ ತಿಳಿಯುವುದು ಹೇಗೆ ಸಾಧ್ಯ ?<noinclude><references/></noinclude> 3s2hkdiagkd2rnmzdrsstuiovmvn6j6 ಪುಟ:Kannada-Saahitya.pdf/೧೫ 104 23141 324887 324711 2026-06-16T08:29:27Z A826 6806 /* Validated */ 324887 proofread-page text/x-wiki <noinclude><pagequality level="4" user="A826" /></noinclude>{{center|ವಿದ್ಯುಚ್ಚೋರನೆಂಬ ಋಷಿಯ ಕಥೆ}} {{rh|right=5}} ಹೀಗೆ ಅವರಿಬ್ಬರೂ ಒಬ್ಬರಿಗೊಬ್ಬರು ಆಡಿಕೊಳ್ಳುತ್ತಿದ್ದ ಮಾತುಗಳನ್ನು ಕಾವಲಿನವರೂ ಊರಜನರೂ ಕೇಳಿ ಚೋದ್ಯಪಟ್ಟು ಬೆರಗಾಗಿದ್ದರು. ವಿದ್ಯುಚ್ಚೋರನು ಕಾಪಿನವರಿಗೆ ಹೀಗೆ ಹೇಳಿದನು: "ನನ್ನನ್ನೂಈತನನ್ನೂ ಅರಸನಲ್ಲಿಗೆ ಕರೆದುಕೊಂಡಿ ಹೋಗಿ. ಅರಸನ ಮುಂದೆ ನನಗೂ ಇವನಿಗೂ ಮಾತುಂಟು. ಅಲ್ಲಿ ಆ ಮಾತಾಡಿದ ಬಳಿಕ ಆರಸನು ಈತನನ್ನು ತನ್ನ ಮನಬಂದಂತೆ ಮಾಡಲಿ, 'ಎಂತಾದರೂ, ಕೊಲ್ಲ ಹೇಳಿದರೂ ಮೂರು ಸಲ ಬೆಸಗೊಂಡಲ್ಲದೆ ಕೊಲ್ಲಲಾಗದು ' ಎಂದು ನೀತಿಶಾಸ್ತ್ರಗಳಲ್ಲಿ ಹೇಳಿದೆ. ಅದರಿಂದ ನಮ್ಮಿಬ್ಬರನ್ನೂ ಅರಮನೆಗೆ ಕರೆದುಕೊಂಡು ಹೋಗಿ ಅರಸನಿಗೆ ತೋರಿಸಿ " ಎನ್ನಲಾಗಿ, ಆ ಕಾಪಿನವರು ಇಬ್ಬರನ್ನೂ ಅರಸನ ಬಳಿಗೆ ಕರೆದುಕೊಂಡು ಹೋದರು. ಹೋಗಿ, "ದೇವಾ, ಈತನು ಯಮದಂಡನನ್ನು ಕೊಲ್ಲಬಿಡದೆ ತಡೆದನು " ಎಂದು ಬಿನ್ನಯಿಸಿ ವಿದ್ಯುಚ್ಚೋರನನ್ನು ತೋರಿಸಿದರು. " ನೀನೇಕೆ ತಡೆದೆ?" ಎಂದು ಅರಸನು ಕೇಳಲು, ವಿದ್ಯುಚ್ಚೋರನು ಹೇಳತೊಡತಿದನು: " ಯಮದಂಡನದೇನೂ ದೋಷವಿಲ್ಲ. ದೇವತಾ ರಕ್ಷಿತವಾದ ಸರ್ವರುಜಾಪಹಾರನೆಂಬ ನಿಮ್ಮ ಹಾರ ಮೊದಲಾಗಿ ಪಟ್ಟಣದ ಒಡವೆಗಳನ್ನೆಲ್ಲ ರಾತ್ರಿಹೊತ್ತು ಈ ರೂಪಿನಲ್ಲಿ ಕದ್ದು, ಹಗಲೆಲ್ಲ ತೊನ್ನನಾಗಿ ಹಾಳುದೇಗುಲದಲ್ಲಿ ಇರುತ್ತಿದ್ದೆ. ಆದ್ದರಿಂದ ನನ್ನನ್ನು ಕೊಲ್ಲಿ. ಈತನಿಗೇನೂ ದೋಷವಿಲ್ಲ." ಹೀಗೆನ್ನಲು ಅರಸನು, "ಆ ಕದ್ದ ಒಡವೆಯನ್ನೆಲ್ಲ ಏನು ಮಾಡಿದೆ? " ಎಂದು ಕೇಳಿದನು. "ಅಷ್ಟೂ ಇದೆ. ಐದಾರು ಸಾವಿರ ದೀನಾರವೆಚ್ಚವಾಗಿದೆ. ಉಳಿದದ್ದೆಲ್ಲ ಅಚ್ಚಳಿಯದೆ ಇದೆ " ಎಂದನು. ದೊರೆ, "ಹಾಗಾದರೆ, ಹಾರವನ್ನು ತೆಗೆದುಕೊಂಡು ಬಾ. ಪಟ್ಟಣದವರಿಗೂ ಅವರವರ ಒಡವೆಗಳನ್ನಿಟ್ಟಿರುವ ಸ್ಥಳವನ್ನು ತೋರಿಸು" ಎಂದು ಅಪ್ಪಣೆ ಮಾಡಿ ಪಟ್ಟಣದ ಜನಗಳನ್ನೂ ಅವನೊಡನೆ ಕಳಿಸಿದನು. ಅವರೆಲ್ಲ ಕಾಪಿನೊಡನೆ ಹೊರಟರು. ವಿದ್ಯುಚ್ಚೋರನು ಅವರೊಡನೆ ಹೋಗಿ ಗುಹೆಯ ಬಾಗಿಲಿಗೆ ಮುಚ್ಚಿದ್ದ ದೊಡ್ಡ ಶಿಲೆಯನ್ನು ತೆಗೆದುಹಾಕಿ ಒಳಹೊಕ್ಕು ಹಾರವನ್ನು ತೆಗೆದುಕೊಂಡು ಪಟ್ಟಣದ ಜನಕ್ಕೆಲ್ಲ, " ನಿಮ್ಮ ನಿಮ್ಮ ಒಡವೆಗಳನ್ನು ಹುಡುಕಿ ತೆಗೆದುಕೊಳ್ಳಿ. ಒಬ್ಬರದೊಬ್ಬರಿಗೆ ಪಲ್ಲಟಿಸ<noinclude><references/></noinclude> 2ez6ih8ro2ho8gpic6vrbbmzgxl89ai ಪುಟ:Kannada-Saahitya.pdf/೧೬ 104 23144 324712 65856 2026-06-15T12:07:25Z Reema Jalihal 7674 /* Proofread */ 324712 proofread-page text/x-wiki <noinclude><pagequality level="3" user="Reema Jalihal" /></noinclude>{{center|ಕನ್ನಡ ಸಾಹಿತ್ಯ ಚಿತ್ರಗಳು}} {{rh|left=6}} ದಂತೆ ನೋಡಿಕೊಳ್ಳಿ” ಎಂದು ತೋರಿಸಿದನು. ಅವರೆಲ್ಲ ತಮ್ಮ ತಮ್ಮ ಒಡವೆಗಳನ್ನು ಹುಡುಕಿ ತೆಗೆದುಕೊಂಡರು. ಆಮೇಲೆ ವಿದ್ಯುಚ್ಚೋರನು ಹಾರವನ್ನು ತೆಗೆದುಕೊಂಡು ಹೋಗಿ ದೊರೆಗೆ ಒಪ್ಪಿಸಿದನು. ಆಗ ಆತನು “ ಮಾಘಮಾಸದ ರಾತ್ರಿಯಲ್ಲಿ, ನಾಲ್ಕುಚಾವದಲ್ಲಿಯೂ ಘೋರವಾದ ಮೂವತ್ತೆರಡು ದಂಡನೆಗಳನ್ನು ಹೇಗೆ ಸೈರಿ ಸಿದೆ ?” ಎಂದು ಕೇಳಿದನು. ಅದಕ್ಕೆ ವಿದ್ಯುಚ್ಚೋರನಿಂತೆಂದನು: "ದೇವಾ, ಕಿರಿಯವನಾಗಿದ್ದಾಗ ಒಂದು ದಿವಸ ನನ್ನನ್ನು ಓದಿಸುವ ಓಜರೊಡನೆ ಸಹಸ್ರಕೂಟ ಚೈತ್ಯಾಲಯಕ್ಕೆ ನಾನೂ ಹೋಗಿದ್ದೆ. ಓಜರು ದೇವರನ್ನು ವಂದಿಸಹೋದರು. ಅವರು ಬರುವವರೆಗೂ ನಾನು ಚರಿತ್ರ ಪುರಾಣಗಳನ್ನು ವ್ಯಾಖ್ಯಾನ ಮಾಡುತ್ತಿದ್ದ ಶಿವಗುಪ್ತರೆಂಬ ಆಚಾರ್ಯರ ಹತ್ತಿರ ಕುಳಿತಿದ್ದು ಅವರ ವ್ಯಾಖ್ಯಾನವನ್ನು ಕೇಳುತ್ತಿದ್ದೆ. ಅವರು ಹೀಗೆ ಹೇಳುತ್ತಿದ್ದರು: 'ವ್ರತ ಶೀಲ ಚಾರಿತ್ರ ಗುಣಗಳಿಲ್ಲದವರು, ಜೀವಗಳನ್ನು ಕೊಲ್ಲುವವರು, ಬೇಟೆಯಾಡುವವರು, ರಾಗ ದ್ವೇಷ ರೋಭಗಳಿಂದ ಸುಳ್ಳಾಡುವವರು, ಜೀವಗಳಿಗೆ ಸಂತಾಪವನ್ನೂ ವಧೆಯನ್ನೂ ಮಾಡುವವರು, ಮಧ್ಯ ಮಾಂಸಗಳನ್ನು ಸೇವಿಸುವವರು -- ಇವರೇ ಮೊದಲಾದವರೆಲ್ಲ ನರಕಗಳಲ್ಲಿ ಹುಟ್ಟಿ ದುಃಖವನ್ನನುಭವಿಸುತ್ತಾರೆ" ಎಂದು ಹುಳಿ ಆ ನರಕ ದುಃಖಗಳನ್ನೆಲ್ಲ ವಿವರಿಸಿದರು. ಮುಂದುವರಿಸಿ, ' ಮತ್ತೂ ದಾನ, ಪೂಜೆ, ಶೀಲ, ಉಪವಾಸ –– ಎಂಬ ಈ ನಾಲ್ಕು ಬಗೆಯ ಶ್ರಾವಕ ಧರ್ಮಗಳನ್ನು ನಡೆಸುವವರೂ, ತಪಸ್ಸು ಮಾಡುವವರೂ, ಸ್ವರ್ಗ ಮೋಕ್ಷ ಸುಖಗಳನ್ನು ಪಡೆಯುತ್ತಾರೆ' ಎಂದು ಹೇಳಿದರು. ಅದನ್ನು ಕೇಳಿ ಆ ಭಟಾರರ ಪಕ್ಕದಲ್ಲಿ ಶ್ರಾವಕ ಧರ್ಮಗಳನ್ನು ಕೈಕೊಂಡೆನು. 'ಅರ್ಹಂತ ಪರಮ ದೇವರೆ ದೇವರು. ಕೊಲ್ಲದಿರುವುದೆ ಧರ್ಮ. ಅಂತರಂಗ ಬಹಿರಂಗಗಳಲ್ಲಿ ಯಾವ ಪರಿಗ್ರಹವೂ ಇಲ್ಲದಿರುವುದೇ ತಪಸ್ಸು' ಎಂಬಿವೇ ಮೊದಲಾದ ತತ್ತ್ವಗಳನ್ನು ತಿಳಿದುಕೊಂಡೆನು; ಸಮ್ಯಕ್ತ್ವವನ್ನು ಕೈಕೊಂಡೆನು; ವ್ರತಗಳನ್ನು ತಾಳಿದೆನು. ಆಗ ಕೇಳಿದ್ದ ನರಕ ದುಃಖಗಳ ಶತಸಹಸ್ತ್ರಭಾಗಕ್ಕೂ ಇವು ಸಮವಲ್ಲವೆಂದು ಮನಸ್ಸಿನಲ್ಲಿ ಭಾವಿಸಿ ಈ ಮೂವತ್ತೆರಡು ದಂಡನೆಗಳನ್ನೂ ಸೈರಿಸಿಕೊಂಡೆನು” ಎಂದನು. ಅದನ್ನು ಕೇಳಿ ಅರಸನು, “ ನಿನ್ನನ್ನು ಮೆಚ್ಚಿದೆ. ಬೇಡಿಕೊ, ನೀನು ಬೇಡಿ<noinclude><references/></noinclude> 89i7vk7iiyxvy1bi11wzuhv8b7pbi6i ಪುಟ:Kannada-Saahitya.pdf/೧೭ 104 23145 324713 65857 2026-06-15T12:23:01Z Reema Jalihal 7674 /* Proofread */ 324713 proofread-page text/x-wiki <noinclude><pagequality level="3" user="Reema Jalihal" /></noinclude> {{center|ವಿದ್ಯುಚ್ಚೋರನೆಂಬ ಋಷಿಯ ಕಥೆ}} {{rh|right=7}} ದ್ದೆಲ್ಲವನ್ನೂ ಕೊಡುತ್ತೇನೆ” ಎಂದನು. ಎನ್ನಲಾಗಿ, “ ಬೇರೆ ಏನನ್ನೂ ಒಲ್ಲೆ. ನನ್ನ ಕೆಳೆಯನಾದ ಯಮದಂಡನಿಗೆ ಕ್ಷಮೆದೋರಬೇಕು. ಇದೊಂದನ್ನೇ ನಾನು ಬೇಡುವುದು ” ಎಂದು ವಿದ್ಯುಚ್ಚೋರನು ಕೇಳಿಕೊಂಡನು. ಅರಸನೂ ಮತ್ತೆ ಹೀಗೆಂದು ಬೆಸಗೊಂಡನು : “ ಯಮದಂಡನು ನಿನಗೆ ಹೇಗೆ ಕೆಳೆಯನಾದನು ? ನೀನು ಶ್ರಾವಕ ವ್ರತಗಳನ್ನು ಕೈಗೊಂಡೆಯಾದರೂ ಏಕೆ ಕದಿಯುತ್ತೀಯೆ ?” ಹೀಗೆ ಬೆಸಗೊಳ್ಳಲಾಗಿ ಆತನು, " ಯಮದಂಡನು ನನಗೆ ಕೆಳೆಯನಾಗಿರುವ ಸಂಗತಿಯನ್ನೂ ನಿನ್ನ ಪಟ್ಟಣದ ಧನವನ್ನು ಕದ್ದದಕ್ಕೆ ಕಾರಣವನ್ನೂ ಹೇಳುತ್ತೇನೆ. ಕೇಳು, ಅರಸಾ ” ಎಂದು ಹೇಳತೊಡಗಿದನು: " ದಕ್ಷಿಣಾಪಥದಲ್ಲಿ ಅಭೀರವೆಂಬ ನಾಡು. ಅಲ್ಲಿ ವರ್ಣೆಯೆಂಬ ತೊರೆ‍. ಅದರ ದಡದಲ್ಲಿ ವೇಣಾತಟಕವೆಂಬ ಪಟ್ಟಣ. ಆ ಪಟ್ಟಣ ಬಹು ರಮ್ಯವಾಗಿ ಸ್ವರ್ಗವನ್ನೇ ಹೋಲುತ್ತಿರುವುದು. ಅದನ್ನಾಳುವವನು ಜಿತಶತ್ರುವೆಂಬರಸ, ಆತನ ಮಹಾದೇವಿ ವಿಜಯಮತಿಯೆಂಬವಳು. ಆ ಇಬ್ಬರಿಗೂ ಮಗ ನಾನು, ವಿದ್ಯುಚ್ಚೋರ. ಮತ್ತು ಅದೇ ಪಟ್ಟಣದಲ್ಲಿ ಯಮಪಾಶ ನೆಂಬವನು ತಳಾರ. ಆತನ ಹೆಂಡತಿ ನಿಜಗುಣದೇವತೆಯೆಂಬವಳು. ಆ ಇಬ್ಬರಿಗೂ ಮಗ ಈತ, ಯಮದಂಡನೆಂಬವನು. ನಾವಿಬ್ಬರೂ ಸಮಾನ ವಯಸ್ಸಿನವರು. ಐದಾರು ವರ್ಷದವರಾಗಿದ್ದಾಗ ಸಿದ್ದಾರ್ಥನೆಂಬ ಉಪಾಧ್ಯಾಯರ ಬಳಿ ಇಬ್ಬರನ್ನೂ ಓದವುದಕ್ಕೆ ಬಿಟ್ಟರು. ಏಳೆಂಟು ವರ್ಷದೊಳಗೆ ವ್ಯಾಕರಣ, ಛಂದಸ್ಸು, ಅಲಂಕಾರ, ಕಾವ್ಯ, ನಾಟಕ, ಚಾಣಾಕ್ಯ, ವೈದ್ಯ ಮೊದಲಾದ ಶಾಸ್ತ್ರಗಳನ್ನೆಲ್ಲ ಇಬ್ಬರೂ ಕಲಿತೆವು. ಬಳಿಕ ಈತ ತಳಾರನ ಮಗನಾದ್ದರಿಂದ ಕಳ್ಳರನ್ನು ಕಂಡುಹಿಡಿಯುವ ರೀತಿಯನ್ನು ತಿಳಿಸುವ ' ಸುರುಖ'ವೆಂಬ ವಿದ್ಯೆಯನ್ನು ಕಲಿತನು. ನಾನು ಕದಿಯುವ ಉಪಾಯವನ್ನು ಹೇಳುವ ' ಕರಪಟ' ಶಾಸ್ತ್ರವನ್ನು ಕಲಿತೆನು. ಹೀಗೆ ನಾವಿಬ್ಬರೂ ಅನ್ನೋನ್ಯ ಪ್ರೀತಿಯಿಂದ ಕಾಲಕಳೆಯುತ್ತಿದ್ದೆವು. " ಒಂದು ದಿವಸ ಇಬ್ಬರೂ ವನಕ್ರೀಡೆಯಾಡುವುದಕ್ಕೆಂದು ಇಂದ್ರೋಪಮವೆಂಬ ವನಕ್ಕೆ ಹೋದೆವು. ಹಲವು ತೆರದ ವೃಕ್ಷಜಾತಿಗಳಿಂದ ಕಿಕ್ಕಿರಿದಿದ್ದ ಆ ವನದಲ್ಲಿ ಇಬ್ಬರೂ ಉಳಿಚೆಂಡಾಡುತ್ತಿದ್ದೆವು. ಆಗ, ಇವನು ಆಲೋಕನ ವಿದ್ಯೆಯನ್ನು ಕಲ್ತವನಾದ್ದರಿಂದ ಎಲ್ಲಿ ಉಳಿದರೂ ಇವನನ್ನು<noinclude><references/></noinclude> juudufxg6t2gw7m1l8nrzy73xzz0dfb ಪುಟ:Kannada-Saahitya.pdf/೧೨ 104 76689 324885 256902 2026-06-16T08:28:07Z A826 6806 324885 proofread-page text/x-wiki <noinclude><pagequality level="1" user="Akasmita" />{{rh| | ಕನ್ನಡ ಸಾಹಿತ್ಯ ಚಿತ್ರಗಳು | }}</noinclude>ಕನ್ನಡ ಸಾಹಿತ್ಯ ಚಿತ್ರಗಳು {{gap}}ವಾಮರಥನ ವಲಸರುಷನಾದ ಪದ್ಮರಥಗೆ ಕಿಚಂದ್ರನ ಮೆಟ್ಟಿ ಕೊಟ್ಟಿದ್ದ ಸರ್ವರುಜಾಪಹಾರವೆಂಬ ಒಂದು ಸಂತತಿ ಕ್ರಮದಿಂದ ವಾಮರಥನಿಗೆ ಬಂದಿತ್ತು, ಅದನ್ನು ಆತನು ಒತವಸದ ಎಳೆದು ಅಂತಸ್ತಿನಲ್ಲಿ ತನ್ನ ಮಲಗುವ ಕೋಣೆಯಲ್ಲಿ ಒಂದು ಪೆಟ್ಟಿಗೆಯಲ್ಲಿರುವನು. ಎಲ್ಲ ಕಾಲದಲ್ಲೂ ಗಂಧ ಪುಷ್ಪ ದೀಪ ಧೂಪ ಅಕ್ಷತಗಳಿಂದ ಪೂಜಿಸಿ ನವ ಸ್ಕಾರ ಮಾಡುತ್ತಿರ.ವನು. ವಿದ್ಯುಜ್ಯೋಬನು ಕಣ್ಣಿಗೆ ಅ೦ಜನ ಎತ್ತಿಕೊಂಡು ಯಾರೂ ತನ್ನನ್ನು ಕಾಣದಂತಾಗಿರಲು ಅರಮನೆಯನ್ನು ಹೊಕ್ಕು ದೊರೆಯ ಮಲಗುವ ಕೋಣೆಗೆ ನುಗ್ಗಿ, ತಲೆದೆಸೆಯಲ್ಲಿ ಪೂಜೆ ಮಾಡಿದ್ದ ಇಟ್ಟಿಗೆಯನ್ನು ತೆರೆದು ಆ ಹಾರವನ್ನು ತೆಗೆದುಕೊಂಡು ಅರಮನೆಯಿಂದ ಹೊರ ಬಿದ್ದು ಹೊ ಊರ ಹೊರಗಿನ ಗುಹೆಯಲ್ಲಿ ಹೂಳಿಟ್ಟ, ಪಟ್ಟಣಕ್ಕೆ ಬಂದು ಮೊದಲಿ ನಂತೆಯೆ ತೊನ್ನು ರೂಪು ಮಾಡಿಕೊಂಡಿದ್ದನು. {{gap}}ಇತ್ತ ಅರಸನು ನಸರು ಮಡಿವಾಗ ಹಾರವನ್ನು ಕಣಜಿ, ಆಸ್ವಾನ ಮಂಟಪದಲ್ಲಿ ಸಿಂಹಾಸದನ ಮೇಲೆ ಕೂತು ತಳ: ರನದ ಯಮದಂಡನಿಗೆ ಹೇಳಿಕಳಿಸಿ ಕರಸಿದನು. ಕರಸಿ, " ಎಲವೋ ಯಮದಂಡಾ, ಪಟ್ಟಣದ ಹಾರುವರ, ಹರದರ, ಸೂಳೆಯರ, ಒಕ್ಕಲಮಕ್ಕಳ ಒಡವೆಯನ್ನೆಲ್ಲ ಕದ್ದರೂ ವಿಚಾರಿಸದೆ ಸುಮ್ಮನಿದ್ದಿದೆ. ಅಲ್ಲದೆ ನಮ್ಮ ಸಚ್ಚೆಮಯ ಕಳ್ಳನು ಹೋಕು ಪೆಟಕಿ ತೆರೆದು ಒಚ್ಚು ತೇ೦ದ್ರ ಕುಲಭವಾದ ಮಾಗ್ರವನ್ನು $ಗೆದ ಕೊಂಡು ಹೋವನು, ಬೇಗ ಕಳ್ಳನನ್ನು ಗೋವ: ಸಾರವನ್ನು ತೆಗೆದ ಕೊಂಡು ಬಾ ತಾಗೆ ತರದಿದ್ದರೆ ಕಳ್ಳನಿಗೆ ತಕ್ಕ ಸಿಗ್ರಹವನ್ನು ನಿನಗೆ ಮಾಡುವೆನು ?? ಎಂದನು. {{gap}}ಕೇಳಿ ತಳಾರನು, “ ದೇವಾ ನನಗೆ ಏಳು ದಿನ ಅವಕಾಶ ಕೊಡಬೇಕು, ಏಳು ದಿವಸದೊಳಗೆ ಕಳ್ಳನನ್ನು ಕಂಡುಹಿಡಿಯದೆ ಹೋದೆನಂದರೆ, ದೇವರು ನನ್ನನ್ನು ಮೆಚ್ಚಿದಂತೆ ಮಾಡಬಹುದು ” ಎಂದನು. ದೊರೆ ಆದಕೊಪ್ಪಿದನು. {{gap}}ತಳಾರನು ಪಟ್ಟಣದಲ್ಲಿ ಸೂಳೆಗೇರಿಗಳಲ್ಲೂ ಅಂಗಡಿಗಳಲ್ಲ ಬಸದಿಗಳಲ್ಲೂ ವಿಹಾರಗಳಲ್ಲೂ ಕೇಶಿರ್ಕೆರಿಗಳಲ್ಲಿ ಆರಾಮಗಳಲ್ಲಿ ದೇವಾಲಯಗಳ ಪಟ್ಟಣದ ಹೊರಗೂ ಒಳಗೂ, ಅಕ್ಕಪಕ್ಕದ ಪಟ್ಟಣಗಳ ಸ್ಥಿರ.<noinclude><references/></noinclude> hgo6g5megjezye61bquhis7hx2gvszp 324886 324885 2026-06-16T08:28:29Z A826 6806 324886 proofread-page text/x-wiki <noinclude><pagequality level="1" user="Akasmita" />{{rh| | ಕನ್ನಡ ಸಾಹಿತ್ಯ ಚಿತ್ರಗಳು | }}</noinclude>{{gap}}ವಾಮರಥನ ವಲಸರುಷನಾದ ಪದ್ಮರಥಗೆ ಕಿಚಂದ್ರನ ಮೆಟ್ಟಿ ಕೊಟ್ಟಿದ್ದ ಸರ್ವರುಜಾಪಹಾರವೆಂಬ ಒಂದು ಸಂತತಿ ಕ್ರಮದಿಂದ ವಾಮರಥನಿಗೆ ಬಂದಿತ್ತು, ಅದನ್ನು ಆತನು ಒತವಸದ ಎಳೆದು ಅಂತಸ್ತಿನಲ್ಲಿ ತನ್ನ ಮಲಗುವ ಕೋಣೆಯಲ್ಲಿ ಒಂದು ಪೆಟ್ಟಿಗೆಯಲ್ಲಿರುವನು. ಎಲ್ಲ ಕಾಲದಲ್ಲೂ ಗಂಧ ಪುಷ್ಪ ದೀಪ ಧೂಪ ಅಕ್ಷತಗಳಿಂದ ಪೂಜಿಸಿ ನವ ಸ್ಕಾರ ಮಾಡುತ್ತಿರ.ವನು. ವಿದ್ಯುಜ್ಯೋಬನು ಕಣ್ಣಿಗೆ ಅ೦ಜನ ಎತ್ತಿಕೊಂಡು ಯಾರೂ ತನ್ನನ್ನು ಕಾಣದಂತಾಗಿರಲು ಅರಮನೆಯನ್ನು ಹೊಕ್ಕು ದೊರೆಯ ಮಲಗುವ ಕೋಣೆಗೆ ನುಗ್ಗಿ, ತಲೆದೆಸೆಯಲ್ಲಿ ಪೂಜೆ ಮಾಡಿದ್ದ ಇಟ್ಟಿಗೆಯನ್ನು ತೆರೆದು ಆ ಹಾರವನ್ನು ತೆಗೆದುಕೊಂಡು ಅರಮನೆಯಿಂದ ಹೊರ ಬಿದ್ದು ಹೊ ಊರ ಹೊರಗಿನ ಗುಹೆಯಲ್ಲಿ ಹೂಳಿಟ್ಟ, ಪಟ್ಟಣಕ್ಕೆ ಬಂದು ಮೊದಲಿ ನಂತೆಯೆ ತೊನ್ನು ರೂಪು ಮಾಡಿಕೊಂಡಿದ್ದನು. {{gap}}ಇತ್ತ ಅರಸನು ನಸರು ಮಡಿವಾಗ ಹಾರವನ್ನು ಕಣಜಿ, ಆಸ್ವಾನ ಮಂಟಪದಲ್ಲಿ ಸಿಂಹಾಸದನ ಮೇಲೆ ಕೂತು ತಳ: ರನದ ಯಮದಂಡನಿಗೆ ಹೇಳಿಕಳಿಸಿ ಕರಸಿದನು. ಕರಸಿ, " ಎಲವೋ ಯಮದಂಡಾ, ಪಟ್ಟಣದ ಹಾರುವರ, ಹರದರ, ಸೂಳೆಯರ, ಒಕ್ಕಲಮಕ್ಕಳ ಒಡವೆಯನ್ನೆಲ್ಲ ಕದ್ದರೂ ವಿಚಾರಿಸದೆ ಸುಮ್ಮನಿದ್ದಿದೆ. ಅಲ್ಲದೆ ನಮ್ಮ ಸಚ್ಚೆಮಯ ಕಳ್ಳನು ಹೋಕು ಪೆಟಕಿ ತೆರೆದು ಒಚ್ಚು ತೇ೦ದ್ರ ಕುಲಭವಾದ ಮಾಗ್ರವನ್ನು $ಗೆದ ಕೊಂಡು ಹೋವನು, ಬೇಗ ಕಳ್ಳನನ್ನು ಗೋವ: ಸಾರವನ್ನು ತೆಗೆದ ಕೊಂಡು ಬಾ ತಾಗೆ ತರದಿದ್ದರೆ ಕಳ್ಳನಿಗೆ ತಕ್ಕ ಸಿಗ್ರಹವನ್ನು ನಿನಗೆ ಮಾಡುವೆನು?? ಎಂದನು. {{gap}}ಕೇಳಿ ತಳಾರನು, " ದೇವಾ ನನಗೆ ಏಳು ದಿನ ಅವಕಾಶ ಕೊಡಬೇಕು, ಏಳು ದಿವಸದೊಳಗೆ ಕಳ್ಳನನ್ನು ಕಂಡುಹಿಡಿಯದೆ ಹೋದೆನಂದರೆ, ದೇವರು ನನ್ನನ್ನು ಮೆಚ್ಚಿದಂತೆ ಮಾಡಬಹುದು " ಎಂದನು. ದೊರೆ ಆದಕೊಪ್ಪಿದನು. {{gap}}ತಳಾರನು ಪಟ್ಟಣದಲ್ಲಿ ಸೂಳೆಗೇರಿಗಳಲ್ಲೂ ಅಂಗಡಿಗಳಲ್ಲ ಬಸದಿಗಳಲ್ಲೂ ವಿಹಾರಗಳಲ್ಲೂ ಕೇಶಿರ್ಕೆರಿಗಳಲ್ಲಿ ಆರಾಮಗಳಲ್ಲಿ ದೇವಾಲಯಗಳ ಪಟ್ಟಣದ ಹೊರಗೂ ಒಳಗೂ, ಅಕ್ಕಪಕ್ಕದ ಪಟ್ಟಣಗಳ ಸ್ಥಿರ.<noinclude><references/></noinclude> e1t9sbvfsvbigp5ct82qpp9altypxbc ಪುಟ:Kannada-Saahitya.pdf/೩೦ 104 76692 324742 169090 2026-06-15T17:22:02Z Reema Jalihal 7674 /* Proofread */ 324742 proofread-page text/x-wiki <noinclude><pagequality level="3" user="Reema Jalihal" /></noinclude>{{center|ಕನ್ನಡ ಸಾಹಿತ್ಯ ಚಿತ್ರಗಳು}} {{rh|left=20}} {{center|{{larger|ಬಾಹುಬಲಿ}}}} ಭರತನು ಹುಟ್ಟಿದ ಸ್ವಲ್ಪ ಕಾಲದಮೇಲೆ ಕಿರಿಯ ರಾಣಿ ಸುನಂದೆ ಗರ್ಭಿಣಿಯಾದಳು. ಆ ಕಾಲದಲ್ಲಿ ಆಕೆಗೆ ದಿಗ್ಗಜಗಳನ್ನು ಹೋಲುವ ಮದ್ದಾನೆಗಳ ಹೋರಾಟವನ್ನು ನೋಡಬೇಕೆಂದೂ, ಜಗಜಟ್ಟಿಗಳೆಂದು ಹೆಸರುವಾಸಿ ಪಡೆದ ಮಲ್ಲರ ಮಲ್ಲಗಾಳಗವನ್ನು ಕಾಣಬೇಕೆಂದೂ ಅತಿ ಕುತೂಹಲವಾಗುತ್ತಿತ್ತು. ಆ ಬಗೆಯ ಅಸಾಧಾರಣವಾದ ಬಯಕೆಗಳು ಗರ್ಭದಲ್ಲಿ ಬೆಳೆಯುತ್ತಿದ್ದ ಮಗುವಿನ ಬಾಹುಬಲವನ್ನು ಸಾರಿ ಹೇಳುವಂತಿತ್ತು. ದಿನ ತುಂಬಿದ ಬಳಿಕ ಮನುಕುಲದ ಯಶಶ್ರೀ ಜಯಶ್ರೀಗಳು ಮೂಡಿ ಬಂದಂತೆ ಒಬ್ಬ ಕುಮಾರನು ಹುಟ್ಟಿದನು. ಆ ಸಮಯದಲ್ಲಿ ದೇವತೆಗಳೆಲ್ಲ ಆನಂದಿಸಿದರು. ಅರಮನೆಯ ಆನಂದವಾದ್ಯಗಳ ಜೊತೆಗೆ ದೇವಲೋಕದ ವಾದ್ಯಗಳೂ ಮೊಳಗಿದವು. ಊರಿನಲ್ಲಿ ಎಲ್ಲಿ ನೋಡಿದರೂ ಧ್ವಜತೋರಣಗಳನ್ನೆತ್ತಿ ಕಟ್ಟಿ ಪರಿಮಳ ಪುಷ್ಪಗಳನ್ನೆರಚಿ ಸರ್ವಾಲಂಕಾರ ಭೂಷಿತರಾಗಿ ಜನ ಆನಂದೋತ್ಸವಗಳಲ್ಲಿ ಮುಳುಗಿದ್ದರು. ಮಗುವಿಗೆ 'ಬಾಹುಬಲಿ ' ಎಂದು ಹೆಸರಿಟ್ಟರು ಅದರ ಬಾಲಕೇಳಿಗಳಿಂದ ನಾಭಿರಾಜನೇ ಮೊದಲಾದವರೆಲ್ಲರೂ ಪರಮಾನಂದಭರಿತರಾದರು. ಬಾಹುಬಲಿ ಬೆಳೆಬೆಳೆದಂತೆ ತನ್ನ ಹೆಸರನ್ನು ಸಾರ್ಧಕಪಡಿಸುತ್ತಿದ್ದನು. ಜೊತೆಯ ಬಾಲಕರೊಡನೆ ಕುಸ್ತಿಮಾಡುವನು ; ತೊಳ್ ತಟ್ಟಿ ಜಟ್ಟಿಗಳ ಮೇಲೆ ಬಿದ್ದು ಕಾಳಗಮಾಡುವನು. ಹೀಗೆ ತೋಳ್ ಬಲವನ್ನು ಮೆರಸುವುದರಲ್ಲಿ ಮನಮೆಚ್ಚಿ ಆನಂದಿಸುತ್ತಿದ್ದನು. ನವಯೌವನದ ಕಳೆ ಅಡಿಯಿಡುತ್ತಿರಲು ಅವನ ಚೆಲುವಿಗೆ ಎಣೆಯಿಲ್ಲವಾಯಿತು. ಅರಳು ತಾವರೆಯನ್ನು ಹೋಲುವ ಮುಖ, ಕಮಲ ದಳದಂತಹ ಕಣ್ಣುಗಳು, ಮೇಘದಂತೆ ಗಂಭೀರವಾದ ದನಿ, ಕಪ್ಪಾದ ತಲೆಗೂದಲು, ವಿಸ್ತಾರವಾದ ಎದೆ, ಮೊಳಕಾಲವರೆಗೂ ನೀಡಿದ ಬಲವಾದ ತೋಳುಗಳು, ದುಂಡುದೊಡೆಗಳು, ತುಂಬಿದ ಮೈಕಟ್ಟು, ಕುಲಶೈಲದಂತೆ ಔನ್ನಶ್ಯ-ಹೀಗೆ ಬಾಹುಬಲಿ ಸಕಲ ಸೌಂದರ್ಯ ಸಂಪನ್ನನಾದನು. ಅವನ ಆ ಅಸಮಾನವಾದ ಚೆಲುವನ್ನು ಒಮ್ಮೆ ಕಂಡವರು ಅದನ್ನೆಂದಿಗೂ ಮರೆಯುವಂತಿಲ್ಲ.<noinclude><references/></noinclude> 6etrbuf14v84elgs3q0idxystz8ulmm ಪುಟ:Kannada-Saahitya.pdf/೩೧ 104 76693 324743 169091 2026-06-15T17:29:54Z Reema Jalihal 7674 /* Proofread */ 324743 proofread-page text/x-wiki <noinclude><pagequality level="3" user="Reema Jalihal" /></noinclude>{{center|ಭರತ-ಬಾಹುಬಲಿ}} {{rh|right=21}} ಕನಸಿನಲ್ಲಿ ಕೂಡ ಅದನ್ನ ನೆನೆಯುವರು. ಅವನು ಆ ಕಾಲದ * ಕಾಮದೇವ, ಎಂದಮೇಲೆ ಅವನ ಸೌಂದಯ್ಯಕ್ಕೆ ಬೇರೆ ವರ್ಣನೆಯೆಕೆ ? {{center|ಬೇರೆ ಮಕ್ಕಳು}} ಯಶಸ್ವತಿಗೆ ಭರತನಾದ ಮೇಲೆ ತೊಂಬತ್ತೊಂಭತ್ತು ಮಂದಿ ಗಂಡು ಮಕ್ಕಳೂ ಎಲ್ಲರಿಗಿಂತಲೂ ಕಿರಿಯವಳಾಗಿ ಒಬ್ಬ ಮಗಳೂ ಹುಟ್ಟಿದರು. ಬಾಹುಬಲಿ ಹುಟ್ಟಿದ ಬಳಿಕ ಸುನಂದೆ ಒಬ್ಬ ಮಗಳನ್ನು ಮಾತ್ರ ಪಡೆದಳು. ಯಶಸ್ವತಿಯ ಮಗಳು ಬ್ರಹ್ಮಿ; ಸುನಂದೆಯ ಮಗಳು ಸೌಂದರಿ. ಮಕ್ಕಳೆಲ್ಲರೂ ಕುಲಭೂಷಣರಾಗಿ ಬೆಳಗುತ್ತಿದ್ದರು. ಇವರನ್ನೆಲ್ಲ ಕಂಡು ಆದಿ ಪುರುಷನ ಅಕ್ಕರೆ ಉಕ್ಕಿ ಬಂತು. ಅವರೆಲ್ಲರಿಗೂ ತಕ್ಕ ಭೂಷಣಗಳನ್ನು ತನ್ನ ಬುದ್ಧಿ ಬಲದಿಂದ ಹೊಸದಾಗಿ ನಿರ್ಮಿಸಿಕೊಟ್ಟನು. ಅವರೆಲ್ಲರೂ ಕಳೆಯೆರಚುವ ಆ ಅಲಂಕಾರಗಳನ್ನು ತೊಟ್ಟು ಬೆಳಕಿನ ಕಣಗಳಿಂದಲೇ ನಿರ್ಮಿತರಾಗಿರುವರೋ ಎಂಬಂತೆ ತೋರುತ್ತಿದ್ದರು. {{center|ವಿದ್ಯೋಪದೇಶ}} ಈ ಮಕ್ಕಳಿಗೆ ತಕ್ಕ ವಿದ್ಯೆಗಳನ್ನು ಕಲಿಸಬೇಕೆಂದು ಆದಿನಾಥನಿಗೆ ಮನಸ್ಸಾಯಿತು. ಆ ಹೊತ್ತಿಗೆ ಸರಿಯಾಗಿ ಬ್ರಹ್ಮಿ ಸೌಂದರಿಯರಿಬ್ಬರೂ ತಂದೆಯ ಸಮಾಪಕ್ಕೆ ಬಂದು ನಮಸ್ಕಾರ ಮಾಡಿ ದೂರ ಕುಳಿತುಕೊಂಡರು. ಋಷಭಸ್ವಾಮಿಯು ಮಕ್ಕಳಿಬ್ಬರನ್ನೂ ಹತ್ತಿರ ಕರೆದು ತೊಡೆಯ ಮೇಲೆ ಕೂರಿಸಿಕೊಂಡು, " ಮಕ್ಕಳಿರಾ, ನಿಮ್ಮಿಬ್ಬರ ನಡವಳಿಕೆಯೂ ವಿನಯಕ್ಕೆ ನೆಲೆಯಾಗಿದೆ. ಈ ವಯಸ್ಸು, ಈ ಶೀಲ, ಈ ವಿನಯ— ಎಲ್ಲಕ್ಕೂ ವಿದ್ಯೆಯನ್ನು ಸೇರಿಸಿದರೆ ಆಗ ನೀವೆ ಜಗತ್ಪಾವನೆಯರಾಗುತ್ತೀರಿ. ಎಲ್ಲರನ್ನೂ ಮಾರಿಸುತ್ತೀರಿ" ಎಂದು ನುಡಿದನು. ಬಳಿಕ ಅವರಿಬ್ಬರನ್ನೂ ಎರಡು ಪಕ್ಕಗಳಲ್ಲಿ ಕೂರಿಸಿಕೊಂಡು ಹಿರಿಯ ಮಗಳು ಬ್ರಹ್ಮಿಗೆ ಲಿಪಿಗಳನ್ನೂ ಸೌಂದರಿಗೆ ಗಣಿತವನ್ನೂ ಉಪದೇಶಮಾಡಿದನು. ಇದರ ಜೊತೆಗೆ ವಾಙ್ಮಯವನ್ನೂ ———————— * ಜೈನಪುರಾಣಗಳು ಒಟ್ಟು ಇಪ್ಪತ್ತುನಾಲ್ಕು ಮಂದಿ ಕಾಮದೇವರು ಬೇರೆ ಬೇರೆ ಕಾಲಗಳಲ್ಲಿದ್ದರೆಂದು ಹೇಳುತ್ತವೆ. ಅವರಲ್ಲಿ ಬಾಹುಬಲಿ ಮೊದಲನೆಯವನು.<noinclude><references/></noinclude> 3r926gua0d25e49prrrnlz4j58e10sl ಪುಟ:Kannada-Saahitya.pdf/೩೨ 104 76694 324744 169092 2026-06-15T17:35:59Z Reema Jalihal 7674 /* Proofread */ 324744 proofread-page text/x-wiki <noinclude><pagequality level="3" user="Reema Jalihal" /></noinclude> {{center|ಕನ್ನಡ ಸಾಹಿತ್ಯ ಚಿತ್ರಗಳು}} {{rh|left=22}} ಸಮಸ್ತ ಕಲೆಗಳನ್ನೂ ತಿಳಿಸಿ ಅವರು ಸಕಲ ವಿದ್ಯಾಪರಿಪೂರ್ಣೆಯರಾಗುವಂತೆ ಮಾಡಿದನು. ಹೀಗೆ ಮೊದಲು ಹೆಣ್ಣು ಮಕ್ಕಳಿಗೆ ವಿದ್ಯೋಪದೇಶಮಾಡಿ ಆಮೇಲೆ ಗಂಡುಮಕ್ಕಳಿಗೆ ಕಲಿಸಕೊಡಗಿದನು. ಭರತನಿಗೆ ಅರ್ಥಶಾಸ್ತ್ರ ಭರತಶಾಸ್ತ್ರಗಳನ್ನು ತಿಳಿಸಿದನು. ಬಾಹುಬಲಿಗೆ ಕಾಮತಂತ್ರ, ಆಯುರ್ವೇದ, ಧನುರ್ವೇದ, ಹಸ್ತಿತಂತ್ರ, ಅಶ್ವತಂತ್ರ, ರತ್ನ ಪರೀಕ್ಷೆ ಮೊದಲಾದವನ್ನು ಕಲಿಸಿದನು. ಉಳಿದ ಮಕ್ಕಳಿಗೆಲ್ಲ ಗೀಳವಾದ್ಯಗಳ ಅರಿವನ್ನೊಳಗೊಂಡ ಗಂಧರ್ವ ಶಾಸ್ತ್ರ, ಚಿತ್ರಕಲೆ, ವಾಸ್ತುವಿದ್ಯೆ ಮುಂತಾದ ಲೋಕೋಪಕಾರಿಗಳಾದ ಶಾಸ್ತ್ರಗಳು ಎಷ್ಟಿವೆಯೋ ಅಷ್ಟನ್ನೂ ಉಪದೇಶಮಾಡಿದನು. ಉತ್ತಮ ವಿದ್ಯೆಗಳಿಗೆ ನೆಲೆಯಾದ ಮಕ್ಕಳೆಲ್ಲರೂ ತಮ್ಮ ನಯ ವಿನಯಗಳಿಂದ ತಂದೆಯ ಮನಸ್ಸಿಗೆ ಆನಂದವುಂಟುಮಾಡುತ್ತಿದ್ದರು. {{center|ಕೃತಯುಗಾರಂಭ}} ಅಷ್ಟುಹೊತ್ತಿಗೆ ಲೋಕದಲ್ಲಿ ಜನ ಕಷ್ಟಪಟ್ಟು ದುಡಿಯದೆ ಸುಖವಾಗಿ ಬಾಳಬಹುದಾಗಿದ್ದ ಭೋಗಭೂಮಿ ಸ್ಥಿತಿ ಪೂರ್ತಿಯಾಗಿ ಮಾಯವಾಯಿತು. ಮೈಮುರಿದು ಕೆಲಸಮಾಡಿಯೇ ಬದುಕಬೇಕಾದ ಕರ್ಮಭೂಮಿ ಸ್ಥಿತಿ ಪ್ರಾರಂಭವಾಯಿತು. ಆಗ ಮೊದಲು ತಾನಾಗಿಯೇ ಹುಟ್ಟಿ ಬೆಳೆದು ಫಲ ಕೊಡುತ್ತಿದ್ದ ಸಸ್ಯಾದಿಗಳ ಸಾರ ಕುಗ್ಗಿಹೋಯಿತು. ಜನರಿಗೆ ರೋಗರುಜಿನಗಳ ಬಾಧೆಯೂ ಬಂದೊದಗಿತು. ಮುಂಗಾಣದೆ ಪ್ರಜೆಗಳೆಲ್ಲ ಒಟ್ಟುಗೂಡಿ ನಾಭಿರಾಜನ ಸಲಹೆಯಂತೆ ಆದಿನಾಥನ ಬಳಿ ಬಂದರು. ತಮ್ಮ ಹಸಿವು ಸಂಕಟಗಳನ್ನು ಪರಿಹರಿಸಿ ಬಾಳುವ ದಾರಿ ತೋರಬೇಕೆಂದು ಮೊರೆಯಿಟ್ಟರು. ಋಷಭಸ್ವಾಮಿಯು ಅವರ ಮೊರೆಯನ್ನು ಕೇಳಿ, 'ಅ೦ಜಬೇಡಿ ' ಎಂದು ಅವರನ್ನೆಲ್ಲ ಸಂತಯಿಸಿದನು. ಬಳಿಕ ಭೂಮಿಯನ್ನು ಅಲ್ಲಲ್ಲಿಯ ಪ್ರಕೃತಿ ಸ್ವಭಾವಕ್ಕನುಗುಣವಾಗಿ ಅನೇಕ ಬಗೆಯಾಗಿ ವಿಂಗಡಿಸಿದನು. ಆಯಾ ಪ್ರದೇಶದಲ್ಲಿ ಹೇಗೆ ಹೇಗೆ ಜೀವನ ಸೌಕರ್‍ಯಗಳನ್ನು ದೊರಕಿಸಿಕೊಳ್ಳಬಹುದೆಂಬುದನ್ನು ತಿಳಿಸಿದನು. ದೇಶಗಳನ್ನು ಆಳುವುದು, ತೆರಿಗೆಯೆತ್ತುವುದು, ಜನ ನೆಮ್ಮದಿಗೆ ದಾರಿಮಾಡು<noinclude><references/></noinclude> gyr2twtl7es2ksf26rcyqxnblk1vhim ಪುಟ:Kannada-Saahitya.pdf/೩೩ 104 76695 324745 169093 2026-06-15T17:42:56Z Reema Jalihal 7674 /* Proofread */ 324745 proofread-page text/x-wiki <noinclude><pagequality level="3" user="Reema Jalihal" /></noinclude>{{center|ಭರತ-ಬಾಹುಬಲಿ}} {{rh|right=23}} ವುದು, ಮೊದಲಾದ ಕ್ರಮವನ್ನು ವಿವರಿಸಿದನು. ಜನರ ಜೀವನೋಪಾಯಕ್ಕಾಗಿ ಬರವಣಿಗೆ, ಕೃಷಿ, ವಾಣಿಜ್ಯ, ಹಸ್ತಕೌಶಲ್ಯದಿಂದ ಸಾಧಿಸುವ ಶಿಲ್ಪ, ಕತ್ತಿ ಹಿಡಿದು ರಕ್ಷಣೆ ಮಾಡುವ ಶಸ್ತ್ರಕರ್ಮ, ಪಶುಪಾಲನೆ, ಸೇವಾವೃತ್ತಿ ಮೊದಲಾದ ವೃತ್ತಿಗಳನ್ನು ಕಲ್ಪಿಸಿದನು. ಜನರನ್ನು ಕ್ಷತ್ರಿಯ, ವೈಶ್ಯ, ಶೂದ್ರರೆಂದು ಮೂರು ವರ್ಣಗಳಾಗಿ ವಿಂಗಡಿಸಿ ಅವರವರ ಕರ್ತವ್ಯಗಳನ್ನು ಗೊತ್ತು ಮಾಡಿದನು. ಈ ವ್ಯವಸ್ಥೆಯನ್ನು ಮಾರದೆ ನಡೆಯುತ್ತಿದ್ದರೆ ಈ ಕೀಳ್ಗಾಲದಲ್ಲೂ ಜನ ಸುಖವಾಗಿ ಬಾಳಬಹುದೆಂದು ನಿಯಮಿಸಿದನು. ಆದಿನಾಥನು ಹೀಗೆ ಕಟ್ಟು ಪಾಡು ಮಾಡಿದಂದಿನಿಂದ ಕೃತಯುಗ ಪ್ರಾರಂಭವಾಯಿತು. ಅದೇ ಕಾಲದಲ್ಲಿ ಋಷಭಸ್ವಾಮಿಗೆ ಪಟ್ಟಾಭಿಷೇಕವಾಯಿತು. ರಾಜ್ಯವಾಳುತ್ತ ತಾನು ಮಾಡಿದ ಲೋಕವ್ಯವಸ್ಥೆಯನ್ನು ಸರಿಯಾಗಿ ನಡೆಸುವುದಕ್ಕೂ, ಮಾರಿದವರನ್ನು ಉಚಿತ ರೀತಿಯಲ್ಲಿ ಶಿಕ್ಷಿಸುವುದಕ್ಕೂ ಯೋಗ್ಯವಾದ ರಾಜಕುಲಗಳನ್ನು ಸ್ಥಾಪಿಸಿದನು. ಋಷಭಸ್ವಾಮಿಯೇ ಆದರ್ಶ ರಾಜನಾಗಿ ರಾಜ್ಯ ಪಾಲನೆ ಮಾಡುತ್ತಿರಲು ನೆಲವೆಲ್ಲ ಹರ್ಷಕ್ಕೆ ನೆಲೆಯಾಗಿತ್ತು. {{center|ಋಷಭನ ವೈರಾಗ್ಯ, ಪರಿನಿಷ್ಕ್ರಮಣ}} ಮೆಚ್ಚಿನ ಮಡದಿಯರು, ವಿದ್ಯಾ ವಿನಯ ಸಂಪನ್ನರಾದ ಮಕ್ಕಳು, ತೃಪ್ತರಾದ ಪ್ರಜೆಗಳು, ——ಇವರಿಂದ ಕೂಡಿ ಪರಮಾನಂದಭರಿತನಾಗಿ ರಾಜ್ಯಭಾರ ಮಾಡುತ್ತ ಆದಿನಾಥನು ಅನೇಕ ವರ್ಷಗಳನ್ನು ಕಳೆದನು. ಬಳಿಕ ಒಮ್ಮೆ ಆತನು ಒಡೋಲಗದಲ್ಲಿರುವಾಗ ದೇವೇಂದ್ರನು ದೇವಸಮೂಹದೊಡನೆ ಆಸ್ಥಾನಕ್ಕೆ ಬಂದನು. ಅಪ್ಸರೆಯರ ನೃತ್ತಸೇವೆಯಿಂದ ಪರಮನನ್ನು ಸಂತೋಷಪಡಿಸಬೇಕೆಂಬ ತಮ್ಮ ಬಯಕೆಯನ್ನು ಅರಿಕೆಮಾಡಿಕೊಂಡನು. ಆದಿನಾಥನು ತಾನು ಯಾವೊಂದು ಆಸೆಯೂ ಇಲ್ಲದವನಾದರೂ ಸಮಸ್ತ ಸುರ ನರರ ಆಸೆ ಪೂರ್ಣವಾಗಲೆಂಬ ಭಾವನೆಯಿಂದ ಅದಕ್ಕೆ ಸಮ್ಮತಿಯಿತ್ತನು. ದೇವವಾದ್ಯಗಳ ಮಧುರರವವೂ, ದೇವಸ್ತ್ರೀಯರ ಇಂಪಾದ ಗಾನವೂ ಅಮೃತದ ಮಳೆ ಸುರಿದಂತೆ ರಂಜಿಸುತ್ತಿರಲು ನೀಳಾಂಜನೆಯೆಂಬ ದೇವ ನರ್ತಕಿಯೊಬ್ಬಳು ನರ್ತನಕ್ಕೆ ಪ್ರಾರಂಭಿಸಿದಳು. ಅವಳ ರೂಪಕ್ಕೂ ನರ್ತನ<noinclude><references/></noinclude> tag4bivpho2dtmg4g0ai81fengeydnp ಪುಟ:Kannada-Saahitya.pdf/೩೪ 104 76696 324746 169094 2026-06-15T17:48:35Z Reema Jalihal 7674 /* Proofread */ 324746 proofread-page text/x-wiki <noinclude><pagequality level="3" user="Reema Jalihal" /></noinclude>{{center|ಕನ್ನಡ ಸಾಹಿತ್ಯ ಚಿತ್ರಗಳು}} {{rh|left=24}} ಕೌಶಲ್ಯಕ್ಕೂ ಸಭೆಯೆಲ್ಲ ಬೆರಗಾಯಿತು. ನಿಸ್ಸ೦ಗನಾದ ಆದಿನಾಥನೇ ಆ ಸೊಗಸಿಗೆ ಮನಸೋತು ನೋಡುತ್ತಿದ್ದನು. ಹಾಗೆ ನೋಡುತ್ತಿದ್ದಾಗ ಆ ನೀಳಾಂಜನೆಗೆ ಆಯಸ್ಸು ಮುಗಿಯಿತು. ಆಡುತ್ತಾಡುತ್ತ ಆಕೆ ಮಿಂಚಿನಂತೆ ತಟಕ್ಕನೆ ಮಾಯವಾದಳು. ರಸಭಂಗವಾದೀತೆಂದು ಇಂದ್ರನು ತನ್ನ ಶಕ್ತಿಯಿಂದ ಅವಳಂತೆಯೇ ಮತ್ತೊಬ್ಬಳನ್ನು ಸೃಷ್ಟಿಸಿ ನರ್ತನವನ್ನು ಮುಂದುವರಿಸಿದನು. ಅಲ್ಲಿ ನೆರೆದ ನರರಾಗಲಿ ಸುರರಾಗಲಿ ಅದನ್ನು ಅರಿಯಲಿಲ್ಲ ; ಮೊದಲಿನ ನೀಳಾಂಜನೆಯೆಂದೇ ಭಾವಿಸಿದ್ದರು. ಆದಿನಾಥನಿಗೆ ಮಾತ್ರ ಆ ಗುಟ್ಟು ಗೊತ್ತಾಗಿಹೋಯಿತು. ಅದನ್ನು ಕಂಡು ಋಷಭಸ್ವಾಮಿಯು “ ದೇಹ ಎಷ್ಟು ಅನಿತ್ಯವಾದ್ದು !” ಎಂದು ಆಶ್ಚರ್ಯಪಟ್ಟನು. ಸಂಸಾರದ ಅಸ್ಥಿರತೆ ಚೆನ್ನಾಗಿ ಮಂದಟ್ಟಾಯಿತು. ' ಇನ್ನು ನನಗೆ ಈ ಭೋಗ ಭಾಗ್ಯಗಳೊಂದೂ ಬೇಡ ' ಎಂದು ನಿಶ್ಚಯಮಾಡಿ ಎಲ್ಲವನ್ನೂ ತೊರೆದನು. ಮುಕ್ತಿಯನ್ನು ಸಾಧಿಸಬೇಕೆಂದು ಸಂಕಲ್ಪಿಸಿ ತಪಸ್ಸಿಗೆ ಹೊರಡಲು ಸಿದ್ಧನಾದನು. ಬಳಿಕ ಭರತನನ್ನು ಕರೆಸಿ ಆತನಿಗೆ ಪಟ್ಟಾಭಿಷೇಕ ಮಾಡಿ ರಾಜಪದವಿಯನ್ನಿತ್ತನು. ಬಾಹುಬಲಿಗೆ ಯುವರಾಜಪದವಿಯನ್ನು ಕೊಟ್ಟನು. ಭರತನು ಅಯೋಧ್ಯಾ ಪಟ್ಟಣದಲ್ಲಿಯೂ ಬಾಹುಬಲಿ ವೌದನಪುರದಲ್ಲಿಯೂ ಆಳುತ್ತಿರುವಂತೆ ನಿಯಮಿಸಿದಮ. ಉಳಿದ ಮಕ್ಕಳಿಗೂ ಭೂಮಂಡಲವನ್ನು ಹಂಚಿಕೊಟ್ಟು ಒಬ್ಬೊಬ್ಬರನ್ನು ಒಂದೊಂದು ಕಡೆ ನಿಲ್ಲಿಸಿದನು. ಬಂಧುಗಳೆಲ್ಲರಿಗೂ ಉಚಿತ ಸತ್ಕಾರ ಮಾಡಿ ತಾಯಿತಂದೆಗಳ ಅಪ್ಪಣೆ ಪಡೆದು ತಪಸ್ಸಿಗೆ ಹೊರಟನು. ಆಗ ದೇವತೆಗಳು ಮತ್ತೊಮ್ಮೆ ಋಷಭಸ್ವಾಮಿಗೆ ಆಭಿಷೇಕ ಮಾಡಿದರು. ಆನಂತರ ಪಲ್ಲಕ್ಕಿಯೊಂದನ್ನು ಅಣಿಮಾಡಿ ತಂದರು. ಋಷಭಸ್ವಾಮಿ ಅದನ್ನು ಹತ್ತಿದ ಬಳಿಕ ಏಳಡಿಗಳಷ್ಟು ದೂರ ಕ್ಷತ್ರಿಯ ರಾಜರು ಅದನ್ನು ಹೊತ್ತು ನಡೆದರು. ಬಳಿಕ ದೇವತೆಗಳು ತಮ್ಮ ಕೈಗೆ ತೆಗೆದುಕೊಂಡು ಆಕಾಶ ಮಾರ್ಗದಲ್ಲಿ ಸಂಭ್ರಮದಿಂದ ನಡೆದರು. ಊರ ಹೊರಗಿನ ವನದಲ್ಲಿ ಪಲ್ಲಕ್ಕಿಯನ್ನಿಳಿಸಲು ಆದಿನಾಥನು ವಿಧಿವಿಹಿತವಾಗಿ ದೀಕ್ಷೆಯನ್ನು ಕೈಕೊಂಡನು. ಆತನು ಕಿತ್ತೆಸೆದ ಕುರುಳನ್ನು ಪೂಜಿಸಿ ದೇವತೆಗಳು<noinclude><references/></noinclude> nill4uzg7upjawqo5l6dob3dbrkpxa2 324750 324746 2026-06-16T02:14:50Z A826 6806 /* Validated */ 324750 proofread-page text/x-wiki <noinclude><pagequality level="4" user="A826" />{{rh|24|ಕನ್ನಡ ಸಾಹಿತ್ಯ ಚಿತ್ರಗಳು|}}</noinclude>ಕೌಶಲ್ಯಕ್ಕೂ ಸಭೆಯೆಲ್ಲ ಬೆರಗಾಯಿತು. ನಿಸ್ಸ೦ಗನಾದ ಆದಿನಾಥನೇ ಆ ಸೊಗಸಿಗೆ ಮನಸೋತು ನೋಡುತ್ತಿದ್ದನು. ಹಾಗೆ ನೋಡುತ್ತಿದ್ದಾಗ ಆ ನೀಳಾಂಜನೆಗೆ ಆಯಸ್ಸು ಮುಗಿಯಿತು. ಆಡುತ್ತಾಡುತ್ತ ಆಕೆ ಮಿಂಚಿನಂತೆ ತಟಕ್ಕನೆ ಮಾಯವಾದಳು. ರಸಭಂಗವಾದೀತೆಂದು ಇಂದ್ರನು ತನ್ನ ಶಕ್ತಿಯಿಂದ ಅವಳಂತೆಯೇ ಮತ್ತೊಬ್ಬಳನ್ನು ಸೃಷ್ಟಿಸಿ ನರ್ತನವನ್ನು ಮುಂದುವರಿಸಿದನು. ಅಲ್ಲಿ ನೆರೆದ ನರರಾಗಲಿ ಸುರರಾಗಲಿ ಅದನ್ನು ಅರಿಯಲಿಲ್ಲ; ಮೊದಲಿನ ನೀಳಾಂಜನೆಯೆಂದೇ ಭಾವಿಸಿದ್ದರು. ಆದಿನಾಥನಿಗೆ ಮಾತ್ರ ಆ ಗುಟ್ಟು ಗೊತ್ತಾಗಿಹೋಯಿತು. ಅದನ್ನು ಕಂಡು ಋಷಭಸ್ವಾಮಿಯು " ದೇಹ ಎಷ್ಟು ಅನಿತ್ಯವಾದ್ದು!" ಎಂದು ಆಶ್ಚರ್ಯಪಟ್ಟನು. ಸಂಸಾರದ ಅಸ್ಥಿರತೆ ಚೆನ್ನಾಗಿ ಮಂದಟ್ಟಾಯಿತು. ' ಇನ್ನು ನನಗೆ ಈ ಭೋಗ ಭಾಗ್ಯಗಳೊಂದೂ ಬೇಡ ' ಎಂದು ನಿಶ್ಚಯಮಾಡಿ ಎಲ್ಲವನ್ನೂ ತೊರೆದನು. ಮುಕ್ತಿಯನ್ನು ಸಾಧಿಸಬೇಕೆಂದು ಸಂಕಲ್ಪಿಸಿ ತಪಸ್ಸಿಗೆ ಹೊರಡಲು ಸಿದ್ಧನಾದನು. ಬಳಿಕ ಭರತನನ್ನು ಕರೆಸಿ ಆತನಿಗೆ ಪಟ್ಟಾಭಿಷೇಕ ಮಾಡಿ ರಾಜಪದವಿಯನ್ನಿತ್ತನು. ಬಾಹುಬಲಿಗೆ ಯುವರಾಜಪದವಿಯನ್ನು ಕೊಟ್ಟನು. ಭರತನು ಅಯೋಧ್ಯಾ ಪಟ್ಟಣದಲ್ಲಿಯೂ ಬಾಹುಬಲಿ ವೌದನಪುರದಲ್ಲಿಯೂ ಆಳುತ್ತಿರುವಂತೆ ನಿಯಮಿಸಿದಮ. ಉಳಿದ ಮಕ್ಕಳಿಗೂ ಭೂಮಂಡಲವನ್ನು ಹಂಚಿಕೊಟ್ಟು ಒಬ್ಬೊಬ್ಬರನ್ನು ಒಂದೊಂದು ಕಡೆ ನಿಲ್ಲಿಸಿದನು. ಬಂಧುಗಳೆಲ್ಲರಿಗೂ ಉಚಿತ ಸತ್ಕಾರ ಮಾಡಿ ತಾಯಿತಂದೆಗಳ ಅಪ್ಪಣೆ ಪಡೆದು ತಪಸ್ಸಿಗೆ ಹೊರಟನು. ಆಗ ದೇವತೆಗಳು ಮತ್ತೊಮ್ಮೆ ಋಷಭಸ್ವಾಮಿಗೆ ಆಭಿಷೇಕ ಮಾಡಿದರು. ಆನಂತರ ಪಲ್ಲಕ್ಕಿಯೊಂದನ್ನು ಅಣಿಮಾಡಿ ತಂದರು. ಋಷಭಸ್ವಾಮಿ ಅದನ್ನು ಹತ್ತಿದ ಬಳಿಕ ಏಳಡಿಗಳಷ್ಟು ದೂರ ಕ್ಷತ್ರಿಯ ರಾಜರು ಅದನ್ನು ಹೊತ್ತು ನಡೆದರು. ಬಳಿಕ ದೇವತೆಗಳು ತಮ್ಮ ಕೈಗೆ ತೆಗೆದುಕೊಂಡು ಆಕಾಶ ಮಾರ್ಗದಲ್ಲಿ ಸಂಭ್ರಮದಿಂದ ನಡೆದರು. ಊರ ಹೊರಗಿನ ವನದಲ್ಲಿ ಪಲ್ಲಕ್ಕಿಯನ್ನಿಳಿಸಲು ಆದಿನಾಥನು ವಿಧಿವಿಹಿತವಾಗಿ ದೀಕ್ಷೆಯನ್ನು ಕೈಕೊಂಡನು. ಆತನು ಕಿತ್ತೆಸೆದ ಕುರುಳನ್ನು ಪೂಜಿಸಿ ದೇವತೆಗಳು<noinclude><references/></noinclude> lhvrckiqxnmvlju9sryspa5n0b8md4u 324751 324750 2026-06-16T02:33:18Z A826 6806 324751 proofread-page text/x-wiki <noinclude><pagequality level="4" user="A826" />{{rh|೨೪|ಕನ್ನಡ ಸಾಹಿತ್ಯ ಚಿತ್ರಗಳು|}}</noinclude>ಕೌಶಲ್ಯಕ್ಕೂ ಸಭೆಯೆಲ್ಲ ಬೆರಗಾಯಿತು. ನಿಸ್ಸ೦ಗನಾದ ಆದಿನಾಥನೇ ಆ ಸೊಗಸಿಗೆ ಮನಸೋತು ನೋಡುತ್ತಿದ್ದನು. ಹಾಗೆ ನೋಡುತ್ತಿದ್ದಾಗ ಆ ನೀಳಾಂಜನೆಗೆ ಆಯಸ್ಸು ಮುಗಿಯಿತು. ಆಡುತ್ತಾಡುತ್ತ ಆಕೆ ಮಿಂಚಿನಂತೆ ತಟಕ್ಕನೆ ಮಾಯವಾದಳು. ರಸಭಂಗವಾದೀತೆಂದು ಇಂದ್ರನು ತನ್ನ ಶಕ್ತಿಯಿಂದ ಅವಳಂತೆಯೇ ಮತ್ತೊಬ್ಬಳನ್ನು ಸೃಷ್ಟಿಸಿ ನರ್ತನವನ್ನು ಮುಂದುವರಿಸಿದನು. ಅಲ್ಲಿ ನೆರೆದ ನರರಾಗಲಿ ಸುರರಾಗಲಿ ಅದನ್ನು ಅರಿಯಲಿಲ್ಲ; ಮೊದಲಿನ ನೀಳಾಂಜನೆಯೆಂದೇ ಭಾವಿಸಿದ್ದರು. ಆದಿನಾಥನಿಗೆ ಮಾತ್ರ ಆ ಗುಟ್ಟು ಗೊತ್ತಾಗಿಹೋಯಿತು. ಅದನ್ನು ಕಂಡು ಋಷಭಸ್ವಾಮಿಯು " ದೇಹ ಎಷ್ಟು ಅನಿತ್ಯವಾದ್ದು!" ಎಂದು ಆಶ್ಚರ್ಯಪಟ್ಟನು. ಸಂಸಾರದ ಅಸ್ಥಿರತೆ ಚೆನ್ನಾಗಿ ಮಂದಟ್ಟಾಯಿತು. ' ಇನ್ನು ನನಗೆ ಈ ಭೋಗ ಭಾಗ್ಯಗಳೊಂದೂ ಬೇಡ ' ಎಂದು ನಿಶ್ಚಯಮಾಡಿ ಎಲ್ಲವನ್ನೂ ತೊರೆದನು. ಮುಕ್ತಿಯನ್ನು ಸಾಧಿಸಬೇಕೆಂದು ಸಂಕಲ್ಪಿಸಿ ತಪಸ್ಸಿಗೆ ಹೊರಡಲು ಸಿದ್ಧನಾದನು. ಬಳಿಕ ಭರತನನ್ನು ಕರೆಸಿ ಆತನಿಗೆ ಪಟ್ಟಾಭಿಷೇಕ ಮಾಡಿ ರಾಜಪದವಿಯನ್ನಿತ್ತನು. ಬಾಹುಬಲಿಗೆ ಯುವರಾಜಪದವಿಯನ್ನು ಕೊಟ್ಟನು. ಭರತನು ಅಯೋಧ್ಯಾ ಪಟ್ಟಣದಲ್ಲಿಯೂ ಬಾಹುಬಲಿ ವೌದನಪುರದಲ್ಲಿಯೂ ಆಳುತ್ತಿರುವಂತೆ ನಿಯಮಿಸಿದಮ. ಉಳಿದ ಮಕ್ಕಳಿಗೂ ಭೂಮಂಡಲವನ್ನು ಹಂಚಿಕೊಟ್ಟು ಒಬ್ಬೊಬ್ಬರನ್ನು ಒಂದೊಂದು ಕಡೆ ನಿಲ್ಲಿಸಿದನು. ಬಂಧುಗಳೆಲ್ಲರಿಗೂ ಉಚಿತ ಸತ್ಕಾರ ಮಾಡಿ ತಾಯಿತಂದೆಗಳ ಅಪ್ಪಣೆ ಪಡೆದು ತಪಸ್ಸಿಗೆ ಹೊರಟನು. ಆಗ ದೇವತೆಗಳು ಮತ್ತೊಮ್ಮೆ ಋಷಭಸ್ವಾಮಿಗೆ ಆಭಿಷೇಕ ಮಾಡಿದರು. ಆನಂತರ ಪಲ್ಲಕ್ಕಿಯೊಂದನ್ನು ಅಣಿಮಾಡಿ ತಂದರು. ಋಷಭಸ್ವಾಮಿ ಅದನ್ನು ಹತ್ತಿದ ಬಳಿಕ ಏಳಡಿಗಳಷ್ಟು ದೂರ ಕ್ಷತ್ರಿಯ ರಾಜರು ಅದನ್ನು ಹೊತ್ತು ನಡೆದರು. ಬಳಿಕ ದೇವತೆಗಳು ತಮ್ಮ ಕೈಗೆ ತೆಗೆದುಕೊಂಡು ಆಕಾಶ ಮಾರ್ಗದಲ್ಲಿ ಸಂಭ್ರಮದಿಂದ ನಡೆದರು. ಊರ ಹೊರಗಿನ ವನದಲ್ಲಿ ಪಲ್ಲಕ್ಕಿಯನ್ನಿಳಿಸಲು ಆದಿನಾಥನು ವಿಧಿವಿಹಿತವಾಗಿ ದೀಕ್ಷೆಯನ್ನು ಕೈಕೊಂಡನು. ಆತನು ಕಿತ್ತೆಸೆದ ಕುರುಳನ್ನು ಪೂಜಿಸಿ ದೇವತೆಗಳು<noinclude><references/></noinclude> d1vozsf2d8ep4yuy9vvpinwwndzr6zg ಪುಟ:Kannada-Saahitya.pdf/೩೫ 104 76697 324747 169095 2026-06-15T17:54:18Z Reema Jalihal 7674 /* Proofread */ 324747 proofread-page text/x-wiki <noinclude><pagequality level="3" user="Reema Jalihal" /></noinclude>{{center|ಭರತ-ಬಾಹುಬಲಿ}} {{rh|right=25}} ಕ್ಷೀರಸಮುದ್ರದಲ್ಲಿ ಹಾಕಿ ಬಂದರು. ಹೀಗೆ 'ಪರಿನಿಷ್ಕ್ರಮಣ ಕಲ್ಯಾಣ'ವನ್ನು ನೆರವೇರಿಸಿ ಮುನೀಂದ್ರನ ಪಾದಗಳಿಗೆರಗಿ ಸ್ವರ್ಗಕ್ಕೆ ನಡೆದರು. ಭರತನೂ ಭಕ್ತಿಯಿಂದ ಆತನನ್ನು ಪೂಜಿಸಿ ರಾಜಧಾನಿಗೆ ಹಿಂದಿರುಗಿದನು. {{center|ಆದಿನಾಥನ ತಪಸ್ಸು}} ಆದಿನಾಥನು ಮೌನ ಮತ್ತು ಅನಶನ ವ್ರತಗಳನ್ನು ಧರಿಸಿ ಧ್ಯಾನಾಸಕ್ತನಾದನು. 'ಇನ್ನು ಆರುತಿಂಗಳು ಕಳೆದಲ್ಲದೆ ಕೈಯೆತ್ತುವುದಿಲ್ಲ' ಎಂದು ಸಂಕಲ್ಪಿಸಿ ಪ್ರತಿಮಾಯೋಗದಲ್ಲಿ ನಿಂತನು. ಏನೇನೋ ಅಡ್ಡಿಗಳು ಬಂದವು. ಆದರೂ ಆತನ ಧ್ಯಾನಕ್ಕೆ ಚ್ಯುತಿ ಬರಲಿಲ್ಲ. ಆತನ ತಪಸ್ಸು ವೃದ್ಧಿಯಾಗುತ್ತ ಬಂದಂತೆಲ್ಲ ಅದರ ಪ್ರಭಾವದಿಂದ ಅಲ್ಲಿದ್ದ ಸಮಸ್ತ ಪ್ರಾಣಿವರ್ಗವೂ ಜಾತಿ ವೈರವನ್ನು ತೊರೆದು ಆ ಕಾಡಿನಲ್ಲಿ ಅನ್ನೋನ್ಯ ಪ್ರೀತಿಯಿಂದ ಬಾಳುತ್ತಿದ್ದವು. ಆರು ತಿಂಗಳು ಕಳೆದ ಮೇಲೆ ಧ್ಯಾನವನ್ನು ಮುಗಿಸಿ ಚರಿಗೆಗೆ ಹೊರಟನು. ಉತ್ತಮ ಆಹಾರಕ್ಕಾಗಿ ದೇಶದೇಶಗಳನ್ನು ಸಂಚರಿಸಿದನು. ಜನರು ಅಂಧ ಮುನಿಗೆ ಭಿಕ್ಷೆ ನೀಡಲು ಯೋಗ್ಯವಾದ ವಸ್ತು ಯಾವುದೆಂದರಿಯದೆ ಬಟ್ಟೆ ಬರೆ ಊಟ ತಿಂಡಿಗಳನ್ನು ಅರ್ಪಿಸಬಂದರು. ಮುನೀಶ್ವರನು ಯಾವುದನ್ನೂ ಸ್ವೀಕರಿಸಲಿಲ್ಲ. ಕಡೆಗೆ ಹಸ್ತಿನಾವತಿಯ ಅರಸನಾದ ಶ್ರೇಯಾಂಸನೆಂಬುವನು ಇಷ್ಟಾರ್ಥವನ್ನು ಸಲ್ಲಿಸಲು ಕಲ್ಪವೃಕ್ಷವೇ ಹತ್ತಿರ ಬರುತ್ತಿರುವುದೋ ಎಂಬಂತೆ ಬರುತ್ತಿರುವ ಆ ಮುನೀಂದ್ರನಿಗೆ ಪರಿಶುದ್ಧವಾದ ಕಬ್ಬಿನ ಹಾಲನ್ನು ಸಮರ್ಪಿಸಿದನು. ಭಕ್ತಿಯಿಂದರ್ಪಿಸಿದ ಆ ನಿರ್ದುಷ್ಟ ರಸವನ್ನು ಸ್ವಾಮಿ ಪಾನ ಮಾಡಿದನು. ಆಗ ಪಂಚಾಶ್ಚರಗಳಾದವು. ಋಷಭಯೋಗಿಯು ಹಲವು ಸಂವತ್ಸರಗಳವರೆಗೆ ದೇಶಾಟನೆ ಮಾಡುತ್ತಿದ್ದು ಕಡೆಗೆ ಪುರಿಮತಾಳವೆಂಬ ಪಟ್ಟಣದ ಹೊರ ಉದ್ಯಾನದಲ್ಲಿ ಘೋರ ತಪಸ್ಸಿಗೆ ತೊಡಗಿದನು. {{center|ಕೇವಲ ಜ್ಞಾನೋತ್ಪತ್ತಿ}} ಹೀಗೆ ತಪೋನಿರತನಾಗಿರಲು ಋಷಭಯೋಗಿಯ ಕರ್ಮಬೀಜವೆಲ್ಲ<noinclude><references/></noinclude> s3fzghtjgdxxrrfirevj0a2lix1m8j2 ಪುಟ:Kannada-Saahitya.pdf/೩೬ 104 76698 324748 169096 2026-06-15T18:01:34Z Reema Jalihal 7674 /* Proofread */ 324748 proofread-page text/x-wiki <noinclude><pagequality level="3" user="Reema Jalihal" /></noinclude>{{center|ಕನ್ನಡ ಸಾಹಿತ್ಯ ಚಿತ್ರಗಳು}} {{rh|left=26}} ಸುಟ್ಟುಹೋಯಿತು. ಹುಟ್ಟುಸಾವಿನ ಚಕ್ರಕ್ಕೆ ಆತನನ್ನು ಬಿಗಿದಿದ್ದ ಬಂಧನವೆಲ್ಲ ಬಿಚ್ಚಿಹೋಗಿ ಆತ್ಮ ಮುಕ್ತವಾಯಿತು. ಆ ಮುಕ್ತಾತ್ಮನಿಗೆ ಕೇವಲ ಜ್ಞಾನವೆಂಬ ಸರ್ವೋತ್ಕೃಷ್ಟವಾದ ಜ್ಞಾನ ಉಂಟಾಯಿತು. ಋಷಭಯೋಗಿ ಜಿನನಾದನು, ತೀರ್ಥಂಕರನಾದನು. ಕೇವಲ ಜ್ಞಾನೋತ್ಪತ್ತಿಯಾದಾಗ ದೇವತೆಗಳು ಬಂದು ಆನಂದ ನೃತ್ಯ ಮಾಡಿ ಉತ್ಸವವನ್ನಾಚರಿಸಿದರು. ಇಂದ್ರನ ಆಜ್ಞೆಯಂತೆ ಕುಬೇರನು ಜಿನನ ಧರ್ಮಬೋಧೆಗೆ ಅನುಕೂಲಿಸುವ ಸಮವಸರಣ ಮಂಟಪವನ್ನು ನಿರ್ಮಿಸಿದನು. ಅದರಲ್ಲಿ ದೇವಾಸುರನರರು ಮಾತ್ರವೇ ಅಲ್ಲ, ಪಶು ಪಕ್ಷಿ ಮೊದಲಾದ ಸಮಸ್ತ ಪ್ರಾಣಿಗಳಿಗೂ ಎಡೆಯುಂಟು. ಅದು ಆಕಾಶಗಾಮಿಯಾಗಿ ಜಿನನ ಮನಸ್ಸನ್ನನುಸರಿಸಿ ಎಲ್ಲೆಂದರಲ್ಲಿ ಸಂಚರಿಸುವುದು. ಆ ಮಂಟಪದಲ್ಲಿ ತೀರ್ಥಂಕರನ ಬೋಧಾಮೃತವನ್ನು ಸವಿಯಲು ಸಮಸ್ತ ಜೀವರಾಶಿಗಳೂ ಬಂದು ನೆರೆದವು. ಪುರಿಮತಾಳಪುರದರಸು ಭರತನೊತ್ತಿನ ತಮ್ಮ ವೃಷಭಸೇನನೆಂಬವನು ಆದಿ ತೀರ್ಥಂಕರನನ್ನಾರಾಧಿಸಲು ಮಂಗಳದ್ರವ್ಯಸಮೇತನಾಗಿ ಬಂದನು. ಬಂದು ವೃಷಭಸ್ವಾಮಿಯ ಮಂಗಳಮುಖವನ್ನು ಕಂಡನೋ ಇಲ್ಲವೋ, ಆತನಿಗೆ ಪರಮ ವೈರಾಗ್ಯ ತಲೆದೋರಿತು. ಅರ್ಹತ್ಪರಮೇಶ್ವರನ ಸಮಕ್ಷದಲ್ಲಿ ದೀಕ್ಷೆಯಾಂತು ಆತನ ಮೊದಲನೆಯ ಗಣಧರನಾದನು. {{center|ಚಕ್ರರತ್ರೋತ್ಪತ್ತಿ}} ಇತ್ತ ಅಯೋಧ್ಯೆಯಲ್ಲಿ ಭರತರಾಜನು ಆಸ್ಥಾನಮಂಟಪದಲ್ಲಿದ್ದಾಗ ಪುರೋಹಿತನು ಬಂದು ಆದಿನಾಥನಿಗೆ ಕೇವಲಜ್ಞಾನವುಂಟಾದ ಸುದ್ದಿಯನ್ನು ತಿಳಿಸಿದನು. ಆಯುಧಾಗಾರದಲ್ಲಿ ಸೂರನಂತೆ ಕಳೆಯೆರಚುವ ಚಕ್ರರತ್ನವುದ್ಭವಿಸಿತೆಂದು ಆಯುಧಾಧ್ಯಕ್ಷನು ಬಿನ್ನವಿಸಿದನು. ಅಂತಃಪುರದಲ್ಲಿ ಪಟ್ಟದ ರಾಣಿ ಸುಕುಮಾರನನ್ನು ಹೆತ್ತಳೆಂದು ಕಂಚುಕಿ ವಿಜ್ಞಾಪಿಸಿಕೊಂಡನು. ಏಕ ಕಾಲದಲ್ಲಿ ಬಂದ ಈ ಮೂರು ಶುಭ ಸಮಾಚಾರಗಳನ್ನೂ ಕೇಳಿ ಭರತನು ಪರಮಾನಂದಭರಿತನಾದನು.<noinclude><references/></noinclude> 5fdpgwr52snumg2g3yp21t62jn6k0o9 ಪುಟ:Kannada-Saahitya.pdf/೩೭ 104 76699 324749 169097 2026-06-15T18:07:38Z Reema Jalihal 7674 /* Proofread */ 324749 proofread-page text/x-wiki <noinclude><pagequality level="3" user="Reema Jalihal" /></noinclude>{{center|ಭರತ-ಬಾಹುಬಲಿ}} {{rh|right=27}} ಇವುಗಳಲ್ಲಿ ಮೊದಲು ಯಾವ ಶುಭಕ್ಕಾಗಿ ಉತ್ಸವ ನಡೆಸಬೇಕೆಂದು ಸ್ವಲ್ಪ ಹೊತ್ತು ಯೋಚಿಸಿದನು. ' ಧರ್ಮ, ಅರ್ಥ, ಕಾಮ,—— ಎಂಬ ಪುರುಷಾರ್ಥಗಳಲ್ಲಿ ಧರ್ಮವೇ ಮುಖ್ಯ. ಧರ್ಮದ ಫಲ ಅರ್ಥ, ಕಾಮ ಆ ಫಲದ ರಸ. ಆದ್ದರಿಂದ ಅರ್ಹತ್ಪರಮೇಶ್ವರನ ಪೂಜೆಯೇ ಪ್ರಥಮ ಕರ್ತವ್ಯ' ಎಂದು ನಿಶ್ಚಯಿಸಿದನು. ಬಳಿಕ ಅಂತಃಪುರ ಪರಿವಾರ ಸಮೇತನಾಗಿ ಸಮವ ಸರಣ ಮಂಟಪದೆಡೆಗೆ ಪ್ರಯಾಣ ಮಾಡಿದನು. {{center|ಧರ್ಮಾಮೃತ ವರ್ಷ}} ಸಮಸ್ತ ರಾಜಚಿಹ್ನೆಗಳನ್ನೂ ದೂರದಲ್ಲೆ ಬಿಟ್ಟು ಕಾಲ್ನಡಗೆಯಿಂದಲೆ ಅರ್ಹನ ಅಡಿದಾವರೆಗಳೆಡೆಗೆ ನಡೆದನು. ಮೂರು ಸಾರಿ ಪ್ರದಕ್ಷಿಣೆ ಮಾಡಿ ಭಗವಂತನ ಎದುರಿಗೆ ನಿಂತು ಕೈಮುಗಿದು ಭಕ್ತಿಯಿಂದ ಸ್ತೋತ್ರಮಾಡಿ 'ಇಂದ್ರ ಪದವಿಯೇ ಮೊದಲಾದ್ದು ಯಾವುದೂ ಸ್ಥಿರವಲ್ಲ. ಅದೊಂದೂ ನನಗೆ ಬೇಡ, ಉತ್ತಮ ಜ್ಞಾನ ದೊರೆಯುವಂತೆ ಕರುಣಿಸು ' ಎಂದು ಪ್ರಾರ್ಥಿಸಿದನು. ಭರತನ ಪ್ರಾರ್ಥನೆಯನ್ನು ಸಾರ್ಥಕಪಡಿಸಲೋ ಎಂಬಂತೆ ಆದಿ ತೀರ್ಥಂಕರನು ದಿವ್ಯ ಧ್ವನಿಯಲ್ಲಿ ಧರ್ಮೋಪದೇಶ ಮಾಡತೊಡಗಿದನು. ಆ ಉಪದೇಶ ಸಭೆಯಲ್ಲಿದ್ದ ಸಮಸ್ತರಿಗೂ ಅವರವರ ಭಾಷೆಯಲ್ಲಿ ಅರ್ಥವಾಗುತಿತ್ತು. ಲೋಕದ ಸ್ವರೂಪ, ತತ್ತ್ವನಿವೇಚನೆ, ಮುಕ್ತಿಸಾಧನೆಯ ವಿಧಾನ—ಎಲ್ಲವೂ ಆ ಬೋಧನೆಯಿಂದ ಸ್ಪಷ್ಟವಾಯಿತು. ಅಲ್ಲಿ ನೆರೆದ ಎಷ್ಟೋ ಜನರು - ಅರಸುಗಳೂ, ಸಾಧಾರಣರೂ, ಗಂಡಸರೂ, ಹೆಂಗಸರೂ—— ಆದಿಜಿನನ ಸನ್ನಿಧಿಯಲ್ಲಿ ದೀಕ್ಷೆ ತೆಗೆದುಕೊಂಡರು. ಬ್ರಹ್ಮಿ ಸೌಂದರಿಯರು ವೈರಾಗ್ಯಕ್ಕೆ ಮನಸ್ಸು ಕೊಟ್ಟರು. ವಿವಾಹವನ್ನೊಲ್ಲದೆ ಗುರುಪ್ರಸಾದದಿಂದ ದೀಕ್ಷೆತಾಳಿ ಗಣಿನೀ ಗಣಕ್ಕೆ ಮುಖ್ಯೆಯರಾದರು. ಭರತ ಬಾಹುಬಲಿಗಳು ಭಗವಂತನನ್ನು ವಂದಿಸಿ ತಮ್ಮ ತಮ್ಮ ರಾಜಧಾನಿಗಳಿಗೆ ಹೋದರು. ಆದಿತೀರ್ಥಂಕರನು ಸಮವಸರಣ ಮಂಟಪದಲ್ಲಿ ನೆಲಸಿ ಶಕ, ಕಾಶ್ಮೀರ, ಆಂಧ್ರ, ಕರ್ನಾಟಕ, ಮಗಧ ಮೊದಲಾದ ದೇಶಗಳಲ್ಲಿ ಸಂಚರಿಸಿ ಅಲ್ಲೆಲ್ಲ<noinclude><references/></noinclude> g0pudu9ughmbkyz5v8yn5t7mzm8qkez ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ ಜೂನ್ ೨೦೨೪ 4 96544 324903 283103 2026-06-16T11:04:09Z A826 6806 /* ನಿಯೋಜನೆಗಳ ಪಟ್ಟಿ */ 324903 wikitext text/x-wiki {{process header | title = [[ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ]] | section = | previous = | next = [[ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ/ಟಿಪ್ಪಣಿಗಳು]] | shortcut = | notes = [[ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ/ಟಿಪ್ಪಣಿಗಳು]] }} ವಿಕಿ ಇಂಟರ್ನ್‌ಶಿಪ್ ಪ್ರೋಗ್ರಾಂ 2024 ಎಂಬುದು CIS-A2K ಸಹಯೋಗದೊಂದಿಗೆ ಕರಾವಳಿ ವಿಕಿಮೀಡಿಯನ್ನರು ಕನ್ನಡ ವಿಕಿಮೀಡಿಯಾ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್ ಹಾಗು ವಿಕಿಡೇಟಾ, ವಿಕಿಕಾಮನ್ಸ್, ವಿಕ್ಷನರಿ ಮತ್ತು ವಿಕಿಪೀಡಿಯಾದಂತಹ ಯೋಜನೆಗಳಲ್ಲಿ ಸಂಪೂರ್ಣ ಒಂದು ತಿಂಗಳ ಅವಧಿಗೆ ತರಬೇತಿ ನೀಡುತ್ತಾರೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. ಕಾರ್ಯಕ್ರಮದ ಕೊನೆಯಲ್ಲಿ, ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಪ್ರಮಾಣಪತ್ರವನ್ನು ಹಸ್ತಾಂತರಿಸಲಾಗುತ್ತದೆ. == ಮಾರ್ಗದರ್ಶಕರು == # ವಿಶ್ವನಾಥ ಬದಿಕಾನ #* {{user|Vishwanatha_Badikana}} # ಅನೂಪ್ ರಾವ್ #* {{user|A826}} == ಭಾಗವಹಿಸುವ ವಿದ್ಯಾರ್ಥಿಗಳು - ಸಂತ ಅಲೋಶಿಯಸ್ ವಿಶ್ವವಿದ್ಯಾಲಯ (St Aloysius University) == # ಅತಶ‍್ರೀ ಪೂಜಾರಿ [[user:Athashree Poojary03]] # ಅಂಜಲಿ ಅರ್ಜುನಗಿ [[user:Anjali guru arjunagi]] # ಭೂಮಿಕಾ ಕೆ ಆರ್ [[user:Bhoomika . K. R]] # ಜ್ಯೋತಿ ಹಡಪದ [[user:Jyoti Hadapad03]] # ಉಮಾಶ್ರೀ [[user:Umashree mallappa alkoppa]] == ೨೦೨೪ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ಕೆಲಸ == # ಅತಶ‍್ರೀ ಪೂಜಾರಿ [[user:Athashree Poojary03]] : ೧. [[ಪರಿವಿಡಿ:ಕನ್ನಡದ_ಬಾವುಟ.djvu|ಕನ್ನಡದ_ಬಾವುಟ]] <span style="color:green">'''ಸಂಪೂರ್ಣ'''</span> , ೨. [[ಪರಿವಿಡಿ:ಚೆಲುವು.djvu|ಚೆಲುವು]] - <span style="color:green">'''ಸಂಪೂರ್ಣ'''</span> # ಅಂಜಲಿ ಅರ್ಜುನಗಿ [[user:Anjali guru arjunagi]] : ೧. [[ಪರಿವಿಡಿ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu|ಸೃಷ್ಟಿವ್ಯಾಪಾರಗಳ ನಿರೀಕ್ಷಣೆ]] - <span style="color:green">'''ಸಂಪೂರ್ಣ'''</span> # ಭೂಮಿಕಾ ಕೆ ಆರ್ [[user:Bhoomika . K. R]] : ೧. [[ಪರಿವಿಡಿ:ಸಂದೇಶದ ಕಥೆಗಳು.pdf|ಸಂದೇಶದ ಕಥೆಗಳು]] - <span style="color:green">'''ಸಂಪೂರ್ಣ'''</span> # ಜ್ಯೋತಿ ಹಡಪದ [[user:Jyoti Hadapad03]] : ೧. [[ಪರಿವಿಡಿ:ಚಂದ್ರಮತಿ.djvu|ಚಂದ್ರಮತಿ]] - <span style="color:green">'''ಸಂಪೂರ್ಣ'''</span> - ಪ್ರಾರಂಭಿಸಿರುವುದು # ಉಮಾಶ್ರೀ [[user:Umashree mallappa alkoppa]] : ೧. [[ಪರಿವಿಡಿ:ಕುರುಕ್ಷೇತ್ರ_ಗ್ರಂಥ.djvu|ಕುರುಕ್ಷೇತ್ರ_ಗ್ರಂಥ]] - <span style="color:red">'''ಅಪೂರ್ಣ'''</span> , ೨. [[ಪರಿವಿಡಿ:ಇಂದ್ರವಜ್ರ.djvu|ಇಂದ್ರವಜ್ರ]] - <span style="color:green">'''ಸಂಪೂರ್ಣ'''</span> # [[ಪರಿವಿಡಿ:ಸುವರ್ಣಸುಂದರಿ.djvu|ಸುವರ್ಣಸುಂದರಿ]] - <span style="color:green">'''ಸಂಪೂರ್ಣ'''</span> {| class=wikitable |+ |- ! scope="col" style="width: 60px;" | ಬಳಕೆದಾರ ಹೆಸರು ! scope="col" style="width: 50px;" | ಪುಸ್ತಕಗಳು ! scope="col" style="width: 600px;" | ಪ್ರಗತಿ |- | {{user|Athashree_Poojary03}} || [[ಪರಿವಿಡಿ:ಕನ್ನಡದ_ಬಾವುಟ.djvu]] & [[ಪರಿವಿಡಿ:ಚೆಲುವು.djvu]] ||{{MC-Section/s |background-color=#B9E9E9 |text=ಕನ್ನಡದ ಬಾವುಟ / ಚೆಲುವು }} {{MC-Cover|ಕನ್ನಡದ_ಬಾವುಟ.djvu|4|ಕನ್ನಡದ_ಬಾವುಟ.djvu|1938|||N|IN|page = ಪರಿವಿಡಿ:ಕನ್ನಡದ_ಬಾವುಟ.djvu}} {{MC-Cover|ಚೆಲುವು.djvu|5|ಚೆಲುವು.djvu|1931|||N|IN|page = ಪರಿವಿಡಿ:ಚೆಲುವು.djvu}} {{MC-Section/e}} |- | {{user|Anjali_guru_arjunagi}} || [[ಪರಿವಿಡಿ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu]] || {{MC-Section/s |background-color=#B9E9E9 |text=ಸೃಷ್ಟಿವ್ಯಾಪಾರಗಳ ನಿರೀಕ್ಷಣೆ }} {{MC-Cover|ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu|1|ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu|1938|||N|IN|page = ಪರಿವಿಡಿ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu}} {{MC-Section/e}} |- | {{user|Bhoomika_._K._R}} || [[ಪರಿವಿಡಿ:ಸಂದೇಶದ ಕಥೆಗಳು.pdf]] || {{MC-Section/s |background-color=#B9E9E9 |text=ಸಂದೇಶದ ಕಥೆಗಳು }} {{MC-Cover|ಸಂದೇಶದ ಕಥೆಗಳು.pdf|1|ಸಂದೇಶದ ಕಥೆಗಳು.pdf|2001|||N|IN|page = ಪರಿವಿಡಿ:ಸಂದೇಶದ ಕಥೆಗಳು.pdf}} {{MC-Section/e}} |- | {{user|Jyoti_Hadapad03}} || [[ಪರಿವಿಡಿ:ಚಂದ್ರಮತಿ.djvu]] || {{MC-Section/s |background-color=#B9E9E9 |text=ಚಂದ್ರಮತಿ }} {{MC-Cover|ಚಂದ್ರಮತಿ.djvu|6|ಪರಿವಿಡಿ:ಚಂದ್ರಮತಿ.djvu|1918|||N|IN|page = ಪರಿವಿಡಿ:ಚಂದ್ರಮತಿ.djvu}} {{MC-Section/e}} |- | {{user|Umashree_mallappa_alkoppa}} || [[ಪರಿವಿಡಿ:ಕುರುಕ್ಷೇತ್ರ_ಗ್ರಂಥ.djvu]] & [[ಪರಿವಿಡಿ:ಇಂದ್ರವಜ್ರ.djvu]] || {{MC-Section/s |background-color=#B9E9E9 |text=ಕುರುಕ್ಷೇತ್ರ ಗ್ರಂಥ / ಇಂದ್ರವಜ್ರ }} {{MC-Cover|ಇಂದ್ರವಜ್ರ.djvu|6|ಇಂದ್ರವಜ್ರ.djvu|1912|||N|IN|page = ಪರಿವಿಡಿ:ಇಂದ್ರವಜ್ರ.djvu}} {{MC-Cover|ಕುರುಕ್ಷೇತ್ರ_ಗ್ರಂಥ.djvu|1|ಕುರುಕ್ಷೇತ್ರ_ಗ್ರಂಥ.djvu|2001|||N|IN|page = ಪರಿವಿಡಿ:ಕುರುಕ್ಷೇತ್ರ_ಗ್ರಂಥ.djvu}}{{MC-Section/e}} |} == ೧೧-೦೬-೨೦೨೪ == === ಭಾಗವಹಿಸಿದವರು === #--<span style="text-shadow: 0 0 8px silver; padding:4px; background: ivory; font-weight:bold;">[[User:~aanzx|~aanzx]] <sup>[[user_talk:~aanzx|<big>✉</big>]]</sup><sub>[[Special:Contributions/~aanzx|<big> ©</big>]]</sub></span> ೧೦:೨೭, ೧೨ ಜೂನ್ ೨೦೨೪ (IST) #--[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೧೨:೧೨, ೧೨ ಜೂನ್ ೨೦೨೪ (IST) # [[ಸದಸ್ಯ:Ashay vb|Ashay vb]] ([[ಸದಸ್ಯರ ಚರ್ಚೆಪುಟ:Ashay vb|ಚರ್ಚೆ]]) ೧೨:೨೧, ೧೨ ಜೂನ್ ೨೦೨೪ (IST) #--[[ಸದಸ್ಯ:Bhoomika . K. R|Bhoomika . K. R]] ([[ಸದಸ್ಯರ ಚರ್ಚೆಪುಟ:Bhoomika . K. R|ಚರ್ಚೆ]]) ೧೩:೪೦, ೧೨ ಜೂನ್ ೨೦೨೪ (IST) #--[[ಸದಸ್ಯ:Umashree mallappa alkoppa|Umashree mallappa alkoppa]] ([[ಸದಸ್ಯರ ಚರ್ಚೆಪುಟ:Umashree mallappa alkoppa|ಚರ್ಚೆ]]) ೧೫:೪೯, ೧೨ ಜೂನ್ ೨೦೨೪ (IST) #--[[ಸದಸ್ಯ:Anjali guru arjunagi|Anjali guru arjunagi]] ([[ಸದಸ್ಯರ ಚರ್ಚೆಪುಟ:Anjali guru arjunagi|ಚರ್ಚೆ]]) ೧೮:೦೯, ೧೨ ಜೂನ್ ೨೦೨೪ (IST) #----[[ಸದಸ್ಯ:Athashree Poojary03|Athashree Poojary03]] ([[ಸದಸ್ಯರ ಚರ್ಚೆಪುಟ:Athashree Poojary03|ಚರ್ಚೆ]]) ೧೯:೦೭, ೧೨ ಜೂನ್ ೨೦೨೪ (IST) #--[[ಸದಸ್ಯ:BHARATHESHA ALASANDEMAJALU|BHARATHESHA ALASANDEMAJALU]] ([[ಸದಸ್ಯರ ಚರ್ಚೆಪುಟ:BHARATHESHA ALASANDEMAJALU|ಚರ್ಚೆ]]) ೧೯:೦೮, ೧೨ ಜೂನ್ ೨೦೨೪ (IST) === ಬೋಧನಾ ಟಿಪ್ಪಣಿಗಳು === # ವಿಕಿಸೋರ್ಸ್ ಸಾಮಾನ್ಯ ಪರಿಚಯ # ಪರಿವಿಡಿ ಪುಟಗಳನ್ನು ಹೇಗೆ ಸಂಪಾದಿಸಲಾಗುತ್ತದೆ ಎಂದು ವಿವರಣೆ # ಸಂಪಾದನ ಲೇಔಟ್ ವಿವರಣೆ #* header , body == ೧೨-೦೬-೨೦೨೪ == === ಭಾಗವಹಿಸಿದವರು === #--<span style="text-shadow: 0 0 8px silver; padding:4px; background: ivory; font-weight:bold;">[[User:~aanzx|~aanzx]] <sup>[[user_talk:~aanzx|<big>✉</big>]]</sup><sub>[[Special:Contributions/~aanzx|<big> ©</big>]]</sub></span> ೧೯:೦೬, ೧೨ ಜೂನ್ ೨೦೨೪ (IST) # [[ಸದಸ್ಯ:Ashay vb|Ashay vb]] ([[ಸದಸ್ಯರ ಚರ್ಚೆಪುಟ:Ashay vb|ಚರ್ಚೆ]]) ೧೯:೦೭, ೧೨ ಜೂನ್ ೨೦೨೪ (IST) #--[[ಸದಸ್ಯ:Bhoomika . K. R|Bhoomika . K. R]] ([[ಸದಸ್ಯರ ಚರ್ಚೆಪುಟ:Bhoomika . K. R|ಚರ್ಚೆ]]) ೧೯:೦೮, ೧೨ ಜೂನ್ ೨೦೨೪ (IST) #--[[ಸದಸ್ಯ:BHARATHESHA ALASANDEMAJALU|BHARATHESHA ALASANDEMAJALU]] ([[ಸದಸ್ಯರ ಚರ್ಚೆಪುಟ:BHARATHESHA ALASANDEMAJALU|ಚರ್ಚೆ]]) ೧೯:೦೮, ೧೨ ಜೂನ್ ೨೦೨೪ (IST) #--[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೧೯:೦೯, ೧೨ ಜೂನ್ ೨೦೨೪ (IST) #----[[ಸದಸ್ಯ:Athashree Poojary03|Athashree Poojary03]] ([[ಸದಸ್ಯರ ಚರ್ಚೆಪುಟ:Athashree Poojary03|ಚರ್ಚೆ]]) ೨೦:೧೮, ೧೨ ಜೂನ್ ೨೦೨೪ (IST) #--[[ಸದಸ್ಯ:Anjali guru arjunagi|Anjali guru arjunagi]] ([[ಸದಸ್ಯರ ಚರ್ಚೆಪುಟ:Anjali guru arjunagi|ಚರ್ಚೆ]]) ೨೦:೩೬, ೧೨ ಜೂನ್ ೨೦೨೪ (IST) #--[[ಸದಸ್ಯ:Umashree mallappa alkoppa|Umashree mallappa alkoppa]] ([[ಸದಸ್ಯರ ಚರ್ಚೆಪುಟ:Umashree mallappa alkoppa|ಚರ್ಚೆ]]) ೨೦:೪೬, ೧೨ ಜೂನ್ ೨೦೨೪ (IST) === ಬೋಧನಾ ಟಿಪ್ಪಣಿಗಳು === # ಸಾಮಾನ್ಯವಾಗಿ ಬಳಸುವ ಟೆಂಪ್ಲೇಟ್‌ಗಳು ಮತ್ತು ಫಾರ್ಮ್ಯಾಟಿಂಗ್ #* text alignment #** {{t|rh}} #** {{t|c}} {{t|center}} #** {{t|right}} #** {{t|left}} #** {{t|gap}} # image crop == ೧೫-೦೬-೨೦೨೪ == === ಭಾಗವಹಿಸಿದವರು === #--[[ಸದಸ್ಯ:Anjali guru arjunagi|Anjali guru arjunagi]] ([[ಸದಸ್ಯರ ಚರ್ಚೆಪುಟ:Anjali guru arjunagi|ಚರ್ಚೆ]]) ೧೯:೨೪, ೧೫ ಜೂನ್ ೨೦೨೪ (IST) #----[[ಸದಸ್ಯ:Athashree Poojary03|Athashree Poojary03]] ([[ಸದಸ್ಯರ ಚರ್ಚೆಪುಟ:Athashree Poojary03|ಚರ್ಚೆ]]) ೧೯:೨೬, ೧೫ ಜೂನ್ ೨೦೨೪ (IST) #--[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೧೯:೪೨, ೧೫ ಜೂನ್ ೨೦೨೪ (IST) #--[[ಸದಸ್ಯ:BHARATHESHA ALASANDEMAJALU|BHARATHESHA ALASANDEMAJALU]] ([[ಸದಸ್ಯರ ಚರ್ಚೆಪುಟ:BHARATHESHA ALASANDEMAJALU|ಚರ್ಚೆ]]) ೨೦:೧೮, ೧೫ ಜೂನ್ ೨೦೨೪ (IST) #--<span style="text-shadow: 0 0 8px silver; padding:4px; background: ivory; font-weight:bold;">[[User:~aanzx|~aanzx]] <sup>[[user_talk:~aanzx|<big>✉</big>]]</sup><sub>[[Special:Contributions/~aanzx|<big> ©</big>]]</sub></span> ೦೫:೦೧, ೧೬ ಜೂನ್ ೨೦೨೪ (IST) #--[[ಸದಸ್ಯ:Umashree mallappa alkoppa|Umashree mallappa alkoppa]] ([[ಸದಸ್ಯರ ಚರ್ಚೆಪುಟ:Umashree mallappa alkoppa|ಚರ್ಚೆ]]) ೧೭:೪೭, ೧೬ ಜೂನ್ ೨೦೨೪ (IST) # [[ಸದಸ್ಯ:Ashay vb|Ashay vb]] ([[ಸದಸ್ಯರ ಚರ್ಚೆಪುಟ:Ashay vb|ಚರ್ಚೆ]]) ೧೫:೧೫, ೧೭ ಜೂನ್ ೨೦೨೪ (IST) === ಬೋಧನಾ ಟಿಪ್ಪಣಿಗಳು === # {{t|custom rule}} # {{t|border}} # [[Template:TOC templates]] == ೧೭-೦೬-೨೦೨೪ == === ಭಾಗವಹಿಸಿದವರು === #--[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೧೬:೦೪, ೧೭ ಜೂನ್ ೨೦೨೪ (IST) #--[[ಸದಸ್ಯ:BHARATHESHA ALASANDEMAJALU|BHARATHESHA ALASANDEMAJALU]] ([[ಸದಸ್ಯರ ಚರ್ಚೆಪುಟ:BHARATHESHA ALASANDEMAJALU|ಚರ್ಚೆ]]) ೧೬:೦೫, ೧೭ ಜೂನ್ ೨೦೨೪ (IST) #----[[ಸದಸ್ಯ:Athashree Poojary03|Athashree Poojary03]] ([[ಸದಸ್ಯರ ಚರ್ಚೆಪುಟ:Athashree Poojary03|ಚರ್ಚೆ]]) ೧೬:೧೩, ೧೭ ಜೂನ್ ೨೦೨೪ (IST) # [[ಸದಸ್ಯ:Ashay vb|Ashay vb]] ([[ಸದಸ್ಯರ ಚರ್ಚೆಪುಟ:Ashay vb|ಚರ್ಚೆ]]) ೧೬:೫೭, ೧೭ ಜೂನ್ ೨೦೨೪ (IST) #--[[ಸದಸ್ಯ:Anjali guru arjunagi|Anjali guru arjunagi]] ([[ಸದಸ್ಯರ ಚರ್ಚೆಪುಟ:Anjali guru arjunagi|ಚರ್ಚೆ]]) ೧೬:೫೮, ೧೭ ಜೂನ್ ೨೦೨೪ (IST) #--[[ಸದಸ್ಯ:Umashree mallappa alkoppa|Umashree mallappa alkoppa]] ([[ಸದಸ್ಯರ ಚರ್ಚೆಪುಟ:Umashree mallappa alkoppa|ಚರ್ಚೆ]]) ೧೭:೨೫, ೧೭ ಜೂನ್ ೨೦೨೪ (IST) #--<span style="text-shadow: 0 0 8px silver; padding:4px; background: ivory; font-weight:bold;">[[User:~aanzx|~aanzx]] <sup>[[user_talk:~aanzx|<big>✉</big>]]</sup><sub>[[Special:Contributions/~aanzx|<big> ©</big>]]</sub></span> ೧೮:೨೯, ೧೭ ಜೂನ್ ೨೦೨೪ (IST) === ಬೋಧನಾ ಟಿಪ್ಪಣಿಗಳು === # ಕಾಮನ್ಸ್‌ನಿಂದ ಪುಸ್ತಕ ಹೇಗೆ Wikisource ನಲ್ಲಿ ಬಳಸುವುದು ಹೇಳಿ ಕೊಡಲಾಗುವುದು == ೨೧-೦೬-೨೦೨೪ == === ಭಾಗವಹಿಸಿದವರು === #--[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೧೬:೦೦, ೨೧ ಜೂನ್ ೨೦೨೪ (IST) #--<span style="text-shadow: 0 0 8px silver; padding:4px; background: ivory; font-weight:bold;">[[User:~aanzx|~aanzx]] <sup>[[user_talk:~aanzx|<big>✉</big>]]</sup><sub>[[Special:Contributions/~aanzx|<big> ©</big>]]</sub></span> ೧೬:೧೬, ೨೧ ಜೂನ್ ೨೦೨೪ (IST) #--[[ಸದಸ್ಯ:Bhoomika . K. R|Bhoomika . K. R]] ([[ಸದಸ್ಯರ ಚರ್ಚೆಪುಟ:Bhoomika . K. R|ಚರ್ಚೆ]]) ೧೬:೨೩, ೨೧ ಜೂನ್ ೨೦೨೪ (IST) #--[[ಸದಸ್ಯ:Anjali guru arjunagi|Anjali guru arjunagi]] ([[ಸದಸ್ಯರ ಚರ್ಚೆಪುಟ:Anjali guru arjunagi|ಚರ್ಚೆ]]) ೧೬:೨೭, ೨೧ ಜೂನ್ ೨೦೨೪ (IST #--[[ಸದಸ್ಯ:Umashree mallappa alkoppa|Umashree mallappa alkoppa]] ([[ಸದಸ್ಯರ ಚರ್ಚೆಪುಟ:Umashree mallappa alkoppa|ಚರ್ಚೆ]]) ೧೬:೨೯, ೨೧ ಜೂನ್ ೨೦೨೪ (IST) #----[[ಸದಸ್ಯ:Athashree Poojary03|Athashree Poojary03]] ([[ಸದಸ್ಯರ ಚರ್ಚೆಪುಟ:Athashree Poojary03|ಚರ್ಚೆ]]) ೧೬:೩೮, ೨೧ ಜೂನ್ ೨೦೨೪ (IST) # [[ಸದಸ್ಯ:Ashay vb|Ashay vb]] ([[ಸದಸ್ಯರ ಚರ್ಚೆಪುಟ:Ashay vb|ಚರ್ಚೆ]]) ೨೨:೩೪, ೨೧ ಜೂನ್ ೨೦೨೪ (IST) == ೨೨-೦೬-೨೦೨೪ == === ಭಾಗವಹಿಸಿದವರು(೨೨೦೬೨೦೨೪) === #--<span style="text-shadow: 0 0 8px silver; padding:4px; background: ivory; font-weight:bold;">[[User:~aanzx|~aanzx]] <sup>[[user_talk:~aanzx|<big>✉</big>]]</sup><sub>[[Special:Contributions/~aanzx|<big> ©</big>]]</sub></span> ೧೫:೩೮, ೨೨ ಜೂನ್ ೨೦೨೪ (IST) # [[ಸದಸ್ಯ:Ashay vb|Ashay vb]] ([[ಸದಸ್ಯರ ಚರ್ಚೆಪುಟ:Ashay vb|ಚರ್ಚೆ]]) ೧೫:೩೯, ೨೨ ಜೂನ್ ೨೦೨೪ (IST) #--[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೧೫:೪೦, ೨೨ ಜೂನ್ ೨೦೨೪ (IST) #--[[ಸದಸ್ಯ:Bhoomika . K. R|Bhoomika . K. R]] ([[ಸದಸ್ಯರ ಚರ್ಚೆಪುಟ:Bhoomika . K. R|ಚರ್ಚೆ]]) ೧೫:೪೧, ೨೨ ಜೂನ್ ೨೦೨೪ (IST) #--[[ಸದಸ್ಯ:Anjali guru arjunagi|Anjali guru arjunagi]] ([[ಸದಸ್ಯರ ಚರ್ಚೆಪುಟ:Anjali guru arjunagi|ಚರ್ಚೆ]]) ೧೫:೫೯, ೨೨ ಜೂನ್ ೨೦೨೪ (IST) #--[[ಸದಸ್ಯ:Umashree mallappa alkoppa|Umashree mallappa alkoppa]] ([[ಸದಸ್ಯರ ಚರ್ಚೆಪುಟ:Umashree mallappa alkoppa|ಚರ್ಚೆ]]) ೧೬:೨೫, ೨೨ ಜೂನ್ ೨೦೨೪ (IST) #--[[ಸದಸ್ಯ:Athashree Poojary03|Athashree Poojary03]] ([[ಸದಸ್ಯರ ಚರ್ಚೆಪುಟ:Athashree Poojary03|ಚರ್ಚೆ]]) ೧೫:೪೭, ೨೯ ಜೂನ್ ೨೦೨೪ (IST) hcmjl9byv7xnyg3l4zhmxipmdcmjrc5 ಪುಟ:ಯಕ್ಷಗಾನ ಮಕರಂದ.pdf/೬೭೯ 104 100607 324850 323720 2026-06-16T06:52:41Z A826 6806 324850 proofread-page text/x-wiki <noinclude><pagequality level="4" user="Vikashegde" />{{rh|center=|left=|right=41}}</noinclude>{{gap}}ಇಲ್ಲಿಂದ 'ಪರಾಕ್ರಮ ಕಂಠೀರವ' ಮಂತಾಗಿ ಪರಿಚಯಿಸುವ ಮಾತು ಆರಂಭವಾಗುತ್ತದೆ. ಒಂದಕ್ಕಿಂತ ಹೆಚ್ಚು ವೇಷಗಳಿದ್ದಾಗ ತೆರೆಕುಣಿತವನ್ನೂ, 'ದಿಗಿಣ' ಕುಣಿತವನ್ನೂ ಪ್ರತಿಯೊಬ್ಬರಿಗೂ ಬೇರೆ ಬೇರೆಯಾಗಿ ಕುಣಿಸಬೇಕು. ತರುಣ ವೇಷಗಳನ್ನು ರಂಗಕ್ಕೆ ಬರಿಸುವಾಗ ಕೇವಲ 'ದಿಗಿಣ'ದಿಂದ ಆರಂಭಿಸುವುದು ರೂಢಿ, ಟೆಂಟು ಮೇಳಗಳಲ್ಲಿ ತೆರೆಕುಣಿತದ ಅವಕಾಶವಿಲ್ಲದಾಗ ನೇರವಾಗಿ 'ಕೋರ ತಾಳ'ದ ದಸ್ತೆಯಿಂದ ಆರಂಭ ಮಾಡುವ ಅಭ್ಯಾಸವಾಗಿದೆ. ಪಾಂಡವರ ಒಡ್ಡೋಲಗದಲ್ಲಿ ಇದೇ ಕ್ರಮ ಇನ್ನೂ ಸ್ವಲ್ಪ ವಿಸ್ತಾರವಾಗಿ ಪದ್ಯಸಹಿತವಾಗಿರುತ್ತದೆ. ದಿಗಿಣ ಕುಣಿತ ಎರಡೆರಡು ಬಾರಿಯಿದ್ದು ರಂಗಕ್ಕೆ ಪ್ರವೇಶಿಸಿದ ಕೂಡಲೇ ಬೇರೆ ಬೇರೆ ವಿಧದ ಚಾಲು ಕುಣಿತವಿರುತ್ತದೆ. ಪಾಂಡವರ ಒಡ್ಡೋಲಗದಂತೆಯೇ ಇಂದ್ರಾದಿ ದೇವತೆಗಳ ಅಥವಾ ಪ್ರಸಂಗದ ಆರಂಭಕ್ಕೆ ಬರುವ ಎಲ್ಲಾ ರಾಜರ ಒಡ್ಡೋಲಗ, ರಾಮಲಕ್ಷ್ಮಣರ ಒಡೋಲಗಕ್ಕೆ ಪದ್ಯ ಮಾತ್ರ ಬೇರೆ ಇರುತ್ತದೆ. {{center|'''೨. ಕೃಷ್ಣನ ಒಡ್ಡೋಲಗ'''}} <poem>ಆರಂಭದಲ್ಲಿ ಕೆಳಗಿನ ಶ್ಲೋಕವನ್ನು ಕೇದಾರಗೌಳ ರಾಗದಲ್ಲಿ ಹಾಡಬೇಕು. "ಕಸ್ತೂರೀ ತಿಲಕಂ.....ಗೋಪಾಲ ಚೂಡಾಮಣಿ ।“</poem> {{gap}}ಇನ್ನು ಮುಂದೆ ಕೆಳಗಿನ ಪದ್ಯವನ್ನು ಹಾಡುವಾಗ ಪ್ರತಿಯೊಂದು ಸಲವೂ ಮುಕ್ತಾಯಕ್ಕೆ ತೆರೆಯನ್ನು ಅರ್ಧಕ್ಕೆ ಇಳಿಸಿ ಪದ್ಯಕ್ಕೆ ಕುಳಿತಲ್ಲಿಂದಲೇ ಹಸ್ತಾಭಿನಯ ಮಾಡಿ ಕೊನೆಯ ಮುಕ್ತಾಯಕ್ಕೆ ತೆರೆ ಎತ್ತಿ ಬಿಡಬೇಕು. {{center|'''ರಾಗ-ಕೇದಾರ-ಗೌಳ-ಏಕತಾಳ'''}} <poem>ದೇವ ಬಂದ | ದೇವರ ದೇವ ಬಂದ ॥ ಪ. ॥ ದೇವರ ದೇವ ಶಿಖಾಮಣಿ ಬಂದ ॥ ಅ. ಪ.॥ ಮಂದರೋದ್ಧಾರ ಬಂದ । ಮಾಮನೋಹರ ಬಂದ ।</poem> ಪ್ರತಿಯೊಂದು ಪದ್ಯಕ್ಕೂ ಆರಂಭ ಮತ್ತು ಕೊನೆಯಲ್ಲಿ ಏಕತಾಳದ ಮುಕ್ತಾಯ. ಒಮ್ಮೆ ಇಡೀ ಪದ್ಯವನ್ನು ಏಕದಲ್ಲಿ ಹೇಳಿ, ಮತ್ತೆ ಉತ್ತರಾರ್ಧವನ್ನು ಕೋರೆತಾಳದಲ್ಲಿ ಹೇಳಬೇಕು. ಮುಂದಿನ ಪದ್ಯದ ಮುಕ್ತಾಯಕ್ಕೆ ಕೃಷ್ಣನು ರಂಗಪ್ರವೇಶ ಮಾಡಬೇಕು. ರಾಗ ನವರೋಜು-ಕೋರೆತಾಳದಲ್ಲಿ ಆರಂಭ. ಬಂದನು ದೇವರ ದೇವ ॥ ತರಿಕಿಟ ತತ್ । ತಾಕಿಟ ಕಿಟತಕ... ಈ ಮುಕ್ತಾಯ ಆದಿತಾಳದ್ದು, ಮುಕ್ತಾಯದ ಕೊನೆಯ “ದೀಂ"ಗೆ ಸರಿಯಾಗಿ ಮುಂದಿನ ಕುಣಿತ -ಅರ್ಧ ಕುಳಿತು,{{nop}}<noinclude></noinclude> h9p9azb3rn5s07gh9m3afjao3k5v0un ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ ಮೇ-ಜೂನ್ ೨೦೨೬ 4 120710 324728 324705 2026-06-15T14:25:19Z A826 6806 324728 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] [[File:Wikisource -Transclusion Inserting images, lists and table of content.pdf|thumb|Wikisource -Transclusion Inserting images, lists and table of content]] IIIT-HYDERABAD ನವರು ಆಯೋಜಿಸಿರುವ ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] * presentations: https://drive.google.com/drive/folders/1fg5OI5f3e9Akd94YUFb1ltE0-pKSWsPp?usp=sharing === ಸಾಪ್ತಾಹಿಕ ಕಾರ್ಯಯೋಜನೆಗಳು === {| class="wikitable" style="margin: auto;" ! Wikipedia User Name ! Add or improve data for minimum 50 Writers ! Add or improve data for minimum 50 Books ! Proofread ! Upload a assigned PDF ! Create Index Pages ! Upload 5 Index Pages |- | Vikas shetty14 |- | Viveka B G |- | Reema Jalihal |- | Shyam 2808 |- | Vaishnu Pilar |} == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 ! Week 4 ! Week 5 |- |Vikas R Shetty |Vikas shetty14 | ✓ | ✓ | ✓ |✓ |{{color|red|×}} |- |Hemanth Krishni P |Hemanth .03 |{{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Viveka B G |Viveka B G | ✓ | ✓ | ✓ | ✓ | ✓ |- |Reema Krishna Jalihal |Reema Jalihal | {{color|red|×}} | ✓ | ✓ | ✓ | ✓ |- |Shyama Sundara Shastry K R |Shyam 2808 | {{color|red|×}} |✓ | ✓ | ✓ |{{color|red|×}} |- |Nihar Chakravarti |Nihar Chakravarti | {{color|red|×}} | ✓ | ✓ |{{color|red|×}} |{{color|red|×}} |- |Deepak V S |vyangyeah | {{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Vaishnu Pilar |Vaishnu Pilar | ✓ | ✓ | ✓ | ✓ |{{color|red|×}} |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable sortable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | |- |Hemanth .03 || * [[ಪುಟ:ಯಕ್ಷಗಾನ_ಮಕರಂದ.pdf/೬೭೩]] * [[ಪುಟ:ಯಕ್ಷಗಾನ_ಮಕರಂದ.pdf/೬೭೪]] * [[ಪುಟ:ಯಕ್ಷಗಾನ_ಮಕರಂದ.pdf/೬೭೫]] * [[ಪುಟ:ಯಕ್ಷಗಾನ_ಮಕರಂದ.pdf/೬೭೬]] * [[ಪುಟ:ಯಕ್ಷಗಾನ_ಮಕರಂದ.pdf/೬೭೭]] * [[ಪುಟ:ಯಕ್ಷಗಾನ_ಮಕರಂದ.pdf/೬೭೮]] | {{not done}} <!--replace Done with {{done}} when proofreading in done--> | |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{done}} <!--replace inprogress with {{done}} when proofreading in done--> | |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | |- |vyangyeah || * [[ಪುಟ:ಯಕ್ಷಗಾನ_ಮಕರಂದ.pdf/೭೦೩]] * [[ಪುಟ:ಯಕ್ಷಗಾನ_ಮಕರಂದ.pdf/೭೦೪]] * [[ಪುಟ:ಯಕ್ಷಗಾನ_ಮಕರಂದ.pdf/೭೦೫]] * [[ಪುಟ:ಯಕ್ಷಗಾನ_ಮಕರಂದ.pdf/೭೦೬]] * [[ಪುಟ:ಯಕ್ಷಗಾನ_ಮಕರಂದ.pdf/೭೦೭]] * [[ಪುಟ:ಯಕ್ಷಗಾನ_ಮಕರಂದ.pdf/೭೦೮]] | {{not done}} <!--replace inprogress with {{done}} when proofreading in done--> | |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{on hold}}<!