ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.7
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪುಟ:ಚಂದ್ರನಾಥ.pdf/೭
104
120903
324932
324931
2026-06-17T16:08:05Z
A826
6806
/* Validated */
324932
proofread-page
text/x-wiki
<noinclude><pagequality level="4" user="A826" /></noinclude>{{x-larger|{{center|'''ಚಂದ್ರನಾಥ'''}}}}
ತಂದೆಯವರ ಶ್ರಾದ್ಧದ ಮುನ್ನಾದಿನವೆ ತನ್ನ ಚಿಕ್ಕಪ್ಪ ಮಣಿಶಂಕರ ಮುಖೋಪಾಧ್ಯಾಯರೊಡನೆ ವ್ಯಾಜ್ಯವಾದುದರಿಂದ ಚಂದ್ರನಾಥನ ಮನಸ್ಸು ಕಲಕಿಹೋಗಿದ್ದಿತು. ಅದಕ್ಕೋಸ್ಕರವೇ ಮರುದಿನ ಮಣಿಶಂಕರ ಮಹಾಶಯರು ಅಣ್ಣಂದಿರ ಶ್ರಾದ್ಧಕ್ಕಾಗಿ ಚಂದ್ರನಾಥನ ಮನೆಗೆ ಬಂದು ಶ್ರಾದ್ಧದ ಕಾರ್ಯದಲ್ಲಿ ಅಗ್ರಭಾಗ ವಹಿಸಿದರೂ ಊಟಮಾಡಲಿಲ್ಲ. ಅಲ್ಲದೆ ತಮ್ಮ ಮನೆಯವರಿಗೂ ಊಟ ಮಾಡಕೂಡದೆಂದು ಕಟ್ಟಾಜ್ಞೆಯನ್ನಿತ್ತಿದ್ದರು. ಬ್ರಾಹ್ಮಣ ಭೋಜನವಾದ ಬಳಿಕ ಚಂದ್ರನಾಥನು ಕೈಜೋಡಿಸಿ ಚಿಕ್ಕಪ್ಪನನ್ನು ಪರಿಪರಿಯಿಂದ ಬೇಡಿಕೊಂಡ. "ಚಿಕ್ಕಪ್ಪ, ನೀವು ನನಗೆ ತಂದೆಯ ಹಾಗೆ. ಬಾಲಕನ ತಪ್ಪನ್ನು ಮನಸ್ಸಿನಲ್ಲಿ ಹಿಡಿಯದೆ ಕ್ಷಮಿಸಬೇಕು."
"ಏನಪ್ಪಾ, ನೀವು ಕಲಕತ್ತೆಯಲ್ಲಿ ಇದ್ದುಕೊಂಡು ಅಭ್ಯಾಸಮಾಡಿ ಬಿ.ಎ., ಎಂ.ಎ. ಪಾಸಾಗಿ ವಿದ್ವಾಂಸರಾಗಿದ್ದೀರಿ, ಬುದ್ಧಿವಂತರಾಗಿದ್ದೀರಿ. ನಾವೋ, ಹಳೆಯಕಾಲದ ಪೆದ್ದರು. ನಮ್ಮೊಡನೆ ನಿಮ್ಮ ಬಳಕೆ ಹೇಗಾದೀತು? ನಮ್ಮ ನಿಮ್ಮ ನಡೆವಳಿ ಹೇಗೆ ಹೊಂದೀತು? ಶಾಸ್ತ್ರಕಾರರು ಹೇಳಿಲ್ಲವೆ - ಬೊಡ್ಡೆಯನ್ನು ಕಡಿದು ಕೊಂಬೆಗಳಿಗೆ ನೀರುಣಿಸಿರಿ ಎಂದು?" ತಂದೆಯಂತಿದ್ದ ಮಣಿಶಂಕರರು ಉತ್ತರವಿತ್ತರು.
ಈ ಶಾಸ್ತ್ರವಚನಕ್ಕೂ ಆಧುನಿಕ ವಿದ್ವಾಂಸನಿಗೂ ಹಳೆಯ ಕಾಲದ ಪೆದ್ದನಿಗೂ ಏನು ಸಂಬಂಧವಿದ್ದಿತೊ! ಚಂದ್ರನಾಥ ಚಿಕ್ಕಪ್ಪನ ಮನಸ್ಸನ್ನು ತಿಳಿದುಕೊಂಡು, ಇನ್ನು ಅವನೊಡನೆ ಯಾವ ಬಗೆಯ ಸಂಬಂಧವನ್ನೂ<noinclude></noinclude>
5vs6zmjkulbgq9s891z21peflsmpn05
ಪುಟ:ಚಂದ್ರನಾಥ.pdf/೮
104
120904
324933
2026-06-18T07:08:51Z
Reema Jalihal
7674
/* Proofread */
324933
proofread-page
text/x-wiki
<noinclude><pagequality level="3" user="Reema Jalihal" /></noinclude>{{center|ಚಂದ್ರನಾಥ}}
{{rh|left=೪}}
ಈ ಕಿರುಮನೆಗೆ ಒಂದು ಕಿಟಕಿಯಿದ್ದಿತು. ಅದರೊಳಗಿಂದ ಅಡುಗೆಯ ಮನೆಯು ಸ್ವಲ್ಪ ಸ್ವಲ್ಪ ಕಾಣುತ್ತಿದ್ದಿತು. ಚಂದ್ರನಾಥ ಅತ್ತಕಡೆಗೆಯ ನೋಡುತ್ತ ಕುಳಿತುಕೊಳ್ಳುತ್ತಿದ್ದ. ಅಡುಗೆಯ ಸಾಮಗ್ರಿಯನ್ನು ನೋಡುವುದಕ್ಕಲ್ಲ, ಅಡಿಗೆ ಮಾಡುವವಳನ್ನು ನೋಡುವುದಕ್ಕೆ. ಅವಳನ್ನು ಅದೇಕೆ
ಅಷ್ಟು ನೋಡಬೇಕೆನಿಸುತ್ತಿದ್ದಿತೊ ಅವನಿಗೆ !
ಅಡುಗೆ ಮಾಡುವವಳು ವಿಧವೆ. ನೋಡುವುದಕ್ಕೆ ರೂಪವತಿ. ಆದರೆ ಅವಳ ಮುಖ ದುಃಖಾಗ್ನಿಯಲ್ಲಿ ಬೆಂದು ಬಾಡಿರುವುದೋ ಏನೋ ಎಂಬಂತೆ ತೋರುತ್ತಿದ್ದಿತು. ಹರೆಯು ಇದೆಯೆ ಇಲ್ಲವೆ ಎನ್ನುವುದು ಗೊತ್ತಾಗುತ್ತಿರಲಿಲ್ಲ. ಅವಳು ತನ್ನ ಕೆಲಸದಲ್ಲಿ ತಲ್ಲೀನಳಾಗುತ್ತಿದ್ದಳು. ಅವಳ ಬಳಿಯಲ್ಲಿಯೆ ಹತ್ತುವರ್ಷದ ಒಂದು ಹುಡುಗಿ ಕುಳಿತುಕೊಂಡು ಕಾಯಿಪಲ್ಲೆ ಕೊಚ್ಚಿ ಕೊಡುತ್ತ ಅಡುಗೆಯ ಎಲ್ಲ ಸಾಮಾನು ಒದವಿಸಿಕೊಡಲು ನೆರವಾಗುತ್ತಿದ್ದಳು. ಚಂದ್ರನಾಥನ ಕಣ್ಣು ತೃಪ್ತಿಯಿಲ್ಲದೆ ಇದನ್ನೇ ನೋಡುತ್ತಿದ್ದುವು.
ಅವಳು ಮೊದಮೊದಲು ಕೆಲವು ದಿವಸ ಚಂದ್ರನಾಥನ ಎದುರಲ್ಲಿ ಹಾಯುತ್ತಿರಲಿಲ್ಲ. ಊಟಕ್ಕೆ ಬಡಿಸಿದವಳೆ ಮರೆಯಾಗುತ್ತಿದ್ದಳು. ಬಳಿಕ ಮೆಲ್ಲಮೆಲ್ಲನೆ ಎದುರಲ್ಲಿ ಬರತೊಡಗಿದಳು. ಚಂದ್ರನಾಥ ಅವಳಿಗಿಂತ ಚಿಕ್ಕವನು ಕೆಲವು ದಿನಗಳ ಬಳಕೆಯ ನಂತರ ಆತ್ಮೀಯಭಾವವು ಹುಟ್ಟಿತು.
ಆದುದರಿಂದ ಅವಳು ಚಂದ್ರನಾಥನಿಗೆ ಬಡಿಸುತ್ತ ಅವನೆದುರಿಗೆ ಕುಳಿತು ಕೊಳ್ಳುತ್ತಿದ್ದಳು; ತಾಯಿಯಂತೆ ಪ್ರೀತಿಯಿಂದ ಉಣಿಸುತ್ತಿದ್ದಳು.
