ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.7
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪುಟ:Kannada-Saahitya.pdf/೨೧
104
23103
324918
324731
2026-06-17T09:07:26Z
Reema Jalihal
7674
324918
proofread-page
text/x-wiki
<noinclude><pagequality level="3" user="Reema Jalihal" /></noinclude>{{center|ವಿದ್ಯುಚ್ಚೋರನೆಂಬ ಋಷಿಯ ಕಥೆ}}
{{rh|right=೧೧}}
ಮನುಷ್ಯರ ರೂಪ, ಯೌವನ, ತೇಜಸ್ಸು, ಸೌಭಾಗ್ಯ, ಆಯಸ್ಸು, ಸಂಪತ್ತು,
ನಲ್ಮೆ ಇದೇ ಮೊದಲಾದವೆಲ್ಲ ಅನಿತ್ಯಗಳು. ಯಾವಾಗ ಈ ಶರೀರವು ಸ್ವಸ್ಥವಾಗಿರುವುದೋ, ಯಾವಾಗ ಮುಪ್ಪು ಇನ್ನೂ ದೂರವಾಗಿರುವುದೋ,
ಯಾವಾಗ ಇಂದ್ರಿಯಶಕ್ತಿ ಕುಗ್ಗದೆ ತಡೆಯಿಲ್ಲದ್ದಾಗಿರುವುದೋ, ಯಾವಾಗ
ಆಯಸ್ಸಿಗೆ ಇನ್ನೂ ಕ್ಷಯ ಕಟ್ಟದಿರುವುದೋ, ಆಗಲೆ ವಿದ್ವಾಂಸನಾದವನು ಆತ್ಮಶ್ರೇಯಸ್ಸಿಗೆ ಪ್ರಯತ್ನ ಮಾಡಬೇಕು. ಮನೆ ಹೊತ್ತಿ ಬೇಯುತ್ತಿರುವಾಗ ಬಾವಿ ತೋಡುವ ಪ್ರಯತ್ನ ಮಾಡುವುದು ಅದೆಂಥದು ?' ಎಂದು ಮೊದಲಾಗಿ ಶಾಸ್ತ್ರ ವಚನಗಳನ್ನು ಉದಾಹರಿಸಿ ನುಡಿದು, ತನ್ನ ನಿಶ್ಚಯವನ್ನು
ದೃಢಪಡಿಸಿದನು. ಮತ್ತೆ ನೆರೆದ ಜನರನ್ನೆಲ್ಲ ಕುರಿತು, “ ನಾನು ಅರಸ ;
ಇವರು ಆಳುಗಳು ; ನನಗೇನು ?—ಎಂದುಕೊಂಡು ಅರಿತು ಅರಿಯಧ ನಾನು
ಯಾರನ್ನಾದರೂ ಏನನ್ನಾದರೂ ಅಂದಿದ್ದು, ಆ ಸಂಕಟ ಮನಸ್ಸಿನಲ್ಲಿ ಕೊರೆಯುತ್ತಿದ್ದರೂ ಆ ಮಾತನ್ನು ಎಲ್ಲರೂ ಮರೆತುಬಿಡಿ” ಎಂದು ಕೇಳಿಕೊಂಡು ಕ್ಷಮೆಗೊಳಿಸಿದನು.
ಬಳಿಕ ವಿದ್ಯುದಂಗನೆಂಬ ತನ್ನ ಹಿರಿಯ ಮಗನಿಗೆ ಪಟ್ಟಕಟ್ಟಿ ರಾಜ್ಯಾಭಿಷೇಕ ಮಾಡಿ "ಈತನನ್ನು ಹಿಡಿದು ನೀವೆಲ್ಲ ಸುಖವಾಗಿ ಬಾಳಿ ” ಎಂದುಕಲ್ಪಿಸಿದನು. ಯಮದಂಡನಿಗೆ ತಳಾರಿಕೆಯನ್ನು ಕೊಟ್ಟನು. ಆಮೇಲೆ
ಮಂಗಳಾಲಂಕಾರಗಳನ್ನು ಧರಿಸಿ ಪಟ್ಟದಾನೆಯನ್ನೇರಿ, ಸತಿಯರು ಸಂಗಡ
ಬರುತ್ತಿರಲು ಇಕ್ಕೆಲದಲ್ಲೂ ಚಾಮರವಿಕ್ಕಿಸಿಕೊಳ್ಳುತ್ತ ಸಮಸ್ತ ರಾಜ್ಯ
ಚಿಹ್ನೆಗಳೊಡನೆ ಹೊರಟು, ವಂದಿ ಮಾಗಧ ಯಾಚಕಾದಿಗಳಿಗೂ, ದೀನ ಅನಾಥ ಅಂಧಕರಿಗೂ ತುಷ್ಟಿದಾನ ಕೊಡುತ್ತ ಸಹಸ್ರಕೂಟ ಚೈತ್ಯಾಲಯಕ್ಕೆ ಹೋದನು. ಅಲ್ಲಿ ಆನೆಯಿಂದಿಳಿದು ಬಸದಿಯನ್ನು ಮೂರು ಸಲ ಪ್ರದಕ್ಷಿಣೆ ಮಾಡಿ ದೇವರನ್ನು ನಂದಿಸಿದನು. ಬಳಿಕ ಗುಣಧರರೆಂಬ ಆಚಾರ್ಯರ ಬಳಿಗೈದಿ ಗುರುಭಕ್ತಿಯಿಂದ ವಂದಿಸಿ, “ಭಟಾರಾ, ಸಂಸಾರವೆಂಬ ಸಮುದ್ರದಲ್ಲಿ ಮುಳುಗಿದ್ದೇನೆ. ಮುಳುಗಬಿಡದೆ ನನ್ನನ್ನು ಮೇಲೆತ್ತಿರಿ. ದೀಕ್ಷೆಯನ್ನು
ಅನುಗ್ರಹಿಸಿರಿ ” ಎಂದು ನುಡಿದ ಒಡಂಬಡಿಸಿ ದೀಕ್ಷೆಪಡೆದು ತಪೋನಿರತನಾದನು. ಸೌಂದರಿ ಮಹಾದೇವಿ ಮೊದಲಾದ ಅವನ ಅರಸಿಯರೂ ತಪಸ್ಸನ್ನು ಕೈಕೊಂಡು ಘೋರತಪಸ್ಸಿಗೆ ತೊಡಗಿದರು.<noinclude><references/></noinclude>
3gqcdtszg52x2gaxff9aa16t4mge972
ಪುಟ:Kannada-Saahitya.pdf/೨೨
104
23104
324919
324738
2026-06-17T09:08:29Z
Reema Jalihal
7674
324919
proofread-page
text/x-wiki
<noinclude><pagequality level="3" user="Reema Jalihal" />{{rh|೧೨|ಕನ್ನಡ ಸಾಹಿತ್ಯ ಚಿತ್ರಗಳು|}}</noinclude>
ಇತ್ತ ವಿದ್ಯುಚ್ಚೋರ ಮುನಿ ಹನ್ನೆರಡು ವರ್ಷಗಳವರೆಗೂ ಗುರುಗಳನ್ನಗಲದೆ ಸಮಸ್ತ ಆಗಮವೆಲ್ಲವನ್ನೂ ಕಲಿತರು. ಉಗೋಗ್ರ ತಪಸ್ಸುಮಾಡಿ ಕಡೆಗೆ ಆಚಾರ್ಯರಾದರು. ಐನೂರು ಮಂದಿ ಶಿಷ್ಯರೊಡನೆ ದೇಶವಿಹಾರ
ಮಾಡುತ್ತಿದ್ದರು.
ಹೀಗೆ ವಿಹರಿಸುತ್ತಿದ್ದಾಗ ಒಮ್ಮೆ ಪೂರ್ವದೇಶದಲ್ಲಿ ಖಾಳಿಮಂಡಳವೆಂಬ
ನಾಡಿನಲ್ಲಿ ತಾಮ್ರಲಿಪಿಯೆಂಬ ಪಟ್ಟಣದ ಹೊರವಳಯಕ್ಕೆ ಹೋದರು. ಅಲ್ಲಿ
ವರಾಂಗಾಯಿಯೆಂಬ ಉಗ್ರದೇವತೆಗೆ ಆರಾರು ತಿಂಗಳಿಗೊಮ್ಮೆ ಜಾತ್ರೆಯಾಗುವುದು. ಅಷ್ಟಮಿಯ ದಿನ ಜಾತ್ರೆ ನೆರೆಯಿತು. ದುರ್ಗಾದೇವತೆ ಋಷಿಗಳ
ಬರವನ್ನು ದೂರದಲ್ಲಿ ಕಂಡು ಎದುರು ಹೋಗಿ “ ನನ್ನ ಜಾತ್ರೆ ಮುಗಿಯುವವರೆಗೂ ನೀವು ಈ ಪಟ್ಟಣವನ್ನು ಪ್ರವೇಶಿಸಬೇಡಿ” ಎಂದು ತಡೆದಳು. ಶಿಷ್ಯರು " ನಮ್ಮನ್ನು ದೇವತೆ ಏನು ಮಾಡುತ್ತಾಳೆ ? ಹೋಗೋಣ
ಭಟಾರಾ !" ಎಂದು ಅವರನ್ನೊಡಗೊಂಡು ಪಟ್ಟಣವನ್ನು ಪ್ರವೇಶಿಸಿದರು.
ರಾತ್ರಿ ಪಟ್ಟಣದ ಪಶ್ಚಿಮ ದಿಕ್ಕಿನ ಕೋಟೆಯ ಹೊರಗಡೆ ವಿದ್ಯುಚ್ಚೋರ ಭಟಾರರು ಪ್ರತಿಮಾ ಯೋಗದಲ್ಲಿ ನಿಂತರು. ದೇವತೆ ಮುನಿದು
ಪಾರಿವಾಳದಷ್ಟು ದೊಡ್ಡವಾದ ಚಿಕ್ಕುಟಗಳನ್ನೂ ಸೊಳ್ಳೆಗಳನ್ನೂ ನಿರ್ಮಿಸಿ
ಅವರ ಮೇಲೆ ಬಿಟ್ಟಳು. ಇರುಳು ನಾಲ್ಕು ಜಾವವೂ ಅವು ಮೈಯನ್ನೆಲ್ಲ
ತಿನ್ನುತ್ತಿದ್ದು ನರಕ ವೇದನೆಗಿಂತ ಹೆಚ್ಚು ವೇದನೆಯುಂಟಾಗುವಂತೆ ಮಾಡಿದವು. ವಿದ್ಯುಚ್ಚೋರ ಮುನಿಗಳು ಅವೊಂದೂ ಇಲ್ಲವೇ ಇಲ್ಲವೋ ಎಂಬಂತೆ ಆ ವೇದನೆಗಳನ್ನೆಲ್ಲ ಸೈರಿಸಿದರು. ಸೈರಿಸಿ ಉತ್ತಮ ಧ್ಯಾನದಲ್ಲಿ ಮನಸ್ಸು ನಿಲ್ಲಿಸಿದರು. ಕಡೆಗೆ ಸಮಸ್ತ ಕರ್ಮಗಳನ್ನೂ ಕೆಡಿಸಿ ಮೋಕ್ಷಕ್ಕೆ ಹೋದರು.
ಭವ್ಯರು ವಿದ್ಯುಚ್ಚೋರ ಋಷಿಗಳನ್ನು ನೆನೆದು ದುಃಖಗಳನ್ನೆಲ್ಲ ಸೈರಿಸಿ ರತ್ನತ್ರಯಗಳನ್ನು ಸಾಧಿಸಿ ಸ್ವರ್ಗಮೋಕ್ಷ ಸುಖಗಳನ್ನು ಪಡೆಯಲಿ.
{{center|ಹಿನ್ನುಡಿ}}
[ ಇದು " ವಡ್ಡಾರಾಧನೆ” ಎಂಬ ಹಳಗನ್ನಡ ಗ್ರಂಥದಲ್ಲಿನ ಒಂದು ಕಥೆ. ಆ ಗ್ರಂಥದಲ್ಲಿ ಇಂಥವೇ ಹತ್ತಿಪ್ಪತ್ತು ಕಥೆಗಳಿವೆ. ಧರ್ಮಮಾರ್ಗದಲ್ಲಿ ನಡೆದು ತಪಸ್ಸು ಮಾಡುವಾಗ ಅನೇಕ ಬಗೆಯ ತೊಂದರೆಗಳಿಗೆ ಸಿಕ್ಕಿ, ಅವುಗಳನ್ನೆಲ್ಲ ಸಹಿಸಿ<noinclude><references/></noinclude>
4bsgitz7qb6pexeaaqu1gwgn83kkk9q
324920
324919
2026-06-17T09:09:19Z
Reema Jalihal
7674
324920
proofread-page
text/x-wiki
<noinclude><pagequality level="3" user="Reema Jalihal" />{{rh|೧೨|ಕನ್ನಡ ಸಾಹಿತ್ಯ ಚಿತ್ರಗಳು|}}</noinclude>ಇತ್ತ ವಿದ್ಯುಚ್ಚೋರ ಮುನಿ ಹನ್ನೆರಡು ವರ್ಷಗಳವರೆಗೂ ಗುರುಗಳನ್ನಗಲದೆ ಸಮಸ್ತ ಆಗಮವೆಲ್ಲವನ್ನೂ ಕಲಿತರು. ಉಗೋಗ್ರ ತಪಸ್ಸುಮಾಡಿ ಕಡೆಗೆ ಆಚಾರ್ಯರಾದರು. ಐನೂರು ಮಂದಿ ಶಿಷ್ಯರೊಡನೆ ದೇಶವಿಹಾರ ಮಾಡುತ್ತಿದ್ದರು.
ಹೀಗೆ ವಿಹರಿಸುತ್ತಿದ್ದಾಗ ಒಮ್ಮೆ ಪೂರ್ವದೇಶದಲ್ಲಿ ಖಾಳಿಮಂಡಳವೆಂಬ
ನಾಡಿನಲ್ಲಿ ತಾಮ್ರಲಿಪಿಯೆಂಬ ಪಟ್ಟಣದ ಹೊರವಳಯಕ್ಕೆ ಹೋದರು. ಅಲ್ಲಿ
ವರಾಂಗಾಯಿಯೆಂಬ ಉಗ್ರದೇವತೆಗೆ ಆರಾರು ತಿಂಗಳಿಗೊಮ್ಮೆ ಜಾತ್ರೆಯಾಗುವುದು. ಅಷ್ಟಮಿಯ ದಿನ ಜಾತ್ರೆ ನೆರೆಯಿತು. ದುರ್ಗಾದೇವತೆ ಋಷಿಗಳ ಬರವನ್ನು ದೂರದಲ್ಲಿ ಕಂಡು ಎದುರು ಹೋಗಿ “ ನನ್ನ ಜಾತ್ರೆ ಮುಗಿಯುವವರೆಗೂ ನೀವು ಈ ಪಟ್ಟಣವನ್ನು ಪ್ರವೇಶಿಸಬೇಡಿ” ಎಂದು ತಡೆದಳು. ಶಿಷ್ಯರು " ನಮ್ಮನ್ನು ದೇವತೆ ಏನು ಮಾಡುತ್ತಾಳೆ ? ಹೋಗೋಣ ಭಟಾರಾ !" ಎಂದು ಅವರನ್ನೊಡಗೊಂಡು ಪಟ್ಟಣವನ್ನು ಪ್ರವೇಶಿಸಿದರು.
ರಾತ್ರಿ ಪಟ್ಟಣದ ಪಶ್ಚಿಮ ದಿಕ್ಕಿನ ಕೋಟೆಯ ಹೊರಗಡೆ ವಿದ್ಯುಚ್ಚೋರ ಭಟಾರರು ಪ್ರತಿಮಾ ಯೋಗದಲ್ಲಿ ನಿಂತರು. ದೇವತೆ ಮುನಿದು ಪಾರಿವಾಳದಷ್ಟು ದೊಡ್ಡವಾದ ಚಿಕ್ಕುಟಗಳನ್ನೂ ಸೊಳ್ಳೆಗಳನ್ನೂ ನಿರ್ಮಿಸಿ
ಅವರ ಮೇಲೆ ಬಿಟ್ಟಳು. ಇರುಳು ನಾಲ್ಕು ಜಾವವೂ ಅವು ಮೈಯನ್ನೆಲ್ಲ ತಿನ್ನುತ್ತಿದ್ದು ನರಕ ವೇದನೆಗಿಂತ ಹೆಚ್ಚು ವೇದನೆಯುಂಟಾಗುವಂತೆ ಮಾಡಿದವು. ವಿದ್ಯುಚ್ಚೋರ ಮುನಿಗಳು ಅವೊಂದೂ ಇಲ್ಲವೇ ಇಲ್ಲವೋ ಎಂಬಂತೆ ಆ ವೇದನೆಗಳನ್ನೆಲ್ಲ ಸೈರಿಸಿದರು. ಸೈರಿಸಿ ಉತ್ತಮ ಧ್ಯಾನದಲ್ಲಿ ಮನಸ್ಸು ನಿಲ್ಲಿಸಿದರು. ಕಡೆಗೆ ಸಮಸ್ತ ಕರ್ಮಗಳನ್ನೂ ಕೆಡಿಸಿ ಮೋಕ್ಷಕ್ಕೆ ಹೋದರು.
ಭವ್ಯರು ವಿದ್ಯುಚ್ಚೋರ ಋಷಿಗಳನ್ನು ನೆನೆದು ದುಃಖಗಳನ್ನೆಲ್ಲ ಸೈರಿಸಿ ರತ್ನತ್ರಯಗಳನ್ನು ಸಾಧಿಸಿ ಸ್ವರ್ಗಮೋಕ್ಷ ಸುಖಗಳನ್ನು ಪಡೆಯಲಿ.
{{center|ಹಿನ್ನುಡಿ}}
[ ಇದು " ವಡ್ಡಾರಾಧನೆ” ಎಂಬ ಹಳಗನ್ನಡ ಗ್ರಂಥದಲ್ಲಿನ ಒಂದು ಕಥೆ. ಆ ಗ್ರಂಥದಲ್ಲಿ ಇಂಥವೇ ಹತ್ತಿಪ್ಪತ್ತು ಕಥೆಗಳಿವೆ. ಧರ್ಮಮಾರ್ಗದಲ್ಲಿ ನಡೆದು ತಪಸ್ಸು ಮಾಡುವಾಗ ಅನೇಕ ಬಗೆಯ ತೊಂದರೆಗಳಿಗೆ ಸಿಕ್ಕಿ, ಅವುಗಳನ್ನೆಲ್ಲ ಸಹಿಸಿ<noinclude><references/></noinclude>
f39cdhuptk67q23a4c3rhvfcir86k8w
ಪುಟ:Kannada-Saahitya.pdf/೨೩
104
23129
324921
324739
2026-06-17T09:09:37Z
Reema Jalihal
7674
324921
proofread-page
text/x-wiki
<noinclude><pagequality level="3" user="Reema Jalihal" /></noinclude>{{center|ವಿದ್ಯುಚ್ಚೋರನೆಂಬ ಋಷಿಯ ಕಥೆ}}
{{rh|right=೧೩}}
ಮುಕ್ತರಾದ ದೊಡ್ಡವರ ಸಂಗತಿಗಳು ಆ ಎಲ್ಲ ಕಥೆಗಳಲ್ಲಿಯೂ ಬರುತ್ತವೆ. ಧರ್ಮ
ಮತ್ತು ತಪಸ್ಸಿನ ವಿಷಯಗಳನ್ನು ಹೇಳುವ ಆ ಕಥೆಗಳಲ್ಲಿ ಜನರ ನಡವಳಿಕೆಗೆ
ಸಂಬಂಧಪಟ್ಟ ಎಷ್ಟೋ ಸಂಗತಿಗಳು ಗೊತ್ತಾಗುತ್ತವೆ. ಎಲ್ಲ ಕಥೆಗಳೂ ಚೆನ್ನಾಗಿವೆ.
"ವಡ್ಡಾರಾಧನೆ” ಎಂದರೆ “ ವೃದ್ಧಾರಾಧನೆ ದೊಡ್ಡವರ ಪೂಜೆ ” ಎಂದರ್ಥ.
ಕಠಿನವಾದ ತಪಸ್ಸಿನಲ್ಲಿ ತೊಡಗಿದ ಜೈನ ಸನ್ಯಾಸಿಗಳು ಈ ಕಥೆಗಳಲ್ಲಿ ಹೇಳಿರುವ
ಹಿರಿಯರು ಎಂಥೆಂಥ ಕಷ್ಟಗಳನ್ನು ಸಹಿಸಬೇಕಾಯಿತೆಂಬುದನ್ನು ಕೇಳುತ್ತ ತಾವೂ
ಧೈಯ್ಯದಿಂದ ಕಷ್ಟಗಳನ್ನು ತಾಳಿಕೊಳ್ಳುತ್ತಿದ್ದರಂತೆ. ಹಿರಿಯರ ಒಳ್ಳೆಯ ಗುಣಗಳನ್ನು ನೆನೆದು ಅವರು ನಡೆದಂತೆ ನಡೆಯುವುದೇ ನಾವು ಅವರಿಗೆ ಮಾಡುವ ನಿಜವಾದ ಪೂಜೆ. ಅದಕ್ಕಾಗಿಯೇ ಈ ಪುಸ್ತಕಕ್ಕೆ 'ವಡ್ಡಾರಾಧನೆ ' ಎಂದು ಹೆಸರಿಟ್ಟಂತೆ ತೋರುತ್ತದೆ.
ನಮಗೆ ಇದುವರೆಗೆ ಸಿಕ್ಕಿರುವ ಕನ್ನಡ ಗ್ರಂಥಗಳಲ್ಲೆಲ್ಲ ಈ ವಡ್ಡಾರಾಧನೆಯೇ
ಬಹು ಹಳೆಯದು. ಇದು ಕ್ರಿ.ಶ. ಐದು ಅಥವಾ ಆರನೆಯ ಶತಮಾನದಲ್ಲಿ ಬರೆದದ್ದಾಗಿರಬೇಕು. ಇನ್ನೂ ಹಿಂದಿನ ಕಾಲದ್ದಾಗಿದ್ದರೂ ಇರಬಹುದು. ಇದರ ಭಾಷೆ
ಈಗ ನಾವು 'ಹಳಗನ್ನಡ ' ಎನ್ನುತ್ತೇವಲ್ಲ ಅದಕ್ಕೂ ಹಳೆಯದು. ನಾಲ್ಕು ಐದನೆಯ
ಶತಮಾನದ ಶಾಸನಗಳಲ್ಲಿ ಕೆಲವು ಕಡೆ ಇಂಥ ಭಾಷೆ ಕಂಡುಬರುತ್ತದೆ. ಇದನ್ನು
'ಪೂರ್ವದ ಹಳಗನ್ನಡ ” ಎನ್ನಬಹುದು.