--replace inprogress with {{done}} when proofreading in done--> | asked extension till 22-23 June to complete internship tasks |} === ವಾರ ೪/೫ === ==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]] ===== ಪುಟದ ಸ್ಥಿತಿ ===== ; [[ಸಹಾಯ:ಪುಟದ ಸ್ಥಿತಿಗತಿ]] {| |- | colspan="3" | ಸಂಪಾದನೆ ವಿಂಡೋ ಅಡಿಯಲ್ಲಿ ಈ ಸ್ಥಿತಿಗಳನ್ನು ಸೂಚಿಸುವ ಬಟನ್‌ಗಳನ್ನು ನೀವು ಕಾಣಬಹುದು. ಹಿಂದಿನ ಕೊಡುಗೆದಾರರು ಈಗಾಗಲೇ ಪುಟವನ್ನು ಪ್ರೂಫ್ ರೀಡ್ ಮಾಡಿದ್ದರೆ, ಅಗ ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ: |- |style="width: 33%;" | &nbsp; |style="width: 33%;" | [[File:Wikisource page proofread buttons.png|200px|left|ಐದು ಗುಂಡಿಗಳು]] | &nbsp; |- | colspan="3" | ಯಾರೂ ಇನ್ನೂ ಪುಟವನ್ನು ಪ್ರೂಫ್ ರೀಡ್ ಮಾಡದಿದ್ದರೆ, ಬಟನ್‌ಗಳು ಈ ಕೆಳಗಿನಂತೆ ಗೋಚರಿಸುತ್ತವೆ: |- | &nbsp; | [[File:Wikisource page not proofread buttons.png|160px|left|ನಾಲ್ಕು ಗುಂಡಿಗಳು]] | &nbsp; |} {| |- |colspan = 2, align=center| ↗ <span style="background-color:#DDD;">ಪಠ್ಯವಿಲ್ಲದ ಪುಟ</span> | |- |<span style="color:#C00000">''ಖಾಲಿ ಪುಟ'' </span> |→ <span style="background-color: #FFA0A0;">ಪರಿಶೀಲಿಸಲಾಗಿಲ್ಲದ ಪುಟ</span> |→ <span style="background-color: #FFE867;">ಪರಿಶೀಲಿಸಲಾಗಿರುವ ಪುಟ</span> |→ <span style="background-color: #90FF90;">ಪ್ರಕಟಿಸಲಾಗಿರುವ ಪುಟ</span> |- | |colspan = 2, align=center| ↘ <span style="background-color: #B0B0FF;">ಸಮಸ್ಯಾಪೂರ್ಣ ಪುಟ</span> ↗ |} ಪುಟಗಳನ್ನು ಕೆಳಗೆ ತಿಳಿಸಿದ ಹಾಗೆ ವಿಂಗಡಿಸಬೇಕು. * {{page status text|Not proofread}} ಪೂರ್ವನಿಯೋಜಿತ ಮೌಲ್ಯ ಆಗಿರುತ್ತದೆ. ([[:Category:ಪರಿಶೀಲಿಸಲಾಗಿಲ್ಲ|ಎಲ್ಲಾ ಪುಟಗಳನ್ನು ನೋಡಿ.]]) * {{page status text|Proofread}} ಅಂದರೆ ಒಬ್ಬ ಸಂಪಾದಕ ಪರಿಶೀಲಿಸಿರುವ ಪುಟ. ನೀವು ಪುಟವನ್ನು ಅತ್ಯುತ್ತಮ ಸ್ಥಿತಿಗೆ ತಂದಿರುವಿರಿ ಅಲ್ಲಿ ಪಠ್ಯವು ಸ್ಕ್ಯಾನ್‌ಗೆ ಹೊಂದಿಕೆಯಾಗುತ್ತದೆ ಮತ್ತು ಮೂಲಭೂತ ಫಾರ್ಮ್ಯಾಟಿಂಗ್ ಮಾಡಲಾಗುತ್ತದೆ, ಮತ್ತು ನೀವು ಅದರೊಂದಿಗೆ ಸಮಂಜಸವಾಗಿ ಪ್ರೂಫ್‌ರೀಡ್ ಪುಟವು ಓದುಗರಿಗೆ ಪ್ರದರ್ಶಿಸಲು ಸಿದ್ಧಪಡಿಸುವುದು, ಅದರಲ್ಲಿ ಸ್ವಲ್ಪ ದೋಷಗಳಿದ್ದರೂ ಸಹ ಸರಿಪಡಿಸವುದು. ([[:ವರ್ಗ:Proofread|ಎಲ್ಲಾ ಪುಟಗಳನ್ನು ನೋಡಿ.]]) * {{page status text|Validated}} ಅಂದರೆ ಒಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿರುವ ಪುಟ. ಈ ಆಯ್ಕೆ ಪುಟವನ್ನು ಈಗಾಗಲೇ ಮತ್ತೊಬ್ಬರು ಪರಿಶೀಲಿಸಿದ್ದಲ್ಲಿ ಮಾತ್ರ ಲಭ್ಯವಾಗುತ್ತದೆ. ([[:Category:ಪ್ರಕಟಿಸಿದವು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Without text}} ಖಾಲಿ ಪುಟಗಳಿಗಾಗಿದೆ. ಇದನ್ನು ಚಿತ್ರಗಳಿರುವ ಪುಟಗಳಿಗೆ ಬಳಸುವಂತಿಲ್ಲ. ([[:Category:ಪಠ್ಯವಿಲ್ಲದ್ದು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Problematic}} ದೋಷಯುಕ್ತ ಸ್ಕ್ಯಾನ್ ಮಾಡಿದ ಪುಟಗಳು ಅಥವಾ ಸಂಪಾದಕರ ನಡುವೆ ಚರ್ಚೆ ಆಗಬೇಕಿರುವುದನ್ನು ಸೂಚಿಸುತ್ತದೆ. ([[:Category:ಸಮಸ್ಯಾಪೂರ್ಣ|ಎಲ್ಲಾ ಪುಟಗಳನ್ನು ನೋಡಿ.]]) {| class="wikitable sortable" ! Wikipedia User Name !! Assigned book title !! progress !! reviewer notes |- |Vikas shetty14 || ರಂಗನಾಯಕಿ : https://archive.org/details/Ranganaayaki-Maale-1953 | {{inprogress}} <!--replace inprogress with {{done}} when proofreading in done--> | |- |Viveka B G || ಬಹದ್ದೂರ್ ಗಂಡ : https://archive.org/details/in.ernet.dli.2015.363366 | {{inprogress}} <!--replace inprogress with {{done}} when proofreading in done--> | |- |Reema Jalihal || ಚಂದ್ರನಾಥ : https://archive.org/details/Chandranaatha-1944/ | {{inprogress}} <!--replace inprogress with {{done}} when proofreading in done--> | |- |Shyam 2808 || ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673 | {{inprogress}} <!--replace inprogress with {{done}} when proofreading in done--> | ;'''Week5 (20 pages)''':pages (1-5, 7-8) without any or irrelavent text should be marked as '''without text''' , always Join lines in paragraph & when line are joined in a paragraph broken words should be joined [[special:diff/324684|for example ಸರಳು ಗಳಿಗೆ , should be joined as ಸರಳುಗಳಿಗೆ]] , use {{t|rh}} where you need to use both [[special:diff/324685|left and right texts]] ---- '''Week6''': |- |Nihar Chakravarti || ಚಿತ್ರಕೂಟ : https://archive.org/details/Chitrakuuta-1954 | {{inprogress}} <!--replace inprogress with {{done}} when proofreading in done--> | |- |Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937 | {{on hold|on hold requested time due to exams}} <!--replace inprogress with {{done}} when proofreading in done--> | |- |Hemanth .03 || {{question|previous task not yet completed}} | {{on hold}}<!--replace inprogress with {{done}} when proofreading in done--> | |- |vyangyeah || {{question|previous task not yet completed}} | {{on hold}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] 38nogf102e8iwwu8yzno7t0ky4jqwee 324730 324728 2026-06-15T14:34:32Z A826 6806 /* ವಾರ ೪/೫ */ 324730 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] [[File:Wikisource -Transclusion Inserting images, lists and table of content.pdf|thumb|Wikisource -Transclusion Inserting images, lists and table of content]] IIIT-HYDERABAD ನವರು ಆಯೋಜಿಸಿರುವ ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] * presentations: https://drive.google.com/drive/folders/1fg5OI5f3e9Akd94YUFb1ltE0-pKSWsPp?usp=sharing === ಸಾಪ್ತಾಹಿಕ ಕಾರ್ಯಯೋಜನೆಗಳು === {| class="wikitable" style="margin: auto;" ! Wikipedia User Name ! Add or improve data for minimum 50 Writers ! Add or improve data for minimum 50 Books ! Proofread ! Upload a assigned PDF ! Create Index Pages ! Upload 5 Index Pages |- | Vikas shetty14 |- | Viveka B G |- | Reema Jalihal |- | Shyam 2808 |- | Vaishnu Pilar |} == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 ! Week 4 ! Week 5 |- |Vikas R Shetty |Vikas shetty14 | ✓ | ✓ | ✓ |✓ |{{color|red|×}} |- |Hemanth Krishni P |Hemanth .03 |{{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Viveka B G |Viveka B G | ✓ | ✓ | ✓ | ✓ | ✓ |- |Reema Krishna Jalihal |Reema Jalihal | {{color|red|×}} | ✓ | ✓ | ✓ | ✓ |- |Shyama Sundara Shastry K R |Shyam 2808 | {{color|red|×}} |✓ | ✓ | ✓ |{{color|red|×}} |- |Nihar Chakravarti |Nihar Chakravarti | {{color|red|×}} | ✓ | ✓ |{{color|red|×}} |{{color|red|×}} |- |Deepak V S |vyangyeah | {{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Vaishnu Pilar |Vaishnu Pilar | ✓ | ✓ | ✓ | ✓ |{{color|red|×}} |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable sortable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | |- |Hemanth .03 || * [[ಪುಟ:ಯಕ್ಷಗಾನ_ಮಕರಂದ.pdf/೬೭೩]] * [[ಪುಟ:ಯಕ್ಷಗಾನ_ಮಕರಂದ.pdf/೬೭೪]] * [[ಪುಟ:ಯಕ್ಷಗಾನ_ಮಕರಂದ.pdf/೬೭೫]] * [[ಪುಟ:ಯಕ್ಷಗಾನ_ಮಕರಂದ.pdf/೬೭೬]] * [[ಪುಟ:ಯಕ್ಷಗಾನ_ಮಕರಂದ.pdf/೬೭೭]] * [[ಪುಟ:ಯಕ್ಷಗಾನ_ಮಕರಂದ.pdf/೬೭೮]] | {{not done}} <!--replace Done with {{done}} when proofreading in done--> | |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{done}} <!--replace inprogress with {{done}} when proofreading in done--> | |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | |- |vyangyeah || * [[ಪುಟ:ಯಕ್ಷಗಾನ_ಮಕರಂದ.pdf/೭೦೩]] * [[ಪುಟ:ಯಕ್ಷಗಾನ_ಮಕರಂದ.pdf/೭೦೪]] * [[ಪುಟ:ಯಕ್ಷಗಾನ_ಮಕರಂದ.pdf/೭೦೫]] * [[ಪುಟ:ಯಕ್ಷಗಾನ_ಮಕರಂದ.pdf/೭೦೬]] * [[ಪುಟ:ಯಕ್ಷಗಾನ_ಮಕರಂದ.pdf/೭೦೭]] * [[ಪುಟ:ಯಕ್ಷಗಾನ_ಮಕರಂದ.pdf/೭೦೮]] | {{not done}} <!--replace inprogress with {{done}} when proofreading in done--> | |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{on hold}}<!--replace inprogress with {{done}} when proofreading in done--> | asked extension till 22-23 June to complete internship tasks |} === ವಾರ ೪/೫ === ==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]] ===== ಪುಟದ ಸ್ಥಿತಿ ===== ; [[ಸಹಾಯ:ಪುಟದ ಸ್ಥಿತಿಗತಿ]] {| |- | colspan="3" | ಸಂಪಾದನೆ ವಿಂಡೋ ಅಡಿಯಲ್ಲಿ ಈ ಸ್ಥಿತಿಗಳನ್ನು ಸೂಚಿಸುವ ಬಟನ್‌ಗಳನ್ನು ನೀವು ಕಾಣಬಹುದು. ಹಿಂದಿನ ಕೊಡುಗೆದಾರರು ಈಗಾಗಲೇ ಪುಟವನ್ನು ಪ್ರೂಫ್ ರೀಡ್ ಮಾಡಿದ್ದರೆ, ಅಗ ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ: |- |style="width: 33%;" | &nbsp; |style="width: 33%;" | [[File:Wikisource page proofread buttons.png|200px|left|ಐದು ಗುಂಡಿಗಳು]] | &nbsp; |- | colspan="3" | ಯಾರೂ ಇನ್ನೂ ಪುಟವನ್ನು ಪ್ರೂಫ್ ರೀಡ್ ಮಾಡದಿದ್ದರೆ, ಬಟನ್‌ಗಳು ಈ ಕೆಳಗಿನಂತೆ ಗೋಚರಿಸುತ್ತವೆ: |- | &nbsp; | [[File:Wikisource page not proofread buttons.png|160px|left|ನಾಲ್ಕು ಗುಂಡಿಗಳು]] | &nbsp; |} {| |- |colspan = 2, align=center| ↗ <span style="background-color:#DDD;">ಪಠ್ಯವಿಲ್ಲದ ಪುಟ</span> | |- |<span style="color:#C00000">''ಖಾಲಿ ಪುಟ'' </span> |→ <span style="background-color: #FFA0A0;">ಪರಿಶೀಲಿಸಲಾಗಿಲ್ಲದ ಪುಟ</span> |→ <span style="background-color: #FFE867;">ಪರಿಶೀಲಿಸಲಾಗಿರುವ ಪುಟ</span> |→ <span style="background-color: #90FF90;">ಪ್ರಕಟಿಸಲಾಗಿರುವ ಪುಟ</span> |- | |colspan = 2, align=center| ↘ <span style="background-color: #B0B0FF;">ಸಮಸ್ಯಾಪೂರ್ಣ ಪುಟ</span> ↗ |} ಪುಟಗಳನ್ನು ಕೆಳಗೆ ತಿಳಿಸಿದ ಹಾಗೆ ವಿಂಗಡಿಸಬೇಕು. * {{page status text|Not proofread}} ಪೂರ್ವನಿಯೋಜಿತ ಮೌಲ್ಯ ಆಗಿರುತ್ತದೆ. ([[:Category:ಪರಿಶೀಲಿಸಲಾಗಿಲ್ಲ|ಎಲ್ಲಾ ಪುಟಗಳನ್ನು ನೋಡಿ.]]) * {{page status text|Proofread}} ಅಂದರೆ ಒಬ್ಬ ಸಂಪಾದಕ ಪರಿಶೀಲಿಸಿರುವ ಪುಟ. ನೀವು ಪುಟವನ್ನು ಅತ್ಯುತ್ತಮ ಸ್ಥಿತಿಗೆ ತಂದಿರುವಿರಿ ಅಲ್ಲಿ ಪಠ್ಯವು ಸ್ಕ್ಯಾನ್‌ಗೆ ಹೊಂದಿಕೆಯಾಗುತ್ತದೆ ಮತ್ತು ಮೂಲಭೂತ ಫಾರ್ಮ್ಯಾಟಿಂಗ್ ಮಾಡಲಾಗುತ್ತದೆ, ಮತ್ತು ನೀವು ಅದರೊಂದಿಗೆ ಸಮಂಜಸವಾಗಿ ಪ್ರೂಫ್‌ರೀಡ್ ಪುಟವು ಓದುಗರಿಗೆ ಪ್ರದರ್ಶಿಸಲು ಸಿದ್ಧಪಡಿಸುವುದು, ಅದರಲ್ಲಿ ಸ್ವಲ್ಪ ದೋಷಗಳಿದ್ದರೂ ಸಹ ಸರಿಪಡಿಸವುದು. ([[:ವರ್ಗ:Proofread|ಎಲ್ಲಾ ಪುಟಗಳನ್ನು ನೋಡಿ.]]) * {{page status text|Validated}} ಅಂದರೆ ಒಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿರುವ ಪುಟ. ಈ ಆಯ್ಕೆ ಪುಟವನ್ನು ಈಗಾಗಲೇ ಮತ್ತೊಬ್ಬರು ಪರಿಶೀಲಿಸಿದ್ದಲ್ಲಿ ಮಾತ್ರ ಲಭ್ಯವಾಗುತ್ತದೆ. ([[:Category:ಪ್ರಕಟಿಸಿದವು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Without text}} ಖಾಲಿ ಪುಟಗಳಿಗಾಗಿದೆ. ಇದನ್ನು ಚಿತ್ರಗಳಿರುವ ಪುಟಗಳಿಗೆ ಬಳಸುವಂತಿಲ್ಲ. ([[:Category:ಪಠ್ಯವಿಲ್ಲದ್ದು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Problematic}} ದೋಷಯುಕ್ತ ಸ್ಕ್ಯಾನ್ ಮಾಡಿದ ಪುಟಗಳು ಅಥವಾ ಸಂಪಾದಕರ ನಡುವೆ ಚರ್ಚೆ ಆಗಬೇಕಿರುವುದನ್ನು ಸೂಚಿಸುತ್ತದೆ. ([[:Category:ಸಮಸ್ಯಾಪೂರ್ಣ|ಎಲ್ಲಾ ಪುಟಗಳನ್ನು ನೋಡಿ.]]) {| class="wikitable sortable" ! Wikipedia User Name !! Assigned book title !! progress !! reviewer notes |- |Vikas shetty14 || ರಂಗನಾಯಕಿ : https://archive.org/details/Ranganaayaki-Maale-1953 | {{inprogress}} <!--replace inprogress with {{done}} when proofreading in done--> | |- |Viveka B G || ಬಹದ್ದೂರ್ ಗಂಡ : https://archive.org/details/in.ernet.dli.2015.363366 | {{inprogress}} <!--replace inprogress with {{done}} when proofreading in done--> | |- |Reema Jalihal || ಚಂದ್ರನಾಥ : https://archive.org/details/Chandranaatha-1944/ | {{inprogress}} <!--replace inprogress with {{done}} when proofreading in done--> | |- |Shyam 2808 || ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673 | {{inprogress}} <!--replace inprogress with {{done}} when proofreading in done--> | ;'''Week5 (20 pages)''':pages (1-5, 7-8) without any or irrelavent text should be marked as '''without text''' , always Join lines in paragraph & when line are joined in a paragraph broken words should be joined [[special:diff/324684|for example ಸರಳು ಗಳಿಗೆ , should be joined as ಸರಳುಗಳಿಗೆ]] , use {{t|rh}} where you need to use both [[special:diff/324685|left and right text alignments]] ---- '''Week6''': |- |Nihar Chakravarti || ಚಿತ್ರಕೂಟ : https://archive.org/details/Chitrakuuta-1954 | {{inprogress}} <!--replace inprogress with {{done}} when proofreading in done--> | |- |Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937 | {{on hold|on hold requested time due to exams}} <!--replace inprogress with {{done}} when proofreading in done--> | |- |Hemanth .03 || {{question|previous task not yet completed}} | {{on hold}}<!--replace inprogress with {{done}} when proofreading in done--> | |- |vyangyeah || {{question|previous task not yet completed}} | {{on hold}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] hzvg119078pi3yk6qdb2z45zg65t26d 324752 324730 2026-06-16T02:35:02Z A826 6806 /* ಸಾಪ್ತಾಹಿಕ ಕಾರ್ಯಯೋಜನೆಗಳು */ 324752 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] [[File:Wikisource -Transclusion Inserting images, lists and table of content.pdf|thumb|Wikisource -Transclusion Inserting images, lists and table of content]] IIIT-HYDERABAD ನವರು ಆಯೋಜಿಸಿರುವ ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] * presentations: https://drive.google.com/drive/folders/1fg5OI5f3e9Akd94YUFb1ltE0-pKSWsPp?usp=sharing === ಸಾಪ್ತಾಹಿಕ ಕಾರ್ಯಯೋಜನೆಗಳು === {| class="wikitable" style="margin: auto;" ! Wikipedia User Name ! Add or improve data for minimum 50 Writers ! Add or improve data for minimum 50 Books ! Proofread 20 pages ! Upload a assigned PDF ! Create Index Pages ! Upload 5 Index Pages |- | Vikas shetty14 |- | Viveka B G |- | Reema Jalihal |- | Shyam 2808 |- | Vaishnu Pilar |} == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 ! Week 4 ! Week 5 |- |Vikas R Shetty |Vikas shetty14 | ✓ | ✓ | ✓ |✓ |{{color|red|×}} |- |Hemanth Krishni P |Hemanth .03 |{{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Viveka B G |Viveka B G | ✓ | ✓ | ✓ | ✓ | ✓ |- |Reema Krishna Jalihal |Reema Jalihal | {{color|red|×}} | ✓ | ✓ | ✓ | ✓ |- |Shyama Sundara Shastry K R |Shyam 2808 | {{color|red|×}} |✓ | ✓ | ✓ |{{color|red|×}} |- |Nihar Chakravarti |Nihar Chakravarti | {{color|red|×}} | ✓ | ✓ |{{color|red|×}} |{{color|red|×}} |- |Deepak V S |vyangyeah | {{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Vaishnu Pilar |Vaishnu Pilar | ✓ | ✓ | ✓ | ✓ |{{color|red|×}} |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable sortable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | |- |Hemanth .03 || * [[ಪುಟ:ಯಕ್ಷಗಾನ_ಮಕರಂದ.pdf/೬೭೩]] * [[ಪುಟ:ಯಕ್ಷಗಾನ_ಮಕರಂದ.pdf/೬೭೪]] * [[ಪುಟ:ಯಕ್ಷಗಾನ_ಮಕರಂದ.pdf/೬೭೫]] * [[ಪುಟ:ಯಕ್ಷಗಾನ_ಮಕರಂದ.pdf/೬೭೬]] * [[ಪುಟ:ಯಕ್ಷಗಾನ_ಮಕರಂದ.pdf/೬೭೭]] * [[ಪುಟ:ಯಕ್ಷಗಾನ_ಮಕರಂದ.pdf/೬೭೮]] | {{not done}} <!--replace Done with {{done}} when proofreading in done--> | |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{done}} <!--replace inprogress with {{done}} when proofreading in done--> | |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | |- |vyangyeah || * [[ಪುಟ:ಯಕ್ಷಗಾನ_ಮಕರಂದ.pdf/೭೦೩]] * [[ಪುಟ:ಯಕ್ಷಗಾನ_ಮಕರಂದ.pdf/೭೦೪]] * [[ಪುಟ:ಯಕ್ಷಗಾನ_ಮಕರಂದ.pdf/೭೦೫]] * [[ಪುಟ:ಯಕ್ಷಗಾನ_ಮಕರಂದ.pdf/೭೦೬]] * [[ಪುಟ:ಯಕ್ಷಗಾನ_ಮಕರಂದ.pdf/೭೦೭]] * [[ಪುಟ:ಯಕ್ಷಗಾನ_ಮಕರಂದ.pdf/೭೦೮]] | {{not done}} <!--replace inprogress with {{done}} when proofreading in done--> | |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{on hold}}<!--replace inprogress with {{done}} when proofreading in done--> | asked extension till 22-23 June to complete internship tasks |} === ವಾರ ೪/೫ === ==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]] ===== ಪುಟದ ಸ್ಥಿತಿ ===== ; [[ಸಹಾಯ:ಪುಟದ ಸ್ಥಿತಿಗತಿ]] {| |- | colspan="3" | ಸಂಪಾದನೆ ವಿಂಡೋ ಅಡಿಯಲ್ಲಿ ಈ ಸ್ಥಿತಿಗಳನ್ನು ಸೂಚಿಸುವ ಬಟನ್‌ಗಳನ್ನು ನೀವು ಕಾಣಬಹುದು. ಹಿಂದಿನ ಕೊಡುಗೆದಾರರು ಈಗಾಗಲೇ ಪುಟವನ್ನು ಪ್ರೂಫ್ ರೀಡ್ ಮಾಡಿದ್ದರೆ, ಅಗ ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ: |- |style="width: 33%;" | &nbsp; |style="width: 33%;" | [[File:Wikisource page proofread buttons.png|200px|left|ಐದು ಗುಂಡಿಗಳು]] | &nbsp; |- | colspan="3" | ಯಾರೂ ಇನ್ನೂ ಪುಟವನ್ನು ಪ್ರೂಫ್ ರೀಡ್ ಮಾಡದಿದ್ದರೆ, ಬಟನ್‌ಗಳು ಈ ಕೆಳಗಿನಂತೆ ಗೋಚರಿಸುತ್ತವೆ: |- | &nbsp; | [[File:Wikisource page not proofread buttons.png|160px|left|ನಾಲ್ಕು ಗುಂಡಿಗಳು]] | &nbsp; |} {| |- |colspan = 2, align=center| ↗ <span style="background-color:#DDD;">ಪಠ್ಯವಿಲ್ಲದ ಪುಟ</span> | |- |<span style="color:#C00000">''ಖಾಲಿ ಪುಟ'' </span> |→ <span style="background-color: #FFA0A0;">ಪರಿಶೀಲಿಸಲಾಗಿಲ್ಲದ ಪುಟ</span> |→ <span style="background-color: #FFE867;">ಪರಿಶೀಲಿಸಲಾಗಿರುವ ಪುಟ</span> |→ <span style="background-color: #90FF90;">ಪ್ರಕಟಿಸಲಾಗಿರುವ ಪುಟ</span> |- | |colspan = 2, align=center| ↘ <span style="background-color: #B0B0FF;">ಸಮಸ್ಯಾಪೂರ್ಣ ಪುಟ</span> ↗ |} ಪುಟಗಳನ್ನು ಕೆಳಗೆ ತಿಳಿಸಿದ ಹಾಗೆ ವಿಂಗಡಿಸಬೇಕು. * {{page status text|Not proofread}} ಪೂರ್ವನಿಯೋಜಿತ ಮೌಲ್ಯ ಆಗಿರುತ್ತದೆ. ([[:Category:ಪರಿಶೀಲಿಸಲಾಗಿಲ್ಲ|ಎಲ್ಲಾ ಪುಟಗಳನ್ನು ನೋಡಿ.]]) * {{page status text|Proofread}} ಅಂದರೆ ಒಬ್ಬ ಸಂಪಾದಕ ಪರಿಶೀಲಿಸಿರುವ ಪುಟ. ನೀವು ಪುಟವನ್ನು ಅತ್ಯುತ್ತಮ ಸ್ಥಿತಿಗೆ ತಂದಿರುವಿರಿ ಅಲ್ಲಿ ಪಠ್ಯವು ಸ್ಕ್ಯಾನ್‌ಗೆ ಹೊಂದಿಕೆಯಾಗುತ್ತದೆ ಮತ್ತು ಮೂಲಭೂತ ಫಾರ್ಮ್ಯಾಟಿಂಗ್ ಮಾಡಲಾಗುತ್ತದೆ, ಮತ್ತು ನೀವು ಅದರೊಂದಿಗೆ ಸಮಂಜಸವಾಗಿ ಪ್ರೂಫ್‌ರೀಡ್ ಪುಟವು ಓದುಗರಿಗೆ ಪ್ರದರ್ಶಿಸಲು ಸಿದ್ಧಪಡಿಸುವುದು, ಅದರಲ್ಲಿ ಸ್ವಲ್ಪ ದೋಷಗಳಿದ್ದರೂ ಸಹ ಸರಿಪಡಿಸವುದು. ([[:ವರ್ಗ:Proofread|ಎಲ್ಲಾ ಪುಟಗಳನ್ನು ನೋಡಿ.]]) * {{page status text|Validated}} ಅಂದರೆ ಒಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿರುವ ಪುಟ. ಈ ಆಯ್ಕೆ ಪುಟವನ್ನು ಈಗಾಗಲೇ ಮತ್ತೊಬ್ಬರು ಪರಿಶೀಲಿಸಿದ್ದಲ್ಲಿ ಮಾತ್ರ ಲಭ್ಯವಾಗುತ್ತದೆ. ([[:Category:ಪ್ರಕಟಿಸಿದವು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Without text}} ಖಾಲಿ ಪುಟಗಳಿಗಾಗಿದೆ. ಇದನ್ನು ಚಿತ್ರಗಳಿರುವ ಪುಟಗಳಿಗೆ ಬಳಸುವಂತಿಲ್ಲ. ([[:Category:ಪಠ್ಯವಿಲ್ಲದ್ದು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Problematic}} ದೋಷಯುಕ್ತ ಸ್ಕ್ಯಾನ್ ಮಾಡಿದ ಪುಟಗಳು ಅಥವಾ ಸಂಪಾದಕರ ನಡುವೆ ಚರ್ಚೆ ಆಗಬೇಕಿರುವುದನ್ನು ಸೂಚಿಸುತ್ತದೆ. ([[:Category:ಸಮಸ್ಯಾಪೂರ್ಣ|ಎಲ್ಲಾ ಪುಟಗಳನ್ನು ನೋಡಿ.]]) {| class="wikitable sortable" ! Wikipedia User Name !! Assigned book title !! progress !! reviewer notes |- |Vikas shetty14 || ರಂಗನಾಯಕಿ : https://archive.org/details/Ranganaayaki-Maale-1953 | {{inprogress}} <!--replace inprogress with {{done}} when proofreading in done--> | |- |Viveka B G || ಬಹದ್ದೂರ್ ಗಂಡ : https://archive.org/details/in.ernet.dli.2015.363366 | {{inprogress}} <!--replace inprogress with {{done}} when proofreading in done--> | |- |Reema Jalihal || ಚಂದ್ರನಾಥ : https://archive.org/details/Chandranaatha-1944/ | {{inprogress}} <!--replace inprogress with {{done}} when proofreading in done--> | |- |Shyam 2808 || ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673 | {{inprogress}} <!--replace inprogress with {{done}} when proofreading in done--> | ;'''Week5 (20 pages)''':pages (1-5, 7-8) without any or irrelavent text should be marked as '''without text''' , always Join lines in paragraph & when line are joined in a paragraph broken words should be joined [[special:diff/324684|for example ಸರಳು ಗಳಿಗೆ , should be joined as ಸರಳುಗಳಿಗೆ]] , use {{t|rh}} where you need to use both [[special:diff/324685|left and right text alignments]] ---- '''Week6''': |- |Nihar Chakravarti || ಚಿತ್ರಕೂಟ : https://archive.org/details/Chitrakuuta-1954 | {{inprogress}} <!--replace inprogress with {{done}} when proofreading in done--> | |- |Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937 | {{on hold|on hold requested time due to exams}} <!--replace inprogress with {{done}} when proofreading in done--> | |- |Hemanth .03 || {{question|previous task not yet completed}} | {{on hold}}<!--replace inprogress with {{done}} when proofreading in done--> | |- |vyangyeah || {{question|previous task not yet completed}} | {{on hold}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] rdfs9svh6xwzue7ihg8qkv1b3065xfp 324849 324752 2026-06-16T06:42:05Z A826 6806 324849 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] [[File:Wikisource -Transclusion Inserting images, lists and table of content.pdf|thumb|Wikisource -Transclusion Inserting images, lists and table of content]] IIIT-HYDERABAD ನವರು ಆಯೋಜಿಸಿರುವ ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] * presentations: https://drive.google.com/drive/folders/1fg5OI5f3e9Akd94YUFb1ltE0-pKSWsPp?usp=sharing === ಸಾಪ್ತಾಹಿಕ ಕಾರ್ಯಯೋಜನೆಗಳು === {| class="wikitable" style="margin: auto;" ! Add or improve data for minimum 50 Writers ! Add or improve data for minimum 50 Books ! Proofread 20 pages ! Upload a assigned PDF ! Create Index Pages ! Upload 5 Index Pages |} == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 ! Week 4 ! Week 5 |- |Vikas R Shetty |Vikas shetty14 | ✓ | ✓ | ✓ |✓ |{{color|red|×}} |- |Hemanth Krishni P |Hemanth .03 |{{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Viveka B G |Viveka B G | ✓ | ✓ | ✓ | ✓ | ✓ |- |Reema Krishna Jalihal |Reema Jalihal | {{color|red|×}} | ✓ | ✓ | ✓ | ✓ |- |Shyama Sundara Shastry K R |Shyam 2808 | {{color|red|×}} |✓ | ✓ | ✓ |{{color|red|×}} |- |Nihar Chakravarti |Nihar Chakravarti | {{color|red|×}} | ✓ | ✓ |{{color|red|×}} |{{color|red|×}} |- |Deepak V S |vyangyeah | {{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Vaishnu Pilar |Vaishnu Pilar | ✓ | ✓ | ✓ | ✓ |{{color|red|×}} |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable sortable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | |- |Hemanth .03 || * [[ಪುಟ:ಯಕ್ಷಗಾನ_ಮಕರಂದ.pdf/೬೭೩]] * [[ಪುಟ:ಯಕ್ಷಗಾನ_ಮಕರಂದ.pdf/೬೭೪]] * [[ಪುಟ:ಯಕ್ಷಗಾನ_ಮಕರಂದ.pdf/೬೭೫]] * [[ಪುಟ:ಯಕ್ಷಗಾನ_ಮಕರಂದ.pdf/೬೭೬]] * [[ಪುಟ:ಯಕ್ಷಗಾನ_ಮಕರಂದ.pdf/೬೭೭]] * [[ಪುಟ:ಯಕ್ಷಗಾನ_ಮಕರಂದ.pdf/೬೭೮]] | {{not done}} <!--replace Done with {{done}} when proofreading in done--> | |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{done}} <!--replace inprogress with {{done}} when proofreading in done--> | |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | |- |vyangyeah || * [[ಪುಟ:ಯಕ್ಷಗಾನ_ಮಕರಂದ.pdf/೭೦೩]] * [[ಪುಟ:ಯಕ್ಷಗಾನ_ಮಕರಂದ.pdf/೭೦೪]] * [[ಪುಟ:ಯಕ್ಷಗಾನ_ಮಕರಂದ.pdf/೭೦೫]] * [[ಪುಟ:ಯಕ್ಷಗಾನ_ಮಕರಂದ.pdf/೭೦೬]] * [[ಪುಟ:ಯಕ್ಷಗಾನ_ಮಕರಂದ.pdf/೭೦೭]] * [[ಪುಟ:ಯಕ್ಷಗಾನ_ಮಕರಂದ.pdf/೭೦೮]] | {{not done}} <!--replace inprogress with {{done}} when proofreading in done--> | |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{on hold}}<!--replace inprogress with {{done}} when proofreading in done--> | asked extension till 22-23 June to complete internship tasks |} === ವಾರ ೪/೫ === ==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]] ===== ಪುಟದ ಸ್ಥಿತಿ ===== ; [[ಸಹಾಯ:ಪುಟದ ಸ್ಥಿತಿಗತಿ]] {| |- | colspan="3" | ಸಂಪಾದನೆ ವಿಂಡೋ ಅಡಿಯಲ್ಲಿ ಈ ಸ್ಥಿತಿಗಳನ್ನು ಸೂಚಿಸುವ ಬಟನ್‌ಗಳನ್ನು ನೀವು ಕಾಣಬಹುದು. ಹಿಂದಿನ ಕೊಡುಗೆದಾರರು ಈಗಾಗಲೇ ಪುಟವನ್ನು ಪ್ರೂಫ್ ರೀಡ್ ಮಾಡಿದ್ದರೆ, ಅಗ ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ: |- |style="width: 33%;" | &nbsp; |style="width: 33%;" | [[File:Wikisource page proofread buttons.png|200px|left|ಐದು ಗುಂಡಿಗಳು]] | &nbsp; |- | colspan="3" | ಯಾರೂ ಇನ್ನೂ ಪುಟವನ್ನು ಪ್ರೂಫ್ ರೀಡ್ ಮಾಡದಿದ್ದರೆ, ಬಟನ್‌ಗಳು ಈ ಕೆಳಗಿನಂತೆ ಗೋಚರಿಸುತ್ತವೆ: |- | &nbsp; | [[File:Wikisource page not proofread buttons.png|160px|left|ನಾಲ್ಕು ಗುಂಡಿಗಳು]] | &nbsp; |} {| |- |colspan = 2, align=center| ↗ <span style="background-color:#DDD;">ಪಠ್ಯವಿಲ್ಲದ ಪುಟ</span> | |- |<span style="color:#C00000">''ಖಾಲಿ ಪುಟ'' </span> |→ <span style="background-color: #FFA0A0;">ಪರಿಶೀಲಿಸಲಾಗಿಲ್ಲದ ಪುಟ</span> |→ <span style="background-color: #FFE867;">ಪರಿಶೀಲಿಸಲಾಗಿರುವ ಪುಟ</span> |→ <span style="background-color: #90FF90;">ಪ್ರಕಟಿಸಲಾಗಿರುವ ಪುಟ</span> |- | |colspan = 2, align=center| ↘ <span style="background-color: #B0B0FF;">ಸಮಸ್ಯಾಪೂರ್ಣ ಪುಟ</span> ↗ |} ಪುಟಗಳನ್ನು ಕೆಳಗೆ ತಿಳಿಸಿದ ಹಾಗೆ ವಿಂಗಡಿಸಬೇಕು. * {{page status text|Not proofread}} ಪೂರ್ವನಿಯೋಜಿತ ಮೌಲ್ಯ ಆಗಿರುತ್ತದೆ. ([[:Category:ಪರಿಶೀಲಿಸಲಾಗಿಲ್ಲ|ಎಲ್ಲಾ ಪುಟಗಳನ್ನು ನೋಡಿ.]]) * {{page status text|Proofread}} ಅಂದರೆ ಒಬ್ಬ ಸಂಪಾದಕ ಪರಿಶೀಲಿಸಿರುವ ಪುಟ. ನೀವು ಪುಟವನ್ನು ಅತ್ಯುತ್ತಮ ಸ್ಥಿತಿಗೆ ತಂದಿರುವಿರಿ ಅಲ್ಲಿ ಪಠ್ಯವು ಸ್ಕ್ಯಾನ್‌ಗೆ ಹೊಂದಿಕೆಯಾಗುತ್ತದೆ ಮತ್ತು ಮೂಲಭೂತ ಫಾರ್ಮ್ಯಾಟಿಂಗ್ ಮಾಡಲಾಗುತ್ತದೆ, ಮತ್ತು ನೀವು ಅದರೊಂದಿಗೆ ಸಮಂಜಸವಾಗಿ ಪ್ರೂಫ್‌ರೀಡ್ ಪುಟವು ಓದುಗರಿಗೆ ಪ್ರದರ್ಶಿಸಲು ಸಿದ್ಧಪಡಿಸುವುದು, ಅದರಲ್ಲಿ ಸ್ವಲ್ಪ ದೋಷಗಳಿದ್ದರೂ ಸಹ ಸರಿಪಡಿಸವುದು. ([[:ವರ್ಗ:Proofread|ಎಲ್ಲಾ ಪುಟಗಳನ್ನು ನೋಡಿ.]]) * {{page status text|Validated}} ಅಂದರೆ ಒಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿರುವ ಪುಟ. ಈ ಆಯ್ಕೆ ಪುಟವನ್ನು ಈಗಾಗಲೇ ಮತ್ತೊಬ್ಬರು ಪರಿಶೀಲಿಸಿದ್ದಲ್ಲಿ ಮಾತ್ರ ಲಭ್ಯವಾಗುತ್ತದೆ. ([[:Category:ಪ್ರಕಟಿಸಿದವು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Without text}} ಖಾಲಿ ಪುಟಗಳಿಗಾಗಿದೆ. ಇದನ್ನು ಚಿತ್ರಗಳಿರುವ ಪುಟಗಳಿಗೆ ಬಳಸುವಂತಿಲ್ಲ. ([[:Category:ಪಠ್ಯವಿಲ್ಲದ್ದು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Problematic}} ದೋಷಯುಕ್ತ ಸ್ಕ್ಯಾನ್ ಮಾಡಿದ ಪುಟಗಳು ಅಥವಾ ಸಂಪಾದಕರ ನಡುವೆ ಚರ್ಚೆ ಆಗಬೇಕಿರುವುದನ್ನು ಸೂಚಿಸುತ್ತದೆ. ([[:Category:ಸಮಸ್ಯಾಪೂರ್ಣ|ಎಲ್ಲಾ ಪುಟಗಳನ್ನು ನೋಡಿ.]]) {| class="wikitable sortable" ! Wikipedia User Name !! Assigned book title !! progress !! reviewer notes |- |Vikas shetty14 || ರಂಗನಾಯಕಿ : https://archive.org/details/Ranganaayaki-Maale-1953 | {{inprogress}} <!--replace inprogress with {{done}} when proofreading in done--> | |- |Viveka B G || ಬಹದ್ದೂರ್ ಗಂಡ : https://archive.org/details/in.ernet.dli.2015.363366 | {{inprogress}} <!--replace inprogress with {{done}} when proofreading in done--> | |- |Reema Jalihal || ಚಂದ್ರನಾಥ : https://archive.org/details/Chandranaatha-1944/ | {{inprogress}} <!--replace inprogress with {{done}} when proofreading in done--> | |- |Shyam 2808 || ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673 | {{inprogress}} <!--replace inprogress with {{done}} when proofreading in done--> | ;'''Week5 (20 pages)''':pages (1-5, 7-8) without any or irrelavent text should be marked as '''without text''' , always Join lines in paragraph & when line are joined in a paragraph broken words should be joined [[special:diff/324684|for example ಸರಳು ಗಳಿಗೆ , should be joined as ಸರಳುಗಳಿಗೆ]] , use {{t|rh}} where you need to use both [[special:diff/324685|left and right text alignments]] ---- '''Week6''': |- |Nihar Chakravarti || ಚಿತ್ರಕೂಟ : https://archive.org/details/Chitrakuuta-1954 | {{inprogress}} <!--replace inprogress with {{done}} when proofreading in done--> | |- |Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937 | {{on hold|on hold requested time due to exams}} <!--replace inprogress with {{done}} when proofreading in done--> | |- |Hemanth .03 || {{question|previous task not yet completed}} | {{on hold}}<!--replace inprogress with {{done}} when proofreading in done--> | |- |vyangyeah || {{question|previous task not yet completed}} | {{on hold}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] 30gv2w1zzwyukneool24am2cm8ivlbg 324851 324849 2026-06-16T06:54:29Z A826 6806 /* ವಿಕಿಸೋರ್ಸ್ ಫ್ರೂಫ಼್‌ರೀಡ್ */ 324851 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] [[File:Wikisource -Transclusion Inserting images, lists and table of content.pdf|thumb|Wikisource -Transclusion Inserting images, lists and table of content]] IIIT-HYDERABAD ನವರು ಆಯೋಜಿಸಿರುವ ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] * presentations: https://drive.google.com/drive/folders/1fg5OI5f3e9Akd94YUFb1ltE0-pKSWsPp?usp=sharing === ಸಾಪ್ತಾಹಿಕ ಕಾರ್ಯಯೋಜನೆಗಳು === {| class="wikitable" style="margin: auto;" ! Add or improve data for minimum 50 Writers ! Add or improve data for minimum 50 Books ! Proofread 20 pages ! Upload a assigned PDF ! Create Index Pages ! Upload 5 Index Pages |} == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 ! Week 4 ! Week 5 |- |Vikas R Shetty |Vikas shetty14 | ✓ | ✓ | ✓ |✓ |{{color|red|×}} |- |Hemanth Krishni P |Hemanth .03 |{{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Viveka B G |Viveka B G | ✓ | ✓ | ✓ | ✓ | ✓ |- |Reema Krishna Jalihal |Reema Jalihal | {{color|red|×}} | ✓ | ✓ | ✓ | ✓ |- |Shyama Sundara Shastry K R |Shyam 2808 | {{color|red|×}} |✓ | ✓ | ✓ |{{color|red|×}} |- |Nihar Chakravarti |Nihar Chakravarti | {{color|red|×}} | ✓ | ✓ |{{color|red|×}} |{{color|red|×}} |- |Deepak V S |vyangyeah | {{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Vaishnu Pilar |Vaishnu Pilar | ✓ | ✓ | ✓ | ✓ |{{color|red|×}} |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable sortable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | looks ok, please check text thoroughly there were some hyphen, symbols missing from text. |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | Looks good, please use ॥ , । instead of pipe |, || |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{done}} <!--replace inprogress with {{done}} when proofreading in done--> | looks good |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | looks good |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | look good |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{on hold}}<!--replace inprogress with {{done}} when proofreading in done--> | asked extension till 22-23 June to complete internship tasks |} === ವಾರ ೪/೫ === ==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]] ===== ಪುಟದ ಸ್ಥಿತಿ ===== ; [[ಸಹಾಯ:ಪುಟದ ಸ್ಥಿತಿಗತಿ]] {| |- | colspan="3" | ಸಂಪಾದನೆ ವಿಂಡೋ ಅಡಿಯಲ್ಲಿ ಈ ಸ್ಥಿತಿಗಳನ್ನು ಸೂಚಿಸುವ ಬಟನ್‌ಗಳನ್ನು ನೀವು ಕಾಣಬಹುದು. ಹಿಂದಿನ ಕೊಡುಗೆದಾರರು ಈಗಾಗಲೇ ಪುಟವನ್ನು ಪ್ರೂಫ್ ರೀಡ್ ಮಾಡಿದ್ದರೆ, ಅಗ ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ: |- |style="width: 33%;" | &nbsp; |style="width: 33%;" | [[File:Wikisource page proofread buttons.png|200px|left|ಐದು ಗುಂಡಿಗಳು]] | &nbsp; |- | colspan="3" | ಯಾರೂ ಇನ್ನೂ ಪುಟವನ್ನು ಪ್ರೂಫ್ ರೀಡ್ ಮಾಡದಿದ್ದರೆ, ಬಟನ್‌ಗಳು ಈ ಕೆಳಗಿನಂತೆ ಗೋಚರಿಸುತ್ತವೆ: |- | &nbsp; | [[File:Wikisource page not proofread buttons.png|160px|left|ನಾಲ್ಕು ಗುಂಡಿಗಳು]] | &nbsp; |} {| |- |colspan = 2, align=center| ↗ <span style="background-color:#DDD;">ಪಠ್ಯವಿಲ್ಲದ ಪುಟ</span> | |- |<span style="color:#C00000">''ಖಾಲಿ ಪುಟ'' </span> |→ <span style="background-color: #FFA0A0;">ಪರಿಶೀಲಿಸಲಾಗಿಲ್ಲದ ಪುಟ</span> |→ <span style="background-color: #FFE867;">ಪರಿಶೀಲಿಸಲಾಗಿರುವ ಪುಟ</span> |→ <span style="background-color: #90FF90;">ಪ್ರಕಟಿಸಲಾಗಿರುವ ಪುಟ</span> |- | |colspan = 2, align=center| ↘ <span style="background-color: #B0B0FF;">ಸಮಸ್ಯಾಪೂರ್ಣ ಪುಟ</span> ↗ |} ಪುಟಗಳನ್ನು ಕೆಳಗೆ ತಿಳಿಸಿದ ಹಾಗೆ ವಿಂಗಡಿಸಬೇಕು. * {{page status text|Not proofread}} ಪೂರ್ವನಿಯೋಜಿತ ಮೌಲ್ಯ ಆಗಿರುತ್ತದೆ. ([[:Category:ಪರಿಶೀಲಿಸಲಾಗಿಲ್ಲ|ಎಲ್ಲಾ ಪುಟಗಳನ್ನು ನೋಡಿ.]]) * {{page status text|Proofread}} ಅಂದರೆ ಒಬ್ಬ ಸಂಪಾದಕ ಪರಿಶೀಲಿಸಿರುವ ಪುಟ. ನೀವು ಪುಟವನ್ನು ಅತ್ಯುತ್ತಮ ಸ್ಥಿತಿಗೆ ತಂದಿರುವಿರಿ ಅಲ್ಲಿ ಪಠ್ಯವು ಸ್ಕ್ಯಾನ್‌ಗೆ ಹೊಂದಿಕೆಯಾಗುತ್ತದೆ ಮತ್ತು ಮೂಲಭೂತ ಫಾರ್ಮ್ಯಾಟಿಂಗ್ ಮಾಡಲಾಗುತ್ತದೆ, ಮತ್ತು ನೀವು ಅದರೊಂದಿಗೆ ಸಮಂಜಸವಾಗಿ ಪ್ರೂಫ್‌ರೀಡ್ ಪುಟವು ಓದುಗರಿಗೆ ಪ್ರದರ್ಶಿಸಲು ಸಿದ್ಧಪಡಿಸುವುದು, ಅದರಲ್ಲಿ ಸ್ವಲ್ಪ ದೋಷಗಳಿದ್ದರೂ ಸಹ ಸರಿಪಡಿಸವುದು. ([[:ವರ್ಗ:Proofread|ಎಲ್ಲಾ ಪುಟಗಳನ್ನು ನೋಡಿ.]]) * {{page status text|Validated}} ಅಂದರೆ ಒಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿರುವ ಪುಟ. ಈ ಆಯ್ಕೆ ಪುಟವನ್ನು ಈಗಾಗಲೇ ಮತ್ತೊಬ್ಬರು ಪರಿಶೀಲಿಸಿದ್ದಲ್ಲಿ ಮಾತ್ರ ಲಭ್ಯವಾಗುತ್ತದೆ. ([[:Category:ಪ್ರಕಟಿಸಿದವು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Without text}} ಖಾಲಿ ಪುಟಗಳಿಗಾಗಿದೆ. ಇದನ್ನು ಚಿತ್ರಗಳಿರುವ ಪುಟಗಳಿಗೆ ಬಳಸುವಂತಿಲ್ಲ. ([[:Category:ಪಠ್ಯವಿಲ್ಲದ್ದು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Problematic}} ದೋಷಯುಕ್ತ ಸ್ಕ್ಯಾನ್ ಮಾಡಿದ ಪುಟಗಳು ಅಥವಾ ಸಂಪಾದಕರ ನಡುವೆ ಚರ್ಚೆ ಆಗಬೇಕಿರುವುದನ್ನು ಸೂಚಿಸುತ್ತದೆ. ([[:Category:ಸಮಸ್ಯಾಪೂರ್ಣ|ಎಲ್ಲಾ ಪುಟಗಳನ್ನು ನೋಡಿ.]]) {| class="wikitable sortable" ! Wikipedia User Name !! Assigned book title !! progress !! reviewer notes |- |Vikas shetty14 || ರಂಗನಾಯಕಿ : https://archive.org/details/Ranganaayaki-Maale-1953 | {{inprogress}} <!--replace inprogress with {{done}} when proofreading in done--> | |- |Viveka B G || ಬಹದ್ದೂರ್ ಗಂಡ : https://archive.org/details/in.ernet.dli.2015.363366 | {{inprogress}} <!--replace inprogress with {{done}} when proofreading in done--> | |- |Reema Jalihal || ಚಂದ್ರನಾಥ : https://archive.org/details/Chandranaatha-1944/ | {{inprogress}} <!--replace inprogress with {{done}} when proofreading in done--> | |- |Shyam 2808 || ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673 | {{inprogress}} <!--replace inprogress with {{done}} when proofreading in done--> | ;'''Week5 (20 pages)''':pages (1-5, 7-8) without any or irrelavent text should be marked as '''without text''' , always Join lines in paragraph & when line are joined in a paragraph broken words should be joined [[special:diff/324684|for example ಸರಳು ಗಳಿಗೆ , should be joined as ಸರಳುಗಳಿಗೆ]] , use {{t|rh}} where you need to use both [[special:diff/324685|left and right text alignments]] ---- '''Week6''': |- |Nihar Chakravarti || ಚಿತ್ರಕೂಟ : https://archive.org/details/Chitrakuuta-1954 | {{inprogress}} <!--replace inprogress with {{done}} when proofreading in done--> | |- |Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937 | {{on hold|on hold requested time due to exams}} <!--replace inprogress with {{done}} when proofreading in done--> | |- |Hemanth .03 || {{question|previous task not yet completed}} | {{on hold}}<!--replace inprogress with {{done}} when proofreading in done--> | |- |vyangyeah || {{question|previous task not yet completed}} | {{on hold}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] ej71nd6z5b8zrngfjqqi1lurrg0dy4n 324852 324851 2026-06-16T06:55:32Z A826 6806 /* ವಿಕಿಸೋರ್ಸ್ ಫ್ರೂಫ಼್‌ರೀಡ್ */ 324852 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] [[File:Wikisource -Transclusion Inserting images, lists and table of content.pdf|thumb|Wikisource -Transclusion Inserting images, lists and table of content]] IIIT-HYDERABAD ನವರು ಆಯೋಜಿಸಿರುವ ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] * presentations: https://drive.google.com/drive/folders/1fg5OI5f3e9Akd94YUFb1ltE0-pKSWsPp?usp=sharing === ಸಾಪ್ತಾಹಿಕ ಕಾರ್ಯಯೋಜನೆಗಳು === {| class="wikitable" style="margin: auto;" ! Add or improve data for minimum 50 Writers ! Add or improve data for minimum 50 Books ! Proofread 20 pages ! Upload a assigned PDF ! Create Index Pages ! Upload 5 Index Pages |} == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 ! Week 4 ! Week 5 |- |Vikas R Shetty |Vikas shetty14 | ✓ | ✓ | ✓ |✓ |{{color|red|×}} |- |Hemanth Krishni P |Hemanth .03 |{{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Viveka B G |Viveka B G | ✓ | ✓ | ✓ | ✓ | ✓ |- |Reema Krishna Jalihal |Reema Jalihal | {{color|red|×}} | ✓ | ✓ | ✓ | ✓ |- |Shyama Sundara Shastry K R |Shyam 2808 | {{color|red|×}} |✓ | ✓ | ✓ |{{color|red|×}} |- |Nihar Chakravarti |Nihar Chakravarti | {{color|red|×}} | ✓ | ✓ |{{color|red|×}} |{{color|red|×}} |- |Deepak V S |vyangyeah | {{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Vaishnu Pilar |Vaishnu Pilar | ✓ | ✓ | ✓ | ✓ |{{color|red|×}} |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable sortable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | looks ok, please check text thoroughly there were some hyphen, symbols missing from text. |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | Looks good, please use <code>॥ , ।</code> instead of pipe <nowiki>|, ||</nowiki> |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{done}} <!--replace inprogress with {{done}} when proofreading in done--> | looks good |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | looks good |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | look good |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{on hold}}<!--replace inprogress with {{done}} when proofreading in done--> | asked extension till 22-23 June to complete internship tasks |} === ವಾರ ೪/೫ === ==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]] ===== ಪುಟದ ಸ್ಥಿತಿ ===== ; [[ಸಹಾಯ:ಪುಟದ ಸ್ಥಿತಿಗತಿ]] {| |- | colspan="3" | ಸಂಪಾದನೆ ವಿಂಡೋ ಅಡಿಯಲ್ಲಿ ಈ ಸ್ಥಿತಿಗಳನ್ನು ಸೂಚಿಸುವ ಬಟನ್‌ಗಳನ್ನು ನೀವು ಕಾಣಬಹುದು. ಹಿಂದಿನ ಕೊಡುಗೆದಾರರು ಈಗಾಗಲೇ ಪುಟವನ್ನು ಪ್ರೂಫ್ ರೀಡ್ ಮಾಡಿದ್ದರೆ, ಅಗ ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ: |- |style="width: 33%;" | &nbsp; |style="width: 33%;" | [[File:Wikisource page proofread buttons.png|200px|left|ಐದು ಗುಂಡಿಗಳು]] | &nbsp; |- | colspan="3" | ಯಾರೂ ಇನ್ನೂ ಪುಟವನ್ನು ಪ್ರೂಫ್ ರೀಡ್ ಮಾಡದಿದ್ದರೆ, ಬಟನ್‌ಗಳು ಈ ಕೆಳಗಿನಂತೆ ಗೋಚರಿಸುತ್ತವೆ: |- | &nbsp; | [[File:Wikisource page not proofread buttons.png|160px|left|ನಾಲ್ಕು ಗುಂಡಿಗಳು]] | &nbsp; |} {| |- |colspan = 2, align=center| ↗ <span style="background-color:#DDD;">ಪಠ್ಯವಿಲ್ಲದ ಪುಟ</span> | |- |<span style="color:#C00000">''ಖಾಲಿ ಪುಟ'' </span> |→ <span style="background-color: #FFA0A0;">ಪರಿಶೀಲಿಸಲಾಗಿಲ್ಲದ ಪುಟ</span> |→ <span style="background-color: #FFE867;">ಪರಿಶೀಲಿಸಲಾಗಿರುವ ಪುಟ</span> |→ <span style="background-color: #90FF90;">ಪ್ರಕಟಿಸಲಾಗಿರುವ ಪುಟ</span> |- | |colspan = 2, align=center| ↘ <span style="background-color: #B0B0FF;">ಸಮಸ್ಯಾಪೂರ್ಣ ಪುಟ</span> ↗ |} ಪುಟಗಳನ್ನು ಕೆಳಗೆ ತಿಳಿಸಿದ ಹಾಗೆ ವಿಂಗಡಿಸಬೇಕು. * {{page status text|Not proofread}} ಪೂರ್ವನಿಯೋಜಿತ ಮೌಲ್ಯ ಆಗಿರುತ್ತದೆ. ([[:Category:ಪರಿಶೀಲಿಸಲಾಗಿಲ್ಲ|ಎಲ್ಲಾ ಪುಟಗಳನ್ನು ನೋಡಿ.]]) * {{page status text|Proofread}} ಅಂದರೆ ಒಬ್ಬ ಸಂಪಾದಕ ಪರಿಶೀಲಿಸಿರುವ ಪುಟ. ನೀವು ಪುಟವನ್ನು ಅತ್ಯುತ್ತಮ ಸ್ಥಿತಿಗೆ ತಂದಿರುವಿರಿ ಅಲ್ಲಿ ಪಠ್ಯವು ಸ್ಕ್ಯಾನ್‌ಗೆ ಹೊಂದಿಕೆಯಾಗುತ್ತದೆ ಮತ್ತು ಮೂಲಭೂತ ಫಾರ್ಮ್ಯಾಟಿಂಗ್ ಮಾಡಲಾಗುತ್ತದೆ, ಮತ್ತು ನೀವು ಅದರೊಂದಿಗೆ ಸಮಂಜಸವಾಗಿ ಪ್ರೂಫ್‌ರೀಡ್ ಪುಟವು ಓದುಗರಿಗೆ ಪ್ರದರ್ಶಿಸಲು ಸಿದ್ಧಪಡಿಸುವುದು, ಅದರಲ್ಲಿ ಸ್ವಲ್ಪ ದೋಷಗಳಿದ್ದರೂ ಸಹ ಸರಿಪಡಿಸವುದು. ([[:ವರ್ಗ:Proofread|ಎಲ್ಲಾ ಪುಟಗಳನ್ನು ನೋಡಿ.]]) * {{page status text|Validated}} ಅಂದರೆ ಒಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿರುವ ಪುಟ. ಈ ಆಯ್ಕೆ ಪುಟವನ್ನು ಈಗಾಗಲೇ ಮತ್ತೊಬ್ಬರು ಪರಿಶೀಲಿಸಿದ್ದಲ್ಲಿ ಮಾತ್ರ ಲಭ್ಯವಾಗುತ್ತದೆ. ([[:Category:ಪ್ರಕಟಿಸಿದವು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Without text}} ಖಾಲಿ ಪುಟಗಳಿಗಾಗಿದೆ. ಇದನ್ನು ಚಿತ್ರಗಳಿರುವ ಪುಟಗಳಿಗೆ ಬಳಸುವಂತಿಲ್ಲ. ([[:Category:ಪಠ್ಯವಿಲ್ಲದ್ದು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Problematic}} ದೋಷಯುಕ್ತ ಸ್ಕ್ಯಾನ್ ಮಾಡಿದ ಪುಟಗಳು ಅಥವಾ ಸಂಪಾದಕರ ನಡುವೆ ಚರ್ಚೆ ಆಗಬೇಕಿರುವುದನ್ನು ಸೂಚಿಸುತ್ತದೆ. ([[:Category:ಸಮಸ್ಯಾಪೂರ್ಣ|ಎಲ್ಲಾ ಪುಟಗಳನ್ನು ನೋಡಿ.]]) {| class="wikitable sortable" ! Wikipedia User Name !! Assigned book title !! progress !! reviewer notes |- |Vikas shetty14 || ರಂಗನಾಯಕಿ : https://archive.org/details/Ranganaayaki-Maale-1953 | {{inprogress}} <!--replace inprogress with {{done}} when proofreading in done--> | |- |Viveka B G || ಬಹದ್ದೂರ್ ಗಂಡ : https://archive.org/details/in.ernet.dli.2015.363366 | {{inprogress}} <!--replace inprogress with {{done}} when proofreading in done--> | |- |Reema Jalihal || ಚಂದ್ರನಾಥ : https://archive.org/details/Chandranaatha-1944/ | {{inprogress}} <!--replace inprogress with {{done}} when proofreading in done--> | |- |Shyam 2808 || ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673 | {{inprogress}} <!--replace inprogress with {{done}} when proofreading in done--> | ;'''Week5 (20 pages)''':pages (1-5, 7-8) without any or irrelavent text should be marked as '''without text''' , always Join lines in paragraph & when line are joined in a paragraph broken words should be joined [[special:diff/324684|for example ಸರಳು ಗಳಿಗೆ , should be joined as ಸರಳುಗಳಿಗೆ]] , use {{t|rh}} where you need to use both [[special:diff/324685|left and right text alignments]] ---- '''Week6''': |- |Nihar Chakravarti || ಚಿತ್ರಕೂಟ : https://archive.org/details/Chitrakuuta-1954 | {{inprogress}} <!--replace inprogress with {{done}} when proofreading in done--> | |- |Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937 | {{on hold|on hold requested time due to exams}} <!--replace inprogress with {{done}} when proofreading in done--> | |- |Hemanth .03 || {{question|previous task not yet completed}} | {{on hold}}<!--replace inprogress with {{done}} when proofreading in done--> | |- |vyangyeah || {{question|previous task not yet completed}} | {{on hold}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] 23uwu7xgplt3vyfbf5py88ppgkzojcg 324853 324852 2026-06-16T06:57:40Z A826 6806 324853 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] [[File:Wikisource -Transclusion Inserting images, lists and table of content.pdf|thumb|Wikisource -Transclusion Inserting images, lists and table of content]] IIIT-HYDERABAD ನವರು ಆಯೋಜಿಸಿರುವ ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] * presentations: https://drive.google.com/drive/folders/1fg5OI5f3e9Akd94YUFb1ltE0-pKSWsPp?usp=sharing === ಸಾಪ್ತಾಹಿಕ ಕಾರ್ಯಯೋಜನೆಗಳು === {| class="wikitable" style="margin: auto;" ! Add or improve data for minimum 50 Writers ! Add or improve data for minimum 50 Books ! Proofread 20 pages ! Upload a assigned PDF ! Create Index Pages ! Upload 5 Index Pages |} == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 ! Week 4 ! Week 5 |- |Vikas R Shetty |Vikas shetty14 | ✓ | ✓ | ✓ |✓ |{{color|red|×}} |- |Hemanth Krishni P |Hemanth .03 |{{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Viveka B G |Viveka B G | ✓ | ✓ | ✓ | ✓ | ✓ |- |Reema Krishna Jalihal |Reema Jalihal | {{color|red|×}} | ✓ | ✓ | ✓ | ✓ |- |Shyama Sundara Shastry K R |Shyam 2808 | {{color|red|×}} |✓ | ✓ | ✓ |{{color|red|×}} |- |Nihar Chakravarti |Nihar Chakravarti | {{color|red|×}} | ✓ | ✓ |{{color|red|×}} |{{color|red|×}} |- |Deepak V S |vyangyeah | {{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Vaishnu Pilar |Vaishnu Pilar | ✓ | ✓ | ✓ | ✓ |{{color|red|×}} |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable sortable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | looks ok, please check text thoroughly there were some hyphen, symbols missing from text. |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | Looks good, please use <code>॥ , ।</code> instead of pipe <nowiki>|, ||</nowiki> |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{done}} <!--replace inprogress with {{done}} when proofreading in done--> | looks good |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | looks good |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | look good |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{on hold}}<!