ಚಂದ್ರನಾಥನಿಗೆ ತನ್ನ ತಾಯಿಯ ನೆನಪಿರಲಿಲ್ಲ. ತಾಯಿಯಿಲ್ಲದ
ಚಂದ್ರನಾಥ ಕೆಲವು ದಿವಸ ತಂದೆಯ ತೊಡೆಯ ಮೇಲೆಯೆ ಪ್ರೀತಿಯಿಂದ ಬೆಳೆದ. ತಾಯಿಯ ಸ್ಥಾನವನ್ನು ತಂದೆ ತುಂಬಿದ್ದರೂ ಅವನಲ್ಲಿ ಈ ತೆರನಾದ ಸ್ನೇಹವಿರಲಿಲ್ಲ.
ತಂದೆಯ ಮರಣದಿಂದ ಚಂದ್ರನಾಥನ ಹೃದಯದಲ್ಲಿ ತೆರವಾದ ಸ್ಥಳವು ಮಾತೃಸ್ನೇಹದಿಂದ - ಅಭಿನವ ಮಾತೃಸ್ನೇಹಸುಧೆಯಿಂದ - ತುಂಬಿ ಅವನನ್ನು
ಎರೆಯತೊಡಗಿತು.
ಒಂದು ದಿನ ಚಂದ್ರನಾಥ ಹರಿದಯಾಲರನ್ನು ಕೇಳಿದ - “ನಿಮಗೆ<noinclude></noinclude>
hwfyv0r2t2t04qaogphj35ia9emcm5o
ಪುಟ:ಚಂದ್ರನಾಥ.pdf/೯
104
120905
324934
2026-06-18T07:18:07Z
Reema Jalihal
7674
/* Proofread */
324934
proofread-page
text/x-wiki
<noinclude><pagequality level="3" user="Reema Jalihal" /></noinclude>{{center|ಚಂದ್ರನಾಥ}}
{{rh|right=೫}}
ನೆಂಟರಿಷ್ಟರು, ಬಂಧುಬಳಗದವರು ಯಾರೂ ಇಲ್ಲವೆಂದು ತಿಳಿದಿದ್ದೆ; ಆದರೆ
ಇವರು ಇದ್ದಾರಲ್ಲ ? ಇವರಾರು ?”
“ಇವಳು ಬ್ರಾಹ್ಮಣಿ" ಎಂದರು ಹರಿದಯಾಲರು.
“ನಿಮ್ಮ ನೆಂಟರೇನು ?"
“ಅಲ್ಲ.”
“ಹಾಗಾದರೆ ಇವರಾರು ? ಹೇಗೆ ಬಂದರು ಇಲ್ಲಿಗೆ ?”
“ಕತೆ ಬಹಳ ದೊಡ್ಡದು. ಸಂಕ್ಷೇಪದಲ್ಲಿ ಹೀಗೆ ಹೇಳಬಹುದು- ಮೂರು ವರ್ಷಗಳ ಹಿಂದೆ ತನ್ನ ಗಂಡ ಮತ್ತು ಈ ಹುಡುಗಿಯ ಜೊತೆಯಲ್ಲಿ ತೀರ್ಥಯಾತ್ರೆಗಾಗಿ ಇಲ್ಲಿಗೆ ಬಂದಿದ್ದಳು. ಇಲ್ಲಿಯೆ ಅವಳ ಗಂಡ ತೀರಿದ. ಊರಿಗೆ ಹೊರಟು ಹೋಗಬೇಕೆಂದರೆ ನೆಂಟರು, ಬಳಗದವರು ಯಾರೂ ಇದ್ದಿಲ್ಲ. ಮುಂದೆ ನಿನಗೆ ಗೊತ್ತೇ ಇದೆ ; ಇಲ್ಲಿಯೆ ಇದ್ದಾಳೆ.”
“ನಿಮಗೆ ಇವಳ ಗುರುತು ಹೇಗೆ ಆಯಿತು ?"
“ಮಣಿಕರ್ಣಿಕಾ ಘಟ್ಟದ ಬಳಿಯಲ್ಲಿ ಭಿಕ್ಷೆ ಬೇಡುತ್ತಿದ್ದಳು.”
ಚಂದ್ರನಾಥ ಸ್ವಲ್ಪಹೊತ್ತು ಯೋಚಿಸಿ “ಇವಳ ಮನೆ ಎಲ್ಲಿದೆ ಎಂಬುದು ನಿಮಗೆ ಗೊತ್ತಿದೆಯೆ ?” ಎಂದು ಕೇಳಿದ.
“ಸರಿಯಾಗಿ ಗೊತ್ತಿಲ್ಲ; ನವದ್ವೀಪದ ಬಳಿಯಲ್ಲಿ ಎಲ್ಲಿಯೊ ಇದೆ.”
ಎರಡು ದಿನಗಳ ಮೇಲೆ ಊಟಕ್ಕೆ ಕುಳಿತಾಗ ಬ್ರಾಹ್ಮಣಿಯ ಮುಖ ನೋಡುತ್ತ “ನಿಮ್ಮೂರು ಯಾವುದಮ್ಮಾ? ಇಲ್ಲಿಗೆ ಹೇಗೆ ಬಂದಿರಿ ?” ಎಂದು ಕೇಳಿದ ಚಂದ್ರನಾಥ.
ಬ್ರಾಹ್ಮಣಿಯ ಮುಖ ಕಳೆಗುಂದಿತು. ಈ ಪ್ರಶ್ನೆಯ ಕಾರಣ ಅವಳಿಗೆ ತಿಳಿಯದೆ ಇರಲಿಲ್ಲ. ಈ ಮಾತು ಕೇಳಿಸಲಿಲ್ಲವೇನೋ ಎಂಬಂತೆ ಲಗುಬಗೆಯಿಂದ ಎದ್ದುನಿಂತು " ಹೋಗಿ ಹಾಲು ತೆಗೆದುಕೊಂಡು ಬರಲೋ ?"
ಎಂದಳು.
ಹಾಲು ಇಷ್ಟು ಬೇಗ ತರಬೇಕಾದುದೇನೂ ಇರಲಿಲ್ಲ. ಕೊಂಚ ಯೋಚಿಸಲಿಕ್ಕೆಂದೆ ಅವಳು ಅಡುಗೆಯ ಮನೆಗೆ ಹೋದಳು. ಅಲ್ಲಿ ಅವಳ<noinclude></noinclude>
gi7yg1hzbj6u4ppk16talh67h3p3fgt
ಪುಟ:ಚಂದ್ರನಾಥ.pdf/೧೦
104
120906
324935
2026-06-18T07:29:57Z
Reema Jalihal
7674
/* Proofread */
324935
proofread-page
text/x-wiki
<noinclude><pagequality level="3" user="Reema Jalihal" /></noinclude>{{center|ಚಂದ್ರನಾಥ}}
{{rh|left=೬}}
ಮಗಳು - ಸರಯೂ - ಹಾಲು ಕಾಯಿಸುತ್ತಿದ್ದಳು. ತಾಯಿಯ ಕುಂದಿದ ಮುಖದ ಕಡೆಗೆ ಅವಳ ಲಕ್ಷ್ಯವು ಹೋಗಲಿಲ್ಲ. ತಾಯಿ ಮಗಳ ಮುಖವನ್ನೊಮ್ಮೆ ನೋಡಿ ಕೈಯಲ್ಲಿ ಹಾಲಿನ ಬಟ್ಟಲು ತೆಗೆದುಕೊಳ್ಳುತ್ತ ನಿಡಿದಾದ ಒಂದು ಉಸಿರಿನೊಂದಿಗೆ ಮನದಲ್ಲಿಯೆ “ದೀನದಯಾಳು, ದುಃಖಹರಣ, ಅಂತರ್ಯಾಮಿಯೆ, ಕ್ಷಮಿಸು ” ಎಂದಳು. ಆಮೇಲೆ ಹಾಲಿನ ಬಟ್ಟಲು ತಂದು ಅವನ ಮುಂದಿಟ್ಟು ಕುಳಿತುಕೊಂಡಳು. ಚಂದ್ರನಾಥ ಮತ್ತೆ ಅದೇ ಪ್ರಶ್ನೆಯನ್ನು ಕೇಳಿದ.
ಒಂದೊಂದಾಗಿ ಕೇಳಿ ತಿಳಿದುಕೊಂಡ ನಂತರ ಕೊನೆಗೆ "ನೀವು ನಿಮ್ಮ
ಮನೆಗೆ ತಿರುಗಿ ಏಕೆ ಹೋಗಲಿಲ್ಲ ? ಅಲ್ಲಿ ಯಾರೂ ಇಲ್ಲವೇನು ?” ಎಂದು ಕೇಳಿದ.
“ಒಂದು ತುತ್ತು ಅನ್ನ ಹಾಕುವವರು ಯಾರೂ ಇಲ್ಲ.”
