ಜ್ಞಾನಪೀಠ
From Wikipedia
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಛ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ರಚಿಸಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಈ ಪ್ರಶಸ್ತಿಯನ್ನು ಮೇ ೨೨ ೧೯೬೧ ರಲ್ಲಿ ಸ್ಥಾಪಿಸಲಾಯಿತು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, ಐದು ಲಕ್ಷ ರುಪಾಯಿ ನಗದು ಹಾಗು ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.
ಪರಿವಿಡಿ |
[ಬದಲಾಯಿಸಿ] ಜ್ಞಾನಪೀಠದ ಹಿನ್ನೆಲೆ
ಈ ಪ್ರಶಸ್ತಿಯನ್ನು ಭಾರತ ಸರಕಾರ ನೀಡುತ್ತದೆ ಎಂಬ ತಪ್ಪು ಕಲ್ಪನೆಯೂ ವ್ಯಾಪಕವಾಗಿದೆ. ವಾಸ್ತವದಲ್ಲಿ ಈ ಪ್ರಶಸ್ತಿಯನ್ನು ನೀಡುವವರು ಜ್ಞಾನ ಪೀಠ ಟ್ರಸ್ಟ್. ಟೈಂಸ್ ಆಫ್ ಇಂಡಿಯಾದ ಒಡೆತನವನ್ನು ಹೊಂದಿರುವ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ನ ಸ್ಥಾಪಕರು. ಈಗಲೂ ಅದರ ಸದಸ್ಯರಲ್ಲಿ ಹೆಚ್ಚಿನವರು ಈ ಕುಟುಂಬಕ್ಕೆ ಸೇರಿದ್ದಾರೆ. ೧೯೮೨ ರಿಂದ, ಈ ಪ್ರಶಸ್ತಿಯನ್ನು ಭಾರತೀಯ ಸಾಹಿತ್ಯಕ್ಕೆ ಸಮಗ್ರ ಕೊಡುಗೆಯನ್ನು ನೀಡಿದ ಲೇಖಕರಿಗೆ ಸಂದಾಯವಾಗುತ್ತಿದೆ. ಈವರೆಗೆ ಕನ್ನಡ ಸಾಹಿತಿಗಳು ಏಳು ಪ್ರಶಸ್ತಿಗಳನ್ನು ಪಡೆದು ಕನ್ನಡವನ್ನು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಹಿಂದಿ ಭಾಷೆಯು ಆರು ಪ್ರಶಸ್ತಿಯನ್ನು ಪಡೆದು ಎರಡನೆ ಸ್ಥಾನದಲ್ಲಿದೆ.
[ಬದಲಾಯಿಸಿ] ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
| ವರ್ಷ | ಭಾಷೆ | ಲೇಖಕ | ಕೃತಿ |
|---|---|---|---|
| ೧೯೬೫ | ಮಲೆಯಾಳಂ | ಜಿ. ಶಂಕರ ಕುರುಪ್ | ಓಡಕ್ಕುಳಲ್ |
| ೧೯೬೬ | ಬಂಗಾಳಿ | ತಾರಾಶಂಕರ ಬಂದೋಪಾಧ್ಯಾಯ | ಗಣದೇವತಾ |
| ೧೯೬೭ | ಗುಜರಾತಿ | ಉಮಾಶಂಕರ ಜೋಷಿ | ನಿಶಿತಾ |
| ೧೯೬೭ | ಕನ್ನಡ | ಕುವೆಂಪು (ಕೆ.ವಿ.ಪುಟ್ಟಪ್ಪ) | ಶ್ರೀ ರಾಮಾಯಣ ದರ್ಶನಂ |
| ೧೯೬೮ | ಹಿಂದಿ | ಸುಮಿತ್ರನಂದನ ಪಂತ್ | ಚಿದಂಬರ |
| ೧೯೬೯ | ಉರ್ದು | ಫಿರಾಖ್ ಗೊರಖಪುರಿ | ಗುಲ್-ಎ-ನಗ್ಮಾ |
| ೧೯೭೦ | ತೆಲುಗು | ವಿಶ್ವನಾಥ ಸತ್ಯನಾರಾಯಣ | ರಾಮಾಯಣ ಕಲ್ಪವೃಕ್ಷಮು |
| ೧೯೭೧ | ಬಂಗಾಳಿ | ಭಿಷ್ಣು ಡೇ | ಸ್ಮೃತಿ ಸತ್ತ ಭವಿಷ್ಯತ್ |
| ೧೯೭೨ | ಹಿಂದಿ | ರಾಮಧಾರಿ ಸಿಂಗ್ ದಿನಕರ | ಊರ್ವಶಿ |