--replace inprogress with {{done}} when proofreading in done--> | asked extension till 22-23 June to complete internship tasks |} === ವಾರ ೪/೫ === ==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]] ===== ಪುಟದ ಸ್ಥಿತಿ ===== ; [[ಸಹಾಯ:ಪುಟದ ಸ್ಥಿತಿಗತಿ]] {| |- | colspan="3" | ಸಂಪಾದನೆ ವಿಂಡೋ ಅಡಿಯಲ್ಲಿ ಈ ಸ್ಥಿತಿಗಳನ್ನು ಸೂಚಿಸುವ ಬಟನ್‌ಗಳನ್ನು ನೀವು ಕಾಣಬಹುದು. ಹಿಂದಿನ ಕೊಡುಗೆದಾರರು ಈಗಾಗಲೇ ಪುಟವನ್ನು ಪ್ರೂಫ್ ರೀಡ್ ಮಾಡಿದ್ದರೆ, ಅಗ ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ: |- |style="width: 33%;" | &nbsp; |style="width: 33%;" | [[File:Wikisource page proofread buttons.png|200px|left|ಐದು ಗುಂಡಿಗಳು]] | &nbsp; |- | colspan="3" | ಯಾರೂ ಇನ್ನೂ ಪುಟವನ್ನು ಪ್ರೂಫ್ ರೀಡ್ ಮಾಡದಿದ್ದರೆ, ಬಟನ್‌ಗಳು ಈ ಕೆಳಗಿನಂತೆ ಗೋಚರಿಸುತ್ತವೆ: |- | &nbsp; | [[File:Wikisource page not proofread buttons.png|160px|left|ನಾಲ್ಕು ಗುಂಡಿಗಳು]] | &nbsp; |} {| |- |colspan = 2, align=center| ↗ <span style="background-color:#DDD;">ಪಠ್ಯವಿಲ್ಲದ ಪುಟ</span> | |- |<span style="color:#C00000">''ಖಾಲಿ ಪುಟ'' </span> |→ <span style="background-color: #FFA0A0;">ಪರಿಶೀಲಿಸಲಾಗಿಲ್ಲದ ಪುಟ</span> |→ <span style="background-color: #FFE867;">ಪರಿಶೀಲಿಸಲಾಗಿರುವ ಪುಟ</span> |→ <span style="background-color: #90FF90;">ಪ್ರಕಟಿಸಲಾಗಿರುವ ಪುಟ</span> |- | |colspan = 2, align=center| ↘ <span style="background-color: #B0B0FF;">ಸಮಸ್ಯಾಪೂರ್ಣ ಪುಟ</span> ↗ |} ಪುಟಗಳನ್ನು ಕೆಳಗೆ ತಿಳಿಸಿದ ಹಾಗೆ ವಿಂಗಡಿಸಬೇಕು. * {{page status text|Not proofread}} ಪೂರ್ವನಿಯೋಜಿತ ಮೌಲ್ಯ ಆಗಿರುತ್ತದೆ. ([[:Category:ಪರಿಶೀಲಿಸಲಾಗಿಲ್ಲ|ಎಲ್ಲಾ ಪುಟಗಳನ್ನು ನೋಡಿ.]]) * {{page status text|Proofread}} ಅಂದರೆ ಒಬ್ಬ ಸಂಪಾದಕ ಪರಿಶೀಲಿಸಿರುವ ಪುಟ. ನೀವು ಪುಟವನ್ನು ಅತ್ಯುತ್ತಮ ಸ್ಥಿತಿಗೆ ತಂದಿರುವಿರಿ ಅಲ್ಲಿ ಪಠ್ಯವು ಸ್ಕ್ಯಾನ್‌ಗೆ ಹೊಂದಿಕೆಯಾಗುತ್ತದೆ ಮತ್ತು ಮೂಲಭೂತ ಫಾರ್ಮ್ಯಾಟಿಂಗ್ ಮಾಡಲಾಗುತ್ತದೆ, ಮತ್ತು ನೀವು ಅದರೊಂದಿಗೆ ಸಮಂಜಸವಾಗಿ ಪ್ರೂಫ್‌ರೀಡ್ ಪುಟವು ಓದುಗರಿಗೆ ಪ್ರದರ್ಶಿಸಲು ಸಿದ್ಧಪಡಿಸುವುದು, ಅದರಲ್ಲಿ ಸ್ವಲ್ಪ ದೋಷಗಳಿದ್ದರೂ ಸಹ ಸರಿಪಡಿಸವುದು. ([[:ವರ್ಗ:Proofread|ಎಲ್ಲಾ ಪುಟಗಳನ್ನು ನೋಡಿ.]]) * {{page status text|Validated}} ಅಂದರೆ ಒಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿರುವ ಪುಟ. ಈ ಆಯ್ಕೆ ಪುಟವನ್ನು ಈಗಾಗಲೇ ಮತ್ತೊಬ್ಬರು ಪರಿಶೀಲಿಸಿದ್ದಲ್ಲಿ ಮಾತ್ರ ಲಭ್ಯವಾಗುತ್ತದೆ. ([[:Category:ಪ್ರಕಟಿಸಿದವು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Without text}} ಖಾಲಿ ಪುಟಗಳಿಗಾಗಿದೆ. ಇದನ್ನು ಚಿತ್ರಗಳಿರುವ ಪುಟಗಳಿಗೆ ಬಳಸುವಂತಿಲ್ಲ. ([[:Category:ಪಠ್ಯವಿಲ್ಲದ್ದು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Problematic}} ದೋಷಯುಕ್ತ ಸ್ಕ್ಯಾನ್ ಮಾಡಿದ ಪುಟಗಳು ಅಥವಾ ಸಂಪಾದಕರ ನಡುವೆ ಚರ್ಚೆ ಆಗಬೇಕಿರುವುದನ್ನು ಸೂಚಿಸುತ್ತದೆ. ([[:Category:ಸಮಸ್ಯಾಪೂರ್ಣ|ಎಲ್ಲಾ ಪುಟಗಳನ್ನು ನೋಡಿ.]]) {| class="wikitable sortable" ! Wikipedia User Name !! Assigned book title !! progress !! reviewer notes |- |Vikas shetty14 || ರಂಗನಾಯಕಿ : https://archive.org/details/Ranganaayaki-Maale-1953 | {{inprogress}} <!--replace inprogress with {{done}} when proofreading in done--> | |- |Viveka B G || ಬಹದ್ದೂರ್ ಗಂಡ : https://archive.org/details/in.ernet.dli.2015.363366 | {{inprogress}} <!--replace inprogress with {{done}} when proofreading in done--> | |- |Reema Jalihal || ಚಂದ್ರನಾಥ : https://archive.org/details/Chandranaatha-1944/ | {{inprogress}} <!--replace inprogress with {{done}} when proofreading in done--> | |- |Shyam 2808 || ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673 | {{inprogress}} <!--replace inprogress with {{done}} when proofreading in done--> | ;'''Week5 (20 pages)''':pages (1-5, 7-8) without any or irrelavent text should be marked as '''without text''' , always Join lines in paragraph & when line are joined in a paragraph broken words should be joined [[special:diff/324684|for example ಸರಳು ಗಳಿಗೆ , should be joined as ಸರಳುಗಳಿಗೆ]] , use {{t|rh}} where you need to use both [[special:diff/324685|left and right text alignments]] ---- '''Week6''': |- |Nihar Chakravarti || ಚಿತ್ರಕೂಟ : https://archive.org/details/Chitrakuuta-1954 | {{inprogress}} <!--replace inprogress with {{done}} when proofreading in done--> | |- |Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937 | {{on hold|on hold requested time due to exams}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] 61qw47nmjfal5kee3t6wud31i9evso9 324854 324853 2026-06-16T07:06:27Z A826 6806 /* ವಾರ ೪/೫ */ 324854 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] [[File:Wikisource -Transclusion Inserting images, lists and table of content.pdf|thumb|Wikisource -Transclusion Inserting images, lists and table of content]] IIIT-HYDERABAD ನವರು ಆಯೋಜಿಸಿರುವ ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] * presentations: https://drive.google.com/drive/folders/1fg5OI5f3e9Akd94YUFb1ltE0-pKSWsPp?usp=sharing === ಸಾಪ್ತಾಹಿಕ ಕಾರ್ಯಯೋಜನೆಗಳು === {| class="wikitable" style="margin: auto;" ! Add or improve data for minimum 50 Writers ! Add or improve data for minimum 50 Books ! Proofread 20 pages ! Upload a assigned PDF ! Create Index Pages ! Upload 5 Index Pages |} == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 ! Week 4 ! Week 5 |- |Vikas R Shetty |Vikas shetty14 | ✓ | ✓ | ✓ |✓ |{{color|red|×}} |- |Hemanth Krishni P |Hemanth .03 |{{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Viveka B G |Viveka B G | ✓ | ✓ | ✓ | ✓ | ✓ |- |Reema Krishna Jalihal |Reema Jalihal | {{color|red|×}} | ✓ | ✓ | ✓ | ✓ |- |Shyama Sundara Shastry K R |Shyam 2808 | {{color|red|×}} |✓ | ✓ | ✓ |{{color|red|×}} |- |Nihar Chakravarti |Nihar Chakravarti | {{color|red|×}} | ✓ | ✓ |{{color|red|×}} |{{color|red|×}} |- |Deepak V S |vyangyeah | {{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Vaishnu Pilar |Vaishnu Pilar | ✓ | ✓ | ✓ | ✓ |{{color|red|×}} |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable sortable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | looks ok, please check text thoroughly there were some hyphen, symbols missing from text. |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | Looks good, please use <code>॥ , ।</code> instead of pipe <nowiki>|, ||</nowiki> |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{done}} <!--replace inprogress with {{done}} when proofreading in done--> | looks good |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | looks good |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | look good |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{on hold}}<!--replace inprogress with {{done}} when proofreading in done--> | asked extension till 22-23 June to complete internship tasks |} === ವಾರ ೪/೫ === ==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]] {| class="wikitable sortable" ! Wikipedia User Name !! Assigned book title !! progress !! reviewer notes |- |Vikas shetty14 || ರಂಗನಾಯಕಿ : https://archive.org/details/Ranganaayaki-Maale-1953 | {{inprogress}} <!--replace inprogress with {{done}} when proofreading in done--> | |- |Viveka B G || ಬಹದ್ದೂರ್ ಗಂಡ : https://archive.org/details/in.ernet.dli.2015.363366 | {{inprogress}} <!--replace inprogress with {{done}} when proofreading in done--> | |- |Reema Jalihal || ಚಂದ್ರನಾಥ : https://archive.org/details/Chandranaatha-1944/ | {{inprogress}} <!--replace inprogress with {{done}} when proofreading in done--> | |- |Shyam 2808 || ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673 | {{inprogress}} <!--replace inprogress with {{done}} when proofreading in done--> | ;'''Week5 (20 pages)''':pages (1-5, 7-8) without any or irrelavent text should be marked as '''without text''' , always Join lines in paragraph & when line are joined in a paragraph broken words should be joined [[special:diff/324684|for example ಸರಳು ಗಳಿಗೆ , should be joined as ಸರಳುಗಳಿಗೆ]] , use {{t|rh}} where you need to use both [[special:diff/324685|left and right text alignments]] ---- '''Week6''': |- |Nihar Chakravarti || ಚಿತ್ರಕೂಟ : https://archive.org/details/Chitrakuuta-1954 | {{inprogress}} <!--replace inprogress with {{done}} when proofreading in done--> | |- |Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937 | {{on hold|on hold requested time due to exams}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] bhgh98h6gj4o2a1tfon7btgss4qctt8 324855 324854 2026-06-16T07:06:52Z A826 6806 /* ವಿಕಿಸೋರ್ಸ್ ಫ್ರೂಫ಼್‌ರೀಡ್ */ 324855 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] [[File:Wikisource -Transclusion Inserting images, lists and table of content.pdf|thumb|Wikisource -Transclusion Inserting images, lists and table of content]] IIIT-HYDERABAD ನವರು ಆಯೋಜಿಸಿರುವ ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] * presentations: https://drive.google.com/drive/folders/1fg5OI5f3e9Akd94YUFb1ltE0-pKSWsPp?usp=sharing === ಸಾಪ್ತಾಹಿಕ ಕಾರ್ಯಯೋಜನೆಗಳು === {| class="wikitable" style="margin: auto;" ! Add or improve data for minimum 50 Writers ! Add or improve data for minimum 50 Books ! Proofread 20 pages ! Upload a assigned PDF ! Create Index Pages ! Upload 5 Index Pages |} == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 ! Week 4 ! Week 5 |- |Vikas R Shetty |Vikas shetty14 | ✓ | ✓ | ✓ |✓ |{{color|red|×}} |- |Hemanth Krishni P |Hemanth .03 |{{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Viveka B G |Viveka B G | ✓ | ✓ | ✓ | ✓ | ✓ |- |Reema Krishna Jalihal |Reema Jalihal | {{color|red|×}} | ✓ | ✓ | ✓ | ✓ |- |Shyama Sundara Shastry K R |Shyam 2808 | {{color|red|×}} |✓ | ✓ | ✓ |{{color|red|×}} |- |Nihar Chakravarti |Nihar Chakravarti | {{color|red|×}} | ✓ | ✓ |{{color|red|×}} |{{color|red|×}} |- |Deepak V S |vyangyeah | {{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Vaishnu Pilar |Vaishnu Pilar | ✓ | ✓ | ✓ | ✓ |{{color|red|×}} |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ===== ಪುಟದ ಸ್ಥಿತಿ ===== ; [[ಸಹಾಯ:ಪುಟದ ಸ್ಥಿತಿಗತಿ]] {| |- | colspan="3" | ಸಂಪಾದನೆ ವಿಂಡೋ ಅಡಿಯಲ್ಲಿ ಈ ಸ್ಥಿತಿಗಳನ್ನು ಸೂಚಿಸುವ ಬಟನ್‌ಗಳನ್ನು ನೀವು ಕಾಣಬಹುದು. ಹಿಂದಿನ ಕೊಡುಗೆದಾರರು ಈಗಾಗಲೇ ಪುಟವನ್ನು ಪ್ರೂಫ್ ರೀಡ್ ಮಾಡಿದ್ದರೆ, ಅಗ ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ: |- |style="width: 33%;" | &nbsp; |style="width: 33%;" | [[File:Wikisource page proofread buttons.png|200px|left|ಐದು ಗುಂಡಿಗಳು]] | &nbsp; |- | colspan="3" | ಯಾರೂ ಇನ್ನೂ ಪುಟವನ್ನು ಪ್ರೂಫ್ ರೀಡ್ ಮಾಡದಿದ್ದರೆ, ಬಟನ್‌ಗಳು ಈ ಕೆಳಗಿನಂತೆ ಗೋಚರಿಸುತ್ತವೆ: |- | &nbsp; | [[File:Wikisource page not proofread buttons.png|160px|left|ನಾಲ್ಕು ಗುಂಡಿಗಳು]] | &nbsp; |} {| |- |colspan = 2, align=center| ↗ <span style="background-color:#DDD;">ಪಠ್ಯವಿಲ್ಲದ ಪುಟ</span> | |- |<span style="color:#C00000">''ಖಾಲಿ ಪುಟ'' </span> |→ <span style="background-color: #FFA0A0;">ಪರಿಶೀಲಿಸಲಾಗಿಲ್ಲದ ಪುಟ</span> |→ <span style="background-color: #FFE867;">ಪರಿಶೀಲಿಸಲಾಗಿರುವ ಪುಟ</span> |→ <span style="background-color: #90FF90;">ಪ್ರಕಟಿಸಲಾಗಿರುವ ಪುಟ</span> |- | |colspan = 2, align=center| ↘ <span style="background-color: #B0B0FF;">ಸಮಸ್ಯಾಪೂರ್ಣ ಪುಟ</span> ↗ |} ಪುಟಗಳನ್ನು ಕೆಳಗೆ ತಿಳಿಸಿದ ಹಾಗೆ ವಿಂಗಡಿಸಬೇಕು. * {{page status text|Not proofread}} ಪೂರ್ವನಿಯೋಜಿತ ಮೌಲ್ಯ ಆಗಿರುತ್ತದೆ. ([[:Category:ಪರಿಶೀಲಿಸಲಾಗಿಲ್ಲ|ಎಲ್ಲಾ ಪುಟಗಳನ್ನು ನೋಡಿ.]]) * {{page status text|Proofread}} ಅಂದರೆ ಒಬ್ಬ ಸಂಪಾದಕ ಪರಿಶೀಲಿಸಿರುವ ಪುಟ. ನೀವು ಪುಟವನ್ನು ಅತ್ಯುತ್ತಮ ಸ್ಥಿತಿಗೆ ತಂದಿರುವಿರಿ ಅಲ್ಲಿ ಪಠ್ಯವು ಸ್ಕ್ಯಾನ್‌ಗೆ ಹೊಂದಿಕೆಯಾಗುತ್ತದೆ ಮತ್ತು ಮೂಲಭೂತ ಫಾರ್ಮ್ಯಾಟಿಂಗ್ ಮಾಡಲಾಗುತ್ತದೆ, ಮತ್ತು ನೀವು ಅದರೊಂದಿಗೆ ಸಮಂಜಸವಾಗಿ ಪ್ರೂಫ್‌ರೀಡ್ ಪುಟವು ಓದುಗರಿಗೆ ಪ್ರದರ್ಶಿಸಲು ಸಿದ್ಧಪಡಿಸುವುದು, ಅದರಲ್ಲಿ ಸ್ವಲ್ಪ ದೋಷಗಳಿದ್ದರೂ ಸಹ ಸರಿಪಡಿಸವುದು. ([[:ವರ್ಗ:Proofread|ಎಲ್ಲಾ ಪುಟಗಳನ್ನು ನೋಡಿ.]]) * {{page status text|Validated}} ಅಂದರೆ ಒಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿರುವ ಪುಟ. ಈ ಆಯ್ಕೆ ಪುಟವನ್ನು ಈಗಾಗಲೇ ಮತ್ತೊಬ್ಬರು ಪರಿಶೀಲಿಸಿದ್ದಲ್ಲಿ ಮಾತ್ರ ಲಭ್ಯವಾಗುತ್ತದೆ. ([[:Category:ಪ್ರಕಟಿಸಿದವು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Without text}} ಖಾಲಿ ಪುಟಗಳಿಗಾಗಿದೆ. ಇದನ್ನು ಚಿತ್ರಗಳಿರುವ ಪುಟಗಳಿಗೆ ಬಳಸುವಂತಿಲ್ಲ. ([[:Category:ಪಠ್ಯವಿಲ್ಲದ್ದು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Problematic}} ದೋಷಯುಕ್ತ ಸ್ಕ್ಯಾನ್ ಮಾಡಿದ ಪುಟಗಳು ಅಥವಾ ಸಂಪಾದಕರ ನಡುವೆ ಚರ್ಚೆ ಆಗಬೇಕಿರುವುದನ್ನು ಸೂಚಿಸುತ್ತದೆ. ([[:Category:ಸಮಸ್ಯಾಪೂರ್ಣ|ಎಲ್ಲಾ ಪುಟಗಳನ್ನು ನೋಡಿ.]]) ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable sortable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | looks ok, please check text thoroughly there were some hyphen, symbols missing from text. |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | Looks good, please use <code>॥ , ।</code> instead of pipe <nowiki>|, ||</nowiki> |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{done}} <!--replace inprogress with {{done}} when proofreading in done--> | looks good |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | looks good |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | look good |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{on hold}}<!--replace inprogress with {{done}} when proofreading in done--> | asked extension till 22-23 June to complete internship tasks |} === ವಾರ ೪/೫ === ==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]] {| class="wikitable sortable" ! Wikipedia User Name !! Assigned book title !! progress !! reviewer notes |- |Vikas shetty14 || ರಂಗನಾಯಕಿ : https://archive.org/details/Ranganaayaki-Maale-1953 | {{inprogress}} <!--replace inprogress with {{done}} when proofreading in done--> | |- |Viveka B G || ಬಹದ್ದೂರ್ ಗಂಡ : https://archive.org/details/in.ernet.dli.2015.363366 | {{inprogress}} <!--replace inprogress with {{done}} when proofreading in done--> | |- |Reema Jalihal || ಚಂದ್ರನಾಥ : https://archive.org/details/Chandranaatha-1944/ | {{inprogress}} <!--replace inprogress with {{done}} when proofreading in done--> | |- |Shyam 2808 || ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673 | {{inprogress}} <!--replace inprogress with {{done}} when proofreading in done--> | ;'''Week5 (20 pages)''':pages (1-5, 7-8) without any or irrelavent text should be marked as '''without text''' , always Join lines in paragraph & when line are joined in a paragraph broken words should be joined [[special:diff/324684|for example ಸರಳು ಗಳಿಗೆ , should be joined as ಸರಳುಗಳಿಗೆ]] , use {{t|rh}} where you need to use both [[special:diff/324685|left and right text alignments]] ---- '''Week6''': |- |Nihar Chakravarti || ಚಿತ್ರಕೂಟ : https://archive.org/details/Chitrakuuta-1954 | {{inprogress}} <!--replace inprogress with {{done}} when proofreading in done--> | |- |Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937 | {{on hold|on hold requested time due to exams}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] myi1e7vvzfusmmaisofhmqqysye1ckx 324883 324855 2026-06-16T08:22:17Z A826 6806 /* ವಿಕಿಸೋರ್ಸ್ ಪುಸ್ತಕ ಅಪ್ಲೋಡ್ */ 324883 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] [[File:Wikisource -Transclusion Inserting images, lists and table of content.pdf|thumb|Wikisource -Transclusion Inserting images, lists and table of content]] IIIT-HYDERABAD ನವರು ಆಯೋಜಿಸಿರುವ ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] * presentations: https://drive.google.com/drive/folders/1fg5OI5f3e9Akd94YUFb1ltE0-pKSWsPp?usp=sharing === ಸಾಪ್ತಾಹಿಕ ಕಾರ್ಯಯೋಜನೆಗಳು === {| class="wikitable" style="margin: auto;" ! Add or improve data for minimum 50 Writers ! Add or improve data for minimum 50 Books ! Proofread 20 pages ! Upload a assigned PDF ! Create Index Pages ! Upload 5 Index Pages |} == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 ! Week 4 ! Week 5 |- |Vikas R Shetty |Vikas shetty14 | ✓ | ✓ | ✓ |✓ |{{color|red|×}} |- |Hemanth Krishni P |Hemanth .03 |{{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Viveka B G |Viveka B G | ✓ | ✓ | ✓ | ✓ | ✓ |- |Reema Krishna Jalihal |Reema Jalihal | {{color|red|×}} | ✓ | ✓ | ✓ | ✓ |- |Shyama Sundara Shastry K R |Shyam 2808 | {{color|red|×}} |✓ | ✓ | ✓ |{{color|red|×}} |- |Nihar Chakravarti |Nihar Chakravarti | {{color|red|×}} | ✓ | ✓ |{{color|red|×}} |{{color|red|×}} |- |Deepak V S |vyangyeah | {{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Vaishnu Pilar |Vaishnu Pilar | ✓ | ✓ | ✓ | ✓ |{{color|red|×}} |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ===== ಪುಟದ ಸ್ಥಿತಿ ===== ; [[ಸಹಾಯ:ಪುಟದ ಸ್ಥಿತಿಗತಿ]] {| |- | colspan="3" | ಸಂಪಾದನೆ ವಿಂಡೋ ಅಡಿಯಲ್ಲಿ ಈ ಸ್ಥಿತಿಗಳನ್ನು ಸೂಚಿಸುವ ಬಟನ್‌ಗಳನ್ನು ನೀವು ಕಾಣಬಹುದು. ಹಿಂದಿನ ಕೊಡುಗೆದಾರರು ಈಗಾಗಲೇ ಪುಟವನ್ನು ಪ್ರೂಫ್ ರೀಡ್ ಮಾಡಿದ್ದರೆ, ಅಗ ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ: |- |style="width: 33%;" | &nbsp; |style="width: 33%;" | [[File:Wikisource page proofread buttons.png|200px|left|ಐದು ಗುಂಡಿಗಳು]] | &nbsp; |- | colspan="3" | ಯಾರೂ ಇನ್ನೂ ಪುಟವನ್ನು ಪ್ರೂಫ್ ರೀಡ್ ಮಾಡದಿದ್ದರೆ, ಬಟನ್‌ಗಳು ಈ ಕೆಳಗಿನಂತೆ ಗೋಚರಿಸುತ್ತವೆ: |- | &nbsp; | [[File:Wikisource page not proofread buttons.png|160px|left|ನಾಲ್ಕು ಗುಂಡಿಗಳು]] | &nbsp; |} {| |- |colspan = 2, align=center| ↗ <span style="background-color:#DDD;">ಪಠ್ಯವಿಲ್ಲದ ಪುಟ</span> | |- |<span style="color:#C00000">''ಖಾಲಿ ಪುಟ'' </span> |→ <span style="background-color: #FFA0A0;">ಪರಿಶೀಲಿಸಲಾಗಿಲ್ಲದ ಪುಟ</span> |→ <span style="background-color: #FFE867;">ಪರಿಶೀಲಿಸಲಾಗಿರುವ ಪುಟ</span> |→ <span style="background-color: #90FF90;">ಪ್ರಕಟಿಸಲಾಗಿರುವ ಪುಟ</span> |- | |colspan = 2, align=center| ↘ <span style="background-color: #B0B0FF;">ಸಮಸ್ಯಾಪೂರ್ಣ ಪುಟ</span> ↗ |} ಪುಟಗಳನ್ನು ಕೆಳಗೆ ತಿಳಿಸಿದ ಹಾಗೆ ವಿಂಗಡಿಸಬೇಕು. * {{page status text|Not proofread}} ಪೂರ್ವನಿಯೋಜಿತ ಮೌಲ್ಯ ಆಗಿರುತ್ತದೆ. ([[:Category:ಪರಿಶೀಲಿಸಲಾಗಿಲ್ಲ|ಎಲ್ಲಾ ಪುಟಗಳನ್ನು ನೋಡಿ.]]) * {{page status text|Proofread}} ಅಂದರೆ ಒಬ್ಬ ಸಂಪಾದಕ ಪರಿಶೀಲಿಸಿರುವ ಪುಟ. ನೀವು ಪುಟವನ್ನು ಅತ್ಯುತ್ತಮ ಸ್ಥಿತಿಗೆ ತಂದಿರುವಿರಿ ಅಲ್ಲಿ ಪಠ್ಯವು ಸ್ಕ್ಯಾನ್‌ಗೆ ಹೊಂದಿಕೆಯಾಗುತ್ತದೆ ಮತ್ತು ಮೂಲಭೂತ ಫಾರ್ಮ್ಯಾಟಿಂಗ್ ಮಾಡಲಾಗುತ್ತದೆ, ಮತ್ತು ನೀವು ಅದರೊಂದಿಗೆ ಸಮಂಜಸವಾಗಿ ಪ್ರೂಫ್‌ರೀಡ್ ಪುಟವು ಓದುಗರಿಗೆ ಪ್ರದರ್ಶಿಸಲು ಸಿದ್ಧಪಡಿಸುವುದು, ಅದರಲ್ಲಿ ಸ್ವಲ್ಪ ದೋಷಗಳಿದ್ದರೂ ಸಹ ಸರಿಪಡಿಸವುದು. ([[:ವರ್ಗ:Proofread|ಎಲ್ಲಾ ಪುಟಗಳನ್ನು ನೋಡಿ.]]) * {{page status text|Validated}} ಅಂದರೆ ಒಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿರುವ ಪುಟ. ಈ ಆಯ್ಕೆ ಪುಟವನ್ನು ಈಗಾಗಲೇ ಮತ್ತೊಬ್ಬರು ಪರಿಶೀಲಿಸಿದ್ದಲ್ಲಿ ಮಾತ್ರ ಲಭ್ಯವಾಗುತ್ತದೆ. ([[:Category:ಪ್ರಕಟಿಸಿದವು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Without text}} ಖಾಲಿ ಪುಟಗಳಿಗಾಗಿದೆ. ಇದನ್ನು ಚಿತ್ರಗಳಿರುವ ಪುಟಗಳಿಗೆ ಬಳಸುವಂತಿಲ್ಲ. ([[:Category:ಪಠ್ಯವಿಲ್ಲದ್ದು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Problematic}} ದೋಷಯುಕ್ತ ಸ್ಕ್ಯಾನ್ ಮಾಡಿದ ಪುಟಗಳು ಅಥವಾ ಸಂಪಾದಕರ ನಡುವೆ ಚರ್ಚೆ ಆಗಬೇಕಿರುವುದನ್ನು ಸೂಚಿಸುತ್ತದೆ. ([[:Category:ಸಮಸ್ಯಾಪೂರ್ಣ|ಎಲ್ಲಾ ಪುಟಗಳನ್ನು ನೋಡಿ.]]) ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable sortable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | looks ok, please check text thoroughly there were some hyphen, symbols missing from text. |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | Looks good, please use <code>॥ , ।</code> instead of pipe <nowiki>|, ||</nowiki> |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{done}} <!--replace inprogress with {{done}} when proofreading in done--> | looks good |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | looks good |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | look good |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{on hold}}<!--replace inprogress with {{done}} when proofreading in done--> | asked extension till 22-23 June to complete internship tasks |} === ವಾರ ೪/೫ === ==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]] {| class="wikitable sortable" ! Wikipedia User Name !! Assigned book title !! progress !! reviewer notes |- |Vikas shetty14 || ರಂಗನಾಯಕಿ : https://archive.org/details/Ranganaayaki-Maale-1953 | {{inprogress}} <!--replace inprogress with {{done}} when proofreading in done--> | |- |Viveka B G || ಬಹದ್ದೂರ್ ಗಂಡ : https://archive.org/details/in.ernet.dli.2015.363366 | {{inprogress}} <!--replace inprogress with {{done}} when proofreading in done--> | |- |Reema Jalihal || ಚಂದ್ರನಾಥ : https://archive.org/details/Chandranaatha-1944/ | {{inprogress}} <!--replace inprogress with {{done}} when proofreading in done--> | |- |Shyam 2808 || ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673 | {{inprogress}} <!--replace inprogress with {{done}} when proofreading in done--> | ;'''Week5 (20 pages)''':pages (1-5, 7-8) without any or irrelavent text should be marked as '''without text''' , always Join lines in paragraph & when line are joined in a paragraph broken words should be joined [[special:diff/324684|for example ಸರಳು ಗಳಿಗೆ , should be joined as ಸರಳುಗಳಿಗೆ]] , use {{t|rh}} where you need to use both [[special:diff/324685|left and right text alignments]] |- |Nihar Chakravarti || ಚಿತ್ರಕೂಟ : https://archive.org/details/Chitrakuuta-1954 | {{inprogress}} <!--replace inprogress with {{done}} when proofreading in done--> | ;'''Week5 (20 pages)''': when line are joined in a paragraph broken words should be joined, example [[special:diff/324883]] |- |Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937 | {{on hold|on hold requested time due to exams}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] ll5yey5u9ddnjmzvtmznb6kemow63dy 324888 324883 2026-06-16T08:33:34Z A826 6806 /* ವಿಕಿಸೋರ್ಸ್ ಪುಸ್ತಕ ಅಪ್ಲೋಡ್ */ 324888 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] [[File:Wikisource -Transclusion Inserting images, lists and table of content.pdf|thumb|Wikisource -Transclusion Inserting images, lists and table of content]] IIIT-HYDERABAD ನವರು ಆಯೋಜಿಸಿರುವ ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] * presentations: https://drive.google.com/drive/folders/1fg5OI5f3e9Akd94YUFb1ltE0-pKSWsPp?usp=sharing === ಸಾಪ್ತಾಹಿಕ ಕಾರ್ಯಯೋಜನೆಗಳು === {| class="wikitable" style="margin: auto;" ! Add or improve data for minimum 50 Writers ! Add or improve data for minimum 50 Books ! Proofread 20 pages ! Upload a assigned PDF ! Create Index Pages ! Upload 5 Index Pages |} == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 ! Week 4 ! Week 5 |- |Vikas R Shetty |Vikas shetty14 | ✓ | ✓ | ✓ |✓ |{{color|red|×}} |- |Hemanth Krishni P |Hemanth .03 |{{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Viveka B G |Viveka B G | ✓ | ✓ | ✓ | ✓ | ✓ |- |Reema Krishna Jalihal |Reema Jalihal | {{color|red|×}} | ✓ | ✓ | ✓ | ✓ |- |Shyama Sundara Shastry K R |Shyam 2808 | {{color|red|×}} |✓ | ✓ | ✓ |{{color|red|×}} |- |Nihar Chakravarti |Nihar Chakravarti | {{color|red|×}} | ✓ | ✓ |{{color|red|×}} |{{color|red|×}} |- |Deepak V S |vyangyeah | {{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Vaishnu Pilar |Vaishnu Pilar | ✓ | ✓ | ✓ | ✓ |{{color|red|×}} |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ===== ಪುಟದ ಸ್ಥಿತಿ ===== ; [[ಸಹಾಯ:ಪುಟದ ಸ್ಥಿತಿಗತಿ]] {| |- | colspan="3" | ಸಂಪಾದನೆ ವಿಂಡೋ ಅಡಿಯಲ್ಲಿ ಈ ಸ್ಥಿತಿಗಳನ್ನು ಸೂಚಿಸುವ ಬಟನ್‌ಗಳನ್ನು ನೀವು ಕಾಣಬಹುದು. ಹಿಂದಿನ ಕೊಡುಗೆದಾರರು ಈಗಾಗಲೇ ಪುಟವನ್ನು ಪ್ರೂಫ್ ರೀಡ್ ಮಾಡಿದ್ದರೆ, ಅಗ ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ: |- |style="width: 33%;" | &nbsp; |style="width: 33%;" | [[File:Wikisource page proofread buttons.png|200px|left|ಐದು ಗುಂಡಿಗಳು]] | &nbsp; |- | colspan="3" | ಯಾರೂ ಇನ್ನೂ ಪುಟವನ್ನು ಪ್ರೂಫ್ ರೀಡ್ ಮಾಡದಿದ್ದರೆ, ಬಟನ್‌ಗಳು ಈ ಕೆಳಗಿನಂತೆ ಗೋಚರಿಸುತ್ತವೆ: |- | &nbsp; | [[File:Wikisource page not proofread buttons.png|160px|left|ನಾಲ್ಕು ಗುಂಡಿಗಳು]] | &nbsp; |} {| |- |colspan = 2, align=center| ↗ <span style="background-color:#DDD;">ಪಠ್ಯವಿಲ್ಲದ ಪುಟ</span> | |- |<span style="color:#C00000">''ಖಾಲಿ ಪುಟ'' </span> |→ <span style="background-color: #FFA0A0;">ಪರಿಶೀಲಿಸಲಾಗಿಲ್ಲದ ಪುಟ</span> |→ <span style="background-color: #FFE867;">ಪರಿಶೀಲಿಸಲಾಗಿರುವ ಪುಟ</span> |→ <span style="background-color: #90FF90;">ಪ್ರಕಟಿಸಲಾಗಿರುವ ಪುಟ</span> |- | |colspan = 2, align=center| ↘ <span style="background-color: #B0B0FF;">ಸಮಸ್ಯಾಪೂರ್ಣ ಪುಟ</span> ↗ |} ಪುಟಗಳನ್ನು ಕೆಳಗೆ ತಿಳಿಸಿದ ಹಾಗೆ ವಿಂಗಡಿಸಬೇಕು. * {{page status text|Not proofread}} ಪೂರ್ವನಿಯೋಜಿತ ಮೌಲ್ಯ ಆಗಿರುತ್ತದೆ. ([[:Category:ಪರಿಶೀಲಿಸಲಾಗಿಲ್ಲ|ಎಲ್ಲಾ ಪುಟಗಳನ್ನು ನೋಡಿ.]]) * {{page status text|Proofread}} ಅಂದರೆ ಒಬ್ಬ ಸಂಪಾದಕ ಪರಿಶೀಲಿಸಿರುವ ಪುಟ. ನೀವು ಪುಟವನ್ನು ಅತ್ಯುತ್ತಮ ಸ್ಥಿತಿಗೆ ತಂದಿರುವಿರಿ ಅಲ್ಲಿ ಪಠ್ಯವು ಸ್ಕ್ಯಾನ್‌ಗೆ ಹೊಂದಿಕೆಯಾಗುತ್ತದೆ ಮತ್ತು ಮೂಲಭೂತ ಫಾರ್ಮ್ಯಾಟಿಂಗ್ ಮಾಡಲಾಗುತ್ತದೆ, ಮತ್ತು ನೀವು ಅದರೊಂದಿಗೆ ಸಮಂಜಸವಾಗಿ ಪ್ರೂಫ್‌ರೀಡ್ ಪುಟವು ಓದುಗರಿಗೆ ಪ್ರದರ್ಶಿಸಲು ಸಿದ್ಧಪಡಿಸುವುದು, ಅದರಲ್ಲಿ ಸ್ವಲ್ಪ ದೋಷಗಳಿದ್ದರೂ ಸಹ ಸರಿಪಡಿಸವುದು. ([[:ವರ್ಗ:Proofread|ಎಲ್ಲಾ ಪುಟಗಳನ್ನು ನೋಡಿ.]]) * {{page status text|Validated}} ಅಂದರೆ ಒಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿರುವ ಪುಟ. ಈ ಆಯ್ಕೆ ಪುಟವನ್ನು ಈಗಾಗಲೇ ಮತ್ತೊಬ್ಬರು ಪರಿಶೀಲಿಸಿದ್ದಲ್ಲಿ ಮಾತ್ರ ಲಭ್ಯವಾಗುತ್ತದೆ. ([[:Category:ಪ್ರಕಟಿಸಿದವು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Without text}} ಖಾಲಿ ಪುಟಗಳಿಗಾಗಿದೆ. ಇದನ್ನು ಚಿತ್ರಗಳಿರುವ ಪುಟಗಳಿಗೆ ಬಳಸುವಂತಿಲ್ಲ. ([[:Category:ಪಠ್ಯವಿಲ್ಲದ್ದು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Problematic}} ದೋಷಯುಕ್ತ ಸ್ಕ್ಯಾನ್ ಮಾಡಿದ ಪುಟಗಳು ಅಥವಾ ಸಂಪಾದಕರ ನಡುವೆ ಚರ್ಚೆ ಆಗಬೇಕಿರುವುದನ್ನು ಸೂಚಿಸುತ್ತದೆ. ([[:Category:ಸಮಸ್ಯಾಪೂರ್ಣ|ಎಲ್ಲಾ ಪುಟಗಳನ್ನು ನೋಡಿ.]]) ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable sortable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | looks ok, please check text thoroughly there were some hyphen, symbols missing from text. |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | Looks good, please use <code>॥ , ।</code> instead of pipe <nowiki>|, ||</nowiki> |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{done}} <!--replace inprogress with {{done}} when proofreading in done--> | looks good |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | looks good |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | look good |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{on hold}}<!--replace inprogress with {{done}} when proofreading in done--> | asked extension till 22-23 June to complete internship tasks |} === ವಾರ ೪/೫ === ==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]] {| class="wikitable sortable" ! Wikipedia User Name !! Assigned book title !! progress !! reviewer notes |- |Vikas shetty14 || ರಂಗನಾಯಕಿ : https://archive.org/details/Ranganaayaki-Maale-1953 | {{inprogress}} <!--replace inprogress with {{done}} when proofreading in done--> | |- |Viveka B G || ಬಹದ್ದೂರ್ ಗಂಡ : https://archive.org/details/in.ernet.dli.2015.363366 | {{inprogress}} <!--replace inprogress with {{done}} when proofreading in done--> | |- |Reema Jalihal || ಚಂದ್ರನಾಥ : https://archive.org/details/Chandranaatha-1944/ | {{inprogress}} <!--replace inprogress with {{done}} when proofreading in done--> |Transcribing looks ok, please kannada number in page number field instead of english numbers, It would be nice if you had worked on [[Index:ಚಂದ್ರನಾಥ.pdf]] |- |Shyam 2808 || ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673 | {{inprogress}} <!--replace inprogress with {{done}} when proofreading in done--> | ;'''Week5 (20 pages)''':pages (1-5, 7-8) without any or irrelavent text should be marked as '''without text''' , always Join lines in paragraph & when line are joined in a paragraph broken words should be joined [[special:diff/324684|for example ಸರಳು ಗಳಿಗೆ , should be joined as ಸರಳುಗಳಿಗೆ]] , use {{t|rh}} where you need to use both [[special:diff/324685|left and right text alignments]] |- |Nihar Chakravarti || ಚಿತ್ರಕೂಟ : https://archive.org/details/Chitrakuuta-1954 | {{inprogress}} <!--replace inprogress with {{done}} when proofreading in done--> | ;'''Week5 (20 pages)''': when line are joined in a paragraph broken words should be joined, example [[special:diff/324883]] |- |Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937 | {{on hold|on hold requested time due to exams}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] lhmrfdddd7amfbpc7kooc9ahzlqgg23 324891 324888 2026-06-16T08:46:20Z A826 6806 /* ವಿಕಿಸೋರ್ಸ್ ಪುಸ್ತಕ ಅಪ್ಲೋಡ್ */ 324891 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] [[File:Wikisource -Transclusion Inserting images, lists and table of content.pdf|thumb|Wikisource -Transclusion Inserting images, lists and table of content]] IIIT-HYDERABAD ನವರು ಆಯೋಜಿಸಿರುವ ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] * presentations: https://drive.google.com/drive/folders/1fg5OI5f3e9Akd94YUFb1ltE0-pKSWsPp?usp=sharing === ಸಾಪ್ತಾಹಿಕ ಕಾರ್ಯಯೋಜನೆಗಳು === {| class="wikitable" style="margin: auto;" ! Add or improve data for minimum 50 Writers ! Add or improve data for minimum 50 Books ! Proofread 20 pages ! Upload a assigned PDF ! Create Index Pages ! Upload 5 Index Pages |} == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 ! Week 4 ! Week 5 |- |Vikas R Shetty |Vikas shetty14 | ✓ | ✓ | ✓ |✓ |{{color|red|×}} |- |Hemanth Krishni P |Hemanth .03 |{{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Viveka B G |Viveka B G | ✓ | ✓ | ✓ | ✓ | ✓ |- |Reema Krishna Jalihal |Reema Jalihal | {{color|red|×}} | ✓ | ✓ | ✓ | ✓ |- |Shyama Sundara Shastry K R |Shyam 2808 | {{color|red|×}} |✓ | ✓ | ✓ |{{color|red|×}} |- |Nihar Chakravarti |Nihar Chakravarti | {{color|red|×}} | ✓ | ✓ |{{color|red|×}} |{{color|red|×}} |- |Deepak V S |vyangyeah | {{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Vaishnu Pilar |Vaishnu Pilar | ✓ | ✓ | ✓ | ✓ |{{color|red|×}} |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ===== ಪುಟದ ಸ್ಥಿತಿ ===== ; [[ಸಹಾಯ:ಪುಟದ ಸ್ಥಿತಿಗತಿ]] {| |- | colspan="3" | ಸಂಪಾದನೆ ವಿಂಡೋ ಅಡಿಯಲ್ಲಿ ಈ ಸ್ಥಿತಿಗಳನ್ನು ಸೂಚಿಸುವ ಬಟನ್‌ಗಳನ್ನು ನೀವು ಕಾಣಬಹುದು. ಹಿಂದಿನ ಕೊಡುಗೆದಾರರು ಈಗಾಗಲೇ ಪುಟವನ್ನು ಪ್ರೂಫ್ ರೀಡ್ ಮಾಡಿದ್ದರೆ, ಅಗ ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ: |- |style="width: 33%;" | &nbsp; |style="width: 33%;" | [[File:Wikisource page proofread buttons.png|200px|left|ಐದು ಗುಂಡಿಗಳು]] | &nbsp; |- | colspan="3" | ಯಾರೂ ಇನ್ನೂ ಪುಟವನ್ನು ಪ್ರೂಫ್ ರೀಡ್ ಮಾಡದಿದ್ದರೆ, ಬಟನ್‌ಗಳು ಈ ಕೆಳಗಿನಂತೆ ಗೋಚರಿಸುತ್ತವೆ: |- | &nbsp; | [[File:Wikisource page not proofread buttons.png|160px|left|ನಾಲ್ಕು ಗುಂಡಿಗಳು]] | &nbsp; |} {| |- |colspan = 2, align=center| ↗ <span style="background-color:#DDD;">ಪಠ್ಯವಿಲ್ಲದ ಪುಟ</span> | |- |<span style="color:#C00000">''ಖಾಲಿ ಪುಟ'' </span> |→ <span style="background-color: #FFA0A0;">ಪರಿಶೀಲಿಸಲಾಗಿಲ್ಲದ ಪುಟ</span> |→ <span style="background-color: #FFE867;">ಪರಿಶೀಲಿಸಲಾಗಿರುವ ಪುಟ</span> |→ <span style="background-color: #90FF90;">ಪ್ರಕಟಿಸಲಾಗಿರುವ ಪುಟ</span> |- | |colspan = 2, align=center| ↘ <span style="background-color: #B0B0FF;">ಸಮಸ್ಯಾಪೂರ್ಣ ಪುಟ</span> ↗ |} ಪುಟಗಳನ್ನು ಕೆಳಗೆ ತಿಳಿಸಿದ ಹಾಗೆ ವಿಂಗಡಿಸಬೇಕು. * {{page status text|Not proofread}} ಪೂರ್ವನಿಯೋಜಿತ ಮೌಲ್ಯ ಆಗಿರುತ್ತದೆ. ([[:Category:ಪರಿಶೀಲಿಸಲಾಗಿಲ್ಲ|ಎಲ್ಲಾ ಪುಟಗಳನ್ನು ನೋಡಿ.]]) * {{page status text|Proofread}} ಅಂದರೆ ಒಬ್ಬ ಸಂಪಾದಕ ಪರಿಶೀಲಿಸಿರುವ ಪುಟ. ನೀವು ಪುಟವನ್ನು ಅತ್ಯುತ್ತಮ ಸ್ಥಿತಿಗೆ ತಂದಿರುವಿರಿ ಅಲ್ಲಿ ಪಠ್ಯವು ಸ್ಕ್ಯಾನ್‌ಗೆ ಹೊಂದಿಕೆಯಾಗುತ್ತದೆ ಮತ್ತು ಮೂಲಭೂತ ಫಾರ್ಮ್ಯಾಟಿಂಗ್ ಮಾಡಲಾಗುತ್ತದೆ, ಮತ್ತು ನೀವು ಅದರೊಂದಿಗೆ ಸಮಂಜಸವಾಗಿ ಪ್ರೂಫ್‌ರೀಡ್ ಪುಟವು ಓದುಗರಿಗೆ ಪ್ರದರ್ಶಿಸಲು ಸಿದ್ಧಪಡಿಸುವುದು, ಅದರಲ್ಲಿ ಸ್ವಲ್ಪ ದೋಷಗಳಿದ್ದರೂ ಸಹ ಸರಿಪಡಿಸವುದು. ([[:ವರ್ಗ:Proofread|ಎಲ್ಲಾ ಪುಟಗಳನ್ನು ನೋಡಿ.]]) * {{page status text|Validated}} ಅಂದರೆ ಒಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿರುವ ಪುಟ. ಈ ಆಯ್ಕೆ ಪುಟವನ್ನು ಈಗಾಗಲೇ ಮತ್ತೊಬ್ಬರು ಪರಿಶೀಲಿಸಿದ್ದಲ್ಲಿ ಮಾತ್ರ ಲಭ್ಯವಾಗುತ್ತದೆ. ([[:Category:ಪ್ರಕಟಿಸಿದವು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Without text}} ಖಾಲಿ ಪುಟಗಳಿಗಾಗಿದೆ. ಇದನ್ನು ಚಿತ್ರಗಳಿರುವ ಪುಟಗಳಿಗೆ ಬಳಸುವಂತಿಲ್ಲ. ([[:Category:ಪಠ್ಯವಿಲ್ಲದ್ದು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Problematic}} ದೋಷಯುಕ್ತ ಸ್ಕ್ಯಾನ್ ಮಾಡಿದ ಪುಟಗಳು ಅಥವಾ ಸಂಪಾದಕರ ನಡುವೆ ಚರ್ಚೆ ಆಗಬೇಕಿರುವುದನ್ನು ಸೂಚಿಸುತ್ತದೆ. ([[:Category:ಸಮಸ್ಯಾಪೂರ್ಣ|ಎಲ್ಲಾ ಪುಟಗಳನ್ನು ನೋಡಿ.]]) ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable sortable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | looks ok, please check text thoroughly there were some hyphen, symbols missing from text. |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | Looks good, please use <code>॥ , ।</code> instead of pipe <nowiki>|, ||</nowiki> |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{done}} <!--replace inprogress with {{done}} when proofreading in done--> | looks good |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | looks good |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | look good |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{on hold}}<!--replace inprogress with {{done}} when proofreading in done--> | asked extension till 22-23 June to complete internship tasks |} === ವಾರ ೪/೫ === ==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]] {| class="wikitable sortable" ! Wikipedia User Name !! Assigned book title !! progress !! reviewer notes |- |Vikas shetty14 || ರಂಗನಾಯಕಿ : https://archive.org/details/Ranganaayaki-Maale-1953 | {{inprogress}} <!--replace inprogress with {{done}} when proofreading in done--> | |- |Viveka B G || ಬಹದ್ದೂರ್ ಗಂಡ : https://archive.org/details/in.ernet.dli.2015.363366 | {{inprogress}} <!--replace inprogress with {{done}} when proofreading in done--> | https://kn.wikisource.org/w/index.php?title=ಪುಟ:ಬಹದ್ದೂರ_ಗಂಡ.pdf/೧೭&diff=324890&oldid=324889 , please ಂ (control + m in lipyantara) in words instead of o/0 |- |Reema Jalihal || ಚಂದ್ರನಾಥ : https://archive.org/details/Chandranaatha-1944/ | {{inprogress}} <!--replace inprogress with {{done}} when proofreading in done--> |Transcribing looks ok, please kannada number in page number field instead of english numbers, It would be nice if you had worked on [[Index:ಚಂದ್ರನಾಥ.pdf]] |- |Shyam 2808 || ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673 | {{inprogress}} <!--replace inprogress with {{done}} when proofreading in done--> | ;'''Week5 (20 pages)''':pages (1-5, 7-8) without any or irrelavent text should be marked as '''without text''' , always Join lines in paragraph & when line are joined in a paragraph broken words should be joined [[special:diff/324684|for example ಸರಳು ಗಳಿಗೆ , should be joined as ಸರಳುಗಳಿಗೆ]] , use {{t|rh}} where you need to use both [[special:diff/324685|left and right text alignments]] |- |Nihar Chakravarti || ಚಿತ್ರಕೂಟ : https://archive.org/details/Chitrakuuta-1954 | {{inprogress}} <!--replace inprogress with {{done}} when proofreading in done--> | ;'''Week5 (20 pages)''': when line are joined in a paragraph broken words should be joined, example [[special:diff/324883]] |- |Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937 | {{on hold|on hold requested time due to exams}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] mscnu06r4oaho5gqrvnq4dvbh8c34oi 324892 324891 2026-06-16T08:49:14Z A826 6806 324892 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] [[File:Wikisource -Transclusion Inserting images, lists and table of content.pdf|thumb|Wikisource -Transclusion Inserting images, lists and table of content]] IIIT-HYDERABAD ನವರು ಆಯೋಜಿಸಿರುವ ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] * presentations: https://drive.google.com/drive/folders/1fg5OI5f3e9Akd94YUFb1ltE0-pKSWsPp?usp=sharing == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 ! Week 4 ! Week 5 |- |Vikas R Shetty |Vikas shetty14 | ✓ | ✓ | ✓ |✓ |{{color|red|×}} |- |Hemanth Krishni P |Hemanth .03 |{{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Viveka B G |Viveka B G | ✓ | ✓ | ✓ | ✓ | ✓ |- |Reema Krishna Jalihal |Reema Jalihal | {{color|red|×}} | ✓ | ✓ | ✓ | ✓ |- |Shyama Sundara Shastry K R |Shyam 2808 | {{color|red|×}} |✓ | ✓ | ✓ |{{color|red|×}} |- |Nihar Chakravarti |Nihar Chakravarti | {{color|red|×}} | ✓ | ✓ |{{color|red|×}} |{{color|red|×}} |- |Deepak V S |vyangyeah | {{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Vaishnu Pilar |Vaishnu Pilar | ✓ | ✓ | ✓ | ✓ |{{color|red|×}} |} == ಪಠ್ಯಕ್ರಮ/ಸಾಪ್ತಾಹಿಕ ಕಾರ್ಯಯೋಜನೆಗಳು == {| class="wikitable" style="margin: auto;" ! Add or improve data for minimum 50 Writers ! Add or improve data for minimum 50 Books ! Proofread 20 pages ! Upload a assigned PDF ! Create Index Pages ! Upload 5 Index Pages |} === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ===== ಪುಟದ ಸ್ಥಿತಿ ===== ; [[ಸಹಾಯ:ಪುಟದ ಸ್ಥಿತಿಗತಿ]] {| |- | colspan="3" | ಸಂಪಾದನೆ ವಿಂಡೋ ಅಡಿಯಲ್ಲಿ ಈ ಸ್ಥಿತಿಗಳನ್ನು ಸೂಚಿಸುವ ಬಟನ್‌ಗಳನ್ನು ನೀವು ಕಾಣಬಹುದು. ಹಿಂದಿನ ಕೊಡುಗೆದಾರರು ಈಗಾಗಲೇ ಪುಟವನ್ನು ಪ್ರೂಫ್ ರೀಡ್ ಮಾಡಿದ್ದರೆ, ಅಗ ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ: |- |style="width: 33%;" | &nbsp; |style="width: 33%;" | [[File:Wikisource page proofread buttons.png|200px|left|ಐದು ಗುಂಡಿಗಳು]] | &nbsp; |- | colspan="3" | ಯಾರೂ ಇನ್ನೂ ಪುಟವನ್ನು ಪ್ರೂಫ್ ರೀಡ್ ಮಾಡದಿದ್ದರೆ, ಬಟನ್‌ಗಳು ಈ ಕೆಳಗಿನಂತೆ ಗೋಚರಿಸುತ್ತವೆ: |- | &nbsp; | [[File:Wikisource page not proofread buttons.png|160px|left|ನಾಲ್ಕು ಗುಂಡಿಗಳು]] | &nbsp; |} {| |- |colspan = 2, align=center| ↗ <span style="background-color:#DDD;">ಪಠ್ಯವಿಲ್ಲದ ಪುಟ</span> | |- |<span style="color:#C00000">''ಖಾಲಿ ಪುಟ'' </span> |→ <span style="background-color: #FFA0A0;">ಪರಿಶೀಲಿಸಲಾಗಿಲ್ಲದ ಪುಟ</span> |→ <span style="background-color: #FFE867;">ಪರಿಶೀಲಿಸಲಾಗಿರುವ ಪುಟ</span> |→ <span style="background-color: #90FF90;">ಪ್ರಕಟಿಸಲಾಗಿರುವ ಪುಟ</span> |- | |colspan = 2, align=center| ↘ <span style="background-color: #B0B0FF;">ಸಮಸ್ಯಾಪೂರ್ಣ ಪುಟ</span> ↗ |} ಪುಟಗಳನ್ನು ಕೆಳಗೆ ತಿಳಿಸಿದ ಹಾಗೆ ವಿಂಗಡಿಸಬೇಕು. * {{page status text|Not proofread}} ಪೂರ್ವನಿಯೋಜಿತ ಮೌಲ್ಯ ಆಗಿರುತ್ತದೆ. ([[:Category:ಪರಿಶೀಲಿಸಲಾಗಿಲ್ಲ|ಎಲ್ಲಾ ಪುಟಗಳನ್ನು ನೋಡಿ.]]) * {{page status text|Proofread}} ಅಂದರೆ ಒಬ್ಬ ಸಂಪಾದಕ ಪರಿಶೀಲಿಸಿರುವ ಪುಟ. ನೀವು ಪುಟವನ್ನು ಅತ್ಯುತ್ತಮ ಸ್ಥಿತಿಗೆ ತಂದಿರುವಿರಿ ಅಲ್ಲಿ ಪಠ್ಯವು ಸ್ಕ್ಯಾನ್‌ಗೆ ಹೊಂದಿಕೆಯಾಗುತ್ತದೆ ಮತ್ತು ಮೂಲಭೂತ ಫಾರ್ಮ್ಯಾಟಿಂಗ್ ಮಾಡಲಾಗುತ್ತದೆ, ಮತ್ತು ನೀವು ಅದರೊಂದಿಗೆ ಸಮಂಜಸವಾಗಿ ಪ್ರೂಫ್‌ರೀಡ್ ಪುಟವು ಓದುಗರಿಗೆ ಪ್ರದರ್ಶಿಸಲು ಸಿದ್ಧಪಡಿಸುವುದು, ಅದರಲ್ಲಿ ಸ್ವಲ್ಪ ದೋಷಗಳಿದ್ದರೂ ಸಹ ಸರಿಪಡಿಸವುದು. ([[:ವರ್ಗ:Proofread|ಎಲ್ಲಾ ಪುಟಗಳನ್ನು ನೋಡಿ.]]) * {{page status text|Validated}} ಅಂದರೆ ಒಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿರುವ ಪುಟ. ಈ ಆಯ್ಕೆ ಪುಟವನ್ನು ಈಗಾಗಲೇ ಮತ್ತೊಬ್ಬರು ಪರಿಶೀಲಿಸಿದ್ದಲ್ಲಿ ಮಾತ್ರ ಲಭ್ಯವಾಗುತ್ತದೆ. ([[:Category:ಪ್ರಕಟಿಸಿದವು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Without text}} ಖಾಲಿ ಪುಟಗಳಿಗಾಗಿದೆ. ಇದನ್ನು ಚಿತ್ರಗಳಿರುವ ಪುಟಗಳಿಗೆ ಬಳಸುವಂತಿಲ್ಲ. ([[:Category:ಪಠ್ಯವಿಲ್ಲದ್ದು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Problematic}} ದೋಷಯುಕ್ತ ಸ್ಕ್ಯಾನ್ ಮಾಡಿದ ಪುಟಗಳು ಅಥವಾ ಸಂಪಾದಕರ ನಡುವೆ ಚರ್ಚೆ ಆಗಬೇಕಿರುವುದನ್ನು ಸೂಚಿಸುತ್ತದೆ. ([[:Category:ಸಮಸ್ಯಾಪೂರ್ಣ|ಎಲ್ಲಾ ಪುಟಗಳನ್ನು ನೋಡಿ.]]) ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable sortable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | looks ok, please check text thoroughly there were some hyphen, symbols missing from text. |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | Looks good, please use <code>॥ , ।</code> instead of pipe <nowiki>|, ||</nowiki> |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{done}} <!--replace inprogress with {{done}} when proofreading in done--> | looks good |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | looks good |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | look good |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{on hold}}<!--replace inprogress with {{done}} when proofreading in done--> | asked extension till 22-23 June to complete internship tasks |} === ವಾರ ೪/೫ === ==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]] {| class="wikitable sortable" ! Wikipedia User Name !! Assigned book title !! progress !! reviewer notes |- |Viveka B G || ಬಹದ್ದೂರ್ ಗಂಡ : https://archive.org/details/in.ernet.dli.2015.363366 | {{inprogress}} <!--replace inprogress with {{done}} when proofreading in done--> | https://kn.wikisource.org/w/index.php?title=ಪುಟ:ಬಹದ್ದೂರ_ಗಂಡ.pdf/೧೭&diff=324890&oldid=324729 , please ಂ (control + m in lipyantara) in words instead of o/0 |- |Reema Jalihal || ಚಂದ್ರನಾಥ : https://archive.org/details/Chandranaatha-1944/ | {{inprogress}} <!--replace inprogress with {{done}} when proofreading in done--> |Transcribing looks ok, please kannada number in page number field instead of english numbers, It would be nice if you had worked on [[Index:ಚಂದ್ರನಾಥ.pdf]] |- |Shyam 2808 || ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673 | {{inprogress}} <!--replace inprogress with {{done}} when proofreading in done--> | ;'''Week5 (20 pages)''':pages (1-5, 7-8) without any or irrelavent text should be marked as '''without text''' , always Join lines in paragraph & when line are joined in a paragraph broken words should be joined [[special:diff/324684|for example ಸರಳು ಗಳಿಗೆ , should be joined as ಸರಳುಗಳಿಗೆ]] , use {{t|rh}} where you need to use both [[special:diff/324685|left and right text alignments]] |- |Nihar Chakravarti || ಚಿತ್ರಕೂಟ : https://archive.org/details/Chitrakuuta-1954 | {{inprogress}} <!--replace inprogress with {{done}} when proofreading in done--> | ;'''Week5 (20 pages)''': when line are joined in a paragraph broken words should be joined, example [[special:diff/324883]] |- |Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937 | {{on hold|on hold requested time due to exams}} <!