ಚಂದ್ರನಾಥ ಸ್ವಲ್ಪ ಹೊತ್ತು ತಲೆತಗ್ಗಿಸಿಕೊಂಡು ಒಂದೊಂದೇ ತುತ್ತು ಬಾಯಲ್ಲಿ ಹಾಕಿಕೊಳ್ಳುತ್ತ ಯೋಚಿಸಿದ. ಬಳಿಕ ಕೇಳಿದ—— “ಈ ಹುಡುಗಿ ಇದ್ದಾಳಲ್ಲ. ಈಕೆಯ ಲಗ್ನ ಹೇಗೆ ಮಾಡುವಿರಿ ? ”
"ವಿಶ್ವೇಶ್ವರನೇ ಬಲ್ಲ ! ” ನಿಡಿದಾದ ಉಸಿರೊಂದನ್ನು ಹೊರಗೆಡಹಿ ಹೇಳಿದಳು.
ಚಂದ್ರನಾಥನ ಊಟವಾಗಿ ಬಿಟ್ಟಿದ್ದಿತು. ತಲೆಯನ್ನು ಮೇಲಕ್ಕೆತ್ತಿ
"ಇದುವರೆಗೆ ನಾನು ನಿಮ್ಮ ಮಗಳನ್ನು ನೋಡಿಲ್ಲ ; ಆದರೆ ಹರಿದಯಾಲರು 'ಆಕೆ ಬಹಳ ಶಾಂತಸ್ವಭಾವದವಳು, ಶಿಷ್ಟಳು' ಎಂದು ಹೇಳುತ್ತಾರೆ. ನೋಡಲು ಚೆಲುವೆಯಾಗಿದ್ದಾಳಲ್ಲವೆ ?” ಎಂದ.
ಬ್ರಾಹ್ಮಣಿ ನಸುನಕ್ಕು ಎಂದಳು—— "ನಾನು ತಾಯಿ. ತಾಯಿಯ
ಕಣ್ಣನ್ನು ನಂಬುವುದೆಂತು ? ತಾಯಿಗೆ ಮಕ್ಕಳು ಸುಂದರವಾಗಿಯೆ ಕಾಣುತ್ತವೆ. ಆದರೂ ಸರಯೂ ಕುರೂಪಿಯಲ್ಲವೆನ್ನ ಬಹುದು.” ಮನಸ್ಸಿನಲ್ಲಿಯೆ “ಕಾಶಿಗೆ ಇಷ್ಟು ಜನರು ಬರುತ್ತಾರೆ, ಹೋಗುತ್ತಾರೆ. ಇಂತಹ ರೂಪವನ್ನು ಮಾತ್ರ ನಾನು ಯಾರಲ್ಲಿಯೂ ಕಂಡಿಲ್ಲ' ಎಂದುಕೊಂಡಳು.
ಈ ಸಂಭಾಷಣೆಯಾಗಿ ಮೂರು ನಾಲ್ಕು ದಿನಗಳು ಸಂದಿದ್ದುವು.
ಒಂದು ದಿನ ಮುಂಜಾವಿನಲ್ಲಿ ಚಂದ್ರನಾಥ ಸರಿಯೂನನ್ನು ಚೆನ್ನಾಗಿ<noinclude></noinclude>
tnvba5z5rsxfi34bojn3t1i7xkw7fpo
324936
324935
2026-06-18T07:31:11Z
Reema Jalihal
7674
324936
proofread-page
text/x-wiki
<noinclude><pagequality level="3" user="Reema Jalihal" /></noinclude>{{center|ಚಂದ್ರನಾಥ}}
{{rh|left=೬}}
ಮಗಳು - ಸರಯೂ - ಹಾಲು ಕಾಯಿಸುತ್ತಿದ್ದಳು. ತಾಯಿಯ ಕುಂದಿದ ಮುಖದ ಕಡೆಗೆ ಅವಳ ಲಕ್ಷ್ಯವು ಹೋಗಲಿಲ್ಲ. ತಾಯಿ ಮಗಳ ಮುಖವನ್ನೊಮ್ಮೆ ನೋಡಿ ಕೈಯಲ್ಲಿ ಹಾಲಿನ ಬಟ್ಟಲು ತೆಗೆದುಕೊಳ್ಳುತ್ತ ನಿಡಿದಾದ ಒಂದು ಉಸಿರಿನೊಂದಿಗೆ ಮನದಲ್ಲಿಯೆ “ದೀನದಯಾಳು, ದುಃಖಹರಣ, ಅಂತರ್ಯಾಮಿಯೆ, ಕ್ಷಮಿಸು ” ಎಂದಳು. ಆಮೇಲೆ ಹಾಲಿನ ಬಟ್ಟಲು ತಂದು ಅವನ ಮುಂದಿಟ್ಟು ಕುಳಿತುಕೊಂಡಳು. ಚಂದ್ರನಾಥ ಮತ್ತೆ ಅದೇ ಪ್ರಶ್ನೆಯನ್ನು ಕೇಳಿದ.
ಒಂದೊಂದಾಗಿ ಕೇಳಿ ತಿಳಿದುಕೊಂಡ ನಂತರ ಕೊನೆಗೆ "ನೀವು ನಿಮ್ಮ
ಮನೆಗೆ ತಿರುಗಿ ಏಕೆ ಹೋಗಲಿಲ್ಲ ? ಅಲ್ಲಿ ಯಾರೂ ಇಲ್ಲವೇನು ?” ಎಂದು ಕೇಳಿದ.
“ಒಂದು ತುತ್ತು ಅನ್ನ ಹಾಕುವವರು ಯಾರೂ ಇಲ್ಲ.”
ಚಂದ್ರನಾಥ ಸ್ವಲ್ಪ ಹೊತ್ತು ತಲೆತಗ್ಗಿಸಿಕೊಂಡು ಒಂದೊಂದೇ ತುತ್ತು ಬಾಯಲ್ಲಿ ಹಾಕಿಕೊಳ್ಳುತ್ತ ಯೋಚಿಸಿದ. ಬಳಿಕ ಕೇಳಿದ—— “ಈ ಹುಡುಗಿ ಇದ್ದಾಳಲ್ಲ. ಈಕೆಯ ಲಗ್ನ ಹೇಗೆ ಮಾಡುವಿರಿ ? ”
"ವಿಶ್ವೇಶ್ವರನೇ ಬಲ್ಲ ! ” ನಿಡಿದಾದ ಉಸಿರೊಂದನ್ನು ಹೊರಗೆಡಹಿ ಹೇಳಿದಳು.
ಚಂದ್ರನಾಥನ ಊಟವಾಗಿ ಬಿಟ್ಟಿದ್ದಿತು. ತಲೆಯನ್ನು ಮೇಲಕ್ಕೆತ್ತಿ
"ಇದುವರೆಗೆ ನಾನು ನಿಮ್ಮ ಮಗಳನ್ನು ನೋಡಿಲ್ಲ ; ಆದರೆ ಹರಿದಯಾಲರು 'ಆಕೆ ಬಹಳ ಶಾಂತಸ್ವಭಾವದವಳು, ಶಿಷ್ಟಳು' ಎಂದು ಹೇಳುತ್ತಾರೆ. ನೋಡಲು ಚೆಲುವೆಯಾಗಿದ್ದಾಳಲ್ಲವೆ ?” ಎಂದ.
ಬ್ರಾಹ್ಮಣಿ ನಸುನಕ್ಕು ಎಂದಳು—— "ನಾನು ತಾಯಿ. ತಾಯಿಯ
ಕಣ್ಣನ್ನು ನಂಬುವುದೆಂತು ? ತಾಯಿಗೆ ಮಕ್ಕಳು ಸುಂದರವಾಗಿಯೆ ಕಾಣುತ್ತವೆ. ಆದರೂ ಸರಯೂ ಕುರೂಪಿಯಲ್ಲವೆನ್ನ ಬಹುದು.” ಮನಸ್ಸಿನಲ್ಲಿಯೆ “ಕಾಶಿಗೆ ಇಷ್ಟು ಜನರು ಬರುತ್ತಾರೆ, ಹೋಗುತ್ತಾರೆ. ಇಂತಹ ರೂಪವನ್ನು ಮಾತ್ರ ನಾನು ಯಾರಲ್ಲಿಯೂ ಕಂಡಿಲ್ಲ' ಎಂದುಕೊಂಡಳು.
ಈ ಸಂಭಾಷಣೆಯಾಗಿ ಮೂರು ನಾಲ್ಕು ದಿನಗಳು ಸಂದಿದ್ದುವು.