| ೧೯೭೩ | ಕನ್ನಡ | ಅಂಬಿಕಾತನಯದತ್ತ (ದ.ರಾ. ಬೇಂದ್ರೆ) | ನಾಕುತಂತಿ |
| ೧೯೭೩ | ಓರಿಯ | ಗೋಪಿನಾಥ ಮೊಹಂತಿ | ಮತ್ತಿಮತಾಲ್ |
| ೧೯೭೪ | ಮರಾಠಿ | ವಿಷ್ಣು ಸಖಾರಾಮ್ ಖಾಂಡೇಕರ್ | ಯಯಾತಿ |
| ೧೯೭೫ | ತಮಿಳು | ಪಿ. ವಿ. ಅಕಿಲಂದಂ | ಚಿತ್ತ್ರಪ್ಪಾವೈ |
| ೧೯೭೬ | ಬಂಗಾಳಿ | ಆಶಾಪೂರ್ಣ ದೇವಿ | ಪ್ರಥಮ್ ಪ್ರತಿಸೃತಿ |
| ೧೯೭೭ | ಕನ್ನಡ | ಕೋಟ ಶಿವರಾಮ ಕಾರಂತ | ಮೂಕಜ್ಜಿಯ ಕನಸುಗಳು |
| ೧೯೭೮ | ಹಿಂದಿ | ಎಸ್. ಎಚ್. ವಿ ಆಜ್ಞೇಯ | ಕಿತ್ನಿ ನಾವೊಃ ಮೆಃ ಕಿತ್ನಿ ಬಾರ್ |
| ೧೯೭೯ | ಅಸ್ಸಾಮಿ | ಬಿರೇಂದ್ರ ಕುಮಾರ ಭಟ್ಟಾಚಾರ್ಯ | ಮೃತ್ಯುಂಜಯ್ |
| ೧೯೮೦ | ಮಲೆಯಾಳಂ | ಎಸ್. ಕೆ. ಪೊಟ್ಟೆಕಾಟ್ಟ್ | ಒರು ದೇಶತ್ತಿಂಡೆ ಕಥಾ |
| ೧೯೮೧ | ಪಂಜಾಬಿ | ಅಮೃತಾ ಪ್ರೀತಮ್ | ಕಾಗಜ್ ಕೆ ಕನ್ವಾಸ್ |
| ೧೯೮೨ | ಹಿಂದಿ | ಮಹಾದೇವಿ ವರ್ಮ | |
| ೧೯೮೩ | ಕನ್ನಡ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಚಿಕವೀರ ರಾಜೇಂದ್ರ |
| ೧೯೮೪ | ಮಲೆಯಾಳಂ | ತಕಳಿ ಶಿವಶಂಕರ ಪಿಳ್ಳೈ | |
| ೧೯೮೫ | ಗುಜರಾತಿ | ಪನ್ನಾಲಾಲ್ ಪಟೇಲ್ | |
| ೧೯೮೬ | ಓರಿಯ | ಸಚ್ಚಿದಾನಂದ ರಾವುತ ರಾಯ್ | |
| ೧೯೮೭ | ಮರಾಠಿ | ವಿಷ್ಣು ವಾಮನ ಶಿರ್ವಾಡ್ಕರ್ ಕುಸುಮಾಗ್ರಜ | |
| ೧೯೮೮ | ತೆಲುಗು | ಡಾ. ಸಿ. ನಾರಾಯಣನ್ ರೆಡ್ಡಿ | |
| ೧೯೮೯ | ಉರ್ದು | ಖುರ್ರತುಲೈನ್ ಹೈದರ್ | |
| ೧೯೯೦ | ಕನ್ನಡ | ವಿನಾಯಕ ಕೃಷ್ಣ ಗೋಕಾಕ್ | ಭಾರತದ ಸಿಂಧು ರಶ್ಮಿ |
| ೧೯೯೧ | ಬಂಗಾಳಿ | ಸುಭಾಷ್ ಮುಖೋಪಾಧ್ಯಾಯ | |
| ೧೯೯೨ | ಹಿಂದಿ | ನರೇಶ್ ಮೆಹತಾ | |
| ೧೯೯೩ | ಓರಿಯ | ಸೀತಾಕಾಂತ ಮಹಾಪಾತ್ರ | |
| ೧೯೯೪ | ಕನ್ನಡ | ಯು. ಆರ್. ಅನಂತಮೂರ್ತಿ | ಸಮಗ್ರ ಸಾಹಿತ್ಯ |
| ೧೯೯೫ | ಮಲೆಯಾಳಂ | ಎಮ್. ಟಿ ವಾಸುದೇವನ್ ನಾಯರ್ | |
| ೧೯೯೬ | ಬಂಗಾಳಿ | ಮಹಾಶ್ವೇತಾದೇವಿ | |
| ೧೯೯೭ | ಊರ್ದು | ಅಲಿ ಸರ್ದಾರ್ ಜಾಫ್ರಿ | |
| ೧೯೯೮ | ಕನ್ನಡ | ಗಿರೀಶ್ ಕಾರ್ನಾಡ್ | ಸಮಗ್ರ ಸಾಹಿತ್ಯ |
| ೧೯೯೯ | ಹಿಂದಿ | ನಿರ್ಮಲ್ ವರ್ಮ | |
| ೧೯೯೯ | ಪಂಜಾಬಿ | ಗುರುದಯಾಳ್ ಸಿಂಗ್ | |
| ೨೦೦೦ | ಅಸ್ಸಾಮಿ | ಇಂದಿರಾ ಗೋಸ್ವಾಮಿ | |
| ೨೦೦೧ | ಗುಜರಾತಿ | ರಾಜೇಂದ್ರ ಕೇಶವಲಾಲ್ ಷಾ | |
| ೨೦೦೨ | ತಮಿಳು | ಡಿ.ಜಯಕಾಂತನ್ | |
| ೨೦೦೩ | ಮರಾಠಿ | ವಿಂದಾ ಕರಂದೀಕರ್ (ಗೋವಿಂದ್ ವಿನಾಯಕ್ ಕರಂದೀಕರ್) |