--replace inprogress with {{done}} when proofreading in done--> | |- |Vikas shetty14 || ರಂಗನಾಯಕಿ : https://archive.org/details/Ranganaayaki-Maale-1953 | {{inprogress}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] fl93olyq6bpvq8d68dt8bwstqn32xdq 324902 324892 2026-06-16T10:55:42Z A826 6806 /* ವಿಕಿಸೋರ್ಸ್ ಪುಸ್ತಕ ಅಪ್ಲೋಡ್ */ 324902 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] [[File:Wikisource -Transclusion Inserting images, lists and table of content.pdf|thumb|Wikisource -Transclusion Inserting images, lists and table of content]] IIIT-HYDERABAD ನವರು ಆಯೋಜಿಸಿರುವ ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] * presentations: https://drive.google.com/drive/folders/1fg5OI5f3e9Akd94YUFb1ltE0-pKSWsPp?usp=sharing == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 ! Week 4 ! Week 5 |- |Vikas R Shetty |Vikas shetty14 | ✓ | ✓ | ✓ |✓ |{{color|red|×}} |- |Hemanth Krishni P |Hemanth .03 |{{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Viveka B G |Viveka B G | ✓ | ✓ | ✓ | ✓ | ✓ |- |Reema Krishna Jalihal |Reema Jalihal | {{color|red|×}} | ✓ | ✓ | ✓ | ✓ |- |Shyama Sundara Shastry K R |Shyam 2808 | {{color|red|×}} |✓ | ✓ | ✓ |{{color|red|×}} |- |Nihar Chakravarti |Nihar Chakravarti | {{color|red|×}} | ✓ | ✓ |{{color|red|×}} |{{color|red|×}} |- |Deepak V S |vyangyeah | {{color|red|×}} | {{color|red|×}} |{{color|red|×}} |{{color|red|×}} |{{color|red|×}} |- |Vaishnu Pilar |Vaishnu Pilar | ✓ | ✓ | ✓ | ✓ |{{color|red|×}} |} == ಪಠ್ಯಕ್ರಮ/ಸಾಪ್ತಾಹಿಕ ಕಾರ್ಯಯೋಜನೆಗಳು == {| class="wikitable" style="margin: auto;" ! Add or improve data for minimum 50 Writers ! Add or improve data for minimum 50 Books ! Proofread 20 pages ! Upload a assigned PDF ! Create Index Pages ! Upload 5 Index Pages |} === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ===== ಪುಟದ ಸ್ಥಿತಿ ===== ; [[ಸಹಾಯ:ಪುಟದ ಸ್ಥಿತಿಗತಿ]] {| |- | colspan="3" | ಸಂಪಾದನೆ ವಿಂಡೋ ಅಡಿಯಲ್ಲಿ ಈ ಸ್ಥಿತಿಗಳನ್ನು ಸೂಚಿಸುವ ಬಟನ್‌ಗಳನ್ನು ನೀವು ಕಾಣಬಹುದು. ಹಿಂದಿನ ಕೊಡುಗೆದಾರರು ಈಗಾಗಲೇ ಪುಟವನ್ನು ಪ್ರೂಫ್ ರೀಡ್ ಮಾಡಿದ್ದರೆ, ಅಗ ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ: |- |style="width: 33%;" | &nbsp; |style="width: 33%;" | [[File:Wikisource page proofread buttons.png|200px|left|ಐದು ಗುಂಡಿಗಳು]] | &nbsp; |- | colspan="3" | ಯಾರೂ ಇನ್ನೂ ಪುಟವನ್ನು ಪ್ರೂಫ್ ರೀಡ್ ಮಾಡದಿದ್ದರೆ, ಬಟನ್‌ಗಳು ಈ ಕೆಳಗಿನಂತೆ ಗೋಚರಿಸುತ್ತವೆ: |- | &nbsp; | [[File:Wikisource page not proofread buttons.png|160px|left|ನಾಲ್ಕು ಗುಂಡಿಗಳು]] | &nbsp; |} {| |- |colspan = 2, align=center| ↗ <span style="background-color:#DDD;">ಪಠ್ಯವಿಲ್ಲದ ಪುಟ</span> | |- |<span style="color:#C00000">''ಖಾಲಿ ಪುಟ'' </span> |→ <span style="background-color: #FFA0A0;">ಪರಿಶೀಲಿಸಲಾಗಿಲ್ಲದ ಪುಟ</span> |→ <span style="background-color: #FFE867;">ಪರಿಶೀಲಿಸಲಾಗಿರುವ ಪುಟ</span> |→ <span style="background-color: #90FF90;">ಪ್ರಕಟಿಸಲಾಗಿರುವ ಪುಟ</span> |- | |colspan = 2, align=center| ↘ <span style="background-color: #B0B0FF;">ಸಮಸ್ಯಾಪೂರ್ಣ ಪುಟ</span> ↗ |} ಪುಟಗಳನ್ನು ಕೆಳಗೆ ತಿಳಿಸಿದ ಹಾಗೆ ವಿಂಗಡಿಸಬೇಕು. * {{page status text|Not proofread}} ಪೂರ್ವನಿಯೋಜಿತ ಮೌಲ್ಯ ಆಗಿರುತ್ತದೆ. ([[:Category:ಪರಿಶೀಲಿಸಲಾಗಿಲ್ಲ|ಎಲ್ಲಾ ಪುಟಗಳನ್ನು ನೋಡಿ.]]) * {{page status text|Proofread}} ಅಂದರೆ ಒಬ್ಬ ಸಂಪಾದಕ ಪರಿಶೀಲಿಸಿರುವ ಪುಟ. ನೀವು ಪುಟವನ್ನು ಅತ್ಯುತ್ತಮ ಸ್ಥಿತಿಗೆ ತಂದಿರುವಿರಿ ಅಲ್ಲಿ ಪಠ್ಯವು ಸ್ಕ್ಯಾನ್‌ಗೆ ಹೊಂದಿಕೆಯಾಗುತ್ತದೆ ಮತ್ತು ಮೂಲಭೂತ ಫಾರ್ಮ್ಯಾಟಿಂಗ್ ಮಾಡಲಾಗುತ್ತದೆ, ಮತ್ತು ನೀವು ಅದರೊಂದಿಗೆ ಸಮಂಜಸವಾಗಿ ಪ್ರೂಫ್‌ರೀಡ್ ಪುಟವು ಓದುಗರಿಗೆ ಪ್ರದರ್ಶಿಸಲು ಸಿದ್ಧಪಡಿಸುವುದು, ಅದರಲ್ಲಿ ಸ್ವಲ್ಪ ದೋಷಗಳಿದ್ದರೂ ಸಹ ಸರಿಪಡಿಸವುದು. ([[:ವರ್ಗ:Proofread|ಎಲ್ಲಾ ಪುಟಗಳನ್ನು ನೋಡಿ.]]) * {{page status text|Validated}} ಅಂದರೆ ಒಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿರುವ ಪುಟ. ಈ ಆಯ್ಕೆ ಪುಟವನ್ನು ಈಗಾಗಲೇ ಮತ್ತೊಬ್ಬರು ಪರಿಶೀಲಿಸಿದ್ದಲ್ಲಿ ಮಾತ್ರ ಲಭ್ಯವಾಗುತ್ತದೆ. ([[:Category:ಪ್ರಕಟಿಸಿದವು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Without text}} ಖಾಲಿ ಪುಟಗಳಿಗಾಗಿದೆ. ಇದನ್ನು ಚಿತ್ರಗಳಿರುವ ಪುಟಗಳಿಗೆ ಬಳಸುವಂತಿಲ್ಲ. ([[:Category:ಪಠ್ಯವಿಲ್ಲದ್ದು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Problematic}} ದೋಷಯುಕ್ತ ಸ್ಕ್ಯಾನ್ ಮಾಡಿದ ಪುಟಗಳು ಅಥವಾ ಸಂಪಾದಕರ ನಡುವೆ ಚರ್ಚೆ ಆಗಬೇಕಿರುವುದನ್ನು ಸೂಚಿಸುತ್ತದೆ. ([[:Category:ಸಮಸ್ಯಾಪೂರ್ಣ|ಎಲ್ಲಾ ಪುಟಗಳನ್ನು ನೋಡಿ.]]) ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable sortable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | looks ok, please check text thoroughly there were some hyphen, symbols missing from text. |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | Looks good, please use <code>॥ , ।</code> instead of pipe <nowiki>|, ||</nowiki> |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{done}} <!--replace inprogress with {{done}} when proofreading in done--> | looks good |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | looks good |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | look good |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{on hold}}<!--replace inprogress with {{done}} when proofreading in done--> | asked extension till 22-23 June to complete internship tasks |} === ವಾರ ೪/೫ === ==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]] {| class="wikitable sortable" ! Wikipedia User Name !! Assigned book title !! progress !! reviewer notes |- |Viveka B G || ಬಹದ್ದೂರ್ ಗಂಡ : https://archive.org/details/in.ernet.dli.2015.363366 | {{inprogress}} <!--replace inprogress with {{done}} when proofreading in done--> | https://kn.wikisource.org/w/index.php?title=ಪುಟ:ಬಹದ್ದೂರ_ಗಂಡ.pdf/೧೭&diff=324890&oldid=324729 , please ಂ (control + m in lipyantara) in words instead of o/0 |- |Reema Jalihal || ಚಂದ್ರನಾಥ : https://archive.org/details/Chandranaatha-1944/ ಅಕ್ಕಾಜಿ | {{inprogress}} <!--replace inprogress with {{done}} when proofreading in done--> |Transcribing looks ok, please kannada number in page number field instead of english numbers, It would be nice if you had worked on [[Index:ಚಂದ್ರನಾಥ.pdf]] |- |Shyam 2808 || ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673 * Harikathamruthasaara Vol-1 ಹರಿಕಥಾಮೃತಸಾರ ಸಂಪುಟ ೧ * Harikathamruthasaara Vol-2 ಹರಿಕಥಾಮೃತಸಾರ ಸಂಪುಟ ೨ * Harikathamruthasaara Vol-3 ಹರಿಕಥಾಮೃತಸಾರ ಸಂಪುಟ ೩ * Akkaji * Sati Viraj ಸತಿ ವಿರಾಜ | {{inprogress}} <!--replace inprogress with {{done}} when proofreading in done--> | ;'''Week5 (20 pages)''':pages (1-5, 7-8) without any or irrelavent text should be marked as '''without text''' , always Join lines in paragraph & when line are joined in a paragraph broken words should be joined [[special:diff/324684|for example ಸರಳು ಗಳಿಗೆ , should be joined as ಸರಳುಗಳಿಗೆ]] , use {{t|rh}} where you need to use both [[special:diff/324685|left and right text alignments]] |- |Nihar Chakravarti || ಚಿತ್ರಕೂಟ : https://archive.org/details/Chitrakuuta-1954 | {{inprogress}} <!--replace inprogress with {{done}} when proofreading in done--> | ;'''Week5 (20 pages)''': when line are joined in a paragraph broken words should be joined, example [[special:diff/324883]] |- |Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937 | {{on hold|on hold requested time due to exams}} <!--replace inprogress with {{done}} when proofreading in done--> | |- |Vikas shetty14 || ರಂಗನಾಯಕಿ : https://archive.org/details/Ranganaayaki-Maale-1953 | {{inprogress}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] 4og5ldvk0nyyqb2p8lppmrsz0d2uln7 324904 324902 2026-06-16T11:06:20Z A826 6806 /* ಭಾಗವಹಿಸುವವರು */ 324904 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] [[File:Wikisource -Transclusion Inserting images, lists and table of content.pdf|thumb|Wikisource -Transclusion Inserting images, lists and table of content]] IIIT-HYDERABAD ನವರು ಆಯೋಜಿಸಿರುವ ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] * presentations: https://drive.google.com/drive/folders/1fg5OI5f3e9Akd94YUFb1ltE0-pKSWsPp?usp=sharing == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) == ಪಠ್ಯಕ್ರಮ/ಸಾಪ್ತಾಹಿಕ ಕಾರ್ಯಯೋಜನೆಗಳು == {| class="wikitable" style="margin: auto;" ! Add or improve data for minimum 50 Writers ! Add or improve data for minimum 50 Books ! Proofread 20 pages ! Upload a assigned PDF ! Create Index Pages ! Upload 5 Index Pages |} === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ===== ಪುಟದ ಸ್ಥಿತಿ ===== ; [[ಸಹಾಯ:ಪುಟದ ಸ್ಥಿತಿಗತಿ]] {| |- | colspan="3" | ಸಂಪಾದನೆ ವಿಂಡೋ ಅಡಿಯಲ್ಲಿ ಈ ಸ್ಥಿತಿಗಳನ್ನು ಸೂಚಿಸುವ ಬಟನ್‌ಗಳನ್ನು ನೀವು ಕಾಣಬಹುದು. ಹಿಂದಿನ ಕೊಡುಗೆದಾರರು ಈಗಾಗಲೇ ಪುಟವನ್ನು ಪ್ರೂಫ್ ರೀಡ್ ಮಾಡಿದ್ದರೆ, ಅಗ ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ: |- |style="width: 33%;" | &nbsp; |style="width: 33%;" | [[File:Wikisource page proofread buttons.png|200px|left|ಐದು ಗುಂಡಿಗಳು]] | &nbsp; |- | colspan="3" | ಯಾರೂ ಇನ್ನೂ ಪುಟವನ್ನು ಪ್ರೂಫ್ ರೀಡ್ ಮಾಡದಿದ್ದರೆ, ಬಟನ್‌ಗಳು ಈ ಕೆಳಗಿನಂತೆ ಗೋಚರಿಸುತ್ತವೆ: |- | &nbsp; | [[File:Wikisource page not proofread buttons.png|160px|left|ನಾಲ್ಕು ಗುಂಡಿಗಳು]] | &nbsp; |} {| |- |colspan = 2, align=center| ↗ <span style="background-color:#DDD;">ಪಠ್ಯವಿಲ್ಲದ ಪುಟ</span> | |- |<span style="color:#C00000">''ಖಾಲಿ ಪುಟ'' </span> |→ <span style="background-color: #FFA0A0;">ಪರಿಶೀಲಿಸಲಾಗಿಲ್ಲದ ಪುಟ</span> |→ <span style="background-color: #FFE867;">ಪರಿಶೀಲಿಸಲಾಗಿರುವ ಪುಟ</span> |→ <span style="background-color: #90FF90;">ಪ್ರಕಟಿಸಲಾಗಿರುವ ಪುಟ</span> |- | |colspan = 2, align=center| ↘ <span style="background-color: #B0B0FF;">ಸಮಸ್ಯಾಪೂರ್ಣ ಪುಟ</span> ↗ |} ಪುಟಗಳನ್ನು ಕೆಳಗೆ ತಿಳಿಸಿದ ಹಾಗೆ ವಿಂಗಡಿಸಬೇಕು. * {{page status text|Not proofread}} ಪೂರ್ವನಿಯೋಜಿತ ಮೌಲ್ಯ ಆಗಿರುತ್ತದೆ. ([[:Category:ಪರಿಶೀಲಿಸಲಾಗಿಲ್ಲ|ಎಲ್ಲಾ ಪುಟಗಳನ್ನು ನೋಡಿ.]]) * {{page status text|Proofread}} ಅಂದರೆ ಒಬ್ಬ ಸಂಪಾದಕ ಪರಿಶೀಲಿಸಿರುವ ಪುಟ. ನೀವು ಪುಟವನ್ನು ಅತ್ಯುತ್ತಮ ಸ್ಥಿತಿಗೆ ತಂದಿರುವಿರಿ ಅಲ್ಲಿ ಪಠ್ಯವು ಸ್ಕ್ಯಾನ್‌ಗೆ ಹೊಂದಿಕೆಯಾಗುತ್ತದೆ ಮತ್ತು ಮೂಲಭೂತ ಫಾರ್ಮ್ಯಾಟಿಂಗ್ ಮಾಡಲಾಗುತ್ತದೆ, ಮತ್ತು ನೀವು ಅದರೊಂದಿಗೆ ಸಮಂಜಸವಾಗಿ ಪ್ರೂಫ್‌ರೀಡ್ ಪುಟವು ಓದುಗರಿಗೆ ಪ್ರದರ್ಶಿಸಲು ಸಿದ್ಧಪಡಿಸುವುದು, ಅದರಲ್ಲಿ ಸ್ವಲ್ಪ ದೋಷಗಳಿದ್ದರೂ ಸಹ ಸರಿಪಡಿಸವುದು. ([[:ವರ್ಗ:Proofread|ಎಲ್ಲಾ ಪುಟಗಳನ್ನು ನೋಡಿ.]]) * {{page status text|Validated}} ಅಂದರೆ ಒಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿರುವ ಪುಟ. ಈ ಆಯ್ಕೆ ಪುಟವನ್ನು ಈಗಾಗಲೇ ಮತ್ತೊಬ್ಬರು ಪರಿಶೀಲಿಸಿದ್ದಲ್ಲಿ ಮಾತ್ರ ಲಭ್ಯವಾಗುತ್ತದೆ. ([[:Category:ಪ್ರಕಟಿಸಿದವು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Without text}} ಖಾಲಿ ಪುಟಗಳಿಗಾಗಿದೆ. ಇದನ್ನು ಚಿತ್ರಗಳಿರುವ ಪುಟಗಳಿಗೆ ಬಳಸುವಂತಿಲ್ಲ. ([[:Category:ಪಠ್ಯವಿಲ್ಲದ್ದು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Problematic}} ದೋಷಯುಕ್ತ ಸ್ಕ್ಯಾನ್ ಮಾಡಿದ ಪುಟಗಳು ಅಥವಾ ಸಂಪಾದಕರ ನಡುವೆ ಚರ್ಚೆ ಆಗಬೇಕಿರುವುದನ್ನು ಸೂಚಿಸುತ್ತದೆ. ([[:Category:ಸಮಸ್ಯಾಪೂರ್ಣ|ಎಲ್ಲಾ ಪುಟಗಳನ್ನು ನೋಡಿ.]]) ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable sortable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | looks ok, please check text thoroughly there were some hyphen, symbols missing from text. |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | Looks good, please use <code>॥ , ।</code> instead of pipe <nowiki>|, ||</nowiki> |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{done}} <!--replace inprogress with {{done}} when proofreading in done--> | looks good |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | looks good |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | look good |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{on hold}}<!--replace inprogress with {{done}} when proofreading in done--> | asked extension till 22-23 June to complete internship tasks |} === ವಾರ ೪/೫ === ==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]] {| class="wikitable sortable" ! Wikipedia User Name !! Assigned book title !! progress !! reviewer notes |- |Viveka B G || ಬಹದ್ದೂರ್ ಗಂಡ : https://archive.org/details/in.ernet.dli.2015.363366 | {{inprogress}} <!--replace inprogress with {{done}} when proofreading in done--> | https://kn.wikisource.org/w/index.php?title=ಪುಟ:ಬಹದ್ದೂರ_ಗಂಡ.pdf/೧೭&diff=324890&oldid=324729 , please ಂ (control + m in lipyantara) in words instead of o/0 |- |Reema Jalihal || ಚಂದ್ರನಾಥ : https://archive.org/details/Chandranaatha-1944/ ಅಕ್ಕಾಜಿ | {{inprogress}} <!--replace inprogress with {{done}} when proofreading in done--> |Transcribing looks ok, please kannada number in page number field instead of english numbers, It would be nice if you had worked on [[Index:ಚಂದ್ರನಾಥ.pdf]] |- |Shyam 2808 || ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673 * Harikathamruthasaara Vol-1 ಹರಿಕಥಾಮೃತಸಾರ ಸಂಪುಟ ೧ * Harikathamruthasaara Vol-2 ಹರಿಕಥಾಮೃತಸಾರ ಸಂಪುಟ ೨ * Harikathamruthasaara Vol-3 ಹರಿಕಥಾಮೃತಸಾರ ಸಂಪುಟ ೩ * Akkaji * Sati Viraj ಸತಿ ವಿರಾಜ | {{inprogress}} <!--replace inprogress with {{done}} when proofreading in done--> | ;'''Week5 (20 pages)''':pages (1-5, 7-8) without any or irrelavent text should be marked as '''without text''' , always Join lines in paragraph & when line are joined in a paragraph broken words should be joined [[special:diff/324684|for example ಸರಳು ಗಳಿಗೆ , should be joined as ಸರಳುಗಳಿಗೆ]] , use {{t|rh}} where you need to use both [[special:diff/324685|left and right text alignments]] |- |Nihar Chakravarti || ಚಿತ್ರಕೂಟ : https://archive.org/details/Chitrakuuta-1954 | {{inprogress}} <!--replace inprogress with {{done}} when proofreading in done--> | ;'''Week5 (20 pages)''': when line are joined in a paragraph broken words should be joined, example [[special:diff/324883]] |- |Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937 | {{on hold|on hold requested time due to exams}} <!--replace inprogress with {{done}} when proofreading in done--> | |- |Vikas shetty14 || ರಂಗನಾಯಕಿ : https://archive.org/details/Ranganaayaki-Maale-1953 | {{inprogress}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] ryy97xfkvma25r7t0c28bmm6iv44swy 324905 324904 2026-06-16T11:08:01Z A826 6806 324905 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] [[File:Wikisource -Transclusion Inserting images, lists and table of content.pdf|thumb|Wikisource -Transclusion Inserting images, lists and table of content]] IIIT-HYDERABAD ನವರು ಆಯೋಜಿಸಿರುವ ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] * presentations: https://drive.google.com/drive/folders/1fg5OI5f3e9Akd94YUFb1ltE0-pKSWsPp?usp=sharing == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) == ಪಠ್ಯಕ್ರಮ/ಸಾಪ್ತಾಹಿಕ ಕಾರ್ಯಯೋಜನೆಗಳು == {| class="wikitable" style="margin: auto;" ! Add or improve data for minimum 50 Writers ! Add or improve data for minimum 50 Books ! Proofread 20 pages ! Upload a assigned PDF ! Create Index Pages ! Upload 5 Index Pages |} === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ===== ಪುಟದ ಸ್ಥಿತಿ ===== ; [[ಸಹಾಯ:ಪುಟದ ಸ್ಥಿತಿಗತಿ]] {| |- | colspan="3" | ಸಂಪಾದನೆ ವಿಂಡೋ ಅಡಿಯಲ್ಲಿ ಈ ಸ್ಥಿತಿಗಳನ್ನು ಸೂಚಿಸುವ ಬಟನ್‌ಗಳನ್ನು ನೀವು ಕಾಣಬಹುದು. ಹಿಂದಿನ ಕೊಡುಗೆದಾರರು ಈಗಾಗಲೇ ಪುಟವನ್ನು ಪ್ರೂಫ್ ರೀಡ್ ಮಾಡಿದ್ದರೆ, ಅಗ ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ: |- |style="width: 33%;" | &nbsp; |style="width: 33%;" | [[File:Wikisource page proofread buttons.png|200px|left|ಐದು ಗುಂಡಿಗಳು]] | &nbsp; |- | colspan="3" | ಯಾರೂ ಇನ್ನೂ ಪುಟವನ್ನು ಪ್ರೂಫ್ ರೀಡ್ ಮಾಡದಿದ್ದರೆ, ಬಟನ್‌ಗಳು ಈ ಕೆಳಗಿನಂತೆ ಗೋಚರಿಸುತ್ತವೆ: |- | &nbsp; | [[File:Wikisource page not proofread buttons.png|160px|left|ನಾಲ್ಕು ಗುಂಡಿಗಳು]] | &nbsp; |} {| |- |colspan = 2, align=center| ↗ <span style="background-color:#DDD;">ಪಠ್ಯವಿಲ್ಲದ ಪುಟ</span> | |- |<span style="color:#C00000">''ಖಾಲಿ ಪುಟ'' </span> |→ <span style="background-color: #FFA0A0;">ಪರಿಶೀಲಿಸಲಾಗಿಲ್ಲದ ಪುಟ</span> |→ <span style="background-color: #FFE867;">ಪರಿಶೀಲಿಸಲಾಗಿರುವ ಪುಟ</span> |→ <span style="background-color: #90FF90;">ಪ್ರಕಟಿಸಲಾಗಿರುವ ಪುಟ</span> |- | |colspan = 2, align=center| ↘ <span style="background-color: #B0B0FF;">ಸಮಸ್ಯಾಪೂರ್ಣ ಪುಟ</span> ↗ |} ಪುಟಗಳನ್ನು ಕೆಳಗೆ ತಿಳಿಸಿದ ಹಾಗೆ ವಿಂಗಡಿಸಬೇಕು. * {{page status text|Not proofread}} ಪೂರ್ವನಿಯೋಜಿತ ಮೌಲ್ಯ ಆಗಿರುತ್ತದೆ. ([[:Category:ಪರಿಶೀಲಿಸಲಾಗಿಲ್ಲ|ಎಲ್ಲಾ ಪುಟಗಳನ್ನು ನೋಡಿ.]]) * {{page status text|Proofread}} ಅಂದರೆ ಒಬ್ಬ ಸಂಪಾದಕ ಪರಿಶೀಲಿಸಿರುವ ಪುಟ. ನೀವು ಪುಟವನ್ನು ಅತ್ಯುತ್ತಮ ಸ್ಥಿತಿಗೆ ತಂದಿರುವಿರಿ ಅಲ್ಲಿ ಪಠ್ಯವು ಸ್ಕ್ಯಾನ್‌ಗೆ ಹೊಂದಿಕೆಯಾಗುತ್ತದೆ ಮತ್ತು ಮೂಲಭೂತ ಫಾರ್ಮ್ಯಾಟಿಂಗ್ ಮಾಡಲಾಗುತ್ತದೆ, ಮತ್ತು ನೀವು ಅದರೊಂದಿಗೆ ಸಮಂಜಸವಾಗಿ ಪ್ರೂಫ್‌ರೀಡ್ ಪುಟವು ಓದುಗರಿಗೆ ಪ್ರದರ್ಶಿಸಲು ಸಿದ್ಧಪಡಿಸುವುದು, ಅದರಲ್ಲಿ ಸ್ವಲ್ಪ ದೋಷಗಳಿದ್ದರೂ ಸಹ ಸರಿಪಡಿಸವುದು. ([[:ವರ್ಗ:Proofread|ಎಲ್ಲಾ ಪುಟಗಳನ್ನು ನೋಡಿ.]]) * {{page status text|Validated}} ಅಂದರೆ ಒಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿರುವ ಪುಟ. ಈ ಆಯ್ಕೆ ಪುಟವನ್ನು ಈಗಾಗಲೇ ಮತ್ತೊಬ್ಬರು ಪರಿಶೀಲಿಸಿದ್ದಲ್ಲಿ ಮಾತ್ರ ಲಭ್ಯವಾಗುತ್ತದೆ. ([[:Category:ಪ್ರಕಟಿಸಿದವು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Without text}} ಖಾಲಿ ಪುಟಗಳಿಗಾಗಿದೆ. ಇದನ್ನು ಚಿತ್ರಗಳಿರುವ ಪುಟಗಳಿಗೆ ಬಳಸುವಂತಿಲ್ಲ. ([[:Category:ಪಠ್ಯವಿಲ್ಲದ್ದು|ಎಲ್ಲಾ ಪುಟಗಳನ್ನು ನೋಡಿ.]]) * {{page status text|Problematic}} ದೋಷಯುಕ್ತ ಸ್ಕ್ಯಾನ್ ಮಾಡಿದ ಪುಟಗಳು ಅಥವಾ ಸಂಪಾದಕರ ನಡುವೆ ಚರ್ಚೆ ಆಗಬೇಕಿರುವುದನ್ನು ಸೂಚಿಸುತ್ತದೆ. ([[:Category:ಸಮಸ್ಯಾಪೂರ್ಣ|ಎಲ್ಲಾ ಪುಟಗಳನ್ನು ನೋಡಿ.]]) ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable sortable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | looks ok, please check text thoroughly there were some hyphen, symbols missing from text. |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | Looks good, please use <code>॥ , ।</code> instead of pipe <nowiki>|, ||</nowiki> |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{done}} <!--replace inprogress with {{done}} when proofreading in done--> | looks good |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | looks good |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | look good |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{inprogress}}<!--replace inprogress with {{done}} when proofreading in done--> | |} === ವಾರ ೪/೫ === ==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]] {| class="wikitable sortable" ! Wikipedia User Name !! Assigned book title !! progress !! reviewer notes |- |Viveka B G || ಬಹದ್ದೂರ್ ಗಂಡ : https://archive.org/details/in.ernet.dli.2015.363366 | {{inprogress}} <!--replace inprogress with {{done}} when proofreading in done--> | https://kn.wikisource.org/w/index.php?title=ಪುಟ:ಬಹದ್ದೂರ_ಗಂಡ.pdf/೧೭&diff=324890&oldid=324729 , please ಂ (control + m in lipyantara) in words instead of o/0 |- |Reema Jalihal || ಚಂದ್ರನಾಥ : https://archive.org/details/Chandranaatha-1944/ ಅಕ್ಕಾಜಿ | {{inprogress}} <!--replace inprogress with {{done}} when proofreading in done--> |Transcribing looks ok, please kannada number in page number field instead of english numbers, It would be nice if you had worked on [[Index:ಚಂದ್ರನಾಥ.pdf]] |- |Shyam 2808 || ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673 * Harikathamruthasaara Vol-1 ಹರಿಕಥಾಮೃತಸಾರ ಸಂಪುಟ ೧ * Harikathamruthasaara Vol-2 ಹರಿಕಥಾಮೃತಸಾರ ಸಂಪುಟ ೨ * Harikathamruthasaara Vol-3 ಹರಿಕಥಾಮೃತಸಾರ ಸಂಪುಟ ೩ * Akkaji * Sati Viraj ಸತಿ ವಿರಾಜ | {{inprogress}} <!--replace inprogress with {{done}} when proofreading in done--> | ;'''Week5 (20 pages)''':pages (1-5, 7-8) without any or irrelavent text should be marked as '''without text''' , always Join lines in paragraph & when line are joined in a paragraph broken words should be joined [[special:diff/324684|for example ಸರಳು ಗಳಿಗೆ , should be joined as ಸರಳುಗಳಿಗೆ]] , use {{t|rh}} where you need to use both [[special:diff/324685|left and right text alignments]] |- |Nihar Chakravarti || ಚಿತ್ರಕೂಟ : https://archive.org/details/Chitrakuuta-1954 | {{inprogress}} <!--replace inprogress with {{done}} when proofreading in done--> | ;'''Week5 (20 pages)''': when line are joined in a paragraph broken words should be joined, example [[special:diff/324883]] |- |Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937 | {{inprogress}} <!--replace inprogress with {{done}} when proofreading in done--> | |- |Vikas shetty14 || ರಂಗನಾಯಕಿ : https://archive.org/details/Ranganaayaki-Maale-1953 | {{inprogress}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] gu26yp74asdpulrd1n8k8wsys8ch9zh ಪುಟ:ಬದುಕಿನ ಸುಳಿಯಲ್ಲಿ.pdf/೧ 104 120780 324715 324614 2026-06-15T14:01:33Z A826 6806 /* Validated */ 324715 proofread-page text/x-wiki <noinclude><pagequality level="4" user="A826" /></noinclude>{{c|BROWEN BOOK ONLY TEXT CUT WITHIN THE BOOK ONLY TEXT FLY WITHIN THE BOOK ONLY TEXT PROBLEM WITHIN THE BOOK ONLY }}<noinclude></noinclude> atvguq2kbglqt9winsuzb2wia6xoub3 324723 324715 2026-06-15T14:03:46Z A826 6806 /* Without text */ 324723 proofread-page text/x-wiki <noinclude><pagequality level="0" user="A826" /></noinclude><noinclude></noinclude> 8jv1m79oqytrvomi8no9d8impdweq4n ಪುಟ:ಬದುಕಿನ ಸುಳಿಯಲ್ಲಿ.pdf/೨ 104 120783 324716 324615 2026-06-15T14:02:03Z A826 6806 /* Validated */ 324716 proofread-page text/x-wiki <noinclude><pagequality level="4" user="A826" /></noinclude>{{{c|UNIVERSAL LIBRARY OU_198978 UNIVERSAL LIBRARY }}<noinclude></noinclude> 1qk31ph0vr90rr4zd8bd2w8jkzth7mk 324717 324716 2026-06-15T14:02:16Z A826 6806 324717 proofread-page text/x-wiki <noinclude><pagequality level="4" user="A826" /></noinclude>{{c|UNIVERSAL LIBRARY OU_198978 UNIVERSAL LIBRARY }}<noinclude></noinclude> dkbkbtvykdrlifsn6rg14k6sa6fyru0 324724 324717 2026-06-15T14:03:57Z A826 6806 /* Without text */ 324724 proofread-page text/x-wiki <noinclude><pagequality level="0" user="A826" /></noinclude><noinclude></noinclude> 8jv1m79oqytrvomi8no9d8impdweq4n ಪುಟ:ಬದುಕಿನ ಸುಳಿಯಲ್ಲಿ.pdf/೩ 104 120784 324718 324616 2026-06-15T14:02:27Z A826 6806 /* Without text */ 324718 proofread-page text/x-wiki <noinclude><pagequality level="0" user="A826" /></noinclude><noinclude></noinclude> 8jv1m79oqytrvomi8no9d8impdweq4n ಪುಟ:ಬದುಕಿನ ಸುಳಿಯಲ್ಲಿ.pdf/೪ 104 120785 324719 324617 2026-06-15T14:02:40Z A826 6806 /* Without text */ 324719 proofread-page text/x-wiki <noinclude><pagequality level="0" user="A826" /></noinclude><noinclude></noinclude> 8jv1m79oqytrvomi8no9d8impdweq4n ಪುಟ:ಬದುಕಿನ ಸುಳಿಯಲ್ಲಿ.pdf/೫ 104 120786 324720 324618 2026-06-15T14:02:54Z A826 6806 /* Without text */ 324720 proofread-page text/x-wiki <noinclude><pagequality level="0" user="A826" /></noinclude><noinclude></noinclude> 8jv1m79oqytrvomi8no9d8impdweq4n ಪುಟ:ಬದುಕಿನ ಸುಳಿಯಲ್ಲಿ.pdf/೭ 104 120788 324721 324620 2026-06-15T14:03:10Z A826 6806 /* Without text */ 324721 proofread-page text/x-wiki <noinclude><pagequality level="0" user="A826" /></noinclude><noinclude></noinclude> 8jv1m79oqytrvomi8no9d8impdweq4n ಪುಟ:ಬದುಕಿನ ಸುಳಿಯಲ್ಲಿ.pdf/೮ 104 120789 324722 324621 2026-06-15T14:03:25Z A826 6806 /* Without text */ 324722 proofread-page text/x-wiki <noinclude><pagequality level="0" user="A826" /></noinclude><noinclude></noinclude> 8jv1m79oqytrvomi8no9d8impdweq4n ಪುಟ:ಚಂದ್ರನಾಥ.pdf/೨ 104 120801 324900 324571 2026-06-16T09:34:51Z Reema Jalihal 7674 /* Without text */ 324900 proofread-page text/x-wiki <noinclude><pagequality level="0" user="Reema Jalihal" /></noinclude><noinclude></noinclude> pfku5frwky67w0tc38l3px0o23ai48g ಪುಟ:ಚಂದ್ರನಾಥ.pdf/೩ 104 120802 324901 324562 2026-06-16T09:35:14Z Reema Jalihal 7674 /* Without text */ 324901 proofread-page text/x-wiki <noinclude><pagequality level="0" user="Reema Jalihal" /></noinclude><noinclude></noinclude> pfku5frwky67w0tc38l3px0o23ai48g ಪುಟ:ಬಹದ್ದೂರ ಗಂಡ.pdf/೧೭ 104 120840 324729 2026-06-15T14:30:31Z Viveka BG 8559 /* Proofread */ 324729 proofread-page text/x-wiki <noinclude><pagequality level="3" user="Viveka BG" /></noinclude>ಬಹದ್ದೂರ ಗಂಡ 7 ಸರೋಜ:- ನೀನು, ನೀನು, ನೀನೊಬ್ಳಟ್ಗೋoಡ್ಬoದೀದ್ಧಿಯಲ್ಲಾ ನನ್ಬೆನ್ಹಿoದೇನೇ ಗೌತಮ ಬುದ್ದನ್ಹಾಗೆ ನಂಗೆ ಬುದ್ಧಿ ಹೇಳೋಕೆ. ನೀನೇನ್ಮಾಡೀಯೇ, ಶಾಂತೂ ಶಾಂತೂ ಶಾಂತೂ ಶಾಂತೂಂತೆ ಮುದ್ಮಾಡಿ ಬೆಳೆಸ್ಪಿಟ್ಟಿದಾರೆ ಇಬ್ರೂನೂ, ಆ ಕೊಬ್ಬಾಗ್ಮಾಡೃಕ್ತೆ ನಿನ್ನ. ರಾ.ರಾ:-.......ಮಾಡಿರೋದು, ರೋಗಾ? ಸರೋಜ:-. ರೋಗಾ? ಯಾರಿಗೆ ರೋಗಾ? ಕಾಫಿ ಇಲ್ದೆ ನಾನ್‌ ಕಂಗೆಡ್ತಿರೋವಾಗ ಮೂಗಿಗೆ ತುರುಕ್ಕೊಳ್ಳೋಕೆ ನಶ್ಯಕ್ಕೆ ಔಸರ ಆದದ್ದಂಗೆ? ರೋಗ್ವಂತೆ ರೋಗ!! ರಾ.ರಾ ಏನೂ, ಎನೂ, ಏನಂದೀ, ಏನೇ ಅದು ಕತ್ತೇ? 'ಬಾಯಿಗ್ಗೆಂದ್ಹಾಗೆಲ್ಲಾ ಬೊಗಳ್ತಾ ಇದ್ದಿ; ಬಲಿಹಾಕ್ಟಿಡ್ತೇನ್ನೋಡು. ಸರೋಜ: - (ಕೊರಳು ಕುಲುಕಿಸುತ್ತ) ಅಹಹಹಹಹ ,ಬಲಿ ಹಾಕ್ಬಿಟ್ಟೀಯೇ. ನಾನೇನ್‌ ಎಳೇ ಕೂಸೂಂತಿಳ್ಕೊಂಡ್ಸಿಟ್ಟಿದ್ದೀಯೇನೋ ಹೆದರಿ ಸ್ಪಿಡೋಕೆ. ರಾ.ರಾ: "ಎಳೇ ಕೂಸೂ? ? ಯಾವೋನೇ ನಿನ್ನ ಎಳೇ ಕೂಸೊಂತ ತಿಳ್ಕೊಂಡಿರೋನೂ? ಕೊಟ್ಟಿ ಕೋಣ ಕೊಟ್ಟಿ ಕೋಣ ಬೆಳೆದ್ದಾಗ್ಬೆಳೆದಿದ್ದಿ. ಸರೋಜ: ಹೌದೂ, ಅದಕ್ಕೇ ಬಲಿಹಾಕಿಸ್ಕೊಳ್ಳೊಲ್ಲಾoದದ್ದು.ಅಲ್ದೆ ಬಲಿಹಾಕೋ ಭರಾಟೆಲಿ ಕೈ ಗೈೆ ಉಳ್ಕೋಗಿಬಿಟ್ಟಿತ್ತು,? ಅದನ್ಕೋಡು. ಕತ್ತೆ-ಕೋಣ-ಬೊಗಳತ್ತoತೆ! ರಾ.ರಾ: ಲೇ, ಲೇ , ಲೇ , ಬೇಡಾ, ನಿನ್ನೀನ್ನೀನಿ.... ಸೀತ: ಅಯ್ಯೋ, ಹೋಗ್ಲಿ ಸುಮ್ನಿರೀಂದ್ರೆ ರಾ.ರಾ: ! ಏಸ್ಮುಮ್ಮಿರೋದು! ಏಸ್ಮುಮ್ಮಿರೋದೂ0ತೀನಿ?........ 'ಅವಳವವಳವಳ್ಗೆ ಮೈ ಮೇಲೆ ಜ್ಞಾನ, ಜ್ಞಾನ ಇದ್ಯೇನ್ನೋಡು. ಹೆಂಡ ಹೆಂಡ ಕುಡ್ಡೋಳ್ಹಾಗ್ಮಾತಾಡ್ತ ಇದಾಳೆ.<noinclude></noinclude> pbgw5v5lqae82b1nud350wjt02o4i6v 324889 324729 2026-06-16T08:43:06Z A826 6806 /* Validated */ 324889 proofread-page text/x-wiki <noinclude><pagequality level="4" user="A826" />{{rh|ಬಹದ್ದೂರ ಗಂಡ ||೭}}</noinclude>ಸರೋಜ:- ನೀನು, ನೀನು, ನೀನೊಬ್ಳ್ಹುಟ್ಗೋoಡ್ಬoದೀದ್ಧಿಯಲ್ಲಾ ನನ್ಬೆನ್ಹಿoದೇನೇ ಗೌತಮ ಬುದ್ದನ್ಹಾಗೆ ನಂಗೆ ಬುದ್ಧಿ ಹೇಳೋಕೆ. ನೀನೇನ್ಮಾಡೀಯೇ, ಶಾಂತೂ ಶಾಂತೂ ಶಾಂತೂ ಶಾಂತೂಂತೆ ಮುದ್ಮಾಡಿ ಬೆಳೆಸ್ಪಿಟ್ಟಿದಾರೆ ಇಬ್ರೂನೂ, ಆ ಕೊಬ್ಬ್ಹಾಗ್ಮಾಡ್ಸತ್ತೆ ನಿನ್ನ. ರಾ.ರಾ:-.......ಮಾಡಿರೋದು, ರೋಗಾ? ಸರೋಜ:-. ರೋಗಾ? ಯಾರಿಗೆ ರೋಗಾ? ಕಾಫಿ ಇಲ್ದೆ ನಾನ್‌ ಕಂಗೆಡ್ತಿರೋವಾಗ ಮೂಗಿಗೆ ತುರುಕ್ಕೊಳ್ಳೋಕೆ ನಶ್ಯಕ್ಕೆ ಔಸರ ಆದದ್ದಂಗೆ? ರೋಗ್ವಂತೆ ರೋಗ!! ರಾ.ರಾ ಏನೂ, ಎನೂ, ಏನಂದೀ, ಏನೇ ಅದು ಕತ್ತೇ? 'ಬಾಯಿಗ್ಗೆಂದ್ಹಾಗೆಲ್ಲಾ ಬೊಗಳ್ತಾ ಇದ್ದಿ; ಬಲಿಹಾಕ್ಟಿಡ್ತೇನ್ನೋಡು. ಸರೋಜ: - (ಕೊರಳು ಕುಲುಕಿಸುತ್ತ) ಅಹಹಹಹಹ,ಬಲಿ ಹಾಕ್ಬಿಟ್ಟೀಯೇ. ನಾನೇನ್‌ ಎಳೇ ಕೂಸೂಂತಿಳ್ಕೊಂಡ್ಸಿಟ್ಟಿದ್ದೀಯೇನೋ ಹೆದರಿಸ್ಪಿಡೋಕೆ. ರಾ.ರಾ: "ಎಳೇ ಕೂಸೂ?? ಯಾವೋನೇ ನಿನ್ನ ಎಳೇ ಕೂಸೊಂತ ತಿಳ್ಕೊಂಡಿರೋನೂ? ಕೊಟ್ಟಿ ಕೋಣ ಕೊಟ್ಟಿ ಕೋಣ ಬೆಳೆದ್ದಾಗ್ಬೆಳೆದಿದ್ದಿ. ಸರೋಜ: ಹೌದೂ, ಅದಕ್ಕೇ ಬಲಿಹಾಕಿಸ್ಕೊಳ್ಳೊಲ್ಲಾoದದ್ದು.ಅಲ್ದೆ ಬಲಿಹಾಕೋ ಭರಾಟೆಲಿ ಕೈ ಗೈೆ ಉಳ್ಕೋಗಿಬಿಟ್ಟಿತ್ತು,? ಅದನ್ಕೋಡು. ಕತ್ತೆ-ಕೋಣ-ಬೊಗಳತ್ತoತೆ! ರಾ.ರಾ: ಲೇ, ಲೇ, ಲೇ, ಬೇಡಾ, ನಿನ್ನೀನ್ನೀನಿ.... ಸೀತ: ಅಯ್ಯೋ, ಹೋಗ್ಲಿ ಸುಮ್ನಿರೀಂದ್ರೆ ರಾ.ರಾ: ಏನ್ಸುಮ್ಮಿರೋದು! ಏಸ್ಮುಮ್ಮಿರೋದೂಂತೀನಿ?........ 'ಅವಳವವಳವಳ್ಗೆ ಮೈ ಮೇಲೆ ಜ್ಞಾನ, ಜ್ಞಾನ ಇದ್ಯೇನ್ನೋಡು. ಹೆಂಡ ಹೆಂಡ ಕುಡ್ಡೋಳ್ಹಾಗ್ಮಾತಾಡ್ತ ಇದಾಳೆ.<noinclude></noinclude> 2b34dik5bnxb8xctctw7clq4j1nu0s8 324890 324889 2026-06-16T08:43:55Z A826 6806 324890 proofread-page text/x-wiki <noinclude><pagequality level="4" user="A826" />{{rh|ಬಹದ್ದೂರ ಗಂಡ ||೭}}</noinclude>ಸರೋಜ:- ನೀನು, ನೀನು, ನೀನೊಬ್ಳ್ಹುಟ್ಗೋಂಡ್ಬಂದೀದ್ಧಿಯಲ್ಲಾ ನನ್ಬೆನ್ಹಿoದೇನೇ ಗೌತಮ ಬುದ್ದನ್ಹಾಗೆ ನಂಗೆ ಬುದ್ಧಿ ಹೇಳೋಕೆ. ನೀನೇನ್ಮಾಡೀಯೇ, ಶಾಂತೂ ಶಾಂತೂ ಶಾಂತೂ ಶಾಂತೂಂತೆ ಮುದ್ಮಾಡಿ ಬೆಳೆಸ್ಪಿಟ್ಟಿದಾರೆ ಇಬ್ರೂನೂ, ಆ ಕೊಬ್ಬ್ಹಾಗ್ಮಾಡ್ಸತ್ತೆ ನಿನ್ನ. ರಾ.ರಾ:-.......ಮಾಡಿರೋದು, ರೋಗಾ? ಸರೋಜ:-. ರೋಗಾ? ಯಾರಿಗೆ ರೋಗಾ? ಕಾಫಿ ಇಲ್ದೆ ನಾನ್‌ ಕಂಗೆಡ್ತಿರೋವಾಗ ಮೂಗಿಗೆ ತುರುಕ್ಕೊಳ್ಳೋಕೆ ನಶ್ಯಕ್ಕೆ ಔಸರ ಆದದ್ದಂಗೆ? ರೋಗ್ವಂತೆ ರೋಗ!! ರಾ.ರಾ ಏನೂ, ಎನೂ, ಏನಂದೀ, ಏನೇ ಅದು ಕತ್ತೇ? 'ಬಾಯಿಗ್ಗೆಂದ್ಹಾಗೆಲ್ಲಾ ಬೊಗಳ್ತಾ ಇದ್ದಿ; ಬಲಿಹಾಕ್ಟಿಡ್ತೇನ್ನೋಡು. ಸರೋಜ: - (ಕೊರಳು ಕುಲುಕಿಸುತ್ತ) ಅಹಹಹಹಹ,ಬಲಿ ಹಾಕ್ಬಿಟ್ಟೀಯೇ. ನಾನೇನ್‌ ಎಳೇ ಕೂಸೂಂತಿಳ್ಕೊಂಡ್ಸಿಟ್ಟಿದ್ದೀಯೇನೋ ಹೆದರಿಸ್ಪಿಡೋಕೆ. ರಾ.ರಾ: "ಎಳೇ ಕೂಸೂ?? ಯಾವೋನೇ ನಿನ್ನ ಎಳೇ ಕೂಸೊಂತ ತಿಳ್ಕೊಂಡಿರೋನೂ? ಕೊಟ್ಟಿ ಕೋಣ ಕೊಟ್ಟಿ ಕೋಣ ಬೆಳೆದ್ದಾಗ್ಬೆಳೆದಿದ್ದಿ. ಸರೋಜ: ಹೌದೂ, ಅದಕ್ಕೇ ಬಲಿಹಾಕಿಸ್ಕೊಳ್ಳೊಲ್ಲಾoದದ್ದು.ಅಲ್ದೆ ಬಲಿಹಾಕೋ ಭರಾಟೆಲಿ ಕೈ ಗೈೆ ಉಳ್ಕೋಗಿಬಿಟ್ಟಿತ್ತು,? ಅದನ್ಕೋಡು. ಕತ್ತೆ-ಕೋಣ-ಬೊಗಳತ್ತoತೆ! ರಾ.ರಾ: ಲೇ, ಲೇ, ಲೇ, ಬೇಡಾ, ನಿನ್ನೀನ್ನೀನಿ.... ಸೀತ: ಅಯ್ಯೋ, ಹೋಗ್ಲಿ ಸುಮ್ನಿರೀಂದ್ರೆ ರಾ.ರಾ: ಏನ್ಸುಮ್ಮಿರೋದು! ಏಸ್ಮುಮ್ಮಿರೋದೂಂತೀನಿ?........ 'ಅವಳವವಳವಳ್ಗೆ ಮೈ ಮೇಲೆ ಜ್ಞಾನ, ಜ್ಞಾನ ಇದ್ಯೇನ್ನೋಡು. ಹೆಂಡ ಹೆಂಡ ಕುಡ್ಡೋಳ್ಹಾಗ್ಮಾತಾಡ್ತ ಇದಾಳೆ.<noinclude></noinclude> hxk2qgv0au3mu6hghwqni1qul2qfe3e ಪರಿವಿಡಿ:Chitrakuuta (1954).djvu 106 120841 324732 2026-06-15T15:18:58Z Nihar Chakravarti 8555 ಹೊಸ ಪುಟ: 324732 proofread-index text/x-wiki {{:MediaWiki:Proofreadpage_index_template |Type=book |Title=ಚಿತ್ರಕೂಟ |Language=kn |Volume= |Author=ಪಾನ್ಯಂ ಸುಂದರಶರ್ಮ |Translator= |Editor= |Illustrator= |School= |Publisher=ಸಕಲ ಸ್ವಾತಂತ್ರ್ಯ |Address= |Year=1954 |Key= |ISBN= |OCLC= |LCCN= |BNF_ARK= |ARC= |DOI= |Source=djvu |Image=1 |Progress=X |Transclusion=no |Validation_date= |Pages=<pagelist /> |Volumes= |Remarks= |Width= |Header= |Footer= |tmplver= }} lh1l2fh07rly27unk7wkz7lwpqg9m2z 324733 324732 2026-06-15T15:21:10Z Nihar Chakravarti 8555 324733 proofread-index text/x-wiki {{:MediaWiki:Proofreadpage_index_template |Type=book |Title=ಚಿತ್ರಕೂಟ |Language=kn |Volume= |Author=ಪಾನ್ಯಂ ಸುಂದರಶರ್ಮ |Translator= |Editor= |Illustrator= |School= |Publisher=ಸಕಲ ಸ್ವಾತಂತ್ರ್ಯ |Address= |Year=1954 |Key= |ISBN= |OCLC= |LCCN= |BNF_ARK= |ARC= |DOI= |Source=djvu |Image=1 |Progress=X |Transclusion=no |Validation_date= |Pages=<pagelist 1=- 293=- /> |Volumes= |Remarks= |Width= |Header= |Footer= |tmplver= }} 3op7pdua63mt9f2b56mec095w8g70qy 324734 324733 2026-06-15T15:21:40Z Nihar Chakravarti 8555 324734 proofread-index text/x-wiki {{:MediaWiki:Proofreadpage_index_template |Type=book |Title=ಚಿತ್ರಕೂಟ |Language=kn |Volume= |Author=ಪಾನ್ಯಂ ಸುಂದರಶರ್ಮ |Translator= |Editor= |Illustrator= |School= |Publisher=ಸಕಲ ಸ್ವಾತಂತ್ರ್ಯ |Address= |Year=1954 |Key= |ISBN= |OCLC= |LCCN= |BNF_ARK= |ARC= |DOI= |Source=djvu |Image=1 |Progress=X |Transclusion=no |Validation_date= |Pages=<pagelist from=1 to=293 /> |Volumes= |Remarks= |Width= |Header= |Footer= |tmplver= }} oepioynoa1w19eiti4p4mk2y942u74q 324735 324734 2026-06-15T15:22:38Z Nihar Chakravarti 8555 324735 proofread-index text/x-wiki {{:MediaWiki:Proofreadpage_index_template |Type=book |Title=ಚಿತ್ರಕೂಟ |Language=kn |Volume= |Author=ಪಾನ್ಯಂ ಸುಂದರಶರ್ಮ |Translator= |Editor= |Illustrator= |School= |Publisher=ಸಕಲ ಸ್ವಾತಂತ್ರ್ಯ |Address= |Year=1954 |Key= |ISBN= |OCLC= |LCCN= |BNF_ARK= |ARC= |DOI= |Source=djvu |Image=1 |Progress=X |Transclusion=no |Validation_date= |Pages=<pagelist></pagelist> |Volumes= |Remarks= |Width= |Header= |Footer= |tmplver= }} ovrfta4dnlaixcp7okmmvacrfhybre9 324736 324735 2026-06-15T15:23:39Z Nihar Chakravarti 8555 324736 proofread-index text/x-wiki {{:MediaWiki:Proofreadpage_index_template |Type=book |Title=ಚಿತ್ರಕೂಟ |Language=kn |Volume= |Author=ಪಾನ್ಯಂ ಸುಂದರಶರ್ಮ |Translator= |Editor= |Illustrator= |School= |Publisher=ಸಕಲ ಸ್ವಾತಂತ್ರ್ಯ |Address= |Year=1954 |Key= |ISBN= |OCLC= |LCCN= |BNF_ARK= |ARC= |DOI= |Source=djvu |Image=1 |Progress=X |Transclusion=no |Validation_date= |Pages=<pagelist from=1 to=293 /> |Volumes= |Remarks= |Width= |Header= |Footer= |tmplver= }} mkr369yqb85y1if9vje6fuqz2of8gnc 324737 324736 2026-06-15T15:37:28Z Nihar Chakravarti 8555 324737 proofread-index text/x-wiki {{:MediaWiki:Proofreadpage_index_template |Type=book |Title=ಚಿತ್ರಕೂಟ |Language=kn |Volume= |Author=ಪಾನ್ಯಂ ಸುಂದರಶರ್ಮ |Translator= |Editor= |Illustrator= |School= |Publisher=ಸಕಲ ಸ್ವಾತಂತ್ರ್ಯ |Address= |Year=1954 |Key= |ISBN= |OCLC= |LCCN= |BNF_ARK= |ARC= |DOI= |Source=djvu |Image=1 |Progress=X |Transclusion=no |Validation_date= |Pages=<pagelist /> |Volumes= |Remarks= |Width= |Header= |Footer= |tmplver= }} lh1l2fh07rly27unk7wkz7lwpqg9m2z 324753 324737 2026-06-16T04:15:17Z Nihar Chakravarti 8555 324753 proofread-index text/x-wiki {{:MediaWiki:Proofreadpage_index_template |Type=book |Title=ಚಿತ್ರಕೂಟ |Language=kn |Volume= |Author=ಪಾನ್ಯಂ ಸುಂದರಶರ್ಮ |Translator= |Editor= |Illustrator= |School= |Publisher=ಸಕಲ ಸ್ವಾತಂತ್ರ್ಯ |Address= |Year=1954 |Key= |ISBN= |OCLC= |LCCN= |BNF_ARK= |ARC= |DOI= |Source=djvu |Image=1 |Progress=X |Transclusion=no |Validation_date= |Pages=<pagelist 1 /> |Volumes= |Remarks= |Width= |Header= |Footer= |tmplver= }} 1irhp0w5hkpf20svtq9jmdszffgh6v7 324768 324753 2026-06-16T04:34:56Z Nihar Chakravarti 8555 324768 proofread-index text/x-wiki {{:MediaWiki:Proofreadpage_index_template |Type=book |Title=ಚಿತ್ರಕೂಟ |Language=kn |Volume= |Author=ಪಾನ್ಯಂ ಸುಂದರಶರ್ಮ |Translator= |Editor= |Illustrator= |School= |Publisher=ಸಕಲ ಸ್ವಾತಂತ್ರ್ಯ |Address= |Year=1954 |Key= |ISBN= |OCLC= |LCCN= |BNF_ARK= |ARC= |DOI= |Source=djvu |Image=1 |Progress=C |Transclusion=no |Validation_date= |Pages=<pagelist 1 /> |Volumes= |Remarks= |Width= |Header= |Footer= |tmplver= }} cy1uhpyy397nkt7scvd5xdelpq4cnqf 324769 324768 2026-06-16T04:41:14Z Nihar Chakravarti 8555 324769 proofread-index text/x-wiki {{:MediaWiki:Proofreadpage_index_template |Type=book |Title=ಚಿತ್ರಕೂಟ |Language=kn |Volume= |Author=ಪಾನ್ಯಂ ಸುಂದರಶರ್ಮ |Translator= |Editor= |Illustrator= |School= |Publisher=ಸಕಲ ಸ್ವಾತಂತ್ರ್ಯ |Address= |Year=1954 |Key= |ISBN= |OCLC= |LCCN= |BNF_ARK= |ARC= |DOI= |Source=djvu |Image=1 |Progress=C |Transclusion=no |Validation_date= |Pages=<pagelist /> |Volumes= |Remarks= |Width= |Header= |Footer= |tmplver= }} 4bi7zf1s2dgrewbcn3ld7zf2fh91m1l ಪುಟ:Chitrakuuta (1954).djvu/೧೪ 104 120842 324754 2026-06-16T04:26:34Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಚಿತ್ರಕೂಟ 324754 proofread-page text/x-wiki <noinclude><pagequality level="1" user="Nihar Chakravarti" /></noinclude>ಚಿತ್ರಕೂಟ<noinclude></noinclude> o9h6l53t289fsb1pxjzsgj1fmrxci5k ಪುಟ:Chitrakuuta (1954).djvu/೧ 104 120843 324755 2026-06-16T04:30:00Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: BROWEN BOOK ONLY TIGHT BINDING BOOK 324755 proofread-page text/x-wiki <noinclude><pagequality level="1" user="Nihar Chakravarti" /></noinclude>BROWEN BOOK ONLY TIGHT BINDING BOOK<noinclude></noinclude> 7u5ieajykpubx8sug5jkiy6ddjtvccj ಪುಟ:Chitrakuuta (1954).djvu/೨ 104 120844 324756 2026-06-16T04:30:07Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: UNIVERSAL LIBRARY ವಾ OU 20036 AdVddl | IVSHAINN 324756 proofread-page text/x-wiki <noinclude><pagequality level="1" user="Nihar Chakravarti" /></noinclude>UNIVERSAL LIBRARY ವಾ OU 20036 AdVddl | IVSHAINN<noinclude></noinclude> cp4eoasg4yfifqpg4469h7lar97gqz9 ಪುಟ:Chitrakuuta (1954).djvu/೩ 104 120845 324757 2026-06-16T04:30:14Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ Created blank page 324757 proofread-page text/x-wiki <noinclude><pagequality level="1" user="Nihar Chakravarti" /></noinclude><noinclude></noinclude> 70g7gopwzmx32j50zcsxu9orsfc2ju3 ಪುಟ:Chitrakuuta (1954).djvu/೪ 104 120846 324758 2026-06-16T04:30:21Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: OSMANIA UNIVERSITY 112& Call No. Kk & ತ್ರ Accession No. Author ಓಂ “ತೀಡ ಶಸ] ‘Title Th k ಹು 1 ಸೆ hé late Belek. last marked 14 36 324758 proofread-page text/x-wiki <noinclude><pagequality level="1" user="Nihar Chakravarti" /></noinclude>OSMANIA UNIVERSITY 112& Call No. Kk & ತ್ರ Accession No. Author ಓಂ “ತೀಡ ಶಸ] ‘Title Th k ಹು 1 ಸೆ hé late Belek. last marked 14 36<noinclude></noinclude> rjxi9gcg7k9hqsh9tfjh0ta74fb3pa9 ಪುಟ:Chitrakuuta (1954).djvu/೫ 104 120847 324759 2026-06-16T04:30:27Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ Created blank page 324759 proofread-page text/x-wiki <noinclude><pagequality level="1" user="Nihar Chakravarti" /></noinclude><noinclude></noinclude> 70g7gopwzmx32j50zcsxu9orsfc2ju3 ಪುಟ:Chitrakuuta (1954).djvu/೬ 104 120848 324760 2026-06-16T04:30:34Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ Created blank page 324760 proofread-page text/x-wiki <noinclude><pagequality level="1" user="Nihar Chakravarti" /></noinclude><noinclude></noinclude> 70g7gopwzmx32j50zcsxu9orsfc2ju3 ಪುಟ:Chitrakuuta (1954).djvu/೭ 104 120849 324761 2026-06-16T04:30:41Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ Created blank page 324761 proofread-page text/x-wiki <noinclude><pagequality level="1" user="Nihar Chakravarti" /></noinclude><noinclude></noinclude> 70g7gopwzmx32j50zcsxu9orsfc2ju3 ಪುಟ:Chitrakuuta (1954).djvu/೮ 104 120850 324762 2026-06-16T04:30:48Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಚಿತ್ರಕೂಟ ವೀರಕೇಸರಿ ಮೋಹನ ಪ್ರಕಾಶನ ಕೃಷ್ಣಮೂರ್ತಿಪುರಂ :: ಮೈಸೂರು 324762 proofread-page text/x-wiki <noinclude><pagequality level="1" user="Nihar Chakravarti" /></noinclude>ಚಿತ್ರಕೂಟ ವೀರಕೇಸರಿ ಮೋಹನ ಪ್ರಕಾಶನ ಕೃಷ್ಣಮೂರ್ತಿಪುರಂ :: ಮೈಸೂರು<noinclude></noinclude> qstfcypsmx4ciyn5irffw1t0xp9o4tc ಪುಟ:Chitrakuuta (1954).djvu/೯ 104 120851 324763 2026-06-16T04:30:54Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಮೊದಲನೆಯ ಮುದ್ರಣ : ಆಗಸ್ಟ ೧೯೫೪ ನೋಹನ ಕಾದಂಬರಿ ೩. ಎಲ್ಲ ಹಕ್ಕುಗಳೂ ಲೇಖಕರವು ಮುಖಚಿತ್ರ : ಎಸ್‌. ರಮೇಶ್‌ ರೂ. ೧-೮-೦ 324763 proofread-page text/x-wiki <noinclude><pagequality level="1" user="Nihar Chakravarti" /></noinclude>ಮೊದಲನೆಯ ಮುದ್ರಣ : ಆಗಸ್ಟ ೧೯೫೪ ನೋಹನ ಕಾದಂಬರಿ ೩. ಎಲ್ಲ ಹಕ್ಕುಗಳೂ ಲೇಖಕರವು ಮುಖಚಿತ್ರ : ಎಸ್‌. ರಮೇಶ್‌ ರೂ. ೧-೮-೦<noinclude></noinclude> rnnl3t6d4r0cpnovm9rd83jjap62ccb ಪುಟ:Chitrakuuta (1954).djvu/೧೦ 104 120852 324764 2026-06-16T04:31:05Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೨ ಸೈಪಿ ೨ ಮಿಸಿಹೆಬರ ES ; ಚಿತ್ರಕೂ ೧ಬ '. ಇದೊಂದು ಸಾಮಾಜಿಕ ಕಾದಂಬರಿ. ನಮ್ಮ ಸಮಾಜ ದಲ್ಲಿ ಈಗಲೂ ನಿಶೇಷ ರೂಢಿಯಲ್ಲಿರುವ, ವಿಷಮ ವಿವಾಹೆಗಳ ಸುಖದುಃಖ ಗಳನ್ನು ಕಥಾರೂಪವಾಗಿ ಚಿತ್ರಿಸುವುದೇ ಇದರ ರಚನೆಯ ಮುಖ್ಯ ಉದ್ದೇಶ ವ... 324764 proofread-page text/x-wiki <noinclude><pagequality level="1" user="Nihar Chakravarti" /></noinclude>೨ ಸೈಪಿ ೨ ಮಿಸಿಹೆಬರ ES ; ಚಿತ್ರಕೂ ೧ಬ '. ಇದೊಂದು ಸಾಮಾಜಿಕ ಕಾದಂಬರಿ. ನಮ್ಮ ಸಮಾಜ ದಲ್ಲಿ ಈಗಲೂ ನಿಶೇಷ ರೂಢಿಯಲ್ಲಿರುವ, ವಿಷಮ ವಿವಾಹೆಗಳ ಸುಖದುಃಖ ಗಳನ್ನು ಕಥಾರೂಪವಾಗಿ ಚಿತ್ರಿಸುವುದೇ ಇದರ ರಚನೆಯ ಮುಖ್ಯ ಉದ್ದೇಶ ವಾಗಿದೆ. 4 ನಾನು ಇದುವರೆಗೆ ಬರೆದಿರುವ ಐತಿಹಾಸಿಕ ಕಾದಂಬರಿಗಳ ಜನಪ್ರಿಯೆ. ವಾಗಿವೆ, ಎಂದು ತಿಳಿದಿದ್ದೇನೆ. ಸಾಮಾಜಿಕ ಕಾದಂಬಿರಿಗಳನ್ನು ಈಗ ಬರೆಯಲು ನೊದಳು ಮಾಡಿದ್ದೇನೆ. ಇದೂ ನನ್ನ ಸ್ನೇಹಿತರ ಬಲವಂತ. ದಿಂದ! ನಾನು ಕಾದಂಬರಿಗಳನ್ನು ಬರೆಯುವುದರಲ್ಲಿ ನಿಸ್ಸೀಮನೆಂದು ಹೇಳಿಕೊಳ್ಳೆ ವುದಿಲ್ಲ. ನಾನು ಉತ್ತಮ ಸಾಹಿತಿ, ಉದ್ದಾಮ ಪಂಡಿತನೆಂದು ಹೇಳಿಕೊಳ್ಳುವಂಥಾ ಕೃತಿಗಳೇನೂ ಇಲ್ಲವೆಂದು ಧಾರಾಳವಾಗಿ ಹೇಳ ಬಲ್ಲೆ! ಅದಾಗೂ ಕಾದಂಬರಿಗಳನ್ನು ಬರೆಯುವುದರಲ್ಲಿ ನನಗೆ ವಿಶೇಷ ಅಭಿರುಚಿ ಇತು ಇದೆ. ಅದರಿಂದ ಹಲ ವ್ರ ಕೃತಿಗಳನ್ನು ಬರೆಯುತ್ತಿದ್ದೇನೆ. pil ಸಾರಾ ಸಾರವಿಚಾರವು ವಾಚಕರಿಗೆ ಸೇರಿದ್ದು, ಕಾದಂಬರಿಗಳಲ್ಲಿ ಹಳೆಯ ಪಂಥ ಹೂತ ಸತಿನಿಗೆಳಾ ಇರವಔಂುು ನಕು ತಿಳೆದಿದ್ದೇನೆ. Ri ಹಳೆಯ rn 6 ಇದೆ ಸ್ತು ಕ್‌ ಗ್ರ 9 ವ್ಸ ಎಲೆ x) ಹಂದ. ಆ ಹಳೆಯ 8 ಂಥದಲ್ಲ ಪ್ರೀತಿಯುಳ್ಳವರಿಗೆ ನನ್ನ ಕೃತಿಗಳು ಸ್ವಲ್ಪ ಗ್ರ ೦ದು ನಾನೇ ಆನೇಕ ವಿಧವಾಗಿ ದ್ರೆ ಲ ಸಾಹಿತ್ಯ? ಎಂಬ ಹೆಸರಿಟ್ಟು ಕರೆಯುವುದನ್ನೂ ನೋಡಿದ್ದೇನೆ. ಅವು ಯಾವ ಅರ್ಥದಲ್ಲಿ " ಪ್ರಗತಿ' ತ ಷ್ಟ ಎನ್ನಿಸಿ ತೊಳ್ಳುತ್ತವೆಯೋ ಹೇಳುವುದು ಸ್ಟ! ಒಬ್ಬ ನಲ್ಲಿ ಅವೆಲ್ಲವೂ ಆಂಗ್ಲ ಇದಂಬರಿಗಳ ಛಾಯೆಯಲ್ಲಿವೆ, ಎಂದು ಹೇಳಬಹುದು. ನಮ್ಮಲ್ಲಿ ಬಹು ಮಂದಿ ಆಂಗ್ಲ ಭಾಷಾಗ್ರಂಥಗಳಲ್ಲಿ ಅಭಿರುಚಿಯುಳ್ಳ`<noinclude></noinclude> 3o98facecu39nok4mnxa3d7bc6u8c3x ಪುಟ:Chitrakuuta (1954).djvu/೧೧ 104 120853 324765 2026-06-16T04:31:13Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: IV ವರಿದ್ದಾರೆ; ಆಂಗ್ಲ ಭಾಷಾ ಪಂಡಿತರೂ ಇದ್ದಾರೆ. ಅವರ ಒರೆಗಲ್ಲಿನಲ್ಲಿ ನೋಡಿದರೆ ನಮ್ಮ ಕನ್ನ ಡದ ಹೊಸ ಗ್ರಂಥಗಳು, ಅದರಲ್ಲಿಯೂ ಕಾದಂಬರಿಗಳು ಎಂಥಾ ಮಟ್ಟಸ್ಸ್‌ ಬರುತ್ತವೆ. ಎಂಬುದನ್ನು ವಿದ್ವಾಂಸರು ನೋಡಬೇಕು. ಒಂದಿನ... 324765 proofread-page text/x-wiki <noinclude><pagequality level="1" user="Nihar Chakravarti" /></noinclude>IV ವರಿದ್ದಾರೆ; ಆಂಗ್ಲ ಭಾಷಾ ಪಂಡಿತರೂ ಇದ್ದಾರೆ. ಅವರ ಒರೆಗಲ್ಲಿನಲ್ಲಿ ನೋಡಿದರೆ ನಮ್ಮ ಕನ್ನ ಡದ ಹೊಸ ಗ್ರಂಥಗಳು, ಅದರಲ್ಲಿಯೂ ಕಾದಂಬರಿಗಳು ಎಂಥಾ ಮಟ್ಟಸ್ಸ್‌ ಬರುತ್ತವೆ. ಎಂಬುದನ್ನು ವಿದ್ವಾಂಸರು ನೋಡಬೇಕು. ಒಂದಿನ ಕವಿಯೊಬ್ಬನು ಆಸರಿತೋಷಾದ್ರಿದುಷಾಂ ಬಜ ಸಾಧುಮನ್ಯೆ ಸಹಯೋಗ ವಿಜಾ ನಂ' ಎಂದು ಹೇಳಿದ್ದಾನೆ. ವಿದ್ವಾಂಸರಿಗೆ ಸಂತೋಷವಾ 2 NS, ಗದಿದ್ದರೆ ತನ್ನ ಪ್ರಯೋಗ ವಿಜ್ಞಾನವು ಸಾಧುವಾದುದೆಂದು ಹೇಳಲಾಗುವುದಿಲ್ಲ ಎಂಬುದು ಅದರ ತಾತ್ಪರ್ಯ | ಈ ಸಿದ್ಧಾಂತವನ್ನು ಎಲ್ಲ ಗ್ರಂಥಕರ್ತರೂ ಒಪ್ಪಬೇಕೆಂಬ ನಿಧಿಯೇನೂ ಇಲ. [ae ಕಥೆ ಕಾದಂಬರಿಗಳು ರಸಿಕ ಮನರಂಜಕವಾಗಿರಬೇಕು, ಎಂಬುದೊಂದು ಸೂತ್ರವಿದೆ. ಇದೇನೋ ಬಹುಜನರಿಗೆ ಒಪ್ಪುವ ಮಾತು. ಆಗ್ಯ ಕಥೆ ಹೇಳುವ ಭಾಷೆಯು ಹೇಗಿದೆ, ಕಥೆಯ ರೀತಿಯು ಹೇಗೆ ಓಡುತ್ತದೆ ರಸ ಪುಸ್ಲಿಯು ಹೇಗಿದೆ ಒಟ್ಬಿನಲ್ಲಿ ಓದುಗರ ಮನ್ಸಸಿನ ಮೇಲೆ ಎಂಥಾ ಪರಿಣಾಮ ಉಂಟಾಗುತ್ತದೆ, ಎಂಬ ಆಂಶಗಳು ಮುಖ್ಯವಾದುವು, ಇವು ಮಾತ್ರ ಹಳೆಯ ಪಂಥವಾಗಲೀ ಹೊಸ ಪಂಥನಾಗಲೀ ಸಮಾನವಾಗಿವೆ. ಈ ದೃಷ್ಟಿ ಯಿಂದ ಸಹೃದಯರು ನೋಡುವರೆಂಬ ಭರವಸೆ ನನಗಿದೆ. ಕಾದಂಬರಿಗಳಲ್ಲಿ ರಾಜಕೀಯ ಹಿನ್ನೆಲೆಯನ್ನು ಕೊಡುವುದೊಂದು ಪಂಧವಿಜೆ. ಇದಕ್ಕೂ ಎಲ್ಲೆ ಇರಬೇಕು. ಕಮ್ಯೂನಿಜಂ, ನೋಷಿಯಲಿಜಂ, ಗಾಂಧಿ ಇಜಂ, ಅನಾರ್ಕಿಜಂ, ಇವುಗಳನ್ನೇ ಅತಿ ಮುಖ್ಯವಾಗಿಟ್ಟು ಕೊಂಡು ಕಾದಂಬರಿಗಳನ್ನು ರಚಿಸುವುದು ಸರಿಯಲ್ಲವೆಂದು ನನ್ನ ಭಾವನೆ. ಇಂಥಾ" ಇಜಂ'ಗಳ ತಾತ್ವಿಕ ದೃಷ್ಟಿಯು ಸಾಮಾನ್ಯ ವಾಚಕರನ್ಲಿ ಉಂಬಾಗುವುದೂ ಇಲ್ಲ; ಕಾದಂಬರಿಯ ಸ್ವಾರಸ್ಯವೂ ಕೆಡುತ್ತದೆ. ಕಾದಂಬರಿಯ ರುಚಿ ಮತ್ತು ಸ್ವಾರಸ್ಯಗಳನ್ನು ತುಂಬಿದರೆ ಆ "ಆಜಂ 'ಗಳ ತತ್ವವು ನಾಶವಾಗುತ್ತದೆ. ಅಪಭ್ರಂಶವಾಗುತ್ತದೆ. ಗ್ರಂಥ ಕರ್ತರಿಗೆ ಆ" ಇಜಂ'ಗಳು ಪ್ರಿಯೆವಾಗಿದ್ದರೆ ಆ" ಇಜಂಶಗಳನ್ನೇ ತರ್ಕ ಬದ್ದವಾಗಿ ಉಪನ್ಯಾಸ ರೂಪದಲ್ಲಿ ಬರೆದು ಸೇವೆ ಸಲ್ಲಿಸುವುದು ಉತ್ತಮ ಮಾರ್ಗ. ಕಥೆ ಕಾದಂಬರಿಗಳಲ್ಲಿ ಆ " ಇಜಂ 'ಗಳನ್ನು ತಂದು ವಾದ ವಿವಾ<noinclude></noinclude> nldv4lo9nndvg5c2vc9tecmzj2jz66k ಪುಟ:Chitrakuuta (1954).djvu/೧೨ 104 120854 324766 2026-06-16T04:31:25Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: v ದಗಳನ್ನು ಬೆಳೆಸುವುದಂತೂ ಆಸಂಬದ್ಧ ಪ್ರಲಾಪ ವೇ ಆಗುತ್ತದೆ. ಜಟ ಕಾದಂಬರಿಗಳಲ್ಲಿ" ಸಮಾಜದ ಸ್ವರೂಪ, ಸಾಮಾಜಿಕ ಪದತಿಗಳು, ಇವುಗಳು ಪ್ರತ್ಯೇಕವಾಗಿಯೂ ಪರೋಕ್ಷವಾಗಿಯೂ ತುಂಬಿ ಕೊಂಡಿವೆ, ಇಂದಿನ ನಮ್ಮ ಸಮಾಜದಲ್ಲಿ ಪ್... 324766 proofread-page text/x-wiki <noinclude><pagequality level="1" user="Nihar Chakravarti" /></noinclude>v ದಗಳನ್ನು ಬೆಳೆಸುವುದಂತೂ ಆಸಂಬದ್ಧ ಪ್ರಲಾಪ ವೇ ಆಗುತ್ತದೆ. ಜಟ ಕಾದಂಬರಿಗಳಲ್ಲಿ" ಸಮಾಜದ ಸ್ವರೂಪ, ಸಾಮಾಜಿಕ ಪದತಿಗಳು, ಇವುಗಳು ಪ್ರತ್ಯೇಕವಾಗಿಯೂ ಪರೋಕ್ಷವಾಗಿಯೂ ತುಂಬಿ ಕೊಂಡಿವೆ, ಇಂದಿನ ನಮ್ಮ ಸಮಾಜದಲ್ಲಿ ಪ್ರಾಚೀನ ಸಂಸ್ಕತಿಯ ಹಿನ್ನೆಲೆ ಮತ್ತು ಕುರುಹುಗಳೂ ಇವೆ. ನವೀನ ನಾಗರಿಕತೆಯ ಪ್ರಭಾವವೂ ಇದೆ. ಹಿಂದಿನ ದಾಗಲೀ ಇಂದಿನದಾಗಲೀ ಯಾವುದನ್ನೂ ನಿಶ್ಶೇಷವಾಗಿ ಆಳಿಸಿಬಿಡುವುದು ಸಾಧ್ಯವಿಲ್ಲ. ಕೆಲವರು ಲೇಖಕರು ಹಿಂದಿನದೆಲ್ಲವನ್ನೂ ಅಳಿಸಿಬಿಡುತ್ತೇವೆಂಬ ಹುಂಬಿನಿಂದ ಹೊರಟಿದ್ದಾರೆ. ಪ್ರಯೋಗದಲ್ಲಿರುವ ಪ್ರಾಚೀನ ಸಂಸ್ಕೃತಿ, ಮತ್ತು ನಾಗರಿಕತೆಗಳನ್ನೂ, ಹೊಸ ವಾತಾವರಣದ ಪ್ರಭಾವವನ್ನೂ ಸಮನ್ವಯ ಮಾಡಿ ಸೇವೆ ಮಾಡುವುದೇ ನನ್ನ ಧ್ಯೇಯ. ಈ ಗ್ರಂಥದಲ್ಲಿ ಆ ಪ್ರಯತ್ನ ವನ್ನೇ ಮಾಡಿದ್ದೇನೆ. ಈ ಕಾದ)ಬರಿಗೆ ಚಿತ್ರ ಕೂಟ ' ಎಂದು ಹೆಸರು ಕೊಟ್ಟಿದ್ದೇನೆ. ಅದರಲ್ಲಿ ಅಂತರಾರ್ಥವಾಗಲೀ ಅತಿಶಯವಾಗಲೀ ಏನೂ ಇಲ್ಲ. ಈ ಕಥೆಯ ನಾಯಕಿ ಶ್ಯಾಮಲೆ. "ಚಿತ್ರ ಕೂಟ” ಎಂಬ ಆಶ್ರಮದ ಜೀವನ ದಿಂದ ಶ್ಯಾಮಲೆಯ ಜೀವನವು ಪರಿವರ್ತನೆಯಾಗುತ್ತದೆ, ಆದ್ದರಿಂದ ಈ ಗ್ರಂಥಕ್ಕೆ ಈ ಹೆನರಿಟ್ಟದ್ದೇನೆ. ಈ ಕಾದಂಬರಿಯಲ್ಲಿ ಶ್ಯಾಮಲೆಯು ನಾಯಕೆ. ರಂಗರಾಯ ಶ್ಯಾಮಲೆಂಯ ಪತಿ. ನಾರಾಯಣ ಶ್ಕಾ ಮಲೆಯ ಅಣ್ಣ ತಾರಾ ನಾರಾಯಣನ ಪತ್ನಿ. ನಾರ್ವತಮ ಶ್ರ ಶ್ಯಾಮಲೆಯ ಜು ಇವಿಷ್ಟು ಮುಖ್ಯ ಪಾತ್ರ ಗಳು. "ಕಾ ಚು! ಗೃ ಹಸ್ಥ ಜೀವನವನ್ನು ನಡಸಿದ ಕ್ರಮ್ಮ ಮಗಳು ಮತ್ತು ಸಚಿ ಪವಿತ್ರ ಪೆ ನಿ ಮ. ಜರು ರು ಜೀವನದಲ್ಲಿ ಹೇಗೆ ಗಳೂ ನಡತೆ ಶ್ಯಾ ಮಲೆಯ ಜನಸೇವೆ,- ಇವೆಲ್ಲವೂ ಈ ಕಥೆಯಲ್ಲಿ ಚಿತ್ರಿತವಾಗಿದೆ. ನಮ್ಮ 0 ಜೀವನದಲ್ಲಿ ಬಡವರು ಭಾಗ್ಯವಂತರು, ಎಂಬ ಭೇದದಲ್ಲಿ ಎಷ್ಟು ಜೀವಿಗಳು ಸಿಕ್ಕಿ ನರಳುವುನೆಂಬ ಚಿತ್ರವೂ ವರ್ಣಿಸಲ್ಪಟ್ಟಿದೆ. ಇದೊಂದು ನೊಂದ ಜೀವದ ಕಥೆ. ಈ ಕಥೆಯಲ್ಲಿ ಸಮಾಜ<noinclude></noinclude> 1pwqytoxmgkosq5b47m1s6l1bffj2iu ಪುಟ:Chitrakuuta (1954).djvu/೧೩ 104 120855 324767 2026-06-16T04:31:31Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 7] ಸಂಸ್ಕರಣದ ಮಹೆತ್ಪಾಧನವನ್ನೇನೂ ಪ್ರಯತ್ನ ಪಟ್ಟಿಲ್ಲ. ನಮ್ಮ ಸಮಾಜದಲ್ಲಿ ಪೂರ್ವಸಂಪ್ರ ದಾಯ ಮತ್ತು ನವೀನ ಜೀವನದ ಪರಿಸ್ಥಿತಿಗಳ ಘೆರ್ಷಣದಿಂದ ಜೀವನವು ಸೀಗೆ ಸಾಗುತ್ತದೆ, ಎಂಒ ಒಂದು ಚಿತ್ರ ವನ್ನು ಮಾತ್ರ ವರ್ಣಿಸ... 324767 proofread-page text/x-wiki <noinclude><pagequality level="1" user="Nihar Chakravarti" /></noinclude>7] ಸಂಸ್ಕರಣದ ಮಹೆತ್ಪಾಧನವನ್ನೇನೂ ಪ್ರಯತ್ನ ಪಟ್ಟಿಲ್ಲ. ನಮ್ಮ ಸಮಾಜದಲ್ಲಿ ಪೂರ್ವಸಂಪ್ರ ದಾಯ ಮತ್ತು ನವೀನ ಜೀವನದ ಪರಿಸ್ಥಿತಿಗಳ ಘೆರ್ಷಣದಿಂದ ಜೀವನವು ಸೀಗೆ ಸಾಗುತ್ತದೆ, ಎಂಒ ಒಂದು ಚಿತ್ರ ವನ್ನು ಮಾತ್ರ ವರ್ಣಿಸಿದ್ದೇನೆ. ಇಂತಹ ನೂರಾರು ಚಿತ್ರಗಳು ನಮ, ಮುಂದೆ ಇನೆ. ಈ ಕಥೆಯಲ್ಲಿ " ಗಾಂಧಿಯುಗ'ದ ಹಿನ್ನೆಲೆಯನ್ನು ಕೊದಲ್ಪಟ್ಟದೆ. ಅದನೆ ಕ್ವ ನಾನು ಹೆಚ್ಚಿನ ಮಹತ್ವಕೊಬಟ್ಬಿಲ್ಲ. ಆಜಿಲ್ಲಾ ಬ ಬ ಬೂ ಶಭ ೂಃ ಸ್ಪರ ಹವಣಿಸಿರುವ ತೆರೆ. ಈ ಕಥೆಯಲ್ಲಿ ಇನ್ನೂ ಸೆಲವು ವ ~~ (6 (C ಹ ಮುಖ್ಯ ಪಾತ್ರಗಳಲ್ಲ. ಕಥಾ ನಿರ್ವಹಣೆಗಾಗಿ ತೆಗೆದು ಚಕರು ಆ ಪಾತ್ರಗಳ ಭೆಳಪಣಿಗೆಗೆ ಆಷ್ಟು ಗಮನ ಕೂಡಚಾರದು; ಕನ್ನ ಡ ಕಾದಂಬರಿಗಳ ಸಹಲ (| ರ್ರವಾಹವೇ ಹರಿದು ಬರುತ್ತಿದೆ. ಸಾರಾನಾರ ಗ್ರಹಣ: ಕರಿಗೇ ಸೇರಿದ್ದು. ವಿಮರ್ಶಕರು ರ RNS ಕಾದಂಬಂಗಳನ್ನು ಒಡೆದು ಸರಿಮಳನನ್ನು ನೋಡಿ ಕಿತ್ತೆಸೆಯತಿ ದಲ್ಲ ಇಷ್ಟು ವಿಸ್ತಾ ರವಾದ ಪೀಠಿಕೆಯನ್ನು ವಾಚಕರ ವುಂದೆ ಮಂಡಿಸುವುದು ಅಗತ್ಯವೆಂದು ಭಾನಿಸ್ಕಿ, ಈ ಪೀಠಿಕೆ ಯನ್ನು ಬರೆದಿದ್ದೇನೆ. ವಾಚಕನ ವೇಮನ ನನ್ನ ಗ್ರಂಥಗಳ ಮೇಲಿ ಯಾವಾಗಲೂ ಅತಿಶಯನಾಗಿದೆ. ಈ ಗ್ರಂಭಕ್ಕೂ ಧಾ ಪುರಸ್ಕಾರವು ದೊರೆಯಲೆಂದು ಆಶಿಸುತ್ತೇನೆ. ಇತಿ ವೀರಶೇಸರಿ<noinclude></noinclude> 05d31zkw56osntx0aa5drw9s40ngpvc ಪುಟ:Chitrakuuta (1954).djvu/೧೫ 104 120856 324770 2026-06-16T04:42:12Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ Created blank page 324770 proofread-page text/x-wiki <noinclude><pagequality level="1" user="Nihar Chakravarti" /></noinclude><noinclude></noinclude> 70g7gopwzmx32j50zcsxu9orsfc2ju3 ಪುಟ:Chitrakuuta (1954).djvu/೧೬ 104 120857 324771 2026-06-16T04:42:26Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧ ಬೆಂಗಳೂರಿನಲ್ಲಿ ಮಾವಳ್ಳಿಯಲ್ಲಿ ಒಂದು ಸಣ್ಣ ಮನೆ. ಬೆಳಗ್ಗೆ ಒಂಭತ್ತು ಗಂಬೆಯೆ ಸಮಯವಿರಬಹುದು. « ಶ್ಪಾಮು. -ಶ್ಯಾಮೂ ಎಂದು ಬಾಗಿಲು ಡ್‌ ತಟ್ಟದ ಸ ಸದ್ದಾ ಯಿತು. ಸಾರ್ವತಮ್ಮನು ಬಂದು ಚೆಲಕ ತೆಗೆದು ಬಾಗಿಲನ್ನು ಅರ್... 