ಒಂದು ದಿನ ಮುಂಜಾವಿನಲ್ಲಿ ಚಂದ್ರನಾಥ ಸರಿಯೂನನ್ನು ಚೆನ್ನಾಗಿ<noinclude></noinclude>
ti2zeomctfuifp3j592s15pz3kuobam
324937
324936
2026-06-18T07:31:57Z
Reema Jalihal
7674
324937
proofread-page
text/x-wiki
<noinclude><pagequality level="3" user="Reema Jalihal" /></noinclude>{{center|ಚಂದ್ರನಾಥ}}
{{rh|left=೬}}
ಮಗಳು - ಸರಯೂ - ಹಾಲು ಕಾಯಿಸುತ್ತಿದ್ದಳು. ತಾಯಿಯ ಕುಂದಿದ ಮುಖದ ಕಡೆಗೆ ಅವಳ ಲಕ್ಷ್ಯವು ಹೋಗಲಿಲ್ಲ. ತಾಯಿ ಮಗಳ ಮುಖವನ್ನೊಮ್ಮೆ ನೋಡಿ ಕೈಯಲ್ಲಿ ಹಾಲಿನ ಬಟ್ಟಲು ತೆಗೆದುಕೊಳ್ಳುತ್ತ ನಿಡಿದಾದ ಒಂದು ಉಸಿರಿನೊಂದಿಗೆ ಮನದಲ್ಲಿಯೆ “ದೀನದಯಾಳು, ದುಃಖಹರಣ, ಅಂತರ್ಯಾಮಿಯೆ, ಕ್ಷಮಿಸು ” ಎಂದಳು. ಆಮೇಲೆ ಹಾಲಿನ ಬಟ್ಟಲು ತಂದು ಅವನ ಮುಂದಿಟ್ಟು ಕುಳಿತುಕೊಂಡಳು. ಚಂದ್ರನಾಥ ಮತ್ತೆ ಅದೇ ಪ್ರಶ್ನೆಯನ್ನು ಕೇಳಿದ.
ಒಂದೊಂದಾಗಿ ಕೇಳಿ ತಿಳಿದುಕೊಂಡ ನಂತರ ಕೊನೆಗೆ "ನೀವು ನಿಮ್ಮ
ಮನೆಗೆ ತಿರುಗಿ ಏಕೆ ಹೋಗಲಿಲ್ಲ ? ಅಲ್ಲಿ ಯಾರೂ ಇಲ್ಲವೇನು ?” ಎಂದು ಕೇಳಿದ.
“ಒಂದು ತುತ್ತು ಅನ್ನ ಹಾಕುವವರು ಯಾರೂ ಇಲ್ಲ.”
ಚಂದ್ರನಾಥ ಸ್ವಲ್ಪ ಹೊತ್ತು ತಲೆತಗ್ಗಿಸಿಕೊಂಡು ಒಂದೊಂದೇ ತುತ್ತು ಬಾಯಲ್ಲಿ ಹಾಕಿಕೊಳ್ಳುತ್ತ ಯೋಚಿಸಿದ. ಬಳಿಕ ಕೇಳಿದ—— “ಈ ಹುಡುಗಿ ಇದ್ದಾಳಲ್ಲ. ಈಕೆಯ ಲಗ್ನ ಹೇಗೆ ಮಾಡುವಿರಿ ? ”
"ವಿಶ್ವೇಶ್ವರನೇ ಬಲ್ಲ ! ” ನಿಡಿದಾದ ಉಸಿರೊಂದನ್ನು ಹೊರಗೆಡಹಿ ಹೇಳಿದಳು.
ಚಂದ್ರನಾಥನ ಊಟವಾಗಿ ಬಿಟ್ಟಿದ್ದಿತು. ತಲೆಯನ್ನು ಮೇಲಕ್ಕೆತ್ತಿ
"ಇದುವರೆಗೆ ನಾನು ನಿಮ್ಮ ಮಗಳನ್ನು ನೋಡಿಲ್ಲ ; ಆದರೆ ಹರಿದಯಾಲರು 'ಆಕೆ ಬಹಳ ಶಾಂತಸ್ವಭಾವದವಳು, ಶಿಷ್ಟಳು' ಎಂದು ಹೇಳುತ್ತಾರೆ. ನೋಡಲು ಚೆಲುವೆಯಾಗಿದ್ದಾಳಲ್ಲವೆ ?” ಎಂದ.
ಬ್ರಾಹ್ಮಣಿ ನಸುನಕ್ಕು ಎಂದಳು—— "ನಾನು ತಾಯಿ. ತಾಯಿಯ
ಕಣ್ಣನ್ನು ನಂಬುವುದೆಂತು ? ತಾಯಿಗೆ ಮಕ್ಕಳು ಸುಂದರವಾಗಿಯೆ ಕಾಣುತ್ತವೆ. ಆದರೂ ಸರಯೂ ಕುರೂಪಿಯಲ್ಲವೆನ್ನ ಬಹುದು.” ಮನಸ್ಸಿನಲ್ಲಿಯೆ “ಕಾಶಿಗೆ ಇಷ್ಟು ಜನರು ಬರುತ್ತಾರೆ, ಹೋಗುತ್ತಾರೆ. ಇಂತಹ ರೂಪವನ್ನು ಮಾತ್ರ ನಾನು ಯಾರಲ್ಲಿಯೂ ಕಂಡಿಲ್ಲ' ಎಂದುಕೊಂಡಳು.
ಈ ಸಂಭಾಷಣೆಯಾಗಿ ಮೂರು ನಾಲ್ಕು ದಿನಗಳು ಸಂದಿದ್ದುವು.
ಒಂದು ದಿನ ಮುಂಜಾವಿನಲ್ಲಿ ಚಂದ್ರನಾಥ ಸರಿಯೂನನ್ನು ಚೆನ್ನಾಗಿ<noinclude></noinclude>
angbakiwr1z0j429zu7iswbp4aqh914
324951
324937
2026-06-18T10:50:03Z
A826
6806
/* Validated */
324951
proofread-page
text/x-wiki
<noinclude><pagequality level="4" user="A826" />{{rh|೬|ಚಂದ್ರನಾಥ|}}</noinclude>ಮಗಳು - ಸರಯೂ - ಹಾಲು ಕಾಯಿಸುತ್ತಿದ್ದಳು. ತಾಯಿಯ ಕುಂದಿದ ಮುಖದ ಕಡೆಗೆ ಅವಳ ಲಕ್ಷ್ಯವು ಹೋಗಲಿಲ್ಲ. ತಾಯಿ ಮಗಳ ಮುಖವನ್ನೊಮ್ಮೆ ನೋಡಿ ಕೈಯಲ್ಲಿ ಹಾಲಿನ ಬಟ್ಟಲು ತೆಗೆದುಕೊಳ್ಳುತ್ತ ನಿಡಿದಾದ ಒಂದು ಉಸಿರಿನೊಂದಿಗೆ ಮನದಲ್ಲಿಯೆ "ದೀನದಯಾಳು, ದುಃಖಹರಣ, ಅಂತರ್ಯಾಮಿಯೆ, ಕ್ಷಮಿಸು " ಎಂದಳು. ಆಮೇಲೆ ಹಾಲಿನ ಬಟ್ಟಲು ತಂದು ಅವನ ಮುಂದಿಟ್ಟು ಕುಳಿತುಕೊಂಡಳು. ಚಂದ್ರನಾಥ ಮತ್ತೆ ಅದೇ ಪ್ರಶ್ನೆಯನ್ನು ಕೇಳಿದ.
ಒಂದೊಂದಾಗಿ ಕೇಳಿ ತಿಳಿದುಕೊಂಡ ನಂತರ ಕೊನೆಗೆ "ನೀವು ನಿಮ್ಮ ಮನೆಗೆ ತಿರುಗಿ ಏಕೆ ಹೋಗಲಿಲ್ಲ? ಅಲ್ಲಿ ಯಾರೂ ಇಲ್ಲವೇನು?" ಎಂದು ಕೇಳಿದ.
"ಒಂದು ತುತ್ತು ಅನ್ನ ಹಾಕುವವರು ಯಾರೂ ಇಲ್ಲ."
ಚಂದ್ರನಾಥ ಸ್ವಲ್ಪ ಹೊತ್ತು ತಲೆತಗ್ಗಿಸಿಕೊಂಡು ಒಂದೊಂದೇ ತುತ್ತು ಬಾಯಲ್ಲಿ ಹಾಕಿಕೊಳ್ಳುತ್ತ ಯೋಚಿಸಿದ. ಬಳಿಕ ಕೇಳಿದ— "ಈ ಹುಡುಗಿ ಇದ್ದಾಳಲ್ಲ. ಈಕೆಯ ಲಗ್ನ ಹೇಗೆ ಮಾಡುವಿರಿ? "
"ವಿಶ್ವೇಶ್ವರನೇ ಬಲ್ಲ! " ನಿಡಿದಾದ ಉಸಿರೊಂದನ್ನು ಹೊರಗೆಡಹಿ ಹೇಳಿದಳು.
ಚಂದ್ರನಾಥನ ಊಟವಾಗಿ ಬಿಟ್ಟಿದ್ದಿತು. ತಲೆಯನ್ನು ಮೇಲಕ್ಕೆತ್ತಿ
"ಇದುವರೆಗೆ ನಾನು ನಿಮ್ಮ ಮಗಳನ್ನು ನೋಡಿಲ್ಲ; ಆದರೆ ಹರಿದಯಾಲರು 'ಆಕೆ ಬಹಳ ಶಾಂತಸ್ವಭಾವದವಳು, ಶಿಷ್ಟಳು' ಎಂದು ಹೇಳುತ್ತಾರೆ. ನೋಡಲು ಚೆಲುವೆಯಾಗಿದ್ದಾಳಲ್ಲವೆ?" ಎಂದ.