ಇದನ್ನು ಬರೆದವರು 'ರೇವಾಕೋಟ್ಯಾಚಾರ್ಯ'ರೆಂಬ ಜೈನಗುರುಗಳು.]<noinclude><references/></noinclude>
02wlgfwfe66l37yqtlavqpd37fmegdp
ಪುಟ:Kannada-Saahitya.pdf/೨೫
104
23130
324922
324707
2026-06-17T09:10:08Z
Reema Jalihal
7674
324922
proofread-page
text/x-wiki
<noinclude><pagequality level="3" user="Reema Jalihal" /></noinclude>{{rh|right=೧೫}}
{{center|ಭರತ ಬಾಹುಬಲಿ}}
ಕಟ್ಟನ್ನು ಕಳಚಿಕೊಳ್ಳುವ ಮಾರ್ಗವನ್ನು ತಿಳಿದುಕೊಳ್ಳುವರು. ಇವರಿಂದ ಅವರಿಗೆ ತೀರ್ಥ೦ಕರರಾಗುವ ಯೋಗ್ಯತೆಯುಂಟಾಗುವುದು.
ದೇವತೆಗಳು ತೀರ್ಥಂಕರರ ಅವತಾರವನ್ನೆ ಹಾರಯಿಸಿಕೊಂಡು ಅವರ ಸೇವೆಗೆ ಸಿದ್ಧರಾಗಿರುವರು. ಆಗ ಆ ಮಹಾತ್ಮರು ತಮ್ಮ ಕೊಟ್ಟಕೊನೆಯ ಜನ್ಮದಲ್ಲಿ ಮನುಷ್ಯರಾಗಿ ಕ್ಷತ್ರಿಯ, ವಂಶದಲ್ಲಿ ಹುಟ್ಟುವರು. ಆ ಜನ್ಮದಲ್ಲಿ ಅತಿ ಕಠಿನ ತಪಸ್ಸು ಮಾಡಿ ಕೇವಲ ಜ್ಞಾನವೆಂಬ ಉತ್ತಮ ರೀತಿಯ ಜ್ಞಾನವನ್ನು ಪಡೆಯುವರು.
ಲೋಕದ ಉದ್ಧಾರಕ್ಕಾಗಿ ಕೆಲವು ಕಾಲ ಧರ್ಮಬೋಜ್ಞೆ ಮಾಡುತ್ತಿದ್ದು ಕೊನೆಗೆ
ಮುಕ್ತರಾಗುವರು.
-ಹೀಗೆಒಂದು ಜೈನರ ನಂಬಿಕೆ. ಜೈಗರು ದೇವರೆಂದು ಪೂಜಿಸುವುದು ಈ
ಮಹಾಪುರುಷರನ್ನೇ. ನಾವಿರುವ ಈ ಕಾಲ ಅವಸರ್ಷಿಣಿಗೆ ಸೇರಿದ್ದು. ಈ ಅನ
ಸರ್ಷಿಣಿಯಲ್ಲಿ ಅವತರಿಸಿದ ಮೊದಲನೆಯ ತೀರ್ಥ೦ಕರ ಋಷಭ (ವೃಷಭ
ಎಂಬುದು ಈ ಪದದ ಮತ್ತೊಂದು ರೂಪ) ; ಕಡೆಯ ತೀರ್ಥಂಕರ ಮಹಾವೀರ
ಸ್ವಾಮಿ. ಇಲ್ಲಿ ಕೊಟ್ಟಿರುವ ಕಥೆ ಅದು ತೀರ್ಥಂಕರನಿಗೆ ಸಂಬಂಧಿಸಿದ್ದು.]
{{center|ನಾಭಿರಾಜ}}
ಅವಸರ್ಪಿಣಿ ಆರಂಭವಾಗುವ ಮೊದಲು ಲೋಕದಲ್ಲಿ ಎಲ್ಲವೂ ಸುಖಮಯವಾಗಿತ್ತು. ಜನರು ಯಾವುದಕ್ಕೂ ಕಷ್ಟಪಟ್ಟು ದುಡಿಯಬೇಕಾಗಿರಲಿಲ್ಲ. ಅವರಿಗೆ ಬೇಕಾಗಿದ್ದ ಬೆಳಕು, ಮನೆ, ಒಡವೆ, ಪಾತ್ರೆ, ಅನ್ನ, ಬಟ್ಟೆ
ಮೊದಲಾದವನ್ನೆಲ್ಲ ಅವರು ಬಯಸಿದ ಕೂಡಲೆ ಹತ್ತು ಬಗೆಯ ಕಲ್ಪವೃಕ್ಷಗಳು ಕೊಟ್ಟುಬಿಡುತ್ತಿದ್ದವು. ಜನ ಪರಮಾನಂದದಿಂದಿದ್ದರು.
ಎಷ್ಟೋ ಕಾಲ ಕಳೆದ ಮೇಲೆ ಅಧರ್ಮದ ಫಲವಾಗಿ ಒಂದೊಂದಾಗಿ ಕಲ್ಪವೃಕ್ಷಗಳು ಮಾಯವಾದವು. ಲೋಕದ ಸ್ಥಿತಿ ಬದಲಾಗಿ ಜನಕ್ಕೆ ಕಳವಳ ಹೆಚ್ಚತೊಡಗಿತು. ಅಂಥ ಸಮಯಗಳಲ್ಲಿ ಕೆಲವರು ಮಹಾತ್ಮರು
ಜನಕ್ಕೆ ತಿಳಿವಳಿಕೆ ಹೇಳಿ ಕಳವಳವನ್ನು ಕಳೆಯುತ್ತಿದ್ದರು ; ಸುಖಸಾಧನೆಯ
ಮಾರ್ಗಗಳನ್ನು ಹೇಳಿಕೊಡುತ್ತಿದ್ದರು. ಇಂಥವರೇ ಮನುಗಳು. ಇವರು
ಹದಿನಾಲ್ಕು ಮಂದಿ.
ನಾಭಿರಾಜನು ಹದಿನಾಲ್ಕನೆಯ ಮನು. ಅವನು ಆಯೋಧ್ಯೆಯಲ್ಲಿ
ಆಳುತ್ತಿದ್ದನು. ಅವನು ಬಕು ಗುಣವಂತ ; ಮಹಾ ವೈಭವಶಾಲಿ, ಅವನಿಗೆ<noinclude></noinclude>
l6gfo3gicpeg6i4b3gvnwr8ufmv15s2
ಪುಟ:Kannada-Saahitya.pdf/೧೮
104
23133
324915
324714
2026-06-17T09:06:45Z
Reema Jalihal
7674
324915
proofread-page
text/x-wiki
<noinclude><pagequality level="3" user="Reema Jalihal" /></noinclude>{{center|ಕನ್ನಡ ಸಾಹಿತ್ಯ ಚಿತ್ರಗಳು}}
{{rh|left=೮}}
ಕಾಣಲಾಗುತ್ತಿರಲಿಲ್ಲ. ಇವನನ್ನು ಬಹಳ ಹೊತ್ತು ಹುಡುಕಿ ಕಾಣದೆ ದೆಸೆಗೆಟ್ಟು ಬೇಸತ್ತೆನು. ಆಗ ' ಆಗಲಿ. ಮಗನೇ, ನೀನು ತಳಾರನಾದಾಗ ನಿನ್ನ
ಕಾಸಿನಲ್ಲಿ ಕದ್ದು ನಿನ್ನನ್ನು ಕೊಲ್ಲಿಸದಿದ್ದರೆ ಏನಾಯಿತು !” ಎಂದು ನುಡಿದೆನು.
ಅದಕ್ಕೆ ಈತನೂ ಹೀಗೆಂದನು : 'ಆಗಲಿ. ಮಗನೇ, ನೀನು ನಾನು ತಳಾರು ಮಾಡುವಾಗ ಕದ್ದರೆ ನಿನ್ನನ್ನು ಹಿಡಿದು ಕಟ್ಟಿ, ಕಳ್ಳರ ದಂಡನೆಯಿಂದ ದಂಡಿಸದಿದ್ದರೆ ಏನಾಯಿತು !' ಎಂದು ನುಡಿದನು. ' ಈ ಮಾತನ್ನು ಮರೆಯಬೇಡ' ಎಂದು ಇಬ್ಬರೂ ಒಬ್ಬರನ್ನೊಬ್ಬರು ಮೂದಲಿಸಿ ಪ್ರತಿಜ್ಞೆ ಮಾಡಿದೆವು.
" ಕೆಲವು ಕಾಲ ಕಳೆದ ಮೇಲೆ ನಮ್ಮ ತಂದೆ ನನಗೆ ಪಟ್ಟಕಟ್ಟಿ ತಪ್ಪಸಿಗೆ ಹೋದನು. ಈತನ ತಂದೆಯೂ ತನ್ನ ವಂಶಕ್ರಮದ ಅಧಿಕಾರವನ್ನು
ಈತನಿಗೆ ಕೊಟ್ಟು ಅರಸನೊಡನೆ ತಪಸ್ಸಿಗೆ ನಡೆದನು. ನಾನು ರಾಜನಾದೆ ;
ಈತನು ತಳಾರನಾದನು. ಹೀಗೆ ಸುಖದಲ್ಲಿ ಇಬ್ಬರಿಗೂ ಕಾಲ ಕಳೆಯುತ್ತಿತ್ತು.
ಮತ್ತೆ ಒಂದು ದಿವಸ ಈತ ತನ್ನ ಮನಸ್ಸಿನಲ್ಲಿ ಹೀಗೆಂದುಕೊಂಡನು :- ' ನಮ್ಮರಸ ಕಳ್ಳ; ನಾನು ಈ ಪಟ್ಟಣದಲ್ಲಿ ತಳಾರು ಮಾಡುತ್ತಿದ್ದೇನೆ. ಇದು
ಕಾರ್ಯ ಒಳ್ಳೆಯದಲ್ಲ' ಎಂದು ನನಗಂಜಿ ನಾಡು ಬಿಟ್ಟು ಬಂದು ನಿಮಗೆ ಆಳಾದನು. ನಾನೂ ಈತನನ್ನು ನಾನಾಳುವ ದೇಶದ ಎಂಟು ದಿಕ್ಕಿನ
ಗ್ರಾಮ ನಗರಾದಿಗಳಲ್ಲೆಲ್ಲ ಹುಡುಕಿಸಿ ಕಾಣದೆ, ಪರಮಂಡಲಗಳಲ್ಲಿಯೂ ಹುಡುಕಿಸಿದೆನು. ಎಲ್ಲಿಯೂ ಕಾಣದಿರಲು ಇಲ್ಲಿಗೆ ಚರರನ್ನಟ್ಟಿದೆನು. ಅವರು ಹುಡುಕಿ ಬಂದು, ' ದೇವಾ, ಮಿಥಿಳೆಯೆಂಬ ಪಟ್ಟಣ. ಅದನ್ನಾಳುವವನು
ನಾಮರಥನೆಂಬರಸ. ಆತನಿಗೆ ಯಮದಂಡನು ಆಳಾಗಿ ಪಟ್ಟಣದ ಕಾಪು ಪಡೆದು ಸುಖವಾಗಿದ್ದಾನೆ ” ಎಂದು ಹೇಳಿದರು.
“ ಆ ಮಾತನ್ನು ಕೇಳಿ ನಾನು ಪುರುಷೋತ್ತಮನೆಂಬ ಮಂತ್ರಿಗೆ 'ಮಿಥಿಳಾ ಪಟ್ಟಣಕ್ಕೆ ಯಾರೂ ಅರಿಯದ ಹಾಗೆ ಹೋಗಿ ಯಮದಂಡನನ್ನು ಕರೆದುಕೊಂಡು ಬರುತ್ತೇನೆ' ಎಂದು ಹೇಳಿದೆನು. ಹೇಳಿ ವಜ್ರಸೇನನೆಂಬ ಹೆಗ್ಗಡೆಯನ್ನು ಕರಸಿ, 'ನಾನು ಒಂದು ಮದೆವಾರ್ತೆಗಾಗಿ ಹೋಗಿಬರುತ್ತೇನೆ.
ನಾನು ಬರುವವರೆಗೂ ರಾಜ್ಯವನ್ನು ಪಾಲಿಸುತ್ತಿರು' ಎಂದು ಏರ್ಪಡಿಸಿ ಸಮಸ್ತ ರಾಜ್ಯಭಾರವನ್ನೂ ಒಪ್ಪಿಸಿಕೊಟ್ಟನು. ಬಳಿಕ ಅರ್ಧರಾತ್ರಿಯಲ್ಲಿ
ಯಾರೂ ಅರಿಯದ ಹಾಗೆ ಒಬ್ಬನೇ ಹೊರಟು ಬಂದು ಈ ಪಟ್ಟಣವನ್ನು<noinclude><references/></noinclude>
0flgt8kh69w6nz4iznnkuut9in67sby
ಪುಟ:Kannada-Saahitya.pdf/೧೯
104
23137
324916
324725
2026-06-17T09:06:57Z
Reema Jalihal
7674
324916
proofread-page
text/x-wiki
<noinclude><pagequality level="3" user="Reema Jalihal" /></noinclude>{{center|ವಿದ್ಯುಚ್ಚೋರನೆಂಬ ಋಷಿಯ ಕಥೆ}}
{{rh|right=೯}}
ಹೊಕ್ಕು ಪ್ರತಿಜ್ಞೆ ಕಾರಣವಾಗಿ ಒಡವೆಗಳನ್ನು ಕದ್ದು ಈತನನ್ನು ಕೊಲ್ಲಿಸುವ
ಹಾಗೆ ಮಾಡಿದೆನು. ಇದು ಕದ್ದದ್ದಕ್ಕೆ ಕಾರಣ. ಈತನೂ ಈ ರೀತಿಯಲ್ಲಿ ನನಗೆ ಮಿತ್ರ ” ಎಂದು ಹೇಳಿ, ಮತ್ತೂ ಇಂತೆಂದನು: “ ನಿಮ್ಮ ಸರ್ವ
ರುಜಾಪಹಾರನೆಂಬ ಹಾರ ದೇವತಾಸಾನ್ನಿಧ್ಯವುಳ್ಳದ್ದು. ನಾನು ಸಮ್ಯಗ್
ದೃಷ್ಟಿಯನ್ನು ಪಡೆದವನಾದ್ದರಿಂದ ನನ್ನ ಕೈಗೆ ಬಂತು. ಉಳಿದ ಮಿಥ್ಯಾ ದೃಷ್ಟಿಗಳ ಕೈಗೆ ಬಾರದು ” ಎಂದು ತನ್ನ ಮಾತು ಮುಗಿಸಿದನು.
ಆದನ್ನೆಲ್ಲ ಕೇಳಿ ಅರಸನು ಆ ಹಾರ ತಮಗೆ ಬಂದ ರೀತಿಯನ್ನು ನೆರವಿಗೆಲ್ಲ ವಿವರಿಸುತ್ತಿದ್ದನು. ಅಷ್ಟರಲ್ಲಿ ಇಬ್ಬರು ಹರಿವೊಂಟೆಯವರು ಓಲೆಯನ್ನು ತಂದು ಅರಮನೆಯ ಬಾಗಿಲಿನಲ್ಲಿ ನಿಂತು ಬಾಗಿಲವರಿಗೆ ಹೇಳಿದರು. ಅವರು ಬಂದು ತಮ್ಮರಸನಿಗೆ ತಿಳಿಸಿದರು. ಅರಸನ ಅನುಮತಿಯಿ೦ದ ಓಲೆಕಾರರು ಅರಮನೆಯನ್ನು ಹೊಕ್ಕು ಆಸ್ಥಾನದಲ್ಲಿದ್ದ ವಿದ್ಯುಚ್ಚೋರನನ್ನು ಕಂಡು ಅಡ್ಡ ಬಿದ್ದು ಆತನ ಮುಂದೆ ಓಲೆಯನ್ನಿಟ್ಟರು. ಸಂಧಿವಿಗ್ರಹಿ ಆ ಓಲೆಯನ್ನು
ತೆಗೆದುಕೊಂಡು ಓದಿದನು. ಅದರಲ್ಲಿ, “ ವಿದ್ಯುಚ್ಚೋರ ಪರಮಸ್ವಾಮಿಗೆ,
ಮಂತ್ರಿ ಪುರುಷೋತ್ತಮನೂ ಹೆಗ್ಗಡೆ ವಜ್ರಸೇನನೂ ಸಾಷ್ಟಾಂಗವಾಗಿ ಎರಗಿ
ಬಿನ್ನಯಿಸುವರು. ತಾವು ಹಲವು ದಿವಸ ಹೋಗಿದ್ದೀರಿ. ಬೇರೆ ಮನೆವಾರ್ತೆಯನ್ನೆಲ್ಲ ಮರೆತಿದ್ದೀರಿ. ತಾವಿಲ್ಲದೆ ರಾಜ್ಯವನ್ನು ಪಾಲಿಸುವವರು ಯಾರೂ
ಇಲ್ಲ. ಈ ಓಲೆಯನ್ನು ಕಂಡೊಡನೆಯೇ ತಡೆಯದೆ ಹೊರಟು ಬರಬೇಕು ”
ಎಂದು ಬರೆದಿರುವುದನ್ನು ಓದಿ ತಿಳಿಸಿದನು. ಅದೆಲ್ಲವನ್ನೂ ಕೇಳಿ ನಾಮರಥನು, “ಈತ ಹೇಳಿದ್ದೂ ಓಲೆಯ ಮಾತೂ ಒಂದಾಯಿತು” ಎಂದು ಸಂದೇಹವಿಲ್ಲದೆ ನಂಬಿದನು.
ಬಳಿಕ ತನ್ನ ಸಿಂಹಾಸನಕ್ಕೆ ಸಮಾನವಾದ ಒಂದು ಪೀಠವನ್ನು ಆತನಿಗೆ ಹಾಕಿಸಿ ಕೂರಿಸಿದನು. “ನೀನು ನನ್ನ ತಂಗಿಯ ಮಗನಯ್ಯ, ಸೋದರಳಿಯನಯ್ಯ. ನನಗೆ ಶ್ರೀಮತಿ, ವಸುಮತಿ, ಗುಣಮತಿ, ಸುಲೋಚನೆ, ಸುಪ್ರಭೆ, ಸುಕಾಂತೆ, ಸುಶೀಲೆ, ಮನೋಹರಿ-ಎಂಬ ಎಂಟು ಮಂದಿ ಕನೈಯರಿದ್ದಾರೆ. ಅವರು ಅತ್ಯಂತ ರೂಪಲಾವಣ್ಯವುಳ್ಳವರು ; ನವಯೌವನೆಯರು ; ಅರುವತ್ತು ನಾಲ್ಕು ಕಲೆಗಳಲ್ಲಿಯೂ ತುಂಬ ಕುಶಲೆಯರು. ಹಲವರರಸುಗಳು ಪಾವುಡಗಳನ್ನೂ ಓಲೆಗಳನ್ನೂ ಕಳಿಸಿ ಆ ಕೂಸುಗಳನ್ನು ಬೇಡುತ್ತಿದ್ದಾರೆ.<noinclude><references/></noinclude>
ilr8wsebkk600k404d1vq123r8bew2o
ಪುಟ:Kannada-Saahitya.pdf/೨೦
104
23138
324917
324727
2026-06-17T09:07:12Z
Reema Jalihal
7674
324917
proofread-page
text/x-wiki
<noinclude><pagequality level="3" user="Reema Jalihal" /></noinclude>
{{center|ಕನ್ನಡ ಸಾಹಿತ್ಯ ಚಿತ್ರಗಳು}}
{{rh|left=೧೦}}
ಅವರಾರನ್ನೂ ಮೆಚ್ಚದೆ ಇಲ್ಲಿಯವರೆಗೂ ಅವರನ್ನು ಕೊಡದೆ ತಡೆದಿದ್ದೇನೆ.
ಈ ಕನ್ಯಾರತ್ನಗಳಿಗೆ ನೀನೇ ಯೋಗ್ಯನಯ್ಯ. ಎಂಟು ಮಂದಿಯನ್ನೂ ನಿನಗೆ
ಕೊಟ್ಟೆ, ಮದುವೆಯಾಗು” ಎಂದನು.
ವಿದ್ಯುಚ್ಚೋರನು, “ ನಾನು ಒಬ್ಬಳನ್ನು ಮೆಚ್ಚಿ ಅವಳಲ್ಲಿ ಮನಸಿಟ್ಟಿದೇನೆ. ಇವರನ್ನು ಕಟ್ಟಿಕೊಂಡೇನು ಮಾಡಲಿ ?” ಎಂದನು. ಅರಸನು "ಯಾರನ್ನು ಮೆಚ್ಚಿದ್ದೀಯೆ ?” ಎಂದು ಕೇಳಲು, “ಮುಕ್ತಿಶ್ರೀ ಎಂಬವಳು
ಹೆಣ್ಣು. ಆಕೆಯಲ್ಲಿ ಮನಸ್ಸಿಟ್ಟಿದ್ದೇನೆ. ಆಕೆಯನ್ನೇ ಮದುವೆಯಾಗಬೇಕು "
ಎಂದು ನಿರ್ಧರವಾಗಿ ನುಡಿದು, “ನನ್ನ ಕೆಳೆಯನನ್ನು ನನಗೆ ಒಪ್ಪಿಸಬೇಕು”
ಎಂದು ಕೇಳಿಕೊಂಡನು. ಅರಸನು ಅದಕ್ಕೊಪ್ಪಿದನು. ವಿದ್ಯುಚ್ಚೋರನು
ಯಮದಂಡನನ್ನೊಡಗೊಂಡು ಅರಸನನ್ನು ಬೀಳ್ಕೊಂಡನು. ಇಬ್ಬರೂ ಒಂಟಿಯನ್ನೆರಿ ತ್ವರಿತವಾಗಿ ಪ್ರಯಾಣಮಾಡುತ್ತ ಕೆಲವು ದಿವಸಗಳಲ್ಲಿ ವೇಣಾತಟವನ್ನು ಸೇರಿ ಹೇಳಿಕಳಿಸಿದರು.