324771 proofread-page text/x-wiki <noinclude><pagequality level="1" user="Nihar Chakravarti" /></noinclude>೧ ಬೆಂಗಳೂರಿನಲ್ಲಿ ಮಾವಳ್ಳಿಯಲ್ಲಿ ಒಂದು ಸಣ್ಣ ಮನೆ. ಬೆಳಗ್ಗೆ ಒಂಭತ್ತು ಗಂಬೆಯೆ ಸಮಯವಿರಬಹುದು. « ಶ್ಪಾಮು. -ಶ್ಯಾಮೂ ಎಂದು ಬಾಗಿಲು ಡ್‌ ತಟ್ಟದ ಸ ಸದ್ದಾ ಯಿತು. ಸಾರ್ವತಮ್ಮನು ಬಂದು ಚೆಲಕ ತೆಗೆದು ಬಾಗಿಲನ್ನು ಅರ್ಥ ತೆಗೆದಳು. ಆಗಂತುಕನು,, “ ಶ್ಯಾಮಣ್ಣ ನವರು ಇದ್ದಾರೇನಮ್ಮಾ? ” ಎಂದು ಕೇಳಿದನು. ಪಾರ್ವತಮ್ಮನು, “ ಇದಾರೆ ಬನ್ನಿ ! ಒಳಗೆ ಬಸ್ಸಿ ” ಎಂದು ಹೇಳುತ್ತಾ ಪೂರ್ತಾ ಬಾಗಿಲು ತೆರೆದು ತಲೆ ಬಗ್ಗಿಸಿ ಸಿಥೊಂಡು ಒಳಗೆ ಹೋದಳು. ಅವಳ ಹಿಂದೆಯೇ ಆತನು ಒಳಹೊಕ್ಕನು. ಹೆಜಾರದಲ್ಲಿ ಚಾಪೆಯ ಮೇಲೆ ಕೈ ತೋರಿಸುತ್ತಾ, “ ಕುಳಿತುಕೊಳ್ಳಿ. ದೇವರ ಪೂಜೆ ಮಾಡುತ್ತಿದ್ದಾರೆ ಈಗಲೇ ಬರುತ್ತಾರೆ.” ಎಂದು ಪಾರ್ವತ ಮ್ಮನು ಹೇಳಿ ಅಡಿಗೆ ಮನೆಯೊಳಗೆ ಹೋದಳು. ಆಗಂತುಕನು ಕೈಯ್ಯಲ್ಲಿದ್ದ ಖಾದೀ ಚೀಲವನ್ನು ಚಾಪೆಯ ಮೇಲಿಟ್ಟು ಕುಳಿತುಕೊಂಡನು. ಶ್ಯಾಮೆಣ್ಣನು ಅಡಿಗೆ ಮನೆಯೊಳಗೆ ದೇವರ ಪೂಜೆ ಮಾಡುತ್ತಿದ್ದನು. ತ ನು ಒಳಗೆ ಹೋಗುತ್ತ? ೧5 ಮೆಲ್ಲನೆಯಿ ಧ್ವನಿಯಿಂದ ೀ ಯಾರದು ? ಯಾರು ಬಂದಿದ್ದಾರೆ ೪ ೫ ಎಂದು ಕೇಳಿದರು. ಪಾರ್ವತಮ್ಮನು “ ಗುರುತಿಲ್ಲ ಯಾರೋ ಕಾಂಗ್ರೆಸ್ಸಿನವರು, ದೊಡ್ಡ ಖಾದಿ ಜುಬ್ಬಾ, ಗಾಂಧಿ ಟೋಪಿ! ಹಜಾರದಲ್ಲಿ ಚಂತ ಮೇಲಿ ಕುಳ್ಳಿರಿಸಿ ದ್ದೇನೆ » ಎಂದಳು,<noinclude></noinclude> 4azocrzc2ofu06gymewektpn4ns5vqu ಪುಟ:Chitrakuuta (1954).djvu/೧೭ 104 120858 324772 2026-06-16T04:42:33Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ತಿ ಚಿತ್ರಕೂಟ ಸರಿ! ಸರಿ! ಕುಳಿತಿರಲಿ! ಪೂಜೆ, ಮುಗಿಯುತ್ತಾ ಬಂತು. ಈಗಲೇ ಬರುತ್ತೇನೆಂದು ಹೇಳು! ” ಪಾರ್ವತಮ್ಮನು ಹಜಾರಕ್ಕೆ ಬಂದು ತಲೆ ಬಾಗಿಸಿಕೊಂಡು ಮೃದು ಧ್ವನಿಯಿಂದ « ಪೂಜೆ ಮುಗಿಯುತ್ತಾ ಬಂತು. ಈಗಲೇ ಬರುತ್ತಾರೆ... 324772 proofread-page text/x-wiki <noinclude><pagequality level="1" user="Nihar Chakravarti" /></noinclude>ತಿ ಚಿತ್ರಕೂಟ ಸರಿ! ಸರಿ! ಕುಳಿತಿರಲಿ! ಪೂಜೆ, ಮುಗಿಯುತ್ತಾ ಬಂತು. ಈಗಲೇ ಬರುತ್ತೇನೆಂದು ಹೇಳು! ” ಪಾರ್ವತಮ್ಮನು ಹಜಾರಕ್ಕೆ ಬಂದು ತಲೆ ಬಾಗಿಸಿಕೊಂಡು ಮೃದು ಧ್ವನಿಯಿಂದ « ಪೂಜೆ ಮುಗಿಯುತ್ತಾ ಬಂತು. ಈಗಲೇ ಬರುತ್ತಾರೆ” ಎಂದು ಹೇಳಿದಳು, ಆಗಂತುಕನು ನಗುತ್ತಾ, “ಆಗಲಿ ನನಗೇನೂ ಅವಸರವಿಲ್ಲ. ಅವನು ನಿಧಾನವಾಗಿ ಬರಲಿ. ಊಟಿ ಉಪಚಾರ ಎಲ್ಲಾ ಈವತ್ತು ನಿಮ್ಮ ಮನೆ ಯಲ್ಲೇ » ಎಂದನು. ಪಾರ್ವತಮ್ಮನು ತಜೆ ಬಾಗಿ ಅಂಗೀಕಾರವನ್ನು ಸೂಚಿಸಿ ಒಳಗೆ ಹೋದಳು. ಶ್ಯಾಮಣ್ಣನು ಪೂಜೆಯನ್ನು ಮುಗಿಸಿ ಹ್‌ಜಾರಕ್ಕೆ ಆತುರವಾಗಿ ಬಂದು ನೋಡಿದನು. ನಗುತ್ತಾ " ನೀನೇ! ಯಾವಾಗ ಬಂದೆಯೋ? ಇದೇನು ಈ ಬಡ ಸ್ನೇಹಿತನ ಮೇಲೆ ಇಷ್ಟು ದಯೆ!” ಎನ್ನುತ್ತಾ ಆಗಂತುಕನ ಬೆನ್ನು ತಟ್ಟದನು. « ಹಾತು-ಪಾತು” ಇವನು ಗಂಗಾಧರ! ನನ್ನ ಪರಮ ಮಿತ್ರ. ತೆಗೆದುಕೊಂಡು ಬಾ! ಮೊದಲು ಕಾಫೀ ಕೊಡು! ಆಮೇಲೆ ಯೋಗ ಕೇಮ, ಎಂದನು. ಪಾರ್ವತಮ್ಮನು ಕಂಚಿನ ಲೋಟಾಗಳಲ್ಲಿ ಕಾನಿಯನ್ನು ತಂದಿಟ್ಟಳು ಇಬ್ಬರೂ ಕಾಫಿಯನ್ನು ಕುಡಿಯಲಾರಂಭಿಸಿದರು. «ಲೋ | ಗಂಗಾಧರ, ಜೈಲಿನಿಂದ ಯಾವಾಗ ಬಂದೆ, ಪುನಃ ಯಾವಾಗ ಜೈಲಿಗೆ ಪ್ರಯಾಣ? ” « ಈ ಗಾಂಧೀ ಯುಗದಲ್ಲಿ ನಮ್ಮಂತಹೆವರಿಗೆ ಜೆಲಿಗ್ರೂ ಮನೆಗೂ ಲ ವ ತ್ಯಾಸವೇ ಇಲ್ಲ ಶ್ಯಾಮು, ” “ ನೋಡು ಗಂಗಾಧರಾ, ಆ ಮಾತಿನಿಂದ ಪ್ರಯೋಜನನೇನು? ನೀವು ಬೇಕಾದ್ದು ಮಾಡಿಕೊಳ್ಳಿ ! ನಮ್ಮ ತಂಟಿಗೆ ಬರಬೇಡಿ! ಅಷ್ಟೆ ! 5; ಗಂಗಾಧರನು ಗಟ್ಟಿಯಾಗಿ ನಗುತ್ತಾ " ಶ್ಯಾಮೂ, ನೀನು ಸೋಲೀಸು<noinclude></noinclude> l80hlthzmzjkvhtpntaq12i78e3z8cf ಪುಟ:Chitrakuuta (1954).djvu/೩೨ 104 120859 324773 2026-06-16T04:52:34Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಚಿತ್ರಕೂಟ ದಿ ಮಾಡಿದರೆ ದೊಡ್ಡ ಡಾಕ್ಟರಾಗಬಹುದು. ಈಗ ಕೆಲಸ ಸಕ್ಳೆ ಹೋದರೆ ಏನು ಸಿಕ್ಕುತ್ತೆ. ” pds) 4 ತಮಗೆ ಬಹಳ ಥ್ಯಾಂಕ್ಸ್‌. ಆದರೆ ಅನೇಕ ಕಷ್ಟಗಳಿವೆ. ಈ “ ನಿನ್ನಂಥಾ ಬುದ್ಧಿವಂತನಾದ ಹುಡುಗನಿಗೆ ಕಪ್ಪವೆಂದರೇನು 9೫... 324773 proofread-page text/x-wiki <noinclude><pagequality level="1" user="Nihar Chakravarti" /></noinclude>ಚಿತ್ರಕೂಟ ದಿ ಮಾಡಿದರೆ ದೊಡ್ಡ ಡಾಕ್ಟರಾಗಬಹುದು. ಈಗ ಕೆಲಸ ಸಕ್ಳೆ ಹೋದರೆ ಏನು ಸಿಕ್ಕುತ್ತೆ. ” pds) 4 ತಮಗೆ ಬಹಳ ಥ್ಯಾಂಕ್ಸ್‌. ಆದರೆ ಅನೇಕ ಕಷ್ಟಗಳಿವೆ. ಈ “ ನಿನ್ನಂಥಾ ಬುದ್ಧಿವಂತನಾದ ಹುಡುಗನಿಗೆ ಕಪ್ಪವೆಂದರೇನು 9೫ « ಓದುವುದಕ್ಕೆ ಕಷ್ಟವೆಂದಲ್ಲ. ಸಂಸಾರ ತಾಪತ್ರಯಗಳು ಬಹಳ. ? ಗಂಗಾಧರನು ನಕ್ಕನು. ಸೂಚಕ ತಾಸತ್ರಯವೆಂದರೇನಯ್ಯಾ ! ನಿಮ್ಮ ತಾಯಿ ಒಬ್ಬರ ಜೀವನವು ಕಷ್ಟವೇ? 32 ನಾರಾಯಣನು ಮಾತನಾಡಲಿಲ್ಲ. ಅವನಿಗೆ ಗಂಗಾಧರನ ಮಾತುಗಳು ಅರ್ಥವಾಗಲಿಲ್ಲ. ಗಂಗಾಧರನು ಆತನನ್ನು ಕಾಂಗ್ರೆಸ್‌ ಆನೀಸಿಗೆ ಕರೆದುಕೊಂಡು ಚತ ಅಲ್ಲಿ ಅನೇಕರು jee ee ಬಂದಿದ್ದರು. ಎಲ್ಲರೊ ಸೇರಿ ಲ ಹೊತ್ತು ಹರಟೆ ಹೊಡೆದ ಗಂಗಾಧರನು ಅಲ್ಲಿಂದ ಮಾರ್ಕೆಟ್ಟಿಗೆ £1 ಘಟ ನಳನು ಟಿ ಮನೆಗೆ ಹಿಂತಿರುಗಿ ಬರುತ್ತಾ, “ ವಾಣಿ! ಈ ಕಾಂಗ್ರೆಸ ನವರ RN ಹೇಗೆ ಕಾಣುತ್ತವೆ? ” ಎಂದನು. “ ಅದು ಹೇಗೆ ಲ ಸಾಧ್ಯ. ಆ ವಿಷಯಗಳೆಲ್ಲಾ ನಮಗೆ ಸಂಬಂಧೆ ವಿಲ್ಲದ ವಿಷಯಗಳು. (4 ಹಾಗೆಂದರೇನಯ್ಯಾ! ಅವರುಗಳು ಮಾತನಾಡಿದ್ದೆಲ್ಲಾ ಸರಿ ಎಂದು ಹೇಳಲಾಗುವುದಿಲ್ಲ. ಆದರೆ ನ ನಿಮಗೂ ಸಂಬಂಧವಿಲ್ಲವೆಂದು ಹೇಳಲಾಗುವುದೇ ? ನೀವೆಲ್ಲಾ ಕಾಂಗ್ರೆ ಗೆ ಸ್ಸಿನವರೇ ಆಗಬೇಕು” ವಾಣಿಯು ಮಾತನಾಡಲಿಲ್ಲ. ಒಪ್ಪಿ ಗೆಯನ್ನು ನ ಸುವಂತೆ ತಲೆದೂಗಿದನು. ಗಂಗಾಧರನು ಅಧಿಕಾರಿಗಳ ಅಹಂಭಾವ, ಸರ್ಕಾರದ ಈ ವಿಷಯಗಳ ಲೆಲ್ಲಾ ದೊಡ್ಡ ಉಪನ್ಯಾಸವನ್ನೆ € ಮಾಡಿದನು. ನಾರಾಯಣನು ಅದನ್ನೆ ಲ್ಲಾ ಶ್ರದ್ಧೆ"ಯಿಂದ “ತೇಳುತ್ತಾ rE ಜೊತೆಯಲ್ಲಿ ನಡದನು. ಮನೆಗೆ ಬರುವ ಹೊತ್ತಿಗೆ ಹನ್ನೆರಡು "ಗಂಟೆಯಾಗಿತ್ತು. ಬಾಗಿಲಿ ನಲ್ಲಿಯೇ ವಾಸುದೇನನು ಕುಳಿತಿದ್ದನು. ಚ್‌ ಗಂಗಾಧರನ ಹಿರಿಯ ಮಗ. ಸುಮಾರು ಇಪ್ಪತ್ತುನಾಲ್ಕು ವರ್ಷ ವಯಸ್ಸಾಗಿರಬಹುದು. ಗಂಗಾಧರನು 2<noinclude></noinclude> l7rmy429dhro73n6sbpe106gztup871 324800 324773 2026-06-16T05:01:22Z Nihar Chakravarti 8555 324800 proofread-page text/x-wiki <noinclude><pagequality level="1" user="Nihar Chakravarti" />{{rh|center=ಚಿತ್ರ ಕೋಟೆ|right=೩೫}}</noinclude>ಮಾಡಿದರೆ ದೊಡ್ಡ ಡಾಕ್ಟರಾಗಬಹುದು. ಈಗ ಕೆಲಸಕ್ಕೆ ಹೋದರೆ ಏನು ಸಿಕ್ಕುತ್ತೆ. ” “ ತಮಗೆ ಬಹಳ ಥ್ಯಾಂಕ್ಸ್‌. ಆದರೆ ಅನೇಕ ಕಷ್ಟಗಳಿವೆ. ” “ ನಿನ್ನಂಥಾ ಬುದ್ಧಿವಂತನಾದ ಹುಡುಗನಿಗೆ ಕಷ್ಟವೆಂದರೇನು ? ” “ ಓದುವುದಕ್ಕೆ ಕಷ್ಟವೆಂದಲ್ಲ. ಸಂಸಾರ ತಾಪತ್ರಯಗಳು ಬಹಳ. ” ಗಂಗಾಧರನು ನಕ್ಕನು. “ ಸಂಸಾರ ತಾಪತ್ರಯವೆಂದರೇನಯ್ಯಾ ! ನಿಮ್ಮ ತಾಯಿ ಒಬ್ಬರ ಜೀವನವು ಕಷ್ಟವೇ? ” ನಾರಾಯಣನು ಮಾತನಾಡಲಿಲ್ಲ. ಅವನಿಗೆ ಗಂಗಾಧರನ ಮಾತುಗಳು ಅರ್ಥವಾಗಲಿಲ್ಲ. ಗಂಗಾಧರನು ಆತನನ್ನು ಕಾಂಗ್ರೆಸ್‌ ಆಫೀಸಿಗೆ ಕರೆದುಕೊಂಡು ಹೋದನು. ಅಲ್ಲಿ ಅನೇಕರು ಕಾಂಗ್ರೆಸ್ಸಿನವರು ಬಂದಿದ್ದರು. ಎಲ್ಲರೂ ಸೇರಿ ಸ್ವಲ್ಪ ಹೊತ್ತು ಹರಟೆ ಹೊಡೆದರು. ಗಂಗಾಧರನು ಅಲ್ಲಿಂದ ಮಾರ್ಕೆಟ್ಟಿಗೆ ಹೋಗಿ ಹಣ್ಣುಗಳನ್ನು ಕೊಂಡುಕೊಂಡನು. ಮನೆಗೆ ಹಿಂತಿರುಗಿ ಬರುತ್ತಾ, “ ನಾಣಿ! ಈ ಕಾಂಗ್ರೆಸ್ಸಿನವರ ಮಾತುಗಳು ಹೇಗೆ ಕಾಣುತ್ತವೆ? ” ಎಂದನು. “ ಅದು ಹೇಗೆ ಹೇಳಲು ಸಾಧ್ಯ. ಆ ವಿಷಯಗಳೆಲ್ಲಾ ನಮಗೆ ಸಂಬಂಧವಿಲ್ಲದ ವಿಷಯಗಳು. ” “ ಹಾಗೆಂದರೇನಯ್ಯಾ! ಅವರುಗಳು ಮಾತನಾಡಿದ್ದೆಲ್ಲಾ ಸರಿ ಎಂದು ಹೇಳಲಾಗುವುದಿಲ್ಲ. ಆದರೆ ಕಾಂಗ್ರೆಸ್ಸಿನವರಿಗೂ ನಿಮಗೂ ಸಂಬಂಧವಿಲ್ಲವೆಂದು ಹೇಳಲಾಗುವುದೇ ? ನೀವೆಲ್ಲಾ ಕಾಂಗ್ರೆಸ್ಸಿನವರೇ ಆಗಬೇಕು ” ನಾಣಿಯು ಮಾತನಾಡಲಿಲ್ಲ. ಒಪ್ಪಿಗೆಯನ್ನು ಸೂಚಿಸುವಂತೆ ತಲೆದೂಗಿದನು. ಗಂಗಾಧರನು ಅಧಿಕಾರಿಗಳ ಅಹಂಭಾವ, ಸರ್ಕಾರದ ಈ ವಿಷಯಗಳಲ್ಲೆಲ್ಲಾ ದೊಡ್ಡ ಉಪನ್ಯಾಸವನ್ನೇ ಮಾಡಿದನು. ನಾರಾಯಣನು ಅದನ್ನೆಲ್ಲಾ ಶ್ರದ್ಧೆಯಿಂದ ಕೇಳುತ್ತಾ ಗಂಗಾಧರನ ಜೊತೆಯಲ್ಲಿ ನಡೆದನು. ಮನೆಗೆ ಬರುವ ಹೊತ್ತಿಗೆ ಹನ್ನೆರಡು ಗಂಟೆಯಾಗಿತ್ತು. ಬಾಗಿಲಿನಲ್ಲಿಯೇ ವಾಸುದೇವನು ಕುಳಿತಿದ್ದನು. ಅವನು ಗಂಗಾಧರನ ಹಿರಿಯ ಮಗ. ಸುಮಾರು ಇಪ್ಪತ್ತುನಾಲ್ಕು ವರ್ಷ ವಯಸ್ಸಾಗಿರಬಹುದು. ಗಂಗಾಧರನು<noinclude>{{center|2}}</noinclude> e2ed6at9ha3ip8arltab6s7p563ptz8 324801 324800 2026-06-16T05:02:08Z Nihar Chakravarti 8555 324801 proofread-page text/x-wiki <noinclude><pagequality level="1" user="Nihar Chakravarti" />{{rh|center=ಚಿತ್ರ ಕೋಟೆ|right=೩೫}}</noinclude>ಮಾಡಿದರೆ ದೊಡ್ಡ ಡಾಕ್ಟರಾಗಬಹುದು. ಈಗ ಕೆಲಸಕ್ಕೆ ಹೋದರೆ ಏನು ಸಿಕ್ಕುತ್ತೆ. ” “ ತಮಗೆ ಬಹಳ ಥ್ಯಾಂಕ್ಸ್‌. ಆದರೆ ಅನೇಕ ಕಷ್ಟಗಳಿವೆ. ” “ ನಿನ್ನಂಥಾ ಬುದ್ಧಿವಂತನಾದ ಹುಡುಗನಿಗೆ ಕಷ್ಟವೆಂದರೇನು ? ” “ ಓದುವುದಕ್ಕೆ ಕಷ್ಟವೆಂದಲ್ಲ. ಸಂಸಾರ ತಾಪತ್ರಯಗಳು ಬಹಳ. ” ಗಂಗಾಧರನು ನಕ್ಕನು. “ ಸಂಸಾರ ತಾಪತ್ರಯವೆಂದರೇನಯ್ಯಾ ! ನಿಮ್ಮ ತಾಯಿ ಒಬ್ಬರ ಜೀವನವು ಕಷ್ಟವೇ? ” ನಾರಾಯಣನು ಮಾತನಾಡಲಿಲ್ಲ. ಅವನಿಗೆ ಗಂಗಾಧರನ ಮಾತುಗಳು ಅರ್ಥವಾಗಲಿಲ್ಲ. ಗಂಗಾಧರನು ಆತನನ್ನು ಕಾಂಗ್ರೆಸ್‌ ಆಫೀಸಿಗೆ ಕರೆದುಕೊಂಡು ಹೋದನು. ಅಲ್ಲಿ ಅನೇಕರು ಕಾಂಗ್ರೆಸ್ಸಿನವರು ಬಂದಿದ್ದರು. ಎಲ್ಲರೂ ಸೇರಿ ಸ್ವಲ್ಪ ಹೊತ್ತು ಹರಟೆ ಹೊಡೆದರು. ಗಂಗಾಧರನು ಅಲ್ಲಿಂದ ಮಾರ್ಕೆಟ್ಟಿಗೆ ಹೋಗಿ ಹಣ್ಣುಗಳನ್ನು ಕೊಂಡುಕೊಂಡನು. ಮನೆಗೆ ಹಿಂತಿರುಗಿ ಬರುತ್ತಾ, “ ನಾಣಿ! ಈ ಕಾಂಗ್ರೆಸ್ಸಿನವರ ಮಾತುಗಳು ಹೇಗೆ ಕಾಣುತ್ತವೆ? ” ಎಂದನು. “ ಅದು ಹೇಗೆ ಹೇಳಲು ಸಾಧ್ಯ. ಆ ವಿಷಯಗಳೆಲ್ಲಾ ನಮಗೆ ಸಂಬಂಧವಿಲ್ಲದ ವಿಷಯಗಳು. ” “ ಹಾಗೆಂದರೇನಯ್ಯಾ! ಅವರುಗಳು ಮಾತನಾಡಿದ್ದೆಲ್ಲಾ ಸರಿ ಎಂದು ಹೇಳಲಾಗುವುದಿಲ್ಲ. ಆದರೆ ಕಾಂಗ್ರೆಸ್ಸಿನವರಿಗೂ ನಿಮಗೂ ಸಂಬಂಧವಿಲ್ಲವೆಂದು ಹೇಳಲಾಗುವುದೇ ? ನೀವೆಲ್ಲಾ ಕಾಂಗ್ರೆಸ್ಸಿನವರೇ ಆಗಬೇಕು ” ನಾಣಿಯು ಮಾತನಾಡಲಿಲ್ಲ. ಒಪ್ಪಿಗೆಯನ್ನು ಸೂಚಿಸುವಂತೆ ತಲೆದೂಗಿದನು. ಗಂಗಾಧರನು ಅಧಿಕಾರಿಗಳ ಅಹಂಭಾವ, ಸರ್ಕಾರದ ಈ ವಿಷಯಗಳಲ್ಲೆಲ್ಲಾ ದೊಡ್ಡ ಉಪನ್ಯಾಸವನ್ನೇ ಮಾಡಿದನು. ನಾರಾಯಣನು ಅದನ್ನೆಲ್ಲಾ ಶ್ರದ್ಧೆಯಿಂದ ಕೇಳುತ್ತಾ ಗಂಗಾಧರನ ಜೊತೆಯಲ್ಲಿ ನಡೆದನು. ಮನೆಗೆ ಬರುವ ಹೊತ್ತಿಗೆ ಹನ್ನೆರಡು ಗಂಟೆಯಾಗಿತ್ತು. ಬಾಗಿಲಿನಲ್ಲಿಯೇ ವಾಸುದೇವನು ಕುಳಿತಿದ್ದನು. ಅವನು ಗಂಗಾಧರನ ಹಿರಿಯ ಮಗ. ಸುಮಾರು ಇಪ್ಪತ್ತುನಾಲ್ಕು ವರ್ಷ ವಯಸ್ಸಾಗಿರಬಹುದು. ಗಂಗಾಧರನು<noinclude>{{center|2}}</noinclude> s441bbqwhyru96p27wl7yuws4rbyd9s 324802 324801 2026-06-16T05:02:23Z Nihar Chakravarti 8555 324802 proofread-page text/x-wiki <noinclude><pagequality level="1" user="Nihar Chakravarti" />{{rh|center=ಚಿತ್ರ ಕೋಟೆ|right=೩೫}}</noinclude>ಮಾಡಿದರೆ ದೊಡ್ಡ ಡಾಕ್ಟರಾಗಬಹುದು. ಈಗ ಕೆಲಸಕ್ಕೆ ಹೋದರೆ ಏನು ಸಿಕ್ಕುತ್ತೆ. ” “ ತಮಗೆ ಬಹಳ ಥ್ಯಾಂಕ್ಸ್‌. ಆದರೆ ಅನೇಕ ಕಷ್ಟಗಳಿವೆ. ” “ ನಿನ್ನಂಥಾ ಬುದ್ಧಿವಂತನಾದ ಹುಡುಗನಿಗೆ ಕಷ್ಟವೆಂದರೇನು ? ” “ ಓದುವುದಕ್ಕೆ ಕಷ್ಟವೆಂದಲ್ಲ. ಸಂಸಾರ ತಾಪತ್ರಯಗಳು ಬಹಳ. ” ಗಂಗಾಧರನು ನಕ್ಕನು. “ ಸಂಸಾರ ತಾಪತ್ರಯವೆಂದರೇನಯ್ಯಾ ! ನಿಮ್ಮ ತಾಯಿ ಒಬ್ಬರ ಜೀವನವು ಕಷ್ಟವೇ? ” ನಾರಾಯಣನು ಮಾತನಾಡಲಿಲ್ಲ. ಅವನಿಗೆ ಗಂಗಾಧರನ ಮಾತುಗಳು ಅರ್ಥವಾಗಲಿಲ್ಲ. ಗಂಗಾಧರನು ಆತನನ್ನು ಕಾಂಗ್ರೆಸ್‌ ಆಫೀಸಿಗೆ ಕರೆದುಕೊಂಡು ಹೋದನು. ಅಲ್ಲಿ ಅನೇಕರು ಕಾಂಗ್ರೆಸ್ಸಿನವರು ಬಂದಿದ್ದರು. ಎಲ್ಲರೂ ಸೇರಿ ಸ್ವಲ್ಪ ಹೊತ್ತು ಹರಟೆ ಹೊಡೆದರು. ಗಂಗಾಧರನು ಅಲ್ಲಿಂದ ಮಾರ್ಕೆಟ್ಟಿಗೆ ಹೋಗಿ ಹಣ್ಣುಗಳನ್ನು ಕೊಂಡುಕೊಂಡನು. ಮನೆಗೆ ಹಿಂತಿರುಗಿ ಬರುತ್ತಾ, “ ನಾಣಿ! ಈ ಕಾಂಗ್ರೆಸ್ಸಿನವರ ಮಾತುಗಳು ಹೇಗೆ ಕಾಣುತ್ತವೆ? ” ಎಂದನು. “ ಅದು ಹೇಗೆ ಹೇಳಲು ಸಾಧ್ಯ. ಆ ವಿಷಯಗಳೆಲ್ಲಾ ನಮಗೆ ಸಂಬಂಧವಿಲ್ಲದ ವಿಷಯಗಳು. ” “ ಹಾಗೆಂದರೇನಯ್ಯಾ! ಅವರುಗಳು ಮಾತನಾಡಿದ್ದೆಲ್ಲಾ ಸರಿ ಎಂದು ಹೇಳಲಾಗುವುದಿಲ್ಲ. ಆದರೆ ಕಾಂಗ್ರೆಸ್ಸಿನವರಿಗೂ ನಿಮಗೂ ಸಂಬಂಧವಿಲ್ಲವೆಂದು ಹೇಳಲಾಗುವುದೇ ? ನೀವೆಲ್ಲಾ ಕಾಂಗ್ರೆಸ್ಸಿನವರೇ ಆಗಬೇಕು ” ನಾಣಿಯು ಮಾತನಾಡಲಿಲ್ಲ. ಒಪ್ಪಿಗೆಯನ್ನು ಸೂಚಿಸುವಂತೆ ತಲೆದೂಗಿದನು. ಗಂಗಾಧರನು ಅಧಿಕಾರಿಗಳ ಅಹಂಭಾವ, ಸರ್ಕಾರದ ಈ ವಿಷಯಗಳಲ್ಲೆಲ್ಲಾ ದೊಡ್ಡ ಉಪನ್ಯಾಸವನ್ನೇ ಮಾಡಿದನು. ನಾರಾಯಣನು ಅದನ್ನೆಲ್ಲಾ ಶ್ರದ್ಧೆಯಿಂದ ಕೇಳುತ್ತಾ ಗಂಗಾಧರನ ಜೊತೆಯಲ್ಲಿ ನಡೆದನು. ಮನೆಗೆ ಬರುವ ಹೊತ್ತಿಗೆ ಹನ್ನೆರಡು ಗಂಟೆಯಾಗಿತ್ತು. ಬಾಗಿಲಿನಲ್ಲಿಯೇ ವಾಸುದೇವನು ಕುಳಿತಿದ್ದನು. ಅವನು ಗಂಗಾಧರನ ಹಿರಿಯ ಮಗ. ಸುಮಾರು ಇಪ್ಪತ್ತುನಾಲ್ಕು ವರ್ಷ ವಯಸ್ಸಾಗಿರಬಹುದು. ಗಂಗಾಧರನು<noinclude>{{center|2}}</noinclude> j75owcif46ti68bl7f8uc7iqstkbb0a 324803 324802 2026-06-16T05:03:43Z Nihar Chakravarti 8555 324803 proofread-page text/x-wiki <noinclude><pagequality level="1" user="Nihar Chakravarti" />{{rh||ಚಿತ್ರಕೂಟ|೧೨}}</noinclude>ಮಾಡಿದರೆ ದೊಡ್ಡ ಡಾಕ್ಟರಾಗಬಹುದು. ಈಗ ಕೆಲಸಕ್ಕೆ ಹೋದರೆ ಏನು ಸಿಕ್ಕುತ್ತೆ. ” “ ತಮಗೆ ಬಹಳ ಥ್ಯಾಂಕ್ಸ್‌. ಆದರೆ ಅನೇಕ ಕಷ್ಟಗಳಿವೆ. ” “ ನಿನ್ನಂಥಾ ಬುದ್ಧಿವಂತನಾದ ಹುಡುಗನಿಗೆ ಕಷ್ಟವೆಂದರೇನು ? ” “ ಓದುವುದಕ್ಕೆ ಕಷ್ಟವೆಂದಲ್ಲ. ಸಂಸಾರ ತಾಪತ್ರಯಗಳು ಬಹಳ. ” ಗಂಗಾಧರನು ನಕ್ಕನು. “ ಸಂಸಾರ ತಾಪತ್ರಯವೆಂದರೇನಯ್ಯಾ ! ನಿಮ್ಮ ತಾಯಿ ಒಬ್ಬರ ಜೀವನವು ಕಷ್ಟವೇ? ” ನಾರಾಯಣನು ಮಾತನಾಡಲಿಲ್ಲ. ಅವನಿಗೆ ಗಂಗಾಧರನ ಮಾತುಗಳು ಅರ್ಥವಾಗಲಿಲ್ಲ. ಗಂಗಾಧರನು ಆತನನ್ನು ಕಾಂಗ್ರೆಸ್‌ ಆಫೀಸಿಗೆ ಕರೆದುಕೊಂಡು ಹೋದನು. ಅಲ್ಲಿ ಅನೇಕರು ಕಾಂಗ್ರೆಸ್ಸಿನವರು ಬಂದಿದ್ದರು. ಎಲ್ಲರೂ ಸೇರಿ ಸ್ವಲ್ಪ ಹೊತ್ತು ಹರಟೆ ಹೊಡೆದರು. ಗಂಗಾಧರನು ಅಲ್ಲಿಂದ ಮಾರ್ಕೆಟ್ಟಿಗೆ ಹೋಗಿ ಹಣ್ಣುಗಳನ್ನು ಕೊಂಡುಕೊಂಡನು. ಮನೆಗೆ ಹಿಂತಿರುಗಿ ಬರುತ್ತಾ, “ ನಾಣಿ! ಈ ಕಾಂಗ್ರೆಸ್ಸಿನವರ ಮಾತುಗಳು ಹೇಗೆ ಕಾಣುತ್ತವೆ? ” ಎಂದನು. “ ಅದು ಹೇಗೆ ಹೇಳಲು ಸಾಧ್ಯ. ಆ ವಿಷಯಗಳೆಲ್ಲಾ ನಮಗೆ ಸಂಬಂಧವಿಲ್ಲದ ವಿಷಯಗಳು. ” “ ಹಾಗೆಂದರೇನಯ್ಯಾ! ಅವರುಗಳು ಮಾತನಾಡಿದ್ದೆಲ್ಲಾ ಸರಿ ಎಂದು ಹೇಳಲಾಗುವುದಿಲ್ಲ. ಆದರೆ ಕಾಂಗ್ರೆಸ್ಸಿನವರಿಗೂ ನಿಮಗೂ ಸಂಬಂಧವಿಲ್ಲವೆಂದು ಹೇಳಲಾಗುವುದೇ ? ನೀವೆಲ್ಲಾ ಕಾಂಗ್ರೆಸ್ಸಿನವರೇ ಆಗಬೇಕು ” ನಾಣಿಯು ಮಾತನಾಡಲಿಲ್ಲ. ಒಪ್ಪಿಗೆಯನ್ನು ಸೂಚಿಸುವಂತೆ ತಲೆದೂಗಿದನು. ಗಂಗಾಧರನು ಅಧಿಕಾರಿಗಳ ಅಹಂಭಾವ, ಸರ್ಕಾರದ ಈ ವಿಷಯಗಳಲ್ಲೆಲ್ಲಾ ದೊಡ್ಡ ಉಪನ್ಯಾಸವನ್ನೇ ಮಾಡಿದನು. ನಾರಾಯಣನು ಅದನ್ನೆಲ್ಲಾ ಶ್ರದ್ಧೆಯಿಂದ ಕೇಳುತ್ತಾ ಗಂಗಾಧರನ ಜೊತೆಯಲ್ಲಿ ನಡೆದನು. ಮನೆಗೆ ಬರುವ ಹೊತ್ತಿಗೆ ಹನ್ನೆರಡು ಗಂಟೆಯಾಗಿತ್ತು. ಬಾಗಿಲಿನಲ್ಲಿಯೇ ವಾಸುದೇವನು ಕುಳಿತಿದ್ದನು. ಅವನು ಗಂಗಾಧರನ ಹಿರಿಯ ಮಗ. ಸುಮಾರು ಇಪ್ಪತ್ತುನಾಲ್ಕು ವರ್ಷ ವಯಸ್ಸಾಗಿರಬಹುದು. ಗಂಗಾಧರನು<noinclude>{{center|2}}</noinclude> avyphs2usra2prxfm0vfsm13tsltpi2 324804 324803 2026-06-16T05:05:54Z Nihar Chakravarti 8555 /* Proofread */ 324804 proofread-page text/x-wiki <noinclude><pagequality level="3" user="Nihar Chakravarti" />{{rh||ಚಿತ್ರಕೂಟ|೧೨}}</noinclude>ಮಾಡಿದರೆ ದೊಡ್ಡ ಡಾಕ್ಟರಾಗಬಹುದು. ಈಗ ಕೆಲಸಕ್ಕೆ ಹೋದರೆ ಏನು ಸಿಕ್ಕುತ್ತೆ. ” “ ತಮಗೆ ಬಹಳ ಥ್ಯಾಂಕ್ಸ್‌. ಆದರೆ ಅನೇಕ ಕಷ್ಟಗಳಿವೆ. ” “ ನಿನ್ನಂಥಾ ಬುದ್ಧಿವಂತನಾದ ಹುಡುಗನಿಗೆ ಕಷ್ಟವೆಂದರೇನು ? ” “ ಓದುವುದಕ್ಕೆ ಕಷ್ಟವೆಂದಲ್ಲ. ಸಂಸಾರ ತಾಪತ್ರಯಗಳು ಬಹಳ. ” ಗಂಗಾಧರನು ನಕ್ಕನು. “ ಸಂಸಾರ ತಾಪತ್ರಯವೆಂದರೇನಯ್ಯಾ ! ನಿಮ್ಮ ತಾಯಿ ಒಬ್ಬರ ಜೀವನವು ಕಷ್ಟವೇ? ” ನಾರಾಯಣನು ಮಾತನಾಡಲಿಲ್ಲ. ಅವನಿಗೆ ಗಂಗಾಧರನ ಮಾತುಗಳು ಅರ್ಥವಾಗಲಿಲ್ಲ. ಗಂಗಾಧರನು ಆತನನ್ನು ಕಾಂಗ್ರೆಸ್‌ ಆಫೀಸಿಗೆ ಕರೆದುಕೊಂಡು ಹೋದನು. ಅಲ್ಲಿ ಅನೇಕರು ಕಾಂಗ್ರೆಸ್ಸಿನವರು ಬಂದಿದ್ದರು. ಎಲ್ಲರೂ ಸೇರಿ ಸ್ವಲ್ಪ ಹೊತ್ತು ಹರಟೆ ಹೊಡೆದರು. ಗಂಗಾಧರನು ಅಲ್ಲಿಂದ ಮಾರ್ಕೆಟ್ಟಿಗೆ ಹೋಗಿ ಹಣ್ಣುಗಳನ್ನು ಕೊಂಡುಕೊಂಡನು. ಮನೆಗೆ ಹಿಂತಿರುಗಿ ಬರುತ್ತಾ, “ ನಾಣಿ! ಈ ಕಾಂಗ್ರೆಸ್ಸಿನವರ ಮಾತುಗಳು ಹೇಗೆ ಕಾಣುತ್ತವೆ? ” ಎಂದನು. “ ಅದು ಹೇಗೆ ಹೇಳಲು ಸಾಧ್ಯ. ಆ ವಿಷಯಗಳೆಲ್ಲಾ ನಮಗೆ ಸಂಬಂಧವಿಲ್ಲದ ವಿಷಯಗಳು. ” “ ಹಾಗೆಂದರೇನಯ್ಯಾ! ಅವರುಗಳು ಮಾತನಾಡಿದ್ದೆಲ್ಲಾ ಸರಿ ಎಂದು ಹೇಳಲಾಗುವುದಿಲ್ಲ. ಆದರೆ ಕಾಂಗ್ರೆಸ್ಸಿನವರಿಗೂ ನಿಮಗೂ ಸಂಬಂಧವಿಲ್ಲವೆಂದು ಹೇಳಲಾಗುವುದೇ ? ನೀವೆಲ್ಲಾ ಕಾಂಗ್ರೆಸ್ಸಿನವರೇ ಆಗಬೇಕು ” ನಾಣಿಯು ಮಾತನಾಡಲಿಲ್ಲ. ಒಪ್ಪಿಗೆಯನ್ನು ಸೂಚಿಸುವಂತೆ ತಲೆದೂಗಿದನು. ಗಂಗಾಧರನು ಅಧಿಕಾರಿಗಳ ಅಹಂಭಾವ, ಸರ್ಕಾರದ ಈ ವಿಷಯಗಳಲ್ಲೆಲ್ಲಾ ದೊಡ್ಡ ಉಪನ್ಯಾಸವನ್ನೇ ಮಾಡಿದನು. ನಾರಾಯಣನು ಅದನ್ನೆಲ್ಲಾ ಶ್ರದ್ಧೆಯಿಂದ ಕೇಳುತ್ತಾ ಗಂಗಾಧರನ ಜೊತೆಯಲ್ಲಿ ನಡೆದನು. ಮನೆಗೆ ಬರುವ ಹೊತ್ತಿಗೆ ಹನ್ನೆರಡು ಗಂಟೆಯಾಗಿತ್ತು. ಬಾಗಿಲಿನಲ್ಲಿಯೇ ವಾಸುದೇವನು ಕುಳಿತಿದ್ದನು. ಅವನು ಗಂಗಾಧರನ ಹಿರಿಯ ಮಗ. ಸುಮಾರು ಇಪ್ಪತ್ತುನಾಲ್ಕು ವರ್ಷ ವಯಸ್ಸಾಗಿರಬಹುದು. ಗಂಗಾಧರನು<noinclude>{{center|2}}</noinclude> h44lda19w2hbpuvoqhs73dxk95yv1l7 324856 324804 2026-06-16T07:09:45Z A826 6806 /* Validated */ 324856 proofread-page text/x-wiki <noinclude><pagequality level="4" user="A826" />{{rh||ಚಿತ್ರಕೂಟ|೧೨}}</noinclude>ಮಾಡಿದರೆ ದೊಡ್ಡ ಡಾಕ್ಟರಾಗಬಹುದು. ಈಗ ಕೆಲಸಕ್ಕೆ ಹೋದರೆ ಏನು ಸಿಕ್ಕುತ್ತೆ. " " ತಮಗೆ ಬಹಳ ಥ್ಯಾಂಕ್ಸ್‌. ಆದರೆ ಅನೇಕ ಕಷ್ಟಗಳಿವೆ. " " ನಿನ್ನಂಥಾ ಬುದ್ಧಿವಂತನಾದ ಹುಡುಗನಿಗೆ ಕಷ್ಟವೆಂದರೇನು? " " ಓದುವುದಕ್ಕೆ ಕಷ್ಟವೆಂದಲ್ಲ. ಸಂಸಾರ ತಾಪತ್ರಯಗಳು ಬಹಳ. " ಗಂಗಾಧರನು ನಕ್ಕನು. " ಸಂಸಾರ ತಾಪತ್ರಯವೆಂದರೇನಯ್ಯಾ! ನಿಮ್ಮ ತಾಯಿ ಒಬ್ಬರ ಜೀವನವು ಕಷ್ಟವೇ? " ನಾರಾಯಣನು ಮಾತನಾಡಲಿಲ್ಲ. ಅವನಿಗೆ ಗಂಗಾಧರನ ಮಾತುಗಳು ಅರ್ಥವಾಗಲಿಲ್ಲ. ಗಂಗಾಧರನು ಆತನನ್ನು ಕಾಂಗ್ರೆಸ್‌ ಆಫೀಸಿಗೆ ಕರೆದುಕೊಂಡು ಹೋದನು. ಅಲ್ಲಿ ಅನೇಕರು ಕಾಂಗ್ರೆಸ್ಸಿನವರು ಬಂದಿದ್ದರು. ಎಲ್ಲರೂ ಸೇರಿ ಸ್ವಲ್ಪ ಹೊತ್ತು ಹರಟೆ ಹೊಡೆದರು. ಗಂಗಾಧರನು ಅಲ್ಲಿಂದ ಮಾರ್ಕೆಟ್ಟಿಗೆ ಹೋಗಿ ಹಣ್ಣುಗಳನ್ನು ಕೊಂಡುಕೊಂಡನು. ಮನೆಗೆ ಹಿಂತಿರುಗಿ ಬರುತ್ತಾ, " ನಾಣಿ! ಈ ಕಾಂಗ್ರೆಸ್ಸಿನವರ ಮಾತುಗಳು ಹೇಗೆ ಕಾಣುತ್ತವೆ? " ಎಂದನು. " ಅದು ಹೇಗೆ ಹೇಳಲು ಸಾಧ್ಯ. ಆ ವಿಷಯಗಳೆಲ್ಲಾ ನಮಗೆ ಸಂಬಂಧವಿಲ್ಲದ ವಿಷಯಗಳು. " " ಹಾಗೆಂದರೇನಯ್ಯಾ! ಅವರುಗಳು ಮಾತನಾಡಿದ್ದೆಲ್ಲಾ ಸರಿ ಎಂದು ಹೇಳಲಾಗುವುದಿಲ್ಲ. ಆದರೆ ಕಾಂಗ್ರೆಸ್ಸಿನವರಿಗೂ ನಿಮಗೂ ಸಂಬಂಧವಿಲ್ಲವೆಂದು ಹೇಳಲಾಗುವುದೇ? ನೀವೆಲ್ಲಾ ಕಾಂಗ್ರೆಸ್ಸಿನವರೇ ಆಗಬೇಕು " ನಾಣಿಯು ಮಾತನಾಡಲಿಲ್ಲ. ಒಪ್ಪಿಗೆಯನ್ನು ಸೂಚಿಸುವಂತೆ ತಲೆದೂಗಿದನು. ಗಂಗಾಧರನು ಅಧಿಕಾರಿಗಳ ಅಹಂಭಾವ, ಸರ್ಕಾರದ ಈ ವಿಷಯಗಳಲ್ಲೆಲ್ಲಾ ದೊಡ್ಡ ಉಪನ್ಯಾಸವನ್ನೇ ಮಾಡಿದನು. ನಾರಾಯಣನು ಅದನ್ನೆಲ್ಲಾ ಶ್ರದ್ಧೆಯಿಂದ ಕೇಳುತ್ತಾ ಗಂಗಾಧರನ ಜೊತೆಯಲ್ಲಿ ನಡೆದನು. ಮನೆಗೆ ಬರುವ ಹೊತ್ತಿಗೆ ಹನ್ನೆರಡು ಗಂಟೆಯಾಗಿತ್ತು. ಬಾಗಿಲಿನಲ್ಲಿಯೇ ವಾಸುದೇವನು ಕುಳಿತಿದ್ದನು. ಅವನು ಗಂಗಾಧರನ ಹಿರಿಯ ಮಗ. ಸುಮಾರು ಇಪ್ಪತ್ತುನಾಲ್ಕು ವರ್ಷ ವಯಸ್ಸಾಗಿರಬಹುದು. ಗಂಗಾಧರನು<noinclude>{{center|2}}</noinclude> 3q84kqe77mz0i8nqoo2p9sayxs9ccxp ಪುಟ:Chitrakuuta (1954).djvu/೩೩ 104 120860 324774 2026-06-16T04:52:44Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೮ ಚಿತ್ರಕೂಟ ಟ ವಾಸು! ಇಗೋ ಇವನೇ ನಾರಾಯಣ. ನನ್ಮ-ಶ್ಯಾಮು ಮಗ! ಬಿ.ಎಸ್‌ಸಿ. ಫಸ್ಟ್‌ ಕ್ಲಾಸಿನಲ್ಲಿ ಸ್ಯಾಸ್‌ ಮಾಡಿದ್ದಾನೆ. ಇಲ್ಲಿ ಮೆಡಿಕಲ್‌ ಕಾಲೇಜಿಗೆ ಸೇರುವು ದಕ್ಕ ಬಂದಿದ್ದಾನೆ. » ಎಂದು ಹೇಳಿದನು, ವಾಸು ಮುಗುಳ್... 324774 proofread-page text/x-wiki <noinclude><pagequality level="1" user="Nihar Chakravarti" /></noinclude>೧೮ ಚಿತ್ರಕೂಟ ಟ ವಾಸು! ಇಗೋ ಇವನೇ ನಾರಾಯಣ. ನನ್ಮ-ಶ್ಯಾಮು ಮಗ! ಬಿ.ಎಸ್‌ಸಿ. ಫಸ್ಟ್‌ ಕ್ಲಾಸಿನಲ್ಲಿ ಸ್ಯಾಸ್‌ ಮಾಡಿದ್ದಾನೆ. ಇಲ್ಲಿ ಮೆಡಿಕಲ್‌ ಕಾಲೇಜಿಗೆ ಸೇರುವು ದಕ್ಕ ಬಂದಿದ್ದಾನೆ. » ಎಂದು ಹೇಳಿದನು, ವಾಸು ಮುಗುಳ್ನಗೆಯಿಂದ ನಾರಾಯೆಣನಿಗೆ " ಷೇಕ್‌ಹ್ಯಾಂಡ್‌' ಮಾಡಿ ದನು. ಎಲ್ಲರೂ ಮನೆಯೊಳಗೆ ಹೋದರು. ಹಜಾರದಲ್ಲಿ ಭೋಜನಕ್ಕೆ ಎಲ್ಲಾ ಸಿದ್ಧವಾಗಿತ್ತು. ಮಣೆ ಬಾಳೆಲೆ ಹಾಕಿ, ಬೆಳ್ಳಿಯ ಲೋಟಾಗಳಲ್ಲಿ ನೀರು ಇಟ್ಟಿದ್ದರು. ಎಲ್ಲರೂ ಊಟಕ್ಕೆ ಕುಳಿತರು. ವಾಸುವು ನಾರಾಯಣನ ಪಕ್ಕದಲ್ಲಿ ಕುಳಿತಿದ್ದ. ಕಮಲಮ್ಮ ನವರೇ ಬಡಿಸುವುದಕ್ಕೆ ಬಂದರು. ಸೊಗಸಾದ ಔತಣದ ಭೋಜನ. ಕಾಲೇಜು ಗಳಲ್ಲಿ ಸೀಟು ಕೂಡುವ ಮಾತು, ಪಕ್ಷಪಾತ, ಶಿಫಾರಸುಗಳು, ಬುದ್ದಿವಂತ ರಿಗೆ ಸೀಟುಗಳಿಲ್ಲ ಈ ಮಾತುಗಳು ಮುಂದೆ ಸಾಗಿದುವು. ವಾಸುವು “ ಹೀಗೆಯೇ ನಡೆಯುತ್ತಿರಲಿ. ನಿದ್ಯಾನಂತರಿಗೆಲ್ಲಾ ನಿರುತ್ತಾ ಹವಾಗುತ್ತದೆ. ಕ್ರಾಂತಿಯು ಹೊಗೆಯಾಡಲಾರಂಭವಾಗುತ್ತದೆ ” ಎಂದನು. ಗಂಗಾಧರನಿಗೆ ರೇಗಿತು, 4 ಬಾಯಿ ಮುಚ್ಚು! ಬುದ್ಧಿ ಯಿಲ್ಲದ ಹುಡು ಗರು " ಕ್ರಾಂತಿ- -ಕ್ರಾಂತಿ' ಎನ್ನುವುದು, ನಾಲು ಪುಸ್ತಕಗಳನ್ನೋದಿದರೆ ರಾಜಕೀಯ ಪ್ರವೀಣರಾಗಿ ಬಿಡುತ್ತಾರೇನು? ” “ ಅಪ್ಪಾ | ನಿಮಗೇಕೆ ಇಷ್ಟು ಕೋಪ. ಐಶ್ವರ್ಯವಂತರು ಜಮೀನು ದಾರರು. ವ್ಯಾಪಾರಿಗಳು ದೊಡ್ಡ ಲಾಯರುಗಳು ಎಲ್ಲಾ ಸೇರಿ ನಿಮ್ಮ ಕಾಂಗ್ರೆಸ್ಸು ! ಇಂಗ್ಲೀಷರ-ಕೈಲಿರುವ ಆಧಿಕಾರ ನಿಮ್ಮ ಕ್ಸ್‌ಗೆ ಬರಬೇಕೆನ್ನು ತ್ತೀರಿ ಆದೇ ಸ್ವರಾಜ್ಯ. ? “ ಅಲ್ಲ ಕಣೊ " ಫೂಲ್‌! ' ಮಹಾತ್ಮಾ ಗಾಂಧಿಯವರು ಜಮೀನು ದಾರರೇನೋ | ಐಶ್ವರೈವಂತರೇನೋ! ಆವರು ದರಿದ್ರನಾರಾಯಣನ ಅವ ತಾರ! ತ್ಯಾಗದ ಪ್ರತ್ಯಕ್ಷಮೂರ್ತಿ. » ಅಲ್ಲಿಗೆ ವಾಸುವಿನ ಮಾತು ನಿಂತಿತು. ಕಮಲಮ್ಮನವರು ಪಾಯಸ ವನ್ನು ತಂದು ಬಡಿಸಿದರು. ಜಿಲೇಬಿಯೊ ಬಂತು. ವಾಸುವು ಉಪಚಾರ ಮಾಡಿ ನಾಣಿಗೆ ಮತ್ತೆರಡು ಜಿಲೇಬಿ ಹಾಕಿಸಿದನು.<noinclude></noinclude> j7mkg4dz93sdvw6y48p6bll5vpsbmw8 324805 324774 2026-06-16T05:07:14Z Nihar Chakravarti 8555 /* Proofread */ 324805 proofread-page text/x-wiki <noinclude><pagequality level="3" user="Nihar Chakravarti" />{{rh|೧೪||ಚಿತ್ರಕೂಟ}}</noinclude>“ ವಾಸು ! ಇಗೋ ಇವನೇ ನಾರಾಯಣ. ನಮ್ಮ ಶ್ಯಾಮು ಮಗ ! ಬಿ.ಎಸ್ಸಿ. ಫಸ್ಟ್ ಕ್ಲಾಸಿನಲ್ಲಿ ಪ್ಯಾಸ್ ಮಾಡಿದ್ದಾನೆ. ಇಲ್ಲಿ ಮೆಡಿಕಲ್ ಕಾಲೇಜಿಗೆ ಸೇರು ವುದಕ್ಕೆ ಬಂದಿದ್ದಾನೆ. ” ಎಂದು ಹೇಳಿದನು. ವಾಸು ಮುಗುಳ್ನಗೆಯಿಂದ ನಾರಾಯಣನಿಗೆ ‘ ಷೇಕ್ ಹ್ಯಾಂಡ್ ’ ಮಾಡಿ ದನು. ಎಲ್ಲರೂ ಮನೆಯೊಳಗೆ ಹೋದರು. ಹಜಾರದಲ್ಲಿ ಭೋಜನಕ್ಕೆ ಎಲ್ಲಾ ಸಿದ್ಧವಾಗಿತ್ತು. ಮಣೆ, ಬಾಳೆಲೆ ಹಾಕಿ, ಬೆಳ್ಳಿಯ ಲೋಟಾಗಳಲ್ಲಿ ನೀರು ಇಟ್ಟಿದ್ದರು. ಎಲ್ಲರೂ ಊಟಕ್ಕೆ ಕುಳಿತರು. ವಾಸುವು ನಾರಾಯಣನ ಪಕ್ಕದಲ್ಲಿ ಕುಳಿತಿದ್ದ. ಕಮಲಮ್ಮ ನವರೇ ಬಡಿಸುವುದಕ್ಕೆ ಬಂದರು. ಸೊಗಸಾದ ಔತಣದ ಭೋಜನ. ಕಾಲೇಜು ಗಳಲ್ಲಿ ಸೀಟು ಕೊಡುವ ಮಾತು, ಪಕ್ಷಪಾತ, ಶಿಫಾರಸುಗಳು, ಬುದ್ಧಿವಂತ ರಿಗೆ ಸೀಟುಗಳಿಲ್ಲ, ಈ ಮಾತುಗಳು ಮುಂದೆ ಸಾಗಿದುವು. ವಾಸುವು “ ಹೀಗೆಯೇ ನಡೆಯುತ್ತಿರಲಿ. ವಿದ್ಯಾವಂತರಿಗೆಲ್ಲಾ ನಿರುತ್ಸಾ ಹವಾಗುತ್ತದೆ. ಕ್ರಾಂತಿಯು ಹೊಗೆಯಾಡಲಾರಂಭವಾಗುತ್ತದೆ ” ಎಂದನು. ಗಂಗಾಧರನಿಗೆ ರೇಗಿತು, “ ಬಾಯಿ ಮುಚ್ಚು ! ಬುದ್ಧಿಯಿಲ್ಲದ ಹುಡು ಗರು ‘ ಕ್ರಾಂತಿ—ಕ್ರಾಂತಿ ’ ಎನ್ನುವುದು. ನಾಲ್ಕು ಪುಸ್ತಕಗಳನ್ನೋದಿದರೆ ರಾಜಕೀಯ ಪ್ರವೀಣರಾಗಿ ಬಿಡುತ್ತಾರೇನು ? ” “ ಅಪ್ಪಾ ! ನಿಮಗೇಕೆ ಇಷ್ಟು ಕೋಪ. ಐಶ್ವರ್ಯವಂತರು, ಜಮೀನು ದಾರರು, ವ್ಯಾಪಾರಿಗಳು ದೊಡ್ಡ ಲಾಯರುಗಳು ಎಲ್ಲಾ ಸೇರಿ ನಿಮ್ಮ ಕಾಂಗ್ರೆಸ್ಸು ! ಇಂಗ್ಲೀಷರ ಕೈಲಿರುವ ಅಧಿಕಾರ ನಿಮ್ಮ ಕೈಗೆ ಬರಬೇಕೆನ್ನುತ್ತೀರಿ —ಅದೇ ಸ್ವರಾಜ್ಯ. ” “ ಅಲ್ಲ ಕಣೋ ‘ ಫೂಲ್ ! ’ ಮಹಾತ್ಮಾ ಗಾಂಧಿಯವರು ಜಮೀನು ದಾರರೇನೋ ! ಐಶ್ವರ್ಯವಂತರೆನೋ ! ಅವರು ದರಿದ್ರನಾರಾಯಣನ ಅವ ತಾರ ! ತ್ಯಾಗದ ಪ್ರತ್ಯಕ್ಷಮೂರ್ತಿ. ” ಅಲ್ಲಿಗೆ ವಾಸುವಿನ ಮಾತು ನಿಂತಿತು. ಕಮಲಮ್ಮನವರು ಪಾಯಸ ವನ್ನು ತಂದು ಬಡಿಸಿದರು. ಜಿಲೇಬಿಯೂ ಬಂತು. ವಾಸುವು ಉಪಚಾರ ಮಾಡಿ ನಾಣಿಗೆ ಮತ್ತೆರಡು ಜಿಲೇಬಿ ಹಾಕಿಸಿದನು.<noinclude></noinclude> 1hiu2clfbv6r17b7n9u93grzsztdci4 324806 324805 2026-06-16T05:08:15Z Nihar Chakravarti 8555 324806 proofread-page text/x-wiki <noinclude><pagequality level="3" user="Nihar Chakravarti" />{{rh|೧೪|ಚಿತ್ರಕೂಟ}}</noinclude>“ ವಾಸು ! ಇಗೋ ಇವನೇ ನಾರಾಯಣ. ನಮ್ಮ ಶ್ಯಾಮು ಮಗ ! ಬಿ.ಎಸ್ಸಿ. ಫಸ್ಟ್ ಕ್ಲಾಸಿನಲ್ಲಿ ಪ್ಯಾಸ್ ಮಾಡಿದ್ದಾನೆ. ಇಲ್ಲಿ ಮೆಡಿಕಲ್ ಕಾಲೇಜಿಗೆ ಸೇರು ವುದಕ್ಕೆ ಬಂದಿದ್ದಾನೆ. ” ಎಂದು ಹೇಳಿದನು. ವಾಸು ಮುಗುಳ್ನಗೆಯಿಂದ ನಾರಾಯಣನಿಗೆ ‘ ಷೇಕ್ ಹ್ಯಾಂಡ್ ’ ಮಾಡಿ ದನು. ಎಲ್ಲರೂ ಮನೆಯೊಳಗೆ ಹೋದರು. ಹಜಾರದಲ್ಲಿ ಭೋಜನಕ್ಕೆ ಎಲ್ಲಾ ಸಿದ್ಧವಾಗಿತ್ತು. ಮಣೆ, ಬಾಳೆಲೆ ಹಾಕಿ, ಬೆಳ್ಳಿಯ ಲೋಟಾಗಳಲ್ಲಿ ನೀರು ಇಟ್ಟಿದ್ದರು. ಎಲ್ಲರೂ ಊಟಕ್ಕೆ ಕುಳಿತರು. ವಾಸುವು ನಾರಾಯಣನ ಪಕ್ಕದಲ್ಲಿ ಕುಳಿತಿದ್ದ. ಕಮಲಮ್ಮ ನವರೇ ಬಡಿಸುವುದಕ್ಕೆ ಬಂದರು. ಸೊಗಸಾದ ಔತಣದ ಭೋಜನ. ಕಾಲೇಜು ಗಳಲ್ಲಿ ಸೀಟು ಕೊಡುವ ಮಾತು, ಪಕ್ಷಪಾತ, ಶಿಫಾರಸುಗಳು, ಬುದ್ಧಿವಂತ ರಿಗೆ ಸೀಟುಗಳಿಲ್ಲ, ಈ ಮಾತುಗಳು ಮುಂದೆ ಸಾಗಿದುವು. ವಾಸುವು “ ಹೀಗೆಯೇ ನಡೆಯುತ್ತಿರಲಿ. ವಿದ್ಯಾವಂತರಿಗೆಲ್ಲಾ ನಿರುತ್ಸಾ ಹವಾಗುತ್ತದೆ. ಕ್ರಾಂತಿಯು ಹೊಗೆಯಾಡಲಾರಂಭವಾಗುತ್ತದೆ ” ಎಂದನು. ಗಂಗಾಧರನಿಗೆ ರೇಗಿತು, “ ಬಾಯಿ ಮುಚ್ಚು ! ಬುದ್ಧಿಯಿಲ್ಲದ ಹುಡು ಗರು ‘ ಕ್ರಾಂತಿ—ಕ್ರಾಂತಿ ’ ಎನ್ನುವುದು. ನಾಲ್ಕು ಪುಸ್ತಕಗಳನ್ನೋದಿದರೆ ರಾಜಕೀಯ ಪ್ರವೀಣರಾಗಿ ಬಿಡುತ್ತಾರೇನು ? ” “ ಅಪ್ಪಾ ! ನಿಮಗೇಕೆ ಇಷ್ಟು ಕೋಪ. ಐಶ್ವರ್ಯವಂತರು, ಜಮೀನು ದಾರರು, ವ್ಯಾಪಾರಿಗಳು ದೊಡ್ಡ ಲಾಯರುಗಳು ಎಲ್ಲಾ ಸೇರಿ ನಿಮ್ಮ ಕಾಂಗ್ರೆಸ್ಸು ! ಇಂಗ್ಲೀಷರ ಕೈಲಿರುವ ಅಧಿಕಾರ ನಿಮ್ಮ ಕೈಗೆ ಬರಬೇಕೆನ್ನುತ್ತೀರಿ —ಅದೇ ಸ್ವರಾಜ್ಯ. ” “ ಅಲ್ಲ ಕಣೋ ‘ ಫೂಲ್ ! ’ ಮಹಾತ್ಮಾ ಗಾಂಧಿಯವರು ಜಮೀನು ದಾರರೇನೋ ! ಐಶ್ವರ್ಯವಂತರೆನೋ ! ಅವರು ದರಿದ್ರನಾರಾಯಣನ ಅವ ತಾರ ! ತ್ಯಾಗದ ಪ್ರತ್ಯಕ್ಷಮೂರ್ತಿ. ” ಅಲ್ಲಿಗೆ ವಾಸುವಿನ ಮಾತು ನಿಂತಿತು. ಕಮಲಮ್ಮನವರು ಪಾಯಸ ವನ್ನು ತಂದು ಬಡಿಸಿದರು. ಜಿಲೇಬಿಯೂ ಬಂತು. ವಾಸುವು ಉಪಚಾರ ಮಾಡಿ ನಾಣಿಗೆ ಮತ್ತೆರಡು ಜಿಲೇಬಿ ಹಾಕಿಸಿದನು.<noinclude></noinclude> pc9z6kmwh3ndgifp81cwnhvbwqm1k77 324857 324806 2026-06-16T07:10:15Z A826 6806 /* Validated */ 324857 proofread-page text/x-wiki <noinclude><pagequality level="4" user="A826" />{{rh|೧೪|ಚಿತ್ರಕೂಟ}}</noinclude>" ವಾಸು! ಇಗೋ ಇವನೇ ನಾರಾಯಣ. ನಮ್ಮ ಶ್ಯಾಮು ಮಗ! ಬಿ.ಎಸ್ಸಿ. ಫಸ್ಟ್ ಕ್ಲಾಸಿನಲ್ಲಿ ಪ್ಯಾಸ್ ಮಾಡಿದ್ದಾನೆ. ಇಲ್ಲಿ ಮೆಡಿಕಲ್ ಕಾಲೇಜಿಗೆ ಸೇರು ವುದಕ್ಕೆ ಬಂದಿದ್ದಾನೆ. " ಎಂದು ಹೇಳಿದನು. ವಾಸು ಮುಗುಳ್ನಗೆಯಿಂದ ನಾರಾಯಣನಿಗೆ ' ಷೇಕ್ ಹ್ಯಾಂಡ್ ' ಮಾಡಿ ದನು. ಎಲ್ಲರೂ ಮನೆಯೊಳಗೆ ಹೋದರು. ಹಜಾರದಲ್ಲಿ ಭೋಜನಕ್ಕೆ ಎಲ್ಲಾ ಸಿದ್ಧವಾಗಿತ್ತು. ಮಣೆ, ಬಾಳೆಲೆ ಹಾಕಿ, ಬೆಳ್ಳಿಯ ಲೋಟಾಗಳಲ್ಲಿ ನೀರು ಇಟ್ಟಿದ್ದರು. ಎಲ್ಲರೂ ಊಟಕ್ಕೆ ಕುಳಿತರು. ವಾಸುವು ನಾರಾಯಣನ ಪಕ್ಕದಲ್ಲಿ ಕುಳಿತಿದ್ದ. ಕಮಲಮ್ಮ ನವರೇ ಬಡಿಸುವುದಕ್ಕೆ ಬಂದರು. ಸೊಗಸಾದ ಔತಣದ ಭೋಜನ. ಕಾಲೇಜು ಗಳಲ್ಲಿ ಸೀಟು ಕೊಡುವ ಮಾತು, ಪಕ್ಷಪಾತ, ಶಿಫಾರಸುಗಳು, ಬುದ್ಧಿವಂತ ರಿಗೆ ಸೀಟುಗಳಿಲ್ಲ, ಈ ಮಾತುಗಳು ಮುಂದೆ ಸಾಗಿದುವು. ವಾಸುವು " ಹೀಗೆಯೇ ನಡೆಯುತ್ತಿರಲಿ. ವಿದ್ಯಾವಂತರಿಗೆಲ್ಲಾ ನಿರುತ್ಸಾ ಹವಾಗುತ್ತದೆ. ಕ್ರಾಂತಿಯು ಹೊಗೆಯಾಡಲಾರಂಭವಾಗುತ್ತದೆ " ಎಂದನು. ಗಂಗಾಧರನಿಗೆ ರೇಗಿತು, " ಬಾಯಿ ಮುಚ್ಚು! ಬುದ್ಧಿಯಿಲ್ಲದ ಹುಡು ಗರು ' ಕ್ರಾಂತಿ—ಕ್ರಾಂತಿ ' ಎನ್ನುವುದು. ನಾಲ್ಕು ಪುಸ್ತಕಗಳನ್ನೋದಿದರೆ ರಾಜಕೀಯ ಪ್ರವೀಣರಾಗಿ ಬಿಡುತ್ತಾರೇನು? " " ಅಪ್ಪಾ! ನಿಮಗೇಕೆ ಇಷ್ಟು ಕೋಪ. ಐಶ್ವರ್ಯವಂತರು, ಜಮೀನು ದಾರರು, ವ್ಯಾಪಾರಿಗಳು ದೊಡ್ಡ ಲಾಯರುಗಳು ಎಲ್ಲಾ ಸೇರಿ ನಿಮ್ಮ ಕಾಂಗ್ರೆಸ್ಸು! ಇಂಗ್ಲೀಷರ ಕೈಲಿರುವ ಅಧಿಕಾರ ನಿಮ್ಮ ಕೈಗೆ ಬರಬೇಕೆನ್ನುತ್ತೀರಿ —ಅದೇ ಸ್ವರಾಜ್ಯ. " " ಅಲ್ಲ ಕಣೋ ' ಫೂಲ್! ' ಮಹಾತ್ಮಾ ಗಾಂಧಿಯವರು ಜಮೀನು ದಾರರೇನೋ! ಐಶ್ವರ್ಯವಂತರೆನೋ! ಅವರು ದರಿದ್ರನಾರಾಯಣನ ಅವ ತಾರ! ತ್ಯಾಗದ ಪ್ರತ್ಯಕ್ಷಮೂರ್ತಿ. " ಅಲ್ಲಿಗೆ ವಾಸುವಿನ ಮಾತು ನಿಂತಿತು. ಕಮಲಮ್ಮನವರು ಪಾಯಸ ವನ್ನು ತಂದು ಬಡಿಸಿದರು. ಜಿಲೇಬಿಯೂ ಬಂತು. ವಾಸುವು ಉಪಚಾರ ಮಾಡಿ ನಾಣಿಗೆ ಮತ್ತೆರಡು ಜಿಲೇಬಿ ಹಾಕಿಸಿದನು.<noinclude></noinclude> jchcbgnaasoao8vlxiuibm9isf700wk ಪುಟ:Chitrakuuta (1954).djvu/೩೪ 104 120861 324775 2026-06-16T04:52:51Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಚಿತ್ರಕೂಟ ೧೯ ವಾಸುವು ನಾಣಿಯನ್ನು ಮಹೆಡಿಯೆ ಮೇಲೆ ತನ್ನ ನೋಣೆಗೆ ಕರೆದು ಕೊಂಡು ಹೋದನು. ಅಲ್ಲಿ ಅವರು ಮಾತನಾಡುತ್ತಾ ಕುಳಿತರು. ನಾಣಿ ವಾಸು ವಿನ ಮೇಜಿನ ಮೇಲಿದ್ದ ಪುಸ್ತಕಗಳನ್ನು ಒಂದೊಂದಾಗಿ ನೋಡಿದನು. ಬ್ರಾಟ್‌ ಸ... 324775 proofread-page text/x-wiki <noinclude><pagequality level="1" user="Nihar Chakravarti" /></noinclude>ಚಿತ್ರಕೂಟ ೧೯ ವಾಸುವು ನಾಣಿಯನ್ನು ಮಹೆಡಿಯೆ ಮೇಲೆ ತನ್ನ ನೋಣೆಗೆ ಕರೆದು ಕೊಂಡು ಹೋದನು. ಅಲ್ಲಿ ಅವರು ಮಾತನಾಡುತ್ತಾ ಕುಳಿತರು. ನಾಣಿ ವಾಸು ವಿನ ಮೇಜಿನ ಮೇಲಿದ್ದ ಪುಸ್ತಕಗಳನ್ನು ಒಂದೊಂದಾಗಿ ನೋಡಿದನು. ಬ್ರಾಟ್‌ ಸಿ ಯು ಬರೆದ ರಷ್ಯದ ಕ್ರಾಂತಿ, ಮಾರ್ಕ್ಸ್‌ ಸಿದ್ದಾಂತ ಹೀಗೇ ಒಂದೊಂದಾಗಿ ಸ ಕಗಳನ್ನು 10 ಹಾಕಿದನು. ಇ. ಬಟ್‌ ಸ್‌! ನಿಮಗೆ ಈ ಪುಸ್ತಕಗಳಲ್ಲಿಯೇ ಅಭಿರುಚಿಯೇ ! ? « ಹಾಗೇನೂ ಇಲ್ಲ. ಎಲ್ಲಾ ಪುಸ್ತಕಗಳನ ಸ್ಸ ಓದುತ್ತೇನೆ. ಆಲ್ಲಿ ನೋಡು. ಷೇಕ್ಸ್‌ ಪಿಯೆರನ ನಾಟಿಕಗಳಿವೆ. ಇಲ್ಲಿ ಬರ್ನರ್ಡ್‌ ಷಾನ ಪುಸ್ತ ಕಗಳಿವೆ. ನೆಹರೂ ಬಕನ " ಆಟೋಬಯಾಗ್ರಫಿ ' ಇದೆ. ? « ನೀವು ಲಾ ಪರೀಕ್ಷೆಗೆ ಓದುತ್ತೀದ್ದೀರೆಂದು ಕೇಳಿದ್ದೆ. ” « ಏಕೆ ನಾಣಿ! ಸರಿಯಾಗಿಯೇ ಕೇಳು. ಮದರಾಸಿನಲ್ಲಿ ಲಾ ಓದು ತ್ರಿದ್ದೆ. ಫೇಲಾಯಿತು. ಮನೆಗೆ ಬಂದುಬಿಟ್ಟೆ. | ಆಮೇಲೆ? » ವಾಸುವು ನಕ್ಕನು. « ಆಮೇಲೆ ಏನು ಈಗಲೂ ಪರೀಕ್ಷೆಗೆ ಕಟ್ಟ ಸ್‌ ಮಾಡಬಹುದು. ಕಕ್ಷಿಗಾರರನ್ನು ಕಟ್ಟ ಕೊಂಡು ಕೋರ್ಟಗೆ ಅಲೆಯ ಬಹುದು. ಅದೇನು ಮಹಾ ಕಾರ್ಯ. ಯಾರಿಗೆ ಉಪಕಾರ! ನಮ್ಮ ತಂದೆ ಯವರು ದೊಡ್ಡ ಲಾಯರು. ಈಗೇನೋ ಪಾ ತ್ರ್ಯಾಕ್ರೀಸು ಬಿಟ್ಟಿದ್ದಾರೆ. ನಾನೂ ಹಾಗೆಯೇ ಒಬ್ಬ ಲಾಯರಾಗಬಹುದು. ' “ ಬಿ. ಎಲ್‌. ಪ್ಯಾಸ್‌ ಮಾಡಿದರೆ ಓದು ಮುಗಿದಂತಾಗುತ್ತದೆ. ಸಮಾಜ ದಲ್ಲಿ ಅದಕ್ಕೊಂದು ಗೌರವವಿದೆ! « ಗೌರವವೇ! ಗೌರವ! ನಾಣಿ ಇದೆಲ್ಲಾ ಏನೆಂದು ತಿಳಿದುಕೊಂಡಿದ್ದಿ. ಇಂಗ್ಲಿಷರು ಕಟ್ಟ ರುವ ರಕ್ತಾ ಬಂಧನಗಳು. ಈ ಲಾಯರುಗಳು- ಈ ವಿಶ್ವ ವಿದ್ಯಾನಿಲಯ. ಈ ವ್ಯಾಪಾರ-- ಈ ಅಧಿಕಾರಿ ವರ್ಗ ಇದೆಲ್ಲವೂ ಇದ್ದ ? ಇಂಗ್ಲೀಷ್‌ ರಾಜ್ಯಭಾರವು 'ಶಾಶ ಶ್ರ ತವಾಗಿರುತ್ತದೆ. ಇದು ಅವರು ನಮಗೆ ಮಾಡಿ ರುವ ಉಪಕಾರ. ? ನಾಣಿಯು ಅಪ್ರತಿಭನಾದನು. * ವಾಸುದೇವರಾವ್‌ | ಮಹಾತ್ಮಾ<noinclude></noinclude> ogwvf004bugg0wm2y95bq5qafmt7te4 324807 324775 2026-06-16T05:09:12Z Nihar Chakravarti 8555 /* Proofread */ 324807 proofread-page text/x-wiki <noinclude><pagequality level="3" user="Nihar Chakravarti" />{{rh||ಚಿತ್ರಕೂಟ|೧೯}}</noinclude>ವಾಸುವು ನಾಣಿಯನ್ನು ಮಹಡಿಯ ಮೇಲೆ ತನ್ನ ಕೋಣೆಗೆ ಕರೆದು ಕೊಂಡು ಹೋದನು. ಅಲ್ಲಿ ಅವರು ಮಾತನಾಡುತ್ತಾ ಕುಳಿತರು. ನಾಣಿ ವಾಸು ವಿನ ಮೇಜಿನ ಮೇಲಿದ್ದ ಪುಸ್ತಕಗಳನ್ನು ಒಂದೊಂದಾಗಿ ನೋಡಿದನು. ಟ್ರಾಟ್‌ ಸ್ಕಿಯು ಬರೆದ ರಷ್ಯದ ಕ್ರಾಂತಿ, ಮಾರ್ಕ್ಸ್ ಸಿದ್ಧಾಂತ—ಹೀಗೇ ಒಂದೊಂದಾಗಿ ಪುಸ್ತಕಗಳನ್ನು ಮಗುಚಿ ಹಾಕಿದನು. “ ವಾಸುದೇವರಾವ್ ! ನಿಮಗೆ ಈ ಪುಸ್ತಕಗಳಲ್ಲಿಯೇ ಅಭಿರುಚಿಯೇ ! ” “ ಹಾಗೇನೂ ಇಲ್ಲ. ಎಲ್ಲಾ ಪುಸ್ತಕಗಳನ್ನೂ ಓದುತ್ತೇನೆ. ಅಲ್ಲಿ ನೋಡು. ಷೇಕ್ಸ್ ಪಿಯರನ ನಾಟಕಗಳಿವೆ. ಇಲ್ಲಿ ಬರ್ನಾರ್ಡ್ ಷಾನ ಪುಸ್ತಕಗಳಿವೆ. ನೆಹರೂ ಬರೆದಿರುವ ‘ ಆಟೋಬಯಾಗ್ರಫಿ ’ ಇದೆ. ” “ ನೀವು ಲಾ ಪರೀಕ್ಷೆಗೆ ಓದುತ್ತಿದ್ದೀರೆಂದು ಕೇಳಿದ್ದೆ. ” “ ಏಕೆ ನಾಣಿ ! ಸರಿಯಾಗಿಯೇ ಕೇಳು. ಮದರಾಸಿನಲ್ಲಿ ಲಾ ಓಡು ತ್ತಿದ್ದೆ. ಫೇಲಾಯಿತು. ಮನೆಗೆ ಬಂದುಬಿಟ್ಟೆ. ” “ ಆಮೇಲೆ ? ” ವಾಸುವು ನಕ್ಕನು. “ ಆಮೇಲೆ ಏನು, ಈಗಲೂ ಪರೀಕ್ಷೆಗೆ ಕಟ್ಟಿ ಪ್ಯಾಸ್ ಮಾಡಬಹುದು. ಕಕ್ಷಿಗಾರರನ್ನು ಕಟ್ಟಿಕೊಂಡು ಕೋರ್ಟಿಗೆ ಅಲೆಯ ಬಹುದು. ಅದೇನು ಮಹಾ ಕಾರ್ಯ. ಯಾರಿಗೆ ಉಪಕಾರ ! ನಮ್ಮ ತಂದೆ ಯವರು ದೊಡ್ಡ ಲಾಯರು. ಈಗೇನೋ ಪ್ರಾಕ್ಟೀಸು ಬಿಟ್ಟಿದ್ದಾರೆ. ನಾನೂ ಹಾಗೆಯೇ ಒಬ್ಬ ಲಾಯರಾಗಬಹುದು. ” “ ಬಿ. ಎಲ್. ಪ್ಯಾಸ್ ಮಾಡಿದರೆ ಓದು ಮುಗಿದಂತಾಗುತ್ತದೆ. ಸಮಾಜ ದಲ್ಲಿ ಅದಕ್ಕೊಂದು ಗೌರವವಿದೆ ! ” “ ಗೌರವವೇ ! ಗೌರವ ! ನಾಣಿ, ಇದೆಲ್ಲಾ ಏನೆಂದು ತಿಳಿದುಕೊಂಡಿದ್ದಿ. ಇಂಗ್ಲಿಷರು ಕಟ್ಟಿರುವ ರೇಷ್ಮೆ ಬಂಧನಗಳು. ಈ ಲಾಯರುಗಳು—ಈ ವಿಶ್ವ ವಿದ್ಯಾನಿಲಯ—ಈ ವ್ಯಾಪಾರ—ಈ ಅಧಿಕಾರಿ ವರ್ಗ ಇದೆಲ್ಲವೂ ಇದ್ದರೆ ಇಂಗ್ಲೀಷ್ ರಾಜ್ಯಭಾರವು ಶಾಶ್ವತವಾಗಿರುತ್ತದೆ. ಇದು ಅವರು ನಮಗೆ ಮಾಡಿ ರುವ ಉಪಕಾರ. ” ನಾಣಿಯು ಅಪ್ರತಿಭನಾದನು. “ ವಾಸುದೇವರಾವ್ ! ಮಹಾತ್ಮಾ<noinclude></noinclude> e2561ytdmfek1rxu3bue4h3434d1w70 324858 324807 2026-06-16T07:10:35Z A826 6806 /* Validated */ 324858 proofread-page text/x-wiki <noinclude><pagequality level="4" user="A826" />{{rh||ಚಿತ್ರಕೂಟ|೧೯}}</noinclude>ವಾಸುವು ನಾಣಿಯನ್ನು ಮಹಡಿಯ ಮೇಲೆ ತನ್ನ ಕೋಣೆಗೆ ಕರೆದು ಕೊಂಡು ಹೋದನು. ಅಲ್ಲಿ ಅವರು ಮಾತನಾಡುತ್ತಾ ಕುಳಿತರು. ನಾಣಿ ವಾಸು ವಿನ ಮೇಜಿನ ಮೇಲಿದ್ದ ಪುಸ್ತಕಗಳನ್ನು ಒಂದೊಂದಾಗಿ ನೋಡಿದನು. ಟ್ರಾಟ್‌ ಸ್ಕಿಯು ಬರೆದ ರಷ್ಯದ ಕ್ರಾಂತಿ, ಮಾರ್ಕ್ಸ್ ಸಿದ್ಧಾಂತ—ಹೀಗೇ ಒಂದೊಂದಾಗಿ ಪುಸ್ತಕಗಳನ್ನು ಮಗುಚಿ ಹಾಕಿದನು. " ವಾಸುದೇವರಾವ್! ನಿಮಗೆ ಈ ಪುಸ್ತಕಗಳಲ್ಲಿಯೇ ಅಭಿರುಚಿಯೇ! " " ಹಾಗೇನೂ ಇಲ್ಲ. ಎಲ್ಲಾ ಪುಸ್ತಕಗಳನ್ನೂ ಓದುತ್ತೇನೆ. ಅಲ್ಲಿ ನೋಡು. ಷೇಕ್ಸ್ ಪಿಯರನ ನಾಟಕಗಳಿವೆ. ಇಲ್ಲಿ ಬರ್ನಾರ್ಡ್ ಷಾನ ಪುಸ್ತಕಗಳಿವೆ. ನೆಹರೂ ಬರೆದಿರುವ ' ಆಟೋಬಯಾಗ್ರಫಿ ' ಇದೆ. " " ನೀವು ಲಾ ಪರೀಕ್ಷೆಗೆ ಓದುತ್ತಿದ್ದೀರೆಂದು ಕೇಳಿದ್ದೆ. " " ಏಕೆ ನಾಣಿ! ಸರಿಯಾಗಿಯೇ ಕೇಳು. ಮದರಾಸಿನಲ್ಲಿ ಲಾ ಓಡು ತ್ತಿದ್ದೆ. ಫೇಲಾಯಿತು. ಮನೆಗೆ ಬಂದುಬಿಟ್ಟೆ. " " ಆಮೇಲೆ? " ವಾಸುವು ನಕ್ಕನು. " ಆಮೇಲೆ ಏನು, ಈಗಲೂ ಪರೀಕ್ಷೆಗೆ ಕಟ್ಟಿ ಪ್ಯಾಸ್ ಮಾಡಬಹುದು. ಕಕ್ಷಿಗಾರರನ್ನು ಕಟ್ಟಿಕೊಂಡು ಕೋರ್ಟಿಗೆ ಅಲೆಯ ಬಹುದು. ಅದೇನು ಮಹಾ ಕಾರ್ಯ. ಯಾರಿಗೆ ಉಪಕಾರ! ನಮ್ಮ ತಂದೆ ಯವರು ದೊಡ್ಡ ಲಾಯರು. ಈಗೇನೋ ಪ್ರಾಕ್ಟೀಸು ಬಿಟ್ಟಿದ್ದಾರೆ. ನಾನೂ ಹಾಗೆಯೇ ಒಬ್ಬ ಲಾಯರಾಗಬಹುದು. " " ಬಿ. ಎಲ್. ಪ್ಯಾಸ್ ಮಾಡಿದರೆ ಓದು ಮುಗಿದಂತಾಗುತ್ತದೆ. ಸಮಾಜ ದಲ್ಲಿ ಅದಕ್ಕೊಂದು ಗೌರವವಿದೆ! " " ಗೌರವವೇ! ಗೌರವ! ನಾಣಿ, ಇದೆಲ್ಲಾ ಏನೆಂದು ತಿಳಿದುಕೊಂಡಿದ್ದಿ. ಇಂಗ್ಲಿಷರು ಕಟ್ಟಿರುವ ರೇಷ್ಮೆ ಬಂಧನಗಳು. ಈ ಲಾಯರುಗಳು—ಈ ವಿಶ್ವ ವಿದ್ಯಾನಿಲಯ—ಈ ವ್ಯಾಪಾರ—ಈ ಅಧಿಕಾರಿ ವರ್ಗ ಇದೆಲ್ಲವೂ ಇದ್ದರೆ ಇಂಗ್ಲೀಷ್ ರಾಜ್ಯಭಾರವು ಶಾಶ್ವತವಾಗಿರುತ್ತದೆ. ಇದು ಅವರು ನಮಗೆ ಮಾಡಿ ರುವ ಉಪಕಾರ. " ನಾಣಿಯು ಅಪ್ರತಿಭನಾದನು. " ವಾಸುದೇವರಾವ್! ಮಹಾತ್ಮಾ<noinclude></noinclude> 9mrscemvzjp6pn8pdmmrjq1kew4ybw4 ಪುಟ:Chitrakuuta (1954).djvu/೩೫ 104 120862 324776 2026-06-16T04:52:57Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೨೦ ಚಿತ್ರ ಕೂಟ ಗಾಂಧಿಯವರ ತಪಸ್ಸಿನಿಂದ ಇಂಗ್ಲಿಷ್‌ ರಾಜ್ಯವು ನಾಶವಾಗುವುದಿಲ್ಲವೇ 9?” ವಾಸುವು ಪಿಜಿ. | ಮಹಾ ಕ್ರಾಂತಿಯಾಗದೇ ನಿಜವಾದ ಸ್ವರಾ ಜ ವು ಬರುವುದೇ ಇಲ್ಲ. ” ಕೆಳಗಡೆ ಏನೋ ಗದ್ದಲ, ಸಡಗರ. ವಾಸುವಿನ ರಾಜಕೀಯ ವ... 324776 proofread-page text/x-wiki <noinclude><pagequality level="1" user="Nihar Chakravarti" /></noinclude>೨೦ ಚಿತ್ರ ಕೂಟ ಗಾಂಧಿಯವರ ತಪಸ್ಸಿನಿಂದ ಇಂಗ್ಲಿಷ್‌ ರಾಜ್ಯವು ನಾಶವಾಗುವುದಿಲ್ಲವೇ 9?” ವಾಸುವು ಪಿಜಿ. | ಮಹಾ ಕ್ರಾಂತಿಯಾಗದೇ ನಿಜವಾದ ಸ್ವರಾ ಜ ವು ಬರುವುದೇ ಇಲ್ಲ. ” ಕೆಳಗಡೆ ಏನೋ ಗದ್ದಲ, ಸಡಗರ. ವಾಸುವಿನ ರಾಜಕೀಯ ವೇದಾಂ ತಕ್ಕೂ ಕೆಳಗಿನ ಹಜಾರದ ಸಡಗರಕ್ಕೂ ಸಂಬಂಧವೇ ಇಲ್ಲ. ಮಧ್ಯಾಹ್ನ ಮೂರು ಗಂಟೆಯ ಸಮಯ. ರಾಮುವು ಬಂದು, “ಕಾಫಿ ತೆಗೆದುಕೊಳ್ಳಲು ಕಳಗೆ ಬರಬೇಕಂತೆ * ಎಂದು ಕರೆದುಹೋದನು. ವಾಸುವು ನಾಣಿಯನ್ನು ಕರೆದುಕೊಂಡು ಕೆಳಗಿಳಿದನು. ಹಜಾರದಲ್ಲಿ ರತ ಗಂಬಳಿ ಹಾಸಿತ್ತು. ಮತ್ತೊಂದು ಕಡೆ ಲೋಡುದಿಂಬು ಗಳನ್ನು ಇಟ್ಟಿತ್ತು. ನಾರಾಯಣನು ಇದೇನು ಸಿದ್ದತೆ ಎಂದುಕೊಂಡು ಹಜಾರವನ್ನು ದಾಟ ನಡುಮನೆಗೆ ಹೋದನು. ಅಲ್ಲ ಮಣಿಗಳನ್ನು ಹಾಕಿದ್ದ ರು. ಉಪಾಹಾರದ ತಟ್ಟೆಗಳು ಸಿದ ವಾಗಿ ದ್ಹುವು. ತಟ್ಟಿ ಯಲ್ಲಿ ತೀಂಗೊಳಲ್ಲು. ಬೋಂಡ ಹಣ್ಣು ಚೂರುಗಳು ಎಲ್ಲವೂ ಹ ವು. ಹಜಜ? ಒಬ್ಬಿ ಬ್ರ ರು ಗಾಂಧೀ ಭಕ್ತರೂ ಕುಳಿತಿದ್ದರು. “ಬಾ ನಾಣಿ, ಮಣೆಯ ಮೇಲೆ ತುಳ ! » ಎಂದು ಗಂಗಾಧರನು ಹೇಳಿದ. ನಾರಾಯಣನು ಕುಳಿತುಕೊಂಡನು. ನಾಸು, ರಾಮು ಸಕ್ಕದಲ್ಲಿ ಕುಳಿತರು. ಗಂಗಾಧರನು " ನೋಡಿ, ವಿಠಲರಾವ್‌ ಈ ಹುಡುಗನು ನಮ್ಮ ಶಾ ಮ ಣ್ಲನವರ ಮಗ. ನಾನು ಶ್ಯಾಮು ಬಾಲ್ಯ ಸ್ಥ ಸ್ಕೀಹಿತರು. ಇವನು ಬಿ. ಎಸ್‌ಸಿ. ಫಸ್ಟ್‌ಕ್ಲಾಸ್‌ ! ಇವನಿಗೆ ನಮ್ಮ ತಾರಾನ್ಸ ಕೊಡೋಣನೆಂದು ಯೋಚನೆ ಮಾಡಿದ್ದೇನೆ. ಏನು ಹೇಳುತ್ತೀರಿ > ನಿಕಲರಾಯರು ಉಪಾಹಾರವನ್ನು ಸಾಗಿಸುತ್ತಾ " ಸೊಗಸಾದ ವರ ಸಾಮ್ಯ. ನಿಮಗೇನು ಸ್ವಾಮೀ, ಎಲ್ಲಿಯೂ ಲಾ ಚೇ ಸರುಗೆ ನಾಲ್ಕಾರು ನಸ ದಿನ್ಯಭೋಜನ 1 ಸಂಗೀತ! ಸಂಭ್ರ ಮಗಳು. ಮದುವೆ ಮಾಡಿಬಿಡಿ. ಮತ್ತೆ ಪುನ ; ಯಾವಾಗ ಜಿ ಜೈಲಿಗೆ ಟನ ಎಂದು ನಕ್ಕರು. ನಾರಾಯಣ ರಿಗೆ ಬೆಳಗಿನಿಂದ ನಡೆದ ವಿಶ್ವಾಸ, ಆಚಾರ ಉಪಚಾರಗಳು ಅರ್ಥವಾಯಿತು. ಅವನು ಮೌನವಾಗಿ ಉಪಾಹಾರವನ್ನು ಮುಗಿಸಿದನು.<noinclude></noinclude> oyak5invwenyl30qu81a838ak7olo49 324808 324776 2026-06-16T05:10:55Z Nihar Chakravarti 8555 /* Proofread */ 324808 proofread-page text/x-wiki <noinclude><pagequality level="3" user="Nihar Chakravarti" />{{rh|೨೦|ಚಿತ್ರಕೂಟ}}</noinclude>ಗಾಂಧಿಯವರ ತಪಸ್ಸಿನಿಂದ ಇಂಗ್ಲಿಷ್ ರಾಜ್ಯವು ನಾಶವಾಗುವುದಿಲ್ಲವೇ ? ” ವಾಸುವು ತಲೆಯಾಡಿಸಿದನು. “ ಮಹಾ ಕ್ರಾಂತಿಯಾಗದೇ ನಿಜವಾದ ಸ್ವರಾಜ್ಯವು ಬರುವುದೇ ಇಲ್ಲ. ” ಕೆಳಗಡೆ ಏನೋ ಗದ್ದಲ, ಸಡಗಡ. ವಾಸುವಿನ ರಾಜಕೀಯ ವೇದಾಂತಕ್ಕೂ ಕೆಳಗಿನ ಹಜಾರದ ಸಡಗರಕ್ಕೂ ಸಂಬಂಧವೇ ಇಲ್ಲ. ಮಧ್ಯಾಹ್ನ ಮೂರು ಗಂಟೆಯ ಸಮಯ. ರಾಮುವು ಬಂದು, “ ಕಾಫಿ ತೆಗೆದುಕೊಳ್ಳಲು ಕೆಳಗೆ ಬರಬೇಕಂತೆ ” ಎಂದು ಕರೆದುಹೋದನು. ವಾಸುವು ನಾಣಿಯನ್ನು ಕರೆದುಕೊಂಡು ಕೆಳಗಿಳಿದನು. ಹಜಾರದಲ್ಲಿ ರತ್ನಗಂಬಳಿ ಹಾಸಿತ್ತು. ಮತ್ತೊಂದು ಕಡೆ ಲೋಡುದಿಂಬುಗಳನ್ನು ಇಟ್ಟಿತ್ತು. ನಾರಾಯಣನು ಇದೇನು ಸಿದ್ಧತೆ ಎಂದುಕೊಂಡು ಹಜಾರವನ್ನು ದಾಟಿ ನಡುಮನೆಗೆ ಹೋದನು. ಅಲ್ಲಿ ಮಣೆಗಳನ್ನು ಹಾಕಿದ್ದರು. ಉಪಾಹಾರದ ತಟ್ಟೆಗಳು ಸಿದ್ಧವಾಗಿದ್ದುವು. ತಟ್ಟೆಯಲ್ಲಿ ತೇಂಗೊಳಲು, ಬೋಂಡ, ಹಣ್ಣು ಚೂರುಗಳು ಎಲ್ಲವೂ ಇದ್ದುವು. ಗಂಗಾಧರರಾಯನೂ ಒಬ್ಬಿಬ್ಬರು ಗಾಂಧೀ ಭಕ್ತರೂ ಕುಳಿತಿದ್ದರು. “ ಬಾ ನಾಣಿ, ಮಣೆಯ ಮೇಲೆ ಕುಳಿತುಕೋ ! ” ಎಂದು ಗಂಗಾಧರನು ಹೇಳಿದ. ನಾರಾಯಣನು ಕುಳಿತುಕೊಂಡನು. ವಾಸು, ರಾಮು ಪಕ್ಕದಲ್ಲಿ ಕುಳಿತರು. ಗಂಗಾಧರನು “ ನೋಡಿ, ವಿಠಲರಾವ್ ಈ ಹುಡುಗನು ನಮ್ಮ ಶ್ಯಾಮಣ್ಣನವರ ಮಗ. ನಾನು ಶ್ಯಾಮು ಬಾಲ್ಯ ಸ್ನೇಹಿತರು. ಇವನು ಬಿ.ಎಸ್ಸಿ. ಫಸ್ಟ್ ಕ್ಲಾಸ್ ! ಇವನಿಗೆ ನಮ್ಮ ತಾರಾವನ್ನು ಕೊಡೋಣವೆಂದು ಯೋಚನೆ ಮಾಡಿದ್ದೇನೆ. ಏನು ಹೇಳುತ್ತೀರಿ ” ವಿಠಲರಾಯರು ಉಪಾಹಾರವನ್ನು ಸಾಗಿಸುತ್ತಾ, “ ಸೊಗಸಾದ ವರ ಸಾಮ್ಯ. ನಿಮಗೇನು ಸ್ವಾಮೀ, ಎಲ್ಲಿಯೂ ಲಾಭವೇ ! ನಮಗೆ ನಾಲ್ಕಾರು ದಿನಗಳು ದಿವ್ಯಭೋಜನ ! ಸಂಗೀತ ! ಸಂಭ್ರಮಗಳು. ಮದುವೆ ಮಾಡಿಬಿಡಿ. ಮತ್ತೆ ಪುನಃ ಯಾವಾಗ ಜೈಲಿಗೆ ಹೋಗಬೇಕೋ ? ” ಎಂದು ನಕ್ಕರು. ನಾರಾಯಣನಿಗೆ ಬೆಳಗಿನಿಂದ ನಡೆದ ವಿಶ್ವಾಸ, ಆಚಾರ ಉಪಚಾರಗಳು ಅರ್ಥವಾಯಿತು. ಅವನು ಮೌನವಾಗಿ ಉಪಾಹಾರವನ್ನು ಮುಗಿಸಿದನು.<noinclude></noinclude> k8ajdzyo4w1stz0lszykwcvd2sqhd4f 324859 324808 2026-06-16T07:11:35Z A826 6806 /* Validated */ 324859 proofread-page text/x-wiki <noinclude><pagequality level="4" user="A826" />{{rh|೨೦|ಚಿತ್ರಕೂಟ}}</noinclude>ಗಾಂಧಿಯವರ ತಪಸ್ಸಿನಿಂದ ಇಂಗ್ಲಿಷ್ ರಾಜ್ಯವು ನಾಶವಾಗುವುದಿಲ್ಲವೇ? " ವಾಸುವು ತಲೆಯಾಡಿಸಿದನು. " ಮಹಾ ಕ್ರಾಂತಿಯಾಗದೇ ನಿಜವಾದ ಸ್ವರಾಜ್ಯವು ಬರುವುದೇ ಇಲ್ಲ. " ಕೆಳಗಡೆ ಏನೋ ಗದ್ದಲ, ಸಡಗಡ. ವಾಸುವಿನ ರಾಜಕೀಯ ವೇದಾಂತಕ್ಕೂ ಕೆಳಗಿನ ಹಜಾರದ ಸಡಗರಕ್ಕೂ ಸಂಬಂಧವೇ ಇಲ್ಲ. ಮಧ್ಯಾಹ್ನ ಮೂರು ಗಂಟೆಯ ಸಮಯ. ರಾಮುವು ಬಂದು, " ಕಾಫಿ ತೆಗೆದುಕೊಳ್ಳಲು ಕೆಳಗೆ ಬರಬೇಕಂತೆ " ಎಂದು ಕರೆದುಹೋದನು. ವಾಸುವು ನಾಣಿಯನ್ನು ಕರೆದುಕೊಂಡು ಕೆಳಗಿಳಿದನು. ಹಜಾರದಲ್ಲಿ ರತ್ನಗಂಬಳಿ ಹಾಸಿತ್ತು. ಮತ್ತೊಂದು ಕಡೆ ಲೋಡುದಿಂಬುಗಳನ್ನು ಇಟ್ಟಿತ್ತು. ನಾರಾಯಣನು ಇದೇನು ಸಿದ್ಧತೆ ಎಂದುಕೊಂಡು ಹಜಾರವನ್ನು ದಾಟಿ ನಡುಮನೆಗೆ ಹೋದನು. ಅಲ್ಲಿ ಮಣೆಗಳನ್ನು ಹಾಕಿದ್ದರು. ಉಪಾಹಾರದ ತಟ್ಟೆಗಳು ಸಿದ್ಧವಾಗಿದ್ದುವು. ತಟ್ಟೆಯಲ್ಲಿ ತೇಂಗೊಳಲು, ಬೋಂಡ, ಹಣ್ಣು ಚೂರುಗಳು ಎಲ್ಲವೂ ಇದ್ದುವು. ಗಂಗಾಧರರಾಯನೂ ಒಬ್ಬಿಬ್ಬರು ಗಾಂಧೀ ಭಕ್ತರೂ ಕುಳಿತಿದ್ದರು. " ಬಾ ನಾಣಿ, ಮಣೆಯ ಮೇಲೆ ಕುಳಿತುಕೋ! " ಎಂದು ಗಂಗಾಧರನು ಹೇಳಿದ. ನಾರಾಯಣನು ಕುಳಿತುಕೊಂಡನು. ವಾಸು, ರಾಮು ಪಕ್ಕದಲ್ಲಿ ಕುಳಿತರು. ಗಂಗಾಧರನು " ನೋಡಿ, ವಿಠಲರಾವ್ ಈ ಹುಡುಗನು ನಮ್ಮ ಶ್ಯಾಮಣ್ಣನವರ ಮಗ. ನಾನು ಶ್ಯಾಮು ಬಾಲ್ಯ ಸ್ನೇಹಿತರು. ಇವನು ಬಿ.ಎಸ್ಸಿ. ಫಸ್ಟ್ ಕ್ಲಾಸ್! ಇವನಿಗೆ ನಮ್ಮ ತಾರಾವನ್ನು ಕೊಡೋಣವೆಂದು ಯೋಚನೆ ಮಾಡಿದ್ದೇನೆ. ಏನು ಹೇಳುತ್ತೀರಿ " ವಿಠಲರಾಯರು ಉಪಾಹಾರವನ್ನು ಸಾಗಿಸುತ್ತಾ, " ಸೊಗಸಾದ ವರ ಸಾಮ್ಯ. ನಿಮಗೇನು ಸ್ವಾಮೀ, ಎಲ್ಲಿಯೂ ಲಾಭವೇ! ನಮಗೆ ನಾಲ್ಕಾರು ದಿನಗಳು ದಿವ್ಯಭೋಜನ! ಸಂಗೀತ! ಸಂಭ್ರಮಗಳು. ಮದುವೆ ಮಾಡಿಬಿಡಿ. ಮತ್ತೆ ಪುನಃ ಯಾವಾಗ ಜೈಲಿಗೆ ಹೋಗಬೇಕೋ? " ಎಂದು ನಕ್ಕರು. ನಾರಾಯಣನಿಗೆ ಬೆಳಗಿನಿಂದ ನಡೆದ ವಿಶ್ವಾಸ, ಆಚಾರ ಉಪಚಾರಗಳು ಅರ್ಥವಾಯಿತು. ಅವನು ಮೌನವಾಗಿ ಉಪಾಹಾರವನ್ನು ಮುಗಿಸಿದನು.<noinclude></noinclude> 4j514cdtl95xv3mrropnyzd1zvw4hxr ಪುಟ:Chitrakuuta (1954).djvu/೩೬ 104 120863 324777 2026-06-16T04:53:03Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಚಿತ್ರಕೂಟ ೨೧ " ತಾರಾ, ತಾರಾ ಆ ಹುಡುಗಿಯು ಮಾತ್ರ ನಾಣಿಯ ಕಣ್ಣಿಗೆ ಬೀಳ ಲಿಲ್ಲ. ವಾಸುವಿನ ತಂಗಿ ವಾಸುವಿನ ಹಾಗೆಯೇ ಧು ಹುದೆಂದು ಭಾವಿಸಿದನು. ಕಾಫಿ ಕೊಡುತ್ತಿದ್ದ ಕಮಲಮ್ಮನವರನ್ನೊಂದು ಬಾರಿ ತಲೆ ಎತ್ತಿ ನೋಡಿದನು. ಹು... 324777 proofread-page text/x-wiki <noinclude><pagequality level="1" user="Nihar Chakravarti" /></noinclude>ಚಿತ್ರಕೂಟ ೨೧ " ತಾರಾ, ತಾರಾ ಆ ಹುಡುಗಿಯು ಮಾತ್ರ ನಾಣಿಯ ಕಣ್ಣಿಗೆ ಬೀಳ ಲಿಲ್ಲ. ವಾಸುವಿನ ತಂಗಿ ವಾಸುವಿನ ಹಾಗೆಯೇ ಧು ಹುದೆಂದು ಭಾವಿಸಿದನು. ಕಾಫಿ ಕೊಡುತ್ತಿದ್ದ ಕಮಲಮ್ಮನವರನ್ನೊಂದು ಬಾರಿ ತಲೆ ಎತ್ತಿ ನೋಡಿದನು. ಹುಡುಗಿಯು ತಾಯಿಯಂತೆ ಇರಬಹುದು. ಅಪ್ರಿಂದ ಹೆಜಾರಕ್ಕೆ ಬಂದು ಎಬ್ಬರೂ ಕುಳಿತರು. ಗಂಗಾಧರನು ನಾರಾಯಣನನ್ನು ಪಕ್ಪೆದಲ್ಲಿ ಕೂಡಿಸಿ ಕೊಂಡನು. ಎದುರಿಗೆ ಸಿದ್ದ ವಾಗಿದ್ದ ರತ್ನಗಂಬಳಿಯ ಮೇಲೆ ತಾರಾ ವೀಣೆ ಯನ್ನು ಶಂದು ಕುಳಿ ತುತೊಂಡಳು. ಗಂಗಾಧರನು, “ ತಾರಾ ಒಂದೆರಡು ಕೀರ್ತನೆಗಳನು )ಿ ಹಾಡಮ್ಮಾ” ಎಂದನು. ತಾರಾ ಕಂಠವನ್ನು ಸರಿ ಮಾಡಿ ಕೊಂಡು ಚಾ ಜಸಿ ದಳು. ಹದಿನೆಂಟು ವರ್ಷ ವಯಸ್ಸಿನ ಕಿಶೋರಿ! ತೆಳುವಾದ ಳು ಕ ಅಶು ಬಿಳಿಯ ಸೀರೆಯನ್ನು ಟ್ಟಿದ್ದಳು. ಕರಿಯ ರೇಶಿ ಮೆಯ ರವಿಕೆ ತೊಟ್ಟಿದ್ದ ಳು. ದಂತದ ನಕ ಬಳಿಯ ಮೈ ಬಣ್ಣ. ಪ್ರಭಾವಯುತ ವಾದ ಕಣ್ಣು ಗಳು. ಚು ವ ಕಪೋಲಗಳು. ಕೆವಿಗಳಲ್ಲಿ ವಜ್ರದ ಒಲೆಗಳು. ಕೊರಳಲ್ಲಿ ಚನ್ನ ಸ್ರ ಸಕ್ಷ ಗಳಲ್ಲಿ ೨ ತಿಕ ಚಿನ್ನ ದ ಭು ನೆಲದ ಮೇಲೆ ಹಂಯುತ್ತಿರುವ ಜಡೆ. ತೆ ನನ ಮಲಿಗೆಯ ಹೂವಿನ ಕುಚ್ಚು! ಮನೋಹರವಾದ ಕಂಠದ್ವನಿ. ನಾರಾಯಣನು ನಾಚಿ ನಾಚಿ ಆ ಹುಡುಗಿ ಯನ್ನು ನಾಲ್ಬಾರು ಬಾರಿ ಹಳ ತಾರಾ ಸುಮಾರು ನಾ ಲ್ಪಾರು ರಾಗ ಗಳನ್ನು ಆಲಾಪನೆ ಮಾಡಿ ಎರಡು ಕೀರ್ತನೆಗಳನ್ನು ಹಾಡಿದಳು. ಗಂಗಾ ಧರನ ಸ್ನೇಹಿತರು " ಬೇಷ್‌, ಭೇಷ್‌ ' ಎಂದರು. ನಾರಾಯಣನು ತಲೆ ಬಾಗಿ ಕುಳಿತಿದ್ದನು, ಗಂಗಾಧರರಾಯನು “ ಸಾಕಮ್ಮಾ ತಾರಾ | ” ಎಂದನು. ತಾರಾ ನೀಣೆಯನ್ನು ರತ್ನ ಗಂಬಳಿಯ ಮೇಲಿ ಇಟ್ಟು ಗಂಭೀರವಾಗಿ ಎದ್ದು ನಿಂತಳು, ಕ ಮತ್ತೊಮ್ಮೆ ಅವಳ ಮುಖವನ್ನು ನೋಡಿದನು. ಕಪೋಲಗಳ ಮೇಲೆ ಬೆವರು ಹನಿಗಳು. ಕಾಣುತ್ತಿದ್ದು ವು» ಮುಂಗುರುಳುಗಳು ಕೆದರಿ ಹಾರುತ್ತಿತ್ತು. ತಾರಾ ನಿಧಾನವಾಗಿ ಅಡಿಯಿಡುತ್ತಾ ನಡುಮನೆಯೊಳಕ್ಕೆ ಹೊರಟುಹೋದಳು. ಗಂಗಾಧರರಾಯನು, “ ಏನು ನಾಣಿ, ಹುಡುಗಿಯನ್ನು ಒಪ್ಪಿದೆಯಾ 1» ಎಂದು ಕೇಳಿದನು. ನಾರಾಯಣನು ತಲೆ ತಗ್ಗಿ ಸಿದನು. ವಿಠಲರಾಯ್ಯಷ್ಷು<noinclude></noinclude> 21ii3cpscwl6sartzm5gyjuoxdp82iw 324809 324777 2026-06-16T05:11:47Z Nihar Chakravarti 8555 /* Proofread */ 324809 proofread-page text/x-wiki <noinclude><pagequality level="3" user="Nihar Chakravarti" />{{rh||ಚಿತ್ರಕೂಟ|೨೧}}</noinclude>‘ ತಾರಾ, ತಾರಾ ’ ಆ ಹುಡುಗಿಯು ಮಾತ್ರ ನಾಣಿಯ ಕಣ್ಣಿಗೆ ಬೀಳ ಲಿಲ್ಲ. ವಾಸುವಿನ ತಂಗಿ ವಾಸುವಿನ ಹಾಗೆಯೇ ಇರಬಹುದೆಂದು ಭಾವಿಸಿದನು. ಕಾಫಿ ಕೊಡುತ್ತಿದ್ದ ಕಮಲಮ್ಮನವರನ್ನೊಂದು ಬಾರಿ ತಲೆ ಎತ್ತಿ ನೋಡಿದನು. ಹುಡುಗಿಯು ತಾಯಿಯಂತೆ ಇರಬಹುದು. ಅಲ್ಲಿಂದ ಹಜಾರಕ್ಕೆ ಬಂದು ಎಲ್ಲರೂ ಕುಳಿತರು. ಗಂಗಾಧರನು ನಾರಾಯಣನನ್ನು ಪಕ್ಕದಲ್ಲಿ ಕೂಡಿಸಿ ಕೊಂಡನು. ಎದುರಿಗೆ ಸಿದ್ಧವಾಗಿದ್ದ ರತ್ನಗಂಬಳಿಯ ಮೇಲೆ ತಾರಾ ವೀಣೆ ಯನ್ನು ತಂದು ಕುಳಿತುಕೊಂಡಳು. ಗಂಗಾಧರನು, “ ತಾರಾ, ಒಂದೆರಡು ಕೀರ್ತನೆಗಳನ್ನು ಹಾಡಮ್ಮಾ ” ಎಂದನು. ತಾರಾ ಕಂಠವನ್ನು ಸರಿ ಮಾಡಿ ಕೊಂಡು ಹಾಡಲಾರಂಭಿಸಿದಳು. ಹದಿನೆಂಟು ವರ್ಷ ವಯಸ್ಸಿನ ಕಿಶೋರಿ ! ತೆಳುವಾದ ಬಳುಕುವ ಶರೀರ. ಬಿಳಿಯ ಸೀರೆಯನ್ನು ಟ್ಟಿದ್ದಳು. ಕರಿಯ ರೇಷಿ ಮೆಯ ರವಿಕೆ ತೊಟ್ಟಿದ್ದಳು. ದಂತದಂತಹ ಬಿಳಿಯ ಮೈ ಬಣ್ಣ. ಪ್ರಭಾವಯುತ ವಾದ ಕಣ್ಣುಗಳು. ಳಪಳಿಸುವ ಕಪೋಲಗಳು. ಕಿವಿಗಳಲ್ಲಿ ವಜ್ರದ ಓಲೆಗಳು. ಕೊರಳಲ್ಲಿ ಚಿನ್ನದ ಸರ. ಕೈಗಳಲ್ಲಿ ಮಿನುಗುವ ಚಿನ್ನದ ಬಳೆಗಳು. ನೆಲದ ಮೇಲೆ ಹರಿಯುತ್ತಿರುವ ಜಡೆ. ತಲೆಯಲ್ಲಿ ಮಲ್ಲಿಗೆಯ ಹೂವಿನ ಕುಚ್ಚು ! ಮನೋಹರವಾದ ಕಂಠಧ್ವನಿ. ನಾರಾಯಣನು ನಾಚಿ ನಾಚಿ ಆ ಹುಡುಗಿ ಯನ್ನು ನಾಲ್ಕಾರು ಬಾರಿ ನೋಡಿದನು. ತಾರಾ ಸುಮಾರು ನಾಲ್ಕಾರು ರಾಗ ಗಳನ್ನು ಆಲಾಪನೆ ಮಾಡಿ ಎರಡು ಕೀರ್ತನೆಗಳನ್ನು ಹಾಡಿದಳು. ಗಂಗಾ ಧರನ ಸ್ನೇಹಿತರು ‘ ಭೇಷ್, ಭೇಷ್ ’ ಎಂದರು. ನಾರಾಯಣನು ತಲೆ ಬಾಗಿ ಕುಳಿತಿದ್ದನು. ಗಂಗಾಧರರಾಯನು “ ಸಾಕಮ್ಮಾ ತಾರಾ ! ” ಎಂದನು. ತಾರಾ ವೀಣೆಯನ್ನು ರತ್ನಗಂಬಳಿಯ ಮೇಲೆ ಇಟ್ಟು ಗಂಭೀರವಾಗಿ ಎದ್ದು ನಿಂತಳು. ನಾರಾಯಣನು ಮತ್ತೊಮ್ಮೆ ಅವಳ ಮುಖವನ್ನು ನೋಡಿದನು. ಕಪೋಲಗಳ ಮೇಲೆ ಬೆವರು ಹನಿಗಳು ಕಾಣಿಸುತ್ತಿದ್ದುವು. ಮುಂಗುರುಳುಗಳು ಕೆದರಿ ಹಾರುತ್ತಿತ್ತು. ತಾರಾ ನಿಧಾನವಾಗಿ ಅಡಿಯಿಡುತ್ತಾ ನಡುಮನೆಯೊಳಕ್ಕೆ ಹೊರಟುಹೋದಳು. ಗಂಗಾಧರರಾಯನು, “ ಏನು ನಾಣಿ, ಹುಡುಗಿಯನ್ನು ಒಪ್ಪಿದೆಯಾ ? ” ಎಂದು ಕೇಳಿದನು. ನಾರಾಯಣನು ತಲೆ ತಗ್ಗಿಸಿದನು. ವಿಠಲರಾಯರು<noinclude></noinclude> iapu6zi08r7giy36k2lnx0pivd2uxi6 324860 324809 2026-06-16T07:12:01Z A826 6806 /* Validated */ 324860 proofread-page text/x-wiki <noinclude><pagequality level="4" user="A826" />{{rh||ಚಿತ್ರಕೂಟ|೨೧}}</noinclude>' ತಾರಾ, ತಾರಾ ' ಆ ಹುಡುಗಿಯು ಮಾತ್ರ ನಾಣಿಯ ಕಣ್ಣಿಗೆ ಬೀಳ ಲಿಲ್ಲ. ವಾಸುವಿನ ತಂಗಿ ವಾಸುವಿನ ಹಾಗೆಯೇ ಇರಬಹುದೆಂದು ಭಾವಿಸಿದನು. ಕಾಫಿ ಕೊಡುತ್ತಿದ್ದ ಕಮಲಮ್ಮನವರನ್ನೊಂದು ಬಾರಿ ತಲೆ ಎತ್ತಿ ನೋಡಿದನು. ಹುಡುಗಿಯು ತಾಯಿಯಂತೆ ಇರಬಹುದು. ಅಲ್ಲಿಂದ ಹಜಾರಕ್ಕೆ ಬಂದು ಎಲ್ಲರೂ ಕುಳಿತರು. ಗಂಗಾಧರನು ನಾರಾಯಣನನ್ನು ಪಕ್ಕದಲ್ಲಿ ಕೂಡಿಸಿ ಕೊಂಡನು. ಎದುರಿಗೆ ಸಿದ್ಧವಾಗಿದ್ದ ರತ್ನಗಂಬಳಿಯ ಮೇಲೆ ತಾರಾ ವೀಣೆ ಯನ್ನು ತಂದು ಕುಳಿತುಕೊಂಡಳು. ಗಂಗಾಧರನು, " ತಾರಾ, ಒಂದೆರಡು ಕೀರ್ತನೆಗಳನ್ನು ಹಾಡಮ್ಮಾ " ಎಂದನು. ತಾರಾ ಕಂಠವನ್ನು ಸರಿ ಮಾಡಿ ಕೊಂಡು ಹಾಡಲಾರಂಭಿಸಿದಳು. ಹದಿನೆಂಟು ವರ್ಷ ವಯಸ್ಸಿನ ಕಿಶೋರಿ! ತೆಳುವಾದ ಬಳುಕುವ ಶರೀರ. ಬಿಳಿಯ ಸೀರೆಯನ್ನು ಟ್ಟಿದ್ದಳು. ಕರಿಯ ರೇಷಿ ಮೆಯ ರವಿಕೆ ತೊಟ್ಟಿದ್ದಳು. ದಂತದಂತಹ ಬಿಳಿಯ ಮೈ ಬಣ್ಣ. ಪ್ರಭಾವಯುತ ವಾದ ಕಣ್ಣುಗಳು. ಳಪಳಿಸುವ ಕಪೋಲಗಳು. ಕಿವಿಗಳಲ್ಲಿ ವಜ್ರದ ಓಲೆಗಳು. ಕೊರಳಲ್ಲಿ ಚಿನ್ನದ ಸರ. ಕೈಗಳಲ್ಲಿ ಮಿನುಗುವ ಚಿನ್ನದ ಬಳೆಗಳು. ನೆಲದ ಮೇಲೆ ಹರಿಯುತ್ತಿರುವ ಜಡೆ. ತಲೆಯಲ್ಲಿ ಮಲ್ಲಿಗೆಯ ಹೂವಿನ ಕುಚ್ಚು! ಮನೋಹರವಾದ ಕಂಠಧ್ವನಿ. ನಾರಾಯಣನು ನಾಚಿ ನಾಚಿ ಆ ಹುಡುಗಿ ಯನ್ನು ನಾಲ್ಕಾರು ಬಾರಿ ನೋಡಿದನು. ತಾರಾ ಸುಮಾರು ನಾಲ್ಕಾರು ರಾಗ ಗಳನ್ನು ಆಲಾಪನೆ ಮಾಡಿ ಎರಡು ಕೀರ್ತನೆಗಳನ್ನು ಹಾಡಿದಳು. ಗಂಗಾ ಧರನ ಸ್ನೇಹಿತರು ' ಭೇಷ್, ಭೇಷ್ ' ಎಂದರು. ನಾರಾಯಣನು ತಲೆ ಬಾಗಿ ಕುಳಿತಿದ್ದನು. ಗಂಗಾಧರರಾಯನು " ಸಾಕಮ್ಮಾ ತಾರಾ! " ಎಂದನು. ತಾರಾ ವೀಣೆಯನ್ನು ರತ್ನಗಂಬಳಿಯ ಮೇಲೆ ಇಟ್ಟು ಗಂಭೀರವಾಗಿ ಎದ್ದು ನಿಂತಳು. ನಾರಾಯಣನು ಮತ್ತೊಮ್ಮೆ ಅವಳ ಮುಖವನ್ನು ನೋಡಿದನು. ಕಪೋಲಗಳ ಮೇಲೆ ಬೆವರು ಹನಿಗಳು ಕಾಣಿಸುತ್ತಿದ್ದುವು. ಮುಂಗುರುಳುಗಳು ಕೆದರಿ ಹಾರುತ್ತಿತ್ತು. ತಾರಾ ನಿಧಾನವಾಗಿ ಅಡಿಯಿಡುತ್ತಾ ನಡುಮನೆಯೊಳಕ್ಕೆ ಹೊರಟುಹೋದಳು. ಗಂಗಾಧರರಾಯನು, " ಏನು ನಾಣಿ, ಹುಡುಗಿಯನ್ನು ಒಪ್ಪಿದೆಯಾ? " ಎಂದು ಕೇಳಿದನು. ನಾರಾಯಣನು ತಲೆ ತಗ್ಗಿಸಿದನು. ವಿಠಲರಾಯರು<noinclude></noinclude> npzc6s8cob6qbrxlt298dr0hdbkr6dw ಪುಟ:Chitrakuuta (1954).djvu/೩೭ 104 120864 324778 2026-06-16T04:53:09Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೨೨ ಚಿತ್ರ ಕೊಟ « ಹುಡುಗಿಯನ್ನು ಒಪ್ಪುವುದೇ! ಇಂತಹ ಹೆಂಡತಿಯು ಸಿಕ್ಕುವುದು ಭಾಗ್ಯ ” ಎಂದರು. ಎಲ್ಲರೂ ಎದ್ದು ಹೊರಟರು. ನಾಣಿಯೂ ವಾಸುವೂ ಮಹೆಡಿಯ ಮೇಲೆ ಹೋದರು. ವಾಸುವು ಎಲ್ಲಿ ಯಾದರೂ ಹೋಗಿ ಬರೋಣವೆಂದು ಭಾಯಿ ಕರೆದು... 324778 proofread-page text/x-wiki <noinclude><pagequality level="1" user="Nihar Chakravarti" /></noinclude>೨೨ ಚಿತ್ರ ಕೊಟ « ಹುಡುಗಿಯನ್ನು ಒಪ್ಪುವುದೇ! ಇಂತಹ ಹೆಂಡತಿಯು ಸಿಕ್ಕುವುದು ಭಾಗ್ಯ ” ಎಂದರು. ಎಲ್ಲರೂ ಎದ್ದು ಹೊರಟರು. ನಾಣಿಯೂ ವಾಸುವೂ ಮಹೆಡಿಯ ಮೇಲೆ ಹೋದರು. ವಾಸುವು ಎಲ್ಲಿ ಯಾದರೂ ಹೋಗಿ ಬರೋಣವೆಂದು ಭಾಯಿ ಕರೆದುಕೊಂಡು ಹೊರ ಟನು. ಇಬ್ಬ ರೂ ದೊಡ್ಡ ರೆಯ ಏರಿಯ ಮೇಲೆ ಹೊರಟು ರೇಸ್‌ ಶೋಸ್‌ ಕಡೆಗೆ ಮಾತನಾಡಿಕೆ ದ ಹೋದರು. ಮದುವೆಯ ವಿಚಾರವಾಗಿ ಭಟ ಒಂದು ಮಾತನ್ನಾ ದರೂ ಆಡಲಿಲ್ಲ. ನಾರಾಯಣನಿಗೆ ಮನಸ್ಸಿನಲ್ಲಿ ಆದಿನ ಪ್ರಾತಃಕಾಲದಿಂದ ನಡೆದ ಅನೇಕ ಘಟನೆಗಳು ಜ್ಞಾಪ ಪಕಕ್ಕೆ ಬರುತ್ತಿದ್ದುವು. ನಾರಾಯಣನು, ವಾಸು | ಈ ಊರು ಬಹಳ ಚೆನ್ನಾಗಿದೆ” ಎಂದು ಕೇಳಿದನು. « ಹೌದು. ಇಂಡಿಯಾ ದೇಶದಲ್ಲಿಯೇ ಇದೊಂದು ಸುಂದರವಾದ ಸಣ್ಣ ನಗರ. ಮಹಾರಾಜರವನರು ಬಹಳ A ಸ ಈ ಊರನ್ನು ಇಷ್ಟು ಚಿನ್ನಾಗಿ ಮಾಡಿಸಿದ್ದಾರೆ. ಇನ್ನೇನು, ನೀನು ಇನ್ನು ಐದು ವ ಗೇ ಫಿಯೇ ಇರುತ್ತೀಯಲ್ಲಾ ” ಎಂದು ನಕ್ಕನು. ನಾರಾಯಣನು ದೀರ್ಫೆ ಸಿಶ್ವಾಸವನ್ನು ಬಿಟ್ಟು, « ಇಲ್ಲ ಮಾಸು! ನಾನು ಈ ಊರಿನಲ್ಲಿರುವುದು ಅಸಂಭವ” ಎಂದ. « ಏಕೆ ನಿನಗೆ ಮೆಡಿಕಲ್‌ ಕಾಲೇಜಿಗೆ ಸೇರುವುದು ಇಷ್ಟನಿಲ್ಲವೇ 4 “ ಅದರಲ್ಲಿ ಇಷ್ಟಾ ನಿಷ್ಟಗಳು ಮುಖ್ಯವಲ್ಲ. ನಾನು ಎಲ್ಲಾದರೂ ಕೆಲಸಕ್ಕೆ ಸೇರಬೇಕು. ” ವಾಸು ಅಪ್ರ ತಿಭನಾಗಿ “ ಕೆಲಸವೇ! ಇದೇನು ಯೋಚನೆ? ನಿನಗಿನೂ ಚಿಕ್ಕ ವಯಸ್ಸು. ಇಷ್ಟು ಬೀಗ ಏನೆ ಕೆಲಸ ಕ್ಸ ಸೇರಬೇಕು? ” ಎಂದು ಜೇಛಿದ. “ ವಾಸು ನಿನಗೆ ನನ್ನ ವಿಚಾರವೇ ಗೊತ್ತಿಲ್ಲ ನನಗೊಬ್ಬ ತಂಗಿ ಇದ್ದಾಳ. ಅವಳು ಇಂಟರ್‌ ಓದುತ್ತಿದ್ದಾಳೆ. ತಾಯಿ ಇದಾರೆ. ಮನೆಯ ಸಂಸಾರ ಭಾರವನ್ನೆ ಲ್ಲಾ ನಾನೇ ವಹಿಸಬೇಕು. ಎಲ್ಲದಕ್ಕಿಂತಲೂ ಆದು ನನಗೆ ದೊಡ್ಡದು. »<noinclude></noinclude> g9ch0wiwcmsmdgyujitax62j9immyhv 324810 324778 2026-06-16T05:12:56Z Nihar Chakravarti 8555 /* Proofread */ 324810 proofread-page text/x-wiki <noinclude><pagequality level="3" user="Nihar Chakravarti" />{{rh|೨೨|ಚಿತ್ರಕೂಟ}}</noinclude>“ ಹುಡುಗಿಯನ್ನು ಒಪ್ಪುವುದೇ ! ಇಂತಹ ಹೆಂಡತಿಯು ಸಿಕ್ಕುವುದು ಭಾಗ್ಯ ” ಎಂದರು. ಎಲ್ಲರೂ ಎದ್ದು ಹೊರಟರು. ನಾಣಿಯೂ ವಾಸುವೂ ಮಹಡಿಯ ಮೇಲೆ ಹೋದರು. ವಾಸುವು ಎಲ್ಲಿ ಯಾದರೂ ಹೋಗಿ ಬರೋಣವೆಂದು ನಾಣಿಯನ್ನು ಕರೆದುಕೊಂಡು ಹೊರ ಟನು. ಇಬ್ಬರೂ ದೊಡ್ಡಕೆರೆಯ ಏರಿಯ ಮೇಲೆ ಹೊರಟು ರೇಸ್‌ಕೋರ್ಸ್ ಕಡೆಗೆ ಮಾತನಾಡಿಕೊಂಡು ಹೋದರು. ಮದುವೆಯ ವಿಚಾರವಾಗಿ ವಾಸುವು ಒಂದು ಮಾತನ್ನಾದರೂ ಆಡಲಿಲ್ಲ. ನಾರಾಯಣನಿಗೆ ಮನಸ್ಸಿನಲ್ಲಿ ಆ ದಿನ ಪ್ರಾತಃಕಾಲದಿಂದ ನಡೆದ ಅನೇಕ ಘಟನೆಗಳು ಜ್ಞಾಪಕಕ್ಕೆ ಬರುತ್ತಿದ್ದುವು. ನಾರಾಯಣನು, “ ವಾಸು ! ಈ ಊರು ಬಹಳ ಚೆನ್ನಾಗಿದೆ ” ಎಂದು ಹೇಳಿದನು. “ ಹೌದು. ಇಂಡಿಯಾ ದೇಶದಲ್ಲಿಯೇ ಇದೊಂದು ಸುಂದರವಾದ ಸಣ್ಣ ನಗರ. ಮಹಾರಾಜರವರು ಬಹಳ ಶ್ರದ್ಧೆ ವಹಿಸಿ ಈ ಊರನ್ನು ಇಷ್ಟು ಚೆನ್ನಾಗಿ ಮಾಡಿಸಿದ್ದಾರೆ. ಇನ್ನೇನು, ನೀನು ಇನ್ನು ಐದು ವರ್ಷಗಳು ಇಲ್ಲಿಯೇ ಇರುತ್ತೀಯಲ್ಲಾ ” ಎಂದು ನಕ್ಕನು. ನಾರಾಯಣನು ದೀರ್ಘ ನಿಶ್ವಾಸವನ್ನು ಬಿಟ್ಟು, “ ಇಲ್ಲ ವಾಸು ! ನಾನು ಈ ಊರಿನಲ್ಲಿರುವುದು ಅಸಂಭವ ” ಎಂದ. “ ಏಕೆ ನಿನಗೆ ಮೆಡಿಕಲ್ ಕಾಲೇಜಿಗೆ ಸೇರುವುದು ಇಷ್ಟವಿಲ್ಲವೇ ? ” “ ಅದರಲ್ಲಿ ಇಷ್ಟಾನಿಷ್ಟಗಳು ಮುಖ್ಯವಲ್ಲ. ನಾನು ಎಲ್ಲಾದರೂ ಕೆಲಸಕ್ಕೆ ಸೇರಬೇಕು. ” ವಾಸು ಅಪ್ರತಿಭನಾಗಿ “ ಕೆಲಸವೇ ! ಇದೇನು ಯೋಚನೆ ? ನಿನಗಿನ್ನೂ ಚಿಕ್ಕ ವಯಸ್ಸು. ಇಷ್ಟು ಬೇಗ ಏಕೆ ಕೆಲಸಕ್ಕೆ ಸೇರಬೇಕು ? ” ಎಂದು ಕೇಳಿದ. “ ವಾಸು ನಿನಗೆ ನನ್ನ ವಿಚಾರವೇ ಗೊತ್ತಿಲ್ಲ. ನನಗೊಬ್ಬ ತಂಗಿ ಇದ್ದಾಳೆ. ಅವಳು ಇಂಟರ್ ಓದುತ್ತಿದ್ದಾಳೆ. ತಾಯಿ ಇದ್ದಾರೆ. ಮನೆಯ ಸಂಸಾರ ಭಾರತವನ್ನೆಲ್ಲಾ ನಾನೇ ವಹಿಸಬೇಕು. ಎಲ್ಲದಕ್ಕಿಂತಲೂ ಅದು ನನಗೆ ದೊಡ್ಡದು. ”<noinclude></noinclude> 794fm75jmlrphje4f3bip0dsnldbs0k 324861 324810 2026-06-16T07:12:42Z A826 6806 /* Validated */ 324861 proofread-page text/x-wiki <noinclude><pagequality level="4" user="A826" />{{rh|೨೨|ಚಿತ್ರಕೂಟ}}</noinclude>" ಹುಡುಗಿಯನ್ನು ಒಪ್ಪುವುದೇ! ಇಂತಹ ಹೆಂಡತಿಯು ಸಿಕ್ಕುವುದು ಭಾಗ್ಯ " ಎಂದರು. ಎಲ್ಲರೂ ಎದ್ದು ಹೊರಟರು. ನಾಣಿಯೂ ವಾಸುವೂ ಮಹಡಿಯ ಮೇಲೆ ಹೋದರು. ವಾಸುವು ಎಲ್ಲಿ ಯಾದರೂ ಹೋಗಿ ಬರೋಣವೆಂದು ನಾಣಿಯನ್ನು ಕರೆದುಕೊಂಡು ಹೊರ ಟನು. ಇಬ್ಬರೂ ದೊಡ್ಡಕೆರೆಯ ಏರಿಯ ಮೇಲೆ ಹೊರಟು ರೇಸ್‌ಕೋರ್ಸ್ ಕಡೆಗೆ ಮಾತನಾಡಿಕೊಂಡು ಹೋದರು. ಮದುವೆಯ ವಿಚಾರವಾಗಿ ವಾಸುವು ಒಂದು ಮಾತನ್ನಾದರೂ ಆಡಲಿಲ್ಲ. ನಾರಾಯಣನಿಗೆ ಮನಸ್ಸಿನಲ್ಲಿ ಆ ದಿನ ಪ್ರಾತಃಕಾಲದಿಂದ ನಡೆದ ಅನೇಕ ಘಟನೆಗಳು ಜ್ಞಾಪಕಕ್ಕೆ ಬರುತ್ತಿದ್ದುವು. ನಾರಾಯಣನು, " ವಾಸು! ಈ ಊರು ಬಹಳ ಚೆನ್ನಾಗಿದೆ " ಎಂದು ಹೇಳಿದನು. " ಹೌದು. ಇಂಡಿಯಾ ದೇಶದಲ್ಲಿಯೇ ಇದೊಂದು ಸುಂದರವಾದ ಸಣ್ಣ ನಗರ. ಮಹಾರಾಜರವರು ಬಹಳ ಶ್ರದ್ಧೆ ವಹಿಸಿ ಈ ಊರನ್ನು ಇಷ್ಟು ಚೆನ್ನಾಗಿ ಮಾಡಿಸಿದ್ದಾರೆ. ಇನ್ನೇನು, ನೀನು ಇನ್ನು ಐದು ವರ್ಷಗಳು ಇಲ್ಲಿಯೇ ಇರುತ್ತೀಯಲ್ಲಾ " ಎಂದು ನಕ್ಕನು. ನಾರಾಯಣನು ದೀರ್ಘ ನಿಶ್ವಾಸವನ್ನು ಬಿಟ್ಟು, " ಇಲ್ಲ ವಾಸು! ನಾನು ಈ ಊರಿನಲ್ಲಿರುವುದು ಅಸಂಭವ " ಎಂದ. " ಏಕೆ ನಿನಗೆ ಮೆಡಿಕಲ್ ಕಾಲೇಜಿಗೆ ಸೇರುವುದು ಇಷ್ಟವಿಲ್ಲವೇ? " " ಅದರಲ್ಲಿ ಇಷ್ಟಾನಿಷ್ಟಗಳು ಮುಖ್ಯವಲ್ಲ. ನಾನು ಎಲ್ಲಾದರೂ ಕೆಲಸಕ್ಕೆ ಸೇರಬೇಕು. " ವಾಸು ಅಪ್ರತಿಭನಾಗಿ " ಕೆಲಸವೇ! ಇದೇನು ಯೋಚನೆ? ನಿನಗಿನ್ನೂ ಚಿಕ್ಕ ವಯಸ್ಸು. ಇಷ್ಟು ಬೇಗ ಏಕೆ ಕೆಲಸಕ್ಕೆ ಸೇರಬೇಕು? " ಎಂದು ಕೇಳಿದ. " ವಾಸು ನಿನಗೆ ನನ್ನ ವಿಚಾರವೇ ಗೊತ್ತಿಲ್ಲ. ನನಗೊಬ್ಬ ತಂಗಿ ಇದ್ದಾಳೆ. ಅವಳು ಇಂಟರ್ ಓದುತ್ತಿದ್ದಾಳೆ. ತಾಯಿ ಇದ್ದಾರೆ. ಮನೆಯ ಸಂಸಾರ ಭಾರತವನ್ನೆಲ್ಲಾ ನಾನೇ ವಹಿಸಬೇಕು. ಎಲ್ಲದಕ್ಕಿಂತಲೂ ಅದು ನನಗೆ ದೊಡ್ಡದು. "<noinclude></noinclude> 9dbnxtnsqqw794qv2ulyljase2vkjen ಪುಟ:Chitrakuuta (1954).djvu/೩೮ 104 120865 324779 2026-06-16T04:53:15Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಚಿತ್ರಕೂಟ ತಿಷ್ಠಿ ವಾಸುವು ಮುಂದೆ ಮಾತನಾಡಲಿಲ್ಲ. ಅವನು ಏನೋ ಆಲೋಚಿಸುತ್ತಾ ಆಕಾಶದ ಕಡೆ ನೋಡುತ್ತಿದ್ದನು. ಚಾಮುಂಡಿಬೆಟ್ಟದ ಮೇಲೆ ದೀಪಮಾಲೆಗಳು ಪ್ರಕಾಶಿಸುತ್ತಿದ್ದುವು. ನಾಣಿ « ಮನೆಗೆ ಹಿಂತಿರುಗಿ ಹೋಗೋಣ ವೇ ? »... 324779 proofread-page text/x-wiki <noinclude><pagequality level="1" user="Nihar Chakravarti" /></noinclude>ಚಿತ್ರಕೂಟ ತಿಷ್ಠಿ ವಾಸುವು ಮುಂದೆ ಮಾತನಾಡಲಿಲ್ಲ. ಅವನು ಏನೋ ಆಲೋಚಿಸುತ್ತಾ ಆಕಾಶದ ಕಡೆ ನೋಡುತ್ತಿದ್ದನು. ಚಾಮುಂಡಿಬೆಟ್ಟದ ಮೇಲೆ ದೀಪಮಾಲೆಗಳು ಪ್ರಕಾಶಿಸುತ್ತಿದ್ದುವು. ನಾಣಿ « ಮನೆಗೆ ಹಿಂತಿರುಗಿ ಹೋಗೋಣ ವೇ ? » ಎಂದನು. ಇಬ್ಬರೂ ಮನೆಗೆ ಹಿಂತಿರುಗಿದರು. ವಾಸುವು ಬಡತನ ಐಶ್ವರ್ಯಗಳ ವಿಚಾರಗಳನ್ನು ಮಾತನಾಡುತ್ತಾ ಹೊರಟಿನು. ಮಾತಿಗೆ ಮಾತು ಬಂದು ಎಲ್ಲೆಲ್ಲಿಗೋ ಹೋಯಿತು. ಯುದ್ಧದ ಮಾತು, ಬಟ್ಟರನ ಸಾಹಸ್ಕೆ ಚರ್ಚಿಲ್ಲನ ಕನಿಮುಸ್ಕಿ ಎಲ್ಲ ಮಾತುಗಳೂ ಲೋಕಾಭಿರಾಮವಾಗಿ ಬಂದುಫು. ಇಬ್ಬರೂ ಮನೆಯನ್ನು ಸೇರಿದರು. ರಾತ್ರಿ ಎಂಟು ಗಂಟೆಯಾಗಿತ್ತು. ಗಂಗಾಧರರಾಯನು ಇನ್ನೂ ಮನೆಗೆ ಬಂದಿರಲಿಲ್ಲ. ಹಜಾರದಲ್ಲಿ ಕಮಲಮ್ಮನವರು ಹುಡುಗರೂಡನೆ ಮಾತನಾ ಡುತ್ತಾ ಕುಳಿತಿದ್ದರು. ವಾಸುವೂ ನಾಣಿಯೂ ಮನೆಗೆ ಬರುತ್ತಲೇ ಕಮಲಮ್ಮ ನವರು " ವಾಸೂ--ವಾಸೂ' ಎಂದು ಕರೆದರು, ವಾಸುವು ಸಮೀಪದಲ್ಲಿ ಹೋಗಿ ನಿಂತನು. ನಾಣಿಯು ಅವನ ಹಿ೨ದೆ ದೂರದಲ್ಲಿ ನಿಂತಿದ್ದನು. ಕಮಲಮ್ಮನು « ನಾಣಿ! ನಿಮ್ಮ ತಾಯಿಯವರು ಆರೋಗ್ಯವಾಗಿದ್ದಾರೆಯೇ? ತಂಗಿ ಶ್ಯಾಮ ಬಲೆಯು ಏನು ಮಾಡುತ್ತಾಳೆ? * ಎಂದು ಯೋಗಕ್ಷೇಮವನ್ನು ವಿಚಾರಿಸಿದರು. ಶ್ಯಾಮಣ್ಣನವರು ಮಧ್ಯೆಮ ವಯಸ್ಸಿನಲ್ಲಿಯೇ ದೈ ವಾಧೀನರಾಗಿದ್ದಕ್ಕಾಗಿ ವ್ಯಸನ ಬ ವನ್ನು ಸೂಚಿಸಿದರು. ಆ ಕುಟುಂಬದಲ್ಲಿ ಕನಿಕರ ತೋರಿಸಿದರು. ನಾರಾಯಣನು ಒಂದೊಂದು ಮಾತಿನಲ್ಲಿ ವಿನಯದಿಂದ ಉತ್ತರವಿತ್ತನು. ವಾಸು ಮತ್ತು ನಾರಾಯಣ ಇಬ್ಬರೂ ಮಹಡಿಯ ಮೇಲೆ ಹೋದರು. ರಾತ್ರಿ ಭೋಜನೋತ್ತರ ಗಂಗಾಧರರಾಯನು ನಾಣಿಯನ್ನು ಹತ್ತಿರ ಕೂರಿಸಿಕೊಂಡು ಲೋಕಾಭಿರಾಮವಾಗಿ ಮಾತನಾಡುತ್ತಿದ್ದನು.