ಬ್ರಾಹ್ಮಣಿ ನಸುನಕ್ಕು ಎಂದಳು— "ನಾನು ತಾಯಿ. ತಾಯಿಯ ಕಣ್ಣನ್ನು ನಂಬುವುದೆಂತು? ತಾಯಿಗೆ ಮಕ್ಕಳು ಸುಂದರವಾಗಿಯೆ ಕಾಣುತ್ತವೆ. ಆದರೂ ಸರಯೂ ಕುರೂಪಿಯಲ್ಲವೆನ್ನ ಬಹುದು." ಮನಸ್ಸಿನಲ್ಲಿಯೆ "ಕಾಶಿಗೆ ಇಷ್ಟು ಜನರು ಬರುತ್ತಾರೆ, ಹೋಗುತ್ತಾರೆ. ಇಂತಹ ರೂಪವನ್ನು ಮಾತ್ರ ನಾನು ಯಾರಲ್ಲಿಯೂ ಕಂಡಿಲ್ಲ' ಎಂದುಕೊಂಡಳು.
ಈ ಸಂಭಾಷಣೆಯಾಗಿ ಮೂರು ನಾಲ್ಕು ದಿನಗಳು ಸಂದಿದ್ದುವು. ಒಂದು ದಿನ ಮುಂಜಾವಿನಲ್ಲಿ ಚಂದ್ರನಾಥ ಸರಿಯೂನನ್ನು ಚೆನ್ನಾಗಿ<noinclude></noinclude>
1wasgyr6j4xz7bazapdat75aepuy151
ಪುಟ:ಚಂದ್ರನಾಥ.pdf/೧೧
104
120907
324938
2026-06-18T09:46:18Z
Reema Jalihal
7674
/* Proofread */
324938
proofread-page
text/x-wiki
<noinclude><pagequality level="3" user="Reema Jalihal" /></noinclude>{{center|ಚಂದ್ರನಾಥ}}
{{rh|right=೭}}
ನೋಡಿದ. ಇಂತಹ ರೂಪ ಪ್ರಪಂಚದಲ್ಲಿ ಸಿಕ್ಕುವುದು ದುರ್ಲಭವೆನಿಸಿತು ಅವನಿಗೆ. ಸರಯೂ ಅಡುಗೆಯ ಮನೆಯಲ್ಲಿ ಕುಳಿತು ಕಾಯಿಪಲ್ಲೆ ಹೆಚ್ಚುತ್ತಿದ್ದಳು. ಮತ್ತಾರೂ ಅಲ್ಲಿರಲಿಲ್ಲ. ತಾಯಿ ಗಂಗಾಸ್ನಾನಕ್ಕೆ ಹೋಗಿದ್ದಳು. ಹರಿದಯಾಲರು ತಮ್ಮ ನಿತ್ಯನಿಯಮಾನುಸಾರ ಯಾತ್ರಿಕರನ್ನು ಹುಡುಕಲು ಹೋಗಿದ್ದರು.
ಚಂದ್ರನಾಥ ಸರಯೂನ ಬಳಿಗೆ ಹೋಗಿ “ಸರಯೂ?” ಎಂದ.
ಸರಯೂ ಬೆಚ್ಚಿಬಿದ್ದು ಕಕ್ಕಾಏಕ್ಕಿಯಾಗಿ "ಆಂ” ಎಂದಳು.
"ಅಡುಗೆ ಮಾಡಲು ಬರುತ್ತದೆಯಲ್ಲವೆ ನಿನಗೆ ?”
"ಹುಂ" ಸರಯೂ ತಲೆಯಲ್ಲಾಡಿಸಿ ನುಡಿದಳು.
“ಏನೇನು ಮಾಡಲಿಕ್ಕೆ ಬರುತ್ತದೆ?"
ಸರಯೂ ಉತ್ತರವನ್ನೀಯಲಿಲ್ಲ. ಏಕೆಂದರೆ ಈ ಪ್ರಶ್ನೆಗೆ ಉತ್ತರ ಕೊಟ್ಟರೆ ಇನ್ನೂ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದೀತು.
ಚಂದ್ರನಾಥನಿಗೆ ಆಕೆಯ ಭಾವನೆಗಳು ಗೊತ್ತಾದುವು. ಆದುದರಿಂದ
ಅವನು ಬೇರೆ ಬಗೆಯ ಪ್ರಶ್ನೆ ಮಾಡಲಾರಂಭಿಸಿದ. “ನೀನು, ನಿಮ್ಮವ್ವ ಇಬ್ಬರೂ ಇಲ್ಲಿ ಕೆಲಸಮಾಡುತ್ತೀರಲ್ಲವೆ?”
ಸರಯೂ ತಲೆಯಲ್ಲಾಡಿಸಿ “ಹೌದು” ಎಂದಳು.
“ತಿಂಗಳಿಗೆ ಸಂಬಳ ಎಷ್ಟು?”
“ಅಮ್ಮನಿಗೆ ಸಂಬಳ ಸಿಕ್ಕುತ್ತದೆ ; ನನಗೆ ಕೇವಲ ಊಟ ಮಾತ್ರ.”
“ಊಟಕ್ಕಾಗಿ ಮಾತ್ರ ನೀನು ಕೆಲಸಮಾಡುತ್ತೀಯಾ ?”
ಸರಯೂ ಸುಮ್ಮನಾದಳು.
“ನಾನು ನಿನಗೆ ಊಟಕ್ಕೆ ಕೊಟ್ಟರೆ, ನನ್ನ ಕೆಲಸವನ್ನು ಮಾಡುತ್ತೀಯಾ ?” ಎಂದು ಕೇಳಿದ ಚಂದ್ರನಾಥ.
ಮೆಲ್ಲಗೆ “ತಾಯಿಯನ್ನು ಕೇಳುತ್ತೇನೆ” ಎಂದಳು.
“ಹಾಂ, ಮರೆಯದೆ ಕೇಳು.”
ಅದೇ ದಿನ ಹರಿದಯಾಲರೊಡನೆಯೂ ಕೆಲವು ಮಾತುಗಳನ್ನಾಡಿ
ತನ್ನ ಆಳುಮಗನಿಗೆ ಚಂದ್ರನಾಥ ಹೀಗೆ ಪತ್ರ ಬರೆದ :
“ನಾನೀಗ ಕಾಶಿಯಲ್ಲಿದ್ದೇನೆ. ಇನ್ನೊಂದು ತಿಂಗಳಿನಲ್ಲಿ ಇಲ್ಲಿಯೇ<noinclude></noinclude>
btxrhbdlyhb7dffirikoocvifm43n04
ಪುಟ:ಚಂದ್ರನಾಥ.pdf/೧೨
104
120908
324939
2026-06-18T09:52:52Z
Reema Jalihal
7674
/* Proofread */
324939
proofread-page
text/x-wiki
<noinclude><pagequality level="3" user="Reema Jalihal" /></noinclude>{{center|ಚಂದ್ರನಾಥ}}
{{rh|left=೮}}
ಮದುವೆಯಾಗಬೇಕೆಂದು ನಿಶ್ಚಯಿಸಿದ್ದೇನೆ. ಮಾವಂದಿರಿಗೂ ಈ ಮಾತನ್ನು ತಿಳಿಸಿ, ರೂಪಾಯಿ, ಆಭರಣ ಇತ್ಯಾದಿ ತೆಗೆದುಕೊಂಡು ಬೇಗನೆ ಹೊರಟು ಬಾ."
ಅದೇ ತಿಂಗಳಲ್ಲಿ ಸರಯೂನ ಕೂಡ ಚಂದ್ರನಾಥನ ವಿವಾಹವಾಗಿ
ಹೋಯಿತು.
ಮದಿವೆಯಾದ ಮೇಲೆ ಗಂಡನ ಮನೆಗೆ ಹೊರಡುವ ಸಮಯ ಬ೦ದಿತು. ಆಗ ಸರಯೂ ಅಳುತ್ತ ಕೇಳಿದಳು —— "ಅಮ್ಮನ ವ್ಯವಸ್ಥೆ
ಹೇಗಿನ್ನು?"
"ನಮ್ಮ ಜೊತೆಯಲ್ಲಿಯೆ ಬರುವರು, ಅಲ್ಲವೆ ?"