ಪಟ್ಟಣವನ್ನು ಅಲಂಕರಿಸಿ ಮಂತ್ರಿ ಮಹಕ್ತರ ಪರಿವಾರ ಸಾಮಂತ ಮಹಾಸಾಮಂತರೂ ಅ೦ತಃಪುರದವರೂ ಪಟ್ಟಣದ ಜನರೆಲ್ಲರೂ ಎದುರು ಬಂದು ಕಂಡು ನಮಸ್ಕರಿಸಿ ಸೇಸೆಯಿಕ್ಕಿದರು. ಬಳಿಕ ಇಬ್ಬರೂ ಪಟ್ಟದಾನೆಯನ್ನೇರಿ ಬೆಳ್ಗೊಡೆ ಮೊದಲಾದ ರಾಜ್ಯಚಿಹ್ನೆಗಳು ಮುಂದೆ ನಡೆಯಲು,
ನಾನಾ ವಾದ್ಯಗಳು ಬಾಜಿಸುತ್ತಿರಲು ಅರಮನೆಯನ್ನು ಹೊಕ್ಕರು. ಮರು ದಿವಸ ಆಸ್ಥಾನ ಮಂಟಪದಲ್ಲಿ ಸಿಂಹಾಸನದ ಮೇಲೆ ಕುಳಿತು, ಸಾಮಂತ ಮಹಾಸಾಮಂತರನ್ನೂ ಮಂತ್ರಿ ಪುರೋಹಿತವರ್ಗದವರನ್ನೂ ಅರಸಿಯರನ್ನೂ ಹೇಳಿಕಳಿಸಿ ಕರಸಿ, "ನಾನು ಈ ಸಂಸಾರದ ಭೋಗೋಪಭೋಗಗಳಿಗೆ ಹೇಸಿ ವಿರಕ್ತನಾಗಿ ತಪಸ್ಸು ಮಾಡಬಯಸಿದೆರು ” ಎಂದು ತನ್ನ ನಿಶ್ಚಯವನ್ನು ತಿಳಿಸಿದನು.
ಅದನ್ನು ಕೇಳಿ ಅವರೆಲ್ಲರೂ ನೆರೆದು, “ ಇನ್ನೂ ನಿನಗೆ ಏನು ಕಾಲವಾಗಿದೆ. ತಪಸ್ಸಿಗೆ ಹೋಗುವುದಕ್ಕೆ ? ಇನ್ನೂ ನೀನು ಚಿಕ್ಕವನು ; ನವಯೌವನದವನು. ಕೆಲವು ಕಾಲ ದೊರೆತನ ಮಾಡಿ ಆಮೇಲೆ ತಪಸ್ಸು ಮಾಡುವೆಯಂತೆ” ಎಂದರು. ಅದಕ್ಕೆ ಅರಸನು, " ಎಲ್ಲಿಯವರೆಗೆ ಬಾಳುವರೋ, ಯಾವಾಗ ಸಾಯುವರೋ ತಿಳಿಯುವುದು ಹೇಗೆ ಸಾಧ್ಯ ?<noinclude><references/></noinclude>
ipvtyr4np7qvs03669kjhn7jtg052f3
ಪುಟ:Kannada-Saahitya.pdf/೧೫
104
23141
324912
324887
2026-06-17T09:04:40Z
Reema Jalihal
7674
324912
proofread-page
text/x-wiki
<noinclude><pagequality level="4" user="A826" /></noinclude>{{center|ವಿದ್ಯುಚ್ಚೋರನೆಂಬ ಋಷಿಯ ಕಥೆ}}
{{rh|right=೫}}
ಹೀಗೆ ಅವರಿಬ್ಬರೂ ಒಬ್ಬರಿಗೊಬ್ಬರು ಆಡಿಕೊಳ್ಳುತ್ತಿದ್ದ ಮಾತುಗಳನ್ನು ಕಾವಲಿನವರೂ ಊರಜನರೂ ಕೇಳಿ ಚೋದ್ಯಪಟ್ಟು ಬೆರಗಾಗಿದ್ದರು.
ವಿದ್ಯುಚ್ಚೋರನು ಕಾಪಿನವರಿಗೆ ಹೀಗೆ ಹೇಳಿದನು: "ನನ್ನನ್ನೂಈತನನ್ನೂ ಅರಸನಲ್ಲಿಗೆ ಕರೆದುಕೊಂಡಿ ಹೋಗಿ. ಅರಸನ ಮುಂದೆ ನನಗೂ ಇವನಿಗೂ ಮಾತುಂಟು. ಅಲ್ಲಿ ಆ ಮಾತಾಡಿದ ಬಳಿಕ ಆರಸನು ಈತನನ್ನು ತನ್ನ ಮನಬಂದಂತೆ ಮಾಡಲಿ, 'ಎಂತಾದರೂ, ಕೊಲ್ಲ ಹೇಳಿದರೂ ಮೂರು ಸಲ ಬೆಸಗೊಂಡಲ್ಲದೆ ಕೊಲ್ಲಲಾಗದು ' ಎಂದು ನೀತಿಶಾಸ್ತ್ರಗಳಲ್ಲಿ ಹೇಳಿದೆ. ಅದರಿಂದ ನಮ್ಮಿಬ್ಬರನ್ನೂ ಅರಮನೆಗೆ ಕರೆದುಕೊಂಡು ಹೋಗಿ ಅರಸನಿಗೆ ತೋರಿಸಿ " ಎನ್ನಲಾಗಿ, ಆ ಕಾಪಿನವರು ಇಬ್ಬರನ್ನೂ ಅರಸನ ಬಳಿಗೆ ಕರೆದುಕೊಂಡು ಹೋದರು. ಹೋಗಿ, "ದೇವಾ, ಈತನು ಯಮದಂಡನನ್ನು ಕೊಲ್ಲಬಿಡದೆ ತಡೆದನು " ಎಂದು ಬಿನ್ನಯಿಸಿ ವಿದ್ಯುಚ್ಚೋರನನ್ನು ತೋರಿಸಿದರು. " ನೀನೇಕೆ ತಡೆದೆ?" ಎಂದು ಅರಸನು ಕೇಳಲು, ವಿದ್ಯುಚ್ಚೋರನು ಹೇಳತೊಡತಿದನು:
" ಯಮದಂಡನದೇನೂ ದೋಷವಿಲ್ಲ. ದೇವತಾ ರಕ್ಷಿತವಾದ ಸರ್ವರುಜಾಪಹಾರನೆಂಬ ನಿಮ್ಮ ಹಾರ ಮೊದಲಾಗಿ ಪಟ್ಟಣದ ಒಡವೆಗಳನ್ನೆಲ್ಲ ರಾತ್ರಿಹೊತ್ತು ಈ ರೂಪಿನಲ್ಲಿ ಕದ್ದು, ಹಗಲೆಲ್ಲ ತೊನ್ನನಾಗಿ ಹಾಳುದೇಗುಲದಲ್ಲಿ ಇರುತ್ತಿದ್ದೆ. ಆದ್ದರಿಂದ ನನ್ನನ್ನು ಕೊಲ್ಲಿ. ಈತನಿಗೇನೂ ದೋಷವಿಲ್ಲ." ಹೀಗೆನ್ನಲು ಅರಸನು, "ಆ ಕದ್ದ ಒಡವೆಯನ್ನೆಲ್ಲ ಏನು ಮಾಡಿದೆ? " ಎಂದು ಕೇಳಿದನು. "ಅಷ್ಟೂ ಇದೆ. ಐದಾರು ಸಾವಿರ ದೀನಾರವೆಚ್ಚವಾಗಿದೆ. ಉಳಿದದ್ದೆಲ್ಲ ಅಚ್ಚಳಿಯದೆ ಇದೆ " ಎಂದನು. ದೊರೆ, "ಹಾಗಾದರೆ, ಹಾರವನ್ನು ತೆಗೆದುಕೊಂಡು ಬಾ. ಪಟ್ಟಣದವರಿಗೂ ಅವರವರ ಒಡವೆಗಳನ್ನಿಟ್ಟಿರುವ ಸ್ಥಳವನ್ನು ತೋರಿಸು" ಎಂದು ಅಪ್ಪಣೆ ಮಾಡಿ ಪಟ್ಟಣದ ಜನಗಳನ್ನೂ ಅವನೊಡನೆ ಕಳಿಸಿದನು.
ಅವರೆಲ್ಲ ಕಾಪಿನೊಡನೆ ಹೊರಟರು. ವಿದ್ಯುಚ್ಚೋರನು ಅವರೊಡನೆ ಹೋಗಿ ಗುಹೆಯ ಬಾಗಿಲಿಗೆ ಮುಚ್ಚಿದ್ದ ದೊಡ್ಡ ಶಿಲೆಯನ್ನು ತೆಗೆದುಹಾಕಿ ಒಳಹೊಕ್ಕು ಹಾರವನ್ನು ತೆಗೆದುಕೊಂಡು ಪಟ್ಟಣದ ಜನಕ್ಕೆಲ್ಲ, " ನಿಮ್ಮ ನಿಮ್ಮ ಒಡವೆಗಳನ್ನು ಹುಡುಕಿ ತೆಗೆದುಕೊಳ್ಳಿ. ಒಬ್ಬರದೊಬ್ಬರಿಗೆ ಪಲ್ಲಟಿಸ<noinclude><references/></noinclude>
1niwkepsnc8mfp5xrmw9ibvcijctpky
ಪುಟ:Kannada-Saahitya.pdf/೧೬
104
23144
324913
324712
2026-06-17T09:06:15Z
Reema Jalihal
7674
324913
proofread-page
text/x-wiki
<noinclude><pagequality level="3" user="Reema Jalihal" /></noinclude>{{center|ಕನ್ನಡ ಸಾಹಿತ್ಯ ಚಿತ್ರಗಳು}}
{{rh|left=೬}}
ದಂತೆ ನೋಡಿಕೊಳ್ಳಿ” ಎಂದು ತೋರಿಸಿದನು. ಅವರೆಲ್ಲ ತಮ್ಮ ತಮ್ಮ ಒಡವೆಗಳನ್ನು ಹುಡುಕಿ ತೆಗೆದುಕೊಂಡರು.
ಆಮೇಲೆ ವಿದ್ಯುಚ್ಚೋರನು ಹಾರವನ್ನು ತೆಗೆದುಕೊಂಡು ಹೋಗಿ ದೊರೆಗೆ ಒಪ್ಪಿಸಿದನು. ಆಗ ಆತನು “ ಮಾಘಮಾಸದ ರಾತ್ರಿಯಲ್ಲಿ, ನಾಲ್ಕುಚಾವದಲ್ಲಿಯೂ ಘೋರವಾದ ಮೂವತ್ತೆರಡು ದಂಡನೆಗಳನ್ನು ಹೇಗೆ ಸೈರಿ
ಸಿದೆ ?” ಎಂದು ಕೇಳಿದನು. ಅದಕ್ಕೆ ವಿದ್ಯುಚ್ಚೋರನಿಂತೆಂದನು:
"ದೇವಾ, ಕಿರಿಯವನಾಗಿದ್ದಾಗ ಒಂದು ದಿವಸ ನನ್ನನ್ನು ಓದಿಸುವ ಓಜರೊಡನೆ ಸಹಸ್ರಕೂಟ ಚೈತ್ಯಾಲಯಕ್ಕೆ ನಾನೂ ಹೋಗಿದ್ದೆ. ಓಜರು
ದೇವರನ್ನು ವಂದಿಸಹೋದರು. ಅವರು ಬರುವವರೆಗೂ ನಾನು ಚರಿತ್ರ
ಪುರಾಣಗಳನ್ನು ವ್ಯಾಖ್ಯಾನ ಮಾಡುತ್ತಿದ್ದ ಶಿವಗುಪ್ತರೆಂಬ ಆಚಾರ್ಯರ
ಹತ್ತಿರ ಕುಳಿತಿದ್ದು ಅವರ ವ್ಯಾಖ್ಯಾನವನ್ನು ಕೇಳುತ್ತಿದ್ದೆ. ಅವರು ಹೀಗೆ
ಹೇಳುತ್ತಿದ್ದರು: 'ವ್ರತ ಶೀಲ ಚಾರಿತ್ರ ಗುಣಗಳಿಲ್ಲದವರು, ಜೀವಗಳನ್ನು
ಕೊಲ್ಲುವವರು, ಬೇಟೆಯಾಡುವವರು, ರಾಗ ದ್ವೇಷ ರೋಭಗಳಿಂದ ಸುಳ್ಳಾಡುವವರು, ಜೀವಗಳಿಗೆ ಸಂತಾಪವನ್ನೂ ವಧೆಯನ್ನೂ ಮಾಡುವವರು, ಮಧ್ಯ
ಮಾಂಸಗಳನ್ನು ಸೇವಿಸುವವರು -- ಇವರೇ ಮೊದಲಾದವರೆಲ್ಲ ನರಕಗಳಲ್ಲಿ
ಹುಟ್ಟಿ ದುಃಖವನ್ನನುಭವಿಸುತ್ತಾರೆ" ಎಂದು ಹುಳಿ ಆ ನರಕ ದುಃಖಗಳನ್ನೆಲ್ಲ
ವಿವರಿಸಿದರು. ಮುಂದುವರಿಸಿ, ' ಮತ್ತೂ ದಾನ, ಪೂಜೆ, ಶೀಲ, ಉಪವಾಸ ––
ಎಂಬ ಈ ನಾಲ್ಕು ಬಗೆಯ ಶ್ರಾವಕ ಧರ್ಮಗಳನ್ನು ನಡೆಸುವವರೂ, ತಪಸ್ಸು
ಮಾಡುವವರೂ, ಸ್ವರ್ಗ ಮೋಕ್ಷ ಸುಖಗಳನ್ನು ಪಡೆಯುತ್ತಾರೆ' ಎಂದು ಹೇಳಿದರು. ಅದನ್ನು ಕೇಳಿ ಆ ಭಟಾರರ ಪಕ್ಕದಲ್ಲಿ ಶ್ರಾವಕ ಧರ್ಮಗಳನ್ನು ಕೈಕೊಂಡೆನು. 'ಅರ್ಹಂತ ಪರಮ ದೇವರೆ ದೇವರು. ಕೊಲ್ಲದಿರುವುದೆ
ಧರ್ಮ. ಅಂತರಂಗ ಬಹಿರಂಗಗಳಲ್ಲಿ ಯಾವ ಪರಿಗ್ರಹವೂ ಇಲ್ಲದಿರುವುದೇ
ತಪಸ್ಸು' ಎಂಬಿವೇ ಮೊದಲಾದ ತತ್ತ್ವಗಳನ್ನು ತಿಳಿದುಕೊಂಡೆನು; ಸಮ್ಯಕ್ತ್ವವನ್ನು ಕೈಕೊಂಡೆನು; ವ್ರತಗಳನ್ನು ತಾಳಿದೆನು. ಆಗ ಕೇಳಿದ್ದ ನರಕ ದುಃಖಗಳ ಶತಸಹಸ್ತ್ರಭಾಗಕ್ಕೂ ಇವು ಸಮವಲ್ಲವೆಂದು ಮನಸ್ಸಿನಲ್ಲಿ ಭಾವಿಸಿ
ಈ ಮೂವತ್ತೆರಡು ದಂಡನೆಗಳನ್ನೂ ಸೈರಿಸಿಕೊಂಡೆನು” ಎಂದನು.
ಅದನ್ನು ಕೇಳಿ ಅರಸನು, “ ನಿನ್ನನ್ನು ಮೆಚ್ಚಿದೆ. ಬೇಡಿಕೊ, ನೀನು ಬೇಡಿ<noinclude><references/></noinclude>
rtva3r95u197oo3vwmj1v0228eekt2q
ಪುಟ:Kannada-Saahitya.pdf/೧೭
104
23145
324914
324713
2026-06-17T09:06:28Z
Reema Jalihal
7674
324914
proofread-page
text/x-wiki
<noinclude><pagequality level="3" user="Reema Jalihal" /></noinclude>
{{center|ವಿದ್ಯುಚ್ಚೋರನೆಂಬ ಋಷಿಯ ಕಥೆ}}
{{rh|right=೭}}
ದ್ದೆಲ್ಲವನ್ನೂ ಕೊಡುತ್ತೇನೆ” ಎಂದನು. ಎನ್ನಲಾಗಿ, “ ಬೇರೆ ಏನನ್ನೂ ಒಲ್ಲೆ. ನನ್ನ ಕೆಳೆಯನಾದ ಯಮದಂಡನಿಗೆ ಕ್ಷಮೆದೋರಬೇಕು. ಇದೊಂದನ್ನೇ
ನಾನು ಬೇಡುವುದು ” ಎಂದು ವಿದ್ಯುಚ್ಚೋರನು ಕೇಳಿಕೊಂಡನು. ಅರಸನೂ ಮತ್ತೆ ಹೀಗೆಂದು ಬೆಸಗೊಂಡನು : “ ಯಮದಂಡನು ನಿನಗೆ ಹೇಗೆ ಕೆಳೆಯನಾದನು ? ನೀನು ಶ್ರಾವಕ ವ್ರತಗಳನ್ನು ಕೈಗೊಂಡೆಯಾದರೂ ಏಕೆ ಕದಿಯುತ್ತೀಯೆ ?” ಹೀಗೆ ಬೆಸಗೊಳ್ಳಲಾಗಿ ಆತನು, " ಯಮದಂಡನು ನನಗೆ
ಕೆಳೆಯನಾಗಿರುವ ಸಂಗತಿಯನ್ನೂ ನಿನ್ನ ಪಟ್ಟಣದ ಧನವನ್ನು ಕದ್ದದಕ್ಕೆ ಕಾರಣವನ್ನೂ ಹೇಳುತ್ತೇನೆ. ಕೇಳು, ಅರಸಾ ” ಎಂದು ಹೇಳತೊಡಗಿದನು:
" ದಕ್ಷಿಣಾಪಥದಲ್ಲಿ ಅಭೀರವೆಂಬ ನಾಡು. ಅಲ್ಲಿ ವರ್ಣೆಯೆಂಬ ತೊರೆ. ಅದರ ದಡದಲ್ಲಿ ವೇಣಾತಟಕವೆಂಬ ಪಟ್ಟಣ. ಆ ಪಟ್ಟಣ ಬಹು ರಮ್ಯವಾಗಿ ಸ್ವರ್ಗವನ್ನೇ ಹೋಲುತ್ತಿರುವುದು. ಅದನ್ನಾಳುವವನು ಜಿತಶತ್ರುವೆಂಬರಸ, ಆತನ ಮಹಾದೇವಿ ವಿಜಯಮತಿಯೆಂಬವಳು. ಆ ಇಬ್ಬರಿಗೂ ಮಗ ನಾನು, ವಿದ್ಯುಚ್ಚೋರ. ಮತ್ತು ಅದೇ ಪಟ್ಟಣದಲ್ಲಿ ಯಮಪಾಶ
ನೆಂಬವನು ತಳಾರ. ಆತನ ಹೆಂಡತಿ ನಿಜಗುಣದೇವತೆಯೆಂಬವಳು.
ಆ ಇಬ್ಬರಿಗೂ ಮಗ ಈತ, ಯಮದಂಡನೆಂಬವನು. ನಾವಿಬ್ಬರೂ ಸಮಾನ ವಯಸ್ಸಿನವರು. ಐದಾರು ವರ್ಷದವರಾಗಿದ್ದಾಗ ಸಿದ್ದಾರ್ಥನೆಂಬ ಉಪಾಧ್ಯಾಯರ ಬಳಿ ಇಬ್ಬರನ್ನೂ ಓದವುದಕ್ಕೆ ಬಿಟ್ಟರು. ಏಳೆಂಟು ವರ್ಷದೊಳಗೆ
ವ್ಯಾಕರಣ, ಛಂದಸ್ಸು, ಅಲಂಕಾರ, ಕಾವ್ಯ, ನಾಟಕ, ಚಾಣಾಕ್ಯ, ವೈದ್ಯ ಮೊದಲಾದ ಶಾಸ್ತ್ರಗಳನ್ನೆಲ್ಲ ಇಬ್ಬರೂ ಕಲಿತೆವು. ಬಳಿಕ ಈತ ತಳಾರನ ಮಗನಾದ್ದರಿಂದ ಕಳ್ಳರನ್ನು ಕಂಡುಹಿಡಿಯುವ ರೀತಿಯನ್ನು ತಿಳಿಸುವ
' ಸುರುಖ'ವೆಂಬ ವಿದ್ಯೆಯನ್ನು ಕಲಿತನು. ನಾನು ಕದಿಯುವ ಉಪಾಯವನ್ನು ಹೇಳುವ ' ಕರಪಟ' ಶಾಸ್ತ್ರವನ್ನು ಕಲಿತೆನು. ಹೀಗೆ ನಾವಿಬ್ಬರೂ
ಅನ್ನೋನ್ಯ ಪ್ರೀತಿಯಿಂದ ಕಾಲಕಳೆಯುತ್ತಿದ್ದೆವು.