ಶ್ಯಾಮಣ್ಣನಿಗೂ ತನಗೂ ಇದ್ದ ಬಾಲ್ಯದ ಸ್ನೇಹದ ಕಥೆಗಳನ್ನು ಎಸ್ಟೋ ಹೇಳಿದನು. ಬಹಳ ಹೊತ್ತಾಗಿತ್ತು. ನಾರಾಯಣನನ್ನು ಮಲಗಲು ವಾಸುವಿನ ಕೋಣೆಗೆ ಕಳುಹಿಸಿ ದನು. ವಾಸುವಿನ ಹಾಸಿಗೆಯ ಪಕ್ಕದಲ್ಲಿ ಒಂದು ಹಾಸಿಗೆ ಹಾಕಿತ್ತು. ವಾಸುವೂ ನಾರಾಯಣನೂ ಮಾತನಾಡುತ್ತ ಮಲಗಿದ್ದರು. ವಾಸುವಿಗೆ ನಿದ್ರೆ ಬಂದಿತು,<noinclude></noinclude> qxxkuuew5628eh10o9snlu0134t6i4x 324811 324779 2026-06-16T05:13:46Z Nihar Chakravarti 8555 /* Proofread */ 324811 proofread-page text/x-wiki <noinclude><pagequality level="3" user="Nihar Chakravarti" />{{rh||ಚಿತ್ರಕೂಟ|೨೩}}</noinclude>ವಾಸುವು ಮುಂದೆ ಮಾತನಾಡಲಿಲ್ಲ. ಅವನು ಏನೋ ಆಲೋಚಿಸುತ್ತಾ ಆಕಾಶದ ಕಡೆ ನೋಡುತ್ತಿದ್ದನು. ಚಾಮುಂಡಿಬೆಟ್ಟದ ಮೇಲೆ ದೀಪಮಾಲೆಗಳು ಪ್ರಕಾಶಿಸುತ್ತಿದ್ದುವು. ನಾಣಿ “ ಮನೆಗೆ ಹಿಂತಿರುಗಿ ಹೋಗೋಣವೇ ? ” ಎಂದನು. ಇಬ್ಬರೂ ಮನೆಗೆ ಹಿಂತಿರುಗಿದರು. ವಾಸುವು ಬಡತನ—ಐಶ್ವರ್ಯಗಳ ವಿಚಾರಗಳನ್ನು ಮಾತನಾಡುತ್ತಾ ಹೊರಟನು. ಮಾತಿಗೆ ಮಾತು ಬಂದು ಎಲ್ಲೆಲ್ಲಿಗೋ ಹೋಯಿತು. ಯುದ್ಧದ ಮಾತು, ಹಿಟ್ಲರನ ಸಾಹಸ, ಚರ್ಚಿಲನ ಕಪಿಮುಷ್ಟಿ ಎಲ್ಲ ಮಾತುಗಳೂ ಲೋಕಾಭಿರಾಮವಾಗಿ ಬಂದುವು. ಇಬ್ಬರೂ ಮನೆಯನ್ನು ಸೇರಿದರು. ರಾತ್ರಿ ಎಂಟು ಗಂಟೆಯಾಗಿತ್ತು. ಗಂಗಾಧರರಾಯನು ಇನ್ನೂ ಮನೆಗೆ ಬಂದಿರಲಿಲ್ಲ. ಹಜಾರದಲ್ಲಿ ಕಮಲಮ್ಮನವರು ಹುಡುಗ ರೊಡನೆ ಮಾತನಾ ಡುತ್ತಾ ಕುಳಿತಿದ್ದರು. ವಾಸುವೂ ನಾಣಿಯೂ ಮನೆಗೆ ಬರುತ್ತಲೇ ಕಮಲಮ್ಮ ನವರು ‘ ವಾಸೂ—ವಾಸೂ ’ ಎಂದು ಕರೆದರು. ವಾಸುವು ಸಮೀಪದಲ್ಲಿ ಹೋಗಿ ನಿಂತನು. ನಾಣಿಯು ಅವನ ಹಿಂದೆ ದೂರದಲ್ಲಿ ನಿಂತಿದ್ದನು. ಕಮಲಮ್ಮನು “ ನಾಣಿ ! ನಿಮ್ಮ ತಾಯಿಯವರು ಆರೋಗ್ಯವಾಗಿದ್ದಾರೆಯೇ ? ತಂಗಿ ಶ್ಯಾಮ ಲಲೆಯು ಏನು ಮಾಡುತ್ತಾಳೆ ? ” ಎಂದು ಯೋಗಕ್ಷೇಮವನ್ನು ವಿಚಾರಿಸಿದರು. ಶ್ಯಾಮಣ್ಣನವರು ಮಧ್ಯಮ ವಯಸ್ಸಿನಲ್ಲಿಯೇ ದೈವಾಧೀನರಾಗಿದ್ದಕ್ಕಾಗಿ ವ್ಯಸನ ವನ್ನು ಸೂಚಿಸಿದರು. ಆ ಕುಟುಂಬದಲ್ಲಿ ಕನಿಕರ ತೋರಿಸಿದರು. ನಾರಾಯಣನು ಒಂದೊಂದು ಮಾತಿನಲ್ಲಿ ವಿನಯದಿಂದ ಉತ್ತರವಿತ್ತನು. ವಾಸು ಮತ್ತು ನಾರಾಯಣ ಇಬ್ಬರೂ ಮಹಡಿಯ ಮೇಲೆ ಹೋದರು. ರಾತ್ರಿ ಭೋಜನೋತ್ತರ ಗಂಗಾಧರರಾಯನು ನಾಣಿಯನ್ನು ಹತ್ತಿರ ಕೂರಿಸಿಕೊಂಡು ಲೋಕಾಭಿರಾಮವಾಗಿ ಮಾತನಾಡುತ್ತಿದ್ದನು. ಶ್ಯಾಮಣ್ಣನಿಗೂ ತನಗೂ ಇದ್ದ ಬಾಲ್ಯದ ಸ್ನೇಹದ ಕಥೆಗಳನ್ನು ಎಷ್ಟೋ ಹೇಳಿದನು. ಬಹಳ ಹೊತ್ತಾಗಿತ್ತು. ನಾರಾಯಣನನ್ನು ಮಲಗಲು ವಾಸುವಿನ ಕೋಣೆಗೆ ಕಳುಹಿಸಿ ದನು. ವಾಸುವಿನ ಹಾಸಿಗೆಯ ಪಕ್ಕದಲ್ಲಿ ಒಂದು ಹಾಸಿಗೆ ಹಾಕಿತ್ತು. ವಾಸುವೂ ನಾರಾಯಣನೂ ಮಾತನಾಡುತ್ತ ಮಲಗಿದ್ದರು. ವಾಸುವಿಗೆ ನಿದ್ರೆ ಬಂದಿತು.<noinclude></noinclude> tmv0drqfihfsjl1b0vcvdijbh6p906m 324862 324811 2026-06-16T07:13:01Z A826 6806 /* Validated */ 324862 proofread-page text/x-wiki <noinclude><pagequality level="4" user="A826" />{{rh||ಚಿತ್ರಕೂಟ|೨೩}}</noinclude>ವಾಸುವು ಮುಂದೆ ಮಾತನಾಡಲಿಲ್ಲ. ಅವನು ಏನೋ ಆಲೋಚಿಸುತ್ತಾ ಆಕಾಶದ ಕಡೆ ನೋಡುತ್ತಿದ್ದನು. ಚಾಮುಂಡಿಬೆಟ್ಟದ ಮೇಲೆ ದೀಪಮಾಲೆಗಳು ಪ್ರಕಾಶಿಸುತ್ತಿದ್ದುವು. ನಾಣಿ " ಮನೆಗೆ ಹಿಂತಿರುಗಿ ಹೋಗೋಣವೇ? " ಎಂದನು. ಇಬ್ಬರೂ ಮನೆಗೆ ಹಿಂತಿರುಗಿದರು. ವಾಸುವು ಬಡತನ—ಐಶ್ವರ್ಯಗಳ ವಿಚಾರಗಳನ್ನು ಮಾತನಾಡುತ್ತಾ ಹೊರಟನು. ಮಾತಿಗೆ ಮಾತು ಬಂದು ಎಲ್ಲೆಲ್ಲಿಗೋ ಹೋಯಿತು. ಯುದ್ಧದ ಮಾತು, ಹಿಟ್ಲರನ ಸಾಹಸ, ಚರ್ಚಿಲನ ಕಪಿಮುಷ್ಟಿ ಎಲ್ಲ ಮಾತುಗಳೂ ಲೋಕಾಭಿರಾಮವಾಗಿ ಬಂದುವು. ಇಬ್ಬರೂ ಮನೆಯನ್ನು ಸೇರಿದರು. ರಾತ್ರಿ ಎಂಟು ಗಂಟೆಯಾಗಿತ್ತು. ಗಂಗಾಧರರಾಯನು ಇನ್ನೂ ಮನೆಗೆ ಬಂದಿರಲಿಲ್ಲ. ಹಜಾರದಲ್ಲಿ ಕಮಲಮ್ಮನವರು ಹುಡುಗ ರೊಡನೆ ಮಾತನಾ ಡುತ್ತಾ ಕುಳಿತಿದ್ದರು. ವಾಸುವೂ ನಾಣಿಯೂ ಮನೆಗೆ ಬರುತ್ತಲೇ ಕಮಲಮ್ಮ ನವರು ' ವಾಸೂ—ವಾಸೂ ' ಎಂದು ಕರೆದರು. ವಾಸುವು ಸಮೀಪದಲ್ಲಿ ಹೋಗಿ ನಿಂತನು. ನಾಣಿಯು ಅವನ ಹಿಂದೆ ದೂರದಲ್ಲಿ ನಿಂತಿದ್ದನು. ಕಮಲಮ್ಮನು " ನಾಣಿ! ನಿಮ್ಮ ತಾಯಿಯವರು ಆರೋಗ್ಯವಾಗಿದ್ದಾರೆಯೇ? ತಂಗಿ ಶ್ಯಾಮ ಲಲೆಯು ಏನು ಮಾಡುತ್ತಾಳೆ? " ಎಂದು ಯೋಗಕ್ಷೇಮವನ್ನು ವಿಚಾರಿಸಿದರು. ಶ್ಯಾಮಣ್ಣನವರು ಮಧ್ಯಮ ವಯಸ್ಸಿನಲ್ಲಿಯೇ ದೈವಾಧೀನರಾಗಿದ್ದಕ್ಕಾಗಿ ವ್ಯಸನ ವನ್ನು ಸೂಚಿಸಿದರು. ಆ ಕುಟುಂಬದಲ್ಲಿ ಕನಿಕರ ತೋರಿಸಿದರು. ನಾರಾಯಣನು ಒಂದೊಂದು ಮಾತಿನಲ್ಲಿ ವಿನಯದಿಂದ ಉತ್ತರವಿತ್ತನು. ವಾಸು ಮತ್ತು ನಾರಾಯಣ ಇಬ್ಬರೂ ಮಹಡಿಯ ಮೇಲೆ ಹೋದರು. ರಾತ್ರಿ ಭೋಜನೋತ್ತರ ಗಂಗಾಧರರಾಯನು ನಾಣಿಯನ್ನು ಹತ್ತಿರ ಕೂರಿಸಿಕೊಂಡು ಲೋಕಾಭಿರಾಮವಾಗಿ ಮಾತನಾಡುತ್ತಿದ್ದನು. ಶ್ಯಾಮಣ್ಣನಿಗೂ ತನಗೂ ಇದ್ದ ಬಾಲ್ಯದ ಸ್ನೇಹದ ಕಥೆಗಳನ್ನು ಎಷ್ಟೋ ಹೇಳಿದನು. ಬಹಳ ಹೊತ್ತಾಗಿತ್ತು. ನಾರಾಯಣನನ್ನು ಮಲಗಲು ವಾಸುವಿನ ಕೋಣೆಗೆ ಕಳುಹಿಸಿ ದನು. ವಾಸುವಿನ ಹಾಸಿಗೆಯ ಪಕ್ಕದಲ್ಲಿ ಒಂದು ಹಾಸಿಗೆ ಹಾಕಿತ್ತು. ವಾಸುವೂ ನಾರಾಯಣನೂ ಮಾತನಾಡುತ್ತ ಮಲಗಿದ್ದರು. ವಾಸುವಿಗೆ ನಿದ್ರೆ ಬಂದಿತು.<noinclude></noinclude> 1mg97sgcnrgysfi1xm2cni8821sqof0 ಪುಟ:Chitrakuuta (1954).djvu/೩೯ 104 120866 324780 2026-06-16T04:53:21Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೨೪ ಚಿತ್ರ ಕೂಟ ನಾರಾಯಣನಿಗೆ ಜೋಂಪು ಹತ್ತಿಕೋ ಇಲ್ಲವೋ ಜಗ್ಗನೆ ಎಚ್ಚರವಾಯಿತು. ಸ್ಪಲ್ಪ ಹೊತ್ತು ಹಾಗೆಯೇ ಮಲಗಿ ಯೋಚಿಸುತ್ತಿದ್ದನು ನಾನೇಕೆ ಬಂದೆ ಇದೇನು ಮದುವೆಯ ಮಾತು | ನಮ್ಮ ತಾಯಿ ನನೆಂದುಕೊಂಡಾಳು-ಎಂದು ಮೊದಲು... 324780 proofread-page text/x-wiki <noinclude><pagequality level="1" user="Nihar Chakravarti" /></noinclude>೨೪ ಚಿತ್ರ ಕೂಟ ನಾರಾಯಣನಿಗೆ ಜೋಂಪು ಹತ್ತಿಕೋ ಇಲ್ಲವೋ ಜಗ್ಗನೆ ಎಚ್ಚರವಾಯಿತು. ಸ್ಪಲ್ಪ ಹೊತ್ತು ಹಾಗೆಯೇ ಮಲಗಿ ಯೋಚಿಸುತ್ತಿದ್ದನು ನಾನೇಕೆ ಬಂದೆ ಇದೇನು ಮದುವೆಯ ಮಾತು | ನಮ್ಮ ತಾಯಿ ನನೆಂದುಕೊಂಡಾಳು-ಎಂದು ಮೊದಲು ಯೋಚನೆ ಬಂತು. ತಾರಾ ಚೆನ್ನಾ ಗಿದಾಳೆ, ಐಶ್ವರ್ಯದಲ್ಲಿ ಬೆಳೆದ ಹುಡುಗಿ. ನನ್ನಂಥಾ ಬಡವನಿಗೇಕೆ ಅಂಥಾ ಹೆಂಡತಿ. ಗಂಗಾಧರರಾಯರ ತಪ್ಪೇನೂ ಇಲ್ಲ. ಇದೆಲ್ಲ ಅವರ ಔದಾರ್ಯ. ನಾನು ಮೆಡಿಕಲ್‌ ಕಾಲೇಜಿನಲ್ಲಿ ಐದು ವರ್ಷಗಳು ಓದಿದರೆ ನನ್ನ ತಂಗಿ ತಾಯಿಯನ್ನು ನೋಡಿಕೊಳ್ಳುವರಾರು ? ಎಂ.ಐಎಸ್‌ಸಿ.ಗೆ ಓದಲೇ ಕೆಲಸ ಕ್ಸ ಸೇರಲೇ ಎಂದು ಕೇಳುವುದಕ್ಕೆ ಬಂದೆ. ಇರಲಿ. ಈಗ ಏನಾಯಿತು, ನಾಳೆ ಚತ ಕವತ ಚತ ಹೇಳಿ ಬೆಳಗ್ಗೆ ಹೊರಟುಹೋಗುತ್ತೇನೆ. ಎಂದು ನಿರ್ಧಾರ ಮಾಡಿಕೊಂಡನು. ಅರ್ಧ ನಿದ್ರೆ, ಅರ್ಧ ಎಚ್ಚರ, ಸಣ್ಣ ಸಣ್ಣ ಸ್ವಪಷ್ನಗಳು- ಹೀಗೆ ಆ ರಾತ್ರಿಯು ತಳೆಯಿತು. ನಾರಾಯಣನು ಬೆಳಗ್ಗೆ ಎದ್ದು ಕೆಳಗಿಳಿದು ಮುಖ ಕಳೆದು ಕೊಂಡು ಬಂದನು. ವಾಸುವೂ ಬಂದನು. ಕಮಲಮ್ಮನವರು ಇಬ್ಬರಿಗೂ ಕಾಫಿ ಕೊಟ್ಟಿ ರು, ಆಮೇಲೆ ಸ್ನಾನವಾಯಿತು. ಕಾಫಿ ತಿಂಡಿಯೂ ಆಯಿತು. ನಾರಾಯಣನು ಗಂಗಾಧರರಾಯನನ್ನು ಕಾಯುತ್ತಾ ಹಜಾರದಲ್ಲಿ ಕುಳಿತನು. ಗಂಗಾಧರರಾಯನು ಎದ್ದು ಬಂದನು. ಅವನು 4 ಏನಯ್ಯಾ ನಾಣಿ ಆಗಲೇ ಕಾಫಿ ಆಯಿತೋ” ಎಂದು ಹಾಸ್ಯವಾಗಿ ಕೇಳಿದನು. ನಾಣಿಯು ಗಂಭೀರವಾಗಿ “ ಆಯಿತು! ಅಪ್ಪಣೆ ಕೊಟ್ಟರೆ ಊರಿಗೆ ಹೊರಡುತ್ತೇನೆ” ಎಂದನು. ಗಂಗಾಥೆರರಾಯನು “ ಇದೇನು ಒಂದೇ ದಿನ ಇದ್ದು ಹೊರಟುಬಿಟ್ಟೆ |» ಎಂದರು. “ ಹೌದು! ಊರಿನಲ್ಲಿ ಕೆಲಸವಿದೆ, ತಮ್ಮ ಭೇಟಿ ಮಾಡಿಕೊಂಡು ಹೋಗೋಣವೆಂದು ಬಂದೆ. » « ಒಳ್ಳೆಯದು | ಮೆಡಿಕಲ್‌ ಕಾಲೇಜ್‌ ತೆಗೆಯುವುದು ಇನ್ನೂ ಒಂದು<noinclude></noinclude> dt8w2yzpsp1p0givgl6o8ybu9be8zlm 324812 324780 2026-06-16T05:14:35Z Nihar Chakravarti 8555 /* Proofread */ 324812 proofread-page text/x-wiki <noinclude><pagequality level="3" user="Nihar Chakravarti" />{{rh|೨೪|ಚಿತ್ರಕೂಟ}}</noinclude>ನಾರಾಯಣನಿಗೆ ಜೋಂಪು ಹತ್ತಿತ್ತೋ ಇಲ್ಲವೋ ಜಗ್ಗನೆ ಎಚ್ಚರವಾಯಿತು. ಸ್ವಲ್ಪ ಹೊತ್ತು ಹಾಗೆಯೇ ಮಲಗಿ ಯೋಚಿಸುತ್ತಿದ್ದನು ನಾನೇಕೆ ಬಂದೆ, ಇದೇನು ಮದುವೆಯ ಮಾತು ! ನಮ್ಮ ತಾಯಿ ಏನೆಂದುಕೊಂಡಾಳು—ಎಂದು ಮೊದಲು ಯೋಚನೆ ಬಂತು. ತಾರಾ ಚೆನ್ನಾಗಿದ್ದಾಳೆ, ಐಶ್ವರ್ಯದಲ್ಲಿ ಬೆಳೆದ ಹುಡುಗಿ. ನನ್ನಂಥಾ ಬಡವನಿಗೇಕೆ ಅಂಥಾ ಹೆಂಡತಿ. ಗಂಗಾಧರರಾಯರ ತಪ್ಪೇನೂ ಇಲ್ಲ. ಇದೆಲ್ಲ ಅವರ ಔದಾರ್ಯ. ನಾನು ಮೆಡಿಕಲ್ ಕಾಲೇಜಿನಲ್ಲಿ ಐದು ವರ್ಷಗಳು ಓದಿದರೆ ನನ್ನ ತಂಗಿ—ತಾಯಿಯನ್ನು ನೋಡಿಕೊಳ್ಳುವರಾರು ? ಎಂ.ಎಸ್ಸಿ.ಗೆ ಓದಲೇ —ಕೆಲಸಕ್ಕೆ ಸೇರಲೇ ಎಂದು ಕೇಳುವುದಕ್ಕೆ ಬಂದೆ. ಇರಲಿ. ಈಗ ಏನಾಯಿತು, ನಾಳೆ ಗಂಗಾಧರರಾಯರಿಗೆ ಹೇಳಿ ಬೆಳಗ್ಗೆ ಹೊರಟುಹೋಗುತ್ತೇನೆ, ಎಂದು ನಿರ್ಧಾರ ಮಾಡಿಕೊಂಡನು. ಅರ್ಧ ನಿದ್ರೆ, ಅರ್ಧ ಎಚ್ಚರ, ಸಣ್ಣ ಸಣ್ಣ ಸ್ವಪ್ನಗಳು—ಹೀಗೆ ಆ ರಾತ್ರಿಯು ಕಳೆಯಿತು. ನಾರಾಯಣನು ಬೆಳಗ್ಗೆ ಎದ್ದು ಕೆಳಗಿಳಿದು ಮುಖ ತೊಳೆದು ಕೊಂಡು ಬಂದನು. ವಾಸುವೂ ಬಂದನು. ಕಮಲಮ್ಮನವರು ಇಬ್ಬರಿಗೂ ಕಾಫಿ ಕೊಟ್ಟರು. ಆಮೇಲೆ ಸ್ನಾನವಾಯಿತು. ಕಾಫಿ ತಿಂಡಿಯೂ ಆಯಿತು. ನಾರಾಯಣನು ಗಂಗಾಧರರಾಯನನ್ನು ಕಾಯುತ್ತಾ ಹಜಾರದಲ್ಲಿ ಕುಳಿತನು. ಗಂಗಾಧರರಾಯನು ಎದ್ದು ಬಂದನು. ಅವನು “ ಏನಯ್ಯಾ ನಾಣಿ ಆಗಲೇ ಕಾಫಿ ಆಯಿತೋ ” ಎಂದು ಹಾಸ್ಯವಾಗಿ ಕೇಳಿದನು. ನಾಣಿಯು ಗಂಭೀರವಾಗಿ “ ಆಯಿತು ! ಅಪ್ಪಣೆ ಕೊಟ್ಟರೆ ಊರಿಗೆ ಹೊರಡುತ್ತೇನೆ ” ಎಂದನು. ಗಂಗಾಧರರಾಯನು “ ಇದೇನು ಒಂದೇ ದಿನ ಇದ್ದು ಹೊರಟುಬಿಟ್ಟೆ ! ” ಎಂದರು. “ ಹೌದು ! ಊರಿನಲ್ಲಿ ಕೆಲಸವಿದೆ, ತಮ್ಮ ಭೇಟಿ ಮಾಡಿಕೊಂಡು ಹೋಗೋಣವೆಂದು ಬಂದೆ. ” “ ಒಳ್ಳೆಯದು ! ಮೆಡಿಕಲ್ ಕಾಲೇಜ್ ತೆಗೆಯುವುದು ಇನ್ನೂ ಒಂದು<noinclude></noinclude> kbykjdoek5zf5p57feprmmzexot9ymh 324863 324812 2026-06-16T07:13:31Z A826 6806 /* Validated */ 324863 proofread-page text/x-wiki <noinclude><pagequality level="4" user="A826" />{{rh|೨೪|ಚಿತ್ರಕೂಟ}}</noinclude>ನಾರಾಯಣನಿಗೆ ಜೋಂಪು ಹತ್ತಿತ್ತೋ ಇಲ್ಲವೋ ಜಗ್ಗನೆ ಎಚ್ಚರವಾಯಿತು. ಸ್ವಲ್ಪ ಹೊತ್ತು ಹಾಗೆಯೇ ಮಲಗಿ ಯೋಚಿಸುತ್ತಿದ್ದನು ನಾನೇಕೆ ಬಂದೆ, ಇದೇನು ಮದುವೆಯ ಮಾತು! ನಮ್ಮ ತಾಯಿ ಏನೆಂದುಕೊಂಡಾಳು—ಎಂದು ಮೊದಲು ಯೋಚನೆ ಬಂತು. ತಾರಾ ಚೆನ್ನಾಗಿದ್ದಾಳೆ, ಐಶ್ವರ್ಯದಲ್ಲಿ ಬೆಳೆದ ಹುಡುಗಿ. ನನ್ನಂಥಾ ಬಡವನಿಗೇಕೆ ಅಂಥಾ ಹೆಂಡತಿ. ಗಂಗಾಧರರಾಯರ ತಪ್ಪೇನೂ ಇಲ್ಲ. ಇದೆಲ್ಲ ಅವರ ಔದಾರ್ಯ. ನಾನು ಮೆಡಿಕಲ್ ಕಾಲೇಜಿನಲ್ಲಿ ಐದು ವರ್ಷಗಳು ಓದಿದರೆ ನನ್ನ ತಂಗಿ—ತಾಯಿಯನ್ನು ನೋಡಿಕೊಳ್ಳುವರಾರು? ಎಂ.ಎಸ್ಸಿ.ಗೆ ಓದಲೇ —ಕೆಲಸಕ್ಕೆ ಸೇರಲೇ ಎಂದು ಕೇಳುವುದಕ್ಕೆ ಬಂದೆ. ಇರಲಿ. ಈಗ ಏನಾಯಿತು, ನಾಳೆ ಗಂಗಾಧರರಾಯರಿಗೆ ಹೇಳಿ ಬೆಳಗ್ಗೆ ಹೊರಟುಹೋಗುತ್ತೇನೆ, ಎಂದು ನಿರ್ಧಾರ ಮಾಡಿಕೊಂಡನು. ಅರ್ಧ ನಿದ್ರೆ, ಅರ್ಧ ಎಚ್ಚರ, ಸಣ್ಣ ಸಣ್ಣ ಸ್ವಪ್ನಗಳು—ಹೀಗೆ ಆ ರಾತ್ರಿಯು ಕಳೆಯಿತು. ನಾರಾಯಣನು ಬೆಳಗ್ಗೆ ಎದ್ದು ಕೆಳಗಿಳಿದು ಮುಖ ತೊಳೆದು ಕೊಂಡು ಬಂದನು. ವಾಸುವೂ ಬಂದನು. ಕಮಲಮ್ಮನವರು ಇಬ್ಬರಿಗೂ ಕಾಫಿ ಕೊಟ್ಟರು. ಆಮೇಲೆ ಸ್ನಾನವಾಯಿತು. ಕಾಫಿ ತಿಂಡಿಯೂ ಆಯಿತು. ನಾರಾಯಣನು ಗಂಗಾಧರರಾಯನನ್ನು ಕಾಯುತ್ತಾ ಹಜಾರದಲ್ಲಿ ಕುಳಿತನು. ಗಂಗಾಧರರಾಯನು ಎದ್ದು ಬಂದನು. ಅವನು " ಏನಯ್ಯಾ ನಾಣಿ ಆಗಲೇ ಕಾಫಿ ಆಯಿತೋ " ಎಂದು ಹಾಸ್ಯವಾಗಿ ಕೇಳಿದನು. ನಾಣಿಯು ಗಂಭೀರವಾಗಿ " ಆಯಿತು! ಅಪ್ಪಣೆ ಕೊಟ್ಟರೆ ಊರಿಗೆ ಹೊರಡುತ್ತೇನೆ " ಎಂದನು. ಗಂಗಾಧರರಾಯನು " ಇದೇನು ಒಂದೇ ದಿನ ಇದ್ದು ಹೊರಟುಬಿಟ್ಟೆ! " ಎಂದರು. " ಹೌದು! ಊರಿನಲ್ಲಿ ಕೆಲಸವಿದೆ, ತಮ್ಮ ಭೇಟಿ ಮಾಡಿಕೊಂಡು ಹೋಗೋಣವೆಂದು ಬಂದೆ. " " ಒಳ್ಳೆಯದು! ಮೆಡಿಕಲ್ ಕಾಲೇಜ್ ತೆಗೆಯುವುದು ಇನ್ನೂ ಒಂದು<noinclude></noinclude> 1haxlbjczwbyngzpil9hnqsonea8vpp ಪುಟ:Chitrakuuta (1954).djvu/೪೦ 104 120867 324781 2026-06-16T04:53:27Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಟಿತ್ರ ಕೂಟ ೨೫೪ ತಿಂಗಳಿದೆ, ಸೀಟಿಗೆ ಏರ್ಪಾಟು ಮಾಡುತ್ತೇನೆ. ಬಂದುಬಿಡು, ನಿಮ್ಮ ತಾಯಿ ಯವರೊಡನೆ ಎಲ್ಲವನ್ನೂ ಹೇಳು! ನನ್ನ ಮಾತನ್ನು ಅಮ್ಮ ತೆಗೆದು ಹಾಕು ವುದಿಲ್ಲ. ? “ ಇಲ್ಲ! ನಾನು ಮೆಡಿಕಲ್‌ ಕಾಲೇಜಿಗೆ ಸೇರುವುದು ಸ... 324781 proofread-page text/x-wiki <noinclude><pagequality level="1" user="Nihar Chakravarti" /></noinclude>ಟಿತ್ರ ಕೂಟ ೨೫೪ ತಿಂಗಳಿದೆ, ಸೀಟಿಗೆ ಏರ್ಪಾಟು ಮಾಡುತ್ತೇನೆ. ಬಂದುಬಿಡು, ನಿಮ್ಮ ತಾಯಿ ಯವರೊಡನೆ ಎಲ್ಲವನ್ನೂ ಹೇಳು! ನನ್ನ ಮಾತನ್ನು ಅಮ್ಮ ತೆಗೆದು ಹಾಕು ವುದಿಲ್ಲ. ? “ ಇಲ್ಲ! ನಾನು ಮೆಡಿಕಲ್‌ ಕಾಲೇಜಿಗೆ ಸೇರುವುದು ಸಾಧ್ಯವಿಲ್ಲ. ಎಂ.ಎಸ್‌ಸಿಗೆ ಸೇರಬೇಕು, ಅಥವಾ ಕಲಸಕ್ಕೆ ಸೇರಬೇಕು. ನನಗೆ ಬೇರೇ ಮಾರ್ಗವೇ ಇಲ್ಲ. ” ಗಂಗಾಧರರಾಯನ ಮುಖವು ಸಪ್ಪಗಾಯಿತು. “ ಒಳ್ಳೆಯದು, ಹೋಗಿ ಬಾ! ದೇವರ ಇಚ್ಛೆ ಎಂದರು. ನಾರಾಯಣನು ಅಲ್ಲಿಯೇ ನಿಂತಿದ್ದ ಕಮಲಮ ನವರಿಗೆ ವಂದಿಸಿದನು. ಕೋಣೆಯ ಬಾಗಿಲಲ್ಲಿ ನಿಂತಿದ್ದ ರೆಯನ್ನೊಮ್ಮೆ ನೋಡಿ, ಮಹಡಿಯ ಮೇಲಕ್ಕೆ ಹೊರಟುಹೋದನು. ವಾಸುವಿನೊಡನೆ ತನ್ನ ಪ್ರಯಾಣದ ವಿಷಯವನ್ನು ಹೇಳಿ ಹೊರಟೇ ಬಿಟ್ಟನು. ವಾಸುವು ನಾಣಿಯನ್ನು ಕಳುಹಿಸಿ ಕೊಡಲು ರೈಲ್ವೆ ನ್ಸಿಗೆ ಹೋದನು. ನಾರಾಯಣನು ಮೂರನೆಯ ತರಗತಿಯ ಟಕೆಟ ತೆಗೆದುಕೊಂಡು ಬಂಡಿಯನ್ನು ಹತ್ತಿ ಕುಳಿತುಕೊಂಡನು, ವಾಸುವು ಬೀಳ್ಕೊಡುವ ಮಾತುಗಳ ನ್ನಾಡುತ್ತಿದ್ದನು, ಗಾಡಿಯು ಹೊರಡುವ ಹೊತ್ತಾಯಿತು, ವಾಸುವು “ ನಾಣೀ ಜ್ಜ ಪಕವಿರಲಿ. ನಮ್ಮಿಬ್ಬರ ಸ್ಪ ಸ್ನೇಹವು ಅಳಿಯದಿರಲಿ | ” ಎಂದು ಹೇಳಿದನು, ನಾರಾಯಣನು 1 1 ಕೈಹಿಡಿದು ಕುಲುಕುತ್ತಾ “ ವಾಸು! ಇನ್ನು ಮೇಲೆ ನಾವು ಆಜೀವ ಸ್ನೇಹಿತರು. ” ಎಂದು ಹೇಳಿದನು. ಅವನ ದನಿಯು ಗದ್ದದಿತವಾಗಿತ್ತು. ರೈಲು. ಗಾಡಿಯು ಹೊರಬೇಬಿಟ್ಟತು. ವಾಸುವು ನಾಣಿಯು ಕಣ್ಣಿಗೆ ಕಾಣುವ ವಕಗೂ ನೋಡುತ್ತ ನಿಂತಿದ್ದು ಮರೆಗೆ ಹಿಂತಿರುಗಿದನು, [sh ನ್‌<noinclude></noinclude> snzk68p5cdsf370wkkxfdolgg706czh 324813 324781 2026-06-16T05:15:26Z Nihar Chakravarti 8555 /* Proofread */ 324813 proofread-page text/x-wiki <noinclude><pagequality level="3" user="Nihar Chakravarti" />{{rh||ಚಿತ್ರಕೂಟ|೨೫}}</noinclude>ತಿಂಗಳಿದೆ, ಸೀಟಿಗೆ ಏರ್ಪಾಟು ಮಾಡುತ್ತೇನೆ. ಬಂದುಬಿಡು, ನಿಮ್ಮ ತಾಯಿ ಯವರೊಡನೆ ಎಲ್ಲವನ್ನೂ ಹೇಳು ! ನನ್ನ ಮಾತನ್ನು ಅಮ್ಮ ತೆಗೆದು ಹಾಕು ವುದಿಲ್ಲ. ” “ ಇಲ್ಲ ! ನಾನು ಮೆಡಿಕಲ್ ಕಾಲೇಜಿಗೆ ಸೇರುವುದು ಸಾಧ್ಯವಿಲ್ಲ. ಎಂ.ಎಸ್ಸಿ.ಗೆ ಸೇರಬೇಕು, ಅಥವಾ ಕೆಲಸಕ್ಕೆ ಸೇರಬೇಕು. ನನಗೆ ಬೇರೇ ಮಾರ್ಗವೇ ಇಲ್ಲ. ” ಗಂಗಾಧರರಾಯನ ಮುಖವು ಸಪ್ಪಗಾಯಿತು. “ ಒಳ್ಳೆಯದು, ಹೋಗಿ ಬಾ ! ದೇವರ ಇಚ್ಛೆ ” ಎಂದರು. ನಾರಾಯಣನು ಅಲ್ಲಿಯೇ ನಿಂತಿದ್ದ ಕಮಲಮ್ಮನವರಿಗೆ ವಂದಿಸಿದನು. ಕೋಣೆಯ ಬಾಗಿಲಲ್ಲಿ ನಿಂತಿದ್ದ ತಾರೆಯನ್ನೊಮ್ಮೆ ನೋಡಿ, ಮಹಡಿಯ ಮೇಲಕ್ಕೆ ಹೊರಟುಹೋದನು. ವಾಸುವಿನೊಡನೆ ತನ್ನ ಪ್ರಯಾಣದ ವಿಷಯವನ್ನು ಹೇಳಿ ರೈಲಿಗೆ ಹೊರಟೇ ಬಿಟ್ಟನು. ವಾಸುವು ನಾಣಿಯನ್ನ ಕಳುಹಿಸಿ ಕೊಡಲು ರೈಲ್ವೆ ಸ್ಟೇಷನ್ನಿಗೆ ಹೋದನು. ನಾರಾಯಣನು ಮೂರನೆಯ ತರಗತಿಯ ಟಿಕೆಟ್ ತೆಗೆದುಕೊಂಡು ಬಂಡಿಯನ್ನು ಹತ್ತಿ ಕುಳಿತುಕೊಂಡನು. ವಾಸುವು ಬೀಳ್ಕೊಡುವ ಮಾತುಗಳ ನ್ನಾಡುತ್ತಿದ್ದನು. ಗಾಡಿಯು ಹೊರಡುವ ಹೊತ್ತಾಯಿತು. ವಾಸುವು “ ನಾಣೀ ಜ್ಞಾಪಕವಿರಲಿ. ನಮ್ಮಿಬ್ಬರ ಸ್ನೇಹವು ಅಳಿಯದಿರಲಿ ! ” ಎಂದು ಹೇಳಿದನು. ನಾರಾಯಣನು ವಾಸುವಿನ ಕೈಹಿಡಿದು ಕುಲುಕುತ್ತಾ “ ವಾಸು ! ಇನ್ನು ಮೇಲೆ ನಾವು ಆಜೀವ ಸ್ನೇಹಿತರು. ” ಎಂದು ಹೇಳಿದನು. ಅವನ ದನಿಯು ಗದ್ಗದಿತವಾಗಿತ್ತು. ರೈಲು ಗಾಡಿಯು ಹೊರಟೇಬಿಟ್ಟಿತು. ವಾಸುವು ನಾಣಿಯು ಕಣ್ಣಿಗೆ ಕಾಣುವ ವರೆಗೂ ನೋಡುತ್ತ ನಿಂತಿದ್ದು ಮನೆಗೆ ಹಿಂತಿರುಗಿದನು.<noinclude></noinclude> 3z9xsou5p3f3rj69mz9y1h9arb5r4fh 324864 324813 2026-06-16T07:14:14Z A826 6806 /* Validated */ 324864 proofread-page text/x-wiki <noinclude><pagequality level="4" user="A826" />{{rh||ಚಿತ್ರಕೂಟ|೨೫}}</noinclude>ತಿಂಗಳಿದೆ, ಸೀಟಿಗೆ ಏರ್ಪಾಟು ಮಾಡುತ್ತೇನೆ. ಬಂದುಬಿಡು, ನಿಮ್ಮ ತಾಯಿ ಯವರೊಡನೆ ಎಲ್ಲವನ್ನೂ ಹೇಳು ! ನನ್ನ ಮಾತನ್ನು ಅಮ್ಮ ತೆಗೆದು ಹಾಕುವುದಿಲ್ಲ. ” “ ಇಲ್ಲ ! ನಾನು ಮೆಡಿಕಲ್ ಕಾಲೇಜಿಗೆ ಸೇರುವುದು ಸಾಧ್ಯವಿಲ್ಲ. ಎಂ.ಎಸ್ಸಿ.ಗೆ ಸೇರಬೇಕು, ಅಥವಾ ಕೆಲಸಕ್ಕೆ ಸೇರಬೇಕು. ನನಗೆ ಬೇರೇ ಮಾರ್ಗವೇ ಇಲ್ಲ. ” ಗಂಗಾಧರರಾಯನ ಮುಖವು ಸಪ್ಪಗಾಯಿತು. “ ಒಳ್ಳೆಯದು, ಹೋಗಿ ಬಾ ! ದೇವರ ಇಚ್ಛೆ ” ಎಂದರು. ನಾರಾಯಣನು ಅಲ್ಲಿಯೇ ನಿಂತಿದ್ದ ಕಮಲಮ್ಮನವರಿಗೆ ವಂದಿಸಿದನು. ಕೋಣೆಯ ಬಾಗಿಲಲ್ಲಿ ನಿಂತಿದ್ದ ತಾರೆಯನ್ನೊಮ್ಮೆ ನೋಡಿ, ಮಹಡಿಯ ಮೇಲಕ್ಕೆ ಹೊರಟುಹೋದನು. ವಾಸುವಿನೊಡನೆ ತನ್ನ ಪ್ರಯಾಣದ ವಿಷಯವನ್ನು ಹೇಳಿ ರೈಲಿಗೆ ಹೊರಟೇ ಬಿಟ್ಟನು. ವಾಸುವು ನಾಣಿಯನ್ನ ಕಳುಹಿಸಿ ಕೊಡಲು ರೈಲ್ವೆ ಸ್ಟೇಷನ್ನಿಗೆ ಹೋದನು. ನಾರಾಯಣನು ಮೂರನೆಯ ತರಗತಿಯ ಟಿಕೆಟ್ ತೆಗೆದುಕೊಂಡು ಬಂಡಿಯನ್ನು ಹತ್ತಿ ಕುಳಿತುಕೊಂಡನು. ವಾಸುವು ಬೀಳ್ಕೊಡುವ ಮಾತುಗಳನ್ನಾಡುತ್ತಿದ್ದನು. ಗಾಡಿಯು ಹೊರಡುವ ಹೊತ್ತಾಯಿತು. ವಾಸುವು “ ನಾಣೀ ಜ್ಞಾಪಕವಿರಲಿ. ನಮ್ಮಿಬ್ಬರ ಸ್ನೇಹವು ಅಳಿಯದಿರಲಿ ! ” ಎಂದು ಹೇಳಿದನು. ನಾರಾಯಣನು ವಾಸುವಿನ ಕೈಹಿಡಿದು ಕುಲುಕುತ್ತಾ “ ವಾಸು ! ಇನ್ನು ಮೇಲೆ ನಾವು ಆಜೀವ ಸ್ನೇಹಿತರು. ” ಎಂದು ಹೇಳಿದನು. ಅವನ ದನಿಯು ಗದ್ಗದಿತವಾಗಿತ್ತು. ರೈಲು ಗಾಡಿಯು ಹೊರಟೇಬಿಟ್ಟಿತು. ವಾಸುವು ನಾಣಿಯು ಕಣ್ಣಿಗೆ ಕಾಣುವ ವರೆಗೂ ನೋಡುತ್ತ ನಿಂತಿದ್ದು ಮನೆಗೆ ಹಿಂತಿರುಗಿದನು.<noinclude></noinclude> 5gqufss23kzwt336edp5yaiajzrt9i4 ಪುಟ:Chitrakuuta (1954).djvu/೪೧ 104 120868 324782 2026-06-16T04:53:32Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 23 ನಾರಾಯಣನು ಮನೆಗೆ ಬಂದನು. ಮೈಸೂರಿನ ವೃತ್ತಾಂತವನ್ನೇನೂ ತಾಯಿಗೆ ವಿವರವಾಗಿ ಹೇಳಲಿಲ್ಲ ತಾಯಿಯು, " ಮಗೂ! ಗಂಗಾಧರರಾಯ ರೇನು ಹೇಳಿದರು? ? « ಮೆಡಿಕಲ್‌ ಕಾಲೇಜಿಗೆ ಸೇರಬೇಕೆಂದು ಒತ್ತಾಯಪಡಿಸಿದರು. » “ ಆ ಕಾಲೇಜಿಗೆ ಸ... 324782 proofread-page text/x-wiki <noinclude><pagequality level="1" user="Nihar Chakravarti" /></noinclude>23 ನಾರಾಯಣನು ಮನೆಗೆ ಬಂದನು. ಮೈಸೂರಿನ ವೃತ್ತಾಂತವನ್ನೇನೂ ತಾಯಿಗೆ ವಿವರವಾಗಿ ಹೇಳಲಿಲ್ಲ ತಾಯಿಯು, " ಮಗೂ! ಗಂಗಾಧರರಾಯ ರೇನು ಹೇಳಿದರು? ? « ಮೆಡಿಕಲ್‌ ಕಾಲೇಜಿಗೆ ಸೇರಬೇಕೆಂದು ಒತ್ತಾಯಪಡಿಸಿದರು. » “ ಆ ಕಾಲೇಜಿಗೆ ಸೇರಿ ಡಾಕ್ಟರಾದರೆ ಚೆನ್ನಾಗಿರುತ್ತೆ. ” “ ಹೌದಮ್ಮಾ, ಚೆನ್ನಾಗಿರುತ್ತೆ. ಐದು ವರ್ಷಗಳು ಓದಬೇಕು. ಬಹಳ ಹಣ ಖರ್ಚಾಗುತ್ತೆ, ” « ಏನು ಮಾಡುವುದು. ನಮ್ಮ ಬಡತನ ಹಾಗಿದೆ. ಯಾರೂ ಸಹಾಯ ಮಾಡುವುದಿಲ್ಲ. ” ಎಂದು ಪಾರ್ವತಮ್ಮನು ನಿಟ್ಟುಸಿರು ಬಿಟ್ಟಳು. ನಾಣಿಯ, “ ಹಾಗಲ್ಲಮ್ಮಾ ಗಂಗಾಧರರಾಯರು ಐಶ್ವರ್ಯವಂತರು. ಅವರ ಮನೆಯಲ್ಲೇ ನನ್ನನ್ನು ಇಟ್ಟುಕೊಳ್ಳುವುದಾಗಿ ಹೇಳಿದರು. ಎಲ್ಲಾ ಖರ್ಚನ್ನೂ ಅವರೇ ವಹಿಸುವುದಾಗಿ ಹೇಳಿದರು. ಅವರ ಮನೆಯವರೆಲ್ಲಾ ಬಹಳ ಒಳ್ಳೆ ಯವರು. * ಪಾರ್ವತಮ್ಮನು ಸಂತೋಷದಿಂದ " ಮತ್ತೇನು ಬೇಕು. ನೀನು ಹೋಗಿ ಆ ಕಾಲೇಜಿಗೆ ಸೇರು, ಮುಂದಕ್ಕೆ ಬರುತ್ತಿ * ಎಂದರು, ೬ ಹೌದಮ್ಮಾ! ನಿನ್ನ ಯೋಗಕ್ಷೇಮವನ್ನು ನೋಡಿಕೊಳ್ಳು ವವರಾರು? ಇದೇನು ಮಾತು--ಆಗಹೋಗದ ಮಾತು. ” “ ಮಗು! ನಮ್ಮ ಯೋಗಕ್ಷೇಮವೇನು ದೇವರು ನೋಡಿಕೊಳ್ಳುತ್ತಾನೆ. ನೀನು ಯೋಚಿಸಬೇಡ; ಮೈಸೂರಿಗೆ ಹೋಗಿ ಓದಿಕೋ. ? « ಇಲ್ಲವಮ್ಮಾ ಇಲ್ಲ! ನಾನು ಎಂ.ಎನ್‌ಸಿ.ಗೆ ಓದುವುದನ್ನು ನಿರ್ಧರಿ ಸಿದ್ದೇನೆ. ನೀನು ಮತ್ತೇನೂ ಹೇಳಬೇಡ, ನಿನ್ನ ಆಶೀರ್ವಾದವಿದ್ದರೆ ಹೇಗೋ<noinclude></noinclude> fbwukgzd9tkoxtim91fa0kdh8cl5pwi 324814 324782 2026-06-16T05:18:11Z Nihar Chakravarti 8555 /* Proofread */ 324814 proofread-page text/x-wiki <noinclude><pagequality level="3" user="Nihar Chakravarti" />{{rh||೨೪|}}</noinclude>ನಾರಾಯಣನು ಮನೆಗೆ ಬಂದನು. ಮೈಸೂರಿನ ವೃತ್ತಾಂತವನ್ನೇನೂ ತಾಯಿಗೆ ವಿವರವಾಗಿ ಹೇಳಲಿಲ್ಲ. ತಾಯಿಯು, “ ಮಗೂ ! ಗಂಗಾಧರರಾಯ ರೇನು ಹೇಳಿದರು ? ” “ ಮೆಡಿಕಲ್ ಕಾಲೇಜಿಗೆ ಸೇರಬೇಕೆಂದು ಒತ್ತಾಯಪಡಿಸಿದರು. ” “ ಆ ಕಾಲೇಜಿಗೆ ಸೇರಿ ಡಾಕ್ಟರಾದರೆ ಚೆನ್ನಾಗಿರುತ್ತೆ. ” “ ಹೌದಮ್ಮಾ, ಚೆನ್ನಾಗಿರುತ್ತೆ. ಐದು ವರ್ಷಗಳು ಓದಬೇಕು. ಬಹಳ ಹಣ ಖರ್ಚಾಗುತ್ತೆ. ” “ ಏನು ಮಾಡುವುದು, ನಮ್ಮ ಬಡತನ ಹಾಗಿದೆ. ಯಾರೂ ಸಹಾಯ ಮಾಡುವುದಿಲ್ಲ. ” ಎಂದು ಪಾರ್ವತಮ್ಮನು ನಿಟ್ಟುಸಿರು ಬಿಟ್ಟಳು. ನಾಣಿಯು, “ ಹಾಗಲ್ಲಮ್ಮಾ ಗಂಗಾಧರರಾಯರು ಐಶ್ವರ್ಯವಂತರು. ಅವರ ಮನೆಯಲ್ಲೇ ನನ್ನನ್ನು ಇಟ್ಟುಕೊಳ್ಳುವುದಾಗಿ ಹೇಳಿದರು. ಎಲ್ಲಾ ಖರ್ಚನ್ನೂ ಅವರೇ ವಹಿಸುವುದಾಗಿ ಹೇಳಿದರು. ಅವರ ಮನೆಯವರೆಲ್ಲಾ ಬಹಳ ಒಳ್ಳೆಯವರು. ” ಪಾರ್ವತಮ್ಮನು ಸಂತೋಷದಿಂದ “ ಮತ್ತೇನು ಬೇಕು. ನೀನು ಹೋಗಿ ಆ ಕಾಲೇಜಿಗೆ ಸೇರು, ಮುಂದಕ್ಕೆ ಬರುತ್ತಿ ” ಎಂದರು. “ ಹೌದಮ್ಮಾ ! ನಿನ್ನ ಯೋಗಕ್ಷೇಮವನ್ನು ನೋಡಿಕೊಳ್ಳುವವರಾರು ? ಇದೇನು ಮಾತು—ಆಗಹೋಗದ ಮಾತು. ” “ ಮಗು ! ನಮ್ಮ ಯೋಗಕ್ಷೇಮವೇನು ದೇವರು ನೋಡಿಕೊಳ್ಳುತ್ತಾನೆ. ನೀನು ಯೋಚಿಸಬೇಡ ; ಮೈಸೂರಿಗೆ ಹೋಗಿ ಓದಿಕೋ. ” “ ಇಲ್ಲವಮ್ಮಾ ಇಲ್ಲ ! ನಾನು ಎಂ.ಎಸ್ಸಿ.ಗೆ ಓದುವುದನ್ನು ನಿರ್ಧರಿ ಸಿದ್ದೇನೆ. ನೀನು ಮತ್ತೇನೂ ಹೇಳಬೇಡ, ನಿನ್ನ ಆಶೀರ್ವಾದವಿದ್ದರೆ ಹೇಗೋ<noinclude></noinclude> kxs7zt69l9lbznev5kawvwp0a0wa5li 324815 324814 2026-06-16T05:19:35Z Nihar Chakravarti 8555 324815 proofread-page text/x-wiki <noinclude><pagequality level="3" user="Nihar Chakravarti" />{{rh||೫|}}</noinclude>ನಾರಾಯಣನು ಮನೆಗೆ ಬಂದನು. ಮೈಸೂರಿನ ವೃತ್ತಾಂತವನ್ನೇನೂ ತಾಯಿಗೆ ವಿವರವಾಗಿ ಹೇಳಲಿಲ್ಲ. ತಾಯಿಯು, “ ಮಗೂ ! ಗಂಗಾಧರರಾಯ ರೇನು ಹೇಳಿದರು ? ” “ ಮೆಡಿಕಲ್ ಕಾಲೇಜಿಗೆ ಸೇರಬೇಕೆಂದು ಒತ್ತಾಯಪಡಿಸಿದರು. ” “ ಆ ಕಾಲೇಜಿಗೆ ಸೇರಿ ಡಾಕ್ಟರಾದರೆ ಚೆನ್ನಾಗಿರುತ್ತೆ. ” “ ಹೌದಮ್ಮಾ, ಚೆನ್ನಾಗಿರುತ್ತೆ. ಐದು ವರ್ಷಗಳು ಓದಬೇಕು. ಬಹಳ ಹಣ ಖರ್ಚಾಗುತ್ತೆ. ” “ ಏನು ಮಾಡುವುದು, ನಮ್ಮ ಬಡತನ ಹಾಗಿದೆ. ಯಾರೂ ಸಹಾಯ ಮಾಡುವುದಿಲ್ಲ. ” ಎಂದು ಪಾರ್ವತಮ್ಮನು ನಿಟ್ಟುಸಿರು ಬಿಟ್ಟಳು. ನಾಣಿಯು, “ ಹಾಗಲ್ಲಮ್ಮಾ ಗಂಗಾಧರರಾಯರು ಐಶ್ವರ್ಯವಂತರು. ಅವರ ಮನೆಯಲ್ಲೇ ನನ್ನನ್ನು ಇಟ್ಟುಕೊಳ್ಳುವುದಾಗಿ ಹೇಳಿದರು. ಎಲ್ಲಾ ಖರ್ಚನ್ನೂ ಅವರೇ ವಹಿಸುವುದಾಗಿ ಹೇಳಿದರು. ಅವರ ಮನೆಯವರೆಲ್ಲಾ ಬಹಳ ಒಳ್ಳೆಯವರು. ” ಪಾರ್ವತಮ್ಮನು ಸಂತೋಷದಿಂದ “ ಮತ್ತೇನು ಬೇಕು. ನೀನು ಹೋಗಿ ಆ ಕಾಲೇಜಿಗೆ ಸೇರು, ಮುಂದಕ್ಕೆ ಬರುತ್ತಿ ” ಎಂದರು. “ ಹೌದಮ್ಮಾ ! ನಿನ್ನ ಯೋಗಕ್ಷೇಮವನ್ನು ನೋಡಿಕೊಳ್ಳುವವರಾರು ? ಇದೇನು ಮಾತು—ಆಗಹೋಗದ ಮಾತು. ” “ ಮಗು ! ನಮ್ಮ ಯೋಗಕ್ಷೇಮವೇನು ದೇವರು ನೋಡಿಕೊಳ್ಳುತ್ತಾನೆ. ನೀನು ಯೋಚಿಸಬೇಡ ; ಮೈಸೂರಿಗೆ ಹೋಗಿ ಓದಿಕೋ. ” “ ಇಲ್ಲವಮ್ಮಾ ಇಲ್ಲ ! ನಾನು ಎಂ.ಎಸ್ಸಿ.ಗೆ ಓದುವುದನ್ನು ನಿರ್ಧರಿ ಸಿದ್ದೇನೆ. ನೀನು ಮತ್ತೇನೂ ಹೇಳಬೇಡ, ನಿನ್ನ ಆಶೀರ್ವಾದವಿದ್ದರೆ ಹೇಗೋ<noinclude></noinclude> ewljh5wvg4knzzfroyj0xxel7nwwjff 324865 324815 2026-06-16T07:14:37Z A826 6806 /* Validated */ 324865 proofread-page text/x-wiki <noinclude><pagequality level="4" user="A826" />{{rh||೫|}}</noinclude>ನಾರಾಯಣನು ಮನೆಗೆ ಬಂದನು. ಮೈಸೂರಿನ ವೃತ್ತಾಂತವನ್ನೇನೂ ತಾಯಿಗೆ ವಿವರವಾಗಿ ಹೇಳಲಿಲ್ಲ. ತಾಯಿಯು, " ಮಗೂ! ಗಂಗಾಧರರಾಯ ರೇನು ಹೇಳಿದರು? " " ಮೆಡಿಕಲ್ ಕಾಲೇಜಿಗೆ ಸೇರಬೇಕೆಂದು ಒತ್ತಾಯಪಡಿಸಿದರು. " " ಆ ಕಾಲೇಜಿಗೆ ಸೇರಿ ಡಾಕ್ಟರಾದರೆ ಚೆನ್ನಾಗಿರುತ್ತೆ. " " ಹೌದಮ್ಮಾ, ಚೆನ್ನಾಗಿರುತ್ತೆ. ಐದು ವರ್ಷಗಳು ಓದಬೇಕು. ಬಹಳ ಹಣ ಖರ್ಚಾಗುತ್ತೆ. " " ಏನು ಮಾಡುವುದು, ನಮ್ಮ ಬಡತನ ಹಾಗಿದೆ. ಯಾರೂ ಸಹಾಯ ಮಾಡುವುದಿಲ್ಲ. " ಎಂದು ಪಾರ್ವತಮ್ಮನು ನಿಟ್ಟುಸಿರು ಬಿಟ್ಟಳು. ನಾಣಿಯು, " ಹಾಗಲ್ಲಮ್ಮಾ ಗಂಗಾಧರರಾಯರು ಐಶ್ವರ್ಯವಂತರು. ಅವರ ಮನೆಯಲ್ಲೇ ನನ್ನನ್ನು ಇಟ್ಟುಕೊಳ್ಳುವುದಾಗಿ ಹೇಳಿದರು. ಎಲ್ಲಾ ಖರ್ಚನ್ನೂ ಅವರೇ ವಹಿಸುವುದಾಗಿ ಹೇಳಿದರು. ಅವರ ಮನೆಯವರೆಲ್ಲಾ ಬಹಳ ಒಳ್ಳೆಯವರು. " ಪಾರ್ವತಮ್ಮನು ಸಂತೋಷದಿಂದ " ಮತ್ತೇನು ಬೇಕು. ನೀನು ಹೋಗಿ ಆ ಕಾಲೇಜಿಗೆ ಸೇರು, ಮುಂದಕ್ಕೆ ಬರುತ್ತಿ " ಎಂದರು. " ಹೌದಮ್ಮಾ! ನಿನ್ನ ಯೋಗಕ್ಷೇಮವನ್ನು ನೋಡಿಕೊಳ್ಳುವವರಾರು? ಇದೇನು ಮಾತು—ಆಗಹೋಗದ ಮಾತು. " " ಮಗು! ನಮ್ಮ ಯೋಗಕ್ಷೇಮವೇನು ದೇವರು ನೋಡಿಕೊಳ್ಳುತ್ತಾನೆ. ನೀನು ಯೋಚಿಸಬೇಡ; ಮೈಸೂರಿಗೆ ಹೋಗಿ ಓದಿಕೋ. " " ಇಲ್ಲವಮ್ಮಾ ಇಲ್ಲ! ನಾನು ಎಂ.ಎಸ್ಸಿ.ಗೆ ಓದುವುದನ್ನು ನಿರ್ಧರಿ ಸಿದ್ದೇನೆ. ನೀನು ಮತ್ತೇನೂ ಹೇಳಬೇಡ, ನಿನ್ನ ಆಶೀರ್ವಾದವಿದ್ದರೆ ಹೇಗೋ<noinclude></noinclude> r4d0kukd5s6swavroihmc3wb0dbmi48 ಪುಟ:Chitrakuuta (1954).djvu/೪೨ 104 120869 324783 2026-06-16T04:53:39Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಚಿತ್ರಕೂಟ ೨೯ ಮುಂದಕ್ಕೆ ಬರುತ್ತೇನೆ. ” ಪಾರ್ವತಮ್ಮನು ಕಣ್ಣೊರಸಿಕೊಳ್ಳುತ್ತಾ ಹೊರಟು ಹೋದಳು. ಕಾಲೇಜು ಬಾಗಿಲು ತೆಗೆಯುತ್ತಲೇ ನಾರಾಯಣನು ಎಂ.ಎಸ್‌ಸಿ, ತರ ಗತಿಗೆ ಸೇರಿ ವ್ಯಾಸಂಗವನ್ನು ಮುಂದುವರಿಸಿದನು. ನಾರಾಯಣ... 324783 proofread-page text/x-wiki <noinclude><pagequality level="1" user="Nihar Chakravarti" /></noinclude>ಚಿತ್ರಕೂಟ ೨೯ ಮುಂದಕ್ಕೆ ಬರುತ್ತೇನೆ. ” ಪಾರ್ವತಮ್ಮನು ಕಣ್ಣೊರಸಿಕೊಳ್ಳುತ್ತಾ ಹೊರಟು ಹೋದಳು. ಕಾಲೇಜು ಬಾಗಿಲು ತೆಗೆಯುತ್ತಲೇ ನಾರಾಯಣನು ಎಂ.ಎಸ್‌ಸಿ, ತರ ಗತಿಗೆ ಸೇರಿ ವ್ಯಾಸಂಗವನ್ನು ಮುಂದುವರಿಸಿದನು. ನಾರಾಯಣನು ಹೈಸ್ಕೂಲಿ ನಲ್ಲಿ ಓದುವ ಹುಡುಗರಿಗೆ ಮನೆಯಲ್ಲಿ ಪಾಠ ಹೇಳಲು ಉಪಕ್ರಮಿಸಿದನು. ಅದರಿಂದ ತಿಂಗಳಿಗೆ ಐವತ್ತು ರೂಪಾಯಿಗಳು ಬರುತ್ತಿತ್ತು. ಅದು ಮನೆಯ ಖರ್ಚಿಗೆ ಉಸಯೋಗವಾಗುತ್ತಿತ್ತು. ಸಾಲದೆ, ಕೊಂಚಕೊಂಚವಾಗಿ ಸಾಲಕ್ಕೂ ಪ್ರಾರಂಭವಾಯಿತು. ಶ್ಯಾಮಲೆಯೂ ಕಾಲೇಜಿಗೆ ಹೋಗುತ್ತಿದ್ದಳು. ಮದುವೆಯ ಕಾಲವು ಸಮೀಪಿಸುತ್ತ ಬಂತು, ಕಮಲಮ್ಮನವರು ಮದುವೈ ಯನ್ನು ಥಿಶ್ಚಯ ಮಾಡಬೇಕೆಂದು ಗಂಗಾಧರರಾಯರನ್ನು ಒತ್ತಾಯಪಡಿಸು ತ್ತಿದ್ದಳು, ಗಂಗಾಧರನು, ನಾರಾಯಣನ ವಿಚಾರವೇನು? ಅವನು ಮದುವೆಗೆ ಒಪ್ಪಿದನೇ ಇಲ್ಲವೇ? ನಾರಾಯಣನು ಮ್ಹೈೆಸೂರಿಥಿಂದ ಹೊರಡುವ ವರೆಗೆ ಅಸ ಮ್ಮತಿಯನ್ನು ಸೂಚಿಸಲಿಲ್ಲ ಮೆಡಿಕಲ್‌ ಪರೀಕ್ಷೆಗೆ ಓದುವುದು ಅವನಿಗೆ ಇಷ್ಟ ವಿಲದೇ ಇರಬಹುದು. ಅದು ಅವನ ಇಷ್ಟ ಎಂದು ಆಲೋಚಿಸಿದನು. ಬೆಂಗ ಳೂರಿಗೆ ಹೋಗಿ ಬರುವುದೇ ಉತ್ತಮವೆಂದು ನಿರ್ಧರಿಸಿಕೊಂಡನು ಮಾರನೆಯ ದಿನವೇ ಮೈಸೂರಿನಿಂದ ಬೆಂಗಳೂರಿಗೆ ಬಂದನು. ಮಾಡರ್ನ್‌ ಹೋಟಲಿನವ್ಲಿ ಇಳಿದುಕೊಂಡು, ಕಾಫೀ ಕುಡಿದು ಜಟಕಾ ಬಂಡಿ ಯೆಲ್ಲಿ ಕುಳಿತು ಮಲ್ಲೇಶ್ವರದಲ್ಲಿರುವ ನಾರಾಯಣನ ಮನೆಗೆ ಬಂದನು. ನಾರಾ ಯಣನು ಜಗಲಿಯ ಮೇಲೆ ಹುಡುಗರಿಗೆ ಪಾಠ ಹೇಳುತ್ತಿದ್ದನು. ಗಂಗಾಧೆರ ರಾಯರನ್ನು ಮರ್ಯಾದೆಯಿಂದ ಸ್ವಾಗತಿಸಿ ಹಜಾರದಲ್ಲಿ ಚಾಪೆಯ ಮೇಲೆ ಕೂರಿಸಿದನು. ಗಂಗಾಧರರಾಯನು ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿ ದ್ದನು. ಅಷ್ಟರಲ್ಲಿ ಪಾರ್ವತಮ್ಮನು ಕಾಫಿಯನ್ನು ಮಾಡಿ ಶ್ಯಾಮಲೆಯ ಕೈಯ್ಯಲ್ಲಿ ಕೊಟ್ಟು, ಕಳಿಸಿದಳು. ನಾಣಿಯು ಗಂಗಾಧರರಾಯರಿಗೆ ಉಪಚಾರ ಹೇಳಿ ಕಾಫಿಯನ್ನು ಕೊಟ್ಟನು. ರಾಯರು ಕಾಫಿ ಕುಡಿದು ಮಾತಿಗೆ ಆರಂಭಿ ಸಿದರು. “ ಏನಯ್ಯಾ! ನಾಣಿ. ನೀನು ಎಂ.ಎಸ್‌ಸಿ, ಕ್ಲಾಸಿಗೆ ಸೇರಿದ್ದೀಯೋ 2೫<noinclude></noinclude> 1oveu02xo3ej2z4ze4z39iwmwqaxlft 324816 324783 2026-06-16T05:20:36Z Nihar Chakravarti 8555 /* Proofread */ 324816 proofread-page text/x-wiki <noinclude><pagequality level="3" user="Nihar Chakravarti" />{{rh||ಚಿತ್ರಕೂಟ|೨೭}}</noinclude>ಮುಂದಕ್ಕೆ ಬರುತ್ತೇನೆ. ” ಪಾರ್ವತಮ್ಮನು ಕಣ್ಣೊರಸಿಕೊಳ್ಳುತ್ತಾ ಹೊರಟು ಹೋದಳು. ಕಾಲೇಜು ಬಾಗಿಲು ತೆಗೆಯುತ್ತಲೇ ನಾರಾಯಣನು ಎಂ.ಎಸ್ಸಿ. ತರ ಗತಿಗೆ ಸೇರಿ ವ್ಯಾಸಂಗವನ್ನು ಮುಂದುವರಿಸಿದನು. ನಾರಾಯಣನು ಹೈಸ್ಕೂಲಿ ನಲ್ಲಿ ಓದುವ ಹುಡುಗರಿಗೆ ಮನೆಯಲ್ಲಿ ಪಾಠ ಹೇಳಲು ಉಪಕ್ರಮಿಸಿದನು. ಅದರಿಂದ ತಿಂಗಳಿಗೆ ಐವತ್ತು ರೂಪಾಯಿಗಳು ಬರುತ್ತಿತ್ತು. ಅದು ಮನೆಯ ಖರ್ಚಿಗೆ ಉಪಯೋಗವಾಗುತ್ತಿತ್ತು. ಸಾಲದೆ, ಕೊಂಚಕೊಂಚವಾಗಿ ಸಾಲಕ್ಕೂ ಪ್ರಾರಂಭವಾಯಿತು. ಶ್ಯಾಮಲೆಯೂ ಕಾಲೇಜಿಗೆ ಹೋಗುತ್ತಿದ್ದಳು. ಮದುವೆಯ ಕಾಲವು ಸಮೀಪಿಸುತ್ತ ಬಂತು. ಕಮಲಮ್ಮನವರು ಮದುವೆ ಯನ್ನು ನಿಶ್ಚಯ ಮಾಡಬೇಕೆಂದು ಗಂಗಾಧರರಾಯರನ್ನು ಒತ್ತಾಯಪಡಿಸು ತ್ತಿದ್ದಳು. ಗಂಗಾಧರನು, ನಾರಾಯಣನ ವಿಚಾರವೇನು ? ಅವನು ಮದುವೆಗೆ ಒಪ್ಪಿದನೇ ಇಲ್ಲವೇ ? ನಾರಾಯಣನು ಮೈಸೂರಿನಿಂದ ಹೊರಡುವ ವರೆಗೆ ಅಸ ಮ್ಮತಿಯನ್ನು ಸೂಚಿಸಲಿಲ್ಲ. ಮೆಡಿಕಲ್ ಪರೀಕ್ಷೆಗೆ ಓದುವುದು ಅವನಿಗೆ ಇಷ್ಟ ವಿಲ್ಲದೇ ಇರಬಹುದು. ಅದು ಅವನ ಇಷ್ಟ—ಎಂದು ಆಲೋಚಿಸಿದನು. ಬೆಂಗಳೂರಿಗೆ ಹೋಗಿ ಬರುವುದೇ ಉತ್ತಮವೆಂದು ನಿರ್ಧರಿಸಿಕೊಂಡನು. ಮಾರನೆಯ ದಿನವೇ ಮೈಸೂರಿನಿಂದ ಬೆಂಗಳೂರಿಗೆ ಬಂದನು. ಮಾಡರ್ನ್ ಹೋಟಲಿನಲ್ಲಿ ಇಳಿದುಕೊಂಡು, ಕಾಫಿ ಕುಡಿದು ಜಟಕಾ ಬಂಡಿ ಯಲ್ಲಿ ಕುಳಿತು ಮಲ್ಲೇಶ್ವರದಲ್ಲಿರುವ ನಾರಾಯಣನ ಮನೆಗೆ ಬಂದನು. ನಾರಾ ಯಣನು ಜಗಲಿಯ ಮೇಲೆ ಹುಡುಗರಿಗೆ ಪಾಠ ಹೇಳುತ್ತಿದ್ದನು. ಗಂಗಾಧರ ರಾಯರನ್ನು ಮರ್ಯಾದೆಯಿಂದ ಸ್ವಾಗತಿಸಿ ಹಜಾರದಲ್ಲಿ ಚಾಪೆಯ ಮೇಲೆ ಕೂರಿಸಿದನು. ಗಂಗಾಧರರಾಯನು ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿ ದ್ದನು. ಅಷ್ಟರಲ್ಲಿ ಪಾರ್ವತಮ್ಮನು ಕಾಫಿಯನ್ನು ಮಾಡಿ ಶ್ಯಾಮಲೆಯ ಕೈಯ್ಯಲ್ಲಿ ಕೊಟ್ಟು ಕಳುಹಿಸಿದಳು. ನಾಣಿಯು ಗಂಗಾಧರರಾಯರಿಗೆ ಉಪಚಾರ ಹೇಳಿ ಕಾಫಿಯನ್ನು ಕೊಟ್ಟನು. ರಾಯರು ಕಾಫಿ ಕುಡಿದು ಮಾತಿಗೆ ಆರಂಭಿ ಸಿದರು. “ ಏನಯ್ಯಾ ! ನಾಣಿ. ನೀನು ಎಂ.ಎಸ್ಸಿ. ಕ್ಲಾಸಿಗೆ ಸೇರಿದ್ದೀಯೋ ? ”<noinclude></noinclude> cfb7wk57r4ulr41dox7znu4ap3q45te 324866 324816 2026-06-16T07:14:58Z A826 6806 /* Validated */ 324866 proofread-page text/x-wiki <noinclude><pagequality level="4" user="A826" />{{rh||ಚಿತ್ರಕೂಟ|೨೭}}</noinclude>ಮುಂದಕ್ಕೆ ಬರುತ್ತೇನೆ. " ಪಾರ್ವತಮ್ಮನು ಕಣ್ಣೊರಸಿಕೊಳ್ಳುತ್ತಾ ಹೊರಟು ಹೋದಳು. ಕಾಲೇಜು ಬಾಗಿಲು ತೆಗೆಯುತ್ತಲೇ ನಾರಾಯಣನು ಎಂ.ಎಸ್ಸಿ. ತರ ಗತಿಗೆ ಸೇರಿ ವ್ಯಾಸಂಗವನ್ನು ಮುಂದುವರಿಸಿದನು. ನಾರಾಯಣನು ಹೈಸ್ಕೂಲಿ ನಲ್ಲಿ ಓದುವ ಹುಡುಗರಿಗೆ ಮನೆಯಲ್ಲಿ ಪಾಠ ಹೇಳಲು ಉಪಕ್ರಮಿಸಿದನು. ಅದರಿಂದ ತಿಂಗಳಿಗೆ ಐವತ್ತು ರೂಪಾಯಿಗಳು ಬರುತ್ತಿತ್ತು. ಅದು ಮನೆಯ ಖರ್ಚಿಗೆ ಉಪಯೋಗವಾಗುತ್ತಿತ್ತು. ಸಾಲದೆ, ಕೊಂಚಕೊಂಚವಾಗಿ ಸಾಲಕ್ಕೂ ಪ್ರಾರಂಭವಾಯಿತು. ಶ್ಯಾಮಲೆಯೂ ಕಾಲೇಜಿಗೆ ಹೋಗುತ್ತಿದ್ದಳು. ಮದುವೆಯ ಕಾಲವು ಸಮೀಪಿಸುತ್ತ ಬಂತು. ಕಮಲಮ್ಮನವರು ಮದುವೆ ಯನ್ನು ನಿಶ್ಚಯ ಮಾಡಬೇಕೆಂದು ಗಂಗಾಧರರಾಯರನ್ನು ಒತ್ತಾಯಪಡಿಸು ತ್ತಿದ್ದಳು. ಗಂಗಾಧರನು, ನಾರಾಯಣನ ವಿಚಾರವೇನು? ಅವನು ಮದುವೆಗೆ ಒಪ್ಪಿದನೇ ಇಲ್ಲವೇ? ನಾರಾಯಣನು ಮೈಸೂರಿನಿಂದ ಹೊರಡುವ ವರೆಗೆ ಅಸ ಮ್ಮತಿಯನ್ನು ಸೂಚಿಸಲಿಲ್ಲ. ಮೆಡಿಕಲ್ ಪರೀಕ್ಷೆಗೆ ಓದುವುದು ಅವನಿಗೆ ಇಷ್ಟ ವಿಲ್ಲದೇ ಇರಬಹುದು. ಅದು ಅವನ ಇಷ್ಟ—ಎಂದು ಆಲೋಚಿಸಿದನು. ಬೆಂಗಳೂರಿಗೆ ಹೋಗಿ ಬರುವುದೇ ಉತ್ತಮವೆಂದು ನಿರ್ಧರಿಸಿಕೊಂಡನು. ಮಾರನೆಯ ದಿನವೇ ಮೈಸೂರಿನಿಂದ ಬೆಂಗಳೂರಿಗೆ ಬಂದನು. ಮಾಡರ್ನ್ ಹೋಟಲಿನಲ್ಲಿ ಇಳಿದುಕೊಂಡು, ಕಾಫಿ ಕುಡಿದು ಜಟಕಾ ಬಂಡಿ ಯಲ್ಲಿ ಕುಳಿತು ಮಲ್ಲೇಶ್ವರದಲ್ಲಿರುವ ನಾರಾಯಣನ ಮನೆಗೆ ಬಂದನು. ನಾರಾ ಯಣನು ಜಗಲಿಯ ಮೇಲೆ ಹುಡುಗರಿಗೆ ಪಾಠ ಹೇಳುತ್ತಿದ್ದನು. ಗಂಗಾಧರ ರಾಯರನ್ನು ಮರ್ಯಾದೆಯಿಂದ ಸ್ವಾಗತಿಸಿ ಹಜಾರದಲ್ಲಿ ಚಾಪೆಯ ಮೇಲೆ ಕೂರಿಸಿದನು. ಗಂಗಾಧರರಾಯನು ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿ ದ್ದನು. ಅಷ್ಟರಲ್ಲಿ ಪಾರ್ವತಮ್ಮನು ಕಾಫಿಯನ್ನು ಮಾಡಿ ಶ್ಯಾಮಲೆಯ ಕೈಯ್ಯಲ್ಲಿ ಕೊಟ್ಟು ಕಳುಹಿಸಿದಳು. ನಾಣಿಯು ಗಂಗಾಧರರಾಯರಿಗೆ ಉಪಚಾರ ಹೇಳಿ ಕಾಫಿಯನ್ನು ಕೊಟ್ಟನು. ರಾಯರು ಕಾಫಿ ಕುಡಿದು ಮಾತಿಗೆ ಆರಂಭಿ ಸಿದರು. " ಏನಯ್ಯಾ! ನಾಣಿ. ನೀನು ಎಂ.ಎಸ್ಸಿ. ಕ್ಲಾಸಿಗೆ ಸೇರಿದ್ದೀಯೋ? "<noinclude></noinclude> cbvy04ejdr8slyinuqp7ifz6d4h7tzd ಪುಟ:Chitrakuuta (1954).djvu/೪೩ 104 120870 324784 2026-06-16T04:53:44Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೨೮ ಚಿತ್ರಕೂಟ «ಜಾದೂ ೫ “ ಒಳ್ಳೇದಾಯಿತು. ಇದು ಬೇಗ ಪೂರೈಸುತ್ತದೆ. ? ನಾಣಿಯು ತಲೆದೊಗಿದನು. « ನಾನು ನಿಮ್ಮ ತಾಯಿಯವಕರೊಡನೆ ಮಾತನಾಡಲು ಬಂದಿದ್ದೇನೆ. ದಯವಿಟ್ಟು ಕರೆಯುವೆಯಾ? 3 ಈ ತ್ತ ಕೇಳಿ. ಒಳಗಡೆ ನಿಂತಿದ್ದ ಪಾರ್... 324784 proofread-page text/x-wiki <noinclude><pagequality level="1" user="Nihar Chakravarti" /></noinclude>೨೮ ಚಿತ್ರಕೂಟ «ಜಾದೂ ೫ “ ಒಳ್ಳೇದಾಯಿತು. ಇದು ಬೇಗ ಪೂರೈಸುತ್ತದೆ. ? ನಾಣಿಯು ತಲೆದೊಗಿದನು. « ನಾನು ನಿಮ್ಮ ತಾಯಿಯವಕರೊಡನೆ ಮಾತನಾಡಲು ಬಂದಿದ್ದೇನೆ. ದಯವಿಟ್ಟು ಕರೆಯುವೆಯಾ? 3 ಈ ತ್ತ ಕೇಳಿ. ಒಳಗಡೆ ನಿಂತಿದ್ದ ಪಾರ್ವತಮ್ಮನಿಗೆ ಆಶ್ಚರ್ಯ ವಾಯಿತು. ನಾರಾಯಣನು ಒಳಗೆ ಹೋಗಿ ತಿಳಿಸಿದನು. ಸಾರ್ವತಮ್ಮನವರು ಹಜಾರಕ್ಕೆ ಬಂದು ನಿಂತುಕೊಂಡರು. ಗಂಗಾಧೆರರಾಯನು ಅವರೊಡನೆ ಸಾಧಾ ರಣವಾಗಿ ಯೋಗಕ್ಷೇಮವನ್ನು ವಿಚಾರಿಸಿ ಮದುವೆಯ ಮಾತನೆ ಸ ತ್ರಿದನು, «4 ಪಾರ್ವತಮ್ಮನ ವರೇ 1. ನಿಮ್ಮ ಮಗ ಬಹಳ ಬು ದ್ಧಿ ವಂತ. ನಮ್ಮ ಮನೆಯವರಿಗೆಲ್ಲಾ ಅವನನ್ನು ನೋಡಿ ಬಹಳ ಸಂತೊ ಮಗಳು ಶಾರಾಗೆ ಹದಿನೆಂಟು ವರ್ಷ ವಯಸ್ಸು ಗಜ pee: ಬ ನಿಗೆ ಕೊಟ್ಟು ಮದುವೆ ಮಾಡಬೇಕೆಂದು ನಾವೆಲ್ಲಾ $ ನಿಶ್ಚಯ ಯಿಸಿದ್ದೆ ವೆ. ನಾನೂ ನಿಮ್ಮ ಯಜಮಾನರೂ ಬಹಳ ಸ್ನೇಹಿತರು ಈ ಸಂಬಂಧ ಅದಕೆ ಬಹಳ ಚೆನ್ನಾಗಿರುತ್ತದೆ. ದಯಮಾಡಿ ನೀವು ಒಪ್ಪಿಕೊಳ್ಳ ಬೇಕು ಪಾರ್ವತಮ್ಮನು ತಲೆತಗ್ಳಿ ಸಿಕೊಂಡು, (4 ನನ್ನ ದೇನಿದೆ ಹೆಣ್ಣು ಹೆಂಗಸು ಹುಡುಗ ಒಪ್ಪಿದರೆ ಸದ್ರಿ ಎಂದಳು. « ನಿಮ್ಮ ಹುಡುಗ ಮೈಸೂರಿಗೆ ಬಂದಿದ್ದಾಗ ಹುಡುಗಿಯನ್ನು ಒಪ್ಪಿ ದ್ದಾನೆ, ಹುಡುಗಿಯೂ ನಾರಾಯಣನನ್ನೇ ಮದುವೆಯಾಗಬೇಕೆುದು ಹಠ ಹಿಡಿದಿದ್ದಾ ಳೆ. ನೀವು ಒಪ್ಪಿದರೆ ಎಲ್ಲವೂ ಶುಭವಾಗುತ್ತದೆ. ? ॥ ಹುಡುಗ ಒಪ್ಪಿದ್ದ £ ಸರಿ, ನಾವು ಬಡವರು. _ನರೀವ್ರ ಭಾಗ್ಯವಂತರು. ಗಂಗಾಧೆರನ್ನು " ಬಡತನ, ಭಾಗ್ಯ ಇದೊಂದೂ ಶಾಶ್ವ ಚ ಗುಣ ಶೀಲಗಳು ಮುಖ್ಯ. ನಮಗೂ ನಿಮ್ಮ ಜೂ ಒಂದಿನ ಸಂಬಂಧಗಳು ಕಲತೇ ಇದೆ. ನಮ್ಮ ಸೋದರ ಮಾವಂದಿರ ಮಗನಿಗೇ ನಿಮ್ಮ ಸಹೋದರಿಯನ್ನು ಕೊಟ್ಟಿತ್ತು ” ಎಂದು ಹೇಳಿದನು. ಪಾರ್ವತಮ್ಮನು ( ಅದೆಲ್ಲಾ ಸರಿ! ಆದರೆ ಶ್ಯಾಮಲೆಯೂ ಪ್ರಾಪ ಕಾಟಿ<noinclude></noinclude> 0x8jswcua5g1nzbipoim4wwh4c14rab 324817 324784 2026-06-16T05:21:25Z Nihar Chakravarti 8555 /* Proofread */ 324817 proofread-page text/x-wiki <noinclude><pagequality level="3" user="Nihar Chakravarti" />{{rh|೨೮|ಚಿತ್ರಕೂಟ}}</noinclude>“ ಹೌದು. ” “ ಒಳ್ಳೇದಾಯಿತು. ಇದು ಬೇಗ ಪೂರೈಸುತ್ತದೆ. ” ನಾಣಿಯು ತಲೆದೂಗಿದನು. “ ನಾನು ನಿಮ್ಮ ತಾಯಿಯವರೊಡನೆ ಮಾತನಾಡಲು ಬಂದಿದ್ದೇನೆ. ದಯವಿಟ್ಟು ಕರೆಯುವೆಯಾ ? ” ಈ ಮಾತು ಕೇಳಿ, ಒಳಗಡೆ ನಿಂತಿದ್ದ ಪಾರ್ವತಮ್ಮನಿಗೆ ಆಶ್ಚರ್ಯ ವಾಯಿತು. ನಾರಾಯಣನು ಒಳಗೆ ಹೋಗಿ ತಿಳಿಸಿದನು. ಪಾರ್ವತಮ್ಮನವರು ಹಜಾರಕ್ಕೆ ಬಂದು ನಿಂತುಕೊಂಡರು. ಗಂಗಾಧರರಾಯನು ಅವರೊಡನೆ ಸಾಧಾ ರಣವಾಗಿ ಯೋಗಕ್ಷೇಮವನ್ನು ವಿಚಾರಿಸಿ ಮದುವೆಯ ಮಾತನ್ನೆತ್ತಿದನು. “ ಪಾರ್ವತಮ್ಮನವರೇ ! ನಿಮ್ಮ ಮಗ ಬಹಳ ಬುದ್ಧಿವಂತ. ನಮ್ಮ ಮನೆಯವರಿಗೆಲ್ಲಾ ಅವನನ್ನು ನೋಡಿ ಬಹಳ ಸಂತೋಷವಾಗಿದೆ. ನನ್ನ ಹಿರೀ ಮಗಳು ತಾರಾಗೆ ಹದಿನೆಂಟು ವರ್ಷ ವಯಸ್ಸಾಗಿದೆ. ಅವಳನ್ನು ನಾರಾಯಣ ನಿಗೆ ಕೊಟ್ಟು ಮದುವೆ ಮಾಡಬೇಕೆಂದು ನಾವೆಲ್ಲಾ ನಿಶ್ಚಯಿಸಿದ್ದೇವೆ. ನಾನೂ ನಿಮ್ಮ ಯಜಮಾನರೂ ಬಹಳ ಸ್ನೇಹಿತರು. ಈ ಸಂಬಂಧ ಆದರೆ ಬಹಳ ಚೆನ್ನಾಗಿರುತ್ತದೆ. ದಯಮಾಡಿ ನೀವು ಒಪ್ಪಿಕೊಳ್ಳಬೇಕು. ” ಪಾರ್ವತಮ್ಮನು ತಲೆತಗ್ಗಿಸಿಕೊಂಡು, “ ನನ್ನದೇನಿದೆ ? ಹೆಣ್ಣು ಹೆಂಗಸು. ಹುಡುಗ ಒಪ್ಪಿದರೆ ಸರಿ ” ಎಂದಳು. “ ನಿಮ್ಮ ಹುಡುಗ ಮೈಸೂರಿಗೆ ಬಂದಿದ್ದಾಗ ಹುಡುಗಿಯನ್ನು ಒಪ್ಪಿ ದ್ದಾನೆ. ಹುಡುಗಿಯೂ ನಾರಾಯಣನನ್ನೇ ಮದುವೆಯಾಗಬೇಕೆಂದು ಹಠ ಹಿಡಿದಿದ್ದಾಳೆ. ನೀವು ಒಪ್ಪಿದರೆ ಎಲ್ಲವೂ ಶುಭವಾಗುತ್ತದೆ. ” “ ಹುಡುಗ ಒಪ್ಪಿದ್ದರೆ ಸರಿ. ನಾವು ಬಡವರು—ನೀವು ಭಾಗ್ಯವಂತರು. ” ಗಂಗಾಧರನು, “ ಬಡತನ, ಭಾಗ್ಯ ಇದೊಂದೂ ಶಾಶ್ವತವಲ್ಲ. ಗುಣ, ಶೀಲಗಳು ಮುಖ್ಯ. ನಮಗೂ ನಿಮ್ಮ ಮನೆಗೂ ಹಿಂದಿನ ಸಂಬಂಧಗಳು ಕಲತೇ ಇದೆ. ನಮ್ಮ ಸೋದರ ಮಾವಂದಿರ ಮಗನಿಗೇ ನಿಮ್ಮ ಸಹೋದರಿಯನ್ನು ಕೊಟ್ಟಿತ್ತು ” ಎಂದು ಹೇಳಿದನು. ಪಾರ್ವತಮ್ಮನು “ ಅದೆಲ್ಲಾ ಸರಿ ! ಆದರೆ ಶ್ಯಾಮಲೆಯೂ ಪ್ರಾಪ್ತ<noinclude></noinclude> 6qrcirnllvaytq66w9zfp4jtacmyol0 324867 324817 2026-06-16T07:21:16Z A826 6806 /* Validated */ 324867 proofread-page text/x-wiki <noinclude><pagequality level="4" user="A826" />{{rh|೨೮|ಚಿತ್ರಕೂಟ}}</noinclude>" ಹೌದು. " " ಒಳ್ಳೇದಾಯಿತು. ಇದು ಬೇಗ ಪೂರೈಸುತ್ತದೆ. " ನಾಣಿಯು ತಲೆದೂಗಿದನು. " ನಾನು ನಿಮ್ಮ ತಾಯಿಯವರೊಡನೆ ಮಾತನಾಡಲು ಬಂದಿದ್ದೇನೆ. ದಯವಿಟ್ಟು ಕರೆಯುವೆಯಾ? " ಈ ಮಾತು ಕೇಳಿ, ಒಳಗಡೆ ನಿಂತಿದ್ದ ಪಾರ್ವತಮ್ಮನಿಗೆ ಆಶ್ಚರ್ಯ ವಾಯಿತು. ನಾರಾಯಣನು ಒಳಗೆ ಹೋಗಿ ತಿಳಿಸಿದನು. ಪಾರ್ವತಮ್ಮನವರು ಹಜಾರಕ್ಕೆ ಬಂದು ನಿಂತುಕೊಂಡರು. ಗಂಗಾಧರರಾಯನು ಅವರೊಡನೆ ಸಾಧಾರಣವಾಗಿ ಯೋಗಕ್ಷೇಮವನ್ನು ವಿಚಾರಿಸಿ ಮದುವೆಯ ಮಾತನ್ನೆತ್ತಿದನು. " ಪಾರ್ವತಮ್ಮನವರೇ! ನಿಮ್ಮ ಮಗ ಬಹಳ ಬುದ್ಧಿವಂತ. ನಮ್ಮ ಮನೆಯವರಿಗೆಲ್ಲಾ ಅವನನ್ನು ನೋಡಿ ಬಹಳ ಸಂತೋಷವಾಗಿದೆ. ನನ್ನ ಹಿರೀ ಮಗಳು ತಾರಾಗೆ ಹದಿನೆಂಟು ವರ್ಷ ವಯಸ್ಸಾಗಿದೆ. ಅವಳನ್ನು ನಾರಾಯಣನಿಗೆ ಕೊಟ್ಟು ಮದುವೆ ಮಾಡಬೇಕೆಂದು ನಾವೆಲ್ಲಾ ನಿಶ್ಚಯಿಸಿದ್ದೇವೆ. ನಾನೂ ನಿಮ್ಮ ಯಜಮಾನರೂ ಬಹಳ ಸ್ನೇಹಿತರು. ಈ ಸಂಬಂಧ ಆದರೆ ಬಹಳ ಚೆನ್ನಾಗಿರುತ್ತದೆ. ದಯಮಾಡಿ ನೀವು ಒಪ್ಪಿಕೊಳ್ಳಬೇಕು. " ಪಾರ್ವತಮ್ಮನು ತಲೆತಗ್ಗಿಸಿಕೊಂಡು, " ನನ್ನದೇನಿದೆ? ಹೆಣ್ಣು ಹೆಂಗಸು. ಹುಡುಗ ಒಪ್ಪಿದರೆ ಸರಿ " ಎಂದಳು. " ನಿಮ್ಮ ಹುಡುಗ ಮೈಸೂರಿಗೆ ಬಂದಿದ್ದಾಗ ಹುಡುಗಿಯನ್ನು ಒಪ್ಪಿ ದ್ದಾನೆ. ಹುಡುಗಿಯೂ ನಾರಾಯಣನನ್ನೇ ಮದುವೆಯಾಗಬೇಕೆಂದು ಹಠ ಹಿಡಿದಿದ್ದಾಳೆ. ನೀವು ಒಪ್ಪಿದರೆ ಎಲ್ಲವೂ ಶುಭವಾಗುತ್ತದೆ. " " ಹುಡುಗ ಒಪ್ಪಿದ್ದರೆ ಸರಿ. ನಾವು ಬಡವರು—ನೀವು ಭಾಗ್ಯವಂತರು. " ಗಂಗಾಧರನು, " ಬಡತನ, ಭಾಗ್ಯ ಇದೊಂದೂ ಶಾಶ್ವತವಲ್ಲ. ಗುಣ, ಶೀಲಗಳು ಮುಖ್ಯ. ನಮಗೂ ನಿಮ್ಮ ಮನೆಗೂ ಹಿಂದಿನ ಸಂಬಂಧಗಳು ಕಲತೇ ಇದೆ. ನಮ್ಮ ಸೋದರ ಮಾವಂದಿರ ಮಗನಿಗೇ ನಿಮ್ಮ ಸಹೋದರಿಯನ್ನು ಕೊಟ್ಟಿತ್ತು " ಎಂದು ಹೇಳಿದನು. ಪಾರ್ವತಮ್ಮನು " ಅದೆಲ್ಲಾ ಸರಿ! ಆದರೆ ಶ್ಯಾಮಲೆಯೂ ಪ್ರಾಪ್ತ<noinclude></noinclude> nh9yel02ywj3syc3zbs1aityak1fz9o ಪುಟ:Chitrakuuta (1954).djvu/೪೪ 104 120871 324785 2026-06-16T04:53:51Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಚಿತ್ರ ಕೊಟಿ ೨೯ ವಯಸ್ಕಳಾಗಿದ್ದಾ ಳೆ. ಯಜಮಾನರು ಇದ್ದಾಗಲೇ ಮದುವೆ ಮಾಡಬೇಕೆಂದಿ. ದ್ಹರು. ನಮಗೆ ಆ ಭಾಗ್ಯವಿಲ್ಲ. ಈಗಲೂ ಹುಡುಗಿಯ ಲಗ್ನವಾಗದೆ ಹುಡು ಗನ ಲಗ್ನ ಮಾಡಿದರೆ ಬಂಧುಗಳು ಆಡಿಕೊಳ್ಳು ತ್ತಾರೆ. ಸೆ ಹಿರಿಯರು, ನ... 324785 proofread-page text/x-wiki <noinclude><pagequality level="1" user="Nihar Chakravarti" /></noinclude>ಚಿತ್ರ ಕೊಟಿ ೨೯ ವಯಸ್ಕಳಾಗಿದ್ದಾ ಳೆ. ಯಜಮಾನರು ಇದ್ದಾಗಲೇ ಮದುವೆ ಮಾಡಬೇಕೆಂದಿ. ದ್ಹರು. ನಮಗೆ ಆ ಭಾಗ್ಯವಿಲ್ಲ. ಈಗಲೂ ಹುಡುಗಿಯ ಲಗ್ನವಾಗದೆ ಹುಡು ಗನ ಲಗ್ನ ಮಾಡಿದರೆ ಬಂಧುಗಳು ಆಡಿಕೊಳ್ಳು ತ್ತಾರೆ. ಸೆ ಹಿರಿಯರು, ನೀವೇ ಫೋಡಿ! » ಗಂಗಾಧರನು “ ಅದೆಲ್ಲಾ ಭಗವನ್ನಿ ಯಾಮಕ, ಅವಳಿಗೂ ಮದುವೆ ಯಾಗುತ್ತೆ. ಅದಕ್ಟೇನು ! ಈಗ ನಮ್ಮ ಹುಡುಗಿಯ ಮದುವೆ ಮಾಘಮಾಸಕ್ಕೆ ಸಿದ್ದ ಮಾಡಿಬಿಟ್ಟಿದ್ದೇವೆ. ನೀವು ದೊಡ್ಡ ಮನಸ್ಸುಮಾಡಿ ಒಪ್ಪಿಕೊಳ್ಳ ಬೇಕು.” ಪಾರ್ವತಮ್ಮ ಎನು ನಗು ಮುಖವನ್ನು ವಾಡಿ ತಲೆ ತಗ್ಗಿ ಸಿದಳು. ನಾರಾ ಯಣನು ಮೌನವಾಗಿ ನಿಂತಿದ್ದನು. ಶ್ಯಾಮಲೆಯೂ ತಾಯಿಯ ಬಳಿಯಲ್ಲಿ ನಿಂತಿದ್ದಳು. ಗಂಗಾಧರರಾಯನು ಶಾ ಶಾ ಮಲೆಯನ ನ್ನ ಮಾತನಾಡಿಸಿದನು. ಕುಳಿ ತವರು ಮೇಲಕ್ಕೆದ್ದು "ಹೋಗಿ ಬರುತ್ತೆ (ನಮ್ಮಾ, "ಒಳ್ಳೆಯ ದಿನ ನೋಡಿ ಲಗ್ನ ಸತ್ರಿ ಫೆ ಮಾಡೋಣ” ಎಂದು ಹೇಳಿ ಹೊರಟನು. ನಾರಾಯಣನೂ ಅವರ ಹಿಂದೆ ಹೋದನು. ನಾರಾಯಣನ ಕಡೆ ತಿರುಗಿ “ ನಾಣಿ ಬಾ! ನಾನು ಹೋಟಿಲಿನಲ್ಲಿ ಇಳಿದಿದ್ದೇನೆ. ಭಾನುವಾರವಾಗಿದೆ. ಬಾ, ಅಲ್ಲಿಯ ವರೆಗೆ ಹೋಗಿಬರೋಣ” ಎಂದು ಕರೆದನು. ನಾಣಿಯೂ ಅವನ ಜೊತೆಯಲ್ಲಿ ಹೊರಡಲು ಸಿದ್ದನಾ ದನು. ಜಟಕಾ ಬಂಡಿಯಲ್ಲಿ ಇಬ್ಬರೂ ಹೋಗಿ ಕುಳಿತರು. ಗಂಗಾಧರನು ನಾಣಿಯ ಕಾಲೇಜಿನ ವ್ಯಾಸಂಗ, ಶ್ಯಾಮ ತ ಇ ಬಜ (2 ನ್ನು ವಿಚಾರಿಸಿದನು. ಮಾತಿನ ಮಧ್ಯೆ ಗಂಗಾಧೆರನು, ಸಿ ಜೀವನನ್ಸೆ ಇಕ್ಷು ಮಾಡುತ್ತಿ, ರಿ? `'' ಎಂದು ಕೇಳಿದನು. ನಾಣಿಯು ನಗುತ್ತಾ “ ಆದೇ ದೊಡ್ಡ ಪ್ರಶ್ನೆ. ಹೇಗೋ ನಡೆಯುತ್ತಿದೆ ಅದೇ ಕಸ, ” ಎಂದನು. ಗಂಗಾಧರನು, “ ಹೌದು ಈ ಕಾಲದಲ್ಲಿ ಜೀವನದ ಪ್ರಶ್ನೆಯೇ ದೊಡ್ಡದು. ಆದರೂ ಹೇಗೋ ಆ ಗುತ್ತೆ. ಸೀನು ನಿದ್ಯಾವಂಶನಾಗಿದೀಯೆ, ಎಲ್ಲಿಯಾದರೂ ಶಿಫಾರಸ್ಸು ಮಾಡಿ ಒಳ್ಳೆಯ ಕಲಸ ಕೊಡಿಸುತ್ತೇನೆ: ಎಂದನು. ಆ ಮಾತು ಅಲ್ಲಿಗೇ ಪೂರೈಸಿತು. ಗಾಡಿಯು ಮಾಡರ್ನ್‌ ಹೋಟಿಲ್‌ ಬಾಗಿಲಿನಲ್ಲಿ ನಿಂತಿತು. ಇಬ್ಬರೂ ಗಾಡಿಯಿಂದ ಇಳಿದರು. ಮಹಡಿಯ ಮೇಲಿನ ರೂಮಿನಲ್ಲಿ ಹೋಗಿ ಕುಳಿತುಕೊಂಡರು.<noinclude></noinclude> 0ss171043sqry8q1asywjtrgv0cy28r 324818 324785 2026-06-16T05:22:28Z Nihar Chakravarti 8555 /* Proofread */ 324818 proofread-page text/x-wiki <noinclude><pagequality level="3" user="Nihar Chakravarti" />{{rh||ಚಿತ್ರಕೂಟ|೨೯}}</noinclude>ವಯಸ್ಕಳಾಗಿದ್ದಾಳೆ. ಯಜಮಾನರು ಇದ್ದಾಗಲೇ ಮದುವೆ ಮಾಡಬೇಕೆಂದಿ ದ್ದರು. ನಮಗೆ ಆ ಭಾಗ್ಯವಿಲ್ಲ. ಈಗಲೂ ಹುಡುಗಿಯ ಲಗ್ನವಾಗದೆ ಹುಡು ಗನ ಲಗ್ನ ಮಾಡಿದರೆ ಬಂಧುಗಳು ಆಡಿಕೊಳ್ಳುತ್ತಾರೆ. ನೀವು ಹಿರಿಯರು, ನೀವೇ ನೋಡಿ ! ” ಗಂಗಾಧರನು “ ಅದೆಲ್ಲಾ ಭಗವನ್ನಿಯಾಮಕ. ಅವಳಿಗೂ ಮದುವೆ ಯಾಗುತ್ತೆ. ಅದಕ್ಕೇನು ! ಈಗ ನಮ್ಮ ಹುಡುಗಿಯ ಮದುವೆ ಮಾಘಮಾಸಕ್ಕೆ ಸಿದ್ಧ ಮಾಡಿಬಿಟ್ಟಿದ್ದೇವೆ. ನೀವು ದೊಡ್ಡ ಮನಸ್ಸುಮಾಡಿ ಒಪ್ಪಿಕೊಳ್ಳಬೇಕು. ” ಪಾರ್ವತಮ್ಮನು ನಗು ಮುಖವನ್ನು ಮಾಡಿ ತಲೆ ತಗ್ಗಿಸಿದಳು. ನಾರಾ ಯಣನು ಮೌನವಾಗಿ ನಿಂತಿದ್ದನು. ಶ್ಯಾಮಲೆಯೂ ತಾಯಿಯ ಬಳಿಯಲ್ಲಿ ನಿಂತಿದ್ದಳು. ಗಂಗಾಧರರಾಯನು ಶ್ಯಾಮಲೆಯನ್ನು ಮಾತನಾಡಿಸಿದನು. ಕುಳಿ ತವರು ಮೇಲಕ್ಕೆದ್ದು “ ಹೋಗಿ ಬರುತ್ತೇನಮ್ಮಾ, ಒಳ್ಳೆಯ ದಿನ ನೋಡಿ ಲಗ್ನ ಪತ್ರಿಕೆ ಮಾಡೋಣ ” ಎಂದು ಹೇಳಿ ಹೊರಟನು. ನಾರಾಯಣನೂ ಅವರ ಹಿಂದೆ ಹೋದನು. ನಾರಾಯಣನ ಕಡೆ ತಿರುಗಿ “ ನಾಣಿ, ಬಾ ! ನಾನು ಹೋಟಲಿನಲ್ಲಿ ಇಳಿದಿದ್ದೇನೆ. ಭಾನುವಾರವಾಗಿದೆ. ಬಾ, ಅಲ್ಲಿಯ ವರೆಗೆ ಹೋಗಿಬರೋಣ ” ಎಂದು ಕರೆದನು. ನಾಣಿ ಯೂ ಅವನ ಜೊತೆಯಲ್ಲಿ ಹೊರಡಲು ಸಿದ್ಧನಾದನು. ಜಟಕಾ ಬಂಡಿಯಲ್ಲಿ ಇಬ್ಬರೂ ಹೋಗಿ ಕುಳಿತರು. ಗಂಗಾಧರನು ನಾಣಿಯ ಕಾಲೇಜಿನ ವ್ಯಾಸಂಗ, ಶ್ಯಾಮ ಲೆಯ ಓದು ಇವುಗಳನ್ನು ವಿಚಾರಿಸಿದನು. ಮಾತಿನ ಮಧ್ಯೆ ಗಂಗಾಧರನು, “ ಜೀವನಕ್ಕೆ ಏನು ಮಾಡುತ್ತೀರಿ ? ” ಎಂದು ಕೇಳಿದನು. ನಾಣಿಯು ನಗುತ್ತಾ “ ಅದೇ ದೊಡ್ಡ ಪ್ರಶ್ನೆ. ಹೇಗೋ ನಡೆಯುತ್ತಿದೆ ಅದೇ ಕಷ್ಟ ” ಎಂದನು. ಗಂಗಾಧರನು, “ ಹೌದು ಈ ಕಾಲದಲ್ಲಿ ಜೀವನದ ಪ್ರಶ್ನೆಯೇ ದೊಡ್ಡದು. ಆದರೂ ಹೇಗೋ ಆಗುತ್ತೆ. ನೀನು ವಿದ್ಯಾವಂತನಾಗಿದ್ದೀಯೆ, ಎಲ್ಲಿಯಾದರೂ ಶಿಫಾರಸ್ಸು ಮಾಡಿ ಒಳ್ಳೆಯ ಕೆಲಸ ಕೊಡಿಸುತ್ತೇನೆ ” ಎಂದನು. ಆ ಮಾತು ಅಲ್ಲಿಗೇ ಪೂರೈಸಿತು. ಗಾಡಿಯು ಮಾಡರ್ನ್ ಹೋಟೆಲ್ ಬಾಗಿಲಿನಲ್ಲಿ ನಿಂತಿತು. ಇಬ್ಬರೂ ಗಾಡಿಯಿಂದ ಇಳಿದರು. ಮಹಡಿಯ ಮೇಲಿನ ರೂಮಿನಲ್ಲಿ ಹೋಗಿ ಕುಳಿತುಕೊಂಡರು.<noinclude></noinclude> l4mabe3t3s329jxzwcdz01llwkdlxp8 324868 324818 2026-06-16T07:24:28Z A826 6806 /* Validated */ 324868 proofread-page text/x-wiki <noinclude><pagequality level="4" user="A826" />{{rh||ಚಿತ್ರಕೂಟ|೨೯}}</noinclude>ವಯಸ್ಕಳಾಗಿದ್ದಾಳೆ. ಯಜಮಾನರು ಇದ್ದಾಗಲೇ ಮದುವೆ ಮಾಡಬೇಕೆಂದಿ ದ್ದರು. ನಮಗೆ ಆ ಭಾಗ್ಯವಿಲ್ಲ. ಈಗಲೂ ಹುಡುಗಿಯ ಲಗ್ನವಾಗದೆ ಹುಡು ಗನ ಲಗ್ನ ಮಾಡಿದರೆ ಬಂಧುಗಳು ಆಡಿಕೊಳ್ಳುತ್ತಾರೆ. ನೀವು ಹಿರಿಯರು, ನೀವೇ ನೋಡಿ! " ಗಂಗಾಧರನು " ಅದೆಲ್ಲಾ ಭಗವನ್ನಿಯಾಮಕ. ಅವಳಿಗೂ ಮದುವೆ ಯಾಗುತ್ತೆ. ಅದಕ್ಕೇನು! ಈಗ ನಮ್ಮ ಹುಡುಗಿಯ ಮದುವೆ ಮಾಘಮಾಸಕ್ಕೆ ಸಿದ್ಧ ಮಾಡಿಬಿಟ್ಟಿದ್ದೇವೆ. ನೀವು ದೊಡ್ಡ ಮನಸ್ಸುಮಾಡಿ ಒಪ್ಪಿಕೊಳ್ಳಬೇಕು. " ಪಾರ್ವತಮ್ಮನು ನಗು ಮುಖವನ್ನು ಮಾಡಿ ತಲೆ ತಗ್ಗಿಸಿದಳು. ನಾರಾ ಯಣನು ಮೌನವಾಗಿ ನಿಂತಿದ್ದನು. ಶ್ಯಾಮಲೆಯೂ ತಾಯಿಯ ಬಳಿಯಲ್ಲಿ ನಿಂತಿದ್ದಳು. ಗಂಗಾಧರರಾಯನು ಶ್ಯಾಮಲೆಯನ್ನು ಮಾತನಾಡಿಸಿದನು. ಕುಳಿ ತವರು ಮೇಲಕ್ಕೆದ್ದು " ಹೋಗಿ ಬರುತ್ತೇನಮ್ಮಾ, ಒಳ್ಳೆಯ ದಿನ ನೋಡಿ ಲಗ್ನ ಪತ್ರಿಕೆ ಮಾಡೋಣ " ಎಂದು ಹೇಳಿ ಹೊರಟನು. ನಾರಾಯಣನೂ ಅವರ ಹಿಂದೆ ಹೋದನು. ನಾರಾಯಣನ ಕಡೆ ತಿರುಗಿ " ನಾಣಿ, ಬಾ! ನಾನು ಹೋಟಲಿನಲ್ಲಿ ಇಳಿದಿದ್ದೇನೆ. ಭಾನುವಾರವಾಗಿದೆ. ಬಾ, ಅಲ್ಲಿಯ ವರೆಗೆ ಹೋಗಿಬರೋಣ " ಎಂದು ಕರೆದನು. ನಾಣಿ ಯೂ ಅವನ ಜೊತೆಯಲ್ಲಿ ಹೊರಡಲು ಸಿದ್ಧನಾದನು. ಜಟಕಾ ಬಂಡಿಯಲ್ಲಿ ಇಬ್ಬರೂ ಹೋಗಿ ಕುಳಿತರು. ಗಂಗಾಧರನು ನಾಣಿಯ ಕಾಲೇಜಿನ ವ್ಯಾಸಂಗ, ಶ್ಯಾಮ ಲೆಯ ಓದು ಇವುಗಳನ್ನು ವಿಚಾರಿಸಿದನು. ಮಾತಿನ ಮಧ್ಯೆ ಗಂಗಾಧರನು, " ಜೀವನಕ್ಕೆ ಏನು ಮಾಡುತ್ತೀರಿ? " ಎಂದು ಕೇಳಿದನು. ನಾಣಿಯು ನಗುತ್ತಾ " ಅದೇ ದೊಡ್ಡ ಪ್ರಶ್ನೆ. ಹೇಗೋ ನಡೆಯುತ್ತಿದೆ ಅದೇ ಕಷ್ಟ " ಎಂದನು. ಗಂಗಾಧರನು, " ಹೌದು ಈ ಕಾಲದಲ್ಲಿ ಜೀವನದ ಪ್ರಶ್ನೆಯೇ ದೊಡ್ಡದು. ಆದರೂ ಹೇಗೋ ಆಗುತ್ತೆ. ನೀನು ವಿದ್ಯಾವಂತನಾಗಿದ್ದೀಯೆ, ಎಲ್ಲಿಯಾದರೂ ಶಿಫಾರಸ್ಸು ಮಾಡಿ ಒಳ್ಳೆಯ ಕೆಲಸ ಕೊಡಿಸುತ್ತೇನೆ " ಎಂದನು. ಆ ಮಾತು ಅಲ್ಲಿಗೇ ಪೂರೈಸಿತು. ಗಾಡಿಯು ಮಾಡರ್ನ್ ಹೋಟೆಲ್ ಬಾಗಿಲಿನಲ್ಲಿ ನಿಂತಿತು. ಇಬ್ಬರೂ ಗಾಡಿಯಿಂದ ಇಳಿದರು. ಮಹಡಿಯ ಮೇಲಿನ ರೂಮಿನಲ್ಲಿ ಹೋಗಿ ಕುಳಿತುಕೊಂಡರು.<noinclude></noinclude> 2hs8tflvw47bdq0p59oz2j4ie5v8ah6 324869 324868 2026-06-16T07:25:16Z A826 6806 324869 proofread-page text/x-wiki <noinclude><pagequality level="4" user="A826" />{{rh||ಚಿತ್ರಕೂಟ|೨೯}}</noinclude>ವಯಸ್ಕಳಾಗಿದ್ದಾಳೆ. ಯಜಮಾನರು ಇದ್ದಾಗಲೇ ಮದುವೆ ಮಾಡಬೇಕೆಂದಿದ್ದರು. ನಮಗೆ ಆ ಭಾಗ್ಯವಿಲ್ಲ. ಈಗಲೂ ಹುಡುಗಿಯ ಲಗ್ನವಾಗದೆ ಹುಡುಗನ ಲಗ್ನ ಮಾಡಿದರೆ ಬಂಧುಗಳು ಆಡಿಕೊಳ್ಳುತ್ತಾರೆ. ನೀವು ಹಿರಿಯರು, ನೀವೇ ನೋಡಿ! " ಗಂಗಾಧರನು " ಅದೆಲ್ಲಾ ಭಗವನ್ನಿಯಾಮಕ. ಅವಳಿಗೂ ಮದುವೆ ಯಾಗುತ್ತೆ. ಅದಕ್ಕೇನು! ಈಗ ನಮ್ಮ ಹುಡುಗಿಯ ಮದುವೆ ಮಾಘಮಾಸಕ್ಕೆ ಸಿದ್ಧ ಮಾಡಿಬಿಟ್ಟಿದ್ದೇವೆ. ನೀವು ದೊಡ್ಡ ಮನಸ್ಸುಮಾಡಿ ಒಪ್ಪಿಕೊಳ್ಳಬೇಕು. " ಪಾರ್ವತಮ್ಮನು ನಗು ಮುಖವನ್ನು ಮಾಡಿ ತಲೆ ತಗ್ಗಿಸಿದಳು. ನಾರಾ ಯಣನು ಮೌನವಾಗಿ ನಿಂತಿದ್ದನು. ಶ್ಯಾಮಲೆಯೂ ತಾಯಿಯ ಬಳಿಯಲ್ಲಿ ನಿಂತಿದ್ದಳು. ಗಂಗಾಧರರಾಯನು ಶ್ಯಾಮಲೆಯನ್ನು ಮಾತನಾಡಿಸಿದನು. ಕುಳಿತವರು ಮೇಲಕ್ಕೆದ್ದು " ಹೋಗಿ ಬರುತ್ತೇನಮ್ಮಾ, ಒಳ್ಳೆಯ ದಿನ ನೋಡಿ ಲಗ್ನ ಪತ್ರಿಕೆ ಮಾಡೋಣ " ಎಂದು ಹೇಳಿ ಹೊರಟನು. ನಾರಾಯಣನೂ ಅವರ ಹಿಂದೆ ಹೋದನು. ನಾರಾಯಣನ ಕಡೆ ತಿರುಗಿ " ನಾಣಿ, ಬಾ! ನಾನು ಹೋಟಲಿನಲ್ಲಿ ಇಳಿದಿದ್ದೇನೆ. ಭಾನುವಾರವಾಗಿದೆ. ಬಾ, ಅಲ್ಲಿಯವರೆಗೆ ಹೋಗಿಬರೋಣ " ಎಂದು ಕರೆದನು. ನಾಣಿಯೂ ಅವನ ಜೊತೆಯಲ್ಲಿ ಹೊರಡಲು ಸಿದ್ಧನಾದನು. ಜಟಕಾ ಬಂಡಿಯಲ್ಲಿ ಇಬ್ಬರೂ ಹೋಗಿ ಕುಳಿತರು. ಗಂಗಾಧರನು ನಾಣಿಯ ಕಾಲೇಜಿನ ವ್ಯಾಸಂಗ, ಶ್ಯಾಮಲೆಯ ಓದು ಇವುಗಳನ್ನು ವಿಚಾರಿಸಿದನು. ಮಾತಿನ ಮಧ್ಯೆ ಗಂಗಾಧರನು, " ಜೀವನಕ್ಕೆ ಏನು ಮಾಡುತ್ತೀರಿ? " ಎಂದು ಕೇಳಿದನು. ನಾಣಿಯು ನಗುತ್ತಾ " ಅದೇ ದೊಡ್ಡ ಪ್ರಶ್ನೆ. ಹೇಗೋ ನಡೆಯುತ್ತಿದೆ ಅದೇ ಕಷ್ಟ " ಎಂದನು. ಗಂಗಾಧರನು, " ಹೌದು ಈ ಕಾಲದಲ್ಲಿ ಜೀವನದ ಪ್ರಶ್ನೆಯೇ ದೊಡ್ಡದು. ಆದರೂ ಹೇಗೋ ಆಗುತ್ತೆ. ನೀನು ವಿದ್ಯಾವಂತನಾಗಿದ್ದೀಯೆ, ಎಲ್ಲಿಯಾದರೂ ಶಿಫಾರಸ್ಸು ಮಾಡಿ ಒಳ್ಳೆಯ ಕೆಲಸ ಕೊಡಿಸುತ್ತೇನೆ " ಎಂದನು. ಆ ಮಾತು ಅಲ್ಲಿಗೇ ಪೂರೈಸಿತು. ಗಾಡಿಯು ಮಾಡರ್ನ್ ಹೋಟೆಲ್ ಬಾಗಿಲಿನಲ್ಲಿ ನಿಂತಿತು. ಇಬ್ಬರೂ ಗಾಡಿಯಿಂದ ಇಳಿದರು. ಮಹಡಿಯ ಮೇಲಿನ ರೂಮಿನಲ್ಲಿ ಹೋಗಿ ಕುಳಿತುಕೊಂಡರು.<noinclude></noinclude> 6j5cm7uws5nsqiy4zj1nrwbsz74vtnw ಪುಟ:Chitrakuuta (1954).djvu/೪೫ 104 120872 324786 2026-06-16T04:53:56Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ತಿಂ ಚಿತ್ರಕೂಟ ಗಂಗಾಧೆರನು ನಾಣಿಯನ್ನು ಕುರಿತು " ನಾಣೀ! ಇಲ್ಲಿಯೇ ಊಟ ಮಾಡಬಹುದಲ್ಲಾ ? ” ಎಂದನು.” ನಾಣಿಯ, « ಇಲ್ಲ ರಾಯರೇ, ನಾನು ಮನೆಗೇ ಹೋಗಬೇಕು. ನೀವು ದೊಡ್ಡವರು. ನನ್ಮು ತಂದೆಯವರ ಸೆ ್ಸೈ ಹಿತರು. ನಿಮಗೊಂದು ಮಾತನ್... 324786 proofread-page text/x-wiki <noinclude><pagequality level="1" user="Nihar Chakravarti" /></noinclude>ತಿಂ ಚಿತ್ರಕೂಟ ಗಂಗಾಧೆರನು ನಾಣಿಯನ್ನು ಕುರಿತು " ನಾಣೀ! ಇಲ್ಲಿಯೇ ಊಟ ಮಾಡಬಹುದಲ್ಲಾ ? ” ಎಂದನು.” ನಾಣಿಯ, « ಇಲ್ಲ ರಾಯರೇ, ನಾನು ಮನೆಗೇ ಹೋಗಬೇಕು. ನೀವು ದೊಡ್ಡವರು. ನನ್ಮು ತಂದೆಯವರ ಸೆ ್ಸೈ ಹಿತರು. ನಿಮಗೊಂದು ಮಾತನ್ನು ಹೇಳ ಬೇಕಾಗಿದೆ ಎಂದನು. « ಹೇಳು ನಾಣಿ! ಏನೂ ಸಂಕೋಚಸಟ್ಟುಕೊಳ್ಳ ಬೇಡ! ? «4 ಏನೂ ಇಲ್ಲ. ಅದು ನನ್ನ ಮದುವೆಯ ಮಾತು. ತಾವು ನಮ್ಮ ತಾಯಿ ಯೆವರೊಂದಿಗೆ ಹೇಳಿದ್ದನ್ನೆಲ್ಲಾ ಕೇಳಿದೆ. ನಾನು ತಮ್ಮ ಮನೆಗೆ ಬಂದಿ ದ್ಹಾಗಲೇ ಆ ಮಾತು ಸ್ಪಷ್ಟವಾಗಿತ್ತು. ನಾನು ಈಗ ಮದುವೆಯಾಗುವುದು ಸರಿಯಲ್ಲ! ಅದು ಸ ಸಾಧ್ಯವೂ ಇಲ್ಲ. ” ಗಂಗಾಧರರಾಯನು ಗಾಬರಿಯಿಂದ, “ ಇದೇನು ಎಲ್ಲಾ ನಿಶ್ಚ ಯವಾಗಿದೆ ಯಲ್ಲಾ, ನೀನು ಹುಡುಗಿಯನ್ನು ಬ! 4 ಎಂದು 2 5 ಚೆನ್ನಾಗಿದ್ದಾ ಳೆ. ಆದರೆ ನನ್ನ ಪಾ ಸ್ಪಿತಿಯಲ್ಲಿ ಮದುವೆಯಾಗು ವಂತಿಲ್ಲ. ” ' " ದೊಡ್ಡ ವರು ಹೇಳಿದ್ದ ನ್ನು ಕೇಳಬೇಕು. ನಿನ್ನ ಸ್ಥಿತಿ ಏನಾಗಿದೆ. ಒಳ್ಳೆಯ ವಿದ್ಯಾವಂತ. ಯಾನ ದೇಶಕ್ಕೆ ಹೋದರೂ ತ್ರಿ ಮಾಡಬಲ್ಲ. ನಿನಗೇನು ಕಷ್ಟ?” lt ಖಿ ! ಸಂಸಾರದ ಕಷ್ಟಗಳು ಬೇಕಾದೆಸ್ಟಿವೆ ಯೋಗ ತೆಯಿದ್ದರೆ ಸಾಲದು. ನನ್ನಂತೆ ಯೋಗ್ಯತೆ ಸಂಪಾದಿಸಿರುವ ಎಷ್ಟೋ ಮಂದಿ ತರುಣರು ಜೀವನಕ್ಕಿಲ್ಲದೇ ಅಲೆಯುತ್ತಿದ್ದಾರೆ. ನಾನು ಏಕಾಕಿಯಲ್ಲ. ತಾಯ್ಕಿ ತಂಗಿ ಇಬ್ಬರು ಇದ್ದಾರೆ. ತಮ್ಮ ಮಗಳನ್ನು ಮದುವೆಯಾಗಿ ಇಲ್ಲಿ ತಂದಿಟ್ಟುಕೊಂಡರೆ ನಾನು ಹೇಗೆ ತಾನೇ ಈ ಸಂಸಾರ ನಿರ್ವಹಣ ಮಾಡಲಾದೀತು. ಯಾರಾದರೂ ಪುಣ್ಯವಂತರನ್ನು ನೋಡಿ ನಿಮ್ಮ ಮಗಳಿಗೆ ಲಗ್ನ ಮಾಡಿ. ಹುಡುಗಿಯು ಸುಖ ವಾಗಿ ಬದುಕಲಿ” ಗಂಗಾಧರರಾಯನಿಗೆ ಮನಸ್ಸು ಒಡೆದುಹೋಯಿತು. ಕೋಪ ಬಂತು. ಹಾಗೆಯೇ ತಡೆದುಕೊಂಡು « Re ನೀನು ಹುಡುಗ. ಚೆನ್ನಾಗಿ ಯೋಚನೆ ಮಾಡು. ನಿಮ್ಮ ತಾಯಿಯನರೊಡನೆಯೂ ಆಲೋಚನೆ ಮಾಡು. ಭಗವದಿಜ್ಛೆ ಇದ್ದಂತಾಗುವುದು ” ಎಂದನು.<noinclude></noinclude> gxm9mxqxlv07uszx0fvvidjdf2q80cs 324819 324786 2026-06-16T05:24:33Z Nihar Chakravarti 8555 /* Proofread */ 324819 proofread-page text/x-wiki <noinclude><pagequality level="3" user="Nihar Chakravarti" />{{rh|೩೦||ಚಿತ್ರಕೂಟ}}</noinclude>ಗಂಗಾಧರನು ನಾಣಿಯನ್ನು ಕುರಿತು, “ ನಾಣೀ ! ಇಲ್ಲಿಯೇ ಊಟ ಮಾಡಬಹುದಲ್ಲಾ ? ” ಎಂದನು. ನಾಣಿಯು, “ ಇಲ್ಲ ರಾಯರೇ, ನಾನು ಮನೆಗೇ ಹೋಗಬೇಕು. ನೀವು ದೊಡ್ಡವರು. ನಮ್ಮ ತಂದೆಯವರ ಸ್ನೇಹಿತರು. ನಿಮಗೊಂದು ಮಾತನ್ನು ಹೇಳ ಬೇಕಾಗಿದೆ ” ಎಂದನು. “ ಹೇಳು ನಾಣಿ ! ಏನೂ ಸಂಕೋಚಪಟ್ಟುಕೊಳ್ಳಬೇಡ ! ” “ ಏನೂ ಇಲ್ಲ. ಅದು ನನ್ನ ಮದುವೆಯ ಮಾತು. ತಾವು ನಮ್ಮ ತಾಯಿ ಯವರೊಂದಿಗೆ ಹೇಳಿದ್ದನ್ನೆಲ್ಲಾ ಕೇಳಿದೆ. ನಾನು ತಮ್ಮ ಮನೆಗೆ ಬಂದಿ ದ್ದಾಗಲೇ ಆ ಮಾತು ಸ್ಪಷ್ಟವಾಗಿತ್ತು. ನಾನು ಈಗ ಮದುವೆಯಾಗುವುದು ಸರಿಯಲ್ಲ ! ಅದು ಸಾಧ್ಯವೂ ಇಲ್ಲ. ” ಗಂಗಾಧರರಾಯನು ಗಾಬರಿಯಿಂದ, “ ಇದೇನು ಎಲ್ಲಾ ನಿಶ್ಚಯವಾಗಿದೆ ಯಲ್ಲಾ, ನೀನು ಹುಡುಗಿಯನ್ನು ಒಪ್ಪಲಿಲ್ಲವೇ ? ” ಎಂದು ಕೇಳಿದನು. “ ಚೆನ್ನಾಗಿದ್ದಾಳೆ. ಆದರೆ ನನ್ನ ಈ ಸ್ಥಿತಿಯಲ್ಲಿ ಮದುವೆಯಾಗು ವಂತಿಲ್ಲ. ” “ ದೊಡ್ಡವರು ಹೇಳಿದ್ದನ್ನು ಕೇಳಬೇಕು. ನಿನ್ನ ಸ್ಥಿತಿ ಏನಾಗಿದೆ. ಒಳ್ಳೆಯ ವಿದ್ಯಾವಂತ. ಯಾವ ದೇಶಕ್ಕೆ ಹೋದರೂ ಜೀವನ ಮಾಡಬಲ್ಲೆ. ನಿನಗೇನು ಕಷ್ಟ ? ” “ ರಾಯರೇ ! ಸಂಸಾರದ ಕಷ್ಟಗಳು ಬೇಕಾದಷ್ಟಿವೆ ಯೋಗ್ಯತೆಯಿದ್ದರೆ ಸಾಲದು. ನನ್ನಂತೆ ಯೋಗ್ಯತೆ ಸಂಪಾದಿಸಿರುವ ಎಷ್ಟೋ ಮಂದಿ ತರುಣರು ಜೀವನಕ್ಕಿಲ್ಲದೇ ಅಲೆಯುತ್ತಿದ್ದಾರೆ. ನಾನು ಏಕಾಕಿಯಲ್ಲ. ತಾಯಿ, ತಂಗಿ ಇಬ್ಬರು ಇದ್ದಾರೆ. ತಮ್ಮ ಮಗಳನ್ನು ಮದುವೆಯಾಗಿ ಇಲ್ಲಿ ತಂದಿಟ್ಟುಕೊಂಡರೆ ನಾನು ಹೇಗೆ ತಾನೇ ಈ ಸಂಸಾರ ನಿರ್ವಹಣ ಮಾಡಲಾದೀತು. ಯಾರಾದರೂ ಪುಣ್ಯವಂತರನ್ನು ನೋಡಿ ನಿಮ್ಮ ಮಗಳಿಗೆ ಲಗ್ನ ಮಾಡಿ. ಹುಡುಗಿಯು ಸುಖ ವಾಗಿ ಬದುಕಲಿ ” ಗಂಗಾಧರರಾಯನಿಗೆ ಮನಸ್ಸು ಒಡೆದುಹೋಯಿತು. ಕೋಪ ಬಂತು. ಹಾಗೆಯೇ ತಡೆದುಕೊಂಡು “ ನಾಣಿ ! ನೀನು ಹುಡುಗ. ಚೆನ್ನಾಗಿ ಯೋಚನೆ ಮಾಡು. ನಿಮ್ಮ ತಾಯಿಯವರೊಡನೆಯೂ ಆಲೋಚನೆ ಮಾಡು. ಭಗವದಿಚ್ಛೆ ಇದ್ದಂತಾಗುವುದು ” ಎಂದನು.<noinclude></noinclude> 2eujlt8ptvjdoxtg7akug00euy50ff3 324820 324819 2026-06-16T05:24:51Z Nihar Chakravarti 8555 324820 proofread-page text/x-wiki <noinclude><pagequality level="3" user="Nihar Chakravarti" />{{rh|೩೦|ಚಿತ್ರಕೂಟ}}</noinclude>ಗಂಗಾಧರನು ನಾಣಿಯನ್ನು ಕುರಿತು, “ ನಾಣೀ ! ಇಲ್ಲಿಯೇ ಊಟ ಮಾಡಬಹುದಲ್ಲಾ ? ” ಎಂದನು. ನಾಣಿಯು, “ ಇಲ್ಲ ರಾಯರೇ, ನಾನು ಮನೆಗೇ ಹೋಗಬೇಕು. ನೀವು ದೊಡ್ಡವರು. ನಮ್ಮ ತಂದೆಯವರ ಸ್ನೇಹಿತರು. ನಿಮಗೊಂದು ಮಾತನ್ನು ಹೇಳ ಬೇಕಾಗಿದೆ ” ಎಂದನು. “ ಹೇಳು ನಾಣಿ ! ಏನೂ ಸಂಕೋಚಪಟ್ಟುಕೊಳ್ಳಬೇಡ ! ” “ ಏನೂ ಇಲ್ಲ. ಅದು ನನ್ನ ಮದುವೆಯ ಮಾತು. ತಾವು ನಮ್ಮ ತಾಯಿ ಯವರೊಂದಿಗೆ ಹೇಳಿದ್ದನ್ನೆಲ್ಲಾ ಕೇಳಿದೆ. ನಾನು ತಮ್ಮ ಮನೆಗೆ ಬಂದಿ ದ್ದಾಗಲೇ ಆ ಮಾತು ಸ್ಪಷ್ಟವಾಗಿತ್ತು. ನಾನು ಈಗ ಮದುವೆಯಾಗುವುದು ಸರಿಯಲ್ಲ ! ಅದು ಸಾಧ್ಯವೂ ಇಲ್ಲ. ” ಗಂಗಾಧರರಾಯನು ಗಾಬರಿಯಿಂದ, “ ಇದೇನು ಎಲ್ಲಾ ನಿಶ್ಚಯವಾಗಿದೆ ಯಲ್ಲಾ, ನೀನು ಹುಡುಗಿಯನ್ನು ಒಪ್ಪಲಿಲ್ಲವೇ ? ” ಎಂದು ಕೇಳಿದನು. “ ಚೆನ್ನಾಗಿದ್ದಾಳೆ. ಆದರೆ ನನ್ನ ಈ ಸ್ಥಿತಿಯಲ್ಲಿ ಮದುವೆಯಾಗು ವಂತಿಲ್ಲ. ” “ ದೊಡ್ಡವರು ಹೇಳಿದ್ದನ್ನು ಕೇಳಬೇಕು. ನಿನ್ನ ಸ್ಥಿತಿ ಏನಾಗಿದೆ. ಒಳ್ಳೆಯ ವಿದ್ಯಾವಂತ. ಯಾವ ದೇಶಕ್ಕೆ ಹೋದರೂ ಜೀವನ ಮಾಡಬಲ್ಲೆ. ನಿನಗೇನು ಕಷ್ಟ ? ” “ ರಾಯರೇ ! ಸಂಸಾರದ ಕಷ್ಟಗಳು ಬೇಕಾದಷ್ಟಿವೆ ಯೋಗ್ಯತೆಯಿದ್ದರೆ ಸಾಲದು. ನನ್ನಂತೆ ಯೋಗ್ಯತೆ ಸಂಪಾದಿಸಿರುವ ಎಷ್ಟೋ ಮಂದಿ ತರುಣರು ಜೀವನಕ್ಕಿಲ್ಲದೇ ಅಲೆಯುತ್ತಿದ್ದಾರೆ. ನಾನು ಏಕಾಕಿಯಲ್ಲ. ತಾಯಿ, ತಂಗಿ ಇಬ್ಬರು ಇದ್ದಾರೆ. ತಮ್ಮ ಮಗಳನ್ನು ಮದುವೆಯಾಗಿ ಇಲ್ಲಿ ತಂದಿಟ್ಟುಕೊಂಡರೆ ನಾನು ಹೇಗೆ ತಾನೇ ಈ ಸಂಸಾರ ನಿರ್ವಹಣ ಮಾಡಲಾದೀತು. ಯಾರಾದರೂ ಪುಣ್ಯವಂತರನ್ನು ನೋಡಿ ನಿಮ್ಮ ಮಗಳಿಗೆ ಲಗ್ನ ಮಾಡಿ. ಹುಡುಗಿಯು ಸುಖ ವಾಗಿ ಬದುಕಲಿ ” ಗಂಗಾಧರರಾಯನಿಗೆ ಮನಸ್ಸು ಒಡೆದುಹೋಯಿತು. ಕೋಪ ಬಂತು. ಹಾಗೆಯೇ ತಡೆದುಕೊಂಡು “ ನಾಣಿ ! ನೀನು ಹುಡುಗ. ಚೆನ್ನಾಗಿ ಯೋಚನೆ ಮಾಡು. ನಿಮ್ಮ ತಾಯಿಯವರೊಡನೆಯೂ ಆಲೋಚನೆ ಮಾಡು. ಭಗವದಿಚ್ಛೆ ಇದ್ದಂತಾಗುವುದು ” ಎಂದನು.<noinclude></noinclude> 6vzzeat8hrwasanw4xohnwbpc13xqgs 324870 324820 2026-06-16T07:26:05Z A826 6806 /* Validated */ 324870 proofread-page text/x-wiki <noinclude><pagequality level="4" user="A826" />{{rh|೩೦|ಚಿತ್ರಕೂಟ}}</noinclude>ಗಂಗಾಧರನು ನಾಣಿಯನ್ನು ಕುರಿತು, “ ನಾಣೀ ! ಇಲ್ಲಿಯೇ ಊಟ ಮಾಡಬಹುದಲ್ಲಾ ? ” ಎಂದನು. ನಾಣಿಯು, “ ಇಲ್ಲ ರಾಯರೇ, ನಾನು ಮನೆಗೇ ಹೋಗಬೇಕು. ನೀವು ದೊಡ್ಡವರು. ನಮ್ಮ ತಂದೆಯವರ ಸ್ನೇಹಿತರು. ನಿಮಗೊಂದು ಮಾತನ್ನು ಹೇಳ ಬೇಕಾಗಿದೆ ” ಎಂದನು. “ ಹೇಳು ನಾಣಿ ! ಏನೂ ಸಂಕೋಚಪಟ್ಟುಕೊಳ್ಳಬೇಡ ! ” “ ಏನೂ ಇಲ್ಲ. ಅದು ನನ್ನ ಮದುವೆಯ ಮಾತು. ತಾವು ನಮ್ಮ ತಾಯಿಯವರೊಂದಿಗೆ ಹೇಳಿದ್ದನ್ನೆಲ್ಲಾ ಕೇಳಿದೆ. ನಾನು ತಮ್ಮ ಮನೆಗೆ ಬಂದಿ ದ್ದಾಗಲೇ ಆ ಮಾತು ಸ್ಪಷ್ಟವಾಗಿತ್ತು. ನಾನು ಈಗ ಮದುವೆಯಾಗುವುದು ಸರಿಯಲ್ಲ ! ಅದು ಸಾಧ್ಯವೂ ಇಲ್ಲ. ” ಗಂಗಾಧರರಾಯನು ಗಾಬರಿಯಿಂದ, “ ಇದೇನು ಎಲ್ಲಾ ನಿಶ್ಚಯವಾಗಿದೆಯಲ್ಲಾ, ನೀನು ಹುಡುಗಿಯನ್ನು ಒಪ್ಪಲಿಲ್ಲವೇ ? ” ಎಂದು ಕೇಳಿದನು. “ ಚೆನ್ನಾಗಿದ್ದಾಳೆ. ಆದರೆ ನನ್ನ ಈ ಸ್ಥಿತಿಯಲ್ಲಿ ಮದುವೆಯಾಗು ವಂತಿಲ್ಲ. ” “ ದೊಡ್ಡವರು ಹೇಳಿದ್ದನ್ನು ಕೇಳಬೇಕು. ನಿನ್ನ ಸ್ಥಿತಿ ಏನಾಗಿದೆ. ಒಳ್ಳೆಯ ವಿದ್ಯಾವಂತ. ಯಾವ ದೇಶಕ್ಕೆ ಹೋದರೂ ಜೀವನ ಮಾಡಬಲ್ಲೆ. ನಿನಗೇನು ಕಷ್ಟ ? ” “ ರಾಯರೇ ! ಸಂಸಾರದ ಕಷ್ಟಗಳು ಬೇಕಾದಷ್ಟಿವೆ ಯೋಗ್ಯತೆಯಿದ್ದರೆ ಸಾಲದು. ನನ್ನಂತೆ ಯೋಗ್ಯತೆ ಸಂಪಾದಿಸಿರುವ ಎಷ್ಟೋ ಮಂದಿ ತರುಣರು ಜೀವನಕ್ಕಿಲ್ಲದೇ ಅಲೆಯುತ್ತಿದ್ದಾರೆ. ನಾನು ಏಕಾಕಿಯಲ್ಲ. ತಾಯಿ, ತಂಗಿ ಇಬ್ಬರು ಇದ್ದಾರೆ. ತಮ್ಮ ಮಗಳನ್ನು ಮದುವೆಯಾಗಿ ಇಲ್ಲಿ ತಂದಿಟ್ಟುಕೊಂಡರೆ ನಾನು ಹೇಗೆ ತಾನೇ ಈ ಸಂಸಾರ ನಿರ್ವಹಣ ಮಾಡಲಾದೀತು. ಯಾರಾದರೂ ಪುಣ್ಯವಂತರನ್ನು ನೋಡಿ ನಿಮ್ಮ ಮಗಳಿಗೆ ಲಗ್ನ ಮಾಡಿ. ಹುಡುಗಿಯು ಸುಖ ವಾಗಿ ಬದುಕಲಿ ” ಗಂಗಾಧರರಾಯನಿಗೆ ಮನಸ್ಸು ಒಡೆದುಹೋಯಿತು. ಕೋಪ ಬಂತು. ಹಾಗೆಯೇ ತಡೆದುಕೊಂಡು “ ನಾಣಿ ! ನೀನು ಹುಡುಗ. ಚೆನ್ನಾಗಿ ಯೋಚನೆ ಮಾಡು. ನಿಮ್ಮ ತಾಯಿಯವರೊಡನೆಯೂ ಆಲೋಚನೆ ಮಾಡು. ಭಗವದಿಚ್ಛೆ ಇದ್ದಂತಾಗುವುದು ” ಎಂದನು.<noinclude></noinclude> cdtj5mm3xpwso08smizpzeph6nfay34 ಪುಟ:Chitrakuuta (1954).djvu/೪೬ 104 120873 324787 2026-06-16T04:54:02Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಚಿತ್ರ ಕೂಟ ೧ ನಾರಾಯಣನು ವಂದನೆ ಮಾಡಿ ಮನೆಗೆ ಹೊರಟುಹೋದನು. ಮನೆಗೆ ಹೋಗಿ ತಾಯಿಯೊಡನೆ ಎಲ್ಲಾ ಸಮಾಚಾರಗಳನ ನ್ನೂ ತನ್ನ ನಿರ್ಧಾರವನ್ನೂ ತಿಳಿಸಿದನು. ಪಾರ್ವತಮ್ಮನವರ ಮನಸ್ಸು ಆ ಹಡಗಿ ತನ್ನ ಮಗನಿಗೆ ಮದುವೆಯಾದರೂ ಆಗ... 324787 proofread-page text/x-wiki <noinclude><pagequality level="1" user="Nihar Chakravarti" /></noinclude>ಚಿತ್ರ ಕೂಟ ೧ ನಾರಾಯಣನು ವಂದನೆ ಮಾಡಿ ಮನೆಗೆ ಹೊರಟುಹೋದನು. ಮನೆಗೆ ಹೋಗಿ ತಾಯಿಯೊಡನೆ ಎಲ್ಲಾ ಸಮಾಚಾರಗಳನ ನ್ನೂ ತನ್ನ ನಿರ್ಧಾರವನ್ನೂ ತಿಳಿಸಿದನು. ಪಾರ್ವತಮ್ಮನವರ ಮನಸ್ಸು ಆ ಹಡಗಿ ತನ್ನ ಮಗನಿಗೆ ಮದುವೆಯಾದರೂ ಆಗಲಿ ಎಂದಿತ್ತು. ಆದರೆ ಮಗನ ನಿರ್ಧಾ ರವು ಸರಿಯೆಂದು ಭಾವಿಸಿದಳು. ಗಂಗಾಧೆರರಾಯನು ಮೈಸೂರಿಗೆ ಹಿಂದಿರುಗಿ ಹೋಗಿ ಎಲ್ಲ ಸಂಗತಿ ಯನ್ನೂ ತನ್ನ ಹೆಂಡತಿಗೆ ತಿಳಿಸಿದನು. ಮದುವೆಯ ವಿಷಯದಲ್ಲಿ ಮನಸ್ಸನ್ನು ಖಚಿತ "ಮಾಡಿಕೊಂಡಿದ್ದ ಕಮಲಮ ನವರಿಗೆ ಆಶಾಭಂಗವಾಯಿತು. ಕಮಲ ಮ್ಮನ ಮನಸಿ ನಲ್ಲಿ, ಆ “ಹುಡುಗನನ್ನು ಬಿಡಲು ಇಷ್ಟವಿರಲಿಲ್ಲ. ಹುಡುಗನೂ ತಾಯಿಯೂ 2 ವರದಕ್ಷಿಣೆಯನ್ನು ಸ ಮಾಡಬೇಕೆಂದು ಆಲೋಚಿಸಿ ರಬಹುದು ; ವರದಕ್ಷಿಣೆ ಕೊಟ್ಟ ರೂ 'ಬಾಧಕವಿಲ್ಲ. ಹುಡುಗಿಗೆ ತಕ್ಕ ವರ, ಆದ್ದ ರಿಂದ ಆ ಸರೋಜ ಜನ ೫2 ಸ್ತ್ರಿಯನ್ನು ಹಿಡಿದು ಈ ಮದುವೆಯನ್ನು ಸಾಧಿಸಲೇಬೇಕು ಎಂದು ನಿರ್ಧಾರ "ಮಾಡಿಕೊಂಡಳು.