ಈ ಮಾತುಗಳು ಬ್ರಾಹ್ಮಣಿಯ ಕಿವಿಗಳವರೆಗೂ ಹೋದುವು. ಅವಳು
ಮಗಳನ್ನು ಏಕಾಂತದಲ್ಲಿ ಕರೆದು ಹೇಳಿದಳು—— 'ಸರಯೂ, ಅಲ್ಲಿಗೆ ಹೋದಮೇಲೆ ನನ್ನನ್ನು ಯಾವಾಗಲೂ ನೆನಿಸುತ್ತಿರು: ಆದರೆ ನನ್ನ ಹೆಸರನ್ನು ಮಾತ್ರ ಉಚ್ಚರಿಸಬೇಡ. ನಾನು ಬದುಕಿರುವ ವರೆಗೂ ಕಾಶಿಯನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಹಾಂ, ನೀನೊಂದು ವೇಳೆ ಇಲ್ಲಿಗೆ ಬಂದರೆ ನಿನ್ನ ಭೆಟ್ಟಿಯಾಗುವುದು."
ಸರಯೂ ಅಳತೊಡಗಿದಳು.
ತಾಯಿ ಸೆರಗಿನಿಂದ ಮಗಳ ಕಣ್ಣು ಒರೆಸುತ್ತ, ಅವಳನ್ನು ರಮಿಸುತ್ತ
ಗಂಭೀರವಾಗಿ ಎಂದಳು—— “ಮಗೂ, ಎಲ್ಲವೂ ಗೊತ್ತಿದ್ದು ಹೀಗೆ ಅಳಬೇಕೆ !”
ತಾಯಿಯ ಸೆರಗಿನಲ್ಲಿ ಮುಖ ಮುಚ್ಚಿಕೊಂಡು ಅಳುತ್ತ “ ಅಮ್ಮಾ..” ಎಂದಳು ಸರಯೂ.
"ತಾಯಿಗಾಗಿ ತಾಯಿಯನ್ನು ಮರೆತರೆ ಮಾತ್ರ ನಿನ್ನ ಮಾತೃಭಕ್ತಿ
ಶ್ರೇಷ್ಟವೆನಿಸುವುದು, ಮಗೂ."
ಚಂದ್ರನಾಥನು ಒತ್ತಾಯ ಪಡಿಸಿದರೂ ತಾನು ಕಾಶಿಯನ್ನು ಬಿಟ್ಟು
ಎಲ್ಲಿಗೂ ಹೋಗಲಾರೆನೆಂದು ಬ್ರಾಹ್ಮಣಿ ಗಟ್ಟಿಯಾಗಿ ಹೇಳಿಬಿಟ್ಟಳು.
"ಎಲ್ಲಿಗೂ ಹೋಗಬಾರದೆಂಬ ಇಚ್ಛೆಯಿದ್ದರೆ ತಾವು ಕಾತಿಯಲ್ಲಿಯೆ
ವಾಸವಾಗಿರಿ. ಆದರೆ ಸ್ವತಂತ್ರವಾಗಿ ಇರಿ ” ಚಂದ್ರನಾಥ ಸ್ಥಿರಚಿತ್ರದಿಂದ ನುಡಿದ.<noinclude></noinclude>
fzpfgy3tbiphu191yjmf1i1g85sg9ic
ಪುಟ:ಚಂದ್ರನಾಥ.pdf/೧೩
104
120909
324940
2026-06-18T09:59:59Z
Reema Jalihal
7674
/* Proofread */
324940
proofread-page
text/x-wiki
<noinclude><pagequality level="3" user="Reema Jalihal" /></noinclude>{{center|ಚಂದ್ರನಾಥ}}
{{rh|right=೯}}
ಆದರೆ ಬ್ರಾಹ್ಮಣಿಗೆ ಈ ಮಾತೂ ಒಪ್ಪಿಗೆಯಾಗಲಿಲ್ಲ. ಅವಳೆಂದಳು——
" ಹರಿದಯಾಲರು ನನ್ನನ್ನು ಮಗಳಂತೆ ನೋಡಿಕೊಳ್ಳುತ್ತಿದ್ದಾರೆ. ನಾನೂ ಅವರನ್ನು ತಂದೆಯಂತೆ ಭಕ್ತಿಯಿಂದ ಕಾಣುತ್ತಿದ್ದೇನೆ. ಅತಿ ಕಷ್ಟಕಾಲದಲ್ಲಿ ಅವರು ನನಗೆ ಆಶ್ರಯವಿತ್ತರು. ಅವರನ್ನು ಬಿಟ್ಟು ಎಲ್ಲಿಗೂ ಹೋಗಲಾರೆ.”
ಈ ದುಃಖಿಸಿಯಲ್ಲಿ ಆತ್ಮಗೌರವದ ಜ್ಞಾನವನ್ನು ಚಂದ್ರನಾಥ ಕಂಡುಕೊಂಡ. ಆಕೆ ತಾನಾಗಿ ಬಯಸಿ ಯಾರ ದಯೆಯನ್ನೂ ಸ್ವೀಕರಿಸುವುದಿಲ್ಲವೆಂದು ಗೊತ್ತಾದ ಮೇಲೆ ಚಂದ್ರನಾಥ ಸರಯೂ ಒಬ್ಬಳನ್ನೆ ಜೊತೆಗೆ ಕರೆದುಕೊಂಡು ತನ್ನ ಮನೆಗೆ ಹಿಂತಿರುಗಿ ಬಂದ.
ಊರಿಗೆ ಬಂದ ಮೇಲೆ ಸರಯೂ ತನ್ನ ದೊಡ್ಡ ಮನೆಯನ್ನು ನೋಡಿದಳು. ಅದೆಷ್ಟೋ ಸಾಮಾನುಗಳು ಮನೆಯಲ್ಲಿದ್ದುವು. ಎಲ್ಲವನ್ನೂ ನೋಡಿ ಅವಳಿಗೆ ಹಿಡಿಸಲಾರದಷ್ಟು ಹರ್ಷ, ವಿಸ್ಮಯ! ಅವಳು ಮನದಲ್ಲಿಯೇ “ನನ್ನ ಮೇಲೆಷ್ಟು ದಯೆ, ಎಷ್ಟು ಅನುಗ್ರಹ! ” ಎಂದಳು.
ಚಂದ್ರನಾಥ ಹೆಂಡತಿಯನ್ನು ಆದರದಿಂದ ಕೇಳಿದ—— "ಮನೆಯೆಲ್ಲವನ್ನೂ ನೋಡಿದೆಯಾ ? ಮನಸ್ಸಿಗೆ ಬಂದಿತೆ ?"
ಸರಯೂ ಸ್ವಲ್ಪ ನಾಚಿ ಸೆರಗಿನಿಂದ ಮುಖ ಮುಚ್ಚಿಕೊಂಡಳು. ತಲೆಯನ್ನು ಬಾಗಿಸಿಕೊಂಡು ಸುಮ್ಮನೆ ನಿಂತಳು. ಹೆಂಡತಿಯ ಮನಸ್ಸಿನೊಳಗಿನ ಭಾವವನ್ನು ಅರಿತುಕೊಳ್ಳಬೇಕೆಂದೂ ಆಕೆಯ ಕಂಠಸ್ವರವನ್ನು ಆಲಿಸಬೇಕೆಂದೂ ಚಂದ್ರನಾಥನಿಗೆ ಆತುರ, ಇಚ್ಛೆ. ತನ್ನ ಎರಡೂ ಕೈಗಳಿಂದ ಆಕೆಯ ಮುಖವನ್ನು ಮೇಲಕ್ಕೆತ್ತಿ ಕೇಳಿದ —— "ಹೇಳು, ಮನಸ್ಸಿಗೆ ಬಂದಿತೊ ಇಲ್ಲವೋ ?”
ನಾಚಿಕೆಯಿಂದ ಅವಳ ಮುಖ ಕೆಂಪೇರಿತು. ತನ್ನರಸನು ಮೇಲಿಂದ
ಮೇಲೆ ಕೇಳಲಾರಂಭಿಸಿದ್ದರಿಂದ ಹೇಗೊ ನುಡಿದುಬಿಟ್ಟಳು —— “ಇದೆಲ್ಲವೂ ನಿಮ್ಮದೆಯೆ ?"