" ಒಂದು ದಿವಸ ಇಬ್ಬರೂ ವನಕ್ರೀಡೆಯಾಡುವುದಕ್ಕೆಂದು ಇಂದ್ರೋಪಮವೆಂಬ ವನಕ್ಕೆ ಹೋದೆವು. ಹಲವು ತೆರದ ವೃಕ್ಷಜಾತಿಗಳಿಂದ ಕಿಕ್ಕಿರಿದಿದ್ದ ಆ ವನದಲ್ಲಿ ಇಬ್ಬರೂ ಉಳಿಚೆಂಡಾಡುತ್ತಿದ್ದೆವು. ಆಗ, ಇವನು
ಆಲೋಕನ ವಿದ್ಯೆಯನ್ನು ಕಲ್ತವನಾದ್ದರಿಂದ ಎಲ್ಲಿ ಉಳಿದರೂ ಇವನನ್ನು<noinclude><references/></noinclude>
9ihn2dgq5d2bovtb8kwn867sn2a9zv6
ಪುಟ:Kannada-Saahitya.pdf/೩೦
104
76692
324923
324742
2026-06-17T09:10:41Z
Reema Jalihal
7674
324923
proofread-page
text/x-wiki
<noinclude><pagequality level="3" user="Reema Jalihal" /></noinclude>{{center|ಕನ್ನಡ ಸಾಹಿತ್ಯ ಚಿತ್ರಗಳು}}
{{rh|left=೨೦}}
{{center|{{larger|ಬಾಹುಬಲಿ}}}}
ಭರತನು ಹುಟ್ಟಿದ ಸ್ವಲ್ಪ ಕಾಲದಮೇಲೆ ಕಿರಿಯ ರಾಣಿ ಸುನಂದೆ ಗರ್ಭಿಣಿಯಾದಳು. ಆ ಕಾಲದಲ್ಲಿ ಆಕೆಗೆ ದಿಗ್ಗಜಗಳನ್ನು ಹೋಲುವ
ಮದ್ದಾನೆಗಳ ಹೋರಾಟವನ್ನು ನೋಡಬೇಕೆಂದೂ, ಜಗಜಟ್ಟಿಗಳೆಂದು
ಹೆಸರುವಾಸಿ ಪಡೆದ ಮಲ್ಲರ ಮಲ್ಲಗಾಳಗವನ್ನು ಕಾಣಬೇಕೆಂದೂ ಅತಿ ಕುತೂಹಲವಾಗುತ್ತಿತ್ತು. ಆ ಬಗೆಯ ಅಸಾಧಾರಣವಾದ ಬಯಕೆಗಳು ಗರ್ಭದಲ್ಲಿ
ಬೆಳೆಯುತ್ತಿದ್ದ ಮಗುವಿನ ಬಾಹುಬಲವನ್ನು ಸಾರಿ ಹೇಳುವಂತಿತ್ತು. ದಿನ
ತುಂಬಿದ ಬಳಿಕ ಮನುಕುಲದ ಯಶಶ್ರೀ ಜಯಶ್ರೀಗಳು ಮೂಡಿ ಬಂದಂತೆ
ಒಬ್ಬ ಕುಮಾರನು ಹುಟ್ಟಿದನು. ಆ ಸಮಯದಲ್ಲಿ ದೇವತೆಗಳೆಲ್ಲ ಆನಂದಿಸಿದರು. ಅರಮನೆಯ ಆನಂದವಾದ್ಯಗಳ ಜೊತೆಗೆ ದೇವಲೋಕದ ವಾದ್ಯಗಳೂ ಮೊಳಗಿದವು. ಊರಿನಲ್ಲಿ ಎಲ್ಲಿ ನೋಡಿದರೂ ಧ್ವಜತೋರಣಗಳನ್ನೆತ್ತಿ ಕಟ್ಟಿ ಪರಿಮಳ ಪುಷ್ಪಗಳನ್ನೆರಚಿ ಸರ್ವಾಲಂಕಾರ ಭೂಷಿತರಾಗಿ ಜನ ಆನಂದೋತ್ಸವಗಳಲ್ಲಿ ಮುಳುಗಿದ್ದರು.
ಮಗುವಿಗೆ 'ಬಾಹುಬಲಿ ' ಎಂದು ಹೆಸರಿಟ್ಟರು ಅದರ ಬಾಲಕೇಳಿಗಳಿಂದ ನಾಭಿರಾಜನೇ ಮೊದಲಾದವರೆಲ್ಲರೂ ಪರಮಾನಂದಭರಿತರಾದರು.
ಬಾಹುಬಲಿ ಬೆಳೆಬೆಳೆದಂತೆ ತನ್ನ ಹೆಸರನ್ನು ಸಾರ್ಧಕಪಡಿಸುತ್ತಿದ್ದನು. ಜೊತೆಯ ಬಾಲಕರೊಡನೆ ಕುಸ್ತಿಮಾಡುವನು ; ತೊಳ್ ತಟ್ಟಿ ಜಟ್ಟಿಗಳ ಮೇಲೆ ಬಿದ್ದು ಕಾಳಗಮಾಡುವನು. ಹೀಗೆ ತೋಳ್ ಬಲವನ್ನು ಮೆರಸುವುದರಲ್ಲಿ ಮನಮೆಚ್ಚಿ ಆನಂದಿಸುತ್ತಿದ್ದನು.
ನವಯೌವನದ ಕಳೆ ಅಡಿಯಿಡುತ್ತಿರಲು ಅವನ ಚೆಲುವಿಗೆ ಎಣೆಯಿಲ್ಲವಾಯಿತು. ಅರಳು ತಾವರೆಯನ್ನು ಹೋಲುವ ಮುಖ, ಕಮಲ ದಳದಂತಹ ಕಣ್ಣುಗಳು, ಮೇಘದಂತೆ ಗಂಭೀರವಾದ ದನಿ, ಕಪ್ಪಾದ ತಲೆಗೂದಲು,
ವಿಸ್ತಾರವಾದ ಎದೆ, ಮೊಳಕಾಲವರೆಗೂ ನೀಡಿದ ಬಲವಾದ ತೋಳುಗಳು,
ದುಂಡುದೊಡೆಗಳು, ತುಂಬಿದ ಮೈಕಟ್ಟು, ಕುಲಶೈಲದಂತೆ ಔನ್ನಶ್ಯ-ಹೀಗೆ
ಬಾಹುಬಲಿ ಸಕಲ ಸೌಂದರ್ಯ ಸಂಪನ್ನನಾದನು. ಅವನ ಆ ಅಸಮಾನವಾದ ಚೆಲುವನ್ನು ಒಮ್ಮೆ ಕಂಡವರು ಅದನ್ನೆಂದಿಗೂ ಮರೆಯುವಂತಿಲ್ಲ.<noinclude><references/></noinclude>
mnq6u1xdrorf9zot517zscwiv2g6kl2
ಪುಟ:Kannada-Saahitya.pdf/೩೧
104
76693
324924
324743
2026-06-17T09:10:56Z
Reema Jalihal
7674
324924
proofread-page
text/x-wiki
<noinclude><pagequality level="3" user="Reema Jalihal" /></noinclude>{{center|ಭರತ-ಬಾಹುಬಲಿ}}
{{rh|right=೨೧}}
ಕನಸಿನಲ್ಲಿ ಕೂಡ ಅದನ್ನ ನೆನೆಯುವರು. ಅವನು ಆ ಕಾಲದ * ಕಾಮದೇವ,
ಎಂದಮೇಲೆ ಅವನ ಸೌಂದಯ್ಯಕ್ಕೆ ಬೇರೆ ವರ್ಣನೆಯೆಕೆ ?
{{center|ಬೇರೆ ಮಕ್ಕಳು}}
ಯಶಸ್ವತಿಗೆ ಭರತನಾದ ಮೇಲೆ ತೊಂಬತ್ತೊಂಭತ್ತು ಮಂದಿ ಗಂಡು
ಮಕ್ಕಳೂ ಎಲ್ಲರಿಗಿಂತಲೂ ಕಿರಿಯವಳಾಗಿ ಒಬ್ಬ ಮಗಳೂ ಹುಟ್ಟಿದರು. ಬಾಹುಬಲಿ ಹುಟ್ಟಿದ ಬಳಿಕ ಸುನಂದೆ ಒಬ್ಬ ಮಗಳನ್ನು ಮಾತ್ರ ಪಡೆದಳು. ಯಶಸ್ವತಿಯ ಮಗಳು ಬ್ರಹ್ಮಿ; ಸುನಂದೆಯ ಮಗಳು ಸೌಂದರಿ.
ಮಕ್ಕಳೆಲ್ಲರೂ ಕುಲಭೂಷಣರಾಗಿ ಬೆಳಗುತ್ತಿದ್ದರು.
ಇವರನ್ನೆಲ್ಲ ಕಂಡು ಆದಿ ಪುರುಷನ ಅಕ್ಕರೆ ಉಕ್ಕಿ ಬಂತು. ಅವರೆಲ್ಲರಿಗೂ ತಕ್ಕ ಭೂಷಣಗಳನ್ನು ತನ್ನ ಬುದ್ಧಿ ಬಲದಿಂದ ಹೊಸದಾಗಿ ನಿರ್ಮಿಸಿಕೊಟ್ಟನು. ಅವರೆಲ್ಲರೂ ಕಳೆಯೆರಚುವ ಆ ಅಲಂಕಾರಗಳನ್ನು ತೊಟ್ಟು
ಬೆಳಕಿನ ಕಣಗಳಿಂದಲೇ ನಿರ್ಮಿತರಾಗಿರುವರೋ ಎಂಬಂತೆ ತೋರುತ್ತಿದ್ದರು.
{{center|ವಿದ್ಯೋಪದೇಶ}}
ಈ ಮಕ್ಕಳಿಗೆ ತಕ್ಕ ವಿದ್ಯೆಗಳನ್ನು ಕಲಿಸಬೇಕೆಂದು ಆದಿನಾಥನಿಗೆ ಮನಸ್ಸಾಯಿತು. ಆ ಹೊತ್ತಿಗೆ ಸರಿಯಾಗಿ ಬ್ರಹ್ಮಿ ಸೌಂದರಿಯರಿಬ್ಬರೂ ತಂದೆಯ ಸಮಾಪಕ್ಕೆ ಬಂದು ನಮಸ್ಕಾರ ಮಾಡಿ ದೂರ ಕುಳಿತುಕೊಂಡರು. ಋಷಭಸ್ವಾಮಿಯು ಮಕ್ಕಳಿಬ್ಬರನ್ನೂ ಹತ್ತಿರ ಕರೆದು ತೊಡೆಯ ಮೇಲೆ ಕೂರಿಸಿಕೊಂಡು, " ಮಕ್ಕಳಿರಾ, ನಿಮ್ಮಿಬ್ಬರ ನಡವಳಿಕೆಯೂ ವಿನಯಕ್ಕೆ
ನೆಲೆಯಾಗಿದೆ. ಈ ವಯಸ್ಸು, ಈ ಶೀಲ, ಈ ವಿನಯ— ಎಲ್ಲಕ್ಕೂ ವಿದ್ಯೆಯನ್ನು ಸೇರಿಸಿದರೆ ಆಗ ನೀವೆ ಜಗತ್ಪಾವನೆಯರಾಗುತ್ತೀರಿ. ಎಲ್ಲರನ್ನೂ ಮಾರಿಸುತ್ತೀರಿ" ಎಂದು ನುಡಿದನು. ಬಳಿಕ ಅವರಿಬ್ಬರನ್ನೂ ಎರಡು ಪಕ್ಕಗಳಲ್ಲಿ ಕೂರಿಸಿಕೊಂಡು ಹಿರಿಯ ಮಗಳು ಬ್ರಹ್ಮಿಗೆ ಲಿಪಿಗಳನ್ನೂ ಸೌಂದರಿಗೆ
ಗಣಿತವನ್ನೂ ಉಪದೇಶಮಾಡಿದನು. ಇದರ ಜೊತೆಗೆ ವಾಙ್ಮಯವನ್ನೂ
————————
* ಜೈನಪುರಾಣಗಳು ಒಟ್ಟು ಇಪ್ಪತ್ತುನಾಲ್ಕು ಮಂದಿ ಕಾಮದೇವರು ಬೇರೆ ಬೇರೆ ಕಾಲಗಳಲ್ಲಿದ್ದರೆಂದು ಹೇಳುತ್ತವೆ. ಅವರಲ್ಲಿ ಬಾಹುಬಲಿ ಮೊದಲನೆಯವನು.<noinclude><references/></noinclude>
hsog4zk0r4mmc74g7o2g2jpyyfk7la6
ಪುಟ:Kannada-Saahitya.pdf/೩೨
104
76694
324925
324744
2026-06-17T09:11:09Z
Reema Jalihal
7674
324925
proofread-page
text/x-wiki
<noinclude><pagequality level="3" user="Reema Jalihal" /></noinclude>
{{center|ಕನ್ನಡ ಸಾಹಿತ್ಯ ಚಿತ್ರಗಳು}}
{{rh|left=೨೨}}
ಸಮಸ್ತ ಕಲೆಗಳನ್ನೂ ತಿಳಿಸಿ ಅವರು ಸಕಲ ವಿದ್ಯಾಪರಿಪೂರ್ಣೆಯರಾಗುವಂತೆ
ಮಾಡಿದನು.
ಹೀಗೆ ಮೊದಲು ಹೆಣ್ಣು ಮಕ್ಕಳಿಗೆ ವಿದ್ಯೋಪದೇಶಮಾಡಿ ಆಮೇಲೆ ಗಂಡುಮಕ್ಕಳಿಗೆ ಕಲಿಸಕೊಡಗಿದನು. ಭರತನಿಗೆ ಅರ್ಥಶಾಸ್ತ್ರ ಭರತಶಾಸ್ತ್ರಗಳನ್ನು ತಿಳಿಸಿದನು. ಬಾಹುಬಲಿಗೆ ಕಾಮತಂತ್ರ, ಆಯುರ್ವೇದ, ಧನುರ್ವೇದ, ಹಸ್ತಿತಂತ್ರ, ಅಶ್ವತಂತ್ರ, ರತ್ನ ಪರೀಕ್ಷೆ ಮೊದಲಾದವನ್ನು ಕಲಿಸಿದನು. ಉಳಿದ ಮಕ್ಕಳಿಗೆಲ್ಲ ಗೀಳವಾದ್ಯಗಳ ಅರಿವನ್ನೊಳಗೊಂಡ ಗಂಧರ್ವ
ಶಾಸ್ತ್ರ, ಚಿತ್ರಕಲೆ, ವಾಸ್ತುವಿದ್ಯೆ ಮುಂತಾದ ಲೋಕೋಪಕಾರಿಗಳಾದ ಶಾಸ್ತ್ರಗಳು ಎಷ್ಟಿವೆಯೋ ಅಷ್ಟನ್ನೂ ಉಪದೇಶಮಾಡಿದನು. ಉತ್ತಮ ವಿದ್ಯೆಗಳಿಗೆ
ನೆಲೆಯಾದ ಮಕ್ಕಳೆಲ್ಲರೂ ತಮ್ಮ ನಯ ವಿನಯಗಳಿಂದ ತಂದೆಯ ಮನಸ್ಸಿಗೆ
ಆನಂದವುಂಟುಮಾಡುತ್ತಿದ್ದರು.
{{center|ಕೃತಯುಗಾರಂಭ}}
ಅಷ್ಟುಹೊತ್ತಿಗೆ ಲೋಕದಲ್ಲಿ ಜನ ಕಷ್ಟಪಟ್ಟು ದುಡಿಯದೆ ಸುಖವಾಗಿ ಬಾಳಬಹುದಾಗಿದ್ದ ಭೋಗಭೂಮಿ ಸ್ಥಿತಿ ಪೂರ್ತಿಯಾಗಿ ಮಾಯವಾಯಿತು. ಮೈಮುರಿದು ಕೆಲಸಮಾಡಿಯೇ ಬದುಕಬೇಕಾದ ಕರ್ಮಭೂಮಿ ಸ್ಥಿತಿ ಪ್ರಾರಂಭವಾಯಿತು. ಆಗ ಮೊದಲು ತಾನಾಗಿಯೇ ಹುಟ್ಟಿ ಬೆಳೆದು ಫಲ
ಕೊಡುತ್ತಿದ್ದ ಸಸ್ಯಾದಿಗಳ ಸಾರ ಕುಗ್ಗಿಹೋಯಿತು. ಜನರಿಗೆ ರೋಗರುಜಿನಗಳ ಬಾಧೆಯೂ ಬಂದೊದಗಿತು. ಮುಂಗಾಣದೆ ಪ್ರಜೆಗಳೆಲ್ಲ ಒಟ್ಟುಗೂಡಿ ನಾಭಿರಾಜನ ಸಲಹೆಯಂತೆ ಆದಿನಾಥನ ಬಳಿ ಬಂದರು. ತಮ್ಮ ಹಸಿವು ಸಂಕಟಗಳನ್ನು ಪರಿಹರಿಸಿ ಬಾಳುವ ದಾರಿ ತೋರಬೇಕೆಂದು ಮೊರೆಯಿಟ್ಟರು. ಋಷಭಸ್ವಾಮಿಯು ಅವರ ಮೊರೆಯನ್ನು ಕೇಳಿ, 'ಅ೦ಜಬೇಡಿ ' ಎಂದು
ಅವರನ್ನೆಲ್ಲ ಸಂತಯಿಸಿದನು.
ಬಳಿಕ ಭೂಮಿಯನ್ನು ಅಲ್ಲಲ್ಲಿಯ ಪ್ರಕೃತಿ ಸ್ವಭಾವಕ್ಕನುಗುಣವಾಗಿ ಅನೇಕ ಬಗೆಯಾಗಿ ವಿಂಗಡಿಸಿದನು. ಆಯಾ ಪ್ರದೇಶದಲ್ಲಿ ಹೇಗೆ ಹೇಗೆ ಜೀವನ ಸೌಕರ್ಯಗಳನ್ನು ದೊರಕಿಸಿಕೊಳ್ಳಬಹುದೆಂಬುದನ್ನು ತಿಳಿಸಿದನು. ದೇಶಗಳನ್ನು ಆಳುವುದು, ತೆರಿಗೆಯೆತ್ತುವುದು, ಜನ ನೆಮ್ಮದಿಗೆ ದಾರಿಮಾಡು<noinclude><references/></noinclude>
eqv1d7uc7pvmcxkwgynn2dr394gekxj
ಪುಟ:Kannada-Saahitya.pdf/೩೩
104
76695
324926
324745
2026-06-17T09:11:24Z
Reema Jalihal
7674
324926
proofread-page
text/x-wiki
<noinclude><pagequality level="3" user="Reema Jalihal" /></noinclude>{{center|ಭರತ-ಬಾಹುಬಲಿ}}
{{rh|right=೨೩}}
ವುದು, ಮೊದಲಾದ ಕ್ರಮವನ್ನು ವಿವರಿಸಿದನು. ಜನರ ಜೀವನೋಪಾಯಕ್ಕಾಗಿ ಬರವಣಿಗೆ, ಕೃಷಿ, ವಾಣಿಜ್ಯ, ಹಸ್ತಕೌಶಲ್ಯದಿಂದ ಸಾಧಿಸುವ ಶಿಲ್ಪ,
ಕತ್ತಿ ಹಿಡಿದು ರಕ್ಷಣೆ ಮಾಡುವ ಶಸ್ತ್ರಕರ್ಮ, ಪಶುಪಾಲನೆ, ಸೇವಾವೃತ್ತಿ ಮೊದಲಾದ ವೃತ್ತಿಗಳನ್ನು ಕಲ್ಪಿಸಿದನು. ಜನರನ್ನು ಕ್ಷತ್ರಿಯ, ವೈಶ್ಯ, ಶೂದ್ರರೆಂದು ಮೂರು ವರ್ಣಗಳಾಗಿ ವಿಂಗಡಿಸಿ ಅವರವರ ಕರ್ತವ್ಯಗಳನ್ನು ಗೊತ್ತು ಮಾಡಿದನು. ಈ ವ್ಯವಸ್ಥೆಯನ್ನು ಮಾರದೆ ನಡೆಯುತ್ತಿದ್ದರೆ ಈ ಕೀಳ್ಗಾಲದಲ್ಲೂ ಜನ ಸುಖವಾಗಿ ಬಾಳಬಹುದೆಂದು ನಿಯಮಿಸಿದನು. ಆದಿನಾಥನು ಹೀಗೆ ಕಟ್ಟು ಪಾಡು ಮಾಡಿದಂದಿನಿಂದ ಕೃತಯುಗ ಪ್ರಾರಂಭವಾಯಿತು.
ಅದೇ ಕಾಲದಲ್ಲಿ ಋಷಭಸ್ವಾಮಿಗೆ ಪಟ್ಟಾಭಿಷೇಕವಾಯಿತು. ರಾಜ್ಯವಾಳುತ್ತ ತಾನು ಮಾಡಿದ ಲೋಕವ್ಯವಸ್ಥೆಯನ್ನು ಸರಿಯಾಗಿ ನಡೆಸುವುದಕ್ಕೂ, ಮಾರಿದವರನ್ನು ಉಚಿತ ರೀತಿಯಲ್ಲಿ ಶಿಕ್ಷಿಸುವುದಕ್ಕೂ ಯೋಗ್ಯವಾದ ರಾಜಕುಲಗಳನ್ನು ಸ್ಥಾಪಿಸಿದನು. ಋಷಭಸ್ವಾಮಿಯೇ ಆದರ್ಶ ರಾಜನಾಗಿ ರಾಜ್ಯ ಪಾಲನೆ ಮಾಡುತ್ತಿರಲು ನೆಲವೆಲ್ಲ ಹರ್ಷಕ್ಕೆ ನೆಲೆಯಾಗಿತ್ತು.
{{center|ಋಷಭನ ವೈರಾಗ್ಯ, ಪರಿನಿಷ್ಕ್ರಮಣ}}
ಮೆಚ್ಚಿನ ಮಡದಿಯರು, ವಿದ್ಯಾ ವಿನಯ ಸಂಪನ್ನರಾದ ಮಕ್ಕಳು, ತೃಪ್ತರಾದ ಪ್ರಜೆಗಳು, ——ಇವರಿಂದ ಕೂಡಿ ಪರಮಾನಂದಭರಿತನಾಗಿ ರಾಜ್ಯಭಾರ ಮಾಡುತ್ತ ಆದಿನಾಥನು ಅನೇಕ ವರ್ಷಗಳನ್ನು ಕಳೆದನು. ಬಳಿಕ
ಒಮ್ಮೆ ಆತನು ಒಡೋಲಗದಲ್ಲಿರುವಾಗ ದೇವೇಂದ್ರನು ದೇವಸಮೂಹದೊಡನೆ ಆಸ್ಥಾನಕ್ಕೆ ಬಂದನು. ಅಪ್ಸರೆಯರ ನೃತ್ತಸೇವೆಯಿಂದ ಪರಮನನ್ನು ಸಂತೋಷಪಡಿಸಬೇಕೆಂಬ ತಮ್ಮ ಬಯಕೆಯನ್ನು ಅರಿಕೆಮಾಡಿಕೊಂಡನು. ಆದಿನಾಥನು ತಾನು ಯಾವೊಂದು ಆಸೆಯೂ ಇಲ್ಲದವನಾದರೂ ಸಮಸ್ತ ಸುರ ನರರ ಆಸೆ ಪೂರ್ಣವಾಗಲೆಂಬ ಭಾವನೆಯಿಂದ ಅದಕ್ಕೆ ಸಮ್ಮತಿಯಿತ್ತನು.