<noinclude></noinclude> e3m89hbtyxfeu7hm3ut6t84r43dtem4 324821 324787 2026-06-16T05:26:49Z Nihar Chakravarti 8555 /* Proofread */ 324821 proofread-page text/x-wiki <noinclude><pagequality level="3" user="Nihar Chakravarti" />{{rh||ಚಿತ್ರಕೂಟ|೩೧}}</noinclude>ನಾರಾಯಣನು ವಂದನೆ ಮಾಡಿ ಮನೆಗೆ ಹೊರಟುಹೋದನು. ಮನೆಗೆ ಹೋಗಿ ತಾಯಿಯೊಡನೆ ಎಲ್ಲಾ ಸಮಾಚಾರಗಳನ್ನೂ ತನ್ನ ನಿರ್ಧಾರವನ್ನೂ ತಿಳಿಸಿದನು. ಪಾರ್ವತಮ್ಮನವರ ಮನಸ್ಸು ಆ ಹುಡುಗಿ ತನ್ನ ಮಗನಿಗೆ ಮದುವೆಯಾದರೂ ಆಗಲಿ ಎಂದಿತ್ತು. ಆದರೆ ಮಗನ ನಿರ್ಧಾರವು ಸರಿಯೆಂದು ಭಾವಿಸಿದಳು. ಗಂಗಾಧರರಾಯನು ಮೈಸೂರಿಗೆ ಹಿಂದಿರುಗಿ ಹೋಗಿ ಎಲ್ಲ ಸಂಗತಿಯನ್ನೂ ತನ್ನ ಹೆಂಡತಿಗೆ ತಿಳಿಸಿದನು. ಮದುವೆಯ ವಿಷಯದಲ್ಲಿ ಮನಸ್ಸನ್ನು ಖಚಿತ ಮಾಡಿಕೊಂಡಿದ್ದ ಕಮಲಮ್ಮನವರಿಗೆ ಆಶಾಭಂಗವಾಯಿತು. ಕಮಲಮ್ಮನ ಮನಸ್ಸಿನಲ್ಲಿ, ಆ ಹುಡುಗನನ್ನು ಬಿಡಲು ಇಷ್ಟವಿರಲಿಲ್ಲ. ಹುಡುಗನೂ ತಾಯಿಯೋ ಸೇರಿ ವರದಕ್ಷಿಣೆಯನ್ನು ವಸೂಲು ಮಾಡಬೇಕೆಂದು ಆಲೋಚಿಸಿರಬಹುದು ; ವರದಕ್ಷಿಣೆ ಕೊಟ್ಟರೂ ಬಾಧಕವಿಲ್ಲ. ಹುಡುಗಿಗೆ ತಕ್ಕ ವರ. ಆದ್ದರಿಂದ ಆ ಪುರೋಹಿತ ರಾಮಾಶಾಸ್ತ್ರಿಯನ್ನು ಹಿಡಿದು ಈ ಮದುವೆಯನ್ನು ಸಾಧಿಸಲೇಬೇಕು, ಎಂದು ನಿರ್ಧಾರ ಮಾಡಿಕೊಂಡಳು.<noinclude></noinclude> 2z6ifitj22m3iyyhotlyq99my4r2qxo 324871 324821 2026-06-16T07:26:34Z A826 6806 /* Validated */ 324871 proofread-page text/x-wiki <noinclude><pagequality level="4" user="A826" />{{rh||ಚಿತ್ರಕೂಟ|೩೧}}</noinclude>ನಾರಾಯಣನು ವಂದನೆ ಮಾಡಿ ಮನೆಗೆ ಹೊರಟುಹೋದನು. ಮನೆಗೆ ಹೋಗಿ ತಾಯಿಯೊಡನೆ ಎಲ್ಲಾ ಸಮಾಚಾರಗಳನ್ನೂ ತನ್ನ ನಿರ್ಧಾರವನ್ನೂ ತಿಳಿಸಿದನು. ಪಾರ್ವತಮ್ಮನವರ ಮನಸ್ಸು ಆ ಹುಡುಗಿ ತನ್ನ ಮಗನಿಗೆ ಮದುವೆಯಾದರೂ ಆಗಲಿ ಎಂದಿತ್ತು. ಆದರೆ ಮಗನ ನಿರ್ಧಾರವು ಸರಿಯೆಂದು ಭಾವಿಸಿದಳು. ಗಂಗಾಧರರಾಯನು ಮೈಸೂರಿಗೆ ಹಿಂದಿರುಗಿ ಹೋಗಿ ಎಲ್ಲ ಸಂಗತಿಯನ್ನೂ ತನ್ನ ಹೆಂಡತಿಗೆ ತಿಳಿಸಿದನು. ಮದುವೆಯ ವಿಷಯದಲ್ಲಿ ಮನಸ್ಸನ್ನು ಖಚಿತ ಮಾಡಿಕೊಂಡಿದ್ದ ಕಮಲಮ್ಮನವರಿಗೆ ಆಶಾಭಂಗವಾಯಿತು. ಕಮಲಮ್ಮನ ಮನಸ್ಸಿನಲ್ಲಿ, ಆ ಹುಡುಗನನ್ನು ಬಿಡಲು ಇಷ್ಟವಿರಲಿಲ್ಲ. ಹುಡುಗನೂ ತಾಯಿಯೋ ಸೇರಿ ವರದಕ್ಷಿಣೆಯನ್ನು ವಸೂಲು ಮಾಡಬೇಕೆಂದು ಆಲೋಚಿಸಿರಬಹುದು; ವರದಕ್ಷಿಣೆ ಕೊಟ್ಟರೂ ಬಾಧಕವಿಲ್ಲ. ಹುಡುಗಿಗೆ ತಕ್ಕ ವರ. ಆದ್ದರಿಂದ ಆ ಪುರೋಹಿತ ರಾಮಾಶಾಸ್ತ್ರಿಯನ್ನು ಹಿಡಿದು ಈ ಮದುವೆಯನ್ನು ಸಾಧಿಸಲೇಬೇಕು, ಎಂದು ನಿರ್ಧಾರ ಮಾಡಿಕೊಂಡಳು.<noinclude></noinclude> clcbs1h3reyqt8j1fyvtzat2msxjle5 ಪುಟ:Chitrakuuta (1954).djvu/೪೭ 104 120874 324788 2026-06-16T04:54:07Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೬ ನಾರಾಯಣನಿಗೆ ಪರೀಕ್ಷೆಯಲ್ಲಿ ತೇರ್ಗಡೆಯಾಯಿತು. ಮುಂದೇನು ಮಾಡಬೇಕೆಂಬುದು ದೊಡ್ಡ ಸಮಸ್ಯೆಯಾಯಿತು. ೧೯೪೨. ಮಹಾತ್ಮ್ಮಾ ಗಾಂಧಿಯವರಿಗೂ ಬ್ರಿಟಷ್‌ ಸರ್ಕಾರಕ್ಕೂ ಸಂಧಿಯಾಗುವುದೋ ಮುರಿದು ಬೀಳುವುದೋ ಎಂಬುದನ್ನು... 324788 proofread-page text/x-wiki <noinclude><pagequality level="1" user="Nihar Chakravarti" /></noinclude>೬ ನಾರಾಯಣನಿಗೆ ಪರೀಕ್ಷೆಯಲ್ಲಿ ತೇರ್ಗಡೆಯಾಯಿತು. ಮುಂದೇನು ಮಾಡಬೇಕೆಂಬುದು ದೊಡ್ಡ ಸಮಸ್ಯೆಯಾಯಿತು. ೧೯೪೨. ಮಹಾತ್ಮ್ಮಾ ಗಾಂಧಿಯವರಿಗೂ ಬ್ರಿಟಷ್‌ ಸರ್ಕಾರಕ್ಕೂ ಸಂಧಿಯಾಗುವುದೋ ಮುರಿದು ಬೀಳುವುದೋ ಎಂಬುದನ್ನು ಇಡೀ ಪ್ರಪಂಚವೇ ನಿರೀಕ್ರಿಸುತ್ತಿತ್ತು. ಹೀಗೆ ತಳಮಳಿಸುತ್ತಾ, "ಕಟ್‌ ಇಂಡಿಯಾ » ಚಳುವಳಿಯು ಬಂದೇ ಬಿಟ್ಟಿತು. ವಿದ್ಯಾರ್ಥಿಗಳು ಸಭೆಗಳನ್ನು ಮಾಡಲಿಲ್ಲ. ಆಂತರಂಗ ಚಿತಾವಣೆಯಿಲ್ಲ. ಕಾಂಗ್ರೆಸ್ಸಿನ ಮುಖಂಡರಿಗೂ ವಿದ್ಯಾರ್ಥಿಗಳಿಗೂ ಸಂಬಂಧವೇ ಇರಲಿಲ್ಲ. ಇದ್ದಕ್ಕಿದ್ದಂತೆ ವಿದ್ಯಾರ್ಥಿಗಳ ಚಳುವಳಿಯು ಜ್ವಾಲಾಮುಖಿಯಂತೆ ಎದ್ದು ಬಿಟ್ಟತು. ಆ ಕಾಲದಲ್ಲಿ ಬೆಂಗಳೂರು ನಗರ ಯುದ್ಧ ಭೂಮಿಯಂತೆ ಕಳಕಳಿ ಸಿತು. ಎಲ್ಲೆಲ್ಲಿಯೂ ಗುಂಡುಹಾರಿದುವು. ಬಿಳಿಯ ಸೈನಿಕರು ನಗರ ವನ್ನೆಲ್ಲಾ ಆಕ್ರಮಿಸಿದರು. ಆ ಸಮಯದಲ್ಲಿ ಒಂದು ಘಟನೆಯು ನಡೆಯಿತು. ಬೆಂಗಳೂರು ನ್ಯಾಷನಲ್‌ ಸ್ಟೂಲಿನ ಮುಂದಿ ಪೋಲೀಸರು ಲಾಠಿ ಭಾರ್ಜು ಮಾಡಿದರು. ಗುಂಡುಹಾರಿತು. ವಿದ್ಯಾರ್ಥಿಗಳ ಗುಂಪಿನಲ್ಲೊಬ್ಬ ಹುಡುಗನು ಆರ್ತನಾದ ಮಾಡುತ್ತಾ ಕೆಳಗೆ. ಬಿದ್ದನು. ದೂರದಲ್ಲಿ ನೋಡುತ್ತಾ ನಿಂತಿದ್ದ ನಾರಾಯಣನು ಗುಂಪಿನಲ್ಲಿ ನುಗ್ಗಿ ಆ ಹುಡುಗನನ್ನು ಎರಡು ತೋಳುಗಳಲ್ಲಿಯೂ ಎತ್ತಿ ಕೊಂಡನು. ಪೋಲೀಸ್‌ ಅಧಿಕಾರಿಯು ಆ ಹುಡುಗನನ್ನು ತಮ್ಮ ವಶಕ್ಕೆ ಬಿಡಬೇಕೆಂದು ಕೇಳಿದನು. ಅದಕ್ಕೆ ನಾರಾಯಣನು “ ಏಕೆ ಕೊಡಬೇಕು ? ನಿಮ್ಮ ಕೈಗೆ ಕೊಟ್ಟರೆ ಅವನು ಸತ್ತು ಹೋಗುತ್ತಾನೆ. ನಾನು ನಿಮ್ಮ ವಶಕ್ಕೆ ಕೊಡುವುದಿಲ್ಲ. ” ಎಂದು ಉತ್ತರ ಹೇಳಿದನು. « ಆ ಹುಡುಗನು ನಿನಗೇನಾಗಬೇಕು 9 ?'<noinclude></noinclude> jop0x89qyi2oh6wjldflk2ivxl9e2dg 324822 324788 2026-06-16T05:28:34Z Nihar Chakravarti 8555 /* Proofread */ 324822 proofread-page text/x-wiki <noinclude><pagequality level="3" user="Nihar Chakravarti" />{{rh||೬|}}</noinclude>ನಾರಾಯಣನಿಗೆ ಪರೀಕ್ಷೆಯಲ್ಲಿ ತೇರ್ಗಡೆಯಾಯಿತು. ಮುಂದೇನು ಮಾಡಬೇಕೆಂಬುದು ದೊಡ್ಡ ಸಮಸ್ಯೆಯಾಯಿತು. ೧೯೪೨. ಮಹಾತ್ಮಾ ಗಾಂಧಿಯವರಿಗೂ ಬ್ರಿಟಿಷ್ ಸರ್ಕಾರಕ್ಕೂ ಸಂಧಿಯಾಗುವುದೋ ಮುರಿದು ಬೀಳುವುದೋ ಎಂಬುದನ್ನು ಇಡೀ ಪ್ರಪಂಚವೇ ನಿರೀಕ್ಷಿಸುತ್ತಿತ್ತು. ಹೀಗೆ ತಳಮಳಿಸುತ್ತಾ, “ ಕ್ವಿಟ್ ಇಂಡಿಯಾ ” ಚಳುವಳಿಯು ಬಂದೇ ಬಿಟ್ಟಿತು. ವಿದ್ಯಾರ್ಥಿಗಳು ಸಭೆಗಳನ್ನು ಮಾಡಲಿಲ್ಲ. ಆಂತರಂಗ ಚಿತಾವಣೆಯಿಲ್ಲ. ಕಾಂಗ್ರೆಸ್ಸಿನ ಮುಖಂಡರಿಗೂ ವಿದ್ಯಾರ್ಥಿಗಳಿಗೂ ಸಂಬಂಧವೇ ಇರಲಿಲ್ಲ. ಇದ್ದಕ್ಕಿದ್ದಂತೆ ವಿದ್ಯಾರ್ಥಿಗಳ ಚಳುವಳಿಯು ಜ್ವಾಲಾಮುಖಿಯಂತೆ ಎದ್ದು ಬಿಟ್ಟಿತು. ಆ ಕಾಲದಲ್ಲಿ ಬೆಂಗಳೂರು ನಗರ ಯುದ್ಧಭೂಮಿಯಂತೆ ಕಳವಳಿಸಿತು. ಎಲ್ಲೆಲ್ಲಿಯೂ ಗುಂಡುಹಾರಿದುವು. ಬಿಳಿಯ ಸೈನಿಕರು ನಗರ ವನ್ನೆಲ್ಲಾ ಆಕ್ರಮಿಸಿದರು. ಆ ಸಮಯದಲ್ಲಿ ಒಂದು ಘಟನೆಯು ನಡೆಯಿತು. ಬೆಂಗಳೂರು ನ್ಯಾಷನಲ್ ಸ್ಕೂಲಿನ ಮುಂದೆ ಪೋಲೀಸರು ಲಾಠಿ ಚಾರ್ಜು ಮಾಡಿದರು. ಗುಂಡುಹಾರಿತು. ವಿದ್ಯಾರ್ಥಿಗಳ ಗುಂಪಿನಲ್ಲೊಬ್ಬ ಹುಡುಗನು ಆರ್ತನಾದ ಮಾಡುತ್ತಾ ಕೆಳಗೆ ಬಿದ್ದನು. ದೂರದಲ್ಲಿ ನೋಡುತ್ತಾ ನಿಂತಿದ್ದ ನಾರಾಯಣನು ಗುಂಪಿನಲ್ಲಿ ನುಗ್ಗಿ ಆ ಹುಡುಗನನ್ನು ಎರಡು ತೋಳುಗಳಲ್ಲಿಯೂ ಎತ್ತಿ ಕೊಂಡನು. ಪೋಲೀಸ್ ಅಧಿಕಾರಿಯು ಆ ಹುಡುಗನನ್ನು ತಮ್ಮ ವಶಕ್ಕೆ ಬಿಡಬೇಕೆಂದು ಕೇಳಿದನು. ಅದಕ್ಕೆ ನಾರಾಯಣನು “ ಏಕೆ ಕೊಡಬೇಕು ? ನಿಮ್ಮ ಕೈಗೆ ಕೊಟ್ಟರೆ ಅವನು ಸತ್ತು ಹೋಗುತ್ತಾನೆ. ನಾನು ನಿಮ್ಮ ವಶಕ್ಕೆ ಕೊಡುವುದಿಲ್ಲ. ” ಎಂದು ಉತ್ತರ ಹೇಳಿದನು. “ ಆ ಹುಡುಗನು ನಿನಗೇನಾಗಬೇಕು ? ”<noinclude></noinclude> 4g9gpk193mm3t73tynjudj14s65nq8k 324872 324822 2026-06-16T07:27:09Z A826 6806 /* Validated */ 324872 proofread-page text/x-wiki <noinclude><pagequality level="4" user="A826" />{{rh||೬|}}</noinclude>ನಾರಾಯಣನಿಗೆ ಪರೀಕ್ಷೆಯಲ್ಲಿ ತೇರ್ಗಡೆಯಾಯಿತು. ಮುಂದೇನು ಮಾಡಬೇಕೆಂಬುದು ದೊಡ್ಡ ಸಮಸ್ಯೆಯಾಯಿತು. ೧೯೪೨. ಮಹಾತ್ಮಾ ಗಾಂಧಿಯವರಿಗೂ ಬ್ರಿಟಿಷ್ ಸರ್ಕಾರಕ್ಕೂ ಸಂಧಿಯಾಗುವುದೋ ಮುರಿದು ಬೀಳುವುದೋ ಎಂಬುದನ್ನು ಇಡೀ ಪ್ರಪಂಚವೇ ನಿರೀಕ್ಷಿಸುತ್ತಿತ್ತು. ಹೀಗೆ ತಳಮಳಿಸುತ್ತಾ, " ಕ್ವಿಟ್ ಇಂಡಿಯಾ " ಚಳುವಳಿಯು ಬಂದೇ ಬಿಟ್ಟಿತು. ವಿದ್ಯಾರ್ಥಿಗಳು ಸಭೆಗಳನ್ನು ಮಾಡಲಿಲ್ಲ. ಆಂತರಂಗ ಚಿತಾವಣೆಯಿಲ್ಲ. ಕಾಂಗ್ರೆಸ್ಸಿನ ಮುಖಂಡರಿಗೂ ವಿದ್ಯಾರ್ಥಿಗಳಿಗೂ ಸಂಬಂಧವೇ ಇರಲಿಲ್ಲ. ಇದ್ದಕ್ಕಿದ್ದಂತೆ ವಿದ್ಯಾರ್ಥಿಗಳ ಚಳುವಳಿಯು ಜ್ವಾಲಾಮುಖಿಯಂತೆ ಎದ್ದು ಬಿಟ್ಟಿತು. ಆ ಕಾಲದಲ್ಲಿ ಬೆಂಗಳೂರು ನಗರ ಯುದ್ಧಭೂಮಿಯಂತೆ ಕಳವಳಿಸಿತು. ಎಲ್ಲೆಲ್ಲಿಯೂ ಗುಂಡುಹಾರಿದುವು. ಬಿಳಿಯ ಸೈನಿಕರು ನಗರ ವನ್ನೆಲ್ಲಾ ಆಕ್ರಮಿಸಿದರು. ಆ ಸಮಯದಲ್ಲಿ ಒಂದು ಘಟನೆಯು ನಡೆಯಿತು. ಬೆಂಗಳೂರು ನ್ಯಾಷನಲ್ ಸ್ಕೂಲಿನ ಮುಂದೆ ಪೋಲೀಸರು ಲಾಠಿ ಚಾರ್ಜು ಮಾಡಿದರು. ಗುಂಡುಹಾರಿತು. ವಿದ್ಯಾರ್ಥಿಗಳ ಗುಂಪಿನಲ್ಲೊಬ್ಬ ಹುಡುಗನು ಆರ್ತನಾದ ಮಾಡುತ್ತಾ ಕೆಳಗೆ ಬಿದ್ದನು. ದೂರದಲ್ಲಿ ನೋಡುತ್ತಾ ನಿಂತಿದ್ದ ನಾರಾಯಣನು ಗುಂಪಿನಲ್ಲಿ ನುಗ್ಗಿ ಆ ಹುಡುಗನನ್ನು ಎರಡು ತೋಳುಗಳಲ್ಲಿಯೂ ಎತ್ತಿ ಕೊಂಡನು. ಪೋಲೀಸ್ ಅಧಿಕಾರಿಯು ಆ ಹುಡುಗನನ್ನು ತಮ್ಮ ವಶಕ್ಕೆ ಬಿಡಬೇಕೆಂದು ಕೇಳಿದನು. ಅದಕ್ಕೆ ನಾರಾಯಣನು " ಏಕೆ ಕೊಡಬೇಕು? ನಿಮ್ಮ ಕೈಗೆ ಕೊಟ್ಟರೆ ಅವನು ಸತ್ತು ಹೋಗುತ್ತಾನೆ. ನಾನು ನಿಮ್ಮ ವಶಕ್ಕೆ ಕೊಡುವುದಿಲ್ಲ. " ಎಂದು ಉತ್ತರ ಹೇಳಿದನು. " ಆ ಹುಡುಗನು ನಿನಗೇನಾಗಬೇಕು? "<noinclude></noinclude> seutycnugbb1zvpfgo7i9e9zgvb6ujc ಪುಟ:Chitrakuuta (1954).djvu/೪೮ 104 120875 324789 2026-06-16T04:54:13Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಚಿತ್ರಕೂಟ ಕ್ಥೆ “ ಏನೂ ಇಲ್ಲ. ಅವನ ರಕ್ಷಣೆಯ ಭಾರವನ್ನು ನಾನು ಹೊತ್ತಿದ್ದೇನೆ.” " ಸೋಲೀಸು ಅಧಿಕಾರಿಯು ಆ ಹುಡುಗನನ್ನು ಎಳೆದುಕೊಳ್ಳುವುದಕ್ಕೆ ಪ್ರಯತ್ನಿಸಿದನು. ನಾರಾಯಣನು ಬಿಡಲಿಲ್ಲ. ಇತರ ಹುಡುಗರು ಮುತ್ತಿ ಕೊಂ... 324789 proofread-page text/x-wiki <noinclude><pagequality level="1" user="Nihar Chakravarti" /></noinclude>ಚಿತ್ರಕೂಟ ಕ್ಥೆ “ ಏನೂ ಇಲ್ಲ. ಅವನ ರಕ್ಷಣೆಯ ಭಾರವನ್ನು ನಾನು ಹೊತ್ತಿದ್ದೇನೆ.” " ಸೋಲೀಸು ಅಧಿಕಾರಿಯು ಆ ಹುಡುಗನನ್ನು ಎಳೆದುಕೊಳ್ಳುವುದಕ್ಕೆ ಪ್ರಯತ್ನಿಸಿದನು. ನಾರಾಯಣನು ಬಿಡಲಿಲ್ಲ. ಇತರ ಹುಡುಗರು ಮುತ್ತಿ ಕೊಂಡು ಗೊಂದಲವೆಬ್ಬಿಸಿದರು. ಪ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಸೋಲೀಸು ಸಣಪರಿಂಟಿಂಡೆಂಟಿರು ಬಂದರು. ಅವರು ಆ ಗದ್ದಲವನ್ನು ಸಮಾಧಾನಹಪಡಿಸುತ್ತಿದ್ದರು. ಹು ಡು ಗರು ದೂರದಲ್ಲಿ ಕೂಗುತ್ತಿದ್ದರು. ಸೂಪರಿಂಟೆಂಡೆಂಟರು ನಾರಾಯಣನ ಕೆ ಹಿಡಿದುಕೊಂಡು “ ಏನಯ್ಯಾ ಇದು? »? ಎಂದು ಕೇಳಿದರು. i ನಾರಾಯಣನು " ನೋಡಿ | ತಲೆಯೊಡೆದು ರಕ್ತ ಸೋರುತ್ತಿದೆ. ಆ ಅಧಿಕಾರಿಯು ಈ ಹುಡುಗನನ್ನು ತನ್ನ ವರಶಕ್ಸೆ ಕೊಡೆಬೇಕೆನ್ನು ತ್ತಾನೆ. ನಾನು ಆಸ್ಪತ್ರೆಗೆ ಸಾಗಿಸುತ್ತೇನೆ. ” ಎಂದು ಹೇಳಿದನು. ಪೋಲೀಸು ಅಧಿಕಾರಿಯು « ಈ ಹುಡುಗನಿಗೆ ಪೆಟ್ಟು ಬಿತ್ತು. ಇವನು ಆ ಹುಡುಗನನ್ನು ಎತ್ತಿಕೊಂಡು ಇಲ್ಲಿರುವ ಹುಡುಗರನ್ನೆಲ್ಲಾ ರೇಗಿಸುತ್ತಿದ್ದಾನೆ. ಈ ಪೆಟ್ಟು ಬಿದ್ದ ಹುಡುಗ ನನ್ನು ಮೆರವಣಿಗೆ ಮಾಡುತ್ತಾರಂತೆ ” ಎಂದನು. ಭರಭರನೆ ಮಿಲಿಟರಿ ವ್ಯಾನುಗಳು ಬಂದುವು. ಮಾರ್ಕೆಟ್‌ ಚೌಕದಲ್ಲಿ ಬಹಳ ಗದ್ದಲವಾಗುತ್ತಿದೆಯೆಂದೂ ಸಮಾಚಾರ ಬಂತು. ಸಿಟಿ ಪೋಸ್ಟಾಫೀಸಿಗೆ ಬೆಂಕಿ ಹಾಕಿದ್ದಾರಂತೆ, ಎಂಬ ವರ್ತಮಾನ ಹರಡಿತು. ಸೂಪರಿಂಟಿಂಡೆಂಬಿ ರಿಗೆ ಸಾವಧಾನ ತಪ್ಪಿತು. ಈ ಹುಡುಗನನ್ನು 0 ಸ್ಟ್‌ಮಾಡಿ ಎಂದು ಅಪ್ಪಣೆ ಮಾಡಿದರು, ಕೂಡಲೇ ಪೋಲೀಸು ಅಧಿಕಾರಿಗಳು ನಾರಾಯಣನನ್ನು ದಸ್ತಗಿರಿ ಮಾಡಿ ವ್ಯಾಸಿಗೆ ತುಂಬಿದರು. ವ್ಯಾನು ಹೊರಟುಹೋಯಿತು. ನಾರಾಯಣನು ರಾತ್ರಿಯಾದರೂ ಮನೆಗೆ ಬರಲಿಲ್ಲ. ಪಾರ್ವತಮ್ಮನ ಎಬಿ ಬಡಿದುಕೊಳ್ಳ ಲಾರಂಭಿಸಿತು. ಅವಳು ಆ ದಿವಸವೆಲ್ಲಾ ಊಟ ಮಾಡಿರಲಿಲ್ಲ ಆ ದಿನ ಬೆಂಗಳೂರಿನಲ್ಲೆಲ್ಲಾ ಅವಾಂತರಗಳು ಆಗಿ ಹೋಗಿದೆಯೆಂದು ಕಥೆಗಳು ಹಬ್ಬಿದುವು. ರಾತ್ರಿ ಸುಮಾರು ಒಂಭತ್ತು ಘಂಟಿಗೆ ರಾಮಾಶಾಸ್ತ್ರಿಯು ಮನೆಗೆ ಬಂದನು. ಪಾರ್ವತಮ್ಮನವರ ದೀನಾವಸ್ಸೆ ಯನ್ನು ನೋಡಿದನು. ಮೆಲ್ಲನೆ ದನಿಯಿಂದ “ ನಾಣಿ! ಮನೆಗೆ ಬರಲಿಲ್ಲವೇ ? ಎಂದು ಪ್ರಶ್ನೆ ಮಾಡಿದನು, ಈ<noinclude></noinclude> cej04mxtni8w9xluq7b7qo69mnbqho4 324823 324789 2026-06-16T05:29:21Z Nihar Chakravarti 8555 /* Proofread */ 324823 proofread-page text/x-wiki <noinclude><pagequality level="3" user="Nihar Chakravarti" />{{rh||ಚಿತ್ರಕೂಟ|೩೩}}</noinclude>“ ಏನೂ ಇಲ್ಲ. ಅವನ ರಕ್ಷಣೆಯ ಭಾರವನ್ನು ನಾನು ಹೊತ್ತಿದ್ದೇನೆ. ” “ ಪೋಲೀಸು ಅಧಿಕಾರಿಯು ಆ ಹುಡುಗನನ್ನು ಎಳೆದುಕೊಳ್ಳುವುದಕ್ಕೆ ಪ್ರಯತ್ನಿಸಿದನು. ನಾರಾಯಣನು ಬಿಡಲಿಲ್ಲ. ಇತರ ಹುಡುಗರು ಮುತ್ತಿ ಕೊಂಡು ಗೊಂದಲವೆಬ್ಬಿಸಿದರು. ಈ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಪೋಲೀಸು ಸೂಪರಿಂಟೆಂಡೆಂಟರು ಬಂದರು. ಅವರು ಆ ಗದ್ದಲವನ್ನು ಸಮಾಧಾನಪಡಿಸುತ್ತಿದ್ದರು. ಹುಡುಗರು ದೂರದಲ್ಲಿ ಕೂಗುತ್ತಿದ್ದರು. ಸೂಪರಿಂಟೆಂಡೆಂಟರು ನಾರಾಯಣನ ಕೈ ಹಿಡಿದುಕೊಂಡು, “ ಏನಯ್ಯಾ ಇದು ? ” ಎಂದು ಕೇಳಿದರು. ನಾರಾಯಣನು “ ನೋಡಿ ! ತಲೆಯೊಡೆದು ರಕ್ತ ಸೋರುತ್ತಿದೆ. ಆ ಅಧಿಕಾರಿಯು ಈ ಹುಡುಗನನ್ನು ತನ್ನ ವಶಕ್ಕೆ ಕೊಡಬೇಕೆನ್ನುತ್ತಾನೆ. ನಾನು ಆಸ್ಪತ್ರೆಗೆ ಸಾಗಿಸುತ್ತೇನೆ. ” ಎಂದು ಹೇಳಿದನು. ಪೋಲೀಸು ಅಧಿಕಾರಿಯು “ ಈ ಹುಡುಗನಿಗೆ ಪೆಟ್ಟು ಬಿತ್ತು. ಇವನು ಆ ಹುಡುಗನನ್ನು ಎತ್ತಿಕೊಂಡು ಇಲ್ಲಿರುವ ಹುಡುಗರನ್ನೆಲ್ಲಾ ರೇಗಿಸುತ್ತಿದ್ದಾನೆ. ಈ ಪೆಟ್ಟುಬಿದ್ದ ಹುಡುಗ ನನ್ನು ಮೆರವಣಿಗೆ ಮಾಡುತ್ತಾರಂತೆ ” ಎಂದನು. ಭರಭರನೆ ಮಿಲಿಟರಿ ವ್ಯಾನುಗಳು ಬಂದುವು. ಮಾರ್ಕೆಟ್ ಚೌಕದಲ್ಲಿ ಬಹಳ ಗದ್ದಲವಾಗುತ್ತಿದೆಯೆಂದೂ ಸಮಾಚಾರ ಬಂತು. ಸಿಟಿ ಪೋಸ್ಟಾಫೀಸಿಗೆ ಬೆಂಕಿ ಹಾಕಿದ್ದಾರಂತೆ, ಎಂಬ ವರ್ತಮಾನ ಹರಡಿತು. ಸೂಪರಿಂಟೆಂಡೆಂಟ್ ರಿಗೆ ಸಾವಧಾನ ತಪ್ಪಿತು. ಈ ಹುಡುಗನನ್ನು ಅರೆಸ್ಟ್ ಮಾಡಿ ಎಂದು ಅಪ್ಪಣೆ ಮಾಡಿದರು. ಕೂಡಲೇ ಪೋಲೀಸು ಅಧಿಕಾರಿಗಳು ನಾರಾಯಣನನ್ನು ದಸ್ತಗಿರಿ ಮಾಡಿ ವ್ಯಾನಿಗೆ ತುಂಬಿದರು. ವ್ಯಾನು ಹೊರಟುಹೋಯಿತು. ನಾರಾಯಣನು ರಾತ್ರಿಯಾದರೂ ಮನೆಗೆ ಬರಲಿಲ್ಲ. ಪಾರ್ವತಮ್ಮನ ಎದೆಯು ಬಡಿದುಕೊಳ್ಳಲಾರಂಭಿಸಿತು. ಅವಳು ಆ ದಿವಸವೆಲ್ಲಾ ಊಟ ಮಾಡಿರಲಿಲ್ಲ. ಆ ದಿನ ಬೆಂಗಳೂರಿನಲ್ಲೆಲ್ಲಾ ಅವಾಂತರಗಳು ಆಗಿ ಹೋಗಿದೆಯೆಂದು ಕಥೆಗಳು ಹಬ್ಬಿದುವು. ರಾತ್ರಿ ಸುಮಾರು ಒಂಭತ್ತು ಘಂಟಿಗೆ ರಾಮಾಶಾಸ್ತ್ರಿಯು ಮನೆಗೆ ಬಂದನು. ಪಾರ್ವತಮ್ಮನವರ ದೀನಾವಸ್ಥೆಯನ್ನು ನೋಡಿದನು. ಮೆಲ್ಲನೆ ದನಿಯಿಂದ “ ನಾಣಿ ! ಮನೆಗೆ ಬರಲಿಲ್ಲವೇ ? ” ಎಂದು ಪ್ರಶ್ನೆ ಮಾಡಿದನು.<noinclude></noinclude> jg21ygrzcslprf323ife4i5ggzf2m37 324873 324823 2026-06-16T07:27:29Z A826 6806 /* Validated */ 324873 proofread-page text/x-wiki <noinclude><pagequality level="4" user="A826" />{{rh||ಚಿತ್ರಕೂಟ|೩೩}}</noinclude>" ಏನೂ ಇಲ್ಲ. ಅವನ ರಕ್ಷಣೆಯ ಭಾರವನ್ನು ನಾನು ಹೊತ್ತಿದ್ದೇನೆ. " " ಪೋಲೀಸು ಅಧಿಕಾರಿಯು ಆ ಹುಡುಗನನ್ನು ಎಳೆದುಕೊಳ್ಳುವುದಕ್ಕೆ ಪ್ರಯತ್ನಿಸಿದನು. ನಾರಾಯಣನು ಬಿಡಲಿಲ್ಲ. ಇತರ ಹುಡುಗರು ಮುತ್ತಿ ಕೊಂಡು ಗೊಂದಲವೆಬ್ಬಿಸಿದರು. ಈ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಪೋಲೀಸು ಸೂಪರಿಂಟೆಂಡೆಂಟರು ಬಂದರು. ಅವರು ಆ ಗದ್ದಲವನ್ನು ಸಮಾಧಾನಪಡಿಸುತ್ತಿದ್ದರು. ಹುಡುಗರು ದೂರದಲ್ಲಿ ಕೂಗುತ್ತಿದ್ದರು. ಸೂಪರಿಂಟೆಂಡೆಂಟರು ನಾರಾಯಣನ ಕೈ ಹಿಡಿದುಕೊಂಡು, " ಏನಯ್ಯಾ ಇದು? " ಎಂದು ಕೇಳಿದರು. ನಾರಾಯಣನು " ನೋಡಿ! ತಲೆಯೊಡೆದು ರಕ್ತ ಸೋರುತ್ತಿದೆ. ಆ ಅಧಿಕಾರಿಯು ಈ ಹುಡುಗನನ್ನು ತನ್ನ ವಶಕ್ಕೆ ಕೊಡಬೇಕೆನ್ನುತ್ತಾನೆ. ನಾನು ಆಸ್ಪತ್ರೆಗೆ ಸಾಗಿಸುತ್ತೇನೆ. " ಎಂದು ಹೇಳಿದನು. ಪೋಲೀಸು ಅಧಿಕಾರಿಯು " ಈ ಹುಡುಗನಿಗೆ ಪೆಟ್ಟು ಬಿತ್ತು. ಇವನು ಆ ಹುಡುಗನನ್ನು ಎತ್ತಿಕೊಂಡು ಇಲ್ಲಿರುವ ಹುಡುಗರನ್ನೆಲ್ಲಾ ರೇಗಿಸುತ್ತಿದ್ದಾನೆ. ಈ ಪೆಟ್ಟುಬಿದ್ದ ಹುಡುಗ ನನ್ನು ಮೆರವಣಿಗೆ ಮಾಡುತ್ತಾರಂತೆ " ಎಂದನು. ಭರಭರನೆ ಮಿಲಿಟರಿ ವ್ಯಾನುಗಳು ಬಂದುವು. ಮಾರ್ಕೆಟ್ ಚೌಕದಲ್ಲಿ ಬಹಳ ಗದ್ದಲವಾಗುತ್ತಿದೆಯೆಂದೂ ಸಮಾಚಾರ ಬಂತು. ಸಿಟಿ ಪೋಸ್ಟಾಫೀಸಿಗೆ ಬೆಂಕಿ ಹಾಕಿದ್ದಾರಂತೆ, ಎಂಬ ವರ್ತಮಾನ ಹರಡಿತು. ಸೂಪರಿಂಟೆಂಡೆಂಟ್ ರಿಗೆ ಸಾವಧಾನ ತಪ್ಪಿತು. ಈ ಹುಡುಗನನ್ನು ಅರೆಸ್ಟ್ ಮಾಡಿ ಎಂದು ಅಪ್ಪಣೆ ಮಾಡಿದರು. ಕೂಡಲೇ ಪೋಲೀಸು ಅಧಿಕಾರಿಗಳು ನಾರಾಯಣನನ್ನು ದಸ್ತಗಿರಿ ಮಾಡಿ ವ್ಯಾನಿಗೆ ತುಂಬಿದರು. ವ್ಯಾನು ಹೊರಟುಹೋಯಿತು. ನಾರಾಯಣನು ರಾತ್ರಿಯಾದರೂ ಮನೆಗೆ ಬರಲಿಲ್ಲ. ಪಾರ್ವತಮ್ಮನ ಎದೆಯು ಬಡಿದುಕೊಳ್ಳಲಾರಂಭಿಸಿತು. ಅವಳು ಆ ದಿವಸವೆಲ್ಲಾ ಊಟ ಮಾಡಿರಲಿಲ್ಲ. ಆ ದಿನ ಬೆಂಗಳೂರಿನಲ್ಲೆಲ್ಲಾ ಅವಾಂತರಗಳು ಆಗಿ ಹೋಗಿದೆಯೆಂದು ಕಥೆಗಳು ಹಬ್ಬಿದುವು. ರಾತ್ರಿ ಸುಮಾರು ಒಂಭತ್ತು ಘಂಟಿಗೆ ರಾಮಾಶಾಸ್ತ್ರಿಯು ಮನೆಗೆ ಬಂದನು. ಪಾರ್ವತಮ್ಮನವರ ದೀನಾವಸ್ಥೆಯನ್ನು ನೋಡಿದನು. ಮೆಲ್ಲನೆ ದನಿಯಿಂದ " ನಾಣಿ! ಮನೆಗೆ ಬರಲಿಲ್ಲವೇ? " ಎಂದು ಪ್ರಶ್ನೆ ಮಾಡಿದನು.<noinclude></noinclude> cczacxhdh375yb86bcxmbi85co5rscg ಪುಟ:Chitrakuuta (1954).djvu/೪೯ 104 120876 324790 2026-06-16T04:54:20Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಫ್ಲಿಳಿ ಚಿತ್ರ ಕೂಟ ಸಾರ್ವತಮ್ಮನು ಗಾಬರಿಯಿಂದ ಆ ಏನು ಸಮಾಚಾರ? ” ಎಂದು ಕೇಳಿದಳು, ರಾಮಾಶಾಸ್ತ್ರಿಯು “ ಪೋಲೀಸನವರು ತಂಡ ತಂಡವಾಗಿ ಹುಡುಗರನ್ನು ದಸ್ತಗಿರಿ ಮಾಡಿದ್ದಾರೆ. ಲಾಠೀ ಛಾರ್ಜು ಮಾಡಿದ್ದಾರೆ. ಗುಂಡು ಹಾರಿ... 324790 proofread-page text/x-wiki <noinclude><pagequality level="1" user="Nihar Chakravarti" /></noinclude>ಫ್ಲಿಳಿ ಚಿತ್ರ ಕೂಟ ಸಾರ್ವತಮ್ಮನು ಗಾಬರಿಯಿಂದ ಆ ಏನು ಸಮಾಚಾರ? ” ಎಂದು ಕೇಳಿದಳು, ರಾಮಾಶಾಸ್ತ್ರಿಯು “ ಪೋಲೀಸನವರು ತಂಡ ತಂಡವಾಗಿ ಹುಡುಗರನ್ನು ದಸ್ತಗಿರಿ ಮಾಡಿದ್ದಾರೆ. ಲಾಠೀ ಛಾರ್ಜು ಮಾಡಿದ್ದಾರೆ. ಗುಂಡು ಹಾರಿಸಿದ್ದಾರೆ. ನಾಣಿಯೊ ಎಲ್ಲಿ ಸಿಕ್ಕಿಕೊಂಡಿರಬಹುದೋ ಎಂದು ಸಂದೇಹ ಬಂತು, ಇಲ್ಲಿಗೆ ಓಡಿ ಬಂದೆ '' ಎಂದನು. ಪಾರ್ವತಮ್ಮ ಗೊಳೋ ಎಂದು ಅಳಲಾರಂಭಿಸಿದಳು. ಶ್ಯಾಮಲೆಯೂ ಅತ್ತಳು, ರಾಮಾಶಾಸ್ತ್ರಿ ಯು ಎಷ್ಟೋ ಸಮಾಧಾನ ಮಾಡಿದನು. ಕೊನೆಗೆ ದೇವರು « ನಿಮಗೆ ಅಂಥಾ ಕಷ್ಟ ಕೊಡುವುದಿಲ್ಲ. ನೀವು ನೇಚಾಡ ಬೇಡಿ, ಒಳ್ಳೆಯದಾಗುತ್ತದೆ '' ಎಂದು ಹೇಳಿ ಹೊರಟುಹೋದನು, ರಾತ್ರಿ ಹೊತ್ತು ಮೀರಿತ್ತು ಆರ್ಧ ರಾತ್ರಿಯಾಯಿತು. ಪಾರ್ವತಮ್ಮನು ಅಳುತ್ತಲೇ ಇದ್ದಳು. ಒಂದೆರಡು ಬಾರಿ ಜಾನ ತಪ್ಪಿದಂತಾಯಿತು. ಶ್ಯಾಮಲೆಯ ಶರೀರವೆಲ್ಲವೂ ನಡುಗುತ್ತಿತ್ತು. ಅವಳು ಅತ್ತು ಅತ್ತು ಮಲಗಿ ದಳು. ಬೆಳಕು ಹರಿಯಿತು. ಶ್ಯಾಮಲೆಯು ಎದ್ದು ತಾಯಿಯ ಮುಖವನ್ನು ನೋಡಿದಳು. ತಾಯಿಯ ಮುಖದಲ್ಲಿ ಹುಚ್ಚಿನ ಚಿಹ್ನೆ ಕಂಡಿತು | ಶ್ಯಾಮಲೆ ಆಪಾದ ಮಸ್ತಕ ಬೆವರಿದಳು. ಧ್ನ ರ್ಯ ತಂದುಕೊಂಡು ತನ್ನ ಕೋಣೆಗೆ ಹೋಗಿ ಬೇರೆ ಸೀರೆಯನ್ನು ಟ್ಟು ಕೊಂಡು ಹೊರಗೆ ಬಂದು, “ಅಮ್ಮಾ ಅಳಬೇಡ! ಧ್ವರ್ಯದಿಂದಿರು. ನಾನು ಅಣ್ಣನನ್ನು ಕರೆತರುತ್ತೇನೆ” ಎಂದು ಹೇಳಿ ಉತ್ತರವನ್ನು ನಿರೀಕ್ರಿಸದೆಯೇ ಹೊರಟುಹೋದಳು. ಪಾರ್ವತಮ್ಮ ನಿಗೆ ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟಿ ಂತಾಯಿತು. ಆಕೆಗೆ ತನ್ನದೆಂಬ ವಸ್ತುಗಳೆಲ್ಲಾ ಹಾರಿ ಹೋದಂತಾಯಿತು. ಅವಳು ನಿರ್ವಿಣ್ಣಳಾಗಿ ಕುಳಿತಳು. ಶ್ಯಾಮಲೆಯು ಮನೆಯಿಂದ ಹೊರಟ್ರು, ಎಲ್ಲಿಗೆ ಹೋಗಬೇಕೆಂದು ಕ್ಷಣ ಹೊತ್ತು ಯೋಚಿಸಿದಳು. ಏನೂ ತೋರಲಿಲ್ಲ. ನೆಟ್ಟಿಗೆ ಸೆಂಟ್ರಿಲ್‌ ಜೈಲು ಬಾಗಿಲಿಗೆ ಹೋದಳು. ಅಲ್ಲೆಲ್ಲಾ ಮಿಲಿಟರಿ ಪಹರೆ ಇತ್ತು. ಶ್ಯಾಮಲೆಯು ಧೈರ್ಯವಾಗಿ ಹೆಬ್ಬಾಗಿಲಿಗೆ ಹೋದಳು. ಅಲ್ಲಿದ್ದ ಅಧಿಕಾರಿಯು “ಯಾರಮ್ಮಾ! ನೀನು ಇಲ್ಲಿಗೇಕೆ ಬಂದೆ ? ಎಂದು ಕೇಳಿದರು. ಶ್ಯಾಮಲೆಯು « ಪ್ರ ಜೈಲಿನಲ್ಲಿ<noinclude></noinclude> l283aoj1it7l68sp0k8jngv51u7xytd 324824 324790 2026-06-16T05:30:07Z Nihar Chakravarti 8555 /* Proofread */ 324824 proofread-page text/x-wiki <noinclude><pagequality level="3" user="Nihar Chakravarti" />{{rh|೩೪|ಚಿತ್ರಕೂಟ}}</noinclude>ಪಾರ್ವತಮ್ಮನು ಗಾಬರಿಯಿಂದ, “ ಏನು ಸಮಾಚಾರ ? ” ಎಂದು ಕೇಳಿದಳು. ರಾಮಾಶಾಸ್ತ್ರಿಯು “ ಪೋಲೀಸನವರು ತಂಡ ತಂಡವಾಗಿ ಹುಡುಗರನ್ನು ದಸ್ತಗಿರಿ ಮಾಡಿದ್ದಾರೆ. ಲಾಠಿ ಚಾರ್ಜು ಮಾಡಿದ್ದಾರೆ. ಗುಂಡು ಹಾರಿಸಿದ್ದಾರೆ. ನಾಣಿಯೋ ಎಲ್ಲಿ ಸಿಕ್ಕಿಕೊಂಡಿರಬಹುದೋ ಎಂದು ಸಂದೇಹ ಬಂತು, ಇಲ್ಲಿಗೆ ಓಡಿ ಬಂದೆ ” ಎಂದನು. ಪಾರ್ವತಮ್ಮ ಗೊಳೋ ಎಂದು ಅಳಲಾರಂಭಿಸಿದಳು. ಶ್ಯಾಮಲೆಯೂ ಅತ್ತಳು. ರಾಮಾಶಾಸ್ತ್ರಿಯು ಎಷ್ಟೋ ಸಮಾಧಾನ ಮಾಡಿದನು. ಕೊನೆಗೆ ದೇವರು “ ನಿಮಗೆ ಅಂಥಾ ಕಷ್ಟ ಕೊಡುವುದಿಲ್ಲ. ನೀವು ಪೇಚಾಡ ಬೇಡಿ, ಒಳ್ಳೆಯದಾಗುತ್ತದೆ ” ಎಂದು ಹೇಳಿ ಹೊರಟುಹೋದನು. ರಾತ್ರಿ ಹೊತ್ತು ಮೀರಿತು, ಅರ್ಧ ರಾತ್ರಿಯಾಯಿತು. ಪಾರ್ವತಮ್ಮನು ಅಳುತ್ತಲೇ ಇದ್ದಳು. ಒಂದೆರಡು ಬಾರಿ ಜ್ಞಾನ ತಪ್ಪಿದಂತಾಯಿತು. ಶ್ಯಾಮಲೆಯ ಶರೀರವೆಲ್ಲವೂ ನಡುಗುತ್ತಿತ್ತು. ಅವಳು ಅತ್ತು ಅತ್ತು ಮಲಗಿ ದಳು. ಬೆಳಕು ಹರಿಯಿತು. ಶ್ಯಾಮಲೆಯು ಎದ್ದು ತಾಯಿಯ ಮುಖವನ್ನು ನೋಡಿದಳು. ತಾಯಿಯ ಮುಖದಲ್ಲಿ ಹುಚ್ಚಿನ ಚಿಹ್ನೆ ಕಂಡಿತು ! ಶ್ಯಾಮಲೆ ಆಪಾದ ಮಸ್ತಕ ಬೆವರಿದಳು. ಧೈರ್ಯ ತಂದುಕೊಂಡು ತನ್ನ ಕೋಣೆಗೆ ಹೋಗಿ ಬೇರೆ ಸೀರೆಯನ್ನುಟ್ಟುಕೊಂಡು ಹೊರಗೆ ಬಂದು, “ ಅಮ್ಮಾ, ಅಳಬೇಡ ! ಧೈರ್ಯದಿಂದಿರು. ನಾನು ಅಣ್ಣನನ್ನು ಕರೆತರುತ್ತೇನೆ ” ಎಂದು ಹೇಳಿ ಉತ್ತರವನ್ನು ನಿರೀಕ್ಷಿಸದೆಯೇ ಹೊರಟುಹೋದಳು. ಪಾರ್ವತಮ್ಮನಿಗೆ ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟಂತಾಯಿತು. ಆಕೆಗೆ ತನ್ನದೆಂಬ ವಸ್ತುಗಳೆಲ್ಲಾ ಹಾರಿ ಹೋದಂತಾಯಿತು. ಅವಳು ನಿರ್ವಿಣ್ಣಳಾಗಿ ಕುಳಿತಳು. ಶ್ಯಾಮಲೆಯು ಮನೆಯಿಂದ ಹೊರಟು, ಎಲ್ಲಿಗೆ ಹೋಗಬೇಕೆಂದು ಕ್ಷಣ ಹೊತ್ತು ಯೋಚಿಸಿದಳು. ಏನೂ ತೋರಲಿಲ್ಲ. ನೆಟ್ಟಗೆ ಸೆಂಟ್ರಲ್ ಜೈಲು ಬಾಗಿಲಿಗೆ ಹೋದಳು. ಅಲ್ಲೆಲ್ಲಾ ಮಿಲಿಟರಿ ಪಹರೆ ಇತ್ತು. ಶ್ಯಾಮಲೆಯು ಧೈರ್ಯವಾಗಿ ಹೆಬ್ಬಾಗಿಲಿಗೆ ಹೋದಳು. ಅಲ್ಲಿದ್ದ ಅಧಿಕಾರಿಯು “ ಯಾರಮ್ಮಾ ! ನೀನು ಇಲ್ಲಿಗೇಕೆ ಬಂದೆ ? ” ಎಂದು ಕೇಳಿದರು. ಶ್ಯಾಮಲೆಯು “ ಈ ಜೈಲಿನಲ್ಲಿ<noinclude></noinclude> qkom1v96unybgmoh7lxa1ax1heya1fo 324874 324824 2026-06-16T07:28:39Z A826 6806 324874 proofread-page text/x-wiki <noinclude><pagequality level="3" user="Nihar Chakravarti" />{{rh|೩೪|ಚಿತ್ರಕೂಟ}}</noinclude>ಪಾರ್ವತಮ್ಮನು ಗಾಬರಿಯಿಂದ, " ಏನು ಸಮಾಚಾರ? " ಎಂದು ಕೇಳಿದಳು. ರಾಮಾಶಾಸ್ತ್ರಿಯು " ಪೋಲೀಸನವರು ತಂಡ ತಂಡವಾಗಿ ಹುಡುಗರನ್ನು ದಸ್ತಗಿರಿ ಮಾಡಿದ್ದಾರೆ. ಲಾಠಿ ಚಾರ್ಜು ಮಾಡಿದ್ದಾರೆ. ಗುಂಡು ಹಾರಿಸಿದ್ದಾರೆ. ನಾಣಿಯೋ ಎಲ್ಲಿ ಸಿಕ್ಕಿಕೊಂಡಿರಬಹುದೋ ಎಂದು ಸಂದೇಹ ಬಂತು, ಇಲ್ಲಿಗೆ ಓಡಿ ಬಂದೆ " ಎಂದನು. ಪಾರ್ವತಮ್ಮ ಗೊಳೋ ಎಂದು ಅಳಲಾರಂಭಿಸಿದಳು. ಶ್ಯಾಮಲೆಯೂ ಅತ್ತಳು. ರಾಮಾಶಾಸ್ತ್ರಿಯು ಎಷ್ಟೋ ಸಮಾಧಾನ ಮಾಡಿದನು. ಕೊನೆಗೆ ದೇವರು " ನಿಮಗೆ ಅಂಥಾ ಕಷ್ಟ ಕೊಡುವುದಿಲ್ಲ. ನೀವು ಪೇಚಾಡ ಬೇಡಿ, ಒಳ್ಳೆಯದಾಗುತ್ತದೆ " ಎಂದು ಹೇಳಿ ಹೊರಟುಹೋದನು. ರಾತ್ರಿ ಹೊತ್ತು ಮೀರಿತು, ಅರ್ಧ ರಾತ್ರಿಯಾಯಿತು. ಪಾರ್ವತಮ್ಮನು ಅಳುತ್ತಲೇ ಇದ್ದಳು. ಒಂದೆರಡು ಬಾರಿ ಜ್ಞಾನ ತಪ್ಪಿದಂತಾಯಿತು. ಶ್ಯಾಮಲೆಯ ಶರೀರವೆಲ್ಲವೂ ನಡುಗುತ್ತಿತ್ತು. ಅವಳು ಅತ್ತು ಅತ್ತು ಮಲಗಿದಳು. ಬೆಳಕು ಹರಿಯಿತು. ಶ್ಯಾಮಲೆಯು ಎದ್ದು ತಾಯಿಯ ಮುಖವನ್ನು ನೋಡಿದಳು. ತಾಯಿಯ ಮುಖದಲ್ಲಿ ಹುಚ್ಚಿನ ಚಿಹ್ನೆ ಕಂಡಿತು! ಶ್ಯಾಮಲೆ ಆಪಾದ ಮಸ್ತಕ ಬೆವರಿದಳು. ಧೈರ್ಯ ತಂದುಕೊಂಡು ತನ್ನ ಕೋಣೆಗೆ ಹೋಗಿ ಬೇರೆ ಸೀರೆಯನ್ನುಟ್ಟುಕೊಂಡು ಹೊರಗೆ ಬಂದು, " ಅಮ್ಮಾ, ಅಳಬೇಡ! ಧೈರ್ಯದಿಂದಿರು. ನಾನು ಅಣ್ಣನನ್ನು ಕರೆತರುತ್ತೇನೆ " ಎಂದು ಹೇಳಿ ಉತ್ತರವನ್ನು ನಿರೀಕ್ಷಿಸದೆಯೇ ಹೊರಟುಹೋದಳು. ಪಾರ್ವತಮ್ಮನಿಗೆ ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟಂತಾಯಿತು. ಆಕೆಗೆ ತನ್ನದೆಂಬ ವಸ್ತುಗಳೆಲ್ಲಾ ಹಾರಿ ಹೋದಂತಾಯಿತು. ಅವಳು ನಿರ್ವಿಣ್ಣಳಾಗಿ ಕುಳಿತಳು. ಶ್ಯಾಮಲೆಯು ಮನೆಯಿಂದ ಹೊರಟು, ಎಲ್ಲಿಗೆ ಹೋಗಬೇಕೆಂದು ಕ್ಷಣ ಹೊತ್ತು ಯೋಚಿಸಿದಳು. ಏನೂ ತೋರಲಿಲ್ಲ. ನೆಟ್ಟಗೆ ಸೆಂಟ್ರಲ್ ಜೈಲು ಬಾಗಿಲಿಗೆ ಹೋದಳು. ಅಲ್ಲೆಲ್ಲಾ ಮಿಲಿಟರಿ ಪಹರೆ ಇತ್ತು. ಶ್ಯಾಮಲೆಯು ಧೈರ್ಯವಾಗಿ ಹೆಬ್ಬಾಗಿಲಿಗೆ ಹೋದಳು. ಅಲ್ಲಿದ್ದ ಅಧಿಕಾರಿಯು " ಯಾರಮ್ಮಾ! ನೀನು ಇಲ್ಲಿಗೇಕೆ ಬಂದೆ? " ಎಂದು ಕೇಳಿದರು. ಶ್ಯಾಮಲೆಯು " ಈ ಜೈಲಿನಲ್ಲಿ<noinclude></noinclude> 5syztz50lwtvgdozegndd6uji9v3qid 324875 324874 2026-06-16T07:28:48Z A826 6806 /* Validated */ 324875 proofread-page text/x-wiki <noinclude><pagequality level="4" user="A826" />{{rh|೩೪|ಚಿತ್ರಕೂಟ}}</noinclude>ಪಾರ್ವತಮ್ಮನು ಗಾಬರಿಯಿಂದ, " ಏನು ಸಮಾಚಾರ? " ಎಂದು ಕೇಳಿದಳು. ರಾಮಾಶಾಸ್ತ್ರಿಯು " ಪೋಲೀಸನವರು ತಂಡ ತಂಡವಾಗಿ ಹುಡುಗರನ್ನು ದಸ್ತಗಿರಿ ಮಾಡಿದ್ದಾರೆ. ಲಾಠಿ ಚಾರ್ಜು ಮಾಡಿದ್ದಾರೆ. ಗುಂಡು ಹಾರಿಸಿದ್ದಾರೆ. ನಾಣಿಯೋ ಎಲ್ಲಿ ಸಿಕ್ಕಿಕೊಂಡಿರಬಹುದೋ ಎಂದು ಸಂದೇಹ ಬಂತು, ಇಲ್ಲಿಗೆ ಓಡಿ ಬಂದೆ " ಎಂದನು. ಪಾರ್ವತಮ್ಮ ಗೊಳೋ ಎಂದು ಅಳಲಾರಂಭಿಸಿದಳು. ಶ್ಯಾಮಲೆಯೂ ಅತ್ತಳು. ರಾಮಾಶಾಸ್ತ್ರಿಯು ಎಷ್ಟೋ ಸಮಾಧಾನ ಮಾಡಿದನು. ಕೊನೆಗೆ ದೇವರು " ನಿಮಗೆ ಅಂಥಾ ಕಷ್ಟ ಕೊಡುವುದಿಲ್ಲ. ನೀವು ಪೇಚಾಡ ಬೇಡಿ, ಒಳ್ಳೆಯದಾಗುತ್ತದೆ " ಎಂದು ಹೇಳಿ ಹೊರಟುಹೋದನು. ರಾತ್ರಿ ಹೊತ್ತು ಮೀರಿತು, ಅರ್ಧ ರಾತ್ರಿಯಾಯಿತು. ಪಾರ್ವತಮ್ಮನು ಅಳುತ್ತಲೇ ಇದ್ದಳು. ಒಂದೆರಡು ಬಾರಿ ಜ್ಞಾನ ತಪ್ಪಿದಂತಾಯಿತು. ಶ್ಯಾಮಲೆಯ ಶರೀರವೆಲ್ಲವೂ ನಡುಗುತ್ತಿತ್ತು. ಅವಳು ಅತ್ತು ಅತ್ತು ಮಲಗಿದಳು. ಬೆಳಕು ಹರಿಯಿತು. ಶ್ಯಾಮಲೆಯು ಎದ್ದು ತಾಯಿಯ ಮುಖವನ್ನು ನೋಡಿದಳು. ತಾಯಿಯ ಮುಖದಲ್ಲಿ ಹುಚ್ಚಿನ ಚಿಹ್ನೆ ಕಂಡಿತು! ಶ್ಯಾಮಲೆ ಆಪಾದ ಮಸ್ತಕ ಬೆವರಿದಳು. ಧೈರ್ಯ ತಂದುಕೊಂಡು ತನ್ನ ಕೋಣೆಗೆ ಹೋಗಿ ಬೇರೆ ಸೀರೆಯನ್ನುಟ್ಟುಕೊಂಡು ಹೊರಗೆ ಬಂದು, " ಅಮ್ಮಾ, ಅಳಬೇಡ! ಧೈರ್ಯದಿಂದಿರು. ನಾನು ಅಣ್ಣನನ್ನು ಕರೆತರುತ್ತೇನೆ " ಎಂದು ಹೇಳಿ ಉತ್ತರವನ್ನು ನಿರೀಕ್ಷಿಸದೆಯೇ ಹೊರಟುಹೋದಳು. ಪಾರ್ವತಮ್ಮನಿಗೆ ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟಂತಾಯಿತು. ಆಕೆಗೆ ತನ್ನದೆಂಬ ವಸ್ತುಗಳೆಲ್ಲಾ ಹಾರಿ ಹೋದಂತಾಯಿತು. ಅವಳು ನಿರ್ವಿಣ್ಣಳಾಗಿ ಕುಳಿತಳು. ಶ್ಯಾಮಲೆಯು ಮನೆಯಿಂದ ಹೊರಟು, ಎಲ್ಲಿಗೆ ಹೋಗಬೇಕೆಂದು ಕ್ಷಣ ಹೊತ್ತು ಯೋಚಿಸಿದಳು. ಏನೂ ತೋರಲಿಲ್ಲ. ನೆಟ್ಟಗೆ ಸೆಂಟ್ರಲ್ ಜೈಲು ಬಾಗಿಲಿಗೆ ಹೋದಳು. ಅಲ್ಲೆಲ್ಲಾ ಮಿಲಿಟರಿ ಪಹರೆ ಇತ್ತು. ಶ್ಯಾಮಲೆಯು ಧೈರ್ಯವಾಗಿ ಹೆಬ್ಬಾಗಿಲಿಗೆ ಹೋದಳು. ಅಲ್ಲಿದ್ದ ಅಧಿಕಾರಿಯು " ಯಾರಮ್ಮಾ! ನೀನು ಇಲ್ಲಿಗೇಕೆ ಬಂದೆ? " ಎಂದು ಕೇಳಿದರು. ಶ್ಯಾಮಲೆಯು " ಈ ಜೈಲಿನಲ್ಲಿ<noinclude></noinclude> oqwbeidz5fuwj50fj2bspa54tnlj2xs ಪುಟ:Chitrakuuta (1954).djvu/೫೦ 104 120877 324791 2026-06-16T04:54:25Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಚಿತ್ರಕೂಟ ೩೫ ನಮ್ಮಣ್ಣನು ಇದಾನೆಯೇ ಎಂದು ವಿಚಾರಿಸಲು ಬಂಡೆ” “ ಅದೆಲ್ಲಾ ನಮಗೆ ಗೊತ್ತಿಲ್ಲ. ನೀನು ಪೋಲೀಸು ಐ. ಜಿ. ಆಫೀಸಿಗೆ ಹೋಗಿ ವಿಚಾರಿಸು. ತಿಳಿಯಬಹುದು.” ಶ್ಯಾಮಲೆಯು «ಆ ಆಫೀಸು ಇರುವುಡೆಲ್ಲಿ? ” ಎಂದು ಹೇಳಿದ... 324791 proofread-page text/x-wiki <noinclude><pagequality level="1" user="Nihar Chakravarti" /></noinclude>ಚಿತ್ರಕೂಟ ೩೫ ನಮ್ಮಣ್ಣನು ಇದಾನೆಯೇ ಎಂದು ವಿಚಾರಿಸಲು ಬಂಡೆ” “ ಅದೆಲ್ಲಾ ನಮಗೆ ಗೊತ್ತಿಲ್ಲ. ನೀನು ಪೋಲೀಸು ಐ. ಜಿ. ಆಫೀಸಿಗೆ ಹೋಗಿ ವಿಚಾರಿಸು. ತಿಳಿಯಬಹುದು.” ಶ್ಯಾಮಲೆಯು «ಆ ಆಫೀಸು ಇರುವುಡೆಲ್ಲಿ? ” ಎಂದು ಹೇಳಿದಳು, ಅಧಿಕಾರಿಯು ದಾರಿಯನ್ನು ಹೇಳಿದನು. ಶ್ಯಾಮಲೆಯು ಮಿಂಚಿನ ವೇಗ ದಿಂದ ಆ ಕಛೇರಿಯ ಕಡೆಗೆ ಹೊರಟಳು. ದಾರಿಯಲ್ಲಿ ಹೆಜ್ಜೆ ಹೆಜ್ಜೆಗೂ ಪೋಲೀಸರ ಕಾವಲಿತ್ತು. ಆದರೆ ಯಾರೂ ಈ ಹುಡುಗಿಯನ್ನು ತಡೆಯಲಿಲ್ಲ. ಶ್ಯಾಮಲೆಯು ಐ. ಜಿ. ಆಫೀಸಿನ ಮುಂದೆ ಹೋಗಿ 4 ಇದೇ ಐ. ಜಿ. ಸಾಹೇಬರ ಕಛೇರಿಯೇನು ?” ಎಂದು ಕೇಳಿದಳು. ಪಹೆರೆಯವನು “ ಏಕಮ್ಮ್ಮಾ ? ” ಎಂದು ಪ್ರಶ್ನೆಮಾಡಿದನು. « ನಾನು, ಸಾಹೇಬರ ಭೇಟ ಮಾಡಬೇಕು. ? « ಈಗ ಐ. ಜಿ ಯವರಿಗೆ ಪುರುಸೊತ್ತಿಲ್ಲ ಮಿನಿಸ್ಟರು ಬಂದಿದ್ದಾರೆ. ಅವರೊಡನೆ ಮಾತಾಡುತ್ತಿದ್ದಾರೆ. > ಎಂದು ಪಹರೆಯವ ಆಕೆಯನ್ನು ತಡೆದ. ಬಲ! ನನ್ನನ್ನು ತಡೆಯ ಚೇಡಿ ಬಿಡಿ ” ಎಂದು ಶ್ಯಾಮಲೆ ನುಗ್ಗು ವುದಕ್ಕೆ ಹೋದಳು. ಅಷ್ಟರಲ್ಲಿ ಆಫೀಸಿನ ಬಾಗಿಲು ತೆರೆಯಿತು. ಎದುರಿಗೆ ಸಿಲ್ಫು ಸೂಟನ್ನು ಧರಿಸಿದ ಕಲಾಪತ್ತು ರುಮಾಲಿನ ಪ್ರಸನ್ನ ಮುಖ ಮುದ್ರೆಯ ದೊಡ್ಡ ಮನುಷ್ಯರೊಬ್ಬರು ನಿಂತಿದ್ದರು. ಅವರು ಕ ಬೀಸಿದರು. ಪೋಲೀಸ ರೆಲ್ಲಾ ದೂರಕೆ ಸರಿತ ಕ; ಆ ಅಧಿಕಾರಿಗಳು ಮೃದುವಾಣಿಯಿಂದ “ ನೀನಾರಮ್ಮ? ನಿನಗೇನು ಬೇಕು ?” ಎಂದರು. ಶ್ಯಾಮಲೆಯು ಗಾಬರಿಯಿಂದ ಗದ್ದದ ಕಂಠದಿಂದ «4 ನಾನು ಐ. ಜಿ. ಸಾಹೇಬರ ಭೇಟಮಾಡಬೇಕು. ನೀವೇ ಐ. ಜಿ. ಸಾಹೇಬರೋ ? * ಎಂದು ಕೇಳಿದಳು. ಅವರು ಮುಗುಳು ನಗುವನ್ನು ನಗುತ್ತಾ, “ ನಾನು ಐ. ಜಿ. ಸಾಹೇಬರಲ್ಲ. ನಾನೊಬ್ಬ ಸರಕಾರಿ ಅಧಿಕಾರಿ. ಅಗೋ, ಅವರು ಐ. ಜಿ. ಸಾಹೇಬರು. ನಿನಗೇನು ಬೇಕು ಹೇಳು. ಈ ಕುರ್ಜಿಯ ಮೇಲೆ ಕುಳಿತುಕೋ! ಗಾಬರಿಸಷಡಬೇಡಮ್ಮ” ಎಂದು ಹೇಳಿದರು.<noinclude></noinclude> mm36u07es64svc8n8evwiyrlr8viyyz 324825 324791 2026-06-16T05:30:50Z Nihar Chakravarti 8555 /* Proofread */ 324825 proofread-page text/x-wiki <noinclude><pagequality level="3" user="Nihar Chakravarti" />{{rh||ಚಿತ್ರಕೂಟ|೩೫}}</noinclude>ನಮ್ಮಣ್ಣನು ಇದ್ದಾನೆಯೇ ಎಂದು ವಿಚಾರಿಸಲು ಬಂದೆ ” “ ಅದೆಲ್ಲಾ ನಮಗೆ ಗೊತ್ತಿಲ್ಲ. ನೀನು ಪೋಲೀಸು ಐ. ಜಿ. ಆಫೀಸಿಗೆ ಹೋಗಿ ವಿಚಾರಿಸು. ತಿಳಿಯಬಹುದು. ” ಶ್ಯಾಮಲೆಯು “ ಆ ಆಫೀಸು ಇರುವುದೆಲ್ಲಿ ? ” ಎಂದು ಕೇಳಿದಳು. ಅಧಿಕಾರಿಯು ದಾರಿಯನ್ನು ಹೇಳಿದನು. ಶ್ಯಾಮಲೆಯು ಮಿಂಚಿನ ವೇಗ ದಿಂದ ಆ ಕಛೇರಿಯ ಕಡೆಗೆ ಹೊರಟಳು. ದಾರಿಯಲ್ಲಿ ಹೆಜ್ಜೆ ಹೆಜ್ಜೆಗೂ ಪೋಲೀಸರ ಕಾವಲಿತ್ತು. ಆದರೆ ಯಾರೂ ಈ ಹುಡುಗಿಯನ್ನು ತಡೆಯಲಿಲ್ಲ. ಶ್ಯಾಮಲೆಯು ಐ. ಜಿ. ಆಫೀಸಿನ ಮುಂದೆ ಹೋಗಿ “ ಇದೇ ಐ. ಜಿ. ಸಾಹೇಬರ ಕಛೇರಿಯೇನು ? ” ಎಂದು ಕೇಳಿದಳು. ಪಹರೆಯವನು “ ಏಕಮ್ಮಾ ? ” ಎಂದು ಪ್ರಶ್ನೆಮಾಡಿದನು. “ ನಾನು, ಸಾಹೇಬರ ಭೇಟಿ ಮಾಡಬೇಕು. ” “ ಈಗ ಐ. ಜಿ ಯವರಿಗೆ ಪುರುಸೊತ್ತಿಲ್ಲ. ಮಿನಿಸ್ಟರು ಬಂದಿದ್ದಾರೆ. ಅವರೊಡನೆ ಮಾತನಾಡುತ್ತಿದ್ದಾರೆ. ” ಎಂದು ಪಹರೆಯವ ಆಕೆಯನ್ನು ತಡೆದ. “ ಇಲ್ಲ ! ಇಲ್ಲ ! ನನ್ನನ್ನು ತಡೆಯ ಬೇಡಿ ಬಿಡಿ ” ಎಂದು ಶ್ಯಾಮಲೆ ನುಗ್ಗು ವುದಕ್ಕೆ ಹೋದಳು. ಅಷ್ಟರಲ್ಲಿ ಆಫೀಸಿನ ಬಾಗಿಲು ತೆರೆಯಿತು. ಎದುರಿಗೆ ಸಿಲ್ಕ್ ಸೂಟನ್ನು ಧರಿಸಿದ ಕಲಾಪತ್ತು ರುಮಾಲಿನ ಪ್ರಸನ್ನ ಮುಖ ಮುದ್ರೆಯ ದೊಡ್ಡ ಮನುಷ್ಯರೊಬ್ಬರು ನಿಂತಿದ್ದರು. ಅವರು ಕೈ ಬೀಸಿದರು. ಪೋಲೀಸ ರೆಲ್ಲಾ ದೂರ ಸರಿದರು. ಆ ಅಧಿಕಾರಿಗಳು ಮೃದುವಾಣಿಯಿಂದ “ ನೀನಾರಮ್ಮ ? ನಿನಗೇನು ಬೇಕು ? ” ಎಂದರು. ಶ್ಯಾಮಲೆಯು ಗಾಬರಿಯಿಂದ ಗದ್ಗದ ಕಂಠದಿಂದ “ ನಾನು ಐ. ಜಿ. ಸಾಹೇಬರ ಭೇಟಿಮಾಡಬೇಕು. ನೀವೇ ಐ. ಜಿ. ಸಾಹೇಬರೋ ? ” ಎಂದು ಕೇಳಿದಳು. ಅವರು ಮುಗುಳು ನಗುವನ್ನು ನಗುತ್ತಾ, “ ನಾನು ಐ. ಜಿ. ಸಾಹೇಬರಲ್ಲ. ನಾನೊಬ್ಬ ಸರಕಾರಿ ಅಧಿಕಾರಿ. ಅಗೋ, ಅವರು ಐ. ಜಿ. ಸಾಹೇಬರು. ನಿನಗೇನು ಬೇಕು ಹೇಳು. ಈ ಕುರ್ಚಿಯ ಮೇಲೆ ಕುಳಿತುಕೋ ! ಗಾಬರಿಪಡಬೇಡಮ್ಮ ” ಎಂದು ಹೇಳಿದರು.<noinclude></noinclude> 3a854nfby05phc5e7b203x2iolxw320 324876 324825 2026-06-16T07:29:34Z A826 6806 /* Validated */ 324876 proofread-page text/x-wiki <noinclude><pagequality level="4" user="A826" />{{rh||ಚಿತ್ರಕೂಟ|೩೫}}</noinclude>ನಮ್ಮಣ್ಣನು ಇದ್ದಾನೆಯೇ ಎಂದು ವಿಚಾರಿಸಲು ಬಂದೆ " " ಅದೆಲ್ಲಾ ನಮಗೆ ಗೊತ್ತಿಲ್ಲ. ನೀನು ಪೋಲೀಸು ಐ. ಜಿ. ಆಫೀಸಿಗೆ ಹೋಗಿ ವಿಚಾರಿಸು. ತಿಳಿಯಬಹುದು. " ಶ್ಯಾಮಲೆಯು " ಆ ಆಫೀಸು ಇರುವುದೆಲ್ಲಿ? " ಎಂದು ಕೇಳಿದಳು. ಅಧಿಕಾರಿಯು ದಾರಿಯನ್ನು ಹೇಳಿದನು. ಶ್ಯಾಮಲೆಯು ಮಿಂಚಿನ ವೇಗದಿಂದ ಆ ಕಛೇರಿಯ ಕಡೆಗೆ ಹೊರಟಳು. ದಾರಿಯಲ್ಲಿ ಹೆಜ್ಜೆ ಹೆಜ್ಜೆಗೂ ಪೋಲೀಸರ ಕಾವಲಿತ್ತು. ಆದರೆ ಯಾರೂ ಈ ಹುಡುಗಿಯನ್ನು ತಡೆಯಲಿಲ್ಲ. ಶ್ಯಾಮಲೆಯು ಐ. ಜಿ. ಆಫೀಸಿನ ಮುಂದೆ ಹೋಗಿ " ಇದೇ ಐ. ಜಿ. ಸಾಹೇಬರ ಕಛೇರಿಯೇನು? " ಎಂದು ಕೇಳಿದಳು. ಪಹರೆಯವನು " ಏಕಮ್ಮಾ? " ಎಂದು ಪ್ರಶ್ನೆಮಾಡಿದನು. " ನಾನು, ಸಾಹೇಬರ ಭೇಟಿ ಮಾಡಬೇಕು. " " ಈಗ ಐ. ಜಿ ಯವರಿಗೆ ಪುರುಸೊತ್ತಿಲ್ಲ. ಮಿನಿಸ್ಟರು ಬಂದಿದ್ದಾರೆ. ಅವರೊಡನೆ ಮಾತನಾಡುತ್ತಿದ್ದಾರೆ. " ಎಂದು ಪಹರೆಯವ ಆಕೆಯನ್ನು ತಡೆದ. " ಇಲ್ಲ! ಇಲ್ಲ! ನನ್ನನ್ನು ತಡೆಯ ಬೇಡಿ ಬಿಡಿ " ಎಂದು ಶ್ಯಾಮಲೆ ನುಗ್ಗುವುದಕ್ಕೆ ಹೋದಳು. ಅಷ್ಟರಲ್ಲಿ ಆಫೀಸಿನ ಬಾಗಿಲು ತೆರೆಯಿತು. ಎದುರಿಗೆ ಸಿಲ್ಕ್ ಸೂಟನ್ನು ಧರಿಸಿದ ಕಲಾಪತ್ತು ರುಮಾಲಿನ ಪ್ರಸನ್ನ ಮುಖ ಮುದ್ರೆಯ ದೊಡ್ಡ ಮನುಷ್ಯರೊಬ್ಬರು ನಿಂತಿದ್ದರು. ಅವರು ಕೈ ಬೀಸಿದರು. ಪೋಲೀಸ ರೆಲ್ಲಾ ದೂರ ಸರಿದರು. ಆ ಅಧಿಕಾರಿಗಳು ಮೃದುವಾಣಿಯಿಂದ " ನೀನಾರಮ್ಮ? ನಿನಗೇನು ಬೇಕು? " ಎಂದರು. ಶ್ಯಾಮಲೆಯು ಗಾಬರಿಯಿಂದ ಗದ್ಗದ ಕಂಠದಿಂದ " ನಾನು ಐ. ಜಿ. ಸಾಹೇಬರ ಭೇಟಿಮಾಡಬೇಕು. ನೀವೇ ಐ. ಜಿ. ಸಾಹೇಬರೋ? " ಎಂದು ಕೇಳಿದಳು. ಅವರು ಮುಗುಳು ನಗುವನ್ನು ನಗುತ್ತಾ, " ನಾನು ಐ. ಜಿ. ಸಾಹೇಬರಲ್ಲ. ನಾನೊಬ್ಬ ಸರಕಾರಿ ಅಧಿಕಾರಿ. ಅಗೋ, ಅವರು ಐ. ಜಿ. ಸಾಹೇಬರು. ನಿನಗೇನು ಬೇಕು ಹೇಳು. ಈ ಕುರ್ಚಿಯ ಮೇಲೆ ಕುಳಿತುಕೋ! ಗಾಬರಿಪಡಬೇಡಮ್ಮ " ಎಂದು ಹೇಳಿದರು.<noinclude></noinclude> nolyo4joz8fjebvtqueazzoy741gte6 ಪುಟ:Chitrakuuta (1954).djvu/೫೧ 104 120878 324792 2026-06-16T04:54:31Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ತ್ಸ ಚಿತ್ರಕೂಟ ಶ್ಯಾಮಲೆಯು (( ನಮ್ಮಣ್ಣನು ಎಲ್ಲಿದ್ದಾನೆ 9 ಬದುಕಿದ್ದಾನೆಯೇ » ಎಂದು ಕೇಳಿದಳು. ಆ ಅಧಿಕಾರಿಗಳು ಮಿನಿಸ್ಟರ್‌ ರಾಮನಾಥನ್‌. ಅವರಿಗೆ ಕಣ್ಣುಗಳಲ್ಲಿ ನೀರು ತುಂಬಿತು. ಅವರು ಶ್ಯಾಮಲೆಯ ಕೈಹಿಡಿದು ಕುರ್... 324792 proofread-page text/x-wiki <noinclude><pagequality level="1" user="Nihar Chakravarti" /></noinclude>ತ್ಸ ಚಿತ್ರಕೂಟ ಶ್ಯಾಮಲೆಯು (( ನಮ್ಮಣ್ಣನು ಎಲ್ಲಿದ್ದಾನೆ 9 ಬದುಕಿದ್ದಾನೆಯೇ » ಎಂದು ಕೇಳಿದಳು. ಆ ಅಧಿಕಾರಿಗಳು ಮಿನಿಸ್ಟರ್‌ ರಾಮನಾಥನ್‌. ಅವರಿಗೆ ಕಣ್ಣುಗಳಲ್ಲಿ ನೀರು ತುಂಬಿತು. ಅವರು ಶ್ಯಾಮಲೆಯ ಕೈಹಿಡಿದು ಕುರ್ಚಿಯ ಮೇಲೆ ಕೂರಿಸಿದರು. “ ನಿಮ್ಮ ಒಣ್ಸನ ಹೆಸರೇನಮ್ಮ ? ಎಂದು ಕೇಳಿದರು. « ನಮ್ಮಣ್ಣ 2ನ ಹೆಸರು, ನಾರಾಯಣ. ಎಂ. ಎಸ್‌ಸಿ. ಪಾಸ್‌ ಮಾಡಿದ್ದಾನೆ ನೆ. ಕ ಬೆಳಗ್ಗೆ ದಾಗ ಬಿಟ್ಟು ಹೋದವನು ಮನೆಗೆ ಬಂದಿಲ್ಲ. ನಮ್ಮ ತುದಿಯಿಲ್ಲ. ತಾಯಿಯು ದುಃಖಿಸುತ್ತಿದ್ದಾಳೆ. ಸೋಲೀಸರು ಲಾಠಿ ಛಾರ್ಜು ಮಾಡಿದಾ ರಂತೆ; ಗುಂಡು ಹಾರಿಸಿದ್ದಾರಂತೆ. ನಮ ಧನು ಬದುಕಿದ್ದಾ ನೋ ಸತ್ತು ಹೋದನೋ....” ಎನ್ನುತ್ತಾ ಗಟ್ಟಿಯಾಗಿ ಅಳ ತೊಡಗಿದಳು. ಟಿ ಆಳಬೇಡಮ್ಮಾ ನಿಮ್ಮ ಅಣ್ಣ ಬದುಕಿದ್ದಾನೆ ನೆ. ಈಗಲೇ ವಿಚಾರಿಸಿ ಹೇಳುತ್ತೇನೆ. ಸ್ವಲ್ಪ ಸಮಾಧಾನ ತಂದುಕೋ ಸ ಎಂದು ಹೇಳಿ ಕುರ್ಚಿಯ ಮೇಲೆ ಮಂತ್ರಿಗಳು ಟು ಕೂಡು ಏ.ಜಿ. ಯವರಿಗೆ ೫ ಸನ್ನ ಮಾಡಿದರು. ಜಿ. ಯವರು ಎರಡು ಮೂರು ಕಡೆ ಫೋನ್‌ ಮಾಡಿದರು. ಹುಡುಗಿಯ ಹತ್ತಿರ ಬಂದು, “ ನಿಮ್ಮ ಅಣ್ಣನ ಹೆಸರು ಬಿ. ಎಸ್‌. ನಾರಾಯಣ ಅಲ್ಲವೇ?” ಎಂದರು. 4 ಕಾಹು [೫ « ಅವರು ನಿನ್ನೆ ದಸ್ತಗಿರಿಯಾಗಿದ್ದಾರೆ. ಜೈಲಿನಲ್ಲಿದ್ದಾರೆ. 3? ಶ್ಯಾಮಲೆಯು ಮಂತ್ರಿಗಳ ಮುಂದೆ ಹಿಂತುಕ್ಕೆಮುಗಿದ್ಳು “ನಮ್ಮಣ್ಣನು ಕಾಂಗ್ರೆಸ್‌ ಸೇರಿದವನಲ್ಲ. ಅವನೆ ಶೇಮೂ ತಪು ಮಾಡಿಲ್ಲ. ಅವನನ್ನು ಬಿಟ್ಟು ಬಿಡಿ. ನಮ್ಮ ಅಮ್ಮನು ಬದುಕಿಕೊಳ್ಳುತ್ತ ೪ ಕಾಪಾಡಿರಿ ” ಎಂದು ದಿ ಶೈ ನ್ಯದಿಂದ ಕೇಳಿಕೊಂಡಳು. ಮಂತ್ರಿ ಗಳು, " ಯಾರು ಕಾಂಗ್ರೆ ಸಿನವರೋ ಯಾರು ಅಲ್ಲವೋ, ಯಾರು ತಪ್ಪಿ ತಸ್ತ ರೋ ತನಿ ತಸ್ಥ ರಲ್ಲವೋ ಒಂದನ್ನೂ ಹೇಳಲಾಗುವುದಿಲ್ಲ. ಈ ಚ ಸ್ಟ ಕಾಡುಕಿಚ್ಚು ಹಬ್ಬಿ ದಂತೆ ವ್ಯಾಪಿಸಿದೆ. ಇದನ್ನು ಮೊದಲು ಹತೋಟಿಗೆ ತರುವುದು ನಮ್ಮ ೬೫. ಒಂದೆರಡು ದಿವಸಗಳಲ್ಲಿ. ಹತೋಟಿಗೆ ಬರುತ್ತದೆ. ನಿಮ್ಮ ಣ್ಲನದೇನೂ ತಪ್ಪಿಲ್ಲದಿದ್ದರೆ ಬಿಟ್ಟು ಬಿಡುತ್ತೆ (ವೆ ” ಎಂದರು. ೮<noinclude></noinclude> cvfe41299xejybsb3wrq7tcu1irca71 324826 324792 2026-06-16T05:31:39Z Nihar Chakravarti 8555 /* Proofread */ 324826 proofread-page text/x-wiki <noinclude><pagequality level="3" user="Nihar Chakravarti" />{{rh|೩೬|ಚಿತ್ರಕೂಟ}}</noinclude>ಶ್ಯಾಮಲೆಯು “ ನಮ್ಮಣ್ಣನು ಎಲ್ಲಿದ್ದಾನೆ ? ಬದುಕಿದ್ದಾನೆಯೇ ” ಎಂದು ಕೇಳಿದಳು. ಆ ಅಧಿಕಾರಿಗಳು ಮಿನಿಸ್ಟರ್ ರಾಮನಾಥನ್. ಅವರಿಗೆ ಕಣ್ಣುಗಳಲ್ಲಿ ನೀರು ತುಂಬಿತು. ಅವರು ಶ್ಯಾಮಲೆಯ ಕೈಹಿಡಿದು ಕುರ್ಚಿಯ ಮೇಲೆ ಕೂರಿಸಿದರು. “ ನಿಮ್ಮ ಅಣ್ಣನ ಹೆಸರೇನಮ್ಮ ? ” ಎಂದು ಕೇಳಿದರು. “ ನಮ್ಮಣ್ಣನ ಹೆಸರು, ನಾರಾಯಣ. ಎಂ. ಎಸ್ಸಿ. ಪಾಸ್ ಮಾಡಿದ್ದಾನೆ. ನಿನ್ನೆ ಬೆಳಗ್ಗೆ ಮನೆ ಬಿಟ್ಟು ಹೋದವನು ಮನೆಗೆ ಬಂದಿಲ್ಲ. ನಮ್ಮ ತಂದೆಯಿಲ್ಲ. ತಾಯಿಯು ದುಃಖಿಸುತ್ತಿದ್ದಾಳೆ. ಪೋಲೀಸರು ಲಾಠಿ ಚಾರ್ಜು ಮಾಡಿದ್ದಾರಂತೆ ; ಗುಂಡು ಹಾರಿಸಿದ್ದಾರಂತೆ. ನಮ್ಮಣ್ಣನು ಬದುಕಿದ್ದಾನೋ ಸತ್ತು ಹೋದನೋ.... ” ಎನ್ನುತ್ತಾ ಗಟ್ಟಿಯಾಗಿ ಅಳ ತೊಡಗಿದಳು. “ ಅಳಬೇಡಮ್ಮಾ ನಿಮ್ಮ ಅಣ್ಣ ಬದುಕಿದ್ದಾನೆ. ಈಗಲೇ ವಿಚಾರಿಸಿ ಹೇಳುತ್ತೇನೆ. ಸ್ವಲ್ಪ ಸಮಾಧಾನ ತಂದುಕೋ ! ” ಎಂದು ಹೇಳಿ ಕುರ್ಚಿಯ ಮೇಲೆ ಮಂತ್ರಿಗಳು ಕುಳಿತುಕೊಂಡು, ಐ. ಜಿ. ಯವರಿಗೆ ಸನ್ನೆ ಮಾಡಿದರು. ಐ. ಜಿ. ಯವರು ಎರಡು ಮೂರು ಕಡೆ ಫೋನ್ ಮಾಡಿದರು. ಹುಡುಗಿಯ ಹತ್ತಿರ ಬಂದು, “ ನಿಮ್ಮ ಅಣ್ಣನ ಹೆಸರು ಬಿ. ಎಸ್. ನಾರಾಯಣ ಅಲ್ಲವೇ ? ” ಎಂದರು. “ ಹೌದು ! ” “ ಅವರು ನಿನ್ನೆ ದಸ್ತಗಿರಿಯಾಗಿದ್ದಾರೆ. ಜೈಲಿನಲ್ಲಿದ್ದಾರೆ. ” ಶ್ಯಾಮಲೆಯು ಮಂತ್ರಿಗಳ ಮುಂದೆ ನಿಂತುಕೈಮುಗಿದು, “ ನಮ್ಮಣ್ಣನು ಕಾಂಗ್ರೆಸ್ ಸೇರಿದವನಲ್ಲ. ಅವನೇನೂ ತಪ್ಪು ಮಾಡಿಲ್ಲ. ಅವನನ್ನು ಬಿಟ್ಟು ಬಿಡಿ. ನಮ್ಮ ಅಮ್ಮನು ಬದುಕಿಕೊಳ್ಳುತ್ತಾಳೆ. ಕಾಪಾಡಿರಿ ” ಎಂದು ದೈನ್ಯದಿಂದ ಕೇಳಿಕೊಂಡಳು. ಮಂತ್ರಿಗಳು, “ ಯಾರು ಕಾಂಗ್ರೆಸ್ಸಿನವರೋ ಯಾರು ಅಲ್ಲವೋ, ಯಾರು ತಪ್ಪಿತಸ್ಥರೋ ತಪ್ಪಿತಸ್ಥರಲ್ಲವೋ ಒಂದನ್ನೂ ಹೇಳಲಾಗುವುದಿಲ್ಲ. ಈ ಚಳುವಳಿಯು ಕಾಡುಕಿಚ್ಚು ಹಬ್ಬಿದಂತೆ ವ್ಯಾಪಿಸಿದೆ. ಇದನ್ನು ಮೊದಲು ಹತೋಟಿಗೆ ತರುವುದು ನಮ್ಮ ಕೆಲಸ. ಒಂದೆರಡು ದಿವಸಗಳಲ್ಲಿ ಹತೋಟಿಗೆ ಬರುತ್ತದೆ. ನಿಮ್ಮ ಅಣ್ಣನದೇನೂ ತಪ್ಪಿಲ್ಲದಿದ್ದರೆ ಬಿಟ್ಟುಬಿಡುತ್ತೇವೆ ” ಎಂದರು.<noinclude></noinclude> igb1mwn4kmgv6bz677m8q0zh5mdt856 324877 324826 2026-06-16T07:30:15Z A826 6806 /* Validated */ 324877 proofread-page text/x-wiki <noinclude><pagequality level="4" user="A826" />{{rh|೩೬|ಚಿತ್ರಕೂಟ}}</noinclude>ಶ್ಯಾಮಲೆಯು " ನಮ್ಮಣ್ಣನು ಎಲ್ಲಿದ್ದಾನೆ? ಬದುಕಿದ್ದಾನೆಯೇ " ಎಂದು ಕೇಳಿದಳು. ಆ ಅಧಿಕಾರಿಗಳು ಮಿನಿಸ್ಟರ್ ರಾಮನಾಥನ್. ಅವರಿಗೆ ಕಣ್ಣುಗಳಲ್ಲಿ ನೀರು ತುಂಬಿತು. ಅವರು ಶ್ಯಾಮಲೆಯ ಕೈಹಿಡಿದು ಕುರ್ಚಿಯ ಮೇಲೆ ಕೂರಿಸಿದರು. " ನಿಮ್ಮ ಅಣ್ಣನ ಹೆಸರೇನಮ್ಮ? " ಎಂದು ಕೇಳಿದರು. " ನಮ್ಮಣ್ಣನ ಹೆಸರು, ನಾರಾಯಣ. ಎಂ. ಎಸ್ಸಿ. ಪಾಸ್ ಮಾಡಿದ್ದಾನೆ. ನಿನ್ನೆ ಬೆಳಗ್ಗೆ ಮನೆ ಬಿಟ್ಟು ಹೋದವನು ಮನೆಗೆ ಬಂದಿಲ್ಲ. ನಮ್ಮ ತಂದೆಯಿಲ್ಲ. ತಾಯಿಯು ದುಃಖಿಸುತ್ತಿದ್ದಾಳೆ. ಪೋಲೀಸರು ಲಾಠಿ ಚಾರ್ಜು ಮಾಡಿದ್ದಾರಂತೆ; ಗುಂಡು ಹಾರಿಸಿದ್ದಾರಂತೆ. ನಮ್ಮಣ್ಣನು ಬದುಕಿದ್ದಾನೋ ಸತ್ತು ಹೋದನೋ.... " ಎನ್ನುತ್ತಾ ಗಟ್ಟಿಯಾಗಿ ಅಳ ತೊಡಗಿದಳು. " ಅಳಬೇಡಮ್ಮಾ ನಿಮ್ಮ ಅಣ್ಣ ಬದುಕಿದ್ದಾನೆ. ಈಗಲೇ ವಿಚಾರಿಸಿ ಹೇಳುತ್ತೇನೆ. ಸ್ವಲ್ಪ ಸಮಾಧಾನ ತಂದುಕೋ! " ಎಂದು ಹೇಳಿ ಕುರ್ಚಿಯ ಮೇಲೆ ಮಂತ್ರಿಗಳು ಕುಳಿತುಕೊಂಡು, ಐ. ಜಿ. ಯವರಿಗೆ ಸನ್ನೆ ಮಾಡಿದರು. ಐ. ಜಿ. ಯವರು ಎರಡು ಮೂರು ಕಡೆ ಫೋನ್ ಮಾಡಿದರು. ಹುಡುಗಿಯ ಹತ್ತಿರ ಬಂದು, " ನಿಮ್ಮ ಅಣ್ಣನ ಹೆಸರು ಬಿ. ಎಸ್. ನಾರಾಯಣ ಅಲ್ಲವೇ? " ಎಂದರು. " ಹೌದು! " " ಅವರು ನಿನ್ನೆ ದಸ್ತಗಿರಿಯಾಗಿದ್ದಾರೆ. ಜೈಲಿನಲ್ಲಿದ್ದಾರೆ. " ಶ್ಯಾಮಲೆಯು ಮಂತ್ರಿಗಳ ಮುಂದೆ ನಿಂತುಕೈಮುಗಿದು, " ನಮ್ಮಣ್ಣನು ಕಾಂಗ್ರೆಸ್ ಸೇರಿದವನಲ್ಲ. ಅವನೇನೂ ತಪ್ಪು ಮಾಡಿಲ್ಲ. ಅವನನ್ನು ಬಿಟ್ಟು ಬಿಡಿ. ನಮ್ಮ ಅಮ್ಮನು ಬದುಕಿಕೊಳ್ಳುತ್ತಾಳೆ. ಕಾಪಾಡಿರಿ " ಎಂದು ದೈನ್ಯದಿಂದ ಕೇಳಿಕೊಂಡಳು. ಮಂತ್ರಿಗಳು, " ಯಾರು ಕಾಂಗ್ರೆಸ್ಸಿನವರೋ ಯಾರು ಅಲ್ಲವೋ, ಯಾರು ತಪ್ಪಿತಸ್ಥರೋ ತಪ್ಪಿತಸ್ಥರಲ್ಲವೋ ಒಂದನ್ನೂ ಹೇಳಲಾಗುವುದಿಲ್ಲ. ಈ ಚಳುವಳಿಯು ಕಾಡುಕಿಚ್ಚು ಹಬ್ಬಿದಂತೆ ವ್ಯಾಪಿಸಿದೆ. ಇದನ್ನು ಮೊದಲು ಹತೋಟಿಗೆ ತರುವುದು ನಮ್ಮ ಕೆಲಸ. ಒಂದೆರಡು ದಿವಸಗಳಲ್ಲಿ ಹತೋಟಿಗೆ ಬರುತ್ತದೆ. ನಿಮ್ಮ ಅಣ್ಣನದೇನೂ ತಪ್ಪಿಲ್ಲದಿದ್ದರೆ ಬಿಟ್ಟುಬಿಡುತ್ತೇವೆ " ಎಂದರು.<noinclude></noinclude> 76o00vb2s5xc6eo1qmdsi2rt3rf55zf ಪುಟ:Chitrakuuta (1954).djvu/೫೨ 104 120879 324793 2026-06-16T04:54:37Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಚಿತ್ರ ಕೂಟ ತೇ (( ನಮ್ಮಣ್ಣನು ಬದುಕಿದ್ದಾ ನೆಂದು ನಾನು ಹೇಗೆ ನಂಬಲಿ? » “ ನಾನು ಹೇಳುತ್ತೇನೆ, ನೀನು ನಂಬು. ನನಗೂ ನಿನ್ನಂತಹ ಮಗಳಿ ದ್ಟಾಳೆ. >» ತಿ (( ನಿಮ್ಮ ಮಗನನ್ನೂ ಚೈಲಿನಲ್ಲಿಟ್ಟದ್ದಾರೇನು 1೫ ಆ ಮಾತು ಕೇಳಿ ಮಂತ್ರ... 324793 proofread-page text/x-wiki <noinclude><pagequality level="1" user="Nihar Chakravarti" /></noinclude>ಚಿತ್ರ ಕೂಟ ತೇ (( ನಮ್ಮಣ್ಣನು ಬದುಕಿದ್ದಾ ನೆಂದು ನಾನು ಹೇಗೆ ನಂಬಲಿ? » “ ನಾನು ಹೇಳುತ್ತೇನೆ, ನೀನು ನಂಬು. ನನಗೂ ನಿನ್ನಂತಹ ಮಗಳಿ ದ್ಟಾಳೆ. >» ತಿ (( ನಿಮ್ಮ ಮಗನನ್ನೂ ಚೈಲಿನಲ್ಲಿಟ್ಟದ್ದಾರೇನು 1೫ ಆ ಮಾತು ಕೇಳಿ ಮಂತ್ರಿಗಳು ಅವಾಕ್ಪಾದರು, ಅಷ್ಟರಲ್ಲಿ ಅವರಿಗೆ ಎಲ್ಲಿಂದಲೋ ಫೋನು ಬಂತು. “ ಒಳ್ಳೆಯದ್ದು ಹೊರಡನ್ಮು, ನೀನು ನೆಟ್ಟಗೆ ಮನೆಗೆ ಹೋಗು ! ” ಎಂದರು. ಶ್ಯಾಮಲೆ ಯು ಬಿಕ್ಕಿ ಬಿಕ್ಕಿ ಅಳುತ್ತಾ, “ನಮ್ಮ ಅಣ್ಣ ನನ್ನು ಒಂದು ಬಾರಿ ತೋರಿಸಲಿ, ನಾನು ಧೈರ್ಯದಿಂದ ಹೋಗು ತ್ತೇನೆ” ಎಂದಳು. ರಾಮನಾಧನ್‌ರವರು ಸ್ಪಲ್ಪ ಹೊತ್ತು ಯೋಚಿಸಿ, “ ಆಗಲಿ | ಈ ಹುಡುಗಿಯನ್ನು ಜೈ ಜೈಲಿಗೆ ಕಳಿಸಿ ಇವಳ ್ಲನನ್ನು ತೋರಿಸಿ, ಮನೆಗೆ ಕಳಿಸಿರಿ” ಎಂದು ಐ, ಜೆ ಯವರಿಗೆ ಕ ಹೊರಟುಹೋದರು. ಐ. ಜಿ. ಸಾಹೇಬರು ಒಬ್ಬ ಪೋಲೀಸು ಅಧಿಕಾರಿಯನ್ನು ಕರೆದು ಅಸ್ಪಣೆ ಮಾಡಿದರು, ಆ ಅಧಿಕಾರಿಯು ಶ್ಯಾಮಲೆಯನ್ನು ಒಂದು ವ್ಯಾನಿನಲ್ಲಿ ಕೂಡಿಸಿ ಕೊಂಡು ಹೋಗಿ ಜೈಲಿಗೆ ಕರೆದುಕೊಂಡು ಸು: ಸೂಪರಿಂಬೆಂಡೆಂಟಿರ ಆಫೀಸಿಗೆ ಕರೆದುಕೊಂಡು ಹೋಗಿ ಅವರಿಗೆ ಮಂತ್ರಿಗಳ ಅಪ್ಪಣೆಯನ್ನು ತಿಳಿಸಿ ದನು. ಅವರಿಗೆ ಆಶ ಶ್ವರ್ಯವಾಯಿತು. ಇಬ್ಬರಿಗೂ ಕುಳಿತುಕೊಳ್ಳು ವಂತೆ ಹೇಳಿದರು. ಒಬ್ಬ ಮ ಕ್ಪ್‌ಗೆ ಒಂದು ಚೀಟಿ ಬರೆದುಕೂಟ್ಬು A. ಅಲ ವಾಸ ಹೆತ್ತು ನಿಮಿಷಗಳೊಳಗಾಗಿ 2 ನ್ನು ಆಫೀಸಿಗೆ ಕರೆತಂದನು. ನಾರಾಯಣನು ಅಲ್ಲಿ ಶ್ಯಾಮಲೆಯನ್ನು ಕಂಡು ಆಶ್ಚರ್ಯಚಕಿ ತನಾದನು. ಶ್ಯಾಮಲೆಯು ಓಡಿಹೋಗಿ ನಾರಾಯಣನನ್ನು ಅಪ್ಪಿ ಕೊಂಡಳು. ಕಣ್ಣುಗಳಲ್ಲಿ ನೀರು ಸುರಿಯುತ್ತಿತ್ತು. ನಾರಾ ಯ ನಗುತ್ತಿದ್ದನು. “ ಏಕೆ ಶ್ಯಾಮಲಾ! ಏಕ ಅಳುತ್ತೀ ? ಇಲ್ಲಿಗೇಕೆ ಬಂದೆ ? ಹೇಗೆ ಬಂದೆ? ? ಎಂದು ಕೇಳಿದನು. ಶ್ಯಾ ಮಲೆಯು « ಅಣ್ಣ್ವಾ ! ಊರಿನಲ್ಲೆಲ್ಲಾ ಗಲಾಟಿ. ನೀನು ಸತ ಬ್‌ ಅಮ್ಮ 'ಅಳುತ್ತಿ ದ್ಹಾಳೆ. ನನಗೆ ಒಂದೂ sas<noinclude></noinclude> fcl97pha0invxibjtgximu4og9jsp6j 324827 324793 2026-06-16T05:32:28Z Nihar Chakravarti 8555 /* Proofread */ 324827 proofread-page text/x-wiki <noinclude><pagequality level="3" user="Nihar Chakravarti" />{{rh||ಚಿತ್ರಕೂಟ|೩೭}}</noinclude>“ ನಮ್ಮಣ್ಣನು ಬದುಕಿದ್ದಾನೆಂದು ನಾನು ಹೇಗೆ ನಂಬಲಿ ? ” “ ನಾನು ಹೇಳುತ್ತೇನೆ, ನೀನು ನಂಬು. ನನಗೂ ನಿನ್ನಂತಹ ಮಗಳಿ ದ್ದಾಳೆ. ” “ ನಿಮ್ಮ ಮಗನನ್ನೂ ಜೈಲಿನಲ್ಲಿದ್ದಾರೇನು ? ” ಆ ಮಾತು ಕೇಳಿ ಮಂತ್ರಿಗಳು ಅವಾಕ್ಕಾದರು. ಅಷ್ಟರಲ್ಲಿ ಅವರಿಗೆ ಎಲ್ಲಿಂದಲೋ ಫೋನು ಬಂತು. “ ಒಳ್ಳೆಯದು ಹೊರಡಮ್ಮ, ನೀನು ನೆಟ್ಟಗೆ ಮನೆಗೆ ಹೋಗು ! ” ಎಂದರು. ಶ್ಯಾಮಲೆಯು ಬಿಕ್ಕಿ ಬಿಕ್ಕಿ ಅಳುತ್ತಾ, “ ನಮ್ಮ ಅಣ್ಣನನ್ನು ಒಂದು ಬಾರಿ ತೋರಿಸಲಿ, ನಾನು ಧೈರ್ಯದಿಂದ ಹೋಗು ತ್ತೇನೆ ” ಎಂದಳು. ರಾಮನಾಥನ್ ರವರು ಸ್ವಲ್ಪ ಹೊತ್ತು ಯೋಚಿಸಿ, “ ಆಗಲಿ ! ಈ ಹುಡುಗಿಯನ್ನು ಜೈಲಿಗೆ ಕಳಿಸಿ ಇವಳ ಅಣ್ಣನನ್ನು ತೋರಿಸಿ, ಮನೆಗೆ ಕಳಿಸಿರಿ ” ಎಂದು ಐ. ಜಿ. ಯವರಿಗೆ ಹೇಳಿ ಹೊರಟುಹೋದರು. ಐ. ಜಿ. ಸಾಹೇಬರು ಒಬ್ಬ ಪೋಲೀಸು ಅಧಿಕಾರಿಯನ್ನು ಕರೆದು ಅಪ್ಪಣೆ ಮಾಡಿದರು. ಆ ಅಧಿಕಾರಿಯು ಶ್ಯಾಮಲೆಯನ್ನು ಒಂದು ವ್ಯಾನಿನಲ್ಲಿ ಕೂಡಿಸಿ ಕೊಂಡು ಹೋಗಿ ಜೈಲಿಗೆ ಕರೆದುಕೊಂಡು ಹೋದನು. ಸೂಪರಿಂಟೆಂಡೆಂಟರ ಆಫೀಸಿಗೆ ಕರೆದುಕೊಂಡು ಹೋಗಿ, ಅವರಿಗೆ ಮಂತ್ರಿಗಳ ಅಪ್ಪಣೆಯನ್ನು ತಿಳಿಸಿ ದನು. ಅವರಿಗೆ ಆಶ್ಚರ್ಯವಾಯಿತು. ಇಬ್ಬರಿಗೂ ಕುಳಿತುಕೊಳ್ಳುವಂತೆ ಹೇಳಿದರು. ಒಬ್ಬ ಜವಾನನ ಕೈಗೆ ಒಂದು ಚೀಟಿ ಬರೆದುಕೊಟ್ಟು ಕಳುಹಿಸಿದರು. ಆ ಜವಾನ ಹತ್ತು ನಿಮಿಷಗಳೊಳಗಾಗಿ ನಾರಾಯಣನನ್ನು ಆಫೀಸಿಗೆ ಕರೆತಂದನು. ನಾರಾಯಣನು ಅಲ್ಲಿ ಶ್ಯಾಮಲೆಯನ್ನು ಕಂಡು ಆಶ್ಚರ್ಯಚಕಿ ತನಾದನು. ಶ್ಯಾಮಲೆಯು ಓಡಿಹೋಗಿ ನಾರಾಯಣನನ್ನು ಅಪ್ಪಿಕೊಂಡಳು. ಕಣ್ಣುಗಳಲ್ಲಿ ನೀರು ಸುರಿಯುತ್ತಿತ್ತು. ನಾರಾಯಣನು ನಗುತ್ತಿದ್ದನು. “ ಏಕೆ ಶ್ಯಾಮಲಾ ! ಏಕೆ ಅಳುತ್ತೀ ? ಇಲ್ಲಿಗೇಕೆ ಬಂದೆ ? ಹೇಗೆ ಬಂದೆ ? ” ಎಂದು ಕೇಳಿದನು. ಶ್ಯಾಮಲೆಯು “ ಅಣ್ಣಾ ! ಊರಿನಲ್ಲೆಲ್ಲಾ ಗಲಾಟಿ. ನೀನು ಸತ್ತು ಹೋಗಿರಬಹುದೆಂದು ಅಮ್ಮ ಅಳುತ್ತಿದ್ದಾಳೆ. ನನಗೆ ಒಂದೂ ತೋರುವುದಿಲ್ಲ.<noinclude></noinclude> f96mu41u1vxbuqvoa1qi97dtb7j7q36 324878 324827 2026-06-16T07:31:23Z A826 6806 /* Validated */ 324878 proofread-page text/x-wiki <noinclude><pagequality level="4" user="A826" />{{rh||ಚಿತ್ರಕೂಟ|೩೭}}</noinclude>“ ನಮ್ಮಣ್ಣನು ಬದುಕಿದ್ದಾನೆಂದು ನಾನು ಹೇಗೆ ನಂಬಲಿ ? ” “ ನಾನು ಹೇಳುತ್ತೇನೆ, ನೀನು ನಂಬು. ನನಗೂ ನಿನ್ನಂತಹ ಮಗಳಿದ್ದಾಳೆ. ” “ ನಿಮ್ಮ ಮಗನನ್ನೂ ಜೈಲಿನಲ್ಲಿದ್ದಾರೇನು ? ” ಆ ಮಾತು ಕೇಳಿ ಮಂತ್ರಿಗಳು ಅವಾಕ್ಕಾದರು. ಅಷ್ಟರಲ್ಲಿ ಅವರಿಗೆ ಎಲ್ಲಿಂದಲೋ ಫೋನು ಬಂತು. “ ಒಳ್ಳೆಯದು ಹೊರಡಮ್ಮ, ನೀನು ನೆಟ್ಟಗೆ ಮನೆಗೆ ಹೋಗು ! ” ಎಂದರು. ಶ್ಯಾಮಲೆಯು ಬಿಕ್ಕಿ ಬಿಕ್ಕಿ ಅಳುತ್ತಾ, “ ನಮ್ಮ ಅಣ್ಣನನ್ನು ಒಂದು ಬಾರಿ ತೋರಿಸಲಿ, ನಾನು ಧೈರ್ಯದಿಂದ ಹೋಗುತ್ತೇನೆ ” ಎಂದಳು. ರಾಮನಾಥನ್ ರವರು ಸ್ವಲ್ಪ ಹೊತ್ತು ಯೋಚಿಸಿ, “ ಆಗಲಿ ! ಈ ಹುಡುಗಿಯನ್ನು ಜೈಲಿಗೆ ಕಳಿಸಿ ಇವಳ ಅಣ್ಣನನ್ನು ತೋರಿಸಿ, ಮನೆಗೆ ಕಳಿಸಿರಿ ” ಎಂದು ಐ. ಜಿ. ಯವರಿಗೆ ಹೇಳಿ ಹೊರಟುಹೋದರು. ಐ. ಜಿ. ಸಾಹೇಬರು ಒಬ್ಬ ಪೋಲೀಸು ಅಧಿಕಾರಿಯನ್ನು ಕರೆದು ಅಪ್ಪಣೆ ಮಾಡಿದರು. ಆ ಅಧಿಕಾರಿಯು ಶ್ಯಾಮಲೆಯನ್ನು ಒಂದು ವ್ಯಾನಿನಲ್ಲಿ ಕೂಡಿಸಿ ಕೊಂಡು ಹೋಗಿ ಜೈಲಿಗೆ ಕರೆದುಕೊಂಡು ಹೋದನು. ಸೂಪರಿಂಟೆಂಡೆಂಟರ ಆಫೀಸಿಗೆ ಕರೆದುಕೊಂಡು ಹೋಗಿ, ಅವರಿಗೆ ಮಂತ್ರಿಗಳ ಅಪ್ಪಣೆಯನ್ನು ತಿಳಿಸಿದನು. ಅವರಿಗೆ ಆಶ್ಚರ್ಯವಾಯಿತು. ಇಬ್ಬರಿಗೂ ಕುಳಿತುಕೊಳ್ಳುವಂತೆ ಹೇಳಿದರು. ಒಬ್ಬ ಜವಾನನ ಕೈಗೆ ಒಂದು ಚೀಟಿ ಬರೆದುಕೊಟ್ಟು ಕಳುಹಿಸಿದರು. ಆ ಜವಾನ ಹತ್ತು ನಿಮಿಷಗಳೊಳಗಾಗಿ ನಾರಾಯಣನನ್ನು ಆಫೀಸಿಗೆ ಕರೆತಂದನು. ನಾರಾಯಣನು ಅಲ್ಲಿ ಶ್ಯಾಮಲೆಯನ್ನು ಕಂಡು ಆಶ್ಚರ್ಯಚಕಿತನಾದನು. ಶ್ಯಾಮಲೆಯು ಓಡಿಹೋಗಿ ನಾರಾಯಣನನ್ನು ಅಪ್ಪಿಕೊಂಡಳು. ಕಣ್ಣುಗಳಲ್ಲಿ ನೀರು ಸುರಿಯುತ್ತಿತ್ತು. ನಾರಾಯಣನು ನಗುತ್ತಿದ್ದನು. “ ಏಕೆ ಶ್ಯಾಮಲಾ ! ಏಕೆ ಅಳುತ್ತೀ ? ಇಲ್ಲಿಗೇಕೆ ಬಂದೆ ? ಹೇಗೆ ಬಂದೆ ? ” ಎಂದು ಕೇಳಿದನು. ಶ್ಯಾಮಲೆಯು “ ಅಣ್ಣಾ ! ಊರಿನಲ್ಲೆಲ್ಲಾ ಗಲಾಟಿ. ನೀನು ಸತ್ತು ಹೋಗಿರಬಹುದೆಂದು ಅಮ್ಮ ಅಳುತ್ತಿದ್ದಾಳೆ. ನನಗೆ ಒಂದೂ ತೋರುವುದಿಲ್ಲ.<noinclude></noinclude> 7e0sf8e6ftsxt3k3zbjw8q473pusgg5 ಪುಟ:Chitrakuuta (1954).djvu/೫೩ 104 120880 324794 2026-06-16T04:54:42Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ತ್ನ ಚಿತ್ರಕೂಟ ನಾನು ಜೈಲಿನಲ್ಲೇ ಇದ್ದು ಬಿಡಲೇ ಎನಿಸಿಬಿಡುತ್ತಿದೆ. ಮಂತ್ರಿಗಳನ್ನು ಹೇಳಿ ಕೊಂಡೆ. ಅವರು ಕರುಣಾಳುಗಳಂತೆ ಕಾಣುತ್ತಾರೆ. ಅವರ ದಯದಿಂದಲೇ ನಿನ್ನನ್ನು ಕಣ್ಣಾರೆ ಕಂಡೆ » ಎಂದು ಹೇಳಿದಳು. ನಾರಾಯಣನು... 324794 proofread-page text/x-wiki <noinclude><pagequality level="1" user="Nihar Chakravarti" /></noinclude>ತ್ನ ಚಿತ್ರಕೂಟ ನಾನು ಜೈಲಿನಲ್ಲೇ ಇದ್ದು ಬಿಡಲೇ ಎನಿಸಿಬಿಡುತ್ತಿದೆ. ಮಂತ್ರಿಗಳನ್ನು ಹೇಳಿ ಕೊಂಡೆ. ಅವರು ಕರುಣಾಳುಗಳಂತೆ ಕಾಣುತ್ತಾರೆ. ಅವರ ದಯದಿಂದಲೇ ನಿನ್ನನ್ನು ಕಣ್ಣಾರೆ ಕಂಡೆ » ಎಂದು ಹೇಳಿದಳು. ನಾರಾಯಣನು “ ನೀನು ಬಹಳ ಗಟ್ಟಿಗಿತ್ತಿ ಮಂತ್ರಿಗಳನ್ನು ನೋಡುವ ಥ್ಸರ್ಯ ಹೇಗೆ ಬಂದಿತೋ ದೇವರಿಗೆ ಗೊತ್ತು. ಒಳ್ಳೆಯದು ! ನನಗೆ ಇಲ್ಲಿ ಏನೂ ಕಷ್ಟ ಐಲ್ಲ. ಸುಖವಾಗಿದ್ದೆ (ನೆ. ಅಮ್ಮ ನಿಗೆ ಹೇಳು | ಧೆ ಜ್‌ ಇರಿ, ಬಂದುಬಿಡುತ್ತೆ ನೆ. ಬ ಸಮಾಧಾನ ಹೇಳಿದನು. ಶ್ಯಾಮಲೆಯು ಸೂಪರಿಂಬೆಂಡೆಂಟರಿಗೆ ವಂದಿಸಿ ಹೊರಟಳು. ಜೈಲಿನ ಗೇಟು ದಾಟುತ್ತಲೇ ಪೋಲೀಸು ಅಧಿಕಾರಿಗೆ ವಂದಿಸಿ “ಬಹಳ ಹು ಮಾಡಿದಿರಿ, ವಂದನೆಗಳು. ನಾನು ಮನೆಗೆ ಹೋಗುತ್ತೇನೆ ” ಎಂದಳು. ಅಧಿಕಾರಿಯು, “ ಆಗಲಮ್ಮಾ ! ನೀವು ವ್ಯಾನಿನಲ್ಲಿ ಕುಳಿತುಕೊಳ್ಳಿ ಥಿ ನಿಮ್ಮ ಮನೆಗೆ ಬಿಟ್ಟುಬರಬೇಕೆಂದು ಅಪ್ಪಣೆಯಾಗಿದೆ'' ಎಂದನು. ಶಾಮಲೆಯು ವ್ಯಾನ್‌ ಹತ್ತಿದಳು. ಅವಳು ಹೇಳಿದ ಗುರ್ತಿನ ಮೇಲೆ ವ್ಯಾನು ಅವರ ಮನೆಯ ಬಾಗಿಲಿನ ಮುಂದೆ ಬಂದು ನಿಂತಿತು. ಆ ಮೋಟಾರಿನ ಸದ್ದು ಕೇಳಿ ಪಾರ್ವತಮ್ಮನು ಹೊರ ಬಾಗಲಿಗೆ ಬಂದಳು. ಶ್ಯಾಮಲೆಯು ಮೋಟಾರಿನಿಂದ ಇಳಿಯುತ್ತಿ ದ್ದ ಛು. ಅವಳು ನಸುನಗುತ್ತಾ ಮನೆಯೊಳಗೆ ಹೋಗಿ “ ಅಮ್ಮಾ! ಅಣ ನ ನನ್ನು ನೋಡಿಕೊಂಡು ಬಂದೆ. ಅವನು ಸಂತೋಷವಾಗಿ ನಗುನಗುತ್ತಿದ್ದಾ ನೆ (is ಎಂದಳು. ಪಾರ್ವತಮ್ಮನ ಮುಖದಲ್ಲಿ ನಗುವಿನ ಬೆಳಕು ಮೂಡಿತು. 4( ಶ್ಯಾಮಲಾ 1! ನಾಣಿ ಎಲ್ಲಿದ್ದಾ ನೆ? ನಾಣಿ ಎಲ್ಲಿದ್ದಾನೆ ? ನೀನು ಎಲ್ಲಿ ನೋಡಿದೆ? ಈ ಮೋಟಾರಿನಲ್ಲಿ ಕು ನಿನ್ನನ್ನು 'ಕಕೆತಂದವರು ೧೫ ಎಂದು ಕೇಳಿದಳು. 4 ಅಣ್ಣಾ ಜೈಲಿನಲ್ಲದ್ದಾ ನೆ. ಇದು ಸರ್ಕಾರದ ವ್ಯಾನು ೫ ನಿಕ `ಹೇಳಿ ಕ್ಯಾಮಲೆ ತಾನು ಹೋಗಿ ಬಂದ ಕಥೆಯನ್ನ ಲ್ಲಾ ವಿವರಿಸಿ ಹೇಳಿದಳು. ಪಾರ್ವತಮ್ಮನಿಗೆ ಮಗ ಜೈಲನಲ್ಲಿದ್ದಾ ನೆಂದು ಇ ಖವಾದರೂ ಮನಸ್ಸಿಗೆ ಸ್ಪಲ್ಪ ) ಸಮಾಧಾನವಾಯಿತು.<noinclude></noinclude> iptom923mnt7ytyx6dj3yceczi4sxpc 324828 324794 2026-06-16T05:33:24Z Nihar Chakravarti 8555 /* Proofread */ 324828 proofread-page text/x-wiki <noinclude><pagequality level="3" user="Nihar Chakravarti" />{{rh|೩೮|ಚಿತ್ರಕೂಟ}}</noinclude>ನಾನು ಜೈಲಿನಲ್ಲೇ ಇದ್ದು ಬಿಡಲೇ ಎನಿಸಿಬಿಡುತ್ತಿದೆ. ಮಂತ್ರಿಗಳನ್ನು ಕೇಳಿ ಕೊಂಡೆ. ಅವರು ಕರುಣಾಳುಗಳಂತೆ ಕಾಣುತ್ತಾರೆ. ಅವರ ದಯದಿಂದಲೇ ನಿನ್ನನ್ನು ಕಣ್ಣಾರೆ ಕಂಡೆ ” ಎಂದು ಹೇಳಿದಳು. ನಾರಾಯಣನು “ ನೀನು ಬಹಳ ಗಟ್ಟಿಗಿತ್ತಿ ! ಮಂತ್ರಿಗಳನ್ನು ನೋಡುವ ಧೈರ್ಯ ಹೇಗೆ ಬಂದಿತೋ ದೇವರಿಗೆ ಗೊತ್ತು. ಒಳ್ಳೆಯದು ! ನನಗೆ ಇಲ್ಲಿ ಏನೂ ಕಷ್ಟವಿಲ್ಲ. ಸುಖವಾಗಿದ್ದೇನೆ. ಅಮ್ಮನಿಗೆ ಹೇಳು ! ಧೈರ್ಯದಿಂದ ಇರಿ, ಬಂದುಬಿಡುತ್ತೇನೆ ” ಎಂದು ಸಮಾಧಾನ ಹೇಳಿದನು. ಶ್ಯಾಮಲೆಯು ಸೂಪರಿಂಟೆಂಡೆಂಟರಿಗೆ ವಂದಿಸಿ ಹೊರಟಳು. ಜೈಲಿನ ಗೇಟು ದಾಟುತ್ತಲೇ ಪೋಲೀಸು ಅಧಿಕಾರಿಗೆ ವಂದಿಸಿ “ ಬಹಳ ಉಪಕಾರ ಮಾಡಿದಿರಿ, ವಂದನೆಗಳು. ನಾನು ಮನೆಗೆ ಹೋಗುತ್ತೇನೆ ” ಎಂದಳು. ಅಧಿಕಾರಿಯು, “ ಆಗಲಮ್ಮಾ ! ನೀವು ವ್ಯಾನಿನಲ್ಲಿ ಕುಳಿತುಕೊಳ್ಳಿ. ನಿಮ್ಮ ಮನೆಗೆ ಬಿಟ್ಟುಬರಬೇಕೆಂದು ಅಪ್ಪಣೆಯಾಗಿದೆ ” ಎಂದನು. ಶ್ಯಾಮಲೆಯು ವ್ಯಾನ್ ಹತ್ತಿದಳು. ಅವಳು ಹೇಳಿದ ಗುರ್ತಿನ ಮೇಲೆ ವ್ಯಾನು ಅವರ ಮನೆಯ ಬಾಗಿಲಿನ ಮುಂದೆ ಬಂದು ನಿಂತಿತು. ಆ ಮೋಟಾರಿನ ಸದ್ದು ಕೇಳಿ ಪಾರ್ವತಮ್ಮನು ಹೊರ ಬಾಗಲಿಗೆ ಬಂದಳು. ಶ್ಯಾಮಲೆಯು ಮೋಟಾರಿನಿಂದ ಇಳಿಯುತ್ತಿದ್ದಳು. ಅವಳು ನಸುನಗುತ್ತಾ ಮನೆಯೊಳಗೆ ಹೋಗಿ “ ಅಮ್ಮಾ ! ಅಣ್ಣನನ್ನು ನೋಡಿಕೊಂಡು ಬಂದೆ. ಅವನು ಸಂತೋಷವಾಗಿ ನಗುನಗುತ್ತಿದ್ದಾನೆ ” ಎಂದಳು. ಪಾರ್ವತಮ್ಮನ ಮುಖದಲ್ಲಿ ನಗುವಿನ ಬೆಳಕು ಮೂಡಿತು. “ ಶ್ಯಾಮಲಾ ! ನಾಣಿ ಎಲ್ಲಿದ್ದಾನೆ ? ನಾಣಿ ಎಲ್ಲಿದ್ದಾನೆ ? ನೀನು ಎಲ್ಲಿ ನೋಡಿದೆ ? ಈ ಮೋಟಾರಿನಲ್ಲಿ ಯಾರು ನಿನ್ನನ್ನು ಕರೆತಂದವರು ? ” ಎಂದು ಕೇಳಿದಳು. “ ಅಣ್ಣ ಜೈಲಿನಲ್ಲಿದ್ದಾನೆ. ಇದು ಸರ್ಕಾರದ ವ್ಯಾನು ” ಎಂದು ಹೇಳಿ ಶ್ಯಾಮಲೆ ತಾನು ಹೋಗಿ ಬಂದ ಕಥೆಯನ್ನೆಲ್ಲಾ ವಿವರಿಸಿ ಹೇಳಿದಳು. ಪಾರ್ವತಮ್ಮನಿಗೆ ಮಗ ಜೈಲಿನಲ್ಲಿದ್ದಾನೆಂದು ದುಃಖವಾದರೂ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು.<noinclude></noinclude> ot5ur1ez4twzjzor9pndx58ylvtuwrv 324879 324828 2026-06-16T07:32:27Z A826 6806 /* Validated */ 324879 proofread-page text/x-wiki <noinclude><pagequality level="4" user="A826" />{{rh|೩೮|ಚಿತ್ರಕೂಟ}}</noinclude>ನಾನು ಜೈಲಿನಲ್ಲೇ ಇದ್ದು ಬಿಡಲೇ ಎನಿಸಿಬಿಡುತ್ತಿದೆ. ಮಂತ್ರಿಗಳನ್ನು ಕೇಳಿ ಕೊಂಡೆ. ಅವರು ಕರುಣಾಳುಗಳಂತೆ ಕಾಣುತ್ತಾರೆ. ಅವರ ದಯದಿಂದಲೇ ನಿನ್ನನ್ನು ಕಣ್ಣಾರೆ ಕಂಡೆ " ಎಂದು ಹೇಳಿದಳು. ನಾರಾಯಣನು " ನೀನು ಬಹಳ ಗಟ್ಟಿಗಿತ್ತಿ! ಮಂತ್ರಿಗಳನ್ನು ನೋಡುವ ಧೈರ್ಯ ಹೇಗೆ ಬಂದಿತೋ ದೇವರಿಗೆ ಗೊತ್ತು. ಒಳ್ಳೆಯದು! ನನಗೆ ಇಲ್ಲಿ ಏನೂ ಕಷ್ಟವಿಲ್ಲ. ಸುಖವಾಗಿದ್ದೇನೆ. ಅಮ್ಮನಿಗೆ ಹೇಳು! ಧೈರ್ಯದಿಂದ ಇರಿ, ಬಂದುಬಿಡುತ್ತೇನೆ " ಎಂದು ಸಮಾಧಾನ ಹೇಳಿದನು. ಶ್ಯಾಮಲೆಯು ಸೂಪರಿಂಟೆಂಡೆಂಟರಿಗೆ ವಂದಿಸಿ ಹೊರಟಳು. ಜೈಲಿನ ಗೇಟು ದಾಟುತ್ತಲೇ ಪೋಲೀಸು ಅಧಿಕಾರಿಗೆ ವಂದಿಸಿ " ಬಹಳ ಉಪಕಾರ ಮಾಡಿದಿರಿ, ವಂದನೆಗಳು. ನಾನು ಮನೆಗೆ ಹೋಗುತ್ತೇನೆ " ಎಂದಳು. ಅಧಿಕಾರಿಯು, " ಆಗಲಮ್ಮಾ! ನೀವು ವ್ಯಾನಿನಲ್ಲಿ ಕುಳಿತುಕೊಳ್ಳಿ. ನಿಮ್ಮ ಮನೆಗೆ ಬಿಟ್ಟುಬರಬೇಕೆಂದು ಅಪ್ಪಣೆಯಾಗಿದೆ " ಎಂದನು. ಶ್ಯಾಮಲೆಯು ವ್ಯಾನ್ ಹತ್ತಿದಳು. ಅವಳು ಹೇಳಿದ ಗುರ್ತಿನ ಮೇಲೆ ವ್ಯಾನು ಅವರ ಮನೆಯ ಬಾಗಿಲಿನ ಮುಂದೆ ಬಂದು ನಿಂತಿತು. ಆ ಮೋಟಾರಿನ ಸದ್ದು ಕೇಳಿ ಪಾರ್ವತಮ್ಮನು ಹೊರ ಬಾಗಲಿಗೆ ಬಂದಳು. ಶ್ಯಾಮಲೆಯು ಮೋಟಾರಿನಿಂದ ಇಳಿಯುತ್ತಿದ್ದಳು. ಅವಳು ನಸುನಗುತ್ತಾ ಮನೆಯೊಳಗೆ ಹೋಗಿ " ಅಮ್ಮಾ! ಅಣ್ಣನನ್ನು ನೋಡಿಕೊಂಡು ಬಂದೆ. ಅವನು ಸಂತೋಷವಾಗಿ ನಗುನಗುತ್ತಿದ್ದಾನೆ " ಎಂದಳು. ಪಾರ್ವತಮ್ಮನ ಮುಖದಲ್ಲಿ ನಗುವಿನ ಬೆಳಕು ಮೂಡಿತು. " ಶ್ಯಾಮಲಾ! ನಾಣಿ ಎಲ್ಲಿದ್ದಾನೆ? ನಾಣಿ ಎಲ್ಲಿದ್ದಾನೆ? ನೀನು ಎಲ್ಲಿ ನೋಡಿದೆ? ಈ ಮೋಟಾರಿನಲ್ಲಿ ಯಾರು ನಿನ್ನನ್ನು ಕರೆತಂದವರು? " ಎಂದು ಕೇಳಿದಳು. " ಅಣ್ಣ ಜೈಲಿನಲ್ಲಿದ್ದಾನೆ. ಇದು ಸರ್ಕಾರದ ವ್ಯಾನು " ಎಂದು ಹೇಳಿ ಶ್ಯಾಮಲೆ ತಾನು ಹೋಗಿ ಬಂದ ಕಥೆಯನ್ನೆಲ್ಲಾ ವಿವರಿಸಿ ಹೇಳಿದಳು. ಪಾರ್ವತಮ್ಮನಿಗೆ ಮಗ ಜೈಲಿನಲ್ಲಿದ್ದಾನೆಂದು ದುಃಖವಾದರೂ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು.<noinclude></noinclude> jn4xowl49dkhm2y5qebiutm8asaot7f ಪುಟ:Chitrakuuta (1954).djvu/೫೪ 104 120881 324795 2026-06-16T04:54:49Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ತ ಒಂದು ತಿಂಗಳು ಕಳೆಯಿತು. ಎಲ್ಲವೂ ಶಾಂತವಾಗಿತ್ತು. ಶ್ಯಾಮಲೆಯೂ ಪಾರ್ವತಮ್ಮನೂ ನಾರಾಯಣನು ಇಂದು, ನಾಳೆ ಬರುವನೆಂದು ನಿರೀಕ್ಷಣೆ ಮಾಡಿದರು. ಶ್ಯಾಮಲೆಗೆ ಬಹೆಳ ಧರ್ಯ ಬಂದಿತ್ತು. ಅವಳು ಕಛೇರಿಗೆ ಹೋಗಿ ವಿಚಾರಿಸಿದಳ... 324795 proofread-page text/x-wiki <noinclude><pagequality level="1" user="Nihar Chakravarti" /></noinclude>ತ ಒಂದು ತಿಂಗಳು ಕಳೆಯಿತು. ಎಲ್ಲವೂ ಶಾಂತವಾಗಿತ್ತು. ಶ್ಯಾಮಲೆಯೂ ಪಾರ್ವತಮ್ಮನೂ ನಾರಾಯಣನು ಇಂದು, ನಾಳೆ ಬರುವನೆಂದು ನಿರೀಕ್ಷಣೆ ಮಾಡಿದರು. ಶ್ಯಾಮಲೆಗೆ ಬಹೆಳ ಧರ್ಯ ಬಂದಿತ್ತು. ಅವಳು ಕಛೇರಿಗೆ ಹೋಗಿ ವಿಚಾರಿಸಿದಳು. ನಾರಾಯಣನಿಗೆ ಮೂರು ವರ್ಷಗಳ ಕಠಿಣ ಶಿಕ್ಷೆ ಯಾಗಿದೆಯೆಂದು ಆಗ ತಿಳಿಯಿತು. ತಾಯಿ ಮಕ್ಕಳಿಬ್ಬರೂ ಹೊರಗಿ ಕೊರಗಿ ದಿಕ್ಫು ಕಾಣದಾದರು. ಮುಂದೇನು ಮಾಡಬೇಕು ? ಎಂಬ ಸಮಸ್ಯೆಯು ಅವರಿಬ್ಬರನ್ನೂ ಪ್ರತಿದಿನವೂ ಬಾಧಿಸುತ್ತಿತ್ತು. ರಾಮಾಶಾಸ್ತ್ರಿ ಯೊಬ್ಬನೇ ಆ ಮನೆಗೆ ಸಹಾ ಯಕ. ಪಾರ್ವತಮ್ಮನು ಅವನೊಡನೆ ಯೋಚನೆ ಮಾಡಿದಳು. ರಾಮಾ ಶಾಸ್ತ್ರಿಯು ಆ ಮನೆಯನ್ನು ಯಾರಿಗಾದರೂ ಬಾಡಿಗೆಗೆ ಕೊಡಬೇಕೆಂದು ಸಲಹ ಯಿತ್ತನು. ಪಾರ್ವತಮ್ಮನು ಸರಿಯಾದವರು ಯಾರಾದರೂ ಸಿಕ್ಕಿದರೆ ಆಗಬಹುದೆಂದು ಹೇಳಿದಳು. ಕ ಸುಬ್ರ ಹ್ಮಣ್ಯಶಾಶ್ರ್ರಿಗಳಂಬುವರು ದಕ್ಷಿಣ ದೇಶದವರು. ಅವರು ಮೈಸೂರು ಮಹಾರಾಜರವರ ಪಾಠಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ಆ ಪಾಠಶಾಲೆಯಲ್ಲಿ ಬ್ರಾಹ್ಮಣೇತರರನ್ನು ಸೇರಿಸಬೇಕೆಂಬ ಆಜ್ಞೆ ಬಂತು. ಅವರು ಶ್ರೀಮನ್ಮಹಾರಾಜರವರ ಬೇಟಮಾಡಿ ತಾವು ಆ ಆಜೆ ಯನ್ನು ಪಾಲನೆ ಮಾಡ ಲಾಗುವುದಿಲ್ಲವೆಂದೂ ಪ್ರಾಚೀನ ಸಂಪ್ರದಾಯವನ್ನು ಠಾವು ನಂಬಿದವರೆಂದೂ ಅರಿಕೆ ಮಾಡಿದರು; ತಮ್ಮ ಕಲಸಕ್ಕೆ ರಾಜೀನಾಮೆಯನ್ನು ಒಪ್ಪಿಸಿದರು. ಅವರು ಬೆಂಗಳೂರಿಗೆ ಬಂದು ಕೆಲವು ಗೃಹಸ್ಥರನ್ನು ಆಶ್ರಯಿಸಿ ವೇದಾಂತ ಪಾಠಕ್ಕೆ ಏರ್ಪಾಡು ಮಾಡಬೇಕೆಂದು ಪ್ರಯತ್ನಿ ಸಿದರು. ಅನೇಕರು ಸದ್ಗೃಹ ಸರು ಸೇರಿ ಚಂದಾ ಹಾಕಿ ಅವರಿಗೆ ತಿಂಗಳಿಗೆ ಒಂದು ನೂರು ರೂಪಾಯಿಗಳ ಬು 3 |<noinclude></noinclude> h5gw6arx14ab1b9hx3q3jfop3x1ej68 324829 324795 2026-06-16T05:34:43Z Nihar Chakravarti 8555 /* Proofread */ 324829 proofread-page text/x-wiki <noinclude><pagequality level="3" user="Nihar Chakravarti" />{{rh||೭|}}</noinclude>ಒಂದು ತಿಂಗಳು ಕಳೆಯಿತು. ಎಲ್ಲವೂ ಶಾಂತವಾಗಿತ್ತು. ಶ್ಯಾಮಲೆಯೂ ಪಾರ್ವತಮ್ಮನೂ ನಾರಾಯಣನು ಇಂದು, ನಾಳೆ ಬರುವನೆಂದು ನಿರೀಕ್ಷಣೆ ಮಾಡಿದರು. ಶ್ಯಾಮಲೆಗೆ ಬಹಳ ಧೈರ್ಯ ಬಂದಿತ್ತು. ಅವಳು ಕಛೇರಿಗೆ ಹೋಗಿ ವಿಚಾರಿಸಿದಳು. ನಾರಾಯಣನಿಗೆ ಮೂರು ವರ್ಷಗಳ ಕಠಿಣ ಶಿಕ್ಷೆಯಾಗಿದೆಯೆಂದು ಆಗ ತಿಳಿಯಿತು. ತಾಯಿ ಮಕ್ಕಳಿಬ್ಬರೂ ಕೊರಗಿ ಕೊರಗಿ ದಿಕ್ಕು ಕಾಣದಾದರು. ಮುಂದೇನು ಮಾಡಬೇಕು ? ಎಂಬ ಸಮಸ್ಯೆಯು ಅವರಿಬ್ಬರನ್ನೂ ಪ್ರತಿದಿನವೂ ಬಾಧಿಸುತ್ತಿತ್ತು. ರಾಮಾಶಾಸ್ತ್ರಿಯೊಬ್ಬನೇ ಆ ಮನೆಗೆ ಸಹಾಯಕ. ಪಾರ್ವತಮ್ಮನು ಅವನೊಡನೆ ಯೋಚನೆ ಮಾಡಿದಳು. ರಾಮಾಶಾಸ್ತ್ರಿಯು ಆ ಮನೆಯನ್ನು ಯಾರಿಗಾದರೂ ಬಾಡಿಗೆಗೆ ಕೊಡಬೇಕೆಂದು ಸಲಹೆಯಿತ್ತನು. ಪಾರ್ವತಮ್ಮನು ಸರಿಯಾದವರು ಯಾರಾದರೂ ಸಿಕ್ಕಿದರೆ ಆಗಬಹುದೆಂದು ಹೇಳಿದಳು. ಸುಬ್ರಹ್ಮಣ್ಯಶಾಸ್ತ್ರಿಗಳೆಂಬುವರು ದಕ್ಷಿಣ ದೇಶದವರು. ಅವರು ಮೈಸೂರು ಮಹಾರಾಜರವರ ಪಾಠಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ಆ ಪಾಠಶಾಲೆಯಲ್ಲಿ ಬ್ರಾಹ್ಮಣೇತರರನ್ನು ಸೇರಿಸಬೇಕೆಂಬ ಆಜ್ಞೆ ಬಂತು. ಅವರು ಶ್ರೀಮನ್ಮಹಾರಾಜರವರ ಭೇಟಿಮಾಡಿ ತಾವು ಆ ಆಜ್ಞೆಯನ್ನು ಪಾಲನೆ ಮಾಡಲಾಗುವುದಿಲ್ಲವೆಂದೂ ಪ್ರಾಚೀನ ಸಂಪ್ರದಾಯವನ್ನು ತಾವು ನಂಬಿದವರೆಂದೂ ಅರಿಕೆ ಮಾಡಿದರು ; ತಮ್ಮ ಕೆಲಸಕ್ಕೆ ರಾಜೀನಾಮೆಯನ್ನು ಒಪ್ಪಿಸಿದರು. ಅವರು ಬೆಂಗಳೂರಿಗೆ ಬಂದು ಕೆಲವು ಗೃಹಸ್ಥರನ್ನು ಆಶ್ರಯಿಸಿ ವೇದಾಂತ ಪಾಠಕ್ಕೆ ಏರ್ಪಾಡು ಮಾಡಬೇಕೆಂದು ಪ್ರಯತ್ನಿಸಿದರು. ಅನೇಕರು ಸದ್ಗೃಹಸ್ಥರು ಸೇರಿ ಚಂದಾ ಹಾಕಿ ಅವರಿಗೆ ತಿಂಗಳಿಗೆ ಒಂದು ನೂರು ರೂಪಾಯಿಗಳ<noinclude></noinclude> pgsfoug7agl5f4gwwxdi8hfzl96djvr 324880 324829 2026-06-16T08:18:31Z A826 6806 /* Validated */ 324880 proofread-page text/x-wiki <noinclude><pagequality level="4" user="A826" />{{rh||೭|}}</noinclude>ಒಂದು ತಿಂಗಳು ಕಳೆಯಿತು. ಎಲ್ಲವೂ ಶಾಂತವಾಗಿತ್ತು. ಶ್ಯಾಮಲೆಯೂ ಪಾರ್ವತಮ್ಮನೂ ನಾರಾಯಣನು ಇಂದು, ನಾಳೆ ಬರುವನೆಂದು ನಿರೀಕ್ಷಣೆ ಮಾಡಿದರು. ಶ್ಯಾಮಲೆಗೆ ಬಹಳ ಧೈರ್ಯ ಬಂದಿತ್ತು. ಅವಳು ಕಛೇರಿಗೆ ಹೋಗಿ ವಿಚಾರಿಸಿದಳು. ನಾರಾಯಣನಿಗೆ ಮೂರು ವರ್ಷಗಳ ಕಠಿಣ ಶಿಕ್ಷೆಯಾಗಿದೆಯೆಂದು ಆಗ ತಿಳಿಯಿತು. ತಾಯಿ ಮಕ್ಕಳಿಬ್ಬರೂ ಕೊರಗಿ ಕೊರಗಿ ದಿಕ್ಕು ಕಾಣದಾದರು. ಮುಂದೇನು ಮಾಡಬೇಕು? ಎಂಬ ಸಮಸ್ಯೆಯು ಅವರಿಬ್ಬರನ್ನೂ ಪ್ರತಿದಿನವೂ ಬಾಧಿಸುತ್ತಿತ್ತು. ರಾಮಾಶಾಸ್ತ್ರಿಯೊಬ್ಬನೇ ಆ ಮನೆಗೆ ಸಹಾಯಕ. ಪಾರ್ವತಮ್ಮನು ಅವನೊಡನೆ ಯೋಚನೆ ಮಾಡಿದಳು. ರಾಮಾಶಾಸ್ತ್ರಿಯು ಆ ಮನೆಯನ್ನು ಯಾರಿಗಾದರೂ ಬಾಡಿಗೆಗೆ ಕೊಡಬೇಕೆಂದು ಸಲಹೆಯಿತ್ತನು. ಪಾರ್ವತಮ್ಮನು ಸರಿಯಾದವರು ಯಾರಾದರೂ ಸಿಕ್ಕಿದರೆ ಆಗಬಹುದೆಂದು ಹೇಳಿದಳು. ಸುಬ್ರಹ್ಮಣ್ಯಶಾಸ್ತ್ರಿಗಳೆಂಬುವರು ದಕ್ಷಿಣ ದೇಶದವರು. ಅವರು ಮೈಸೂರು ಮಹಾರಾಜರವರ ಪಾಠಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ಆ ಪಾಠಶಾಲೆಯಲ್ಲಿ ಬ್ರಾಹ್ಮಣೇತರರನ್ನು ಸೇರಿಸಬೇಕೆಂಬ ಆಜ್ಞೆ ಬಂತು. ಅವರು ಶ್ರೀಮನ್ಮಹಾರಾಜರವರ ಭೇಟಿಮಾಡಿ ತಾವು ಆ ಆಜ್ಞೆಯನ್ನು ಪಾಲನೆ ಮಾಡಲಾಗುವುದಿಲ್ಲವೆಂದೂ ಪ್ರಾಚೀನ ಸಂಪ್ರದಾಯವನ್ನು ತಾವು ನಂಬಿದವರೆಂದೂ ಅರಿಕೆ ಮಾಡಿದರು; ತಮ್ಮ ಕೆಲಸಕ್ಕೆ ರಾಜೀನಾಮೆಯನ್ನು ಒಪ್ಪಿಸಿದರು. ಅವರು ಬೆಂಗಳೂರಿಗೆ ಬಂದು ಕೆಲವು ಗೃಹಸ್ಥರನ್ನು ಆಶ್ರಯಿಸಿ ವೇದಾಂತ ಪಾಠಕ್ಕೆ ಏರ್ಪಾಡು ಮಾಡಬೇಕೆಂದು ಪ್ರಯತ್ನಿಸಿದರು. ಅನೇಕರು ಸದ್ಗೃಹಸ್ಥರು ಸೇರಿ ಚಂದಾ ಹಾಕಿ ಅವರಿಗೆ ತಿಂಗಳಿಗೆ ಒಂದು ನೂರು ರೂಪಾಯಿಗಳ<noinclude></noinclude> 3zdhzylju6wfvv9iggs916gg7569k02 ಪುಟ:Chitrakuuta (1954).djvu/೫೫ 104 120882 324796 2026-06-16T04:54:56Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೪6 | ಚೆತ್ರಕೂಟ ಸಂಭಾವನೆ, ಮನೆ ಬಾಡಿಗೆ ಮೂವತ್ತು ರೂಪಾಯಿಗಳನ್ನು ಕೊಡತಕ್ಕದ್ದೆಂದು ನಿರ್ಧಾರ ಮಾಡಿದರು. ಸುಬ್ರಹ್ಮೆಣ್ಯಶಾಸ್ತ್ರಿಗಳು ನಿಷ್ಠಾವಂತ ಬ್ರಾಹ್ಮಣರೇ ಗಂಡಹೆಂಡಿರಿಬ್ಬರು ಇರುವವರು. ಅರುವತ್ತು ವರ್ಷ... 324796 proofread-page text/x-wiki <noinclude><pagequality level="1" user="Nihar Chakravarti" /></noinclude>೪6 | ಚೆತ್ರಕೂಟ ಸಂಭಾವನೆ, ಮನೆ ಬಾಡಿಗೆ ಮೂವತ್ತು ರೂಪಾಯಿಗಳನ್ನು ಕೊಡತಕ್ಕದ್ದೆಂದು ನಿರ್ಧಾರ ಮಾಡಿದರು. ಸುಬ್ರಹ್ಮೆಣ್ಯಶಾಸ್ತ್ರಿಗಳು ನಿಷ್ಠಾವಂತ ಬ್ರಾಹ್ಮಣರೇ ಗಂಡಹೆಂಡಿರಿಬ್ಬರು ಇರುವವರು. ಅರುವತ್ತು ವರ್ಷಗಳ ಮೇಲೆ ವಯಸ್ಸಾಗಿರುವ ವೃದ್ಧ ಬ್ರಾ ಹ್ಮಣ. ರಾಮಾಶಾಸ್ರಿಯ ಮಾತಿನ ಮೇಲೆ ಮೂವತ್ತು ರೂಪಾಯಿಗಳ ಬಾಡಿಗೆಗೆ ಅವರಿಗೆ ಕೊಡುವುದೆಂದು ತೀರ್ಮಾನವಾಯಿತು. ಎರಡು ರೂಮುಗಳನ್ನು ಮಾತ್ರ ತಮಗಾಗಿ ಇಟ್ಟು ಕೊಂಡರು. ಅದರಿಂದ ತಾ ತಾಯಿಮಕ್ಕಳ ಜೀವನಕೆ ಅನುಕೂಲವಾಯಿತು. ಶ್ಯಾಮಲೆಗೆ ಇಸ್ಟ ತ್ತು ವರ್ಷಗಳು ತುಂಬಿಹೋಗುತ್ತಿದೆ. ಪ ಪ್ರಾಯದ ಹೆಣ್ಣಿ ಗೆ ಮದುವೆ See EE ಕಳಂಕ. ನಾರಾಯಣನು ಬರುವ ನಕೆಗೂ ಕಾಯುವಂತಿಲ್ಲ. ಈ ಮದುವೆಯ ಪ್ರಸ್ತಾ ಹ ಆಗಾಗ ರಾಮಾಶಾಸ್ನಿ ಯೊಡನೆ ಮಾಡುತ್ತಿ ದ್ವ ಭು ರಾಮಾಶಾಶ್ರಿಸ ಮ್ತ ನಾಲ್ಕ್ವೈ ದು ಕಡೆ ನೋಡಿದನು. ಗಂಡಿನವರೂ ಬಂದು "ಹೆಣ್ಣನ್ನು ತ ಇಡು ಹೋದರು. ಒಬ್ಬ ರು ಒಪ್ಪಿ ದರೆ ಮತ್ತೊಬ್ಬರು ಒಪ್ಪುತ್ತಿರಲಿಲ್ಲ. ಅಂತೂ ಯಾವ ಸಂಬಂಧವೂ ಕೂಡ ಲಿಲ್ಲ. ಹೀಗೆಯೇ ಆರು ತಿಂಗಳುಗಳು ಕಳೆದುವು. ರಾಮಾಶಾಸ್ತ್ರಿಯ ಅಣ್ಣಂದಿರಾದ ಶಾಮಾಶಾಸ್ತ್ರಿ ಗಳು ಬಹಳ ಅಪರೂಪ ವಾಗಿ ತಮ್ಮನ ಮನೆಗೆ ಬಂದರು. ಊಟ ಉಸಚಾರಗಳಲ್ಲವೂ ನಡೆಯಿತು. ಶಾಮಾತಾಸ್ತ್ರಿಯು ಬೋಜನೋತ್ತರ ತಮ್ಮನೊಡನೆ ಮಾತನಾಡುತ್ತಾ «4 ನೋಡು ರಾಮು. ! ನಾನೊಂದು ಹೆಣ್ಣು ನೋಡಲು ಬಂದಿದ್ದೆ ನೆ ಹೆಣ್ಣು ಚೆನ್ನಾಗಿರಬೇಕು, ಬೆಳೆದ ಹುಡುಗಿಯಾಗಿರಬೇಕು. ದೊಡ್ಡವರ ಮರೆಗೆ ಮಾತನಾಡುವ ಹೆಣ್ಣು. ನೀನು ಕೇಳಿರಬಹುದು. ರಂಗಪ್ಪ ನ ಮೊದಲನೇ ಸಂಬಂಧವು ತಪ್ಪಿ ಆರು ತಿಂಗಳುಗಳಾದುವು. ಮಕ್ಕಳಲ್ಲ. ಅವನಿಗೆ ಮೂವತ್ತೈದು ವರ್ಷ. ನಾನು ಸುಳ್ಳು ಹೇಳುವುದಿಲ್ಲ. ಮೂವತ್ತು ವರ್ಷದ ವನಂತೆ ಕಾಣುತ್ತಾನೆ. ಲಕ್ಷಣವಾಗಿದ್ದಾನೆ, ಐಶ್ವರ್ಯವಂತೂ ಹೇಳತೀರದು. ದೇವರು ಎಷ್ಟೂಂತ ಕೊಟ್ಟಿದ್ದಾನೋ ಏನೋ ಅದನ್ನು ಅನುಭವಿಸಲು ಯಾವ ಸೌಭಾಗ್ಯವತಿ ಬರುತ್ತಾಳೋ. ನನಗೆ ಗಂಬುಬಿದ್ದಿದ್ದಾನೆ. ನಾನು ಒಪ್ಪಿದ ಹೆಣ್ಣು ಅವನಿಗೆ ಸಮ್ಮತ. ” ಎಂದು ಹೇಳಿದರು.