ಚಂದ್ರನಾಥ ನಕ್ಕು ಅವೇ ನುಡಿಗಳನ್ನು ಉಚ್ಚರಿಸಿದ—— “ಹೌದು,
ಇದೆಲ್ಲವೂ ನಿಮ್ಮದೆ "<noinclude></noinclude>
59emjesn6eek0zejyjoo30mqy3v2m8x
ಪುಟ:ಚಂದ್ರನಾಥ.pdf/೧೪
104
120910
324941
2026-06-18T10:08:17Z
Reema Jalihal
7674
/* Proofread */
324941
proofread-page
text/x-wiki
<noinclude><pagequality level="3" user="Reema Jalihal" /></noinclude>{{rh|left=೧೦}}
{{center|'''೩'''}}
ಹೀಗೆಯೆ ಕೆಲವು ದಿನ ಕಳೆದುಹೋದುವು. ಈಗ ಸರಯೂ ದೊಡ್ಡವಳಾಗಿದ್ದಾಳೆ. ಪತಿಯ ಸೇವೆ ಶುಶೂಷೆ ಮಾಡುವುದನ್ನು ಅರಿತುಕೊಂಡಿದ್ದಾಳೆ. ಹೇಳುವ ಮೊದಲೆ ತನ್ನ ಮನದೊಳಗಿನ ಮಾತುಗಳನ್ನು ಸರಯೂ ತಿಳಿದುಕೊಂಡುಬಿಡುತ್ತಾಳೆಂದು ಚಂದ್ರನಾಥನಿಗೆ ಗೊತ್ತಾಗಿಹೋಗಿದೆ. ಅವಳು
ಬರಿಯ ದಾಸಿಯೆ ಆಗಿದ್ದರೂ ಚಂದ್ರನಾಥನಿಗೆ ಇಂತಹ ದಾಸಿ ಪ್ರಪಂಚವೆಲ್ಲವನ್ನು ಹುಡುಕಿದ್ದರೂ ಸಿಕ್ಕುತ್ತಿರಲಿಲ್ಲ. ಕೇವಲ ದಾಸಿಯೋರ್ವಳು ಬೇಕೆಂದು ಯಾರೂ ವಿವಾಹ ಮಾಡಿಕೊಳ್ಳುವುದಿಲ್ಲ. ಪತಿ ದಾಸಿಗಿಂತಲೂ ಯಾವುದೋ
ಒಂದು ಹೆಚ್ಚಿನ ವಸ್ತುವನ್ನು ಪತ್ನಿಯಲ್ಲಿ ಬಯಸುತ್ತಾನೆ. ಹೆಂಡತಿಯ ನಡತೆ ದಾಸಿಯ ನಡತೆಯಂತೆ ಇರದಿರುವುದು ಒಳಿತು ಎಂದೆನಿಸುತ್ತದೆ. ಸರಯೂನ ನಡತೆ ಅತ್ಯಂತ ಮಧುರ, ನಿರ್ದ್ವಂದ್ವ. ಆದರೆ ಅತ್ಯಂತ ಸಮಾಪದ ಪರಿಪೂರ್ಣವಾದ ದಾಂಪತ್ಯದ ಸುಖ ಅದರಲ್ಲಿ ಕಾಣುತ್ತಿರಲಿಲ್ಲ. ಅವರ
ಮಿಲನದಲ್ಲಿ ಆದರ-ಪ್ರೀತಿಗಳಿದ್ದರೂ ಒಂದು ಬಗೆಯ ಅಂತರವಿತ್ತು. ಅದು ಯಾವ ಬಗೆಯಾಗಿಯೂ ಮಾಯವಾಗುವಂತೆ ತೋರಲಿಲ್ಲ. ಒಂದು ದಿನ ಅಕಸ್ಮಾತ್ ಚಂದ್ರನಾಥ ಕೇಳಿಬಿಟ್ಟ—— “ಸರಯೂ, ನೀನು ಇಷ್ಟೇಕೆ ಹೆದರಿ ಕೊಂಡಿರುವುದು ? ನಾನೇನು ದುರ್ವ್ಯವಹಾರ ಮಾಡುತ್ತೇನೆಯೆ ?”
ಅವಳು ಮನದಲ್ಲಿಯೆ "ಈ ಮಾತಿನ ಉತ್ತರವನ್ನು ನೀವರಿಯಲಾರಿರಾ ?" ಎಂದುಕೊಂಡು ಯೋಚಿಸತೊಡಗಿದಳು. “ನೀವು ದೇವರು, ದೊಡ್ಡವರು. ನಾನು ತಿರಸ್ಕೃತಳು. ನೀವು ಪ್ರತಿಪಾಲಕರು. ನಾನು ಆಶ್ರಿತಳು. ನೀವು ದಾನಿ, ನಾನು ಭಿಕ್ಷುಕಿ."
ಸರಯೂನ ಹೃದಯ ಕೃತಜ್ಞತೆಯಿಂದ ತುಂಬಿ ಹೋಗಿದ್ದಿತು. ಆದುದರಿಂದಲೆ ಆಕೆಯ ಪ್ರೇಮವು ತಲೆಯನ್ನು ಮೇಲಕ್ಕೆತ್ತಗೊಡುತ್ತಿರಲಿಲ್ಲ. ಅದು ಅಂತಃಸಲಿಲ ಫಲ್ಗುವಿನಂತೆ ಹೃದಯದಲ್ಲಿಯೆ ಜುಳುಜುಳು ಹರಿಯುತ್ತಿದ್ದಿತು. ಒಡೆದು ಘೋರ ಗರ್ಜನೆ ಮಾಡುತ್ತ ಹೊರಬಿದ್ದು ಬರುತ್ತಿರಲಿಲ್ಲ. ಕಲಕಲ
ನಿನಾದವನ್ನು ಮಾಡುತ್ತ ಅವಿಶ್ರಾಂತವಾಗಿ ಅವಿಚ್ಛಿನ್ನವಾಗಿ ಹರಿಯುತ್ತಿದ್ದಿತು. ಚಂದ್ರನಾಥನಿಗೆ ಇದು ಗೊತ್ತಿರಲಿಲ್ಲ. ಜೀವನದಲ್ಲಿ ಪರಮಾತ್ಮನನ್ನು ಹುಡು<noinclude></noinclude>
ls4mmgeojoj5su86wyspje6yb165ovn
ಪರಿವಿಡಿ:ವಡ್ಡಾರಾಧನೆ.pdf
106
120911
324942
2026-06-18T10:38:57Z
Reema Jalihal
7674
ಹೊಸ ಪುಟ:
324942
proofread-index
text/x-wiki
{{:MediaWiki:Proofreadpage_index_template
|Type=book
|Title=ವಡ್ಡಾರಾಧನೆ
|Language=kn
|Volume=
|Author=ಶಿವಕೋಟ್ಯಾಚಾರ್ಯ
|Translator=
|Editor=
|Illustrator=
|School=
|Publisher=
|Address=
|Year=೧೯೪೯
|Key=
|ISBN=
|OCLC=
|LCCN=
|BNF_ARK=
|ARC=
|DOI=
|Source=
|Image=6
|Progress=X
|Transclusion=no
|Validation_date=
|Pages=<pagelist />
|Volumes=
|Remarks=
|Width=
|Header=
|Footer=
|tmplver=
}}
4q6wrm3ddcvtdl82qckqzjsmwo39kyc
324943
324942
2026-06-18T10:39:23Z
Reema Jalihal
7674
324943
proofread-index
text/x-wiki
{{:MediaWiki:Proofreadpage_index_template
|Type=book
|Title=ವಡ್ಡಾರಾಧನೆ
|Language=kn
|Volume=
|Author=ಶಿವಕೋಟ್ಯಾಚಾರ್ಯ
|Translator=
|Editor=
|Illustrator=
|School=
|Publisher=
|Address=
|Year=೧೯೪೯
|Key=
|ISBN=
|OCLC=
|LCCN=
|BNF_ARK=
|ARC=
|DOI=
|Source=_empty_
|Image=6
|Progress=C
|Transclusion=no
|Validation_date=
|Pages=<pagelist />
|Volumes=
|Remarks=
|Width=
|Header=
|Footer=
|tmplver=
}}
72ukcrh0ba2n682fsfharamqzitio7w
324954
324943
2026-06-18T10:56:39Z
Reema Jalihal
7674
324954
proofread-index
text/x-wiki
{{:MediaWiki:Proofreadpage_index_template
|Type=book
|Title=[[ವಡ್ಡಾರಾಧನೆ]]
|Language=kn
|Volume=
|Author=ಶಿವಕೋಟ್ಯಾಚಾರ್ಯ
|Translator=
|Editor=
|Illustrator=
|School=
|Publisher=
|Address=
|Year=೧೯೪೯
|Key=
|ISBN=
|OCLC=
|LCCN=
|BNF_ARK=
|ARC=
|DOI=
|Source=_empty_
|Image=6
|Progress=C
|Transclusion=no
|Validation_date=
|Pages=<pagelist />
|Volumes=
|Remarks=
|Width=
|Header=
|Footer=
|tmplver=
}}
kvz5i4ywgutszvoc8j2tcrnwezgo7k0
324955
324954
2026-06-18T10:57:00Z
Reema Jalihal
7674
324955
proofread-index
text/x-wiki
{{:MediaWiki:Proofreadpage_index_template
|Type=book
|Title=ವಡ್ಡಾರಾಧನೆ
|Language=kn
|Volume=
|Author=ಶಿವಕೋಟ್ಯಾಚಾರ್ಯ
|Translator=
|Editor=
|Illustrator=
|School=
|Publisher=
|Address=
|Year=೧೯೪೯
|Key=
|ISBN=
|OCLC=
|LCCN=
|BNF_ARK=
|ARC=
|DOI=
|Source=_empty_
|Image=6
|Progress=C
|Transclusion=no
|Validation_date=
|Pages=<pagelist />
|Volumes=
|Remarks=
|Width=
|Header=
|Footer=
|tmplver=
}}
72ukcrh0ba2n682fsfharamqzitio7w
324956
324955
2026-06-18T10:58:32Z
Reema Jalihal
7674
324956
proofread-index
text/x-wiki
{{:MediaWiki:Proofreadpage_index_template
|Type=book
|Title=ವಡ್ಡಾರಾಧನೆ
|Language=kn
|Volume=
|Author=ಶಿವಕೋಟ್ಯಾಚಾರ್ಯ
|Translator=
|Editor=
|Illustrator=
|School=
|Publisher=
|Address=
|Year=೧೯೪೯
|Key=
|ISBN=
|OCLC=
|LCCN=
|BNF_ARK=
|ARC=
|DOI=
|Source=pdf
|Image=6
|Progress=C
|Transclusion=no
|Validation_date=
|Pages=<pagelist />
|Volumes=
|Remarks=
|Width=
|Header=
|Footer=
|tmplver=
}}
i1jugop4sc2vzsivrblvlh7lgzfo08z
324958
324956
2026-06-18T11:41:37Z
A826