ದೇವವಾದ್ಯಗಳ ಮಧುರರವವೂ, ದೇವಸ್ತ್ರೀಯರ ಇಂಪಾದ ಗಾನವೂ
ಅಮೃತದ ಮಳೆ ಸುರಿದಂತೆ ರಂಜಿಸುತ್ತಿರಲು ನೀಳಾಂಜನೆಯೆಂಬ ದೇವ ನರ್ತಕಿಯೊಬ್ಬಳು ನರ್ತನಕ್ಕೆ ಪ್ರಾರಂಭಿಸಿದಳು. ಅವಳ ರೂಪಕ್ಕೂ ನರ್ತನ<noinclude><references/></noinclude>
87rka9cwphdo2gtwskd8y7elgw5ji9i
ಪುಟ:Kannada-Saahitya.pdf/೩೫
104
76697
324927
324747
2026-06-17T09:11:43Z
Reema Jalihal
7674
324927
proofread-page
text/x-wiki
<noinclude><pagequality level="3" user="Reema Jalihal" /></noinclude>{{center|ಭರತ-ಬಾಹುಬಲಿ}}
{{rh|right=೨೫}}
ಕ್ಷೀರಸಮುದ್ರದಲ್ಲಿ ಹಾಕಿ ಬಂದರು. ಹೀಗೆ 'ಪರಿನಿಷ್ಕ್ರಮಣ ಕಲ್ಯಾಣ'ವನ್ನು ನೆರವೇರಿಸಿ ಮುನೀಂದ್ರನ ಪಾದಗಳಿಗೆರಗಿ ಸ್ವರ್ಗಕ್ಕೆ ನಡೆದರು. ಭರತನೂ ಭಕ್ತಿಯಿಂದ ಆತನನ್ನು ಪೂಜಿಸಿ ರಾಜಧಾನಿಗೆ ಹಿಂದಿರುಗಿದನು.
{{center|ಆದಿನಾಥನ ತಪಸ್ಸು}}
ಆದಿನಾಥನು ಮೌನ ಮತ್ತು ಅನಶನ ವ್ರತಗಳನ್ನು ಧರಿಸಿ ಧ್ಯಾನಾಸಕ್ತನಾದನು. 'ಇನ್ನು ಆರುತಿಂಗಳು ಕಳೆದಲ್ಲದೆ ಕೈಯೆತ್ತುವುದಿಲ್ಲ'
ಎಂದು ಸಂಕಲ್ಪಿಸಿ ಪ್ರತಿಮಾಯೋಗದಲ್ಲಿ ನಿಂತನು. ಏನೇನೋ ಅಡ್ಡಿಗಳು
ಬಂದವು. ಆದರೂ ಆತನ ಧ್ಯಾನಕ್ಕೆ ಚ್ಯುತಿ ಬರಲಿಲ್ಲ. ಆತನ ತಪಸ್ಸು ವೃದ್ಧಿಯಾಗುತ್ತ ಬಂದಂತೆಲ್ಲ ಅದರ ಪ್ರಭಾವದಿಂದ ಅಲ್ಲಿದ್ದ ಸಮಸ್ತ ಪ್ರಾಣಿವರ್ಗವೂ ಜಾತಿ ವೈರವನ್ನು ತೊರೆದು ಆ ಕಾಡಿನಲ್ಲಿ ಅನ್ನೋನ್ಯ ಪ್ರೀತಿಯಿಂದ ಬಾಳುತ್ತಿದ್ದವು.
ಆರು ತಿಂಗಳು ಕಳೆದ ಮೇಲೆ ಧ್ಯಾನವನ್ನು ಮುಗಿಸಿ ಚರಿಗೆಗೆ ಹೊರಟನು. ಉತ್ತಮ ಆಹಾರಕ್ಕಾಗಿ ದೇಶದೇಶಗಳನ್ನು ಸಂಚರಿಸಿದನು. ಜನರು ಅಂಧ ಮುನಿಗೆ ಭಿಕ್ಷೆ ನೀಡಲು ಯೋಗ್ಯವಾದ ವಸ್ತು ಯಾವುದೆಂದರಿಯದೆ ಬಟ್ಟೆ ಬರೆ ಊಟ ತಿಂಡಿಗಳನ್ನು ಅರ್ಪಿಸಬಂದರು. ಮುನೀಶ್ವರನು ಯಾವುದನ್ನೂ ಸ್ವೀಕರಿಸಲಿಲ್ಲ. ಕಡೆಗೆ ಹಸ್ತಿನಾವತಿಯ ಅರಸನಾದ ಶ್ರೇಯಾಂಸನೆಂಬುವನು ಇಷ್ಟಾರ್ಥವನ್ನು ಸಲ್ಲಿಸಲು ಕಲ್ಪವೃಕ್ಷವೇ ಹತ್ತಿರ ಬರುತ್ತಿರುವುದೋ ಎಂಬಂತೆ ಬರುತ್ತಿರುವ ಆ ಮುನೀಂದ್ರನಿಗೆ ಪರಿಶುದ್ಧವಾದ ಕಬ್ಬಿನ
ಹಾಲನ್ನು ಸಮರ್ಪಿಸಿದನು. ಭಕ್ತಿಯಿಂದರ್ಪಿಸಿದ ಆ ನಿರ್ದುಷ್ಟ ರಸವನ್ನು
ಸ್ವಾಮಿ ಪಾನ ಮಾಡಿದನು. ಆಗ ಪಂಚಾಶ್ಚರಗಳಾದವು.
ಋಷಭಯೋಗಿಯು ಹಲವು ಸಂವತ್ಸರಗಳವರೆಗೆ ದೇಶಾಟನೆ ಮಾಡುತ್ತಿದ್ದು ಕಡೆಗೆ ಪುರಿಮತಾಳವೆಂಬ ಪಟ್ಟಣದ ಹೊರ ಉದ್ಯಾನದಲ್ಲಿ ಘೋರ ತಪಸ್ಸಿಗೆ ತೊಡಗಿದನು.
{{center|ಕೇವಲ ಜ್ಞಾನೋತ್ಪತ್ತಿ}}
ಹೀಗೆ ತಪೋನಿರತನಾಗಿರಲು ಋಷಭಯೋಗಿಯ ಕರ್ಮಬೀಜವೆಲ್ಲ<noinclude><references/></noinclude>
70k4zisly4twdcxxckyx97lxs877y5u
ಪುಟ:Kannada-Saahitya.pdf/೩೬
104
76698
324928
324748
2026-06-17T09:11:57Z
Reema Jalihal
7674
324928
proofread-page
text/x-wiki
<noinclude><pagequality level="3" user="Reema Jalihal" /></noinclude>{{center|ಕನ್ನಡ ಸಾಹಿತ್ಯ ಚಿತ್ರಗಳು}}
{{rh|left=೨೬}}
ಸುಟ್ಟುಹೋಯಿತು. ಹುಟ್ಟುಸಾವಿನ ಚಕ್ರಕ್ಕೆ ಆತನನ್ನು ಬಿಗಿದಿದ್ದ ಬಂಧನವೆಲ್ಲ ಬಿಚ್ಚಿಹೋಗಿ ಆತ್ಮ ಮುಕ್ತವಾಯಿತು. ಆ ಮುಕ್ತಾತ್ಮನಿಗೆ ಕೇವಲ ಜ್ಞಾನವೆಂಬ ಸರ್ವೋತ್ಕೃಷ್ಟವಾದ ಜ್ಞಾನ ಉಂಟಾಯಿತು. ಋಷಭಯೋಗಿ ಜಿನನಾದನು, ತೀರ್ಥಂಕರನಾದನು.
ಕೇವಲ ಜ್ಞಾನೋತ್ಪತ್ತಿಯಾದಾಗ ದೇವತೆಗಳು ಬಂದು ಆನಂದ ನೃತ್ಯ ಮಾಡಿ ಉತ್ಸವವನ್ನಾಚರಿಸಿದರು. ಇಂದ್ರನ ಆಜ್ಞೆಯಂತೆ ಕುಬೇರನು ಜಿನನ ಧರ್ಮಬೋಧೆಗೆ ಅನುಕೂಲಿಸುವ ಸಮವಸರಣ ಮಂಟಪವನ್ನು
ನಿರ್ಮಿಸಿದನು. ಅದರಲ್ಲಿ ದೇವಾಸುರನರರು ಮಾತ್ರವೇ ಅಲ್ಲ, ಪಶು ಪಕ್ಷಿ
ಮೊದಲಾದ ಸಮಸ್ತ ಪ್ರಾಣಿಗಳಿಗೂ ಎಡೆಯುಂಟು. ಅದು ಆಕಾಶಗಾಮಿಯಾಗಿ ಜಿನನ ಮನಸ್ಸನ್ನನುಸರಿಸಿ ಎಲ್ಲೆಂದರಲ್ಲಿ ಸಂಚರಿಸುವುದು. ಆ ಮಂಟಪದಲ್ಲಿ ತೀರ್ಥಂಕರನ ಬೋಧಾಮೃತವನ್ನು ಸವಿಯಲು ಸಮಸ್ತ ಜೀವರಾಶಿಗಳೂ ಬಂದು ನೆರೆದವು.
ಪುರಿಮತಾಳಪುರದರಸು ಭರತನೊತ್ತಿನ ತಮ್ಮ ವೃಷಭಸೇನನೆಂಬವನು ಆದಿ ತೀರ್ಥಂಕರನನ್ನಾರಾಧಿಸಲು ಮಂಗಳದ್ರವ್ಯಸಮೇತನಾಗಿ ಬಂದನು. ಬಂದು ವೃಷಭಸ್ವಾಮಿಯ ಮಂಗಳಮುಖವನ್ನು ಕಂಡನೋ ಇಲ್ಲವೋ, ಆತನಿಗೆ ಪರಮ ವೈರಾಗ್ಯ ತಲೆದೋರಿತು. ಅರ್ಹತ್ಪರಮೇಶ್ವರನ
ಸಮಕ್ಷದಲ್ಲಿ ದೀಕ್ಷೆಯಾಂತು ಆತನ ಮೊದಲನೆಯ ಗಣಧರನಾದನು.
{{center|ಚಕ್ರರತ್ರೋತ್ಪತ್ತಿ}}
ಇತ್ತ ಅಯೋಧ್ಯೆಯಲ್ಲಿ ಭರತರಾಜನು ಆಸ್ಥಾನಮಂಟಪದಲ್ಲಿದ್ದಾಗ ಪುರೋಹಿತನು ಬಂದು ಆದಿನಾಥನಿಗೆ ಕೇವಲಜ್ಞಾನವುಂಟಾದ ಸುದ್ದಿಯನ್ನು ತಿಳಿಸಿದನು. ಆಯುಧಾಗಾರದಲ್ಲಿ ಸೂರನಂತೆ ಕಳೆಯೆರಚುವ ಚಕ್ರರತ್ನವುದ್ಭವಿಸಿತೆಂದು ಆಯುಧಾಧ್ಯಕ್ಷನು ಬಿನ್ನವಿಸಿದನು. ಅಂತಃಪುರದಲ್ಲಿ ಪಟ್ಟದ ರಾಣಿ ಸುಕುಮಾರನನ್ನು ಹೆತ್ತಳೆಂದು ಕಂಚುಕಿ ವಿಜ್ಞಾಪಿಸಿಕೊಂಡನು. ಏಕ ಕಾಲದಲ್ಲಿ ಬಂದ ಈ ಮೂರು ಶುಭ ಸಮಾಚಾರಗಳನ್ನೂ ಕೇಳಿ ಭರತನು ಪರಮಾನಂದಭರಿತನಾದನು.<noinclude><references/></noinclude>
lel8xrvrekaz6ebdmwvvoa503ovmocz
ಪುಟ:Kannada-Saahitya.pdf/೩೭
104
76699
324929
324749
2026-06-17T09:12:12Z
Reema Jalihal
7674
324929
proofread-page
text/x-wiki
<noinclude><pagequality level="3" user="Reema Jalihal" /></noinclude>{{center|ಭರತ-ಬಾಹುಬಲಿ}}
{{rh|right=೨೭}}
ಇವುಗಳಲ್ಲಿ ಮೊದಲು ಯಾವ ಶುಭಕ್ಕಾಗಿ ಉತ್ಸವ ನಡೆಸಬೇಕೆಂದು ಸ್ವಲ್ಪ ಹೊತ್ತು ಯೋಚಿಸಿದನು. ' ಧರ್ಮ, ಅರ್ಥ, ಕಾಮ,—— ಎಂಬ ಪುರುಷಾರ್ಥಗಳಲ್ಲಿ ಧರ್ಮವೇ ಮುಖ್ಯ. ಧರ್ಮದ ಫಲ ಅರ್ಥ, ಕಾಮ ಆ ಫಲದ ರಸ. ಆದ್ದರಿಂದ ಅರ್ಹತ್ಪರಮೇಶ್ವರನ ಪೂಜೆಯೇ ಪ್ರಥಮ ಕರ್ತವ್ಯ' ಎಂದು ನಿಶ್ಚಯಿಸಿದನು. ಬಳಿಕ ಅಂತಃಪುರ ಪರಿವಾರ ಸಮೇತನಾಗಿ ಸಮವ ಸರಣ ಮಂಟಪದೆಡೆಗೆ ಪ್ರಯಾಣ ಮಾಡಿದನು.
{{center|ಧರ್ಮಾಮೃತ ವರ್ಷ}}
ಸಮಸ್ತ ರಾಜಚಿಹ್ನೆಗಳನ್ನೂ ದೂರದಲ್ಲೆ ಬಿಟ್ಟು ಕಾಲ್ನಡಗೆಯಿಂದಲೆ ಅರ್ಹನ ಅಡಿದಾವರೆಗಳೆಡೆಗೆ ನಡೆದನು. ಮೂರು ಸಾರಿ ಪ್ರದಕ್ಷಿಣೆ ಮಾಡಿ ಭಗವಂತನ ಎದುರಿಗೆ ನಿಂತು ಕೈಮುಗಿದು ಭಕ್ತಿಯಿಂದ ಸ್ತೋತ್ರಮಾಡಿ 'ಇಂದ್ರ ಪದವಿಯೇ ಮೊದಲಾದ್ದು ಯಾವುದೂ ಸ್ಥಿರವಲ್ಲ. ಅದೊಂದೂ ನನಗೆ ಬೇಡ, ಉತ್ತಮ ಜ್ಞಾನ ದೊರೆಯುವಂತೆ ಕರುಣಿಸು ' ಎಂದು
ಪ್ರಾರ್ಥಿಸಿದನು.
ಭರತನ ಪ್ರಾರ್ಥನೆಯನ್ನು ಸಾರ್ಥಕಪಡಿಸಲೋ ಎಂಬಂತೆ ಆದಿ
ತೀರ್ಥಂಕರನು ದಿವ್ಯ ಧ್ವನಿಯಲ್ಲಿ ಧರ್ಮೋಪದೇಶ ಮಾಡತೊಡಗಿದನು. ಆ
ಉಪದೇಶ ಸಭೆಯಲ್ಲಿದ್ದ ಸಮಸ್ತರಿಗೂ ಅವರವರ ಭಾಷೆಯಲ್ಲಿ ಅರ್ಥವಾಗುತಿತ್ತು. ಲೋಕದ ಸ್ವರೂಪ, ತತ್ತ್ವನಿವೇಚನೆ, ಮುಕ್ತಿಸಾಧನೆಯ ವಿಧಾನ—ಎಲ್ಲವೂ ಆ ಬೋಧನೆಯಿಂದ ಸ್ಪಷ್ಟವಾಯಿತು.
ಅಲ್ಲಿ ನೆರೆದ ಎಷ್ಟೋ ಜನರು - ಅರಸುಗಳೂ, ಸಾಧಾರಣರೂ, ಗಂಡಸರೂ, ಹೆಂಗಸರೂ—— ಆದಿಜಿನನ ಸನ್ನಿಧಿಯಲ್ಲಿ ದೀಕ್ಷೆ ತೆಗೆದುಕೊಂಡರು.
ಬ್ರಹ್ಮಿ ಸೌಂದರಿಯರು ವೈರಾಗ್ಯಕ್ಕೆ ಮನಸ್ಸು ಕೊಟ್ಟರು. ವಿವಾಹವನ್ನೊಲ್ಲದೆ
ಗುರುಪ್ರಸಾದದಿಂದ ದೀಕ್ಷೆತಾಳಿ ಗಣಿನೀ ಗಣಕ್ಕೆ ಮುಖ್ಯೆಯರಾದರು. ಭರತ ಬಾಹುಬಲಿಗಳು ಭಗವಂತನನ್ನು ವಂದಿಸಿ ತಮ್ಮ ತಮ್ಮ ರಾಜಧಾನಿಗಳಿಗೆ ಹೋದರು.
ಆದಿತೀರ್ಥಂಕರನು ಸಮವಸರಣ ಮಂಟಪದಲ್ಲಿ ನೆಲಸಿ ಶಕ, ಕಾಶ್ಮೀರ,
ಆಂಧ್ರ, ಕರ್ನಾಟಕ, ಮಗಧ ಮೊದಲಾದ ದೇಶಗಳಲ್ಲಿ ಸಂಚರಿಸಿ ಅಲ್ಲೆಲ್ಲ<noinclude><references/></noinclude>
f857k14qidqs5g5oc492l40od003sg5
ವಿಕಿಸೋರ್ಸ್:ಇಂಟರ್ನ್ಶಿಪ್ ಕಾರ್ಯಕ್ರಮ ಮೇ-ಜೂನ್ ೨೦೨೬
4
120710
324906
324905
2026-06-16T15:33:24Z
A826
6806
/* ವಿಕಿಸೋರ್ಸ್ ಪುಸ್ತಕ ಅಪ್ಲೋಡ್ */
324906
wikitext
text/x-wiki
[[File:Kannada Wikisource Workflow.svg|thumb|Kannada Wikisource Workflow]]
[[File:Open refine workflow in Kannada Language.svg|thumb|Open refine workflow in Kannada Language]]
[[File:Wikisource -Transclusion Inserting images, lists and table of content.pdf|thumb|Wikisource -Transclusion Inserting images, lists and table of content]]
IIIT-HYDERABAD ನವರು ಆಯೋಜಿಸಿರುವ
ವಿಕಿ ಇಂಟರ್ನ್ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಇಂಟರ್ನ್ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ.
== ಅವಧಿ & ಸಹಾಯ ಪುಟಗಳು ==
* ಮೇ ೦೮, ೨೦೨೬ - ಜೂನ್ ೨೧, ೨೦೨೬
* [[ಸಹಾಯ:ವಿಕಿಸೋರ್ಸ್ ಕೈಪಿಡಿ]]
* [[ಸಹಾಯ:ವಿಕಿಸೋರ್ಸ್ ಪರಿಚಯ]]
* presentations: https://drive.google.com/drive/folders/1fg5OI5f3e9Akd94YUFb1ltE0-pKSWsPp?usp=sharing
== ಭಾಗವಹಿಸುವವರು ==
* Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST)
#--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST)
#--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST)
#[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST)
== ಪಠ್ಯಕ್ರಮ/ಸಾಪ್ತಾಹಿಕ ಕಾರ್ಯಯೋಜನೆಗಳು ==
{| class="wikitable" style="margin: auto;"
! Add or improve data for minimum 50 Writers
! Add or improve data for minimum 50 Books
! Proofread 20 pages
! Upload a assigned PDF
! Create Index Pages
! Upload 5 Index Pages
|}
=== ವಾರ ೧ ===
;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು
* ಈ ಯೋಜನೆಯು ಸಾರ್ವಜನಿಕ ಡೊಮೇನ್ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು.
** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು.
** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು.
** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ.
=== ವಾರ ೨ ===
==== ವಿಕಿಡಾಟ ====
ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true
=== ವಾರ ೩ ===
==== ವಿಕಿಸೋರ್ಸ್ ಫ್ರೂಫ಼್ರೀಡ್ ====
===== ಪುಟದ ಸ್ಥಿತಿ =====
; [[ಸಹಾಯ:ಪುಟದ ಸ್ಥಿತಿಗತಿ]]
{|
|-
| colspan="3" | ಸಂಪಾದನೆ ವಿಂಡೋ ಅಡಿಯಲ್ಲಿ ಈ ಸ್ಥಿತಿಗಳನ್ನು ಸೂಚಿಸುವ ಬಟನ್ಗಳನ್ನು ನೀವು ಕಾಣಬಹುದು. ಹಿಂದಿನ ಕೊಡುಗೆದಾರರು ಈಗಾಗಲೇ ಪುಟವನ್ನು ಪ್ರೂಫ್ ರೀಡ್ ಮಾಡಿದ್ದರೆ, ಅಗ ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ:
|-
|style="width: 33%;" |
|style="width: 33%;" | [[File:Wikisource page proofread buttons.png|200px|left|ಐದು ಗುಂಡಿಗಳು]]
|
|-
| colspan="3" | ಯಾರೂ ಇನ್ನೂ ಪುಟವನ್ನು ಪ್ರೂಫ್ ರೀಡ್ ಮಾಡದಿದ್ದರೆ, ಬಟನ್ಗಳು ಈ ಕೆಳಗಿನಂತೆ ಗೋಚರಿಸುತ್ತವೆ:
|-
|
| [[File:Wikisource page not proofread buttons.png|160px|left|ನಾಲ್ಕು ಗುಂಡಿಗಳು]]
|
|}
{|
|-
|colspan = 2, align=center| ↗ <span style="background-color:#DDD;">ಪಠ್ಯವಿಲ್ಲದ ಪುಟ</span>
|
|-
|<span style="color:#C00000">''ಖಾಲಿ ಪುಟ'' </span>
|→ <span style="background-color: #FFA0A0;">ಪರಿಶೀಲಿಸಲಾಗಿಲ್ಲದ ಪುಟ</span>
|→ <span style="background-color: #FFE867;">ಪರಿಶೀಲಿಸಲಾಗಿರುವ ಪುಟ</span>
|→ <span style="background-color: #90FF90;">ಪ್ರಕಟಿಸಲಾಗಿರುವ ಪುಟ</span>
|-
|
|colspan = 2, align=center| ↘ <span style="background-color: #B0B0FF;">ಸಮಸ್ಯಾಪೂರ್ಣ ಪುಟ</span> ↗
|}
ಪುಟಗಳನ್ನು ಕೆಳಗೆ ತಿಳಿಸಿದ ಹಾಗೆ ವಿಂಗಡಿಸಬೇಕು.
* {{page status text|Not proofread}} ಪೂರ್ವನಿಯೋಜಿತ ಮೌಲ್ಯ ಆಗಿರುತ್ತದೆ. ([[:Category:ಪರಿಶೀಲಿಸಲಾಗಿಲ್ಲ|ಎಲ್ಲಾ ಪುಟಗಳನ್ನು ನೋಡಿ.]])