<noinclude></noinclude> 8jnnnipie4q5d729s9bfvwrqu1tlx6s 324830 324796 2026-06-16T05:35:51Z Nihar Chakravarti 8555 /* Proofread */ 324830 proofread-page text/x-wiki <noinclude><pagequality level="3" user="Nihar Chakravarti" />{{rh|೪೦||ಚಿತ್ರಕೂಟ}}</noinclude>ಸಂಭಾವನೆ, ಮನೆ ಬಾಡಿಗೆ ಮೂವತ್ತು ರೂಪಾಯಿಗಳನ್ನು ಕೊಡತಕ್ಕದ್ದೆಂದು ನಿರ್ಧಾರ ಮಾಡಿದರು. ಸುಬ್ರಹ್ಮಣ್ಯಶಾಸ್ತ್ರಿಗಳು ನಿಷ್ಠಾವಂತ ಬ್ರಾಹ್ಮಣರೇ ಗಂಡಹೆಂಡಿರಿಬ್ಬರು ಇರುವವರು. ಅರುವತ್ತು ವರ್ಷಗಳ ಮೇಲೆ ವಯಸ್ಸಾಗಿರುವ ವೃದ್ಧ ಬ್ರಾಹ್ಮಣ. ರಾಮಾಶಾಸ್ತ್ರಿಯ ಮಾತಿನ ಮೇಲೆ ಮೂವತ್ತು ರೂಪಾಯಿಗಳ ಬಾಡಿಗೆಗೆ ಅವರಿಗೆ ಕೊಡುವುದೆಂದು ತೀರ್ಮಾನವಾಯಿತು. ಎರಡು ರೂಮುಗಳನ್ನು ಮಾತ್ರ ತಮಗಾಗಿ ಇಟ್ಟುಕೊಂಡರು. ಅದರಿಂದ ತಾಯಿಮಕ್ಕಳ ಜೀವನಕ್ಕೆ ಅನುಕೂಲವಾಯಿತು. ಶ್ಯಾಮಲೆಗೆ ಇಪ್ಪತ್ತು ವರ್ಷಗಳು ತುಂಬಿಹೋಗುತ್ತಿದೆ. ಪ್ರಾಯದ ಹೆಣ್ಣಿಗೆ ಮದುವೆ ಮಾಡದಿರುವುದು ಕಳಂಕ. ನಾರಾಯಣನು ಬರುವ ವರೆಗೂ ಕಾಯುವಂತಿಲ್ಲ. ಈ ಮದುವೆಯ ಪ್ರಸ್ತಾಪ ಆಗಾಗ ರಾಮಾಶಾಸ್ತ್ರಿ ಯೊಡನೆ ಮಾಡುತ್ತಿದ್ದಳು. ರಾಮಾಶಾಸ್ತ್ರಿಯು ನಾಲ್ಕೈದು ಕಡೆ ನೋಡಿದನು. ಗಂಡಿನವರೂ ಬಂದು ಹೆಣ್ಣನ್ನು ನೋಡಿಕೊಂಡು ಹೋದರು. ಒಬ್ಬರು ಒಪ್ಪಿ ದರೆ ಮತ್ತೊಬ್ಬರು ಒಪ್ಪುತ್ತಿರಲಿಲ್ಲ. ಅಂತೂ ಯಾವ ಸಂಬಂಧವೂ ಕೂಡ ಲಿಲ್ಲ. ಹೀಗೆಯೇ ಆರು ತಿಂಗಳುಗಳು ಕಳೆದುವು. ರಾಮಾಶಾಸ್ತ್ರಿಯ ಅಣ್ಣಂದಿರಾದ ಶಾಮಾಶಾಸ್ತ್ರಿಗಳು ಬಹಳ ಅಪರೂಪ ವಾಗಿ ತಮ್ಮನ ಮನೆಗೆ ಬಂದರು. ಊಟ ಉಪಚಾರಗಳೆಲ್ಲವೂ ನಡೆಯಿತು. ಶಾಮಾಶಾಸ್ತ್ರಿಯು ಭೋಜನೋತ್ತರ ತಮ್ಮನೊಡನೆ ಮಾತನಾಡುತ್ತಾ “ ನೋಡು ರಾಮು ! ನಾನೊಂದು ಹೆಣ್ಣು ನೋಡಲು ಬಂದಿದ್ದೇನೆ. ಹೆಣ್ಣು ಚೆನ್ನಾಗಿರಬೇಕು, ಬೆಳೆದ ಹುಡುಗಿಯಾಗಿರಬೇಕು. ದೊಡ್ಡವರ ಮನೆಗೆ ಮಾತನಾಡುವ ಹೆಣ್ಣು. ನೀನು ಕೇಳಿರಬಹುದು, ರಂಗಪ್ಪನ ಮೊದಲನೇ ಸಂಬಂಧವು ತಪ್ಪಿ ಆರು ತಿಂಗಳುಗಳಾದುವು. ಮಕ್ಕಳಿಲ್ಲ. ಅವನಿಗೆ ಮೂವತ್ತೈದು ವರ್ಷ. ನಾನು ಸುಳ್ಳು ಹೇಳುವುದಿಲ್ಲ. ಮೂವತ್ತು ವರ್ಷದ ವನಂತೆ ಕಾಣುತ್ತಾನೆ. ಲಕ್ಷಣವಾಗಿದ್ದಾನೆ, ಐಶ್ವರ್ಯವಂತೂ ಹೇಳತೀರದು. ದೇವರು ಎಷ್ಟೂಂತ ಕೊಟ್ಟಿದ್ದಾನೋ ಏನೋ ಅದನ್ನು ಅನುಭವಿಸಲು ಯಾವ ಸೌಭಾಗ್ಯವತಿ ಬರುತ್ತಾಳೋ. ನನಗೆ ಗಂಟುಬಿದ್ದಿದ್ದಾನೆ. ನಾನು ಒಪ್ಪಿದ ಹೆಣ್ಣು ಅವನಿಗೆ ಸಮ್ಮತ. ” ಎಂದು ಹೇಳಿದರು.<noinclude></noinclude> jqnw8cf9acumfzedgv258i9u325rn01 324831 324830 2026-06-16T05:36:02Z Nihar Chakravarti 8555 324831 proofread-page text/x-wiki <noinclude><pagequality level="3" user="Nihar Chakravarti" />{{rh|೪೦|ಚಿತ್ರಕೂಟ}}</noinclude>ಸಂಭಾವನೆ, ಮನೆ ಬಾಡಿಗೆ ಮೂವತ್ತು ರೂಪಾಯಿಗಳನ್ನು ಕೊಡತಕ್ಕದ್ದೆಂದು ನಿರ್ಧಾರ ಮಾಡಿದರು. ಸುಬ್ರಹ್ಮಣ್ಯಶಾಸ್ತ್ರಿಗಳು ನಿಷ್ಠಾವಂತ ಬ್ರಾಹ್ಮಣರೇ ಗಂಡಹೆಂಡಿರಿಬ್ಬರು ಇರುವವರು. ಅರುವತ್ತು ವರ್ಷಗಳ ಮೇಲೆ ವಯಸ್ಸಾಗಿರುವ ವೃದ್ಧ ಬ್ರಾಹ್ಮಣ. ರಾಮಾಶಾಸ್ತ್ರಿಯ ಮಾತಿನ ಮೇಲೆ ಮೂವತ್ತು ರೂಪಾಯಿಗಳ ಬಾಡಿಗೆಗೆ ಅವರಿಗೆ ಕೊಡುವುದೆಂದು ತೀರ್ಮಾನವಾಯಿತು. ಎರಡು ರೂಮುಗಳನ್ನು ಮಾತ್ರ ತಮಗಾಗಿ ಇಟ್ಟುಕೊಂಡರು. ಅದರಿಂದ ತಾಯಿಮಕ್ಕಳ ಜೀವನಕ್ಕೆ ಅನುಕೂಲವಾಯಿತು. ಶ್ಯಾಮಲೆಗೆ ಇಪ್ಪತ್ತು ವರ್ಷಗಳು ತುಂಬಿಹೋಗುತ್ತಿದೆ. ಪ್ರಾಯದ ಹೆಣ್ಣಿಗೆ ಮದುವೆ ಮಾಡದಿರುವುದು ಕಳಂಕ. ನಾರಾಯಣನು ಬರುವ ವರೆಗೂ ಕಾಯುವಂತಿಲ್ಲ. ಈ ಮದುವೆಯ ಪ್ರಸ್ತಾಪ ಆಗಾಗ ರಾಮಾಶಾಸ್ತ್ರಿ ಯೊಡನೆ ಮಾಡುತ್ತಿದ್ದಳು. ರಾಮಾಶಾಸ್ತ್ರಿಯು ನಾಲ್ಕೈದು ಕಡೆ ನೋಡಿದನು. ಗಂಡಿನವರೂ ಬಂದು ಹೆಣ್ಣನ್ನು ನೋಡಿಕೊಂಡು ಹೋದರು. ಒಬ್ಬರು ಒಪ್ಪಿ ದರೆ ಮತ್ತೊಬ್ಬರು ಒಪ್ಪುತ್ತಿರಲಿಲ್ಲ. ಅಂತೂ ಯಾವ ಸಂಬಂಧವೂ ಕೂಡ ಲಿಲ್ಲ. ಹೀಗೆಯೇ ಆರು ತಿಂಗಳುಗಳು ಕಳೆದುವು. ರಾಮಾಶಾಸ್ತ್ರಿಯ ಅಣ್ಣಂದಿರಾದ ಶಾಮಾಶಾಸ್ತ್ರಿಗಳು ಬಹಳ ಅಪರೂಪ ವಾಗಿ ತಮ್ಮನ ಮನೆಗೆ ಬಂದರು. ಊಟ ಉಪಚಾರಗಳೆಲ್ಲವೂ ನಡೆಯಿತು. ಶಾಮಾಶಾಸ್ತ್ರಿಯು ಭೋಜನೋತ್ತರ ತಮ್ಮನೊಡನೆ ಮಾತನಾಡುತ್ತಾ “ ನೋಡು ರಾಮು ! ನಾನೊಂದು ಹೆಣ್ಣು ನೋಡಲು ಬಂದಿದ್ದೇನೆ. ಹೆಣ್ಣು ಚೆನ್ನಾಗಿರಬೇಕು, ಬೆಳೆದ ಹುಡುಗಿಯಾಗಿರಬೇಕು. ದೊಡ್ಡವರ ಮನೆಗೆ ಮಾತನಾಡುವ ಹೆಣ್ಣು. ನೀನು ಕೇಳಿರಬಹುದು, ರಂಗಪ್ಪನ ಮೊದಲನೇ ಸಂಬಂಧವು ತಪ್ಪಿ ಆರು ತಿಂಗಳುಗಳಾದುವು. ಮಕ್ಕಳಿಲ್ಲ. ಅವನಿಗೆ ಮೂವತ್ತೈದು ವರ್ಷ. ನಾನು ಸುಳ್ಳು ಹೇಳುವುದಿಲ್ಲ. ಮೂವತ್ತು ವರ್ಷದ ವನಂತೆ ಕಾಣುತ್ತಾನೆ. ಲಕ್ಷಣವಾಗಿದ್ದಾನೆ, ಐಶ್ವರ್ಯವಂತೂ ಹೇಳತೀರದು. ದೇವರು ಎಷ್ಟೂಂತ ಕೊಟ್ಟಿದ್ದಾನೋ ಏನೋ ಅದನ್ನು ಅನುಭವಿಸಲು ಯಾವ ಸೌಭಾಗ್ಯವತಿ ಬರುತ್ತಾಳೋ. ನನಗೆ ಗಂಟುಬಿದ್ದಿದ್ದಾನೆ. ನಾನು ಒಪ್ಪಿದ ಹೆಣ್ಣು ಅವನಿಗೆ ಸಮ್ಮತ. ” ಎಂದು ಹೇಳಿದರು.<noinclude></noinclude> 8y20q16cctgluqjrukptdsceup2e4ns 324881 324831 2026-06-16T08:18:57Z A826 6806 /* Validated */ 324881 proofread-page text/x-wiki <noinclude><pagequality level="4" user="A826" />{{rh|೪೦|ಚಿತ್ರಕೂಟ}}</noinclude>ಸಂಭಾವನೆ, ಮನೆ ಬಾಡಿಗೆ ಮೂವತ್ತು ರೂಪಾಯಿಗಳನ್ನು ಕೊಡತಕ್ಕದ್ದೆಂದು ನಿರ್ಧಾರ ಮಾಡಿದರು. ಸುಬ್ರಹ್ಮಣ್ಯಶಾಸ್ತ್ರಿಗಳು ನಿಷ್ಠಾವಂತ ಬ್ರಾಹ್ಮಣರೇ ಗಂಡಹೆಂಡಿರಿಬ್ಬರು ಇರುವವರು. ಅರುವತ್ತು ವರ್ಷಗಳ ಮೇಲೆ ವಯಸ್ಸಾಗಿರುವ ವೃದ್ಧ ಬ್ರಾಹ್ಮಣ. ರಾಮಾಶಾಸ್ತ್ರಿಯ ಮಾತಿನ ಮೇಲೆ ಮೂವತ್ತು ರೂಪಾಯಿಗಳ ಬಾಡಿಗೆಗೆ ಅವರಿಗೆ ಕೊಡುವುದೆಂದು ತೀರ್ಮಾನವಾಯಿತು. ಎರಡು ರೂಮುಗಳನ್ನು ಮಾತ್ರ ತಮಗಾಗಿ ಇಟ್ಟುಕೊಂಡರು. ಅದರಿಂದ ತಾಯಿಮಕ್ಕಳ ಜೀವನಕ್ಕೆ ಅನುಕೂಲವಾಯಿತು. ಶ್ಯಾಮಲೆಗೆ ಇಪ್ಪತ್ತು ವರ್ಷಗಳು ತುಂಬಿಹೋಗುತ್ತಿದೆ. ಪ್ರಾಯದ ಹೆಣ್ಣಿಗೆ ಮದುವೆ ಮಾಡದಿರುವುದು ಕಳಂಕ. ನಾರಾಯಣನು ಬರುವ ವರೆಗೂ ಕಾಯುವಂತಿಲ್ಲ. ಈ ಮದುವೆಯ ಪ್ರಸ್ತಾಪ ಆಗಾಗ ರಾಮಾಶಾಸ್ತ್ರಿ ಯೊಡನೆ ಮಾಡುತ್ತಿದ್ದಳು. ರಾಮಾಶಾಸ್ತ್ರಿಯು ನಾಲ್ಕೈದು ಕಡೆ ನೋಡಿದನು. ಗಂಡಿನವರೂ ಬಂದು ಹೆಣ್ಣನ್ನು ನೋಡಿಕೊಂಡು ಹೋದರು. ಒಬ್ಬರು ಒಪ್ಪಿ ದರೆ ಮತ್ತೊಬ್ಬರು ಒಪ್ಪುತ್ತಿರಲಿಲ್ಲ. ಅಂತೂ ಯಾವ ಸಂಬಂಧವೂ ಕೂಡ ಲಿಲ್ಲ. ಹೀಗೆಯೇ ಆರು ತಿಂಗಳುಗಳು ಕಳೆದುವು. ರಾಮಾಶಾಸ್ತ್ರಿಯ ಅಣ್ಣಂದಿರಾದ ಶಾಮಾಶಾಸ್ತ್ರಿಗಳು ಬಹಳ ಅಪರೂಪ ವಾಗಿ ತಮ್ಮನ ಮನೆಗೆ ಬಂದರು. ಊಟ ಉಪಚಾರಗಳೆಲ್ಲವೂ ನಡೆಯಿತು. ಶಾಮಾಶಾಸ್ತ್ರಿಯು ಭೋಜನೋತ್ತರ ತಮ್ಮನೊಡನೆ ಮಾತನಾಡುತ್ತಾ " ನೋಡು ರಾಮು! ನಾನೊಂದು ಹೆಣ್ಣು ನೋಡಲು ಬಂದಿದ್ದೇನೆ. ಹೆಣ್ಣು ಚೆನ್ನಾಗಿರಬೇಕು, ಬೆಳೆದ ಹುಡುಗಿಯಾಗಿರಬೇಕು. ದೊಡ್ಡವರ ಮನೆಗೆ ಮಾತನಾಡುವ ಹೆಣ್ಣು. ನೀನು ಕೇಳಿರಬಹುದು, ರಂಗಪ್ಪನ ಮೊದಲನೇ ಸಂಬಂಧವು ತಪ್ಪಿ ಆರು ತಿಂಗಳುಗಳಾದುವು. ಮಕ್ಕಳಿಲ್ಲ. ಅವನಿಗೆ ಮೂವತ್ತೈದು ವರ್ಷ. ನಾನು ಸುಳ್ಳು ಹೇಳುವುದಿಲ್ಲ. ಮೂವತ್ತು ವರ್ಷದ ವನಂತೆ ಕಾಣುತ್ತಾನೆ. ಲಕ್ಷಣವಾಗಿದ್ದಾನೆ, ಐಶ್ವರ್ಯವಂತೂ ಹೇಳತೀರದು. ದೇವರು ಎಷ್ಟೂಂತ ಕೊಟ್ಟಿದ್ದಾನೋ ಏನೋ ಅದನ್ನು ಅನುಭವಿಸಲು ಯಾವ ಸೌಭಾಗ್ಯವತಿ ಬರುತ್ತಾಳೋ. ನನಗೆ ಗಂಟುಬಿದ್ದಿದ್ದಾನೆ. ನಾನು ಒಪ್ಪಿದ ಹೆಣ್ಣು ಅವನಿಗೆ ಸಮ್ಮತ. " ಎಂದು ಹೇಳಿದರು.<noinclude></noinclude> avkuig3aijqafs5jxjwlu9csgmg1wwa 324882 324881 2026-06-16T08:20:05Z A826 6806 324882 proofread-page text/x-wiki <noinclude><pagequality level="4" user="A826" />{{rh|೪೦|ಚಿತ್ರಕೂಟ}}</noinclude>ಸಂಭಾವನೆ, ಮನೆ ಬಾಡಿಗೆ ಮೂವತ್ತು ರೂಪಾಯಿಗಳನ್ನು ಕೊಡತಕ್ಕದ್ದೆಂದು ನಿರ್ಧಾರ ಮಾಡಿದರು. ಸುಬ್ರಹ್ಮಣ್ಯಶಾಸ್ತ್ರಿಗಳು ನಿಷ್ಠಾವಂತ ಬ್ರಾಹ್ಮಣರೇ ಗಂಡಹೆಂಡಿರಿಬ್ಬರು ಇರುವವರು. ಅರುವತ್ತು ವರ್ಷಗಳ ಮೇಲೆ ವಯಸ್ಸಾಗಿರುವ ವೃದ್ಧ ಬ್ರಾಹ್ಮಣ. ರಾಮಾಶಾಸ್ತ್ರಿಯ ಮಾತಿನ ಮೇಲೆ ಮೂವತ್ತು ರೂಪಾಯಿಗಳ ಬಾಡಿಗೆಗೆ ಅವರಿಗೆ ಕೊಡುವುದೆಂದು ತೀರ್ಮಾನವಾಯಿತು. ಎರಡು ರೂಮುಗಳನ್ನು ಮಾತ್ರ ತಮಗಾಗಿ ಇಟ್ಟುಕೊಂಡರು. ಅದರಿಂದ ತಾಯಿಮಕ್ಕಳ ಜೀವನಕ್ಕೆ ಅನುಕೂಲವಾಯಿತು. ಶ್ಯಾಮಲೆಗೆ ಇಪ್ಪತ್ತು ವರ್ಷಗಳು ತುಂಬಿಹೋಗುತ್ತಿದೆ. ಪ್ರಾಯದ ಹೆಣ್ಣಿಗೆ ಮದುವೆ ಮಾಡದಿರುವುದು ಕಳಂಕ. ನಾರಾಯಣನು ಬರುವವರೆಗೂ ಕಾಯುವಂತಿಲ್ಲ. ಈ ಮದುವೆಯ ಪ್ರಸ್ತಾಪ ಆಗಾಗ ರಾಮಾಶಾಸ್ತ್ರಿಯೊಡನೆ ಮಾಡುತ್ತಿದ್ದಳು. ರಾಮಾಶಾಸ್ತ್ರಿಯು ನಾಲ್ಕೈದು ಕಡೆ ನೋಡಿದನು. ಗಂಡಿನವರೂ ಬಂದು ಹೆಣ್ಣನ್ನು ನೋಡಿಕೊಂಡು ಹೋದರು. ಒಬ್ಬರು ಒಪ್ಪಿದರೆ ಮತ್ತೊಬ್ಬರು ಒಪ್ಪುತ್ತಿರಲಿಲ್ಲ. ಅಂತೂ ಯಾವ ಸಂಬಂಧವೂ ಕೂಡಲಿಲ್ಲ. ಹೀಗೆಯೇ ಆರು ತಿಂಗಳುಗಳು ಕಳೆದುವು. ರಾಮಾಶಾಸ್ತ್ರಿಯ ಅಣ್ಣಂದಿರಾದ ಶಾಮಾಶಾಸ್ತ್ರಿಗಳು ಬಹಳ ಅಪರೂಪ ವಾಗಿ ತಮ್ಮನ ಮನೆಗೆ ಬಂದರು. ಊಟ ಉಪಚಾರಗಳೆಲ್ಲವೂ ನಡೆಯಿತು. ಶಾಮಾಶಾಸ್ತ್ರಿಯು ಭೋಜನೋತ್ತರ ತಮ್ಮನೊಡನೆ ಮಾತನಾಡುತ್ತಾ " ನೋಡು ರಾಮು! ನಾನೊಂದು ಹೆಣ್ಣು ನೋಡಲು ಬಂದಿದ್ದೇನೆ. ಹೆಣ್ಣು ಚೆನ್ನಾಗಿರಬೇಕು, ಬೆಳೆದ ಹುಡುಗಿಯಾಗಿರಬೇಕು. ದೊಡ್ಡವರ ಮನೆಗೆ ಮಾತನಾಡುವ ಹೆಣ್ಣು. ನೀನು ಕೇಳಿರಬಹುದು, ರಂಗಪ್ಪನ ಮೊದಲನೇ ಸಂಬಂಧವು ತಪ್ಪಿ ಆರು ತಿಂಗಳುಗಳಾದುವು. ಮಕ್ಕಳಿಲ್ಲ. ಅವನಿಗೆ ಮೂವತ್ತೈದು ವರ್ಷ. ನಾನು ಸುಳ್ಳು ಹೇಳುವುದಿಲ್ಲ. ಮೂವತ್ತು ವರ್ಷದವನಂತೆ ಕಾಣುತ್ತಾನೆ. ಲಕ್ಷಣವಾಗಿದ್ದಾನೆ, ಐಶ್ವರ್ಯವಂತೂ ಹೇಳತೀರದು. ದೇವರು ಎಷ್ಟೂಂತ ಕೊಟ್ಟಿದ್ದಾನೋ ಏನೋ ಅದನ್ನು ಅನುಭವಿಸಲು ಯಾವ ಸೌಭಾಗ್ಯವತಿ ಬರುತ್ತಾಳೋ. ನನಗೆ ಗಂಟುಬಿದ್ದಿದ್ದಾನೆ. ನಾನು ಒಪ್ಪಿದ ಹೆಣ್ಣು ಅವನಿಗೆ ಸಮ್ಮತ. " ಎಂದು ಹೇಳಿದರು.<noinclude></noinclude> 3ts95ho38pjca0x7f98lgsdvz52r2wl ಪುಟ:Chitrakuuta (1954).djvu/೫೬ 104 120883 324797 2026-06-16T04:55:02Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಚಿತ್ರಕೂಟ ೪ಡಿ ರಾಮಾಶಾಸ್ತ್ರಿಯು “ ಒಬ್ಬ ಹೆಣ್ಣೇನೋ ಇದ್ದಾಳೆ. ರೂಪಲಕ್ಷಣಗ ಳಂತೂ ಕೇಳಬೇಕಾಗಿಲ್ಲ. ಸಾಕ್ತ್ರಾತ್‌ ಲಕ್ಷ್ಮಿ ಒಯಂತಿದ್ದಾ ಳೆ. ಆದರೆ ಎರಡ ನೆಯ ಸಂಬಂಧಕ್ಕೆ ಕೊಡಲು ಅವಳ ಆಜ ಒಪ್ಪುತ್ತಾ ಳೋ ಇಲ್ಲವೋ ಸಂ... 324797 proofread-page text/x-wiki <noinclude><pagequality level="1" user="Nihar Chakravarti" /></noinclude>ಚಿತ್ರಕೂಟ ೪ಡಿ ರಾಮಾಶಾಸ್ತ್ರಿಯು “ ಒಬ್ಬ ಹೆಣ್ಣೇನೋ ಇದ್ದಾಳೆ. ರೂಪಲಕ್ಷಣಗ ಳಂತೂ ಕೇಳಬೇಕಾಗಿಲ್ಲ. ಸಾಕ್ತ್ರಾತ್‌ ಲಕ್ಷ್ಮಿ ಒಯಂತಿದ್ದಾ ಳೆ. ಆದರೆ ಎರಡ ನೆಯ ಸಂಬಂಧಕ್ಕೆ ಕೊಡಲು ಅವಳ ಆಜ ಒಪ್ಪುತ್ತಾ ಳೋ ಇಲ್ಲವೋ ಸಂದೇಹ ” ಎಂದನು. « ಸರಿ! ಮೊದಲು ಹೆಣ್ಣುನೋಡೋಣ. ವರನ ಐಶ್ವರ್ಯ ಲಕ್ಷಣ ಗಳನ್ನೆ ಲ್ಲಾ ಹೇಳಿ ನೋಡು! ಒಪ್ಪಿ ಕೊಂಡರೆ ಆಯಿತು. ಇಲ್ಲದಿದ್ದರೆ Ba ಇಷ್ಟ. ಒಳ್ಳಯ ಕೆ ಈೆಲಸ್ಕ ಪ್ರಯತ್ನ ಮಾಡಿ ನೋಡೋಣ. ? ರಾಮಾಶಾಸ್ತ್ರಿಯು ಒಪ್ಪಿದನು. ರಂಗಪ್ಪ ನ ಹೆಸರು ಈಗ ರಂಗರಾಯ! ಮಂಡಿಪೇಟೆಯಲ್ಲಿ ದೊಡ್ಡ ಆಂಗಡಿ ಜೌಬಾನೆ ವ್ಯಾಪಾರ ಬೇರೆ! ಲಕ್ಷ್ಮೀ ಪುರದಲ್ಲಿ ದೊಡ್ಡಮನೆ ಕಟ್ಟಿದ್ದಾನೆ. ದಾನ ಧರ್ಮಗಳಲ್ಲಿ ಎತ್ತಿದ ಕ್ಸ, ನ್ಯಾಪಾರಸ್ವೃರ ಮಧ್ಯೆ ಅವನಿಗೆ ಗಣಸ್ಪಾನನಿದೆ. ವೈದೀಕ ಬ್ರಾಹ್ಮೆಣರಿಗಂತೂ ಕಲ್ಪ ವೃಕ್ಷ ಅಣ್ಣ ತಮ್ಮ ಂದಿರಿಬ್ಬ ಜರಕೇಕನ್ನು ನ ಮರೆಗೆ ಹೊರಟರು. ಇವರು ಹೋಗುವ ಹೊತ್ತಿ ಸ ಮ ಹೆತ್ತು 3.8 ಸಮಯ. ಶ್ಯಾಮಲೆಯು ಮಡಿಯುಟ್ಟು ಕೊಂಡು ತುಳಸೀಪೂಜೆ ಮಾಡುತ್ತಿದ್ದಳು. ರಾಮಾಶಾಸ್ತ್ರಿಯು: (4 ನೋಡಣ್ಣಾ |! ಇವಳೇ ಹುಡುಗಿ » ಎಂದು ತೋರಿಸಿದನು. ಮನೆಯೊಳಗೆ ಹೋಗಿ ಇಬ್ಬರೂ ಚಾಪೆಯ ಮೇಲೆ ಕುಳಿತುಕೊಂಡರು. ರಾಮಾಶಾಸ್ತ್ರಿಯು ಮನೆಯೊಳಗೆ ಹೋಗಿ, ಪಾರ್ವತಮ್ಮ ನವರೇ ನಮ್ಮ ಅಣ್ಣ ಶಾಮಾಶಾಸ್ತ್ರಿಗಳು ಬಂದಿದ್ದಾರೆ. ಅವರು ಕನ್ಯಾರ್ಥಿಗಳಾಗಿ ಬಂದಿ ದ್ವಾರೆ. ನಾನು ಚನ್ನಾಗಿ ಬಲ್ಲೆ ! ವರನು ಎಲ್ಲದರಲ್ಲಿಯೂ ಶ್ರೇಷ್ಠ. ಆದರೆ ಎರಡನೆಯ ಮದುವೆ. ಅದನ್ನೂ ನೀನು ನೋಡಬೇಕು ? ಎಂದು ಹೇಳಿ ಪಾರ್ವತಮ್ಮನವರನ್ನು ಹಜಾರಕ್ತ್‌ ಕರೆತಂದನು. ಶಾಮಾತಾಸ್ತ್ರಿಯು ವಾಚಾಳಿ ! ವರನ ಐಶ್ವರ್ಯವನ್ನು ಸ್ವಾರಸ್ಯವಾಗಿ ಬಣ್ಣಿಸಿದನು. ಅವನ ದಾನಧರ್ಮಗಳನ್ನು ಹೊಗಳಿದನು. ಆರೋಗ್ಯದೃಢ ಕಾಯನಾಗಿದ್ದಾನೆಂದು ಹೇಳಿದನು. ಮೊದಲನೆಯ ಸಂಬಂಧದಲ್ಲಿ ಮಕ್ಕಳಲ್ಲ. ಮೂವತೆ ತ್ತ್ರೈದೇ ವರ್ಷ ವಯಸ್ಸು. ನಾನು ಅಂಥ ಸಂಬಂಧಗಳು ಸುಖವಾಗಿ<noinclude></noinclude> gbf0eudqnhnxdf3sr4q1vi5nd6oyds3 324832 324797 2026-06-16T05:36:42Z Nihar Chakravarti 8555 /* Proofread */ 324832 proofread-page text/x-wiki <noinclude><pagequality level="3" user="Nihar Chakravarti" />{{rh||ಚಿತ್ರಕೂಟ|೪೧}}</noinclude>ರಾಮಾಶಾಸ್ತ್ರಿಯು “ ಒಬ್ಬ ಹೆಣ್ಣೇನೋ ಇದ್ದಾಳೆ. ರೂಪಲಕ್ಷಣಗ ಳಂತೂ ಕೇಳಬೇಕಾಗಿಲ್ಲ. ಸಾಕ್ಷಾತ್ ಲಕ್ಷ್ಮಿಯಂತಿದ್ದಾಳೆ. ಆದರೆ ಎರಡ ನೆಯ ಸಂಬಂಧಕ್ಕೆ ಕೊಡಲು ಅವಳ ತಾಯಿ ಒಪ್ಪುತ್ತಾಳೋ ಇಲ್ಲವೋ ಸಂದೇಹ ” ಎಂದನು. “ ಸರಿ ! ಮೊದಲು ಹೆಣ್ಣುನೋಡೋಣ. ವರನ ಐಶ್ವರ್ಯ ಲಕ್ಷಣ ಗಳನ್ನೆಲ್ಲಾ ಹೇಳಿ ನೋಡು ! ಒಪ್ಪಿಕೊಂಡರೆ ಆಯಿತು. ಇಲ್ಲದಿದ್ದರೆ ಅವರ ಇಷ್ಟ. ಒಳ್ಳೆಯ ಕೆಲಸ, ಪ್ರಯತ್ನ ಮಾಡಿ ನೋಡೋಣ. ” ರಾಮಾಶಾಸ್ತ್ರಿಯು ಒಪ್ಪಿದನು. ರಂಗಪ್ಪನ ಹೆಸರು ಈಗ ರಂಗರಾಯ ! ಮಂಡಿಪೇಟೆಯಲ್ಲಿ ದೊಡ್ಡ ಅಂಗಡಿ ಚೌಬೀನೆ ವ್ಯಾಪಾರ ಬೇರೆ ! ಲಕ್ಷ್ಮೀ ಪುರದಲ್ಲಿ ದೊಡ್ಡಮನೆ ಕಟ್ಟಿದ್ದಾನೆ. ದಾನ ಧರ್ಮಗಳಲ್ಲಿ ಎತ್ತಿದ ಕೈ. ವ್ಯಾಪಾರಸ್ಥರ ಮಧ್ಯೆ ಅವನಿಗೆ ಗಣ್ಯಸ್ಥಾನವಿದೆ. ವೈದಿಕ ಬ್ರಾಹ್ಮಣರಿಗಂತೂ ಕಲ್ಪವೃಕ್ಷ. ಅಣ್ಣ ತಮ್ಮಂದಿರಿಬ್ಬರೂ ಪಾರ್ವತಮ್ಮನ ಮನೆಗೆ ಹೊರಟರು. ಇವರು ಹೋಗುವ ಹೊತ್ತಿಗೆ ಸುಮಾರು ಹತ್ತು ಗಂಟೆಯ ಸಮಯ. ಶ್ಯಾಮಲೆಯು ಮಡಿಯುಟ್ಟುಕೊಂಡು ತುಳಸೀಪೂಜೆ ಮಾಡುತ್ತಿದ್ದಳು. ರಾಮಾಶಾಸ್ತ್ರಿಯು “ ನೋಡಣ್ಣಾ ! ಇವಳೇ ಹುಡುಗಿ ” ಎಂದು ತೋರಿಸಿದನು. ಮನೆಯೊಳಗೆ ಹೋಗಿ ಇಬ್ಬರೂ ಚಾಪೆಯ ಮೇಲೆ ಕುಳಿತುಕೊಂಡರು. ರಾಮಾಶಾಸ್ತ್ರಿಯು ಮನೆಯೊಳಗೆ ಹೋಗಿ, ಪಾರ್ವತಮ್ಮನವರೇ ನಮ್ಮ ಅಣ್ಣ ಶಾಮಾಶಾಸ್ತ್ರಿಗಳು ಬಂದಿದ್ದಾರೆ. ಅವರು ಕನ್ಯಾರ್ಥಿಗಳಾಗಿ ಬಂದಿ ದ್ದಾರೆ. ನಾನು ಚೆನ್ನಾಗಿ ಬಲ್ಲೆ ! ವರನು ಎಲ್ಲದರಲ್ಲಿಯೂ ಶ್ರೇಷ್ಠ. ಆದರೆ ಎರಡನೆಯ ಮದುವೆ. ಅದನ್ನೂ ನೀನು ನೋಡಬೇಕು ” ಎಂದು ಹೇಳಿ ಪಾರ್ವತಮ್ಮನವರನ್ನು ಹಜಾರಕ್ಕೆ ಕರೆತಂದನು. ಶಾಮಾಶಾಸ್ತ್ರಿಯು ವಾಚಾಳಿ ! ವರನ ಐಶ್ವರ್ಯವನ್ನು ಸ್ವಾರಸ್ಯವಾಗಿ ಬಣ್ಣಿಸಿದನು. ಅವನ ದಾನಧರ್ಮಗಳನ್ನು ಹೊಗಳಿದನು. ಆರೋಗ್ಯದೃಢ ಕಾಯನಾಗಿದ್ದಾನೆಂದು ಹೇಳಿದನು. ಮೊದಲನೆಯ ಸಂಬಂಧದಲ್ಲಿ ಮಕ್ಕಳಿಲ್ಲ. ಮೂವತ್ತೈದೇ ವರ್ಷ ವಯಸ್ಸು. ನಾನು ಅಂಥ ಸಂಬಂಧಗಳು ಸುಖವಾಗಿ<noinclude></noinclude> 1gluupmdfoq1tpr4rlljqrgmaw7p1cm ಪುಟ:Chitrakuuta (1954).djvu/೫೭ 104 120884 324798 2026-06-16T04:55:08Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೪೨ ಚಿತ್ರಕೂಟ ರುವುದನ್ನು ಎಷ್ಟೋ ನೋಡಿದ್ದೇನೆ. ನಿಮ್ಮ ಮಗಳೂ ವಯಸ್ಸಾದ ಹುಡುಗಿ ! ಅವಳು ಒಪ್ಪಿದರೆ, ನೀವು ಸಮ್ಮತಿಸಿದರೆ ನಾನು ಈ ಸಂಬಂಧವನ್ನು ಮಾಡಿಸು ತ್ತೇನೆ ಎಂದು ಭರವಸೆಕೊಟ್ಟಿನು. ಪಾರ್ವತಮ್ಮನು « ನಮಗೆ ಹಿರಿ... 324798 proofread-page text/x-wiki <noinclude><pagequality level="1" user="Nihar Chakravarti" /></noinclude>೪೨ ಚಿತ್ರಕೂಟ ರುವುದನ್ನು ಎಷ್ಟೋ ನೋಡಿದ್ದೇನೆ. ನಿಮ್ಮ ಮಗಳೂ ವಯಸ್ಸಾದ ಹುಡುಗಿ ! ಅವಳು ಒಪ್ಪಿದರೆ, ನೀವು ಸಮ್ಮತಿಸಿದರೆ ನಾನು ಈ ಸಂಬಂಧವನ್ನು ಮಾಡಿಸು ತ್ತೇನೆ ಎಂದು ಭರವಸೆಕೊಟ್ಟಿನು. ಪಾರ್ವತಮ್ಮನು « ನಮಗೆ ಹಿರಿಯರು ಯಾರೂ ಇಲ್ಲ. ನೀವೇ ಹಿರಿ ಯರು. ನೀವೆಲ್ಲಾ ಹೇಳಿದ ಹಾಗೆ !'' ಎಂದಳು. ಅಷ್ಟರಲ್ಲಿ ಸುಬ್ರಹ್ಮಣ್ಯ ಶಾಸ್ತ್ರಿಗಳು ಕಾಡು ಮಲ್ಲೇಶ್ವರ ದೇವಾಲಯ ದಲ್ಲಿ ವೇದಾಂತ ಪಾಠವನ್ನು ಮುಗಿಸಿಕೊಂಡು ಬಂದರು. ಈ ಅಣ್ಣ ತಮ್ಮ] ಂದಿರು ಎದ್ದು ಶಾಸ್ತ್ರಿ ಗಳಿಗೆ ಅಬಿವಾದನ ಮಾಡಿದರು. ಸುಬ್ರಹ್ಮಣ್ಯ ಹಗಳು ಇಬ್ಬರ. ಯೋಗಕ್ಷೇಮನನ ್ಲಾ ವಿಚಾರಿಸಿದರು. ಬಂದಿರುವ ಕಾರ್ಯ ಕಟುಟ. ಪ್ರಶ್ನೆ ಮಾಡಿದರು. ಶಾಮಾಶಾಸ್ತ್ರಿಯು ತಾನು ಬಂದಿರುವ ಸಂಗತಿಯನ್ನು ಪುನಃ ಪಠನ ಮಾಡಿದನು. ಕೊನೆಯಲ್ಲಿ « ತಾವು ದೊಡ್ಡವರು. ದೇವರ ಹಾಗಿದ್ದೀರಿ. ತಮ್ಮ ಬಾಯಲ್ಲಿ ಏನು ಬರುತ್ತೋ ಆದು ಶುಭ, ಹೇಳಿಬಿಡಿ!'ಎಂದು ಹೇಳಿದನು. ಆ ವೇದಾಂತಿ ಸುಬ್ರಹ್ಮಣ್ಯಶಾಸ್ರ್ರಿಗಳಿಗೂ ಎರಡನೆಯ ಸಂಬಂಧ. ಶಾಸ್ತ್ರಿಗಳವರು ಎದೆ ತಟ್ಟುತ್ತಾ ೪ ಸ್‌ ದತ ಕ್ಪೇನು. ನನಗೂ ಎರಡ ನೆಯ ಲಗ್ನ. ನೋಡಿ, ಇಪ್ಪತ್ತು. ವರ್ಷವಾಯಿತು ಮದುವೆಯಾಗಿ. ಆಗ ನನಗೆ ನಲನತ್ತು ವರ್ಷ. ನನ್ನ ಹೆಂಡತಿಗೆ ಹದಿನೈ ದು ವರ್ಷ. ಅನ್ನ ಪೂರ್ಣೇ ಇಲ್ಲಿ ಬಾ!” ಎಂದು ಹೆಂಡತಿಯನ್ನು ೫೫ ಆಕೆಯು ಸಡಗರದಿಂದ ಹಜಾಠಕ್ಕೆ ಬಂದಳು. " ನೋಡು ! ಈ ಮರೆ ಶ್ಯಾಮಲಾ [ ಚಿನ್ನದಂಥಾ ಹುಡುಗಿ! ಸದ್ಗುಣ ಸಂಪನ್ನೆ ! ಇವಳಿಗೆ ಒಂದು ವರ ಬಂದಿದೆ. ಮೂವತ್ತೈದು ವರ್ಷವಂತೆ | ಭ್ಲಾರಿ ಐಶ್ಚರ್ಯವಂತರಂತೆ [ ಮೊದಲನೆಯ ಸಂಬಂಧದಲ್ಲಿ ಮಕ್ಕಳಿಲ್ಲ. ಏನು ಹೇಳುತ್ತೀ? ಸಂಬಂಧವನ್ನು ಒಪ್ಪಬಹುದೋ ಇಲ್ಲವೋ ನೀನೇ ಹೇಳು, ನೀನೇ ಅದಕ್ಕೆ ಸಾಕ್ಷಿ!” ಎಂದರು. ಅನ್ನ ಪೂರ್ಣಮ್ಮನವರು (( ನಿಮ್ಮಂಥಾ ದೊಡ್ಡ ದೊಡ್ಡ ಪಂಡಿತರ ಎದು ರಿಗೆ ನಾನು ಹೇಳಬೇಕೆ | ಅದೆಲ್ಲಾ ಹೆಣ್ಣಿನ ಭಾಗ್ಯ. ವಯಸ್ಸು ಪ್ರಧಾನವಲ್ಲ. ಹೆಂಗಸು ಪೂರ್ವ ಜನ್ಮದಲ್ಲಿ ಮಾಡಿದ ಪುಣ್ಯದಂತೆ ಗಂಡನು ಸಿಕ್ಕುತ್ತಾನೆ.<noinclude></noinclude> 64lffvscp6v8ykihu1yqe1hyicyzmet 324833 324798 2026-06-16T05:37:39Z Nihar Chakravarti 8555 /* Proofread */ 324833 proofread-page text/x-wiki <noinclude><pagequality level="3" user="Nihar Chakravarti" />{{rh|೪೨|ಚಿತ್ರಕೂಟ}}</noinclude>ರುವುದನ್ನು ಎಷ್ಟೋ ನೋಡಿದ್ದೇನೆ. ನಿಮ್ಮ ಮಗಳೂ ವಯಸ್ಸಾದ ಹುಡುಗಿ ! ಅವಳು ಒಪ್ಪಿದರೆ, ನೀವು ಸಮ್ಮತಿಸಿದರೆ ನಾನು ಈ ಸಂಬಂಧವನ್ನು ಮಾಡಿಸು ತ್ತೇನೆ ” ಎಂದು ಭರವಸೆಕೊಟ್ಟನು. ಪಾರ್ವತಮ್ಮನು “ ನಮಗೆ ಹಿರಿಯರು ಯಾರೂ ಇಲ್ಲ. ನೀವೇ ಹಿರಿ ಯರು. ನೀವೆಲ್ಲಾ ಹೇಳಿದ ಹಾಗೆ ! ” ಎಂದಳು. ಅಷ್ಟರಲ್ಲಿ ಸುಬ್ರಹ್ಮಣ್ಯ ಶಾಸ್ತ್ರಿಗಳು—ಕಾಡು ಮಲ್ಲೇಶ್ವರ ದೇವಾಲಯ ದಲ್ಲಿ ವೇದಾಂತ ಪಾಠವನ್ನು ಮುಗಿಸಿಕೊಂಡು ಬಂದರು. ಈ ಅಣ್ಣ ತಮ್ಮಂದಿರು ಎದ್ದು ಶಾಸ್ತ್ರಿಗಳಿಗೆ ಅಭಿವಾದನ ಮಾಡಿದರು. ಸುಬ್ರಹ್ಮಣ್ಯ ಶಾಸ್ತ್ರಿಗಳು ಇಬ್ಬರ ಯೋಗಕ್ಷೇಮವನ್ನೂ ವಿಚಾರಿಸಿದರು. ಬಂದಿರುವ ಕಾರ್ಯ ಕ್ರಮವೇನೆಂದು ಪ್ರಶ್ನೆಮಾಡಿದರು. ಶಾಮಾಶಾಸ್ತ್ರಿಯು ತಾನು ಬಂದಿರುವ ಸಂಗತಿಯನ್ನು ಪುನಃ ಪಠನ ಮಾಡಿದನು. ಕೊನೆಯಲ್ಲಿ “ ತಾವು ದೊಡ್ಡವರು. ದೇವರ ಹಾಗಿದ್ದೀರಿ. ತಮ್ಮ ಬಾಯಲ್ಲಿ ಏನು ಬರುತ್ತೋ ಅದು ಶುಭ, ಹೇಳಿಬಿಡಿ ! ” ಎಂದು ಹೇಳಿದನು. ಆ ವೇದಾಂತಿ ಸುಬ್ರಹ್ಮಣ್ಯಶಾಸ್ತ್ರಿಗಳಿಗೂ ಎರಡನೆಯ ಸಂಬಂಧ. ಶಾಸ್ತ್ರಿಗಳವರು ಎದೆ ತಟ್ಟುತ್ತಾ “ ಓಹೋ ! ಅದಕ್ಕೇನು. ನನಗೂ ಎರಡ ನೆಯ ಲಗ್ನ. ನೋಡಿ, ಇಪ್ಪತ್ತು ವರ್ಷವಾಯಿತು ಮದುವೆಯಾಗಿ. ಆಗ ನನಗೆ ನಲವತ್ತು ವರ್ಷ. ನನ್ನ ಹೆಂಡತಿಯೆ ಹದಿನೈದು ವರ್ಷ. ಅನ್ನಪೂರ್ಣೇ, ಇಲ್ಲಿ ಬಾ ! ” ಎಂದು ಹೆಂಡತಿಯನ್ನು ಕೂಗಿದರು. ಆಕೆಯು ಸಡಗರದಿಂದ ಹಜಾರಕ್ಕೆ ಬಂದಳು. “ ನೋಡು ! ಈ ಮನೆ ಶ್ಯಾಮಲಾ ! ಚಿನ್ನದಂಥಾ ಹುಡುಗಿ ! ಸದ್ಗುಣ ಸಂಪನ್ನೆ ! ಇವಳಿಗೆ ಒಂದು ವರ ಬಂದಿದೆ. ಮೂವತ್ತೈದು ವರ್ಷವಂತೆ ! ಭಾರಿ ಐಶ್ವರ್ಯವಂತರಂತೆ ! ಮೊದಲನೆಯ ಸಂಬಂಧದಲ್ಲಿ ಮಕ್ಕಳಿಲ್ಲ. ಏನು ಹೇಳುತ್ತೀ ? ಸಂಬಂಧವನ್ನು ಒಪ್ಪಬಹುದೋ ಇಲ್ಲವೋ ನೀನೇ ಹೇಳು, ನೀನೇ ಅದಕ್ಕೆ ಸಾಕ್ಷಿ ! ” ಎಂದರು. ಅನ್ನಪೂರ್ಣಮ್ಮನವರು “ ನಿಮ್ಮಂಥಾ ದೊಡ್ಡ ದೊಡ್ಡ ಪಂಡಿತರ ಎದು ರಿಗೆ ನಾನು ಹೇಳಬೇಕೇ ! ಅದೆಲ್ಲಾ ಹೆಣ್ಣಿನ ಭಾಗ್ಯ. ವಯಸ್ಸು ಪ್ರಧಾನವಲ್ಲ. ಹೆಂಗಸು ಪೂರ್ವ ಜನ್ಮದಲ್ಲಿ ಮಾಡಿದ ಪುಣ್ಯದಂತೆ ಗಂಡನು ಸಿಕ್ಕುತ್ತಾನೆ.<noinclude></noinclude> pzpqtom7zgjcnkeuydzs3ya8jjikjhj ಪುಟ:Chitrakuuta (1954).djvu/೫೮ 104 120885 324799 2026-06-16T04:55:14Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಚಿತ್ರಕೂಟ ೪ ಶ್ಯಾಮಲೆಯನ್ನು ಒಂದು ಮಾತು ಕೇಳಿ ನಿಶ್ಚಯ ಮಾಡಿಬಿಡಿ” ಎಂದ್ರು ಹೇಳಿ ಹಕ್ಕು ಅನ್ನ ಪೂರ್ಣಮ್ಮನವರ ಮಾತಿಗೆ ಎಲ್ಲರೂ « ತಥಾಸ್ತು ” ಎಂದರು. ಶಾಮಾಶಾಸ್ತ್ರಿ ಯು ©“ ನಾಳೆ ಬೇಡ, ನಾಡಿದ್ದು ಬರುತ್ತೇವೆ. ನೀ... 324799 proofread-page text/x-wiki <noinclude><pagequality level="1" user="Nihar Chakravarti" /></noinclude>ಚಿತ್ರಕೂಟ ೪ ಶ್ಯಾಮಲೆಯನ್ನು ಒಂದು ಮಾತು ಕೇಳಿ ನಿಶ್ಚಯ ಮಾಡಿಬಿಡಿ” ಎಂದ್ರು ಹೇಳಿ ಹಕ್ಕು ಅನ್ನ ಪೂರ್ಣಮ್ಮನವರ ಮಾತಿಗೆ ಎಲ್ಲರೂ « ತಥಾಸ್ತು ” ಎಂದರು. ಶಾಮಾಶಾಸ್ತ್ರಿ ಯು ©“ ನಾಳೆ ಬೇಡ, ನಾಡಿದ್ದು ಬರುತ್ತೇವೆ. ನೀವು ಎಲ್ಲಾ ಮ ನಿಶ್ಚ ಯಿಸಿಕೊಳ್ಳಿ » ಎಂದು ಹೇಳ ಎದ್ದು ಹೊರಟನು. ಹೊರಡುವಾಗ ಪ್ರ ಅವರ ಧರ್ಮಪತ್ನಿ ಯವ: ಗೂ ನಮಸ್ಕರಿಸಿ ಪಾರ್ವತಮ, ನವರ ಆ ಅಪ್ಪ ಣೆ ಪೇಳಿ ಅಣ್ಣ ತಮ್ಮ ಎ೦ದಿರು ಮನೆಗೆ ಹೊರಬರು. ಘನ ಗತಾ ರಾಮಾಶಾಸ್ತಿ ಯು “ ರಾಮ್ಕು ನಮ್ಮ ಕೆಲಸವು ಕ್ಸ ಗೂಡಿದಂತಿದೆ. ದೇವರು ಫಲ ಕೊಡುವ ಸಮಯದಲ್ಲಿ ಹೀಗೆ ತಂದು ಒದ ಗಿಸಿ ಕೊಡುತ್ತಾನೆ. ಸುಬ್ರಹ್ಮಣ್ಯಶಾಸ್ತ್ರಿ ಗಳವರಿಗೆ ಎರಡನೆಯ ಸಂಬಂಧ ವೆಂದು ಯಾರಿಗೆ ಗೊತ್ತು? ಅವರಿಂದ ಬಹಳ ಸಹಾಯವಾಯಿತು. ಪಾರ್ವ ತಮ್ಮನವರ ಮುಖವನ್ನೇ ನೋಡುತ್ತಿದ್ದೆ. ಅವರೇನೋ ಒಪ್ಪಿಯೇ ಇದ್ದಾರೆ. ಹುಡುಗಿಯು ಏನು ಮಾಡುತ್ತಾಳೆಯೋ ? ನೋಡೋಣ! ದೇವರಿದ್ದಾನೆ 4 ಎಂದನು, ರಾಮಾಶಾಸ್ತ್ರಿಯು (( ಅನ್ನ ಪೂರ್ಣ ಮ್ಮನವರು ತುಂಬಾ ಜಾಣರು. ಅವರು ಹುಡುಗಿಯನ್ನು ಒಪ್ಪಿಸಿಬಿಡುತ್ತಾ ಕ ನಾಳೆ ನಾವು ಹೋಗುವ ಹೊತ್ತಿಗೆ ಎಲ್ಲವೂ ಪಕ್ಷವಾಗಿರುತ್ತದೆ ” ಎಂದನು. ಇಬ ಸಿರೊ ಮನೆಯನ್ನು ಸೇರಿದರು. ಆ ದಿನವೇ ಶಾಮಾಶಾಸ್ತ್ರಿ ಯು ರಂಗರಾಯನಿಗೊಂದು ಕಾಗದವನ್ನು ಬರೆದರು. “ಇಲ್ಲೊ ೦ದು ಶ್ರೆ ಷ್ಟ ವಾದ ಹೆಣ್ಣು ಸಿಕ್ಕಿದೆ. ಹನ್ನೆ ರಡಾಣೆ ಭಂ ಗೊತ್ತಾದಂತೆಯೇ ! [ ನೀವು ತಣ ಹೊರಟು ಬರುವುದು Re ಬರೆದನು. ರಂಗಪ್ಪನು ಮಾರನೆಯ ದಿನ ಸಂಧ್ಯಾ ಕಾಲಕ್ಕೆ ಹಾಜರಾಗಿಬಿಟ್ಟಿನು. ಮೈಸೂರಿನಿಂದ ವಿಳ್ಳೆದೆಲೈೆ ಹೂವು ಹಣ್ಣು ಗಳ ಬುಟ ನಿಗಳನ್ನು ತಂದಿದ್ದನು. ಅರಿಶಿನ ಕುಂಕುಮದ ಪೊಟ್ಟಣಗಳನ್ನು ತಂದಿದ್ದ ನು. ಅವನು ಬಂದಿದ್ದುದು ಮದುವೆಗೆ ಸಿದ್ಧವಾಗಿ ಬಂದಂತಿತ್ತು. ಅವನ ಹ ನ್ಸಿಹೆವೂ ಹಾಗೆಯೇ ಇತ್ತು ಅತ ರಾಮಾಶಾಸ್ತ್ರಿಯ ಮನೆಗೆ ಬಂದಿಳಿದನು. ಆ ಡಿ ಊಟ ಉಪಜಚಾರಗ<noinclude></noinclude> nc5kqtycfh3mo82sjmeewjgc383bzt3 324834 324799 2026-06-16T05:38:26Z Nihar Chakravarti 8555 /* Proofread */ 324834 proofread-page text/x-wiki <noinclude><pagequality level="3" user="Nihar Chakravarti" />{{rh||ಚಿತ್ರಕೂಟ|೪೩}}</noinclude>ಶ್ಯಾಮಲೆಯನ್ನು ಒಂದು ಮಾತು ಕೇಳಿ ನಿಶ್ಚಯ ಮಾಡಿಬಿಡಿ ” ಎಂದು ಹೇಳಿ ದರು. ಅನ್ನಪೂರ್ಣಮ್ಮನವರ ಮಾತಿಗೆ ಎಲ್ಲರೂ “ ತಥಾಸ್ತು ” ಎಂದರು. ಶಾಮಾಶಾಸ್ತ್ರಿಯು “ ನಾಳೆ ಬೇಡ, ನಾಡಿದ್ದು ಬರುತ್ತೇವೆ. ನೀವು ಎಲ್ಲಾ ಯೋಚನೆಮಾಡಿ ನಿಶ್ಚಯಿಸಿಕೊಳ್ಳಿ ” ಎಂದು ಹೇಳಿ ಎದ್ದು ಹೊರಟನು. ಹೊರಡುವಾಗ ಶಾಸ್ತ್ರಿಗಳಿಗೂ, ಅವರ ಧರ್ಮಪತ್ನಿಯವರಿಗೂ ನಮಸ್ಕಾರಿಸಿ ಪಾರ್ವತಮ್ಮನವರ ಅಪ್ಪಣೆ ಕೇಳಿ ಅಣ್ಣ ತಮ್ಮಂದಿರು ಮನೆಗೆ ಹೊರಟರು. ಮನೆಗೆ ಹೋಗುತ್ತಾ ಶಾಮಾಶಾಸ್ತ್ರಿಯು “ ರಾಮು, ನಮ್ಮ ಕೆಲಸವು ಕೈಗೂಡಿದಂತಿದೆ. ದೇವರು ಫಲ ಕೊಡುವ ಸಮಯದಲ್ಲಿ ಹೀಗೆ ತಂದು ಒದ ಗಿಸಿ ಕೊಡುತ್ತಾನೆ. ಸುಬ್ರಹ್ಮಣ್ಯಶಾಸ್ತ್ರಿಗಳವರಿಗೆ ಎರಡನೆಯ ಸಂಬಂಧ ವೆಂದು ಯಾರಿಗೆ ಗೊತ್ತು ? ಅವರಿಂದ ಬಹಳ ಸಹಾಯವಾಯಿತು. ಪಾರ್ವ ತಮ್ಮನವರ ಮುಖವನ್ನೇ ನೋಡುತ್ತಿದ್ದೆ. ಅವರೇನೋ ಒಪ್ಪಿಯೇ ಇದ್ದಾರೆ. ಹುಡುಗಿಯು ಏನು ಮಾಡುತ್ತಾಳೆಯೋ ? ನೋಡೋಣ ! ದೇವರಿದ್ದಾನೆ ” ಎಂದನು. ರಾಮಾಶಾಸ್ತ್ರಿಯು “ ಅನ್ನಪೂರ್ಣಮ್ಮನವರು ತುಂಬಾ ಜಾಣರು. ಅವರು ಹುಡುಗಿಯನ್ನು ಒಪ್ಪಿಸಿಬಿಡುತ್ತಾರೆ. ನಾಳೆ ನಾವು ಹೋಗುವ ಹೊತ್ತಿಗೆ ಎಲ್ಲವೂ ಪಕ್ವವಾಗಿರುತ್ತದೆ ” ಎಂದನು. ಇಬ್ಬರೂ ಮನೆಯನ್ನು ಸೇರಿದರು. ಆ ದಿನವೇ ಶಾಮಾಶಾಸ್ತ್ರಿಯು ರಂಗರಾಯನಿಗೊಂದು ಕಾಗದವನ್ನು ಬರೆದರು. “ ಇಲ್ಲೊಂದು ಶ್ರೇಷ್ಠವಾದ ಹೆಣ್ಣು ಸಿಕ್ಕಿದೆ. ಹನ್ನೆರಡಾಣೆ ಭಾಗ ಗೊತ್ತಾದಂತೆಯೇ ! ನೀವು ತಕ್ಷಣ ಹೊರಟು ಬರುವುದು ” ಎಂದು ಬರೆದನು. ರಂಗಪ್ಪನು ಮಾರನೆಯ ದಿನ ಸಂಧ್ಯಾಕಾಲಕ್ಕೆ ಹಾಜರಾಗಿಬಿಟ್ಟನು. ಮೈಸೂರಿನಿಂದ ವಿಳ್ಳೆದೆಲೆ, ಹೂವು, ಹಣ್ಣುಗಳ ಬುಟ್ಟಿಗಳನ್ನು ತಂದಿದ್ದನು. ಅರಿಶಿನ, ಕುಂಕುಮದ ಪೊಟ್ಟಣಗಳನ್ನು ತಂದಿದ್ದನು. ಅವನು ಬಂದಿದ್ದುದು ಮದುವೆಗೆ ಸಿದ್ಧವಾಗಿ ಬಂದಂತಿತ್ತು. ಅವನ ಉತ್ಸಾಹವೂ ಹಾಗೆಯೇ ಇತ್ತು. ಆತ ರಾಮಾಶಾಸ್ತ್ರಿಯ ಮನೆಗೆ ಬಂದಿಳಿದನು. ಆ ದಿನದ ಊಟ ಉಪಚಾರಗಳ<noinclude></noinclude> d663e89hjykmvqz6eoeql8k7qec2ix6 ಪುಟ:Chitrakuuta (1954).djvu/೧೮ 104 120886 324835 2026-06-16T05:39:53Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಚಿತ್ರಕೂಟ ಷ್ಠ ಅಧಿಕಾರಿಯೂ ಅಲ್ಲ, ಮ್ಯಾಜಿಸ್ಟ್ರೇಟಿನೂ ಅಲ್ಲ. ಸ್ಟೂಲಿನಲ್ಲಿ ಪಾಠ ಹೇಳುವ ಮೇಷ್ಟ್ರು. ನಿಮ್ಮಿಂದ ನಮಗೆ ಯಾವಾಗಲೂ ತೊಂದರೆ ಇಲ್ಲವಯ್ಯಾ. ? ಪಾರ್ವತಮ್ಮನು ಮತ್ತೊಂದು ಬಾರಿ ಕಾಫೀ ತಂದು, ಇಬ್ಬರು ಮುಂದ... 324835 proofread-page text/x-wiki <noinclude><pagequality level="1" user="Nihar Chakravarti" /></noinclude>ಚಿತ್ರಕೂಟ ಷ್ಠ ಅಧಿಕಾರಿಯೂ ಅಲ್ಲ, ಮ್ಯಾಜಿಸ್ಟ್ರೇಟಿನೂ ಅಲ್ಲ. ಸ್ಟೂಲಿನಲ್ಲಿ ಪಾಠ ಹೇಳುವ ಮೇಷ್ಟ್ರು. ನಿಮ್ಮಿಂದ ನಮಗೆ ಯಾವಾಗಲೂ ತೊಂದರೆ ಇಲ್ಲವಯ್ಯಾ. ? ಪಾರ್ವತಮ್ಮನು ಮತ್ತೊಂದು ಬಾರಿ ಕಾಫೀ ತಂದು, ಇಬ್ಬರು ಮುಂದೆಯೂ ಬಟ ನೈಲುಗಳನ್ನಿ ಟ್ರಿ ಳು, ಇಬ್ಬ ರೂ ಅದನ್ನು ಗಿದೆ; ಆದರೊ ಮಾತು ಖೇ ಇಲ್ಲ. ಶ್ಯಾಮಣ್ಣ ನು, “ ಏಳು ಗಂಗಾಧರಾ ಸ್ನಾನ ಮಾಡಿ ಮಾರ್ಕೆಟ್‌ ಕಡೆ ಹೋಗಿ ಬರೋಣ ” ಎಂದನು. ಗಂಗಾಧರನು ಸ್ಪಾ ನವನ್ನು ಮುಗಿಸಿದನು. ಪಾರ್ವತಮ್ಮನು ಹಜಾರದಲ್ಲಿ ಮಣೆಹಾಕಿ ಸ ಸಂಧ್ಯಾವಂದನೆಗೆ ಅಣಿಮಾಡಿದ್ದಳು. ಗಂಗಾಧರನು ಪಂಚೆಯನ್ನು ಟು ಜುಬ್ಬಾ ಧರಿಸಿದರು. ಷಬ ನಸುನಗುತ್ತಾ ಗಂಡನ ಕಡೆಗೆ ನೋಡಿದಳು. ಶ್ಯಾಮಣ್ಣ ನು 4 ನನು! ಪಾತು! ಗಂಗಾಧರರಾಯ ಸಂಧ್ಯಾವಂದನೆ ಜೂ ನೋಡುತ್ತೀಯೋ? ಆದೆಲ್ಲಾ ಆವರ ತಾಯಿಯವರಿಗೋ ತರುವ! ಸಮರ್ಪಣೆ ಮಾಡಿಬಿಟ ದ್ದಾನೆ. ನಿತ್ಯವೂ ಜೈಲಿಗೆ ಹೋಗುವವರಿಗೆ ಜಾತಿ, ಕುಲ್ಕ ಗೋತ್ರ ಒಂದೂ ಇಲ್ಲ. ಇವರೆಲ್ಲರೂ " ಹರಿಜನರು. » ಗಂಗಾಧರನು " ಶ್ಯಾಮು. ಏನಾದರೂ ಹೇಳಿಕೋ ! ನಾನು ನಿನ್ನಹಾಗೆ ಡಂಬಾಚಾರಿಯಲ್ಲ. ವಿಭೂತಿಯನ್ನು ಜಪತಪಗಳ ವೇಷವನ್ನು ಹಾಕಿದರೆ ದೇವರು ಮೆಚ್ಚುವುದಿಲ್ಲ. ನಿನ್ನಂತಹ ಮೂಢಭಕ್ತಿಯುಳ್ಳವರಿಗೆ ಜಾತಿಯಿದ್ದರೆ ಸಾಕು *” ಎಂದನು. ಅಸ್ಟರಲ್ಲಿ ಶ್ಯಾಮಣ್ಣ ಅಂಗಿ ರುಮಾಲನ್ನು ಧರಿಸಿದ್ದನು. ಇಬ್ಬರೂ ಹೊರಗೆ ಹೊರಟರು ! ಸ್ವಲ್ಪ ದೂರ ನಡೆದು ಬರುತ್ತಲೇ ಚೌಕ ದಲ್ಲಿ ಜನಸಂದಣಿಯು ಸೇರಿತ್ತು. ಪೇಪರು ಮಾರುವ ಹುಡುಗನು, " ರಾಜಕೀಯ ಬಂದಿಗಳ ಬಿಡುಗಡೆ? ಎಂದು ಕೂಗುತ್ತಿದ್ದನು. ಜನಗಳು ಕುತೂಹಲದಿಂದ ಪತ್ರಿಕೆಗಳನ್ನು ಕೊಂಡು ಕೊಳ್ಳುತ್ತಿದ್ದರು. ಶ್ಯಾಮಣ್ಣನೂ ಒಂದು ಆಣೆ ತೊಟ್ಟು ಪೇಷರು ಕೈಗೆ ತೆಗೆದುಕೊಂಡನು. ರಾಜಕೀಯ ಬಂದಿಗಳ ಬಡುಗಡೆ — ಸರ್ದಾರ್‌<noinclude></noinclude> ecsga8mdhghtyqgqpsfoxho9e1f9ecu ಪುಟ:Chitrakuuta (1954).djvu/೧೯ 104 120887 324836 2026-06-16T05:39:59Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೪ ಚಿತ್ರ ಕೂಟ ಪಟೀಲರ ಸಂಧಿ ” ಎಂದು ದೊಡ್ಡ ಅಕ್ಷರಗಳ ಹೆಡ್ಮಿಂಗ್‌ ನೋಡಿದನು, ಶ್ಯಾಮ ಣ್ಣ ನು ಪತ್ರಿ ಕೆಯನ್ನು ಓದಿ ನೋಡಿ, 4 ಏನೋ ಗಂಗಾಧರ. ಇವತ್ತು ಜೈಲಿ ನಿಂದ ಬಿಡಿಸಿಕೊಂಡು ಬಂದಿಯೇನೋ? ” ಗಂಗಾಧರನು, “ ಹೌದು! ಜೈಲಿನಿ... 324836 proofread-page text/x-wiki <noinclude><pagequality level="1" user="Nihar Chakravarti" /></noinclude>೪ ಚಿತ್ರ ಕೂಟ ಪಟೀಲರ ಸಂಧಿ ” ಎಂದು ದೊಡ್ಡ ಅಕ್ಷರಗಳ ಹೆಡ್ಮಿಂಗ್‌ ನೋಡಿದನು, ಶ್ಯಾಮ ಣ್ಣ ನು ಪತ್ರಿ ಕೆಯನ್ನು ಓದಿ ನೋಡಿ, 4 ಏನೋ ಗಂಗಾಧರ. ಇವತ್ತು ಜೈಲಿ ನಿಂದ ಬಿಡಿಸಿಕೊಂಡು ಬಂದಿಯೇನೋ? ” ಗಂಗಾಧರನು, “ ಹೌದು! ಜೈಲಿನಿಂದ ಸೀದಾ ನಿಮ್ಮ ಮನೆಗೇ ಬಂದೆ * ಎಂದು ಜೈಲಿನೆ ಅನುಭವಗಳನ್ನೂ ತಮಾಷೆಗಳನ್ನೂ ಹೇಳುತ್ತಾ ನಡೆದನು. ಇಬ್ಬರೂ ಮಾರ್ಕೆಟ್‌ ಬುಜದ ಶ್ಯಾಮಣ್ಣನು ಸ್ಪೇಹಿತನೊಡನೆ ಒಂಬಿರುಗಿ ಮನೆಗೆ ಬರುವ ವೇಳೆಗೆ ಸುಮಾರು ಹನ್ನೆರಡು ಗಂಟೆಯಾಗಿತ್ತು. ಶ್ಯಾಮಲೆಯೂ, ನಾರಾಯಣನೂ ಮನೆಗೆ ಬಂದಿದ್ದರು, ಅವರಿಬ್ಬರನ್ನೂ ಗಂಗಾಧರನು ಪ್ರೀತಿಯಿಂದ ಮಾತನಾಡಿಸಿದನು. ಶ್ಯಾಮಲೆಗೆ ಸುಮಾರು ಹದಿ ನದು ವರ್ಷ ವಯಸ್ಸು ; ; ನಾರಾಯಣ ನಿಗೆ ಹದಿನೆಂಟು ವರ್ಷ. ಎಲ್ಲರೂ ಊಟಕೆ ಕುಳಿತರು. ಭೋಜನ ಮಾಡುತ್ತಾ ಗಂಗಾಧರನು, (« ಶ್ಯಾಮಣ್ಣ, ಮಗಳಿಗೆ ಎಲ್ಲಿ ವರನನ್ನು ನೋಡಿದ್ದಿ ಇ ಮದುವೆ ಯಾವಪಾಗ 2 » ಎಂದು ಪ್ರಶ್ನೆ ಮಾಡಿದನು. “ ಮದುವೆಯ ಮಾತು ಆಲೋಜಚಿಸತಕ, ದ್ವೇ. ಆದರೆ ಈ ಕಾಲದಲ್ಲಿ ಯಾವುದನ್ನೂ ನಿಶ್ಚಯಿಸುವುದಕ್ಕಾಗುವುದಿಲ್ಲ. ಸರಿಯಾದ * ವರ' ಸಿಕ್ಚ್ರು ವುದೇ ಕಪ್ಪ. ” (( ಹಾಗೆಂದರೇನಯ್ಯಾ ು ನೀವು ಬಹಳ ಲೆಖ್ಚಾ 'ಚಾರಗಳನ್ನು ಹಾಕು ತ್ತೀರಿ. ಸರ್ಕಾರೀ ಕೆಲಸದಲ್ಲಿರುವವರ ಸ್ವಭಾವವೇ ಹೀಗೆ | ನಿಮಗೆ ಎಲ್ಲಾ ಸೆಕ್ಕೂರಿಬ' ಇರಬೇಕು. ನಿನ್ನ ಅಳಿಯನಾಗುವವನು ಆ ಅಸಿಸ್ಟೆಂಟ್‌ ಕಮೀಷನ ರಾಗಬೇಕು. ” 4 ಗಂಗಾಧೆರಾ! ನೀನು ಯಾವಾಗಲೂ ಹೀಗೇ ತಲೆಹರಟಿ ಮಾಡು ತ್ರೀಯೆ. ಸರಿಯಾದವರನನ್ನು ನೋಡದೆ ಮದುವೆ ಮಾಡುತ್ತಾರೆಯೇ? ಗೃಹೆ ಕೃತ್ಯ ನಡಸುವ ಯೋಗ್ಯ ತೆಯಾದರೂ ಇರಬೇಡವೇ? ಇಲ್ಲದಿದ್ದರೆ ಮದುವೆ ಎಂದರೆ ಅರ್ಥವೇನಯ್ಯಾ : ಈ « ಆದೆಲ್ಲಾ ಸರಿ]. ಹೆಣ ಸಂಪಾದಿಸುವುದು ಸಂಸಾರ ಮಾಡುವುಡು<noinclude></noinclude> diqqis8vqrku8l3urotjvs0aedovymm ಪುಟ:Chitrakuuta (1954).djvu/೨೦ 104 120888 324837 2026-06-16T05:40:05Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅದನ್ನೇ ನಾನು " ಅದ “ ಗಂಗಾಧರಾ! ಆಕಾಶಪುರಾಣ ಮಾತನಾಡಬೇಡ! ಊಟ ಮಾಡು. ನಿನಗೇನು ಕಡಿಮೆ ? ಜಮೀನಿದೆ, ಮನೆ ಇವೆ. ಒಳ್ಳೇ | ಪ್ರಾ್ಯಕೆ (ಸು' ಇತ್ತು, ಏನೋ ಬಿಟ್ಟು ಬಿಟ್ಟೆ. ಈಗ ಕೋರ್ಟಗೆ ಹೋದರೆ ಇವತ್ತೇ ಕ್ಸತು ಶಂಬಾ ದುಡ್ಡು ಬರು... 324837 proofread-page text/x-wiki <noinclude><pagequality level="1" user="Nihar Chakravarti" /></noinclude>ಅದನ್ನೇ ನಾನು " ಅದ “ ಗಂಗಾಧರಾ! ಆಕಾಶಪುರಾಣ ಮಾತನಾಡಬೇಡ! ಊಟ ಮಾಡು. ನಿನಗೇನು ಕಡಿಮೆ ? ಜಮೀನಿದೆ, ಮನೆ ಇವೆ. ಒಳ್ಳೇ | ಪ್ರಾ್ಯಕೆ (ಸು' ಇತ್ತು, ಏನೋ ಬಿಟ್ಟು ಬಿಟ್ಟೆ. ಈಗ ಕೋರ್ಟಗೆ ಹೋದರೆ ಇವತ್ತೇ ಕ್ಸತು ಶಂಬಾ ದುಡ್ಡು ಬರುತ್ತೆ. » « ಈಗ ಹೇಳು! ನಮ್ಮ ಶ್ಯಾಮಲೆಯನ್ನು ನಿನ್ನ ಮಗನಿಗೆ ಕೊಡು ತ್ರೇನೆ ಒಪ್ಪುತ್ತೀಯೇನು ? ” ಅಷ್ಟು ಹೊತ್ತಿಗೆ ಪಾರ್ವತಮ್ಮನ ಜಿ: ಜಾರ ಪರಮಾನ್ನ ತಂದು ಬಡ್ಡಿ ಸಿದಳು. ಗಂಗಾಧರನು ಪಾಯಸವನ್ನು ಚಪ್ಪರಿಸುತ್ತಾ “ ಹೌದು ಕಣೋ ಶ್ಯಾಮು ! ಪ್ರ ಶ್ಯಾಮಲೆಯ ನಸ್ರು ನಮ್ಮ ee ನ ಮಾಡಿಕೊಳ್ಳಲು ನಾನು ಒಪ್ಪುತ್ತೇನೆ! ಈ ಪಾಯಸವೇ ಸಾಕ್ಷಿ” ಎಂದು ಹೇಳಿದನು. ಸಾರ್ವತಮ್ಮಮು ನಕ್ಕಳು. ಶ್ಯಾಮಣ್ಣ, ಗಂಗಾ ಜ್ರ ಇಬ್ಬರೂ ನಕ್ಕರು. ನಾರಾ ಯಣನು ಶ್ಯಾಮಲೆಯ ಕಡೆ ತಿರುಗಿ ನೋಡಿದನು. ಶ್ಯಾಮಲೆಯು ತಲೆ ತಗ್ಗಿಸಿದಳು. ಊಟ ಮಾಡಿ ಹಜಾರದಲ್ಲಿ ಕುಳಿತುಕೊಂಡರು. ಶ್ಯಾಮಲೆಯು ಎಲ ಡಕ ತಟ್ಟೆ ತಂದಿಟ್ಟ ಛು. ಗಂಗಾಧರ ನು ಎಲೆಯಡಕೆ ಮೆಲ್ಲುತ್ತಾ ಮತ್ತೊಮ್ಮೆ ಶ್ಯಾಮಲೆಯನ್ನು ದಃ ತ್ರ ಸಿ ನೋಡಿದನು. ಈ ಹುಡುಗಿ ಎಷ್ಟು ಚಿಲುವೆ, ಎಂದು ಮನಸಿನಲ್ಲೇ Se ಕು ಆಂದಿನ ಸಂಧ್ಯಾ ಕಾಲವೇ ಗಂಗಾಧೆರನು ಊರಿಗೆ ಪ್ರಯಾಣ ಮಾಡಿ ದನು. ಮಾರನೆಯ ದಿನ ಗಂಗಾಧರನು ಮೈಸೂರನ್ನು ತಲುಪಿದನು. ಆ ದಿನ ವೆಲ್ಲಾ ಊರಿನಲ್ಲಿ ಬಲು ಸಡಗರ. ಊರಲ್ಲೆಲ್ಲಾ ಕಾಂಗ್ರೆಸ ಸ್‌ ಮೆರವಣಿಗೆ. ಸಂಧಾ ಕಾಲ ಟೌನ್‌ ಹಾಲಿನಲ್ಲಿ ಭಾಷಣಗಳು. ನಿಜಯರ ಇಳೆಗಳಾ ದ ಕಾಂಗ್ರೆ ಸ್ಸಿನವರು ಮನಸ್ಸು ಬಂದಂತೆಲ್ಲಾ ಭಾಷಣ ಮಾಡಿದರು. ಗಂಗಾಧರನ ಜಿ ಬಹಳ ಪ್ರಭಾವಶಾಲಿಯಾಗಿತ್ತು. ಮಾತಿನ ಭರದಲ್ಲಿ ಗಂಗಾಧರನು " ಮಹಾರಾಜರ<noinclude></noinclude> p6x36fvf3b073d3ytvk1knzlyyjoa68 ಪುಟ:Chitrakuuta (1954).djvu/೨೧ 104 120889 324838 2026-06-16T05:40:11Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: & ಚಿತ್ರ ಕೂಟ ಪ್ರಭುತ್ವವು ಮುಕ್ತಾಯವಾಗಬೇಕು' ಎಂದು ಘೋಷಿಸಿದನು. ಆ ಮಾತು ಗಳು ಕಾಂಗ್ರೆಸ್ಸಿನವರಿಗೇ ರುಚಿಸಲಿಲ್ಲ. ಯುವಕರೆಲ್ಲರೂ ಉಬ್ಬಿ ಹೋದರು. ಮಾರನೆಯ ದಿನವೇ ಗಂಗಾಧರನ ದಸ್ತಗಿರಿಯಾಗುವುದೆಂದು ಕೆಲವರು ಭಾವಿ... 324838 proofread-page text/x-wiki <noinclude><pagequality level="1" user="Nihar Chakravarti" /></noinclude>& ಚಿತ್ರ ಕೂಟ ಪ್ರಭುತ್ವವು ಮುಕ್ತಾಯವಾಗಬೇಕು' ಎಂದು ಘೋಷಿಸಿದನು. ಆ ಮಾತು ಗಳು ಕಾಂಗ್ರೆಸ್ಸಿನವರಿಗೇ ರುಚಿಸಲಿಲ್ಲ. ಯುವಕರೆಲ್ಲರೂ ಉಬ್ಬಿ ಹೋದರು. ಮಾರನೆಯ ದಿನವೇ ಗಂಗಾಧರನ ದಸ್ತಗಿರಿಯಾಗುವುದೆಂದು ಕೆಲವರು ಭಾವಿ ಸಿದ್ದರು. ಆದರೆ ಅಂತಹ ಪ್ರಮಾದವೇನೂ ಜರುಗಲಿಲ್ಲ. ಎಲ್ಲವೂ ಶಾಂತ ವಾಗಿಯೇ ಇತ್ತು.<noinclude></noinclude> gr6s35r0gqjgl1bqn6r0xuzahphms0e ಪುಟ:Chitrakuuta (1954).djvu/೨೨ 104 120890 324839 2026-06-16T05:40:18Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಹ ಶ್ಯಾಮಣ್ಣನು ಸೆಂಟ್ರಲ್‌ ಕಾಲೇಜಿನಲ್ಲಿ ಉಪಾಧ್ಯಾಯ. ಕನ್ನಡದಲ್ಲಿ ಅಭಿರುಚಿಯುಳ್ಳ ವಿದ್ಯಾಂಸೆ. ಕರ್ನಾಟಕ ಪರಿಷತ್ತಿನಲ್ಲಿಯೂ ಶ್ಯಾಮಣ್ಣನು ಪ್ರಧಾನ ವ್ಯಕ್ತಿ. ಮನೆಯಲ್ಲಿ ಸನಾತನ ಧರ್ಮಾಭಿಮಾನಿ. ಅವನ ಸಂಸಾರವು... 324839 proofread-page text/x-wiki <noinclude><pagequality level="1" user="Nihar Chakravarti" /></noinclude>ಹ ಶ್ಯಾಮಣ್ಣನು ಸೆಂಟ್ರಲ್‌ ಕಾಲೇಜಿನಲ್ಲಿ ಉಪಾಧ್ಯಾಯ. ಕನ್ನಡದಲ್ಲಿ ಅಭಿರುಚಿಯುಳ್ಳ ವಿದ್ಯಾಂಸೆ. ಕರ್ನಾಟಕ ಪರಿಷತ್ತಿನಲ್ಲಿಯೂ ಶ್ಯಾಮಣ್ಣನು ಪ್ರಧಾನ ವ್ಯಕ್ತಿ. ಮನೆಯಲ್ಲಿ ಸನಾತನ ಧರ್ಮಾಭಿಮಾನಿ. ಅವನ ಸಂಸಾರವು ಸುಖವಾಗಿಯೇ ನಡೆಯುತ್ತಿತ್ತು. ನಾರಾಯಣ, ಶ್ಯಾಮಲಾ ಇಬ್ಬರೇ ಮಕ್ಕಳು ನಾರಾಯಣನು ಕಾಲೇಜಿನಲ್ಲಿ ಓದುತ್ತಿದ್ದನು. ಶ್ಯಾಮಲೆಯು ವಾಣೀವಿಲಾಸ ಹೈಸ್ಕೂಲಿನಲ್ಲಿ ಓದುತ್ತಿದ್ದಳು. ಪಾರ್ವತಮ್ಮನು ಸ್ಟೂಲಿನಲ್ಲಿ ಓದಿದವಳಲ್ಲ; ಆದರೂ ಕನ್ನಡದಲ್ಲಿ ಒಳ್ಳೆಯ ಪರಿಶ್ರಮವಿತ್ತು ಶ್ಯಾಮಣ್ಣನು ಮೊದಲಿನಿಂದಲೂ ಆರೋಗ್ಯವಂತನಲ್ಲ. ಆಗಾಗ ಖಾಯಿಲೆ ಬೀಳುತ್ತಿದ್ದನು. ಸರಿಯಾಗಿ ಔಷಧಿ ಪಥಗಳನ್ನು ಮಾಡುತ್ತಿರಲಿಲ್ಲ. ತಾನಾಗಿಯೇ ಗುಣವಾಗುತ್ತದೆಂದು ನಂಬಿಕೆ. ಹಾಗೆಯೇ ಗುಣವಾಗುತ್ತಲೂ ಇತ್ತು. ಈ ಬಾರಿ ಒಂದು ತಿಂಗಳು ಖಾಯಿಲೆ ಬಿದ್ದನು. ಕಾಲೇಜಿಗೆ ರಜಾ ತೆಗೆದುಕೊಂಡನು. ಡಾಕ್ಟರು ನೋಡಿ ಔಷಧಿ ಕೊಡುತ್ತಿದ್ದರು. ಖಾಯಿಲೆಯೇನೋ ಸಾಮಾನ್ಯವಾಗಿತ್ತು. ಭಯಕ್ಕೆ ಏನೂ ಕಾರಣವಿರಲಿಲ್ಲ ಆದರೆ ಗುಣಮುಖವಾಗಲೇ ಇಲ್ಲ, ಹಾಸಿಗೆ ಬಿಟ್ಟೀಳದಷ್ಟು ನಿಶ್ಶಕ್ತೆಯಾಯಿತು. ಮನೆಯವರಿಗೆಲ್ಲಾ ಗಾಬರಿಯಾಯಿತು. ಪಾರ್ವತಮ್ಮನು ಮನೆಯ ಕೆಲಸಗಳನ್ನು ಮಾಡುತ್ತಾ ಗಂಡನನ್ನು ಉಪಚರಿಸುತ್ತಿದ್ದಳು. ಶ್ಯಾಮಲೆ ಸ್ಕೂಲಿಗೆ ಹೋಗುವುದನ್ನು ಬಿಟ್ಟು ತಂದೆಯನ್ನು ಉಪಚರಿಸಿತೊಡ ಗಿದಳು. ನಾರಾಯಣನು ಓನಧಿಯನ್ನು ತರುವುದು ಡಾಕ್ಟರನ್ನು ಕರೆತರುವುದು ತಂದೆಯ ಬಟ್ಟೆಗಳನ್ನು ಒಗೆದು ಒಣಗಿಸುವುದು ಇತ್ಯಾದಿ ಕೆಲಸಗಳನ್ನು ಮಾಡು ತ್ರಿದ್ದನು. ಶ್ಯಾಮಣ್ಣನ ಖಾಯಿಲೆಯು ಕ್ಷಯ ರೋಗವೆಂದು ಡಾಕ್ಟರು ಖಚಿತ ಮಾಡಿಕೊಂಡರು. ಮೈಸೂರಿಗೆ ಹೋಗಿ ಕ್ಷಯ ರೋಗದ ಆಸ್ಪತ್ರೆಗೆ ಸೇರಬೇ ಕೆಂದು ಶ್ಯಾಮಣ್ಣ ನೊಡನೆ ಹೇಳಿದರು. ಶ್ಯಾಮಣ್ಣನ ಹೆಂಡತಿ, ಮಕ್ಕಳು ಮೈಸೂ<noinclude></noinclude> mtdw4nf0l1xo38y9c7ieb5cscds58ml ಪುಟ:Chitrakuuta (1954).djvu/೨೩ 104 120891 324840 2026-06-16T05:40:24Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಲೆ ಚಿತ್ರಕೂಟ ರಿಗೆ ಹೋಗಿ ಆಸ್ಪತ್ರೆಗೆ ಸೇರಬೇಕೆಂದು ಶ್ಯಾಮಣ್ಣನನ್ನು ಬಲಾತ್ವರಿಸಿದರು. ಶ್ಯಾಮಣ್ಣ ನಿಗೆ ಪೂರ್ತಾ ಸಂಬಳ ಬರುವ ರಜಾ ಸಿಕ್ಕಿತ್ತು. ಮೈಸೂರಿಗೆ ಹೋಗಿ ಇರಲು ಇವರಿಗೆ ತೊಂದರೆಯೇನೂ ಇರಲಿಲ್ಲ. ಆದರೆ ಅವ... 324840 proofread-page text/x-wiki <noinclude><pagequality level="1" user="Nihar Chakravarti" /></noinclude>ಲೆ ಚಿತ್ರಕೂಟ ರಿಗೆ ಹೋಗಿ ಆಸ್ಪತ್ರೆಗೆ ಸೇರಬೇಕೆಂದು ಶ್ಯಾಮಣ್ಣನನ್ನು ಬಲಾತ್ವರಿಸಿದರು. ಶ್ಯಾಮಣ್ಣ ನಿಗೆ ಪೂರ್ತಾ ಸಂಬಳ ಬರುವ ರಜಾ ಸಿಕ್ಕಿತ್ತು. ಮೈಸೂರಿಗೆ ಹೋಗಿ ಇರಲು ಇವರಿಗೆ ತೊಂದರೆಯೇನೂ ಇರಲಿಲ್ಲ. ಆದರೆ ಅವನೇಕೋ ಬೆಂಗಳೂರು ಬಿಡಲು ಒಪ್ಪಲಿಲ್ಲ. ಹೀಗೆಯೇ ಒಂದು ತಿಂಗಳು ಕಳೆಯಿತು. ವ್ಯಾಧಿಯು ಬಹಳ ಹೆಚ್ಚಾ ಯಿತು. ಪಾರ್ವತಮ್ಮನು ಸರ್ವದಾ ಕಣ್ಣ (ರಿಡುತ್ತಿದ್ದಳು. ಮಕ್ಕಳಿಗೆ ತೋರ್ಹ ಡಿಸಿಕೊಳ್ಳ ಬಾರದೆಂದು ಸಮಾಧಾನ ಮಾಡಿಕೊಳ್ಳು ತ್ತಿದ್ದಳು. ಮಕ ಳಿಬ್ಬರೂ ಹೆಚ್ಚು ಗಾಬರಿಯಿಂದಲೇ ಇದ್ದರು. ಶ್ಯಾಮಲೆಯೂ ನಾರಾಯಣನೂ ರಾತ್ರಿ ಹನ್ನೊಂದು ಗಂಟೆಯ ವರೆಗೆ ತಂದೆಯ ಹತ್ತಿರ ಕುಳಿತಿದ್ದು, ಎದ್ದು ಹೋಗಿ ಮಲಗಿಕೊಂಡರು. ಶ್ಯಾಮಣ್ಣನು ತಾನು ಬದುಕುವುದು ದುರ್ಲಭವೆಂದು ತಿಳಿದುಕೊಂಡಿದ್ದರೂ ಬಂದು ನೋಡುವ ಸ್ನೆೇೇಹಿತರೊಡನೆಲ್ಲಾ ನಗುತ್ತಲೇ ಮಾತನಾಡಿಸುತ್ತಿದ್ದನು. ವ್ಯಾಧಿಯನ್ನು ಗೆದ್ದು ಎದ್ದು ಬರುವವನಂತೆಯೇ ಮಾತನಾಡಿಸುತ್ತಿದ್ದನು. ಹೊರಗೆ ಹೀಗಿ ದ್ದರೂ ಮನಸ್ಸಿನಲ್ಲಿ ತಾನು ಬದುಕುವುದಿಲ್ಲವೆಂದು ನಿರ್ಧಾರ ಮಾಡಿಕೊಂಡಿ ದ್ವನು. ಆದಿನ ಅರ್ಥ ರಾತ್ರಿಯ ಸಮಯದಲ್ಲಿ ಪಾರ್ವತಮ್ಮನು ಶ್ಯಾಮಣ್ಣನ ಹಾಸಿಗೆಯ ಸಮೀಸದಲ್ಲಿಯೇ ಕುಳಿತಿದ್ದಳು. ಶ್ಯಾಮಣ್ಣನು « ಪಾತು! ಭೃರ್ಯ ದಿಂದ ಇರಬೇಕು. ಜನನ-ಮರಣಗಳು ಭಗವಂತನ ಅಧೀನ. ನಾನು ಬದುಕು ವುದಿಲ್ಲ. ಇನ್ನೆರಡು ವರ್ಷಗಳು ಸ್ವಲ್ಪ ಕಷ್ಟ! ಆಮೇಲೆ ನಾಣಿಯು ಮುಂದಕ್ಕೆ ಬರುತ್ತಾನೆ, ನಿಮ್ಮೆಲ್ಲರನ್ನೂ ಕಾಪಾಡುತ್ತಾನೆ * ಎಂದು ಹೇಳಿದನು. ಅವನ ದನಿಯಲ್ಲಿ ಭಯ- ದುಃಖಗಳ ಚಿಹ್ನೆಯೇ ಇರಲಿಲ್ಲ; ಪಾರ್ವ ಮ್ಮನ ಕಣ್ಣು ಗಳಲ್ಲಿ ಧಳಧಳನೆ ನೀರು ಸುರಿಯಿತು. ಅವಳು ಶಾ ಮಣ್ಣನ ಎರಡು ಕೈಗಳನ್ನು ಹಿಡಿದುಕೊಂಡು ಆತ್ರಳು. ಎಷ್ಟು ಹೊತ್ತು ಅಳುತ್ತಿದ್ದಳೋ ಅವಳರಿಯಳು. ಅಳುತ್ತಲೇ ಇದ್ದಳು. ಬೆಳಕು ಹರಿಯಿತು. ಬೆಳಗ್ಗೆ ಆರು ಗಂಟಿಗೆ ಡಾಕ್ಟರು ನಾರಾಯಣರಾಯರು ಬಂದು ಶ್ಯಾಮ ಣ್ಣನನ್ನು ನೋಡಿದರು. ಹೃದಯವನ್ನು ಮುಟ್ಟ ನೋಡಿದರು. ಕೃಮುಟ್ಟ ಹಿಡಿದು ನಾಡಿಯನ್ನು ನೋಡಿದರು. ಗಾಬರಿಯಿಂದ “ ಪಾರ್ವತಮ್ಮನವರೇ |<noinclude></noinclude> hah0ci1ccf4iuqe3wk74zbboznliujm ಪುಟ:Chitrakuuta (1954).djvu/೨೪ 104 120892 324841 2026-06-16T05:40:31Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ Created blank page 324841 proofread-page text/x-wiki <noinclude><pagequality level="1" user="Nihar Chakravarti" /></noinclude><noinclude></noinclude> 70g7gopwzmx32j50zcsxu9orsfc2ju3 ಪುಟ:Chitrakuuta (1954).djvu/೨೫ 104 120893 324842 2026-06-16T05:40:40Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಎಪಿ ಚಿತ್ರಕೂಟ ನಾರಾಯೆಣನು ಧೈರ್ಯಶಾಲಿ. ತಾಯಿಗೆ ಥೃರೈ ಹೇಳುತ್ತಿದ್ದನು. ತಾನು ಕೆಲಸಕ್ಕೆ ಸೇರಿದರೆ ಐವತ್ತು... ಅರುವತ್ತು ರೂಪಾಯಿಗಳ ಸಂಬಳ ಬರುವು ದೆಂದೂ ಹೇಗೋ ಸಂಸಾರವು ನಡೆಯುವುದೆಂದೂ ಹೇಳುತ್ತಿದ್ದನು. ಆ ಕುಟ... 324842 proofread-page text/x-wiki <noinclude><pagequality level="1" user="Nihar Chakravarti" /></noinclude>ಎಪಿ ಚಿತ್ರಕೂಟ ನಾರಾಯೆಣನು ಧೈರ್ಯಶಾಲಿ. ತಾಯಿಗೆ ಥೃರೈ ಹೇಳುತ್ತಿದ್ದನು. ತಾನು ಕೆಲಸಕ್ಕೆ ಸೇರಿದರೆ ಐವತ್ತು... ಅರುವತ್ತು ರೂಪಾಯಿಗಳ ಸಂಬಳ ಬರುವು ದೆಂದೂ ಹೇಗೋ ಸಂಸಾರವು ನಡೆಯುವುದೆಂದೂ ಹೇಳುತ್ತಿದ್ದನು. ಆ ಕುಟುಂಬದ ಮೇಲೆ ಅಂಧಕಾರವು ಕವಿಯಿತು.<noinclude></noinclude> 483j8b5y3z1m8os1i0eme4kxnfuk7eg ಪುಟ:Chitrakuuta (1954).djvu/೨೬ 104 120894 324843 2026-06-16T05:40:46Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩ ನಾರಾಯಣನ ವ್ಯಾಸಂಗವು ಸಾಗುತ್ತಲೇ ಇತ್ತು. ಶ್ಯಾಮಲೆಯು ಸ್ಕೂಲ್‌ ಫ್ರನಲ್‌ ಪರೀಕ್ಷೆಗೆ ಕಟ್ಟದ್ದಳು. ಪಾರ್ವತಮ್ಮನ ಕೈಲಿದ್ದ ಹಣವೆಲ್ಲವೂ ಖರ್ಚಾಯಿತು. ಪ್ರತಿದಿನವೂ ಸಂಸಾರವನ್ನು ನಡಸುವುದು ಕಷ್ಟವಾಗಿತ್ತು. ಪಾ... 324843 proofread-page text/x-wiki <noinclude><pagequality level="1" user="Nihar Chakravarti" /></noinclude>೩ ನಾರಾಯಣನ ವ್ಯಾಸಂಗವು ಸಾಗುತ್ತಲೇ ಇತ್ತು. ಶ್ಯಾಮಲೆಯು ಸ್ಕೂಲ್‌ ಫ್ರನಲ್‌ ಪರೀಕ್ಷೆಗೆ ಕಟ್ಟದ್ದಳು. ಪಾರ್ವತಮ್ಮನ ಕೈಲಿದ್ದ ಹಣವೆಲ್ಲವೂ ಖರ್ಚಾಯಿತು. ಪ್ರತಿದಿನವೂ ಸಂಸಾರವನ್ನು ನಡಸುವುದು ಕಷ್ಟವಾಗಿತ್ತು. ಪಾರ್ವತಮ್ಮನ ಮೈಮೇಲೆ ಲವು ನಗಗಳಿದ್ದುವು ಪ್ರತಿ ತಿಂಗಳೂ ಒಂದೊಂದು ಮಾರಿ ಅವರು ಜೀವನ ಪಥವನ್ನು ಸಾಗಿಸುತ್ತಿದ್ದರು. ಸುಮಾರು ಆರು ತಿಂಗಳು ಕಳೆದಿರಬಹುದು. ಶ್ಯಾಮಣ್ಣನ ಇನ್‌ ಹೂರೆನ್ಸ್‌ ಹಣ ಎಂಟು ಸಾವಿರ ರೂಪಾಯಿಗಳು ಕ್ಫಗೆ ಬಂದುವು. ಶ್ಯಾಮಲೆಯು ಪರೀಕ್ಷೆಯಲ್ಲಿ ಪಾಸ್‌ ಆಗಿದ್ದಳು. ನಾರಾಯಣನು ಇನ್ನೂ ಒಂದು ವರ್ಷ ವ್ಯಾಸಂಗ ಮಾಡಬೇಕು. ಅವನಿಗೆ ಕಾಲೇಜಿನಲ್ಲಿ ಬ್ರೀಷಿಪ್‌ ಸಿಕ್ಕಿತ್ತು. ಗಂಗಾಧರನು ಒಂದು ದಿನ ಬಂದು ಈ ಕುಟುಂಬದವರ ದುಃಖವನ್ನು ವಿಚಾರಿಸಿದನು. ನಾರಾಯಣ ನಿಗೆ ದ್ಸೈರ್ಯ ಹೇಳಿದನು. ಪರೀಕ್ಷೆಯಲ್ಲಿ ಪ್ಯಾಸ್‌ ಆಗುತ್ತಲೇ, ಶಿಫಾರಸು ಮಾಡಿ ಯಾವುದಾದರೂ ಸರಿಯಾದ ಕೆಲಸ ಕೊಡಿಸು ವುದಾಗಿ ಹೇಳಿದನು. ಇನ್‌ಷೂರೆನ್ಸ್‌ ಹಣ ಕೋ-ಆಪರೇಟಿವ್‌ ಬ್ಯಾಂಕಿನಲ್ಲಿ ಇಟ್ಟಿದ್ದಾರೆಂದು ಅವನಿಗೆ ತಿಳಿದಿತ್ತು. ಹಾಗೆ ಹಣವನ್ನು ಬ್ಯಾಂಕೆನಲ್ಲಿಟ್ಟರು ವುದು ಪ್ರಯೋಜನವಿಲ್ಲವೆಂದೂ, ಒಂದು ಮನೆಯನ್ನು ಕೊಂಡುಕೊಳ್ಳುವುದು ಒಳ್ಳೆಯದೆಂದೂ ಸಲಹೆ ಹೇಳಿದೆನು. ಪಾರ್ವತಮ್ಮನು ಶ್ಯಾಮಲೆಯ ಮದುವೆಯ ಮಾತೇನಾದರೂ ಬರುತ್ತ ಜೀನೋ ಎಂದು ಚಾತಕ ಪಕ್ಷಿಯಂತೆ ನಿರೀಕ್ಷಿಸುತ್ತಿದ್ದಳು. ಆದರೆ ಗಂಗಾಧರನು ಆ ಮಾತನ್ನೇ ಎತ್ತಲಿಲ್ಲ. ಪಾರ್ವತಮ್ಮನಿಗೆ ಆ ಮಾತನೆತ್ತುವ ಧೈರ್ಯವು ಬರಲಿಲ್ಲ. ಪುರೋಹಿತ ರಾಮಾಶಾಸ್ರಿಗಳು ಶಾಮಣ್ಣನ ಮನೆಗೆ ಮಂತ್ರಿ. ಆತನ<noinclude></noinclude> 28bni5208isra1e0ccjbrrlagdn4m27 ಪುಟ:Chitrakuuta (1954).djvu/೨೭ 104 120895 324844 2026-06-16T05:40:53Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಎ೨ ಚಿತ್ರಕೂಟ ಸಲಹೆಯಿಲ್ಲದೇ ಪಾರ್ವತಮ್ಮನವರು ಯಸ್‌ ಕಲಸವನ್ನೂ ಮಾಡುತ್ತಿರಲಿಲ್ಲ. ಮಲ್ಲೇಶ್ವರದ ಜುವ ಕೂಳದ ಬಳಿಯಲ್ಲಿ ಒಂದು ಮನೆಯನ್ನು ಕೊಂಡು ಕೊಂಡು ಆ ಮನೆಗೆ ವಾಸಕ್ತೈ ಹೋದಲು, ಪ್ರತಿದಿನದ ಕಾಲಕ್ಷೇಪವೇನೋ ಕಠ... 324844 proofread-page text/x-wiki <noinclude><pagequality level="1" user="Nihar Chakravarti" /></noinclude>ಎ೨ ಚಿತ್ರಕೂಟ ಸಲಹೆಯಿಲ್ಲದೇ ಪಾರ್ವತಮ್ಮನವರು ಯಸ್‌ ಕಲಸವನ್ನೂ ಮಾಡುತ್ತಿರಲಿಲ್ಲ. ಮಲ್ಲೇಶ್ವರದ ಜುವ ಕೂಳದ ಬಳಿಯಲ್ಲಿ ಒಂದು ಮನೆಯನ್ನು ಕೊಂಡು ಕೊಂಡು ಆ ಮನೆಗೆ ವಾಸಕ್ತೈ ಹೋದಲು, ಪ್ರತಿದಿನದ ಕಾಲಕ್ಷೇಪವೇನೋ ಕಠಿನವಾಗಿಯೇ ಇತ್ತು. ಕೈಲಿರುವ ಕೊಂಚ ಹಣ ಮುರಿಸಿ ಕಾಲಕ್ಷೇಪ ಮಾಡಬೇಕು. ಜೂನ್‌ ತಿಂಗಳು ಬಂತು. ಸ್ಟೂಲು ಕಾಲೇಜುಗಳ ಬಾಗಿಲು ತೆಗೆಯು ತ್ತದೆ. ನಾರಾಯಣನು ಶಾ ಕ್ಯಾಮಲೆಯನ್ನು ಕಾಲೇಜಿಗೆ ಸೇರಿಸಬೇಕೆಂದು ತಾಯಿ ು SR ಯೊಡನೆ ಹೇಳಿದನು. ಹ ನ ಒಪ್ಪ ಮಕ ಳಿಗೆ ಮಾತು ಒಪ) ಆ. IC ಸ 5 ಕಥೆಗೆ ಆರಂಭವಾಯಿತು. (( ಏನಮ್ಮಾ ಶ್ಯಾಮಲೆಯ ಟೊಸೆಗಾ£ಯರೆಲ್ಲಾ ಕಾಲೇಜಿಗೆ ಸೇರುತ್ತಿ ದ್ದಾ ರೆ. ನಮ್ಮ ಶ್ಳುಮಲಯನ್ನು ಬೀರಿಸಲಾ ಮ್‌ ಹಪ ವ « ವಾಣಿ! ನಿನಗೆ ಪ್ರಪಂಚ ಗೊತ್ತಿಲ. ಹುಡುಗಿಯರು ಕಾಲೇಜಿನಲ್ಲಿ ಓದಿ ಯಾವ ದಿವಾನಗಿರಿಯನ್ನು ಮಾಡಲು. * « ಕಾಲೇಜಿನಲ್ಲಿ ಓದಿದರೆ ಫೆ ನೇವಿದೆ 9 ” « ಅದನ್ನೆ ಲ್ಲಾ ನಾನು ಪೇಳುವುದಕ್ಕಾಗುವುದಿಲ್ಲ ಶ್ಯಾಮಲೆಗೆ ಇನ್ನು ಇರಾಯಣನ ಸ್ರಥಿಯು ಗದ್ದದಿ ದಿತವಾಗಿತ್ತು. ಪಾರ್ವತಮ್ಮನ ಕಣು ಗಳು ಕಂಬನಿದುಂಬಿದುವು. ಸ್ವಲ್ಪ ಹೊತ್ತು ಯಾರೂ ಮಾತನಾಡಲಿಲ್ಲ. « ನಾಣಿ, ಶ್ಯಾಮಲೆ 5ಗೆ ಬೇಗ ಮದುವೆ ಮಾಡಬೇಕು. ಕಾಲೇಜಿನಲ್ಲಿ ಓದುವ ಜು ಕುಲಸ್ಪರ ಮನೆಗಳಲ್ಲಿ ಪೂರ್ವಿಕರು ಒಪ್ಪುವುದಿಲ್ಲ. ಕಾಬೇಜು ಹುಡುಗಿಯರಿಗೆ ಮದುವೆಯಾಗುವುದೇ ಒಂದು ಸಮಸ್ಯೆ. » “ ಅದೆಲ್ಲಾ ಸರಿಯಮ್ಮ! ಈಗ ಮದುವೆಗೆ ನಿಶ್ಚಯವಾಗಿದೆಯೇ? ಮದುವೆ ಮಾಡುತ್ತೇವೆಂದು ಹೇಳುತ್ತಾ ಓದುವುದನ್ನು ತ್ಯಜಿಸಲಾದೀತೆ?<noinclude></noinclude> ldicq2y9fniv1lnikv70hm72mfn13da ಪುಟ:Chitrakuuta (1954).djvu/೨೮ 104 120896 324845 2026-06-16T05:41:00Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಚಿತ್ರಕೂಟ ೧೩ ಈಗ ಓದುತ್ತಿರಲಿ, ಮದುವೆಯು ಗೊತ್ತಾದರೆ. ಗಂಡನ ಮನೆಯವರು ಒಪ್ಪ ದಿದ್ದರೆ ಕಾಲೇಜು ಬಿಡಿಸಿಬಿಡೋಣ ? ಪಾರ್ವತಮ್ಮನು ಏನೂ ಉತ್ತರ ಕೊಡಲಿಲ್ಲ. ಶ್ಯಾಮಲೆಯ. ವಿದ್ಯಾಭ್ಯಾಸವು ಮುಂದುವರಿಯಿತು. ನಾರಾಯಣನೂ ಬ... 324845 proofread-page text/x-wiki <noinclude><pagequality level="1" user="Nihar Chakravarti" /></noinclude>ಚಿತ್ರಕೂಟ ೧೩ ಈಗ ಓದುತ್ತಿರಲಿ, ಮದುವೆಯು ಗೊತ್ತಾದರೆ. ಗಂಡನ ಮನೆಯವರು ಒಪ್ಪ ದಿದ್ದರೆ ಕಾಲೇಜು ಬಿಡಿಸಿಬಿಡೋಣ ? ಪಾರ್ವತಮ್ಮನು ಏನೂ ಉತ್ತರ ಕೊಡಲಿಲ್ಲ. ಶ್ಯಾಮಲೆಯ. ವಿದ್ಯಾಭ್ಯಾಸವು ಮುಂದುವರಿಯಿತು. ನಾರಾಯಣನೂ ಬಹಳ ಶ್ರಮಪಟ್ಟು ಓದುತ್ತಿದ್ದನು. ಪಾರ್ವತಮ, ನಿಗೆ ಪಾ ದಿನಕ್ಸ ಶ್ಯಾಮ ಲಯ ಮದುವೆಯ ಚಿಂತೆಯು ಬಲಿಯತೆ ಗಿತು.. ರಾಮಾರಾಸ್ತ್ರಿಗಳೊಡನೆ ಒಂದೆರಡು ಬಾರಿ ಪ್ರಸ್ತಾಪ ಮಾಡಿದಳು. ರಾಮಾರಾಶ್ರಿಗಳು ನಾಲ್ಕಾರು ಕಡೆ ನಿಚಾರಿಸಕೊಡಗಿದರು. ಗಂಡಿನ ಮನೆಯವರೂಡನೆ ಪ್ರಸ್ತಾಪ ಮಾಡಿದರು. ಒಬ್ಬಿಬ್ಬರು ಬಂದು ಹೆಣ್ಣು ನೋಡುವ ಶಾಸ್ತ್ರವೂ ಚ್‌ ಯಾವುದೂ ಸರಿ ಬೀಳಲಿಲ್ಲ ಗಂಡು ನೋಡುವುದು- ಗಂಡಿನ ಮನೆಗೆ ಕರೆದೊಯ್ದು ತೋರಿಸು ವುದು ಇದೆಲ್ಲಾ ಶ್ಯಾಮಲೆಗೆ ಬೇಸರವಾಯಿತು. ಇದೆಲ್ಲಾ ಏಕೆ ನನಗೆ ಮದು ನೆಯೇ ಬೇಡ, ಎನ್ಸ್ಟಿ ಸಿತು. ಹಾಗೆಯೇ ತಾಯಿಯೊಡನೆ ಒಂದಿರಡು ಬಾರಿ ಹೇಳಿದಳು. ತಾಯಿಗೆ ಅದರ ನಿಜವಾದ ಅರ್ಥವು ತಿಳಿಯಲಿಲ್ಲ ಹೀಗೆಯೇ ಏಳೆಂಟು ತಿಂಗಳು ಕಳೆಯಿತು. ನಾರಾಯಣನ ಸರೀಕ್ಷಯ ಕಾಲ, ಪರಿಕ್ಷೆಯಲ್ಲಿ ಏನಾಗುತ್ತೋ ಎಂದು ಪಾರ್ವಶಮ್ಮನಿಗೆ ಶಂಕೆ. ನಾರಾಯಣನು ಮಾತ್ರ ದ್ರರ್ಯವಾಗಿದ್ದನು. ಪರೀಕ್ಷೆಯ ಫಲಿತಾಂಶಗಳು ಹೊರಬಿದ ನಾಣಿ ಫಸ್ಟ್‌ಕ್ಲಾ ನಲ್ಲ ಪ್ಯಾಸಾಗಿತ್ತು. ಆಂದು ಪಾರ್ವತಮ್ಮನ ಸಂತೋಷಕ್ಕೆ ಪಾರವೇ ಇಲ್ಲ. ಅವಳ ದುಃಖಗಳೆಲ್ಲಾ ಮರೆತುಕೋದಂತ್ಣಾ KR) ು ಮಾಡಬೇಕು ? ಎಂಬ ಸಮಸ್ಯೆಯು ಬಂದಿತು. ನಾರಾ ರರೂ ಎಂಎಸ್‌ಸಿ. ಓದಬೇಕೆಂದು ಪ್ರೋತ್ಸಾಹಿಸಿದರು. ಕಾಲೇಜಿನ ಪೊ.ಖಿಸರರೂ ಅದೇ ಅಧಿಪ ತತ ಸಾಕಣ ಮನಸ್ಸು ಮಾತ್ರ ದೋಲಾಯಮಾನವಾಗಿತ್ತು. ತಾಯಿಯ ಶ್ರಯೆಲ್ಲಿ ಒಂದು ಕಾಸೂ ಉಳಿದಿರಲಿಲ್ಲ. ನಗಗಳಲ್ಲಾ ಮಾರಿಯಾಗಿತ್ತು. ತಾಯಿಯೊಡನೆ ಪ್ರಸ್ತಾಪ ಎಹಡಪನು: ಪಾತ ಮ್ಮನು ಮುಂದಕ್ಕೆ ಓದಬೇಬೇಕೆಂದು ನಿರ್ಧಾರವಾಗಿ ಹೇಳಿದಳು,<noinclude></noinclude> pyhtmqiopsc4vfnq0i9clylaari9k8u ಪುಟ:Chitrakuuta (1954).djvu/೨೯ 104 120897 324846 2026-06-16T05:41:06Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೪ ಚಿತ್ರ ಕೂಟ ನಾರಾಯಣನು ಅಮ್ಮಾ ಹಣವೆಲ್ಲಿದೆ ? ಮನೆ ಖರ್ಚಿಗೆ ಹಣ ಬೇಕು, ಇನ್ನೂ ಖರ್ಚುಗಳಿನೆ, ಎರಡು ಸಾವಿರ ಬೇಕಾಗುತ್ತೆ. ” & ಹೌದು ಮಗು! ಮನೆಯ ಮೇಲೆ ಸಾಲ ಮಾಡೋಣ. » (« ಶ್ಯಾಮಲೆಗೆ ಮುಹುವ ಮಾಡಬೇಕನ್ನು ತ್ರೀ ಅದು ಬೇರ... 324846 proofread-page text/x-wiki <noinclude><pagequality level="1" user="Nihar Chakravarti" /></noinclude>೧೪ ಚಿತ್ರ ಕೂಟ ನಾರಾಯಣನು ಅಮ್ಮಾ ಹಣವೆಲ್ಲಿದೆ ? ಮನೆ ಖರ್ಚಿಗೆ ಹಣ ಬೇಕು, ಇನ್ನೂ ಖರ್ಚುಗಳಿನೆ, ಎರಡು ಸಾವಿರ ಬೇಕಾಗುತ್ತೆ. ” & ಹೌದು ಮಗು! ಮನೆಯ ಮೇಲೆ ಸಾಲ ಮಾಡೋಣ. » (« ಶ್ಯಾಮಲೆಗೆ ಮುಹುವ ಮಾಡಬೇಕನ್ನು ತ್ರೀ ಅದು ಬೇರೇ ಖರ್ಚು!” “ ಶ್ಯಾಮಲೆಗೆ ಇನ್ನೊಂದು ವರ್ಷ ಮದುವೆ ಬೇಡ. ನೀನು ಎಂ.ಎಸ್‌ಸಿ. ಪಾಸ್‌ ಮಾಡಿಬಿಟ್ಟರೆ ನಮ್ಮ ಆತಂಕಗಳೆಲ್ಲಾ ಪರಿಹಾರವಾಗಿ ಹೋಗುತ್ತೆ. ನಿಮ್ಮ ತಂದೆಯವರು ಸಂಪಾದಿಸಿದ ಹಣವೇ ಅಲ್ಲವೇ ಮನೆ ಮೇಲಿರುವ ಹಣ!” ಅಲ್ಲಿಗೆ ಆ ಮಾತು ಮುಗಿಯಿತು. ತಾಯಿಯ ನಿರ್ಧಾರವನ್ನು ಕಂಡು ನಾರಾಯಣ ನಿಗೆ ಆಶ್ಚರ್ಯವಾಯಿತು. ಶ್ಯಾಮಲೆಯ ಮದುವೆ ಇನ್ನು ಒಂದು ವರ್ಷ ತಡವಾಗಲ್ಲಿ ಎಂದು ಹೇಳಿದ್ದಂತೂ ನಾರಾಯಣನಿಗೆ ಬೋದೆಯಾ ಗಲೇ ಇಲ್ಲ.<noinclude></noinclude> psjsr4uwq5h8941ee5y74e0tlmgs4sr ಪುಟ:Chitrakuuta (1954).djvu/೩೦ 104 120898 324847 2026-06-16T05:41:13Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೪ ನಾರಾಯಣನು ತಮಗೆ ಬೇಕಾದವರಿದ್ದಾರೆ ಎಂದು ಆಲೋಚಟಿಸತೊಡ ಗಿದನು. ಗಂಗಾಧರನ ನೆನಪು ಬಂದಿತು. ತಾಯಿಯ ಅನುಮತಿ ಪಡೆದು ಮೈಸೂರಿಗೆ ಪ್ರ ಪ್ರಯಾಣ ಮಾಡಿದನು. ಮೈಸೂರಿನಲ್ಲಿ ಲಕ್ಷ್ಮೀಪುರದಲ್ಲಿ ಗಂಗಾ ಧರನ ಮನೆ. ರ್ಸೆಲು ಇ... 324847 proofread-page text/x-wiki <noinclude><pagequality level="1" user="Nihar Chakravarti" /></noinclude>೪ ನಾರಾಯಣನು ತಮಗೆ ಬೇಕಾದವರಿದ್ದಾರೆ ಎಂದು ಆಲೋಚಟಿಸತೊಡ ಗಿದನು. ಗಂಗಾಧರನ ನೆನಪು ಬಂದಿತು. ತಾಯಿಯ ಅನುಮತಿ ಪಡೆದು ಮೈಸೂರಿಗೆ ಪ್ರ ಪ್ರಯಾಣ ಮಾಡಿದನು. ಮೈಸೂರಿನಲ್ಲಿ ಲಕ್ಷ್ಮೀಪುರದಲ್ಲಿ ಗಂಗಾ ಧರನ ಮನೆ. ರ್ಸೆಲು ಇಳಿದು ನಡೆದುಕೊಂಡೇ ಲಕಿ $ ಪುರಿ ಹೋದನು. ಗಂಗಾಧರನ ಮನೆಯನ್ನು ಹುಡುಕುವುದು ನಾರಾಯಣನಿಗೆ ಕಷ ಕೈವಾಗಲಿಲ್ಲ. ಆ ಮನೆಯ ವರಾಂಡದಲ್ಲಿ ಎರಡು ಬೆಂಚುಗಳೂ, ಎರಡು ಬೆತ್ತದ ರ: ಇದ್ದುವು. ನಾರಾಯಣನು ಬೆಂಚಿನ ಮೇಲೆ ಹೋಗಿ ಕುಳಿತನು. ಮರೆಯೊಳ ಗಿನಿಂದ ಒಬ್ಬಿಬ್ಬರು ಹುಡುಗರು ಹೊರಗೆ ಬಂದು ಹೋದರು. ಯಾರೂ ನಾರಾ ಯಣನನ್ನು ವಿಚಾರಿಸಲಿಲ್ಲ. ಸುಮಾರು ಎಂಟು ಗಂಟೆಯ ಸಮಯ. ಯಾರೋ ಗಾಂಧೀ ಟೋಪಿಯವರು ಮೂವರು ನಾಲ್ವರು ಬಂದು ಕುಳಿತರು. ಅವರೂ ನಾರಾಯಣನನ್ನು ವಿಚಾರಿಸಲಿಲ್ಲ. ಅವರ ಕೆಲಸಕ್ಕೆ ಅವರು ಬಂದವರು. ಗಂಗಾಧರನು ಸ್ನಾನವನ್ನು ಮುಗಿಸಿಕೊಂಡು ಬಟ್ಟೆಗಳನ್ನು ಹಾಕಿ ಕೊಂಡು ಹೊರಗೆ ಬಂದನು. ಮೊದಲು ನಾರಾಯಣನು ಅವನ ಕಣ್ಣಿಗೆ ಬಿದ್ದನು. “ಓಹೋ ನಾರಾಯಣ, ಯಾವಾಗ ಬಂದೆ? ಇದೇನು ಇಲ್ಲೇ ಕುಳಿತಿದ್ದ. ಸೀದಾ ಒಳಗೆ ಬರಬೇಡವೇ ? » ಎಂದು ಅವನ ಬೆನ್ನಮೇಲೆ ಕ್ಸಹಾಕೆ ಒಳಗೆ ಕರೆದು ಕೊಂಡು ಹೋದನು. ಒಳಗೆ ಹೋಗಿ " ಕಮಲಾ! ಕಮಲಾ! ಇಲ್ಲಿ ಬಾ!” ಎಂದನು. ಮಧ್ಯಮ ಪ್ರಾಯದ ಹೆಂಗಸೊಬ್ಬಳು ಹೊರಗೆ ಬಂದಳು. (4 ee "ವನೇ ಶ್ಯಾಮಣ್ಣನ ಮಗ--ನಾಣಿ!। ಮೊನ್ನೆ ಹೀಳಲಿ ಲ್ಲವೇ? ಫಸ್ಟ್‌ಕ್ಲಾಸಿನಲ್ಲಿ ಪ್ಯಾಸ್‌ ಮಾಡಿದ್ದಾನೆ.” ಕಮಲಮ್ಮನ ಮುಖವು<noinclude></noinclude> drc7c81ytuaigobnwqk8iayv01c62ne ಪುಟ:Chitrakuuta (1954).djvu/೩೧ 104 120899 324848 2026-06-16T05:41:21Z Nihar Chakravarti 8555 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಶ್ರ ಯಿತಿ ಚಿತ್ರ ಕೊಟಿ ಅರಳಿತು. ಸಡಗರದಿಂದ ಒಳಗೆ ಹೋಗಿ ಬೆಳ್ಳಿಯ ಲೋಟದಲ್ಲಿ ಕಾಫಿಯನ್ನು ತಂದಿಟ್ಟು ನಾರಾಯಣನನ್ನು ಕಣ್ಣು ತುಂಬ ನೋಡಿದಳು. ಗಂಗಾಧರನು, ವಾಣಿ | ಕಾನಿಯನ್ನು ತೆಗೆದುಕೋ | ” ಎಂದು ಹೇಳಿದನು. ನಾರಾಯಣನು... 324848 proofread-page text/x-wiki <noinclude><pagequality level="1" user="Nihar Chakravarti" /></noinclude>ಶ್ರ ಯಿತಿ ಚಿತ್ರ ಕೊಟಿ ಅರಳಿತು. ಸಡಗರದಿಂದ ಒಳಗೆ ಹೋಗಿ ಬೆಳ್ಳಿಯ ಲೋಟದಲ್ಲಿ ಕಾಫಿಯನ್ನು ತಂದಿಟ್ಟು ನಾರಾಯಣನನ್ನು ಕಣ್ಣು ತುಂಬ ನೋಡಿದಳು. ಗಂಗಾಧರನು, ವಾಣಿ | ಕಾನಿಯನ್ನು ತೆಗೆದುಕೋ | ” ಎಂದು ಹೇಳಿದನು. ನಾರಾಯಣನು ಕಾಸಿ ಕುಡಿದನು. ಗಂಗಾಧರನು « ರಾಮು! ರಾಮು!” ಎಂದು ಕರೆದನು. ರಾಮು ಗಂಗಾದರನ ಮಗ, ಹದಿನಾಲ್ಕು ವರ್ಷ ವಯಸ್ಸು. ಅವನು ಬಂದು ನಿಂತನು. ಗಂಗಾಧೆರನು "ಆ ಈ ನಾಣಿಯನ್ನು ಕರೆದುಕೊಂಡು ಹೋಗಿ ಸ್ನಾನಕ್ಕೆ ನೀರು ಕೊಡು. ” ಎಂದು ಹೇಳಿ ಪುನಃ ಹೊರಗೆ ಹೋಗಿ ತನಗಾಗಿ ಕಾದಿದ್ದ ಕಾಂಗ್ರೆಸ್‌ ಭತ್ತರೊಡನೆ ಮಾತನಾಡುತ್ತಾ ಕುಳಿತನು. ನಾರಾಯಣನು, ರಾಮು ಜೊತೆಯಲ್ಲಿ ಹೋಗಿ ಸ್ಥಾನ ಮಾಡಿದನು. ಹೊರಗೆ ಬಂದು ತನ್ನ ಬ್ಯಾಗ್‌ನಲ್ಲಿದ್ದ ಪಂಚೆಯುಟ್ಟು ಬನೀನು ಹಾಕಿಕೊಂಡು ಹೆಜಾರತ್ಸೆ ಬರುವ ಹೊತ್ತಿಗೆ ಮಣೆ ಹಾಕಿತ್ತು. ಬೆಳ್ಳಿಯ ತಟ್ಟೆಯಲ್ಲಿ ಉಪ್ಪಿಟ್ಟು, ಕಾಫಿ ಸಿದ್ಧವಾಗಿತ್ತು. ಕಮಲಮ್ಮನವರು ವಾಶ್ಸಲ್ಯವನ್ನು ತೋರುತ್ತಾ ಉಪ ಚಾನೋಕ್ಕಿಗಳನ್ನು ಹೇಳುತ್ತಾ ಫಲಾಹಾರವನ್ನು ತಂದಿಟ್ಟಿರು. ಮಧ್ಯೆ ನಾರಾ ಯಣನ ಪರೀಕ್ಷೆ ಮುಂದಿನ ವ್ಯಾಸಂಗಗಳ ನಿಷಯದಲ್ಲಿ ಒಂದೆರಡು ಪ್ರಶ್ನೆ ಗಳನ್ನು ಹಾಕಿದರು. ನಾರಾಯಣನು ವಿನಯದಿಂದ ಉತ್ತರಗಳನ್ನು ಕೊಟ್ಟು. ಕಾಸೀ ಮುಗಿಸಿ ಹೊರಗೆ ಬಂದನು. ಗಂಗಾಧೆರರಾಯನು ಹೊರಡಲು ಅನು ವಾಗಿ ನಾರಾಯಣನನ್ನು ಕರೆದುಕೊಂಡು ಹೊರಟಿರು, ದಾರಿಯಲ್ಲಿ. « ನಾಣಿ, ನಿನ್ನನ್ನು ನೋಡಿದ್ದು ಬಹಳ ಸಂತೋಷ. ಏನು ಬಂದೆ ? ” ಎಂದು ವಿಶ್ವಾಸದಿಂದ ಪ್ರಶ್ನೆ ಮಾಡಿದನು. ನಾರಾಯಣನು * ನನಗೆ ಬಿ. ಎಸ್‌ಸಿ. ಪ್ಯಾಸಾಯಿತು. ತಾಯಿಯವರು ಮುಂದಕ್ಕೆ ಓದಬೇಕೆನ್ನು ತ್ತಾರೆ. ನಾನು ಸಂಸಾರ ಭಾರವನ್ನು ನಿರ್ವಹಿಸಬೇಕು. ಕೆಲಸಕೆ ಸೇರೋಣವೆಂದಿದ್ದೇನೆ. » ಎ “ ಅದೆಲ್ಲಾ ಸರಿಯಲ್ಲ ಮಗು! ನೀನು ಇಲ್ಲಿ ಮೆಡಿಕಲ್‌ ಕಾಲೇಜಿಗೆ ಸೇರು. ಸೀಟು ಕೊಡಿಸುತ್ತೇನೆ. ನಮ್ಮ ಮನೆಯಲ್ಲಿಯೇ ಇರು. ನಿನ್ನ ಯೋಗ ಕ್ಲೇಮವನ್ನೈಲ್ಲಾ ನಾನು ನೋಡಿಕೊಳ್ಳು ತ್ತೇನೆ. ಎಂ. ಬಿ. ಬಿ. ಎಸ್‌. ವ್ಯಾಸ್‌<noinclude></noinclude> 34rocuh0pa6je9us24ythg658kzvlgd ಸದಸ್ಯ:Viveka BG 2 120900 324893 2026-06-16T08:55:06Z Viveka BG 8559 /* */ 324893 wikitext text/x-wiki {{Babel|kn-N|en-1|Hn-1}} qj3vfz18tds1rnp6r4b41han89dpih9 324894 324893 2026-06-16T08:57:44Z Viveka BG 8559 /* */ 324894 wikitext text/x-wiki {{Babel |kn-N}} rykz4zre5hvk9dh8sygg6vubs0koy9s 324895 324894 2026-06-16T08:58:30Z Viveka BG 8559 /* */ 324895 wikitext text/x-wiki phoiac9h4m842xq45sp7s6u21eteeq1 324896 324895 2026-06-16T09:04:37Z Viveka BG 8559 /* */ 324896 wikitext text/x-wiki Viveka B G {{Babel|kn-N}} {{Babel|En-3}} {{Babel|sa-1}} {{Babel|Hi-2}} {{#babel:te-1}}None/Ineffective: {{#babel i am interested in learning a new in my life and I am also participating OKI Summer internship program May-june 2026, Thank you, 703gmktkkh4um7fc5b2fn1xaxqodeyu 324897 324896 2026-06-16T09:06:37Z Viveka BG 8559 /* */ 324897 wikitext text/x-wiki phoiac9h4m842xq45sp7s6u21eteeq1 324898 324897 2026-06-16T09:17:02Z Viveka BG 8559 /* */ 324898 wikitext text/x-wiki {{#Babel:kn-N}} {{#Babel:En-3}} {{#Babel:sa-1}} {{#Babel:Hi-2}} {{#babel:te-1}} 0o1uasodppacagv0qpx1qf5sq32qggt 324899 324898 2026-06-16T09:27:40Z Viveka BG 8559 /* */ 324899 wikitext text/x-wiki {{#Babel:kn-N}} {{#Babel:En-3}} {{#Babel:sa-1}} {{#Babel:Hi-2}} {{#babel:te-1}} "My self Viveka B G I learn a new in my life" 'I joined OKI- Summer 🌞 internship program offered by IIT Hyderabad,'From May-june 2026. Working on 'kannada Wikipedia,' "Book 📚 Digitization," jkbj7sa5dgmf0rh9kqxfrdznamo6cxe