6806
324958
proofread-index
text/x-wiki
{{:MediaWiki:Proofreadpage_index_template
|Type=book
|Title=ವಡ್ಡಾರಾಧನೆ
|Language=kn
|Volume=
|Author=ಶಿವಕೋಟ್ಯಾಚಾರ್ಯ
|Translator=
|Editor=
|Illustrator=
|School=
|Publisher=
|Address=
|Year=೧೯೪೯
|Key=
|ISBN=
|OCLC=
|LCCN=
|BNF_ARK=
|ARC=
|DOI=
|Source=pdf
|Image=6
|Progress=C
|Transclusion=no
|Validation_date=
|Pages=<pagelist
1to5=-
6=ಮುಖಪುಟ
7=-
8=1
/>
|Volumes=
|Remarks=
|Width=
|Header=
|Footer=
|tmplver=
}}
n9id5ebf4riq8nxb72wzc13e3ntt8d9
ಪುಟ:ವಡ್ಡಾರಾಧನೆ.pdf/೧
104
120912
324944
2026-06-18T10:40:17Z
Reema Jalihal
7674
/* Proofread */
324944
proofread-page
text/x-wiki
<noinclude><pagequality level="3" user="Reema Jalihal" /></noinclude>THE BOOK WAS DRENCHED
TEXT FLY WITHIN THE BOOK ONLY
TEXT PROBLEM
WITHIN THE BOOK ONLY<noinclude></noinclude>
hb2d57ysy7q4ot6qociie1qq74e36y3
324959
324944
2026-06-18T11:43:14Z
A826
6806
/* Without text */
324959
proofread-page
text/x-wiki
<noinclude><pagequality level="0" user="A826" /></noinclude><noinclude></noinclude>
8jv1m79oqytrvomi8no9d8impdweq4n
ಪುಟ:ವಡ್ಡಾರಾಧನೆ.pdf/೨
104
120913
324945
2026-06-18T10:40:38Z
Reema Jalihal
7674
/* Without text */
324945
proofread-page
text/x-wiki
<noinclude><pagequality level="0" user="Reema Jalihal" /></noinclude><noinclude></noinclude>
pfku5frwky67w0tc38l3px0o23ai48g
ಪುಟ:ವಡ್ಡಾರಾಧನೆ.pdf/೩
104
120914
324946
2026-06-18T10:40:50Z
Reema Jalihal
7674
/* Without text */
324946
proofread-page
text/x-wiki
<noinclude><pagequality level="0" user="Reema Jalihal" /></noinclude><noinclude></noinclude>
pfku5frwky67w0tc38l3px0o23ai48g
ಪುಟ:ವಡ್ಡಾರಾಧನೆ.pdf/೪
104
120915
324947
2026-06-18T10:41:01Z
Reema Jalihal
7674
/* Without text */
324947
proofread-page
text/x-wiki
<noinclude><pagequality level="0" user="Reema Jalihal" /></noinclude><noinclude></noinclude>
pfku5frwky67w0tc38l3px0o23ai48g
ಪುಟ:ವಡ್ಡಾರಾಧನೆ.pdf/೫
104
120916
324948
2026-06-18T10:41:15Z
Reema Jalihal
7674
/* Without text */
324948
proofread-page
text/x-wiki
<noinclude><pagequality level="0" user="Reema Jalihal" /></noinclude><noinclude></noinclude>
pfku5frwky67w0tc38l3px0o23ai48g
ಪುಟ:ವಡ್ಡಾರಾಧನೆ.pdf/೬
104
120917
324949
2026-06-18T10:46:05Z
Reema Jalihal
7674
/* Proofread */
324949
proofread-page
text/x-wiki
<noinclude><pagequality level="3" user="Reema Jalihal" /></noinclude>{{center|{{xx-larger|'''ವಡ್ದಾರಾಧನೆ'''}}}}
{{Css image crop
|Image = ವಡ್ಡಾರಾಧನೆ.pdf
|Page = 6
|bSize = 450
|cWidth = 219
|cHeight = 114
|oTop = 122
|oLeft = 92
|Location = center
|Description =
}}
{{center|'''ಶ್ರೀಕಂಠಯ್ಯ ಅಚ್ಚುಕೂಟ'''}}
{{center|'''ಕನ್ನಡ ಸಾಹಿತ್ಯ ಪರಿಷತ್ತು'''}}
{{center|'''ಚಾಮರಾಜಪೇಟ'''}}
{{center|'''೧೯೪೯'''}}
{{Right|'''ಬೆಲೆ: ೨——೮——೦'''}}<noinclude></noinclude>
mi9ji55m3af36i2v15d79jls9kpf7xn
324950
324949
2026-06-18T10:49:08Z
Reema Jalihal
7674
324950
proofread-page
text/x-wiki
<noinclude><pagequality level="3" user="Reema Jalihal" /></noinclude>{{center|{{xx-larger|'''ವಡ್ದಾರಾಧನೆ'''}}}}
{{Css image crop
|Image = ವಡ್ಡಾರಾಧನೆ.pdf
|Page = 6
|bSize = 450
|cWidth = 188
|cHeight = 132
|oTop = 123
|oLeft = 98
|Location = center
|Description =
}}
{{center|'''ಶ್ರೀಕಂಠಯ್ಯ ಅಚ್ಚುಕೂಟ'''}}
{{center|'''ಕನ್ನಡ ಸಾಹಿತ್ಯ ಪರಿಷತ್ತು'''}}
{{center|'''ಚಾಮರಾಜಪೇಟ'''}}
{{center|'''೧೯೪೯'''}}
{{Right|'''ಬೆಲೆ: ೨——೮——೦'''}}<noinclude></noinclude>
65a2b608yj751sepp2l6b9qj52m63gi
324952
324950
2026-06-18T10:55:06Z
Reema Jalihal
7674
324952
proofread-page
text/x-wiki
<noinclude><pagequality level="3" user="Reema Jalihal" /></noinclude>{{center|{{xx-larger|'''ವಡ್ದಾರಾಧನೆ'''}}}}
{{center|'''ಶ್ರೀಕಂಠಯ್ಯ ಅಚ್ಚುಕೂಟ'''}}
{{center|'''ಕನ್ನಡ ಸಾಹಿತ್ಯ ಪರಿಷತ್ತು'''}}
{{center|'''ಚಾಮರಾಜಪೇಟ'''}}
{{center|'''೧೯೪೯'''}}
{{Right|'''ಬೆಲೆ: ೨——೮——೦'''}}<noinclude></noinclude>
j66ddki80tq0nnakxtae1wetpy9bhfh
324957
324952
2026-06-18T11:11:23Z
A826
6806
/* Validated */
324957
proofread-page
text/x-wiki
<noinclude><pagequality level="4" user="A826" /></noinclude>{{center|{{xx-larger|'''ವಡ್ದಾರಾಧನೆ'''}}}}
[[File:ವಡ್ಡಾರಾಧನೆ (page 6 crop).jpg|100px|center]]
{{center|'''ಶ್ರೀಕಂಠಯ್ಯ ಅಚ್ಚುಕೂಟ'''}}
{{center|'''ಕನ್ನಡ ಸಾಹಿತ್ಯ ಪರಿಷತ್ತು'''}}
{{center|'''ಚಾಮರಾಜಪೇಟ'''}}
{{center|'''೧೯೪೯'''}}
{{Right|'''ಬೆಲೆ: ೨——೮——೦'''}}<noinclude></noinclude>
5uvybcevdeji7rz2tfss1ho4fxgzi1q
ಪುಟ:ವಡ್ಡಾರಾಧನೆ.pdf/೭
104
120918
324953
2026-06-18T10:55:39Z
Reema Jalihal
7674
/* Without text */
324953
proofread-page
text/x-wiki
<noinclude><pagequality level="0" user="Reema Jalihal" /></noinclude><noinclude></noinclude>
pfku5frwky67w0tc38l3px0o23ai48g