* {{page status text|Proofread}} ಅಂದರೆ ಒಬ್ಬ ಸಂಪಾದಕ ಪರಿಶೀಲಿಸಿರುವ ಪುಟ. ನೀವು ಪುಟವನ್ನು ಅತ್ಯುತ್ತಮ ಸ್ಥಿತಿಗೆ ತಂದಿರುವಿರಿ ಅಲ್ಲಿ ಪಠ್ಯವು ಸ್ಕ್ಯಾನ್ಗೆ ಹೊಂದಿಕೆಯಾಗುತ್ತದೆ ಮತ್ತು ಮೂಲಭೂತ ಫಾರ್ಮ್ಯಾಟಿಂಗ್ ಮಾಡಲಾಗುತ್ತದೆ, ಮತ್ತು ನೀವು ಅದರೊಂದಿಗೆ ಸಮಂಜಸವಾಗಿ ಪ್ರೂಫ್ರೀಡ್ ಪುಟವು ಓದುಗರಿಗೆ ಪ್ರದರ್ಶಿಸಲು ಸಿದ್ಧಪಡಿಸುವುದು, ಅದರಲ್ಲಿ ಸ್ವಲ್ಪ ದೋಷಗಳಿದ್ದರೂ ಸಹ ಸರಿಪಡಿಸವುದು. ([[:ವರ್ಗ:Proofread|ಎಲ್ಲಾ ಪುಟಗಳನ್ನು ನೋಡಿ.]])
* {{page status text|Validated}} ಅಂದರೆ ಒಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿರುವ ಪುಟ. ಈ ಆಯ್ಕೆ ಪುಟವನ್ನು ಈಗಾಗಲೇ ಮತ್ತೊಬ್ಬರು ಪರಿಶೀಲಿಸಿದ್ದಲ್ಲಿ ಮಾತ್ರ ಲಭ್ಯವಾಗುತ್ತದೆ. ([[:Category:ಪ್ರಕಟಿಸಿದವು|ಎಲ್ಲಾ ಪುಟಗಳನ್ನು ನೋಡಿ.]])
* {{page status text|Without text}} ಖಾಲಿ ಪುಟಗಳಿಗಾಗಿದೆ. ಇದನ್ನು ಚಿತ್ರಗಳಿರುವ ಪುಟಗಳಿಗೆ ಬಳಸುವಂತಿಲ್ಲ. ([[:Category:ಪಠ್ಯವಿಲ್ಲದ್ದು|ಎಲ್ಲಾ ಪುಟಗಳನ್ನು ನೋಡಿ.]])
* {{page status text|Problematic}} ದೋಷಯುಕ್ತ ಸ್ಕ್ಯಾನ್ ಮಾಡಿದ ಪುಟಗಳು ಅಥವಾ ಸಂಪಾದಕರ ನಡುವೆ ಚರ್ಚೆ ಆಗಬೇಕಿರುವುದನ್ನು ಸೂಚಿಸುತ್ತದೆ. ([[:Category:ಸಮಸ್ಯಾಪೂರ್ಣ|ಎಲ್ಲಾ ಪುಟಗಳನ್ನು ನೋಡಿ.]])
ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]]
{| class="wikitable sortable"
! Wikipedia User Name !! Assigned pages !! progress !! reviewer notes
|-
|Vikas shetty14 ||
* [[ಪುಟ:ಯಕ್ಷಗಾನ_ಮಕರಂದ.pdf/೬೬೭]]
* [[ಪುಟ:ಯಕ್ಷಗಾನ_ಮಕರಂದ.pdf/೬೬೮]]
* [[ಪುಟ:ಯಕ್ಷಗಾನ_ಮಕರಂದ.pdf/೬೬೯]]
* [[ಪುಟ:ಯಕ್ಷಗಾನ_ಮಕರಂದ.pdf/೬೭೦]]
* [[ಪುಟ:ಯಕ್ಷಗಾನ_ಮಕರಂದ.pdf/೬೭೧]]
* [[ಪುಟ:ಯಕ್ಷಗಾನ_ಮಕರಂದ.pdf/೬೭೨]]
| {{done}} <!--replace inprogress with {{done}} when proofreading in done-->
| looks ok, please check text thoroughly there were some hyphen, symbols missing from text.
|-
|Viveka B G ||
* [[ಪುಟ:ಯಕ್ಷಗಾನ_ಮಕರಂದ.pdf/೬೭೯]]
* [[ಪುಟ:ಯಕ್ಷಗಾನ_ಮಕರಂದ.pdf/೬೮೦]]
* [[ಪುಟ:ಯಕ್ಷಗಾನ_ಮಕರಂದ.pdf/೬೮೧]]
* [[ಪುಟ:ಯಕ್ಷಗಾನ_ಮಕರಂದ.pdf/೬೮೨]]
* [[ಪುಟ:ಯಕ್ಷಗಾನ_ಮಕರಂದ.pdf/೬೮೩]]
* [[ಪುಟ:ಯಕ್ಷಗಾನ_ಮಕರಂದ.pdf/೬೮೪]]
| {{Done}} <!--replace Done with {{done}} when proofreading in done-->
| Looks good, please use <code>॥ , ।</code> instead of pipe <nowiki>|, ||</nowiki>
|-
|Reema Jalihal ||
* [[ಪುಟ:ಯಕ್ಷಗಾನ_ಮಕರಂದ.pdf/೬೮೫]]
* [[ಪುಟ:ಯಕ್ಷಗಾನ_ಮಕರಂದ.pdf/೬೮೬]]
* [[ಪುಟ:ಯಕ್ಷಗಾನ_ಮಕರಂದ.pdf/೬೮೭]]
* [[ಪುಟ:ಯಕ್ಷಗಾನ_ಮಕರಂದ.pdf/೬೮೮]]
* [[ಪುಟ:ಯಕ್ಷಗಾನ_ಮಕರಂದ.pdf/೬೮೯]]
* [[ಪುಟ:ಯಕ್ಷಗಾನ_ಮಕರಂದ.pdf/೬೯೦]]
| {{done}} <!--replace inprogress with {{done}} when proofreading in done-->
| looks good
|-
|Shyam 2808 ||
* [[ಪುಟ:ಯಕ್ಷಗಾನ_ಮಕರಂದ.pdf/೬೯೧]]
* [[ಪುಟ:ಯಕ್ಷಗಾನ_ಮಕರಂದ.pdf/೬೯೨]]
* [[ಪುಟ:ಯಕ್ಷಗಾನ_ಮಕರಂದ.pdf/೬೯೩]]
* [[ಪುಟ:ಯಕ್ಷಗಾನ_ಮಕರಂದ.pdf/೬೯೪]]
* [[ಪುಟ:ಯಕ್ಷಗಾನ_ಮಕರಂದ.pdf/೬೯೫]]
* [[ಪುಟ:ಯಕ್ಷಗಾನ_ಮಕರಂದ.pdf/೬೯೬]]
| {{Done}} <!--replace inprogress with {{done}} when proofreading in done-->
| looks good
|-
|Nihar Chakravarti ||
* [[ಪುಟ:ಯಕ್ಷಗಾನ_ಮಕರಂದ.pdf/೬೯೭]]
* [[ಪುಟ:ಯಕ್ಷಗಾನ_ಮಕರಂದ.pdf/೬೯೮]]
* [[ಪುಟ:ಯಕ್ಷಗಾನ_ಮಕರಂದ.pdf/೬೯೯]]
* [[ಪುಟ:ಯಕ್ಷಗಾನ_ಮಕರಂದ.pdf/೭೦೦]]
* [[ಪುಟ:ಯಕ್ಷಗಾನ_ಮಕರಂದ.pdf/೭೦೧]]
* [[ಪುಟ:ಯಕ್ಷಗಾನ_ಮಕರಂದ.pdf/೭೦೨]]
| {{Done}} <!--replace inprogress with {{done}} when proofreading in done-->
| look good
|-
|Vaishnu Pilar ||
* [[ಪುಟ:ಯಕ್ಷಗಾನ_ಮಕರಂದ.pdf/೭೦೯]]
* [[ಪುಟ:ಯಕ್ಷಗಾನ_ಮಕರಂದ.pdf/೭೧೦]]
* [[ಪುಟ:ಯಕ್ಷಗಾನ_ಮಕರಂದ.pdf/೭೧೧]]
* [[ಪುಟ:ಯಕ್ಷಗಾನ_ಮಕರಂದ.pdf/೭೧೨]]
* [[ಪುಟ:ಯಕ್ಷಗಾನ_ಮಕರಂದ.pdf/೭೧೩]]
* [[ಪುಟ:ಯಕ್ಷಗಾನ_ಮಕರಂದ.pdf/೭೧೪]]
| {{inprogress}}<!--replace inprogress with {{done}} when proofreading in done-->
|
|}
=== ವಾರ ೪/೫ ===
==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ====
ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]]
{| class="wikitable sortable"
! Wikipedia User Name !! Assigned book title !! progress !! reviewer notes
|-
|Viveka B G ||
* ಬಹದ್ದೂರ್ ಗಂಡ : https://archive.org/details/in.ernet.dli.2015.363366
** ಹಗಲಿರುಳು
** ಸಾಹಿತ್ಯ ಒಂದು ಉಪಾನ್ಯಸ
** ಮುದ್ಧನ ಮಾತು
** ಮದುವೆಯೋ ಮನೆಹಾಳೋ
** ಉಮರನ ಒಸಗೆ
| {{inprogress}} <!--replace inprogress with {{done}} when proofreading in done-->
| https://kn.wikisource.org/w/index.php?title=ಪುಟ:ಬಹದ್ದೂರ_ಗಂಡ.pdf/೧೭&diff=324890&oldid=324729 , please ಂ (control + m in lipyantara) in words instead of o/0
|-
|Reema Jalihal ||
* ಚಂದ್ರನಾಥ : https://archive.org/details/Chandranaatha-1944/
** 900_Vaddaradhane_Kannada.pdf
** 990_Chandombhudhi_Kannada.pdf
** 1900_Nandagokula_Kannada.pdf
** 1900_Vijayalakshmi_Kannada.pdf
** 1880_Srikrishna_Charitra_Kannada.pdf
| {{inprogress}} <!--replace inprogress with {{done}} when proofreading in done-->
|Transcribing looks ok, please kannada number in page number field instead of english numbers, It would be nice if you had worked on [[Index:ಚಂದ್ರನಾಥ.pdf]]
|-
|Shyam 2808 ||
* ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673
** Harikathamruthasaara Vol-1 ಹರಿಕಥಾಮೃತಸಾರ ಸಂಪುಟ ೧
** Harikathamruthasaara Vol-2 ಹರಿಕಥಾಮೃತಸಾರ ಸಂಪುಟ ೨
** Harikathamruthasaara Vol-3 ಹರಿಕಥಾಮೃತಸಾರ ಸಂಪುಟ ೩
** Akkaji
** Sati Viraj ಸತಿ ವಿರಾಜ
| {{inprogress}} <!--replace inprogress with {{done}} when proofreading in done-->
|
;'''Week5 (20 pages)''':pages (1-5, 7-8) without any or irrelavent text should be marked as '''without text''' , always Join lines in paragraph & when line are joined in a paragraph broken words should be joined [[special:diff/324684|for example ಸರಳು ಗಳಿಗೆ , should be joined as ಸರಳುಗಳಿಗೆ]] , use {{t|rh}} where you need to use both [[special:diff/324685|left and right text alignments]]
|-
|Nihar Chakravarti || ಚಿತ್ರಕೂಟ : https://archive.org/details/Chitrakuuta-1954
* 18990101_IndiraBai_Kannada_PDF.pdf
* 19050101_ChikkaDevarajaBinnapamVyakhya_Kannada_PDF.pdf
* 19170101_KarnatakaGathaVaibhava_Kannada_PDF.pdf
* 19200101_KannadaSahityaParishatPatrike_Kannada_PDF.pdf
* 19240101_KotiChennaya_Kannada_PDF.pdf
| {{inprogress}} <!--replace inprogress with {{done}} when proofreading in done-->
|
;'''Week5 (20 pages)''': when line are joined in a paragraph broken words should be joined, example [[special:diff/324883]]
|-
|Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937
| {{inprogress}} <!--replace inprogress with {{done}} when proofreading in done-->
|
|-
|Vikas shetty14 || ರಂಗನಾಯಕಿ : https://archive.org/details/Ranganaayaki-Maale-1953
| {{inprogress}} <!--replace inprogress with {{done}} when proofreading in done-->
|
|}
[[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]]
fwofq8lv73s99k6b7g9xu35z8xowxvq
324907
324906
2026-06-16T15:43:52Z
A826
6806
/* ವಿಕಿಸೋರ್ಸ್ ಪುಸ್ತಕ ಅಪ್ಲೋಡ್ */
324907
wikitext
text/x-wiki
[[File:Kannada Wikisource Workflow.svg|thumb|Kannada Wikisource Workflow]]
[[File:Open refine workflow in Kannada Language.svg|thumb|Open refine workflow in Kannada Language]]
[[File:Wikisource -Transclusion Inserting images, lists and table of content.pdf|thumb|Wikisource -Transclusion Inserting images, lists and table of content]]
IIIT-HYDERABAD ನವರು ಆಯೋಜಿಸಿರುವ
ವಿಕಿ ಇಂಟರ್ನ್ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಇಂಟರ್ನ್ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ.
== ಅವಧಿ & ಸಹಾಯ ಪುಟಗಳು ==
* ಮೇ ೦೮, ೨೦೨೬ - ಜೂನ್ ೨೧, ೨೦೨೬
* [[ಸಹಾಯ:ವಿಕಿಸೋರ್ಸ್ ಕೈಪಿಡಿ]]
* [[ಸಹಾಯ:ವಿಕಿಸೋರ್ಸ್ ಪರಿಚಯ]]
* presentations: https://drive.google.com/drive/folders/1fg5OI5f3e9Akd94YUFb1ltE0-pKSWsPp?usp=sharing
== ಭಾಗವಹಿಸುವವರು ==
* Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST)
#--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST)
#--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST)
#[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST)
== ಪಠ್ಯಕ್ರಮ/ಸಾಪ್ತಾಹಿಕ ಕಾರ್ಯಯೋಜನೆಗಳು ==
{| class="wikitable" style="margin: auto;"
! Add or improve data for minimum 50 Writers
! Add or improve data for minimum 50 Books
! Proofread 20 pages
! Upload a assigned PDF
! Create Index Pages
! Upload 5 Index Pages
|}
=== ವಾರ ೧ ===
;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು
* ಈ ಯೋಜನೆಯು ಸಾರ್ವಜನಿಕ ಡೊಮೇನ್ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು.
** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು.
** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು.
** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ.
=== ವಾರ ೨ ===
==== ವಿಕಿಡಾಟ ====
ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true
=== ವಾರ ೩ ===
==== ವಿಕಿಸೋರ್ಸ್ ಫ್ರೂಫ಼್ರೀಡ್ ====
===== ಪುಟದ ಸ್ಥಿತಿ =====
; [[ಸಹಾಯ:ಪುಟದ ಸ್ಥಿತಿಗತಿ]]
{|
|-
| colspan="3" | ಸಂಪಾದನೆ ವಿಂಡೋ ಅಡಿಯಲ್ಲಿ ಈ ಸ್ಥಿತಿಗಳನ್ನು ಸೂಚಿಸುವ ಬಟನ್ಗಳನ್ನು ನೀವು ಕಾಣಬಹುದು. ಹಿಂದಿನ ಕೊಡುಗೆದಾರರು ಈಗಾಗಲೇ ಪುಟವನ್ನು ಪ್ರೂಫ್ ರೀಡ್ ಮಾಡಿದ್ದರೆ, ಅಗ ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ:
|-
|style="width: 33%;" |
|style="width: 33%;" | [[File:Wikisource page proofread buttons.png|200px|left|ಐದು ಗುಂಡಿಗಳು]]
|
|-
| colspan="3" | ಯಾರೂ ಇನ್ನೂ ಪುಟವನ್ನು ಪ್ರೂಫ್ ರೀಡ್ ಮಾಡದಿದ್ದರೆ, ಬಟನ್ಗಳು ಈ ಕೆಳಗಿನಂತೆ ಗೋಚರಿಸುತ್ತವೆ:
|-
|
| [[File:Wikisource page not proofread buttons.png|160px|left|ನಾಲ್ಕು ಗುಂಡಿಗಳು]]
|
|}
{|
|-
|colspan = 2, align=center| ↗ <span style="background-color:#DDD;">ಪಠ್ಯವಿಲ್ಲದ ಪುಟ</span>
|
|-
|<span style="color:#C00000">''ಖಾಲಿ ಪುಟ'' </span>
|→ <span style="background-color: #FFA0A0;">ಪರಿಶೀಲಿಸಲಾಗಿಲ್ಲದ ಪುಟ</span>
|→ <span style="background-color: #FFE867;">ಪರಿಶೀಲಿಸಲಾಗಿರುವ ಪುಟ</span>
|→ <span style="background-color: #90FF90;">ಪ್ರಕಟಿಸಲಾಗಿರುವ ಪುಟ</span>
|-
|
|colspan = 2, align=center| ↘ <span style="background-color: #B0B0FF;">ಸಮಸ್ಯಾಪೂರ್ಣ ಪುಟ</span> ↗
|}
ಪುಟಗಳನ್ನು ಕೆಳಗೆ ತಿಳಿಸಿದ ಹಾಗೆ ವಿಂಗಡಿಸಬೇಕು.
* {{page status text|Not proofread}} ಪೂರ್ವನಿಯೋಜಿತ ಮೌಲ್ಯ ಆಗಿರುತ್ತದೆ. ([[:Category:ಪರಿಶೀಲಿಸಲಾಗಿಲ್ಲ|ಎಲ್ಲಾ ಪುಟಗಳನ್ನು ನೋಡಿ.]])
* {{page status text|Proofread}} ಅಂದರೆ ಒಬ್ಬ ಸಂಪಾದಕ ಪರಿಶೀಲಿಸಿರುವ ಪುಟ. ನೀವು ಪುಟವನ್ನು ಅತ್ಯುತ್ತಮ ಸ್ಥಿತಿಗೆ ತಂದಿರುವಿರಿ ಅಲ್ಲಿ ಪಠ್ಯವು ಸ್ಕ್ಯಾನ್ಗೆ ಹೊಂದಿಕೆಯಾಗುತ್ತದೆ ಮತ್ತು ಮೂಲಭೂತ ಫಾರ್ಮ್ಯಾಟಿಂಗ್ ಮಾಡಲಾಗುತ್ತದೆ, ಮತ್ತು ನೀವು ಅದರೊಂದಿಗೆ ಸಮಂಜಸವಾಗಿ ಪ್ರೂಫ್ರೀಡ್ ಪುಟವು ಓದುಗರಿಗೆ ಪ್ರದರ್ಶಿಸಲು ಸಿದ್ಧಪಡಿಸುವುದು, ಅದರಲ್ಲಿ ಸ್ವಲ್ಪ ದೋಷಗಳಿದ್ದರೂ ಸಹ ಸರಿಪಡಿಸವುದು. ([[:ವರ್ಗ:Proofread|ಎಲ್ಲಾ ಪುಟಗಳನ್ನು ನೋಡಿ.]])
* {{page status text|Validated}} ಅಂದರೆ ಒಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿರುವ ಪುಟ. ಈ ಆಯ್ಕೆ ಪುಟವನ್ನು ಈಗಾಗಲೇ ಮತ್ತೊಬ್ಬರು ಪರಿಶೀಲಿಸಿದ್ದಲ್ಲಿ ಮಾತ್ರ ಲಭ್ಯವಾಗುತ್ತದೆ. ([[:Category:ಪ್ರಕಟಿಸಿದವು|ಎಲ್ಲಾ ಪುಟಗಳನ್ನು ನೋಡಿ.]])
* {{page status text|Without text}} ಖಾಲಿ ಪುಟಗಳಿಗಾಗಿದೆ. ಇದನ್ನು ಚಿತ್ರಗಳಿರುವ ಪುಟಗಳಿಗೆ ಬಳಸುವಂತಿಲ್ಲ. ([[:Category:ಪಠ್ಯವಿಲ್ಲದ್ದು|ಎಲ್ಲಾ ಪುಟಗಳನ್ನು ನೋಡಿ.]])
* {{page status text|Problematic}} ದೋಷಯುಕ್ತ ಸ್ಕ್ಯಾನ್ ಮಾಡಿದ ಪುಟಗಳು ಅಥವಾ ಸಂಪಾದಕರ ನಡುವೆ ಚರ್ಚೆ ಆಗಬೇಕಿರುವುದನ್ನು ಸೂಚಿಸುತ್ತದೆ. ([[:Category:ಸಮಸ್ಯಾಪೂರ್ಣ|ಎಲ್ಲಾ ಪುಟಗಳನ್ನು ನೋಡಿ.]])
ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]]
{| class="wikitable sortable"
! Wikipedia User Name !! Assigned pages !! progress !! reviewer notes
|-
|Vikas shetty14 ||
* [[ಪುಟ:ಯಕ್ಷಗಾನ_ಮಕರಂದ.pdf/೬೬೭]]
* [[ಪುಟ:ಯಕ್ಷಗಾನ_ಮಕರಂದ.pdf/೬೬೮]]
* [[ಪುಟ:ಯಕ್ಷಗಾನ_ಮಕರಂದ.pdf/೬೬೯]]
* [[ಪುಟ:ಯಕ್ಷಗಾನ_ಮಕರಂದ.pdf/೬೭೦]]
* [[ಪುಟ:ಯಕ್ಷಗಾನ_ಮಕರಂದ.pdf/೬೭೧]]
* [[ಪುಟ:ಯಕ್ಷಗಾನ_ಮಕರಂದ.pdf/೬೭೨]]
| {{done}} <!--replace inprogress with {{done}} when proofreading in done-->
| looks ok, please check text thoroughly there were some hyphen, symbols missing from text.
|-
|Viveka B G ||
* [[ಪುಟ:ಯಕ್ಷಗಾನ_ಮಕರಂದ.pdf/೬೭೯]]
* [[ಪುಟ:ಯಕ್ಷಗಾನ_ಮಕರಂದ.pdf/೬೮೦]]
* [[ಪುಟ:ಯಕ್ಷಗಾನ_ಮಕರಂದ.pdf/೬೮೧]]
* [[ಪುಟ:ಯಕ್ಷಗಾನ_ಮಕರಂದ.pdf/೬೮೨]]
* [[ಪುಟ:ಯಕ್ಷಗಾನ_ಮಕರಂದ.pdf/೬೮೩]]
* [[ಪುಟ:ಯಕ್ಷಗಾನ_ಮಕರಂದ.pdf/೬೮೪]]
| {{Done}} <!--replace Done with {{done}} when proofreading in done-->
| Looks good, please use <code>॥ , ।</code> instead of pipe <nowiki>|, ||</nowiki>
|-
|Reema Jalihal ||
* [[ಪುಟ:ಯಕ್ಷಗಾನ_ಮಕರಂದ.pdf/೬೮೫]]
* [[ಪುಟ:ಯಕ್ಷಗಾನ_ಮಕರಂದ.pdf/೬೮೬]]
* [[ಪುಟ:ಯಕ್ಷಗಾನ_ಮಕರಂದ.pdf/೬೮೭]]
* [[ಪುಟ:ಯಕ್ಷಗಾನ_ಮಕರಂದ.pdf/೬೮೮]]
* [[ಪುಟ:ಯಕ್ಷಗಾನ_ಮಕರಂದ.pdf/೬೮೯]]
* [[ಪುಟ:ಯಕ್ಷಗಾನ_ಮಕರಂದ.pdf/೬೯೦]]
| {{done}} <!--replace inprogress with {{done}} when proofreading in done-->
| looks good
|-
|Shyam 2808 ||
* [[ಪುಟ:ಯಕ್ಷಗಾನ_ಮಕರಂದ.pdf/೬೯೧]]
* [[ಪುಟ:ಯಕ್ಷಗಾನ_ಮಕರಂದ.pdf/೬೯೨]]
* [[ಪುಟ:ಯಕ್ಷಗಾನ_ಮಕರಂದ.pdf/೬೯೩]]
* [[ಪುಟ:ಯಕ್ಷಗಾನ_ಮಕರಂದ.pdf/೬೯೪]]
* [[ಪುಟ:ಯಕ್ಷಗಾನ_ಮಕರಂದ.pdf/೬೯೫]]
* [[ಪುಟ:ಯಕ್ಷಗಾನ_ಮಕರಂದ.pdf/೬೯೬]]
| {{Done}} <!--replace inprogress with {{done}} when proofreading in done-->
| looks good
|-
|Nihar Chakravarti ||
* [[ಪುಟ:ಯಕ್ಷಗಾನ_ಮಕರಂದ.pdf/೬೯೭]]
* [[ಪುಟ:ಯಕ್ಷಗಾನ_ಮಕರಂದ.pdf/೬೯೮]]
* [[ಪುಟ:ಯಕ್ಷಗಾನ_ಮಕರಂದ.pdf/೬೯೯]]
* [[ಪುಟ:ಯಕ್ಷಗಾನ_ಮಕರಂದ.pdf/೭೦೦]]
* [[ಪುಟ:ಯಕ್ಷಗಾನ_ಮಕರಂದ.pdf/೭೦೧]]
* [[ಪುಟ:ಯಕ್ಷಗಾನ_ಮಕರಂದ.pdf/೭೦೨]]
| {{Done}} <!--replace inprogress with {{done}} when proofreading in done-->
| look good
|-
|Vaishnu Pilar ||
* [[ಪುಟ:ಯಕ್ಷಗಾನ_ಮಕರಂದ.pdf/೭೦೯]]
* [[ಪುಟ:ಯಕ್ಷಗಾನ_ಮಕರಂದ.pdf/೭೧೦]]
* [[ಪುಟ:ಯಕ್ಷಗಾನ_ಮಕರಂದ.pdf/೭೧೧]]
* [[ಪುಟ:ಯಕ್ಷಗಾನ_ಮಕರಂದ.pdf/೭೧೨]]
* [[ಪುಟ:ಯಕ್ಷಗಾನ_ಮಕರಂದ.pdf/೭೧೩]]
* [[ಪುಟ:ಯಕ್ಷಗಾನ_ಮಕರಂದ.pdf/೭೧೪]]
| {{inprogress}}<!--replace inprogress with {{done}} when proofreading in done-->
|
|}
=== ವಾರ ೪/೫ ===
==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ====
ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]]
{| class="wikitable sortable"
! Wikipedia User Name !! Assigned book title !! progress !! reviewer notes
|-
|Viveka B G ||
* ಬಹದ್ದೂರ್ ಗಂಡ : https://archive.org/details/in.ernet.dli.2015.363366
** ಹಗಲಿರುಳು
** ಸಾಹಿತ್ಯ ಒಂದು ಉಪಾನ್ಯಸ
** ಮುದ್ಧನ ಮಾತು
** ಮದುವೆಯೋ ಮನೆಹಾಳೋ
** ಭಾಗ್ಯೋದಯ
| {{inprogress}} <!--replace inprogress with {{done}} when proofreading in done-->
| https://kn.wikisource.org/w/index.php?title=ಪುಟ:ಬಹದ್ದೂರ_ಗಂಡ.pdf/೧೭&diff=324890&oldid=324729 , please ಂ (control + m in lipyantara) in words instead of o/0
|-
|Reema Jalihal ||
* ಚಂದ್ರನಾಥ : https://archive.org/details/Chandranaatha-1944/
** 900_Vaddaradhane_Kannada.pdf
** 990_Chandombhudhi_Kannada.pdf
** 1900_Nandagokula_Kannada.pdf
** 1900_Vijayalakshmi_Kannada.pdf
** 1880_Srikrishna_Charitra_Kannada.pdf
| {{inprogress}} <!--replace inprogress with {{done}} when proofreading in done-->
|Transcribing looks ok, please kannada number in page number field instead of english numbers, It would be nice if you had worked on [[Index:ಚಂದ್ರನಾಥ.pdf]]
|-
|Shyam 2808 ||
* ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673
** Harikathamruthasaara Vol-1 ಹರಿಕಥಾಮೃತಸಾರ ಸಂಪುಟ ೧
** Harikathamruthasaara Vol-2 ಹರಿಕಥಾಮೃತಸಾರ ಸಂಪುಟ ೨
** Harikathamruthasaara Vol-3 ಹರಿಕಥಾಮೃತಸಾರ ಸಂಪುಟ ೩
** Akkaji
** Sati Viraj ಸತಿ ವಿರಾಜ
| {{inprogress}} <!--replace inprogress with {{done}} when proofreading in done-->
|
;'''Week5 (20 pages)''':pages (1-5, 7-8) without any or irrelavent text should be marked as '''without text''' , always Join lines in paragraph & when line are joined in a paragraph broken words should be joined [[special:diff/324684|for example ಸರಳು ಗಳಿಗೆ , should be joined as ಸರಳುಗಳಿಗೆ]] , use {{t|rh}} where you need to use both [[special:diff/324685|left and right text alignments]]
|-
|Nihar Chakravarti || ಚಿತ್ರಕೂಟ : https://archive.org/details/Chitrakuuta-1954
* 18990101_IndiraBai_Kannada_PDF.pdf
* 19050101_ChikkaDevarajaBinnapamVyakhya_Kannada_PDF.pdf
* 19170101_KarnatakaGathaVaibhava_Kannada_PDF.pdf
* 19200101_KannadaSahityaParishatPatrike_Kannada_PDF.pdf
* 19240101_KotiChennaya_Kannada_PDF.pdf
| {{inprogress}} <!--replace inprogress with {{done}} when proofreading in done-->
|
;'''Week5 (20 pages)''': when line are joined in a paragraph broken words should be joined, example [[special:diff/324883]]
|-
|Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937
| {{inprogress}} <!--replace inprogress with {{done}} when proofreading in done-->
|
|-
|Vikas shetty14 || ರಂಗನಾಯಕಿ : https://archive.org/details/Ranganaayaki-Maale-1953
| {{inprogress}} <!--replace inprogress with {{done}} when proofreading in done-->
|
|}
[[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]]
s5tv5vts39q2363xvt3julq0zm6wxk1
324908
324907
2026-06-16T15:44:26Z
A826
6806
/* ವಿಕಿಸೋರ್ಸ್ ಪುಸ್ತಕ ಅಪ್ಲೋಡ್ */
324908
wikitext
text/x-wiki
[[File:Kannada Wikisource Workflow.svg|thumb|Kannada Wikisource Workflow]]
[[File:Open refine workflow in Kannada Language.svg|thumb|Open refine workflow in Kannada Language]]
[[File:Wikisource -Transclusion Inserting images, lists and table of content.pdf|thumb|Wikisource -Transclusion Inserting images, lists and table of content]]
IIIT-HYDERABAD ನವರು ಆಯೋಜಿಸಿರುವ
ವಿಕಿ ಇಂಟರ್ನ್ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಇಂಟರ್ನ್ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ.
== ಅವಧಿ & ಸಹಾಯ ಪುಟಗಳು ==
* ಮೇ ೦೮, ೨೦೨೬ - ಜೂನ್ ೨೧, ೨೦೨೬
* [[ಸಹಾಯ:ವಿಕಿಸೋರ್ಸ್ ಕೈಪಿಡಿ]]
* [[ಸಹಾಯ:ವಿಕಿಸೋರ್ಸ್ ಪರಿಚಯ]]
* presentations: https://drive.google.com/drive/folders/1fg5OI5f3e9Akd94YUFb1ltE0-pKSWsPp?usp=sharing
== ಭಾಗವಹಿಸುವವರು ==
* Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST)
#--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST)
#--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST)
#[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST)
== ಪಠ್ಯಕ್ರಮ/ಸಾಪ್ತಾಹಿಕ ಕಾರ್ಯಯೋಜನೆಗಳು ==
{| class="wikitable" style="margin: auto;"
! Add or improve data for minimum 50 Writers
! Add or improve data for minimum 50 Books
! Proofread 20 pages
! Upload a assigned PDF
! Create Index Pages
! Upload 5 Index Pages
|}
=== ವಾರ ೧ ===
;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು
* ಈ ಯೋಜನೆಯು ಸಾರ್ವಜನಿಕ ಡೊಮೇನ್ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು.
** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು.
** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು.
** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ.
=== ವಾರ ೨ ===
==== ವಿಕಿಡಾಟ ====
ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true
=== ವಾರ ೩ ===
==== ವಿಕಿಸೋರ್ಸ್ ಫ್ರೂಫ಼್ರೀಡ್ ====
===== ಪುಟದ ಸ್ಥಿತಿ =====
; [[ಸಹಾಯ:ಪುಟದ ಸ್ಥಿತಿಗತಿ]]
{|
|-
| colspan="3" | ಸಂಪಾದನೆ ವಿಂಡೋ ಅಡಿಯಲ್ಲಿ ಈ ಸ್ಥಿತಿಗಳನ್ನು ಸೂಚಿಸುವ ಬಟನ್ಗಳನ್ನು ನೀವು ಕಾಣಬಹುದು. ಹಿಂದಿನ ಕೊಡುಗೆದಾರರು ಈಗಾಗಲೇ ಪುಟವನ್ನು ಪ್ರೂಫ್ ರೀಡ್ ಮಾಡಿದ್ದರೆ, ಅಗ ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ:
|-
|style="width: 33%;" |
|style="width: 33%;" | [[File:Wikisource page proofread buttons.png|200px|left|ಐದು ಗುಂಡಿಗಳು]]
|
|-
| colspan="3" | ಯಾರೂ ಇನ್ನೂ ಪುಟವನ್ನು ಪ್ರೂಫ್ ರೀಡ್ ಮಾಡದಿದ್ದರೆ, ಬಟನ್ಗಳು ಈ ಕೆಳಗಿನಂತೆ ಗೋಚರಿಸುತ್ತವೆ:
|-
|
| [[File:Wikisource page not proofread buttons.png|160px|left|ನಾಲ್ಕು ಗುಂಡಿಗಳು]]
|
|}
{|
|-
|colspan = 2, align=center| ↗ <span style="background-color:#DDD;">ಪಠ್ಯವಿಲ್ಲದ ಪುಟ</span>
|
|-
|<span style="color:#C00000">''ಖಾಲಿ ಪುಟ'' </span>
|→ <span style="background-color: #FFA0A0;">ಪರಿಶೀಲಿಸಲಾಗಿಲ್ಲದ ಪುಟ</span>
|→ <span style="background-color: #FFE867;">ಪರಿಶೀಲಿಸಲಾಗಿರುವ ಪುಟ</span>
|→ <span style="background-color: #90FF90;">ಪ್ರಕಟಿಸಲಾಗಿರುವ ಪುಟ</span>
|-
|
|colspan = 2, align=center| ↘ <span style="background-color: #B0B0FF;">ಸಮಸ್ಯಾಪೂರ್ಣ ಪುಟ</span> ↗
|}
ಪುಟಗಳನ್ನು ಕೆಳಗೆ ತಿಳಿಸಿದ ಹಾಗೆ ವಿಂಗಡಿಸಬೇಕು.
* {{page status text|Not proofread}} ಪೂರ್ವನಿಯೋಜಿತ ಮೌಲ್ಯ ಆಗಿರುತ್ತದೆ. ([[:Category:ಪರಿಶೀಲಿಸಲಾಗಿಲ್ಲ|ಎಲ್ಲಾ ಪುಟಗಳನ್ನು ನೋಡಿ.]])
* {{page status text|Proofread}} ಅಂದರೆ ಒಬ್ಬ ಸಂಪಾದಕ ಪರಿಶೀಲಿಸಿರುವ ಪುಟ. ನೀವು ಪುಟವನ್ನು ಅತ್ಯುತ್ತಮ ಸ್ಥಿತಿಗೆ ತಂದಿರುವಿರಿ ಅಲ್ಲಿ ಪಠ್ಯವು ಸ್ಕ್ಯಾನ್ಗೆ ಹೊಂದಿಕೆಯಾಗುತ್ತದೆ ಮತ್ತು ಮೂಲಭೂತ ಫಾರ್ಮ್ಯಾಟಿಂಗ್ ಮಾಡಲಾಗುತ್ತದೆ, ಮತ್ತು ನೀವು ಅದರೊಂದಿಗೆ ಸಮಂಜಸವಾಗಿ ಪ್ರೂಫ್ರೀಡ್ ಪುಟವು ಓದುಗರಿಗೆ ಪ್ರದರ್ಶಿಸಲು ಸಿದ್ಧಪಡಿಸುವುದು, ಅದರಲ್ಲಿ ಸ್ವಲ್ಪ ದೋಷಗಳಿದ್ದರೂ ಸಹ ಸರಿಪಡಿಸವುದು. ([[:ವರ್ಗ:Proofread|ಎಲ್ಲಾ ಪುಟಗಳನ್ನು ನೋಡಿ.]])
* {{page status text|Validated}} ಅಂದರೆ ಒಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿರುವ ಪುಟ. ಈ ಆಯ್ಕೆ ಪುಟವನ್ನು ಈಗಾಗಲೇ ಮತ್ತೊಬ್ಬರು ಪರಿಶೀಲಿಸಿದ್ದಲ್ಲಿ ಮಾತ್ರ ಲಭ್ಯವಾಗುತ್ತದೆ. ([[:Category:ಪ್ರಕಟಿಸಿದವು|ಎಲ್ಲಾ ಪುಟಗಳನ್ನು ನೋಡಿ.]])
* {{page status text|Without text}} ಖಾಲಿ ಪುಟಗಳಿಗಾಗಿದೆ. ಇದನ್ನು ಚಿತ್ರಗಳಿರುವ ಪುಟಗಳಿಗೆ ಬಳಸುವಂತಿಲ್ಲ. ([[:Category:ಪಠ್ಯವಿಲ್ಲದ್ದು|ಎಲ್ಲಾ ಪುಟಗಳನ್ನು ನೋಡಿ.]])
* {{page status text|Problematic}} ದೋಷಯುಕ್ತ ಸ್ಕ್ಯಾನ್ ಮಾಡಿದ ಪುಟಗಳು ಅಥವಾ ಸಂಪಾದಕರ ನಡುವೆ ಚರ್ಚೆ ಆಗಬೇಕಿರುವುದನ್ನು ಸೂಚಿಸುತ್ತದೆ. ([[:Category:ಸಮಸ್ಯಾಪೂರ್ಣ|ಎಲ್ಲಾ ಪುಟಗಳನ್ನು ನೋಡಿ.]])
ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]]
{| class="wikitable sortable"
! Wikipedia User Name !! Assigned pages !! progress !! reviewer notes
|-
|Vikas shetty14 ||
* [[ಪುಟ:ಯಕ್ಷಗಾನ_ಮಕರಂದ.pdf/೬೬೭]]
* [[ಪುಟ:ಯಕ್ಷಗಾನ_ಮಕರಂದ.pdf/೬೬೮]]
* [[ಪುಟ:ಯಕ್ಷಗಾನ_ಮಕರಂದ.pdf/೬೬೯]]
* [[ಪುಟ:ಯಕ್ಷಗಾನ_ಮಕರಂದ.pdf/೬೭೦]]
* [[ಪುಟ:ಯಕ್ಷಗಾನ_ಮಕರಂದ.pdf/೬೭೧]]
* [[ಪುಟ:ಯಕ್ಷಗಾನ_ಮಕರಂದ.pdf/೬೭೨]]
| {{done}} <!--replace inprogress with {{done}} when proofreading in done-->
| looks ok, please check text thoroughly there were some hyphen, symbols missing from text.
|-
|Viveka B G ||
* [[ಪುಟ:ಯಕ್ಷಗಾನ_ಮಕರಂದ.pdf/೬೭೯]]
* [[ಪುಟ:ಯಕ್ಷಗಾನ_ಮಕರಂದ.pdf/೬೮೦]]
* [[ಪುಟ:ಯಕ್ಷಗಾನ_ಮಕರಂದ.pdf/೬೮೧]]
* [[ಪುಟ:ಯಕ್ಷಗಾನ_ಮಕರಂದ.pdf/೬೮೨]]
* [[ಪುಟ:ಯಕ್ಷಗಾನ_ಮಕರಂದ.pdf/೬೮೩]]
* [[ಪುಟ:ಯಕ್ಷಗಾನ_ಮಕರಂದ.pdf/೬೮೪]]
| {{Done}} <!--replace Done with {{done}} when proofreading in done-->
| Looks good, please use <code>॥ , ।</code> instead of pipe <nowiki>|, ||</nowiki>
|-
|Reema Jalihal ||
* [[ಪುಟ:ಯಕ್ಷಗಾನ_ಮಕರಂದ.pdf/೬೮೫]]
* [[ಪುಟ:ಯಕ್ಷಗಾನ_ಮಕರಂದ.pdf/೬೮೬]]
* [[ಪುಟ:ಯಕ್ಷಗಾನ_ಮಕರಂದ.pdf/೬೮೭]]
* [[ಪುಟ:ಯಕ್ಷಗಾನ_ಮಕರಂದ.pdf/೬೮೮]]
* [[ಪುಟ:ಯಕ್ಷಗಾನ_ಮಕರಂದ.pdf/೬೮೯]]
* [[ಪುಟ:ಯಕ್ಷಗಾನ_ಮಕರಂದ.pdf/೬೯೦]]
| {{done}} <!--replace inprogress with {{done}} when proofreading in done-->
| looks good
|-
|Shyam 2808 ||
* [[ಪುಟ:ಯಕ್ಷಗಾನ_ಮಕರಂದ.pdf/೬೯೧]]
* [[ಪುಟ:ಯಕ್ಷಗಾನ_ಮಕರಂದ.pdf/೬೯೨]]
* [[ಪುಟ:ಯಕ್ಷಗಾನ_ಮಕರಂದ.pdf/೬೯೩]]
* [[ಪುಟ:ಯಕ್ಷಗಾನ_ಮಕರಂದ.pdf/೬೯೪]]
* [[ಪುಟ:ಯಕ್ಷಗಾನ_ಮಕರಂದ.pdf/೬೯೫]]
* [[ಪುಟ:ಯಕ್ಷಗಾನ_ಮಕರಂದ.pdf/೬೯೬]]
| {{Done}} <!--replace inprogress with {{done}} when proofreading in done-->
| looks good
|-
|Nihar Chakravarti ||
* [[ಪುಟ:ಯಕ್ಷಗಾನ_ಮಕರಂದ.pdf/೬೯೭]]
* [[ಪುಟ:ಯಕ್ಷಗಾನ_ಮಕರಂದ.pdf/೬೯೮]]
* [[ಪುಟ:ಯಕ್ಷಗಾನ_ಮಕರಂದ.pdf/೬೯೯]]
* [[ಪುಟ:ಯಕ್ಷಗಾನ_ಮಕರಂದ.pdf/೭೦೦]]
* [[ಪುಟ:ಯಕ್ಷಗಾನ_ಮಕರಂದ.pdf/೭೦೧]]
* [[ಪುಟ:ಯಕ್ಷಗಾನ_ಮಕರಂದ.pdf/೭೦೨]]
| {{Done}} <!--replace inprogress with {{done}} when proofreading in done-->
| look good
|-
|Vaishnu Pilar ||
* [[ಪುಟ:ಯಕ್ಷಗಾನ_ಮಕರಂದ.pdf/೭೦೯]]
* [[ಪುಟ:ಯಕ್ಷಗಾನ_ಮಕರಂದ.pdf/೭೧೦]]
* [[ಪುಟ:ಯಕ್ಷಗಾನ_ಮಕರಂದ.pdf/೭೧೧]]
* [[ಪುಟ:ಯಕ್ಷಗಾನ_ಮಕರಂದ.pdf/೭೧೨]]
* [[ಪುಟ:ಯಕ್ಷಗಾನ_ಮಕರಂದ.pdf/೭೧೩]]
* [[ಪುಟ:ಯಕ್ಷಗಾನ_ಮಕರಂದ.pdf/೭೧೪]]
| {{inprogress}}<!--replace inprogress with {{done}} when proofreading in done-->
|
|}
=== ವಾರ ೪/೫ ===
==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ====
ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]]
{| class="wikitable sortable"
! Wikipedia User Name !! Assigned book title !! progress !! reviewer notes
|-
|Viveka B G ||
* ಬಹದ್ದೂರ್ ಗಂಡ : https://archive.org/details/in.ernet.dli.2015.363366
** ಹಗಲಿರುಳು
** ಸಾಹಿತ್ಯ ಒಂದು ಉಪಾನ್ಯಸ
** ಮುದ್ಧನ ಮಾತು
** ಮದುವೆಯೋ ಮನೆಹಾಳೋ
** ಭಾಗ್ಯೋದಯ
| {{inprogress}} <!--replace inprogress with {{done}} when proofreading in done-->
| https://kn.wikisource.org/w/index.php?title=ಪುಟ:ಬಹದ್ದೂರ_ಗಂಡ.pdf/೧೭&diff=324890&oldid=324729 , please ಂ (control + m in lipyantara) in words instead of o/0
|-
|Reema Jalihal ||
* ಚಂದ್ರನಾಥ : https://archive.org/details/Chandranaatha-1944/
** 900_Vaddaradhane_Kannada.pdf
** 990_Chandombhudhi_Kannada.pdf
** 1900_Nandagokula_Kannada.pdf
** 1900_Vijayalakshmi_Kannada.pdf
** 1880_Srikrishna_Charitra_Kannada.pdf
| {{inprogress}} <!--replace inprogress with {{done}} when proofreading in done-->
|Transcribing looks ok, please kannada number in page number field instead of english numbers, It would be nice if you had worked on [[Index:ಚಂದ್ರನಾಥ.pdf]]
|-
|Shyam 2808 ||
* ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673
** Harikathamruthasaara Vol-1 ಹರಿಕಥಾಮೃತಸಾರ ಸಂಪುಟ ೧
** Harikathamruthasaara Vol-2 ಹರಿಕಥಾಮೃತಸಾರ ಸಂಪುಟ ೨
** Harikathamruthasaara Vol-3 ಹರಿಕಥಾಮೃತಸಾರ ಸಂಪುಟ ೩
** Akkaji
** Sati Viraj ಸತಿ ವಿರಾಜ
| {{inprogress}} <!--replace inprogress with {{done}} when proofreading in done-->
|
pages (1-5, 7-8) without any or irrelavent text should be marked as '''without text''' , always Join lines in paragraph & when line are joined in a paragraph broken words should be joined [[special:diff/324684|for example ಸರಳು ಗಳಿಗೆ , should be joined as ಸರಳುಗಳಿಗೆ]] , use {{t|rh}} where you need to use both [[special:diff/324685|left and right text alignments]]
|-
|Nihar Chakravarti || ಚಿತ್ರಕೂಟ : https://archive.org/details/Chitrakuuta-1954
* 18990101_IndiraBai_Kannada_PDF.pdf
* 19050101_ChikkaDevarajaBinnapamVyakhya_Kannada_PDF.pdf
* 19170101_KarnatakaGathaVaibhava_Kannada_PDF.pdf
* 19200101_KannadaSahityaParishatPatrike_Kannada_PDF.pdf
* 19240101_KotiChennaya_Kannada_PDF.pdf
| {{inprogress}} <!--replace inprogress with {{done}} when proofreading in done-->
|
when line are joined in a paragraph broken words should be joined, example [[special:diff/324883]]
|-
|Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937
| {{inprogress}} <!--replace inprogress with {{done}} when proofreading in done-->
|
|-
|Vikas shetty14 || ರಂಗನಾಯಕಿ : https://archive.org/details/Ranganaayaki-Maale-1953
| {{inprogress}} <!--replace inprogress with {{done}} when proofreading in done-->
|
|}
[[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]]
ku25t1e0mj39n75fvalv76d1weg52av
ಚಂದ್ರನಾಥ
0
120901
324909
2026-06-17T04:32:51Z
Reema Jalihal
7674
ಹೊಸ ಪುಟ: ಕನ್ನಡ ಪುಸ್ತಕ "ಚಂದ್ರನಾಥ" ಲೇಖಕ ಶ್ರೀ ಗುರುನಾಥ ಜೋಶಿ ಬರೆದ ಒಂದು ಶ್ರೇಷ್ಠ ಕೃತಿಯಾಗಿದೆ. ಈ ಪುಸ್ತಕವು ಇತಿಹಾಸ ಮತ್ತು ಜೈನ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳನ್ನು ಪರಿಶೋಧಿಸುತ್ತದೆ.
324909
wikitext
text/x-wiki
ಕನ್ನಡ ಪುಸ್ತಕ "ಚಂದ್ರನಾಥ" ಲೇಖಕ ಶ್ರೀ ಗುರುನಾಥ ಜೋಶಿ ಬರೆದ ಒಂದು ಶ್ರೇಷ್ಠ ಕೃತಿಯಾಗಿದೆ. ಈ ಪುಸ್ತಕವು ಇತಿಹಾಸ ಮತ್ತು ಜೈನ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳನ್ನು ಪರಿಶೋಧಿಸುತ್ತದೆ.
kir0zlvwpjlqvotwjh71een9q3n01u4
ಪುಟ:ಚಂದ್ರನಾಥ.pdf/೬
104
120902
324910
2026-06-17T08:54:42Z
Reema Jalihal
7674
/* Proofread */
324910
proofread-page
text/x-wiki
<noinclude><pagequality level="3" user="Reema Jalihal" /></noinclude>{{center|{{x-larger|'''ಪುಕಾಶಕರ ಮಾತು'''}}}}
ಭಾರತೀಯ ಸಾಹಿತ್ಯಕ್ಕೆ ಹೊಸ ಬಗೆಯ ಕಾದಂಬರಿಗಳನ್ನೊದಗಿಸಿದ ದಿವಂಗತ ಶರಚ್ಚಂದ್ರರ ತಕ್ಕಷ್ಟು ಕೃತಿಗಳು ಕನ್ನಡಕ್ಕೆ ಬಂದಿವೆ. ಆದ್ದರಿಂದ ಅವರ ಸಾಹಿತ್ಯವನ್ನು ಕುರಿತು ಇಲ್ಲಿ ನಾನು ಹೆಚ್ಚು ಏನೂ ಹೇಳುವ ಅಗತ್ಯವಿಲ್ಲ. ಈ ಕಾದಂಬರಿ - ಚಂದ್ರನಾಥ - ೧೯೩೭ರಲ್ಲಿ ಧಾರವಾಡದ 'ಪ್ರೇಮ
ಗ್ರಂಥಮಾಲೆ'ಯಲ್ಲಿ ಮೊದಲ ಸಲ ಪ್ರಕಟವಾಯಿತು. ಈಗ ೪-೫ ವರುಷಗಳಿಂದ ಇದರ ಪ್ರತಿಗಳೆ ದೊರಕುತ್ತಿರಲಿಲ್ಲ. ಆದ್ದರಿಂದ ಶ್ರೀ. ಗುರುನಾಥ ಜೋಶಿಯವರ ಅಪ್ಪಣೆ ಪಡೆದು ಎರಡನೆ ಆವೃತ್ತಿಯನ್ನು ಈಗ ಪ್ರಕಟಿಸಲಾಗಿದೆ. ಈ ಬಗ್ಗೆ ಒಪ್ಪಿಗೆ ಕೊಟ್ಟ ಶ್ರೀ. ಗುರುನಾಥ ಜೋಶಿಯವರಿಗೆ ಕೃತಜ್ಞತೆಗಳು.
ಮೊದಲ ಆವೃತ್ತಿಗೂ ಈ ಆವೃತ್ತಿಗೂ ಶೈಲಿಯಲ್ಲಿ - ಅಲ್ಲಲ್ಲಿ - ಸ್ವಲ್ಪ ಹೆಚ್ಚು ಕಡಿಮೆ ಇದೆ. ಇದೇ ಕಾದಂಬರಿಯ ಹಿಂದೀ ಕೃತಿಯನ್ನು ಎದುರಿಗಿಟ್ಟುಕೊಂಡು ಈ ಹೆಚ್ಚು ಕಡಿಮೆಯನ್ನು ಮಾಡಿದವರು ಶ್ರೀ. ಮ. ಗೋವಿಂದರಾಯರು. ಆದ್ದರಿಂದ ಈ ತಿದ್ದುವಿಕೆಯ ಜೊತೆಗೆ ಬಂದ ಒಳಿತು ಕೆಡಕುಗಳಿಗೆ ಗೋವಿಂದರಾಯರು ಹೊಣೆಯೆ ಹೊರತು ಭಾಷಾಂತರಕಾರರಾದ ಗುರುನಾಥ ಜೋಶಿಯವರಲ್ಲ.
ಸಾಧ್ಯವಾದರ ಇಂತಹ ಇನ್ನೂ ಹಲವು ಪುಸ್ತಕಗಳನ್ನು ಪ್ರಕಟಿಸುವ ಯೋಚನೆ ಇದೆ. ಅದಕ್ಕೆ ಬೇಕಾಗುವ ಹಲವು ಅನುಕೂಲತೆಗಳಲ್ಲಿ ಓದುಗರಿಂದ ಬರಬೇಕಾದ ನೆರವು ಬಹಳ ಮುಖ್ಯ. ಅದು ಸಿಗಬಹುದೆಂಬ ನಂಬುಗೆಯಿಂದ ಈ ಸಾಹಸ ಕೈಕೊಂಡಿದೆ.
ಚೆನ್ನಾಗಿ ಮುದ್ರಿಸಿಕೊಟ್ಟ ಬೆಂಗಳೂರಿನ ಟೌನ್ ಮುದ್ರಣಾಲಯವ ಒಡೆಯರಾದ ಹೆಚ್. ಎಲ್. ಪ್ರಸಾದರಿಗೂ, ಅಲ್ಲಲ್ಲಿ ತಿದ್ದಿದ ಶ್ರೀ. ಗೋವಿಂದರಾಯರಿಗೂ ನಾವು ಆಭಾರಿಗಳು.
ಏಪ್ರಿ೮, ೧೯೪೪
ಬೆಂಗಳೂರು
{{Right|ಪ್ರಕಾಶಕ}}<noinclude></noinclude>
kzn3ydz7vvpvrbo1fp3f27m5hqh9c9y
324911
324910
2026-06-17T08:55:20Z
Reema Jalihal
7674
324911
proofread-page
text/x-wiki
<noinclude><pagequality level="3" user="Reema Jalihal" /></noinclude>{{center|{{x-larger|'''ಪುಕಾಶಕರ ಮಾತು'''}}}}
ಭಾರತೀಯ ಸಾಹಿತ್ಯಕ್ಕೆ ಹೊಸ ಬಗೆಯ ಕಾದಂಬರಿಗಳನ್ನೊದಗಿಸಿದ ದಿವಂಗತ ಶರಚ್ಚಂದ್ರರ ತಕ್ಕಷ್ಟು ಕೃತಿಗಳು ಕನ್ನಡಕ್ಕೆ ಬಂದಿವೆ. ಆದ್ದರಿಂದ ಅವರ ಸಾಹಿತ್ಯವನ್ನು ಕುರಿತು ಇಲ್ಲಿ ನಾನು ಹೆಚ್ಚು ಏನೂ ಹೇಳುವ ಅಗತ್ಯವಿಲ್ಲ. ಈ ಕಾದಂಬರಿ - ಚಂದ್ರನಾಥ - ೧೯೩೭ರಲ್ಲಿ ಧಾರವಾಡದ 'ಪ್ರೇಮ
ಗ್ರಂಥಮಾಲೆ'ಯಲ್ಲಿ ಮೊದಲ ಸಲ ಪ್ರಕಟವಾಯಿತು. ಈಗ ೪-೫ ವರುಷಗಳಿಂದ ಇದರ ಪ್ರತಿಗಳೆ ದೊರಕುತ್ತಿರಲಿಲ್ಲ. ಆದ್ದರಿಂದ ಶ್ರೀ. ಗುರುನಾಥ ಜೋಶಿಯವರ ಅಪ್ಪಣೆ ಪಡೆದು ಎರಡನೆ ಆವೃತ್ತಿಯನ್ನು ಈಗ ಪ್ರಕಟಿಸಲಾಗಿದೆ. ಈ ಬಗ್ಗೆ ಒಪ್ಪಿಗೆ ಕೊಟ್ಟ ಶ್ರೀ. ಗುರುನಾಥ ಜೋಶಿಯವರಿಗೆ ಕೃತಜ್ಞತೆಗಳು.
ಮೊದಲ ಆವೃತ್ತಿಗೂ ಈ ಆವೃತ್ತಿಗೂ ಶೈಲಿಯಲ್ಲಿ - ಅಲ್ಲಲ್ಲಿ - ಸ್ವಲ್ಪ ಹೆಚ್ಚು ಕಡಿಮೆ ಇದೆ. ಇದೇ ಕಾದಂಬರಿಯ ಹಿಂದೀ ಕೃತಿಯನ್ನು ಎದುರಿಗಿಟ್ಟುಕೊಂಡು ಈ ಹೆಚ್ಚು ಕಡಿಮೆಯನ್ನು ಮಾಡಿದವರು ಶ್ರೀ. ಮ. ಗೋವಿಂದರಾಯರು. ಆದ್ದರಿಂದ ಈ ತಿದ್ದುವಿಕೆಯ ಜೊತೆಗೆ ಬಂದ ಒಳಿತು ಕೆಡಕುಗಳಿಗೆ ಗೋವಿಂದರಾಯರು ಹೊಣೆಯೆ ಹೊರತು ಭಾಷಾಂತರಕಾರರಾದ ಗುರುನಾಥ ಜೋಶಿಯವರಲ್ಲ.
ಸಾಧ್ಯವಾದರ ಇಂತಹ ಇನ್ನೂ ಹಲವು ಪುಸ್ತಕಗಳನ್ನು ಪ್ರಕಟಿಸುವ ಯೋಚನೆ ಇದೆ. ಅದಕ್ಕೆ ಬೇಕಾಗುವ ಹಲವು ಅನುಕೂಲತೆಗಳಲ್ಲಿ ಓದುಗರಿಂದ ಬರಬೇಕಾದ ನೆರವು ಬಹಳ ಮುಖ್ಯ. ಅದು ಸಿಗಬಹುದೆಂಬ ನಂಬುಗೆಯಿಂದ ಈ ಸಾಹಸ ಕೈಕೊಂಡಿದೆ.
ಚೆನ್ನಾಗಿ ಮುದ್ರಿಸಿಕೊಟ್ಟ ಬೆಂಗಳೂರಿನ ಟೌನ್ ಮುದ್ರಣಾಲಯವ ಒಡೆಯರಾದ ಹೆಚ್. ಎಲ್. ಪ್ರಸಾದರಿಗೂ, ಅಲ್ಲಲ್ಲಿ ತಿದ್ದಿದ ಶ್ರೀ. ಗೋವಿಂದರಾಯರಿಗೂ ನಾವು ಆಭಾರಿಗಳು.
ಏಪ್ರಿ೮, ೧೯೪೪
<br />ಬೆಂಗಳೂರು
{{Right|ಪ್ರಕಾಶಕ}}<noinclude></noinclude>
s2xjw9g6k2nwm1zitr3f2cgfvxpwuap
ಪುಟ:ಚಂದ್ರನಾಥ.pdf/೭
104
120903
324930
2026-06-17T09:43:44Z
Reema Jalihal
7674
/* Proofread */
324930
proofread-page
text/x-wiki
<noinclude><pagequality level="3" user="Reema Jalihal" /></noinclude>{{x-larger|{{center|}}'''ಚ೦ದ್ರನಾಥ'''}}
ತಂದೆಯವರ ಶ್ರಾದ್ಧದ ಮುನ್ನಾದಿನವೆ ತನ್ನ ಚಿಕ್ಕಪ್ಪ ಮಣಿಶಂಕರ
ಮುಖೋಪಾಧ್ಯಾಯರೊಡನೆ ವ್ಯಾಜ್ಯವಾದುದರಿಂದ ಚಂದ್ರನಾಥನ ಮನಸ್ಸು ಕಲಕಿಹೋಗಿದ್ದಿತು. ಅದಕ್ಕೋಸ್ಕರವೇ ಮರುದಿನ ಮಣಿಶಂಕರ ಮಹಾಶಯರು ಅಣ್ಣಂದಿರ ಶ್ರಾದ್ಧಕ್ಕಾಗಿ ಚಂದ್ರನಾಥನ ಮನೆಗೆ ಬಂದು ಶ್ರಾದ್ಧದ ಕಾರ್ಯದಲ್ಲಿ ಅಗ್ರಭಾಗ ವಹಿಸಿದರೂ ಊಟಮಾಡಲಿಲ್ಲ. ಅಲ್ಲದೆ ತಮ್ಮ ಮನೆಯವರಿಗೂ ಊಟ ಮಾಡಕೂಡದೆಂದು ಕಟ್ಟಾಜ್ಞೆಯನ್ನಿತ್ತಿದ್ದರು. ಬ್ರಾಹ್ಮಣ ಭೋಜನವಾದ ಬಳಿಕ ಚಂದ್ರನಾಥನು ಕೈಜೋಡಿಸಿ ಚಿಕ್ಕಪ್ಪನನ್ನು ಪರಿಪರಿಯಿಂದ ಬೇಡಿಕೊಂಡ. “ಚಿಕ್ಕಪ್ಪ, ನೀವು ನನಗೆ ತಂದೆಯ ಹಾಗೆ. ಬಾಲಕನ ತಪ್ಪನ್ನು ಮನಸ್ಸಿನಲ್ಲಿ ಹಿಡಿಯದೆ ಕ್ಷಮಿಸಬೇಕು.”
“ಏನಪ್ಪಾ, ನೀವು ಕಲಕತ್ತೆಯಲ್ಲಿ ಇದ್ದುಕೊಂಡು ಅಭ್ಯಾಸಮಾಡಿ ಬಿ.ಎ., ಎಂ.ಎ. ಪಾಸಾಗಿ ವಿದ್ವಾಂಸರಾಗಿದ್ದೀರಿ, ಬುದ್ಧಿವಂತರಾಗಿದ್ದೀರಿ. ನಾವೋ, ಹಳೆಯಕಾಲದ ಪೆದ್ದರು. ನಮ್ಮೊಡನೆ ನಿಮ್ಮ ಬಳಕೆ ಹೇಗಾದೀತು ? ನಮ್ಮ ನಿಮ್ಮ ನಡೆವಳಿ ಹೇಗೆ ಹೊಂದೀತು? ಶಾಸ್ತ್ರಕಾರರು ಹೇಳಿಲ್ಲವೆ - ಬೊಡ್ಡೆಯನ್ನು ಕಡಿದು ಕೊಂಬೆಗಳಿಗೆ ನೀರುಣಿಸಿರಿ ಎಂದು ?”
ತಂದೆಯಂತಿದ್ದ ಮಣಿಶಂಕರರು ಉತ್ತರವಿತ್ತರು.
ಈ ಶಾಸ್ತ್ರವಚನಕ್ಕೂ ಆಧುನಿಕ ವಿದ್ವಾಂಸನಿಗೂ ಹಳೆಯ ಕಾಲದ ಪೆದ್ದನಿಗೂ ಏನು ಸಂಬಂಧವಿದ್ದಿತೊ ! ಚಂದ್ರನಾಥ ಚಿಕ್ಕಪ್ಪನ ಮನಸ್ಸನ್ನು ತಿಳಿದುಕೊಂಡು, ಇನ್ನು ಅವನೊಡನೆ ಯಾವ ಬಗೆಯ ಸಂಬಂಧವನ್ನೂ<noinclude></noinclude>
qy2jyr2nn7faaivtb0swhpbuj6jmqht
324931
324930
2026-06-17T09:44:05Z
Reema Jalihal
7674
324931
proofread-page
text/x-wiki
<noinclude><pagequality level="3" user="Reema Jalihal" /></noinclude>{{x-larger|{{center|'''ಚ೦ದ್ರನಾಥ'''}}}}
ತಂದೆಯವರ ಶ್ರಾದ್ಧದ ಮುನ್ನಾದಿನವೆ ತನ್ನ ಚಿಕ್ಕಪ್ಪ ಮಣಿಶಂಕರ
ಮುಖೋಪಾಧ್ಯಾಯರೊಡನೆ ವ್ಯಾಜ್ಯವಾದುದರಿಂದ ಚಂದ್ರನಾಥನ ಮನಸ್ಸು ಕಲಕಿಹೋಗಿದ್ದಿತು. ಅದಕ್ಕೋಸ್ಕರವೇ ಮರುದಿನ ಮಣಿಶಂಕರ ಮಹಾಶಯರು ಅಣ್ಣಂದಿರ ಶ್ರಾದ್ಧಕ್ಕಾಗಿ ಚಂದ್ರನಾಥನ ಮನೆಗೆ ಬಂದು ಶ್ರಾದ್ಧದ ಕಾರ್ಯದಲ್ಲಿ ಅಗ್ರಭಾಗ ವಹಿಸಿದರೂ ಊಟಮಾಡಲಿಲ್ಲ. ಅಲ್ಲದೆ ತಮ್ಮ ಮನೆಯವರಿಗೂ ಊಟ ಮಾಡಕೂಡದೆಂದು ಕಟ್ಟಾಜ್ಞೆಯನ್ನಿತ್ತಿದ್ದರು. ಬ್ರಾಹ್ಮಣ ಭೋಜನವಾದ ಬಳಿಕ ಚಂದ್ರನಾಥನು ಕೈಜೋಡಿಸಿ ಚಿಕ್ಕಪ್ಪನನ್ನು ಪರಿಪರಿಯಿಂದ ಬೇಡಿಕೊಂಡ. “ಚಿಕ್ಕಪ್ಪ, ನೀವು ನನಗೆ ತಂದೆಯ ಹಾಗೆ. ಬಾಲಕನ ತಪ್ಪನ್ನು ಮನಸ್ಸಿನಲ್ಲಿ ಹಿಡಿಯದೆ ಕ್ಷಮಿಸಬೇಕು.”
“ಏನಪ್ಪಾ, ನೀವು ಕಲಕತ್ತೆಯಲ್ಲಿ ಇದ್ದುಕೊಂಡು ಅಭ್ಯಾಸಮಾಡಿ ಬಿ.ಎ., ಎಂ.ಎ. ಪಾಸಾಗಿ ವಿದ್ವಾಂಸರಾಗಿದ್ದೀರಿ, ಬುದ್ಧಿವಂತರಾಗಿದ್ದೀರಿ. ನಾವೋ, ಹಳೆಯಕಾಲದ ಪೆದ್ದರು. ನಮ್ಮೊಡನೆ ನಿಮ್ಮ ಬಳಕೆ ಹೇಗಾದೀತು ? ನಮ್ಮ ನಿಮ್ಮ ನಡೆವಳಿ ಹೇಗೆ ಹೊಂದೀತು? ಶಾಸ್ತ್ರಕಾರರು ಹೇಳಿಲ್ಲವೆ - ಬೊಡ್ಡೆಯನ್ನು ಕಡಿದು ಕೊಂಬೆಗಳಿಗೆ ನೀರುಣಿಸಿರಿ ಎಂದು ?”
ತಂದೆಯಂತಿದ್ದ ಮಣಿಶಂಕರರು ಉತ್ತರವಿತ್ತರು.
ಈ ಶಾಸ್ತ್ರವಚನಕ್ಕೂ ಆಧುನಿಕ ವಿದ್ವಾಂಸನಿಗೂ ಹಳೆಯ ಕಾಲದ ಪೆದ್ದನಿಗೂ ಏನು ಸಂಬಂಧವಿದ್ದಿತೊ ! ಚಂದ್ರನಾಥ ಚಿಕ್ಕಪ್ಪನ ಮನಸ್ಸನ್ನು ತಿಳಿದುಕೊಂಡು, ಇನ್ನು ಅವನೊಡನೆ ಯಾವ ಬಗೆಯ ಸಂಬಂಧವನ್ನೂ<noinclude></noinclude>
d3g0drvlhcgvcrv9l2lckvhpu2t8q67